ಚಿತ್ರರಂಗದಲ್ಲಿ ಸಾಹಿತಿ, ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ
ನಾನು ಸಾಹಿತ್ಯವನ್ನಾಗಲಿ ಪುಸ್ತಕಗಳನ್ನಾಗಲಿ ಅರೆದು ಕುಡಿದವನಲ್ಲ. 40 ವರ್ಷಗಳ ವೃತ್ತಿ ಜೀವನದಲ್ಲಿ ಸಿಕ್ಕಿರುವ ಅತ್ಯುತ್ತಮ ಬರಹಗಾರರಾದ ಕೆಲವರಿಂದ ಅದು ತರಾಸು ಅವರಿಂದ ತ್ರಿವೇಣಿ ಆಗಿರಬಹುದು ಅನಕೃ ಅವರಿಂದ ಬೀಚಿಯವರಾಗಿರಬಹುದು. ಇವರೆಲ್ಲರಿಂದ ಎರಕ ಹೊಯ್ದಂತಿದ್ದ ಪುಟ್ಟಣ್ಣ ಕಣಗಾಲ್ ಇರಬಹುದು.ಇವರ ಬಳಿ ಸಂಭಾಷಣೆಯನ್ನು ಒಪ್ಪಿಸಿ, ಒಪ್ಪಿಸಿ ಕೆನ್ನೆಗೆ ಏಟು ತಿಂದು ಇಷ್ಟರ ಮಟ್ಟಿಗಿನ ಭಾಷಾ ಶುದ್ಧತೆ ನಮಗೆ ಬಂದಿದೆ