ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

666 Operation Dream Theatre: 6 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ʻಕನ್ನಡತಿʼ ಪ್ರಿಯಾಂಕಾ ಮೋಹನ್!

ಶಿವಣ್ಣ - ಧನಂಜಯ್ ಚಿತ್ರಕ್ಕಾಗಿ ಕನ್ನಡಕ್ಕೆ ಮರಳಿದ ನಟಿ ಪ್ರಿಯಾಂಕಾ ಮೋಹನ್!

Actress Priyanka Mohan: ಆರು ವರ್ಷಗಳ ಸುದೀರ್ಘ ವಿರಾಮದ ನಂತರ ʻಕನ್ನಡತಿʼ ಪ್ರಿಯಾಂಕಾ ಮೋಹನ್, ʻ666 ಆಪರೇಷನ್ ಡ್ರೀಮ್ ಥಿಯೇಟರ್ʼ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಶಿವಣ್ಣ ಮತ್ತು ಧನಂಜಯ್ ಪ್ರಮುಖ ಪಾತ್ರಗಳಲ್ಲಿರುವ ಈ ಚಿತ್ರವು ಹೇಮಂತ್ ಎಂ. ರಾವ್ ನಿರ್ದೇಶನದಲ್ಲಿ ಮೂಡಿಬರುತ್ತಿದೆ.

Andhra King Taluka Trailer: ಉಪೇಂದ್ರ ಈಗ ‘ಆಂಧ್ರ ಕಿಂಗ್’; ಟಾಲಿವುಡ್‌ನಲ್ಲಿ ʻರಿಯಲ್‌ ಸ್ಟಾರ್‌ʼ ಹವಾ ಜೋರು!

ಉಪೇಂದ್ರ ಈಗ ‘ಆಂಧ್ರ ಕಿಂಗ್’; ʻರಿಯಲ್‌ ಸ್ಟಾರ್‌ʼ ಹವಾ ಜೋರು!

Upendra: ಸ್ಯಾಂಡಲ್‌ವುಡ್‌ ರಿಯಲ್ ಸ್ಟಾರ್ ಉಪೇಂದ್ರ ನಟಿಸಿರುವ ತೆಲುಗು ಸಿನಿಮಾ ‘ಆಂಧ್ರ ಕಿಂಗ್ ತಾಲೂಕ’. ಇದು ಅಭಿಮಾನಿ ಮತ್ತು ಸ್ಟಾರ್ ಹೀರೋ ನಡೆಯುವ ಕತೆ. ಉಪೇಂದ್ರ ಅವರಿಗೆ ತೆಲುಗಿನಲ್ಲಿ ಇದು ಒಂಬತ್ತನೇ ಸಿನಿಮಾ. ತೆಲುಗು ಚಿತ್ರಂಗದಲ್ಲಿಯೂ ಸಹ ಉಪ್ಪಿ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಈ ಬಾರಿ ಸ್ಟಾರ್ ಹೀರೋ ಆಗಿಯೇ ಉಪ್ಪಿ ನಟಿಸಿದ್ದು ಈ ಸಿನಿಮಾದಿಂದ ಅವರಿಗೆ ತೆಲುಗಿನಲ್ಲಿ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ.

Rashmika Mandanna: ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ, ಬೇರೆ ಆಯ್ಕೆ ಇರಲಿಲ್ಲ; ಮಾಜಿ ಪ್ರೇಮಿ ಬಗ್ಗೆ ರಶ್ಮಿಕಾ ಮಂದಣ್ಣ ಆರೋಪ

ವಿಷಕಾರಿ ಸಂಬಂಧದಲ್ಲಿ ಸಿಲುಕಿದ್ದೆ ಎಂದ ರಶ್ಮಿಕಾ ಮಂದಣ್ಣ

Rashmika Mandanna: ಇತ್ತೀಚೆಗೆ ನಟಿ ರಶ್ಮಿಕಾ ತಮ್ಮ ಹಿಂದಿನ ರಿಲೇಶಿನ್‌ಶಿಪ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ನೀವು ಯಾರೊಂದಿಗೆ ಇರಬೇಕೆಂದು ಬಯಸುತ್ತೀರಿ ಅಂತವರನ್ನ ಮೊದಲು ಆಯ್ಕೆ ಮಾಡಿ ಎಂದು ಹೇಳಿಕೊಂಡಿದ್ದಾರೆ. ನಾನು ಹಿಂದೊಮ್ಮೆ ಇಂಥಹಾ ರಿಲೇಷನ್​​​ನಲ್ಲಿ ಇದ್ದೆ ಎಂದು ಪರೋಕ್ಷವಾಗಿ ರಕ್ಷಿತ್‌ ಶೆಟ್ಟಿ ವಿರುದ್ಧ ಆರೋಪ ಮಾಡಿದ್ದಾರೆ. ಹಿಂದೆ ತಾವಿದ್ದ ರಿಲೇಷನ್​​ನಲ್ಲಿ ಹೇರಿಕೆ ಇತ್ತು, ನನ್ನ ತನಕ್ಕೆ ಅವಕಾಶ ಇರಲಿಲ್ಲ. ನನಗೆ ಆಯ್ಕೆಗಳೇ ಇರಲಿಲ್ಲ ಎಂದು ಪರೋಕ್ಷವಾಗಿ ನಟಿ ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

BBK 12: ʻನಾವೇನ್‌ ಕೋತಿಗಳಾ? ಕೈಗೊಂಬೆ ಅಲ್ಲ ನಾನುʼ; ಒಂದೇ ಟೀಮ್‌ನಲ್ಲಿದ್ರು ಅಶ್ವಿನಿ ಗೌಡ ಮೇಲೆ ಧ್ರುವಂತ್‌ ರಾಂಗ್!‌

BBK 12: ಅಶ್ವಿನಿ ಗೌಡ ಮೇಲೆ ಏಕಾಏಕಿ ರಾಂಗ್‌ ಆದ ಧ್ರುವಂತ್!‌ ಕಾರಣವೇನು?

Bigg Boss Kannada 12 Dhruvanth: ಅಶ್ವಿನಿ ಗೌಡ ಮತ್ತು ಅವರ ತಂಡದ ಸದಸ್ಯ ಧ್ರುವಂತ್ ನಡುವೆ ಆಟದ ಆಯ್ಕೆಗೆ ಸಂಬಂಧಿಸಿದಂತೆ ಭಾರಿ ಮಾತಿನ ಚಕಮಕಿ ನಡೆಯಿತು. ಧನುಷ್ ಬದಲು ತನಗೆ ಅವಕಾಶ ನೀಡುವಂತೆ ಅಶ್ವಿನಿಗೆ ಧ್ರುವಂತ್ ಒತ್ತಾಯಿಸಿದರು. "ನನ್ನನ್ನು ಮೂಲೆಯಲ್ಲಿ ಕೂರಿಸಬೇಡಿ, ನಾನು ನಿಮ್ಮ ಕೈಗೊಂಬೆ ಅಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೊನೆಗೆ ಏನಾಯಿತು? ಈ ಸ್ಟೋರಿ ಓದಿ.

ತಮಿಳು Saregamapa ಶೋನಲ್ಲಿ ಕನ್ನಡತಿಯ ಹವಾ! ಫಿನಾಲೆ ತಲುಪಿದ ಗಾಯಕಿ ಶಿವಾನಿ ನವೀನ್‌

ತಮಿಳು Saregamapa ಶೋನಲ್ಲಿ ಫಿನಾಲೆ ತಲುಪಿದ ʻಕನ್ನಡತಿʼ ಶಿವಾನಿ

Saregamapa Seniors Season 5 Finale: ಚಿಕ್ಕಮಗಳೂರಿನ ಪ್ರತಿಭೆ ಶಿವಾನಿ ನವೀನ್‌ ಅವರು ತಮಿಳಿನ 'ಸರಿಗಮಪ ಸೀನಿಯರ್ಸ್ ಸೀಸನ್ 5' ಫಿನಾಲೆ ತಲುಪಿದ್ದಾರೆ. ಈಗಾಗಲೇ ಕನ್ನಡದ 'ಸರಿಗಮಪ ಲಿಟಲ್ ಚಾಂಪ್ಸ್ 19' ಶೋನಲ್ಲಿ ರನ್ನರ್ ಅಪ್ ಆಗಿದ್ದ ಶಿವಾನಿ, ತಮ್ಮ ವಿಶಿಷ್ಟ ಕಂಠಸಿರಿಯಿಂದ ತಮಿಳು ವೀಕ್ಷಕರ ಮನ ಗೆದ್ದಿದ್ದಾರೆ.

ʻರಿಷಬ್‌ ಶೆಟ್ಟಿ ಕಾರ್ಯವೈಖರಿ ಶ್ಲಾಘನೀಯʼ; ಭೇಟಿಯಾದ ಡಿವೈನ್‌ ಸ್ಟಾರ್‌ಗೆ DCM ಡಿಕೆ ಶಿವಕುಮಾರ್‌ ಮೆಚ್ಚುಗೆ

DCM ಡಿಕೆ ಶಿವಕುಮಾರ್‌ರನ್ನು ಭೇಟಿಯಾದ ರಿಷಬ್‌ ಶೆಟ್ಟಿ; ಕಾರಣವೇನು?

Rishab Shetty Meets DCM DK Shivakumar: ನಟ ನಿರ್ದೇಶಕ ರಿಷಬ್‌ ಶೆಟ್ಟಿ ಅವರು 'ಕಾಂತಾರ: ಚಾಪ್ಟರ್‌ 1' ಯಶಸ್ಸಿನ ನಂತರ ಡಿಸಿಎಂ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಡಿಕೆ ಶಿವಕುಮಾರ್‌ ಅವರು "ನೆಲಮೂಲದ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ ರಿಷಬ್‌ ಅವರ ಕಾರ್ಯವೈಖರಿ ಶ್ಲಾಘನೀಯ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Aishwarya Rai: ಪ್ರಧಾನಿ ಮೋದಿಯ ಪಾದ ಮುಟ್ಟಿ ನಮಸ್ಕರಿಸಿದ ನಟಿ ಐಶ್ವರ್ಯಾ ರೈ

ಪ್ರಧಾನಿ ಮೋದಿಯ ಕಾಲು ಮುಟ್ಟಿ ನಮಸ್ಕರಿಸಿದ ನಟಿ ಐಶ್ವರ್ಯಾ ರೈ

Aishwarya Rai touched PM Modi’s feet: ಶ್ರೀ ಸತ್ಯಸಾಯಿ ಬಾಬಾ ಅವರ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಭಾಷಣ ಮಾಡಿದ ನಟಿ ಐಶ್ವರ್ಯಾ ರೈ ಅವರು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಹೇಳಿದ್ದಾರೆ. ಕೊನೆಗೆ ಪ್ರಧಾನಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದು, ಎಲ್ಲರ ಗಮನಸೆಳೆದಿದೆ.

Nayana: ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ನಯನಾ ವಿರುದ್ಧ ಕಲಬುರಗಿಯಲ್ಲಿ  FIR ದಾಖಲು; ಅಷ್ಟಕ್ಕೂ ಆಗಿದ್ದೇನು?

ʻಕಾಮಿಡಿ ಕಿಲಾಡಿಗಳುʼ ನಯನಾ ವಿರುದ್ಧ FIR ದಾಖಲು!

Comedy Khiladigalu Nayana Atrocity Case: ಕಲಬುರಗಿಯ ಸಬ್‌ಅರ್ಬನ್‌ ಪೊಲೀಸ್ ಠಾಣೆಯಲ್ಲಿ ನಟಿ ನಯನಾ ವಿರುದ್ಧ ದಲಿತ ಸೇನೆಯು ದೂರು ದಾಖಲಿಸಿದೆ. ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ನಯನಾ ಅವರು ದಲಿತ ಸಮುದಾಯವನ್ನು ಉದ್ದೇಶಿಸಿ ಅವಾಚ್ಯ ಮತ್ತು ನಿಷೇಧಿತ ಪದಗಳನ್ನು ಬಳಸಿದ್ದಾರೆಂದು ದೂರುದಾರರು ಆರೋಪಿಸಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Nenapugala Maatu Madhura Movie: ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ ʼನೆನಪುಗಳ ಮಾತು ಮಧುರʼ ಚಿತ್ರದ ಟ್ರೇಲರ್ ಔಟ್‌

ʼನೆನಪುಗಳ ಮಾತು ಮಧುರʼ ಚಿತ್ರದ ಟ್ರೇಲರ್ ಔಟ್‌

Sandalwood News: ಅಫ್ಜಲ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನೃತ್ಯ ನಿರ್ದೇಶನದ ಜತೆಗೆ ನಿರ್ದೇಶನವನ್ನು ಮಾಡಿರುವ ಹಾಗೂ RED & WHITE ಸೆವೆನ್ ರಾಜ್ ನಟಿಸಿ, ನಿರ್ಮಿಸಿರುವ ʼನೆನಪುಗಳ ಮಾತು ಮಧುರʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಜನವರಿಯಲ್ಲಿ ರಿಷಬ್ ಶೆಟ್ಟಿ ಹೊಸ ಸಿನಿಮಾ ಶುರು; ಈ ಚಿತ್ರವನ್ನ ಆರೇ ತಿಂಗಳಲ್ಲಿ ಮುಗಿಸ್ತಾರಾ ʻಡಿವೈನ್‌ ಸ್ಟಾರ್‌ʼ?

ಮುಂದಿನ ಸಿನಿಮಾಕ್ಕೆ ಆರು ತಿಂಗಳು ಕಾಲ್‌ಶೀಟ್‌ ನೀಡಿದ ರಿಷಬ್‌ ಶೆಟ್ಟಿ!

Rishab Shetty New Movie Announcement: ʻಕಾಂತಾರ: ಚಾಪ್ಟರ್‌ 1ʼ ಚಿತ್ರದ ಯಶಸ್ಸಿನ ಬಳಿಕ ನಟ ರಿಷಬ್‌ ಶೆಟ್ಟಿ ಅವರ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಮೂಡಿದೆ. ಅವರ ಹೊಸ ಸಿನಿಮಾವು 2026ರ ಜನವರಿಯಿಂದ ಆರಂಭಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆಯಂತೆ. ರಿಷಬ್‌ ಅವರು ಈ ಚಿತ್ರಕ್ಕೆ ಆರು ತಿಂಗಳು ಕಾಲ್‌ಶೀಟ್‌ ನೀಡಿದ್ದು, ಅದೇ ವರ್ಷದ ಜೂನ್‌-ಜುಲೈ ಹೊತ್ತಿಗೆ ಶೂಟಿಂಗ್ ಮುಗಿಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಕಡಲೆ ಕಾಯಿ ಪರಿಷೆಯಲ್ಲಿ ಕಾಣಿಸಿಕೊಂಡ ಸ್ಯಾಂಡಲ್‌ವುಡ್‌ನ ʻಸ್ಟಾರ್‌ʼ ನಟಿ; ಯಾರಿರಬಹುದು ಗೆಸ್‌ ಮಾಡಿ!

ಕಡಲೆಕಾಯಿ ಪರಿಷೆಯಲ್ಲಿ ಮಾಸ್ಕ್ ಧರಿಸಿ ಸುತ್ತಾಡಿದ ʻಸ್ಟಾರ್‌ʼನಟಿ!

Kadalekai Parishe: ಬೆಂಗಳೂರಿನ ಬಸವನಗುಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸ್ಯಾಂಡಲ್‌ವುಡ್‌ನ ʻಡಿಂಪಲ್‌ ಕ್ವೀನ್ʼ ರಚಿತಾ ರಾಮ್‌ ಅವರು ಭೇಟಿ ನೀಡಿದ್ದಾರೆ. ಮಾಸ್ಕ್‌ ಧರಿಸಿ ತಮ್ಮ ತಂಡದೊಂದಿಗೆ ಜನಸಾಗರದ ಮಧ್ಯೆ ಸುತ್ತಾಡಿದ್ದಾರೆ ರಚಿತಾ ರಾಮ್. "18 ವರ್ಷಗಳ ಬಳಿಕ ಕಡಲೆಕಾಯಿ ಪರಿಷೆಗೆ ಹೋಗಿಬಂದೆ. ಎಂತಹ ಅದ್ಭುತ ಅನುಭವ ಇದು" ಎಂದು ರಚಿತಾ ರಾಮ್‌ ಸಂತಸ ಹಂಚಿಕೊಂಡಿದ್ದಾರೆ.

BBK 12: ʻನಾನು ಇರಲ್ಲ, ನನ್ನನ್ನು ಆಚೆ ಕಳಿಸಿ ಬಿಗ್‌ ಬಾಸ್‌ʼ; ಏಕಾಏಕಿ ಅಶ್ವಿನಿ ಗೌಡ ಹೀಗೆ ಹೇಳಲು ಕಾರಣ ಏನು?

BBK 12: 'ನನ್ನನ್ನು ಆಚೆ ಕಳಿಸಿ ಬಿಗ್‌ ಬಾಸ್‌' ಎಂದು ಕಣ್ಣೀರಿಟ್ಟ ಅಶ್ವಿನಿ

Bigg Boss Kannada 12 Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಕ್ಯಾಪ್ಟನ್‌ ರಘು ಮತ್ತು ಅಶ್ವಿನಿ ಗೌಡ ನಡುವೆ ಮನೆ ಕೆಲಸದ ವಿಚಾರವಾಗಿ ದೊಡ್ಡ ಜಗಳ ನಡೆದಿದೆ. ಬ್ಯಾಕ್‌ ಪೇಯ್ನ್‌ ಕಾರಣಕ್ಕೆ 10 ನಿಮಿಷ ರೆಸ್ಟ್‌ ಕೇಳಿದ್ದ ಅಶ್ವಿನಿಗೆ, "ನೆಟ್ಟಗೆ ಕೆಲಸ ಮಾಡೋಕೆ ಆಗಲ್ಲ" ಎಂದು ರಘು ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಅಶ್ವಿನಿ, "ಯಾವನೋ ನೀನು ಲೇಯ್" ಎಂದು ರಘುಗೆ ತಿರುಗೇಟು ನೀಡಿದ್ದಾರೆ. ನಂತರ "ನನ್ನನ್ನು ಹೊರಗೆ ಕಳುಹಿಸಿ ಬಿಗ್‌ ಬಾಸ್‌" ಎಂದು ಮನೆ ಬಾಗಿಲನ್ನು ಬಡಿದಿದ್ದಾರೆ ಅಶ್ವಿನಿ ಗೌಡ.

BBK 12: ‌ʻಬಿಗ್‌ ಬಾಸ್ʼ ಮನೆಯಲ್ಲಿ ಈ ವಾರ 10 ಮಂದಿಗೆ ಢವಢವ; ನಾಮಿನೇಟ್‌ ಆದವರ ಫುಲ್‌ ಲಿಸ್ಟ್‌ ಇಲ್ಲಿದೆ!

BBK 12: ಈ ವಾರ 10 ಮಂದಿಗೆ ಢವಢವ! ನಾಮಿನೇಟ್‌ ಆದವರು ಯಾರು?

Bigg Boss Kannada 12 Nomination: 'ಬಿಗ್‌ ಬಾಸ್‌' ಮನೆಯಲ್ಲಿ ಈ ವಾರ ಒಟ್ಟು 10 ಮಂದಿ ನಾಮಿನೇಟ್‌ ಆಗಿದ್ದು, ಎಲಿಮಿನೇಷನ್ ಹವಾ ಜೋರಾಗಿದೆ. "ಯೋಗ್ಯತೆ ಇಲ್ಲದವರು ಮನೆಯಲ್ಲಿ ಇರುವುದು ಅಪರಾಧ" ಎಂದು ಬಿಗ್‌ ಬಾಸ್‌ ನೀಡಿದ ಟಾಸ್ಕ್‌ನಲ್ಲಿ, 7 ಮಂದಿ ಮನೆಯ ಸದಸ್ಯರಿಂದ ನಾಮಿನೇಟ್‌ ಆಗಿದ್ದಾರೆ. ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್‌ ಮಾಡಲಾಗಿದೆ.

Aan Paavam Pollathathu OTT: ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಗಿಸುವ ಒಂದೊಳ್ಳೆ ಮೂವಿ; ಒಟಿಟಿ ಎಂಟ್ರಿ ಯಾವಾಗ?

ಹೊಟ್ಟೆ ಹುಣ್ಣಾಗುವಷ್ಟು ನಕ್ಕು ನಗಿಸುವ ಮೂವಿ; ಒಟಿಟಿ ಎಂಟ್ರಿ ಯಾವಾಗ?

OTT Movie: ಕಲೈಅರಸನ್ ತಂಗವೇಲ್ ನಿರ್ದೇಶನದ ಮತ್ತು ಯುವನ್ ಶಂಕರ್ ರಾಜ ಮತ್ತು ವೇದಿಕೆಕಾರನ್ಪಟ್ಟಿ ಎಸ್ ಶಕ್ತಿವೇಲ್ ನಿರ್ಮಾಣದ 'ಆನ್ ಪಾವಂ ಪೊಲ್ಲಥತು' ಚಿತ್ರವು ಈಗಾಗಲೇ OTT ಪ್ಲಾಟ್‌ಫಾರ್ಮ್ ಅನ್ನು ಘೋಷಿಸಿದೆ. ರಿಯೋ ರಾಜ್, ಮಾಳವಿಕಾ ಮನೋಜ್, ಆರ್‌ಜೆ ವಿಘ್ನೇಶ್ಕಾಂತ್, ಶೀಲಾ, ಜೆನ್ಸನ್ ಧಿವಾಕರ್ ತಾರಾಗಣವಿದೆ. ಸದ್ಯ ಸಿನಿಮಾ ವಿಮರ್ಶಕರಿಂದ ಪ್ರಶಂಸೆಯನ್ನು ಪಡೆಯುತ್ತಿದೆ. 7.3 ರ IMDb ರೇಟಿಂಗ್ ಗಳಿಸಿದೆ.

Dhruva Sarja: ʻಕೆಡಿʼ ಬಳಿಕ ʻಕ್ರಿಮಿನಲ್ʼ ಆದ ಧ್ರುವ ಸರ್ಜಾ; ಅದ್ದೂರಿಯಾಗಿ ಲಾಂಚ್‌ ಆಯ್ತು ಹೊಸ ಸಿನಿಮಾ!

Criminal: ʻಕೆಡಿʼ ಆದ್ಮೇಲೆ ʻಕ್ರಿಮಿನಲ್‌ʼ ಆದ ಧ್ರುವ ಸರ್ಜಾ!

Dhruva Sarja New Movie Name: ಆಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾಕ್ಕೆ 'ಕ್ರಿಮಿನಲ್‌' ಎಂದು ಟೈಟಲ್‌ ಇಡಲಾಗಿದೆ. ಪಕ್ಕಾ ಗ್ರಾಮೀಣ ಹಿನ್ನೆಲೆಯ ಈ ಚಿತ್ರವನ್ನು 'ಕೆರೆಬೇಟೆ' ಖ್ಯಾತಿಯ ರಾಜ್‌ ಗುರು ಬಿ. ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ರಚಿತಾ ರಾಮ್‌ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

Manya Anand: ʻಧನುಷ್‌ ಕರೆದರೂ ಬರಲ್ವಾʼ; ಮ್ಯಾನೇಜರ್‌ ಮೇಲೆ ʻಕಾಸ್ಟಿಂಗ್‌ ಕೌಚ್‌ʼ ಆರೋಪ ಮಾಡಿದ ನಟಿ ಮಾನ್ಯ ಆನಂದ್!‌

Manya Anand:'ಧನುಷ್‌ ಕರೆದರೂ ಬರಲ್ವಾ'; ನಟಿಗೆ ಹಿಂಗೆ ಕೇಳಿದವರು ಯಾರು?

Manya Anand accuses Dhanush's Manager: ತಮಿಳು ನಟ ಧನುಷ್‌ ಅವರ ಮ್ಯಾನೇಜರ್‌ ಮತ್ತು ನಿರ್ಮಾಣ ಸಂಸ್ಥೆ ವಂಡರ್‌ಬಾರ್ ಫಿಲ್ಮ್ಸ್‌ನ ಸಿಇಓ ಶ್ರೇಯಸ್‌ ಮೇಲೆ ನಟಿ ಮಾನ್ಯ ಆನಂದ್‌ ಕಾಸ್ಟಿಂಗ್‌ ಕೌಚ್‌ ಆರೋಪ ಮಾಡಿದ್ದಾರೆ. ಮಾನ್ಯ ಅವರನ್ನು ʻಕಮಿಟ್‌ಮೆಂಟ್‌ಗೆ ಒಪ್ಪಿಕೊಳ್ಳಬೇಕುʼ ಎಂದು ಶ್ರೇಯಸ್‌ ನೇರವಾಗಿ ಕೇಳಿದ್ದಾರಂತೆ!

Ranveer Singh: ಧುರಂಧರ್ ಟ್ರೈಲರ್‌ ಔಟ್‌; ಹಿಂದೆಂದೂ ಕಾಣದ ಉಗ್ರ ಅವತಾರದಲ್ಲಿ ರಣವೀರ್‌ ಸಿಂಗ್‌!

ಧುರಂಧರ್ ಟ್ರೈಲರ್‌ ಔಟ್‌; ಉಗ್ರ ಅವತಾರದಲ್ಲಿ ರಣವೀರ್‌ ಸಿಂಗ್‌!

Ranveer Singh: ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಸಿನಿಮಾಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿ ಗ್ನ ತೆಯನ್ನು ತಿಳಿಸುತ್ತದೆ. ಸಿನಿಮಾದಲ್ಲಿ ರಣವೀರ್ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಗೂಢಚಾರಿಯ ಪಾತ್ರ ದಲ್ಲಿ ಕಾಣಿಸಿಕೊಂಡಿದ್ದಾರೆ. ಗುಪ್ತಚರ ಅಧಿಕಾರಿಗಳ ಧೈರ್ಯ ಮತ್ತು ತ್ಯಾಗವನ್ನು ಹೇಳುವ ಕಥೆ ಇದಾಗಿದೆ.

Marutha Movie: ಪೊಲೀಸ್ ಅಧಿಕಾರಿಗಳಿಂದ ಬಹುನಿರೀಕ್ಷಿತ ʼಮಾರುತʼ ಚಿತ್ರ ವೀಕ್ಷಣೆ

ಪೊಲೀಸ್ ಅಧಿಕಾರಿಗಳಿಂದ ಬಹುನಿರೀಕ್ಷಿತ ʼಮಾರುತʼ ಚಿತ್ರ ವೀಕ್ಷಣೆ

Sandalwood News: ಡಾ.ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಮತ್ತು ಕೆ.ಮಂಜು - ರಮೇಶ್ ಯಾದವ್ ಈಶಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸಿರುವ ಬಹುನಿರೀಕ್ಷಿತ ಚಿತ್ರ ʼಮಾರುತʼ ಚಿತ್ರವನ್ನು ಪೊಲೀಸ್‌ ಅಧಿಕಾರಿಗಳು ವೀಕ್ಷಿಸಿದ್ದಾರೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

BBK 12: ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು; ಬಿಗ್‌ ಬಾಸ್‌ ಮನೆಯಲ್ಲಿ ಅದೊಂದು ಮಿಸ್ಟೇಕ್‌ ಆಗಬಾರ್ದಿತ್ತು!

BBK12: ಗಿಲ್ಲಿ ಮೇಲೆ ಕೇಸ್‌! ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದ ಮಹಿಳಾ ಆಯೋಗ

Bigg Boss 12 Gilli Nata: ಗಿಲ್ಲಿ ನಟ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಮನೆಯ ಸದಸ್ಯೆ ರಿಷಾ ಗೌಡ ಅವರ ಬಟ್ಟೆಗಳನ್ನು ಬಾತ್‌ರೂಮ್‌ನಿಂದ ಹೊರಹಾಕಿದ ಗಿಲ್ಲಿ ನಟನ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ದಾಖಲಾಗಿದೆ. ಕುಶಲ ಎಂಬುವವರು ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ, ಆಯೋಗವು ಈ ಸಂಬಂಧ ಪೊಲೀಸರಿಗೆ ಪತ್ರ ಬರೆದಿದೆ.

BBK 12: ಗಿಲ್ಲಿ ನಟ ಹೇಳೋ ಮಾತಿಂದ ಅಶ್ವಿನಿ ಗೌಡಗೆ ನೋವಾಯ್ತು; ಕಣ್ಣೀರಿಟ್ಟ ರಾಜಮಾತೆಗೆ ಸಾಂತ್ವನ ಮಾಡಿದ್ಯಾರು?

Bigg Boss 12: ಗಿಲ್ಲಿ ಮಾತಿನಿಂದ ಅಶ್ವಿನಿಗೆ ಬೇಸರ! ಕಣ್ಣೀರಿಟ್ಟ ರಾಜಮಾತೆ!

BBK 12 Ashwini Gowda: ಬಿಗ್‌ ಬಾಸ್‌ ಮನೆಯಲ್ಲಿ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ನಡುವಿನ ವೈಮನಸ್ಸು ಈಗ ತಾರಕಕ್ಕೇರಿದೆ. ಗಿಲ್ಲಿ ನಟ ಕೊಟ್ಟ ಟಾಂಗ್‌ಗೆ ಅಶ್ವಿನಿ ಗೌಡ ತೀವ್ರವಾಗಿ ನೊಂದುಕೊಂಡು ಕಣ್ಣೀರಿಟ್ಟಿದ್ದಾರೆ. 'ಮರ್ಯಾದೆಗಾಗಿ ಬದುಕುತ್ತಿದ್ದೇನೆ' ಎಂದು ಅಶ್ವಿನಿ ನೋವು ತೋಡಿಕೊಂಡಿದ್ದಾರೆ. ಅಶ್ವಿನಿಗೆ ಧನುಷ್ ಸಾಂತ್ವನ ಹೇಳಿದ್ದಾರೆ. ಈ ವೇಳೆ ಗಿಲ್ಲಿಗೆ 'ವ್ಯಾಲ್ಯೂ ಇಲ್ಲ' ಎಂಬ ಮಾತುಗಳೂ ಬಂದಿವೆ.

Bigg Boss 12: ಅದೊಂದು ವಿಚಾರಕ್ಕಾಗಿ ಜೈಲಿಗೆ ಹೋಗಿದ್ದ ʻಕಾಕ್ರೋಚ್‌ʼ ಸುಧಿ! ಈ ಪ್ರಕರಣ ಸುಖಾಂತ್ಯವಾಗಿದ್ದೇಗೆ?

BBK 12: ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ಸುಧಿ ಜೈಲಿಗೆ ಹೋಗಿದ್ದೇಕೆ?

Cockroach Sudhi Marriage Story: ಬಿಗ್‌ ಬಾಸ್‌ನಿಂದ ಕಾಕ್ರೋಚ್‌ ಸುಧಿ ಅವರು ಎಲಿಮಿನೇಟ್‌ ಆಗಿ ಹೊರಗೆ ಬಂದಿದ್ದಾರೆ. ಇದೀಗ ಅವರು ತಾವು ಜೈಲಿಗೆ ಹೋಗಿದ್ದ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಲವ್‌ ಮ್ಯಾರೇಜ್‌ ಕಾರಣದಿಂದ ಈ ಘಟನೆ ನಡೆದಿತ್ತು. ಆಗಿನ್ನೂ ಪತ್ನಿಗೆ 18 ವರ್ಷ ತುಂಬಿರದ ಕಾರಣ ಕೇಸ್‌ ದಾಖಲಾಗಿತ್ತು ಅಂತ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

The Girlfriend: ತಮ್ಮ ʻಸ್ಟಾರ್‌ ಪವರ್‌ʼ ಏನೆಂದು ತೋರಿಸಿದ ನಟಿ ರಶ್ಮಿಕಾ ಮಂದಣ್ಣ;‌  ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾದ ಕಲೆಕ್ಷನ್ ಎಷ್ಟು?

ರಶ್ಮಿಕಾ ನಟನೆಯ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾ ಗೆಲ್ತಾ? ಕಲೆಕ್ಷನ್‌ ಎಷ್ಟು?

The Girlfriend Box Office Collection: ರಶ್ಮಿಕಾ ಮಂದಣ್ಣ ಅಭಿನಯದ ಮೊದಲ ಮಹಿಳಾ ಪ್ರಧಾನ ಸಿನಿಮಾ 'ದಿ ಗರ್ಲ್‌ಫ್ರೆಂಡ್‌' ಯಶಸ್ಸು ಕಂಡಿದೆ. ನವೆಂಬರ್ 7 ರಂದು ಬಿಡುಗಡೆಯಾದ ಈ ಚಿತ್ರ 11 ದಿನಗಳಲ್ಲಿ 28 ಕೋಟಿ ರೂ. ಗಳಿಸಿದೆ. ಚಿತ್ರದ ಡಿಜಿಟಲ್ ಮತ್ತು ಸ್ಯಾಟಲೈಟ್‌ ಹಕ್ಕುಗಳಿಂದಲೇ 21 ಕೋಟಿ ರೂ. ಹರಿದುಬಂದಿರುವ ಮಾಹಿತಿ ಇದೆ.

Varanasi: ಆರಂಭದಲ್ಲೇ ರಾಜಮೌಳಿಗೆ ಎದುರಾಯ್ತು ವಿಘ್ನ; ಜಕ್ಕಣ್ಣ ವಿರುದ್ಧ ಪೊಲೀಸರಿಗೆ ದೂರು ನೀಡಿದ್ಯಾರು?

ʻವಾರಣಾಸಿʼ ಡೈರೆಕ್ಟರ್ ರಾಜಮೌಳಿ ವಿರುದ್ಧ ದೂರು ದಾಖಲು! ಕಾರಣವೇನು?

Police Complaint Against SS Rajamouli: ʻವಾರಣಾಸಿʼ ಸಿನಿಮಾವನ್ನು ಗ್ರ್ಯಾಂಡ್‌ ಆಗಿ ಶುರು ಮಾಡಿರುವ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ ಇದೀಗ ವಿವಾದಕ್ಕೆ ಸಿಲುಕಿದ್ದಾರೆ. "ನನಗೆ ದೇವರ ಮೇಲೆ ದೊಡ್ಡ ನಂಬಿಕೆ ಏನೂ ಇಲ್ಲ" ಎಂದಿದ್ದರು. ಈ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ಆಗಿದೆ ಎಂದು ರಾಷ್ಟ್ರೀಯ ವಾನರ ಸೇನೆ ಸರೂರ್‌ನಗರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಬಹಿರಂಗ ಕ್ಷಮೆ ಕೇಳುವಂತೆ ಆಗ್ರಹಿಸಿದೆ.

Ravi Basrur : ಕೆಜಿಎಫ್, ಸಲಾರ್‌ಗಿಂತ ಸಂಗೀತ ಭಿನ್ನ! Jr NTR, ಪ್ರಶಾಂತ್ ಸಿನಿಮಾ ಬಗ್ಗೆ ರವಿ ಬಸ್ರೂರ್ ಹೇಳಿದ್ದೇನು?

ಕೆಜಿಎಫ್, ಸಲಾರ್‌ಗಿಂತ ಸಂಗೀತ ಭಿನ್ನ! ರವಿ ಬಸ್ರೂರ್ ಹೇಳಿದ್ದೇನು?

Jr NTR: ತಮ್ಮ ವೃತ್ತಿಜೀವನದುದ್ದಕ್ಕೂ ಸಂಗೀತ ಸಂಯೋಜಕ, ಗೀತರಚನೆಕಾರ ಮತ್ತು ನಿರ್ದೇಶಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಖ್ಯಾತಿ ಗಳಿಸಿರುವ ರವಿ ಬಸ್ರೂರ್, ಕೆಜಿಎಫ್, ಸಲಾರ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಮತ್ತು ಮಾರ್ಕೊ ಮುಂತಾದ ಚಿತ್ರಗಳಿಗೆ ಸಂಗೀತ ನೀಡುವ ಮೂಲಕ ಜನಪ್ರಿಯರಾಗಿದ್ದಾರೆ. ಎನ್ ಟಿ ಆರ್-ನೀಲ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ ತಮ್ಮ ಆಲ್ಬಂ ಟೈಟಾನ್ ಬಗ್ಗೆ ಮತ್ತು ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ. ಎನ್‌ಟಿಆರ್, ಪ್ರಶಾಂತ್ ನೀಲ್ ಅವರ ಚಿತ್ರಕ್ಕೆ ರವಿ ಬಸ್ರೂರ್ ಅವರ ಸಂಗೀತ ಕೆಜಿಎಫ್ ಅಥವಾ ಸಲಾರ್‌ನಂತಿರುವುದಿಲ್ಲ ಎಂದು ಹೇಳಿದ್ದಾರೆ.

Loading...