ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Mysaa Movie: ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ; ಮೈಸಾ ರಿಲೀಸ್‌ ಡೇಟ್‌ ಅನೌನ್ಸ್‌!

ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ; ಮೈಸಾ ರಿಲೀಸ್‌ ಡೇಟ್‌ ಅನೌನ್ಸ್‌!

Mysaa Movie: ಈ ಚಿತ್ರ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ವಾಸ್ತವವಾಗಿ, ಈ ವರ್ಷದ ಮೇ ತಿಂಗಳಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರು ಕೇರಳದಲ್ಲಿ ಚಿತ್ರತಂಡವು ದೀರ್ಘ ವೇಳಾಪಟ್ಟಿಯನ್ನು ಯಶಸ್ವಿಯಾಗಿ ಮುಗಿಸಿದೆ ಎಂದು ಬಹಿರಂಗಪಡಿಸಿದಾಗ ಚಿತ್ರ ಸುದ್ದಿಯಲ್ಲಿತ್ತು. ಈ ಚಿತ್ರಕ್ಕಾಗಿ ಸ್ಟಂಟ್ ಮಾಸ್ಟರ್ ಕೇಚಾ ಖಂಪಕ್ಡಿ ಕೆಲವು ಹೈ ವೋಲ್ಟೇಜ್ ಆಕ್ಷನ್ ಸನ್ನಿವೇಶಗಳನ್ನು ನೃತ್ಯ ಸಂಯೋಜನೆ ಮಾಡಿದ್ದಾರೆ.

ಕಾರು ಓವರ್‌ಟೇಕ್‌ ವಿಚಾರಕ್ಕೆ ಕಿರಿಕ್‌: ‘ದುನಿಯಾ’ ವಿಜಯ್ ಪುತ್ರನಿಂದ ವಿದ್ಯಾರ್ಥಿ ಅಪಹರಿಸಿ ಹಲ್ಲೆ ಆರೋಪ, ದೂರು ದಾಖಲು!

‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್‌ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ!

ನಟ ʻದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಲಿಸುವ ಕಾರಿನಲ್ಲಿ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ‌ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರಿನನ್ವಯ ಕೆಂಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಜಮೀರ್‌ ಪುತ್ರ, ನಟ ಝೈದ್‌ ಖಾನ್‌

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಜೈಲಿಗೆ ಬಂದ ಜಮೀರ್‌ ಪುತ್ರ ಝೈದ್‌ ಖಾನ್‌

ರೇಣುಕಾಸ್ವಾಮಿ ಕೇಸ್‌ನಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್‌ ತೂಗುದೀಪ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪತ್ನಿ ವಿಜಯಲಕ್ಷ್ಮಿ, ನಟ ಝೈದ್ ಖಾನ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Vijay Deverakonda : "ನಾನು ಪ್ರೀತಿಸಿದೆ, ಬ್ರೇಕಪ್ ಆಯ್ತು, ಕುಡಿತ  ಬಿಟ್ಟೆʼʼ: ವಿಜಯ್ ದೇವರಕೊಂಡ ಓಪನ್‌ ಟಾಕ್‌

"ನಾನು ಪ್ರೀತಿಸಿದೆ, ಬ್ರೇಕಪ್ ಆಯ್ತು, ಕುಡಿತ ಬಿಟ್ಟೆʼʼ: ವಿಜಯ್ ದೇವರಕೊಂಡ

Vijay Deverakonda :'ರೋಮಾಂಚಕಂ' ಚಿತ್ರದ ಪ್ರಚಾರದ ವೇಳೆ ವಿಜಯ್ ದೇವರಕೊಂಡ (Vijay Deavarkonda) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ವಿಜಯ್ ಆಡಿದ ಈ ಮಾತು ಚರ್ಚೆಗೆ ಕಾರಣವಾಗಿದೆ. ಬ್ರೇಕಪ್ ಬಗ್ಗೆ ಇಷ್ಟು ಓಪನ್ ಆಗಿ ಮಾತನಾಡಿದ್ದು ಕೇಳಿ ಫ್ಯಾನ್ಸ್ ಕಂಗಾಲಾಗಿದ್ದಾರೆ.

'ಗುಡ್ಡದ ಭೂತ' ಸಿನಿಮಾಕ್ಕಾಗಿ ಪೊಲೀಸ್ ಅಧಿಕಾರಿಯಾದ ಪಿ. ಲಂಕೇಶ್ ಮೊಮ್ಮಗ ಸಮರ್ಜಿತ್! ಸದ್ದಿಲ್ಲದೆ ಶೂಟಿಂಗ್‌ ಕಂಪ್ಲೀಟ್‌

'ಗುಡ್ಡದ ಭೂತ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾದ ಸಮರ್ಜಿತ್ ಲಂಕೇಶ್‌

ಸಮರ್ಜಿತ್‌ ಲಂಕೇಶ್‌ ಅವರು 'ಗುಡ್ಡದ ಭೂತ' ಎಂಬ ಸಸ್ಪೆನ್ಸ್ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಚಿತ್ರದಲ್ಲಿ 'ಎಸ್‌ಐ ಅಲೋಕ್' ಎಂಬ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರ್ಣಗೊಳಿಸಿದ್ದು, 1987ರ ಪುತ್ತೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ.

Yash Toxic: ‘ಲಗಾನ್’ ಸಿನಿಮಾ ಉದಾಹರಣೆ ನೀಡಿ ʼಟಾಕ್ಸಿಕ್‌ʼ ಬಗ್ಗೆ ಅಜನೀಶ್ ಲೋಕನಾಥ್  ಏನಂದ್ರು?

‘ಲಗಾನ್’ ಸಿನಿಮಾ ಉದಾಹರಣೆ ನೀಡಿ ಟಾಕ್ಸಿಕ್‌ ಬಗ್ಗೆ ಅಜನೀಶ್ ಏನಂದ್ರು?

Yash Toxic: ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಅವರು ಈಗ ಟಾಕ್ಸಿಕ್‌ ಕುರಿತು ಟ್ವೀಟ್‌ ಮಾಡಿದ್ದಾರೆ. ಸಿನಿಮಾಕ್ಕೆ ಬರುತ್ತಿರುವ ನೆಗೆಟಿವ್ ಕಮೆಂಟುಗಳಿಗೆ ಠಕ್ಕರ ಕೊಟ್ಟಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕೆ ಬೆಂಬಲಿಸಿರುವ ಅಜನೀಶ್ ಲೋಕನಾಥ್ , ಹಿಂದಿಯ ‘ಲಗಾನ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ್ದಾರೆ.

ʻಬಿಗ್‌ ಬಾಸ್‌ ಕನ್ನಡ 13ʼ ಶೋ ಆರಂಭಿಸಲು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿಲ್ಲ ಅರ್ಜಿ! ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಹೇಳಿದ್ದೇನು‌?

ʻಬಿಗ್ ಬಾಸ್ 13ʼ ಆರಂಭಿಸಲು ಜಿಲ್ಲಾಡಳಿತಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ!

ʻಬಿಗ್‌ ಬಾಸ್‌ ಕನ್ನಡ 13ʼ ಪ್ರಸಾರಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಗಳು ಕಾಣಿಸುತ್ತಿವೆ. ಮಾಲಿನ್ಯ ನಿಯಂತ್ರಣ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪರಿಸರ ಸಚಿವರು ಎಚ್ಚರಿಸಿದ ಬೆನ್ನಲ್ಲೇ, "ಶೋ ನಡೆಸಲು ಯಾವುದೇ ಅಧಿಕೃತ ಅರ್ಜಿ ಬಂದಿಲ್ಲ" ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ದಸರಾ ಹಬ್ಬಕ್ಕೆ ಗಣೇಶ್ ನಟನೆಯ ‘ಬೃಂದಾವಿಹಾರಿ’‌ ಸಿನಿಮಾ ಉಡುಗೊರೆ ; ವಿಶ್ವಾದ್ಯಂತ 1,300ಕ್ಕೂ ಹೆಚ್ಚು ಪರದೆಗಳಲ್ಲಿ ರಿಲೀಸ್!

ದಸರಾ ಹಬ್ಬದ ಉಡುಗೊರೆಯಾಗಿ ಗಣೇಶ್ ನಟನೆಯ ‘ಬೃಂದಾವಿಹಾರಿ’‌ ಸಿನಿಮಾ ರಿಲೀಸ್‌

ನಟ ಗಣೇಶ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಬೃಂದಾವಿಹಾರಿ’ ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 16ರಂದು ವಿಶ್ವಾದ್ಯಂತ 1,300ಕ್ಕೂ ಅಧಿಕ ಪರದೆಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಶ್ರೀನಿವಾಸ ರಾಜು ನಿರ್ದೇಶನ ಮತ್ತು ಸಮೃದ್ಧಿ ವಿ. ಮಂಜುನಾಥ್ ನಿರ್ಮಾಣದ ಈ ಕೌಟುಂಬಿಕ ಸಿನಿಮಾದಲ್ಲಿ ಮಾಳವಿಕಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ.

ಧಾರಾವಾಹಿಗಳ ಕಥಾಲೋಕಕ್ಕೆ 'ಗೂಗಲ್ AI' ಎಂಟ್ರಿ; ಜೀ ಜೊತೆಗೂಡಿ ಭಾರತದಲ್ಲೇ ಮೊದಲ ವಿನೂತನ ಪ್ರಯೋಗ!

ಜೀ ಟಿವಿಯ ಧಾರಾವಾಹಿಗಳ ಕಥಾಲೋಕಕ್ಕೆ 'ಗೂಗಲ್ AI' ಎಂಟ್ರಿ

ಭಾರತೀಯ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಜೀ ಟಿವಿ ಧಾರಾವಾಹಿಗಳ ಕಥಾಹಂದರದಲ್ಲಿ Google AI Mode ಅಳವಡಿಕೆಯಾಗಿದೆ. 'ದಿಲ್‌ಫ್ಲುನ್ಸರ್ ಮೊಮೆಂಟ್ಸ್' ಪರಿಕಲ್ಪನೆಯಡಿಯಲ್ಲಿ ಪಾತ್ರಗಳು ಎದುರಿಸುವ ದೈನಂದಿನ ಗೊಂದಲ ಹಾಗೂ ಸಂಕೀರ್ಣ ಸವಾಲುಗಳಿಗೆ ಗೂಗಲ್ ಕೃತಕ ಬುದ್ಧಿಮತ್ತೆ ಹೇಗೆ ನೆರವಾಗುತ್ತದೆ ಎಂಬುದನ್ನು ನೈಜವಾಗಿ ತೋರಿಸಲಾಗುತ್ತಿದೆ.

ʻಹಕ್ಕುಗಳು ನನ್ನ ಬಳಿಯಿಲ್ಲ, ಅದರ ನೆಗೆಟಿವ್ಸ್‌ ಕೂಡ ಇಲ್ಲʼ; ʻಶಾಂತಿ ಕ್ರಾಂತಿʼ ರೀ-ರಿಲೀಸ್ ಬಗ್ಗೆ ಮೊದಲ ಬಾರಿ ಮಾತಾಡಿದ ರವಿಚಂದ್ರನ್!‌

ʻಶಾಂತಿ ಕ್ರಾಂತಿʼ ರೀ-ರಿಲೀಸ್ ಅಷ್ಟು ಸುಲಭವಿಲ್ಲ! ರವಿಚಂದ್ರನ್ ಹೇಳಿದ್ದೇನು?

ʻಶಾಂತಿ ಕ್ರಾಂತಿʼ ಸಿನಿಮಾವನ್ನು ರೀ-ರಿಲೀಸ್‌ ಬಗ್ಗೆ ನಟ-ನಿರ್ದೇಶಕ ವಿ. ರವಿಚಂದ್ರನ್ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಮೂಲ ನೆಗೆಟಿವ್ ನಾಶವಾಗಿದ್ದು, ಹಕ್ಕುಗಳು ಸಹೋದರ ಬಾಲಾಜಿ ಬಳಿಯಿವೆ ಎಂದಿದ್ದಾರೆ. ಹಳೆಯ ಪ್ರಿಂಟ್‌ಗಳ ಮೂಲಕ ಮರುರೂಪಿಸಲು ₹3 ಕೋಟಿ ವೆಚ್ಚವಾಗಲಿದ್ದು, ಮರುಸೃಷ್ಟಿ ಕಷ್ಟಸಾಧ್ಯ ಎಂದಿದ್ದಾರೆ.

ʻಕೌಸ್ತುಭ’ ಚಿತ್ರದಲ್ಲಿ ಖಡಕ್ ಪೊಲೀಸ್ ಲುಕ್‌ನಲ್ಲಿ ಪ್ರಮೋದ್ ಶೆಟ್ಟಿ; ಈ ಪಾತ್ರಕ್ಕಾಗಿ 27 ಕೆ.ಜಿ ತೂಕ ಇಳಿಸಿಕೊಂಡ ನಟ!

ʻಕೌಸ್ತುಭ’ ಚಿತ್ರಕ್ಕಾಗಿ 27 KG ತೂಕ ಇಳಿಸಿಕೊಂಡ ನಟ ಪ್ರಮೋದ್ ಶೆಟ್ಟಿ!

ಪ್ರಮೋದ್ ಶೆಟ್ಟಿ ನಟನೆಯ ʻಕೌಸ್ತುಭ’ ಚಿತ್ರದ ಮೂಲಕ ಪೂರ್ಣಪ್ರಮಾಣದ ಕಮರ್ಷಿಯಲ್ ಹೀರೋ ಆಗಿ ಹೊರಹೊಮ್ಮುತ್ತಿದ್ದಾರೆ. 'ಚಾಣಕ್ಯ' ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರಕ್ಕಾಗಿ ಅವರು ಬರೋಬ್ಬರಿ 27 ಕೆ.ಜಿ ತೂಕ ಇಳಿಸಿಕೊಂಡು ಗಮನಸೆಳೆದಿದ್ದಾರೆ. ಸಿದ್ದು ವಜ್ರಪ್ಪ ನಿರ್ದೇಶನದ ಈ ಪತ್ತೆದಾರಿ ಕಥಾಹಂದರದ ಚಿತ್ರವು ರಾಜಕೀಯ ಹಾಗೂ ಸಿನಿಮಾರಂಗದ ನಂಟನ್ನು ಅನಾವರಣಗೊಳಿಸಲಿದೆಯಂತೆ.

ಎಂಎಂ ಕೀರವಾಣಿ ಪುತ್ರ ಕಾಲಭೈರವ ಜೊತೆ ಕಾವ್ಯ ಕಲ್ಯಾಣ್‌ರಾಮ್‌ ಡೇಟಿಂಗ್; ನಿರ್ದೇಶಕ ರಾಜಮೌಳಿ ಕುಟುಂಬದ ಸೊಸೆ ಆಗಲಿದ್ದಾರೆ ಈ ಜನಪ್ರಿಯ ನಟಿ!

ಆಸ್ಕರ್ ವಿಜೇತ ಕೀರವಾಣಿ ಪುತ್ರನ ಜೊತೆ ನಟಿ ಕಾವ್ಯ ಕಲ್ಯಾಣ್‌ರಾಮ್ ಮದುವೆ

ಕಾಲಭೈರವ ಮತ್ತು ಕಾವ್ಯ ಕಲ್ಯಾಣ್‌ರಾಮ್ ಜೋಡಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಹೇಳಿಕೊಂಡಿದೆ. ಆಸ್ಕರ್ ಪುರಸ್ಕೃತ ಕೀರವಾಣಿ ಪುತ್ರ, ಗಾಯಕ ಕಾಲಭೈರವ ಹಾಗೂ 'ಬಲಗಂ' ಖ್ಯಾತಿಯ ಕಾವ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವನಾತ್ಮಕ ಸಂದೇಶಗಳು ವೈರಲ್ ಆಗಿವೆ. ರಾಜಮೌಳಿ ಕುಟುಂಬದ ಸಂಬಂಧಿಕರಾಗಿರುವ ಈ ಯುವ ತಾರಾ ಜೋಡಿಯ ಹೊಸ ಪಯಣಕ್ಕೆ ಚಿತ್ರರಂಗದ ಗಣ್ಯರು ಹಾರೈಸಿದ್ದಾರೆ.

ʻಬಿಗ್‌ ಬಾಸ್‌ʼ ಮನೆಗೆ ಹೋಗೋ ಚಾನ್ಸ್‌ ಮಿಸ್‌ ಮಾಡಿಕೊಂಡ ಕುಮಾರಿಗೆ ವಿನಯ್‌ ಗೌಡ ಹೇಳಿದ್ದೇನು? 5 ಲಕ್ಷ ರೂ. ಕೊಟ್ಟಿದ್ಯಾರು?

‘ಬಿಗ್‌ ಬಾಸ್‌’ಗೆ ಹೋಗುವ ಚಾನ್ಸ್‌ ಮಿಸ್‌; ಆದ್ರೂ ಕುಮಾರಿಗೆ ಒಲಿದ ಅದೃಷ್ಟ!

ಬಿಗ್‌ ಬಾಸ್‌ ಕನ್ನಡ 13 ಅಗ್ನಿಪರೀಕ್ಷೆಯ ಸ್ಪರ್ಧಿ ಲಾವಣ್ಯ ಕುಮಾರಿ ಆರೋಗ್ಯ ಸಮಸ್ಯೆಯಿಂದಾಗಿ ಶೋನಿಂದ ಹೊರಬಿದ್ದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಶೋನಿಂದ ಹೊರಬಿದ್ದರೂ, ಅವರಿಗೆ ಕೈತುಂಬಾ ಹಣ ಸಿಕ್ಕಿದೆ. ಭವಿಷ್ಯದಲ್ಲಿ ಉದ್ಯೋಗ ನೀಡುವುದಕ್ಕೂ ಭರವಸೆ ಸಿಕ್ಕಿದೆ.

Rapper Badshah: ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ರ‍್ಯಾಪರ್ ಬಾದ್‌ಶಾ-ಇಶಾ ರಿಖಿ! ಇದು ಗಾಯಕನ ಎರಡನೇ ವಿಚ್ಛೇದನ

ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ರ‍್ಯಾಪರ್ ಬಾದ್‌ಶಾ - ಇಶಾ ರಿಖಿ!

Rapper Badshah: ರ‍್ಯಾಪರ್ ಬಾದ್‌ಶಾ ಮತ್ತು ಪಂಜಾಬಿ ನಟಿ ಇಶಾ ರಿಖಿ ಅವರು ಮದುವೆಯಾಗಿ ಕೇವಲ ಐದು ತಿಂಗಳೇ ಕಳೆದಿದ್ದು, ದಾಂಪತ್ಯ ಜೀವನಕ್ಕೆ ವಿದಾಯ (Divorce) ಹೇಳಿದ್ದಾರೆ. ಬಾದ್‌ಶಾ ಅವರಿಗೆ ಇದು ಎರಡನೇ ವಿಚ್ಛೇದನವಾಗಿದ್ದು, ಈ ಸುದ್ದಿ ಅಭಿಮಾನಿಗಳಲ್ಲಿ ಭಾರಿ ಅಚ್ಚರಿ ಮೂಡಿಸಿದೆ. ಈ ವಿಷಯದ ಬಗ್ಗೆ ನಾವು ಮುಂದೆ ಯಾವುದೇ ಬಹಿರಂಗ ಚರ್ಚೆ ಮಾಡುವುದಿಲ್ಲ’ ಎಂದು ಅವರು ಬರೆದುಕೊಂಡಿದ್ದಾರೆ.

Keerthy Suresh: 9 ಕೆಜಿ ತೂಕ ಇಳಿಸಿದ 'ಮಹಾನಟಿ'; ಸೀಕ್ರೆಟ್‌ ಇದು

Keerthy Suresh: 9 ಕೆಜಿ ತೂಕ ಇಳಿಸಿದ 'ಮಹಾನಟಿ'; ಸೀಕ್ರೆಟ್‌ ಇದು

Keerthy Suresh: ಈಗ ಅವರು ದಿ ಪ್ಯಾರಡೈಸ್ ಚಿತ್ರದಲ್ಲಿ ವಿಶೇಷ ಹಾಡನ್ನು ಮಾಡುತ್ತಿದ್ದಾರೆ . ಈಗ 'ಮಹಾನಟಿ' ಕೀರ್ತಿ ಸುರೇಶ್ ತಮ್ಮ ಫಿಟ್ನೆಸ್ ಮತ್ತು ಅದ್ಭುತ ರೂಪಾಂತರದಿಂದ ಅಭಿಮಾನಿಗಳನ್ನು ಮೆಚ್ಚಿಸಿದ್ದಾರೆ. ಹಿಂದೆ, ಅವರು ಚಲನಚಿತ್ರ ಪಾತ್ರಕ್ಕಾಗಿ 9 ಕೆಜಿ ತೂಕ ಇಳಿಸಿಕೊಂಡು ಸುದ್ದಿಯಲ್ಲಿದ್ದರು. ಹಿಂದಿನ ಸಂದರ್ಶನವೊಂದರಲ್ಲಿ, ಕೀರ್ತಿ ಸುರೇಶ್ ಇದು ಕ್ರ್ಯಾಶ್ ಡಯಟಿಂಗ್ ಅಥವಾ ಕಟ್ಟುನಿಟ್ಟಾದ ಆಹಾರ ನಿಯಮಗಳಿಲ್ಲದೆ, ಸರಿಯಾದ ವ್ಯಾಯಾಮ ಮತ್ತು ಸಮತೋಲಿತ ಆಹಾರದಿಂದ ಸಾಧ್ಯ ಎಂದು ಬಹಿರಂಗಪಡಿಸಿದರು.

KurmaAvatar Teaser: ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೀಸರ್ ಬಿಡುಗಡೆ

ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೀಸರ್ ಬಿಡುಗಡೆ

KurmaAvatar Teaser: ನರೇಂದ್ರ ಕೊಂಡ ಅರ್ಪಿಸುವ, ಪಂಚವಕ್ತ್ರ ಪಿಕ್ಚರ್ಸ್ ಹಾಗೂ ರುಕ್ವಿನಾ ಸ್ಟುಡಿಯೋಸ್ ಬ್ಯಾನರ್‌ಗಳಡಿ ಪೂಜಿತಾ ಕೆ. ಮತ್ತು ಕೆ. ಸೇವಿತಾ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಯುವ ನಿರ್ದೇಶಕ ಹರ್ಷವರ್ಧನ್ ಕಡಿಯಾಲ ಆ್ಯಕ್ಷನ್ ಕಟ್ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಖ್ಯಾತ ತೆಲುಗು ನಿರ್ಮಾಪಕ ದಿಲ್ ರಾಜು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಚಿತ್ರತಂಡಕ್ಕೆ ಶುಭ ಹಾರೈಸಿದರು.

ʻಮ್ಯಾಜಿಕ್‌ʼ ಕಿರುಚಿತ್ರ ನಿರ್ಮಾಣ ಮಾಡಿದ ʻಕಾಂತಾರʼ ರಿಷಬ್‌ ಶೆಟ್ಟಿ; ಹೊಸ ಪ್ರತಿಭೆಗಳ ಬೆನ್ನಿಗೆ ನಿಂತ 'ಡಿವೈನ್ ಸ್ಟಾರ್'

‘MAGICC’ ಕಿರುಚಿತ್ರ ರಿಲೀಸ್; ಹೊಸಬರ ಬೆನ್ನಿಗೆ ನಿಂತ ನಟ ರಿಷಬ್ ಶೆಟ್ಟಿ

ರಿಷಬ್‌ ಶೆಟ್ಟಿ ಫಿಲ್ಮ್ಸ್‌ ಸಂಸ್ಥೆಯು ನಿರ್ಮಿಸಿರುವ ವಿಶಿಷ್ಟ ಕಥಾಹಂದರದ ‘MAGICC’ ಕಿರುಚಿತ್ರ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಅಪಾರ ಮನ್ನಣೆ ಗಳಿಸುತ್ತಿದೆ. ಹಿರಿಯ ಲೇಖಕ ಜೋಗಿ ರಚಿಸಿರುವ ಈ ತಾತ್ವಿಕ ಕಥನವನ್ನು ಶಿವಚಿರಂತನ ನಿರ್ದೇಶಿಸಿದ್ದಾರೆ. ಸದ್ದು ಅಡಗಿದಾಗ ಮನುಷ್ಯನ ಆತ್ಮಾವಲೋಕನ ಹೇಗಿರುತ್ತದೆ ಎಂಬ ಗಂಭೀರ ಸತ್ಯವನ್ನು ಇದರ ಮೂಲಕ ಅನಾವರಣಗೊಳಿಸಿಲಾಗಿದೆಯಂತೆ.

Shalini Pandey : ‘ಅರ್ಜುನ್ ರೆಡ್ಡಿ’ ಖ್ಯಾತಿಯ ನಟಿಗೆ ಡೀಪ್​ ಫೇಕ್​ ಕಾಟ! ಪೋಸ್ಟ್‌ ವೈರಲ್‌

‘ಅರ್ಜುನ್ ರೆಡ್ಡಿ’ ಖ್ಯಾತಿಯ ನಟಿಗೆ ಡೀಪ್​ ಫೇಕ್​ ಕಾಟ! ಪೋಸ್ಟ್‌ ವೈರಲ್‌

Shalini Pandey :ನಟಿ ಶಾಲಿನಿ ಪಾಂಡೆ ಅವರಿಗೆ ಡೀಪ್​ಫೇಕ್ ವಿಡಿಯೋದ ಕಾಟ ಶುರುವಾಗಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆ ನೀಡಿದ್ದಾರೆ. ತಮ್ಮ ಮೇಲಿನ ಭಾಗವನ್ನೇ ಮಾರ್ಫ್ ಮಾಡಿದ ವಿಡಿಯೋ ಎಂದು ಹೇಳಲಾಗಿದ್ದು, ಈ ವಿಡಿಯೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟಾಪ್ ಲೆಸ್ ಆಗಿರುವ ವಿಡಿಯೋವನ್ನು ಶಾಲಿನಿ ನಕಲಿ ಮತ್ತು ಕೃತಕ ಬುದ್ಧಿಮತ್ತೆಯಿಂದ ಸೃಷ್ಟಿಸಲಾಗಿದೆ ಎಂದು ತಳ್ಳಿಹಾಕಿದ್ದಾರೆ. ತಪ್ಪುದಾರಿಗೆಳೆಯುವ ವಿಷಯವನ್ನು ಸೃಷ್ಟಿಸಲು ಮತ್ತು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲು ಕೃತಕ ಬುದ್ಧಿಮತ್ತೆಯ ದುರುಪಯೋಗದ ಬಗ್ಗೆ ನಟ ಕಳವಳ ವ್ಯಕ್ತಪಡಿಸಿದ್ದಾರೆ.

ʻಕಿಚ್ಚʼ ಸುದೀಪ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್; ವಿಜಯನಗರ ಸಾಮ್ರಾಟ 'ಶ್ರೀ ಕೃಷ್ಣದೇವರಾಯ' ಪಾತ್ರದಲ್ಲಿ ʻಅಭಿನಯ ಚಕ್ರವರ್ತಿʼ?

ಶ್ರೀ ಕೃಷ್ಣದೇವರಾಯನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರಾ ‌ʻಕಿಚ್ಚʼ ಸುದೀಪ್?

ಕಿಚ್ಚ ಸುದೀಪ್‌ ಅವರ ಹೊಸ ಸಿನಿಮಾವು, ಸೆಪ್ಟೆಂಬರ್ 2ರ ಅವರ ಜನ್ಮದಿನದ ಅಂಗವಾಗಿ ಅಧಿಕೃತವಾಗಿ ಘೋಷಣೆಯಾಗಲಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಮತ್ತು ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋಸ್ ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿವೆ. ಅಂದಹಾಗೆ, ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀ ಕೃಷ್ಣದೇವರಾಯರ ಪಾತ್ರದಲ್ಲಿ ಸುದೀಪ್ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

Telugu Actress: ನಟನೆ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿ

ನಟನೆ ಬಿಟ್ಟು ಸುಪ್ರೀಂ ಕೋರ್ಟ್ ವಕೀಲರಾದ ಖ್ಯಾತ ನಟಿ

Telugu Actress: ತಾರೆಯರು (Celebraty) ಬೇರೆ ಕ್ಷೇತ್ರಗಳಲ್ಲಿ ನೆಲೆಗೊಳ್ಳುವುದು ಅಪರೂಪ. ಆದರೆ, ಟಾಲಿವುಡ್‌ನಲ್ಲಿ ನಟಿಯಾಗಿ ಹೆಸರು ಮಾಡಿದ ತೆಲುಗು ಹುಡುಗಿ ರೇಷ್ಮಾ ರಾಥೋಡ್, ಚಲನಚಿತ್ರೋದ್ಯಮವನ್ನು ತೊರೆದು ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆಯಾಗಿದ್ದಾರೆ.

Kiccha Sudeep: ʻಬಿಗ್ ಬಾಸ್ ಕನ್ನಡ 13ʼ ಶೋ ಟೇಕಾಫ್ ಆಗೋದೇ ಡೌಟಾ?  ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕೊಟ್ಟ ಶಾಕಿಂಗ್‌ ನ್ಯೂಸ್‌ ಏನು?

'ಬಿಗ್ ಬಾಸ್ ಕನ್ನಡ 13' ಆರಂಭಕ್ಕೂ ಮುನ್ನವೇ ಸಂಕಷ್ಟ! ಏನಾಯ್ತು?

ಬಿಗ್‌ ಬಾಸ್‌ ಕನ್ನಡ 13 ಶೋ ಸೆಪ್ಟೆಂಬರ್ 6ರಂದು ಆರಂಭವಾಗುವುದು ಅನುಮಾನಕ್ಕೆ ಕಾರಣವಾಗಿದೆ. ಬಿಗ್‌ ಬಾಸ್‌ ನಡೆಯುವ ಬಿಡದಿಯ ಜಾಲಿವುಡ್ ಸ್ಟುಡಿಯೋ ಸಂಸ್ಥೆಯು ಹಳೆಯ ಪರಿಸರ ಉಲ್ಲಂಘನೆ ದಂಡ ಪಾವತಿಸಿಲ್ಲ. ಜೊತೆಗೆ ಎಸ್‌ಟಿಪಿ ನಿಯಮಗಳನ್ನು ಪಾಲಿಸದೆ ಕಾರ್ಯಕ್ರಮಕ್ಕೆ ಅಧಿಕೃತ ಅನುಮತಿ ಕೋರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ!

Toxic Movie: ನಿಮ್ಮ ಬೆಳವಣಿಗೆಯನ್ನು ಕಂಡು ಅರಗಿಸಿಕೊಳ್ಳಲಾಗದವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು! ಯಶ್‌ ಬಗ್ಗೆ ಸುಮಲತಾ ಪೋಸ್ಟ್‌

'ಟಾಕ್ಸಿಕ್' ಬಗ್ಗೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್

Actor yash: ಸಿನಿಮಾರಂಗದ ತಾರೆಯರು ಈಗ ಒಬ್ಬೊಬ್ಬರಾಗಿ ಈ ಸಿನಿಮಾ ನೋಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್, ಮಾಸ್ಟರ್ ಆನಂದ್, ರಕ್ಷಿತಾ ಪ್ರೇಮ್ ಬಳಿಕ ಇದೀಗ ಮಾಜಿ ಸಚಿವೆ ಸುಮಲತಾ ಅಂಬರೀಷ್ ಅವರು 'ಟಾಕ್ಸಿಕ್' ಸಿನಿಮಾ (Toxic Movie) ನೋಡಿ, ಯಶ್ ಅಭಿನಯ ಹಾಗೂ ಸಿನಿಮಾವನ್ನು ಮೆಚ್ಚಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Toxic Movie: 'ನೀವು ನೀವಾಗಿಯೇ ಇರಿ, ಏಕೆಂದರೆ..'; ಸಂಚಲನ ಮೂಡಿಸಿದ ನಟ ಯಶ್‌ ಇನ್‌ಸ್ಟಾಗ್ರಾಮ್‌ ಬಯೋ!

'ನೀವು ನೀವಾಗಿಯೇ ಇರಿ'; ಸಂಚಲನ ಮೂಡಿಸಿದ ನಟ ಯಶ್‌ ಇನ್‌ಸ್ಟಾಗ್ರಾಮ್‌ ಬಯೋ!

ಯಶ್‌ ಅಭಿನಯದ ಬಹುನಿರೀಕ್ಷಿತ ʻಟಾಕ್ಸಿಕ್‌ʼ ಚಿತ್ರವು ಮಿಶ್ರ ಪ್ರತಿಕ್ರಿಯೆ ಮತ್ತು ಭಾರಿ ಚರ್ಚೆಗಳ ನಡುವೆಯೂ ಕೇವಲ ಐದು ದಿನಗಳಲ್ಲಿ ಬರೋಬ್ಬರಿ 285 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಮಧ್ಯೆ ನಟ ಯಶ್, 'ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ' ಎಂದು ಪ್ರೊಫೈಲ್ ಬಯೋ ಬದಲಿಸಿ ಟ್ರೋಲಿಗರಿಗೆ ಪ್ರತ್ಯುತ್ತರ ನೀಡಿದ್ದಾರೆ.

ಸುದೀಪ್‌ ನಟನೆಯ ಸಿನಿಮಾಗಳು ತಡವಾಗುತ್ತಿರುವುದಕ್ಕೆ ಕಾರಣಗಳೇನು? ತಮ್ಮ ಪ್ಲಾನಿಂಗ್‌ ಬಗ್ಗೆ ಖಡಕ್‌ ರಿಪ್ಲೈ ನೀಡಿದ ʻಕಿಚ್ಚʼ!

ಸಿನಿಮಾ ರಿಲೀಸ್ ಆಗದಿದ್ರೆ ನನಗೇ ಹೆಚ್ಚು ನೋವು: ಮೌನ ಮುರಿದ ʻಕಿಚ್ಚʼ ಸುದೀಪ್

ಸಿನಿಮಾಗಳ ಬಿಡುಗಡೆ ತಡವಾಗುತ್ತಿರುವ ಕುರಿತ ಪ್ರಶ್ನೆಗೆ ನಟ ಸುದೀಪ್ ಭಾವುಕ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ತಡವಾದರೆ ತಮಗೇ ಹೆಚ್ಚು ನೋವಾಗುತ್ತದೆ ಎಂದಿರುವ ಅವರು, ಯಾವುದೇ ನಿರ್ಲಕ್ಷ್ಯ ವಹಿಸದೆ ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದ ಸುದೀಪ್, ಹುಟ್ಟುಹಬ್ಬದಂದು ‘ಬಿಲ್ಲ ರಂಗ ಭಾಷಾ’ ಚಿತ್ರದ ಫಸ್ಟ್ ಕಟ್ ಬಿಡುಗಡೆಯಾಗಲಿದೆ ಎಂದು ಹಂಚಿಕೊಂಡಿದ್ದಾರೆ.

Loading...