ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬೈಲೈನ್‌ ಸ್ಟೋರೀಸ್‌

ಅಭಿವೃದ್ಧಿ ಮತ್ತು ಆರ್ಥಿಕ ಕೊರತೆಗಳ ನಡುವೆ ಜಟಾಪಟಿ !

ಅಭಿವೃದ್ಧಿ ಮತ್ತು ಆರ್ಥಿಕ ಕೊರತೆಗಳ ನಡುವೆ ಜಟಾಪಟಿ !

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಯೋಜನೆಗಳಿಗೆ ಹಣವಿಲ್ಲದಂತಾಗಿದೆ. ಅಭಿವೃದ್ಧಿ ಬೇಕಾದರೆ ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಬೇಕು ಎನ್ನುವ ಚರ್ಚೆ ಸರಕಾರ ಮತ್ತು ಕಾಂಗ್ರೆಸ್‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿದೆ. ಅಂದರೆ ಈ ಚರ್ಚೆಗಳು ಈಗ ಅಭಿವೃದ್ಧಿ ಬೇಕಾ ಅಥವಾ ಗ್ಯಾರಂಟಿ ಬೇಕಾ ಎನ್ನುವ ಹಂತಕ್ಕೆ ಬಂದಿವೆ.

Sri Thipperudraswamy Rathotsava: ಶ್ರೀ ತಿಪ್ಪೇರುದ್ರಸ್ವಾಮಿ ರಥೋತ್ಸವ ಇಂದು

ಶ್ರೀ ತಿಪ್ಪೇರುದ್ರಸ್ವಾಮಿ ರಥೋತ್ಸವ ಇಂದು

ಊರ ಮಧ್ಯದಲ್ಲಿರುವ ಮಠವೇ ಒಳಮಠ, ಊರ ಒಳಗೆ ಈ ಮಠವಿರುವದರಿಂದ ಒಳಮಠ ವೆಂದು ಕರೆಯುವ ವಾಡಿಕೆ. ಈ ಮಠಕ್ಕೆ ಹಿರೇಮಠ, ದರ್ಬಾಟ ಮಠವೆಂತಲೂ ಕರೆಯಲಾಗು ತ್ತಿದೆ. ಶ್ರೀಗಳ ಜೀವಿತ ಕಾಲದಲ್ಲಿ ಈ ಮಠದಲ್ಲಿಯೇ ಇದ್ದು ರಾಜ- ಮಹಾರಾಜರಿಗೆ, ಭಕ್ತಾದಿಗಳಿಗೆ ದರ್ಶನ ನೀಡುವುದಲ್ಲದೆ ಅವರ ಕಷ್ಟ-ಸುಖಗಳನ್ನು ವಿಚಾರಿಸುತ್ತಿದ್ದರು. ಅವುಗಳಿಗೆ ಪರಿಹಾರ ವನ್ನು ಸೂಚಿಸಿ, ಆಶೀರ್ವದಿಸು ತ್ತಿದ್ದರು. ಹೀಗಾಗಿ ಈ ಮಠವನ್ನು ದರ್ಬಾರು ಮಠವೆಂದು ಕರೆಯುವ ವಾಡಿಕೆಗೆ ಕಾರಣವಾಗಿದೆ.

Womens Singles Tennis: ಅಂಕಿತಾ ರೈನಾ, ವೈಷ್ಣವಿ ಅಡ್ಕರ್‌ ಕ್ವಾ.ಫೈನಲಿಗೆ

ಅಂಕಿತಾ ರೈನಾ, ವೈಷ್ಣವಿ ಅಡ್ಕರ್‌ ಕ್ವಾ.ಫೈನಲಿಗೆ

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮೊರೆ ಹೋದ ವೈಷ್ಣವಿ, 6-2, 6-0 ಅಂತರದಲ್ಲಿ ಜಯ ಸಾಧಿಸಿದರು. ವಿಶೇಷವಾಗಿ 2ನೇ ಸೆಟ್‌ನಲ್ಲಿ ಎದುರಾಳಿಗೆ ಒಂದೂ ಅಂಕ ಬಿಟ್ಟು ಕೊಡದೆ ವೈಷ್ಣವಿ ಅನ್ನಾ ಸೆಡಿಶೇವಾ ವಿರುದ್ಧ ಕೇವಲ 55 ನಿಮಿಷಗಳಲ್ಲಿ ಪಂದ್ಯ ಮುಗಿಸಿ ಭಾರತದ ಟ್ರೋಫಿ ಗೆಲ್ಲುವ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

ನೈಜ ಸಂಕಷ್ಟಕ್ಕೆ ಪೂರಕವಾಗುವುದೇ ಬಜೆಟ್?

ನೈಜ ಸಂಕಷ್ಟಕ್ಕೆ ಪೂರಕವಾಗುವುದೇ ಬಜೆಟ್?

ನೇಕಾರಿಕೆ ಉದ್ದಿಮೆಯ ಅಭಿವೃದ್ಧಿಗೆ ದಶಕದ ಹಿಂದೆಯೇ ಮುಖ್ಯ ವಾದ ಕೋನ್ ಡೈಯಿಂಗ್ ಇನ್ನೂ ನಿರ್ಮಾಣವಾಗಿಲ್ಲ. ಇದರಿಂದ ಸೀರೆಗಳ ಉತ್ಪಾದನೆ ಯಲ್ಲಿ ವಿವಿಧ ಬಣ್ಣ-ಬಣ್ಣದ ರೀತಿಯಲ್ಲಿ ವೈಭವದ ಸೀರೆಗಳನ್ನು ತಯಾರಿಸುವ ಮೂಲಕ ಜವಳಿ ಕ್ಷೇತ್ರಕ್ಕೆ ಹೊಸ ಸ್ಪರ್ಶ ದೊರಕುವಲ್ಲಿ ಕಾರಣವಾಗಲಿದೆ.

ಕಲಬುರಗಿಗೆ ಸಿಗುವುದೇ ʼಸಿದ್ದುʼ ವಿಶೇಷ ಅನುಗ್ರಹ?

ಕಲಬುರಗಿಗೆ ಸಿಗುವುದೇ ʼಸಿದ್ದುʼ ವಿಶೇಷ ಅನುಗ್ರಹ?

ಆರೋಗ್ಯ ಕ್ಷೇತ್ರದಲ್ಲಿ ಕಲಬುರಗಿಗೆ ತನ್ನದೇ ಆದ ಸ್ವಾಯತ್ತತೆ ಬೇಕಿದೆ. ಬೆಂಗಳೂರಿನ ಮೇಲಿನ ಅವಲಂಬನೆ ತಗ್ಗಿಸಲು ಇಲ್ಲಿ ನಿಮ್ಹಾನ್ಸ್ ಶಾಖೆ ಹಾಗೂ ಅಖಿಲ ಭಾರತೀಯ ವಾಕ್ ಮತ್ತು ಶ್ರವಣ ಸಂಸ್ಥೆಯ (ಅಐಐಖಏ) ಶಾಖೆಯನ್ನು ಆರಂಭಿಸಬೇಕು. ಶಿಕ್ಷಣ ಕ್ಷೇತ್ರದಲ್ಲಿ ಕೌಶಲ್ಯಾಭಿ ವೃದ್ಧಿ ವಿಶ್ವವಿದ್ಯಾಲಯ ಹಾಗೂ ಅರಣ್ಯ ಕಾಲೇಜು ಸ್ಥಾಪನೆಯ ಮೂಲಕ ಹಿಂದುಳಿದ ಭಾಗದ ಶೈಕ್ಷಣಿಕ ಮಟ್ಟವನ್ನು ಎತ್ತರಿಸು ವಂತೆ ಸರಕಾರಕ್ಕೆ ಒತ್ತಾಯಿಸಲಾಗಿದೆ.

Hi-tech Cricket Stadium: ಕಲಬುರಗಿಗೆ ಹೈಟೆಕ್‌ ಕ್ರಿಕೆಟ್‌ ಕ್ರೀಡಾಂಗಣ ಕೊಡಿ

ಕಲಬುರಗಿಗೆ ಹೈಟೆಕ್‌ ಕ್ರಿಕೆಟ್‌ ಕ್ರೀಡಾಂಗಣ ಕೊಡಿ

ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ, ತಮಿಳುನಾಡು ಹಾಗೂ ಗುಜರಾತ್‌ನಂತಹ ರಾಜ್ಯ ಗಳಲ್ಲಿ ಐದಾರು ಅಂತಾರಾಷ್ಟ್ರೀಯ ಮೈದಾನಗಳಿದ್ದರೆ, ಕರ್ನಾಟಕದಲ್ಲಿ ಮಾತ್ರ ಕೇವಲ ಎಂ.ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸೀಮಿತವಾಗಿರುವುದು ರಾಜ್ಯದ ಕ್ರೀಡಾ ಬದ್ಧತೆ ಪ್ರಶ್ನಿಸುತ್ತಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿನ ಪ್ರಾದೇಶಿಕ ಅಸಮತೋಲನ ನಿವಾರಿಸಲು ಕಲಬುರಗಿ ಯಲ್ಲಿ ಹೈಟೆಕ್ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣ ಮಾಡುವುದು ಸರಕಾರದ ಆದ್ಯತೆಯಾಗಬೇಕಿದೆ.

Holi Festival: ಕೆರೂರಲ್ಲಿ ಇಂದು ʼಹೋಳಿ ಹಬ್ಬ ಸಂಭ್ರಮʼ

Holi Festival: ಕೆರೂರಲ್ಲಿ ಇಂದು ʼಹೋಳಿ ಹಬ್ಬ ಸಂಭ್ರಮʼ

ಪತ್ರಿ ಮನೆಯಲ್ಲೂ ಕಾಮನಿನಗೆ ಹೋಳಿಗೆ ಇಲ್ಲವೆ ಬೆಲ್ಲ ಸಕ್ಕರೆ ನೈವೇದ್ಯ ಕೊಟ್ಟು ಕಾಮನಿನಗೆ ಅಂತಿಮ ವಿದಾಯ ಹೇಳಿದ್ದು ವಿಶೇಷವಾಗಿತ್ತು. ಇಲ್ಲಿಯ ಹಳಪೇಟೆ, ಚಿನಗುಂಡಿ ಪ್ಲಾಟ, ಇತರೆಡೆಗಳಲ್ಲಿ ಬುಧವಾರ ಬೆಳಗ್ಗಿನ ಜಾವ ಕಾಮದಹನವಾದರೆ ಸಾರ್ವಜನಿಕ ತರಕಾರಿ ಮಾರ್ಕೆಟ್ ಮತ್ತು ಕಿಲ್ಲಾ ಹೊಸಪೇಟೆ ನೆಹರು ನಗರ ಹಾಗೂ ಬಸರಿಗಿಡಪೇಟೆ ಓಣಿ ಮಧ್ಯಾಹ್ನ ದ ವೇಳೆಗೆ ಕಾಮ ದಹನ ಮಾಡಲಾಯಿತು.‌

ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?

ಶೂನ್ಯ ಚತುಷ್ಪಥದ ಕಲಬುರಗಿಗೆ ಸಿಗುವುದೇ ವೇಗ ?

ರಾಜ್ಯದ 2ನೇ ಅತಿದೊಡ್ಡ ಜಿಲ್ಲೆ, ಕಲ್ಯಾಣ ಕರ್ನಾಟಕದ ಆಡಳಿತ ಕೇಂದ್ರ ಮತ್ತು ವಿಭಾಗೀಯ ಕೇಂದ್ರ ಎಂಬ ಹತ್ತಾರು ಹಣೆಪಟ್ಟಿಗಳಿರುವ ಕಲಬುರಗಿ ಜಿಲ್ಲೆಗೆ ಇಂದು ಒಂದೇ ಒಂದು ಸಮರ್ಪಕ ‘ಚತುಷ್ಪಥ ರಸ್ತೆ’ ಇಲ್ಲದಿರುವುದು ವಿಪರ್ಯಾಸ. ರಾಜ್ಯದ ಇತರೆ ನಗರಗಳು ಎಕ್ಸ್‌ ಪ್ರೆಸ್ ಹೈವೇಗಳ ಮೂಲಕ ಸಮೃದ್ಧಿಯತ್ತ ಓಡುತ್ತಿದ್ದರೆ, ಕಲಬುರಗಿ ಮಾತ್ರ ದ್ವಿಪಥದ ಇಕ್ಕಟ್ಟಾದ ರಸ್ತೆಗಳಲ್ಲಿ ಸಿಲುಕಿ ಒದ್ದಾಡುತ್ತಿದೆ.

BDCC Bank: 120 ಕೋಟಿ ಸಾಲದ ಸುತ್ತ ಅನುಮಾನದ ಹುತ್ತ

120 ಕೋಟಿ ಸಾಲದ ಸುತ್ತ ಅನುಮಾನದ ಹುತ್ತ

ಗುತ್ತಿಗೆದಾರ ಜಯಶೀಲ ಶೆಟ್ಟಿ ಎಂಬುವವರಿಗೆ ಸೇರಿದ್ದ ಬೆಳಗಾವಿ ಹೃದಯಭಾಗ ಶ್ರೀನಗರ ದಲ್ಲಿರುವ 5.1 ಎಕರೆ ಜಮೀನಿನ ಪೈಕಿ 4 ಎಕರೆಗೆ ಬಿಡಿಸಿಸಿ ಬ್ಯಾಂಕ್ 120 ಕೋಟಿ ರು.ಸಾಲ ನೀಡಿದೆ. ಆದರೆ ಬ್ಯಾಂಕ್ ಆಡಳಿತ ಮಂಡಳಿ ಸಮರ್ಪಕ ದಾಖಲೆ ಪರಿಶೀಲನೆ ನಡೆಸದೆ ದೊಡ್ಡ ಮೊತ್ತದಲ್ಲಿ ಸಾಲ ನೀಡಲಾಗಿದೆ ಎಂದು ಕೆಲ ಮುಖಂಡರು ಆಕ್ರೋಶ ಹೊರ ಹಾಕುತ್ತಿದ್ದಾರೆ.

Green Glass Bangle manufacturing unit: ಹಸಿರು ಗಾಜಿನ ಬಳೆ ತಯಾರಿಕಾ ಘಟಕ ಸ್ಥಾಪನೆಗೆ ಯೋಜನೆ

ಹಸಿರು ಗಾಜಿನ ಬಳೆ ತಯಾರಿಕಾ ಘಟಕ ಸ್ಥಾಪನೆಗೆ ಯೋಜನೆ

ಮಹಿಳೆಯರ ಸಿಂಗಾರಕ್ಕೆ ಅವಿಭಾಜ್ಯವಾಗಿರುವ ಅಖಂಡ ಹಸಿರು ಬಳೆಗಳ ಉತ್ಪಾದನೆಯಲ್ಲಿ ಮುರಗೋಡ ಗ್ರಾಮವು ವಿಶೇಷ ಸ್ಥಾನ ಹೊಂದಿದೆ. ಆದರೆ ಕಟ್ಟಿಗೆ ಕೊರತೆ ಹಾಗೂ ಹೆಚ್ಚುತ್ತಿರುವ ವೆಚ್ಚದಿಂದ ಈ ಉದ್ಯಮ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಿನ್ನೆಲೆ ಸುಮಾರು 9.95 ಕೋಟಿ ರು. ವೆಚ್ಚ ದಲ್ಲಿ ‘ಮುರಗೋಡ ಬಳೆ ತಯಾರಿಕಾ ಫೌಂಡೇಷನ್’ ಮೂಲಕ ಅತ್ಯಾಧುನಿಕ ಗ್ಯಾಸ್ ಆಧಾರಿತ ಬಳೆ ತಯಾರಿಕಾ ಘಟಕ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.

Safari begins: ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿ ಪುನರಾರಂಭಿಸುವಂತೆ ಸೂಚನೆ ನೀಡಿ ತಿಂಗಳು ಕಳೆದರೂ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಸುಳಿವನ್ನು ನೀಡಿಲ್ಲ. ತಾಂತ್ರಿಕ ಸಮಿತಿ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಈಶ್ವರ್ ಖಂಡ್ರೆ ಹೇಳಿದ್ದರು.

ಮೇಲ್ಮನೆಯಲ್ಲಿ ಕಾರ್ಯದರ್ಶಿ ಸ್ಥಾನದಲ್ಲಿ ಸದ್ಯದಲ್ಲೇ ಶೂನ್ಯ ಸೃಷ್ಟಿ

ಮೇಲ್ಮನೆಯಲ್ಲಿ ಕಾರ್ಯದರ್ಶಿ ಸ್ಥಾನದಲ್ಲಿ ಸದ್ಯದಲ್ಲೇ ಶೂನ್ಯ ಸೃಷ್ಟಿ

ಪರಿಷತ್ತಿನ ಇತಿಹಾಸದ ಇಂಥ ಸ್ಥಿತಿ ನಿರ್ಮಾಣವಾಗುತ್ತಿರುವುದು ಪ್ರಥಮ. ಹೇಗೆಂದರೆ, ಸದ್ಯ ವಿಧಾನ ಪರಿಷತ್ತಿನ ಕಾರ್ಯದರ್ಶಿ ಮಹಾಲಕ್ಷ್ಮೀ ಅವರು ಮೇ ತಿಂಗಳ ಅಂತ್ಯಕ್ಕೆ ನಿವೃತ್ತಿಯಾಗು ತ್ತಿದ್ದು, ಅವರ ನಂತರದಲ್ಲಿ ಕಾರ್ಯದರ್ಶಿಯಾಗಬೇಕಿದ್ದ ಎಸ್.ನಿರ್ಮಲಾ ಅವರು ಮಾರ್ಚ್‌ನ ಸೇವೆ ಮುಗಿಸಲಿದ್ದಾರೆ.

SAFARI: ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ನಿರ್ಬಂಧ ಹೇರಿರುವ ಪ್ರದೇಶಕ್ಕಿಂತ ಅರಣ್ಯ ಪ್ರದೇಶದೊಳಗೆ ಈ ರೀತಿ ಅಕ್ರಮ ಕಟ್ಟಡ ಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ಅರಣ್ಯ, ವನ್ಯಜೀವಿ ಗಳನ್ನು ರಕ್ಷಿಸಬೇಕು ಎನ್ನುವ ಆಲೋಚನೆ ಇದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿಯನ್ನು ಸ್ಥಗಿತಗೊಳಿಸುವುದಕ್ಕಿಂತ ಮೊದಲು ಅರಣ್ಯ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಜಮೀನು ಮಾಡಿಕೊಂಡಿರುವವರು, ಎಲೆಕ್ಟ್ರಿಕ್ ಫೆನ್ಸಿಂಗ್ಗಳನ್ನು ಮಾಡಿಕೊಂಡಿರುವವರನ್ನು ಮಟ್ಟಹಾಕಬೇಕಿದೆ

Organ donation: ಅಂಗಾಂಗ ದಾನದಿಂದ ಸಾವಿನಲ್ಲೂ ಸಾರ್ಥಕತೆ

ಅಂಗಾಂಗ ದಾನದಿಂದ ಸಾವಿನಲ್ಲೂ ಸಾರ್ಥಕತೆ

ವಿಜಯಪುರ ನಗರದ ಶಹಾಪುರ ಅಗಸಿಯ ನಿವಾಸಿ ಬಲರಾಮ ಕೃಷ್ಣ ಬಾಗಲ ಕೋಟ (30) ನೂರಾರು ಕನಸು ಕಟ್ಟಿಕೊಂಡಿರುವ ಯುವಕ, ಸಾಧಿಸಬೇಕು ಎನ್ನುವ ಹುಮ್ಮಸ್ಸುನಲ್ಲಿದ್ದ ಆದರೆ ವಿಧಿಯಾಟವೇ ಬೇರೆಯಾಗಿತ್ತು ಫೆ.9 ಆತನ ಕೊನೆಯ ದಿನವಾ ಗಿತ್ತು ಫೆ.9ರಂದು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬಿಎಲ್‌ಡಿಇ ಆಸ್ಪತ್ರೆಯ ತುರ್ತು ಚಿಕಿತ್ಸೆ ಘಟಕದಲ್ಲಿ ದಾಖಲಾಗಿದ್ದರು.

Safari Ban: ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಸಫಾರಿ ನಿರ್ಬಂಧದಿಂದ ಕರ್ನಾಟಕದೊಳಗಿರುವ ಹಾಗೂ ನೆರೆ ರಾಜ್ಯ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ನಾಗರಹೊಳೆ, ಬಂಡೀಪುರ ಬಿಟ್ಟು ರಾಜ್ಯದ ಇತರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ವಿದೇಶದಿಂದ ಆಗಮಿಸುವವರಿಗೆ, ಉತ್ತರ ಭಾರತದಿಂದ ‘ಮಕ್ಕಳ ರಜೆ’ ಎಂಜಾಯ್ ಮಾಡಲು ಬರುವವರು ಈ ಸಫಾರಿಯ ನಿರ್ಬಂಧದಿಂದ ಕರ್ನಾಟಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

Safari for VIPs?: ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಬಂಡೀಪುರ, ನಾಗರಹೊಳೆ ಭಾಗದಲ್ಲಿ ಸಂಪೂರ್ಣವಾಗಿ ಸಫಾರಿ ನಿರ್ಬಂಧವಾಗಿಲ್ಲ. ಬದಲಿಗೆ ಅಧಿಕಾರಿ ವರ್ಗ, ರಾಜಕೀಯ ನಾಯಕರು, ಅವರ ಕುಟುಂದವರು ಬಂದರೆ ಈಗಲೂ ಅರಣ್ಯ ಇಲಾಖೆಯ ಗೆಸ್ಟ್ ಹೌಸ್‌ನಲ್ಲಿಯೇ ರಾಜಾತಿಥ್ಯ ನೀಡಿ, ಸಫಾರಿಗೆ ಕರೆದುಕೊಂಡು ಹೋಗಲಾಗು ತ್ತಿದೆ ಎನ್ನುವ ಮಾತುಗಳನ್ನು ಸ್ಥಳೀಯರೇ ಹೇಳುತ್ತಿದ್ದಾರೆ.

ಐತಿಹಾಸಿಕ ಭೋಗನಂದೀಶ್ವರ ಉಮಾಮಹೇಶ್ವರಿ ಜೋಡಿ ಬ್ರಹ್ಮರಥೋತ್ಸವಕ್ಕೆ ದಿನಗಣನೆ

ದನಗಳ ಜಾತ್ರೆಯ ಸಿದ್ದತೆ ಜೋರು : ಶಿವರಾತ್ರಿ ಮಹೋತ್ಸವಕ್ಕೆ ನಂದಿಗ್ರಾಮ ಸಜ್ಜು

ಮಹಾಶಿವರಾತ್ರಿ ಮಾರನೆಯ ದಿನ ನಡೆಯುವ ಜೋಡಿ ಕಲ್ಲಿನ ರಥೋತ್ಸವಕ್ಕೆ ಜಿಲ್ಲೆಯ ಜನರಲ್ಲದೆ ತಮಿಳುನಾಡು, ಆಂದ್ರಪ್ರದೇಶದಿಂದಲೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಯಲ್ಲಿ ಜಾತ್ರಾ ಮಹೋತ್ಸವವು ಐತಿಹಾಸಿಕವಾಗಿ ಧಾರ್ಮಿಕವಾಗಿ ಪೌರಾಣಿಕವಾಗಿ ತನ್ನದೇ ಆದ ಮಹತ್ವ ಪಡೆದುಕೊಂಡಿದೆ.

Safari: ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ಈ ಹಿಂದೆ ಬಂಡೀಪುರ, ನಾಗರಹೊಳೆ ಭಾಗದಲ್ಲಿ ಅರಣ್ಯದ ಅಂಚಿನಿಂದ ಮೂರು ಕಿಮೀ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಆ ಪ್ರದೇಶದಲ್ಲಿ ಯಾವುದೇ ಕಟ್ಟಡ ಕಾಮಗಾರಿಗೆ ಅಥವಾ ಕೃಷಿಗೆ ಅವಕಾಶ ನೀಡುತ್ತಿರಲಿಲ್ಲ. ಇದರಿಂದ ಪ್ರಾಣಿಗಳು ಕಾಡಿನಿಂದ ಹೊರ ಬಂದರೂ ಮನುಷ್ಯರ ಸಂಪರ್ಕ ಸಿಗುತ್ತಿರಲಿಲ್ಲ. ಆದರೆ ಸಚಿವ ಸಂಪುಟ ಉಪಸಮಿತಿ ಈ ನಿರ್ಬಂಧವನ್ನು ಮೂರು ಕಿಮೀ ನಿಂದ ಒಂದು ಕಿಲೋ ಮೀಟರ್‌ಗೆ ಇಳಿಸಿದೆ.

Safari Bandh: ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಬಂಡೀಪುರ-ನಾಗರಹೊಳೆ ಭಾಗದ ರೆಸಾರ್ಟ್ ಮಾಲೀಕರು ಇಡೀ ವರ್ಷದ ಲಾಭದ ಶೇ.50ರಷ್ಟು ಲಾಭ ವನ್ನು ಕೇವಲ ಮೂರು ತಿಂಗಳಲ್ಲಿ ಮಾಡಿಕೊಳ್ಳುತ್ತಿದ್ದರು. ಆದರೆ ಅರಣ್ಯ ಇಲಾಖೆಯ ಅವೈಜ್ಞಾನಿಕ ಸಫಾರಿ ನಿರ್ಬಂಧದ ತೀರ್ಮಾನದಿಂದಾಗಿ, ನಷ್ಟ ಇರಲಿ, ಇಷ್ಟು ವರ್ಷದ ಲಾಭ ವನ್ನೂ ಕಳೆದು ಕೊಳ್ಳುವ ಆತಂಕ ರೆಸಾರ್ಟ್ ಮಾಲೀಕರದ್ದಾಗಿದೆ.

Tigers in Safari: ಅಮಾಯಕ ಹುಲಿಗಳು ಮಾಡಿದ ತಪ್ಪಾದರೂ ಏನು ?

ಅಮಾಯಕ ಹುಲಿಗಳು ಮಾಡಿದ ತಪ್ಪಾದರೂ ಏನು ?

ಬಂಡೀಪುರ, ನಾಗರಹೊಳೆ ಭಾಗದಲ್ಲಾಗಿರುವ ಹುಲಿ ದಾಳಿಗೂ, ಸಫಾರಿಗೂ ಸಂಬಂಧವಿಲ್ಲ ದಿದ್ದರೂ ಎರಡಕ್ಕೂ ಸಂಬಂಧ ಕಲ್ಪಿಸಿ ಅರಣ್ಯ ಇಲಾಖೆ ಸಫಾರಿಯನ್ನು ಸ್ಥಗಿತಗೊಳಿಸಿದೆ. ಆದರೆ ಈ ಭಾಗದಲ್ಲಿ ಹುಲಿ ದಾಳಿಯ ಹಿಂದಿನ ಉದ್ದೇಶವೇನು? ಮನುಷ್ಯರಿಂದ ಹುಲಿಗಳಿಗೆ ಆಗಿರುವ ತೊಂದರೆ ಏನು ಎನ್ನುವ ಬಗ್ಗೆ ಅರಣ್ಯ ಇಲಾಖೆ ಪರಿಶೀಲಿಸುತ್ತಿಲ್ಲ.

Burude Gang: ನೋಟಿಸ್‌ʼಗೆ ಮುನ್ನವೇ ‌ʼಆರೋಪʼ ಹೊತ್ತುಕೊಂಡ ಬುರುಡೆ ಗ್ಯಾಂಗ್

ನೋಟಿಸ್‌ʼಗೆ ಮುನ್ನವೇ ‌ʼಆರೋಪʼ ಹೊತ್ತುಕೊಂಡ ಬುರುಡೆ ಗ್ಯಾಂಗ್

ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣವರ್ ಪರವಾಗಿ ವಕೀಲರು ಬೆಳ್ತಂಗಡಿ ಕೋರ್ಟ್‌ ನಲ್ಲಿ ಪ್ರತ್ಯೇಕವಾಗಿ ಅರ್ಜಿ ಸಲ್ಲಿಸಿ ತಮ್ಮನ್ನು ‘ಪ್ರಪೋಸ್ಟ್ ಅಕ್ಯೂಸ್ಡ್’ ಎಂದು ಪರಿಗಣಿಸಲು ಕೋರಿದ್ದರು. ಬಳಿಕ ಮಧ್ಯಾಹ್ನವಾಗುತ್ತಿದ್ದಂತೆ ಈ ಅರ್ಜಿಯನ್ನು ವಾಪಸ್ ಪಡೆದಿದ್ದರು. ಈ ಮೂಲಕ ದೋಷಾ ರೋಪಕ್ಕೆ ಮುನ್ನವೇ ಬುರುಡೆ ಗ್ಯಾಂಗ್ ಸದಸ್ಯರು ತಮ್ಮನ್ನು ತಾವೇ ಆರೋಪಿಗಳಾಗಿ ಪರಿಗಣಿಸಿದಂತಾ ಗಿದೆ

Safari Ban: ಇರುವುದೇ ಸ್ವಲ್ಪ ಜಾಗ, ಅಲ್ಲೂ ಸಫಾರಿ ನಿರ್ಬಂಧ !

ಇರುವುದೇ ಸ್ವಲ್ಪ ಜಾಗ, ಅಲ್ಲೂ ಸಫಾರಿ ನಿರ್ಬಂಧ !

ಬಂಡೀಪುರ ಸಫಾರಿ ಸುಮಾರು 15 ರಿಂದ 20 ಕಿಮೀ ಇದ್ದರೆ, ನಾಗರಹೊಳೆಯದ್ದು 12ರಿಂದ 18 ಕಿಮೀ ಇದೆ. ಒಂದು ಸುತ್ತಿನಲ್ಲಿ ಈ ದೂರವನ್ನು ಕ್ರಮಿಸುವುದರಿಂದ ಕಾಡಿನ ಆರೇಳು ಕಿಮೀ ಭಾಗದಲ್ಲಿ ಮಾತ್ರ ಸಫಾರಿ ವಾಹನಗಳು ಹೋಗುತ್ತವೆ. ಅದರ ಆಚೆಗೆ ಈಗಲೂ ಪ್ರವಾಸಿಗರಿಗೆ ಅವಕಾಶವಿಲ್ಲ. ಇದನ್ನು ಗಣಿಸದೇ, ಇನ್ನೊಂದು ಭಾಗದಲ್ಲಿ ಆಗಿರುವ ಹುಲಿ ದಾಳಿಗೆ ಸಫಾರಿ ಯನ್ನು ‘ಲಿಂಕ್’ ಮಾಡುತ್ತಿರುವುದು ಸರಿಯಲ್ಲ ಎಂಬ ಆಕ್ರೋಶ ಕೇಳಿಸಿದೆ.

Computer Cleanup Day: ಇಂದು ಕಂಪ್ಯೂಟರ್‌ ಸ್ವಚ್ಛತಾ ದಿನ

ಇಂದು ಕಂಪ್ಯೂಟರ್‌ ಸ್ವಚ್ಛತಾ ದಿನ

ದಿನವಿಡೀ ನಮ್ಮ ಕೆಲಸದ ಅವಿಭಾಜ್ಯ ಅಂಗವಾಗಿರುವ ಕಂಪ್ಯೂಟರ್‌ ಅಥವಾ ಲ್ಯಾಪ್‌ ಟಾಪ್‌ಗಳ ಸ್ವಚ್ಛತೆಯ ಬಗ್ಗೆ ಎಷ್ಟು ಗಮನ ಹರಿಸುತ್ತೇವೆ? ಈ ಪ್ರಶ್ನೆಯನ್ನು ನೆನಪಿಸಲು ಮತ್ತು ಡಿಜಿಟಲ್ ಶಿಸ್ತನ್ನು ಮೈಗೂಡಿಸಿಕೊಳ್ಳಲು ಪ್ರತಿ ವರ್ಷ ಫೆಬ್ರವರಿ ತಿಂಗಳ 2ನೇ ಸೋಮವಾರದಂದು (ಫೆ.9)‘ರಾಷ್ಟ್ರೀಯ ಕಂಪ್ಯೂ ಟರ್ ಸ್ವಚ್ಛತಾ ದಿನ’ವನ್ನು ಆಚರಿಸಲಾಗುತ್ತದೆ.

Kusum: ಕೃಷಿ ಪಂಪ್‌ʼಸೆಟ್‌ಗೆ ಬೆಳಕಾದ ʼಕುಸುಮ್ʼ

Kusum: ಕೃಷಿ ಪಂಪ್‌ʼಸೆಟ್‌ಗೆ ಬೆಳಕಾದ ʼಕುಸುಮ್ʼ

ಚುನಾವಣೆಗೂ ಮೊದಲು ಕಾಂಗ್ರೆಸ್ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿರಂತರ ಏಳು ಗಂಟೆ ವಿದ್ಯುತ್ ನೀಡುವ ಘೋಷಣೆಯನ್ನು ಮಾಡಿತ್ತು. ಈ ಘೋಷಣೆ ಪೂರೈಸಲು ಹಾಗೂ ಅಗತ್ಯವಿರುವಷ್ಟು ವಿದ್ಯುತ್ ಒದಗಿಸಲು ಕುಸುಮ್-ಸಿ ಯೋಜನೆ ಸಹಕಾರಿಯಾಗಿದ್ದು, ಬೆಸ್ಕಾಂ ವ್ಯಾಪ್ತಿ ಒಂದರಲ್ಲಿಯೇ 2.70 ಲಕ್ಷಕ್ಕೂ ಹೆಚ್ಚು ಪಂಪ್‌ಸೆಟ್‌ಗಳಿಗೆ ಹಗಲಿನ ಸಮಯದಲ್ಲಿ ನಿರಂತರ 7 ಗಂಟೆ ವಿದ್ಯುತ್ ನೀಡಲು ಸಾಧ್ಯವಾಗಿದೆ.

Loading...