ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Keerthy Suresh: ಕೀರ್ತಿ ಸುರೇಶ್ ನಟನೆಯ ‘ರಿವಾಲ್ವರ್ ರೀಟಾ’ ಮೂವಿ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌! ಸ್ಟ್ರೀಮಿಂಗ್‌ ಎಲ್ಲಿ?

ಕೀರ್ತಿ ಸುರೇಶ್ ‘ರಿವಾಲ್ವರ್ ರೀಟಾ’ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Keerthy Suresh : ಥಿಯೇಟ್ರಿಕಲ್ ಪ್ರದರ್ಶನದ ನಂತರ, ಈ ಚಿತ್ರವು ಈಗ OTT ಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆಂಥೋನಿ ವರ್ಗೀಸ್ ಪೆಪೆ ಅವರು ನಟಿ ಕೀರ್ತಿ ಸುರೇಶ್ ಅವರೊಂದಿಗೆ ಮೊದಲ ಬಾರಿಗೆ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ. ಇದೀಗ ಸಿನಿಮಾ ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

Year Ender 2025: ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು; ʼಕಾಂತಾರʼ ಚಿತ್ರಕ್ಕೆ ಎಷ್ಟನೇ ಸ್ಥಾನ?

ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು

Google Search: ನಾವು ಅಧಿಕೃತವಾಗಿ 2025ರ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ ಮತ್ತು ಗೂಗಲ್ ಇಂಡಿಯಾ ಈ ವರ್ಷದ ಅತಿ ಹೆಚ್ಚು ಹುಡುಕಿದ ಟಾಪ್ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಬಝ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಮತ್ತು ವರ್ಷವಿಡೀ ಗೂಗಲ್‌ನ ಹುಡುಕಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟಾಪ್ 10 ಭಾರತೀಯ ಚಲನಚಿತ್ರಗಳು ಇಲ್ಲಿವೆ.

Shivarajkumar: ಶೀಘ್ರದಲ್ಲೇ ʻಜೈಲರ್‌ 2ʼ ಶೂಟಿಂಗ್‌ಗೆ ಶಿವಣ್ಣ ಹಾಜರ್; ಫ್ಯಾನ್ಸ್‌ಗೆ ಥ್ರಿಲ್ಲಿಂಗ್‌ ನ್ಯೂಸ್‌ ಕೊಟ್ಟ ʻಹ್ಯಾಟ್ರಿಕ್‌ ಹೀರೋʼ

Jailer 2 Update: ರಜನಿಕಾಂತ್‌ ಜೊತೆ ಶೂಟಿಂಗ್‌ಗೆ ಶಿವಣ್ಣ ರೆಡಿ

Jailer 2 Movie Update: 'ಜೈಲರ್' ಸಿನಿಮಾದಲ್ಲಿನ 'ನರಸಿಂಹ' ಪಾತ್ರದ ಮೂಲಕ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದ್ದ ಶಿವರಾಜ್‌ಕುಮಾರ್, ಈಗ 'ಜೈಲರ್ 2' ಚಿತ್ರದ ಶೂಟಿಂಗ್‌ಗೆ ಸಜ್ಜಾಗಿದ್ದಾರೆ. ಜನವರಿ ಎರಡನೇ ವಾರದಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿರುವುದಾಗಿ ಶಿವಣ್ಣ ಖಚಿತಪಡಿಸಿದ್ದಾರೆ.

Drishyam 3 Release Date: ದೃಶ್ಯಂ 3 ರಿಲೀಸ್‌ ಡೇಟ್‌ ಅನೌನ್ಸ್‌; ಮೋಹನ್‌ ಲಾಲ್‌ ಮುಂಚೆಯೇ  ಬಿಗ್‌ ಅಪ್‌ಡೇಟ್‌ ಕೊಟ್ಟ ಅಜಯ್ ದೇವಗನ್

ಮೋಹನ್‌ ಲಾಲ್‌ ಮುಂಚೆಯೇ ಬಿಗ್‌ ಅಪ್‌ಡೇಟ್‌ ಕೊಟ್ಟ ಅಜಯ್ ದೇವಗನ್

Drishyam: ದೃಶ್ಯಂ 3 ನಿರ್ಮಾಪಕರು ಅಜಯ್ ದೇವಗನ್ ಅವರ ಬಹುನಿರೀಕ್ಷಿತ ಚಿತ್ರದ ಬಿಡುಗಡೆ (Release Date) ದಿನಾಂಕವನ್ನು ಘೋಷಿಸಿದ್ದಾರೆ. ಕನ್ನಡದ ಅವತರಣಿಕೆಯಲ್ಲಿ ಕನ್ನಡ ಚಿತ್ರರಂಗದ ಕನಸುಗಾರ ಡಾ.ವಿ.ರವಿಚಂದ್ರನ್ ಅತ್ಯದ್ಭುತವಾಗಿ ಅಭಿನಯಿಸಿದ್ದರು. ಹಿಂದಿಯಲ್ಲಿ ಅಜಯ್ ದೇವಗನ್ ಪಾತ್ರಕ್ಕೆ ಜೀವ ತುಂಬಿದ್ದರು. ಮಲಯಾಳಂನಲ್ಲಿ ತೆರೆಗೆ ಬಂದು ಆ ನಂತರ ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಿಗೆ ಕೂಡ ರಿಮೇಕ್ಆ ಗಿತ್ತು ಚಿತ್ರ.

Gilli Nata: ʻಬಿಗ್‌ ಬಾಸ್‌ ಮನೆಯಲ್ಲಿ ದಿ ಡೆವಿಲ್‌ ಸಿನಿಮಾ ಟ್ರೇಲರ್‌ ಪ್ರಸಾರ ಮಾಡಿಲ್ಲವೇಕೆʼ; ಗಿಲ್ಲಿ ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ!

Gilli Nata: ಬಿಗ್ ಬಾಸ್‌ನಲ್ಲಿ 'ಡೆವಿಲ್' ಟ್ರೇಲರ್‌ ಹಾಕದಿರಲು ಇದೇ ಕಾರಣ!

BBK 12 Vs The Devil Controversy: ಬಿಗ್ ಬಾಸ್ ಮನೆಯಲ್ಲಿ ಇತರ ಸ್ಪರ್ಧಿಗಳ ಸಿನಿಮಾಗಳ ಪ್ರಚಾರ ನಡೆಯುತ್ತಿದ್ದರೂ, ಗಿಲ್ಲಿ ನಟ ಅಭಿನಯದ 'ದಿ ಡೆವಿಲ್' ಚಿತ್ರದ ಟ್ರೇಲರ್ ಪ್ರಸಾರ ಮಾಡಿರಲಿಲ್ಲ. ಇದು ಅಭಿಮಾನಿಗಳ ವಲಯದಲ್ಲಿ ಅಸಮಾಧಾನ ಮೂಡಿಸಿತ್ತು.

ʻಧುರಂಧರ್‌ʼ ಚಿತ್ರದ ಕಲೆಕ್ಷನ್‌ ಬಗ್ಗೆ ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ನಿರ್ಮಾಪಕರು; 17 ದಿನಗಳಿಗೆ ಆದ ಗಳಿಕೆ ಇಷ್ಟೊಂದಾ?

ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಸುನಾಮಿ; 17 ದಿನಕ್ಕೆ ಎಷ್ಟಾಯ್ತು ಕಲೆಕ್ಷನ್?

Dhurandhar Box Office Report: ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ 17 ದಿನಗಳಲ್ಲಿ ವಿಶ್ವಾದ್ಯಂತ 870.36 ಕೋಟಿ ರೂ. ಗಳಿಸುವ ಮೂಲಕ 2025ರ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರತಂಡ ನೀಡಿದ ಅಧಿಕೃತ ಮಾಹಿತಿಯಂತೆ, ಭಾರತದಲ್ಲಿ ಈ ಚಿತ್ರವು 683.46 ಕೋಟಿ ರೂ. (ಗ್ರಾಸ್) ಹಾಗೂ ವಿದೇಶದಲ್ಲಿ 186.90 ಕೋಟಿ ರೂ. ಗಳಿಸಿದೆ.

ಹಾಲಿವುಡ್‌ನ ‘ಅನಕೊಂಡ’ ಚಿತ್ರದ ಕರ್ನಾಟಕದ ವಿತರಣೆ ಹಕ್ಕುಗಳನ್ನು ಪಡೆದ ಹೊಂಬಾಳೆ ಫಿಲ್ಮ್ಸ್‌

ಹೊಂಬಾಳೆ ಫಿಲ್ಮ್ಸ್‌ ಪಾಲಿಗೆ ಹಾಲಿವುಡ್‌ನ ‘ಅನಕೊಂಡ’ ಚಿತ್ರದ ವಿತರಣಾ ಹಕ್ಕು!

Hombale Films Update: ಸ್ಯಾಂಡಲ್‌ವುಡ್‌ನ ಪ್ರತಿಷ್ಠಿತ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಹಾಲಿವುಡ್‌ನ ಬಹುನಿರೀಕ್ಷಿತ ‘ಅನಕೊಂಡ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಿಸಲಿದೆ. 1997ರ ಮೂಲ ಚಿತ್ರದ ಮೆಟಾ-ರಿಬೂಟ್ ಆಗಿರುವ ಈ ಸಿನಿಮಾ ಆಕ್ಷನ್-ಕಾಮಿಡಿ ಶೈಲಿಯಲ್ಲಿದ್ದು, ಪಾಲ್ ರಡ್ ಮತ್ತು ಜಾಕ್ ಬ್ಲಾಕ್ ಅಂತಹ ಸ್ಟಾರ್ ನಟರು ಅಭಿನಯಿಸಿದ್ದಾರೆ.

Vrusshabha: ʻಸಮರ್ಜಿತ್ ಲಂಕೇಶ್ ಸಿನಿಮಾ ಗೂಳಿಯಂತೆ ಮುನ್ನುಗ್ಗಲಿʼ ಎಂದ ಡಿಕೆ ಶಿವಕುಮಾರ್; ಬಾಲಿವುಡ್‌ ಮಂದಿಯ ಆ ಮಾತು ಕೇಳಿ ಖುಷಿಯಾಗಿದ್ದ ಡಿಸಿಎಂ!

ʻಸಮರ್ಜಿತ್ ಲಂಕೇಶ್ ಸಿನಿಮಾ ಗೂಳಿಯಂತೆ ಮುನ್ನುಗ್ಗಲಿʼ- DCM ಡಿಕೆ ಶಿವಕುಮಾರ್

Vrusshabha Movie Update: ಮಲಯಾಳಂ ನಟ ಮೋಹನ್‌ಲಾಲ್‌ ಹಾಗೂ ಸಮರ್ಜಿತ್ ಲಂಕೇಶ್ ಅಭಿನಯದ 'ವೃಷಭ' ಚಿತ್ರವು ಡಿಸೆಂಬರ್ 25ರಂದು ತೆರೆಗೆ ಬರುತ್ತಿದೆ. ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಭಾಗವಹಿಸಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, ಸಮರ್ಜಿತ್ ಅವರ ಮೊದಲ ಚಿತ್ರಕ್ಕೆ ಶುಭ ಹಾರೈಸಿದರು. "ವೃಷಭ ಎಂದರೆ ಗೂಳಿ, ಈ ಸಿನಿಮಾ ಗೂಳಿಯಂತೆ ದೇಶಾದ್ಯಂತ ಸದ್ದು ಮಾಡಲಿ" ಎಂದು ಹಾರೈಸಿದ್ದಾರೆ.

ಪಿವಿ ಸಿಂಧು ಮತ್ತು ವಿಕ್ರಾಂತ್ ಮಾಸ್ಸಿ ಅಭಿನಯದ ಹೊಚ್ಚ ಹೊಸ ‘ವೇರ್ ಯುವರ್ ಸ್ಟೋರಿ’ ಜಾಹೀರಾತು ಅಭಿಯಾನ ಬಿಡುಗಡೆ ಮಾಡಿದ ಟೈಟಾನ್

ಜಾಹೀರಾತು ಅಭಿಯಾನ ಬಿಡುಗಡೆ ಮಾಡಿದ ಟೈಟಾನ್

ಟೈಟಾನ್ ಸಂಸ್ಥೆಯು ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ನಟ ವಿಕ್ರಾಂತ್ ಮಾಸ್ಸಿ ಅಭಿನಯಿಸಿರುವ ‘ವೇರ್ ಯುವರ್ ಸ್ಟೋರಿ’ ಎಂಬ ಜಾಹೀರಾತು ಅಭಿಯಾನವನ್ನು ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಹೇಳಲಿಕ್ಕೆ ಒಂದು ಕಥೆ ಇರುತ್ತದೆ. ಆ ಕಥೆ ಅವರು ಯಾರು ಎಂಬುದರಿಂದ, ಅವರು ಹೊಂದಿರುವ ನಂಬಿಕೆಗಳಿಂದ ಮತ್ತು ಅವರು ಮಾಡುವ ಆಯ್ಕೆಗಳಿಂದ ಹುಟ್ಟಿಕೊಳ್ಳುತ್ತದೆ. ಅದು ಅವರ ಸತ್ಯ ಮತ್ತು ಅವರ ನಿಜ ವ್ಯಕ್ತಿತ್ವ, ಆ ವ್ಯಕ್ತಿತ್ವವೇ ಅವರ ಸ್ಟೈಲ್ ಅನ್ನು ರೂಪಿಸುತ್ತದೆ.

Kiccha Sudeep: ʻಯುದ್ಧಕ್ಕೆ ರೆಡಿʼ ಎಂದು ಸುದೀಪ್‌ ಹೇಳಿದ್ದು ಯಾರಿಗೆ? ಚಕ್ರವರ್ತಿ ಚಂದ್ರಚೂಡ್‌ ಬಾಯಿಬಿಟ್ಟ ಸತ್ಯವಿದು!

ʻಯುದ್ಧಕ್ಕೆ ರೆಡಿʼ ಅಂತ ಸುದೀಪ್ ಹೇಳಿದ್ದು ಯಾರಿಗೆ ಗೊತ್ತಾ? ಇಲ್ಲಿದೆ ಸತ್ಯ

Sudeep War Statement: ಹುಬ್ಬಳ್ಳಿಯಲ್ಲಿ ಸುದೀಪ್ ಅವರು "ಯುದ್ಧಕ್ಕೆ ಸಿದ್ಧ" ಎಂದು ಹೇಳಿದ್ದು ಯಾರ ವಿರುದ್ಧ ಎಂಬ ಗೊಂದಲಕ್ಕೆ ಚಕ್ರವರ್ತಿ ಚಂದ್ರಚೂಡ್ ತೆರೆ ಎಳೆದಿದ್ದಾರೆ. ಸುದೀಪ್ ಅವರ ಈ ಹೇಳಿಕೆ ಯಾವುದೇ ವ್ಯಕ್ತಿಯ ವಿರುದ್ಧವಲ್ಲ, ಬದಲಿಗೆ ಚಿತ್ರರಂಗವನ್ನು ಕಾಡುತ್ತಿರುವ ಪೈರಸಿ, ಪೇಯ್ಡ್ ನೆಗೆಟಿವ್ ರಿವ್ಯೂ ಮತ್ತು ಚಿತ್ರಮಂದಿರಗಳಲ್ಲಿ ನಡೆಯುವ ಅಸಹ್ಯಕರ ವರ್ತನೆಗಳ ವಿರುದ್ಧ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

BBK 12: ತಮ್ಮೂರಿನ ಹುಡುಗಿ ರಕ್ಷಿತಾ ಶೆಟ್ಟಿಗೆ ಚೈತ್ರಾ ಕುಂದಾಪುರ ಸಪೋರ್ಟ್‌ ಮಾಡಲಿಲ್ವಾ? ಫೈರ್‌ ಬ್ರ್ಯಾಂಡ್‌ ಕೊಟ್ಟ ಉತ್ತರ ಇದು!

BBK 12: ಕರಾವಳಿಯ ರಕ್ಷಿತಾ ಶೆಟ್ಟಿಗೆ ಚೈತ್ರಾ ಸಪೋರ್ಟ್‌ ಮಾಡಬೇಕಿತ್ತೇ?

Chaitra Kundapura Interview: ಬಿಗ್ ಬಾಸ್ ಮನೆಯಿಂದ ಹೊರಬಂದಿರುವ ಚೈತ್ರಾ ಕುಂದಾಪುರ ಅವರು ರಕ್ಷಿತಾ ಶೆಟ್ಟಿ ಕುರಿತಾದ ಪ್ರಶ್ನೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. ರಕ್ಷಿತಾ ಮತ್ತು ತಾವು ಒಂದೇ ಊರಿನವರಾಗಿದ್ದರೂ (ಉಡುಪಿ), ಮನೆಯೊಳಗೆ ಅವರ ಪರವಾಗಿ 'ಫೇವರಿಸಂ' ಮಾಡುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Tamannaah Bhatia : ಕೊನೆ ಕ್ಷಣದಲ್ಲಿ 'ಧುರಂಧರ್' ಸಿನಿಮಾದಿಂದ ತಮನ್ನಾ ಔಟ್‌ ಆಗಿದ್ದೇಕೆ?

ಕೊನೆ ಕ್ಷಣದಲ್ಲಿ'ಧುರಂಧರ್' ಸಿನಿಮಾದಿಂದ ತಮನ್ನಾ ಔಟ್‌ ಆಗಿದ್ದೇಕೆ?

Dhurandhar song Shararat: ರಣವೀರ್ ಸಿಂಗ್ ಅವರ 'ಧುರಂಧರ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಆದಿತ್ಯ ಧರ್ ಅವರ ಧುರಂಧರ್ ಚಿತ್ರದ ಸಂಗೀತ ಕೂಡ ಚಿತ್ರದಷ್ಟೇ ಗಮನ ಸೆಳೆಯುತ್ತಿದೆ. ಶೀರ್ಷಿಕೆ ಗೀತೆ ವೈರಲ್ ಹಿಟ್ ಆಗಿದ್ದರೂ, ಇತರ ಹಾಡುಗಳು ಸಹ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಇವುಗಳಲ್ಲಿ ಆಯೇಷಾ ಖಾನ್ ಮತ್ತು ಕ್ರಿಸ್ಟಲ್ ಡಿ'ಸೋಜಾ ಚಿತ್ರೀಕರಿಸಿದ ಶರಾರತ್ ಕೂಡ ಒಂದು. ಈಗ, ಹಾಡಿನ ನೃತ್ಯ ಸಂಯೋಜಕರು ನೃತ್ಯಕ್ಕೆ ಮೂಲ ಆಯ್ಕೆ ತಮನ್ನಾ ಭಾಟಿಯಾ ಆಗಿದ್ದರು ಎಂದು ಬಹಿರಂಗಪಡಿಸಿದ್ದಾರೆ.

Samantha Ruth Prabhu: ನಟಿ ನಿಧಿ ಅಗರ್ವಾಲ್ ಬೆನ್ನಲ್ಲೇ ಸಮಂತಾ ಮೇಲೆ ಮುಗಿ ಬಿದ್ದ ಜನ! ಫ್ಯಾನ್ಸ್‌ ಅತಿರೇಕದ ವರ್ತನೆಗೆ ಭಾರಿ ಟೀಕೆ

ನಟಿ ನಿಧಿ ಅಗರ್ವಾಲ್ ಬೆನ್ನಲ್ಲೇ ಸಮಂತಾ ಮೇಲೆ ಮುಗಿ ಬಿದ್ದ ಜನ!

Samantha actress: ರೆಡ್ಡಿಟ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಸಮಂತಾ ರೇಷ್ಮೆ ಸೀರೆಯಲ್ಲಿ ವೇದಿಕೆಯಿಂದ ತನ್ನ ಕಾರಿನ ಕಡೆಗೆ ಬರುತ್ತಿರುವುದು ಕಂಡುಬಂದಿದೆ. ಜನಸಂದಣಿ ತುಂಬಾ ದೊಡ್ಡದಾಗಿದ್ದು, ನಿಯಂತ್ರಿಸಲಾಗದಷ್ಟು ಜನಸಮೂಹವಿತ್ತು, ತನ್ನ ಭದ್ರತಾ ಸಿಬ್ಬಂದಿಯ ಸಹಾಯವಿಲ್ಲದೆ ನಡೆಯಲು ನಟಿ ಕಷ್ಟಪಟ್ಟರು. ಆದರೂ, ಅವರು ಮುಗುಳ್ನಗುತ್ತಾ ತನ್ನ ಶಾಂತತೆಯನ್ನು ಕಾಯ್ದುಕೊಂಡರು.

ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ನಟ ರವಿ ತೇಜ; ಈ ಬಾರಿ ಸಂಭಾವನೆಯನ್ನೇ ಮುಟ್ಟದ 'ಮಾಸ್‌ ಮಹಾರಾಜ', ಕಾರಣವೇನು ಗೊತ್ತಾ?

ಸತತ ಸೋಲಿನಿಂದ ಕಂಗೆಟ್ಟ ನಟ ರವಿ ತೇಜ! ಅದಕ್ಕಾಗಿ ತಗೊಂಡ್ರು ಹೊಸ ನಿರ್ಧಾರ

Ravi Teja: ತೆಲುಗು ನಟ ರವಿ ತೇಜ ಕಳೆದ ಎರಡು ವರ್ಷಗಳಲ್ಲಿ ಐದು ಸಿನಿಮಾಗಳ ಸೋಲನ್ನು ಅನುಭವಿಸಿದ್ದಾರೆ. ಹೀಗಾಗಿ, ಕಿಶೋರ್ ತಿರುಮಲ ನಿರ್ದೇಶನದ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾದ ಗೆಲುವಿಗಾಗಿ ಅವರು ಕಾತರಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಅನ್ನೋದು ವಿಶೇಷ.

ಶುರುವಾಯ್ತು 'ಮಾರ್ಕ್‌' - '45' ಸಿನಿಮಾಗಳ ಅಡ್ವಾನ್ಸ್‌ ‌ಟಿಕೆಟ್‌ ಬುಕಿಂಗ್;‌ ಇಲ್ಲೊಂದು ಸಣ್ಣ ಟ್ವಿಸ್ಟ್‌ ಇದೆ, ನೀವು ಅದನ್ನು ಗಮನಿಸಿದ್ರಾ?

'ಮಾರ್ಕ್‌' - '45' ಸಿನಿಮಾಗಳ ಅಡ್ವಾನ್ಸ್‌ ‌ಟಿಕೆಟ್‌ ಬುಕಿಂಗ್ ಶುರು!

Kannada Box Office Updates: ಡಿಸೆಂಬರ್ 25ರಂದು ಏಕಕಾಲಕ್ಕೆ ತೆರೆಕಾಣಲಿರುವ '45' ಮತ್ತು 'ಮಾರ್ಕ್' ಸಿನಿಮಾಗಳ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದೆ. 45 ಸಿನಿಮಾ ಒಂದು ದಿನ ಮೊದಲೇ ಅಂದರೆ ಡಿಸೆಂಬರ್ 24ರ ಸಂಜೆ 7 ಗಂಟೆಯಿಂದಲೇ 'ಪೇಯ್ಡ್ ಪ್ರೀಮಿಯರ್' ಶೋಗಳನ್ನು ಆರಂಭಿಸುತ್ತಿದೆ. ‌

Mark: ʻಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ, ನಾವು ಯುದ್ಧಕ್ಕೆ ಸಿದ್ಧʼ; ಹುಬ್ಬಳ್ಳಿಯಲ್ಲಿ ಗುಡುಗಿದ ʻಕಿಚ್ಚʼ ಸುದೀಪ್‌!

Mark Movie: ಹುಬ್ಬಳ್ಳಿಯಲ್ಲಿ ಗುಡುಗಿದ ʻಕಿಚ್ಚʼ ಸುದೀಪ್‌! ಯಾರ ವಿರುದ್ಧ?

Kiccha Sudeep: ಕಿಚ್ಚ ಸುದೀಪ್ ಅವರ 'ಮಾರ್ಕ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. "ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ, ಯುದ್ಧಕ್ಕೆ ಸಿದ್ಧ" ಎಂದು ಹೇಳುವ ಮೂಲಕ ಕಿಚ್ಚ ಹವಾ ಎಬ್ಬಿಸಿದ್ದಾರೆ.

Actor Upendra:  ಉಪ್ಪಿ ಕೊನೆಯ ಬಾರಿ ಅತ್ತಿದ್ದು ಇದೊಂದು ವಿಚಾರಕ್ಕೆ! ಕನ್ನಡಿಯ ಮುಂದೆ ಸತ್ಯ ರಿವೀಲ್‌

ಉಪ್ಪಿ ಕೊನೆಯ ಬಾರಿ ಅತ್ತಿದ್ದು ಇದೊಂದು ವಿಚಾರಕ್ಕೆ!

45 Movie: ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಇದೇ ವರ್ಷದ ಮಧ್ಯ ಭಾಗದಲ್ಲಿಯೇ ಬಿಡುಗಡೆ ಆಗಬೇಕಿತ್ತು. ಮೇ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು ಆದರೆ ನಾನಾ ಕಾರಣಗಳಿಗಾಗಿ ಸಿನಿಮಾ ತಡವಾಗುತ್ತಲೇ ಬಂತು. ರಿಯಲ್ ಸ್ಟಾರ್ ಉಪೇಂದ್ರ ಅವರು '45' ಸಿನಿಮಾ ಪ್ರಚಾರದ ವೇಳೆ, ತಾವು ಮೊದಲ ಬಾರಿಗೆ ಕಣ್ಣೀರು ಹಾಕಿದ ಕ್ಷಣವನ್ನು ಬಹಿರಂಗಪಡಿಸಿದ್ದಾರೆ.

BBK 12: ಕಾವ್ಯ ವಿರುದ್ಧದ ರಕ್ಷಿತಾ ಶೆಟ್ಟಿಯ ದ್ವೇಷ ಅತಿರೇಕಕ್ಕೆ ಹೋಯ್ತಾ? ರಜತ್‌ ಕೊಟ್ಟ ತಿರುಗೇಟಿಗೆ ಗಿಲ್ಲಿ ವಂಶದ ಕುಡಿ ಫುಲ್‌ ಸೈಲೆಂಟ್‌!

BBK 12: ಕ್ಯಾಪ್ಟನ್‌ ಆಯ್ಕೆ ಬಗ್ಗೆ ‌ರಕ್ಷಿತಾ ಅಸಮಾಧಾನ; ರಜತ್ ತಿರುಗೇಟು!

BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಕ್ಯಾಪ್ಟನ್ ಆಗಿ ಆಯ್ಕೆಯಾದದ್ದನ್ನು ರಕ್ಷಿತಾ ಶೆಟ್ಟಿ ಮುಕ್ತವಾಗಿ ವಿರೋಧಿಸಿದ್ದಾರೆ. "ಕಾವ್ಯಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ, ಮನೆಯವರು ಸೇರಿ ಅವರನ್ನು ಗೆಲ್ಲಿಸಿದ್ದಾರೆ" ಎಂದು ರಕ್ಷಿತಾ ವಾದಿಸಿದರು. ಆದರೆ ಈ ವಾದಕ್ಕೆ ರಜತ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Toxic: 'ಟಾಕ್ಸಿಕ್‌' ಸಿನಿಮಾ ನಾಯಕಿಯ ಫಸ್ಟ್‌ ಲುಕ್‌ ರಿಲೀಸ್‌; Nadia ಪಾತ್ರದಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

Toxic: ಯಶ್‌ಗೆ ನಾಯಕಿಯಾದ ಕಿಯಾರಾ ಅಡ್ವಾಣಿ; ಫಸ್ಟ್‌ ಲುಕ್‌ ರಿಲೀಸ್‌

Toxic Kiara Advani First Look: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು 'ನಾದಿಯಾ' (Nadia) ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡವು ಇಂದು (ಡಿ.21) ಈ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದೆ.

Sivakarthikeyan:  ನಟ ಶಿವಕಾರ್ತಿಕೇಯನ್ ಕಾರು ಅಪಘಾತ; ಅಸಲಿಗೆ ಆಗಿದ್ದೇನು? ವೈರಲ್‌ ಆಯ್ತು ವಿಡಿಯೊ

ನಟ ಶಿವಕಾರ್ತಿಕೇಯನ್ ಕಾರು ಅಪಘಾತ; ಅಸಲಿಗೆ ಆಗಿದ್ದೇನು?

Sivakarthikeyan car: ಚೆನ್ನೈನ ಸೆಂಟ್ರಲ್ ಕೈಲಾಶ್ ಪ್ರದೇಶದಲ್ಲಿ ನಟ ಶಿವಕಾರ್ತಿಕೇಯನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್, ಶಿವಕಾರ್ತಿಕೇಯನ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಚೆನ್ನೈನ ಮಧ್ಯ ಕೈಲಾಶ್ ಪ್ರದೇಶದಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಜಾಮ್‌ನಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ʻಧುರಂಧರ್‌ʼ; 16ನೇ ದಿನ ಮತ್ತೊಂದು ದೊಡ್ಡ ದಾಖಲೆ ಸೃಷ್ಟಿಸಿದ ರಣವೀರ್‌ ಸಿಂಗ್‌ ಸಿನಿಮಾ

Ranveer Singh: ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ʻಧುರಂಧರ್‌ʼ

Dhurandhar Box Office Report: ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾದ 16ನೇ ದಿನ ಈ ಚಿತ್ರವು 33.50 ಕೋಟಿ ರೂ. ಗಳಿಸುವ ಮೂಲಕ, ತನ್ನ ಮೊದಲ ದಿನದ ಗಳಿಕೆಯನ್ನೇ (28 ಕೋಟಿ ರೂ.) ಮೀರಿಸಿದೆ. ಸದ್ಯ ಭಾರತದಲ್ಲಿ 516.50 ಕೋಟಿ ರೂ. ಹಾಗೂ ವಿಶ್ವಾದ್ಯಂತ 750 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಚಿತ್ರವು, ಶೀಘ್ರದಲ್ಲೇ 'ಛಾವಾ' ಮತ್ತು 'ಕಾಂತಾರ ಚಾಪ್ಟರ್ 1' ದಾಖಲೆಗಳನ್ನು ಮುರಿಯಲಿದೆ.

BBK 12: ಕಾವ್ಯ ತಾಯಿ ವಿಷ್ಯಕ್ಕೆ ಹೋದ ಅಶ್ವಿನಿ ಗೌಡಗೆ ಸಿಕ್ತು ಸಖತ್ ಕ್ಲಾಸ್‌; ʻಅವ್ರ ಅಮ್ಮನ ಬಗ್ಗೆ ಮಾತಾಡಿದ್ಯಾಕೆʼ ಎಂದು ಗರಂ ಆದ ʻಕಿಚ್ಚʼ ಸುದೀಪ್!‌

BBK 12: ಕಾವ್ಯ ತಾಯಿ ಬಗ್ಗೆ ಮಾತಾಡಿದ ಅಶ್ವಿನಿಗೆ ಕಿಚ್ಚನ ಸಖತ್ ಕ್ಲಾಸ್‌!

BBK 12 Weekend Update: ಬಿಗ್ ಬಾಸ್ ಕನ್ನಡ 12ರ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಅವರ ಅಶಿಸ್ತಿನ ಮಾತಿನ ಬಗ್ಗೆ ಗಂಭೀರವಾಗಿ ಪ್ರಶ್ನಿಸಿದ್ದಾರೆ. ನೀರಿನ ಟಬ್ ಟಾಸ್ಕ್ ವೇಳೆ ಕಾವ್ಯ ಶೈವ ಅವರ ಜೊತೆ ಜಗಳವಾಡುವಾಗ ಅಶ್ವಿನಿ ಅವರು ಕಾವ್ಯ ತಾಯಿಯನ್ನು ಎಳೆತಂದಿದ್ದರು. "ನಿನ್ನ ಅಮ್ಮನ ಬಳಿ ಹೇಳ್ಕೋ" ಎಂಬ ಅಶ್ವಿನಿ ಮಾತನ್ನು ಕಿಚ್ಚ ತೀವ್ರವಾಗಿ ಖಂಡಿಸಿದರು.

BBK 12: 'ಬಿಗ್‌ ಬಾಸ್‌' ಅಡ್ಡಕ್ಕೆ ಧ್ರುವಂತ್‌ - ರಕ್ಷಿತಾ ರೀ ಎಂಟ್ರಿ; ಅದಕ್ಕೂ ಮುನ್ನ ನಡೀತು ಹೈಡ್ರಾಮಾ, ಇವರಿಬ್ರು ವಾಪಸ್‌ ಮನೆಯೊಳಗೆ ಬಂದಿದ್ದೇಗೆ?

'ಬಿಗ್‌ ಬಾಸ್‌' ಮನೆಗೆ ಧ್ರುವಂತ್‌ - ರಕ್ಷಿತಾ ವಾಪಸ್‌ ಬಂದಿದ್ದು ಹೇಗೆ?

BBK 12 Update: ಬಿಗ್ ಬಾಸ್ ಕನ್ನಡ 12ರ ಸೀಕ್ರೆಟ್ ರೂಮ್ ಟ್ವಿಸ್ಟ್ ಮುಕ್ತಾಯಗೊಂಡಿದೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರನ್ನು ವಾಪಸ್ ಮುಖ್ಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್ ಜೊತೆ ಇರಲಾರದೆ ರಕ್ಷಿತಾ ಗೋಳಾಡಿದ್ದು, ಸುದೀಪ್ ಅವರ ಎದುರು ಮನೆಗೆ ಹೋಗಲು ಹಠ ಹಿಡಿದಿದ್ದರು.

The Script Craft: ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ಪ್ರಭಾಸ್‌; ನಿರ್ದೇಶಕರಿಗೆ, ಕಥೆಗಾರರಿಗೆ ಇಲ್ಲಿದೆ ಸಖತ್‌ ಚಾನ್ಸ್!‌

ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ʻಬಾಹುಬಲಿʼ ನಟ ಪ್ರಭಾಸ್‌

The Script Craft Launch: ಪ್ಯಾನ್‌ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲದೆ, ಹೊಸ ಪ್ರತಿಭೆಗಳನ್ನು ಬೆಳೆಸುವಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರು ಇಂದು ಘೋಷಿಸಿರುವ 'ದಿ ಸ್ಕ್ರಿಪ್ಟ್ ಕ್ರಾಫ್ಟ್' ಅಭಿಯಾನವು ಪ್ರಪಂಚದಾದ್ಯಂತ ಇರುವ ಕಿರುಚಿತ್ರ ನಿರ್ದೇಶಕರು ಮತ್ತು ಕಥೆಗಾರರಿಗೆ ಸಿನಿಮಾ ರಂಗಕ್ಕೆ ನೇರ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.

Loading...