ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Yash: ʻಟಾಕ್ಸಿಕ್‌ʼ ಚಿತ್ರದ ಓವರ್‌ಸೀಸ್‌ ಹಕ್ಕುಗಳು ದುಬಾರಿ ಮೊತ್ತಕ್ಕೆ ಸೇಲ್;‌ ಖರೀದಿ ಮಾಡಿದವರು ಯಾರು?

Toxic ಚಿತ್ರದ ಐತಿಹಾಸಿಕ ವಿದೇಶಿ ಡೀಲ್; ದಾಖಲೆ ಮೊತ್ತಕ್ಕೆ ಹಕ್ಕುಗಳು ಸೇಲ್!

Toxic Movie Overseas Rights: ಟಾಕ್ಸಿಕ್‌ ಸಿನಿಮಾದ ವಿತರಣಾ ವ್ಯವಹಾರವು ಈಗ ಜಾಗತಿಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಫಾರ್ಸ್ ಫಿಲ್ಮ್ (Phars Film) ಸಂಸ್ಥೆಯು 'ಟಾಕ್ಸಿಕ್' ಚಿತ್ರದ ವಿದೇಶಿ ಹಕ್ಕುಗಳನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಮಾರ್ಚ್ 19 ರಂದು ಈ ಸಿನಿಮಾ ತೆರೆಕಾಣುತ್ತಿದೆ.

ಮತ್ತೊಂದು ಥ್ರಿಲ್ಲಿಂಗ್‌ ಕೇಸ್‌ ಜೊತೆ ಬಂದ ನಟ ವಿಜಯ್ ರಾಘವೇಂದ್ರ; ಕುತೂಹಲ ಕೆರಳಿಸಿದ ʻಸೀತಾರಾಮ್‌ʼ!

Second Case of Seetharam Movie: ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ

Second Case of Sitharam Movie: ವಿಜಯ್ ರಾಘವೇಂದ್ರ ಮತ್ತೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. 'ಸೀತಾರಾಮ್ ಬಿನೋಯ್: ಕೇಸ್ ನಂಬರ್ 18' ಚಿತ್ರದ ಮುಂದುವರಿದ ಭಾಗವಾಗಿರುವ ʻಸೆಕೆಂಡ್ ಕೇಸ್ ಆಫ್‌ ಸೀತಾರಾಮ್ʼ ಸಸ್ಪೆನ್ಸ್ ಥ್ರಿಲ್ಲರ್ ಅನ್ನು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶಿಸಿದ್ದಾರೆ. ಚಿತ್ರದ ಪವರ್‌ಫುಲ್ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಕಲರ್ಸ್‌ ಕನ್ನಡದಲ್ಲಿ ದೊಡ್ಮನೆ ಹಬ್ಬದ ಮೆರುಗು; ಭರ್ಜರಿ ಮನರಂಜನೆ ನೀಡಲು ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳು ರೆಡಿ

ಕಲರ್ಸ್‌ ದೊಡ್ಮನೆ ಹಬ್ಬ; ʻಬಿಗ್ ಬಾಸ್ʼ ಸ್ಪರ್ಧಿಗಳಿಂದ ಭರ್ಜರಿ ಮನರಂಜನೆ!

Colors Dodmane Habba: ಕಲರ್ಸ್‌ ಕನ್ನಡ ವಾಹಿನಿಯು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಸ್ಪರ್ಧಿಗಳನ್ನೆಲ್ಲಾ ಒಟ್ಟಾಗಿ ಸೇರಿಸಿ ಕಲರ್ಸ್‌ ದೊಡ್ಮನೆ ಹಬ್ಬ ಎಂಬ ದೃಶ್ಯ ವೈಭವದ ಅದ್ದೂರಿ ಸಮಾರಂಭವನ್ನು ವೀಕ್ಷಕರ ಮುಂದಿಡಲು ರೆಡಿಯಾಗಿದೆ. ಫೆಬ್ರವರಿ 14ರಂದು ಈ ಶೋ ಪ್ರಸಾರವಾಗಲಿದೆ.

‌Bigg Boss 12: ʻನನಗೂ ಪರಚಿದ ಕಲೆಗಳಿವೆ, ಆದ್ರೆ ಸಿಂಪತಿ ತಗೋಳೋ ಹುಚ್ಚು ನನಗಿಲ್ಲʼ; ಅಶ್ವಿನಿ ಗೌಡ ವಿರುದ್ಧ ಕಿಡಿಕಾರಿದ್ರಾ ಚೈತ್ರಾ ಕುಂದಾಪುರ?

ಬಿಗ್ ಬಾಸ್‌ ಮುಗಿದರೂ ನಿಲ್ಲದ ಜಗಳ; ಅಶ್ವಿನಿ ಮೇಲೆ ಚೈತ್ರಾ ಕುಂದಾಪುರ ಕಿಡಿ!

ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಹೋಗಿದ್ದ ಚೈತ್ರಾ ಕುಂದಾಪುರ ಮತ್ತು ಸ್ಪರ್ಧಿ ಅಶ್ವಿನಿ ಗೌಡ ನಡುವಿನ ಜಗಳ ಮುಂದುವರಿದಿದೆ. ಟಾಸ್ಕ್ ವೇಳೆ ಅಶ್ವಿನಿ ತಮಗೆ ಗಾಯಗೊಳಿಸಿದ್ದನ್ನು ಹೇಳಿರುವ ಚೈತ್ರಾ, "ಸಿಂಪತಿ ಗಿಟ್ಟಿಸಿಕೊಳ್ಳಲು ನನ್ನ ಬಳಿ ಪಿಆರ್ ಟೀಮ್ ಇಲ್ಲ" ಎಂದು ಅಶ್ವಿನಿ ಗೌಡ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ʻಸೂಪರ್‌ ಹಿಟ್‌ʼ ಸಿನಿಮಾಗೆ ಅದೃಷ್ಟ‌ ತಂದುಕೊಟ್ಟ ʻಬಿಗ್‌ ಬಾಸ್‌ʼ ಗಿಲ್ಲಿ ನಟ; ಬಾಯ್ತುಂಬಾ ಹೊಗಳಿದ ಡೈರೆಕ್ಟರ್‌!

'ಸೂಪರ್ ಹಿಟ್' ಚಿತ್ರಕ್ಕೆ ಬಂಪರ್ ಬ್ಯುಸಿನೆಸ್ ತಂದುಕೊಟ್ಟ ಗಿಲ್ಲಿ ನಟ!

Super Hit Movie News: ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾದ ಗಿಲ್ಲಿ ನಟ ಅಭಿನಯದ 'ಸೂಪರ್ ಹಿಟ್' ಚಿತ್ರಕ್ಕೆ ಭರ್ಜರಿ ಹೈಪ್ ಸಿಕ್ಕಿದೆ. ವಿಜಯಾನಂದ್ ನಿರ್ದೇಶನದ ಈ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಫೆಬ್ರವರಿ 27ಕ್ಕೆ ತೆರೆಗೆ ಬರಲಿದ್ದು, ಗಿಲ್ಲಿಯ ಬಿಗ್ ಬಾಸ್ ಗೆಲುವಿನ ಪ್ರಭಾವದಿಂದ ಈ ಚಿತ್ರದ ಬ್ಯುಸಿನೆಸ್ ಉತ್ತಮವಾಗಿ ನಡೆಯುತ್ತಿದೆ ನಿರ್ದೇಶಕರು ಸಂತಸ ಹಂಚಿಕೊಂಡಿದ್ದಾರೆ.

Kannada Movie: ಉತ್ತರ ಕರ್ನಾಟಕದ ಸೊಗಡಿನ ಕಥೆ; ʻಹುಬ್ಬಳ್ಳಿ ಹಂಟರ್ಸ್ʼ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ʻಹುಬ್ಬಳ್ಳಿ ಹಂಟರ್ಸ್ʼ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

Hubballi Hunters: ಕನ್ನಡದ ಸೂಪರ್ ಹಿಟ್ ಸಿನಿಮಾ ಬೆಲ್ ಬಾಟಮ್ ನಿರ್ಮಾಪಕ ಸಂತೋಷ್ ಕುಮಾರ್ ಕೆಸಿ ಹೊಸ ಸಿನಿಮಾ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ತಮ್ಮದೇ ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್‌ನಡಿ‌ ಹುಬ್ಬಳ್ಳಿ ಹಂಟರ್ಸ್ ಎಂಬ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಎಡಗೈ ಅಪಘಾತಕ್ಕೆ ಕಾರಣ ಚಿತ್ರ ನಿರ್ದೇಶಿಸಿದ್ದ ಸಮರ್ಥ್ ಬಿ‌ ಕಡ್ಕೋಲ್ ಹುಬ್ಬಳ್ಳಿ ಹಂಟರ್ಸ್ ನಿರ್ದೇಶಕರು. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಪ್ರಮೋದ್ ಶೆಟ್ಟಿ ಹುಬ್ಬಳ್ಳಿ ಹಂಟರ್ಸ್ ಸಿನಿಮಾದ ನಾಯಕ. ಮಹಾನಟಿ‌ ಖ್ಯಾತಿಯ ಧನ್ಯಶ್ರೀ ಸುಜಿತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

Ram Charan: ನಟ ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು; ಸಂಭ್ರಮಿಸಿದ್ದು ಹೀಗೆ

ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು; ಸಂಭ್ರಮಿಸಿದ್ದು ಹೀಗೆ!

Ram Charan: ಜನವರಿ 31 ರಂದು ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಅವಳಿ ಮಕ್ಕಳನ್ನು ಸ್ವಾಗತಿಸಿದರು. ರಾಮ್ ಮತ್ತು ಉಪಾಸನಾಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಆಗಿದೆ. ರಾಮ್ ಚರಣ್ ಮತ್ತು ಉಪಾಸನ ಅವರ ಈ ಸಂತೋಷದ ಕ್ಷಣಗಳ ವಿಡಿಯೋ ವೈರಲ್‌ ಆಗಿದೆ. ಉಪಾಸನಾ ಅಪೊಲೊದಲ್ಲಿಯೇ (apollo) ಡೆಲವರಿ ಮಾಡಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರ ಮೊದಲ ಮಗು, ಮಗಳು ಕ್ಲಿನ್ ಕಾರಾ ಕೊನಿಡೇಲಾ ಜನಿಸಿದ ಆಸ್ಪತ್ರೆಯಲ್ಲಿನ ಅದೇ ಹೆರಿಗೆ ಕೊಠಡಿಯನ್ನು ಸಹ ಆರಿಸಿಕೊಂಡರು.

Allu Arjun: ಖ್ಯಾತ ಬಾಲಿವುಡ್​ನ  ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಮೂವಿ?

ಖ್ಯಾತ ಬಾಲಿವುಡ್​ನ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಮೂವಿ?

Sanjay Leela Bhansali: ಅಲ್ಲು ಅರ್ಜುನ್ ಪ್ರಸ್ತುತ ಅಟ್ಲೀ ನಿರ್ದೇಶನದ ತಾತ್ಕಾಲಿಕವಾಗಿ AA22xA6 ಎಂಬ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ, ಯಾವುದೇ ಅಧಿಕೃತವಾಗಿ ಅಪ್‌ಡೇಟ್‌ ಮಾಡದಿದ್ದರೂ, ನಟ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಸಿನಿಮಾ ಮಾಡಬಹುದು ಎಂಬ ಊಹಾಪೋಹಗಳಿದ್ದವು. ಆದಾಗ್ಯೂ, ಈಗ ಈ ಯೋಜನೆ ವಿಳಂಬವಾಗಿದೆ ಮತ್ತು ನಟ ಅದನ್ನು ಕೈಬಿಟ್ಟಿಲ್ಲ ಎಂದು ತೋರುತ್ತದೆ.

Amitabh Bachchan: ʻಅತ್ತೆ-ಮಾವ ನನ್ನ ಹೆಂಡತಿಯನ್ನು ಕಳುಹಿಸುತ್ತಿಲ್ಲʼ;  ಅಮಿತಾಭ್ ಕೈಯಲ್ಲಿ ಪೋಸ್ಟರ್‌!

ಅಭಿಮಾನಿಗಳ ಮುಂದೆ ಪೋಸ್ಟರ್‌ ಹಿಡಿದು ನಿಂತ ಅಮಿತಾಭ್‌!

Amitabh Bachchan: ಮುಂಬೈನಲ್ಲಿ ಭಾನುವಾರ ಅಭಿಮಾನಿಗಳೊಂದಿಗಿನ ಭೇಟಿಯಲ್ಲಿ ನಟ ಅಮಿತಾಬ್ ಬಚ್ಚನ್ ಪೋಸ್ಟರ್ ಹಿಡಿದು ಕುಳಿತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೋಸ್ಟರ್‌ನಲ್ಲಿ ಬರೆಯಲಾದ ಸಂದೇಶವು ಅನೇಕ ಜನರನ್ನು ಅಚ್ಚರಿಗೊಳಿಸುತ್ತಿದೆ. ವಾಸ್ತವವಾಗಿ, ಅಮಿತಾಬ್ ಬಚ್ಚನ್ ಪ್ರತಿ ಭಾನುವಾರ ತಮ್ಮ ಮನೆಯ ಹೊರಗೆ ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ. ಭಾನುವಾರ ಅಭಿಮಾನಿಗಳೊಂದಿಗಿನ ಅವರ ಭೇಟಿಯ ಸಮಯದಲ್ಲಿ ಪೋಸ್ಟರ್‌ ಗಮನ ಸೆಳೆದಿದೆ.

Vijay Sethupathi : ʻರಾಮಾಯಣʼ ಸಿನಿಮಾದಲ್ಲಿ ವಿಜಯ್ ಸೇತುಪತಿ? ವದಂತಿಗಳ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟ

ʻರಾಮಾಯಣʼ ಸಿನಿಮಾದಲ್ಲಿ ವಿಜಯ್ ಸೇತುಪತಿ?

Ramayana: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ' ಘೋಷಣೆಯಾದ ಕ್ಷಣದಿಂದಲೇ ಸಾಕಷ್ಟು ಸಂಚಲನ ಸೃಷ್ಟಿಸಿತು. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟಿಸಿರುವ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ, ಮೂವೀಸ್ ಸಿಂಗಾಪುರದ ವರದಿಯ ಪ್ರಕಾರ, ರಾಮಾಯಣದ ನಿರ್ಮಾಪಕರು ಚಿತ್ರದಲ್ಲಿ ರಾವಣನ ಕಿರಿಯ ಸಹೋದರ ವಿಭೀಷಣ ಪಾತ್ರದ ವಿಚಾರವಾಗಿ ವಿಜಯ್ ಸೇತುಪತಿ ಅವರೊಂದಿಗೆ ಚರ್ಚೆಯಲ್ಲಿದ್ದಾರೆ.

ʻಬಿಗ್‌ ಬಾಸ್‌ʼನಿಂದ ಬಂದ ದುಡ್ಡಲ್ಲಿ ಗಿಲ್ಲಿ ನಟ 25 ಎಕರೆ ಜಮೀನು ತಗೊಂಡ್ರಾ? ವೈರಲ್‌ ಸುದ್ದಿಗೆ ತಮ್ಮದೇ ಸ್ಟೈಲ್‌ನಲ್ಲಿ ಡಿಚ್ಚಿ ಕೊಟ್ಟ ಪಳಾರ್!‌

ಗಿಲ್ಲಿ ನಟ 25 ಎಕರೆ ಜಮೀನು ತಗೊಂಡ್ರಾ? ವೈರಲ್ ಸುದ್ದಿ ಬಗ್ಗೆ ಹೇಳಿದ್ದೇನು?

25 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂಬ ವೈರಲ್ ಸುದ್ದಿಗೆ ಸ್ವತಃ ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಬ್ರೇಕ್ ಹಾಕಿದ್ದಾರೆ. 25 ಎಕರೆ ಜಮೀನು ಖರೀದಿಸಿ ಫಾರ್ಮ್‌ಹೌಸ್ ಮಾಡಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಅವರು, "ನಾನು ಜಮೀನು ತಗೊಂಡಿರುವ ವಿಚಾರ ನನಗೇ ಗೊತ್ತಿಲ್ಲ" ಎಂದು ತಮಾಷೆ ಮಾಡಿದ್ದಾರೆ.

Prakash Raj: Spirit ಚಿತ್ರದಿಂದ ಪ್ರಕಾಶ್​ ರಾಜ್​  ಔಟ್ ಆಗಿದ್ದು ಹೌದಾ? ನಿಜಕ್ಕೂ ಆಗಿದ್ದೇನು?

Spirit ಚಿತ್ರದಿಂದ ಪ್ರಕಾಶ್​ ರಾಜ್​ ಔಟ್ ಆಗಿದ್ದು ಹೌದಾ?

spirit Movie: ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ನಟಿಸಿರುವ ಈ ಚಿತ್ರವು ಮಾರ್ಚ್ 7, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ಕೆಲವು ದಿನಗಳಿಂದ, ನಟ ಪ್ರಕಾಶ್ ರಾಜ್ ಅವರು ಚಿತ್ರದ ತಂಡದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆಯಿಂದ ಹೊರನಡೆದಿದ್ದಾರೆ ಎಂದು ವರದಿಗಳಿವೆ.

Gilli Nata: ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

Gilli Nata: ಬಿಗ್​​ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಸ್ಟಾರ್ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿರುವ ದರ್ಶನ್ ಭೇಟಿಗೆ ಹೋಗ್ತೀರಾ ಎನ್ನುವ ಪ್ರಶ್ನೆ ಕೂಡ ಎದುರಾಗಿತ್ತು. ಈ ಬಗ್ಗೆ ಗಿಲ್ಲಿ ಉತ್ತರ ನೀಡಿದ್ದು ಹೀಗೆ.

ಬಾಕ್ಸ್‌ ಆಫೀಸ್‌ ಮಾತ್ರವಲ್ಲ, ಕಿರುತೆರೆಯಲ್ಲೂ ʻಕಾಂತಾರ: ಚಾಪ್ಟರ್‌ 1ʼ ಅಬ್ಬರ; ಟಿಆರ್‌ಪಿಯಲ್ಲಿ ಹೊಸ ದಾಖಲೆ!

ಬಾಕ್ಸ್‌ ಆಫೀಸ್‌ ಆಯ್ತು, ಈಗ ಕಿರುತೆರೆಯಲ್ಲೂ Kantara: Chapter 1 ದರ್ಬಾರ್

Kantara-Chapter 1 TRP Record: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ʻಕಾಂತಾರ: ಚಾಪ್ಟರ್‌ 1ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂ. ಗಳಿಸಿದ ಬೆನ್ನಲ್ಲೇ, ಜೀ ಕನ್ನಡದಲ್ಲಿ ಪ್ರಸಾರವಾದ ತನ್ನ 'ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್' ಮೂಲಕ ಕಿರುತೆರೆಯಲ್ಲೂ ದಾಖಲೆ ಬರೆದಿದೆ.

Gilli Nata: ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ! ಸ್ಪಷ್ಟನೆ ಕೊಟ್ಟ ನಟ

ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ!

Gilli Nata Bigg Boss : ಬಿಗ್​​ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ (Gilli Nata) ಕರ್ನಾಟಕದಲ್ಲಿ ಸದ್ಯ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಗಿಲ್ಲಿ ನಟನಿಗೆ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಸರ್ಕಾರಿ ಶಾಲೆ ಎಚ್​​8 ಹೆಸರಿನ ಸಿನಿಮಾನಲ್ಲಿ ಗಿಲ್ಲಿ ನಟ ನಟಿಸಿದ್ದು, ಬಿಡುಗಡೆ ಕೂಡ ಕಂಡಿತ್ತು.

ʻಹೃದಯಂʼ ಚಿತ್ರಕ್ಕಾಗಿ ʻಮಹಾನಟಿʼ ಖ್ಯಾತಿಯ ಆರಾಧನಾ ಭಟ್‌ಗೆ ಜೋಡಿಯಾದ ಪೃಥ್ವಿ ಶಾಮನೂರು

ʻಹೃದಯಂʼ ಚಿತ್ರಕ್ಕೆ ಮುಹೂರ್ತ; ಪೃಥ್ವಿ ಶಾಮನೂರುಗೆ 'ಮಹಾನಟಿ' ಆರಾಧನಾ ಜೋಡಿ

Hrudayam Movie News: 'ಪದವಿಪೂರ್ವ' ಖ್ಯಾತಿಯ ಪೃಥ್ವಿ ಶಾಮನೂರು ಮತ್ತು 'ಮಹಾನಟಿ' ಶೋ ಮೂಲಕ ಮನೆಮಾತಾದ ಆರಾಧನಾ ಭಟ್ ಹೃದಯಂ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ರಜತ್ ಸೂರ್ಯವಂಶಿ ನಿರ್ದೇಶನದ ಈ ಸಿನಿಮಾ 2000-2006ರ ಕಾಲಘಟ್ಟದಲ್ಲಿ ನಡೆಯುವ ನೈಜ ಪ್ರೇಮಕಥೆಯನ್ನು ಹೊಂದಿದ್ದು, ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿಕೊಂಡಿದೆ.

40ನೇ ವಯಸ್ಸಿನಲ್ಲಿ ಮತ್ತೆ ತಾಯಿಯಾಗುತ್ತಿದ್ದಾರೆ ಸೋನಮ್‌ ಕಪೂರ್; ಅದ್ದೂರಿಯಾಗಿ ನಡೆದ ಸೀಮಂತ ಶಾಸ್ತ್ರ

40ನೇ ವಯಸ್ಸಿನಲ್ಲಿ ಸೋನಮ್‌ ಗರ್ಭಿಣಿ; ಅದ್ದೂರಿಯಾಗಿ ನಡೆದ ಸೀಮಂತ ಶಾಸ್ತ್ರ!

ನಟಿ ಸೋನಮ್‌ ಕಪೂರ್‌ ಅವರು 40ನೇ ವಯಸ್ಸಿನಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆ ಹಿನ್ನಲೆಯಲ್ಲಿ ಫೆಬ್ರವರಿ 8ರಂದು ಮುಂಬೈನಲ್ಲಿ ಅದ್ದೂರಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಪತಿ ಆನಂದ್ ಅಹುಜಾ ಮತ್ತು ಕಪೂರ್ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭಕ್ಕೆ ಕರೀನಾ ಕಪೂರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

ʻಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯʼ; ರಿಷಬ್‌ ಶೆಟ್ಟಿ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ

Photos: ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ರಿಷಬ್ ಶೆಟ್ಟಿ ದಂಪತಿ

ಕಾಂತಾರ ಸ್ಟಾರ್‌ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಾಂಪತ್ಯಕ್ಕೆ ಈಗ 9 ವರ್ಷ ತುಂಬಿದೆ. ಹೌದು, 2017ರ ಫೆಬ್ರವರಿ 9 ರಂದು ನಡೆಯಿತು. ಇಂದು ಈ ದಂಪತಿಗೆ ಮದುವೆ ವಾರ್ಷಿಕೋತ್ಸವದ ಸಂಭ್ರಮ. ಆ ಹಿನ್ನೆಲೆಯಲ್ಲಿ ರಿಷಬ್‌ ಶೆಟ್ಟಿ ಫೋಟೋಗಳನ್ನು ಹಂಚಿಕೊಂಡು, ಮಡದಿಗೆ ಪ್ರೀತಿಯಿಂದ ವಿಶ್‌ ಮಾಡಿದ್ದಾರೆ. "ಬಂಧ ಬೆಸೆದು, ಚಂದ ಹೊಸೆದು ಒಂದಾದ ಒಲವಿನ ದಾಂಪತ್ಯಕ್ಕಿಂದು ಒಂಭತ್ತು ತುಂಬಿದೆ. ಹಿಂದೆ ನೋಡಿದರೆ ಜೊತೆ ಕಳೆದ ಪ್ರತಿ ಗಳಿಗೆಯೂ ಸಿಹಿ ನೆನಪಿನ ನಿಕ್ಷೇಪಗಳಾಗಿವೆ. ಅಲ್ಲಿ ನಲಿವಿದೆ, ನೋವಿದೆ, ನಗುವಿದೆ, ಸರಸವಿರಸಗಳಿವೆ.. ಎಲ್ಲವನ್ನು ತೂಗುವ ಸಮರಸವಿದೆ.. ಎಲ್ಲಕ್ಕೂ ಮಿಗಿಲಾಗಿ ಕೊನೆಯಾಗದ ಒಲವಿದೆ.. ಅ ಒಲವು ಬೀರಿದ ಬೆಳಕು, ತಂದ ನೆಮ್ಮದಿ, ತುಂಬಿದ ಆತ್ಮವಿಶ್ವಾಸಗಳೇ ಇಂದು ನನ್ನನ್ನು ನಾನಾಗಿಸಿದೆ" ಎಂದು ಹೇಳಿದ್ದಾರೆ. ಇಲ್ಲಿವೆ ನೋಡಿ ಫೋಟೋಗಳು

ಗೋವಾ ರಸ್ತೆಯಲ್ಲಿ ಕಿಚ್ಚನ ಪಡೆ ಅಬ್ಬರ; ರೇಸಿಂಗ್ ಕಣದಲ್ಲಿ ಸುದೀಪ್ ʻಕಿಚ್ಚಾಸ್ ಕಿಂಗ್ಸ್ ಬೆಂಗಳೂರುʼ ಟೀಮ್

ಸ್ಟ್ರೀಟ್ ರೇಸಿಂಗ್ ಸವಾಲಿಗೆ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ಸಜ್ಜು!

Indian Racing Festival (IRF) ಅಂಗವಾಗಿ ಫೆಬ್ರವರಿ 14 ಮತ್ತು 15ರಂದು ಗೋವಾದ ರಸ್ತೆಗಳಲ್ಲಿ ಅದ್ಧೂರಿ ಸ್ಟ್ರೀಟ್ ರೇಸಿಂಗ್ ನಡೆಯಲಿದೆ. ಈ ಬಗ್ಗೆ ಮಾತನಾಡಿರುವ ‘ಕಿಚ್ಚಾಸ್ ಕಿಂಗ್ಸ್ ಬೆಂಗಳೂರು’ ತಂಡದ ಮಾಲೀಕ ಕಿಚ್ಚ ಸುದೀಪ್, ಸ್ಟ್ರೀಟ್ ರೇಸಿಂಗ್ ಕೇವಲ ವೇಗವಲ್ಲ, ಅದು ಧೈರ್ಯ ಮತ್ತು ಸಮಯಪ್ರಜ್ಞೆಯ ಅಗ್ನಿಪರೀಕ್ಷೆ ಎಂದು ಬಣ್ಣಿಸಿದ್ದಾರೆ.

Karnataka Bulldozers: ʻನನ್ನ ತಂಡದ ಬಗ್ಗೆ ಹೆಮ್ಮೆ ಇದೆ, ಲವ್‌ ಯೂ ಬಾಯ್ಸ್..‌ʼ; ಸಿಸಿಎಲ್‌ ಗೆಲುವಿನ ಖುಷಿ ಹಂಚಿಕೊಂಡ ‌ʻಕಿಚ್ಚʼ ಸುದೀಪ್

ಸಿಸಿಎಲ್ ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್; ಸಂಭ್ರಮಿಸಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ್‌ ಅವರು ಗೆಲುವಿನ ಸಂಭ್ರಮವನ್ನು ತಮ್ಮ ತಂಡ ಮತ್ತು ಕುಟುಂಬದೊಂದಿಗೆ ಹಂಚಿಕೊಂಡಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡವು ಸಿಸಿಎಲ್ ಕಪ್ ಮುಡಿಗೇರಿಸಿಕೊಂಡಿದ್ದು, ಆಡಿದ ಐದೂ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಉಳಿದಿದೆ. ಈ ಐತಿಹಾಸಿಕ ಗೆಲುವಿಗೆ ಕಾರಣರಾದ ಆಟಗಾರರು, ತಂಡದ ಬೆನ್ನೆಲುಬಾಗಿ ನಿಂತ ಪತ್ನಿ ಪ್ರಿಯಾ ಅವರಿಗೆ ಸುದೀಪ್ ಭಾವುಕವಾಗಿ ಧನ್ಯವಾದ ಅರ್ಪಿಸಿದ್ದಾರೆ.

Spirit Movie: ದೀಪಿಕಾ ಬೆನ್ನಲ್ಲೇ ʻಸ್ಪಿರಿಟ್‌ʼನಿಂದ ಪ್ರಕಾಶ್‌ ರಾಜ್‌ ಔಟ್‌? ಕಾರಣ ಇದು

ದೀಪಿಕಾ ಬೆನ್ನಲ್ಲೇ ʻಸ್ಪಿರಿಟ್‌ʼನಿಂದ ಪ್ರಕಾಶ್‌ ರಾಜ್‌ ಔಟ್‌?

Prakash Raj: ದೀಪಿಕಾ ಪಡುಕೋಣೆ ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್‌ನಿಂದ ನಿರ್ಗಮಿಸುವ ಬಗ್ಗೆ ಎಲ್ಲಾ ವದಂತಿಗಳ ನಂತರ , ಈಗ ನಟ ಪ್ರಕಾಶ್ ರಾಜ್ ಕೂಡ ಚಿತ್ರ ತಂಡದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಹೊರನಡೆದಿದ್ದಾರೆ ಎಂದು ವರದಿಯಾಗಿದೆ. ಚಿತ್ರದಲ್ಲಿ ಪ್ರಕಾಶ್ ರಾಜ್ ಅವರನ್ನು ಪ್ರಮುಖ ಪಾತ್ರದಲ್ಲಿ ತೋರಿಸಲಾಗಿತ್ತು, ಮತ್ತು ಬಿಡುಗಡೆ ವೀಡಿಯೊದಲ್ಲಿ ಅವರ ಧ್ವನಿ ಈಗಾಗಲೇ ಅವರ ಪಾತ್ರದ ಸುತ್ತ ಗಮನಾರ್ಹ ಸಂಚಲನ ಮೂಡಿಸಿತ್ತು.

Naveen Polishetty: ನವೀನ್ ಪೊಲಿಶೆಟ್ಟಿ ಒಂದೊಳ್ಳೆ ಹಾಸ್ಯ ಮೂವಿ; ಸ್ಟ್ರೀಮಿಂಗ್‌ ಎಲ್ಲಿ?

ನವೀನ್ ಪೊಲಿಶೆಟ್ಟಿ ಒಂದೊಳ್ಳೆ ಹಾಸ್ಯ ಮೂವಿ; ಸ್ಟ್ರೀಮಿಂಗ್‌ ಎಲ್ಲಿ?

Naveen Polishetty : ನವೀನ್ ಪೊಲಿಶೆಟ್ಟಿ ಮತ್ತು ಮೀನಾಕ್ಷಿ ಚೌಧರಿ ನಟಿಸಿರುವ ತೆಲುಗು ಹಾಸ್ಯ-ಡ್ರಾಮ ಅನಗನಾಗ ಓಕ ರಾಜು ಶೀಘ್ರದಲ್ಲೇ OTT ನಲ್ಲಿ ಬಿಡುಗಡೆಯಾಗಲಿದೆ. ಜನವರಿ 14, 2026 ರಂದು ಮಕರ ಸಂಕ್ರಾಂತಿಯ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸಾಧಾರಣ ಆರಂಭಿಕ ಪ್ರದರ್ಶನ ನೀಡಿತು. ಅನಗನಾಗ ಓಕ ರಾಜು ಚಿತ್ರ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಗೊತ್ತಾ?

Dhanveerah: ದೊಡ್ಡವರು ಮಾತನಾಡೋದು ಕೇಳಿ ಖುಷಿ ಆಯ್ತು! ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

ಸುದೀಪ್‌ ಬಗ್ಗೆ ಧನ್ವೀರ್ ಹೇಳಿದ್ದೇನು?

kichcha sudeep: ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅವರು ಇತ್ತೀಚೆಗೆ ತಮ್ಮ ʻಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ʻಯುದ್ದಕ್ಕೆ ಸಿದ್ದʼ ಎಂದು ಹೇಳಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ನಂತರ ಈ ಬಗ್ಗೆ ಮಾತನಾಡಿದ ಸುದೀಪ್‌, ತಮ್ಮ ಮಾತು ಪೈರಸಿ ಮಾಡುವವರ ವಿರುದ್ಧವೇ ಹೊರತು ಯಾವುದೇ ವ್ಯಕ್ತಿಯ ವಿರುದ್ದವಲ್ಲ ಎಂದು ಸ್ಪಷ್ಟೀಕರಣ ನೀಡಿದ್ದರು. ಹೀಗಿರುವಾಗಲೇ ದರ್ಶನ್‌ ಆಪ್ತ ಧನ್ವೀರ್‌ ಮತ್ತು ಸುದೀಪ್‌ ಆಪ್ತ ವಿನಯ್‌ ಗೌಡರ (Vinay Gowda) ಪೋಸ್ಟ್‌ ವಾರ್‌ ಕೂಡ ನಡೆದಿತ್ತು.

Ghooskhor Pandat row escalates: ‘ಘೂಸ್‌ಖೋರ್ ಪಂಡತ್’ವಿವಾದ:  ಚಿತ್ರಕ್ಕೆ ಹೊಸ ಸಂಕಷ್ಟ!

‘ಘೂಸ್‌ಖೋರ್ ಪಂಡತ್’ವಿವಾದ: ಚಿತ್ರಕ್ಕೆ ಹೊಸ ಸಂಕಷ್ಟ!

Ghooskhor Pandat: ಮನೋಜ್ ಬಾಜಪೇಯಿ ನಟಿಸಿ ನೀರಜ್ ಪಾಂಡೆ ಮತ್ತು ರಿತೇಶ್ ಶಾ ನಿರ್ದೇಶನದ ಮುಂಬರುವ ಚಿತ್ರ ಘೂಸ್‌ಖೋರ್ ಪಾಂಡತ್ , ಕಳೆದ ವಾರ ಘೋಷಣೆಯಾದಾಗಿನಿಂದ ಅದರ ಶೀರ್ಷಿಕೆಯ ಬಗ್ಗೆ ವಿವಾದವನ್ನು ಹುಟ್ಟುಹಾಕಿದೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಣೆಗಳೊಂದಿಗೆ ಪ್ರಾರಂಭವಾದ ವಿಷಯವು ಉಲ್ಬಣಗೊಂಡಿದೆ, ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಉದ್ಯೋಗಿಗಳು ಶೀರ್ಷಿಕೆಯನ್ನು "ಆಕ್ಷೇಪಾರ್ಹ ಮತ್ತು ಅವಹೇಳನಕಾರಿ" ಎಂದು ಕರೆದು ನಿಷೇಧಕ್ಕೆ ಒತ್ತಾಯಿಸಿದೆ.

Loading...