ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

9 ಭಕ್ತಿಗೀತೆಗಳುಳ್ಳ ‘ರಾಜರ ಭಾಗ್ಯವಿದು’ ಆಲ್ಬಂ ಬಿಡುಗಡೆ; ಸೋದೆ ಶ್ರೀ ವಿಶ್ವವಲ್ಲಭ ತೀರ್ಥರ ಆಶೀರ್ವಚನ

9 ಭಕ್ತಿಗೀತೆಗಳುಳ್ಳ ʻರಾಜರ ಭಾಗ್ಯವಿದುʼ ವಿಡಿಯೋ ಆಲ್ಬಂ ಲೋಕಾರ್ಪಣೆ

ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ 'ಶ್ರೀ ಹಯವದನ ಫೌಂಡೇಶನ್' ವತಿಯಿಂದ ಭಾವಸಮೀರ ಶ್ರೀ ವಾದಿರಾಜ ಸ್ವಾಮಿಗಳ ವಿರಚಿತ 9 ಭಕ್ತಿಗೀತೆಗಳನ್ನೊಳಗೊಂಡ "ರಾಜರ ಭಾಗ್ಯವಿದು" ಹಾಗೂ "ದಶಾವತಾರ ಸ್ತುತಿ" ವಿಡಿಯೋ ಆಲ್ಬಂಗಳನ್ನು ಜಯನಗರದ ಜಯರಾಮ ಸೇವಾ ಮಂಡಳಿಯಲ್ಲಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರು ಲೋಕಾರ್ಪಣೆಗೊಳಿಸಿದರು.

ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡುವವರ ಮೇಲೆ ಸಮರ ಸಾರಿದ ʻಬಿಗ್‌ ಬಾಸ್‌ʼ ಧ್ರುವಂತ್;‌ ಪೊಲೀಸರಿಗೆ ನೀಡಿದ ದೂರಿನಲ್ಲೇನಿದೆ?

ಕೆಟ್ಟ ಕಾಮೆಂಟ್‌ ಹಾಕೋರ ಮೇಲೆ ʻಬಿಗ್‌ ಬಾಸ್‌ʼ ಧ್ರುವಂತ್ ಕಾನೂನು ಸಮರ!

ಬಿಗ್ ಬಾಸ್ ಕನ್ನಡ ಸೀಸನ್ 12ರ ಮಾಜಿ ಸ್ಪರ್ಧಿ ಹಾಗೂ ನಟ ಧ್ರುವಂತ್ ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಅಶ್ಲೀಲ, ಮಾನಹಾನಿಕಾರಕ ಹಾಗೂ ಬೆದರಿಕೆ ಒಡ್ಡುವ ಪೋಸ್ಟ್‌ಗಳನ್ನು ಹಾಕುತ್ತಿದ್ದ ಟ್ರೋಲರ್‌ಗಳ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಮತ್ತು ಬಸವೇಶ್ವರ ನಗರದ ಸೈಬರ್ ಸೆಲ್‌ನಲ್ಲಿ ದೂರು ನೀಡಿದ್ದಾರೆ.

Dr Rajkumar: 'ಲೀಲಮ್ಮ.. ನಿನ್ನ ಗಂಡ ಯಾರಮ್ಮ?' ಪುಸ್ತಕ ಬಿಡುಗಡೆ; ʻಅಣ್ಣಾವ್ರು ಹಾಲಿನಂತೆ ಪರಿಶುದ್ಧʼ- ಎನ್. ಆರ್. ರಮೇಶ್

ʻಲೀಲಮ್ಮ.. ನಿನ್ನ ಗಂಡ ಯಾರಮ್ಮʼ ಪುಸ್ತಕ ಲೋಕಾರ್ಪಣೆ; ಲೇಖಕರು ಹೇಳಿದ್ದೇನು?

ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟದ ರಾಜ್ಯ ಗೌರವಾಧ್ಯಕ್ಷ ಎನ್. ಆರ್. ರಮೇಶ್ ಬರೆದಿರುವ 'ಲೀಲಮ್ಮ.. ನಿನ್ನ ಗಂಡ ಯಾರಮ್ಮ..?' ಕೃತಿ ಲೋಕಾರ್ಪಣೆಗೊಂಡಿದೆ. ನಟಿ ಲೀಲಾವತಿ ಅವರ ಪತಿ ರಂಗಭೂಮಿ ಕಲಾವಿದ ಮಹಾಲಿಂಗ ಭಾಗವತರ್ ಎಂಬುದಕ್ಕೆ ಚೆನ್ನೈನ ಆಸ್ತಿ ದಾಖಲೆಗಳ ಸಾಕ್ಷಿ ಒದಗಿಸಲಾಗಿದ್ದು, ಡಾ. ರಾಜ್ ಹಾಲಿನಂತೆ ಪರಿಶುದ್ಧರು ಎಂಬ ಸತ್ಯ ಎಂದು ಅವರು ಹೇಳಿದ್ದಾರೆ.

‘ಮೌನವಾಗಿದ್ದರೆ ಅದು ದೌರ್ಬಲ್ಯವಲ್ಲ’: ನೋವು ನೀಡುವವರ ವಿರುದ್ಧ ಸಿಡಿದೆದ್ದ ನಟಿ ಕೃಷಿ ತಾಪಂಡ

‌ʻಬೇರೆಯವರ ನೋವು ನಿಮಗೆ ಮನರಂಜನೆಯೇʼ; ನಟಿ ಕೃಷಿ ತಾಪಂಡ ಖಡಕ್‌ ಪ್ರಶ್ನೆ!

ವೈಯಕ್ತಿಕ ಬದುಕಿನ ಏಳುಬೀಳುಗಳಿಂದ ನೋವಿನಲ್ಲಿರುವ ನಟಿ ಕೃಷಿ ತಾಪಂಡ ಅವರನ್ನೇ ಟಾರ್ಗೆಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ಆ ಬಗ್ಗೆ ನಟಿ ಕೃಷಿ ಖಡಕ್ ಪ್ರತ್ಯುತ್ತರ ನೀಡಿದ್ದಾರೆ. ಮೌನ ಎಂದರೆ ದೌರ್ಬಲ್ಯವಲ್ಲ, ಒಳ್ಳೆಯತನ ನನ್ನ ವ್ಯಕ್ತಿತ್ವ ಎಂದಿದ್ದಾರೆ ಕೃಷಿ.

Ramayana Movie: ಇದೊಂದು ಕಾರಣಕ್ಕೆ ಎರಡು ಭಾಗಗಳಲ್ಲಿ ಬರ್ತಾ ಇದೆ ರಾಮಾಯಣ!

ಇದೊಂದು ಕಾರಣಕ್ಕೆ ಎರಡು ಭಾಗಗಳಲ್ಲಿ ಬರ್ತಾ ಇದೆ ರಾಮಾಯಣ!

Ramayana Movie: ಬಹುನಿರೀಕ್ಷಿತ ಪೌರಾಣಿಕ ಚಿತ್ರವು ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ, ಇದರ ಟೀಸರ್ ಅಧಿಕೃತ ಬಿಡುಗಡೆಗೆ ಮೊದಲೇ ಭಾರಿ ಸಂಚಲನ ಮೂಡಿಸಿದೆ. ತಯಾರಕರು ಇನ್ನೂ ಟ್ರೇಲರ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡದಿದ್ದರೂ, ಪ್ರದರ್ಶನಗಳಿಂದ ಸೋರಿಕೆಯಾದ ಹಲವಾರು ತುಣುಕುಗಳು ಈಗಾಗಲೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

Rishab Shetty: ಹಾಲಿವುಡ್‌ನಲ್ಲಿ ಮಿಂಚಿದ  ರಿಷಬ್ ಶೆಟ್ಟಿ! ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್

ಸ್ಪೈಡರ್ ಮ್ಯಾನ್ ಜೊತೆ ಡಿವೈನ್ ಸ್ಟಾರ್!

Spider Man: ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರಚಾರದ ಪ್ರೋಮೋವನ್ನು ಹಂಚಿಕೊಂಡಿದೆ.‌ ಹಾಲಿವುಡ್ ದೈತ್ಯ ಸಂಸ್ಥೆ ಸೋನಿ ಪಿಕ್ಚರ್ಸ್ ಮುಂಬರುವ ‘ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ’ ಸಿನಿಮಾದ ವಿಶೇಷ ಪ್ರಚಾರಕ್ಕಾಗಿ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ.

ನಟ ಅಖಿಲ್‌ಗಿಂತ ಪತ್ನಿ ಜೈನಬ್‌ 10 ವರ್ಷ ದೊಡ್ಡವರಾ? ಮೊದಲ ಬಾರಿಗೆ ಎಲ್ಲದಕ್ಕೂ ಪ್ರಬುದ್ಧ ಉತ್ತರ ನೀಡಿದ ನಾಗಾರ್ಜುನ ಪುತ್ರ!

ಪತ್ನಿ ಜೈನಬ್ ವಯಸ್ಸಿನ ಅಂತರದ‌ ಬಗ್ಗೆ ಟ್ರೋಲ್ಸ್; ನಟ ಅಖಿಲ್ ಹೇಳಿದ್ದೇನು?

'ಲೆನಿನ್' ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟ ಅಖಿಲ್ ಅಕ್ಕಿನೇನಿ, ತಮ್ಮ ಪತ್ನಿ ಜೈನಬ್ ಅವರ ಧರ್ಮ ಹಾಗೂ ಇಬ್ಬರ ನಡುವಿನ 10 ವರ್ಷಗಳ ವಯಸ್ಸಿನ ಅಂತರದ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಡೆದ ಟ್ರೋಲ್‌ಗಳಿಗೆ ಮೊದಲ ಬಾರಿಗೆ ಪ್ರಬುದ್ಧವಾಗಿ ಉತ್ತರಿಸಿದ್ದಾರೆ.

ನೀಟ್‌ ಪ್ರತಿಭಟನೆ ಬಗ್ಗೆ ಪೋಸ್ಟ್‌ ಹಾಕಿ 3 ಲಕ್ಷ ಫಾಲೋವರ್ಸ್‌ ಕಳೆದುಕೊಂಡ ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಪರ್ಲೆ ಮಾಣಿ; ಅಷ್ಟಕ್ಕೂ  ಅದರಲ್ಲೇನಿತ್ತು?

ನೀಟ್ ಬಗ್ಗೆ ಪೋಸ್ಟ್; 3 ಲಕ್ಷ ಫಾಲೋವರ್ಸ್ ಕಳೆದುಕೊಂಡ ನಿರೂಪಕಿ ಪರ್ಲೆ ಮಾಣಿ

ದೆಹಲಿಯಲ್ಲಿ ನಡೆದ ನೀಟ್ ಪೇಪರ್ ಲೀಕ್ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದ 'ಬಿಗ್ ಬಾಸ್' ಖ್ಯಾತಿಯ ಪರ್ಲೆ ಮಾಣಿ ತೀವ್ರ ವಿವಾದಕ್ಕೆ ಈಡಾಗಿದ್ದಾರೆ. ಪ್ರತಿಭಟನೆಗಿಂತ ಜೀವ ಮುಖ್ಯ ಎಂದು ಸಲಹೆ ನೀಡಿದ್ದಕ್ಕೆ ಅವರು ಎರಡೇ ದಿನಗಳಲ್ಲಿ 3 ಲಕ್ಷ ಫಾಲೋವರ್ಸ್‌ಗಳನ್ನು ಕಳೆದುಕೊಂಡಿದ್ದಾರೆ.

‌ʻವಾರಣಾಸಿʼ ಚಿತ್ರದ ಶೂಟಿಂಗ್‌ಗಾಗಿ ಗಂಡ - ಮಗಳೊಂದಿಗೆ ಹೈದರಾಬಾದ್‌ಗೆ ಬಂದಿಳಿದ ನಟಿ ಪ್ರಿಯಾಂಕಾ ಚೋಪ್ರಾ

ʻವಾರಣಾಸಿ' ಶೂಟಿಂಗ್‌ಗಾಗಿ ಹೈದರಾಬಾದ್‌ಗೆ ಬಂದಿಳಿದ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಪತಿ ನಿಕ್ ಜೋನಾಸ್ ಮತ್ತು ಮಗಳು ಮಾಲ್ತಿ ಮೇರಿಯೊಂದಿಗೆ ಹೈದರಾಬಾದ್‌ಗೆ ಆಗಮಿಸಿದ್ದು, ವಿಡಿಯೋ ವೈರಲ್ ಆಗಿದೆ. ಸೂಪರ್ ಸ್ಟಾರ್ ಮಹೇಶ್ ಬಾಬು ನಟನೆಯ ಹಾಗೂ ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ವಾರಣಾಸಿ' ಚಿತ್ರದ ಶೂಟಿಂಗ್‌ಗಾಗಿ ಅವರು ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ʻರಾಮಾಯಣ: ಪಾರ್ಟ್‌ 1ʼ ಚಿತ್ರದಲ್ಲಿ ರಣಬೀರ್‌ ಕಪೂರ್‌ - ಯಶ್‌ ಮುಖಾಮುಖಿ ಆಗ್ತಾರಾ? ಇಲ್ಲಿದೆ ಅಸಲಿ ಸತ್ಯ!

ʻರಾಮಾಯಣ: ಪಾರ್ಟ್ 1‌ʼರಲ್ಲಿ ರಣಬೀರ್ ಕಪೂರ್‌ - ಯಶ್ ಮುಖಾಮುಖಿ ಆಗಲ್ವಾ?

ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ: ಪಾರ್ಟ್ 1’ ಸಿನಿಮಾದಲ್ಲಿ ರಣಬೀರ್ ಕಪೂರ್ ಮತ್ತು ಯಶ್ ಮುಖಾಮುಖಿಯಾಗುವ ದೃಶ್ಯಗಳ ಶೂಟಿಂಗ್ ಇನ್ನೂ ನಡೆದಿಲ್ಲ ಎಂಬ ಸತ್ಯ ಹೊರಬಿದ್ದಿದೆ. 'ಸ್ಯಾನ್ ಡಿಯೋಗೋ ಕಾಮಿಕ್-ಕಾನ್'ನಲ್ಲಿ ಮಾತನಾಡಿದ ರಣಬೀರ್, "ಕ್ಲೈಮ್ಯಾಕ್ಸ್‌ನಲ್ಲಿ ಮಾತ್ರ ನಾವಿಬ್ಬರೂ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳಲಿದ್ದೇವೆ" ಎಂದಿದ್ದಾರೆ.

ವಿವಾದಗಳ ನಡುವೆಯೂ ಬಾಕ್ಸ್ ಆಫೀಸ್‌ನಲ್ಲಿ ‘ಕರಾವಳಿ’ ಸದ್ದು: 2ನೇ ದಿನ ಪ್ರಜ್ವಲ್ ದೇವರಾಜ್ ಸಿನಿಮಾದ ಕಲೆಕ್ಷನ್ ಡಬಲ್!

Prajwal: ವಿವಾದಗಳ ನಡುವೆಯೂ ʻಕರಾವಳಿʼ ಧಮಾಕಾ; ಎಷ್ಟಾಯ್ತು ಕಲೆಕ್ಷನ್?

ಗುರುದತ್ ಗಾಣಿಗ ನಿರ್ದೇಶನದ, ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಸಿನಿಮಾ ರಾಜ್ಯಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, 2ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಮೊದಲ ದಿನಕ್ಕಿಂತ ಎರಡರಷ್ಟು ಹೆಚ್ಚಾಗಿದೆಯಂತೆ. ಕಂಬಳದ ಹಿನ್ನೆಲೆಯ ಈ ಚಿತ್ರಕ್ಕೆ ಸಿಗುತ್ತಿರುವ ಅಭೂತಪೂರ್ವ ಪ್ರಶಂಸೆಯಿಂದಾಗಿ ಹೆಚ್ಚುವರಿಯಾಗಿ 25 ಸ್ಕ್ರೀನ್‌ಗಳನ್ನು ಸೇರಿಸಲಾಗಿದೆ.

ʻಲವ್‌ ಮಾಕ್ಟೇಲ್‌ʼ ಆಯ್ತು, ಈಗ 'ಲವ್ ಕಾಕ್ಟೇಲ್' ಕುಡಿಸಲು ಬಂದ ನಟ ಹರೀಶ್ ರಾಜ್; ಈ ಬಾರಿ ಪ್ಲೇಬಾಯ್‌ ಆಗಿ ಮಿಂಚಿಂಗ್!‌

ʻಲವ್ ಕಾಕ್ಟೇಲ್ʼ ಸಿನಿಮಾದಲ್ಲಿ ಪ್ಲೇ ಬಾಯ್ ಆಗಿ ಬಂದ ನಟ ಹರೀಶ್ ರಾಜ್!

ಕನ್ನಡ ಚಿತ್ರರಂಗದಲ್ಲಿ 30 ವರ್ಷಗಳ ಅನುಭವ ಹೊಂದಿರುವ ನಟ ಹಾಗೂ ನಿರ್ದೇಶಕ ಹರೀಶ್ ರಾಜ್ ಅಭಿನಯದ ‘ಲವ್ ಕಾಕ್ಟೇಲ್’ ಚಿತ್ರದ ಮೇಕಿಂಗ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಲವ್ ಫೇಲ್ಯೂರ್ ಆದ ನಂತರವೂ ಜೀವನವನ್ನು ಜಾಲಿಯಾಗಿ ಹೇಗೆ ಕಳೆಯಬಹುದು ಎಂಬುದನ್ನು ಪ್ಲೇ ಬಾಯ್ ಶೈಲಿಯಲ್ಲಿ ಹೆಣೆದಿರುವ ಈ ಚಿತ್ರಕ್ಕೆ ಜನಾರ್ಧನ್ ಪಿ ಬಂಡವಾಳ ಹೂಡಿದ್ದಾರೆ.

ಬಸ್ ಕಂಡಕ್ಟರ್ ಟು ʻಸೂಪರ್‌ ಸ್ಟಾರ್ʼ; ಆತ್ಮಕಥೆ ಬರೆಯುತ್ತಿದ್ದಾರೆ ರಜನಿಕಾಂತ್, ಸಿನಿಮಾ ಆಗಲಿದೆಯಾ ʻತಲೈವಾʼ ಬದುಕು?

ಆತ್ಮಕಥೆ ಬರೆಯುವಲ್ಲಿ ರಜನಿಕಾಂತ್ ಬ್ಯುಸಿ! ಬರಲಿದೆಯಾ ʻತಲೈವಾʼ ಬಯೋಪಿಕ್?‌

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ ಆನಂತ ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿರುವ ರಜನಿಕಾಂತ್ ಅವರ ಜೀವನ ಪಯಣ ಈಗ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ರಜನಿಕಾಂತ್ ಪ್ರಸ್ತುತ ತಾವು ಬರೆಯುತ್ತಿರುವ ಆತ್ಮಕಥೆಯನ್ನು ಆಧರಿಸಿ ಬಯೋಪಿಕ್ ನಿರ್ಮಿಸುವ ಕುರಿತು ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.

3ನೇ ದಿನಕ್ಕೆ ಚೇತರಿಸಿಕೊಂಡ ʻಜನ ನಾಯಗನ್‌ʼ; ʻದಳಪತಿʼ ವಿಜಯ್‌ ಸಿನಿಮಾದ ಕಲೆಕ್ಷನ್‌ನಲ್ಲಿ ಏರಿಕೆ!

2ನೇ ದಿನ ಕುಸಿತ, 3ನೇ ದಿನ ಚೇತರಿಕೆ; ʻಜನ ನಾಯಗನ್‌ʼ ಕಲೆಕ್ಷನ್‌ ಜಾದೂ!

ʻದಳಪತಿʼವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದ್ದರೂ, 3ನೇ ದಿನ ಶೇ. 34.8 ರಷ್ಟು ಚೇತರಿಕೆ ಕಂಡು ಭಾರತದಲ್ಲಿ 92.35 ಕೋಟಿ ರೂ. ಗಳಿಕೆ ಮಾಡಿದೆ. ಜಾಗತಿಕವಾಗಿ 171.84 ಕೋಟಿ ಗಳಿಸಿರುವ ಎಚ್. ವಿನೋದ್ ನಿರ್ದೇಶನದ ಈ ಚಿತ್ರ, ಭಾನುವಾರದ ಗಳಿಕೆಯೊಂದಿಗೆ 200 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಲ್ಲಿದೆ.

‘ನೀನು ಅತ್ಯಂತ ಕೊಳಕು ಮಹಿಳೆ ಎಂದಿದ್ದರು’; ಪತಿ ದರ್ಶನ್ ಹೇಳಿದ್ದ ಆಘಾತಕಾರಿ ಮಾತನ್ನು ಬಹಿರಂಗಪಡಿಸಿದ ನಟಿ ಅಪರಾ ಮೆಹ್ತಾ!

ʻನೀನು ಅತ್ಯಂತ ಕೊಳಕು ಮಹಿಳೆʼ; ಪತಿ ಹೇಳಿದ್ದ ಆ ಮಾತನ್ನು ನೆನೆದ ನಟಿ ಅಪರಾ!

'ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ' ಖ್ಯಾತಿಯ ಹಿರಿಯ ನಟಿ ಅಪರಾ ಮೆಹ್ತಾ ತಮ್ಮ ಪತಿ ದರ್ಶನ್ ಜರಿವಾಲಾ ಅವರಿಂದ ಬೇರ್ಪಟ್ಟ ಆಘಾತಕಾರಿ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಮದುವೆಯ ವಾರ್ಷಿಕೋತ್ಸವದಂದೇ ಅವರಿಗೆ, 'ನನ್ನ ಜೀವನದಲ್ಲಿ ಕಂಡ ಅತ್ಯಂತ ಕೊಳಕು ಮಹಿಳೆ ನೀನು, ನನಗೆ ನಿನ್ನ ಮೇಲೆ ಪ್ರೀತಿ ಇಲ್ಲ' ಎಂದು ಪತಿ ಹೇಳಿ ಹೊರನಡೆದಿದ್ದರು.

Karan Johar: ಸ್ಟೋವಾ ಪ್ಯಾರಿಸ್‌ನ ಬ್ರಾಂಡ್ ರಾಯಭಾರಿಯಾಗಿ ಕರಣ್ ಜೋಹರ್

ಸ್ಟೋವಾ ಪ್ಯಾರಿಸ್‌ನ ಬ್ರಾಂಡ್ ರಾಯಭಾರಿಯಾಗಿ ಕರಣ್ ಜೋಹರ್

ಹೆಚ್ಚಿನ ಫ್ಯಾಷನ್ ಸೌಂದರ್ಯ ಸಂವೇದನೆ ಮತ್ತು ವಿನ್ಯಾಸದ ಬಗ್ಗೆ ತೀಕ್ಷ್ಣವಾದ ಕಣ್ಣಿಗೆ ಹೆಸರು ವಾಸಿಯಾದ ಜೋಹರ್ ಅವರ ವೈಯಕ್ತಿಕ ಸ್ಥಳಗಳ ದೃಷ್ಟಿಕೋನವು ಬ್ರ್ಯಾಂಡ್‌ನ ಆಧುನಿಕ, ದಿಟ್ಟ ಮತ್ತು ಅಭಿವ್ಯಕ್ತಿಶೀಲ ಜೀವನದ ದೃಷ್ಟಿಕೋನಕ್ಕೆ ಪೂರಕವಾಗಿದೆ ಮತ್ತು ಉನ್ನತೀಕರಿಸಲಿದೆ. ವಿನ್ಯಾಸ, ಕರಕುಶಲತೆ ಮತ್ತು ವೈಯಕ್ತಿಕಗೊಳಿಸಿದ ವಾಸಸ್ಥಳಗಳ ಅನ್ವೇಷಣೆಯೊಂದಿಗೆ ಭಾರತೀಯ ಗ್ರಾಹಕ ಸೌಂದರ್ಯಶಾಸ್ತ್ರದ ಪ್ರಜ್ಞೆಯು ಬೃಹತ್ ಪೀಳಿಗೆಯ ಬದಲಾವಣೆಗೆ ಒಳಗಾಗುತ್ತಿದೆ.

ನೀಟ್ ಪ್ರತಿಭಟನಾ ವೇದಿಕೆಯಲ್ಲಿ ‘ಜನ ನಾಯಗನ್’ ಚಿತ್ರದ ಪ್ರಸ್ತಾಪ; ʻಬಿಗ್‌ ಬಾಸ್‌ʼ ಮಾಜಿ ಸ್ಪರ್ಧಿ ಸನಮ್ ಶೆಟ್ಟಿ ಕೈಯಿಂದ ಮೈಕ್ ಕಸಿದುಕೊಂಡ ಆಯೋಜಕರು!

ನೀಟ್ ಪ್ರತಿಭಟನೆಯಲ್ಲಿ ನಟಿಯಿಂದ 'ಜನ ನಾಯಗನ್' ಪ್ರಸ್ತಾಪ; ಮುಂದೇನಾಯ್ತು?

ನೀಟ್ ಪರೀಕ್ಷೆ ಅಕ್ರಮ ಖಂಡಿಸಿ ಚೆನ್ನೈನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಸಿಎಂ ವಿಜಯ್ ಅಭಿನಯದ 'ಜನ ನಾಯಗನ್' ಸಿನಿಮಾ ಪ್ರಸ್ತಾಪಿಸಿದ 'ಬಿಗಿ ಬಾಸ್' ಖ್ಯಾತಿಯ ನಟಿ ಸನಮ್ ಶೆಟ್ಟಿ ಅವರಿಂದ ಆಯೋಜಕರು ಮೈಕ್ ಕಸಿದುಕೊಂಡಿದ್ದಾರೆ.

ನಟ ವಿಜಯ್‌ ಪತ್ನಿ ಸಂಗೀತಾ ʻಜನ ನಾಯಗನ್‌ʼ ಸಿನಿಮಾವನ್ನು ಫಸ್ಟ್‌ ಡೇ ಫಸ್ಟ್‌ ಶೋ ಥಿಯೇಟರ್‌ಗೆ ಹೋಗಿ ನೋಡಿದ್ರಾ? ವೈರಲ್‌ ವಿಡಿಯೋದ ಅಸಲಿಯತ್ತೇನು?

‘ಜನ ನಾಯಗನ್’ ಫಸ್ಟ್ ಡೇ ಫಸ್ಟ್‌ ಶೋ ವೀಕ್ಷಿಸಿದ್ರಾ ವಿಜಯ್ ಪತ್ನಿ ಸಂಗೀತಾ?

ತಮಿಳುನಾಡು ಸಿಎಂ ದಳಪತಿ ವಿಜಯ್ ಅವರ ಅಭಿನಯದ ಕೊನೆಯ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದೆ. ಈ ನಡುವೆ, ವಿಜಯ್ ಅವರಿಂದ ವಿಚ್ಛೇದನ ಕೋರಿರುವ ಪತ್ನಿ ಸಂಗೀತಾ ಸ್ವರ್ಣಲಿಂಗಂ ಫಸ್ಟ್ ಡೇ ಫಸ್ಟ್ ಶೋ ನೋಡಲು ಬಂದಿದ್ದರು ಎಂಬ ವಿಡಿಯೋ ವೈರಲ್ ಆಗಿದೆ. ಆದರೆ, ಈ ವಿಡಿಯೋದ ಸತ್ಯಾಂಶ ಏನು?

ʻನನ್ನ ಆಕ್ಟಿಂಗ್‌ ನೋಡಿ ನನಗೇ ಅಸಹ್ಯ ಎನಿಸಿತ್ತುʼ; ನಟ ಅಖಿಲ್‌ ಅಕ್ಕಿನೇನಿ ಪ್ರಾಮಾಣಿಕ ಮಾತುಗಳಿಗೆ ಬಹುಪರಾಕ್‌

ʻನನ್ನ ಆಕ್ಟಿಂಗ್ ನೋಡಿ ನನಗೇ ಅಸಹ್ಯ ಆಯ್ತುʼ; ಅಖಿಲ್ ಹೀಗೇಕೆ ಹೇಳಿದ್ರು?

ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ತಮ್ಮ 'ಏಜೆಂಟ್' ಸಿನಿಮಾದ ಹೀನಾಯ ಸೋಲಿನ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, "ಚಿತ್ರದಲ್ಲಿ ನನ್ನ ಓವರ್ ಆಕ್ಟಿಂಗ್ ನೋಡಿ ನನಗೇ ಅಸಹ್ಯ ಎನಿಸಿತ್ತು" ಎಂದು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ. ಈ ಸೋಲಿನ ನಂತರ ಎರಡು ವರ್ಷಗಳ ಕಾಲ ನಟನೆಯಿಂದ ವಿರಾಮ ಪಡೆದಿದ್ದ ಅವರು, ಇತ್ತೀಚೆಗೆ ಬಿಡುಗಡೆಯಾದ 'ಲೆನಿನ್' ಚಿತ್ರದ ಭರ್ಜರಿ ಗೆಲುವು ಪಡೆದುಕೊಂಡಿದ್ದಾರೆ.

ಅಬ್ಬಬ್ಬಾ! ಬರೀ ಪ್ರಚಾರಕ್ಕೆ ಇಷ್ಟೊಂದು ದುಡ್ಡು ಖರ್ಚು ಮಾಡ್ತಾರಾ? ʻರಾಮಾಯಣʼ ಟೀಮ್‌ನಿಂದ ಮೆಗಾ ಪ್ಲ್ಯಾನ್!‌

ಬರೀ ಪ್ರಚಾರಕ್ಕೇ ನೂರಾರು ಕೋಟಿ ಖರ್ಚು! ʻರಾಮಾಯಣʼ ಟೀಮ್‌ನ ಸಖತ್‌ ಪ್ಲ್ಯಾನ್

ನಿತೇಶ್ ತಿವಾರಿ ನಿರ್ದೇಶನದ ಹಾಗೂ ಯಶ್-ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ’ ಸಿನಿಮಾ ಪ್ರಚಾರಕ್ಕಾಗಿ ಬರೋಬ್ಬರಿ ದುಬಾರಿ ಮೊತ್ತವನ್ನು ಮೀಸಲಿಟ್ಟಿದ್ದು, ಈ ಸುದ್ದಿ ಭಾರಿ ವೈರಲ್‌ ಆಗುತ್ತಿದೆ. ಸದ್ಯ ಈ ಸಿನಿಮಾದ ಟ್ರೇಲರ್ ಲಾಂಚ್ ಮುಂದೂಡಲಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕ ಘೋಷಣೆ ಆಗಲಿದೆ.

‘ನನ್ನ ಹೊಗಳ್ತಾ ಇದ್ದೀರಾ? ಅಥವಾ ಟ್ರೋಲ್‌ ಮಾಡ್ತಿದ್ದೀರಾ?’: ಪತಿ ನಾಗ ಚೈತನ್ಯ ಮೇಲೆ ಹುಸಿ ಮುನಿಸು ತೋರಿದ ನಟಿ ಶೋಭಿತಾ ಧೂಳಿಪಾಲ!

ʻಹೊಗಳ್ತಿದ್ದೀರಾ? ಟ್ರೋಲ್ ಮಾಡ್ತಿದ್ದೀರಾ?ʼ; ಚೈತನ್ಯಗೆ ಶೋಭಿತಾ ಪ್ರಶ್ನೆ!

ಟಾಲಿವುಡ್ ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ತಮಾಷೆಯ ಪೋಸ್ಟ್ ಪ್ರೇಕ್ಷಕರ ಗಮನ ಸೆಳೆದಿದೆ. ಮದುವೆಯಾದ ಎರಡು ವರ್ಷಗಳ ನಂತರ ಶೋಭಿತಾ ತಮಗಾಗಿ ರಾತ್ರಿ ಊಟ ಸಿದ್ಧಪಡಿಸಿದ್ದಾಳೆ ಎಂದು ಚೈತನ್ಯ ಕಾಲೆಳೆದರೆ, ಇದಕ್ಕೆ ಶೋಭಿತಾ ನೀಡಿದ ಪ್ರತ್ಯುತ್ತರ ಏನು?

Thalapathy Vijay: ʻಜನ ನಾಯಗನ್‌ʼ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ ಕುಸಿತ! ಈವರೆಗೂ ಆಗಿರುವ ಕಲೆಕ್ಷನ್‌ ಎಷ್ಟು ಗೊತ್ತಾ?

ʻದಳಪತಿʼ ವಿಜಯ್ ನಟನೆಯ ʻಜನ ನಾಯಗನ್ʼ‌ ಸಿನಿಮಾದ ಗಳಿಕೆಯಲ್ಲಿ ಕುಸಿತ!

ತಮಿಳುನಾಡು ಸಿಎಂ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯಲ್ಲಿ 2ನೇ ದಿನ ಶೇ. 50 ರಷ್ಟು ಭಾರಿ ಕುಸಿತ ಕಂಡಿದೆ. ಮೊದಲ ದಿನ ವಿಶ್ವಾದ್ಯಂತ 78 ಕೋಟಿ ರೂ. ಬಾಚಿದ್ದ ಈ ಚಿತ್ರ, ಎರಡನೇ ದಿನ ಭಾರತದಲ್ಲಿ 21.15 ಕೋಟಿ ರೂ. ಗಳಿಸಿದೆ.

‘ತದ್ವಿರುದ್ಧ’ ಸಿನಿಮಾ ಪ್ರಚಾರಕ್ಕೆ ಗೈರು: ನಟಿ ಸುಮನ್ ರಂಗನಾಥನ್ ವಿರುದ್ಧ ವಾಣಿಜ್ಯ ಮಂಡಳಿಗೆ ದೂರು!

ನಟಿ ಸುಮನ್ ರಂಗನಾಥನ್ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ ಚಿತ್ರತಂಡ

'ತದ್ವಿರುದ್ಧ' ಸಿನಿಮಾದ ನಟಿ ಸುಮನ್ ರಂಗನಾಥನ್ ಅವರು ಪೂರ್ಣ ಸಂಭಾವನೆ ಪಡೆದಿದ್ದರೂ ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ಲಭ್ಯವಾಗುತ್ತಿಲ್ಲ ಎಂದು ನಿರ್ಮಾಣ ಸಂಸ್ಥೆ 'ಚಾರ್ಮಿಯನ್ ಮೋಷನ್ ಪಿಕ್ಚರ್ಸ್' ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದೆ. ಜುಲೈ 31 ರಂದು ಸಿನಿಮಾ ಬಿಡುಗಡೆಯಾಗಲಿದೆ.

ಎಸ್.‌ ಜಾನಕಿ ಅಂತ್ಯಸಂಸ್ಕಾರಕ್ಕೆ ಹೋಗಿಲ್ಲವೆಂದು ಟ್ರೋಲ್; ಬಹಿರಂಗವಾಗಿ ಬೇಸರ ವ್ಯಕ್ತಪಡಿಸಿದ ಗಾಯಕಿ ಅನುರಾಧಾ ಭಟ್!

‌ʻಜಾನಕಮ್ಮನ ಮೇಲಿನ ಪ್ರೀತಿಗೆ ನಿಮ್ಮ ಸರ್ಟಿಫಿಕೇಟ್ ಬೇಕಿಲ್ಲʼ-ಅನುರಾಧಾ ಭಟ್‌

ಹಿರಿಯ ಗಾಯಕಿ ಎಸ್. ಜಾನಕಿ ಅವರ ಅಂತ್ಯಸಂಸ್ಕಾರಕ್ಕೆ ಹಾಜರಾಗಲಿಲ್ಲವೆಂದು ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುತ್ತಿದ್ದ ಟ್ರೋಲರ್‌ಗಳಿಗೆ ಗಾಯಕಿ ಅನುರಾಧಾ ಭಟ್ ಖಡಕ್ ಸ್ಪಷ್ಟೀಕರಣ ನೀಡಿದ್ದಾರೆ. ಮೈಸೂರಿನಲ್ಲಿ ಉಚಿತವಾಗಿ ನೀಡಿದ ಸಂಗೀತ ನಮನದ ಭಕ್ತಿಯನ್ನು ಟಿಆರ್‌ಪಿ ಅಥವಾ ಹಣಕ್ಕಾಗಿ ಮಾಡಿದ ನಾಟಕ ಎಂದು ಬಿಂಬಿಸಿದವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Loading...