ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Disha Patani: ನಾವೂ ಸನಾತನಿಗಳು.... ಗುಂಡಿನ ದಾಳಿ ಬೆನ್ನಲ್ಲೇ ದಿಶಾ ಪಟಾನಿ ತಂದೆ ಹೀಗಂದಿದ್ದೇಕೆ?

ಗುಂಡಿನ ದಾಳಿ ಬೆನ್ನಲ್ಲೇ ದಿಶಾ ಪಟಾನಿ ತಂದೆ ಹೀಗಂದಿದ್ದೇಕೆ?

ಉತ್ತರ ಪ್ರದೇಶದ ಬರೇಲಿಯಲ್ಲಿ ಸೆಪ್ಟೆಂಬರ್ 10ರಂದು ದಿಶಾ ಪಟಾನಿ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಗ್ಯಾಂಗ್ ಈ ದಾಳಿಗೆ ಹೊಣೆ ಎಂದು ತಿಳಿದು ಬಂದಿದೆ. ದಿಶಾ ಪಟಾನಿಯ ಸಹೋದರಿ ಖುಶ್ಬೂ ಪಟಾನಿ ಧಾರ್ಮಿಕ ನಾಯಕ ಅನಿರುದ್ಧಾಚಾರ್ಯ ಮಹಾರಾಜ್ ಬಗ್ಗೆ ಮಾಡಿದ ಹೇಳಿಕೆ ಈ ದಾಳಿಗೆ ಕಾರಣವೆಂದು ಶಂಕಿಸಲಾಗಿದೆ. ದಿಶಾ ಅವರ ತಂದೆ ಜಗ್ದೀಶ್ ಪಟಾನಿ ಈ ಘಟನೆಗೆ ತೀವ್ರ ಪ್ರತಿಕ್ರಿಯೆ ನೀಡಿದ್ದು, ಇದನ್ನು ರಾಜಕೀಯ ಷಡ್ಯಂತ್ರ ಎಂದು ತಿರಸ್ಕರಿಸಿದ್ದಾರೆ.

Ajaz Khan: ಗ್ಯಾಂಗ್‌ಸ್ಟರ್‌ ಜೊತೆ ನಂಟು; ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ವಿರುದ್ಧ ಕೇಸ್‌

ಗ್ಯಾಂಗ್‌ಸ್ಟರ್‌ ಜೊತೆ ನಂಟು; ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ವಿರುದ್ಧ ಕೇಸ್‌

ಇಂದೋರ್‌ನಲ್ಲಿ ನಟ ಅಜಾಜ್ ಖಾನ್ ಗ್ಯಾಂಗ್‌ಸ್ಟರ್ ಸಲ್ಮಾನ್ ಲಾಲಾ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ಬೆನ್ನಲೇ ಸಂಕಷ್ಟ ಎದುರಾಗಿದ್ದು, ಕ್ರೈಮ್ ಬ್ರಾಂಚ್ ಅಜಾಜ್‌ಖಾನ್‌ಗೆ ನೋಟಿಸ್ ಜಾರಿ ಮಾಡಿದೆ. ಅವರ ಖಾತೆಯನ್ನು ಬ್ಲಾಕ್ ಮಾಡಲು ಇನ್‌ಸ್ಟಾಗ್ರಾಮ್‌ಗೆ ಪತ್ರ ಬರೆದಿದ್ದು, ಅಜಾಜ್ ಖಾನ್ ಇನ್‌ಸ್ಟಾಗ್ರಾಮ್‌ನಲ್ಲಿ ಸಲ್ಮಾನ್ ಲಾಲಾ ಮರಣದ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದರು.

Kiccha Sudeep: ಧ್ರುವ ಸರ್ಜಾ ನಟನೆಯ ಕೆಡಿ ಸೆಟ್‌ಗೆ ಸುದೀಪ್‌ ಎಂಟ್ರಿ; ಅತಿಥಿ ಪಾತ್ರದಲ್ಲಿ ಕಿಚ್ಚ ನಟನೆ?

ಕೆಡಿ ಸೆಟ್‌ಗೆ ಸುದೀಪ್‌ ಎಂಟ್ರಿ; ಅತಿಥಿ ಪಾತ್ರದಲ್ಲಿ ಕಿಚ್ಚ ನಟನೆ?

KD: The Devil Movie: ಧ್ರುವ ಸರ್ಜಾ ನಟಿಸುತ್ತಿರುವ ‘ಕೆಡಿ’ ಸಿನಿಮಾದ ಚಿತ್ರೀಕರಣ ಹೈದರಾಬಾದ್​​ನ ರಾಮೋಜಿ ಫಿಲಂ ಸಿಟಿ ಸ್ಟುಡಿಯೋನಲ್ಲಿ ನಡೆಯುತ್ತಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ದೊಡ್ಡ ರೈಲಿನ ಸೆಟ್ ಹಾಕಿ ಆಕ್ಷನ್ ದೃಶ್ಯದ ಚಿತ್ರೀಕರಣವನ್ನು ಮಾಡಲಾಗುತ್ತಿದೆ. ಇದೀಗ ಸಿನಿಮಾ ಸೆಟ್​​ಗೆ ಕಿಚ್ಚ ಸುದೀಪ್ ಭೇಟಿಯಾಗಿ, ಚಿತ್ರತಂಡದ ಜತೆ ಮಾತುಕತೆ ನಡೆಸಿದ್ದಾರೆ.

Vijayalakshmi Darshan: ವಿಜಯಲಕ್ಷ್ಮಿ ದರ್ಶನ್ ಫ್ಲ್ಯಾಟ್‌ನಲ್ಲಿ 3 ಲಕ್ಷ ನಗದು ಕಳ್ಳತನ; ದೂರು ದಾಖಲು

ವಿಜಯಲಕ್ಷ್ಮಿ ದರ್ಶನ್ ಫ್ಲ್ಯಾಟ್‌ನಲ್ಲಿ 3 ಲಕ್ಷ ನಗದು ಕಳ್ಳತನ; ದೂರು ದಾಖಲು

Vijayalakshmi Darshan: ಮನೆಕೆಲಸದವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಲಾಗಿದೆ. ಈ ಬಗ್ಗೆ ದರ್ಶನ್ ಮ್ಯಾನೇಜರ್ ನಾಗರಾಜ್‌ ನೀಡಿದ ದೂರಿನ ಹಿನ್ನೆಯಲ್ಲಿ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ವಿಜಯಲಕ್ಷ್ಮಿ ದರ್ಶನ್ ಅವರು ಮೈಸೂರಿಗೆ ಹೋಗಿದ್ದಾಗ, ಬೆಂಗಳೂರಿನ ಫ್ಲ್ಯಾಟ್‌ನಲ್ಲಿ ಕಳ್ಳತನವಾಗಿದೆ.

Disha Patani: ಬಾಲಿವುಡ್‌ನ ಖ್ಯಾತ ನಟಿ ಮನೆ ಮೇಲೆ ಗುಂಡಿನ ದಾಳಿ; ಪಿಚ್ಚರ್‌ ಬಾಕಿ ಹೇ ಎಂದು ವಾರ್ನಿಂಗ್‌!

ಬಾಲಿವುಡ್‌ ನಟಿ ಮನೆ ಮೇಲೆ ಗುಂಡಿನ ದಾಳಿ

ಉತ್ತರ ಪ್ರದೇಶದ ಬರೇಲಿಯಲ್ಲಿರುವ ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಶುಕ್ರವಾರ ನಡೆದಿದೆ. ಗೋಲ್ಡಿ ಬ್ರಾರ್ ಗ್ಯಾಂಗ್ ಇದರ ಹೊಣೆಯನ್ನು ಹೊತ್ತುಕೊಂಡಿದ್ದು, ಇದು ಕೇವಲ ಟ್ರೈಲರ್ ಎಂದು ಹೇಳಿದೆ. ಧರ್ಮದ ಬಗ್ಗೆ ಅವಹೇಳನ ಮಾಡಿದ್ದಕ್ಕೆ ಈ ದಾಳಿ ನಡೆಸಿರುವುದಾಗಿ ದಾಳಿಕೋರರು ಹೇಳಿದ್ದಾರೆ.

Anushka Shetty: ಘಾಟಿ ಸಿನಿಮಾ ಸೋತ ಬೆನ್ನಲ್ಲೆ ನಟಿ ಅನುಷ್ಕಾ ಈ ನಿರ್ಧಾರ ಕೈಗೊಂಡಿದ್ದೇಕೆ?

ಘಾಟಿ ಸಿನಿಮಾ ವಿಫಲದ ಬೆನ್ನಲ್ಲೆ ನಟಿ ಅನುಷ್ಕಾ ಮಹತ್ವದ ನಿರ್ಧಾರ!

Anushka Shetty: ಅನುಷ್ಕಾ ನಟನೆಯ 'ಘಾಟಿ' ಸಿನಿಮಾ ಕಳೆದ ವಾರವಷ್ಟೇ ತೆರೆಗೆ ಬಂದಿದ್ದು ಸಿನಿಮಾ ರಿಲೀಸ್ ಗೂ ಮುನ್ನವೇ ಬಹಳ ನಿರೀಕ್ಷೆ ಮೂಡಿಸಿತ್ತು. ಆದರೆ ಸಿನಿಮಾ ತೆರೆ ಮೇಲೆ ಬಂದ ಬಳಿಕ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾದಲ್ಲಿ ಇವರ ಅಭಿನಯದ ಬಗ್ಗೆ ಮೆಚ್ಚುಗೆಯ ಮಾತು ಗಳು ಕೇಳಿಬಂದರೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಪಡೆಯಲೇ ಇಲ್ಲ. ಇದರ ಬೆನ್ನಲ್ಲೆ ನಟಿ ಅನುಷ್ಕಾ ಶೆಟ್ಟಿ ಅವರು ಸೋಶಿಯಲ್ ಮಿಡಿಯಾದಿಂದಲೂ ದೂರ ಉಳಿಯುವುದಾಗಿ ಸ್ವತಃ ಅವರೇ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.

31‌ DAYS Movie: ನಿರಂಜನ್ ಶೆಟ್ಟಿ ಅಭಿನಯದ ʼ31‌ DAYSʼ ಚಿತ್ರತಂಡದಿಂದ ಸಕ್ಸಸ್ ಮೀಟ್‌

ನಿರಂಜನ್ ಶೆಟ್ಟಿ ಅಭಿನಯದ ʼ31‌ DAYSʼ ಚಿತ್ರತಂಡದಿಂದ ಸಕ್ಸಸ್ ಮೀಟ್‌

31‌ DAYS Movie: ನಿರಂಜನ್ ಶೆಟ್ಟಿ ನಾಯಕನಾಗಿ ನಟಿಸಿರುವ, ರಾಜ ರವಿಕುಮಾರ್ ನಿರ್ದೇಶಿಸಿರುವ ಹಾಗೂ ಖ್ಯಾತ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ಸಂಯೋಜಿಸಿರುವ 150ನೇ ಚಿತ್ರ ʼ31 DAYSʼ ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಕುರಿತು ಮಾಹಿತಿ ನೀಡಲು ಚಿತ್ರತಂಡದಿಂದ ಸಕ್ಸಸ್ ಮೀಟ್‌ ಆಯೋಜಿಸಲಾಗಿತ್ತು.

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ; 200 ರೂ. ದಾಟುವಂತಿಲ್ಲ

ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ

Movie ticket price: ಸರ್ಕಾರದ ಹೊಸ ನಿಯಮದ ಪ್ರಕಾರ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್​ನಲ್ಲಿ ಟಿಕೆಟ್​ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ. ಶೇ.18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ಆಗಲಿದೆ. ಸಿನಿಮಾ ಪ್ರಿಯರಿಗೆ ಇದರಿಂದ ಕೊಂಚ ಸಮಾಧಾನವಾಗಿದೆ.

Karishma Sharma: ಚಲಿಸುತ್ತಿದ್ದ ರೈಲಿನಿಂದ ಜಿಗಿದ ಖ್ಯಾತ ನಟಿ- ಗಂಭೀರ ಗಾಯ

ಚಲಿಸುತ್ತಿದ್ದ ರೈಲಿನಿಂದ ಜಿಗಿದ ಖ್ಯಾತ ನಟಿ- ಅಷ್ಟಕ್ಕೂ ನಡೆದಿದ್ದೇನು?

Karishma Sharma: ನಟಿ ಕರಿಷ್ಮಾ ಶರ್ಮಾ ಅವರು ಮುಂಬೈನಲ್ಲಿ ಚಲಿಸುವ ಲೋಕಲ್ ರೈಲಿನಿಂದ ಹಾರಿ ಗಂಭೀರ ಗಾಯ ಗೊಂಡಿದ್ದಾರೆ. ಸದ್ಯ ನಟಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ವೈದ್ಯಕೀಯ ತಪಾಸಣೆ ಕೂಡ ಮಾಡಲಾಗಿದೆ. ಈ ಮೂಲಕ ರೈಲಿನಿಂದ ಬಿದ್ದು ಗಾಯವಾಗಿದ್ದ ಬಗ್ಗೆ ನಟಿ ಕರಿಷ್ಮಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಸ್ಥಿತಿಯ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

B Sarojadevi: ಅಭಿನಯ ಸರಸ್ವತಿ, ಹಿರಿಯ ನಟಿ ಬಿ.ಸರೋಜಾದೇವಿಯ ಮೊದಲ ಸಿನೆಮಾ ಯಾವುದು ಗೊತ್ತಾ...?

ಬಿ.ಸರೋಜಾದೇವಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಣೆ

ಸ್ಯಾಂಡಲ್‌ವುಡ್‌ನ ಅಭಿನಯ ಶಾರದೆ ಎಂದು ಬಿರುದು ಪಡೆದುಕೊಂಡಿದ್ದ ಹಿರಿಯ ನಟಿ ಬಿ. ಸರೋಜಾದೇವಿಗೆ ರಾಜ್ಯ ಸರ್ಕಾರ ಮರಣೋತ್ತರ ಕನಾರ್ಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದೆ. ಇವರು ಹಲವು ಭಾಷೆಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ಅವರ ಸಿನಿ ಜೀವನ ಹೇಗಿತ್ತು..? ಅವರ ಮೊದಲ ಚಿತ್ರ ಯಾವುದು..? ಎಂಬ ಮಾಹಿತಿ ಇಲ್ಲಿದೆ.

Elumale Movie: ದ್ವಿತೀಯಾರ್ಧದಲ್ಲಿ ಗೆಲುವಿನ ಹಳಿಗೆ ಮರಳಿದ ಸ್ಯಾಂಡಲ್‌ವುಡ್‌; ʼಏಳುಮಲೆʼ ಸಕಸ್ಸ್‌ ಬೆನ್ನಲ್ಲೇ ನಿರ್ಮಾಪಕ ತರುಣ್ ಸುಧೀರ್ ಹೇಳಿದ್ದೇನು?

ʼಏಳುಮಲೆʼ ಸಿನಿಮಾಕ್ಕೆ ಭಾರಿ ಮೆಚ್ಚುಗೆ: ಖುಷಿ ಹಂಚಿಕೊಂಡ ಚಿತ್ರತಂಡ

ಈ ವರ್ಷದ ಮತ್ತೊಂದು ಒಳ್ಳೆ ಸಿನಿಮಾಗಳ ಸಾಲಿಗೆ ʼಏಳುಮಲೆʼ ಸೇರ್ಪಡೆಗೊಂಡಿದೆ. 'ಸು ಫ್ರಮ್‌ ಸೋʼ ಚಿತ್ರದ ಗೆಲುವಿನ ಬಳಿಕ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಯಶಸ್ಸು ಸಿಕ್ಕಿದೆ. ನಿರ್ದೇಶಕರಾಗಿ ಗೆದ್ದಿರುವ ತರುಣ್ ಸುಧೀರ್ ನಿರ್ಮಾಪಕರಾಗಿಯೂ ಸಕ್ಸಸ್ ಕಂಡಿದ್ದಾರೆ. ಯಶಸ್ವಿ ಹಾದಿಯಲ್ಲಿ ಚಿತ್ರ ಸಾಗುತ್ತಿದ್ದು, ಚಿತ್ರತಂಡ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡಿದೆ.

Pooja Hegde: ಟಾಲಿವುಡ್‌ಗೆ ಮತ್ತೆ ಎಂಟ್ರಿ ಕೊಟ್ಟ ಸೌತ್ ಬ್ಯೂಟಿ: ದುಲ್ಖರ್ ಸಲ್ಮಾನ್ ಜತೆ ಪೂಜಾ ಹೆಗ್ಡೆ ರೊಮ್ಯಾನ್ಸ್

ದುಲ್ಖರ್‌ಗೆ ಪೂಜಾ ಹೆಗ್ಡೆ ಜೋಡಿ: ಯಾವ ಸಿನಿಮಾ?

ಮಲಯಾಳಂ ನಟ ದುಲ್ಖರ್ ಸಲ್ಮಾನ್‌ಗೆ ನಾಯಕಿಯಾಗಿ ಪೂಜಾ ಹೆಗ್ಡೆ ತೆಲುಗು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ 'DQ41' ಎಂದು ಹೆಸರಿಡಲಾಗಿದೆ. ಚಿತ್ರದ ಅಧಿಕೃತ ಘೋಷಣೆಯನ್ನು ವಿಶೇಷ ವಿಡಿಯೊ ಮೂಲಕ ಶೇರ್ ಮಾಡಲಾಗಿದೆ. SLV ಸಿನಿಮಾಸ್ ಎಕ್ಸ್‌ ಖಾತೆಯಲ್ಲಿ ಮೇಕಿಂಗ್ ವಿಡಿಯೊವನ್ನು ಶೇರ್ ಮಾಡಿ ಪೂಜಾ ಹೆಗ್ಡೆಯನ್ನು ಸ್ವಾಗತಿಸಿದೆ.

Chaitra Achar: ಮತ್ತೊಮ್ಮೆ ಬೋಲ್ಡ್‌ ಫೋಟೊಶೂಟ್‌ ಮೂಲಕ ಯುವಕರ ಎದೆ ಬಡಿತ ಹೆಚ್ಚಿಸಿದ ʼಟೋಬಿʼ ನಟಿ ಚೈತ್ರಾ ಆಚಾರ್

ʼಟೋಬಿʼ ನಟಿ ಚೈತ್ರಾ ಆಚಾರ್ ಹಾಟ್ ಫೋಟೊಶೂಟ್

'ಮಹಿರಾ', 'ಟೋಬಿ','ಸಪ್ತ ಸಾಗರದಾಚೆ ಎಲ್ಲೋʼ ಸೈಡ್‌ ಬಿ ಸಿನಿಮಾ ಮೂಲಕ ಗಮನ ಸೆಳೆದ ನಟಿ ಚೈತ್ರಾ ಆಚಾರ್ ಅವರಿಗೆ ಸ್ಯಾಂಡಲ್‌ವುಡ್ ಮಾತ್ರವಲ್ಲದೆ ತಮಿಳು ಸಿನಿಮಾ ಇಂಡಸ್ಟ್ರಿಯಲ್ಲಿಯೂ ಬೇಡಿಕೆ ಇದೆ. ಸಿನಿಮಾದ ನಟನೆಯಷ್ಟೇ ಅವರಿಗೆ ಮಾಡೆಲಿಂಗ್ ಕ್ಷೇತ್ರವೆಂದರೂ ಇಷ್ಟ. ಹೀಗಾಗಿ ನಟಿ ಚೈತ್ರಾ ಆಗಾಗ ವಿಭಿನ್ನ ವಿನ್ಯಾಸದ ಡ್ರೆಸ್ ತೊಟ್ಟು ಫೋಟೊಶೂಟ್ ಕೂಡ ಮಾಡಿಸಿ ಕೊಳ್ಳುತ್ತಿರುತ್ತಾರೆ. ಈ ಬಾರಿ ಕೂಡ ಮಾಡರ್ನ್ ಡ್ರೆಸ್ ಧರಿಸಿ ಹಾಟ್‌ ಆಗಿ ಪೋಸ್ ನೀಡಿದ್ದಾರೆ.

Vayuputra Movie: ವಾಯುಪುತ್ರ ಅನಿಮೇಷನ್‌ ಸಿನಿಮಾ ಅನೌನ್ಸ್: ದಸರಾಗೆ ಪಂಚ ಭಾಷೆಯಲ್ಲಿ ರಿಲೀಸ್!

3ಡಿ ಅನಿಮೇಷನ್‌ ನಲ್ಲಿ ತೆರೆಗೆ ಬರ್ತಿದೆ ವಾಯುಪುತ್ರ ಸಿನಿಮಾ!

Vayuputra 3D Animation Film: ವಾಯು ಪುತ್ರ ಟೈಟಲ್ ನಡಿ ಅನಿಮೇಷನ್‌ ರೂಪದಲ್ಲಿ ಸಿನಿಮಾ ವೊಂದು ಬೆಳ್ಳಿತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಸಿತಾರಾ ಎಂಟರ್ಟೈನ್ಮೆಂಟ್ ಮತ್ತು ಫಾರ್ಚೂನ್ ಫೋರ್ ಸಿನಿಮಾಸ್ ಬ್ಯಾನರ್ ನಡಿ ನಾಗವಂಶಿ ಹಾಗೂ ಸಾಯಿ ಸೌಜನ್ಯ ನಿರ್ಮಿಸಿರುವ ವಾಯುಪುತ್ರ ಸಿನಿಮಾ ದಸರಾಗೆ ಬಿಡುಗಡೆಯಾಗುತ್ತಿದೆ.

Kantara: Chapter 1 Movie: 'ಕಾಂತಾರ ಚಾಪ್ಟರ್ 1' ಸಿನಿಮಾಕ್ಕಾಗಿ ಹಾಡಲಿದ್ದಾರೆ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್

ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಪಂಜಾಬ್ ಗಾಯಕ ದಿಲ್ಜಿತ್ ದೋಸಾಂಜ್

Diljit Dosanjh: ಗಾಯಕ, ನಟ ದಿಲ್ಜಿತ್ ದೋಸಾಂಜ್ ಹೊಂಬಾಳೆ ಫಿಲ್ಮ್ಸ್‌ ನಿರ್ಮಾಣದ ʼಕಾಂತಾರ: ಚಾಪ್ಟರ್‌ 1' ಚಿತ್ರದ ಹಾಡಿಗೆ ಧ್ವನಿ ನೀಡಲು ಸ್ಯಾಂಡಲ್‌ವುಡ್‌ ಆಗಮಿಸುತ್ತಿದ್ದಾರೆ. ಬಿ. ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿರುವ ಹಾಡಿನ ರೆಕಾರ್ಡಿಂಗ್‌ ನಡೆಯುತ್ತಿದೆ ಎನ್ನಲಾಗಿದೆ.

Malayalam Rapper : ಖ್ಯಾತ ಮಲಯಾಳಂ ರ‍್ಯಾಪ್ ಸ್ಟಾರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು

ಮಲಯಾಳಂ ರ‍್ಯಾಪ್ ಸ್ಟಾರ್ ವಿರುದ್ಧ ಅತ್ಯಾಚಾರ ಪ್ರಕರಣ!

Malayalam Rapper Hiran Das Murali: ರ‍್ಯಾಪ್ ಸ್ಟಾರ್ ಹಿರಣ್ ದಾಸ್ ಮುರಳಿ ವೇದನ್ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ. ಯುವತಿಯೊಬ್ಬಳನ್ನು ಮದುವೆಯಾಗುದಾಗಿ ನಂಬಿಸಿ, ಸುಳ್ಳು ಭರವಸೆಯನ್ನು ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ.

Dowry Harassment: ವರದಕ್ಷಿಣೆ ಕಿರುಕುಳ ದೂರು, ನಿರ್ದೇಶಕ ಎಸ್.‌ ನಾರಾಯಣ್‌ ಹೇಳುವುದೇನು?

ವರದಕ್ಷಿಣೆ ಕಿರುಕುಳ ದೂರು, ನಿರ್ದೇಶಕ ಎಸ್.‌ ನಾರಾಯಣ್‌ ಹೇಳುವುದೇನು?

S Narayan: ‘ಪವಿತ್ರಾ ಮನೆ ಬಿಟ್ಟು ಹೋಗಿ 10 ತಿಂಗಳಾಗಿದೆ. ಮನೆ ಬಿಟ್ಟು ಹೋಗಿದ್ದು ಯಾಕೆ ಎಂದು ಹೇಳಿದರೆ ನಾನು ಅವರ ಹೆಸರಿಗೆ ಮಸಿ ಬಳಿದಂತೆ ಆಗುತ್ತದೆ. ಮದುವೆ ಆಗಿ ಒಂದು ತಿಂಗಳ ಬಳಿಕ ಮಾತುಕತೆಯೇ ನಿಂತು ಹೋಯಿತು. ವಯಸ್ಸು, ವ್ಯಕ್ತಿತ್ವಕ್ಕೂ ಎರಡಕ್ಕೂ ಪವಿತ್ರಾ ಬೆಲೆ ಕೊಡುತ್ತಿರಲಿಲ್ಲ’ ಎಂದಿದ್ದಾರೆ ಎಸ್​ ನಾರಾಯಣ್.

Ilaiyaraaja: ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ರೂ.ನ ವಜ್ರದ ಕಿರೀಟ ಅರ್ಪಿಸಿದ ಸಂಗೀತ ಮಾಂತ್ರಿಕ ಇಳಯರಾಜ

ಕೊಲ್ಲೂರು ಮೂಕಾಂಬಿಕೆಗೆ 4 ಕೋಟಿ ರೂ.ನ ವಜ್ರದ ಕಿರೀಟ ಅರ್ಪಿಸಿದ ಇಳಯರಾಜ

Kolluru Mookambika: ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತರಾಗಿರುವ ಇಳಯರಾಜ, ಈ ಹಿಂದೆಯೂ ದೇಗುಲಕ್ಕೆ ಹಲವು ಬಗೆಯ ಆಭರಣಗಳನ್ನು ಅರ್ಪಿಸಿ ತಮ್ಮ ಭಕ್ತಿಭಾವವನ್ನು ತೋರಿದ್ದಾರೆ. ಈ ಬಾರಿ ಅವರು ದೇವಿಗೆ ವಜ್ರದ ಕಿರೀಟದ ಜೊತೆಗೆ ಇತರ ಆಭರಣಗಳನ್ನು ಸಮರ್ಪಿಸಿದ್ದಾರೆ.

Priya Sudeep: ನಟ ಸುದೀಪ್ ಬರ್ತ್‌ಡೇಗೆ ಮಹತ್ತರ ಕಾರ್ಯ ಮಾಡಿದ ಪತ್ನಿ ಪ್ರಿಯಾ; ಅಂಗ-ಅಂಗಾಂಶ ದಾನ

ಅಂಗ-ಅಂಗಾಂಶ ದಾನ ಮಾಡಿದ ನಟ ಸುದೀಪ್‌ ಪತ್ನಿ ಪ್ರಿಯಾ

Organ donation: ಕಿಚ್ಚ ಸುದೀಪ್ ಕೇರ್ ಫೌಂಡೇಶನ್‌ ಮೂಲಕ ಅಂಗ ಮತ್ತು ಅಂಗಾಂಶಗಳನ್ನು ಪ್ರಿಯಾ ದಾನ ಮಾಡಿದ್ದು, ಈ ಬಗ್ಗೆ ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆ ಬಹಳ ಸುಲಭವಾಗಿದೆ. ನಿಮ್ಮ ಸಣ್ಣ ನಿರ್ಧಾರದಿಂದ ಒಂದು ಜೀವ ಉಳಿಯುತ್ತದೆ ಎಂದರೆ ಅದಕ್ಕಿಂತ ದೊಡ್ಡ ಕೆಲಸ ಬೇರೊಂದಿಲ್ಲ ಎಂದು ಪ್ರಿಯಾ ಸುದೀಪ್‌ ತಿಳಿಸಿದ್ದಾರೆ.

Vishnuvardhan Memorial: ವಿಷ್ಣು ಸ್ಮಾರಕಕ್ಕೆ 15 ಗುಂಟೆ ಜಾಗ ನೀಡಿ; ಸಚಿವ ಈಶ್ವರ್ ಖಂಡ್ರೆಗೆ ನಿರ್ಮಾಪಕರ ಮನವಿ

ವಿಷ್ಣು ಸ್ಮಾರಕಕ್ಕೆ 15 ಗುಂಟೆ ಜಾಗ ನೀಡಿ; ಸಚಿವ ಖಂಡ್ರೆಗೆ ನಿರ್ಮಾಪಕರ ಮನವಿ

Sandalwood News: ಕನ್ನಡ ಚಲನಚಿತ್ರ ನಿರ್ಮಾಪಕರಾದ ಕೆ. ಮಂಜು, ಉಮೇಶ್ ಬಣಕಾರ್ ಮತ್ತಿತರರು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್‌ ಖಂಡ್ರೆ ಅವರನ್ನು ಭೇಟಿಯಾಗಿ, ಡಾ. ವಿಷ್ಣುವರ್ಧನ್ ಅವರ ಸ್ಮಾರಕಕ್ಕೆ ಅಭಿಮಾನ್ ಸ್ಟುಡಿಯೋ ಪ್ರದೇಶದಲ್ಲಿ 15 ಗುಂಟೆ ಜಮೀನು ನೀಡುವಂತೆ ಮನವಿ ಮಾಡಿದ್ದಾರೆ.

Jacqueline Fernandez: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವಿಗೆ ಆರ್ಥಿಕ ನೆರವು ನೀಡಿದ ಜಾಕ್ವೆಲಿನ್ ಫರ್ನಾಂಡಿಸ್; ರಕ್ಕಮ್ಮ ಮಾದರಿ ನಡೆಗೆ ಫ್ಯಾನ್ಸ್‌ ಫಿದಾ

ಮಗುವಿಗೆ ನೆರವು ನೀಡಿ ಮಾದರಿಯಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್

ಕೇವಲ ಸಿನಿಮಾ ಅಲ್ಲದೇ ವೈಯಕ್ತಿಕ ವಿಚಾರದಲ್ಲಿಯೂ ಹೆಚ್ಚು ಸುದ್ದಿಯಲ್ಲಿರುವ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಮಾನವೀಯ ಕೆಲಸಕ್ಕೆ ಇದೀಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೈಡ್ರೋಸೆಫಾಲಸ್ ಎಂಬ ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಬಾಲಕನೊಬ್ಬನನ್ನು ಅವರು ಭೇಟಿ ಮಾಡಿ, ಚಿಕಿತ್ಸೆಯ ಎಲ್ಲ ವೆಚ್ಚಗಳನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.

Deepika Padukone: ಪುತ್ರಿ ದುವಾ ಮೊದಲ ವರ್ಷದ ಹುಟ್ಟುಹಬ್ಬಕ್ಕೆ ವಿಶೇಷ ಪೋಸ್ಟ್ ಹಂಚಿಕೊಂಡ ದೀಪಿಕಾ ಪಡುಕೋಣೆ

ಮಗಳಿಗಾಗಿ ವಿಶೇಷ ಪೋಸ್ಟ್ ಹಂಚಿಕೊಂಡ ನಟಿ ದೀಪಿಕಾ

Deepika Padukone Daughter Dua: ಮಗಳು ದುವಾ ಮೊದಲ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲಿ ನಟಿ ದೀಪಿಕಾ ಬಹಳ ಲವಲವಿಕೆಯಿಂದ ಪಾಲ್ಗೊಂಡಿದ್ದಾರೆ. 2024ರ ಸೆಪ್ಟೆಂಬರ್ 8ರಂದು ದುವಾ ಜನಿಸಿದ್ದು ಮೊನ್ನೆಯಷ್ಟೇ ಮಗುವಿಗೆ ಒಂದು ವರ್ಷ ಪೂರೈಸಿದೆ. ಹೀಗಾಗಿ ನಟಿ ಪಡುಕೋಣೆ ಹಾಗೂ ಅವರ ಪತಿ ರಣವೀರ್ ಸಿಂಗ್ ತಮ್ಮ ಮಗುವಿಗಾಗಿ ಸ್ಪೆಷಲ್ ಚಾಕೊಲೇಟ್ ಕೇಕ್‌ ತಯಾರಿಸಿದ್ದಾರೆ.

Kamal Sridevi Movie: ಸ್ಯಾಂಡಲ್‌ವುಡ್‌ನಲ್ಲಿ ಇನ್ನು ʼಕಮಲ್ ಶ್ರೀದೇವಿʼ ಹವಾ;  ಟ್ರೈಲರ್ ಬಿಡುಗಡೆ: ಸೆಪ್ಟೆಂಬರ್ 19ಕ್ಕೆ ಚಿತ್ರ ರಿಲೀಸ್‌

ʼಕಮಲ್ ಶ್ರೀದೇವಿʼ ಟ್ರೈಲರ್ ಔಟ್‌

Kamal Sridevi Trailer: ವಿಭಿನ್ನ ಪೋಸ್ಟರ್ ಹಾಗೂ ಟೀಸರ್‌ನಿಂದ ಗಮನ ಸೆಳೆದಿದ್ದ ಸ್ಯಾಂಡಲ್‌ವಿಡ್‌ ಚಿತ್ರ ʼಕಮಲ್ ಶ್ರೀದೇವಿʼಯ ಟ್ರೈಲರ್ ಬಿಡುಗಡೆಯಾಗಿದೆ. ಎನ್.ಚಲುವರಾಯ ಸ್ವಾಮಿ ಅರ್ಪಿಸುತ್ತಿರುವ ಈ ಚಿತ್ರವನ್ನು ಸ್ವರ್ಣಾಂಬಿಕ ಪಿಚ್ಚರ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ.ಧನಲಕ್ಷ್ಮೀ ನಿರ್ಮಿಸಿದ್ದಾರೆ. ನಟ ರಾಜವರ್ಧನ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

Duniya Vijay: ನಟ ದುನಿಯಾ ವಿಜಯ್ ಅಸಮಾಧಾನದ ಬಗ್ಗೆ ಸೈಮಾ ಸಂಸ್ಥಾಪಕ ಹೇಳಿದ್ದೇನು?

ನಟ ದುನಿಯಾ ವಿಜಯ್ ಆರೋಪದ ಬಗ್ಗೆ ಸೈಮಾ ಸಂಸ್ಥಾಪಕರಿಂದ ಸ್ಪಷ್ಟನೆ

ಸೌತ್ ಇಂಡಿಯನ್‌ ಇಂಟರ್‌ ನ್ಯಾಷನಲ್ ಮೂವಿ ಅವಾರ್ಡ್ (SIIMA) ಪ್ರಶಸ್ತಿ ಪ್ರದಾನ ಸಮಾರಂಭವು ಈ ಬಾರಿ ದುಬೈನಲ್ಲಿ ಅದ್ದೂರಿಯಾಗಿ ನೆರವೇರಿದೆ. ಸೈಮಾ 2025 ಕಾರ್ಯಕ್ರಮದಲ್ಲಿ ಕನ್ನಡ ತಾರೆಯರನ್ನು ಕಡೆಗಣಿಸಲಾಗಿದೆ ಎಂದು ನಟ ದುನಿಯಾ ವಿಜಯ್ ವೇದಿಕೆ ಮೇಲೆಯೇ ಸೈಮಾ ಆಯೋಜಕರ ವಿರುದ್ದ ತಮ್ಮ ಅಸಮಾಧಾನವನ್ನ ಹೊರಹಾಕಿದ್ದರು. ಈ ವಿಡಿಯೊ ಕೂಡ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ಸೈಮಾ ಸಂಸ್ಥಾಪಕರು ನಟ ದುನಿಯಾ ವಿಜಯ್ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ‌.

Loading...