ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Aarti Ravi: ಹೊಸ ಜೀವನದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ನಟ ರವಿ ಮೋಹನ್

ಹೊಸ ಜೀವನದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ನಟ ರವಿ ಮೋಹನ್

Aarti Ravi: ಕಳೆದ ಕೆಲವು ವರ್ಷಗಳಿಂದ ತಮ್ಮ ಪತ್ನಿ ಆರತಿ ರವಿ ಮತ್ತು ನಂತರ ತಮ್ಮ ಗೆಳತಿ ಕೆನೀಶಾ ಫ್ರಾನ್ಸಿಸ್ ಅವರಿಂದ ಬೇರ್ಪಟ್ಟ ನಂತರ ತಮ್ಮ ವೈಯಕ್ತಿಕ ಜೀವನದಲ್ಲಿ ಏರುಪೇರುಗಳನ್ನು ಅನುಭವಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ, ವಿಚ್ಛೇದನ ಅಂತಿಮವಾಗುವವರೆಗೆ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ನಟ ಘೋಷಿಸಿದರು. ತಮ್ಮ ತಪ್ಪುಗಳಿಂದ ನೋಯಿಸಿದವರಿಗೆ ಅವರು ಕ್ಷಮೆಯಾಚಿಸಿದರು.

ಅದ್ದೂರಿಯಾಗಿ ಬಿಡುಗಡೆಯಾಯ್ತು ‘ಕರಾವಳಿ’ ಟ್ರೈಲರ್: ಕಂಬಳದ ಕ್ರೀಡೆ, ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರು ಫಿದಾ

ರಿಲೀಸ್‌ ಆಯ್ತು ‌ʻಕರಾವಳಿʼ ಟ್ರೈಲರ್; ನಟ ಪ್ರಜ್ವಲ್‌ ವಾಯ್ಸ್‌ ಮಿಸ್ಸಿಂಗ್!

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಟ್ರೆಂಡ್ ಸೃಷ್ಟಿಸುತ್ತಿದೆ. ಸಾಂಸ್ಕೃತಿಕ ಕ್ರೀಡೆ ಕಂಬಳವನ್ನು ಅತ್ಯಂತ ರೋಮಾಂಚಕಾರಿಯಾಗಿ ಚಿತ್ರೀಕರಿಸಲಾಗಿದೆ. ಈ ಚಿತ್ರವು ಜುಲೈ 24 ರಂದು ಬಿಡುಗಡೆಯಾಗಲಿದೆ.

Rishab Shetty Birthday: ರಿಷಬ್ ಶೆಟ್ಟಿ ಫೌಂಡೇಶನ್‌ನಿಂದ ಔಟ್‌ ಆಯ್ತು ಸ್ಪೆಷಲ್‌ ವಿಡಿಯೊ;  ಗ್ರಾಮಸ್ಥರಿಂದ  ಕೃತಜ್ಞತೆ

ರಿಷಬ್ ಶೆಟ್ಟಿ ಫೌಂಡೇಶನ್‌ನಿಂದ ಔಟ್‌ ಆಯ್ತು ಸ್ಪೆಷಲ್‌ ವಿಡಿಯೊ

Rishab Shetty Birthday: ಈ ಒಂದು ಫೌಂಡೇಶನ್ ಮೂಲಕವೇ ಶಾಲೆಯ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಎರಡು ವರ್ಷದ ಸ್ಕಾಲರ್‌ಶಿಪ್‌ ಕೂಡ ಕೊಡುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್‌ಶಿಪ್ ತುಂಬಾನೆ ಸಹಾಯವಾಗಿದೆ. ರಿಷಬ್ ಶೆಟ್ರ ಅವರ ಫೌಂಡೇಶನ್‌ನಿಂದ ಸ್ಕಾಲರ್‌ಶಿಪ್ ಪಡೆದ ಮಕ್ಕಳು ತಮ್ಮ ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ.

ʻನನ್ನ ಜೀವನವನ್ನು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ನೀವು ಸುಂದರವಾಗಿಸಿದ್ದೀರಿʼ; ಪತಿ ರಿಷಬ್‌ ಶೆಟ್ಟಿಗೆ ವಿಶ್‌ ಮಾಡಿದ ಪತ್ನಿ ಪ್ರಗತಿ ಶೆಟ್ಟಿ

ʻನನ್ನ ಪುಟ್ಟ ಪ್ರಪಂಚದ ಬೆಳಕು ನೀವುʼ; ರಿಷಬ್‌ಗೆ ವಿಶ್ ಮಾಡಿದ ಪತ್ನಿ ಪ್ರಗತಿ

ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಪತ್ನಿ ಪ್ರಗತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಪುಟ್ಟ ಬದುಕನ್ನು ಸುಂದರವಾಗಿಸಿದ, ಆತ್ಮವಿಶ್ವಾಸ ತುಂಬಿದ ಪ್ರೀತಿಯ ಪತಿಗೆ ಧನ್ಯವಾದ ತಿಳಿಸಿರುವ ಅವರು, ತಮ್ಮ ಸುದೀರ್ಘ ದಾಂಪತ್ಯ ಪಯಣದ ಸಿಹಿ-ಕಹಿ ನೆನಪುಗಳನ್ನು ಸ್ಮರಿಸಿದ್ದಾರೆ.

Toxic: ʼಟಾಕ್ಸಿಕ್‌ʼ ಚಿತ್ರದ 'ಲೇಡೀಸ್ ಆ್ಯಂಡ್‌ ಲೇಡೀಸ್' ಟೀಸರ್‌ ಟೀಕೆಗೆ ಖಡಕ್‌ ಉತ್ತರ ಕೊಟ್ಟ ಬೆನೆಡಿಕ್ಟ್ ಗ್ಯಾರೆಟ್

'ಲೇಡೀಸ್ ಆ್ಯಂಡ್‌ ಲೇಡೀಸ್' ಟೀಸರ್‌ ಟೀಕೆಗೆ ಖಡಕ್‌ ಉತ್ತರ ಕೊಟ್ಟ ನಟ

Yash: ಟಾಕ್ಸಿಕ್ ಚಿತ್ರದಲ್ಲಿ ಬಿಡುಗಡೆಯಾಗಿರುವ ಟೀಸರ್ ನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ಹಲವಾರು ಪ್ರಮುಖ ನಟಿಯರು ನಟಿಸಿಸಿದ್ದಾರೆ. ಆದರೆ, ಈ ನಟಿಯರ ಸಂಭಾಷಣೆ ಮಾತ್ರ ನೀಡಿಲ್ಲ. ಮಕ್ಕಳೇ ದೂರ ಇರಿ, ಹೆತ್ತವರೇ ನಿಮ್ಮ ಮಕ್ಕಳನ್ನು ದೂರ ಇರಿಸಿ, ಅಜ್ಜಿಯರೇ ನಿಮ್ಮ ಮೊಮ್ಮಕ್ಕಳನ್ನು ದೂರ ಇರಿಸಿ, ಮುುತ್ತಜ್ಜಿಯರೇ ನೀವು ಮೊಮ್ಮಕ್ಕಳನ್ನು ದೂರ ಇರಿಸಿ ಎಂಬ ಎಚ್ಚರಿಕೆಯ ಸಂದೇಶದೊಂದಿಗೆ ಟೀಸರ್ (Teaser) ಪ್ರಾರಂಭವಾಗಿತ್ತು.

ʻರಾಮಾಯಣʼ ಸಿನಿಮಾ ನಿರ್ಮಾಪಕರ ಜೊತೆ ಭರ್ಜರಿ ಡೀಲ್‌ ಕುದುರಿಸಿದ ಕರಣ್‌ ಜೋಹರ್;‌ ಎಷ್ಟಕ್ಕೇ ಸೇಲ್‌ ಆಯ್ತು ವಿತರಣೆ ಹಕ್ಕುಗಳು?

‘ರಾಮಾಯಣ’ ಚಿತ್ರದ ಭಾರತದ ವಿತರಣೆ ಹಕ್ಕುಗಳು ದುಬಾರಿ ಮೊತ್ತಕ್ಕೆ ಸೇಲ್

ನಿತೇಶ್‌ ತಿವಾರಿ ಅವರ ‘ರಾಮಾಯಣ’ ಸಿನಿಮಾದ ಭಾರತೀಯ ಥಿಯೇಟ್ರಿಕಲ್ ವಿತರಣಾ ಹಕ್ಕುಗಳನ್ನು ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಬರೋಬ್ಬರಿ 250 ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿದೆ. ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ಸಿನಿಮಾದ ಮೊದಲ ಭಾಗವು 2026ರ ದೀಪಾವಳಿಗೆ ತೆರೆಕಾಣಲಿದೆ.

ʻಕರಾವಳಿ’ ಚಿತ್ರದ ಟ್ರೇಲರ್‌ನಲ್ಲಿ ಧ್ವನಿ ಇಲ್ಲ, ಈವೆಂಟ್‌ಗೂ ಬರಲಿಲ್ಲ! ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟ ಪ್ರಜ್ವಲ್ ದೇವರಾಜ್

ಮನೆಯಲ್ಲೇ ಕೂತಿದ್ದೀನಿ, ನನಗೂ ಕಷ್ಟ ಇರಲ್ವಾ?; ನಟ ಪ್ರಜ್ವಲ್ ದೇವರಾಜ್ ಬೇಸರ

‘ಕರಾವಳಿ’ ಚಿತ್ರದ ಟ್ರೇಲರ್‌ನಲ್ಲಿ ತಮ್ಮ ಧ್ವನಿ ಬಳಸದ ಹಾಗೂ ಬಾಕಿ ಇರುವ ಸಂಭಾವನೆ ನೀಡದ ಕಾರಣ ನಟ ಪ್ರಜ್ವಲ್ ದೇವರಾಜ್ ಚಿತ್ರತಂಡದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ರಾಜ್ ಬಿ. ಶೆಟ್ಟಿ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ನಟ ಪ್ರಜ್ವಲ್‌ ಸ್ಪಷ್ಟಪಡಿಸಿದ್ದಾರೆ.

ʻನನ್ನ ಅನ್ಶು, ನೀನು ಯಾವಾಗಲೂ ನನ್ನವಳೇ ಆಗಿರುತ್ತೀಯಾʼ; ತಂಗಿಯನ್ನು ಧಾರೆ ಎರೆದು ಭಾವುಕರಾದ ಅಣ್ಣ ಅರ್ಜುನ್ ಕಪೂರ್

ಗಂಡನ ಮನೆಗೆ ಹೊರಟ ಅನ್ಶುಲಾಗೆ ಭಾವುಕ ಪತ್ರ ಬರೆದ ಅಣ್ಣ ಅರ್ಜುನ್‌ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಸಹೋದರಿ ಅನ್ಶುಲಾ ಕಪೂರ್ ತಮ್ಮ ಬಹುಕಾಲದ ಗೆಳೆಯ ರೋಹನ್ ಠಕ್ಕರ್ ಅವರನ್ನು ಪಂಜಾಬಿ ಮತ್ತು ಗುಜರಾತಿ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಸಹೋದರಿಯ ಮದುವೆ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅರ್ಜುನ್ ಕಪೂರ್, ತಂಗಿಯ ಮುಖದ ನಗು ಎಂದಿಗೂ ಮಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.

5 ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿದ ನಟಿ ಕೃತಿ ಸನೋನ್; ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?

ನಟಿ ಕೃತಿ ಸನೋನ್ ಅಂಡಾಣು ಫ್ರೀಜಿಂಗ್ ಮಾಡಿಸಿದ್ದೇಕೆ? ಇಲ್ಲಿದೆ ಉತ್ತರ

ಬಾಲಿವುಡ್‌ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ತಮ್ಮ 35ನೇ ವಯಸ್ಸಿನಲ್ಲಿ ಸಾಮಾಜಿಕ ಮತ್ತು ವಯಸ್ಸಿನ ಒತ್ತಡಕ್ಕೆ ಮಣಿಯದೆ ಕೆಲವು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ. 'ಮಿಮಿ' ಚಿತ್ರದ ಚಿತ್ರೀಕರಣದ ಬಿಡುವಿನಲ್ಲಿ ಈ ಕಠಿಣ ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗಿದ್ದ ಅವರು, ಅಂಡಾಣು ಫ್ರೀಜ್ ಮಾಡಿದ್ದಾರೆ. ಆ ಜರ್ನಿ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

ʻಕರಾವಳಿʼ ಚಿತ್ರಕ್ಕಾಗಿ ಪ್ರಜ್ವಲ್‌ ದೇವರಾಜ್ ಪಡೆದ ಸಂಭಾವನೆ ಎಷ್ಟು? ಫ್ಯಾನ್ಸ್‌ ಗಲಾಟೆ ಬಗ್ಗೆ ರಾಜ್‌ ಬಿ. ಶೆಟ್ಟಿ ಹೇಳಿದ್ದೇನು?

ಕರಾವಳಿಯಲ್ಲಿ ರಾಜ್‌ ಬಿ. ಶೆಟ್ಟಿ ನಟಿಸಿದ್ದಕ್ಕೆ ಪ್ರಜ್ವಲ್‌ ಬೇಜಾರಾದ್ರಾ?

'ಕರಾವಳಿ' ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ನಡೆದ ಅಭಿಮಾನಿಗಳ ಆಕ್ರೋಶದ ಕುರಿತು ನಟ ರಾಜ್ ಬಿ. ಶೆಟ್ಟಿ ಹಾಗೂ ನಿರ್ದೇಶಕ ಗುರುದತ್ ಗಾಣಿಗ ತೀವ್ರ ಬೇಸರ ಹೊರಹಾಕಿದ್ದಾರೆ. ಚಿತ್ರಕ್ಕೆ ಈ ಮಧ್ಯೆ ಚಿತ್ರದ ನಟ ಪ್ರಜ್ವಲ್ ದೇವರಾಜ್ ಕಳೆದ ಎರಡು ತಿಂಗಳಿಂದ ಚಿತ್ರತಂಡದ ಸಂಪರ್ಕಕ್ಕೆ ಸಿಗುತ್ತಿಲ್ಲ ಎನ್ನಲಾಗಿದೆ.

ʻಕರಾವಳಿʼ ಟ್ರೇಲರ್ ಲಾಂಚ್‌ ವೇಳೆ ಹೈಡ್ರಾಮಾ; ಕೆರಳಿ ಕೆಂಡವಾದ ಪ್ರಜ್ವಲ್ ದೇವರಾಜ್ ಅಭಿಮಾನಿಗಳು, ಅಷ್ಟಕ್ಕೂ ಆಗಿದ್ದೇನು?

ʻಕರಾವಳಿʼ ಚಿತ್ರದ ಈವೆಂಟ್‌ಗೆ ಪ್ರಜ್ವಲ್‌ಗೆ ಆಹ್ವಾನವಿಲ್ಲ? ಫ್ಯಾನ್ಸ್‌ ಗರಂ

ಬೆಂಗಳೂರಿನ ಎಎಂಬಿ ಕಪಾಲಿ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಕರಾವಳಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳು ಭಾರಿ ಗದ್ದಲ ಸೃಷ್ಟಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದಾರೆ. ನಾಯಕ ನಟನಿಗೆ ಆಹ್ವಾನ ನೀಡದಿರುವುದು ಮತ್ತು ಚಿತ್ರದಲ್ಲಿ ಅವರ ಪಾತ್ರಕ್ಕೆ ಸ್ವತಃ ಪ್ರಜ್ವಲ್ ಡಬ್ ಮಾಡದಿರುವ ಕಾರಣಕ್ಕೆ ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ.

Rishab Shetty: ಡಿವೈನ್‌ ಸ್ಟಾರ್‌ ಹುಟ್ಟುಹಬ್ಬ; ಎಷ್ಟೆಲ್ಲಾ ಬದಲಾಯ್ತು ನಟನ ಲೈಫು?

ಡಿವೈನ್‌ ಸ್ಟಾರ್‌ ಹುಟ್ಟುಹಬ್ಬ; ಎಷ್ಟೆಲ್ಲಾ ಬದಲಾಯ್ತು ನಟನ ಲೈಫು?

Rishab Shetty: ಸದ್ಯಕ್ಕೆ ತಮ್ಮದೇ ನಿರ್ದೇಶನದ ‘ಕಾಂತಾರ ಚಾಪ್ಟರ್ 2’ ರೂಪಿಸುವ ಕಾರ್ಯದಲ್ಲಿದ್ದಾರೆ. ಜೊತೆಗೆ ಮಲಯಾಳಂನ ಖ್ಯಾತ ಬರಹಗಾರ ಎಂ.ಟಿ. ವಾಸುದೇವನಾಯರ್ ಅವರ ‘ರಂಡಮೂಳಂ’ ಕೃತಿಯನ್ನು ಸಿನಿಮಾವಾಗಿಸುವ ಮಹೋನ್ನತ ಯೋಜನೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ‘ರಂಡಮೂಳಂ’ ಅವರ ಮ್ಯಾಗ್ನಂ ಓಪಸ್ ಸಿನಿಮಾ ಆಗಲಿದ್ದು, ಅವರ ತಂಡ ಸಂಶೋಧನಾ ಕೆಲಸದಲ್ಲಿ ನಿರತವಾಗಿದೆ.

ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾಗೆ ಕಲ್ಯಾಣ; ಪ್ರಿಯಕರ ರೋಹನ್ ಠಕ್ಕರ್ ಜೊತೆ ಅದ್ದೂರಿಯಾಗಿ ನಡೆದ ಮದುವೆ

ಅರ್ಜುನ್ ಕಪೂರ್ ತಂಗಿಗೆ ಕಲ್ಯಾಣ; ಮುಂಬೈನಲ್ಲಿ ಅನ್ಶುಲಾ ಕೈಹಿಡಿದ ರೋಹನ್

ಬಾಲಿವುಡ್ ನಿರ್ಮಾಪಕ ಬೋನಿ ಕಪೂರ್ ಪುತ್ರಿ ಹಾಗೂ ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕಪೂರ್ ಅವರು ತಮ್ಮ ದೀರ್ಘಕಾಲದ ಗೆಳೆಯ ರೋಹನ್ ಠಕ್ಕರ್ ಅವರನ್ನು ಮುಂಬೈನಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಡೇಟಿಂಗ್ ಆಪ್ ಮೂಲಕ ಪರಿಚಯವಾದ ಈ ಜೋಡಿ ಈಗ ದಾಂಪತ್ಯ ಬದುಕಿಗೆ ಕಾಲಿಟ್ಟಿದೆ.

ಎರಡೇ ದಿನಕ್ಕೆ ಒಟಿಟಿಯಿಂದ ‘ಸತ್ಲುಜ್’ ಡಿಲೀಟ್: ʻಸಿನಿಮಾ ಡೌನ್‌ಲೋಡ್ ಲಿಂಕ್‌ನ ಶೇರ್‌ ಮಾಡಿʼ ಅಂತ ಕರೆಕೊಟ್ಟ ನಟ ದಿಲ್ಜಿತ್ ದೋಸಾಂಜ್

Satluj Controversy: ʻಡೌನ್‌ಲೋಡ್ ಕಾಪಿ ಹಂಚಿಕೊಳ್ಳಿ' ಎಂದ ನಟ ದಿಲ್ಜಿತ್

ಪಂಜಾಬ್‌ನ ಮಾನವ ಹಕ್ಕುಗಳ ಹೋರಾಟಗಾರ ಜಸ್ವಂತ್ ಸಿಂಗ್ ಖಲ್ರಾ ಅವರ ನೈಜ ಜೀವನದ ಕಥೆ ಆಧಾರಿತ, ನಟ ದಿಲ್ಜಿತ್ ದೋಸಾಂಜ್ ಅಭಿನಯದ ‘ಸತ್ಲುಜ್’ ಚಿತ್ರವು ಬಿಡುಗಡೆಯಾದ ಎರಡೇ ದಿನಕ್ಕೆ ಝೀ5 ಒಟಿಟಿಯಿಂದ ದಿಢೀರ್ ಡಿಲೀಟ್ ಆಗಿದೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ದಿಲ್ಜಿತ್, ಚಿತ್ರದ ಡೌನ್‌ಲೋಡ್ ಮಾಡಿಕೊಂಡು ವೀಕ್ಷಿಸುವಂತೆ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

LCU: ಲೋಕೇಶ್ ಕನಕರಾಜ್ ಬಗ್ಗೆ ಹೀಗೊಂದು ವದಂತಿ! ಕೊನೆಗೂ ಸ್ಪಷ್ಟನೆ ಕೊಟ್ಟ ನಿರ್ದೇಶಕ

ಲೋಕೇಶ್ ಕನಕರಾಜ್ ಬಗ್ಗೆ ಹೀಗೊಂದು ವದಂತಿ!

LCU Is NOT Closed: ತಮಿಳು ಚಿತ್ರರಂಗದ ಕೆಲವು ದೊಡ್ಡ ಸಾಹಸ ಚಿತ್ರಗಳನ್ನು ನೀಡಿರುವ ಈ ಚಿತ್ರನಿರ್ಮಾಪಕರು ಈಗ ಡಿಸಿ ಚಿತ್ರದ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಚಿತ್ರವು ಜುಲೈ 31, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ರೊಮ್ಯಾಂಟಿಕ್ ಆಕ್ಷನ್ ಸಿನಿಮಾ ಬಿಡುಗಡೆಯಾಗುವ ಮುನ್ನ, ಲೋಕೇಶ್ ತಮ್ಮ ಅತ್ಯಂತ ಪ್ರೀತಿಯ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್, ಅಂದರೆ LCU ನ (LCU) ಭವಿಷ್ಯದ ಬಗ್ಗೆ ನಡೆಯುತ್ತಿರುವ ಊಹಾಪೋಹಗಳ ಬಗ್ಗೆಯೂ ಮಾತನಾಡಿದ್ದಾರೆ.

Toxic Movie: ಯಶ್ ಬಗ್ಗೆ ಹುಮಾ ಖುರೇಷಿ ಹೇಳಿದ ಸೀಕ್ರೆಟ್‌ ಇದು!

ಯಶ್ ಬಗ್ಗೆ ಹುಮಾ ಖುರೇಷಿ ಹೇಳಿದ ಸೀಕ್ರೆಟ್‌ ಇದು!

Toxic Movie: ಟಾಕ್ಸಿಕ್ ಚಿತ್ರದಲ್ಲಿ ಎಲಿಜಬೆತ್ ಪಾತ್ರವನ್ನು ನಿರ್ವಹಿಸುವ ಹುಮಾ ಖುರೇಷಿ, ಚಿತ್ರದ ಖ್ಯಾತ ನಿರ್ದೇಶಕಿ ಗೀತು ಮೋಹನ್ದಾಸ್ ಬಗ್ಗೆ ಮಾತನಾಡಿದರು. ಈ ಸಿನಿಮಾ ಎಲ್ಲರ ನಿರೀಕ್ಷೆಗಳನ್ನು ಮೀರಿ ನಿಲ್ಲಲಿದೆ, ಜನರು ಇಂತಹ ಚಿತ್ರವನ್ನು ಹಿಂದೆಂದೂ ನೋಡಿಲ್ಲ ಎಂದು ಹುಮಾ ಹೇಳಿದ್ದಾರೆ. ಆಗಸ್ಟ್ 26 ರಂದು ಸಿನಿಮಾ ಬಿಡುಗಡೆಯಾಗಲಿದೆ.

ʻ12 ನಿಮಿಷಗಳ ಕ್ಲೈಮ್ಯಾಕ್ಸ್ ಗೆ 22 ದಿನ ಶೂಟಿಂಗ್‌ʼ; ʻಪಿನಾಕʼ ಮೇಕಿಂಗ್‌ ಸ್ಟೋರಿ ಬಿಚ್ಚಿಟ್ಟ ʻಗೋಲ್ಡನ್‌ ಸ್ಟಾರ್‌ʼ ಗಣೇಶ್

ʻಗೋಲ್ಡನ್ ಸ್ಟಾರ್ʼ ಗಣೇಶ್‌ ನಟನೆಯ ʻಪಿನಾಕʼ‌ ಸಿನಿಮಾ ಟೀಸರ್ ರಿಲೀಸ್

ʻಗೋಲ್ಡನ್ ಸ್ಟಾರ್ʼ ಗಣೇಶ್ ಅವರ ಹುಟ್ಟುಹಬ್ಬದ ವಿಶೇಷವಾಗಿ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ನಿರ್ಮಿಸುತ್ತಿರುವ ‘ಪಿನಾಕ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಧನಂಜಯ್ ನಿರ್ದೇಶನದ ಈ ಸಿನಿಮಾವು ಅಕ್ಟೋಬರ್ 2 ರಂದು ತೆರೆಕಾಣಲಿದೆ.

ಒಟಿಟಿಗೆ ಬಂತು ರಾಮ್ ಚರಣ್ - ಶಿವರಾಜ್‌ಕುಮಾರ್ ನಟನೆಯ 'ಪೆದ್ದಿ'; ಯಾವಾಗ? ಎಲ್ಲಿ ಸ್ಟ್ರೀಮಿಂಗ್?

Ram Charan: ಬಾಕ್ಸ್‌ ಆಫೀಸ್‌ ಲೂಟಿ ಮಾಡಿದ ʻಪೆದ್ದಿʼ ಈಗ ಒಟಿಟಿಗೆ ಎಂಟ್ರಿ

ʻಮೆಗಾ ಪವರ್ ಸ್ಟಾರ್ʼ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಇದೀಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಲು ಸಜ್ಜಾಗಿದೆ. ಜೂನ್ 4 ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಬಾಕ್ಸ್‌ ಆಫೀಸ್‌ನಲ್ಲಿ ಸುಮಾರು 338 ಕೋಟಿ ರೂ.ಗಳಿಗೂ ಅಧಿಕ ಹಣವನ್ನು ಬಾಚಿಕೊಂಡಿತ್ತು. ಇದೀಗ 35 ದಿನಗಳ ನಂತರ ಒಟಿಟಿಗೆ ಈ ಸಿನಿಮಾ ಬರುತ್ತಿದೆ.

Ramayana Movie: ಇದೊಂದು ಕಾರಣಕ್ಕೆ ರಾಮಾಯಣದಲ್ಲಿ ನಟಿಸಿದೆ ಎಂದ ಕಾಜಲ್ ಅಗರ್ವಾಲ್‌!

ಇದೊಂದು ಕಾರಣಕ್ಕೆ ರಾಮಾಯಣದಲ್ಲಿ ನಟಿಸಿದೆ ಎಂದ ಕಾಜಲ್ ಅಗರ್ವಾಲ್‌!

Kajal Aggarwal: ಇನ್ನು ಅನೇಕ ವಿಚಾರಗಳ ಬಗ್ಗೆ ಮಾತನಾಡಿದ ನಟಿ ಕಾಜಲ್ , ರಾಮಾಯಣ ಕೇವಲ ಭಾರತೀಯ ಸಿನಿಮಾ ಮಾತ್ರವಲ್ಲ, ವಿಶ್ವದ ಸಿನಿಪ್ರಿಯರನ್ನು ಸೆಳೆಯುವ ಸಾಮರ್ಥ್ಯ ಹೊಂದಿರುವ ದೊಡ್ಡ ಚಿತ್ರವಾಗಿದೆ. ಇಂತಹ ಮಹತ್ವದ ಯೋಜನೆಯ ಭಾಗವಾಗಿರುವುದು ತಮ್ಮ ವೃತ್ತಿಜೀವನದ ವಿಶೇಷ ಅನುಭವಗಳಲ್ಲಿ ಒಂದಾಗಿದೆ ಎಂದು ಅವರು ತಿಳಿಸಿದ್ದಾರೆ.

ʻಪಿನಾಕʼ ಚಿತ್ರದಲ್ಲಿ ʻಗೋಲ್ಡನ್ ಸ್ಟಾರ್ʼ ಗಣೇಶ್‌ ಜೊತೆ ನಟಿಸಿದ ಪುಟಾಣಿ ಮೃದಿನಿ; ಅಮ್ಮ ಸಾರಿಕಾಗೂ ಒಲಿದ ಅದೃಷ್ಟ

ನಟ ಗಣೇಶ್‌ ಜೊತೆ ಬಣ್ಣ ಹಚ್ಚಿದ ಸೋಶಿಯಲ್‌ ಮೀಡಿಯಾದ ʻಸ್ಟಾರ್‌ʼ ಅಮ್ಮ- ಮಗಳು

`ಗೋಲ್ಡನ್ ಸ್ಟಾರ್' ಗಣೇಶ್ ಅಭಿನಯದ 'ಪಿನಾಕ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಚಿತ್ರದ ಮೂಲಕ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಖ್ಯಾತಿಯ ಸಾರಿಕಾ ಮತ್ತು ಅವರ ಪುಟಾಣಿ ಮಗಳು ಮೃದಿನಿ ಬೆಳ್ಳಿಪರದೆಗೆ ಲಗ್ಗೆ ಇಟ್ಟಿದ್ದಾರೆ. ಈ ಚಿತ್ರದಲ್ಲೂ ಗಣೇಶ್ ಅವರಿಗೆ ಅಕ್ಕ ಹಾಗೂ ಅಕ್ಕನ ಮಗಳಾಗಿ ಬಣ್ಣ ಹಚ್ಚಿರುವುದು ವಿಶೇಷ. ಈ ಸಿನಿಮಾ ಅಕ್ಟೋಬರ್ 2 ರಂದು ತೆರೆಕಾಣಲಿದೆ.

ನಟ ಸುದೀಪ್‌ ವೃತ್ತಿ ಬದುಕಿಗೆ ಮಹತ್ವದ ತಿರುವು ಸಿಕ್ಕಿದ್ದು ಇದೇ ದಿನ! ಜುಲೈ 6ರಂದು ಕಿಚ್ಚನ ಜೀವನದಲ್ಲಿ ಆಗಿದ್ದೇನು?

ನಟ ʻಕಿಚ್ಚʼ ಸುದೀಪ್ ಕೆರಿಯರ್ ಬದಲಿಸಿದ ಜುಲೈ 6; ಏನಿವತ್ತು ಸ್ಪೆಷಲ್?

ʻಅಭಿನಯ ಚಕ್ರವರ್ತಿʼ ನಟ ಸುದೀಪ್ ಅವರ ವೃತ್ತಿಬದುಕಿನಲ್ಲಿ ಜುಲೈ 6 ಅತ್ಯಂತ ಮರೆಯಲಾಗದ ದಿನವಾಗಿದೆ. ಅವರಿಗೆ 'ಕಿಚ್ಚ' ಎಂಬ ಶಾಶ್ವತ ಬಿರುದು ತಂದುಕೊಟ್ಟ 'ಹುಚ್ಚ' ಸಿನಿಮಾ ಬಿಡುಗಡೆಯಾಗಿ ಇಂದಿಗೆ ಭರ್ತಿ 25 ವರ್ಷ ತುಂಬಿದ್ದರೆ, ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದ 'ಈಗ' ಚಿತ್ರಕ್ಕೆ 14 ವರ್ಷ ಪೂರೈಸಿದೆ.

ಕೃಷಿ ತಾಪಂಡ ಗೆಳೆಯ ವೈಶಾಖ್‌ ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆಯೇ ಕಾರಣವಾಯ್ತಾ? ಪೊಲೀಸರ ತನಿಖೆಯಲ್ಲಿ ಬಯಲಾಗಿದ್ದೇನು?

ನಟಿ ಕೃಷಿ ತಾಪಂಡ ಗೆಳೆಯ ವೈಶಾಖ್ ‌ಆತ್ಮಹತ್ಯೆಗೆ ಆರ್ಥಿಕ ಬಿಕ್ಕಟ್ಟು ಕಾರಣ?

ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಅವರ ಆಪ್ತ ಸ್ನೇಹಿತ ವೈಶಾಖ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಆರ್ ನಗರ ಪೊಲೀಸರ ತನಿಖೆ ತೀವ್ರಗೊಂಡಿದೆ. ವೈಶಾಖ್ ತೀವ್ರ ಆರ್ಥಿಕ ಸಂಕಷ್ಟ ಹಾಗೂ ಖಿನ್ನತೆಯಿಂದ ಕೃಷಿ ಅವರ ಫ್ಲ್ಯಾಟ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಕಷ್ಟದಲ್ಲಿದ್ದ ಗೆಳೆಯನಿಗೆ ಕೃಷಿ ನಿಯಮಿತವಾಗಿ ಬ್ಯಾಂಕ್ ಮೂಲಕ ಹಣದ ನೆರವು ನೀಡುತ್ತಿದ್ದರು ಎಂಬ ಮಾಹಿತಿ ಗೊತ್ತಾಗಿದೆ.

ಮೋಹನ್‌ಲಾಲ್‌ ಮನೆಯಲ್ಲಿ 10 ಆನೆ ದಂತ, 13 ಆನೆ ದಂತದ ವಿಗ್ರಹಗಳು; ಅರಣ್ಯಾಧಿಕಾರಿಗಳ ಮುಂದೆ ಶಾಕಿಂಗ್‌ ವಿಚಾರ ಬಯಲು

ʻನನ್ನ ಮನೇಲಿ 10 ಆನೆ ದಂತ, 13 ಆನೆ ದಂತದ ವಿಗ್ರಹಗಳಿವೆʼ ಎಂದ ಮೋಹನ್ ಲಾಲ್

Mohanlal Ivory Case: ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಅವರ ಕೊಚ್ಚಿ ನಿವಾಸದಲ್ಲಿ ಕಾನೂನುಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ 10 ಆನೆದಂತಗಳು ಹಾಗೂ 45 ಕೆಜಿಗೂ ಅಧಿಕ ತೂಕದ 13 ದಂತದ ಮೂರ್ತಿಗಳು ಪತ್ತೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಈ ಮಾಹಿತಿಯನ್ನು ಅರಣ್ಯ ಇಲಾಖೆಗೆ ಸ್ವತಃ ಮೋಹನ್‌ಲಾಲ್‌ ಅವರೇ ನೀಡಿದ್ದಾರೆ.

ಜೂ. ಎನ್‌ಟಿಆರ್‌ ಬಾಮೈದನಿಗೆ ನಾಯಕಿಯಾದ ಮೇಘಾ ಶೆಟ್ಟಿ; ಕೆವಿಎನ್‌ ಪ್ರೊಡಕ್ಷನ್ಸ್ ಮೂಲಕ ಟಾಲಿವುಡ್‌ಗೆ ಹಾರಿದ ʻಕನ್ನಡತಿʼ

ತೆಲುಗು ಚಿತ್ರದಲ್ಲಿ ಜೂ. ಎನ್‌ಟಿಆರ್‌ ಬಾಮೈದನಿಗೆ ನಾಯಕಿಯಾದ ಮೇಘಾ ಶೆಟ್ಟಿ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಮೇಘಾ ಶೆಟ್ಟಿ ಈಗ ಪ್ರತಿಷ್ಠಿತ ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್‌ನ ಹೊಸ ತೆಲುಗು ಚಿತ್ರದ (#NN5) ಮೂಲಕ ಟಾಲಿವುಡ್‌ಗೆ ಅದ್ಧೂರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶಿಸಲಿರುವ ಈ ಸಿನಿಮಾದಲ್ಲಿ ನಾರ್ನೆ ನಿತಿನ್ ನಾಯಕನಾಗಿ ನಟಿಸುತ್ತಿದ್ದಾರೆ.

Loading...