ಕ.ಕ ಭಾಗದ ಸಾಹಿತಿಗೆ ಅವಕಾಶ ಸಿಗುವ ನಿರೀಕ್ಷೆ: ಬಳ್ಳಾರಿ ಸಾಹಿತ್ಯ ಸಮ್ಮೇಳನ
ಕಳೆದ 87 ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ನಾಲ್ಕು ಸಮ್ಮೇಳನದಲ್ಲಿ ಮಹಿಳೆಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಗದಗದಲ್ಲಿ ನಡೆದ 76ನೇ ಸಾಹಿತ್ಯ ಸಮ್ಮೇಳನ ದಲ್ಲಿ ಗೀತಾ ನಾಗಭೂಷಣ ಬಳಿಕ ಕಳೆದ 15 ವರ್ಷಗಳಲ್ಲಿ ಯಾವ ಮಹಿಳಾ ಸಾಹಿತಿಗೂ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ಬಳ್ಳಾರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಮಹಿಳೆಯರನ್ನು ಸರ್ವಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಚರ್ಚೆಗಳು ಕೇಳಿ ಬರುತ್ತಿವೆ.


ಅಪರ್ಣಾ ಎ.ಎಸ್ ಬೆಂಗಳೂರು
ಪ್ರತಿ ಬಾರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಬಂದಾಗಲೂ ಸಹಜವಾಗಿ ಕೇಳಿ ಬರುವ ‘ಮಹಿಳಾ ಸಾಹಿತಿಗಳಿಗೆ’ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಅವಕಾಶವನ್ನು ನೀಡಬೇಕು ಎನ್ನುವ ಕೂಗು ಮತ್ತೆ ಶುರುವಾಗಿದೆ. ಈ ಬಾರಿ ಈ ಕೂಗಿಗೆ ಕನ್ನಡ ಸಾಹಿತ್ಯ ಪರಿಷತ್ ಮಣೆ ಹಾಕುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.
ಮಹಿಳಾ ಸಮಾನತೆಯ ಬಗ್ಗೆ ಪ್ರತಿ ಸಮ್ಮೇಳನದಲ್ಲಿಯೂ ಸಂವಾದ ಆಯೋಜಿಸಲಾಗುತ್ತದೆಯೇ ಹೊರತು, ಮಹಿಳಾ ಸಾಹಿತಿಗಳಿಗೆ ಸಮ್ಮೇಳನಾಧ್ಯಕ್ಷರ ಗೌರವ ನೀಡುವುದಿಲ್ಲ ಎನ್ನುವ ಅಸಮಾಧಾನ ಮಹಿಳಾ ಲೇಖಕಿಯರಲ್ಲಿ ಮೊದಲಿನಿಂದಲೂ ಇದೆ. ಸಾಹಿತ್ಯ ಸಮ್ಮೇಳನಕ್ಕೆ ಮಹಿಳಾ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡಿ ಈಗಾಗಲೇ 15 ವರ್ಷ ಕಳೆದಿವೆ.
ಆದ್ದರಿಂದ ಈ ಬಾರಿ ಮಹಿಳೆಯರಿಗೆ ಅವಕಾಶ ನೀಡಬೇಕು ಎನ್ನುವ ಕೂಗು ಸಾಹಿತ್ಯ ವಲಯದಲ್ಲಿ ಕೇಳಿಬರುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಈ ಬಾರಿ ಮಹಿಳಾ ಸಾಹಿತಿಯನ್ನು ಸಮ್ಮೇಳನಾ ಧ್ಯಕ್ಷರನ್ನಾಗಿ ಮಾಡುವ ಸಂಬಂಧ ಪ್ರಾಥಮಿಕ ಹಂತದಲ್ಲಿ ಚರ್ಚೆ ಆರಂಭವಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: Shishir Hegde Column: ಪಂಜರದೊಳಗಿನ ಮಂಗಕ್ಕೆ ಐವತ್ತು ಲಕ್ಷ ರೂಪಾಯಿ !
ಕಳೆದ 87 ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ನಾಲ್ಕು ಸಮ್ಮೇಳನದಲ್ಲಿ ಮಹಿಳೆಯರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಗದಗದಲ್ಲಿ ನಡೆದ 76ನೇ ಸಾಹಿತ್ಯ ಸಮ್ಮೇಳನ ದಲ್ಲಿ ಗೀತಾ ನಾಗಭೂಷಣ ಬಳಿಕ ಕಳೆದ 15 ವರ್ಷಗಳಲ್ಲಿ ಯಾವ ಮಹಿಳಾ ಸಾಹಿತಿಗೂ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಈ ಬಾರಿ ಬಳ್ಳಾರಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನಕ್ಕೆ ಮಹಿಳೆಯ ರನ್ನು ಸರ್ವಸಮ್ಮೇಳನಾ ಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎನ್ನುವ ಚರ್ಚೆಗಳು ಕೇಳಿ ಬರುತ್ತಿವೆ.

ಈ ಬಾರಿ ಬಳ್ಳಾರಿಯಲ್ಲಿ 88ನೇ ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಮಹಿಳಾ ಸಾಹಿತಿಗಳಿಗೆ ಅವಕಾಶ ನೀಡಬೇಕು ಎನ್ನುವ ಅಭಿಮತ ಸಾಹಿತ್ಯ ವಲಯದಲ್ಲಿ ಹೆಚ್ಚಾಗಿದೆ. ಸಾಹಿತ್ಯದ ಕೆಲ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿರು ವಂತಹ ಸಾಹಿತಿಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹಲವು ಮಹಿಳಾ ಸಾಹಿತಿಗಳ ಹೆಸರುಗಳು ಕೂಡ ಸಮ್ಮೇಳನಾಧ್ಯಕ್ಷರ ಪಟ್ಟಿಯ ರೇಸ್ನಲ್ಲಿ ಕಾಣಿಸಿ ಕೊಂಡಿದೆ.
ಪ್ರಮುಖವಾಗಿ ಹಿರಿಯ ಸಾಹಿತಿಗಳಾದ ವೈದೇಹಿ, ವೀಣಾ ಶಾಂತೇಶ್ವರ ಹೆಸರು ಈ ಪಟ್ಟಿಯಲ್ಲಿದೆ. ಕಳೆದ 10 ವರ್ಷಗಳಿಂದ ವೈದೇಹಿ ಹೆಸರು ಪ್ರತಿ ಸಮ್ಮೇಳನದ ಸಮ್ಮೇಳನಾಧ್ಯಕ್ಷರ ಆಯ್ಕೆ ಸಮಯ ದಲ್ಲಿ ಕೇಳಿಬರುತ್ತಿದೆ. ಇನ್ನು ವೀಣಾ ಶಾಂತೇಶ್ವರ, ವಸುಂಧರ ಭೂಪತಿ ಹೆಸರು ಗಳು ಮುನ್ನೆಲೆಗೆ ಬಂದಿವೆ.
ಇದರೊಂದಿಗೆ ಇತ್ತೀಚೆಗಷ್ಟೇ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಭಾನು ಮುಸ್ತಾಕ್ ಅವರ ಹೆಸರೂ ಓಡಾಡುತ್ತಿದೆ. ಆದರೆ ಅಂತಿಮವಾಗಿ ಸದ್ಯ ಓಡಾಡುತ್ತಿರುವ ಮಹಿಳಾ ಸಾಹಿತಿಗಳ ಹೆಸರು ಅಂತಿಮವಾಗುವುದೋ ಅಥವಾ ಈ ಹಿಂದಿನ ಸಮ್ಮೇಳನದ ರೀತಿಯ ಇತರರಿಗೆ ಅವಕಾಶ ಸಿಗುವುದೋ ಎನ್ನುವ ಸ್ಪಷ್ಟತೆ ಸಿಕ್ಕಿಲ್ಲ.
ಕಲ್ಯಾಣ ಕರ್ನಾಟಕದವರಿಗೆ ಅವಕಾಶ?
ಈ ಬಾರಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಯುತ್ತಿರುವುದರಿಂದ ಕಲ್ಯಾಣ ಕರ್ನಾಟಕದ ಸಾಹಿತಿಗಳಿಗೆ ಸಮ್ಮೇಳನಾಧ್ಯಕ್ಷರಾಗುವ ಅವಕಾಶ ನೀಡಬೇಕು ಎನ್ನುವ ಅಭಿಪ್ರಾಯ ಗಳು ಕೇಳಿ ಬಂದಿವೆ. ಅದರಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲಾಧ್ಯಕ್ಷರು, ಈ ಭಾಗದ ವರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತಿದ್ದಾರೆ. ಈ ಲೆಕ್ಕಾಚಾರದಲ್ಲಿ ಕೆಲ ಮಹಿಳಾ ಸಾಹಿತಿಗಳ ಹೆಸರು ಮುನ್ನೆಲೆಗೆ ಬಂದಿದೆ. ಆದರೆ ಸ್ಪಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ.