ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Salman Khan: ಮುಂಬೈನ  RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗಿ

ಮುಂಬೈನ RSS ಶತಮಾನೋತ್ಸವ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಭಾಗಿ

RSS Mumbai event: ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ 100 ವರ್ಷ ತುಂಬಿದ ಹಿನ್ನೆಲೆ ದೇಶದೆಲ್ಲೆಡೆ ಆರ್‌ಎಸ್‌ಎಸ್ ಕಾರ್ಯಕ್ರಮವನ್ನು ನಡೆಸುತ್ತಿದೆ. ಹಾಗೆಯೇ ಮುಂಬೈನಲ್ಲಿ ನಡೆದ ಆರ್‌ಎಸ್‌ಎಸ್‌ನ 100ನೇ ವರ್ಷದ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟ ಸಲ್ಮಾನ್ ಖಾನ್ ಭಾಗಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ನಟ ಸಲ್ಮಾನ್ ಖಾನ್ ಶನಿವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಂಬೈ ವ್ಯಾಖ್ಯಾನಮಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Kannada Film: ʻವಲವಾರʼ ನಮ್ಮ ಹೆಮ್ಮೆಯ ಸಿನಿಮಾ; ಕವಿರಾಜ್ ಮೆಚ್ಚುಗೆ

ʻವಲವಾರʼ ನಮ್ಮ ಹೆಮ್ಮೆಯ ಸಿನಿಮಾ; ಕವಿರಾಜ್ ಮೆಚ್ಚುಗೆ

Valavaara: ಸುತನ್ ಗೌಡ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್​ ಕಟ್​ ಹೇಳಿರುವ ವಲವಾರ ಸಿನಿಮಾಗೆ ಇಡೀ ಚಿತ್ರರಂಗ ಜೈ ಎಂದಿದೆ.‌ ಶಿವಣ್ಣ, ರಿಷಬ್ ಶೆಟ್ಟಿ ಸೇರಿದಂತೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮೆಚ್ಚಿರುವ ಈ ಚಿತ್ರಕ್ಕೆ ಚಿತ್ರ ಸಾಹಿತಿ ಕವಿರಾಜ್ ಕೂಡ ಬೆಂಬಲವಾಗಿ ನಿಂತಿದ್ದಾರೆ‌‌.

Rajpal Yadav: ತಿಹಾರ್ ಜೈಲಿನಲ್ಲಿ ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್; ಏನಿದು ಪ್ರಕರಣ?

ತಿಹಾರ್ ಜೈಲಿನಲ್ಲಿ ಖ್ಯಾತ ಹಾಸ್ಯ ನಟ ರಾಜ್​ಪಾಲ್ ಯಾದವ್

Tihar Jail : ತಮ್ಮ ಹಾಸ್ಯಮಯ ಸಮಯಪ್ರಜ್ಞೆಯಿಂದ ಪ್ರೇಕ್ಷಕರನ್ನು ನಗಿಸಲು ಹೆಸರುವಾಸಿಯಾದ ನಟ ರಾಜ್‌ಪಾಲ್ ಯಾದವ್ ಈಗ ತಿಹಾರ್ ಜೈಲು ಪಾಲಾಗಿದ್ದಾರೆ. ಬಾಲಿವುಡ್ ತಾರೆ ಮತ್ತೊಮ್ಮೆ ಕಾನೂನು ತೊಂದರೆಯಲ್ಲಿ ಸಿಲುಕಿದ್ದಾರೆ, ಕೋಟ್ಯಂತರ ರೂಪಾಯಿ ಸಾಲ ಹಿಂದಿರುಗಿಸಲು ಸಾಧ್ಯವಾಗದ ಕಾರಣ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

Ramayana : ಯಶ್ ಪೌರಾಣಿಕ ಸಿನಿಮಾ ‘ರಾಮಾಯಣ’ಕ್ಕೆ ಈ ನಟ ಎಂಟ್ರಿ! ಪಾತ್ರ ಏನು?

ಯಶ್ ಪೌರಾಣಿಕ ಸಿನಿಮಾ ‘ರಾಮಾಯಣ’ಕ್ಕೆ ಈ ನಟ ಎಂಟ್ರಿ! ಪಾತ್ರ ಏನು?

Vikrant Massey: ಆರ್ಯನ್ ಖಾನ್ ಅವರ ಹಿಟ್ ಶೋ 'ದಿ ಬಿ**ಡ್ಸ್ ಆಫ್ ಬಾಲಿವುಡ್‌ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದ ರಾಘವ್ ಜುಯಾಲ್ , ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಚಿತ್ರದಲ್ಲಿ ನಟಿಸಿದ್ದಾರೆ. ವರದಿಯ ಪ್ರಕಾರ, ಈ ಚಿತ್ರದಲ್ಲಿ ರಾವಣನ ಹಿರಿಯ ಮಗ ಮೇಘನಾದ (ಇಂದ್ರಜಿತ್ ಎಂದೂ ಕರೆಯುತ್ತಾರೆ) ಪಾತ್ರವನ್ನು ಅವರು ನಿರ್ವಹಿಸಲಿದ್ದಾರೆ. 2027 ರ ದೀಪಾವಳಿಗೆ ಬಿಡುಗಡೆಯಾಗಲಿರುವ 'ರಾಮಾಯಣ: ಭಾಗ 2' ನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ.

Rishab Shetty: ಮಲಯಾಳಂ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ನಟನೆ? ಯಾವ ಮೂವಿ

ಮಲಯಾಳಂ ಸಿನಿಮಾದಲ್ಲಿ ರಿಷಬ್‌ ಶೆಟ್ಟಿ ನಟನೆ? ಯಾವ ಮೂವಿ

Rishab Kantara: ಎಂ.ಟಿ. ವಾಸುದೇವನ್ ನಾಯರ್ ಅವರ ಪ್ರಸಿದ್ಧ ಕಾದಂಬರಿ 'ರಂಡಮೂಳಂ' ನ ಚಲನಚಿತ್ರ ರೂಪಾಂತರಕ್ಕಾಗಿ ಕೇರಳದ ಚಲನಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಾ ಒಂದೂವರೆ ದಶಕಗಳಿಗಿಂತಲೂ ಹೆಚ್ಚು ಸಮಯವಾಗಿದೆ. ಆ ಕಾಯುವಿಕೆ ಕೊನೆಗೂ ಮುಗಿದಂತೆ ಕಾಣುತ್ತಿದೆ. ಎಂ.ಟಿ. ವಾಸುದೇವನ್ ನಾಯರ್ ಅವರ ಪುತ್ರಿ ಅಶ್ವತಿ ವಿ ನಾಯರ್ , ಮಾರ್ಚ್ 2026 ರ ವೇಳೆಗೆ ಪ್ರೇಕ್ಷಕರು ಅಪ್‌ಡೇಟ್‌ ನಿರೀಕ್ಷಿಸಬಹುದು ಎಂದು ಇತ್ತೀಚೆಗೆ ದೃಢಪಡಿಸಿದರು.

Director Prem : ಕನಕಪುರ ಶ್ರೀನಿವಾಸ್ ವಿರುದ್ಧ ಪ್ರೇಮ್‌ ದೂರು; ಕೆರಳಿ ಕೆಂಡವಾಗಿ ಖಡಕ್ ರಿಪ್ಲೈ !

ಕನಕಪುರ ಶ್ರೀನಿವಾಸ್ ವಿರುದ್ಧ ಪ್ರೇಮ್‌ ದೂರು

Kanakapura Srinivas: ಹಿರಿಯ ನಿರ್ಮಾಪಕ ಕನಕಪುರ ಶ್ರೀನಿವಾಸ್ಕೆ ಲ ದಿನಗಳ ಹಿಂದಷ್ಟೆ ಸಿನಿಮಾ ಸಂಬಂಧಿ ಕಾರ್ಯಕ್ರಮದಲ್ಲಿ ತುಚ್ಚವಾಗಿ ಮಾತನಾಡಿದ್ದರು. ಪ್ರೇಮ್ , ಅರ್ಜುನ್ ಜನ್ಯಾ ಇನ್ನೂ ಕೆಲವರ ಹೆಸರು ಹೇಳಿ ಕೆಲವು ಆರೋಪಗಳನ್ನು ನಿರ್ಮಾಪಕ ಕನಕಪುರ ಶ್ರೀನಿವಾಸ್ ಮಾಡಿದ್ದರು. ಪುನೀತ್ ರಾಜ್ ಕುಮಾರ್ ಅವರನ್ನು ಬಿಡದೇ ಥರ್ಡ್ ಗ್ರೇಡ್ ಭಾಷೆಯನ್ನು ಉಪಯೋಗಿಸಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕುರಿತು ಕೂಡ ನಾಲಿಗೆ ಹರಿಬಿಟ್ಟಿದ್ದರು. ಇದೀಗ ನಿರ್ದೇಶಕ ಪ್ರೇಮ್ ಅವರು ತಮ್ಮ ವಿರುದ್ಧ ಆರೋಪ ಮಾಡಿರುವ ಕನಕಪುರ ಶ್ರೀನಿವಾಸ್ ವಿರುದ್ಧ ದೂರು ನೀಡಿದ್ದಾರೆ.

D55: ಶ್ರೀಲೀಲಾ, ಸಾಯಿ ಪಲ್ಲವಿ ಮತ್ತು ಧನುಷ್ ಚಿತ್ರಕ್ಕೆ ಮುಹೂರ್ತ

ಶ್ರೀಲೀಲಾ, ಸಾಯಿ ಪಲ್ಲವಿ ಮತ್ತು ಧನುಷ್ ಚಿತ್ರಕ್ಕೆ ಮುಹೂರ್ತ

Sreeleela and Sai Pallavi : ಧನುಷ್ ಅವರ ಮುಂಬರುವ ಸಿನಿಮಾಗಳನ್ನು (Cinema) ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಕಾರಾ ನಂತರ, ಅವರು ಅಮರನ್ ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ಅವರ ಮುಂದಿನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಮಹೂರ್ತ ಪೂಜೆ ಶನಿವಾರ ಚಿತ್ರತಂಡ ಮತ್ತು ಸಿಬ್ಬಂದಿ ಸಮ್ಮುಖದಲ್ಲಿ ನಡೆಯಿತು. ಚಿತ್ರದಲ್ಲಿ ನಟಿಸಲಿರುವ ಇಬ್ಬರು ನಟರಾದ ಶ್ರೀಲೀಲಾ ಮತ್ತು ಸಾಯಿ ಪಲ್ಲವಿ ಜೊತೆಗೆ ಧನುಷ್ ಕಾಣಿಸಿಕೊಂಡರು.

Kannada Movie: ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟ 'ಯಾರೇ ನೀನು ಚೆಲುವೆ' ನಟಿ; ಮೂವಿ ಯಾವುದು?

ಸ್ಯಾಂಡಲ್‌ವುಡ್‌ಗೆ ರೀ ಎಂಟ್ರಿ ಕೊಟ್ಟ 'ಯಾರೇ ನೀನು ಚೆಲುವೆ' ನಟಿ!

Sangita Madhavan : 'ಯಾರೇ ನೀನು ಚೆಲುವೆ' ಸಿನಿಮಾ ಖ್ಯಾತಿ ನಟಿ ಸಂಗೀತ ಮಾಧವನ್ ಮತ್ತೆ ಸ್ಯಾಂಡಲ್‌ವುಡ್‌ ಕಡೆ ಮುಖ ಮಾಡಿದ್ದಾರೆ. ಹೊಸ ತಂಡವೊಂದು ಇವರನ್ನು ಕನ್ನಡ ಚಿತ್ರರಂಗಕ್ಕೆ ಕರೆ ತಂದಿದೆ. ಲಾಂಗ್ ಗ್ಯಾಪ್ ಬಳಿಕ ಸಂಗೀತ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ. ಕಿಚ್ಚ ಸುದೀಪ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಕಿರಣ್ ವಿಶ್ಚನಾಥ್ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ರನ್ನ, ವಿಕ್ಟರಿ ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅವರೀಗ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ.

Kis Kisko Pyaar Karoon 2 on OTT: ಕಪಿಲ್ ಶರ್ಮಾ ಈ ಕಾಮಿಡಿ ಮೂವಿ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

ಕಪಿಲ್ ಶರ್ಮಾ ಈ ಕಾಮಿಡಿ ಮೂವಿ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

Kapil Sharma: ಕಪಿಲ್ ಶರ್ಮಾ ಅವರ ಬಹುನಿರೀಕ್ಷಿತ ಸೀಕ್ವೆಲ್‌, ಕಿಸ್ ಕಿಸ್ಕೋ ಪ್ಯಾರ್ ಕರೂನ್ 2 , ಫೆಬ್ರವರಿ 6 ರಂದು ಸ್ಟ್ರೀಮಿಂಗ್‌ಗೆ ಲಭ್ಯವಾಗಿದೆ., ಚಿತ್ರಮಂದಿರಗಳಲ್ಲಿ ಅಷ್ಟಾಗಿ ಪ್ರದರ್ಶನ ತೋರಲಿಲ್ಲ ಶರ್ಮಾ ಅವರೊಂದಿಗೆ ಮಂಜೋತ್ ಸಿಂಗ್, ಹೀರಾ ವಾರಿನಾ, ತ್ರಿಧಾ ಚೌಧರಿ, ಪರುಲ್ ಗುಲಾಟಿ ಮತ್ತು ಆಯೇಷಾ ಖಾನ್ ನಟಿಸಿರುವ ಈ ಚಿತ್ರವು ಈಗ OTT ನಲ್ಲಿ ಲಭ್ಯವಿದೆ.

Upendra: ಉಪೇಂದ್ರ- ಪ್ರಿಯಾಂಕಾ ದಂಪತಿಯ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವಂಚಕ ಆರೆಸ್ಟ್!

ಉಪೇಂದ್ರ- ಪ್ರಿಯಾಂಕಾ ದಂಪತಿಯ ಹಣ ಲಪಟಾಯಿಸಿದ್ದ ಬಿಹಾರ ಮೂಲದ ವಂಚಕ ಆರೆಸ್ಟ್!

ಹಣ ಕಳೆದುಕೊಂಡ ವಿಷಯ ತಿಳಿಯುತ್ತಿದ್ದಂತೆಯೇ ಪ್ರಿಯಾಂಕಾ ಉಪೇಂದ್ರ ಅವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನಿಖೆ ಆರಂಭಿಸಿದ ಪೊಲೀಸರಿಗೆ ಇದರ ಸುಳಿವು ಬಿಹಾರದ ದಶರಥಪುರದಲ್ಲಿ ಸಿಕ್ಕಿದೆ. ಅಲ್ಲಿನ ವಿಕಾಸ್ ಕುಮಾರ್ ಎಂಬ ಯುವಕನನ್ನು ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.

Ghooskhor Pandat row: ‘ಘೂಸ್‌ಖೋರ್ ಪಂಡತ್’ವಿವಾದ: ಮನೋಜ್ ಬಾಜಪೇಯಿ, ನೀರಜ್ ಪಾಂಡೆ ವಿರುದ್ಧ ಭುಗಿಲೆದ್ದ ಪ್ರತಿಭಟನೆ

‘ಘೂಸ್‌ಖೋರ್ ಪಂಡತ್’ವಿವಾದ: ಭುಗಿಲೆದ್ದ ಪ್ರತಿಭಟನೆ

Manoj Bajpayee: ನೆಟ್‌ಫ್ಲಿಕ್ಸ್‌ ನಿರ್ಮಾಣದ ‘ಘೂಸ್‌ಖೋರ್ ಪಂಡತ್’ ಹಿಂದಿ ಸಿನಿಮಾಗೆ ತೀವ್ರ ವಿರೋಧ ವ್ಯಕ್ತವಾಗಿದೆ. ನೀರಜ್ ಪಾಂಡೆ ಅವರ ಮುಂಬರುವ ಚಿತ್ರ ‘ಘೂಸ್‌ಖೋರ್ ಪಂಡತ್ ಕುರಿತಾದ ವಿವಾದವು ಬೀದಿಗಳಿಗೂ ವ್ಯಾಪಿಸಿದ್ದು, ಚಿತ್ರದ ಆಕ್ಷೇಪಾರ್ಹ ಶೀರ್ಷಿಕೆಯ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆದಿವೆ. ಅನೇಕ ಸ್ಥಳಗಳಲ್ಲಿ, ನಿರ್ಮಾಪಕ ಪಾಂಡೆ ಮತ್ತು ಚಿತ್ರದ ನಾಯಕ ನಟ ಮನೋಜ್ ಬಾಜಪೇಯಿ ಅವರ ಪ್ರತಿಕೃತಿಗಳನ್ನು ಸುಟ್ಟುಹಾಕಲಾಯಿತು.

Rakshasa Web Series: ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ; ಬರ್ತಿದೆ ಕ್ರೈಮ್ ಸೈಕಲಾಜಿಕಲ್ ʻರಾಕ್ಷಸʼ ಸಿರೀಸ್‌

Rakshasa Web Series: ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ

Rakshasa Web Series: ಅಯ್ಯನ ಮನೆ, ಮಾರಿಕಲ್ಲು ವೆಬ್ ಸರಣಿ ಸಕ್ಸಸ್ ಬಳಿಕ zee5 ಕನ್ನಡ ಇದೀಗ ಕನ್ನಡ ಒರಿಜಿನಲ್ ಸಿರೀಸ್ ಘೋಷಿಸಿದೆ. ಈ ಸರಣಿಗೆ ರಾಕ್ಷಸ ಎಂಬ ಟೈಟಲ್ ಇಡಲಾಗಿದೆ. ನಂಬಿಕೆ ಮತ್ತು ಕೊಲೆಯಲ್ಲಿ ಬೇರೂರಿರುವ ಕರಾಳ ಅಪರಾಧ ಕಥೆಯ ಸುತ್ತ ಈ ಸರಣಿ ಸಾಗಲಿದೆ. ಬಿಡುಗಡೆಯಾಗಿರುವ ರಾಕ್ಷಸ ಟ್ರೇಲರ್ ಕುತೂಹಲ ಹೆಚ್ಚಿಸಿದ್ದು, ಈ ಮೂಲಕ zee5 ಮತ್ತೊಂದು ವಿಶೇಷ ಕಥೆಯನ್ನು ಪ್ರೇಕ್ಷಕರಿಗೆ ಉಣಬಡಿಸಲಿದೆ.

BIFFes 2026: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಕ್ತಾಯ; ಹಂಸಲೇಖಗೆ ಜೀವಮಾನ ಸಾಧನೆ ಪ್ರಶಸ್ತಿ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಮುಕ್ತಾಯ

Bangalore International Film Festival : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ 17ನೇ ಆವೃತ್ತಿಗೆ ಶುಕ್ರವಾರ (ಫೆ.6) ರಾತ್ರಿ ನಗರದ ಲುಲು ಮಾಲ್‌ನಲ್ಲಿ ತೆರೆ ಬಿದ್ದಿದೆ. ಜಪಾನ್‌ ದೇಶದದ ʼಲಾಸ್ಟ್‌ ಲ್ಯಾಂಡ್‌ʼ, ಮರಾಠಿಯ ʼಸಬರ್‌ ಬೊಂಡಾʼ ಮತ್ತು ʼವನ್ಯಾʼ ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಖ್ಯಾತ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜೀವಮಾನದ ಶ್ರೇಷ್ಠ ಸಾಧನೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

Sabar Bonda on OTT: ಒಟಿಟಿಗೆ ಬಂದೇ ಬಿಡ್ತು ಪ್ರಶಸ್ತಿ ವಿಜೇತ ʻSabar Bondaʼ ಸಿನಿಮಾ!

ಒಟಿಟಿಗೆ ಬಂದೇ ಬಿಡ್ತು ಪ್ರಶಸ್ತಿ ವಿಜೇತ ʻSabar Bondaʼ ಮೂವಿ

Sabar Bonda: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಶುಕ್ರವಾರ ಅಂತ್ಯಗೊಂಡಿದ್ದು, ಜಪಾನ್‌ ದೇಶದದ ʼಲಾಸ್ಟ್‌ ಲ್ಯಾಂಡ್‌ʼ , ಮರಾಠಿಯ ʼಸಾಬರ್‌ ಬೋಂಡ್‌ʼ (Sabar Bonda) ಮತ್ತು ʼವನ್ಯಾʼ ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ. ಸಾಬರ್‌ ಬೋಂಡ್‌' ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಮರಾಠಿ ಭಾಷೆಯ LGBTQ+ ರೊಮ್ಯಾಂಟಿಕ್‌ ಸಿನಿಮಾ. ಈ ಸಿನಿಮಾ ಒಟಿಟಿಗೆ ಯಾವಾಗ ಬರುತ್ತೆ ಅಂತ ಸಿನಿ ಪ್ರಿಯರು ಕಾದಿದ್ದರು. ಅಂತೂ ರಿವೀಲ್‌ ಆಗಿದೆ.

BIFFES 2026: ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಚಿತ್ರಗಳ ಘೋಷಣೆ; ಕನ್ನಡ ಸಿನಿಮಾಗಳು ಯಾವುದೆಲ್ಲ?

BIFFES 2026: ಸ್ಪರ್ಧಾತ್ಮಕ ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಚಿತ್ರಗಳ ಘೋಷಣೆ

BIFFES 2026 Announcement: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವವು ಶುಕ್ರವಾರ ಅಂತ್ಯಗೊಂಡಿದ್ದು, ಜಪಾನ್‌ ದೇಶದದ ʼಲಾಸ್ಟ್‌ ಲ್ಯಾಂಡ್‌ʼ , ಮರಾಠಿಯ ʼಸಬರ್‌ ಬೊಂಡ್‌ʼ (Sabar Bonda) ಮತ್ತು ʼವನ್ಯಾʼ ಚಿತ್ರಗಳು ಚಿತ್ರೋತ್ಸವದ ಏಷ್ಯಾ, ಭಾರತ ಮತ್ತು ಕನ್ನಡ ವಿಭಾಗಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿವೆ.

Shah Rukh Khan: ತಮ್ಮದೇ ಕಲ್ಟ್ ಕ್ಲಾಸಿಕ್ ಸಿನಿಮಾದ ಸೀಕ್ವೆಲ್​ನಲ್ಲಿ ಶಾರುಖ್?

ತಮ್ಮದೇ ಕಲ್ಟ್ ಕ್ಲಾಸಿಕ್ ಸಿನಿಮಾದ ಸೀಕ್ವೆಲ್​ನಲ್ಲಿ ಶಾರುಖ್?

Main Hoon Na 2: ಚಲನಚಿತ್ರ ನಿರ್ಮಾಪಕಿ, ನೃತ್ಯ ನಿರ್ದೇಶಕಿ ಮತ್ತು ಈಗ ವ್ಲಾಗರ್ ಆಗಿರುವ, ಫರಾ ಖಾನ್ ಪ್ರೇಕ್ಷಕರನ್ನು ಪೂರ್ಣವಾಗಿ ರಂಜಿಸಿದ್ದಾರೆ. ಫರಾಹ್ 'ಮೈ ಹೂ ನಾ' ಚಿತ್ರದ ಮುಂದುವರಿದ ಭಾಗವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಎಂಬ ಊಹಾಪೋಹಗಳು ಬಹಳ ಸಮಯದಿಂದ ಕೇಳಿಬರುತ್ತಿವೆ. ಶಾರುಖ್ ಖಾನ್ ಮತ್ತು ಫರಾ ಖಾನ್ ಹಿಂದಿ ಚಿತ್ರರಂಗದ ಕೆಲವು ಪ್ರತಿಷ್ಠಿತ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. ಮೈ ಹೂ ನಾ (2004), ಓಂ ಶಾಂತಿ ಓಂ (2007) ಮತ್ತು ಹ್ಯಾಪಿ ನ್ಯೂ ಇಯರ್ (2014) ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. 2014 ರ ಸಹಯೋಗದ ನಂತರ, ಇಬ್ಬರೂ ಒಟ್ಟಿಗೆ ಚಿತ್ರಗಳನ್ನು ಮಾಡಿಲ್ಲ.

ಥಿಯೇಟರ್‌ನಲ್ಲಿ ʻಕರಿಕಾಡʼ ಅಬ್ಬರ: ಸಿನಿಮಾ ನೋಡಿದ ಕನ್ನಡ ಪ್ರೇಕ್ಷಕರು ಹೇಳಿದ್ದೇನು? ಹೀರೋ ನಟರಾಜ್‌ ಖುಷಿಯಾದ್ರಾ?

ಕರಿಕಾಡ ಪಬ್ಲಿಕ್ ರಿವ್ಯೂ: ಕ್ಲೈಮ್ಯಾಕ್ಸ್‌ ಬಗ್ಗೆ ಆಡಿಯೆನ್ಸ್‌ ಹೇಳಿದ್ದೇನು?

Karikada Movie Response: ಇಂದು (ಫೆ.6) ತೆರೆಕಂಡ ಕರಿಕಾಡ ಸಿನಿಮಾಗೆ ಪ್ರೇಕ್ಷಕರಿಂದ ಸಕಾರಾತ್ಮಕವಾಗಿ ಕೇಳಿಬರುತ್ತಿದೆ. ಅರೆ ಮಲೆನಾಡು ಭಾಗದ ನೈಜ ಘಟನೆ ಮತ್ತು ಹಂದಿ ಬೇಟೆಯ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ನಟರಾಜ್ ಅವರ ಆಕ್ಷನ್ ಮತ್ತು ಚಿತ್ರದ ಅನಿರೀಕ್ಷಿತ ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ಹೊಸ ಅನುಭವ ನೀಡಿದೆ ಎಂದು ಪ್ರೇಕ್ಷಕರು ಹೇಳಿದ್ದಾರೆ.

ʻಗಿಲ್ಲಿ ನಟನಿಗೆ ಕೇಳಿದಷ್ಟು ಸಂಭಾವನೆ ಕೊಟ್ಟಿದ್ದೀವಿ, ಆದ್ರೂ ಪ್ರಮೋಷನ್‌ ಮಾಡ್ತಿಲ್ಲʼ; ಬಿಗ್‌ ಬಾಸ್‌ ವಿನ್ನರ್‌ ವಿರುದ್ಧ ದಿಢೀರ್‌ ಅಂತ ಫಿಲ್ಮ್‌ ಚೇಂಬರ್‌ಗೆ ದೂರು!

ಗಿಲ್ಲಿ ನಟನ ವಿರುದ್ಧ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ನಿರ್ಮಾಪಕ

Gilli Actor Controversy: 'ಸರ್ಕಾರಿ ಶಾಲೆ H8' ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ, ಈಗ ಚಿತ್ರದ ಪ್ರಚಾರ ಕಾರ್ಯಗಳಿಗೆ ಅಸಹಕಾರ ತೋರುತ್ತಿದ್ದಾರೆಂದು ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಾರೆ. ಕೇಳಿದಷ್ಟು ಸಂಭಾವನೆ ಪಡೆದೂ ಕರೆ ಸ್ವೀಕರಿಸುತ್ತಿಲ್ಲ ಮತ್ತು ಸಿನಿಮಾ ಬಿಡುಗಡೆಯ ದಿನವೂ ಪ್ರಮೋಷನ್‌ಗೆ ಬರುತ್ತಿಲ್ಲ ಎಂದು ನಿರ್ಮಾಪಕರು ಗಂಭೀರ ಆರೋಪ ಮಾಡಿದ್ದಾರೆ.

ʻಡಾ. ರಾಜ್‌ಕುಮಾರ್ ದಂಪತಿ ಇಲ್ಲದಿರುವುದರಿಂದ ಕನ್ನಡ ಚಿತ್ರರಂಗದ ಪರಿಸ್ಥಿತಿ ಹೀಗಾಗಿದೆʼ; ಎಸ್‌ ವಿ ರಾಜೇಂದ್ರ ಸಿಂಗ್‌ ಬಾಬು ಬೇಸರ

ಈ ಕಾಲದ ಹೀರೋಗಳ ಬಗ್ಗೆ ರಾಜೇಂದ್ರ ಸಿಂಗ್‌ ಬಾಬು ಬೇಸರ ಮಾಡಿಕೊಂಡಿದ್ದೇಕೆ?

ಎಸ್‌ ವಿ ರಾಜೇಂದ್ರ ಸಿಂಗ್‌ ಬಾಬು ಅವರು ಬೆಂಗಳೂರು ಚಿತ್ರೋತ್ಸವದ ‘ಸುವರ್ಣ ಸಂಭ್ರಮ’ದಲ್ಲಿ ಮಾತನಾಡುತ್ತಾ, ಡಾ. ರಾಜ್‌ಕುಮಾರ್ ಮತ್ತು ಪಾರ್ವತಮ್ಮ ಅವರ ಅಗಲಿಕೆಯಿಂದ ಕನ್ನಡ ಚಿತ್ರರಂಗ ನಾಯಕನಿಲ್ಲದಂತಾಗಿದೆ ಎಂದು ವಿಷಾದಿಸಿದರು. ಈಗಿನ ನಟರು ಕಾದಂಬರಿ ಆಧಾರಿತ ಚಿತ್ರಗಳಿಗೆ ಆಸಕ್ತಿ ತೋರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Yash: ʻಟಾಕ್ಸಿಕ್‌ʼ ಸಿನಿಮಾದ ತೆಲುಗು ರಾಜ್ಯಗಳ ಹಕ್ಕುಗಳು ಸೋಲ್ಡ್‌ಔಟ್; ದಾಖಲೆ ಮೊತ್ತಕ್ಕೆ ಟಾಲಿವುಡ್‌ ನಿರ್ಮಾಪಕನ ಪಾಲು!

Toxic: ಟಾಲಿವುಡ್‌ನಲ್ಲಿ ಯಶ್ ಹವಾ ಹೇಗಿದೆ ನೋಡ್ರಿ!

Toxic movie Telugu rights: ರಾಕಿಂಗ್ ಸ್ಟಾರ್ ಯಶ್ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಟಾಕ್ಸಿಕ್‌ ಚಿತ್ರದ ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿತರಣಾ ಹಕ್ಕುಗಳನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಅವರ ಶ್ರೀವೆಂಕಟೇಶ್ವರ ಕ್ರಿಯೇಷನ್ಸ್ ಸಂಸ್ಥೆ ದಾಖಲೆಯ ಮೊತ್ತಕ್ಕೆ ಖರೀದಿಸಿದೆ.

JC The University Review: ಕಾರಾಗೃಹದ ಕರಾಬ್‌ ಕಥೆಗಳು ಮತ್ತು ರೌಡಿಸಂ ಜಗತ್ತಿನ ಒಳಸುಳಿಗಳು!

ಜೆಸಿ ದಿ ಯೂನಿವರ್ಸಿಟಿ ವಿಮರ್ಶೆ: ಪ್ರಖ್ಯಾತ್ ಸಿನಿಮಾಕ್ಕೆ ರೇಟಿಂಗ್‌ ಎಷ್ಟು?

JC The University Review And Rating: ಸಣ್ಣ ಮುಂಗೋಪದಿಂದಾಗಿ ಭೂಗತ ಲೋಕಕ್ಕೆ ಅನಿವಾರ್ಯವಾಗಿ ಎಂಟ್ರಿ ಕೊಡುವ ಹುಡುಗನೊಬ್ಬನ ಕಥೆಯೇ 'ಜೆಸಿ'. ಜೈಲಿನೊಳಗಿನ ನೈಜ ಪರಿಸ್ಥಿತಿ, ಕೈದಿಗಳ ಮನಸ್ಥಿತಿ ಮತ್ತು ಅಲ್ಲಿ ನಡೆಯುವ ಅಕ್ರಮ ದಂಧೆಗಳನ್ನು ನಿರ್ದೇಶಕ ಚೇತನ್ ಜಯರಾಮ್ ಈ ಸಿನಿಮಾದಲ್ಲಿ ವಿಭಿನ್ನವಾಗಿ ತೋರಿಸಿದ್ದಾರೆ.

Rakkasapuradol Review: ಪ್ರೇಕ್ಷಕರನ್ನು ಆಪ್ತಗೊಳಿಸುವ ಬಿಗಿಯಾದ ನಿರೂಪಣೆ; ರಾಜ್‌ ಬಿ ಶೆಟ್ಟಿ ಸಿನಿಮಾದ ಕ್ಲೈಮ್ಯಾಕ್ಸ್‌ನಲ್ಲಿ ಟ್ವಿಸ್ಟ್‌ಗಳ ಮೆರವಣಿಗೆ!

ರಕ್ಕಸಪುರದೋಳ್‌ ವಿಮರ್ಶೆ: ರಾಜ್‌ ಬಿ ಶೆಟ್ಟಿಯ ಸಿನಿಮಾದ ರೇಟಿಂಗ್‌ ಎಷ್ಟು?

Rakkasapuradol Review And Rating: ಯಾವುದೇ ಅಪರಾಧ ನಡೆಯದ ರಕ್ಕಸಪುರಕ್ಕೆ ವರ್ಗವಾಗಿ ಬರುವ ಕುಡುಕ ಪೊಲೀಸ್ ಅಧಿಕಾರಿ ಶಿವ (ರಾಜ್ ಬಿ ಶೆಟ್ಟಿ), ಅಲ್ಲಿ ಹೆಣ್ಣುಮಕ್ಕಳ ಸರಣಿ ಹತ್ಯೆ ಶುರುವಾದಾಗ ಹೇಗೆ ಎಚ್ಚೆತ್ತುಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಥೆ.

Drug Case:  ಡ್ರಗ್ಸ್ ಕೇಸ್‌; ನಟಿ ಅಂಜು ಕೃಷ್ಣ ಸೇರಿ ಎಂಟು ಮಂದಿ ಬಂಧನ

ಡ್ರಗ್ಸ್ ಕೇಸ್‌; ನಟಿ ಅಂಜು ಕೃಷ್ಣ ಸೇರಿ ಎಂಟು ಮಂದಿ ಬಂಧನ

Anju Krishna: ತಮಿಳು ಚಿತ್ರರಂಗದಲ್ಲಿ ಡ್ರಗ್ಸ್ ಪ್ರಕರಣ ಕೇಳಿ ಬಂದಿದ್ದು, ಒಬ್ಬ ನಟಿ ಮತ್ತು ಸಹಾಯಕ ನಿರ್ದೇಶಕಿ ಸೇರಿದಂತೆ ಒಟ್ಟು ಎಂಟು ಮಂದಿಯನ್ನು ಡ್ರಗ್ಸ್ ಸಮೇತ ಪೊಲೀಸರು ಬಂಧಿಸಿದ್ದಾರೆ. ನಟಿ ಅಂಜು ಕೃಷ್ಣ ಮತ್ತು ಸಹಾಯಕ ನಿರ್ದೇಶಕಿ ವಿನ್ಸಿ ನಿವೇತಾ ಸೇರಿದ್ದಾರೆ. ವರದಿಗಳ ಪ್ರಕಾರ, ಪೊಲೀಸರು ಗುಂಪಿನಲ್ಲಿ ಮೆಥಾಂಫೆಟಮೈನ್ ಮತ್ತು ಗಾಂಜಾ ಪತ್ತೆಯಾಗಿದೆ ಎಂದು ವರದಿ ಮಾಡಿದ್ದಾರೆ.

South OTT: ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸೌತ್‌ ಸಿನಿಮಾಗಳಿವು!

ಈ ವಾರ ಒಟಿಟಿಯಲ್ಲಿ ನೋಡಬಹುದಾದ ಸೌತ್‌ ಸಿನಿಮಾಗಳಿವು!

South OTT And Theatrical Releases : ದಿ ರಾಜಾ ಸಾಬ್, ಪರಾಶಕ್ತಿ ಮತ್ತು ನಾರಿ ನಾರಿ ನಡುಮಾ ಮುರೈಯಾ ಸೇರಿದಂತೆ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂನಲ್ಲಿ ದಕ್ಷಿಣದ ವೈವಿಧ್ಯಮಯ ಸಿನಿಮಾಗಳು ಒಟಿಟಿಗೆ ಬಂದಿವೆ. . ಜಯರಾಮ್ ಅವರ ಆಶಾಕಲ್ ಆಯಿರಾಮ್ ಮತ್ತು ಸಾರಾ ಅರ್ಜುನ್ ಅವರ ಯೂಫೋರಿಯಾ ಈ ಶುಕ್ರವಾರದ ಪ್ರಮುಖ ಥಿಯೇಟರ್ (Theatre) ಬಿಡುಗಡೆಗಳಾಗಿವೆ.

Loading...