ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Actor Prabhas:  'ಕಲ್ಕಿ 2898 ಎಡಿ' ಸೀಕ್ವೆಲ್ ಚಿತ್ರೀಕರಣ ಆರಂಭ: ಇಬ್ಬರು ಸ್ಟಾರ್ ನಟರ ಎಂಟ್ರಿ?

'ಕಲ್ಕಿ 2898 ಎಡಿ' ಸೀಕ್ವೆಲ್ ಚಿತ್ರೀಕರಣ: ಇಬ್ಬರು ಸ್ಟಾರ್ ನಟರ ಎಂಟ್ರಿ?

Actor Prabhas: ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ಇತ್ತೀಚೆಗಷ್ಟೇ ಅಮಿತಾಬ್ ಬಚ್ಚನ್ ಮತ್ತು ಕಮಲ್ ಹಾಸನ್ ಅವರುಗಳು ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿದ್ದರು. ಇತ್ತೀಚಿನ ವರದಿಗಳ ಪ್ರಕಾರ, ನಟರಾದ ಪ್ರಭಾಸ್ ಮತ್ತು ದುಲ್ಕರ್ ಸಲ್ಮಾನ್ ಮುಂದಿನ ಅಧ್ಯಾಯದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ.

ಅಲ್ಲು ಅರ್ಜುನ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಅನುಷ್ಕಾ ಶರ್ಮಾ ವಾಪಸ್;‌ ವಿರಾಟ್ ಕೊಹ್ಲಿ ಪತ್ನಿಯ ಭರ್ಜರಿ  ರೀ-ಎಂಟ್ರಿ?

ಅಲ್ಲು ಅರ್ಜುನ್-ಅಟ್ಲೀ ಸಿನಿಮಾಗೆ ಅನುಷ್ಕಾ ಶರ್ಮಾ ಎಂಟ್ರಿ?

ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಅಟ್ಲೀ ಅವರ ಬಹುನಿರೀಕ್ಷಿತ ಪ್ಯಾನ್-ವರ್ಲ್ಡ್ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ ಅವರಂತಹ ಸ್ಟಾರ್ ನಟಿಯರ ದಂಡೇ ಇರುವ ಈ ಚಿತ್ರದಲ್ಲಿ ಅನುಷ್ಕಾ ಶರ್ಮಾಗೆ ಏನು ಪಾತ್ರ ಎಂಬುದು ಸದ್ಯದ ಪ್ರಶ್ನೆ.

OTT Releases This Week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಹಾಗೂ ವೆಬ್‌ ಸರಣಿಗಳಿವು

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾ ಹಾಗೂ ವೆಬ್‌ ಸರಣಿಗಳಿವು

OTT Releases This Week: ಈ ವಾರ ಚಿತ್ರಮಂದಿರದಲ್ಲಿ ‘ಧುರಂಧರ್ 2’ ಅಬ್ಬರ ಜೋರಾಗಿದೆ. ಜೊತೆಗೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಸಹ ಇದೆ. ಇದೇ ವಾರ ಒಟಿಟಿಯಲ್ಲಿಯೂ ಸಹ ಕೆಲವು ಒಳ್ಳೆಯ ಸಿನಿಮಾಗಳು ಬಂದಿವೆ. ಈ ವಾರ OTT ನಲ್ಲಿ ಬಿಡುಗಡೆಯಾಗುತ್ತಿರುವ ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ಪಟ್ಟಿ ಇಲ್ಲಿದೆ.

Mrunal Thakur: ಐಟಂ ಸಾಂಗ್‌ಗೆ ಗ್ರೀನ್ ಸಿಗ್ನಲ್ ಕೊಟ್ರಾ ಮೃಣಾಲ್ ಠಾಕೂರ್? ಯಾವ ಸಿನಿಮಾ ಅದು?

ಐಟಂ ಸಾಂಗ್‌ಗೆ ಗ್ರೀನ್ ಸಿಗ್ನಲ್ ಕೊಟ್ರಾ ಮೃಣಾಲ್ ಠಾಕೂರ್?

Mrunal Thakur: ರಾಮ್ ಚರಣ್ ಅಭಿನಯದ ಪೆದ್ದಿ ಚಿತ್ರ ಏಪ್ರಿಲ್ 30, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಬುಚಿ ಬಾಬು ಸನಾ ನಿರ್ದೇಶನದ ಈ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಕಾಣಿಸಿಕೊಳ್ಳಲಿದ್ದಾರಂತೆ. ಮೃಣಾಲ್ ಠಾಕೂರ್ ಅವರು ಐಟಂ ಸಾಂಗ್ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ವರದಿಯಾಗಿದೆ. ಇದೇ ಮೊದಲ ಬಾರಿಗೆ ಮೃಣಾಲ್ ಅವರು ಸ್ಪೆಷಲ್ ಸಾಂಗ್​ನಲ್ಲಿ ಹೆಜ್ಜೆ ಹಾಕಲು ಒಪ್ಪಿದ್ದಾರೆ ಎಂದು ವರದಿಯಾಗಿದೆ.

ಕನ್ನಡ ಚಿತ್ರರಂಗದ ನಿರ್ಮಾಪಕರೆಲ್ಲಿ? ನಿರ್ಮಾಣ ಸಂಸ್ಥೆಗಳೆಲ್ಲಿ? ಗಾಂಧಿನಗರದಲ್ಲೆಲ್ಲೋ ಕಳೆದು ಹೋಯ್ತಾ ಚಿತ್ರರಂಗ?

ಗಟ್ಟಿಯಾದ ನಿರ್ಮಾಣ ಸಂಸ್ಥೆಗಳಿಲ್ಲದೆ ಸೊರಗುತ್ತಿದೆಯಾ ಚಂದನವನ?

ಕನ್ನಡ ಚಿತ್ರರಂಗದ ಬಲಿಷ್ಠ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ ಮತ್ತು ಕೆವಿಎನ್ ಈಗ ಕನ್ನಡಕ್ಕಿಂತ ಹೆಚ್ಚಾಗಿ ಪರಭಾಷಾ ಸಿನಿಮಾಗಳ ಮೇಲೆ ಹೂಡಿಕೆ ಮಾಡುತ್ತಿವೆ. ಹೊಂಬಾಳೆ ಸಂಸ್ಥೆ ಪ್ರಭಾಸ್ ಮತ್ತು ಹೃತಿಕ್ ರೋಷನ್ ಅವರೊಂದಿಗೆ ಬ್ಯುಸಿಯಾಗಿದ್ದರೆ, ಕೆವಿಎನ್ ಸಂಸ್ಥೆಯ ಕೋಟಿ ಕೋಟಿ ಹಣ ʻಜನನಾಯಗನ್‌ʼ, 'ಟಾಕ್ಸಿಕ್' ಮತ್ತು 'ಕೆಡಿ' ಅಂತಹ ಸಿನಿಮಾಗಳ ಮೇಲೆ ಹೂಡಿದೆ.

Ranveer Singh: 'ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಸಿನಿಮಾ': ʻಧುರಂಧರ್‌ 2ʼ ಚಿತ್ರಕ್ಕೆ ನಟ ಅನುಪಮ್ ಖೇರ್ ಜೈಕಾರ

ʻಇದು ವಿಶ್ವದರ್ಜೆಯ ಸಿನಿಮಾʼ; ರಣವೀರ್ ಸಿಂಗ್ ನಟನೆಗೆ ಅನುಪಮ್ ಖೇರ್ ಸಲಾಂ

ಹಿರಿಯ ನಟ ಅನುಪಮ್ ಖೇರ್ ಅವರು 'ಧುರಂಧರ್: ದಿ ರಿವೆಂಜ್' ಸಿನಿಮಾವನ್ನು ವೀಕ್ಷಿಸಿ, ಇದು ಕೇವಲ ಸಿನಿಮಾವಲ್ಲ, ಭಾರತದ ಹೆಮ್ಮೆ ಎಂದು ಬಣ್ಣಿಸಿದ್ದಾರೆ. ರಣವೀರ್ ಸಿಂಗ್ ಅವರ ಪ್ರಬುದ್ಧ ನಟನೆ ಮತ್ತು ಆದಿತ್ಯ ಧರ್ ಅವರ ನಿರ್ದೇಶನವನ್ನು ಕೊಂಡಾಡಿದ್ದಾರೆ.

ʻಕಾಂತಾರ: ಚಾಪ್ಟರ್‌ 1ʼ ಸಿನಿಮಾ ನೋಡಿದ್ಮೇಲೆ ರಿಷಬ್‌ ಶೆಟ್ಟಿಗೆ ಕಾಲ್‌ ಮಾಡಿದ್ದ ವಿಜಯ್‌ ಸೇತುಪತಿ; ಇಬ್ಬರ ನಡುವಿನ ಮಾತುಕತೆ ಹೇಗಿತ್ತು?

ʻರಿಷಬ್ ಶೆಟ್ಟಿಗೆ ಜೊತೆ ಕೆಲಸ ಮಾಡುವಾಸೆ ಇದೆʼ ಎಂದ ನಟ ವಿಜಯ್‌ ಸೇತುಪತಿ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ನಟ ವಿಜಯ್ ಸೇತುಪತಿ ಅವರು 'ಕಾಂತಾರ' ಸಿನಿಮಾ ನೋಡಿ ರಿಷಬ್‌ ಶೆಟ್ಟಿಗೆ ಕಾಲ್‌ ಮಾಡಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಅವರಿಗೆ ಖುದ್ದಾಗಿ ಫೋನ್ ಮಾಡಿ ಅಭಿನಂದಿಸಿದ ವಿಚಾರವನ್ನು ತಿಳಿಸಿದ ಅವರು, ರಿಷಬ್ ಅವರ ನಟನಾ ಶೈಲಿ ಮತ್ತು ಶ್ರಮಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಮೂರನೇ ದಿನ ಕಲೆಕ್ಷನ್‌ನಲ್ಲಿ ದಾಖಲೆ ಬರೆದ ʻಲವ್‌ ಮಾಕ್ಟೇಲ್‌ 3ʼ; ‌ʻಡಾರ್ಲಿಂಗ್ʼ ಕೃಷ್ಣ ಸಿನಿಮಾಕ್ಕೆ ಸಿಕ್ತು ಪ್ರೇಕ್ಷಕರ ಪ್ರೀತಿ, ಎಷ್ಟಾಯ್ತು ಗಳಿಕೆ? ‌

ʻಧುರಂಧರ್‌ 2ʼ ಅಬ್ಬರದ ನಡುವೆ ಸದ್ದು ಮಾಡಿದ 'ಲವ್ ಮಾಕ್ಟೇಲ್ 3' ಕಲೆಕ್ಷನ್‌

ಪರಭಾಷೆಯ ದೊಡ್ಡ ಸಿನಿಮಾಗಳಾದ 'ಧುರಂಧರ್ 2' ಮತ್ತು 'ಉಸ್ತಾದ್ ಭಗತ್ ಸಿಂಗ್' ನಡುವೆಯೂ ಕನ್ನಡದ ಲವ್‌ ಮಾಕ್ಟೇಲ್‌ 3 ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸದ್ಯ ಮೂರು ದಿನಗಳ ಅಂತ್ಯಕ್ಕೆ ಚಿತ್ರದ ಒಟ್ಟು ಗಳಿಕೆ 4.50 ಕೋಟಿ ರೂ. ದಾಟಿದೆ ಎಂಬ ಮಾಹಿತಿ ಇದೆ.

ಬೆಂಗಳೂರಿನಲ್ಲಿ ʻಧುರಂಧರ್‌ 2ʼ ಚಿತ್ರದ ತೆಲುಗು-ತಮಿಳು ವರ್ಷನ್‌ ಪ್ರದರ್ಶನ; ಕನ್ನಡ ಡಬ್ಬಿಂಗ್ ವರ್ಷನ್‌ ಯಾಕಿಲ್ಲ?‌ ಇದೆಂಥಾ ತಾರತಮ್ಯ?

ಬೆಂಗಳೂರಿನಲ್ಲಿ ಧುರಂಧರ್ 2 ಕನ್ನಡ ವರ್ಷನ್ ಮಾಯ; ಪರಭಾಷಾ ಆವೃತ್ತಿಗಳಿಗೆ ಮಣೆ

ʻಧುರಂಧರ್‌ 2ʼ ಚಿತ್ರವು ಕನ್ನಡ ಸೇರಿದಂತೆ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಯಾಗಿದೆ ಎಂದು ಚಿತ್ರತಂಡ ಪ್ರಚಾರ ಮಾಡಿತ್ತು. ಆದರೆ ಬೆಂಗಳೂರಿನಲ್ಲಿ ಹಿಂದಿಗೆ 700ಕ್ಕೂ ಅಧಿಕ ಶೋಗಳು ಹಾಗೂ ತೆಲುಗು-ತಮಿಳು ಆವೃತ್ತಿಗಳಿಗೆ ಸ್ಥಾನ ನೀಡಲಾಗಿದ್ದರೂ, ಕನ್ನಡ ಡಬ್ಬಿಂಗ್ ವರ್ಷನ್‌ಗೆ ಒಂದೂ ಶೋ ನೀಡದಿರುವುದು ತೀವ್ರ ತಾರತಮ್ಯಕ್ಕೆ ಸಾಕ್ಷಿಯಾಗಿದೆ.

ʻಹುಡುಗನಿಗೆ ಅಮ್ಮ ಇರಬಾರದು, ಲಕ್ಷ ವರಮಾನ ಇರಬೇಕುʼ; 42ನೇ ಮದುವೆ ವಾರ್ಷಿಕೋತ್ಸವದಂದು ಎಂಥ ಅರ್ಥಪೂರ್ಣ ಮಾತು ಹೇಳಿದ್ರು ನೋಡಿ ಜಗ್ಗೇಶ್‌

ಜಗ್ಗೇಶ್ ದಾಂಪತ್ಯಕ್ಕೆ 42 ವರ್ಷ; ಈಗಿನ ಮದುವೆ ಕಂಡೀಷನ್‌ಗಳ ಬಗ್ಗೆ ಏನಂದ್ರು?

1984ರಲ್ಲಿ ಮದುವೆಯಾಗಿದ್ದ ಜಗ್ಗೇಶ್-ಪರಿಮಳಾ ದಂಪತಿ ಇಂದು 42ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸುಸಂದರ್ಭದಲ್ಲಿ ಇಂದಿನ ಹುಡುಗಿಯರು ಮತ್ತು ಅವರ ಮನೆಯವರು ಮದುವೆಗೆ ಹಾಕುವ ವಿಲಕ್ಷಣ ನಿಯಮಗಳ ಬಗ್ಗೆ ಜಗ್ಗೇಶ್ ಆತಂಕ ವ್ಯಕ್ತಪಡಿಸಿದ್ದಾರೆ. ಇದ್ದುದ್ದರಲ್ಲೇ ಸುಖ ಕಾಣುವುದೇ ನಿಜವಾದ ಸಂಸಾರ ಎಂದು ಯುವ ಪೀಳಿಗೆಗೆ ಕಿವಿಮಾತು ಹೇಳಿದ್ದಾರೆ.

Akshaye Khanna: 'ಧುರಂಧರ್ 2' ಕಲಾವಿದರ ಸಂಭಾವನೆ ಎಷ್ಟು? ರಣವೀರ್ ಸಿಂಗ್‌ಗೆ ಸಿಕ್ಕಿದೆ ಕೈತುಂಬಾ ಕಾಸು!

'ಧುರಂಧರ್' ಚಿತ್ರಕ್ಕಾಗಿ ರಣವೀರ್‌ ಸಿಂಗ್‌ ಪಡೆದ ಸಂಭಾವನೆ ಎಷ್ಟು?

ಆದಿತ್ಯ ಧರ್ ನಿರ್ದೇಶನದ ʻಧುರಂಧರ್‌: ದಿ ರಿವೆಂಜ್‌ʼ ಸಿನಿಮಾಕ್ಕಾಗಿ ನಟ ರಣವೀರ್ ಸಿಂಗ್ ಬರೋಬ್ಬರಿ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಸಂಜಯ್ ದತ್ ಮತ್ತು ಮಾಧವನ್ ಅವರು ಕೂಡ ಕೋಟಿ ಕೋಟಿ ಹಣವನ್ನು ಜೇಬಿಗಿಳಿಸಿಕೊಂಡಿದ್ದಾರೆ.

Rishab Shetty: 'ಧುರಂಧರ್ 2' ಹಾಡಿ ಹೊಗಳಿದ ರಿಷಬ್ ಶೆಟ್ಟಿ!

Rishab Shetty: 'ಧುರಂಧರ್ 2' ಹಾಡಿ ಹೊಗಳಿದ ರಿಷಬ್ ಶೆಟ್ಟಿ!

Dhurandhar 2: ಧುರಂಧರ್ ದಿ ರಿವೆಂಜ್ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಲೇ ಇದೆ. ವಿವಿಧ ಉದ್ಯಮಗಳ ಪ್ರಸಿದ್ಧ ವ್ಯಕ್ತಿಗಳಿಂದ ಪ್ರಶಂಸೆ ಗಳಿಸುತ್ತಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರ ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಅಲ್ಲು ಅರ್ಜುನ್, ವಿಜಯ್ ದೇವರಕೊಂಡ ಮತ್ತು ಮಹೇಶ್ ಬಾಬು ನಂತರ, ಈಗ ನಟ ರಿಷಬ್ ಶೆಟ್ಟಿ ರಣವೀರ್ ಸಿಂಗ್ ಅಭಿನಯದ ಚಿತ್ರವನ್ನು 'ಅದ್ಭುತ' ಸಿನಿಮಾ ಎಂದು ಹಾಡಿ ಹೊಗಳಿದ್ದಾರೆ.

Dhurandhar 2 movie : 300 ಕೋಟಿ ರೂಪಾಯಿ ಮೀರಿದ ಗಳಿಕೆ;  'ಧುರಂಧರ್' 2 ಸುನಾಮಿ!

300 ಕೋಟಿ ರೂಪಾಯಿ ಮೀರಿದ ಗಳಿಕೆ; 'ಧುರಂಧರ್' 2 ಸುನಾಮಿ!

Dhurandhar 2 movie Box office Collection : ರಣವೀರ್ ಸಿಂಗ್ ಅಭಿನಯದ ಈ ಸ್ಪೈ ಥ್ರಿಲ್ಲರ್ ಸಿನಿಮಾ ಪ್ರೇಕ್ಷಕರ ನಿರೀಕ್ಷೆಗಳನ್ನು ಪೂರೈಸಿದೆ. ಮೊದಲ ಕಂತಿನ ನಂತರ ಕೆಲವೇ ತಿಂಗಳ ಹಿಂದೆ ಬಿಡುಗಡೆಯಾದ ಆದಿತ್ಯ ಧರ್‌ ನಿರ್ದೇಶನದ ಈ ಸಿನಿಮಾ ಕೇವಲ 3 ದಿನಗಳಲ್ಲಿ 500 ಕೋಟಿ ಕ್ಲಬ್ ಸೇರುವ ಮೂಲಕ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದೆ. ಮಾರ್ಚ್ 18ರ ಸಂಜೆಯಿಂದ ‘ಧುರಂಧರ್ 2’ ಸಿನಿಮಾಗೆ ಪ್ರೀಮಿಯರ್ ಶೋ ಆರಂಭ ಆಯಿತು. ಅಂದು ಈ ಚಿತ್ರಕ್ಕೆ 43 ಕೋಟಿ ರೂಪಾಯಿ ಕಲೆಕ್ಷನ್ ಆಗಿತ್ತು. ಮಾರ್ಚ್ 19ರಂದು ಎಲ್ಲ ಕಡೆಗಳಲ್ಲಿ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಯಿತು.

Ranveer Singh: ‘ಧುರಂಧರ್ 2’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರ ಧ್ವಂಸ! ಏನಿದು ಪ್ರಕರಣ?

‘ಧುರಂಧರ್ 2’ ಸಿನಿಮಾ ಪ್ರದರ್ಶನದ ವೇಳೆ ಚಿತ್ರಮಂದಿರ ಧ್ವಂಸ! ಏನಿದು ಪ್ರಕರಣ?

Ranveer Singh: ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾದ ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಮತ್ತು ರಣವೀರ್ ಸಿಂಗ್ ಅವರ ಧುರಂಧರ್: ದಿ ರಿವೆಂಜ್ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಬಿರುಗಾಳಿ ಎಬ್ಬಿಸಿದ್ದು, ಪ್ರಪಂಚದಾದ್ಯಂತದ ಚಿತ್ರಮಂದಿರಗಳಿಗೆ ಅಪಾರ ಜನರ ಮನಸ್ಸನ್ನು ಸೆಳೆದಿದೆ. ಅಭಿಮಾನಿಗಳು ಶಿಳ್ಳೆಗಳು, ಹರ್ಷೋದ್ಗಾರಗಳು ಮತ್ತು ತುಂಬಿದ ಪ್ರದರ್ಶನಗಳೊಂದಿಗೆ ಚಿತ್ರವನ್ನು ಆಚರಿಸುತ್ತಿದ್ದರೆ, ಪ್ರದರ್ಶನದ ವೇಳೆ ಪ್ರೇಕ್ಷಕರು ಅಕ್ಷರಶಃ ರೊಚ್ಚಿಗೆದ್ದು ಚಿತ್ರಮಂದಿರದ ಪರದೆಯನ್ನೇ ಹರಿದು ಹಾಕಿರುವ ಆಘಾತಕಾರಿ ಘಟನೆ ಒಂದು ನಡೆದಿದೆ.

Nagaraj Somayaji New Movie:  'ದೇವಿ ಮಹಾತ್ಮೆ' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

'ದೇವಿ ಮಹಾತ್ಮೆ' ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

Nagaraj Somayaji New Movie: ಉಡುಪಿ ಜಿಲ್ಲೆಯ ಕಮಲಶಿಲೆಯ ಬ್ರಹ್ಮಿ ದೇಗುಲದಲ್ಲಿ ಮುಹೂರ್ತ ನೆರವೇರಿಸಿದ್ದ ದೇವಿ ಮಹಾತ್ಮೆ ಸಿನಿಮಾ ತಂಡ ಇದೀಗ ಮೊದಲ ಹಂತದ ಶೂಟಿಂಗ್ ಮುಕ್ತಾಯಗೊಳಿಸಿದೆ. ಕುಂದಾಪುರ ಸುತ್ತಮುತ್ತ ಸುಂದರ ಜಾಗದಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಶೀಘ್ರದಲ್ಲೇ ಚಿತ್ರತಂಡ ಸೆಕೆಂಡ್ ಶೆಡ್ಯುಲ್ಡ್ ಶೂಟಿಂಗ್ ಆರಂಭಿಸಲಿದೆ.

AMB Cinemas : ಸಿನಿಪ್ರೇಮಿಗಳಿಗೆ ಗುಡ್‌ ನ್ಯೂಸ್‌, ಎಎಂಬಿ ಸಿನಿಮಾಸ್ ಆಫರ್! ಮಾರ್ಚ್ 26ರವರೆಗೆ ಅನ್ವಯ

ಎಎಂಬಿ ಸಿನಿಮಾಸ್ ಆಫರ್! ಮಾರ್ಚ್ 26ರವರೆಗೆ ಅನ್ವಯ

AMB Cinemas : ಬೆಂಗಳೂರಿನ ಪ್ರತಿಷ್ಠಿತ ಎಎಂಬಿ ಸಿನಿಮಾಸ್ , ಚಲನಚಿತ್ರ ಪ್ರೇಮಿಗಳಿಗಾಗಿ ವಿಶೇಷ ಯುಗಾದಿ ಕೊಡುಗೆಗಳನ್ನು ಘೋಷಿಸಿದೆ. ಈ ವಿಶೇಷ ಆಫರ್‌ಗಳು ಲವ್ ಮಾಕ್ಟೇಲ್ 3, ಧುರಂಧರ್ 2 ಮತ್ತು ಉಸ್ತಾದ್ ಭಗತ್ ಸಿಂಗ್ ಚಿತ್ರಗಳಿಗೆ ಅನ್ವಯವಾಗಲಿವೆ. ಗಾಂಧಿನಗರದಲ್ಲಿರುವ ಬೆಂಗಳೂರಿನ ಪ್ರತಿಷ್ಠಿತ ಎಎಂಬಿ ಸಿನಿಮಾಸ್ , ಚಲನಚಿತ್ರ ಪ್ರೇಮಿಗಳಿಗಾಗಿ ವಿಶೇಷ ಯುಗಾದಿ ಕೊಡುಗೆಗಳನ್ನು ಘೋಷಿಸಿದೆ.

Rashmika Mandanna: ಹನಿಮೂನ್​ ಮೂಡ್​​ನಲ್ಲಿ ರಶ್ಮಿಕಾ-ವಿಜಯ್‌; ಕ್ಯೂಟ್‌ ಫೋಟೊ ವೈರಲ್‌

ಹನಿಮೂನ್​ ಮೂಡ್​​ನಲ್ಲಿ ರಶ್ಮಿಕಾ-ವಿಜಯ್‌; ಕ್ಯೂಟ್‌ ಫೋಟೊ ವೈರಲ್‌

Rashmika Mandanna: ಉದಯಪುರದಲ್ಲಿ ಅದ್ದೂರಿ ವಿವಾಹ ಸಮಾರಂಭದ ನಂತರ, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿ ಥೈಲ್ಯಾಂಡ್‌ಗೆ ಹೋಗಿದ್ದಾರೆ. ಜೋಡಿ ಹನಿಮೂನ್‌ ಮೂಡ್‌ನಲ್ಲಿದೆ. ಈಗ, ನವವಿವಾಹಿತರು ಪರಸ್ಪರರ ಅಪ್ಪಿಕೊಂಡು ಒಟ್ಟಿಗೆ ಪೋಸ್‌ ನೀಡಿರುವ ಫೋಟೋ ವೈರಲ್‌ ಆಗಿದೆ.

Narendra Modi: ರಾಜ್​​ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ; ಕಾರಣ ಏನು?

ರಾಜ್​​ಕುಮಾರ್ ಅವರ ಜನಪ್ರಿಯ ಸಿನಿಮಾ ಗೀತೆ ಹಂಚಿಕೊಂಡ ಮೋದಿ!

Rajkumar: ಪ್ರಧಾನಿ ನರೇಂದ್ರ ಮೋದಿ ಅವರು ಯುಗಾದಿಗೆ ಕನ್ನಡದಲ್ಲಿ ಯುಗಾದಿ ಹಬ್ಬದ ಶುಭಾಶಯ ಕೋರಿದ್ದರು. ಇದೀಗ ಡಾ. ರಾಜ್​​ಕುಮಾರ್ ಅವರ 'ಶ್ರೀ ಚಾಮುಂಡೇಶ್ವರಿ' ಹಾಡನ್ನು ಹಂಚಿಕೊಂಡಿರುವುದು ಕನ್ನಡಿಗರಿಗೆ ಮತ್ತು ಅಣ್ಣಾವ್ರ ಅಭಿಮಾನಿಗಳಿಗೆ ಖುಷಿ ತಂದಿದೆ. ಟ್ವಿಟರ್‌ನಲ್ಲಿ ಹಂಚಿಕೊಂಡು ಚೈತ್ರ ನವರಾತ್ರಿ ಸಂದೇಶ ಸಾರಿದ್ದಾರೆ. 'ಶ್ರೀಕೃಷ್ಣ ದೇವರಾಯ' ಚಿತ್ರದ 'ಶ್ರೀ ಚಾಮುಂಡೇಶ್ವರಿ' ಹಾಡಿನ ಯೂಟ್ಯೂಬ್ ಲಿಂಕ್ ಅನ್ನು ಪ್ರಧಾನಿ ಮೋದಿ ಪೋಸ್ಟ್ ಮಾಡಿದ್ದಾರೆ.

Ravichandran Hamsalekha: ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್ ಮುಕ್ತ ಮಾತು

ನಮ್ಮಲ್ಲಿ ಬಿರುಕು ಬಿಟ್ಟಾಗ ಹಲವರು ಸಂಭ್ರಮಿಸಿದ್ದೇ ಹೆಚ್ಚು! ರವಿಚಂದ್ರನ್

Ravichandran Hamsalekha: ಕ್ರೇಜಿ ಸ್ಟಾರ್ ರವಿಚಂದ್ರನ್ಹಾ ಗೂ ನಾದಬ್ರಹ್ಮ ಹಂಸಲೇಖ ಇಬ್ಬರೂ ಬೇರೆಯಾದಾಗ ಅವರ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ, ಸುಮಾರು ಒಂದೂವರೆ ಎರಡು ದಶಕಗಳಿಂದ ಈ ಜೋಡಿ ಒಟ್ಟಿಗೆ ಸಿನಿಮಾ ಮಾಡಿಯೇ ಇಲ್ಲ. ಒಂದೇ ಒಂದು ಹಾಡು ಬಂದಿಲ್ಲ. ಆದರೆ ಈಗ ಅವರು ಒಂದಾಗಿದ್ದಾರೆ. ವೇದಿಕೆಯಲ್ಲಿ ಒಟ್ಟಿಗೆ ಕುಳಿತು ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ತಮ್ಮಿಬ್ಬರ ಜರ್ನಿ ಬಗ್ಗೆ, ದೂರ ಆಗಿದ್ದರ ಬಗ್ಗೆ ಮಾತಾಡಿದ್ದಾರೆ.

Dhurandhar 2 collection:  ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

ಸಿಗ್ತಿಲ್ಲ ಟಿಕೆಟ್, ʻಧುರಂಧರ್‌ʼ ಕ್ರೇಜ್ ಭಾರೀ ಜೋರು! ಗಳಿಕೆ ಎಷ್ಟು?

Dhurandhar 2: ಧುರಂಧರ್: ದಿ ರಿವೆಂಜ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಎರಡನೇ ದಿನವೂ ಚಿತ್ರ ಇನ್ನೂ ಉತ್ತಮ ಪ್ರದರ್ಶನ ನೀಡಿತು. ರಣವೀರ್ ಸಿಂಗ್ ಅವರ ಸ್ಪೈ ಥ್ರಿಲ್ಲರ್ ಚಿತ್ರವು ಮೊದಲ ದಿನವೇ ಜಾಗತಿಕವಾಗಿ ₹ 200 ಕೋಟಿ ಗಡಿ ದಾಟಿತ್ತು. ಆರಂಭಿಕ ವರದಿಗಳ ಪ್ರಕಾರ, ಶುಕ್ರವಾರ ಚಿತ್ರ ಸುಮಾರು 80 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಇದರೊಂದಿಗೆ, ಚಿತ್ರದ ಎರಡು ದಿನಗಳ ಒಟ್ಟು ಕಲೆಕ್ಷನ್ (ಪೂರ್ವವೀಕ್ಷಣೆಗಳು ಸೇರಿದಂತೆ) 200 ಕೋಟಿ ರೂ.ಗಳನ್ನು ದಾಟಿದೆ.

Maatrubhumi Movie: ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ? ಇಲ್ಲಿದೆ ಕಾರಣ

ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ?

Maatrubhumi Movie: ಗಲ್ವಾನ್ ಕದನ ಎಂದು ಕರೆಯಲ್ಪಡುತ್ತಿದ್ದ ಸಲ್ಮಾನ್ ಖಾನ್ ಅವರ 'ಮಾತೃಭೂಮಿ' ಚಿತ್ರದ ನಿರ್ಮಾಪಕರು ಅನಿರೀಕ್ಷಿತ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ-ಗಾಯಕ ಪ್ರಶಾಂತ್ ತಮಾಂಗ್ ಅವರ ನಿಧನದ ನಂತರ ಚಿತ್ರದ ಬಿಡುಗಡೆ ವಿಳಂಬವಾಗಿದೆ ಎಂದು ವರದಿಯಾಗಿದೆ . ಈ ಚಿತ್ರವು ಏಪ್ರಿಲ್ ಆರಂಭದಲ್ಲಿ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದಾಗ್ಯೂ, ಬಾಕಿ ಇರುವ ಚಿತ್ರೀಕರಣದ ಅವಶ್ಯಕತೆಗಳು ಮತ್ತು ಅಗತ್ಯ ಸ್ಕ್ರಿಪ್ಟ್ ಹೊಂದಾಣಿಕೆಗಳಿಂದಾಗಿ ಸಿನಿಮಾ ರಿಲೀಸ್‌ ಮುಂದೂಡಲಾಗಿದೆ ಎಂದು ವರದಿಯಾಗಿದೆ.

Dhurandhar 2: ಬೇರೆ ಹೀರೋಗಳೆಲ್ಲ ಜೋಕರ್​ಗಳು! ರಣವೀರ್ ಸಿಂಗ್‌ ಹೊಗಳಿ ಆರ್​ಜಿವಿ ಹೇಳಿದ್ದೇನು?

ಬೇರೆ ಹೀರೋಗಳೆಲ್ಲ ಜೋಕರ್​ಗಳು! ರಣವೀರ್ ಹೊಗಳಿ RGV ಹೇಳಿದ್ದೇನು?

Dhurandhar 2: ಧುರಂಧರ್ 2 ಚಿತ್ರ ಬಿಡುಗಡೆಯಾದ ಒಂದು ದಿನದ ನಂತರ , ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡರು. ಸಿನಿಮಾವನ್ನು ಶ್ಲಾಘಿಸಿದರು. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಮಹತ್ವದ ತಿರುವು ಎಂದು ಕರೆದರು. ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ʻನಂಗ್ಯಾಕೆ ಮದುವೆಗೆ ಕರೀಲಿಲ್ಲʼ ಅಂತ ಕೋಪಗೊಂಡಿದ್ದ ಪುಟಾಣಿ ಅಭಿಮಾನಿಯನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ರಶ್ಮಿಕಾ - ವಿಜಯ್‌ ದೇವರಕೊಂಡ

ಮುನಿಸಿಕೊಂಡಿದ್ದ ಪುಟಾಣಿ ಅಭಿಮಾನಿಗೆ ವಿಜಯ್-ರಶ್ಮಿಕಾ ನಿವಾಸದಲ್ಲಿ ಔತಣ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ತಮ್ಮನ್ನು ಕರೆಯಲಿಲ್ಲ ಎಂದು ಮುನಿಸಿಕೊಂಡಿದ್ದ ಪುಟಾಣಿ ಅಭಿಮಾನಿ 'ಲಕ್ಕಿ ತಲ್ಲಿ'ಯನ್ನು ಈ ಜೋಡಿ ಮನೆಗೆ ಆಹ್ವಾನಿಸಿದೆ. ತಮ್ಮ ನಿವಾಸಕ್ಕೆ ಲಕ್ಕಿ ತಲ್ಲಿ ಕುಟುಂಬವನ್ನು ಬರಮಾಡಿಕೊಂಡ ದಂಪತಿ, ಅವರಿಗೆ ಪ್ರೀತಿಯಿಂದ ಊಟ ಬಡಿಸಿ ಸತ್ಕರಿಸಿದ್ದಾರೆ. ಈ ಭೇಟಿಯ ಭಾವುಕ ಕ್ಷಣಗಳನ್ನು ಲಕ್ಕಿ ತಲ್ಲಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ? ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ಅಲ್ವೇ ಅಲ್ಲ

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ?

Dhurandhar 2: ಕಥೆ, ಸಾಹಸ ಸನ್ನಿವೇಶಗಳು ಮತ್ತು ಹಾಡುಗಳ ಜೊತೆಗೆ, ಸ್ಪೈ ಥ್ರಿಲ್ಲರ್ ಧುರಂಧರ್ ತನ್ನ ತಾರಾಬಳಗಕ್ಕಾಗಿ ಪ್ರಶಂಸೆಯನ್ನು ಪಡೆಯಿತು. ಹಮ್ಜಾ ಪಾತ್ರದಲ್ಲಿ ರಣವೀರ್ ಸಿಂಗ್ ಆಗಿರಲಿ ಅಥವಾ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಆಗಿರಲಿ ಆದಿತ್ಯ ಧರ್ ಅವರ ಚಿತ್ರಕ್ಕೆ ಇಡೀ ತಾರಾಬಳಗವೇ ಸಿನಿಮಾಗೆ ಜೀವ ತುಂಬಿದೆ. ಕೆಲವರು ಸಲ್ಮಾನ್ ಖಾನ್ ಹೆಸರನ್ನು ತೇಲಿ ಬಿಟ್ಟರೆ, ಇನ್ನೂ ಕೆಲವರು ''ಧುರಂಧರ್ 2'' ನಲ್ಲಿ ಬಡೇ ಸಾಬ್ ಪಾತ್ರವನ್ನು ಇಮ್ರಾನ್ ಹಶ್ಮಿ ನಿರ್ವಹಿಸಿದ್ದಾರೆ ಎಂದು ಕಮೆಂಟ್‌ ಮಾಡಿದ್ದರು. ಹಾಗಾದ್ರೆ ಈ ಪಾತ್ರ ನಿರ್ವಹಿಸಿರೋದು ಯಾರು?

Loading...