ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

‘ಜನ ನಾಯಗನ್’ ಚಿತ್ರಕ್ಕೆ ಸೆನ್ಸಾರ್‌ ಸರ್ಟಿಫಿಕೇಟ್ ಸಿಕ್ಕ ಬೆನ್ನಲ್ಲೇ ಲೀಕ್‌ ಆಯ್ತು ರಿಲೀಸ್‌ ಡೇಟ್;‌ ಸಿಎಂ ವಿಜಯ್‌ ಕೊನೇ ಸಿನಿಮಾ ಯಾವಾಗ ಬರತ್ತೆ?

ʻಜನ ನಾಯಗನ್ʼ ರಿಲೀಸ್ ಡೇಟ್ ಲೀಕ್; ಸಿಎಂ ವಿಜಯ್ ಕೊನೇ ಸಿನಿಮಾ ಬರೋದ್ಯಾವಾಗ?

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯಿಂದ 12 ಬದಲಾವಣೆಗಳೊಂದಿಗೆ ‘ಎ’ ಪ್ರಮಾಣಪತ್ರ ಪಡೆದ ಬೆನ್ನಲ್ಲೇ, ಯುಕೆ ವಿತರಕರಿಂದ ಜುಲೈ 24 ರ ಬಿಡುಗಡೆ ದಿನಾಂಕ ಲೀಕ್ ಆಗಿದೆ. ಟಿವಿಕೆ ಪಕ್ಷದ ಉಲ್ಲೇಖ ಹಾಗೂ ರಾಷ್ಟ್ರಧ್ವಜದ ದೃಶ್ಯಗಳಿಗೆ ಕತ್ತರಿ ಬಿದ್ದಿದ್ದು, ಸದ್ಯ ಎಲ್ಲರ ಗಮನ ರಿಲೀಸ್‌ ಡೇಟ್‌ ಮೇಲಿದೆ.

Actor Arya: ತಮಿಳು ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲು

ತಮಿಳು ನಟ ಆರ್ಯ ವಿರುದ್ಧ ವಂಚನೆ ಪ್ರಕರಣ ದಾಖಲು

Actor Arya: ಕ್ಯಾಮೆರಾ ಉಪಕರಣಗಳನ್ನು ಬಾಡಿಗೆಗೆ ನೀಡುವ ಕಂಪನಿಯೊಂದು ನಟ ಆರ್ಯ ವಿರುದ್ಧ ದೂರು ದಾಖಲು ಮಾಡಿದ್ದು, ಹಣಕಾಸು ವಂಚನೆ ಮಾಡಿದ್ದಾರೆಂದು ಆರೋಪಿಸಿದೆ. ಅನಂತನ್ ಕಾಡು ಚಿತ್ರದ ನಿರ್ಮಾಣಕ್ಕೆ ಸಂಬಂಧಿಸಿದ ಆರ್ಯ, ನಿರ್ಮಾಪಕ ವಿನೋದ್ ಮತ್ತು ಇತರರು ಚಿತ್ರದ ಚಿತ್ರೀಕರಣದ ಸಮಯದಲ್ಲಿ ಬಳಸಲಾದ ಕ್ಯಾಮೆರಾ ಮತ್ತು ಬೆಳಕಿನ ಉಪಕರಣಗಳಿಗೆ ಬಾಕಿ ಇರುವ ₹ 1.80 ಕೋಟಿಗಿಂತ ಹೆಚ್ಚಿನ ಹಣವನ್ನು ಪಾವತಿಸಲು ವಿಫಲರಾಗಿದ್ದಾರೆ ಎಂದು ಕಂಪನಿ ಆರೋಪಿಸಿದೆ.

ಭೂಗತ ಲೋಕದ ಕಥೆ ಹೇಳುತ್ತಾ ಗಮನಸೆಳೆದ ʻರಕ್ಕಿʼ; ರೌಡಿಸಂ ಸಿನಿಮಾಗೆ ವೆಂಕಟ್ ಭಾರದ್ವಾಜ್ ಡೈರೆಕ್ಷನ್‌!

Rakky Movie: ಭೂಗತ ಲೋಕದ ಕಥೆಗೆ ವೆಂಕಟ್ ಭಾರದ್ವಾಜ್ ಡೈರೆಕ್ಷನ್

ವಿಭಿನ್ನ ಚಿತ್ರಗಳ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೌಟುಂಬಿಕ ಎಳೆಯುಳ್ಳ ಭೂಗತ ಲೋಕದ ಕಥಾಹಂದರ ಹೊಂದಿರುವ ‘ರಕ್ಕಿ’ ಸಿನಿಮಾವನ್ನು ತೆರೆಗೆ ತಂದಿದ್ದಾರೆ. ಅಪ್ಪು ಅಭಿಮಾನಿ ರಕ್ಕಿ ಸುರೇಶ್ ನಾಯಕನಾಗಿ ನಟಿಸಿದ್ದು, ಬಿ. ಸುರೇಶ್, ಸಂಪತ್ ಮೈತ್ರೇಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ʻನಾಯಕಿ ಪ್ರಧಾನ ಸಿನಿಮಾವನ್ನ ಯಾರ್ ನೋಡ್ತಾರೆ‌ʼ; ಎಲ್ಲರ ಅಭಿಪ್ರಾಯ ಸುಳ್ಳು ಮಾಡಿದ ನಟಿ ಸಮಂತಾ, 100 ಕೋಟಿ ಕ್ಲಬ್‌ ಸೇರಿದ 'ಮಾ ಇಂಟಿ ಬಂಗಾರಂ'!

100 ಕೋಟಿ ಕ್ಲಬ್‌ಗೆ 'ಮಾ ಇಂಟಿ ಬಂಗಾರಂ'; ಖುಷಿಯಾದ ತುಂಬು ಗರ್ಭಿಣಿ ಸಮಂತಾ!

ನಟಿ ಸಮಂತಾ ಮುಖ್ಯ ಭೂಮಿಕೆಯ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿ ಭರ್ಜರಿ ದಾಖಲೆ ಬರೆದಿದೆ. ಪ್ರಸ್ತುತ ತುಂಬು ಗರ್ಭಿಣಿಯಾಗಿರುವ ಸಮಂತಾ, ಈ ಸಿನಿಮಾ ಬಿಡುಗಡೆಗೂ ಮುನ್ನ ಮಹಿಳಾ ಪ್ರಧಾನ ಸಿನಿಮಾವನ್ನು ಯಾರೂ ನೋಡುವುದಿಲ್ಲ ಎಂದು ವಿತರಕರು ಆಡಿಕೊಂಡಿದ್ದ ಕಹಿ ಮಾತನ್ನು ನೆನೆದು ಭಾವುಕರಾಗಿದ್ದಾರೆ.

Sunny Deol: ಭಾರತ ಮತ್ತು ಪಾಕ್ ವಿಭಜನೆಯ ಕಥೆ! ಬಟ್ವಾರಾದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌

`ಬಟ್ವಾರಾ'ದಿಂದ ಹೊರ ಬಿತ್ತು ಬಿಗ್‌ ಅಪ್‌ಡೇಟ್‌

Sunny Deol: ಭಾರತ ಮತ್ತು ಪಾಕ್ ವಿಭಜನೆಯ ನಂತರ ನಡೆದ ಗಲಭೆಗಳು ಮತ್ತು ಅಶಾಂತಿಯ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಸನ್ನಿ ಡಿಯೋಲ್ ಮತ್ತು ಶಬನಾ ಅಜ್ಮಿ ನಟಿಸಿದ್ದಾರೆ. ಅದೇ ರೀತಿಯಲ್ಲಿ ಈ ಚಿತ್ರದಲ್ಲಿ ಪ್ರೀತಿ ಜಿಂಟಾ, ಕರಣ್ ಡಿಯೋಲ್ ಮ್ತುತ ಅಭಿಮನ್ಯು ಸಿಂಗ್ ನಟಿಸಿದ್ದಾರೆ. ಚಿತ್ರ ಅಗಸ್ಟ್ 14, 2026 ರಂದು ತೆರೆಗೆ ಬರಲಿದೆ. ಬಟ್ವಾರಾ 1947 ಜುಲೈ 15 ರಂದು ತನ್ನ ಎರಡನೇ ಟೀಸರ್ ಅನ್ನು ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ.

‌Lenin Movie: ಕೊನೆಗೂ ಬಾಕ್ಸ್‌ ಆಫೀಸ್‌ನಲ್ಲಿ ಗೆದ್ದ ಅಖಿಲ್‌ ಅಕ್ಕಿನೇನಿ; ವಿಲನ್‌ ಪಾತ್ರ ಮಾಡಿ ಭಾರಿ ಮೆಚ್ಚುಗೆ ಪಡೆದ ಕನ್ನಡ ನಟ ಪ್ರಮೋದ್ ಪಂಜು

ಬಾಕ್ಸ್ ಆಫೀಸ್‌ನಲ್ಲಿ ʻಲೆನಿನ್ʼ ಸುನಾಮಿ; ತೆಲುಗಿನಲ್ಲಿ ಮಿಂಚಿದ ನಟ ಪ್ರಮೋದ್

ಟಾಲಿವುಡ್ ನಟ ಅಖಿಲ್ ಅಕ್ಕಿನೇನಿ ಅಭಿನಯದ ‘ಲೆನಿನ್’ ಚಿತ್ರ ಕೇವಲ ಎರಡೇ ದಿನಗಳಲ್ಲಿ ವಿಶ್ವಾದ್ಯಂತ 37 ಕೋಟಿ ರೂಪಾಯಿ ಗಳಿಸಿ ಬಾಕ್ಸ್ ಆಫೀಸ್‌ನಲ್ಲಿ ಧೂಳೀಪಟ ಮಾಡಿದೆ. ಮುರಳಿ ಕಿಶೋರ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್‌ನಲ್ಲಿ ಕನ್ನಡದ ನಟ ಪ್ರಮೋದ್ ಪಂಜು 'ವಸಂತ್' ಎಂಬ ಖಳನಾಯಕನಾಗಿ ಅಬ್ಬರಿಸಿದ್ದು, ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.

S. Janaki's last rites: ಗಾನಕೋಗಿಲೆ ಎಸ್‌.ಜಾನಕಿ ಪಂಚಭೂತಗಳಲ್ಲಿ ಲೀನ; ಚಿತೆಗೆ ಮೊಮ್ಮಗಳು ಅಪ್ಸರಾ ಅಗ್ನಿಸ್ಪರ್ಶ

ಪಂಚಭೂತಗಳಲ್ಲಿ ಎಸ್‌.ಜಾನಕಿ ಲೀನ; ಚಿತೆಗೆ ಮೊಮ್ಮಗಳಿಂದ ಅಗ್ನಿಸ್ಪರ್ಶ

ಮೈಸೂರಿನ ಸರಗೂರು ಬಳಿಯ ಕಣಿಯನಹುಂಡಿ ಗ್ರಾಮದ ತೋಟದಲ್ಲಿ ಭಾನುವಾರ ಸಂಜೆ ತೆಲುಗು ಬ್ರಾಹ್ಮಣ ಸಂಪ್ರದಾಯ ಹಾಗೂ ಸಕಲ ಸರ್ಕಾರಿ ಗೌರವಗಳೊಂದಿಗೆ ಎಸ್‌.ಜಾನಕಿ ಅರ ಅಂತ್ಯ ಸಂಸ್ಕಾರ ನಡೆಸಲಾಗಿದೆ. ಮೊಮ್ಮಗಳು ಅಪ್ಸರಾ ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು.

S Janaki: ʻನನ್ನ ಅಜ್ಜಿ ಈ ಜಗತ್ತಿಗೆ ಸೇರಿದವರು, ಅವರು ನಮ್ಮೆಲ್ಲರ ಹೃದಯಗಳಲ್ಲೂ ಇರುತ್ತಾರೆʼ; ಅಗಲಿದ ಜಾನಕಮ್ಮರನ್ನು ನೆನೆದ ಮೊಮ್ಮಗಳು, ಮಾಜಿ ಸೊಸೆ ಹೇಳಿದ್ದೇನು?

ʻಸ್ವರ ಸಾಮ್ರಾಜ್ಞಿʼ ಜಾನಕಮ್ಮರನ್ನು ನೆನೆದ ಮೊಮ್ಮಗಳು - ಮಾಜಿ ಸೊಸೆ

ದಕ್ಷಿಣ ಭಾರತದ ಹೆಮ್ಮೆಯ ಗಾನಕೋಗಿಲೆ ಎಸ್‌ ಜಾನಕಿ ಅವರ ಅಂತ್ಯಸಂಸ್ಕಾರವನ್ನು ಮೈಸೂರು ಜಿಲ್ಲೆಯ ಕಣಿಯನಹುಂಡಿ ಗ್ರಾಮದ ಫಾರ್ಮ್ ಹೌಸ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಜಾನಕಮ್ಮ ಇಡೀ ಜಗತ್ತಿಗೆ ಸೇರಿದ ಸ್ವತಂತ್ರ ಮನಸ್ಸಿನ ಧ್ವನಿ ಎಂದು ಮೊಮ್ಮಗಳು ಹಾಗೂ ಮಾಜಿ ಸೊಸೆ ಉಮಾ ಮಾಧ್ಯಮಗಳ ಮುಂದೆ ಭಾವುಕರಾಗಿ ಹೇಳಿದ್ದಾರೆ.

ಮಗ ಮುರಳಿ ಕೃಷ್ಣ ಜೊತೆ ತಮಿಳಿನ ಸೂಪರ್‌ ಹಿಟ್‌ ʻ96ʼ ಸಿನಿಮಾದಲ್ಲಿ ನಟಿಸಿದ್ದ ಎಸ್‌. ಜಾನಕಿ; ಅಂದು ಅಭಿಮಾನಿಗಳಿಗೆ ಆಗಿದ್ದ ನಿರಾಸೆ ಏನ್‌ ಗೊತ್ತಾ?

ʻ96ʼ ಚಿತ್ರದಲ್ಲಿ ನಟಿಸಿದ್ದ ಜಾನಕಿ; ಆದ್ರೆ ಫ್ಯಾನ್ಸ್‌ಗೆ ಬೇಜಾರಾಗಿದ್ದೇಕೆ?

8 ವರ್ಷಗಳ ಹಿಂದೆ ವಿಜಯ್ ಸೇತುಪತಿ ನಟನೆಯ '96' ಚಿತ್ರದಲ್ಲಿ ಜಾನಕಮ್ಮ ತಮ್ಮ ದಿವಂಗತ ಪುತ್ರ ಮುರಳಿ ಕೃಷ್ಣ ಅವರೊಂದಿಗೆ ನಟಿಸಿದ್ದರು. ನಾಲ್ಕು ನಿಮಿಷಗಳ ಅಪರೂಪದ ದೃಶ್ಯವನ್ನು ಚಿತ್ರದಿಂದ ಕತ್ತರಿಸಿ ತೆಗೆದುಹಾಕಲಾಗಿತ್ತು, ಇದು ಅಂದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತ್ತು.

ಮಲಯಾಳಂ ರಿಯಾಲಿಟಿ ಶೋದಲ್ಲಿ ಕನ್ನಡ ಹಾಡು ನೆನಪಿಸಿಕೊಂಡಿದ್ದ ಗಾಯಕಿ ಜಾನಕಿ; ಹಳೆ ವಿಡಿಯೊ ಮತ್ತೆ ವೈರಲ್‌

ಮಲಯಾಳಂ ಶೋದಲ್ಲಿ ಕನ್ನಡ ಹಾಡು ನೆನಪಿಸಿಕೊಂಡಿದ್ದ ಜಾನಕಿ

S Janaki: ಸಾವಿರಾರು ಸೂಪರ್‌ ಹಿಟ್‌ ಕನ್ನಡ ಹಾಡುಗಳ ಮೂಲಕ ಚಿತ್ರಪ್ರೇಮಿಗಳ ಮನಗೆದ್ದ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ. 88 ವರ್ಷದ ಅವರು ಜುಲೈ 11ರಂದು ಮೈಸೂರಿನಲ್ಲಿ ಅಸ್ತಂಗತರಾದರು. 4 ರಾಷ್ಟ್ರ ಪ್ರಸಸ್ತಿ ಮುಡಿಗೇರಿಸಿಕೊಂಡಿದ್ದ ಅವರು ತಮ್ಮ ವೃತ್ತಿ ಜೂವನದ ಅತಯಂತ ಕಠಿಣ ಹಾಡನ್ನು ಮಲಯಾಳಂ ರಿಯಾಲಿಟಿ ಶೋದಲ್ಲಿ ಪ್ರಸ್ತಾವಿಸಿದ್ದರು. ಆ ವಿಡಿಯೊ ಮತ್ತೆ ವೈರಲ್‌ ಆಗಿದೆ.

S Janaki: ಸರ್ಕಾರ ಎಸ್. ಜಾನಕಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಿ: ಬಸವರಾಜ ಬೊಮ್ಮಾಯಿ

ಸರ್ಕಾರ ಎಸ್. ಜಾನಕಿ ಅವರ ಸ್ಮಾರಕ ನಿರ್ಮಾಣ ಮಾಡಲಿ: ಬೊಮ್ಮಾಯಿ

ಎಸ್. ಜಾನಕಿ ಅವರಿಗೆ ಮೈಸೂರಿನ ಬಗ್ಗೆ ಅಪಾರವಾದ ಒಲವಿತ್ತು. ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬ ಇಚ್ಛೆ ಹೊಂದಿದ್ದರು. ಕರ್ನಾಟಕದ ಜನತೆಯ ಹೃದಯದಲ್ಲಿ ಅವರು ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ರಾಜ್ಯ ಸರ್ಕಾರ ಮೈಸೂರಿನಲ್ಲಿ ಎಸ್.‌ ಜಾನಕಿ ಅವರ ನೆನಪಿಗಾಗಿ ಒಂದು ಸುಸಜ್ಜಿತ ಸ್ಮಾರಕ ನಿರ್ಮಾಣ ಮಾಡಬೇಕು ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ʻಗಾನ ಕೋಗಿಲೆʼ ಎಸ್‌. ಜಾನಕಿ ನಿವ್ವಳ ಆಸ್ತಿ ಮೌಲ್ಯ ಎಷ್ಟು? ಇಲ್ಲಿದೆ ಸ್ವರ ಸಾಮ್ರಾಜ್ಞಿಯ ಸಂಪತ್ತಿನ ವಿವರ

ಸ್ವರ ಸಾಮ್ರಾಜ್ಞಿ ಎಸ್‌. ಜಾನಕಿ ಒಟ್ಟು ಆಸ್ತಿ ಮೌಲ್ಯ ಎಷ್ಟು ಗೊತ್ತಾ?

ಭಾರತೀಯ ಚಿತ್ರರಂಗದ ಮೇರು ಗಾಯಕಿ ಎಸ್‌. ಜಾನಕಿ ಅವರ ಅಕಾಲಿಕ ನಿಧನ ಇಡೀ ಸಾಂಸ್ಕೃತಿಕ ಜಗತ್ತನ್ನು ಕಣ್ಣೀರಲ್ಲಿ ಮುಳುಗಿಸಿದೆ. ಆರು ದಶಕಗಳ ಕಾಲ 50 ಸಾವಿರಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದ ಇವರ ಒಟ್ಟು ಆಸ್ತಿ ಸುಮಾರು 537 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಚೆನ್ನೈನಲ್ಲಿ ಬೃಹತ್ ರಿಯಲ್ ಎಸ್ಟೇಟ್ ಹೂಡಿಕೆ ಹೊಂದಿದ್ದ ಜಾನಕಮ್ಮ ಅವರಿಗೆ ಲೈವ್ ಕಾನ್ಸರ್ಟ್‌ಗಳು ಮತ್ತು ಸಂಭಾವನೆಗಳೇ ಪ್ರಮುಖ ಆದಾಯದ ಮೂಲಗಳಾಗಿದ್ದವು.

18ನೇ ವಯಸ್ಸಿನಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ  ಜಾನಕಮ್ಮ; ಗಾನ ಕೋಗಿಲೆಗೆ ಪತಿ ರಾಮ್‌ ಪ್ರಸಾದ್‌ ನೀಡಿದ ಬೆಂಬಲ ಹೀಗಿತ್ತು

S Janaki: ಜಾನಕಮ್ಮನ ಸಂಗೀತ ಸಾಧನೆಗೆ ಬೆಂಬಲವಾಗಿ ನಿಂತಿದ್ದ ಪತಿ ರಾಮು

ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಎಸ್. ಜಾನಕಿ ಹಾಗೂ ಅವರ ಪತಿ ವಿ. ರಾಮ್ ಪ್ರಸಾದ್ ಅವರ ದಾಂಪತ್ಯವು ಇಂದಿನ ತಲೆಮಾರಿಗೆ ಮಾದರಿಯಾಗಿದೆ. ಕೇವಲ 18ನೇ ವಯಸ್ಸಿನಲ್ಲಿ ವಿವಾಹವಾದ ಜಾನಕಮ್ಮಗೆ ಪತಿ ರಾಮ ದೊಡ್ಡ ಬೆಂಬಲವಾಗಿ ನಿಂತಿದ್ದರು.

S Janaki: ಗಾನಕೋಗಿಲೆ ಎಸ್.ಜಾನಕಿ ಅಸ್ತಂಗತ; ಪ್ರಧಾನಿ ಮೋದಿ ಸಂತಾಪ

ಗಾನಕೋಗಿಲೆ ಎಸ್.ಜಾನಕಿ ಅಸ್ತಂಗತ; ಪ್ರಧಾನಿ ಮೋದಿ ಸಂತಾಪ

S Janaki: ಅಭಿಮಾನಿಗಳು, ಸಂಗೀತಗಾರರು ಮತ್ತು ಗಣ್ಯರು ತಮ್ಮ ನೆಚ್ಚಿನ ಗಾಯಕಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ. ಭಾರತೀಯ ಸಂಗೀತಕ್ಕೆ ಅವರು ನೀಡಿದ ಅಪಾರ ಕೊಡುಗೆಗಳನ್ನು ಶ್ಲಾಘಿಸಿ ದೇಶಾದ್ಯಂತದಿಂದ ಅವರಿಗೆ ಅನೇಕ ಗೌರವಗಳು ಬರುತ್ತಿವೆ. ಪ್ರಧಾನಿ ಮೋದಿ ಎಸ್. ಜಾನಕಿಯವರ ನಿಧನವನ್ನು 'ಭರಿಸಲಾಗದ ನಷ್ಟ' ಎಂದು ಕರೆದಿದ್ದಾರೆ.

Shiva Rajkumar Birthday: ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಔಟ್‌! ಶಿವಣ್ಣ ಕಷ್ಟದ ದಿನಗಳ ಸಂಪೂರ್ಣ ಚಿತ್ರವಿದು

Shiva Rajkumar Birthday: ‘ಸರ್ವೈವರ್’ ಸಾಕ್ಷ್ಯಚಿತ್ರದ ಪ್ರೋಮೋ ಔಟ್‌!

Shiva Rajkumar Birthday: ಶಿವರಾಜ್​ಕುಮಾರ್ ಅವರು ಅನಾರೋಗ್ಯದ ಕಾರಣದಿಂದ ಒಂದಷ್ಟು ದಿನಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದರು. ಗೀತಾ ಶಿವರಾಜ್​ಕುಮಾರ್ ಒಡೆತನದ ‘ಗೀತಾ ಪಿಕ್ಚರ್ಸ್’ ಮೂಲಕ ಈ ಸಾಕ್ಷ್ಯಚಿತ್ರ ನಿರ್ಮಾಣ ಆಗಿದೆ. ಹುಟ್ಟುಹಬ್ಬದ ಪ್ರಯುಕ್ತ ಅದರ ಪ್ರೋಮೋ ರಿಲೀಸ್ ಮಾಡಲಾಗಿದ್ದು, ಶಿವರಾಜ್​ಕುಮಾರ್, ಮಧು ಬಂಗಾರಪ್ಪ, ನಿವೇದಿತಾ ಶಿವರಾಜ್​ಕುಮಾರ್ ಇದರಲ್ಲಿ ಮಾತನಾಡಿದ್ದಾರೆ.

Ramayana Movie: ‘ರಾಮಾಯಣ’ ಚಿತ್ರದ ಟ್ರೇಲರ್  ರಿಲೀಸ್‌ ಡೇಟ್‌ ಅನೌನ್ಸ್‌!

‘ರಾಮಾಯಣ’ ಚಿತ್ರದ ಟ್ರೇಲರ್ ರಿಲೀಸ್‌ ಡೇಟ್‌ ಅನೌನ್ಸ್‌!

Ramayana Movie: ಸಿನಿಮಾ ಘೋಷಣೆಯಾದ ದಿನದಿಂದಲೂ ಪ್ರೇಕ್ಷಕರಲ್ಲಿ ಚಿತ್ರದ ದೃಶ್ಯ ವೈಭವದ ಬಗ್ಗೆ ಸಾಕಷ್ಟು ಕುತೂಹಲ ಮನೆಮಾಡಿದೆ. ಈ ಟ್ರೇಲರ್ ಮೂಲಕ ಚಿತ್ರದ ಭವ್ಯ ಲೋಕ, ಪಾತ್ರಗಳ ವಿವರ ಹಾಗೂ ಹಾಲಿವುಡ್ ಮಟ್ಟದ ಗ್ರಾಫಿಕ್ಸ್ ಝಲಕ್ ಕಾಣ ಸಿಗಲಿದೆ ಎಂಬ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ. ಚಿತ್ರದ ಬಹುನಿರೀಕ್ಷಿತ ಟ್ರೇಲರ್ (Trailier) ಜುಲೈ 24, 2026 ರಂದು ವಿಶ್ವಾದ್ಯಂತ ಪ್ರಥಮ ಪ್ರದರ್ಶನಗೊಳ್ಳಲಿದೆ ಎಂದು ತಂಡ ಅಧಿಕೃತವಾಗಿ ಘೋಷಿಸಿದೆ.

ಆಕಾಶದೀಪವು ನೀನು

ಆಕಾಶದೀಪವು ನೀನು

ನನ್ನ ಕೀರಲು ಕಂಠದಲ್ಲಿ ಅತ್ಯುತ್ಸಾಹದಿಂದ ನಿಮ್ಮ ಗಾಯನದ ಸಾಲುಗಳನ್ನು ಗುನುಗಿ, ಕೇಳಿದವರು ತಮಾಷೆ ಮಾಡಿದಾಗ ಒಂದು ರೀತಿ ಪುಳಕಗೊಂಡು, ಅದೇ ವೇಳೆ, ಅವರು ನಿಮ್ಮ ಬಗ್ಗೆ ಮೆಚ್ಚುಗೆಯ ಮಾತಾಡಿದಾಗ, ಅವರೂ ನಿಮ್ಮ ಹಾಡುಗಳನ್ನು ಗುನುಗತೊಡಗಿದಾಗ, ‘ಅಮ್ಮಾ, ನನ್ನಮ್ಮಾ’ ಎಂದು ನಿಮ್ಮೊಳಿತು ಹಾರೈಸಿ ಈ ನನ್ನ ಅದೃಷ್ಟಶಾಲಿ ಕಿವಿಗಳ ಮೇಲ್ಗಡೆ ಲಟಿಕೆ ಮುರಿದವನು ನಾನು! ಅಮ್ಮಾ, ನನ್ನ ಹೃದಯದ ವೀಣೆ ಮೀಟಿ ಹರಸಿದ ಸ್ವರಧಾರಿಣಿ ನೀವು.

ಹುಟ್ಟಿದ್ದು ಆಂಧ್ರ ಪ್ರದೇಶದಲ್ಲಾದರೂ ನೆಲೆಸಿದ್ದು ಕರುನಾಡಲ್ಲಿ; ಕನ್ನಡ ಚಿತ್ರ ಸಂಗೀತಕ್ಕೆ ಗಾನ ಕೋಗಿಲೆ ಜಾನಕಿ ಕೊಡುಗೆಯ ಮೆಲುಕು

ಕನ್ನಡ ಚಿತ್ರ ಸಂಗೀತಕ್ಕೆ ಗಾನ ಕೋಗಿಲೆ ಜಾನಕಿ ಕೊಡುಗೆ

S Janaki: ಕನ್ನಡದ ಸೂಪರ್‌ ಹಿಟ್‌ ಚಿತ್ರಗೀತೆಗಳಿಗೆ ಧ್ವನಿ ನೀಡಿದ ಗಾಯಕಿ, ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌. ಜಾನಕಿ ಇನ್ನಿಲ್ಲ. ಹೌದು, ತಮ್ಮ ಭಾವಪೂರ್ಣ ಧ್ವನಿಯಿಂದಲೇ ಚಿತ್ರರಸಿಕರ ಮನಗೆದ್ದ, ಬರೋಬ್ಬರಿ 6 ದಶಕಗಳ ಕಾಲ ಗಾಯನ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದ ಅವರ ಬಗ್ಗೆ ಸಾಧನೆಯ ಬಗ್ಗೆ ಇಲ್ಲಿದೆ ವಿವರ.

ಗಾಯಕಿ ಎಸ್‌. ಜಾನಕಿ - ಎಸ್‌. ಪಿ. ಬಾಲಸುಬ್ರಹ್ಮಣ್ಯಂ ಬದುಕಿನಲ್ಲಿ ನಡೆದಿತ್ತು ಅದೊಂದು ಕಾಕತಾಳೀಯ ಘಟನೆ, ಇದ್ದವು ಹಲವು ಸಾಮ್ಯತೆಗಳು

ಮೈಸೂರಿನ ಜೊತೆ ಎಸ್‌. ಜಾನಕಿ - ಎಸ್‌ಪಿಬಿಗೆ ಇತ್ತು ವಿಶೇಷ ನಂಟು

ದಕ್ಷಿಣ ಭಾರತದ ಸ್ವರ ಸಾಮ್ರಾಜ್ಞಿ ಎಸ್. ಜಾನಕಿ ಅವರು ಇಂದು ಸಂಜೆ ನಿಧನರಾಗಿದ್ದು, ಸಂಗೀತ ಲೋಕದ ಸುವರ್ಣ ಯುಗ ಅಂತ್ಯಗೊಂಡಿದೆ. ಅಂದಹಾಗೆ, ಎಸ್‌ಪಿಬಿ ಮತ್ತು ಈಗ ಜಾನಕಮ್ಮ ಇಬ್ಬರೂ ಸಂಗೀತ ಲೋಕದಲ್ಲಿ ಸೃಷ್ಟಿಸಿದ ಮೋಡಿ ಅನನ್ಯವಾದುದು. ಈ ಇಬ್ಬರು ಮಹಾನ್ ಗಾಯಕರ ನಡುವೆ ವೃತ್ತಿಜೀವನ ಮತ್ತು ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಸಾಮ್ಯತೆಗಳು ಹಾಗೂ ಕಾಕತಾಳೀಯ ಘಟನೆಗಳು ನಡೆದಿವೆ.

'ಮಗನೇ, ನೀನು ತುಂಬಾ ಚೆನ್ನಾಗಿ ಹಾಡ್ತೀಯಾ. ಸಿನಿಮಾ ಕ್ಷೇತ್ರಕ್ಕೆ ಬಂದ್ರೆ ಪ್ರಸಿದ್ಧ ಗಾಯಕನಾಗುತ್ತೀಯಾ..ʼ; ಎಸ್‌ಪಿಬಿ ಗಾಯನ ಪ್ರತಿಭೆಯನ್ನು ಗುರುತಿಸಿದ್ದೇ ಎಸ್‌. ಜಾನಕಿ!

ಎಂಜಿನಿಯರ್ ಆಗಬೇಕಿದ್ದ ಎಸ್‌ಪಿಬಿಯನ್ನ ಗಾಯಕನಾಗಿಸಿದ್ದೇ ಎಸ್‌. ಜಾನಕಿ!

S P Balasubrahmanyam: ದಕ್ಷಿಣ ಭಾರತದ ಸ್ವರ ಸಾಮ್ರಾಜ್ಞಿ ಎಸ್. ಜಾನಕಿ ಅವರು ಇಂದು ಸಂಜೆ 7.30ಕ್ಕೆ ನಿಧನರಾಗಿದ್ದು, ಸಂಗೀತ ಲೋಕದ ಸುವರ್ಣ ಯುಗ ಅಂತ್ಯಗೊಂಡಿದೆ. ಗೆಜೆಟೆಡ್ ಇಂಜಿನಿಯರ್ ಆಗಬೇಕಿದ್ದ ಎಸ್‌ಪಿಬಿ ಅವರ ಗಾಯನ ಪ್ರತಿಭೆಯನ್ನು ಮೊಟ್ಟಮೊದಲ ಬಾರಿಗೆ ಸ್ಪರ್ಧೆಯೊಂದರಲ್ಲಿ ಗುರುತಿಸಿ ಚಿತ್ರರಂಗಕ್ಕೆ ಪ್ರೇರೇಪಿಸಿದ್ದೇ ಜಾನಕಮ್ಮ ಎಂಬುದು ವಿಶೇಷ.

S Janaki: ದಕ್ಷಿಣ ಭಾರತದ ಗಾನ ಕೋಗಿಲೆ ಎಸ್‌ ಜಾನಕಿ ಮೊದಲ ಹಾಡು ಹಾಡಿದ್ದು ಯಾವಾಗ?

ಗಾನ ಕೋಗಿಲೆ ಎಸ್‌ ಜಾನಕಿ ಮೊದಲ ಹಾಡು ಹಾಡಿದ್ದು ಯಾವಾಗ?

ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಖ್ಯಾತಿಯನ್ನು ಗಳಿಸಿರುವ ಎಸ್‌ ಜಾನಕಿ ಜುಲೈ 11 ರಂದು ಶನಿವಾರ ಮೈಸೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ತಮ್ಮ ಸಂಗೀತ ಲೋಕದ ವೃತ್ತಿ ಜೀವನದಲ್ಲಿ 48 ಸಾವಿರ ಹಾಡುಗಳನ್ನು ಹಾಡುವ ಮೂಲಕ ದೊಡ್ಡ ಸಾಧನೆಗೆ ಭಾಜನರಾಗಿದ್ದಾರೆ. ಅಂದ ಹಾಗೆ ಅವರು ತಮ್ಮ ವೃತ್ತಿ ಜೀವನದಲ್ಲಿ ರೆಕಾರ್ಡ್‌ ಮಾಡಿದ ಮೊದಲ ಹಾಡಿನ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಹಾಡು ನಿಲ್ಲಿಸಿದ ʻಕೋಗಿಲೆʼ; ಎಸ್‌.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಗಣ್ಯರ ಸಂತಾಪ

ಎಸ್‌.ಜಾನಕಿ ನಿಧನಕ್ಕೆ ಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಗಣ್ಯರ ಸಂತಾಪ

Singer S. Janaki: ಖ್ಯಾತ ಗಾಯಕಿ ಎಸ್‌.ಜಾನಕಿ ಅವರು (88) ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಅವರು ಶನಿವಾರ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ದಕ್ಷಿಣ ಭಾರತದ ಗಾನ ಕೋಗಿಲೆ ಎಂದೇ ಹೆಸರಾದ ಇವರು ತೆಲುಗು, ತಮಿಳು, ಕನ್ನಡ, ಮಲಯಾಳಂ ಸೇರಿದಂತೆ 20 ಕ್ಕೂ ಹೆಚ್ಚು ಭಾಷೆಗಳಲ್ಲಿ 48,000 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡುವ ಮೂಲಕ ಸಿನಿರಸಿಕರನ್ನು ರಂಜಿಸಿದ್ದಾರೆ.

6 ತಿಂಗಳ ಹಿಂದಷ್ಟೇ ಇದ್ದೊಬ್ಬ ಮಗನನ್ನು ಕಳೆದುಕೊಂಡಿದ್ದ ಎಸ್‌. ಜಾನಕಿ; ಇಳಿವಯಸ್ಸಿನಲ್ಲಿ ಕಾಡಿತೇ ಪುತ್ರಶೋಕ?

ಇಳಿವಯಸ್ಸಿನಲ್ಲಿ ಜಾನಕಮ್ಮಗೆ ಕಾಡಿತೇ ಪುತ್ರಶೋಕ? 6 ತಿಂಗಳ ಹಿಂದೆ ಮಗನ ಸಾವು!

ದಕ್ಷಿಣ ಭಾರತದ ಹೆಮ್ಮೆಯ ಹಿರಿಯ ಹಿನ್ನೆಲೆ ಗಾಯಕಿ, ಸ್ವರ ಸಾಮ್ರಾಜ್ಞಿ ಎಸ್. ಜಾನಕಿ (88) ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಆರೋಗ್ಯ ಸಮಸ್ಯೆಯಿಂದ ವಿಧಿವಶರಾಗಿದ್ದಾರೆ. ಆರು ತಿಂಗಳ ಹಿಂದಷ್ಟೇ ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ ಅವರನ್ನು ಕಳೆದುಕೊಂಡಿದ್ದರು ಜಾನಕಮ್ಮ.

Actress Haripriya & Actor Vashishta Simha: 18ನೇ ಈಶ ಗ್ರಾಮೋತ್ಸವಕ್ಕೆ ಹರಿಪ್ರಿಯಾ, ವಸಿಷ್ಠ ಸಿಂಹ ಹಾಗೂ ಆರ್‌ಜೆ ಅಮಿತ್ ಚಾಲನೆ

ಈಶ ಗ್ರಾಮೋತ್ಸವದಲ್ಲಿ ಭಾಗಿ: ಶಾಲಾ ದಿನಗಳ ಸ್ಮರಿಸಿದ ನಟಿ ಹರಿಪ್ರಿಯಾ

ಗ್ರಾಮೀಣ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈಶ ಗ್ರಾಮೋತ್ಸವವು ಅತ್ಯುತ್ತಮ ಉಪಕ್ರಮವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜದಲ್ಲಿ ಆತ್ಮವಿಶ್ವಾಸ ಮತ್ತು ಒಗ್ಗಟ್ಟನ್ನು ಬೆಳೆಸುವ ಕೆಲಸ ಮಾಡುತ್ತಿದೆ. ಭಾಗವಹಿಸುವ ಪ್ರತಿಯೊಬ್ಬರೂ ವಿಜೇತರೇ. ಎಲ್ಲ ತಂಡಗಳಿಗೂ ಶುಭವಾಗಲಿ ಎಂದು ಹರಿಪ್ರಿಯಾ ಹಾರೈಸಿದರು.

Loading...