ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೈಲೈನ್‌ ಸ್ಟೋರೀಸ್‌

ಕೊಡಗಿನಲ್ಲಿ ಹೊರಗಿನ ಉದ್ಯಮಿಗಳ ಕಾರುಬಾರು

ಕೊಡಗಿನಲ್ಲಿ ಹೊರಗಿನ ಉದ್ಯಮಿಗಳ ಕಾರುಬಾರು

ಕೊಡಗಿನಲ್ಲಿ ಯಾವುದೇ ಯೋಜನೆ ಹಮ್ಮಿಕೊಳ್ಳಲಾರೆ. ಸ್ಥಳೀಯ ಭೂಮಾಲೀಕರು ತನ್ನನ್ನು ದಾರಿ ತಪ್ಪಿಸಿ ಜಾಗ ಮಾರಾಟ ಮಾಡಿದ್ದರು ಎಂದು ಶ್ರೀ.ಎಂ ನೊಂದು ನುಡಿದಿದ್ದರು. ಈ ನಿಟ್ಟಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜು.10ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯು ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.

PM Kisan: ಕಲ್ಯಾಣ ಕರ್ನಾಟಕದ ರೈತರಿಗೆ ʼಪಿಎಂ ಕಿಸಾನ್ʼ ಆಸರೆ

PM Kisan: ಕಲ್ಯಾಣ ಕರ್ನಾಟಕದ ರೈತರಿಗೆ ʼಪಿಎಂ ಕಿಸಾನ್ʼ ಆಸರೆ

2026-27ನೇ ಸಾಲಿನ 23ನೇ ಕಂತಿನಡಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ಒಟ್ಟು 8,92,260 ರೈತ ಫಲಾನುಭವಿಗಳ ಬ್ಯಾಂಕ್ ಖಾತೆಗೆ 178.45 ಕೋಟಿ ನಗದು ನೇರವಾಗಿ ಜಮೆಯಾಗಿದೆ. ಈ ಭಾಗದ ಬಹುತೇಕ ರೈತರು ಮಳೆ ಆಧಾರಿತ ಕೃಷಿಯನ್ನೇ ನೆಚ್ಚಿಕೊಂಡಿದ್ದಾರೆ. ಪ್ರಸ್ತುತ ಎಲ್‌ನಿನೋ ಪರಿಣಾಮ ದಿಂದಾಗಿ ಮುಂಗಾರು ಮಳೆ ವಿಳಂಬವಾಗಿದ್ದು, ಬಿತ್ತನೆಯ ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಕೃಷಿ ವೆಚ್ಚ ರೈತರಿಗೆ ಹೊರೆಯಾಗಿತ್ತು

ತುಮಕೂರು ವಿಭಾಗದಲ್ಲಿ 97 ಸಾವಿರ ಕಟ್ಟಡ ಕಾರ್ಮಿಕರು !

ತುಮಕೂರು ವಿಭಾಗದಲ್ಲಿ 97 ಸಾವಿರ ಕಟ್ಟಡ ಕಾರ್ಮಿಕರು !

ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಇ-ಶ್ರಮ್ ಯೋಜನೆಯಡಿ 4,29,641 ಕಾರ್ಮಿಕರು ನೋಂದಾಯಿಸಿಕೊಂಡಿದ್ದು, ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಯಡಿ 11,463, ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಯಡಿ 3311,

International Plastic Bag Free Day: ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತಿ ದಿನ

ಅಂತಾರಾಷ್ಟ್ರೀಯ ಪ್ಲಾಸ್ಟಿಕ್ ಬ್ಯಾಗ್ ಮುಕ್ತಿ ದಿನ

ಉತ್ತರ ಕನ್ನಡ ಜಿಲ್ಲೆಯು ತನ್ನ ವಿಶಾಲವಾದ ಕಡಲತೀರಗಳು, ದಟ್ಟವಾದ ಪಶ್ಚಿಮ ಘಟ್ಟದ ಕಾಡುಗಳು ಮತ್ತು ಸುಂದರ ನದಿ ತೀರಗಳಿಗೆ ಹೆಸರುವಾಸಿಯಾಗಿದೆ. ಗೋಕರ್ಣ, ಮುರುಡೇಶ್ವರ, ಕಾರವಾರದ ದೇವಭಾಗ್ ಮತ್ತು ದಾಂಡೇಲಿಯಂತಹ ಪ್ರವಾಸಿ ತಾಣಗಳು ವರ್ಷವಿಡೀ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶಗಳು ಅತಿಯಾದ ಪ್ಲಾಸ್ಟಿಕ್ ತ್ಯಾಜ್ಯದ ಪಿಡುಗಿಗೆ ತೀವ್ರವಾಗಿ ತುತ್ತಾಗಿವೆ.

ಸಂಪುಟ ಸಂಕಟ: ಕೈ ನಾಯಕರ ಪರದಾಟ

ಸಂಪುಟ ಸಂಕಟ: ಕೈ ನಾಯಕರ ಪರದಾಟ

20 ಸ್ಥಾನಗಳಿಗೆ ಸುಮಾರು 42ಕ್ಕೂ ಹೆಚ್ಚು ಮಂದಿ ಪ್ರಬಲ ಆಕಾಂಕ್ಷಿಗಳಿದ್ದಾರೆ. ಇವರಲ್ಲಿ ಯಾರಿಗೆ ನೀಡಬೇಕು. ಯಾರನ್ನು ಕೈಬಿಡಬೇಕೆನ್ನುವ ಗೊಂದಲ ಪಕ್ಷದ ವರಿಷ್ಠರದ್ದಾಗಿದೆ. ಈ ಮಧ್ಯೆ ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಅವರು ವಿದೇಶ ಪ್ರವಾಸದಿಂದ ಬಂದ ನಂತರ ರಾಜ್ಯ ನಾಯಕ ರನ್ನು ಕರೆಸಿ ಮಾತುಕತೆ ನಡೆಸಿ ನಂತರವಷ್ಟೇ ಸಂಪುಟ ವಿಸ್ತರಣೆ ಮಾಡುವ ಸಾಧ್ಯತೆ ಇದೆ.

International Pineapple Day: ಇಂದು ಅಂತಾರಾಷ್ಟ್ರೀಯ ಅನಾನಸ್ ದಿನ

ಇಂದು ಅಂತಾರಾಷ್ಟ್ರೀಯ ಅನಾನಸ್ ದಿನ

ಪ್ರತಿವರ್ಷ ಜೂ.27ರಂದು ಆಚರಿಸಲಾಗುವ ‘ಅಂತಾರಾಷ್ಟ್ರೀಯ ಅನಾನಸ್ ದಿನ"ವು ಈ ಜನಪ್ರಿಯ ಹಣ್ಣಿನ ಸಾಂಸ್ಕೃತಿಕ, ಆರ್ಥಿಕ ಮತ್ತು ಪೌಷ್ಟಿಕಾಂಶದ ಮಹತ್ವವನ್ನು ಸಾರುವ ವಿಶೇಷ ದಿನವಾಗಿದೆ. ಕೇವಲ ಸಿಹಿ ಮತ್ತು ಹುಳಿಯ ಸಮತೋಲನ ಹೊಂದಿರುವ ರುಚಿಕರ ಹಣ್ಣು ಮಾತ್ರವಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಅನಾನಸ್ ಅಪಾರ ಪ್ರಯೋಜನಗಳನ್ನು ಹೊಂದಿದೆ. ಈ ಹಣ್ಣಿನ ಮೂಲ ದಕ್ಷಿಣ ಅಮೆರಿಕಾಗಳಾಗಿದ್ದು, ಅಲ್ಲಿಂದ ಇದು ಜಗತ್ತಿನಾದ್ಯಂತ ಹರಡಿ, ಉಷ್ಣವಲಯದ ದೇಶಗಳಲ್ಲಿ ಪ್ರಮುಖ ವಾಣಿಜ್ಯ ಬೆಳೆಯಾಗಿ ಬೆಳೆದಿದೆ.

Kartavya App: ನೌಕರರಿಗೆ ತಲೆನೋವಾದ 'ಕರ್ತವ್ಯ App'

ನೌಕರರಿಗೆ ತಲೆನೋವಾದ 'ಕರ್ತವ್ಯ App'

ಸರಕಾರದ ಅಧೀನದ ಇಲಾಖೆಗಳು ಮತ್ತು ನಿಗಮ ಮಂಡಳಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು, ಮೊಬೈಲ್ ಮೂಲಕ ಹಾಜರಾತಿ ದಾಖಲಿಸುವ ವ್ಯವಸ್ಥೆ ಮೇ 1 ಜಾರಿಗೆ ಬಂದಿದೆ. ಅದರನ್ವಯ ಅಧಿಕಾರಿ ಮತ್ತು ಸಿಬ್ಬಂದಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಬಂದಾಗ ಚೆಕ್‌ಇನ್‌ನಲ್ಲಿ ಹಾಗೂ ಸಂಜೆ ಕಚೇರಿಯಿಂದ ತೆರಳುವಾಗ ಚೆಕ್‌ಔಟ್‌ನಲ್ಲಿ ತಪ್ಪದೆ ಹಾಜರಾತಿ ದಾಖಲಿಸಬೇಕು. ಆದರೆ, ಹೊಸ ವ್ಯವಸ್ಥೆಗೆ ಮೊದಲು ಪೊಲೀಸ್ ಇಲಾಖೆಯಿಂದ ಅಪಸ್ವರ ವ್ಯಕ್ತವಾಯಿತು.

ಭರವಸೆಯಲ್ಲೇ ಉಳಿದ ಹಲಗೆವಡೇರಹಳ್ಳಿ ಕೆರೆ ಅಭಿವೃದ್ಧಿ

ಭರವಸೆಯಲ್ಲೇ ಉಳಿದ ಹಲಗೆವಡೇರಹಳ್ಳಿ ಕೆರೆ ಅಭಿವೃದ್ಧಿ

ನಗರೀಕರಣದ ಒತ್ತಡದಿಂದ ಬೆಂಗಳೂರಿನ ಅನೇಕ ಕೆರೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ ಉಳಿದಿರುವ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಂದಾ ಗಿದ್ದರು. ರಾಜರಾಜೇಶ್ವರಿ ನಗರದ ಹಲಗೆವಡೇರಹಳ್ಳಿ ಕೆರೆಯ ಅಭಿವೃದ್ಧಿ ಮಾತ್ರ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ವಿಳಂಬದಿಂದ ಸ್ಥಗಿತಗೊಂಡಂತಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

ಶಿಕ್ಷಕರ ಸಮರ್ಪಣಾ ಮನೋಭಾವಕ್ಕೆ ಒಲಿದ ಯಶಸ್ಸು

ಶಿಕ್ಷಕರ ಸಮರ್ಪಣಾ ಮನೋಭಾವಕ್ಕೆ ಒಲಿದ ಯಶಸ್ಸು

ಶಿಕ್ಷಣ ಇಲಾಖೆಯಿಂದ ಕಾಗದದ ಮೇಲೆ ಸೌಲಭ್ಯಗಳ ಮಹಾಪೂರವೇ ಹರಿದುಬಂದರೂ, ಅವು ಪ್ರಾಯೋಗಿಕವಾಗಿ ತಳಮಟ್ಟದಲ್ಲಿ ಸಮರ್ಪಕವಾಗಿ ತಲುಪುತ್ತಿಲ್ಲ ಎಂಬುದು ಸಾರ್ವಜನಿಕರ ಸಾರ್ವ ತ್ರಿಕ ದೂರು. ಆದರೆ, ಇಂತಹ ಕನಿಷ್ಠ ಹಾಗೂ ಸೀಮಿತ ಮೂಲಸೌಕರ್ಯಗಳ ಮಧ್ಯೆಯೂ ಸಂಜೀವ ನಗರದ ಸರಕಾರಿ ಶಾಲೆ ಗಮನ ಸೆಳೆಯುವಂತೆ ಮಾಡುವಲ್ಲಿ ಇಲ್ಲಿನ ಶಿಕ್ಷಕರ ಪಾತ್ರ ಅನನ್ಯವಾಗಿದೆ

BJP-JDS alliance: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ

ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಅಡ್ಡಡ್ಡ ಅನುಮಾನ

ರಾಜ್ಯ ವಿಧಾನಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ದೋಸ್ತಿಗಳು ಕಣಕ್ಕಿಳಿಸಿದ್ದ ಹೆಚ್ಚುವರಿ ಅಭ್ಯರ್ಥಿಗಳ ಪೈಕಿ ಕಾಂಗ್ರೆಸ್ ಹೆಚ್ಚುವರಿ ಅಭ್ಯರ್ಥಿ ಜಯ ಸಾಧಿಸಿದ್ದು ಹಾಗೂ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರುವ ಈಗ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ, ಅಷ್ಟೇ ಅಲ್ಲಇದು ರಾಜ್ಯದಲ್ಲಿ ಮುಂದಾಗುವ ರಾಜಕೀಯ ಬದಲಾವಣೆಯ ಸೂಚನೆಯನ್ನೂ ತಿಳಿಸುವ ದಿಕ್ಸೂಚಿಯಾಗಲಿದೆ

Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ಸಾರ್ವಜನಿಕರಿಗೆ ನಿಖರ ಮಾರ್ಗಸೂಚಿಯಾಗಿದ್ದ ಈ ಹೈಟೆಕ್ ಆಪ್ ತಾಂತ್ರಿಕ ದೋಷ ಹಾಗೂ ಅಧಿಕಾರಿ ಗಳ ಬೇಜವಾಬ್ದಾರಿಯಿಂದಾಗಿ ಸ್ಥಗಿತಗೊಂಡಿದ್ದು, ಪ್ರತಿನಿತ್ಯ ಬಸ್‌ಗಳನ್ನೇ ನೆಚ್ಚಿಕೊಂಡಿರುವ ಸಾವಿ ರಾರು ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತೀವ್ರ ತೊಂದರೆ ಅನುಭವಿಸು ವಂತಾಗಿದೆ.

Indira Canteen: ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ

ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ

ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ತಿಂಗಳಿಗೆ 3 ದಿನ ಪಿರಿಯಡ್ಸ್ ರಜೆ? ಆರೋಗ್ಯ-ಶಿಕ್ಷಣದ ನಡುವೆ ಹೊಸ ಚರ್ಚೆ

ಶಾಲಾ ಬಾಲಕಿಯರಿಗೆ ಪಿರಿಯಡ್ಸ್ ರಜೆ: ಕೇರಳದ ಪ್ರಸ್ತಾವನೆಗೆ ದೇಶಾದ್ಯಂತ ಚರ್ಚೆ

ಕೇರಳ ಸರ್ಕಾರವು ಶಾಲಾ ಬಾಲಕಿಯರಿಗೆ ಪಿರಿಯಡ್ಸ್ ಸಮಯದಲ್ಲಿ ತಿಂಗಳಿಗೆ ಮೂರು ದಿನಗಳ ರಜೆ ನೀಡುವ ಪ್ರಸ್ತಾವನೆ ಮುಂದಿಟ್ಟಿದ್ದು, ಇದು ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ಕುರಿತು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಸ್ವಾಗತಿಸಿದ್ದರೆ, ಇನ್ನು ಕೆಲವರು ಖಾಸಗಿತನ ಮತ್ತು ಶೈಕ್ಷಣಿಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆ ಹೈಸ್ಪೀಡ್ ರೈಲು ಸಂಪರ್ಕ

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆ ಹೈಸ್ಪೀಡ್ ರೈಲು ಸಂಪರ್ಕ

ಸುಮಾರು 2 ಲಕ್ಷ ಕೋಟಿ ರುಪಾಯಿ ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರೈಲು ಮಾರ್ಗ 671 ಕಿ.ಮೀ. ಉದ್ದ ಇರಲಿದೆ. ಮಾರ್ಗವು ಜಾರಿಗೆ ಬಂದರೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮುಂಬೈ ಮತ್ತು ಹೈದರಾಬಾದ್ ನಗರಗಳು ಅತ್ಯಂತ ಸಮೀಪವಾಗಲಿವೆ. ಸದ್ಯ 2 ಮಹಾನಗರಗಳಿಗೆ ಕಲಬುರಗಿ ಯಿಂದ ತಲುಪಲೂ ಸುದೀರ್ಘ ಸಮಯ ಬೇಕಾಗುತ್ತಿದ್ದು, ಬುಲೆಟ್ ಟ್ರೇನ್ ಆರಂಭ ವಾದರೆ ಕಲಬುರಗಿಯಿಂದ ಕೇವಲ ಎರಡು ತಾಸಿನಲ್ಲಿ ಮುಂಬೈ ನಗರವನ್ನು ತಲುಪಬಹುದಾಗಿದೆ.

Zameer Ahmed Khan: ಕಾಂಗ್ರೆಸ್‌ನಲ್ಲಿ ಬದಲಾದ ಅಲ್ಪಸಂಖ್ಯಾತ ಆದ್ಯತೆ

Zameer Ahmed Khan: ಕಾಂಗ್ರೆಸ್‌ನಲ್ಲಿ ಬದಲಾದ ಅಲ್ಪಸಂಖ್ಯಾತ ಆದ್ಯತೆ

ದಾವಣಗೆರೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಆಡಿಯೋ ಬಿಡುಗಡೆಯಾಗಿದ್ದು ಮತ್ತು ಅದಕ್ಕೆ ಸಂಬಂಧಿಸಿದ ಚರ್ಚೆಗಳ ಹಿನ್ನೆಲೆಯಲ್ಲಿ ಜಮೀರ್ ಹಾದಿ ದುರ್ಗಮ ಎನ್ನುವಂತಾ ಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಜಮೀರ್ ಅಹಮ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪಕ್ಷದ ಹೈಕಮಾಂಡ್ ಕೂಡ ಜಮೀರ್ ವಿರುದ್ಧ ಆಕ್ರೋಶ ಗೊಂಡಿದೆ ಎನ್ನಲಾಗಿದೆ.

T20 World Cup: ಭಾರತೀಯ ವನಿತೆಯರಿಗೀಗ ಟಿ20 ವಿಶ್ವಕಪ್ ಗೆಲ್ಲುವ ಛಲ

ಭಾರತೀಯ ವನಿತೆಯರಿಗೀಗ ಟಿ20 ವಿಶ್ವಕಪ್ ಗೆಲ್ಲುವ ಛಲ

ಎರಡು ಗುಂಪುಗಳಾಗಿ ಎಲ್ಲಾ ತಂಡಗಳನ್ನು ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಗ್ರೂಪ್‌ ಗಳಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿ ಸಿರುವ ಈ ಮಹತ್ವದ ಪಂದ್ಯಾವಳಿಯು ಜುಲೈ 5ರ ವರೆಗೆ ನಡೆಯಲಿದ್ದು, ಒಟ್ಟು 33 ಪಂದ್ಯಗಳ ನ್ನೊಳಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಬರ್ಮಿಂಗ್ ಹ್ಯಾಂನ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಶ್ರೀಲಂಕಾವನ್ನು ಎದುರಿಸಲಿದೆ.

‌SIR: ನೈಜ ಮತದಾರರಿಗೆ ಜರಡಿ ಹಿಡಿಯಲಿದೆ ಎಸ್‌ʼಐಆರ್

ನೈಜ ಮತದಾರರಿಗೆ ಜರಡಿ ಹಿಡಿಯಲಿದೆ ಎಸ್‌ʼಐಆರ್

ಪ್ರತಿಯೊಬ್ಬ ಅರ್ಹ ನಾಗರಿಕನು ಕೂಡ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಮುಂಬರುವ ಚುನಾವಣೆ ಗಳಿಗೆ ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆಯನ್ನು ಸುಧಾರಿಸುವುದು. ನೋಂದಣಿಯನ್ನು ಸುಲಭ ಪ್ರಕ್ರಿಯೆಯಲ್ಲಿ ಮಾಡುವ ಮೂಲಕ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಎಸ್‌ಐಆರ್, ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲ ಉದ್ದೇಶ.

Digital Revolution in KKRTC: ಕೆಕೆಆರ್‌ʼಟಿಸಿ ಬಸ್‌ʼಗಳಲಿ ಡಿಜಿಟಲ್‌ ಕ್ರಾಂತಿ

ಕೆಕೆಆರ್‌ʼಟಿಸಿ ಬಸ್‌ʼಗಳಲಿ ಡಿಜಿಟಲ್‌ ಕ್ರಾಂತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋ ಗದೊಂದಿಗೆ ಹಮ್ಮಿಕೊಳ್ಳಲಾದ ಈ ಬೃಹತ್ ಡಿಜಿಟಲ್ ಜಾಲದಲ್ಲಿ ಆರಂಭದಲ್ಲಿ ಕೆಲವು ನೆಟ್‌ವರ್ಕ್ ಹಾಗೂ ಸರ್ವರ್ ಸಮಸ್ಯೆಗಳು ಎದುರಾಗಿದ್ದವು. ಆದರೆ, ಸಾರಿಗೆ ಸಂಸ್ಥೆಯು ಆ ಎಲ್ಲ ದೋಷಗಳನ್ನು ಶೀಘ್ರವಾಗಿ ಬಗೆಹರಿಸಿ, ಇದೀಗ ನಿಗಮದ ಎಲ್ಲ ಬಸ್‌ಗಳಿಗೂ ಈ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಇದರಿಂದಾಗಿಗೂ ಗಲ್ಫ್ ಪೇ, ಫೋನ್ ಪೇ ಮೂಲಕ ಕೇವಲ ಒಂದು ಸ್ಕ್ಯಾನ್‌ನೊಂದಿಗೆ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಕೊಡಗಿನಲ್ಲಿ ನಿಲ್ಲದ ಕಾಡಾನೆ-ಮಾನವ ಸಂಘರ್ಷ

ಕೊಡಗಿನಲ್ಲಿ ನಿಲ್ಲದ ಕಾಡಾನೆ-ಮಾನವ ಸಂಘರ್ಷ

ಕಾಫಿ ತೋಟಗಳಲ್ಲಿ ದೊರಕುವ ಹಲಸು, ಬಿದಿರು, ಕೆರೆಯಲ್ಲಿನ ನೀರು, ಸೊಪ್ಪು ತಿಂದು ಕುಡಿದು ಕಾಡಿಗಿಂತ ಸುಖವಾದ ಜೀವನವನ್ನು ಆನೆ ಪರಿವಾರ ಕಾಫಿ ತೋಟಗಳಲ್ಲಿ ಕಂಡಿವೆ. ಹೀಗಾಗಿಯೇ ತೋಟ ಬಿಟ್ಟು ಕಾಡಿನತ್ತ ಹೆಜ್ಜೆ ಹಾಕದ ಆನೆಗಳು, ಆಗಿಂದಾಗ್ಗೆ ತಮ್ಮತ್ತ ಬರುವ ಮನುಷ್ಯರ ಮೇಲೆ ಧಾಳಿ ನಡೆಸಿ ಪ್ರಾಣಹರಣಕ್ಕೆ ಕಾರಣವಾಗಿದೆ.

ಯಾರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ?

ಯಾರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ?

ಖಾತೆ ಹಂಚಿಕೆಯ ಕ್ಷಣದಿಂದಲೂ ಕಂದಾಯ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದು ಪೂರ್ಣ ಒಪ್ಪಿಗೆ ಇರಲಿಲ್ಲ. ಇದ ರೊಂದಿಗೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನ, ಜಿಬಿಎ ಚುನಾವಣೆಯಿಂದ ಅಂತರ ಕಾಯ್ದು ಕೊಳ್ಳುವುದಾಗಿ ರೆಡ್ಡಿ ಎಚ್ಚರಿಕೆ ನೀಡಿದ ಬೆನ್ನ, ಈ ಖಾತೆ ನನಗೆ ಬೇಡ ಎನ್ನುವ ಕ್ಯಾತೆಯನ್ನು ಕೃಷ್ಣ ಬೈರೇಗೌಡ ಎತ್ತಿದ್ದಾರೆ. ಈ ಖಾತೆಯ ಬದಲು ಬೇರೆ ಖಾತೆಯ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಲಕ್ಷ್ಮಣ- ಲಕ್ಷ್ಮೀ: ಇಬ್ಬರಲ್ಲಿ ಯಾರು ಲಕ್ಕಿ?

ಲಕ್ಷ್ಮಣ- ಲಕ್ಷ್ಮೀ: ಇಬ್ಬರಲ್ಲಿ ಯಾರು ಲಕ್ಕಿ?

ಲಕ್ಷ್ಮೀ ಹೆಬ್ಬಾಳಕರ ಹಾಗೂ ಲಕ್ಷ್ಮಣ ಸವದಿ ಹೊರತಾಗಿ ಈ ಬಾರಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ರಾಮದುರ್ಗ ಶಾಸಕ ಹಾಗೂ ಸಿದ್ದರಾಮಯ್ಯನವರ ಪರಮಾಪ್ತ ಅಶೋಕ್ ಪಟ್ಟಣ, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಹಾಗೂ ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಇದ್ದಾರೆ. ತಮ್ಮ ಆಪ್ತ ನಾಯಕರ ಮೂಲಕ ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.

Dr Yathindra Siddaramaiah: ʼಡಾ.ಯತೀಂದ್ರʼಗೆ ಒಲಿದು ಬಂದ ʼಮಂತ್ರಿʼಭಾಗ್ಯ

Dr yathindra Siddaramaiah: ʼಡಾ.ಯತೀಂದ್ರʼಗೆ ಒಲಿದು ಬಂದ ʼಮಂತ್ರಿʼಭಾಗ್ಯ

ಸಿಎಂ ಹುದ್ದೆಯಿಂದ ನಿರ್ಗಮಿಸುವ ಮುನ್ನ ಭವಿಷ್ಯದ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಂಡೇ ಉರುಳಿಸಿದ ಪಗಡೆ ಆಟದಲ್ಲಿ ಯಶ ಕಂಡಿರುವ ಸಿದ್ದರಾಮಯ್ಯ, ಮೈಸೂರಿನಲ್ಲಿ ತಮ್ಮ ಮಗನಿಗೆ ರಾಜಕೀಯದ ಭದ್ರ ನೆಲೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಜಿಲ್ಲಾ ಉಸ್ತುವಾರಿ ಪಟ್ಟದ ಸನಿಹಕ್ಕೆ ತಂದು ಕೂರಿಸಿದ್ದಾರೆ.

Ministry for U T Khader: ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ಕ್ಷೇತ್ರದ ಶಾಸಕರಾಗಿ ಸತತ ಐದು ಬಾರಿ ಆಯ್ಕೆಯಾಗಿ, ಪ್ರಸ್ತುತ ಸಚಿವ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿರುವ ಯು.ಟಿ.ಖಾದರ್ ಅವರು ಅತ್ಯಂತ ಪ್ರಭಾವಶಾಲಿ ಹಾಗೂ ಜನಪ್ರಿಯ ನಾಯಕರಲ್ಲಿ ಒಬ್ಬರು. ಕಾನೂನು ಪದವೀಧರರಾದ ಇವರು, ಸೇಂಟ್ ಅಲೋಶಿಯಸ್ ಮತ್ತು ಎಸ್‌ಡಿ ಎಂ ಕಾಲೇಜುಗಳಲ್ಲಿ ಶಿಕ್ಷಣ ಮುಗಿಸಿದರು. ವಿದ್ಯಾರ್ಥಿ ದಿಸೆಯಿಂದಲೇ ಎನ್‌ಎಸ್‌ಯುಐ ಸಂಘಟನೆ ಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಹಂತಹಂತವಾಗಿ ಬೆಳೆದರು.

ಖಾತೆ ಕಸರತ್ತು ಮಂತ್ರಿಗಳಿಂದ ಮಹಾ ಲಾಬಿ ಶುರು

ಖಾತೆ ಕಸರತ್ತು ಮಂತ್ರಿಗಳಿಂದ ಮಹಾ ಲಾಬಿ ಶುರು

ಸಂಪುಟ ರಚನೆಯ ನಿರಂತರ ಕಸರತ್ತು ನಡೆಸಿದ ನಂತರ ಪಕ್ಷದ ಹೈಕಮಾಂಡ್, ಖಾತೆಗಳ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ನಾಯಕರಿಗೆ ಸೂಚನೆಗಳು ನೀಡಿದೆ. ಇದನ್ನು ಆಧರಿಸಿ ಈಗಾಗಲೇ ಯಾವ ಸಚಿವರಿಗೆ ಯಾವ ಖಾತೆ ಎನ್ನುವ ತಾತ್ಕಾಲಿಕ ಪಟ್ಟಿಯನ್ನು ಒಂದು ಹಂತಕ್ಕೆ ಸಿದ್ಧಪಡಿಸಲಾಗಿದೆ.

Loading...