ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻಮನೆಯಲ್ಲಿದ್ದ ಹಣಕಾಸಿನ ಸಮಸ್ಯೆಯಿಂದಾಗಿ ನಾನು ನಟನಾದೆʼ; ಸೂರ್ಯ ಬಿಚ್ಚಿಟ್ಟ ಅಸಲಿ ಸತ್ಯ ಇದು!

ʻಮನೆಯಲ್ಲಿದ್ದ ಹಣಕಾಸಿನ ಸಮಸ್ಯೆಯಿಂದಾಗಿ ನಾನು ನಟನಾದೆʼ ಎಂದ ಸೂರ್ಯ

'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾದ ಪ್ರಚಾರದ ವೇಳೆ ತಮಿಳು ನಟ ಸೂರ್ಯ ಕೆಲ ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮಗೆ ನಟನೆಯ ಯಾವುದೇ ತರಬೇತಿ ಇರಲಿಲ್ಲ, ಕೇವಲ ಮನೆಯಲ್ಲಿದ್ದ ತೀವ್ರ ಆರ್ಥಿಕ ಕಷ್ಟದಿಂದಾಗಿ ಹಣ ಗಳಿಸಲು ನಟನಾದೆ ಎಂದು ಸೂರ್ಯ ಹೇಳಿದ್ದಾರೆ.

Raaka: ‘ಕಲ್ಕಿ’ ನಂತರ ಮತ್ತೊಮ್ಮೆ ತೆರೆಮೇಲೆ ಗರ್ಭಿಣಿಯಾದ ದೀಪಿಕಾ ಪಡುಕೋಣೆ; ಅಲ್ಲು ಅರ್ಜುನ್-ಅಟ್ಲಿ ಚಿತ್ರದಲ್ಲಿ ಜಾನ್ವಿ ‘ಬುಡಕಟ್ಟು ರಾಣಿ’!

ಮತ್ತೊಮ್ಮೆ ಗರ್ಭಿಣಿ ಪಾತ್ರದಲ್ಲಿ ಮಿಂಚಲಿದ್ದಾರೆ ದೀಪಿಕಾ ಪಡುಕೋಣೆ!

ʻಐಕಾನ್ ಸ್ಟಾರ್ʼ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಅಟ್ಲಿ ಕಾಂಬಿನೇಷನ್‌ನ 'ರಾಕಾ' ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಮತ್ತೆ ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ʻರಾಕಾʼ ಸಿನಿಮಾವು 2027ರಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಮಹಿಳಾ ಪಾತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂಬುದು ಚರ್ಚೆ ಆಗುತ್ತದೆ.

ʻಈ ವಯಸ್ಸಿನಲ್ಲಿ ಡ್ರಾಮಾ ಮಾಡೋದು ಮುಜುಗರದ ಸಂಗತಿ..ʼ; ಉದಯನಿಧಿಗೆ ಪರೋಕ್ಷ ಟಾಂಗ್ ಕೊಟ್ರಾ ನಟಿ ತ್ರಿಶಾ ಕೃಷ್ಣನ್?

ʻಈ ವಯಸ್ಸಲ್ಲಿ ಡ್ರಾಮಾ ಮಾಡೋದು ಮುಜುಗರʼ; ಉದಯನಿಧಿಗೆ ತ್ರಿಶಾ ತಿರುಗೇಟು?

ಸಿಎಂ ವಿಜಯ್ ಮತ್ತು ತಮ್ಮ ಕುರಿತು ದ್ವಂದ್ವಾರ್ಥ ಹೇಳಿಕೆ ನೀಡಿ ಬಂಧನಕ್ಕೊಳಗಾಗಿದ್ದ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ಗೆ ನಟಿ ತ್ರಿಶಾ ಕೃಷ್ಣನ್ ಇನ್‌ಸ್ಟಾಗ್ರಾಮ್‌ನಲ್ಲಿ ಪರೋಕ್ಷವಾಗಿ ತಕ್ಕ ತಿರುಗೇಟು ನೀಡಿದ್ದಾರೆ. "ಈ ವಯಸ್ಸಿನಲ್ಲಿ ನಾಟಕೀಯತೆ ಮುಜುಗರದ ಸಂಗತಿ, ಹೋಗಿ ಹಣ ಸಂಪಾದಿಸಿ ಶಾಂತಿ ಕಂಡುಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.

'ಶಾಂತಿ ಕ್ರಾಂತಿ' ಹಾಡಿನ ಶೂಟಿಂಗ್‌ಗಾಗಿ ಎಂ.ಜಿ. ರೋಡ್‌ ಒದ್ದೆ ಮಾಡಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ರವಿಚಂದ್ರನ್;‌ 1 ದಿನದ ಚಿತ್ರೀಕರಣಕ್ಕೆ ಎಷ್ಟು ದುಡ್ಡು ಬೇಕಾಗುತ್ತಿತ್ತು?

MG ರೋಡ್‌ಗೆ ನೀರು ಸುರಿಯಲು ಲಕ್ಷಾಂತರ ರೂ. ಖರ್ಚು ಮಾಡಿದ್ದ ರವಿಚಂದ್ರನ್!

`ಕ್ರೇಜಿ ಸ್ಟಾರ್' ವಿ. ರವಿಚಂದ್ರನ್ ಅವರ ವೃತ್ತಿಬದುಕಿನ ಅತೀ ದುಬಾರಿ ಪ್ಯಾನ್-ಇಂಡಿಯಾ ಸಿನಿಮಾವಾದ 'ಶಾಂತಿ ಕ್ರಾಂತಿ'ಯ ಮೇಕಿಂಗ್ ವೆಚ್ಚದ ಕಥೆ ಇಂದಿಗೂ ಸ್ಯಾಂಡಲ್‌ವುಡ್‌ನಲ್ಲಿ ಅಚ್ಚರಿ ಮೂಡಿಸುತ್ತದೆ. 1990ರ ದಶಕದಲ್ಲೇ ದಿನಕ್ಕೆ 8 ಲಕ್ಷಕ್ಕೂ ಅಧಿಕ ವೆಚ್ಚ ಮಾಡಿ ಶೂಟಿಂಗ್‌ ಮಾಡಲಾಗಿತ್ತು. ಎಂ.ಜಿ. ರೋಡ್ ಒದ್ದೆ ಮಾಡಲು ಲಕ್ಷಾಂತರ ಹಣವನ್ನು ಸುರಿಯಲಾಗಿತ್ತು.

ಅಂದು ‘ಶಾಂತಿ ಕ್ರಾಂತಿ’ ಜೊತೆಜೊತೆಗೆ ರವಿಚಂದ್ರನ್ ಮಾಡಿದ ಸಿನಿಮಾಗಳೆಷ್ಟು? ಇಂದಿನ ಪೀಳಿಗೆಗೆ ಇದು ನಿಜಕ್ಕೂ ಸ್ಫೂರ್ತಿ!

ಅಂದು ‘ಶಾಂತಿ ಕ್ರಾಂತಿ’ ಜೊತೆಜೊತೆಗೆ ರವಿಚಂದ್ರನ್ ಮಾಡಿದ ಸಿನಿಮಾಗಳೆಷ್ಟು?

'ಕ್ರೇಜಿ ಸ್ಟಾರ್' ರವಿಚಂದ್ರನ್ ನಿರ್ಮಿಸಿ, ನಿರ್ದೇಶಿಸಿದ್ದ ‘ಶಾಂತಿ ಕ್ರಾಂತಿ’ ಚಿತ್ರದ ಮೇಕಿಂಗ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೆಂಡ್ ಆಗುತ್ತಿದೆ. ಮೂರು ವರ್ಷಗಳ ಕಾಲ ನಾಲ್ಕು ಭಾಷೆಗಳಲ್ಲಿ ರಜನಿಕಾಂತ್ ಹಾಗೂ ನಾಗಾರ್ಜುನ ಅವರೊಂದಿಗೆ ಬೃಹತ್ ಪ್ರಾಜೆಕ್ಟ್ ಮಾಡುತ್ತಲೇ, ರವಿಚಂದ್ರನ್ ಪ್ಯಾರಲಲ್ ಆಗಿಯೂ ಬೇರೆ ಬೇರೆ ಸಿನಿಮಾಗಳಲ್ಲಿ ತೊಡಗಿಕೊಂಡಿದ್ದರು.

ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ಶ್ರೀಮುರಳಿ ನಟನೆಯ 'ಉಗ್ರಾಯುಧಮ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

ನಟ ಶ್ರೀಮುರಳಿ ಅಭಿನಯದ 'ಉಗ್ರಾಯುಧಮ್' ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

'ರೋರಿಂಗ್ ಸ್ಟಾರ್' ಶ್ರೀಮುರಳಿ ಅಭಿನಯದ 'ಉಗ್ರಾಯುಧಮ್' ಚಿತ್ರದ ಶೂಟಿಂಗ್ ಬೆಂಗಳೂರಿನ ರಾಕ್‌ಲೈನ್ ಸ್ಟುಡಿಯೋದಲ್ಲಿ ನಿರ್ಮಿಸಲಾದ ಬೃಹತ್ ಸೆಟ್‌ನಲ್ಲಿ ಭರದಿಂದ ಸಾಗಿದೆ. 700 ವರ್ಷಗಳ ಹಿಂದಿನ ಚಾರಿತ್ರಿಕ ಕಥಾಹಂದರ ಹೊಂದಿರುವ ಈ ಸಿನಿಮಾವನ್ನು ಜಯರಾಮ್ ದೇವಸಮುದ್ರ ಅವರು ನಿರ್ಮಿಸುತ್ತಿದ್ದಾರೆ.

Chiyaan Vikram: ಚಿಯಾನ್ ವಿಕ್ರಮ್‌ಗೆ ವಿರುದ್ಧ ತನಿಖೆ;  ಕೋತಿ ಜತೆಗಿನ ಇನ್‌ಸ್ಟಾಗ್ರಾಮ್‌ ರೀಲ್ ತಂತು ಆಪತ್ತು: ಅಷ್ಟಕ್ಕೂ ಆಗಿದ್ದೇನು?

ಚಿಯಾನ್ ವಿಕ್ರಮ್‌ಗೆ ವಿರುದ್ಧ ತನಿಖೆ; ಅಷ್ಟಕ್ಕೂ ಆಗಿದ್ದೇನು?

Chiyaan Vikram: ಚಿಯಾನ್ ವಿಕ್ರಮ್ ಅಪರೂಪದ ಪ್ರಾಣಿಯೊಂದನ್ನು ಹಿಡಿದುಕೊಂಡಿದ್ದರು ಇದೀಗ ಆ ವಿಡಿಯೋ ಇಂದಲೇ ಚಿಯಾನ್ ವಿಕ್ರಂಗೆ ಸಂಕಷ್ಟ ಶುರುವಾಗಿದ್ದು, ಅರಣ್ಯ ಇಲಾಖೆ ತನಿಖೆ ನಡೆಸಲು ಮುಂದಾಗಿದೆ. ಈಗ ಚಿಯಾನ್ ವಿಕ್ರಂ ವಿಡಿಯೋನಲ್ಲಿರುವ ಲಾರ್ ಗಿಬ್ಬನ್ ಪ್ರಾಣಿಯು ಅಳಿವಿನಂಚಿನಲ್ಲಿರುವ ಪ್ರಭೇದ. ಹಾಗಾಗಿ ಚಿಯಾನ್ ವಿಕ್ರಂ ಅಥವಾ ಆ ಪ್ರಾಣಿಯನ್ನು ಹೊಂದಿರುವ ಯಾರೇ ಆಗಲಿ ಕಠಿಣ ಕಾನೂನು ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ.

ʻಶಾಂತಿ ಕ್ರಾಂತಿʼ ಸಿನಿಮಾದಲ್ಲಿ ಬಾಲ ನಟಿ, ʻಯಾರೇ ನೀನು ಚೆಲುವೆʼ ಚಿತ್ರದಲ್ಲಿ ರವಿಚಂದ್ರನ್‌ಗೆ ನಾಯಕಿ; ಮಲಯಾಳಂನ ಸಂಗೀತಾ ಮಾಧವನ್‌ ಬಗ್ಗೆ ನಿಮಗೆಷ್ಟು ಗೊತ್ತು?

ʻಶಾಂತಿ ಕ್ರಾಂತಿʼ ಸಿನಿಮಾದ ಬಾಲ ನಟಿಯಾಗಿದ್ದ ಸಂಗೀತಾ ಮಾಧವನ್‌ ಈಗ ಏನಂದ್ರು?

'ಕ್ರೇಜಿ ಸ್ಟಾರ್' ರವಿಚಂದ್ರನ್ ಅವರ 'ಶಾಂತಿ ಕ್ರಾಂತಿ' ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿದ್ದ ಮಲಯಾಳಂ ನಟಿ ಸಂಗೀತಾ ಮಾಧವನ್ ನಾಯರ್, ಮುಂದೆ 'ಯಾರೇ ನೀನು ಚೆಲುವೆ' ಚಿತ್ರದಲ್ಲಿ ಅವರಿಗೆ ನಾಯಕಿಯಾಗಿದ್ದ ಸುಂದರ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Prakash Raj: ಬೆಂಗಳೂರು ಮತದಾರರ ಪಟ್ಟಿಯಲ್ಲಿ ಪ್ರಕಾಶ್ ರಾಜ್ ಹೆಸರೇ ಇಲ್ಲ! ವಿಡಿಯೋ ಮೂಲಕ ಹೇಳಿದ್ದೇನು?

ಬೆಂಗಳೂರು ಮತದಾರರ ಪಟ್ಟಿಯಲ್ಲಿ ಪ್ರಕಾಶ್ ರಾಜ್ ಹೆಸರೇ ಇಲ್ಲ!

Prakash Raj: ಕರ್ನಾಟಕದಲ್ಲಿ ಎಸ್​​ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲಿ ಎಸ್‌ಐಆರ್ ನೆಪದಲ್ಲಿ ಸುಮಾರು 65 ಲಕ್ಷ ಜನರ ಮತಗಳನ್ನು ಡಿಲೀಟ್ ಮಾಡಲಾಗಿದೆ. ಈ ರೀತಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ದುರದೃಷ್ಟಕರ ಮತದಾರರಲ್ಲಿ ನಾನು ಕೂಡ ಒಬ್ಬನಾಗಿದ್ದೇನೆ ಎಂದು ಪ್ರಕಾಶ್ ರಾಜ್ ವಿಡಿಯೋದಲ್ಲಿ ಹೇಳಿದ್ದಾರೆ. SIR ಅಡಿಯಲ್ಲಿ ಹೆಸರುಗಳನ್ನು ಹೊಂದಿರುವ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಲು ಮತ್ತು ಮತದಾರರ ಪಟ್ಟಿಯಲ್ಲಿ ತಮ್ಮ ಸೇರ್ಪಡೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಳಲಾಗಿದೆ.

ʻಮಹಾನ್ʼ ಸಿನಿಮಾದಲ್ಲಿ ರೈತರ ಕಷ್ಟಗಳಿಗೆ ಧ್ವನಿಯಾದ ʻಬಿಗ್‌ ಬಾಸ್‌ʼ ನಮ್ರತಾ ಗೌಡ; ಫಸ್ಟ್‌ ಲುಕ್‌ ರಿಲೀಸ್‌

ʻಮಹಾನ್ʼ ಚಿತ್ರಕ್ಕೆ ʻಬಿಗ್‌ ಬಾಸ್‌ʼ ನಮ್ರತಾ- ಕಿರಣ್‌ ಶ್ರೀನಿವಾಸ್‌ ಎಂಟ್ರಿ

ವಿಜಯ ರಾಘವೇಂದ್ರ ನಟನೆಯ ಹಾಗೂ ಪಿ. ಸಿ. ಶೇಖರ್ ನಿರ್ದೇಶನದ ಬಹುನಿರೀಕ್ಷಿತ 'ಮಹಾನ್' ಚಿತ್ರದ ಪ್ರಮುಖ ಪಾತ್ರಧಾರಿಗಳಾದ ನಮ್ರತಾ ಗೌಡ ಮತ್ತು ಕಿರಣ್ ಶ್ರೀನಿವಾಸ್ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಚಿತ್ರದಲ್ಲಿ ನಮ್ರತಾ ಗೌಡ ಹಳ್ಳಿಯ ರೈತರ ಕಷ್ಟಗಳಿಗೆ ಧ್ವನಿಯಾಗುವ ವಿದ್ಯಾವಂತ ಯುವತಿಯಾಗಿ ಕಾಣಿಸಿಕೊಂಡಿದ್ದಾರೆ.

Ram Gopal Varma: ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಪಾತ್ರದಲ್ಲಿ ಈ ನಟ!

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾ ನಾಯಕ್ ಪಾತ್ರದಲ್ಲಿ ಈ ನಟ!

Ram Gopal Varma: ನಿರ್ದೇಶಕ ರಾಮ್ ಗೋಪಾಲ್ ವರ್ಮಾ 'ಪೋಲಿಸ್ ಕಂಪನಿ' ಎಂಬ ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಚಿತ್ರವನ್ನು ಟಿ-ಸೀರೀಸ್ ಬೆಂಬಲಿಸಲಿದ್ದು, ನಟ ಹರ್ಷವರ್ಧನ್ ರಾಣೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂಬೈ ಭೂಗತ ಜಗತ್ತಿನ ವಿರುದ್ಧದ ಕೆಲಸಕ್ಕಾಗಿ ಹೆಸರುವಾಸಿಯಾದ ಮಾಜಿ ಮುಂಬೈ ಪೊಲೀಸ್ ಅಧಿಕಾರಿ ದಯಾ ನಾಯಕ್ ಅವರ ಜೀವನವನ್ನು ಆಧರಿಸಿದ ಚಿತ್ರ.

vijay sethupathi: ವಿಜಯ್​ ಸೇತುಪತಿ 'ಸ್ಲಮ್ ಡಾಗ್' ; ಪವರ್‌ಫುಲ್ ಅಧಿಕಾರಿ ಪಾತ್ರದಲ್ಲಿ ಟಬು

ವಿಜಯ್​ ಸೇತುಪತಿ 'ಸ್ಲಮ್ ಡಾಗ್' ; ಪವರ್‌ಫುಲ್ ಅಧಿಕಾರಿ ಪಾತ್ರದಲ್ಲಿ ಟಬು

vijay sethupathi: ಪ್ಯಾನ್-ಇಂಡಿಯಾ ಆಕ್ಷನ್ ಡ್ರಾಮಾ 'ಸ್ಲಮ್ ಡಾಗ್: 33 ಟೆಂಪಲ್ ರೋಡ್' ಸಿನಿಮಾವು ಭರ್ಜರಿ ಆಕ್ಷನ್ ಮತ್ತು ನಿಗೂಢತೆಯ ಮಿಶ್ರಣವನ್ನು ನೀಡುವ ಭರವಸೆ ಮೂಡಿಸಿದೆ. ಇತ್ತೀಚೆಗಷ್ಟೇ ಗೌರಿ ಹೆಗ್ಡೆ (Gowri hegde) ಪಾತ್ರದಲ್ಲಿ ಟಬು ಅವರ ಫಸ್ಟ್ ಲುಕ್ ಅನಾವರಣಗೊಳಿಸಿದ್ದ ಚಿತ್ರತಂಡ, ಈಗ ಅವರ ಶಕ್ತಿಶಾಲಿ ಪಾತ್ರದ ಪರಿಚಯ ನೀಡುವ ಒಂದು ಪವರ್‌ಫುಲ್ ಗ್ಲಿಂಪ್ಸ್ ಬಿಡುಗಡೆ ಮಾಡಿದೆ.

Shruti Haasan: ತೀವ್ರ ಅಲರ್ಜಿ, ಚರ್ಮದ ಕಿರಿಕಿರಿ; ಶ್ರುತಿ ಹಾಸನ್ ಭಾವುಕರಾಗಿದ್ದೇಕೆ?

ತೀವ್ರ ಅಲರ್ಜಿ, ಚರ್ಮದ ಕಿರಿಕಿರಿ; ಶ್ರುತಿ ಹಾಸನ್ ಭಾವುಕರಾಗಿದ್ದೇಕೆ?

Shruti Haasan: ತೀವ್ರ ಸ್ವರೂಪದ ಅಲರ್ಜಿ ಸಮಸ್ಯೆಯಿಂದಾಗಿ ನಟಿ ಶ್ರುತಿ ಹಾಸನ್ ತಾವು ದತ್ತು ಪಡೆದಿದ್ದ ಆಸ್ಲನ್ ಎಂಬ ಬೆಕ್ಕಿನ ಮರಿಯನ್ನು ಹಿಂತಿರುಗಿಸಿದ್ದಾರೆ. ಔಷಧಿ ಹಾಗೂ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದರೂ ಅಲರ್ಜಿ (allergies) ಕಡಿಮೆಯಾಗದ ಹಿನ್ನೆಲೆಯಲ್ಲಿ, ಭಾರವಾದ ಮನಸ್ಸಿನಿಂದ ಅವರು ಈ ಕಠಿಣ ನಿರ್ಧಾರ ಕೈಗೊಂಡು ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.

OTT Movie: ಈ ಒಟಿಟಿಯಲ್ಲಿ  'ಲೆನಿನ್'; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

ಈ ಒಟಿಟಿಯಲ್ಲಿ 'ಲೆನಿನ್'; ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

OTT Movie: ಮುರಳಿ ಕಿಶೋರ್ ಅಬ್ಬೂರು ನಿರ್ದೇಶನದ 'ಲೆನಿನ್' ಚಿತ್ರದಲ್ಲಿ ಅಖಿಲ್ ಅಕ್ಕಿನೇನಿ ಅವರ ಜೊತೆಗೆ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಶಿವಾಜಿ, ಸುನಿಲ್, ಈಶ್ವರಿ ರಾವ್, ಬ್ರಹ್ಮಾಜಿ, ಗೆಟಪ್ ಶ್ರೀನು, ರಾಮ್‌ಕಿ ಸೇರಿದಂತೆ ಹಲವು ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ನಟ ಪ್ರಮೋದ್ ಪಂಜು ಈ ಸಿನಿಮಾದ ದೊಡ್ಡ ಹೈಲೈಟ್‌.

‘ಗೆಳತಿ ಗಾಯತ್ರಿ’ ಧಾರಾವಾಹಿ ಮೂಲಕ ವೈಷ್ಣವಿ ಗೌಡ ಕಮ್‌ಬ್ಯಾಕ್, ಜೊತೆಯಾದ ಕೃತ್ತಿಕಾ ರವೀಂದ್ರ; ಈ ಸೀರಿಯಲ್‌ ಯಾವಾಗಿಂದ ಪ್ರಸಾರ?

‘ಗೆಳತಿ ಗಾಯತ್ರಿ’ ಧಾರಾವಾಹಿಗಾಗಿ ಜೊತೆಯಾದ ವೈಷ್ಣವಿ ಗೌಡ-ಕೃತ್ತಿಕಾ ರವೀಂದ್ರ

'ಗೆಳತಿ ಗಾಯತ್ರಿ' ಧಾರಾವಾಹಿ ಮೂಲಕ ನಟಿ ವೈಷ್ಣವಿ ಗೌಡ ಮದುವೆಯ ನಂತರ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಕೃತ್ತಿಕಾ ರವೀಂದ್ರ ಗಾಯತ್ರಿಯಾಗಿ ಹಾಗೂ ವೈಷ್ಣವಿ ಪಾರ್ವತಿಯಾಗಿ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಬಾಲ್ಯದಲ್ಲಿ ದೂರವಾದ ಇಬ್ಬರು ಪ್ರಾಣಸ್ನೇಹಿತೆಯರ ಹುಡುಕಾಟ ಹಾಗೂ ವಿಧಿ ನೀಡುವ ಭಾವನಾತ್ಮಕ ತಿರುವುಗಳ ಕಥಾಹಂದರವನ್ನು ಈ ಧಾರಾವಾಹಿ ಹೊಂದಿದೆ.

ತಾಯಿಯ ಸಾವಿನಿಂದ ಕಂಗೆಟ್ಟು ನರ್ಮದಾ ನದಿಗೆ ಧುಮುಕಿದ್ದ ನಟ ಗೋವಿಂದ; ಬದುಕಿನ ಕರಾಳ ಅಧ್ಯಾಯ ಬಿಚ್ಚಿಟ್ಟ ಬಾಲಿವುಡ್ ಹೀರೋ!

ತಾಯಿಯ ಸಾವಿನಿಂದ ನೊಂದು ನರ್ಮದಾ ನದಿಗೆ ಧುಮುಕಿದ್ದ ನಟ ಗೋವಿಂದ!

ನಟ ಗೋವಿಂದ ತಮ್ಮ ತಾಯಿ ನಿಧನದ ನಂತರ ಅನುಭವಿಸಿದ ಮಾನಸಿಕ ಆಘಾತ ಮತ್ತು ನರ್ಮದಾ ನದಿಗೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದ ಕರಾಳ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ತಾಯಿಯ ಅಗಲಿಕೆ ಸಹಿಸದೇ ನದಿಯ ಆಳಕ್ಕೆ ಇಳಿದಾಗ ಸಾಧು ನೀಡಿದ ಎಚ್ಚರಿಕೆಯಿಂದ ಜ್ಞಾನೋದಯವಾಗಿ ಮರುಹುಟ್ಟು ಪಡೆದಿದ್ದಾಗಿ ಗೋವಿಂದ ಹೇಳಿದ್ದಾರೆ.

TN Seetharam: ಹೊಸ ಅಧ್ಯಾಯ ಶುರು ಮಾಡಿದ ಟಿ.ಎನ್. ಸೀತಾರಾಮ್! ಏನಿದು ವಿಶೇಷ?

ಹೊಸ ಅಧ್ಯಾಯ ಶುರು ಮಾಡಿದ ಟಿ.ಎನ್. ಸೀತಾರಾಮ್! ಏನಿದು ವಿಶೇಷ?

TN Seetharam: ಸೀತಾರಾಮ್ ತಮ್ಮ ಜನಪ್ರಿಯ 'ಸಿಎಸ್‌ಪಿ' (CSP) ಪಾತ್ರದೊಂದಿಗೆ 'ಮುಂದಿನ ಅಧ್ಯಾಯ' ಎಂಬ ಹೊಸ ವೆಬ್ ಸರಣಿಯ ಮೂಲಕ ಯೂಟ್ಯೂಬ್‌ಗೆ ಕಾಲಿಡುತ್ತಿದ್ದಾರೆ.ಒಂದು ಸಂಪೂರ್ಣ ಸೀಸನ್ ಮುಗಿದ ಮೇಲೆ ಎಲ್ಲಾ ಎಪಿಸೋಡ್ ಗಳನ್ನು ಒಟ್ಟಿಗೆ ಕೂಡ ನೋಡಬಹುದು. ಸ್ವಲ್ಪ ಸಮಯದ ನಂತರ ಮತ್ತೊಂದು ಸೀಸನ್ ಪ್ರಸಾರ ಮಾಡುವ ಯೋಜನೆ ರೂಪಿಸಲಾಗಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌ ಗ್ಯಾಂಗ್‌ಗೆ ಬಿಗ್ ಶಾಕ್! ಪ್ರದೋಶ್ 'ಮಾಫಿ ಸಾಕ್ಷಿ' ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಕೋರ್ಟ್ ನಿರಾಕರಣೆ

ಪ್ರದೋಶ್ ಮಾಫಿ ಸಾಕ್ಷಿ; ಕೋರ್ಟ್‌ನಲ್ಲಿ ನಟ ದರ್ಶನ್‌ಗೆ ಭಾರಿ ಹಿನ್ನಡೆ!

ಚಿತ್ರದುರ್ದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗ್ಯಾಂಗ್‌ಗೆ ದೊಡ್ಡ ಹಿನ್ನಡೆಯಾಗಿದೆ. ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಸಲ್ಲಿಸಿದ ಅರ್ಜಿಗೆ ಆಕ್ಷೇಪಿಸಲು ಸಹ-ಆರೋಪಿಗಳಿಗೆ ಕಾನೂನಿನಲ್ಲಿ ಅವಕಾಶವಿಲ್ಲವೆಂದು ಕೋರ್ಟ್ ದರ್ಶನ್ ವಕೀಲರ ಅರ್ಜಿಯನ್ನು ವಜಾಗೊಳಿಸಿದೆ.

ಮದುವೆ ಬ್ಯುಸಿಯಲ್ಲೂ ʻಜೋಡೆತ್ತುʼ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ನಟ ಚಿಕ್ಕಣ್ಣ ಭಾಗಿ; ಎತ್ತಿನ ಗಾಡಿ ರೇಸ್‌ಗೆ 1000 ಜ್ಯೂನಿಯರ್‌ ಆರ್ಟಿಸ್ಟ್‌ ಬಳಕೆ

ʻಜೋಡೆತ್ತುʼ ಚಿತ್ರದ ಕ್ಲೈಮ್ಯಾಕ್ಸ್‌ಗೆ 1000 ಜ್ಯೂನಿಯರ್‌ ಆರ್ಟಿಸ್ಟ್‌ ಬಳಕೆ

ಈ ತಿಂಗಳ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿರುವ ನಟ ಚಿಕ್ಕಣ್ಣ, ತಮ್ಮ ಮದುವೆ ತಯಾರಿಯ ನಡುವೆಯೂ 'ಜೋಡೆತ್ತು' ಸಿನಿಮಾದ ಅದ್ಧೂರಿ ಕ್ಲೈಮ್ಯಾಕ್ಸ್ ಶೂಟಿಂಗ್ ಮುಗಿಸಿಕೊಟ್ಟಿದ್ದಾರೆ. ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣದ, ಸುಧಾಕರ್ ಎಸ್. ರಾಜ್ ನಿರ್ದೇಶನದ ಈ ಚಿತ್ರದಲ್ಲಿ ತೆಲುಗು ನಟ ಸುನಿಲ್ ಪ್ರಮುಖ ಪಾತ್ರದಲ್ಲಿದ್ದಾರೆ.

ಎಲ್ಲರೆದುರು ತುಟಿಗೆ ಮುತ್ತಿಕ್ಕಿದ ಮಹಿಳಾ ಅಭಿಮಾನಿ; ನಟಿ ನಿಖಿತಾ ರಾವಲ್‌ಗೆ ತೀವ್ರ ಮುಜುಗರ!

ನಟಿ ನಿಖಿತಾ ರಾವಲ್‌ ತುಟಿಗೆ ಎಲ್ಲರೆದುರು ಮುತ್ತಿಕ್ಕಿದ ಮಹಿಳಾ ಅಭಿಮಾನಿ!

ನಟಿ ನಿಖಿತಾ ರಾವಲ್ ಅವರಿಗೆ ರೆಡ್ ಕಾರ್ಪೆಟ್ ಕಾರ್ಯಕ್ರಮವೊಂದರಲ್ಲಿ ಮಹಿಳಾ ಅಭಿಮಾನಿಯೊಬ್ಬರಿಂದ ತೀವ್ರ ಮುಜುಗರದ ಘಟನೆ ಎದುರಾಗಿದೆ. ಪಾಪರಾಜಿಗಳಿಗೆ ಪೋಸ್ ನೀಡುತ್ತಿದ್ದಾಗ ಸೆಲ್ಫಿಗಾಗಿ ಬಂದ ಮಹಿಳೆ, ಬಲವಂತವಾಗಿ ನಿಖಿತಾ ಅವರ ಕೆನ್ನೆ ಹಾಗೂ ತುಟಿಗೆ ಮುತ್ತಿಟ್ಟಿದ್ದಾಳೆ.

ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಪುತ್ರ ಅಮೀನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತ!

ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಪುತ್ರ ಪ್ರಯಾಣಿಸುತ್ತಿದ್ದ ಕಾರು ಅಪಘಾತ

ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಅವರ ಪುತ್ರ, ಉದಯೋನ್ಮುಖ ಗಾಯಕ ಎ. ಆರ್. ಅಮೀನ್ ಪ್ರಯಾಣಿಸುತ್ತಿದ್ದ ಕಾರು ಸೋಮವಾರ (ಆಗಸ್ಟ್ 10) ಚೆನ್ನೈನ ಗಿಂಡಿ ಬಳಿಯ ಕತ್ತಿಪಾರ ಫ್ಲೈಓವರ್ ಸಮೀಪ ಅಪಘಾತಕ್ಕೀಡಾಗಿದೆ.

Yash: ʻಟಾಕ್ಸಿಕ್‌ʼ ಸಿನಿಮಾಕ್ಕಾಗಿ ಕೋಟಿ ಕೋಟಿ ಚಾರ್ಜ್ ಮಾಡಿದ ರುಕ್ಮಿಣಿ ವಸಂತ್‌; ರುಕ್ಕು ಸಂಭಾವನೆ ಕೇಳಿದ ಸ್ಯಾಂಡಲ್‌ವುಡ್‌ ಶಾಕ್!‌

Yash: ʻಟಾಕ್ಸಿಕ್ʼ ಸಿನಿಮಾದಲ್ಲಿ ನಟಿಸಲು ಭಾರಿ ಸಂಭಾವನೆ ಪಡೆದ ರುಕ್ಮಿಣಿ!

'ರಾಕಿಂಗ್ ಸ್ಟಾರ್' ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಟ್ರೇಲರ್‌ನಲ್ಲಿ ರುಕ್ಮಿಣಿ ವಸಂತ್ 'ಮೆಲಿಸ್ಸಾ' ಎಂಬ ಪವರ್‌ಫುಲ್ ಪಾತ್ರದ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ' ಹಾಗೂ 'ಕಾಂತಾರ: ಚಾಪ್ಟರ್ 1' ಹಿಟ್ ನಂತರ ಅವರ ಮಾರುಕಟ್ಟೆ ಮೌಲ್ಯ ಹೆಚ್ಚಾಗಿದ್ದು, ಟಾಕ್ಸಿಕ್ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ʻನಮ್ಮಪ್ಪನಿಗೆ ಅಮ್ಮ‌ ಊದುಬತ್ತಿ ಮಾರಿ ಕೊಡಿಸಿದ ಬುಲೆಟ್‌ ಇದುʼ; ತಂದೆಯ ಬೈಕನ್ನೇರಿ ಸಂಭ್ರಮಿಸಿದ ಜಗ್ಗೇಶ್‌

ʻನನ್ನ ಬದುಕಿನ ಭಾಗ್ಯದೇವತೆ ಈ ಬುಲೆಟ್ʼ; ನಟ ಜಗ್ಗೇಶ್ ಹೀಗೆ ಹೇಳಿದ್ದೇಕೆ?

ನವರಸ ನಾಯಕ ಜಗ್ಗೇಶ್ ಅವರು 1956ರಲ್ಲಿ ತಮ್ಮ ತಾಯಿ ಊದುಬತ್ತಿ ಮಾರಿ ತಂದೆಗೆ ಕೊಡಿಸಿದ್ದ 70 ವರ್ಷ ಹಳೆಯ 'ಬುಲೆಟ್' ಬೈಕ್‌ನೊಂದಿಗೆ ಭಾವನಾತ್ಮಕ ನೆನಪುಗಳನ್ನು ಹಂಚಿಕೊಂಡಿದ್ದಾರೆ. ನಾಲ್ಕು ತಲೆಮಾರುಗಳನ್ನು ಹೊತ್ತ ಈ ಬೈಕ್ ತಮ್ಮ ಬದುಕಿನ ಭಾಗ್ಯದೇವತೆ ಎಂದಿದ್ದಾರೆ ಜಗ್ಗೇಶ್.

Shakeel Noorani: ಖ್ಯಾತ ಸಿನಿಮಾ ಡೈರೆಕ್ಟರ್ ಅರೆಸ್ಟ್‌

ಖ್ಯಾತ ಸಿನಿಮಾ ಡೈರೆಕ್ಟರ್ ಅರೆಸ್ಟ್‌

Shakeel Noorani: 73 ವರ್ಷದ ಚಲನಚಿತ್ರ ನಿರ್ದೇಶಕ ಶಕೀಲ್ ನೂರಾನಿ (Shakeel Noorani ) ಅವರನ್ನು ಬಂಧಿಸಲಾಗಿದೆ. ನಟಿಗೆ ಮಾದಕ ದ್ರವ್ಯ ನೀಡಿ, ಅತ್ಯಾಚಾರವೆಸಗಿದ್ದು, ನಂತರ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ನ್ಯಾಯಾಲಯವು ನೂರಾನಿ ಅವರನ್ನು ಆಗಸ್ಟ್ 12 ರವರೆಗೆ ಬಂಧನದಲ್ಲಿರಿಸಿದೆ.

Loading...