Keshava Prasada B Column: ವಿಬಿ-ಜಿ ರಾಮ್ ಜಿ ಯೋಜನೆ: ಚರ್ಚೆ ಆಗದಿರುವ ವಿಚಾರಗಳು !
ಗಾಂಧಿಯವರ ಆಶಯಕ್ಕೆ ಪೂರಕವಾಗಿ, ಎಂಜಿ ನರೇಗಾ ಯೋಜನೆಯ ಹೆಸರನ್ನು ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಎಂದು ಬದಲಿಸಲಾಗಿದೆ. ವಿಕಸಿತವಾಗುತ್ತಿರುವ ಭಾರತದ ಪ್ರಕ್ರಿಯೆ ಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯೂ ಸಕ್ರಿಯವಾಗಿ ಇರಬೇಕು ಮತ್ತು ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಹೆಸರನ್ನು ಹೀಗೆ ಬದಲಾಯಿಸಲಾಗಿದೆ. ಹಳೆಯ ನರೇಗಾ ಯೋಜನೆಯು ದುರ್ಬಲ ವರ್ಗದ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿತ್ತು.
-
ಮನಿ ಮೈಂಡೆಡ್
ಹಳೆಯ ನರೇಗಾದಲ್ಲಿ ಫಲಾನುಭವಿಗಳಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗ ಖಾತರಿ ಸಿಗುತ್ತಿತ್ತು. ಆದರೆ ‘ವಿಬಿ-ಜಿ ರಾಮ್ ಜಿ’ಯಲ್ಲಿ 125 ದಿನಗಳ ಖಾತರಿ ಉದ್ಯೋಗ ಸಿಗಲಿದೆ. ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಲಿದೆ. ನೀರಾವರಿ ಕೆಲಸಗಳಿಗೆ ಆದ್ಯತೆ, ಗ್ರಾಮೀಣ ರಸ್ತೆ, ಮಾರುಕಟ್ಟೆ, ಪರಿಸರ ರಕ್ಷಣೆ, ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಆದ್ಯತೆ ಸಿಗಲಿದೆ.
ಕೇಂದ್ರ ಸರಕಾರವು ಇಪ್ಪತ್ತು ವರ್ಷ ಹಳೆಯ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಬದಲಿಗೆ ‘ವಿಬಿ-ಜಿ ರಾಮ್ ಜಿ’ ಎಂಬ ಹೊಸ ಕಾಯಿದೆಯನ್ನು ಇತ್ತೀಚೆಗೆ ಜಾರಿಗೆ ತಂದಿದೆ. ಇದರಲ್ಲಿ ಗಾಂಧಿ ಯವರ ಹೆಸರನ್ನು ತೆಗೆದು ಹಾಕಿರುವುದಕ್ಕೆ ವಿವಾದ ಆಯಿತೇ ವಿನಾ, ಅದರನಿದೆ? ಪ್ರಯೋಜನ ಏನು? ಎಂಬುದರ ಬಗ್ಗೆ ಚರ್ಚೆ ಕಳೆದುಹೋಗಿತ್ತು.
ಬೇಕಾದರೆ ನೋಡಿ, ಈ ‘ರಾಮ್ ಜಿ’ ಅಡಿಯಲ್ಲಿ 60 ದಿನಗಳ ಕಾಲ ಕೆಲಸಗಳನ್ನು ತಡೆ ಹಿಡಿಯ ಬಹುದು. ದೇಶದಲ್ಲಿ ಬಿತ್ತನೆ ಮತ್ತು ಕೊಯ್ಲಿನ ಸಂದರ್ಭ ರೈತರಿಗೆ ಕೆಲಸಗಾರರ ಕೊರತೆ ಆಗಬಾ ರದು ಎಂಬುದೇ ಈ ಸಕಾರಾತ್ಮಕ ಬದಲಾವಣೆಗೆ ಕಾರಣ. ಹಿಂದೆಲ್ಲ ಬಿತ್ತನೆ, ಕೊಯ್ಲಿನ ಸಂದರ್ಭ ದಲ್ಲಿ, ನರೇಗಾ ಕೆಲಸಕ್ಕೆ ಕಾರ್ಮಿಕರು ಹೋಗುತ್ತಿದ್ದುದರಿಂದ ಸಣ್ಣ ಪುಟ್ಟ ರೈತರಿಗೆ ಕಾರ್ಮಿಕರೇ ಸಿಗುತ್ತಿರಲಿಲ್ಲ.
ಇದರಿಂದ ಅವರಿಗೆ ಭಾರಿ ಸಮಸ್ಯೆಯಾಗುತ್ತಿತ್ತು. ಆದರೆ ಈ ಸಮಸ್ಯೆ ಬಗೆಹರಿಸಲು ಕಾಯಿದೆಯಲ್ಲಿ 60 ದಿನಗಳ ಕಾಲ ಕೆಲಸಗಳನ್ನು ತಡೆ ಹಿಡಿಯಬಹುದಾದ ಅವಕಾಶ ಕಲ್ಪಿಸಲಾಗಿದೆ. ವಿಪರ್ಯಾಸ ವೇನೆಂದರೆ ಕೃಷಿ ಕಸುಬಿನ ಕಷ್ಟ ಸಂಕಷ್ಟಗಳ ಅರಿವೇ ಇಲ್ಲದವರು ಇದನ್ನು, ‘ಕಾರ್ಮಿಕರ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ’ ಎಂದು ಕರೆದು ಮಸಿ ಬಳಿಯುತ್ತಿರುವುದು!
ಆದ್ದರಿಂದ ಹೆಸರು ಬದಲಾವಣೆಯ ಬಗೆಗಿನ ಕ್ಷುಲ್ಲಕ ಮಾತಿನ ಚಕಮಕಿಗಿಂತ, ಹೊಸ ಬದಲಾವಣೆ ಏನು? ಅದರ ಪ್ರಯೋಜನವೇನು? ಎಂಬುದನ್ನು ತಿಳಿಯುವುದು ಅರ್ಥಪೂರ್ಣ. 2005ರಲ್ಲಿ ನರೇಗಾ ಆರಂಭವಾದಾಗ ಅದರಲ್ಲಿ ಗಾಂಧಿಯವರ ಹೆಸರು ಇದ್ದಿರಲಿಲ್ಲ. ‘ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆಕ್ಟ್’ (ನರೇಗಾ) ಎಂದು ಇತ್ತು. 2009ರಲ್ಲಿ ಮಹಾತ್ಮ ಗಾಂಧಿ ಯವರ ಹೆಸರನ್ನು ಸೇರಿಸಲಾಯಿತು. ಹೀಗಾಗಿ ಯೋಜನೆಯ ಹೆಸರು ‘ಮಹಾತ್ಮ ಗಾಂಧಿ ನ್ಯಾಷ ನಲ್ ರೂರಲ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆಕ್ಟ್’ ಸಂಕ್ಷಿಪ್ತವಾಗಿ ‘ಎಂಜಿನರೇಗಾ’ ಎಂದು ಆಗಿತ್ತು.
ಇದನ್ನೂ ಓದಿ: Keshava Prasad B Column: ರುಪಾಯಿ ಮತ್ತಷ್ಟು ಬಿದ್ದರೂ, ಆತಂಕವೇ ಬೇಡ! ಏಕೆ ಗೊತ್ತೇ ?!
20 ವರ್ಷಗಳ ಬಳಿಕ ಈಗ ‘ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್ಗಾರ್ ಆಂಡ್ ಅಜೀವಿಕಾ ಮಿಷನ್ (ಗ್ರಾಮೀಣ್)’ ಎಂಬುದಾಗಿ ಬದಲಿಸಲಾಗಿದೆ. ಸಂಕ್ಷಿಪ್ತವಾಗಿ ಇದನ್ನು ‘ವಿಬಿ-ಜಿ ರಾಮ್ ಜಿ’ ಎಂದು ಕರೆಯಲಾಗುತ್ತಿದೆ.
ಗಾಂಧಿಯವರ ಆಶಯಕ್ಕೆ ಪೂರಕವಾಗಿ, ಎಂಜಿ ನರೇಗಾ ಯೋಜನೆಯ ಹೆಸರನ್ನು ವಿಕಸಿತ್ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಎಂದು ಬದಲಿಸಲಾಗಿದೆ. ವಿಕಸಿತವಾಗುತ್ತಿರುವ ಭಾರತದ ಪ್ರಕ್ರಿಯೆ ಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯೂ ಸಕ್ರಿಯವಾಗಿ ಇರಬೇಕು ಮತ್ತು ಅಭಿವೃದ್ಧಿಯಾಗಬೇಕು ಎಂಬ ಉದ್ದೇಶದಿಂದ ಹೆಸರನ್ನು ಹೀಗೆ ಬದಲಾಯಿಸಲಾಗಿದೆ. ಹಳೆಯ ನರೇಗಾ ಯೋಜನೆಯು ದುರ್ಬಲ ವರ್ಗದ ಜನತೆಗೆ ಉದ್ಯೋಗಾವಕಾಶವನ್ನು ಕಲ್ಪಿಸುತ್ತಿತ್ತು.
2009ರ ಹಳೆಯ ಮಾನದಂಡವನ್ನು ಇಲ್ಲಿ ಬಳಸಲಾಗುತ್ತಿತ್ತು. ಆದರೆ ಈಗ ಮಹಿಳೆಯರೂ ಶಾಸನಾ ತ್ಮಕ ಮಾನದಂಡವಾಗಿರುವ 33 ಪರ್ಸೆಂಟಿಗಿಂತಲೂ ಹೆಚ್ಚು ಭಾಗವಹಿಸುತ್ತಿದ್ದಾರೆ. ಈ ವರ್ಷ ಜುಲೈನಲ್ಲಿ 52 ಪರ್ಸೆಂಟಿಗೆ ಏರಿಕೆಯಾಗಿತ್ತು. ಆದ್ದರಿಂದ ಯೋಜನೆಯಲ್ಲಿ ಬದಲಾವಣೆಯ ಅಗತ್ಯ ಇತ್ತು ಎಂದು ಕೇಂದ್ರ ಸರಕಾರ ತಿಳಿಸಿದೆ.
ಭಾರತದಲ್ಲಿ ವೇತನ ಸಹಿತ ಉದ್ಯೋಗ ಯೋಜನೆಗಳು ಹಂತಗಳಲ್ಲಿ ವಿಕಾಸವಾಗಿವೆ. ಬೇರೆ ಬೇರೆ ಹೆಸರುಗಳೂ ಇದ್ದವು. ರೂರಲ್ ಮ್ಯಾನ್ ಪವರ್ ಪ್ರೋಗ್ರಾಮ್ (1960), ಕ್ರ್ಯಾಶ್ ಸ್ಕೀಮ್ ಫಾರ್ ರೂರಲ್ ಎಂಪ್ಲಾಯ್ಮೆಂಟ್ (1971), ನ್ಯಾಷನಲ್ ರೂರಲ್ ಎಂಪ್ಲಾಯ್ಮೆಂಟ್ ಪ್ರೋಗ್ರಾಮ್, ರೂರಲ್ ಲ್ಯಾಂಡ್ಲೆಸ್ ಎಂಪ್ಲಾಯ್ಮೆಂಟ್ ಗ್ಯಾರಂಟಿ ಸ್ಕೀಮ್, ಜವಾಹರ್ ರೋಜ್ಗಾರ್ ಯೋಜನೆ (1993), ಸಂಪೂರ್ಣ ಗ್ರಾಮೀಣ ರೋಜ್ಗಾರ್ ಯೋಜನೆ (1999), ಎಂಪ್ಲಾಯ್ಮೆಂಟ್ ಅಶ್ಶೂರೆ ಸ್ಕೀಮ್ ಆಂಡ್ ದಿ ಫುಡ್ ಫಾರ್ ವರ್ಕ್ ಪ್ರೋಗ್ರಾಮ್ ಈ ಯೋಜನೆಗಳು ಆಯಾ ಕಾಲ ಘಟ್ಟದ ನಿರುದ್ಯೋಗ ಮತ್ತು ಆಹಾರ ಭದ್ರತೆಯ ಸವಾಲುಗಳ ಎದುರು ಅಸ್ತಿತ್ವದಲ್ಲಿದ್ದವು ಹಾಗೂ ಕ್ರಮೇಣ ವಿಕಾಸವಾಗುತ್ತಿದ್ದವು.
‘ಮಹಾರಾಷ್ಟ್ರ ಎಂಪ್ಲಾಯ್ಮೆಂಟ್ ಗ್ಯಾರಂಟಿ ಆಕ್ಟ್ 1977’ ಮಹತ್ವದ ತಿರುವು ಕೊಟ್ಟಿತು. ಕೆಲಸ ಮಾಡುವ ಹಕ್ಕನ್ನು ಅದು ಕೊಟ್ಟಿತು. 2005ರಲ್ಲಿ ನರೇಗಾ ಬಂದಿತು. ಈಗ ಮತ್ತೆ ಹೊಸತು.‘ವಿಬಿ-ಜಿ ರಾಮ್ ಜಿ’ಯಲ್ಲಿ ಏನೆ ಹೊಸ ಬದಲಾವಣೆ ತರಲಾಗಿದೆ? ಹಳೆಯ ನರೇಗಾದಲ್ಲಿ ಫಲಾನುಭವಿಗಳಿಗೆ ಪ್ರತಿ ವರ್ಷ 100 ದಿನಗಳ ಉದ್ಯೋಗ ಖಾತರಿ ಸಿಗುತ್ತಿತ್ತು. ಆದರೆ ‘ವಿಬಿ-ಜಿ ರಾಮ್ ಜಿ’ಯಲ್ಲಿ 125 ದಿನಗಳ ಖಾತರಿ ಉದ್ಯೋಗ ಸಿಗಲಿದೆ. ಗ್ರಾಮೀಣ ಮೂಲಸೌಕರ್ಯ ವ್ಯವಸ್ಥೆ ಸುಧಾರಿಸಲಿದೆ.
ನೀರಾವರಿ ಕೆಲಸಗಳಿಗೆ ಆದ್ಯತೆ, ಗ್ರಾಮೀಣ ರಸ್ತೆ, ಮಾರುಕಟ್ಟೆ, ಪರಿಸರ ರಕ್ಷಣೆ, ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಆದ್ಯತೆ ಸಿಗಲಿದೆ. ರೈತರಿಗೆ ಕೊಯ್ಲಿನ ಸಮಯದಲ್ಲಿ ಕೃಷಿ ಕಾರ್ಮಿಕರ ಲಭ್ಯತೆ ಹೆಚ್ಚಲಿದೆ. ಕಾರ್ಮಿಕರಿಗೆ ಸಂಬಳದಲ್ಲಿ 25 ಪರ್ಸೆಂಟ್ ಹೆಚ್ಚಳವಾಗಲಿದೆ. ಡಿಜಿಟಲ್ ಸಂಬಳ ಪಾವತಿ ಆಗುವು ದರಿಂದ ಅಕ್ರಮ, ಸೋರಿಕೆ ಸಮಸ್ಯೆ ಇರುವುದಿಲ್ಲ.
ಇದರಿಂದ ಗ್ರಾಮೀಣ ಜನರ ಆದಾಯ ನಿಶ್ಚಿತವಾಗಿ ಹೆಚ್ಚಲಿದೆ. ಗಾಂಧಿಯವರ ಆಶಯಕ್ಕೆ ಇದು ಪೂರಕವಾಗಿದೆ. ರೈತರು, ಕೃಷಿ ಕಾರ್ಮಿಕರು ಇಬ್ಬರಿಗೂ ಅನುಕೂಲಕರ. ಎಂಜಿನರೇಗಾದಲ್ಲಿ ಮಾಡಬೇಕಾದ ಕೆಲಸಗಳ ಹಲವಾರು ಕೆಟಗರಿಗಳು ಮತ್ತು ಸೀಮಿತ ಕಾರ್ಯತಂತ್ರಗಳಿಂದಾಗಿ ವ್ಯವಸ್ಥೆ ಸಂಕೀರ್ಣವಾಗಿತ್ತು. ಈಗ ಆದ್ಯತೆಯ 4 ವಲಯಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ.
ಯೋಜನೆಯ ಫಂಡಿಂಗ್ ವಿಚಾರದಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಮೊದಲು ಅನ್-ಸ್ಕಿಲ್ಡ್ ಕಾರ್ಮಿಕರಿಗೆ ಮಾತ್ರ ಕೇಂದ್ರ ಸರಕಾರ ಶೇ.100ರಷ್ಟು ಸಂಬಳ ಕೊಡುತ್ತಿತ್ತು. ‘ವಿಬಿ-ಜಿ ರಾಮ್ ಜಿ’ಯಲ್ಲಿ 60 ಪರ್ಸೆಂಟ್ ಕೇಂದ್ರ ಮತ್ತು 40 ಪರ್ಸೆಂಟ್ ರಾಜ್ಯ ಸರಕಾರಗಳು ಕೊಡಬೇಕು. ಇದು ಒಳ್ಳೆಯ ನಿರ್ಧಾರ. ಇದರಿಂದ ಯೋಜನೆಯ ಪರಿಣಾಮಕಾರಿ ಜಾರಿಯಲ್ಲಿ ರಾಜ್ಯ ಸರಕಾರಗಳಿಗೂ ಜವಾಬ್ದಾರಿ ಹಂಚಿಕೆಯಾಗುತ್ತದೆ.
ಅವುಗಳ ವಿತ್ತೀಯ ಶಿಸ್ತು ಸುಧಾರಿಸುತ್ತದೆ. ವಿಕಸಿತ ಗ್ರಾಮ ಪಂಚಾಯತ್ ಪ್ಲಾನ್ ಮೂಲಕ ಯೋಜನೆಯ ಪ್ಲಾನಿಂಗ್ ವಿಕೇಂದ್ರೀಕರಣವಾಗಲಿದೆ. ಯೋಜನೆಯ ಉತ್ಪಾದಕತೆ ಹೆಚ್ಚಳಕ್ಕೆ ಇದು ಕಾರಣವಾಗಲಿದೆ. ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರವೇ ನೂರು ಪರ್ಸೆಂಟ್ ಫಂಡ್ ನೀಡಲಿದೆ.
ಹಾಗೆಯೇ ಹಿಮಾಲಯದ ತಪ್ಪಲಿನ ರಾಜ್ಯಗಳು ಮತ್ತು ಈಶಾನ್ಯ ರಾಜ್ಯಗಳಿಗೆ 90:10 ಅನುಪಾತ ದಲ್ಲಿ ಫಂಡಿಂಗ್ ನಡೆಯಲಿದೆ. ರಾಜ್ಯ ಸರಕಾರಗಳಿಗೆ ಎಷ್ಟು ಫಂಡ್ ನೀಡಬೇಕು ಎಂಬ ನಿರ್ಧಾರ ವನ್ನು ಕೇಂದ್ರ ಸರಕಾರ ಕೈಗೊಳ್ಳಲಿದೆ. ಹೊಸ ಬದಲಾವಣೆಯಿಂದ ಗ್ರಾಮ ಪಂಚಾಯಿತಿಗಳ ಗ್ರಾಮಸಭೆಯ ಅಧಿಕಾರ ಪ್ರಬಲವಾಗಲಿದೆ.
ಹಳೆಯ ನರೇಗಾ ಯೋಜನೆಯಲ್ಲೂ ಕೇಂದ್ರ ಸರಕಾರ 75 ಪರ್ಸೆಂಟ್ ಸಾಮಗ್ರಿ ವೆಚ್ಚವನ್ನು ಮಾತ್ರ ಭರಿಸುತ್ತಿತ್ತು. 25 ಪರ್ಸೆಂಟ್ ಅನ್ನು ರಾಜ್ಯ ಸರಕಾರಗಳು ನೀಡುತ್ತಿದ್ದವು. ಕೇಂದ್ರ ಸರಕಾರವು ಅನ್-ಸ್ಕಿಲ್ಡ ಕಾರ್ಮಿಕರಿಗೆ ಮಾತ್ರ 100 ಪರ್ಸೆಂಟ್ ಸಂಬಳ ಕೊಡುತ್ತಿತ್ತು ಎಂಬುದನ್ನು ಗಮನಿಸಬಹುದು. ಚಿದಂಬರಂ ಕೂಡ ಒಂದಷ್ಟು ಹಣವನ್ನು ರಾಜ್ಯಗಳೂ ನೀಡಬೇಕು ಎಂದು ಬಯಸಿದ್ದರು.
ಯೋಜನೆಯಲ್ಲಿ ಹಣದ ಸೋರಿಕೆ ಆಗದಂತೆ ನೋಡಿಕೊಳ್ಳಲು ರಾಜ್ಯ ಸರಕಾರಗಳೂ ಫಂಡಿಂಗ್ ನಲ್ಲಿ ಭಾಗವಹಿಸುವುದು, ಜವಾಬ್ದಾರಿ ವಹಿಸುವುದು ಉತ್ತಮ. ಈಗಲೂ ಬಹುಪಾಲು ಫಂಡಿಂಗ್ ಪ್ರಾಯೋಜಕತ್ವವು ಕೇಂದ್ರ ಸರಕಾರದ್ದೇ ಆಗಿದೆ. ಆದರೆ ಯೋಜನೆಯ ಸರಿಯಾದ ಅನುಷ್ಠಾನದ ಜವಾಬ್ದಾರಿ ರಾಜ್ಯ ಸರಕಾರದ್ದಾಗಿದೆ. ಸ್ಥಳೀಯವಾಗಿ ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಯೋಜನೆಯನ್ನು ಸಮರ್ಥವಾಗಿ ಬಳಸಬಹುದು.
ರಸ್ತೆಗಳು, ಗೋದಾಮುಗಳು, ಮಾರುಕಟ್ಟೆ ಸೌಕರ್ಯಗಳು ಅಭಿವೃದ್ಧಿಯಾದರೆ ರೈತರ ಆದಾಯವೂ ಹೆಚ್ಚುತ್ತದೆ. ವಿಕಸಿತ ಗ್ರಾಮ ಪಂಚಾಯತ್ ಪ್ಲಾನ್ ಎಂಬ ಪರಿಕಲ್ಪನೆಯ ಅಡಿಯಲ್ಲಿ ಗ್ರಾಮೀಣ ಭಾಗದ ಕೆಲಸಗಳು ನಡೆಯಲಿವೆ. ಬ್ಲಾಕ್, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಕೇಂದ್ರೀಕೃತವಾಗಲಿದೆ. ಪಿಎಂ ಗತಿ ಶಕ್ತೊ ರಾಷ್ಟ್ರೀಯ ಯೋಜನೆಗೂ ಲಿಂಕ್ ಆಗಲಿದೆ. ಹೀಗಾಗಿ ಇದು ಹೆಚ್ಚು ಉತ್ಪಾದಕತೆಯನ್ನು ತಾನಾಗಿಯೇ ಗಳಿಸಿಕೊಳ್ಳಲಿದೆ.
ಗ್ರಾಮೀಣ ಭಾಗದ ಬಡತನದ ಪ್ರಮಾಣ 2011-12ರಲ್ಲಿ 25.7 ಪರ್ಸೆಂಟ್ ಇದ್ದರೆ 2023-24ರ ವೇಳೆಗೆ 4.86 ಪರ್ಸೆಂಟ್ಗೆ ಇಳಿದಿದೆ. ಆದ್ದರಿಂದ ಅಭಿವೃದ್ಧಿ ಆಧಾರಿತ ಮತ್ತು ಪರಿಸರ ಸಂರಕ್ಷಣೆಗೆ ಪೂರಕ ವಾಗಿ ಪ್ರೋಗ್ರಾಮ್ ಸುಧಾರಿಸಬೇಕಾದ ಅಗತ್ಯವೂ ಇದೆ. ಜಾಬ್ ಕಾರ್ಡ್ಗಳ ವ್ಯಾಲಿಡಿಟಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಇಳಿಸಲಾಗಿದೆ.
ಇದೂ ಒಳ್ಳೆಯದೇ. ಏಕೆಂದರೆ ಮೃತಪಟ್ಟಿರುವ ಅಥವಾ ಗೈರು ಹಾಜರಾಗಿರುವ ಕಾರ್ಮಿಕರ ಜಾಬ್ ಕಾರ್ಡ್ ಗಳನ್ನು ಬೇರೆಯವರು ದುರುಪಯೋಗ ಮಾಡಿಕೊಳ್ಳದಂತೆ ಇದು ತಡೆಯುತ್ತದೆ. ಗ್ರಾಮೀಣ ಭಾಗದಲ್ಲಿ ಜನರಿಗೆ ಖಾತರಿಯ ಉದ್ಯೋಗ, ವೇತನದ ಜತೆಗೆ ಉತ್ಪಾದಕ ಆಸ್ತಿಗಳು ಸೃಷ್ಟಿಯಾಗು ವುದು ಎಂದರೆ ಆರ್ಥಿಕ ಪ್ರಗತಿಗೂ ಕಾರಣವಾಗಲಿದೆ.
ನೀರಾವರಿಗೆ ಆದ್ಯತೆ ನೀಡುವುದು ಕೂಡ ಹಲವು ಆಯಾಮಗಳಲ್ಲಿ ಲಾಭದಾಯಕ. ಇದರಿಂದ ಅಂತರ್ಜಲದ ಮಟ್ಟ ಸುಧಾರಿಸಲಿದೆ. ಸ್ಥಳೀಯವಾಗಿ ಜೀವನೋಪಾಯಕ್ಕೆ ಕೆಲಸ ಸಿಕ್ಕಿದರೆ ನಗರ ಗಳಿಗೆ, ಪಟ್ಟಣಗಳಿಗೆ ಹಳ್ಳಿಗರ ವಲಸೆಯೂ ಕಡಿಮೆಯಾಗುತ್ತದೆ. ಮನೆಮನೆಯಲ್ಲಿ ದುಡಿಯು ವವರ ಸಂಖ್ಯೆ ಹೆಚ್ಚಿದಾಗ ಸ್ಥಳೀಯ ಆರ್ಥಿಕ ಚಟುವಟಿಕೆ ಹೆಚ್ಚುತ್ತದೆ.
ಅಂದರೆ ಜನರು ಸಮೀಪದ ಮಾರುಕಟ್ಟೆಯಲ್ಲಿ ತಮಗೆ ಬೇಕಾದ ನಾನಾ ವಸ್ತುಗಳನ್ನು, ಸೇವೆ ಗಳನ್ನು ಖರೀದಿಸುತ್ತಾರೆ. ಕೃತಕ ಬುದ್ಧಿಮತ್ತೆ, ಕಾಮಗಾರಿಗಳ ಬಗ್ಗೆ ಜಿಪಿಎಸ್ ಮತ್ತು ಮೊಬೈಲ್ ಆಧಾರಿತ ಮಾನಿಟರಿಂಗ್ ವ್ಯವಸ್ಥೆ, 6 ತಿಂಗಳಿಗೊಮ್ಮೆ ಸೋಷಿಯಲ್ ಆಡಿಟ್ ಕಡ್ಡಾಯಗೊಳಿಸಿರು ವುದು ಯೋಜನೆಯ ಪಾರದರ್ಶಕತೆಯನ್ನು ಹೆಚ್ಚಿಸಲಿದೆ.
ಈ ಹಿಂದೆ ಸಹಿ ಮತ್ತು ಹೆಬ್ಬೆಟ್ಟು ಇರುವ ಮಾನ್ಯುಯಲ್ ವೆರಿಫಿಕೇಶನ್ ಇತ್ತು. ಇದು ಅಕ್ರಮ, ಸೋರಿಕೆಗೂ ಕಾರಣವಾಗುತ್ತದೆ. ಈ ಹಿಂದೆ ಕೆಲಸಗಾರರಿಗೆ ಸಕಾಲದಲ್ಲಿ ವೇತನ ಬಟವಾಡೆ ಆಯಿತೇ ಎಂಬುದನ್ನು ಖಾತರಿಪಡಿಸಿಕೊಳ್ಳುವ ಅನುಕೂಲ ಇದ್ದಿರಲಿಲ್ಲ. ಕೇವಲ 76 ಲಕ್ಷ ಕೆಲಸಗಾರರಿಗೆ ಮಾತ್ರ ಆಧಾರ್ ಸೀಡಿಂಗ್ ಮೂಲಕ ದೃಢೀಕರಣವಾಗುತ್ತಿತ್ತು.
ಇದು ಸೋರಿಕೆಗೆ ಕಾರಣವಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ನರೇಗಾದ ನಕಲಿ ಫಲಾನು ಭವಿಗಳನ್ನು ನಿರ್ಮೂಲನೆಗೊಳಿಸಲಾಗಿದೆ. ಹೀಗಿದ್ದರೂ ಈಗ ನ್ಯಾಷನಲ್ ಇಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ಕೆಲಸಗಾರರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಯಾಗುತ್ತದೆ.
ನಿಸ್ಸಂದೇಹವಾಗಿ ಇವತ್ತಿನ ಭಾರತ ಇಪ್ಪತ್ತು ವರ್ಷಗಳ ಹಿಂದಿನದ್ದಲ್ಲ. ಎಂಜಿನರೇಗಾ ಒಂದು ಸೇಫ್ಟಿ ವಾಲ್ವ ಆಗಿತ್ತು. ಖಾಸಗಿ ಉದ್ಯೋಗಗಳು ಸಿಗದಿದ್ದಾಗ ಖಾತರಿಯ ವೇತನ ಇರುವ ಕೆಲಸದ ವ್ಯವಸ್ಥೆ ಕಲ್ಪಿಸುವುದು ಉದ್ದೇಶವಾಗಿತ್ತು. 2005ರಲ್ಲಿ ಬ್ಯಾಂಕ್ ಖಾತೆಗಳು ಕಡಿಮೆ ಇದ್ದವು. ಡಿಜಿಟಲ್ ಟ್ರಾನ್ಸ್ʼಫರ್ ಕಲ್ಪನೆಯಲ್ಲಿತ್ತು. ಆದರೆ ಈಗ ಬ್ಯಾಂಕ್ ಖಾತೆ ಇಲ್ಲದ ಮನೆ ಇರಲಿಕ್ಕಿಲ್ಲ.
2029ರ ತನಕ 80 ಕೋಟಿ ಜನರಿಗೆ ಉಚಿತ ಆಹಾರ ಧಾನ್ಯ ವಿತರಿಸುವ ಪಡಿತರ ವ್ಯವಸ್ಥೆ ಇದೆ. 45 ಕೋಟಿ ಜನರಿಗೆ ನೇರ ನಗದು ವಿತರಣೆ ಅನುಕೂಲ ಇದೆ. ಈಗ ಗ್ರಾಮೀಣ ಭಾರತದಲ್ಲಿ ಕೇವಲ ಬಡತನ ನಿವಾರಣೆಯ ರಿಲೀಫ್ ಮಾತ್ರವಲ್ಲದೆ, ಉತ್ಪಾದಕತೆ, ಆಸ್ತಿ ಸೃಷ್ಟಿ ಮತ್ತು ಕೃಷಿ ಕ್ಷೇತ್ರದ ವಾಸ್ತವ ಸ್ಥಿತಿಗತಿ-ಅಗತ್ಯಗಳಿಗೆ ಹೊಂದಿಕೆಯಾಗುವ ಯೋಜನೆ ಬೇಕಿದೆ. ಆದ್ದರಿಂದ ಬದಲಾವಣೆಯ ಅಗತ್ಯವಿತ್ತು.