ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ದೆಹಲಿ ವಿದ್ಯಾರ್ಥಿ ಪ್ರತಿಭಟನೆಗೆ ಬೆಂಬಲ: 'ಹೋರಾಟ ಮಾಡಲು ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಬನ್ನಿ'- ಕನ್ನಡದ ಮಕ್ಕಳಿಗೆ ನಟ ಕಿಶೋರ್ ಭಾವನಾತ್ಮಕ ಮನವಿ

ʻನಾವು ವೈರಿಗಳಲ್ಲ, ನಿಮ್ಮ ಭವಿಷ್ಯಕ್ಕಾಗಿ ಬನ್ನಿʼ; ನಟ ಕಿಶೋರ್ ಮನವಿ

ನೀಟ್ ಪರೀಕ್ಷೆಯ ಸಾಲು ಸಾಲು ಅಕ್ರಮಗಳು ಹಾಗೂ ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸ್ಥಳೀಯ ಕನ್ನಡ ಮಕ್ಕಳ ಭಾಗವಹಿಸುವಿಕೆ ಕಡಿಮೆಯಿರುವುದಕ್ಕೆ ನಟ ಕಿಶೋರ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳು ತಮ್ಮದೇ ಸ್ವಂತ ಭವಿಷ್ಯದ ರಕ್ಷಣೆಗಾಗಿ ಹೋರಾಟಕ್ಕೆ ಧುಮುಕಬೇಕೆಂದು ವಿಡಿಯೋ ಮೂಲಕ ಆಹ್ವಾನಿಸಿದ್ದಾರೆ.

Jana Nayagan Review: ಭಗವಂತ್ ಕೇಸರಿಯ ನೆರಳಿನಲ್ಲಿ ಮೂಡಿದ ʻದಳಪತಿʼ ವಿಜಯ್‌ ʻನೀರಸʼ ಮೆರವಣಿಗೆ!

Thalapathy Vijay: ʻಜನ ನಾಯಗನ್ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Jana Nayagan Movie Review: ತಮಿಳುನಾಡು ಸಿಎಂ 'ದಳಪತಿ' ವಿಜಯ್ ನಟನೆಯ ಅಂತಿಮ ಚಿತ್ರ 'ಜನ ನಾಯಗನ್' ಜುಲೈ 23 ರಂದು ಬಿಡುಗಡೆಯಾಗಿದೆ. ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ಮೂಲ ಕಥೆಯನ್ನೇ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಸಿನಿಮಾ ವಿಜಯ್‌ ಫ್ಯಾನ್ಸ್‌ಗೆ ಇಷ್ಟವಾಗುತ್ತದೆಯೇ? ವಿಜಯ್‌ ಅವರಿಗೆ ಉತ್ತಮವಾದ ಬೀಳ್ಕೊಡುಗೆ ಸಿಕ್ಕಿದೆಯಾ? ಈ ಸಿನಿಮಾ ವಿಮರ್ಶೆ ಓದಿ.

Jana Nayagan Twitter Review: ಕೊನೆಯ ಕ್ಷಣದಲ್ಲಿ ಕಣ್ತುಂಬಿ ಬಂತು! ಜನ ನಾಯಗನ್‌ಗೆ ಪ್ರೇಕ್ಷಕರ ಜಯಕಾರ

ಕೊನೆಯ ಕ್ಷಣದಲ್ಲಿ ಕಣ್ತುಂಬಿ ಬಂತು! ʻಜನ ನಾಯಗನ್‌ʼಗೆ ಪ್ರೇಕ್ಷಕರ ಜಯಕಾರ

Jana Nayagan Twitter Review: ಭಾರೀ ಮುಂಗಡ ಬುಕ್ಕಿಂಗ್ ಹಾಗೂ ಹೆಚ್ಚುತ್ತಿರುವ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಆರಂಭ ಪಡೆಯುವ ನಿರೀಕ್ಷೆಯಿದೆ. ಭಾರತದಲ್ಲಿ ಸುಮಾರು 2,500 ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಹಲವು ಪ್ರದೇಶಗಳಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ವಿಶೇಷ ಪ್ರದರ್ಶನಗಳು ಆರಂಭವಾಗಿವೆ. ಆದರೆ ತಮಿಳುನಾಡಿನಲ್ಲಿ ಎಂದಿನಂತೆ ಬೆಳಗ್ಗೆ 9 ಗಂಟೆಯಿಂದ ಪ್ರದರ್ಶನಗಳು ಆರಂಭಗೊಂಡಿವೆ. ಟ್ವಿಟರ್‌ ವಿಮರ್ಶೆ ಹೀಗಿದೆ.

Actor Yash: ‘ಜನ ನಾಯಗನ್’ ಪ್ರಚಾರ ವೇಳೆ  `ಟಾಕ್ಸಿಕ್’ ಬಗ್ಗೆ ನಿರ್ಮಾಪಕ ಹೇಳಿದ್ದೇನು?

‘ಜನ ನಾಯಗನ್’ ಪ್ರಚಾರ ವೇಳೆ `ಟಾಕ್ಸಿಕ್’ ಬಗ್ಗೆ ನಿರ್ಮಾಪಕ ಹೇಳಿದ್ದೇನು?

Actor Yash: ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು ಆಗಸ್ಟ್ 26, 2026 ರಂದು ಚಿತ್ರಮಂದಿರಗಳಿಗೆ ಆಗಮಿಸಲಿದೆ. ಸಿನಿಮಾದ ನಿರ್ಮಾಪಕ ವೆಂಕಟ್ ಅವರು ತಮ್ಮದೇ ನಿರ್ಮಾಣದ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ಸಜ್ಜಾಗಿ ಅದರ ಪ್ರಚಾರದಲ್ಲಿ ನಿರತರಾಗಿದ್ದಾರೆ. ಆದರೆ ಅಲ್ಲಿಯೂ ಅವರಿಗೆ ‘ಟಾಕ್ಸಿಕ್’ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ವೇಳೆ ಅವರು ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.

NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಸಲ್ಮಾನ್ ಖಾನ್ ಬೆಂಬಲ

ವಿದ್ಯಾರ್ಥಿಗಳ ಪ್ರತಿಭಟನೆ ರಾಜಕೀಯಗೊಳಿಸಬೇಡಿ; ಸಲ್ಮಾನ್ ಖಾನ್ ಬೆಂಬಲ

salman Khan: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬೆಂಬಲ ನೀಡಿದ್ದಾರೆ. ಕಳೆದ ಹಲವಾರು ದಿನಗಳಿಂದ, ವಿದ್ಯಾರ್ಥಿಗಳ ಮೇಲಿನ ಪೊಲೀಸ್ ದೌರ್ಜನ್ಯದ ಬಗ್ಗೆ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಏಕೆ ಮೌನವಾಗಿದ್ದಾರೆ ಎಂಬ ಪ್ರಶ್ನೆಗೆ ಜನರು ಪ್ರತಿಕ್ರಿಯಿಸುತ್ತಿದ್ದಾರೆ . ನಟ ಕೊನೆಗೂ ಮೌನ ಮುರಿದು ದೀರ್ಘ ಪೋಸ್ಟ್ ಪೋಸ್ಟ್ ಮಾಡಿದ್ದಾರೆ.

Aamir Khan: ‘3 ಈಡಿಯಟ್ಸ್’ ಸಿನಿಮಾ  ಮರು-ಬಿಡುಗಡೆ ವದಂತಿಗೆ ಫುಲ್‌ ಸ್ಟಾಪ್‌ ಇಟ್ಟ ನಿರ್ಮಾಪಕ

3 ಈಡಿಯಟ್ಸ್ ಸಿನಿಮಾ ಮರು ಬಿಡುಗಡೆ ವದಂತಿಗೆ ಫುಲ್‌ ಸ್ಟಾಪ್‌!

Aamir Khan: 3 ಈಡಿಯಟ್ಸ್ ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಹೆಚ್ಚು ಸಮಯ ಕಾಯಬೇಕಾಗಬಹುದು. ಬ್ಲಾಕ್‌ಬಸ್ಟರ್ ಹಾಸ್ಯ-ಸಿನಿಮಾ ಸೆಪ್ಟೆಂಬರ್ 4 ರಂದು ಚಿತ್ರಮಂದಿರಗಳಿಗೆ ಮರಳಲಿದೆ ಎಂಬ ವರದಿಗಳನ್ನು ವಿಧು ವಿನೋದ್ ಚೋಪ್ರಾ ಫಿಲ್ಮ್ಸ್ ಅಧಿಕೃತವಾಗಿ ತಳ್ಳಿಹಾಕಿದೆ.

ನೀಟ್‌ ಪರೀಕ್ಷಾ ಅಕ್ರಮ ಆಧರಿಸಿ ಜೀ5ನಲ್ಲಿ ಹೊಸ ವೆಬ್‌ ಸರಣಿ: ಸಂಚಲನ ಮೂಡಿಸಿದ 'ದಿ ಸ್ಕ್ಯಾಮ್: ಲೀಕ್ಡ್' ಟೀಸರ್‌!

ನೀಟ್‌ ಸ್ಕ್ಯಾಮ್‌ ಕುರಿತು ಜೀ5ನಲ್ಲಿ ವೆಬ್‌ ಸೀರೀಸ್‌! ಟೀಸರ್‌ನಲ್ಲಿ ಏನಿದೆ?

ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಲೀಕ್ ಹಗರಣ ಆಧರಿಸಿ ಜೀ5 ಒಟಿಟಿಯಲ್ಲಿ 'ದಿ ಸ್ಕ್ಯಾಮ್: ಲೀಕ್ಡ್' ಎಂಬ ವೆಬ್ ಸರಣಿ ನಿರ್ಮಾಣವಾಗುತ್ತಿದ್ದು, ಜುಲೈ 22 ರಂದು ಬಿಡುಗಡೆಯಾದ ಇದರ ಟೀಸರ್ ಭಾರಿ ಸಂಚಲನ ಮೂಡಿಸಿದೆ.

MrBeast: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಪಂಚದ ಶ್ರೀಮಂತ ಯೂಟ್ಯೂಬರ್!

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಪಂಚದ ಶ್ರೀಮಂತ ಯೂಟ್ಯೂಬರ್!

MrBeast: ಮಿಸ್ಟರ್ ಬೀಸ್ಟ್ ಎಂದೇ ಜನಪ್ರಿಯರಾಗಿರುವ ಜಿಮ್ಮಿ ಡೊನಾಲ್ಡ್ಸನ್, ತಮ್ಮ ದೀರ್ಘಕಾಲದ ಗೆಳತಿ ಥಿಯಾ ಬೂಯ್ಸೆನ್ ಅವರನ್ನು ವಿವಾಹವಾದರು. ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. MrBeast ಎಂದೇ ಖ್ಯಾತಿ ಪಡೆದಿರುವ ಜಿಮ್ಮಿ ಡೊನಾಲ್ಡ್ಸನ್ "ನಾನು ಮಿಸೆಸ್ ಬೀಸ್ಟ್ ಅನ್ನು ಕಂಡುಕೊಂಡೆ" (I found MrsBeast). ಇದು ನನ್ನ ಜೀವನದ ಅತ್ಯಂತ ಸುಂದರವಾದ ದಿನ ಎಂಬ ಶೀರ್ಷಿಕೆಯನ್ನು ಬರೆದಿದ್ದಾರೆ.

NBK 111: ಶೂಟಿಂಗ್ ವೇಳೆ ನಂದಮೂರಿ ಬಾಲಕೃಷ್ಣ ಕಾಲಿಗೆ ಬಲವಾದ ಪೆಟ್ಟು: ಹೈದರಾಬಾದ್ ಆಸ್ಪತ್ರೆಗೆ ದಾಖಲು, ಹೆಲ್ತ್ ರಿಪೋರ್ಟ್ ಔಟ್!

ತೆಲುಗು ನಟ ಬಾಲಯ್ಯ ಕಾಲಿಗೆ‌ ಬಲವಾದ ಏಟು; ಹೆಲ್ತ್‌ ಬುಲೆಟಿನ್‌ನಲ್ಲಿ ಏನಿದೆ?

ತೆಲುಗು ಚಿತ್ರರಂಗದ ಹಿರಿಯ ನಟ ನಂದಮೂರಿ ಬಾಲಕೃಷ್ಣ ಅವರು ‘NBK 111’ ಚಿತ್ರೀಕರಣದ ವೇಳೆ ಕಾಕಿನಾಡ ಪೋರ್ಟ್‌ನಲ್ಲಿ ಜಾರಿ ಬಿದ್ದು ಎಡ ಮೊಣಕಾಲಿಗೆ ಬಲವಾದ ಏಟು ಮಾಡಿಕೊಂಡಿದ್ದಾರೆ. ಹೈದರಾಬಾದ್‌ನ ಎಐಜಿ ಆಸ್ಪತ್ರೆಗೆ ದಾಖಲಾಗಿರುವ ಅವರ ಮೊಣಕಾಲಿನಲ್ಲಿ ರಕ್ತ ಹೆಪ್ಪುಗಟ್ಟಿದ್ದು, ಸ್ನಾಯುಗಳು ಹರಿದಿರುವ ಶಂಕೆ ವ್ಯಕ್ತವಾಗಿದೆ.

ರಾಮ್‌ ಚರಣ್‌ ಹೊಸ ಸಿನಿಮಾಕ್ಕೆ ರಶ್ಮಿಕಾ ಮಂದಣ್ಣ ನಾಯಕಿ? ಮದುವೆ ಬಳಿಕ ಹೆಚ್ಚಾಯ್ತು ʻನ್ಯಾಶನಲ್‌ ಕ್ರಶ್‌ʼ ಬೇಡಿಕೆ

RC17: ರಾಮ್ ಚರಣ್ ಅಖಾಡಕ್ಕೆ ಲಗ್ಗೆ ಇಟ್ಟ ನಟಿ ರಶ್ಮಿಕಾ ಮಂದಣ್ಣ!

'ಪೆದ್ದಿ' ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ಮೆಗಾಪವರ್ ಸ್ಟಾರ್ ರಾಮ್ ಚರಣ್ ಹಾಗೂ ನಿರ್ದೇಶಕ ಸುಕುಮಾರ್ ಕಾಂಬಿನೇಷನ್‌ನ 'RC17' ಚಿತ್ರವು ಸೆಟ್ಟೇರಲು ಅಣಿಯಾಗಿದೆ. ಈಗಾಗಲೇ ಸ್ಕ್ರಿಪ್ಟ್ ಕೆಲಸಗಳು ಅಂತಿಮ ಹಂತ ತಲುಪಿವೆ. ಈ ಪ್ಯಾನ್-ಇಂಡಿಯಾ ಬಿಗ್ ಪ್ರಾಜೆಕ್ಟ್‌ಗೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಕತ್ರಿನಾ ಕೈಫ್ ಎಂಟ್ರಿ? ಮಹತ್ವದ ಪಾತ್ರಕ್ಕೆ ಬಾಲಿವುಡ್ ಬ್ಯೂಟಿ ಫಿಕ್ಸ್?

ʻಸ್ಪಿರಿಟ್ʼ ಚಿತ್ರದಲ್ಲಿ ಕತ್ರಿನಾ ಕೈಫ್? ಪ್ರಭಾಸ್ ಸಿನಿಮಾದಲ್ಲಿ ಟ್ವಿಸ್ಟ್

‘ರೆಬೆಲ್ ಸ್ಟಾರ್’ ಪ್ರಭಾಸ್ ನಟನೆಯ, ‘ಅನಿಮಲ್’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ‘ಸ್ಪಿರಿಟ್’ಗೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಸದ್ದು ಮಾಡುತ್ತಿದೆ. ಪ್ರಭಾಸ್ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿರುವ ಈ ಚಿತ್ರದ 40% ಶೂಟಿಂಗ್ ಪೂರ್ಣಗೊಂಡಿದೆ.

ಭಾರತದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾರ್ಕೆಟ್ 'ಬೆಂಗಳೂರು'! ದೇಶದ ಇತರೆ ನಗರಗಳಲ್ಲಿ  ಎಷ್ಟಿದೆ 'ಜನ ನಾಯಗನ್' ಚಿತ್ರದ ಟಿಕೆಟ್ ರೇಟ್?

ಬೆಂಗಳೂರಿನಲ್ಲಿ 'ಜನ ನಾಯಗನ್' ಸಿನಿಮಾದ ಲೂಟಿ; ಟಿಕೆಟ್ ರೇಟ್ 2,600 ರೂ.!

ಸಿಎಂ ʻದಳಪತಿʼ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್' ಟಿಕೆಟ್ ದರ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ಗಳಲ್ಲಿ ಬರೋಬ್ಬರಿ 2,600 ರೂ. ರವರೆಗೆ ಏರಿಕೆಯಾಗಿದ್ದು, ದೇಶದಲ್ಲೇ ಅತ್ಯಂತ ದುಬಾರಿ ಸಿನಿಮಾ ಮಾರುಕಟ್ಟೆಯಾಗಿ ಸಿಲಿಕಾನ್ ಸಿಟಿ ಹೊರಹೊಮ್ಮಿದೆ. ತಮಿಳುನಾಡಿನ ಚೆನ್ನೈನಲ್ಲಿ ಗರಿಷ್ಠ 190 ಇದ್ದರೆ, ಬೆಂಗಳೂರಿನಲ್ಲಿ ದರ ಆಕಾಶ ಮುಟ್ಟಿದೆ!

AA23 movie: 3ನೇ ಬಾರಿಗೆ ಅಲ್ಲು ಅರ್ಜುನ್‌ಗೆ ಜೋಡಿಯಾಗ್ತಾರಾ ನಟಿ ಪೂಜಾ ಹೆಗ್ಡೆ? ಹರಿದಾಡುತ್ತಿದೆ ಬಿಸಿ ಬಿಸಿ ಸುದ್ದಿ!

AA23: ಅಲ್ಲು ಅರ್ಜುನ್‌ಗೆ 3ನೇ ಬಾರಿಗೆ ನಾಯಕಿ ಆಗ್ತಾರಾ ಪೂಜಾ ಹೆಗ್ಡೆ?

‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಮತ್ತು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'AA23' ಸಿನಿಮಾಗೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಈ ಹಿಂದೆ 'ಡಿಜೆ' ಹಾಗೂ 'ಅಲಾ ವೈಕುಂಠಪುರಮುಲೊ' ಚಿತ್ರಗಳಲ್ಲಿ ಭರ್ಜರಿ ಯಶಸ್ಸು ಕಂಡಿದ್ದ ಈ ಜೋಡಿ ಮೂರನೇ ಬಾರಿಗೆ ಒಂದಾಗುವ ನಿರೀಕ್ಷೆಯಿದೆ.

ʻಶೋಕಿಗೋಸ್ಕರ ಸಿನಿಮಾ ಮಾಡಬಾರದುʼ; ʻಜಾಲಿʼ ಚಿತ್ರದ ಟ್ರೇಲರ್‌ ಲಾಂಚ್‌ನಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಕಿವಿಮಾತು

‘ಜಾಲಿ’ ಟ್ರೇಲರ್ ರಿಲೀಸ್‌ ಮಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ

ಯುವ ಪ್ರತಿಭೆಗಳ 'ಜಾಲಿ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಕೇವಲ ಶೋಕಿಗಾಗಿ ಸಿನಿಮಾ ಮಾಡದೆ ಜವಾಬ್ದಾರಿಯಿಂದ ಕಥೆ ಮತ್ತು ಬಜೆಟ್ ಸ್ಪಷ್ಟತೆಯೊಂದಿಗೆ ಸಿನಿಮಾ ನಿರ್ಮಿಸಿ ಎಂದು ಚಿತ್ರತಂಡಗಳಿಗೆ ಕಿವಿಮಾತು ಹೇಳಿದ್ದಾರೆ.

Sanjay Dutt: ನೀನು ಅತ್ಯುತ್ತಮ ತಾಯಿ, ಪತ್ನಿ ಮತ್ತು ಸ್ನೇಹಿತೆ! ಸಂಜಯ್ ದತ್ ಭಾವನಾತ್ಮಕ ಪೋಸ್ಟ್‌

ಪತ್ನಿ ಮಾನ್ಯತಾಗೆ ಕ್ಯೂಟ್‌ ಆಗಿ ವಿಶ್‌ ಮಾಡಿದ ಸಂಜಯ್ ದತ್!

Sanjay Dutt: ಪತ್ನಿ ಮಾನ್ಯತಾ ದತ್ ಅವರ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ವಿಶ್‌ ಮಾಡಿದ್ದಾರೆ. ಬುಧವಾರ ಇನ್ಸ್ಟಾಗ್ರಾಮ್ ನಲ್ಲಿ ಸಂಜಯ್ ದಂಪತಿ ನಗುತ್ತಿರುವ ಮತ್ತು ಒಟ್ಟಿಗೆ ಪೋಸ್ ನೀಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಚಿತ್ರಗಳು ಅವರ ಜೀವನದ ಹಲವಾರು ಸಂತೋಷದ ಕ್ಷಣಗಳನ್ನು ಸೆರೆಹಿಡಿದಿವೆ. ಪೋಸ್ಟ್ ಜೊತೆಗೆ ಹುಟ್ಟುಹಬ್ಬದ (Birthday) ಹೃದಯಸ್ಪರ್ಶಿ ಸಂದೇಶವಿತ್ತು,

Lenin Event: ಅಖಿಲ್ 'ಲೆನಿನ್' ಸಿನಿಮಾದಲ್ಲಿ ಅದೊಂದು ತಪ್ಪು ಮಾಡಿಬಿಟ್ಟೆ; ನಟ ನಾಗಾರ್ಜುನ

ಅಖಿಲ್ 'ಲೆನಿನ್' ಸಿನಿಮಾದಲ್ಲಿ ಅದೊಂದು ತಪ್ಪು ಮಾಡಿಬಿಟ್ಟೆ; ನಾಗಾರ್ಜುನ

Lenin Event: ತೆಲುಗು ಚಿತ್ರರಂಗದಲ್ಲಿ ದೊಡ್ಡ ಬಜೆಟ್ ಸಿನಿಮಾಗಳ ಬಿಡುಗಡೆ ದಿನಾಂಕಗಳನ್ನು ಘೋಷಿಸಿ ನಂತರ ಕೊನೆಗೆ ಮುಂದೂಡುವುದು ಸಾಮಾನ್ಯವಾಗಿದೆ. ಇದರಿಂದ ಪ್ರೇಕ್ಷಕರು ನಿರೀಕ್ಷೆಯಲ್ಲಿ ಇದ್ದು ನಿರಾಸೆಗೊಳ್ಳುತ್ತಿದ್ದಾರೆ. ಚಿತ್ರೋದ್ಯಮಕ್ಕೂ ಇದು ಕೆಟ್ಟ ಪರಿಣಾಮ ಬೀರುತ್ತಿದೆ.‘ಲೆನಿನ್’ (Lenin Movie) ಚಿತ್ರದ ಸಕ್ಸೆಸ್‌ ಮೀಟ್‌ನಲ್ಲಿ ಹಿರಿಯ ನಟ ನಾಗಾರ್ಜುನ್ ಈ ವಿಷಯವನ್ನು ಎತ್ತಿ ಹಿಡಿದರು.

Hyder Ali Khan: ಊಟಕ್ಕೂ ಪರದಾಡುತ್ತಿದ್ದಾರೆ; ಅಮೀರ್ ಖಾನ್ ಮಲ-ಸಹೋದರನ ಜೊತೆಗಿನ ಮದುವೆ ಬಗ್ಗೆ ನಟಿ ಇವಾ ಗ್ರೋವರ್ ಮಾತು

ಹಲ್ಲೆ ನಡೆಸಲಾಗಿತ್ತು! ಅಮೀರ್ ಮಲ-ಸಹೋದರನ ಬಗ್ಗೆ ನಟಿ ಇವಾ ಗ್ರೋವರ್ ಮಾತು

Hyder Ali Khan: ಅಮೀರ್ ಖಾನ್ ಅವರ ಮಲಸಹೋದರ ಹೈದರ್ ಅಲಿ ಖಾನ್ (Hyder Ali Khan) ಅವರೊಂದಿಗಿನ ತಮ್ಮ ವಿವಾಹವನ್ನು ನೆನಪಿಸಿಕೊಂಡರು, ಅವರ ಸಂಬಂಧದ ಸಮಯದಲ್ಲಿ ದೈಹಿಕ ಕಿರುಕುಳವನ್ನು ಎದುರಿಸಿದ್ದೇನೆ ಎಂದು ಆರೋಪಿಸಿದರು.ಪ್ರಸ್ತುತ ಸ್ಥಿತಿಯ ಬಗ್ಗೆಯೂ ಮಾತನಾಡಿದರು. ಹೈದರ್ ಅಲಿ ಖಾನ್ ಜೊತೆಗಿನ ತನ್ನ ನಿಂದನೀಯ ದಾಂಪತ್ಯವನ್ನು ನೆನಪಿಸಿಕೊಳ್ಳುತ್ತಾರೆ ಇವಾ ಗ್ರೋವರ್.

Amitabh Bachchan: ಅಮಿತಾಭ್ ಬಚ್ಚನ್​ಗೆ ಸರ್ಜರಿ? ಕೊನೆಗೂ ಸ್ಪಷ್ಟನೆ ಕೊಟ್ಟ ನಟ

ಅಮಿತಾಭ್ ಬಚ್ಚನ್​ಗೆ ಸರ್ಜರಿ? ಕೊನೆಗೂ ಸ್ಪಷ್ಟನೆ ಕೊಟ್ಟ ನಟ

Amitabh Bachchan: ತಮ್ಮ ಪೋಸ್ಟ್ ತಮ್ಮ ಬಗ್ಗೆ ಅಲ್ಲ, ಇತ್ತೀಚೆಗೆ ಮುಕ್ತಾಯಗೊಂಡ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾದ ಫುಟ್‌ಬಾಲ್ ತಂಡ ಸ್ಪೇನ್ ವಿರುದ್ಧ ಸೋತ ಬಗ್ಗೆ ಎಂದು ನಟ ಹೇಳಿದ್ದಾರೆ. "ನಾನು ಅರ್ಜೆಂಟೀನಾದ ಸೋಲನ್ನು (ಫಿಫಾ ವಿಶ್ವಕಪ್‌ನಲ್ಲಿ ಸ್ಪೇನ್ ವಿರುದ್ಧ) ಮತ್ತು ಮೆಸ್ಸಿಯನ್ನು ಸೋತ ಚಾಂಪಿಯನ್ ಎಂದು ಉಲ್ಲೇಖಿಸುತ್ತಿದ್ದೆ. ಜನರು ಇದು ನನ್ನನ್ನು ಉಲ್ಲೇಖಿಸುತ್ತದೆ ಎಂದು ಭಾವಿಸಿದ್ದಾರೆ" ಎಂದು ನಟ ಹೇಳಿದರು.

Kajal Aggarwal: ಸೌತ್‌ನವರ ಈ ಗುಣವನ್ನು ಬಾಲಿವುಡ್‌ ಕಲಿಯಬೇಕು ಎಂದ ಕಾಜಲ್ ಅಗರ್ವಾಲ್

ಸೌತ್‌ನವರ ಈ ಗುಣವನ್ನು ಬಾಲಿವುಡ್‌ ಕಲಿಯಬೇಕು ಎಂದ ಕಾಜಲ್!

Kajal Aggarwal: ಶುಭಂಕರ್ ಮಿಶ್ರಾ (Shubashankar Mishra) ಅವರೊಂದಿಗಿನ ಇತ್ತೀಚಿನ ಚಾಟ್‌ನಲ್ಲಿ, ಬಾಲಿವುಡ್‌ಗಿಂತ ದಕ್ಷಿಣ ಚಿತ್ರರಂಗಕ್ಕೆ ಆದ್ಯತೆ ನೀಡಿದ್ದರು ಎಂಬುದರ ಕುರಿತು ಹೇಳಿಕೊಂಡಿದ್ದಾರೆ. ಬಾಲಿವುಡ್ ದಕ್ಷಿಣದಿಂದ ಸಮಯಪಾಲನೆಯನ್ನು ಕಲಿಯಬೇಕು. ಹಿಂದಿ ಸಿನಿಮಾಗಳಲ್ಲಿ ಯಾವುದೂ ಸಮಯಕ್ಕೆ ಸರಿಯಾಗಿ ಬರುವುದಿಲ್ಲ. ನಾನು ಸಮಯಕ್ಕೆ ಸರಿಯಾಗಿ ತಲುಪಲು ಒಗ್ಗಿಕೊಂಡಿದ್ದೇನೆ ಮತ್ತು ಅದು ನನಗೆ ಇಷ್ಟ. ಹಿಂದಿಯಲ್ಲಿ ಸಮಯ ತುಂಬಾ ಸರಿಯಿಲ್ಲ" ಎಂದು ಹೇಳಿದರು.

'ಹುಡ್ಗೀರು ಡೇಂಜರಸ್' ಅಂತ ಹಾಡಿದ ನಟ ʻನೀನಾಸಂʼ ಸತೀಶ್‌; ‘ಅಯೋಗ್ಯ 2’ ಚಿತ್ರದ ಮತ್ತೊಂದು ಕ್ಯಾಚಿ ಸಾಂಗ್‌ ರಿಲೀಸ್‌

'ಹುಡ್ಗೀರು ಡೇಂಜರಸ್' ಅಂತ ಹಾಡೋಕೆ ಶುರು ಮಾಡಿದ ನಟ ಸತೀಶ್‌ ʻನೀನಾಸಂʼ

ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ನಟನೆಯ 'ಅಯೋಗ್ಯ 2' ಚಿತ್ರದ ‘ಹುಡ್ಗೀರ್ ಡೇಂಜರಸ್’ ಎಂಬ ಮೂರನೇ ಹಾಡು ಹುಬ್ಬಳ್ಳಿಯಲ್ಲಿ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಈ ಹಾಡಿಗೆ ಗಾಯಕ ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ.

Balakrishna: ಶೂಟಿಂಗ್ ಸೆಟ್​ನಲ್ಲಿ ಅವಘಡ; ಬಾಲಯ್ಯ ಬಗ್ಗೆ ಟ್ವೀಟ್ ಮಾಡಿದ ಜ್ಯೂ ಎನ್​​ಟಿಆರ್

ಶೂಟಿಂಗ್ ಸೆಟ್​ನಲ್ಲಿ ಅವಘಡ; ಬಾಲಯ್ಯ ಬಗ್ಗೆ ಟ್ವೀಟ್ ಮಾಡಿದ Jr NTR

NBK 111 : ಚಿತ್ರೀಕರಣದ ಸಮಯದಲ್ಲಿ ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ ಗಾಯಗೊಂಡಿದ್ದಾರೆ. ಇದಕ್ಕಾಗಿ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ಚಿತ್ರತಂಡ ಸಾಮಾಜಿಕ ಮಾಧ್ಯಮದಲ್ಲಿ ದೃಢಪಡಿಸಿದೆ. ಇದೀಗ ಜೂ ಎನ್​​ಟಿಆರ್ (Jr NTR) ಅವರು ಚಿಕ್ಕಪ್ಪನ ಆರೋಗ್ಯದ ಕುರಿತು ಕಾಳಜಿ ವ್ಯಕ್ತಪಡಿಸಿದ್ದು, ಬಾಲಯ್ಯ ಬಗ್ಗೆ ಟ್ವೀಟ್ ಮಾಡಿದ್ದಾರೆ.ಜ್ಯೂ ಎನ್​​ಟಿಆರ್ ಮತ್ತು ಚಿಕ್ಕಪ್ಪ ಬಾಲಯ್ಯ ನಡುವೆ ಮುನಿಸು ಇತ್ತು ಎನ್ನಲಾಗಿತ್ತು. ಆದರೆ ಜ್ಯೂ ಎನ್​​ಟಿಆರ್ ಆ ಮುನಿಸು ಮರೆತು, ಚಿಕ್ಕಪ್ಪನ ಬಗ್ಗೆ ಟ್ವೀಟ್ ಮಾಡಿದ್ದಾರೆ.

'ಸರ್ಕಾರಿ ನ್ಯಾಯಬೆಲೆ ಅಂಗಡಿ' ಟ್ರೇಲರ್ ರಿಲೀಸ್: ಜುಲೈ 31ಕ್ಕೆ ತೆರೆಗೆ ಬರಲಿದೆ ಕುಮಾರ್ ಬಂಗಾರಪ್ಪ-ರಾಗಿಣಿ ಸಿನಿಮಾ!

ಕುಮಾರ್‌ ಬಂಗಾರಪ್ಪ ನಟನೆಯ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಟ್ರೇಲರ್‌ ರಿಲೀಸ್‌

ಸಾರ್ವಜನಿಕ ಪಡಿತರ ವ್ಯವಸ್ಥೆಯ ಲೋಪದೋಷಗಳು ಹಾಗೂ ಅವ್ಯವಹಾರಗಳ ಕುರಿತಾದ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಕುಮಾರ್ ಬಂಗಾರಪ್ಪ ಹಾಗೂ ರಾಗಿಣಿ ದ್ವಿವೇದಿ ಅಭಿನಯದ ಈ ಸಾಮಾಜಿಕ ಕಳಕಳಿಯ ಚಿತ್ರವನ್ನು ಮಂಡ್ಯ ಗ್ರಾಮೀಣ ಭಾಗದಲ್ಲಿ 52 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

'ಸಿಟಿ ಲೈಟ್ಸ್' ಚಿತ್ರದ 'ಕಂದಮ್ಮ ಕಂದಮ್ಮ' ಸಾಂಗ್ ರಿಲೀಸ್: ಅಪ್ಪ ʻದುನಿಯಾʼ ವಿಜಯ್ ಕುಮಾರ್‌ ಬಗ್ಗೆ ಮಗಳು ಮೋನಿಷಾ ಹೇಳಿದ್ದೇನು?

ದುನಿಯಾ ವಿಜಯ್‌ ಪುತ್ರಿಯ ʻಸಿಟಿ ಲೈಟ್ಸ್ʼ ಚಿತ್ರದ ʻಕಂದಮ್ಮʼ ಸಾಂಗ್‌ ರಿಲೀಸ್

‘ದುನಿಯಾ’ ವಿಜಯ್ ಕುಮಾರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ, ವಿನಯ್ ರಾಜ್‌ಕುಮಾರ್ ಹಾಗೂ ಮಗಳು ಮೋನಿಷಾ ನಟನೆಯ 'ಸಿಟಿ ಲೈಟ್ಸ್' ಚಿತ್ರದ 'ಕಂದಮ್ಮ ಕಂದಮ್ಮ' ಹಾಡು ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತದ, ಸಂಜಿತ್ ಹೆಗಡೆ ಹಾಡಿರುವ ಈ ಗೀತೆಯನ್ನು ನಾಗಾರ್ಜುನ ಶರ್ಮಾ ಬರೆದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ರನ್ನು ಭೇಟಿಯಾದ ಪತ್ನಿ ವಿಜಯಲಕ್ಷ್ಮಿ, ನಟಿ ರಕ್ಷಿತಾ ಪ್ರೇಮ್!

ದರ್ಶನ್ ನೋಡಲು ಜೈಲಿಗೆ ಆಗಮಿಸಿದ ಪತ್ನಿ ವಿಜಯಲಕ್ಷ್ಮಿ-ನಟಿ ರಕ್ಷಿತಾ ಪ್ರೇಮ್‌

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಮಂಗಳವಾರ (ಜುಲೈ 21) ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಖ್ಯಾತ ನಟಿ ರಕ್ಷಿತಾ ಪ್ರೇಮ್ ಭೇಟಿಯಾಗಿದ್ದಾರೆ. ಪ್ರತ್ಯೇಕ ಕಾರುಗಳಲ್ಲಿ ಬಂದ ಇಬ್ಬರು ದರ್ಶನ್ ಯೋಗಕ್ಷೇಮ ವಿಚಾರಿಸಿದ್ದಾರೆ.

Loading...