ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೈಲೈನ್‌ ಸ್ಟೋರೀಸ್‌

Dr Yathindra Siddaramaiah: ʼಡಾ.ಯತೀಂದ್ರʼಗೆ ಒಲಿದು ಬಂದ ʼಮಂತ್ರಿʼಭಾಗ್ಯ

Dr yathindra Siddaramaiah: ʼಡಾ.ಯತೀಂದ್ರʼಗೆ ಒಲಿದು ಬಂದ ʼಮಂತ್ರಿʼಭಾಗ್ಯ

ಸಿಎಂ ಹುದ್ದೆಯಿಂದ ನಿರ್ಗಮಿಸುವ ಮುನ್ನ ಭವಿಷ್ಯದ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಂಡೇ ಉರುಳಿಸಿದ ಪಗಡೆ ಆಟದಲ್ಲಿ ಯಶ ಕಂಡಿರುವ ಸಿದ್ದರಾಮಯ್ಯ, ಮೈಸೂರಿನಲ್ಲಿ ತಮ್ಮ ಮಗನಿಗೆ ರಾಜಕೀಯದ ಭದ್ರ ನೆಲೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಜಿಲ್ಲಾ ಉಸ್ತುವಾರಿ ಪಟ್ಟದ ಸನಿಹಕ್ಕೆ ತಂದು ಕೂರಿಸಿದ್ದಾರೆ.

Ministry for U T Khader: ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ಕ್ಷೇತ್ರದ ಶಾಸಕರಾಗಿ ಸತತ ಐದು ಬಾರಿ ಆಯ್ಕೆಯಾಗಿ, ಪ್ರಸ್ತುತ ಸಚಿವ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿರುವ ಯು.ಟಿ.ಖಾದರ್ ಅವರು ಅತ್ಯಂತ ಪ್ರಭಾವಶಾಲಿ ಹಾಗೂ ಜನಪ್ರಿಯ ನಾಯಕರಲ್ಲಿ ಒಬ್ಬರು. ಕಾನೂನು ಪದವೀಧರರಾದ ಇವರು, ಸೇಂಟ್ ಅಲೋಶಿಯಸ್ ಮತ್ತು ಎಸ್‌ಡಿ ಎಂ ಕಾಲೇಜುಗಳಲ್ಲಿ ಶಿಕ್ಷಣ ಮುಗಿಸಿದರು. ವಿದ್ಯಾರ್ಥಿ ದಿಸೆಯಿಂದಲೇ ಎನ್‌ಎಸ್‌ಯುಐ ಸಂಘಟನೆ ಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಹಂತಹಂತವಾಗಿ ಬೆಳೆದರು.

ಖಾತೆ ಕಸರತ್ತು ಮಂತ್ರಿಗಳಿಂದ ಮಹಾ ಲಾಬಿ ಶುರು

ಖಾತೆ ಕಸರತ್ತು ಮಂತ್ರಿಗಳಿಂದ ಮಹಾ ಲಾಬಿ ಶುರು

ಸಂಪುಟ ರಚನೆಯ ನಿರಂತರ ಕಸರತ್ತು ನಡೆಸಿದ ನಂತರ ಪಕ್ಷದ ಹೈಕಮಾಂಡ್, ಖಾತೆಗಳ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ನಾಯಕರಿಗೆ ಸೂಚನೆಗಳು ನೀಡಿದೆ. ಇದನ್ನು ಆಧರಿಸಿ ಈಗಾಗಲೇ ಯಾವ ಸಚಿವರಿಗೆ ಯಾವ ಖಾತೆ ಎನ್ನುವ ತಾತ್ಕಾಲಿಕ ಪಟ್ಟಿಯನ್ನು ಒಂದು ಹಂತಕ್ಕೆ ಸಿದ್ಧಪಡಿಸಲಾಗಿದೆ.

Medical Negligency: ತಾಲೂಕು ಆಸ್ಪತ್ರೆಯಲ್ಲಿ ಒಂದೇ ಸಿರೆಂಜಿನಲ್ಲಿ ಹಲವಾರು ಜನರಿಗೆ ಚುಚ್ಚುಮದ್ದು : ವೈದ್ಯಕೀಯ ಲೋಪ ಎಸಗಿದ ಸಿಬ್ಬಂದಿ !

ವೈದ್ಯಕೀಯ ಲೋಪ ಎಸಗಿದ ಸಿಬ್ಬಂದಿ !

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ, ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕ ಮತ್ತು ಹೊಸ ಸಿರಿಂಜ್ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಕಾನೂನು ಇದೆ ಆದರೆ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಮಲ್ಲಿಕಾರ್ಜುನ ಎಂಬ ಯುವಕ ಸಣ್ಣಪುಟ್ಟ ಗಾಯಗಳಾ ಗಿದ್ದು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಹೋಗಿದ್ದಾನೆ ಈ ವೇಳೆ ಕರ್ತವ್ಯದಲ್ಲಿದ್ದ ಸ್ಟಾಪ್ ನರ್ಸ್ ಕೇವಲ ಸೂಜಿ ಬದಲಿಸಿ ಹಳೆಯ ಸಿರೇಂಜ್ ಬಳಸಿ ಚುಚ್ಚುಮದ್ದು ನೀಡಿದ್ದಾನೆ.

Dharmasthala: ಸರಕಾರಗಳಿಗೇ ಮಾದರಿಯಾದ ಧರ್ಮಸ್ಥಳದ ವಿಕಾಸ ಪಥ

ಸರಕಾರಗಳಿಗೇ ಮಾದರಿಯಾದ ಧರ್ಮಸ್ಥಳದ ವಿಕಾಸ ಪಥ

ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ದೂರದೃಷ್ಟಿಯ ಫಲವಾಗಿ ಮೂಡಿ ಬಂದ ಗ್ರಾಮೀಣಾಭಿ ವೃದ್ಧಿ ಯೋಜನೆ, ರುಡ್ಸೆಟ್ ಮತ್ತು ಸಿರಿ’ ಗ್ರಾಮೋದ್ಯೋಗ ಸಂಸ್ಥೆಗಳು ಇಂದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದಿಕ್ಸೂಚಿಯಾಗಿವೆ.

ಸ್ವಚ್ಛತಾ ನಿಯಮ ಉಲ್ಲಂಘನೆಗೆ 1.72 ಕೋಟಿ ರುಪಾಯಿ ದಂಡ

ಸ್ವಚ್ಛತಾ ನಿಯಮ ಉಲ್ಲಂಘನೆಗೆ 1.72 ಕೋಟಿ ರುಪಾಯಿ ದಂಡ

ಬೆಂಗಳೂರು ನಗರದಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಘನ ತ್ಯಾಜ್ಯ ನಿರ್ವಹಣಾ ನಿಯಮ ಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಬಿಎ ಕೈಗೊಂಡಿರುವ ಕ್ರಮಗಳ ಪರಿಣಾಮವಾಗಿ ಕಳೆದ ಮೂರು ತಿಂಗಳಲ್ಲಿ (ಫೆಬ್ರವರಿ 2026 ರಿಂದ ಏಪ್ರಿಲ್ 2026ರವರೆಗೆ) ಒಟ್ಟು 1.72 ಕೋಟಿ ರು.ದಂಡ ಸಂಗ್ರಹಿಸಲಾಗಿದೆ.

Kalaburagi Airport: ಕಲಬುರಗಿ-ಬೆಂಗಳೂರು ವಿಮಾನಯಾನಕ್ಕೆ ಮತ್ತೆ ಚೈತನ್ಯ

ಕಲಬುರಗಿ-ಬೆಂಗಳೂರು ವಿಮಾನಯಾನಕ್ಕೆ ಮತ್ತೆ ಚೈತನ್ಯ

ಆರಂಭದಲ್ಲಿ ಸಂಜೆ ವೇಳೆಯಲ್ಲಿ ರೌಂಡ್ ಟ್ರಿಪ್ ಸೇವೆ ಆರಂಭಿಸುವ ಕುರಿತು ಮಾಹಿತಿ ನೀಡ ಲಾಗಿದ್ದರೂ ಬಳಿಕ ಸಾರ್ವಜನಿಕರು ಮತ್ತು ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಸಲ್ಲಿಸಿದ ಮನವಿಯನ್ನು ಪರಿಗಣಿಸಿ ವೇಳಾ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಡಿಕೆ ಆಡಳಿತದಲ್ಲಿ ಡಿಸಿಎಂ ಹುದ್ದೆಗಳಿಗೆ ಕೊಕ್?

ಡಿಕೆ ಆಡಳಿತದಲ್ಲಿ ಡಿಸಿಎಂ ಹುದ್ದೆಗಳಿಗೆ ಕೊಕ್?

ಇನ್ನು ಡಿಸಿಎಂ ಹುದ್ದೆಗಳಿಗೆ ಕಚ್ಚಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಹುದ್ದೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ನಡೆಸಿವೆ. ಉಪಮುಖ್ಯಮಂತ್ರಿ ಹುದ್ದೆಗಳು ಹೆಚ್ಚಾದಷ್ಟು ಆಡಳಿತ ದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಸಚಿವರಲ್ಲಿ ಭಿನ್ನಾಭಿಪ್ರಾಯಕ್ಕೆ ದಾರಿಯಾಗಲಿದೆ ಎನ್ನುವುದು ಡಿಕೆಶಿ ಆಪ್ತರ ವಾದ.

ಸಿದ್ದು ಸಕ್ರಿಯ ರಾಜಕಾರಣಕ್ಕೆ ದಾರಿ ಯಾವುದಯ್ಯ?

ಸಿದ್ದು ಸಕ್ರಿಯ ರಾಜಕಾರಣಕ್ಕೆ ದಾರಿ ಯಾವುದಯ್ಯ?

ಹಿಂದುಳಿದ ವರ್ಗಗಳ ಸದ್ಯದ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದಾಗಿದೆ. ಆದರೆ ಮುಂದೇನು ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ರಾಜೀನಾಮೆ ಸಲ್ಲಿಕೆ ನಂತರ ಅವರೇ ಸೂಚ್ಯವಾದ ಉತ್ತರಗಳನ್ನೂ ನೀಡಿದ್ದಾರೆ. ಅದೆಂದರೆ, ನಾನು ಯಾವುದೇ ಕಾರಣಕ್ಕೂ ರಾಷ್ಟ್ರರಾಜಕಾರಣಕ್ಕೆ ಹೋಗುವುದಿಲ್ಲ. ರಾಜ್ಯ ರಾಜಕಾರಣದ ಮುಂದುವರಿಯುತ್ತೇನೆ. ಅದೂ ಸಕ್ರಿಯವಾಗಿಯೇ ಇರುತ್ತೇನೆ. ಜತೆಗೆ ಕೋಮುವಾದಿ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತೇನೆ ಎಂದು ತಮ್ಮ ಭವಿಷ್ಯದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ರೇಷ್ಮೆ ಉತ್ಪಾದನೆ: ತುಮಕೂರು ರಾಜ್ಯದಲ್ಲೇ ಪ್ರಥಮ

ರೇಷ್ಮೆ ಉತ್ಪಾದನೆ: ತುಮಕೂರು ರಾಜ್ಯದಲ್ಲೇ ಪ್ರಥಮ

ಮಾ 2020ರ ಅಂತ್ಯಕ್ಕೆ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಜಿಲ್ಲೆಯ ರೈತರು ರೇಷ್ಮೆ ಕೃಷಿಯನ್ನು ಒಂದು ಲಾಭದಾಯಕ ಉದ್ದಿಮೆಯಾಗಿ ಸ್ವೀಕರಿಸಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 10223 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯುವ ಗುರಿಯನ್ನು ತಲುಪಲಾಗಿದ್ದು, ಹಸಿರು ಹೊದಿಕೆಯಂತೆ ಕಾಡುತ್ತಿರುವ ಹಿಪ್ಪು ನೇರಳೆ ತೋಟಗಳು ಜಿಲ್ಲೆಯ ಆರ್ಥಿಕತೆಗೆ ಬಲ ತುಂಬುತ್ತಿವೆ.

ಜೆಜೆಎಂ ಗುತ್ತಿಗೆದಾರರ ವಿರುದ್ಧ ಜನಾಕ್ರೋಶ

ಜೆಜೆಎಂ ಗುತ್ತಿಗೆದಾರರ ವಿರುದ್ಧ ಜನಾಕ್ರೋಶ

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮುಂಜಾಗ್ರತಾ ಸಭೆಯಲ್ಲಿ ಸಾಕಷ್ಟು ಬಾರಿ ಸೂಚಿಸಿದರು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸೌಲಭ್ಯ ವಂಚಿತ ಪದವಿ ಕಾಲೇಜು

ಸೌಲಭ್ಯ ವಂಚಿತ ಪದವಿ ಕಾಲೇಜು

ತಾಲೂಕಾ ಕೇಂದ್ರವಾಗಿರುವ ರಬಕವಿ-ಬನಹಟ್ಟಿಗೆ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಸರಕಾರಿ ಪದವಿ ಕಾಲೇಜು ಸವಾಲಾಗಿ ಕಾಡುತ್ತಿದೆ. ಕಲೆ ಹಾಗೂ ವಾಣಿಜ್ಯ ವಿಭಾಗ ನಿರ್ವಹಣೆ ಯಲ್ಲಿರುವ ಇಲ್ಲಿನ ಕಾಲೇಜು ಪ್ರಸಕ್ತ ವರ್ಷದಿಂದ ಬಿಬಿಎ ಹಾಗೂ ಬಿಸಿಎ ವಿಭಾಗ ಪ್ರಾರಂಭ ಗೊಳ್ಳಲಿದೆ.

ತ್ಯಾಗದ ನೆಲದಲ್ಲಿ ನಿರಾಶ್ರಿತರ ಕಣ್ಣೀರಿಗೆ ಕೊನೆಯೆಂದು?

ತ್ಯಾಗದ ನೆಲದಲ್ಲಿ ನಿರಾಶ್ರಿತರ ಕಣ್ಣೀರಿಗೆ ಕೊನೆಯೆಂದು?

ದೇಶದ ರಕ್ಷಣೆ, ರಾಜ್ಯದ ಬೆಳಕು ಮತ್ತು ರಾಷ್ಟ್ರದ ಪ್ರಗತಿಯ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆ ನೀಡಿದ ತ್ಯಾಗ ಅಪ್ರತಿಮ. ಆದರೆ, ಈ ‘ಅಭಿವೃದ್ಧಿ’ಯ ಮಹಾಯಾಗಕ್ಕೆ ತಮ್ಮ ಸರ್ವಸ್ವವನ್ನೂ ಆಹುತಿ ನೀಡಿದ ಇಲ್ಲಿನ ಮೂಲ ನಿವಾಸಿಗಳು ಇಂದು ಸ್ವಂತ ನೆಲದಲ್ಲೇ ನಿರಾಶ್ರಿತರಾಗಿ, ಹಕ್ಕುಪತ್ರಗಳಿಗಾಗಿ ಬೀದಿಗಿಳಿದು ಹೋರಾಡುವಂತಾಗಿರುವುದು ಜಿಲ್ಲೆಯ ಅತ್ಯಂತ ಕಟು ವಾಸ್ತವ.

ಮಾರುಕಟ್ಟೆಯಲ್ಲಿ ಹಣ್ಣಿನ ರಾಜನಿಗಿಲ್ಲ ಬೆಲೆ

ಮಾರುಕಟ್ಟೆಯಲ್ಲಿ ಹಣ್ಣಿನ ರಾಜನಿಗಿಲ್ಲ ಬೆಲೆ

ನಗರದ ಎಪಿಎಂಸಿ ಹಾಗೂ ಹಣ್ಣು ಮಾರುಕಟ್ಟೆಗಳಲ್ಲಿ ಮೇ ಮೊದಲ ವಾರದಲ್ಲಿ ಪ್ರತಿ ಕ್ವಿಂಟಲ್‌ಗೆ ಸುಮಾರು 2200 ರು.ಕ್ಕಿಂತ ಹೆಚ್ಚು ದರ ಸಿಗುತ್ತಿದ್ದ ಮಾವು, ಇದೀಗ 1850 ರಿಂದ 1900ರು. ಮಟ್ಟಕ್ಕೆ ಕುಸಿದಿದೆ. ವಿಶೇಷವಾಗಿ ರಸಪುರಿ, ಬಾದಾಮಿ ಹಾಗೂ ತೋತಾಪುರಿ, ಸೇಂದೂರು, ಮಲ್ಲಿಕಾ, ಬೇಗಪಲ್ಲಿ ತಳಿಗಳಲ್ಲಿ ಬೆಲೆ ಇಳಿಕೆ ಹೆಚ್ಚು ಕಾಣಿಸಿಕೊಂಡಿದೆ.

GI Tag for Dry Grapes: ಒಣದ್ರಾಕ್ಷಿಗೂ ಜಿಐ ಟ್ಯಾಗ್ ದೊರಕುವ ದಿನಗಳು ದೂರವಿಲ್ಲ

ಒಣದ್ರಾಕ್ಷಿಗೂ ಜಿಐ ಟ್ಯಾಗ್ ದೊರಕುವ ದಿನಗಳು ದೂರವಿಲ್ಲ

ಜಿಲ್ಲೆಯ ಇಂಡಿ ಭಾಗದಲ್ಲಿ ಬೆಳೆಯುವ ಲಿಂಬೆಗೆ ಜಿಐ ಟ್ಯಾಗ್ ದೊರಕಿದೆ. ಇನ್ನೂ ಅನೇಕ ದೇಶಗಳಿಗೆ ರಫ್ತಾಗುವ ಒಣದ್ರಾಕ್ಷಿಗೂ ಜಿಐ ಟ್ಯಾಗ್ ದೊರಕುವ ದಿನಗಳು ದೂರವಿಲ್ಲ. ಉತ್ಕೃಷ್ಣ ಗುಣಮಟ್ಟಕ್ಕೆ ಹೆಸರಾದ ಒಣದ್ರಾಕ್ಷಿಗೆ ಜಿಐ ಟ್ಯಾಗ್ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಶರವೇಗದಿಂದ ನಡೆಯುತ್ತಿದ್ದು, ಜಿಐ ಟ್ಯಾಗ್ ದೊರಕಿದರೆ ರೈತರ ಸಂತಸ ಮತ್ತಷ್ಟು ಹೆಚ್ಚಾಗಲಿದೆ.

ಸರಕಾರಿ ಶಾಲೆಗಳ ಬಲವರ್ಧನೆಗೆ ಬೇಕಿದೆ ಶಾಸಕರು ಸಚಿವರು ಸಂಸದರೆಂಬ ಜನಪ್ರತಿನಿಧಿಗಳ ಉದಾರ ನೆರವು

ಸರಕಾರಿ ಶಾಲೆಗಳ ಬಲವರ್ಧನೆಗೆ ಬೇಕಿದೆ ಜನಪ್ರತಿನಿಧಿಗಳ ಉದಾರ ನೆರವು

ಕಾಲ ಬದಲಾದಂತೆ ಶಿಕ್ಷಣ ವ್ಯವಸ್ಥೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯ ನಡುವೆ ಹಲವಾರು ಸರ್ಕಾರಿ ಶಾಲೆಗಳು ತಮ್ಮ ಶತಮಾನ ಕ್ಕೂ ಮೀರಿದ ಇತಿಹಾಸದ ಹಿರಿಮೆಯನ್ನು ಹೊತ್ತು ಸಾಗಿರುವುದು ಸಾಮಾನ್ಯ ಸಂಗತಿಯಲ್ಲ. ಅಂತಹ ಐತಿಹಾಸಿಕ  ಸಾಧನೆಗೆ ಗುರಿಯಾದ ಸರ್ಕಾರಿ ಶಾಲೆಗಳಿಗೆ ಗೌರವ ಸಲ್ಲಿಸಲು ಚಿಕ್ಕಬಳ್ಳಾ ಪುರ ಜಿಲ್ಲಾಡಳಿತ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.

ಪುನಾರಚನೆ ಭೀತಿ: ಸಚಿವರಲ್ಲಿ ಹೆಚ್ಚಿದ ಕುರ್ಚಿ ಪ್ರೀತಿ

ಪುನಾರಚನೆ ಭೀತಿ: ಸಚಿವರಲ್ಲಿ ಹೆಚ್ಚಿದ ಕುರ್ಚಿ ಪ್ರೀತಿ

ಎಐಸಿಸಿ ಮೂಲಗಳ ಪ್ರಕಾರ ಸಚಿವ ಸಂಪುಟ ಪುನಾರಚನೆ ನಡೆದರೆ ಅದು ಜುಲೈ ಅಂತದ ವೇಳೆಗೆ ನಡೆಯುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ರಾಜ್ಯ ಸಂಪುಟದಲ್ಲಿರುವ ಸುಮಾರು 25ಕ್ಕೂ ಹೆಚ್ಚು ಸಚಿವರನ್ನು ಬದಲಿಸುವ ಆಲೋಚನೆ ಪಕ್ಷದ ಹಿರಿಯ ನಾಯಕರದ್ದಾಗಿದೆ, ಅಷ್ಟೇ ಅಲ್ಲ ಸಚಿವ ಸ್ಥಾನದ ಅಧಿಕಾರವನ್ನು ಹೆಚ್ಚಿನ ಅವಧಿ ಅನುಭವಿಸಿದವರಿಗೆ ಪಕ್ಷ ಸಂಘಟನೆಯ ಬೇರೆ ಬೇರೆ ಹೊಣೆಗಾರಿಕೆ ಗಳನ್ನು ವಹಿಸಿಕೊಡಬೇಕೆನ್ನುವ ಚಿಂತನೆಯೂ ಪಕ್ಷದ ವರಿಷ್ಠರದ್ದಾಗಿದೆ.

ನಾನ್‌ ಸ್ಟಾಪ್‌ ಓಟ, ಪ್ರಯಾಣಿಕರ ಪರದಾಟ ?

ನಾನ್‌ ಸ್ಟಾಪ್‌ ಓಟ, ಪ್ರಯಾಣಿಕರ ಪರದಾಟ ?

ಕೊಪ್ಪಳ, ಯಲಬುರ್ಗಾ ಹಾಗೂ ಕುಕನೂರು ಸಾರಿಗೆ ಘಟಕಗಳ ಬಸ್ ಗಳು ಈ ಮಾರ್ಗದಲ್ಲಿ ಕಾರ್ಯಾ ಚರಣೆ ಮಾಡುತ್ತವೆ. ಜೊತೆಗೆ ಕೊಪ್ಪಳ ಜಿಲ್ಲೆಯ ಹೊರತಾಗಿ ಬೇರೆ ಘಟಕದ ಬಸ್ ಕೂಡ ಈ ಮಾರ್ಗ ದಲ್ಲಿ ಓಡಾಡುತ್ತವೆ. ಇದರಿಂದ ಕೊಪ್ಪಳ- ಯಲಬುರ್ಗಾ ಮಾರ್ಗದಲ್ಲಿ ಬಸ್ ಕೊರತೆ ಇಲ್ಲ. ಆದರೆ, ಈ ಮಾರ್ಗದಲ್ಲಿ ಕಾರ್ಯಾಚರಣೆ ಮಾಡುವ ಬಹುತೇಕ ಬಸ್ ಗಳು ನಾನ್ ಸ್ಟಾಪ್ ಬೋರ್ಡ್ ಹಾಕಿಕೊಂಡೇ ಓಡಾಡುತ್ತವೆ. ಇದರಿಂದ ಹಲಗೇರಿ, ಭಾನಾಪೂರ ಮಸಬಹಂಚಿನಾಳ ಸೇರಿ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ.

ಮಹಾರಾಜಾವಾಡಿ ಜನರಿಗೆ ಟ್ರ್ಯಾಕ್ಟರ್‌ ನೀರೇ ಗತಿ

ಮಹಾರಾಜಾವಾಡಿ ಜನರಿಗೆ ಟ್ರ್ಯಾಕ್ಟರ್‌ ನೀರೇ ಗತಿ

ಮಹಾರಾಜವಾಡಿ ಗ್ರಾಮದಲ್ಲಿ ತೀವ್ರ ನೀರಿನ ಸಮಸ್ಯೆ ಉಂಟಾಗಿರುವ ಹಿನ್ನೆಲೆ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ಮಾರುತಿ ರಾಠೋಡ್ ಅವರು ಕೆಲ ದಿನಗಳ ಹಿಂದೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Anti-Terrorism Day: ಭಯೋತ್ಪಾದನಾ ವಿರೋಧಿ ದಿನ

Anti-Terrorism Day: ಭಯೋತ್ಪಾದನಾ ವಿರೋಧಿ ದಿನ

ಭಾರತವು ದಶಕಗಳಿಂದಲೂ ಗಡಿಯಾಚೆಗಿನ ಮತ್ತು ದೇಶದೊಳಗಿನ ಭಯೋತ್ಪಾದನೆಯಿಂದ ತತ್ತರಿಸಿದೆ. ಮುಂಬೈ ದಾಳಿ, ಸಂಸತ್ ಭವನದ ಮೇಲಿನ ದಾಳಿ, ಪುಲ್ವಾಮಾ ದಾಳಿಯಂತಹ ಘಟನೆಗಳು ನಮ್ಮ ಸೈನಿಕರ ಮತ್ತು ಅಮಾಯಕ ನಾಗರಿಕರ ರಕ್ತವನ್ನು ಹರಿಸಿವೆ. ಈ ಎಲ್ಲ ಹುತಾತ್ಮರ ತ್ಯಾಗವನ್ನು ಸ್ಮರಿಸುವ ಮತ್ತು ಅವರ ಕುಟುಂಬಗಳ ಪರವಾಗಿ ನಿಲ್ಲುವ ಕರ್ತವ್ಯವನ್ನು ಈ ದಿನ ನಮಗೆ ನೆನಪಿಸು ತ್ತದೆ.

ಸುಖಕರ ಪ್ರಯಾಣ ಅಲ್ಲ, ಪ್ರತಿದಿನವೂ ನರಕ ದರ್ಶನ

ಸುಖಕರ ಪ್ರಯಾಣ ಅಲ್ಲ, ಪ್ರತಿದಿನವೂ ನರಕ ದರ್ಶನ

ಜನರಲ್ ಬೋಗಿಯಲ್ಲಿ ಕೂರಲು ಸ್ಥಳವಕಾಶವಿಲ್ಲದೇ ಅನಿವಾರ್ಯವಾಗಿ ಪ್ರಯಾಣಿಕರು ರಿಸರ್ವೇಷನ್ ಕಂಪಾರ್ಟ್‌ಮೆಂಟ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ತುಸು ಕೂರಲು ಸ್ಥಳವಿಲ್ಲದೇ ಗಂಟೆಗಂಟಲೇ ನಿಂತುಕೊಂಡೆ ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ. ರೈಲ್ವೆ ಇಲಾಖೆಗೆ ಪ್ರತಿ ಕೇಂದ್ರ ಬಜೆಟ್‌ ನಲ್ಲಿ ಸಾವಿರಾರು ಕೋಟಿ ಅನುದಾನ ಹರಿದು ಬಂದರೂ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಚಲಿಸುವ ರೈಲುಗಳನ್ನು ಮಾತ್ರ ಹೆಚ್ಚಳ ಮಾಡುತ್ತಿಲ್ಲ.

ಸ್ವಚ್ಛತೆಯಿಲ್ಲದಿದ್ದರೂ ಶುಲ್ಕವಂತೂ ಕೊಡಲೇಬೇಕು

ಸ್ವಚ್ಛತೆಯಿಲ್ಲದಿದ್ದರೂ ಶುಲ್ಕವಂತೂ ಕೊಡಲೇಬೇಕು

ನಗರದಲ್ಲಿರುವ ಅನೇಕ ಭಾಗದಲ್ಲಿ ಉಚಿತ ಸಾರ್ವಜನಿಕ ಶೌಚಾಲಯ ಎಂಬ ಬರಹವಿದ್ದರೂ, ಕೆಳಭಾಗ ದಲ್ಲಿ ಪೇ ಅಂಡ್ ಯೂಸ್, ನೀಟ್ ಅಂಡ್ ಕ್ಲೀನ್ ಎಂಬ ಸ್ಟಿಕರ್ ಅಂಟಿಸಿ ಮೂತ್ರ ವಿಸರ್ಜನೆಗೆ 5 ರು. ಹಾಗೂ ಮಲ ವಿಸರ್ಜನೆಗೆ 10 ರು. ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಬಡವರು, ದಿನಗೂಲಿ ಕಾರ್ಮಿಕ ರು ಹಾಗೂ ಸಾಮಾನ್ಯ ಜನರು ಪ್ರತಿ ಸಲ ಶುಲ್ಕವನ್ನು ಕೊಟ್ಟು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅನೇಕ ಸಮಯದಲ್ಲಿ ಐದು ರುಪಾಯಿ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಲವರು ರಸ್ತೆಬದಿ ಯಲ್ಲಿಯೇ ಮಾಡುತ್ತಿದ್ದಾರೆ

Belgaum Municipal Corporation controversy: ಸರಕಾರದ ಅಂಗಳಕ್ಕೆ ಬೆಳಗಾವಿ ಪಾಲಿಕೆ ವಿವಾದ

ಸರಕಾರದ ಅಂಗಳಕ್ಕೆ ಬೆಳಗಾವಿ ಪಾಲಿಕೆ ವಿವಾದ

ಸದಸ್ಯರ ಆಗ್ರಗಕ್ಕೆ ಧ್ವನಿಗೂಡಿಸಿದ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಅವರು ಈಗಾಗಲೇ ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದ್ದು ಬೆಳಗಾವಿ ಮಹಾ ನಗರ ಪಾಲಿಕೆಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇದೆಯಾ ಎಂಬುದನ್ನು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರಲಾಗುತ್ತದೆ.

ಡ್ರಗ್ಸ್ ಮಾಫಿಯಾ ತಡೆಗೆ ಮಂಗಳೂರು ಪೊಲೀಸರ ಪಣ

ಡ್ರಗ್ಸ್ ಮಾಫಿಯಾ ತಡೆಗೆ ಮಂಗಳೂರು ಪೊಲೀಸರ ಪಣ

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ನೇತೃತ್ವದಲ್ಲಿ ಕಳೆದ 11 ತಿಂಗಳಿಂದ ನಡೆದ ನಿರ್ದಾಕ್ಷಿಣ್ಯ ಕಾರ್ಯಾಚರಣೆ ಹಾಗೂ ಬೃಹತ್ ಜಾಗೃತಿ ಅಭಿಯಾನ ಗಳು ಡ್ರಗ್ ಮಾಫಿಯಾಕ್ಕೆ ಒಂದು ಲೆಕ್ಕದಲ್ಲಿ ಮರಣಶಾಸನ ಭೀತಿ ಮೂಡಿಸಿದೆ. ಕೇವಲ ಪೆಡ್ಲರ್‌ಗಳ ಬಂಧನಕ್ಕೆ ಸೀಮಿತವಾಗದ ಈ ಸಮರ, ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ಬೃಹತ್ ಸಾಮಾಜಿಕ ಚಳವಳಿಯಾಗಿ ರೂಪಾಂತರಗೊಂಡಿದೆ.

Loading...