ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj Column: ಬನಶಂಕರಿ ದೇವಿಯ ಮಹಾತ್ಮೆ

ಒಂದಾನೊಂದು ಕಾಲದಲ್ಲಿ ಷಣ್ಮುಖನು ಋಷಿಗಳ ಕೋರಿಕೆಯಂತೆ ಬನಶಂಕರೀ ದೇವಿಯ ಪುಣ್ಯ ಚರಿತ್ರೆಯನ್ನು ಹೇಳಿದ್ದನು. ಅಗಸ್ತ್ಯ ಮಹಾಮುನಿಯು ತನ್ನ ಸತಿ ಶಿರೋಮಣಿಗೆ ಹೇಳುತ್ತಾನೆ. ಪೂರ್ವದಲ್ಲಿ ನಮ್ಮೀ ದೇಶವು ಭಯಂಕರವಾದ ಕಾಡುಗಳಿಂದ ಕೂಡಿದ್ದಾಗಿತ್ತು. ಇವುಗಳಲ್ಲಿ ಕಳ್ಳ ಕಾಕರು ಬೀಡು ಮಾಡಿಕೊಂಡು ಸಿಕ್ಕ ಸಿಕ್ಕವರನ್ನು ಸುಲಿಗೆ ಮಾಡುವುದೇ ಇವರ ಮುಖ್ಯ ಉದ್ಯೋಗ ವಾಗಿತ್ತು

ಬನಶಂಕರಿ ದೇವಿಯ ಮಹಾತ್ಮೆ

ಒಂದೊಳ್ಳೆ ಮಾತು

rgururaj628@gmail.com

ಒಂದಾನೊಂದು ಕಾಲದಲ್ಲಿ ಷಣ್ಮುಖನು ಋಷಿಗಳ ಕೋರಿಕೆಯಂತೆ ಬನಶಂಕರೀ ದೇವಿಯ ಪುಣ್ಯ ಚರಿತ್ರೆಯನ್ನು ಹೇಳಿದ್ದನು. ಅಗಸ್ತ್ಯ ಮಹಾಮುನಿಯು ತನ್ನ ಸತಿ ಶಿರೋಮಣಿಗೆ ಹೇಳುತ್ತಾನೆ. ಪೂರ್ವದಲ್ಲಿ ನಮ್ಮೀ ದೇಶವು ಭಯಂಕರವಾದ ಕಾಡುಗಳಿಂದ ಕೂಡಿದ್ದಾಗಿತ್ತು. ಇವುಗಳಲ್ಲಿ ಕಳ್ಳ ಕಾಕರು ಬೀಡು ಮಾಡಿಕೊಂಡು ಸಿಕ್ಕ ಸಿಕ್ಕವರನ್ನು ಸುಲಿಗೆ ಮಾಡುವುದೇ ಇವರ ಮುಖ್ಯ ಉದ್ಯೋಗ ವಾಗಿತ್ತು. ಈ ಕಾಡಿನಲ್ಲಿ ದುರ್ಗರಕ್ತ ಮತ್ತು ಧೂಮ್ರಾಕ್ಷರೆಂಬ ರಾಕ್ಷಸರು ನೆಲೆಯಾಗಿದ್ದರು. ಇವರು ಸರ್ವರಿಗೂ ಭಾದೆ ಕೊಡುತ್ತಾ ದೇವಲೋಕಕ್ಕೂ ದಾಳಿಯನ್ನಿಟ್ಟರು. ದೇವತೆಗಳನ್ನು ಹಿಂಸಿಸಿ ಉಪದ್ರವ ಕೊಟ್ಟರು. ಆಗ ದೇವತೆಗಳು ದಿಕ್ಕಾ ಪಾಲಾಗಿ ಓಡಿ ಅದಿಶಕ್ತಿಯ ಮೊರೆ ಹೊಕ್ಕು ನಡೆದ ಸಂಗತಿಯನ್ನು ತಿಳಿಸಿದರು.

ದಯಾ ಸಾಗರಳಾದ ದೇವಿಯು ಅವರೆಲ್ಲರನ್ನೂ ಸಂತೈಸಿ ಬೀಳ್ಕೊಟ್ಟಳು. ರಾಕ್ಷಸರ ನಾಶಕ್ಕೆ ಉಪಾಯವನ್ನು ಹುಡುಕಿದಳು. ಕ್ರೂರ ರಾಕ್ಷಸರ ರೂಪಕ್ಕಿಂತ ಸಹಸ್ರ ಪಟ್ಟು ಭಯಂಕರ ಕ್ರೂರ ರೂಪವನ್ನು ಧಾರಣ ಮಾಡಿದಳು. ಆಯುಧಪಾಣಿಯಾಗಿ ರಾಕ್ಷಸರು ವಾಸಿಸುವ ನಿಬಿಡವಾದ ಅರಣ್ಯಕ್ಕೆ ನುಗ್ಗಿ ಅವರನ್ನು ಪರಶುವಿನಿಂದ ಸಂಹರಿಸಿದಳು. ದೇವತೆಗಳು ಸಂತೋಷ ಭರಿತರಾಗಿ ಏಕಕಂಠದಿಂದ ದೇವಿಯನ್ನು ಹೊಗಳಿದರು.

ಇದನ್ನೂ ಓದಿ: Roopa Gururaj Column: ಯಮನಿಗೆ ಶಾಪ ಕೊಟ್ಟ ಅಣಿ ಮಾಂಡವ್ಯ ಋಷಿ

ದೇವಿಯೂ ಅದೇ ಘೋರ ರೂಪದಿಂದ ಅರಣ್ಯದಲ್ಲಿ ನಿವಾಸಿಯಾದಳು. ಭಯಂಕರ ರೂಪ ಧಾರಣ ಮಾಡಿಕೊಂಡ ಬನಶಂಕರಿ ದೇವಿಯ ರೂಪವನ್ನು ಕಂಡು ಸುರರು ಬೆದರಿದರು. ದರ್ಶನ ಲಾಭದ ವಿಚಾರವನ್ನೇ ಬಿಟ್ಟುಕೊಟ್ಟರು. ನುಡಿದವರೆಲ್ಲರೂ ಮೂರ್ಛೆ ಹೊಂದುವವರಾದರು. ದೇವತೆಗಳಿಗೆ ಇದೊಂದು ಚಿಂತೆಯೇ ಪ್ರಾರಂಭವಾಯಿತು. ಇದಕ್ಕೆ ತಕ್ಕ ಉಪಾಯವನ್ನು ಹುಡುಕಿ ಭಯಂಕರ ರೂಪವನ್ನು ಬಿಡಿಸಿ, ಶಾಂತ ರೂಪಳಾದ ದೇವಿಯ ಪ್ರಸನ್ನ ರೂಪ ತಾಳಬೇಕೆಂದು ಮನದಲ್ಲಿ ಆಲೋಚಿಸತೊಡಗಿದರು.

ದೇವಿಯ ಪರಮ ಭಕ್ತರಾಗಿರುವವನಿಗೆ ಈ ಕಾರ್ಯವು ಸಾಧಿಸಲು ಸಾಧ್ಯವೆಂದು ಬಗೆದು, “ತ್ರಿದಂಡಿ "ಎಂಬ ದೇವಿಯ ಪ್ರೇಮ ಭಕ್ತನ ನೆರವು ಪಡೆಯಲನುವಾಗಿ ಈ ಸಂಗತಿಯನ್ನು ತಿಳಿಸಿದರು. ದೇವತೆ ಗಳ ಮಾತಿನಂತೆ ತ್ರಿದಂಡಿಯು ದೇವಿಯನ್ನು ಕುರಿತು ಅನನ್ಯ ಭಕ್ತಿಯಿಂದ ಪ್ರಾರ್ಥಿಸಿದನು. ಭಕ್ತ ಪಾರಾಯಣಳಾದ ದೇವಿಯು ತ್ರಿದಂಡಿಯ ಕೋರಿಕೆಯನ್ನು ಮನ್ನಿಸಿ, ಕ್ರೂರ ರೂಪವನ್ನು ಬಿಟ್ಟು ಶಾಂತ ರೂಪವನ್ನು ಧಾರಣೆ ಮಾಡಿಕೊಂಡು ಸರ್ವರಿಗೂ ಕಲ್ಯಾಣವನ್ನು ಬಯಸುತ್ತಾ ವರದ ಹಸ್ತವನ್ನು ಅನುಗ್ರಹಿಸಿದಳು.

ದೇವಾನು ದೇವತೆಗಳೂ ತ್ರಿದಂಡಿ ಮುನಿಯೂ ದೇವಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾ ಜಯ ಜಯಕಾರವನ್ನು ಮಾಡಿದರು. ಅನಂತರ ದೇವತೆಗಳಿಗೆ ಅಧೀಷ್ಟನಾದ ದೇವೇಂದ್ರನು ದೇವಿಗೆ “ಜಗನ್ಮಾತೆಯೇ" ಮಂಗಳ ಪ್ರದಾಯಿನಿಯೇ ನೀನು ನಿನ್ನ ಭಯಂಕರ ರೂಪವನ್ನು ತೊರೆದು, ಸಾತ್ವಿಕ ರೂಪವನ್ನು ತೋರಿಸಿದ್ದು ನಮಗೆ ಅತಿಯಾದ ಆನಂದವನ್ನು ಉಂಟು ಮಾಡಿದೆ.

ನಿಮ್ಮ ಕೃಪಾದೃಷ್ಟಿ ನಮ್ಮ ಮೇಲೆ ಸದಾ ಇರುವಾಗ ನಮಗೇನು ಕೊರತೆ? ಇನ್ನು ಮೇಲೆ ಭಕ್ತರ ಉದ್ದಾರಕ್ಕಾಗಿ ನೀನು ಈ ತಿಲಕವನದಲ್ಲಿಯೇ ನೆಲೆಸಿ ಈ ಸ್ಥಳವನ್ನು ಎಲ್ಲಾ ಕ್ಷೇತ್ರಗಳಿಗಿಂತ ಪವಿತ್ರ ಕ್ಷೇತ್ರವನ್ನಾಗಿ ಮಾಡು. ಈ ಕ್ಷೇತ್ರಗಳಲ್ಲಿಯ ತೀರ್ಥಗಳನ್ನು ಪಾವನವನ್ನಾಗಿ ಮಾಡು,

ತೀರ್ಥದಲ್ಲಿ ಸ್ನಾನ ಮಾಡಿ ನಿನ್ನ ದರ್ಶನ ಪಡೆಯುವವರಿಗೆ ಮಹತ್ತರ ಪುಣ್ಯ ಪ್ರಾಪ್ತವಾಗಲಿ ಎಂದು ಅನುಗ್ರಹಿಸು. ನಿನ್ನ ಪರಮ ಭಕ್ತನಾದ, ಆರಾಧ್ಯನಾದ ತ್ರಿದಂಡಿ ಮುನಿಯು ಪ್ರತೀ ವರ್ಷಕ್ಕೊಮ್ಮೆ ನಿನ್ನ ಉತ್ಸವವನ್ನು ಅತ್ಯಂತ ಸಡಗರದಿಂದ ನೆರವೇರಿಸುತ್ತಾನೆ. ಆ ಸಂಭ್ರಮದ ಸಮಯಕ್ಕೆ ನಾನು ಎಲ್ಲಾ ದೇವತೆಗಳನ್ನು ಕೂಡಿಕೊಂಡು ಬಂದು ನಿನ್ನ ದರ್ಶನ ಲಾಭವನ್ನು ಪಡೆದು ಪುಣ್ಯಮಯ ರಾಗುತ್ತೇವೆ.

ಉತ್ಸವಕ್ಕೆಂದು ಬಂದ ಸಕಲ ಭಕ್ತರಿಗೂ ನಿನ್ನ ಅನುಗ್ರಹವಾಗಿ ಪಾಪದಿಂದ ಮುಕ್ತರಾಗಿ ಪುಣ್ಯ ವಂತರಾಗುತ್ತಾರೆಂಬುದಕ್ಕೆ ಸಂಶಯವಿಲ್ಲದೆ ಕೇಳಿಕೊಳ್ಳಲು, ಶ್ರೀ ದೇವಿಯೂ ಹರ್ಷ ಚಿತ್ತಳಾಗಿ ಒಪ್ಪಿ ನಿಮ್ಮೆಲ್ಲರ ಬಯಕೆಯಂತೆ ನಾನು ಈ ತಿಲಕವನದಲ್ಲಿಯೇ ವಾಸಿಸುತ್ತೇನೆ. ನನ್ನನ್ನು ನಂಬಿದ ಭಕ್ತರಿಗೆ ಅವರವರ ಭಕ್ತಿಗನುಸಾರವಾಗಿ ವರಗಳನ್ನು ದಾಯಪಾಲಿಸುವೆನೆಂದು ವರವನ್ನು ನೀಡಿ ದಳು.

ದೇವಿಯ ಮನವಲಿಸಲು ಒಬ್ಬ ಭಕ್ತನ ಅಪರಿಮಿತ ಭಕ್ತಿ ಸಾಕಾಯ್ತು. ಅಂತೆಯೇ ದೇವರಿಗೆ ಸಮರ್ಪಿ ಸಲು ನಮ್ಮ ಭಕ್ತಿ ಹೊಂದಿದ್ದರೆ ಸಾಕು. ನಾವು ಯಾರು? ಏನು? ನಮ್ಮ ವಯಸ್ಸು, ವರ್ಚಸ್ಸು ಇದ್ಯಾವುದೂ ಮುಖ್ಯವಲ್ಲ.