ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೈಲೈನ್‌ ಸ್ಟೋರೀಸ್‌

ಸ್ವಚ್ಛತೆಯಿಲ್ಲದಿದ್ದರೂ ಶುಲ್ಕವಂತೂ ಕೊಡಲೇಬೇಕು

ಸ್ವಚ್ಛತೆಯಿಲ್ಲದಿದ್ದರೂ ಶುಲ್ಕವಂತೂ ಕೊಡಲೇಬೇಕು

ನಗರದಲ್ಲಿರುವ ಅನೇಕ ಭಾಗದಲ್ಲಿ ಉಚಿತ ಸಾರ್ವಜನಿಕ ಶೌಚಾಲಯ ಎಂಬ ಬರಹವಿದ್ದರೂ, ಕೆಳಭಾಗ ದಲ್ಲಿ ಪೇ ಅಂಡ್ ಯೂಸ್, ನೀಟ್ ಅಂಡ್ ಕ್ಲೀನ್ ಎಂಬ ಸ್ಟಿಕರ್ ಅಂಟಿಸಿ ಮೂತ್ರ ವಿಸರ್ಜನೆಗೆ 5 ರು. ಹಾಗೂ ಮಲ ವಿಸರ್ಜನೆಗೆ 10 ರು. ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಬಡವರು, ದಿನಗೂಲಿ ಕಾರ್ಮಿಕ ರು ಹಾಗೂ ಸಾಮಾನ್ಯ ಜನರು ಪ್ರತಿ ಸಲ ಶುಲ್ಕವನ್ನು ಕೊಟ್ಟು ಹೋಗಬೇಕಾದ ಪರಿಸ್ಥಿತಿ ಬಂದಿದೆ. ಅನೇಕ ಸಮಯದಲ್ಲಿ ಐದು ರುಪಾಯಿ ಕೊಡಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹಲವರು ರಸ್ತೆಬದಿ ಯಲ್ಲಿಯೇ ಮಾಡುತ್ತಿದ್ದಾರೆ

Belgaum Municipal Corporation controversy: ಸರಕಾರದ ಅಂಗಳಕ್ಕೆ ಬೆಳಗಾವಿ ಪಾಲಿಕೆ ವಿವಾದ

ಸರಕಾರದ ಅಂಗಳಕ್ಕೆ ಬೆಳಗಾವಿ ಪಾಲಿಕೆ ವಿವಾದ

ಸದಸ್ಯರ ಆಗ್ರಗಕ್ಕೆ ಧ್ವನಿಗೂಡಿಸಿದ ಮಹಾನಗರ ಪಾಲಿಕೆ ಮೇಯರ್ ಪ್ರೀತಿ ಕಾಮಕರ್ ಅವರು ಈಗಾಗಲೇ ಬೆಳಗಾವಿ ಗಡಿ ವಿವಾದ ಸುಪ್ರೀಂ ಕೋರ್ಟ್ ಅಂಗಳದಲ್ಲಿ ಇದ್ದು ಬೆಳಗಾವಿ ಮಹಾ ನಗರ ಪಾಲಿಕೆಗೆ ನಿರ್ಧಾರ ಕೈಗೊಳ್ಳುವ ಅವಕಾಶ ಇದೆಯಾ ಎಂಬುದನ್ನು ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಗಮನಕ್ಕೆ ತರಲಾಗುತ್ತದೆ.

ಡ್ರಗ್ಸ್ ಮಾಫಿಯಾ ತಡೆಗೆ ಮಂಗಳೂರು ಪೊಲೀಸರ ಪಣ

ಡ್ರಗ್ಸ್ ಮಾಫಿಯಾ ತಡೆಗೆ ಮಂಗಳೂರು ಪೊಲೀಸರ ಪಣ

ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರ ನೇತೃತ್ವದಲ್ಲಿ ಕಳೆದ 11 ತಿಂಗಳಿಂದ ನಡೆದ ನಿರ್ದಾಕ್ಷಿಣ್ಯ ಕಾರ್ಯಾಚರಣೆ ಹಾಗೂ ಬೃಹತ್ ಜಾಗೃತಿ ಅಭಿಯಾನ ಗಳು ಡ್ರಗ್ ಮಾಫಿಯಾಕ್ಕೆ ಒಂದು ಲೆಕ್ಕದಲ್ಲಿ ಮರಣಶಾಸನ ಭೀತಿ ಮೂಡಿಸಿದೆ. ಕೇವಲ ಪೆಡ್ಲರ್‌ಗಳ ಬಂಧನಕ್ಕೆ ಸೀಮಿತವಾಗದ ಈ ಸಮರ, ಹೆತ್ತವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ ಬೃಹತ್ ಸಾಮಾಜಿಕ ಚಳವಳಿಯಾಗಿ ರೂಪಾಂತರಗೊಂಡಿದೆ.

BSY's celebration: ಬಿಎಸ್‌ʼವೈ ಅಭಿಮಾನೋತ್ಸವ ಲಾಭ, ನಷ್ಟ ಲೆಕ್ಕದಲ್ಲಿ ಬಿಜೆಪಿ

ಬಿಎಸ್‌ʼವೈ ಅಭಿಮಾನೋತ್ಸವ ಲಾಭ, ನಷ್ಟ ಲೆಕ್ಕದಲ್ಲಿ ಬಿಜೆಪಿ

ಯಡಿಯೂರಪ್ಪ ಅವರ ರಾಜಕೀಯ ಜೀವನದ ಸುವರ್ಣ ಸಂಭ್ರಮದಲ್ಲಿ ಅಭಿಮಾನ ಪ್ರವಾಹವಿದ್ದ ಜನ ಸಾಗರವನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗಿದೆಯೇ ? ಇದನ್ನು ಸರಕಾರದ ವಿರುದ್ಧ ಸಮರ ಸಾರಲು ಬಳಸಿಕೊಳ್ಳಬಹುದಿತ್ತಲ್ಲವೇ? ಹಾಗಾದರೆ ಇದರಿಂದ ಯಾರಿಗೆ ಲಾಭವಾಗಿದೆ? ಎಂಬ ಇತ್ಯಾದಿ ಪ್ರಶ್ನೆಗಳೊಂದಿಗೆ ಪಕ್ಷದ ನಾಯಕರಲ್ಲೇ ಚರ್ಚೆಯಾಗಿದೆ ಎನ್ನಲಾಗಿದೆ.

Mobile Sanjeevini: ಜಾನುವಾರುಗಳಿಗೆ ಸಂಚಾರಿ ಸಂಜೀವಿನಿ

ಜಾನುವಾರುಗಳಿಗೆ ಸಂಚಾರಿ ಸಂಜೀವಿನಿ

ಜಾನುವಾರುಗಳ ಕಾಲುಬಾಯಿ ರೋಗ, ವಾರ್ಷಿಕ ಲಸಿಕೆ ಕಾರ್ಯಕ್ರಮಗಳು, ಸಾಂಕ್ರಾಮಿಕ ರೋಗಗಳು ಜಾನುವಾರುಗಳನ್ನು ಬಾಽಸುವುದು ಸಾಮಾನ್ಯವಾಗಿದ್ದು, ಅವುಗಳಿಗೆ ಕಾಲಕಾಲಕ್ಕೆ ನಿಗದಿತ ಕೇಂದ್ರ ದಲ್ಲಿ ಚಿಕಿತ್ಸೆ ನೀಡುತ್ತಿರುವುದರ ನಡುವೆಯೇ ರೈತನ ಮನೆ ಬಾಗಿಲಲ್ಲೇ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕೆಂಬ ರಾಜ್ಯ ಸರ್ಕಾರದ ಸಂಕಲ್ಪ ಯಶಸ್ವಿ ಕಂಡಿದೆ.

ಉಷ್ಠ ವಿದ್ಯುತ್ ಸ್ಥಾವರ ಪ್ತಸ್ತಾವನೆಗೆ ಬ್ರೇಕ್

ಉಷ್ಠ ವಿದ್ಯುತ್ ಸ್ಥಾವರ ಪ್ತಸ್ತಾವನೆಗೆ ಬ್ರೇಕ್

ಎಲ್ಲ ತರಹದ ವಿದ್ಯುತ್ ತಯಾರಿಕೆಗೆ ಉತ್ತರ ಕನ್ನಡ ಜಿಲ್ಲೆಯೇ ಬೇಕೆ? ಎಂದು ಜಿಲ್ಲೆಯ ಜನರು ಅಸಮಾ ಧಾನ ವ್ಯಕ್ತಪಡಿಸಿದ್ದಿದೆ. ಅಣು ವಿದ್ಯುತ್ ಸ್ಥಾವರ, ಜಲ ವಿದ್ಯುತ್ ಸ್ಥಾವರ ಇದೀಗ ಉಷ್ಣ ವಿದ್ಯುತ್ ಸ್ಥಾವರದ ಸರದಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾವಿಕೇರಿ ಗ್ರಾಮದಲ್ಲಿ ಎನ್‌ಟಿಪಿಸಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವ ಪ್ರಸ್ತಾವನೆಗೆ ಈಗ ದೊಡ್ಡ ತಾಂತ್ರಿಕ ಅಡ್ಡಿ ಎದುರಾಗಿದೆ.

MLA from Thuruvekere: ತುರುವೇಕೆರೆ ಮೂಲದ ಸುನಿಲ್ ಆನಂದ್ ಶಾಸಕ

ತುರುವೇಕೆರೆ ಮೂಲದ ಸುನಿಲ್ ಆನಂದ್ ಶಾಸಕ

ಶಾಸಕ ಸುನಿಲ್ ಆನಂದ್ ಅವರು ತಮಿಳುನಾಡಿನ ಮೆಟ್ಟುಪಾಳ್ಯಂನಲ್ಲಿ ನೆಲೆಸಿದ್ದಾರೆ. ಸುನೀಲ್ ಆನಂದ್ ಅವರ ತಾತ(ತಂದೆಯವರ ತಂದೆ) ನಿಂಗೇಗೌಡ. ಇವರ ಊರು ತುರುವೇಕೆರೆ ತಾಲೂಕಿನ ದಬ್ಬೇಘಟ್ಟ ಹೋಬಳಿಯ ಹೊಡಿಕೇಘಟ್ಟ. ಹಲವು ದಶಕಗಳ ಹಿಂದೆ ನಿಂಗೇಗೌಡರ ಅವರು ತಮಿಳು ನಾಡಿಗೆ ವಲಸೆ ಹೋಗಿದ್ದರು. ನಂತರದ ದಿನಗಳಲ್ಲಿ ಅಲ್ಲೇ ತಮ್ಮ ಜೀವನ ಸಾಗಿಸಿದರು.

ಕಬ್ಬನ್‌ ಪಾರ್ಕ್‌ʼಗಳ ಮೀನುಗಳ ಮಾರಣ ಹೋಮ

ಕಬ್ಬನ್‌ ಪಾರ್ಕ್‌ʼಗಳ ಮೀನುಗಳ ಮಾರಣ ಹೋಮ

ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಹಾಗೂ ಸುತ್ತಮುತ್ತ ಪ್ರದೇಶಗಳಿಂದ ಹರಿಯುತ್ತಿರುವ ಕೊಳಚೆ ನೀರು ದುರ್ವಾಸನೆ ಬೀರಿದ್ದು, ನಡಿಗೆದಾರರು ಸಾರ್ವಜನಿಕರು ಮುಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ. ಪಾರ್ಕ್ ಸಿಬ್ಬಂದಿ ಕೊಳಚೆ ನೀರನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವು ದರಿಂದ ಪಾರ್ಕ್ ಪರಿಸ್ಥಿತಿ ಹದಗೆಟ್ಟಿದೆ.

ಗಂಭೀರತೆಗೆ ಹೊರಳಿದ ಪಾಲಿಕೆ ವಿಭಜನೆ ವಿವಾದ

ಗಂಭೀರತೆಗೆ ಹೊರಳಿದ ಪಾಲಿಕೆ ವಿಭಜನೆ ವಿವಾದ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆ ವಿಷಯ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಹೋರಾಟಕ್ಕೂ ಧಾರವಾಡ ಸನ್ನದ್ಧವಾಗುತ್ತಿದೆ. ಬೃಹತ್ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನಾಗಿಸಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಏಕಪಕ್ಷಿಯವಾಗಿ ತೆಗೆದುಕೊಂಡ ನಿರ್ಣಯಕ್ಕೆ ತೀವ್ರ ಆಕ್ರೋಶ ಧಾರವಾಡದಲ್ಲಿ ವ್ಯಕ್ತವಾಗುತ್ತಿದೆ. ಅಲ್ಲದೇ ಈಗಾಗಲೇ ಹೋರಾಟದ ರೂಪುರೇಷೆ ಸಹ ಸಿದ್ಧಗೊಳ್ಳುತ್ತಿವೆ.

Shimoga Airport: ಶಿವಮೊಗ್ಗ ವಿಮಾನ ನಿಲ್ದಾಣ ಸೇವೆ ಮೂರು ವರ್ಷಕ್ಕೆ ಸ್ಥಗಿತ?

ಶಿವಮೊಗ್ಗ ವಿಮಾನ ನಿಲ್ದಾಣ ಸೇವೆ ಮೂರು ವರ್ಷಕ್ಕೆ ಸ್ಥಗಿತ?

ಕಳೆದ 2023ರ ಆಗಸ್ಟ್ 31ರಂದು ಅದ್ಧೂರಿಯಾಗಿ ಆರಂಭಗೊಂಡಿದ್ದ ಇಂಡಿಗೋ ಏರ್‌ಲೈನ್ಸ್ ಸೇವೆ ಬಲು ಬೇಗ ಸ್ಥಗಿತಗೊಂಡಿದ್ದು ಯಾಕೆ? ಎಂಬುದಕ್ಕೆ ಇದುವರೆಗೂ ಸರಕಾರದಿಂದಲೂ ನಿಖರವಾದ ಉತ್ತರ ಬಂದಿಲ್ಲ. ಆದರೆ, ವಿಮಾನ ಕಂಪನಿ ಹೇಳುತ್ತಿರುವ ಕಾರಣಗಳನ್ನು ನಂಬುವಂತೆಯೇ ಇಲ್ಲ. ತಿಂಗಳಿಗೆ ನೂರಾರು ಜನರಿಗೆ ಸೇವೆ ಒದಗಿಸುತ್ತಿದ್ದ ವಿಮಾನ ನಿಂತು ಹೋಗಿರುವುದು ಶಿವಮೊಗ್ಗದ ಜನರಿಗೆ ಬೇಸರ ತಂದಿದೆ.

Congress: ಕೈಜಾರಿದ ಅಲ್ಪಸಂಖ್ಯಾತರ ಮತ, ಕೈಗೆ ನೋವು

Congress: ಕೈಜಾರಿದ ಅಲ್ಪಸಂಖ್ಯಾತರ ಮತ, ಕೈಗೆ ನೋವು

ಕಾಂಗ್ರೆಸ್ ಹಿರಿಯ ನಾಯಕರ ಪ್ರಕಾರ, ಎರಡೂ ಉಪ ಚುನಾವಣೆಗಳ ಪೈಕಿ ಬಾಗಲಕೋಟೆ ಉಪಚುನಾವಣೆಯಲ್ಲಿ ಲಭಿಸಿರುವ ಗೆಲುವಿಗೆ ಕೈ ಪಕ್ಷಕ್ಕೆ ಕೊಂಚ ಸಮಾಧಾನವಾದರೂ ಇದೆ. ಆದರೆ ದಾವಣಗೆರೆ ವಿಚಾರದಲ್ಲಿ ತೀರಾ ಬೇಸರ ಇರುವುದು ವ್ಯಕ್ತವಾಗಿದೆ. ಅಂದರೆ ಉಪಚುನಾವಣೆ ಯಲ್ಲಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರು ಭಾಗಶಃ ಜಯ ಸಾಧಿಸಿದ್ದು, ಶಾಸಕರಾದ ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹಮ್ಮದ್ ಅವರು ಪಕ್ಷವನ್ನು ಸೋಲಿನ ದವಡೆಯಿಂದ ತಪ್ಪಿಸಿದ ರಕ್ಷಕರು ಎನಿಸಿಕೊಂಡಿದ್ದಾರೆ.

ಹಾವು, ಏಣಿ ಆಟಕ್ಕೆ ಸಿಕ್ಕ ಸಮರ್ಥ್‌ ಗೆಲುವು

ಹಾವು, ಏಣಿ ಆಟಕ್ಕೆ ಸಿಕ್ಕ ಸಮರ್ಥ್‌ ಗೆಲುವು

ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ 63,870 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪರಾಭವಗೊಂಡಿದ್ದಾರೆ. ಈ ಮೂಲಕ ದಾವಣಗೆರೆ ದಕ್ಷಿಣ ಮತ್ತೊಮ್ಮೆ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತಾಗಿದೆ. ಆದರೆ, ಕಳೆದ ಬಾರಿ 1700 ಮಾತ್ರ ಮತ ಪಡೆದಿದ್ದ ಎಸ್‌ಡಿಪಿಐ ಅಭ್ಯರ್ಥಿ ಈ ಬಾರಿ ಬರೋಬ್ಬರಿ 18,975 ಮತಗಳನ್ನು ಪಡೆದು 3ನೇ ಸ್ಥಾನಕ್ಕೆ ತಲುಪಿದೆ. ಈ ಮೂಲಕ ಕಾಂಗ್ರೆಸ್ ಗೆಲುವಿನ ಅಂತರ ಕಡಿಮೆಗೊಳ್ಳಲು ಕಾರಣರಾಗಿದ್ದಾರೆ.

ಮೇಟಿ ಬಿಡದ ಮತದಾರ, ವೀರಣ್ಣ ಹರೋಹರ

ಮೇಟಿ ಬಿಡದ ಮತದಾರ, ವೀರಣ್ಣ ಹರೋಹರ

ಆರಂಭದಲ್ಲಿ ಕೈ ಟಿಕೆಟ್ ವಿಚಾರವಾಗಿ ಮೇಟಿ ಕುಟುಂಬದಲ್ಲಿ ಉಂಟಾದ ಗೊಂದಲ ಕಾಂಗ್ರೆಸ್ ಗೆ ಕೊಂಚ ಹಿನ್ನಡೆ ಉಂಟುಮಾಡಿದ್ದರೂ ಕೊನೆಗೆ ಸಿಎಂ ಸಿದ್ದರಾಮಯ್ಯನವರ ಸಂಧಾನದ ಫಲವಾಗಿ ಉಮೇಶ್ ಮೇಟಿಯನ್ನು ಅಭ್ಯರ್ಥಿಯನ್ನಾಗಿ ಘೋಷಿಸಲಾಯಿತು. ಜತೆಗೆ ಖುದ್ದಾಗಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆ ಮತಕ್ಷೇತ್ರದ ಅಭ್ಯರ್ಥಿ ಪರವಾಗಿ ಹಳ್ಳಿ, ಹಳ್ಳಿಯಲ್ಲೂ ಪ್ರಚಾರ ಮಾಡಿದ್ದರ ಕಾರಣಕ್ಕೆ ಕಾಂಗ್ರೆಸ್ 20 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

ಬದಲಾವಣೆ ಗಾಳಿಯಲ್ಲಿ ಹೊಸ ಪಾಠ

ಬದಲಾವಣೆ ಗಾಳಿಯಲ್ಲಿ ಹೊಸ ಪಾಠ

ಕೇರಳದಲ್ಲಿ ಮೂರು ಅವಧಿಯಿಂದ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವ ದ ಎಡರಂಗದ ಎಲ್‌ಡಿಎಫ್ ಪಕ್ಷದಿಂದ ಅಧಿಕಾರ ಕಸಿದು ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಗದ್ದುಗೆ ಏರುತ್ತಿದೆ. ಕೇರಳದಲ್ಲೂ ಬಿಜೆಪಿ ಮೊದಲ ಬಾರಿಗೆ ಮೂರು ಸ್ಥಾನ ಗೆದ್ದಿದೆ. ಈ ನಾಲ್ಕು ರಾಜ್ಯಗಳ ಫಲಿತಾಂಶ, ದೇಶ ಬದಲಾವಣೆಯತ್ತ ವಾಲುತ್ತಿರುವುದಕ್ಕೆ ಉದಾಹರಣೆ.

West Bengal Election ground report by Raghav Sharma Nidle: ಬಂಗಾಳದ ರಣಕಣದಲ್ಲಿ ನಾನು ಕಂಡದ್ದು, ಕೇಳಿದ್ದು...

ಬಂಗಾಳದ ರಣಕಣದಲ್ಲಿ ನಾನು ಕಂಡದ್ದು, ಕೇಳಿದ್ದು...

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಯಾರು ಏನೇ ಹೇಳಲಿ, ಅವರು ದೇಶದ ಶ್ರೀಸಾಮಾನ್ಯ‌ ರೊಂದಿಗೆ ನೇರ ಕನೆಕ್ಟ್ ಆಗುವುದರಿಂದಲೇ ದೇಶಾದ್ಯಂತ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಂಡಿ ದ್ದಾರೆ, ಜನರ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಪಶ್ಚಿಮ ಬಂಗಾಳ ಕೂಡ ಸಾಕ್ಷಿಯಾಯಿತು.

'e-cigarette' Mafia: ಕಲಬುರಗಿಯಲ್ಲಿ ʼಇ-ಸಿಗರೇಟ್‌ʼ ಮಾಫಿಯಾ ?

'e-cigarette' Mafia: ಕಲಬುರಗಿಯಲ್ಲಿ ʼಇ-ಸಿಗರೇಟ್‌ʼ ಮಾಫಿಯಾ ?

ನಗರದ ಶಿಕ್ಷಣ ಸಂಸ್ಥೆಗಳ ಆಸುಪಾಸು ಮತ್ತು ದರ್ಗಾ ಆವರಣದ ಸಣ್ಣಪುಟ್ಟ ಅಂಗಡಿಗಳ ಮರೆಯಲ್ಲಿ ಈ ಮಾರಾಟ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಂದೊಂದು ಇ-ಸಿಗರೇಟ್ ಸಾಧನಕ್ಕೆ ಸರಿಸುಮಾರು 3000 ದಿಂದ 3500 ರುಪಾಯಿ ವರೆಗೆ ಬೆಲೆ ನಿಗದಿ ಪಡಿಸ ಲಾಗುತ್ತಿದ್ದು, ಯುವಕರು ಹಾಗೂ ವಿದ್ಯಾರ್ಥಿಗಳೇ ಈ ಜಾಲದ ಪ್ರಮುಖ ಗುರಿಯಾಗಿದ್ದಾರೆ.

Inner Reservation: ಸಿದ್ದು ಬಿಟ್ಟರೆ ಅನ್ಯರಿಂದ ʼಒಳಮೀಸಲಿಗೆ ಪರಿಹಾರʼ ಸಾಧ್ಯವಿರಲಿಲ್ಲ

ಸಿದ್ದು ಬಿಟ್ಟರೆ ಅನ್ಯರಿಂದ ʼಒಳಮೀಸಲಿಗೆ ಪರಿಹಾರʼ ಸಾಧ್ಯವಿರಲಿಲ್ಲ

ನಾನು ಗಮನಿಸಿದಂತೆ ಸಿದ್ದರಾಮಯ್ಯಅವರು, ಒಳಮೀಸಲಾತಿ ವಿವಾದವನ್ನು ಸರಕಾರದ ಯಾವುದೇ ಒಂದು ಸಾಮಾನ್ಯ ಸಮಸ್ಯೆಯಂತಾಗಲಿ, ಕಾರ್ಯಕ್ರಮದಂತಾಗಲಿ ನೋಡಲಿಲ್ಲ. ಬದಲಾಗಿ ತಮ್ಮ ಆಡಳಿತ ಅವಧಿಯಲ್ಲಿ ಸಾಮಾಜಿಕ ಬದ್ಧತೆ ಪ್ರದರ್ಶಿಸಲು ಹಾಗೂ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಸಿಕ್ಕಬಹುದಾದ ದೊಡ್ಡ ಅವಕಾಶ ಎನ್ನುವಂತೆ ಸ್ವೀಕರಿಸಿದ್ದರು.

West Bengal Election ground report by Raghav Sharma Nidle: ಅಭಿಷೇಕ್‌ ಬ್ಯಾನರ್ಜಿ ಭದ್ರಕೋಟೆಗೆ ಲಗ್ಗೆ ಸಾಧ್ಯವೇ ?

ಅಭಿಷೇಕ್‌ ಬ್ಯಾನರ್ಜಿ ಭದ್ರಕೋಟೆಗೆ ಲಗ್ಗೆ ಸಾಧ್ಯವೇ ?

ಇದು ಅಭಿಷೇಕ್ ಬ್ಯಾನರ್ಜಿಯವರ ರಾಜಕೀಯ ಭದ್ರಕೋಟೆ ಎಂದು ಪ್ರಸಿದ್ಧಿಯಾಗಿರುವ ಡೈಮಂಡ್ ಹಾರ್ಬರ್ ಕ್ಷೇತ್ರದ ರಾಜಕೀಯ ಹಿಂಸಾಚಾರಗಳ ಒಂದು ಝಲಕ್ ಅಷ್ಟೇ. ಈ ಬಾರಿ ದೊಡ್ಡ ಸಂಖ್ಯೆಯಲ್ಲಿ ಸಿಆರ್‌ಪಿಎಫ್‌ ಯೋಧರನ್ನು ಕೇಂದ್ರ ಚುನಾವಣಾ ಆಯೋಗ ನಿಯೋಜಿಸಿರುವುದರಿಂದ ರಾಜಕೀಯ ಹಿಂಸಾಚಾರಕ್ಕೆ ಇಲ್ಲಿ ಕೊಂಚ ಕಡಿವಾಣ ಬಿದ್ದಿದೆ.

Kalaburgi Khadak Rotti: ದೇಶದ ಅಂಗಳಕ್ಕೆ ʼಕಲಬುರಗಿ ಖಡಕ್ ರೊಟ್ಟಿʼ ಲಗ್ಗೆ

ದೇಶದ ಅಂಗಳಕ್ಕೆ ʼಕಲಬುರಗಿ ಖಡಕ್ ರೊಟ್ಟಿʼ ಲಗ್ಗೆ

ಇದು ಕೇವಲ ಆಹಾರ ಪದಾರ್ಥದ ಯಶಸ್ಸಲ್ಲ, ಬದಲಾಗಿ ಬಿಸಿಲು ನಾಡಿನ ಸಾಂಸ್ಕೃತಿಕ ಅಸ್ಮಿತೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧೆಗೆ ಇಳಿಯುತ್ತಿರುವ ಹೆಮ್ಮೆಯ ಕ್ಷಣ. ಕಲಬುರಗಿಯ ಮಣ್ಣಿನ ಗುಣವೇ ಹಸಿರು ಸಿರಿಯ ಜೋಳ. ಇಲ್ಲಿನ ಹೊಲಗಳಲ್ಲಿ ಬೆಳೆಯುವ ‘ಮಾಲ್ದಂಡಿ’ ಜೋಳದ ಹಿಟ್ಟಿನಿಂದ ತಯಾರಾಗುವ ರೊಟ್ಟಿಗೆ ವಿಶಿಷ್ಟ ಪೌಷ್ಟಿಕಾಂಶವಿದೆ.

West Bengal Election ground report by Raghava sharma Nidle: ಭವಾನಿಪುರದ ಬುಡ ಅಲುಗಾಡುತ್ತಿದೆಯೇ?

ಭವಾನಿಪುರದ ಬುಡ ಅಲುಗಾಡುತ್ತಿದೆಯೇ?

ಟಿಎಂಸಿ ಅಟ್ಟಹಾಸ ಜೋರಾಗಿದೆ. ಹಿಂದೂಗಳ ಮೇಲಿನ ದಾಳಿ ಬಗ್ಗೆ ಟಿಎಂಸಿ, ದೀದಿ ಕಿಂಚಿತ್ತೂ ಮಾತನಾಡುವುದಿಲ್ಲ. ಅಭಿವೃದ್ಧಿಯಂತೂ ಇಲ್ಲವೇ ಇಲ್ಲ" ಎಂದು ತನ್ನ ಮನಸ್ಸಿನ ಮಾತು ಗಳನ್ನು ಹೊರ ಹಾಕಿದ. ಆ ಹೊತ್ತಿಗೆ, ಅದೇ ಬೀದಿಯಲ್ಲಿ ಟಿಎಂಸಿ ಯುವಕರ ತಂಡವೊಂದು ಬೈಕ್ ರ‍್ಯಾಲಿ ಕೈಗೊಳ್ಳುತ್ತಿದ್ದುದನ್ನು ತೋರಿಸಿದ ಆತ, “ನೋಡಿ ಅಲ್ಲಿ ಮುಸ್ಲಿಂ ಹುಡುಗರೇ ಹೆಚ್ಚಿರುತ್ತಾರೆ.

ಹೆಚ್.ಎನ್.ವ್ಯಾಲಿಯ ನೀರಿನ ಸಂಗ್ರಹಾಗಾರವಾದ ಕಂದವಾರ ಕೆರೆಯಲ್ಲಿ ಮೀನುಗಳ ಮಾರಣಹೋಮ

ಕಂದವಾರ ಕೆರೆಯಲ್ಲಿ ಮೀನುಗಳ ಮಾರಣಹೋಮ

ಎರಡನೇ ಹಂತದ ಶುದ್ಧೀಕರಣದಲ್ಲಿ ಕೂಡ ಲೋಪದೋಷಗಳಾಗುತ್ತಿರುವ ಬಗ್ಗೆ ಸ್ವತಃ ಈ ಯೋಜನೆಯ ಕಾರಣಕರ್ತರು, ಹಾಲಿ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಇತ್ತೀಚೆಗೆ ಸುದ್ದಿ ಗೋಷ್ಠಿ ನಡೆಸಿ ಶುದ್ಧೀಕರಣ ಸಂಬಂಧದ ಮಾಹಿತಿಗಳನ್ನು ಬಟಾಬಯಲು ಮಾಡಿರುವು ದನ್ನು ಜನತೆ ಕಂಡಿದ್ದಾರೆ.

West Bengal Election ground report by Raghav Sharma Nidle: ಮಮತಾ ದೀದಿಯ ನಿದ್ದೆಗೆಡಿಸಿದ್ದ ಅಭಯಾಳ ಸುತ್ತ...

ಮಮತಾ ದೀದಿಯ ನಿದ್ದೆಗೆಡಿಸಿದ್ದ ಅಭಯಾಳ ಸುತ್ತ...

ಸಿಎಂ ಮಮತಾ ಬ್ಯಾನರ್ಜಿ ತಮ್ಮ 15 ವರ್ಷಗಳ ಅಧಿಕಾರಾವಧಿಯಲ್ಲಿ ಎದುರಿಸಿದ್ದ ಅತ್ಯಂತ ಸವಾಲಿನ ಘಟನೆ ಇದಾಗಿತ್ತು. ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತರಾಗಿಲ್ಲ ಎಂಬ ಬಿಜೆಪಿ, ಎಡಪಕ್ಷಗಳ ಆರೋಪ ಕ್ಕೂ ವೇಗ ಸಿಕ್ಕಿತ್ತು. ಪ್ರಕರಣದಲ್ಲಿ ರಾಜ್ಯ ಪೊಲೀಸರ ವೈಫಲ್ಯದಿಂದಾಗಿ ಕಲ್ಕತ್ತಾ ಹೈಕೋರ್ಟ್ ಮಧ್ಯ ಪ್ರವೇಶಿಸಿ ಕೇಸ್ ಅನ್ನು ಸಿಬಿಐಗೆ ವರ್ಗಾವಣೆ ಮಾಡಿತ್ತು.

SSLC Result in Yadgir : ಎಸ್‌ʼಎಸ್‌ʼಎಲ್‌ʼಸಿ ಫಲಿತಾಂಶ: ತಪ್ಪಿದ ಕೊನೆಯ ಸ್ಥಾನ

ಎಸ್‌ʼಎಸ್‌ʼಎಲ್‌ʼಸಿ ಫಲಿತಾಂಶ: ತಪ್ಪಿದ ಕೊನೆಯ ಸ್ಥಾನ

ಪರೀಕ್ಷಾ ಫಲಿತಾಂಶಗಳಲ್ಲಿ ಸದಾ ಕೊನೆಯ ಸ್ಥಾನ ಪಡೆಯುತ್ತಾ ಟೀಕೆಗಳಿಗೆ ಆಹಾರವಾಗುತ್ತಿದ್ದ ಯಾದಗಿರಿ ಜಿಲ್ಲೆ, ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಯಾದಗಿರಿ ಜಿಲ್ಲೆಯು ಕಳೆದ ಎರಡು ವರ್ಷಗಳಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬದಲಾವಣೆ ಕಾಣುತ್ತಲಿದ್ದು, ಈ ವರ್ಷ 91.89 ಪ್ರತಿಶತ ಪಡೆದು 31 ಸ್ಥಾನದಲ್ಲಿ ಯಾದಗಿರಿ ಸ್ಥಾನ ಪಡೆದಿದೆ.

Kalyana Karnataka: ಕಲ್ಯಾಣ ಕರ್ನಾಟಕದ ಫಲಿತಾಂಶ 19.9% ಏರಿಕೆ

ಕಲ್ಯಾಣ ಕರ್ನಾಟಕದ ಫಲಿತಾಂಶ 19.9% ಏರಿಕೆ

ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ರಾಯಚೂರು ಶೇ.94.4ರಷ್ಟು ಫಲಿತಾಂಶದೊಂದಿಗೆ ಮುಂಚೂಣಿಯಲ್ಲಿದೆ. ಯಾದಗಿರಿ ಜಿಲ್ಲೆಯು ಕಳೆದ ಬಾರಿಗಿಂತ ಶೇ.29.8ರಷ್ಟು ಹೆಚ್ಚಿನ ಪ್ರಗತಿ ತೋರಿದೆ. ಆದರೆ, ಕಲಬುರಗಿ ಜಿಲ್ಲೆಯು ಶೇ. 85.1ರಷ್ಟು ಫಲಿತಾಂಶ ಪಡೆದಿದ್ದು, ಕಳೆದ ವರ್ಷಕ್ಕಿಂತ ಶೇ.28.2 ರಷ್ಟು ಸುಧಾರಣೆ ಕಂಡಿದ್ದರೂ ಸಹ ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಇನ್ನೂ ಕೆಳಮಟ್ಟದಲ್ಲೇ ಉಳಿದುಕೊಂಡಿದೆ.

Loading...