ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Ram Charan: ನಟ ರಾಮ್‌ ಚರಣ್‌ ನೋಡಿ ಯಶ್‌ ಎಂದು ಕರೆದ ಕ್ಯಾಮೆರಾ ಮೆನ್; ಮುಜುಗರಕ್ಕೀಡಾದ ನಟ, ವಿಡಿಯೊ ವೈರಲ್‌

ನಟ ರಾಮ್‌ ಚರಣ್‌ ನೋಡಿ ಯಶ್‌ ಎಂದು ಕೂಗಿದ ಜನ! ಮುಜುಗರಕ್ಕೀಡಾದ ನಟ

Yash: ರಾಮ್ ಚರಣ್ ಅವರ ಪೆಡ್ಡಿ ಚಿತ್ರದ ನಿರ್ಮಾಪಕರು ಹೊಸ ಪಾತ್ರದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದು, ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಂದನ್ನು ಗಮನಕ್ಕೆ ತಂದಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಜಗಪತಿ ಬಾಬು ಅವರನ್ನು ಅಪ್ಪಲ ಸೂರಿಯಾಗಿ ಪರಿಚಯಿಸಲಾಗಿದೆ,ಸದ್ಯ ‘ಪೆದ್ದಿ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ಬುಚ್ಚಿ ಬಾಬು ನಿರ್ದೇಶನ (Direction)ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ವಿಡಿಯೋವೊಂದು ವೈರಲ್‌ ಆಗಿದೆ. ಪಾಪರಾಜಿಗಳು ರಾಮ್‌ ಚರಣ್ ಲುಕ್ ನೋಡಿ ಅವರನ್ನು ಅನೇಕರು ಯಶ್ಎಂ ದು ಭಾವಿಸಿದ್ದಾರೆ.‌

ಚೈತ್ರಾ ಆಚಾರ್‌ ಹೊಸ ಸಿನಿಮಾಕ್ಕೆ LSD ಟೈಟಲ್;‌ ಅಮ್ಮನ ಪಾತ್ರದ ಮೂಲಕ ಚಿತ್ರರಂಗಕ್ಕೆ ಮರಳಿದ ಗಾಯಕಿ ಎಂಡಿ ಪಲ್ಲವಿ

LSD Movie: ನಟಿ ಚೈತ್ರಾ ಆಚಾರ್‌ಗೆ ತಾಯಿಯಾದ ಗಾಯಕಿ ಎಂಡಿ ಪಲ್ಲವಿ!

Chaitra J Achar New Movie: ಚೈತ್ರಾ ಆಚಾರ್‌ ನಟನೆಯ ಹೊಸ ಸಿನಿಮಾಕ್ಕೆ 'LSD' (Laila's Sweet Dream) ಎಂದು ಹೆಸರಿಡಲಾಗಿದೆ. ಈ ಚಿತ್ರದ ಮೂಲಕ ಗಾಯಕಿ ಎಂ.ಡಿ. ಪಲ್ಲವಿ ಅವರು ನಟನೆಗೆ ಮರಳಿದ್ದಾರೆ. ಶಕ್ತಿ ಪ್ರಸಾದ್ ನಿರ್ದೇಶನದ ಈ ಚಿತ್ರವು ತಾಯಿ ಮತ್ತು ಮಗಳ ಬಾಂಧವ್ಯದ ಕಥೆಯನ್ನು ಹೊಂದಿದ್ದು, ಹಿರಿಯ ನಟ ಅವಿನಾಶ್ ಉದ್ಯಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

The Raja Saab trailer 2.0: ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌; ಹೊಸ ಅವತಾರದಲ್ಲಿ ಸಂಜಯ್ ದತ್!

ಪ್ರಭಾಸ್ ‘ದಿ ರಾಜಾ ಸಾಬ್’ 2ನೇ ಟ್ರೇಲರ್ ಔಟ್‌

Prabhas : ನಿರ್ದೇಶಕ ಮಾರುತಿ ಅವರ ಹಾರರ್ ಕಾಮಿಡಿ ಚಿತ್ರ ದಿ ರಾಜಾ ಸಾಬ್ ನ ಹೊಸ ಟ್ರೇಲರ್ ಸೋಮವಾರ ಬಿಡುಗಡೆಯಾಯಿತು. ಪ್ರಭಾಸ್ , ಸಂಜಯ್ ದತ್, ರಿದ್ಧಿ ಕುಮಾರ್, ನಿಧಿ ಅಗರ್ವಾಲ್ ಮತ್ತು ಮಾಳವಿಕಾ ಮೋಹನನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಟ್ರೈಲರ್‌ ಕಂಡು ಪ್ರಭಾಸ್‌ ಫ್ಯಾನ್ಸ್‌ ಥ್ರಿಲ್‌ ಆಗಿದ್ದಾರೆ. ಸಿನಿಮಾದ ಎರಡನೇ ಟ್ರೇಲರ್​​ನಲ್ಲಿ ಪ್ರಭಾಸ್ ಅವರ ಗೆಟಪ್ ಗಮನ ಸೆಳೆದಿದೆ. ಕಥೆ ಬಗ್ಗೆ ಹೆಚ್ಚು ಮಾಹಿತಿ ಸಿಕ್ಕಿದೆ.

Year Ender 2025: ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಸಂಖ್ಯೆಯ ಸಿನಿಮಾಗಳು ರಿಲೀಸ್;‌ 255ರಲ್ಲಿ ನಿರ್ಮಾಪಕರನ್ನು ಸೇಫ್‌ ಮಾಡಿದ ಚಿತ್ರಗಳೆಷ್ಟು?

2025ರ ಕನ್ನಡ ಸಿನಿಮಾಗಳ ರಿಪೋರ್ಟ್ ಕಾರ್ಡ್! ಗೆಲುವಿನ ಪ್ರಮಾಣ ಎಷ್ಟು?

2025ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಒಟ್ಟು 255 ಸಿನಿಮಾಗಳು (248 ಥಿಯೇಟರ್ + 7 ಒಟಿಟಿ) ತೆರೆಕಂಡಿವೆ. ಆದರೆ ಈ ಬೃಹತ್ ಸಂಖ್ಯೆಯಲ್ಲಿ ಲಾಭ ತಂದುಕೊಟ್ಟ ಸಿನಿಮಾಗಳ ಸಂಖ್ಯೆ 10ನ್ನೂ ದಾಟಿಲ್ಲ ಎಂಬುದು ಕಹಿ ಸತ್ಯ. ರಿಷಬ್ ಶೆಟ್ಟಿಯ 'ಕಾಂತಾರ: ಚಾಪ್ಟರ್ 1' ಮತ್ತು ರಾಜ್ ಬಿ ಶೆಟ್ಟಿ ತಂಡದ 'ಸು ಫ್ರಮ್ ಸೋ' ಚಿತ್ರಗಳು ಈ ವರ್ಷದ ಅತಿದೊಡ್ಡ ಯಶಸ್ವಿ ಚಿತ್ರಗಳಾಗಿ ಹೊರಹೊಮ್ಮಿವೆ. ಉಳಿದಂತೆ ಶೇ. 95ಕ್ಕೂ ಹೆಚ್ಚು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ.

Thalapathy Vijay: ಚೆನ್ನೈಗಿಂತ ಮೊದಲು ಬೆಂಗಳೂರಿನಲ್ಲಿ ‌ʻಜನ ನಾಯಗನ್‌ʼ ಅಡ್ವಾನ್ಸ್‌ ಬುಕಿಂಗ್ ಶುರು; ಟಿಕೆಟ್‌ ರೇಟ್ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ!

ಬೆಂಗಳೂರಿನಲ್ಲಿ 'ಜನ ನಾಯಗನ್' ಬುಕಿಂಗ್ ಓಪನ್! ಟಿಕೆಟ್‌ ದರ ಎಷ್ಟು ಗೊತ್ತಾ?

Thalapathy Vijay's Jana Nayagan: 'ಜನ ನಾಯಗನ್' ಸಿನಿಮಾವು ಜನವರಿ 9ರಂದು ತೆರೆಕಾಣಲಿದ್ದು, ಚೆನ್ನೈಗಿಂತ ಮೊದಲೇ ಬೆಂಗಳೂರಿನಲ್ಲಿ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಕರ್ನಾಟಕದ ಕೆಲವು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಮುಂಜಾನೆ 6:15ರ ಶೋಗಳ ಟಿಕೆಟ್ ದರವು ಸಿನಿಪ್ರಿಯರಿಗೆ ಶಾಕ್‌ ನೀಡಿದೆ.

BBK 12: ಕ್ಯಾಪ್ಟನ್ ಆದಕೂಡಲೇ ವರಸೆ ಬದಲಿಸಿದ್ರಾ ಗಿಲ್ಲಿ ನಟ? ಮನೆಯವರ ಸಿಟ್ಟಿಗೆ ಕಾರಣವಾಯ್ತಾ ಮಾತಿನ ಮಲ್ಲನ ಅದೊಂದು ನಿರ್ಧಾರ?

BBK 12: ಕ್ಯಾಪ್ಟನ್ ಆದ ಮೇಲೆ ಗಿಲ್ಲಿಗೆ ಬಂತಾ 'ಕೊಂಬು'?

Gilli Nata: ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆದ ಮೊದಲ ದಿನವೇ ಗಿಲ್ಲಿ ನಟ ಹವಾ ಮಾಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆಯಲ್ಲಿ ಬಿಗ್ ಬಾಸ್ ನೀಡಿದ ವಿಶೇಷ ಅಧಿಕಾರ ಬಳಸಿ ಧ್ರುವಂತ್ ಮತ್ತು ರಾಶಿಕಾ ಅವರನ್ನು ನಾಮಿನೇಟ್ ಮಾಡಿರುವ ಗಿಲ್ಲಿ ವಿರುದ್ಧ 'ಫೇವರಿಸಂ' ಆರೋಪ ಕೇಳಿಬಂದಿದೆ.

Kiccha Sudeep: 4 ದಿನಗಳಲ್ಲಿ ʻಮಾರ್ಕ್‌ʼ ಬಾಚಿಕೊಂಡ ಹಣವೆಷ್ಟು? ಚಿತ್ರತಂಡದಿಂದಲೇ ಬಂತು ನೋಡಿ ಅಧಿಕೃತ ಮಾಹಿತಿ

ಮೊದಲ ವೀಕೆಂಡ್‌ನಲ್ಲಿ 'ಮಾರ್ಕ್' ಗಳಿಸಿದ್ದೆಷ್ಟು? ಇಲ್ಲಿದೆ ರಿಪೋರ್ಟ್‌

Mark Movie Day 4 Collection: ʻಅಭಿನಯ ಚಕ್ರವರ್ತಿʼ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ವಿಜಯ್ ಕಾರ್ತಿಕೇಯ ಕಾಂಬಿನೇಷನ್‌ನ 'ಮಾರ್ಕ್' ಸಿನಿಮಾ 4 ದಿನಗಳಲ್ಲಿ ಎಷ್ಟು ಗಳಿಕೆ ಆಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಕ್ರಿಸ್‌ಮಸ್ ರಜೆಯ ಲಾಭ ಪಡೆದ ಈ ಚಿತ್ರ, ಕರ್ನಾಟಕದಾದ್ಯಂತ ಹಲವು ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ.

33 ವರ್ಷಗಳ ಸಿನಿ ಪಯಣಕ್ಕೆ ನಟ ವಿಜಯ್‌ ವಿದಾಯ; ದಳಪತಿಯ ಕೊನೇ ಸಿನಿಮಾದ ಆಡಿಯೋ ಲಾಂಚ್‌ ಹೇಗಿತ್ತು? ಇಲ್ಲಿವೆ ಕಲರ್‌ಫುಲ್‌ ಫೋಟೋಗಳು

Photos: 'ದಳಪತಿ' ವಿಜಯ್‌ ಕೊನೇ ಸಿನಿಮಾದ ಆಡಿಯೋ ಲಾಂಚ್‌ನ ಹೇಗಿತ್ತು?

ಮಲೇಷ್ಯಾದಲ್ಲಿ ಡಿಸೆಂಬರ್‌ 27ರಂದು ನಡೆದ ದಳಪತಿ ವಿಜಯ್‌ ಅವರ ಕೊನೆಯ ಸಿನಿಮಾದ ‘ಜನನಾಯಗನ್’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭವು ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಿದೆ. ಈ ಅದ್ಭುತ ಕಾರ್ಯಕ್ರಮವು ಮಲೇಷ್ಯಾದಲ್ಲಿ ಅತಿ ಹೆಚ್ಚು ಜನರು ಭಾಗವಹಿಸಿದ ಆಡಿಯೋ ಬಿಡುಗಡೆ ಸಮಾರಂಭ ಎಂಬ ಹೆಗ್ಗಳಿಕೆಯೊಂದಿಗೆ ಅಧಿಕೃತವಾಗಿ 'ಮಲೇಷಿಯನ್ ಬುಕ್ ಆಫ್ ರೆಕಾರ್ಡ್ಸ್'ಗೆ ಸೇರ್ಪಡೆಯಾಗಿದೆ. 'ಜನ ನಾಯಗನ್' ಚಿತ್ರವು ಜನವರಿ 9 ರಂದು ಬಿಡುಗಡೆಯಾಗಲು ಸಿದ್ಧವಾಗಿದ್ದು, ಈ ಐತಿಹಾಸಿಕ ಆಡಿಯೋ ಲಾಂಚ್ ವಿಜಯ್ ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Year Ender 2025: ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್‌ 10 ಸಿನಿಮಾಗಳ ಲಿಸ್ಟ್‌ ಇಲ್ಲಿದೆ ನೋಡಿ

2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಟಾಪ್‌ 10 ಸಿನಿಮಾಗಳ ಪಟ್ಟಿ

2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಒಂದಷ್ಟು ಉತ್ತಮ ಸಿನಿಮಾಗಳು ತೆರೆಕಂಡು, ಬಾಕ್ಸ್‌ ಆಫೀಸ್‌ನಲ್ಲಿ ಹವಾ ಮಾಡಿವೆ. ಕೆಲವು ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ, ದೊಡ್ಡಮಟ್ಟದ ಕಮಾಯಿ ಮಾಡುವಲ್ಲಿ ಹಿಂದೆ ಬೀಳಲಿಲ್ಲ ಅನ್ನೋದು ವಿಶೇಷ. ಸದ್ಯ ವಿವಿಧ ಭಾಷೆಗಳಲ್ಲಿ ತೆರೆಕಂಡ ಭಾರತದ ‌ಟಾಪ್‌ 10 ಸಿನಿಮಾಗಳ ಕಲೆಕ್ಷನ್‌ ಮಾಹಿತಿ ಇಲ್ಲಿದೆ. ವರ್ಷಾಂತ್ಯದಲ್ಲಿ ತೆರೆಗೆ ಬಂದ ಧುರಂಧರ್‌ ಸಿನಿಮಾವು ಮೊದಲ ಸ್ಥಾನದಲ್ಲಿ ಇದೆ.

Thalapathy Vijay: ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲು:  ಕೆಳಗೆ ಬಿದ್ದ ದಳಪತಿ ವಿಜಯ್‌

Thalapathy Vijay: ನೂಕುನುಗ್ಗಲಿಗೆ ಕೆಳಗೆ ಬಿದ್ದ ದಳಪತಿ ವಿಜಯ್‌!

Malaysia: ಟಿವಿಕೆ ಮುಖ್ಯಸ್ಥ ಮತ್ತು ನಟ ವಿಜಯ್ ಭಾನುವಾರ ದಳಪತಿ ವಿಜಯ್ (Thalapathy Vijay) ಮಲೇಷಿಯಾದಿಂದ ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲಿನಲ್ಲಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದರು. ಮಲೇಷ್ಯಾದಿಂದ ಹಿಂದಿರುಗಿದ ನಂತರ, ಭಾರಿ ಜನಸಮೂಹದಿಂದ ಸುತ್ತುವರೆದಿದ್ದ ( Falls After Being Mobbed ) ವಿಜಯ್ (Vijay), ನಿರ್ಗಮನ ಪ್ರದೇಶದ ಕಡೆಗೆ ನಡೆದುಕೊಂಡು ಹೋದರು ಮತ್ತು ಕಾರನ್ನು ಹತ್ತುವ ಕೆಲವೇ ಕ್ಷಣಗಳ ಮೊದಲು, ಜನಸಂದಣಿ ಹೆಚ್ಚಾದಾಗ ಎಡವಿ ಬಿದ್ದರು.

Suniel Shetty : ಇದೊಂದೇ ಕಾರಣಕ್ಕೆ  40 ಕೋಟಿ ರೂ ಜಾಹೀರಾತು ತಿರಸ್ಕರಿಸಿದ  ಸುನಿಲ್ ಶೆಟ್ಟಿ

ಇದೊಂದೇ ಕಾರಣಕ್ಕೆ 40 ಕೋಟಿ ರೂ ಜಾಹೀರಾತು ತಿರಸ್ಕರಿಸಿದ ಸುನಿಲ್ ಶೆಟ್ಟಿ

Tobacco Brand: ಮೂರು ದಶಕಗಳಿಗೂ ಹೆಚ್ಚಿನ ಕಾಲ ವೃತ್ತಿಜೀವನದೊಂದಿಗೆ, ಸುನಿಲ್ ಶೆಟ್ಟಿ (Suniel Shetty) ಬಹುಮುಖ ನಟನಾಗಿ ಮಾತ್ರವಲ್ಲದೆ ತಮ್ಮ ತತ್ವಗಳಿಂದಲೂ ಖ್ಯಾತಿಯನ್ನು ಗಳಿಸಿದ್ದಾರೆ. ದುಡ್ಡಿಗಿಂತ ನನಗೆ ನನ್ನ ಮೌಲ್ಯ ಮುಖ್ಯ ಎಂದು ಹೇಳಿದ್ದಾರೆ. ಆ ಸಮಯದಲ್ಲಿ ತಂಬಾಕು ಸಂಬಂಧಿತ ಬ್ರ್ಯಾಂಡ್‌ನ ಜಾಹೀರಾತು ನನ್ನ ಬಳಿ ಬಂದಿತ್ತು ಎಂದು ಹೇಳಿರುವ ಸುನಿಲ್ ಶೆಟ್ಟಿ ಆ ಜಾಹೀರಾತಿಗಾಗಿ ಅವರು ನನಗೆ 40 ಕೋಟಿ ಹಣ ಕೊಡಲು ಸಿದ್ಧರಿದ್ದರು ಎಂದು ಹೇಳಿದ್ದಾರೆ.

Bigg Boss Kannada 12: ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್ ನಡುವೆ ಮನಸ್ತಾಪವಿತ್ತಾ? ಕೊನೆಗೂ ಕ್ಲಾರಿಟಿ ಕೊಟ್ಟ ನಟಿ

ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್ ನಡುವೆ ಮನಸ್ತಾಪವಿತ್ತಾ?

snageetha: ಬಿಗ್‌ ಬಾಸ್‌ ಕನ್ನಡ 10 ಶೋನಲ್ಲಿ ಕಾರ್ತಿಕ್‌ ಮಹೇಶ್‌, ಸಂಗೀತಾ ಶೃಂಗೇರಿ ಸಖತ್‌ ಗಮನ ಸೆಳೆದ ಜೋಡಿ. ಇಬ್ಬರ ಮಧ್ಯೆ ಜಗಳ ಆಗಿದೆ ಅಂತ ಗುಲ್ಲಾಗಿತ್ತು. ಕಾರ್ತಿಕ್‌ ಹಾಗೂ ಸಂಗೀತಾ ಮಧ್ಯೆ ಜಗಳ ಆಗಿರಬಹುದು ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೀಗ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದೆ. ಸಂಗೀತಾ ಅವರ ಆಡಿಯೋ ಲಾಂಚ್‌ಗೆ ಕಾರ್ತಿಕ್‌ ಬಂದಿದ್ದಾರೆ. ಸಂಗೀತಾ ಶೃಂಗೇರಿ ಅವರ ಆಲ್ಬಮ್‌ ಸಾಂಗ್‌ ಲಾಂಚ್‌ ಆಗಿದೆ. ಅಲ್ಲಿ ನಮ್ರತಾ ಗೌಡ, ಕಾರ್ತಿಕ್‌ ಮಹೇಶ್‌ ಕೂಡ ಆಗಮಿಸಿದ್ದಾರೆ. ಕಾರ್ತಿಕ್‌ ಅವರು ಸಂಗೀತಾಗೆ ವಿಶ್‌ ಮಾಡಿದ್ದಾರೆ.

Thalapathy Vijay:  ಸಿನಿ ಪಯಣಕ್ಕೆ ದಳಪತಿ ವಿಜಯ್‌ ವಿದಾಯ; ಭಾವುಕರಾಗಿ ಅಭಿಮಾನಿಗಳಿಗೆ ಹೇಳಿದ್ದೇನು?

ಸಿನಿ ಪಯಣಕ್ಕೆ ದಳಪತಿ ವಿಜಯ್‌ ವಿದಾಯ; ಅಭಿಮಾನಿಗಳಿಗೆ ಹೇಳಿದ್ದೇನು?

audio launch : ಕಾಲಿವುಡ್‌ ಸ್ಟಾರ್ ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ದ ಆಡಿಯೋ ಲಾಂಚ್ ಇವೆಂಟ್ ಮಲೇಷ್ಯಾನಲ್ಲಿ ನಡೆಯಿತು. ರಾಜಕೀಯ ಪಕ್ಷ ಸ್ಥಾಪಿಸಿರುವ ವಿಜಯ್ ಅವರು, ‘ಜನ ನಾಯಗನ್’ ತಮ್ಮ ಕೊನೆಯ ಸಿನಿಮಾ ಎಂದು ಘೋಷಣೆ ಮಾಡಿದ್ದಾರೆ. ವಿಜಯ್ ಸಹ ತುಸು ಭಾವುಕವಾಗಿಯೇ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಜನ ನಾಯಗನ್ ನನ್ನ ಕೊನೆಯ ಸಿನಿಮಾ, ಇದನ್ನು ಹೇಳುವುದೇ ನನಗೆ ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ಬೇರೆ ಆಯ್ಕೆ ಇಲ್ಲ ಎಂದರು.

ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !

ಪಕ್ಕದ ದೇಶದಲ್ಲಿ ಮೂರೂಮುಕ್ಕಾಲು ತಾಸು !

ಧುರಂಧರ್ ಬಂದು ಭೇಟಿಯಾದ: ‘ನಮ್ಮ ಪಕ್ಕದ ದೇಶಕ್ಕೆ ಹೋಗೋಣ ಬನ್ನಿ, ಬರೀ ಮೂರೂ ಮುಕ್ಕಾಲು ಗಂಟೆಯೊಳಗೆ ವಾಪಸ್ಸು ಬರೋಣ’ ಅಂದ. ‘ಓ ಗುಡ್ ಡೀಲ್’ ಅಂತ ರಾತ್ರಿ ಒಂಬತ್ತಕ್ಕೆ ಮನೆ ಬಿಟ್ಟೆ. ನಡುರಾತ್ರಿ ಎರಡೂವರೆಗೆ ವಾಪಸ್ಸು ಕರೆದುಕೊಂಡು ಬಂದು ಭಾರತದಲ್ಲಿ ಬಿಟ್ಟು ಹೋದ. ಆಗಿನಿಂದ ಹೊಟ್ಟೇಲಿ, ಎದೇಲಿ, ಮನಸಲ್ಲಿ ಹೇಳಲಾಗದ ಸಂಕಟ.

Love You Muddu OTT:  ರಿಯಲ್ ಲವ್ ಸ್ಟೋರಿ! ʻಲವ್ ಯು ಮುದ್ದುʼ ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ರಿಯಲ್ ಲವ್ ಸ್ಟೋರಿ! ಲವ್ ಯು ಮುದ್ದು ಮೂವಿ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

Siddu Moolimani: ವೀಕೆಂಡ್‌ ಬಂತು ಅಂದರೆ ಒಟಿಟಿ ಪ್ರಿಯರಿಗೆ ಹಬ್ಬ. ಯಾವೆಲ್ಲ ಸಿನಿಮಾಗಳು ಬಂದಿವೆ ಎಂದು ಸಿನಿ ಪ್ರಿಯರು ಸರ್ಚ್‌ ಮಾಡುತ್ತಲೇ ಇರ್ತಾರೆ. ಇದೀಗ ಕನ್ನಡದ ‘ಲವ್ ಯೂ ಮುದ್ದು’ ಸಿನಿಮಾ ಒಟಿಟಿ ಅಂಗಳಕ್ಕೆ ಬಂದಿದೆ. ಸಿದ್ದು ಮೂಲಿಮನಿ ಹಾಗೂ ರೇಷ್ಮಾ ಅಭಿನಯದ ಲವ್ ಯು ಮುದ್ದು ಒಟಿಟಿಗೆ ಎಂಟ್ರಿ ಕೊಟ್ಟಿದೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಖ್ಯಾತಿಯ ನಿರ್ದೇಶಕ ಕುಮಾರ್ ಅವರ ನಿರ್ದೇಶನದ ಅಪರೂಪದ ಪ್ರೇಮಕಥೆ ‘ಲವ್ ಯೂ ಮುದ್ದು’.

The Raja Saab: ಅದ್ಧೂರಿಯಾಗಿ ಜರುಗಿದ  ರಾಜಾ ಸಾಬ್ ಪ್ರೀ-ರಿಲೀಸ್ ಇವೆಂಟ್; ಪ್ರಭಾಸ್‌ ಫ್ಯಾನ್ಸ್‌ಗೆ ನಿರ್ದೇಶಕ ಕೊಟ್ಟ ಭರವಸೆ ಏನು?

ಅದ್ಧೂರಿಯಾಗಿ ಜರುಗಿದ ರಾಜಾ ಸಾಬ್ ಪ್ರೀ-ರಿಲೀಸ್ ಇವೆಂಟ್

Prabhas: ರಾಜಾ ಸಾಬ್ ಮುಂದಿನ ವರ್ಷದ ಅತ್ಯಂತ ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ಇದರಲ್ಲಿ ಪ್ರಭಾಸ್ ನಾಯಕನಾಗಿ ನಟಿಸಿದ್ದು, ಜನವರಿ 9 ರಂದು ಬಿಡುಗಡೆಯಾಗಲಿದೆ. ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಇಡೀ ತಂಡ ಭಾಗವಹಿಸಿತ್ತು. ಪ್ರಭಾಸ್, ಸಹನಟರಾದ ನಿಧಿ ಅಗರ್ವಾಲ್, ಮಾಳವಿಕಾ ಮೋಹನನ್ ಮತ್ತು ರಿದ್ಧಿ ಕುಮಾರ್ ಅವರೊಂದಿಗೆ ಹಾಜರಿದ್ದರು. ನಿರ್ದೇಶಕ ಮಾರುತಿ ಪ್ರಭಾಸ್ ಅವರ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ, ಚಿತ್ರವು ಖಂಡಿತವಾಗಿಯೂ ಅವರ ನಿರೀಕ್ಷೆಗಳಿಗೆ ತಕ್ಕಂತೆ ಇರುತ್ತದೆ ಎಂದು ಭರವಸೆ ನೀಡಿದರು.

Surya Trailer Out: `ಸೂರ್ಯ’ ಸಿನಿಮಾ ಟ್ರೈಲರ್ ರಿಲೀಸ್ ; ಉತ್ತರ ಕರ್ನಾಟಕ ಸೊಗಡಿನ ಒಂದೊಳ್ಳೆ ಕಥೆ

`ಸೂರ್ಯ’ ಸಿನಿಮಾ ಟ್ರೈಲರ್ ರಿಲೀಸ್ ; ಉತ್ತರ ಕರ್ನಾಟಕ ಸೊಗಡಿನ ಒಂದೊಳ್ಳೆ ಕಥೆ

Kannada Movie: ಉತ್ತರ ಕರ್ನಾಟಕ ಭಾಗದ ಸಾಕಷ್ಟು ನಿರ್ಮಾಪಕ, ನಿರ್ದೇಶಕರು ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅದೇ ರೀತಿ ಇದೀಗ ಬೆಳಗಾವಿ ಮೂಲದ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರೂ ತಮ್ಮ ಕೊಡುಗೆ ನೀಡಲು ಅಣಿಯಾಗಿದ್ದಾರೆ.‌ ನಂದಿ ಸಿನಿಮಾಸ್ ಅಡಿಯಲ್ಲಿ ಅವರು `ಸೂರ್ಯ' ಎಂಬ ಮಾಸ್ ಲವ್ ಸ್ಟೋರಿ ಒಳಗೊಂಡ ಚಿತ್ರವನ್ನು ನಿರ್ಮಿಸಿದ್ದಾರೆ. ಯುವನಟ ಪ್ರಶಾಂತ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಹರ್ಷಿತಾ ನಾಯಕಿ ಪಾತ್ರ ನಿರ್ವಹಿಸಿದ್ದಾರೆ.

Vrusshabha Movie: ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್!  'ವೃಷಭ' ಚಿತ್ರದ ಆ ಪಾತ್ರ ಯಾವುದು?

ಮೋಹನ್ ಲಾಲ್ ಜೊತೆ ಗಮನ ಸೆಳೆದ ಸಮರ್ಜಿತ್ ಲಂಕೇಶ್!

Mohan Lal: ಮೋಹನ್ ಲಾಲ್ ನಟನೆಯ ‘ವೃಷಭ’ ಚಿತ್ರಕ್ಕೆ ಕನ್ನಡದ ನಂದ ಕಿಶೋರ್ ನಿರ್ದೇಶನ ಇದೆ. ಈ ಸಿನಿಮಾಗೆ ರಾಗಿಣಿ ನಾಯಕಿ. ಖ್ಯಾತ ನಿರ್ದೇಶಕ ಇಂದ್ರಜಿತ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಡಿಸೆಂಬರ್ 25 ರಂದು ಬಿಡುಗಡೆಯಾದ 'ವೃಷಭ' ಸಿನಿಮಾ ಭಾರಿ ಸಂಚಲನ ಮೂಡಿಸುತ್ತಿದೆ. ಈ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ಒಂದು ಪ್ರಮುಖ ಅಂಶವೆಂದರೆ ಅದು ಸಮರ್ಜಿತ್ ಲಂಕೇಶ್ ಅವರ ಅಭಿನಯ.

Battle Of Galwan Teaser: ಬರ್ತ್‌ಡೇ ದಿನವೇ ಬ್ಯಾಟಲ್ ಆಫ್ ಗಲ್ವಾನ್ ಟೀಸರ್ ಔಟ್‌! ಸಲ್ಮಾನ್ ಖಾನ್ ಫ್ಯಾನ್ಸ್‌ ಖುಷ್‌

ಬ್ಯಾಟಲ್ ಆಫ್ ಗಲ್ವಾನ್ ಟೀಸರ್ ಔಟ್‌! ಸಲ್ಮಾನ್ ಖಾನ್ ಫ್ಯಾನ್ಸ್‌ ಖುಷ್‌

Battle of Galwan: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಇಂದು (ಡಿ.27) 60ನೇ ಜನ್ಮದಿನದ ಸಂಭ್ರಮ. ಹುಟ್ಟುಹಬ್ಬದ ಪ್ರಯುಕ್ತ ಇವರ ನಟನೆಯ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಟೀಸರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಮುಂಬೈನ ವರ್ಲಿ ಸಮುದ್ರದ ತಡದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಗಣ್ಯರೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

Kiccha Sudeep: ನನ್ನ ಮಗಳು ನನಗಿಂತ ಸ್ಟ್ರಾಂಗ್! ವೇಸ್ಟ್ ನನ್ಮಕ್ಳ ಬಗ್ಗೆ ಮಾತಾಡಿ ಟೈಮ್‌ ವೇಸ್ಟ್‌ ಮಾಡಲ್ಲ ಎಂದ ಕಿಚ್ಚ

ನನ್ನ ಮಗಳು ನನಗಿಂತ ಸ್ಟ್ರಾಂಗ್! ಟ್ರೋಲಿಗರ ಬಗ್ಗೆ ಕಿಚ್ಚನ ಖಡಕ್‌ ಮಾತು

Sanvi Sudeep: ಕಿಚ್ಚ ಸುದೀಪ್‌ ನಟಿಸಿರುವ 'ಮಾರ್ಕ್' ಸಿನಿಮಾ ರಿಲೀಸ್ ಆಗಿದೆ. ಮಾರ್ಕ್ ಸಿನಿಮಾಗೆ ಪೈರಸಿ ಮಹಾಮಾರಿ ಕಂಟಕವಾಗಿ ಪರಿಣಮಿಸುತ್ತಿದೆ. ಇದೀಗ ಸಿನಿಮಾ ಸಕ್ಸೆಸ್‌ ವಿಚಾರವಾಗಿ ಪ್ರೆಸ್‌ ಮೀಟ್‌ ತಂಡ ಆಯೋಜಿಸಿದ್ದು, ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಕಿಚ್ಚ ಸುದೀಪ್‌ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಸೋಶಿಯಲ್ ಮೀಡಿಯಾದಲ್ಲಿ ಕೆಲವು ನೆಟ್ಟಿಗರು ಖಾಲಿ ಥಿಯೇಟರ್‌ಗಳ ವಿಡಿಯೋವನ್ನು ಶೇರ್ ಮಾಡುತ್ತಿರೋ ಬಗ್ಗೆ ಅಭಿಪ್ರಾಯಗಳನ್ನು ಕೇಳಿದ್ದರು.

Kiccha Sudeep: ಹೊಡೆದ್ರೆ ಕಪಾಳಕ್ಕೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನಲ್ಲ! ದರ್ಶನ್‌ ಪತ್ನಿಗೆ ಸುದೀಪ್‌ ತಿರುಗೇಟು

ಹೊಡೆದ್ರೆ ಕಪಾಳಕ್ಕೆ ಹೊಡೆಸಿಕೊಳ್ಳುವಷ್ಟು ಒಳ್ಳೆಯವನಲ್ಲ! ಸುದೀಪ್‌ ತಿರುಗೇಟು

Vijaya Lakshmi Darshan: ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಹಾಗೂ ನಟ ಕಿಚ್ಚ ಸುದೀಪ್‌ ಅವರ ಇತ್ತೀಚಿನ ಹೇಳಿಕೆಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಫ್ಯಾನ್‌ ವಾರ್‌ ಅಗಿತ್ತು. ಅಷ್ಟೇ ಅಲ್ಲ ಸುದೀಪ್‌ ಅವರು ಯುದ್ಧಕ್ಕೆ ಸಿದ್ದ ಅನ್ನೋ ಮಾತು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಇದಾದ ಬಳಿಕ ವಿಜಯಲಕ್ಷ್ಮೀ ಅವರಿಗೆ ಸಾಕಷ್ಟು ಅಶ್ಲೀಲ ಕಮೆಂಟ್‌ಗಳು ಬಂದವು. ಪೊಲೀಸರಿಗೆ ದೂರು ಸಹ ನೀಡಿದ್ದರು. ದರ್ಶನ್‌ ಪತ್ನಿ, ಕ್ಲಾಸ್‌ ಫ್ಯಾನ್ಸ್‌ಗೆ ಇದು ಎಚ್ಚರಿಕೆಯ ಸಂದೇಶ ಎಂದು ಪೋಸ್ಟ್‌ ಹಂಚಿಕೊಂಡಿದ್ದರು. ಈ ಬಗ್ಗೆ ಸುದೀಪ್‌ ಈಗ ಪ್ರತಿಕ್ರಿಯೆ ನೀಡಿದ್ದಾರೆ.

Salman Khan: ಸಲ್ಮಾನ್ ಖಾನ್‌ ಬರ್ತ್‌ಡೇ; ಅದ್ದೂರಿ ಪಾರ್ಟಿಯಲ್ಲಿ ಧೋನಿ ಸೇರಿದಂತೆ ಯಾರೆಲ್ಲ ಭಾಗಿ ಆಗಿದ್ರು?

ಸಲ್ಮಾನ್ ಖಾನ್‌ ಬರ್ತ್‌ಡೇ; ಪಾರ್ಟಿಯಲ್ಲಿ ಧೋನಿ ಸೇರಿದಂತೆ ಯಾರೆಲ್ಲ ಭಾಗಿ?

Dhoni: ನಟ ಸಲ್ಮಾನ್ ಖಾನ್ ಅವರು ಇಂದು (ಡಿಸೆಂಬರ್ 27) ತಮ್ಮ 60ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಪನ್ವೇಲ್ ಫಾರ್ಮ್‌ಹೌಸ್‌ನಲ್ಲಿ 60 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ತಮ್ಮ ಪನ್ವೇಲ್​ ಫಾರ್ಮ್​​ಹೌಸ್​​ನಲ್ಲಿ ಅದ್ದೂರಿ ಪಾರ್ಟಿ ಆಯೋಜನೆ ಮಾಡಿದ್ದರು ಎಂಬುದು ವಿಶೇಷ. ಆಚರಣೆಯಲ್ಲಿ ಭಾಗವಹಿಸಲು ಹಲವಾರು ಅತಿಥಿಗಳು ಫಾರ್ಮ್‌ಹೌಸ್‌ಗೆ ಆಗಮಿಸುತ್ತಿರುವುದು ಕಂಡುಬಂದಿದೆ.

Baahubali The Epic OTT release: OTTಗೆ ಬಾಹುಬಲಿ ಎಪಿಕ್; ಸ್ಟ್ರೀಮಿಂಗ್‌ ಎಲ್ಲಿ?

OTTಗೆ ಬಾಹುಬಲಿ ಎಪಿಕ್; ಸ್ಟ್ರೀಮಿಂಗ್‌ ಎಲ್ಲಿ?

Baahubali The Epic OTT: ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಾಹುಬಲಿ ಭಾಗ 1 ಮತ್ತು ಭಾಗ 2 ಸಿನಿಮಾಗಳ ಸಂಕಲನವಾಗಿರುವ 3 ಗಂಟೆ 40 ನಿಮಿಷದ ಬಾಹುಬಲಿ ಎಪಿಕ್ ಇದೀಗ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಅಭಿಮಾನಿಗಳು OTT ಸ್ಟ್ರೀಮಿಂಗ್‌ಗಾಗಿ ಕಾತರದಿಂದ ಕಾಯುತ್ತಿರುವ ಸಮಯದಲ್ಲಿ, ಈ ಚಿತ್ರವು ಥಿಯೇಟ್ರಿಕಲ್ ಬಿಡುಗಡೆಯಾದ 8 ವಾರಗಳ ನಂತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಬಂದಿದೆ.

Kailash Kher: 'ಪ್ರಾಣಿಗಳಂತೆ ವರ್ತಿಸುವುದನ್ನು ನಿಲ್ಲಿಸಿ':  ಸಂಗೀತ ಕಾರ್ಯಕ್ರಮದಲ್ಲಿ ನೂಕುನುಗ್ಗಲು,  ಅರ್ಧಕ್ಕೆ ನಡೆದ  ಕೈಲಾಶ್ ಖೇರ್

ಸಂಗೀತ ಕಾರ್ಯಕ್ರಮದಲ್ಲಿ ನೂಕುನುಗ್ಗಲು, ಅರ್ಧಕ್ಕೆ ನಡೆದ ಕೈಲಾಶ್ ಖೇರ್

Gwalior Concert: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನುಮ ದಿನಾಚರಣೆಯ ಸಂದರ್ಭದಲ್ಲಿ ಪ್ರದರ್ಶನ ನೀಡಲು ಗ್ವಾಲಿಯರ್‌ಗೆ ಬಂದಿದ್ದರು ಗಾಯಕ ಕೈಲಾಶ್ ಖೇರ್ . ಗ್ವಾಲಿಯರ್‌ನಲ್ಲಿ ಆಯೋಜಿಸಲಾಗಿದ್ದ ಈ ಸಂಗೀತ ಕಾರ್ಯಕ್ರಮವನ್ನು ಗಾಯಕ ಕೈಲಾಶ್ ಖೇರ್ ಹಠಾತ್ತನೆ ಕೊನೆಗೊಳಿಸಬೇಕಾಯಿತು. ಪದೇ ಪದೇ ಬ್ಯಾರಿಕೇಡ್‌ಗಳನ್ನು ಅನೇಕ ಪ್ರೇಕ್ಷಕರು ಹಾರಿ ಅಶಿಸ್ತು ತೋರಿದ್ದರು. ಹೀಗಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದೇ ವೇದಿಕೆಯಿಂದ ಗಾಯಕ ಹೊರಟು ಹೋಗಿದ್ದಾರೆ.

Loading...