ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Kareena Kapoor: 3ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ? ಕೊನೆಗೂ ಸ್ಪಷ್ಟನೆ ಕೊಟ್ಟ ತಂಡ

Kareena Kapoor: 3ನೇ ಮಗುವಿನ ನಿರೀಕ್ಷೆಯಲ್ಲಿ ಕರೀನಾ?

Kareena Kapoor: ವೈರಲ್ ಆಗಿರುವ ವಿಡಿಯೋದಲ್ಲಿ ಕರೀನಾ ಕಪೂರ್ ಜಿಮ್ ಉಡುಪಿನಲ್ಲಿ ತಮ್ಮ ಕಾರಿನತ್ತ ಸಾಗುತ್ತಿರುವುದನ್ನು ಕಾಣಬಹುದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣ ಆಗಿದೆ. ಪಪಾರಾಜಿಗಳು ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಕರೀನಾ ‘ಬೇಬಿ ಬಂಪ್’ ರೀತಿಯ ಹೊಟ್ಟೆಯೊಂದಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ.

Yash: ಕರ್ನಾಟಕದಲ್ಲಿ 10 ಕೋಟಿ ರೂ. ಮೌಲ್ಯದ ʻಟಾಕ್ಸಿಕ್‌ʼ ಟಿಕೆಟ್‌ ಸೇಲ್;‌ ವರಮಹಾಲಕ್ಷ್ಮೀ ಹಬ್ಬದಂದು ಪತ್ನಿ, ಮಕ್ಕಳಿಗೆ ವಿಡಿಯೋ ಕಾಲ್‌ ಮಾಡಿದ ʻರಾಕಿ ಭಾಯ್‌ʼ!

ವರಮಹಾಲಕ್ಷ್ಮೀ ಹಬ್ಬದಂದು ಪತ್ನಿ, ಮಕ್ಕಳಿಗೆ ವಿಡಿಯೋ ಕಾಲ್‌ ಮಾಡಿದ ಯಶ್‌!

Yash: ʻಟಾಕ್ಸಿಕ್‌ʼ ಸಿನಿಮಾದ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಆರಂಭಗೊಂಡ ಕೆಲವೇ ಗಂಟೆಗಳಲ್ಲಿ ಕರ್ನಾಟಕದಲ್ಲಿ 10 ಕೋಟಿ ರೂಪಾಯಿ ಗಳಿಸಿ ಇತಿಹಾಸ ಸೃಷ್ಟಿಸಿದೆ. ಬುಧವಾರದ ಮುಂಜಾನೆಯ ಶೋಗಳು ಸಂಪೂರ್ಣ ಸೋಲ್ಡ್ ಔಟ್ ಆಗಿವೆ. ಇತ್ತ ಸಿನಿಮಾ ಬಿಡುಗಡೆಯ ಬ್ಯುಸಿಯಲ್ಲಿರುವ ಯಶ್, ವರಮಹಾಲಕ್ಷ್ಮಿ ಹಬ್ಬದಂದು ವಿಡಿಯೋ ಕಾಲ್ ಮೂಲಕ ಮಡದಿ ಮತ್ತು ಮಕ್ಕಳಿಗೆ ಶುಭಕೋರಿದ್ದಾರೆ.

Brahmakamala Review: ತಾಯ್ತನದ ತುಡಿತ ಜೊತೆಗೆ ಸಮಾಜದ ಮುಖವಾಡ ಬಿಚ್ಚಿಡುವ ʻಬ್ರಹ್ಮಕಮಲʼ

ಅದ್ವಿತಿ ಶೆಟ್ಟಿ ನಟನೆಯ ʻಬ್ರಹ್ಮಕಮಲʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Brahmakamala Movie Review: ಸಮಾಜದಲ್ಲಿ ಸಂತಾನವಿಲ್ಲದ ಹೆಣ್ಣು ಅನುಭವಿಸುವ ಅಪಮಾನ ಹಾಗೂ ಮಾನಸಿಕ ತೊಳಲಾಟವನ್ನು ಸಸ್ಪೆನ್ಸ್ ಥ್ರಿಲ್ಲರ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟಿರುವ ಪ್ರಯೋಗಾತ್ಮಕ ಚಿತ್ರವಿದು. ಅಪೇಕ್ಷಾ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ತಾಯ್ತನದ ಹಂಬಲ ಮತ್ತು ಸಾಮಾಜಿಕ ಒತ್ತಡವನ್ನು ಭಾವನಾತ್ಮಕವಾಗಿ ತೆರೆದಿಟ್ಟಿದ್ದಾರೆ.

Folk dancer:  ಸಹ ಡ್ಯಾನ್ಸರ್ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪ್ರಸಿದ್ಧ ಜಾನಪದ ನಟ;  ತರಾಟೆಗೆ ತೆಗೆದುಕೊಂಡ ಪತ್ನಿ

ಸಹ ಡ್ಯಾನ್ಸರ್ ಜೊತೆ ಹೋಟೆಲ್‌ನಲ್ಲಿ ಸಿಕ್ಕಿಬಿದ್ದ ಪ್ರಸಿದ್ಧ ಜಾನಪದ ನಟ !

Eshwar Sai: ಹೋಟೆಲ್‌ನಲ್ಲಿ ಮತ್ತೊಬ್ಬ ಮಹಿಳಾ ಜಾನಪದ ಕಲಾವಿದೆ ಮಾಧುರಿ ರಾಥೋಡ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾಗ ಅವರ ಪತ್ನಿಯಿಂದ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈಶ್ವರ್ ಸಾಯಿ ಅವರ ಪತ್ನಿ ತಮ್ಮ ಮತ್ತು ತಮ್ಮ ಪತಿಯ ನಡುವೆ ಯಾವುದೇ ಸಂಘರ್ಷವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ ಅವರು, ತಮ್ಮ ಪತಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಕ್ಷಿಣ ಭಾರತದ ಹಿರಿಯ ನಟಿ ಸೌಕಾರ್ ಜಾನಕಿ ನಿಧನ; ಗಣ್ಯರಿಂದ ಕಂಬನಿ

ದಕ್ಷಿಣ ಭಾರತದ ಹಿರಿಯ ನಟಿ ಸೌಕಾರ್ ಜಾನಕಿ ನಿಧನ

ದಕ್ಷಿಣ ಭಾರತದ ಖ್ಯಾತ ಹಿರಿಯ ನಟಿ ಸೌಕಾರ್ ಜಾನಕಿ ಅವರು 94ನೇ ವಯಸ್ಸಿನಲ್ಲಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಮ್ಮ ಅದ್ಭುತ ನಟನೆಯ ಮೂಲಕ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಅವರು, ಅಡುಗೆ ಮತ್ತು ಒಳಾಂಗಣ ವಿನ್ಯಾಸ ಕ್ಷೇತ್ರಗಳಲ್ಲಿಯೂ ಅಪಾರ ಆಸಕ್ತಿ ಹೊಂದಿದ್ದರು.

ಮಗಳ ವಯಸ್ಸಿನ ನಟಿ ಜೊತೆ 2ನೇ ಮದುವೆ ಆಗ್ತಾರಾ 62 ವರ್ಷದ ನಟ ಗೋವಿಂದ? ಪತ್ನಿ ಸುನೀತಾ ಅಹುಜಾ ಗಂಭೀರ ಆರೋಪ!

ನಟ ಗೋವಿಂದ ವಿರುದ್ಧ ಗಂಭೀರ ಆರೋಪ ಮಾಡಿದ ಪತ್ನಿ ಸುನೀತಾ ಅಹುಜಾ

ನಟ ಗೋವಿಂದ ಮತ್ತು ಸುನೀತಾ ಅಹುಜಾ ಅವರ ದಾಂಪತ್ಯ ಕಲಹ ತಾರಕಕ್ಕೇರಿದೆ. ನಟಿ ಕೋಮಲ್ ರಾಣಿ ಜೊತೆಗಿನ ಪತಿ ಗೋವಿಂದ ಅವರ ಮದುವೆ ತಡೆಯಲು ವಿಚ್ಛೇದನ ಅರ್ಜಿ ಹಿಂಪಡೆದಿರುವುದಾಗಿ ರಾಖಿ ಸಾವಂತ್ ಜತೆಗಿನ ಸಂಭಾಷಣೆಯಲ್ಲಿ ಸುನೀತಾ ತಿಳಿಸಿದ್ದಾರೆ. ಈ ಮೂಲಕ ಗೋವಿಂದ ಕುಟುಂಬದ ಹೈಡ್ರಾಮಾ ಮತ್ತೊಮ್ಮೆ ಬಹಿರಂಗವಾಗಿದೆ.

Yash: ನೀವು 'ಟಾಕ್ಸಿಕ್‌' ಸಿನಿಮಾಗೆ ಟಿಕೆಟ್‌ ಬುಕ್‌ ಮಾಡ್ತಿದ್ದೀರಾ? ಅದಕ್ಕೂ ಮುನ್ನ ಈ ವಿಚಾರ ನಿಮ್ಮ ಗಮನದಲ್ಲಿರಲಿ!

Yash: 'ಟಾಕ್ಸಿಕ್' ಟಿಕೆಟ್ ಬುಕ್ ಮಾಡುವ ಮುನ್ನ ಪೋಷಕರೇ ಇರಲಿ ಎಚ್ಚರ!

ʻಟಾಕ್ಸಿಕ್‌ʼ ಸಿನಿಮಾದ ಟಿಕೆಟ್‌ ಬುಕಿಂಗ್ ವಿಚಾರದಲ್ಲಿ ಅಭಿಮಾನಿಗಳು ಒಂದು ನಿಯಮ ಗಮನಿಸಬೇಕು. ಯಶ್ ನಟನೆಯ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಚಿತ್ರಮಂದಿರಗಳಿಗೆ ಪ್ರವೇಶವಿಲ್ಲ. ಹಾಗಾಗಿ, ಚಿತ್ರಮಂದಿರಗಳಲ್ಲಿ ಅನಗತ್ಯ ಗೊಂದಲ ತಡೆಯಲು ಪೋಷಕರು ಮಕ್ಕಳನ್ನು ಕರೆತರದಂತೆ ಮುನ್ನೆಚ್ಚರಿಕೆ ವಹಿಸಬೇಕು

ʻಪದ್ಮಶ್ರೀʼ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ನಿಧನ; ಕಂಬನಿ ಮಿಡಿದ ಚಿತ್ರರಂಗ

ಚೆನ್ನೈನಲ್ಲಿ ಸಾವನ್ನಪ್ಪಿದ ಹಿರಿಯ ನಟಿ ʻಸಾಹುಕಾರ್ʼ ಜಾನಕಿ; ಗಣ್ಯರ ಸಂತಾಪ

Sowcar Janaki Death: ಪದ್ಮಶ್ರೀ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಡಾ. ರಾಜ್‌ಕುಮಾರ್ ಮತ್ತು ಎನ್‌ಟಿಆರ್‌ರಂತಹ ಲೆಜೆಂಡ್‌ ನಟರೊಂದಿಗೆ ಕೆಲಸ ಮಾಡಿದ್ದಾರೆ.

ಡೈರೆಕ್ಟರ್‌ ಪಿ. ಎಸ್.‌ ಮಿತ್ರನ್‌ ಹೇಳಿದ ಕಥೆಯನ್ನು ಮೆಚ್ಚಿದ್ದ ʻರಾಕಿ ಭಾಯ್‌ʼ ಯಶ್‌! ಈ ಸಿನಿಮಾ ಸೆಟ್ಟೇರಲಿಲ್ಲ ಏಕೆ? ಯಾರೀ ತಮಿಳು ನಿರ್ದೇಶಕ?

ಯಶ್ ಮೆಚ್ಚಿದ ಕಥೆ ಡ್ರಾಪ್ ಆಗಿದ್ದೇಕೆ? ಸತ್ಯ ಬಿಚ್ಚಿಟ್ಟ ತಮಿಳು ಡೈರೆಕ್ಟರ್!

ʻರಾಕಿಂಗ್‌ ಸ್ಟಾರ್‌ʼ ಯಶ್‌ ಮತ್ತು ತಮಿಳು ನಿರ್ದೇಶಕ ಪಿ.ಎಸ್. ಮಿತ್ರನ್ ಅವರ ಕಾಂಬಿನೇಷನ್ ಸಿನಿಮಾವು ಕಾಲ್‌ಶೀಟ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಯಶ್ ಅವರಿಗಾಗಿ ಸಿದ್ಧಪಡಿಸಿದ್ದ ಆ್ಯಕ್ಷನ್ ಕಥೆಯು ಮೆಚ್ಚುಗೆ ಪಡೆದಿದ್ದರೂ, ಕಾಲ್‌ಶೀಟಡ್‌ ಕಾರಣದಿಂದ ಸೆಟ್ಟೇರಲು ಸಾಧ್ಯವಾಗಿಲ್ಲ ಎಂದು ಮಿತ್ರನ್ ಬಹಿರಂಗಪಡಿಸಿದ್ದಾರೆ.

Bigg Boss 13: ʻನನ್ನ ಟ್ರೋಲ್‌ ಮಾಡಿದಷ್ಟು ನಂಗೇ ಲಾಭ, ಕೋಟಿ ಖರ್ಚು ಮಾಡಿದ್ರೂ ಇಷ್ಟೊಂದು ಪ್ರಚಾರ ಸಿಕ್ತಿರಲಿಲ್ಲʼ; ವಿನಯ್‌ ಗೌಡ ಖಡಕ್‌ ಮಾತು

ʻಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆʼ ಎಂದ ವಿನಯ್ ಗೌಡ

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಅಗ್ನಿಪರೀಕ್ಷೆಯ ಜ್ಯೂರಿ ಸದಸ್ಯ ವಿನಯ್ ಗೌಡ ತಮ್ಮ ಮೇಲಿನ ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ವೃತ್ತಕ್ಕೆ ಎರಡು ಭಾಗಗಳಿರುತ್ತವೆ ಎಂಬ ಹೇಳಿಕೆಗೆ ಜೋರ್ಡಾನ್ ಕರ್ವ್ ಪ್ರಮೇಯದ ವಿವರಣೆ ನೀಡಿದ ಅವರು, ನಕಾರಾತ್ಮಕ ಪ್ರಚಾರದಿಂದಲೇ ತಮಗೆ ಸಾಲು ಸಾಲು ಬ್ರ್ಯಾಂಡ್ ಪ್ರಮೋಷನ್ ಆಫರ್ ಸಿಗುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.

Toxic Movie: ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್

ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್

Toxic Movie: ಯಶ್ (Yash) ಮತ್ತೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಈಗಾಗಲೇ ದೇಶ, ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ, ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಕಡೆ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಬೆಂಗಳೂರಿನಲ್ಲಿರುವ ಮಲ್ಟಿಪ್ಲೆಕ್ಸ್​​ಗಳ ಮೊದಲ ದಿನದ ಬಹುತೇಕ ಪ್ರದರ್ಶನಗಳ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗಿವೆ.

Bandar OTT release: ಅನುರಾಗ್‌ ಕಶ್ಯಪ್‌ ಸಿನಿಮಾ ʻಬಂದರ್‌ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

ಅನುರಾಗ್‌ ಕಶ್ಯಪ್‌ ಸಿನಿಮಾ ʻಬಂದರ್‌ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Bandar OTT release: ಬಾಬಿ ಡಿಯೋಲ್ ಅಭಿನಯದ ಬಂದರ್ ಚಿತ್ರವು ಡಿಜಿಟಲ್ ಪ್ರೀಮಿಯರ್‌ಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Zee5 ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಜೀ5 ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಆಗಸ್ಟ್ 28 ರಿಂದ ಬಂದರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ. ಅನುರಾಗ್ ಕಶ್ಯಪ್ ನಿರ್ದೇಶನದ ಬಂದರ್ ಚಿತ್ರದಲ್ಲಿ ಬಾಬಿ ಡಿಯೋಲ್ ನಾಯಕನಾಗಿ ನಟಿಸಿದ್ದಾರೆ, ಜೊತೆಗೆ ಸನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ ಮತ್ತು ಸಬಾ ಆಜಾದ್ ಕೂಡ ನಟಿಸಿದ್ದಾರೆ

Yash: ‘ರಾಮಾಯಣ’ದಲ್ಲಿ ಯಶ್‌ ಅಬ್ಬರ;  ಫಿದಾ ಆದ ಹನಿ ಸಿಂಗ್

‘ರಾಮಾಯಣ’ದಲ್ಲಿ ಯಶ್‌ ಅಬ್ಬರ; ಫಿದಾ ಆದ ಹನಿ ಸಿಂಗ್

Yash: ಯಶ್ ಅವರ ರಾವಣನ ಚಿತ್ರಣವನ್ನು ಶ್ಲಾಘಿಸಿದ್ದಲ್ಲದೆ, ಚಿತ್ರದ ಟೀಸರ್ ವೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ. ತಾವು ರಾಮನ ದೊಡ್ಡ ಭಕ್ತ ಎಂದು ಅವರು ಹೇಳಿದರು, ಆದರೆ ಅವರ ಅಭಿಪ್ರಾಯದಲ್ಲಿ, ಯಶ್ ಅವರ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಬಲವಾಗಿ ಎದ್ದು ಕಾಣುತ್ತದೆ ಎಂದು ಹೇಳಿದರು. ತಮ್ಮ ಬಾಲ್ಯದಲ್ಲಿ ದೆಹಲಿ ಮತ್ತು ಕರಂಪುರದಲ್ಲಿ ವೀಕ್ಷಿಸಿದ ರಾಮಲೀಲಾ ಪ್ರದರ್ಶನಗಳನ್ನು ನೆನಪಿಸಿಕೊಳ್ಳುತ್ತಾ, ಈ ಚಿತ್ರವು ಯಾರ ಭಾವನೆಗಳಿಗೂ ನೋವುಂಟು ಮಾಡಬಾರದು ಮತ್ತು ಆ ಆರಂಭಿಕ ನೆನಪುಗಳಂತೆ ಶುದ್ಧವಾಗಿ ಉಳಿಯಬೇಕು ಎಂದು ಅವರು ಆಶಿಸಿದರು.

‘ಸಿಎಂ ವಿಜಯ್ ಪರ್ಸನಲ್ ವಿಷ್ಯ ಬಿಡಿ, ಧೈರ್ಯವಿದ್ದರೆ ಅವರ ಆಡಳಿತದ ಬಗ್ಗೆ ಮಾತಾಡಿ‌ʼ; ತ್ರಿಷಾ ಟಾರ್ಗೆಟ್‌ ಮಾಡಿದವರಿಗೆ ನಟಿ ಸಂಜನಾ ಗಲ್ರಾನಿ ಸವಾಲು!

‌ʻವಿಜಯ್ ಪರ್ಸನಲ್ ವಿಷ್ಯ ಬಿಡಿ, ಆಡಳಿತದ ಬಗ್ಗೆ ಮಾತಾಡಿʼ; ನಟಿ ಸಂಜನಾ ಗರಂ!

ತಮಿಳುನಾಡು ಸಿಎಂ ವಿಜಯ್ ಅವರ ಖಾಸಗಿ ಬದುಕನ್ನು ಗುರಿಯಾಗಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ವಿರೋಧ ಪಕ್ಷಗಳಿಗೆ ನಟಿ ಸಂಜನಾ ಗಲ್ರಾನಿ ಖಡಕ್ ಸವಾಲೆಸೆದಿದ್ದಾರೆ. ಆಡಳಿತದಲ್ಲಿ ಲೋಪ ಹುಡುಕಲಾಗದೆ ನಟಿ ತ್ರಿಷಾ ಹೆಸರನ್ನು ಎಳೆದು ತೇಜೋವಧೆ ಮಾಡುವುದು ಹೇಡಿತನ ಎಂದು ಅವರು ಹೇಳಿದ್ದಾರೆ.

Srinivasa Mangapuram OTT: 21 ದಿನಗಳಲ್ಲಿ ಒಟಿಟಿಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಅಣ್ಣನ ಪುತ್ರನ ಈ ಮೂವಿ

21 ದಿನಗಳಲ್ಲಿ ಒಟಿಟಿಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಅಣ್ಣನ ಪುತ್ರನ ಈ ಮೂವಿ

Srinivasa Mangapuram OTT: ಮಹೇಶ್ ಬಾಬು ಅವರ ಸೋದರಳಿಯ ಜಯ ಕೃಷ್ಣ (Jaya Krishna) ಅವರ ಚೊಚ್ಚಲ ಚಿತ್ರದಲ್ಲಿ ಮತ್ತು ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ನಟಿಸಿರುವ ಈ ಚಿತ್ರವು ಈಗ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ (Release) ಕೇವಲ 21 ದಿನಗಳ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ವಿಶ್ವಾದ್ಯಂತ ₹ 10 ಕೋಟಿಗಿಂತ ಕಡಿಮೆ ಗಳಿಸಿದೆ ಈ ಮೂವಿ.

ʻಟಾಕ್ಸಿಕ್‌ʼ ಬಗ್ಗೆ ಮಗಳು ರಿಷಿಕಾ ಸಿಂಗ್‌ ಟೀಕೆ, ತಂದೆಯಿಂದ ಭಾರಿ ಹೊಗಳಿಕೆ;  ʻಯಶ್‌ ಕೊಹಿನೂರ್‌ ವಜ್ರʼ ಎಂದ ನಿರ್ದೇಶಕ ಎಸ್‌. ವಿ.  ರಾಜೇಂದ್ರ ಸಿಂಗ್‌ ಬಾಬು

ʻಟಾಕ್ಸಿಕ್‌ʼ ಸಿನಿಮಾದ ಬಗ್ಗೆ ಮಗಳು ರಿಷಿಕಾ ಟೀಕೆ, ತಂದೆಯಿಂದ ಭಾರಿ ಹೊಗಳಿಕೆ

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ ‘ಟಾಕ್ಸಿಕ್’ ಚಿತ್ರದ ವಿರುದ್ಧ ನಟಿ ರಿಷಿಕಾ ಸಿಂಗ್ ಮಾಡಿದ್ದ ಗಂಭೀರ ಟೀಕೆಗಳಿಗೆ ಅವರ ತಂದೆ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ಮಾತನ್ನು ವೈಯಕ್ತಿಕ ಎಂದಿರುವ ಅವರು, ಯಶ್ ಅವರನ್ನು ಚಿತ್ರರಂಗದ ‘ಕೊಹಿನೂರ್ ವಜ್ರ’ ಎಂದು ಕೊಂಡಾಡಿದ್ದಾರೆ.

Vinay Gowda: ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ! ಟ್ರೋಲ್ ಮಾಡಿದವರಿಗೆ ವಿನಯ್‌ ಖಡಕ್‌ ಪೋಸ್ಟ್‌

ಟ್ರೋಲ್ ಮಾಡಿದವರಿಗೆ ವಿನಯ್‌ ಖಡಕ್‌ ಪೋಸ್ಟ್‌

Bigg Boss Kannada 13: ಸರ್ಕಲ್‌ಗೆ ಎಷ್ಟು ಸೈಡ್ಸ್‌ ಇವೆ?’ ಎಂಬ ಪ್ರಶ್ನೆಗೆ ವಿನಯ್‌ ಗೌಡ ನೀಡಿದ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಇದೀಗ ಖಡಕ್ ತಿರುಗೇಟು ನೀಡಿದ್ದು, ಇಂತಹ ಯಾವುದೇ ವಿಚಾರಗಳಿಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಹಾಲಿವುಡ್‌ ಸ್ಟೈಲ್‌ನಲ್ಲಿ ‘ಟಾಕ್ಸಿಕ್‌’ ಇಂಗ್ಲಿಷ್‌ ಟ್ರೇಲರ್; ಭಾರತೀಯ ಭಾಷೆಗಳಿಗಿಂತ ಇದು ಭಿನ್ನ, ಹೆಚ್ಚು ಎಫೆಕ್ಟೀವ್‌ ಆಗಿರುವುದು ಏಕೆ?

ಕನ್ನಡ ವರ್ಷನ್‌ಗಿಂತ ʻಟಾಕ್ಸಿಕ್‌ʼ ಇಂಗ್ಲಿಷ್‌ ಟ್ರೇಲರ್‌ನಲ್ಲಿ ಹೊಸತೇನಿದೆ?

ʻಟಾಕ್ಸಿಕ್‌ʼ ಸಿನಿಮಾದ ಇಂಗ್ಲಿಷ್‌ ಟ್ರೇಲರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಡಬ್ಬಿಂಗ್ ಬದಲಿಗೆ ನೇರವಾಗಿ ಇಂಗ್ಲಿಷ್‌ನಲ್ಲೇ ಚಿತ್ರೀಕರಣಗೊಂಡಿರುವ ಈ ಆವೃತ್ತಿಯಲ್ಲಿ ಯಶ್ ಅವರ ನೈಜ ಧ್ವನಿ ಹಾಗೂ ಗಾಂಭೀರ್ಯ ಎದ್ದು ಕಾಣುತ್ತಿದೆ. ಗೋವಾದ ಹಿನ್ನೆಲೆಯ ರಕ್ತಸಿಕ್ತ ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್: ʻನೂರಕ್ಕೆ ನೂರರಷ್ಟು ಸತ್ಯ ಹೇಳುವೆʼ ಎಂದ ಆರೋಪಿ ಪ್ರದೋಷ್; ನಟ ದರ್ಶನ್‌ಗೆ ಹೆಚ್ಚಿತು ಸಂಕಷ್ಟ

ʻನಾನು ಸತ್ಯ ಹೇಳುತ್ತೇನೆ’ ಎಂದ ಪ್ರದೋಷ್; ನಟ ದರ್ಶನ್‌ಗೆ ಸಂಕಷ್ಟ‌ ಶುರು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ನಟ ದರ್ಶನ್‌ಗೆ ಕಾನೂನು ಸಂಕಷ್ಟ ಹೆಚ್ಚಿಸಿದೆ. 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಯಾರ ಒತ್ತಡವೂ ಇಲ್ಲದೆ ಸತ್ಯಾಂಶ ಬಹಿರಂಗಪಡಿಸುವುದಾಗಿ ಪ್ರದೋಷ್ ಸ್ಪಷ್ಟಪಡಿಸಿದ್ದಾರೆ.

50 ಅಡಿ ಎತ್ತರದ ದರ್ಶನ್‌ ಕಟೌಟ್‌ ಎದುರು ಭರ್ಜರಿ ಫೈಟ್‌ ಮಾಡಿದ ʻದೇವಿʼ; ʻಶಾಸ್ತ್ರಿʼ ಮುಂದೆ ಯುವರೈತನ ಆಕ್ಷನ್‌ ಅಬ್ಬರ!

50 ಅಡಿ ಎತ್ತರದ ದರ್ಶನ್‌ ಕಟೌಟ್‌ ಎದುರು ಭರ್ಜರಿ ಫೈಟ್‌ ಮಾಡಿದ ʻದೇವಿʼ

ʻದೇವಿʼ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಬೆಂಗಳೂರಿನ ಚಿತ್ರಮಂದಿರವೊಂದರ ಬಳಿ ಭರದಿಂದ ಸಾಗಿದೆ. ನಟ ದರ್ಶನ್ ಅವರ 50 ಅಡಿ ಕಟೌಟ್ ಎದುರು ಮಂಡ್ಯದ ಯುವ ರೈತ ಚೇತನ್ ಗೌಡ ನಾಯಕನಾಗಿ ಅಬ್ಬರಿಸಿದ್ದಾರೆ. ಭವ್ಯ ಗೌಡ ನಾಯಕಿಯಾಗಿದ್ದು, ಹಳ್ಳಿಯಿಂದ ಬಂದ ಯುವಕ ರೌಡಿಸಂ ಸುಳಿಗೆ ಸಿಲುಕುವ ಕಥಾಹಂದರವನ್ನು ನಿರ್ದೇಶಕ ಪ್ರಕಾಶ್ ಕುಮಾರ್ ಕಟ್ಟಿಕೊಡುತ್ತಿದ್ದಾರೆ.

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ʻಅಮೃತಧಾರೆʼ ಖ್ಯಾತಿಯ ರಾಜೇಶ್ ನಟರಂಗ; ಯಾವುದು ಆ ನಾಟಕ?

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ರಾಜೇಶ್ ನಟರಂಗ; ಯಾವುದು ಆ ನಾಟಕ?

ನಟ ರಾಜೇಶ್‌ ನಟರಂಗ ಭರ್ತಿ ಎರಡು ದಶಕಗಳ ಬಳಿಕ ರಂಗಭೂಮಿಗೆ ಮರಳಿದ್ದು, ಕಲಾದ್ಯುತಿ ಪ್ರೊಡಕ್ಷನ್ಸ್ ಅರ್ಪಿಸುವ ‘ಮಳೆ ನಿಲ್ಲುವವರೆಗೆ’ ನಾಟಕದಲ್ಲಿ ನಟಿಸುತ್ತಿದ್ದಾರೆ. ದಿವಂಗತ ಕೆಎಎಸ್ ಅಧಿಕಾರಿ ಎಲ್.ಎಸ್. ಸುಧೀಂದ್ರ ರೂಪಾಂತರಿಸಿದ ಈ ಜರ್ಮನ್ ಥ್ರಿಲ್ಲರ್ ಕಥೆಯನ್ನು ಶರತ್ ಪರ್ವತವಾಣಿ ನಿರ್ದೇಶಿಸಿದ್ದಾರೆ.

ಹಿರಿಯ ನಟಿ ‘ಸಾಹುಕಾರ್‌’ ಜಾನಕಿ ತೀವ್ರ ಅಸ್ವಸ್ಥ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

ನಟಿ ʻಸಾಹುಕಾರ್‌ʼ ಜಾನಕಿ ಅಸ್ವಸ್ಥ; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ

ಹಿರಿಯ ನಟಿ ʻಸಾಹುಕಾರ್‌ʼ ಜಾನಕಿ ವಯೋಸಹಜ ಅನಾರೋಗ್ಯ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಚೆನ್ನೈನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಹಿರಿಯ ಕಲಾವಿದೆಯ ಆರೋಗ್ಯ ಸದ್ಯ ಸ್ಥಿರವಾಗಿದ್ದು, ದಕ್ಷಿಣ ಭಾರತದ ಚಿತ್ರರಂಗ ಹಾಗೂ ಅಭಿಮಾನಿಗಳು ಜಾನಕಿ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ʻನಾನು ಹೆಮ್ಮೆಯ ಅಂಧಭಕ್ತೆ..’ ಎಂದ ಇಶಾ ಕೊಪ್ಪಿಕರ್; ಹೇಳಿಕೆ ತಿರುಚಿದವರಿಗೆ ‘ಸೂರ್ಯವಂಶ’ ನಟಿಯ ಖಡಕ್ ತಿರುಗೇಟು!

ʻನಾನು ಹೆಮ್ಮೆಯ ಅಂಧಭಕ್ತೆ’; ಇಶಾ ಕೊಪ್ಪಿಕರ್ ಹೇಳಿಕೆ ತಿರುಚಲಾಗಿದೆಯಾ?

ನಟಿ ಇಶಾ ಕೊಪ್ಪಿಕರ್ ಅವರು ಇತ್ತೀಚೆಗೆ ತಮ್ಮನ್ನು 'ಹೆಮ್ಮೆಯ ಅಂಧಭಕ್ತೆ' ಎಂದು ಕರೆದುಕೊಂಡಿದ್ದ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ತಿರುಚಿದ ಟ್ರೋಲರ್ಸ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ನಿಷ್ಠೆ ಇರುವುದು ದೇಶಕ್ಕೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕಲ್ಲ ಎಂದಿದ್ದಾರೆ.

2ನೇ ಮದುವೆ ವಿಚಾರ ಬಹಿರಂಗಪಡಿಸಿದ 'ಬಿಗ್ ಬಾಸ್' ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಈ ವಿವಾಹ ನಡೆದಿದ್ದು ಯಾವಾಗ?

ಎರಡನೇ ಮದುವೆ ಸತ್ಯ ಬಿಚ್ಚಿಟ್ಟ ʻಬಿಗ್ ಬಾಸ್ʼ ಖ್ಯಾತಿಯ ವರ್ತೂರು ಸಂತೋಷ್!

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ತಮ್ಮ ಎರಡನೇ ಮದುವೆಯ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಶೋ ಮುಗಿದ ಬಳಿಕ ಪ್ರೀತಿಸಿ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಯಸ್ಸಾದ ತಾಯಿಗೆ ಆಸರೆ ಹಾಗೂ ಮನೆಯ ಜವಾಬ್ದಾರಿಗಾಗಿ ಮದುವೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Loading...