ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Ranveer Singh: ಎರಡು ಭಾಗಗಳಲ್ಲಿ ಬರುತ್ತಾ ಧುರಂಧರ್? ರಣವೀರ್ ಸಿಂಗ್ ಮೂವಿಯಿಂದ ಬಂತು ಬಿಗ್‌ ಅಪ್‌ಡೇಟ್‌!

ಎರಡು ಭಾಗಗಳಲ್ಲಿ ಬರುತ್ತಾ ಧುರಂಧರ್? ರಣವೀರ್‌ ಮೂವಿ ಬಿಗ್‌ ಅಪ್‌ಡೇಟ್‌!

Dhurandhar: ವರದಿಗಳ ಪ್ರಕಾರ, ರಣವೀರ್ ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ರಹಸ್ಯ ಭಾರತೀಯ ಗೂಢಚಾರನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಗುಪ್ತಚರ ಅಧಿಕಾರಿಗಳ ಧೈರ್ಯ ಮತ್ತು ತ್ಯಾಗವನ್ನು ಆಚರಿಸುವ ಕಥೆಯಾಗಿದೆ. ಧುರಂಧರ್ ಡಿಸೆಂಬರ್ 5, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದ ಟ್ರೇಲರ್ ನಾಳೆ ನವೆಂಬರ್ 18 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಆದಿತ್ಯ ಧರ್, ಧುರಂಧರ್ ಅವರ ನೇತೃತ್ವದಲ್ಲಿ ಚಿತ್ರವು ನಿಜ ಜೀವನದ ಘಟನೆಗಳಿಂದ ಪ್ರೇರಿತವಾಗಿದೆ ಎಂದು ಹೇಳಲಾಗಿದೆ.

BBK 12: 'ಧ್ರುವಂತ್‌ ಒಬ್ಬ ಸ್ಯಾಡಿಸ್ಟ್‌.. ರಾಶಿಕಾಗೆ ಅಹಂಕಾರ..'; ಸ್ಪರ್ಧಿಗಳ ಬಾಯಿಂದ ಹೊರಬಿದ್ದ ಸತ್ಯಗಳಿವು!

Bigg Boss 12: ಅಯ್ಯೋ, ಧ್ರುವಂತ್‌ಗೆ ʻಸ್ಯಾಡಿಸ್ಟ್‌ʼ ಎಂದ ರಾಶಿಕಾ ಶೆಟ್ಟಿ!

BBK 12 Nomination: ಬಿಗ್‌ ಬಾಸ್‌ ಮನೆಯಲ್ಲಿ 9ನೇ ವಾರದ ನಾಮಿನೇಷನ್‌ ಪ್ರಕ್ರಿಯೆ ನಡೆಯುತ್ತಿದೆ. ʻಯೋಗ್ಯತೆ ಇಲ್ಲದವರನ್ನು ಹೊರಹಾಕಿʼ ಎಂದು ಬಿಗ್‌ ಬಾಸ್‌ ಹೇಳಿದ್ದಾರೆ. ಈ ವೇಳೆ ಸ್ಪರ್ಧಿಗಳು ಒಬ್ಬರ ವಿರುದ್ಧ ಒಬ್ಬರು ಹೊಸ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಧ್ರುವಂತ್‌ರನ್ನು ʻಸ್ಯಾಡಿಸ್ಟ್‌ʼ ಎಂದು ರಾಶಿಕಾ ಶೆಟ್ಟಿ, ಕರೆದರೆ, ರಾಶಿಕಾಗೆ ಅಹಂಕಾರವಿದೆ ಎಂದು ಸ್ಪಂದನಾ ನಾಮಿನೇಟ್‌ ಮಾಡಿದ್ದಾರೆ.

ನಟ ಜಗ್ಗೇಶ್ ಬಣ್ಣ ಹಚ್ಚಲು ಆರಂಭಿಸಿ ಇವತ್ತಿಗೆ 45 ವರ್ಷ! ಆದ್ರೆ ಆ ಮೊದಲ ಸಿನಿಮಾ ತೆರೆಕಾಣಲೇ ಇಲ್ಲ ಯಾಕೆ?

45 ವರ್ಷಗಳ ಹಿಂದೆ ಜಗ್ಗೇಶ್‌ ನಟಿಸಿದ್ದ ಮೊದಲ ಸಿನಿಮಾ ತೆರೆಕಾಣಲೇ ಇಲ್ಲ!

Jaggesh completes 45 years in KFI: ಜಗ್ಗೇಶ್‌ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಇವತ್ತಿಗೆ ಭರ್ತಿ 45 ವರ್ಷ ತುಂಬಿದೆ. 1980ರ ನವೆಂಬರ್ 17ರಂದು ತಮ್ಮ 18ನೇ ವಯಸ್ಸಿನಲ್ಲಿ ಜಗ್ಗೇಶ್ ಅವರು ‌ ಮೊದಲ ಬಾರಿಗೆ ʻಕನ್ನಡತಿ ಮಾನವತಿʼ ಸಿನಿಮಾಕ್ಕಾಗಿ ಬಣ್ಣ ಹಚ್ಚಿದರು. ಕಾರಣಾಂತರಗಳಿಂದ ತೆರೆಗೆ ಬರಲೇ ಇಲ್ಲ.

Chitralahari Movie: ಕೆ.ಆರ್. ಸುರೇಶ್ ನಿರ್ದೇಶನದ ‘ಚಿತ್ರಲಹರಿ’ ಚಿತ್ರದ ಟೀಸರ್, ಸಾಂಗ್‌ ಬಿಡುಗಡೆ

‘ಚಿತ್ರಲಹರಿ’ ಚಿತ್ರದ ಟೀಸರ್, ಸಾಂಗ್‌ ರಿಲೀಸ್‌

Sandalwood News: ಕೆ.ಆರ್. ಸುರೇಶ್ ನಿರ್ದೇಶನದ ʼಚಿತ್ರಲಹರಿʼ ಚಿತ್ರದ ಟೀಸರ್ ಹಾಗೂ ಹಾಡುಗಳು ಬಿಡುಗಡೆಯಾಗಿವೆ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ ಟೀಸರ್ ಅನ್ನು ಬಿಡುಗಡೆ ಮಾಡಿದರು. ಹಿರಿಯ ನಿರ್ದೇಶಕ ಪುರುಷೋತ್ತಮ್ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿದರು. ಈ ಕುರಿತ ವಿವರ ಇಲ್ಲಿದೆ.

BBK 12: 'ಬಿಗ್‌ ಬಾಸ್‌ ಮನೆಯಲ್ಲಿ ನಂಗೆ ಇಬ್ರು ಸ್ಪರ್ಧಿಗಳು ಪ್ರಪೋಸ್‌ ಮಾಡಿದ್ರು'; ಡಾಗ್‌ ಸತೀಶ್‌ ಬಿಚ್ಚಿಟ್ರು ಹೊಸ ಸತ್ಯ!

BBK 12: ಬಿಗ್‌ ಬಾಸ್‌ ಮನಯೆಲ್ಲಿ ಡಾಗ್‌ ಸತೀಶ್‌ಗೆ ಪ್ರಪೋಸ್‌ ಮಾಡಿದ್ಯಾರು?

Bigg Boss 12 Dog Satish: ಡಾಗ್‌ ಸತೀಶ್‌ ಅವರು ತಮಗೆ ಬಿಗ್‌ ಬಾಸ್ ಮನೆಯಲ್ಲಿದ್ದಾಗಲೇ ಇಬ್ಬರು ಸ್ಪರ್ಧಿಗಳು ಪ್ರಪೋಸ್‌ ಮಾಡಿದ್ದರು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬಿಗ್‌ ಬಾಸ್‌ನಿಂದ ಹೊರಬಂದ ನಂತರ ಅನೇಕ ಹುಡುಗಿಯರು ಸತೀಶ್‌ಗೆ ಪ್ರಪೋಸ್‌ ಮಾಡಿದ್ದಾರಂತೆ! 'ನಿಮ್ಮ ಮಗನಿಗಿಂತ ನೀವೇ ಚೆನ್ನಾಗಿದ್ದೀರಿ' ಅಂತ ಹೊಗಳುತ್ತಿದ್ದಾರಂತೆ!

‌Bigg Boss 12: ʻನಾನು ಹುಲಿ ವೇಷದಲ್ಲಿರುವ ಹಸು, ನಾನು ಡ್ರಗ್‌ ಅಡಿಕ್ಟ್‌ ಅಲ್ಲʼ; ಕಾಕ್ರೋಚ್‌ ಸುಧಿ ಫಸ್ಟ್‌ ರಿಯಾಕ್ಷನ್

BBK12: ʻನಾನು ಡ್ರಗ್‌ ಅಡಿಕ್ಟ್‌ ಅಲ್ಲʼ ಅಂತ ಕಾಕ್ರೋಚ್‌ ಸುಧಿ ಹೇಳಿದ್ದೇಕೆ?

Bigg Boss Kannada 12 Elimination: ಕಾಕ್ರೋಚ್‌ ಸುಧಿ ಅವರು ಏಳು ವಾರಗಳ ನಂತರ ಬಿಗ್‌ ಬಾಸ್‌ನಿಂದ ಹೊರಬರುತ್ತಿದ್ದಂತೆಯೇ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. "ನಾನು ಹುಲಿ ವೇಷದಲ್ಲಿರುವ ಹಸು, ಡ್ರಗ್‌ ಅಡಿಕ್ಟ್‌ ಅಲ್ಲ" ಎಂದು ತಮ್ಮ ಬಗ್ಗೆ ಇರುವ ಊಹಾಪೋಹಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಬಿಗ್‌ ಬಾಸ್ ಮನೆಯಲ್ಲಿ ಲೆಕ್ಕಾಚಾರಗಳು ವರ್ಕ್‌ ಆಗುವುದಿಲ್ಲ ಎಂದಿದ್ದಾರೆ ಸುಧಿ.

Sriimurali: 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ' ಹೀರೋ ದೀಕ್ಷಿತ್‌ ಶೆಟ್ಟಿಗೆ ಸಾಥ್‌ ನೀಡಿದ ಶ್ರೀಮುರಳಿ

Deekshith Shetty:‌ 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ' ಟ್ರೇಲರ್‌ ರಿಲೀಸ್

Bank Of Bhagyalakshmi Movie Trailer: ದೀಕ್ಷಿತ್‌ ಶೆಟ್ಟಿ ಶೆಟ್ಟಿ ಮತ್ತು ಬೃಂದಾ ಆಚಾರ್ಯ ನಟನೆಯ 'ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮೀ' ಚಿತ್ರದ ಟ್ರೇಲರ್ ಅನ್ನು ನಟ ಶ್ರೀಮುರಳಿ ಬಿಡುಗಡೆ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ನವೆಂಬರ್‌ 21ರಂದು ಬಿಡುಗಡೆಯಾಗಲಿರುವ ಈ ಚಿತ್ರವನ್ನು 'ರಂಗಿ ತರಂಗ' ಖ್ಯಾತಿಯ ಎಚ್‌ ಕೆ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.

BBK 12: ಅಚ್ಚರಿಯ ರೀತಿಯಲ್ಲಿ ಎಲಿಮಿನೇಟ್‌ ಆದ ʻಕಾಕ್ರೋಚ್‌ʼ ಸುಧಿಗೆ ಬಿಗ್‌ ಬಾಸ್‌ನಿಂದ ಸಿಕ್ಕ ಹಣವೆಷ್ಟು?

ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆದ ʻಕಾಕ್ರೋಚ್‌ʼ ಸುಧಿಗೆ ಸಿಕ್ಕ ಹಣವೆಷ್ಟು?

Bigg Boss Kannada 12: ಕಾಕ್ರೋಚ್ ಸುಧಿ ಅವರು 49 ದಿನಗಳ ನಂತರ ಅಚ್ಚರಿಯ ರೀತಿಯಲ್ಲಿ ಬಿಗ್‌ ಬಾಸ್‌ನಿಂದ ಎಲಿಮಿನೇಟ್‌ ಆಗಿದ್ದಾರೆ. ಪ್ರಬಲ ಸ್ಪರ್ಧಿಯಾಗಿದ್ದರೂ, ಅವರು ಹೊರಬಿದ್ದಿರುವುದು ವೀಕ್ಷಕರಿಗೆ ಶಾಕ್ ನೀಡಿದೆ. ಎಲಿಮಿನೇಟ್‌ ಆದ ಸುಧಿಗೆ ಬಹುಮಾನವಾಗಿ ಸಿಕ್ಕ ಹಣವೆಷ್ಟು? ಇಲ್ಲಿದೆ ಮಾಹಿತಿ.

Mahesh Babu: ಶೂಟಿಂಗ್ ಸ್ಪಾಟ್‌ನಲ್ಲಿ ಮಹೇಶ್‌ ಬಾಬು ಹೇಗಿರ್ತಾರೆ? ವಿವರಿಸಿದ ನಿರ್ದೇಶಕ ರಾಜಮೌಳಿ

ಶೂಟಿಂಗ್ ಸ್ಪಾಟ್‌ನಲ್ಲಿ ಮಹೇಶ್‌ ಬಾಬು ಹೇಗಿರ್ತಾರೆ? ವಿವರಿಸಿದ ರಾಜಮೌಳಿ

Rajamouli: ಮಹೇಶ್ ಬಾಬು ನಾಯಕನಾಗಿ ನಟಿಸಿರುವ ತಮ್ಮ ಮುಂಬರುವ ಚಿತ್ರ 'ವಾರಣಾಸಿ'ಯ ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ರಾಜಮೌಳಿ ಈ ವಿಷಯ ತಿಳಿಸಿದರು. ಈ ಹಿಂದೆ ಟಾಲಿವುಡ್‌ನಲ್ಲಿ ಹಲೋ ಬ್ರದರ್‌, ಕ್ಷಣಕ್ಷಣಂ, ಸಂತೋಷಂ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡಿ, ʻರಾಕಿʼ ಚಿತ್ರದ ಬಳಿಕ ನಿರ್ಮಾಣದಿಂದ ದೂರವಾಗಿದ್ದ ಕೆ ಎಲ್‌ ನಾರಾಯಣ ಅವರು ʻವಾರಣಾಸಿʼ ಚಿತ್ರಕ್ಕೆ ಹಣ ಹಾಕುತ್ತಿದ್ದಾರೆ. ಅವರ ಜೊತೆಗೆ ರಾಜಮೌಳಿ ಪುತ್ರ ಎಸ್‌ ಎಸ್‌ ಕಾರ್ತಿಕೇಯ ಅವರು ಕೂಡ ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

Huma Qureshi : ಗೆಳೆಯ ರಚಿತ್ ಸಿಂಗ್‌ನಿಂದ ಪ್ರೀತಿಯ ಅಪ್ಪುಗೆ; ನಟಿ ಹುಮಾ ಖುರೇಷಿ ವಿಡಿಯೊ ವೈರಲ್‌

ರಚಿತ್ ಸಿಂಗ್‌ನಿಂದ ಪ್ರೀತಿಯ ಅಪ್ಪುಗೆ; ಬಾಲಿವುಡ್‌ ನಟಿ ವಿಡಿಯೊ ವೈರಲ್‌

ಆರ್ಮಿ ಆಫ್ ದಿ ಡೇ, ಹೈವೇ, ಕಾಲಾ ಸಿನಿಮಾ ಮೂಲಕ ಖ್ಯಾತಿ ಪಡೆದ ಬಾಲಿವುಡ್ ನಟಿ ನಟಿ ಹುಮಾ ಖುರೇಷಿ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ನಿರ್ದೇಶಕ ಮತ್ತು ನಟ ಅನುರಾಗ್ ಕಶ್ಯಪ್ ನಿರ್ದೇಶನದ 2012 ರ 'ಗ್ಯಾಂಗ್ಸ್ ಆಫ್ ವಾಸೇಪುರ್' ಚಿತ್ರದಲ್ಲಿ ಮೋನಿಷಾ ಎಂಬ ಪೋಷಕ ಪಾತ್ರದಲ್ಲಿ ನಟಿಸುವ ಅವಕಾಶ ದೊರಕಿ ಸಾಲು ಸಾಲು ಸಿನಿಮಾದಲ್ಲಿ ನಟಿಸಿ ಮಿಂಚಿದ್ದಾರೆ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿ ಕೂಡ ಅಭಿನಯಿಸಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲಿದ್ದಾರೆ.

BBK 12: ʻಬಿಗ್‌ ಬಾಸ್‌ ಮನೆಯಲ್ಲಿರುವ ಗಂಡಸರು ಸತ್ತ ಹೆಣದ ಥರ ಇರ್ತಾರೆʼ; ಜಾಹ್ನವಿ ಮಾತಿಗೆ ʻಕಿಚ್ಚʼ ಸುದೀಪ್‌ ಶಾಕ್‌!

BBK 12: ಅಬ್ಬಬ್ಬಾ! ʻಗಿಲ್ಲಿಗೆ ಸೊಂಟನೇ ಇಲ್ಲʼ ಎಂದ ಜಾಹ್ನವಿ!

BBK 12: 'ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ' ಸಂಚಿಕೆಯಲ್ಲಿ ಜಾಹ್ನವಿ ಅವರು ಬಿಗ್‌ ಬಾಸ್ ಮನೆಯಲ್ಲಿರುವ ಗಂಡು ಮಕ್ಕಳ ಬಗ್ಗೆ ನೀಡಿದ ಹೇಳಿಕೆಗೆ ಕಿಚ್ಚ ಸುದೀಪ್ ಶಾಕ್‌ ಆಗಿದ್ದಾರೆ ಮತ್ತು ಬಿದ್ದು ಬಿದ್ದು ನಕ್ಕಿದ್ದಾರೆ. "ಈ ಮನೆಯಲ್ಲಿ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು" ಎಂದು ಸುದೀಪ್‌ ಹೇಳಿದ್ದರು. ಅದಕ್ಕೆ ಜಾಹ್ನವಿ ಮಾಡಿದ ಕಾಮೆಂಟ್ ಎಲ್ಲರನ್ನೂ ನಕ್ಕು ನಗಿಸಿದೆ ಮತ್ತು ಅಚ್ಚರಿಯನ್ನು ಉಂಟು ಮಾಡಿದೆ.

SS Rajamouli: ʻನನಗೆ ದೇವರಲ್ಲಿ ನಂಬಿಕೆ ಇಲ್ಲʼ; ಎಸ್.ಎಸ್. ರಾಜಮೌಳಿ ಹೇಳಿಕೆ ವಿರುದ್ಧ ಭಾರಿ ಟೀಕೆ

ನನಗೆ ದೇವರಲ್ಲಿ ನಂಬಿಕೆ ಇಲ್ಲ ಎಂದ ರಾಜಮೌಳಿ; ಭಾರಿ ಟೀಕೆ

Varanasi Movie: ರಾಮೋಜಿ ಫಿಲ್ಮ್‌ಸಿಟಿಯಲ್ಲಿ ನಡೆಯುತ್ತಿರುವ ‘ಗ್ಲೋಬ್ ಟ್ರೋಟರ್’ ಈವೆಂಟ್‌ನಲ್ಲಿ ಪ್ರದರ್ಶಿಸಲಾದ ವಿಡಿಯೋದಲ್ಲಿ ಮಹೇಶ್‌ ಬಾಬು ಅವರ ಫಸ್ಟ್‌ ಲುಕ್ ಜೊತೆಗೆ ಶೀರ್ಷಿಕೆಯನ್ನು ಸಹ ರಿವೀಲ್ ಮಾಡಲಾಗಿದೆ. 2027ರ ಮಾರ್ಚ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಸ್. ರಾಜಮೌಳಿ, ತಾವು ದೇವರನ್ನು ನಂಬುವುದಿಲ್ಲ ಎಂದು ಬಹಿರಂಗಪಡಿಸಿದರು. ಆರ್.ಆರ್.ಆರ್ ಮತ್ತು ಬಾಹುಬಲಿಯಂತಹ ಅವರ ಕೆಲವು ಪ್ರಮುಖ ಕೃತಿಗಳು ಹಿಂದೂ ಪುರಾಣಗಳಿಂದ ಪ್ರೇರಿತವಾಗಿವೆ. ಆದರೀಗ ನಿರ್ದೇಶಕರ ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿದೆ.

Full Meals Movie: ನ.21ಕ್ಕೆ ಮನರಂಜನೆಯ 'ಫುಲ್ ಮೀಲ್ಸ್' ಬಡಿಸಲು ಬರುತ್ತಿದ್ದಾರೆ ಲಿಖಿತ್ ಶೆಟ್ಟಿ

ನ.21ಕ್ಕೆ 'ಫುಲ್ ಮೀಲ್ಸ್' ಬಡಿಸಲು ಬರುತ್ತಿದ್ದಾರೆ ಲಿಖಿತ್ ಶೆಟ್ಟಿ

Sandalwood News: ಲಿಖಿತ್‌ ಶೆಟ್ಟಿ ನಿರ್ಮಾಣ ಹಾಗೂ ನಟನೆಯ ʼಫುಲ್ ಮೀಲ್ಸ್ʼ ಚಿತ್ರ ಈ ವಾರ ನವೆಂಬರ್ 21ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸಿರುವ ಈ ಚಿತ್ರವನ್ನು ಎನ್.ವಿನಾಯಕ ನಿರ್ದೇಶಿಸಿದ್ದಾರೆ.

SSMB29: ಕೊಟ್ಟ ಮಾತಿಗೆ ತಪ್ಪಿ ನಡೆಯದ ರಾಜಮೌಳಿ; 'ವಾರಣಾಸಿ' ಚಿತ್ರಕ್ಕಿದೆ 15 ವರ್ಷಗಳ ಹಿಂದಿನ ಒಪ್ಪಂದದ ಇತಿಹಾಸ!

Rajamouli: 'ವಾರಣಾಸಿ' ಚಿತ್ರಕ್ಕಾಗಿ 15 ವರ್ಷಗಳ ಹಿಂದೆಯೇ ಆಗಿತ್ತು ಒಪ್ಪಂದ

SSMB29: ರಾಜಮೌಳಿ ಅವರು ತಮ್ಮ ಮೆಗಾ ಪ್ರಾಜೆಕ್ಟ್ 'ವಾರಣಾಸಿ' ಸಿನಿಮಾ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸಾವಿರ ಕೋಟಿ ಬಜೆಟ್‌ನ ಈ ಚಿತ್ರದ ಫಸ್ಟ್‌ ಲುಕ್ ರಿಲೀಸ್ ಆಗಿದ್ದು, ಇದರ ಹಿಂದೆ 15 ವರ್ಷಗಳ ಹಳೆಯ ಕಥೆಯಿದೆ. ಈ ಸಿನಿಮಾ ಮಾಡಲು ನಿರ್ಮಾಪಕ ಡಾ. ಕೆ. ಎಲ್. ನಾರಾಯಣ ಅವರಿಂದ 2010ರ ಆಸುಪಾಸಿನಲ್ಲಿ ರಾಜಮೌಳಿ ಅಡ್ವಾನ್ಸ್ ಪಡೆದು ಕಮಿಟ್ ಆಗಿದ್ದರು.

Mango Pachcha: ಸಂಕ್ರಾಂತಿಗೊಂದು ಕನ್ನಡ ಸಿನಿಮಾ; 'ಕಿಚ್ಚ' ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಫಿಕ್ಸ್

ʻಕಿಚ್ಚʼ ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಫಿಕ್ಸ್!

Mango Pachcha Movie Release On January 15th: ಸುದೀಪ್‌ ಅಕ್ಕನ ಮಗ ಸಂಚಿತ್‌ ಸಂಜೀವ್‌ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾವು 2026ರ ಸಂಕ್ರಾಂತಿ ಹಬ್ಬದಂದು, ಅಂದರೆ ಜನವರಿ 15ಕ್ಕೆ ಬಿಡುಗಡೆಯಾಗಲಿದೆ. ಸಂಚಿತ್ ನಟನೆಯ ಈ ಚೊಚ್ಚಲ ಚಿತ್ರವು ಈಗಾಗಲೇ ಟೀಸರ್ ಮತ್ತು ರೆಟ್ರೋ ಲುಕ್‌ನಿಂದ ನಿರೀಕ್ಷೆ ಹೆಚ್ಚಿಸಿದೆ.

Devil Movie: 'ಡೆವಿಲ್' ಮೂರನೇ ಸಾಂಗ್‌ ಔಟ್‌! ದರ್ಶನ್‌ ಖದರ್‌ಗೆ ಫಿದಾ ಆದ್ರು ಫ್ಯಾನ್ಸ್‌

'ಡೆವಿಲ್' ಮೂರನೇ ಸಾಂಗ್‌ ಔಟ್‌! ದರ್ಶನ್‌ ಖದರ್‌ಗೆ ಫಿದಾ ಆದ್ರು ಫ್ಯಾನ್ಸ್‌

Alohomora: ದರ್ಶನ್‌ ಖದರ್‌ಗೆ ಫ್ಯಾನ್ಸ್‌ ಅಂತೂ ಫಿದಾ ಆಗಿದ್ದಾರೆ. ಈ ಹಾಡಿನಲ್ಲಿ ಹಲವು ಡ್ಯಾನ್ಸರ್ಸ್‌ ಜೊತೆಗೆ ದರ್ಶನ್ ಡ್ಯಾನ್ಸ್ ಮಾಡಿದ್ದಾರೆ. ಡೆವಿಲ್ ಚಿತ್ರದ ಎರಡು ಹಾಡು ರಿಲೀಸ್ ಆಗಿವೆ. ಇದ್ರೇ ನೆಮ್ದಿಯಾಗ್ ಇರ್ಬೇಕ್ ಅನ್ನೋ ಹಾಡು ಮೊದಲು ರಿಲೀಸ್ ಆಗಿದೆ. ಒಂದೆ ಒಂದು ಸಲ ಅನ್ನೋದು ಎರಡನೇ ಸಾಂಗ್ ಆಗಿದೆ. ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಡಿಸೆಂಬರ್ 12ರಂದು ತೆರೆಗೆ ಬರಲಿದೆ. ಮಹೇಶ್ ಮಂಜ್ರೇಕರ್, ಅಚ್ಯುತ್‌ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಹಿಂದೆ 'ತಾರಕ್' ಚಿತ್ರದಲ್ಲಿ ದರ್ಶನ್- ಪ್ರಕಾಶ್ ಒಟ್ಟಿಗೆ ಕೆಲಸ ಮಾಡಿ ಗೆದ್ದಿದ್ದರು.

Varanasi Movie:  ರಾಜಮೌಳಿಯನ್ನು ಹೊಗಳಿ, ಕುಂಭ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಪೃಥ್ವಿರಾಜ್

ʻಕುಂಭʼ ಪಾತ್ರದ ಬಗ್ಗೆ ನಟ ಪೃಥ್ವಿರಾಜ್ ಹೇಳಿದ್ದೇನು?

Prithviraj Sukumaran: ಮಹೇಶ್ ಬಾಬು ಈ ಚಿತ್ರದಲ್ಲಿ ಕುಂಭ ಪಾತ್ರದಲ್ಲಿ ನಟಿಸಿದ್ದಾರೆ, ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರದಲ್ಲಿ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರತಿಸ್ಪರ್ಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು 2027 ರಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.ಈ ಚಿತ್ರದ ಫಸ್ಟ್‌ ಲುಕ್‌ನಲ್ಲಿ ನಂದಿಯನ್ನು ಏರಿ, ತ್ರಿಶೂಲ ಹಿಡಿದು ಮಹೇಶ್‌ ಬಾಬು ಕಾಣಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಗ್ಲೋಬ್ ಟ್ರಾಟರ್ ಕಾರ್ಯಕ್ರಮದಲ್ಲಿ ಪೃಥ್ವಿರಾಜ್ ಹಾಜರಿದ್ದರು. ರಾಜಮೌಳಿ ಅವರೊಂದಿಗಿನ ತಮ್ಮ ಸಹಯೋಗದ ಬಗ್ಗೆ ಮಾತನಾಡಿದರು.

K Ramp OTT: ರೊಮ್ಯಾಂಟಿಕ್‌ ಕಾಮಿಡಿ ಮೂವಿ 'ಕೆ-ರ‍್ಯಾಂಪ್' ಒಟಿಟಿ ಎಂಟ್ರಿ ಯಾವಾಗ?

ರೊಮ್ಯಾಂಟಿಕ್‌ ಕಾಮಿಡಿ ಮೂವಿ 'ಕೆ-ರ‍್ಯಾಂಪ್' ಒಟಿಟಿ ಎಂಟ್ರಿ ಯಾವಾಗ?

ದೀಪಾವಳಿ ವಾರಾಂತ್ಯದಲ್ಲಿ ಅಕ್ಟೋಬರ್ 18, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಇಂದು ನವೆಂಬರ್ 15, 2025 ರಂದು ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ನಂತರ, ಚಿತ್ರವು ಮನೆಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ.

Marutha Movie: ಅದ್ಧೂರಿಯಾಗಿ ನೆರವೇರಿತು ʼಮಾರುತʼ ಚಿತ್ರದ ಪ್ರೀ ರಿಲೀಸ್ ಇವೆಂಟ್; ನ.21ಕ್ಕೆ ಸಿನಿಮಾ ರಿಲೀಸ್‌

ಅದ್ಧೂರಿಯಾಗಿ ನೆರವೇರಿತು ʼಮಾರುತʼ ಚಿತ್ರದ ಪ್ರೀ ರಿಲೀಸ್ ಇವೆಂಟ್

Sandalwood News: ಡಾ.ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಮಾರುತʼ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಹೊಂದಿರುವ ಈ ಚಿತ್ರ ನವೆಂಬರ್ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

SSMB29: ರಾಜಮೌಳಿ - ಮಹೇಶ್‌ ಬಾಬು ಸಿನಿಮಾಕ್ಕೆ ಟೈಟಲ್‌ ಫಿಕ್ಸ್;‌ ಫಸ್ಟ್‌ ಲುಕ್‌ ಹೇಗಿದೆ? ಈ ಚಿತ್ರ ರಿಲೀಸ್‌ ಆಗೋದ್ಯಾವಾಗ?

SSMB29: ಮಹೇಶ್‌ ಬಾಬು - ರಾಜಮೌಳಿ ಸಿನಿಮಾದ ಟೈಟಲ್‌ ಘೋಷಣೆ!

SSMB29: ಮಹೇಶ್‌ ಬಾಬು ಅವರ ಮುಂದಿನ ಸಿನಿಮಾದ ಟೈಟಲ್ ʻವಾರಣಾಸಿʼ ಎಂದು ಹೈದರಾಬಾದ್‌ನ ʻಗ್ಲೋಬ್ ಟ್ರೋಟರ್ʼ ಈವೆಂಟ್‌ನಲ್ಲಿ ಘೋಷಣೆಯಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಮಹೇಶ್‌ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Bigg Boss 12: ʻಸುಮ್‌ ಸುಮ್ನೆ ಜಗಳ ಮಾಡೋಣ, ಮಾತು ಬಿಡೋಣʼ; ಜಾಹ್ನವಿ - ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!‌

ಮೈಕ್‌ ಕೆಳಗಿಟ್ಟು ಪ್ಲ್ಯಾನ್‌ ಮಾಡಿದ ಜಾಹ್ನವಿ-ಅಶ್ವಿನಿಗೆ ಕಿಚ್ಚನ ಕ್ಲಾಸ್‌

Bigg Boss Kannada 12: ‌ಬಿಗ್‌ ಬಾಸ್‌ ಮನೆಯ ಈ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಜಾಹ್ನವಿ ಮತ್ತು ಅಶ್ವಿನಿ ಗೌಡ 'ಸುಮ್ ಸುಮ್ನೆ ಜಗಳ ಮಾಡೋಣ' ಎಂದು ಮೈಕ್ ತೆಗೆದಿಟ್ಟು ಪ್ಲಾನ್ ಮಾಡಿರುವುದು ಬಯಲಾಗಿದೆ. ಇವರಿಗೆ ಕಿಚ್ಚ ಸುದೀಪ್‌ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

Rachita Ram: 8 ವರ್ಷಗಳ ಬಳಿಕ ಧ್ರುವ ಸರ್ಜಾಗೆ ಜೋಡಿಯಾಗ್ತಾರೆ ನಟಿ ರಚಿತಾ ರಾಮ್! ಯಾವ ಸಿನಿಮಾ, ಡೈರೆಕ್ಟರ್‌ ಯಾರು?

ಧ್ರುವ ಸರ್ಜಾ ಹೊಸ ಸಿನಿಮಾಗೆ ರಚಿತಾ ರಾಮ್ ನಾಯಕಿ?

Rachita Ram New Movie: 'ಆಕ್ಷನ್‌ ಪ್ರಿನ್ಸ್‌' ಧ್ರುವ ಸರ್ಜಾ ಮತ್ತು ರಚಿತಾ ರಾಮ್‌ ಅವರು 8 ವರ್ಷಗಳ ಬಳಿಕ ಮತ್ತೆ ಒಂದಾಗುವ ಸಾಧ್ಯತೆ ಇದೆ. 2017ರಲ್ಲಿ ತೆರೆಕಂಡ 'ಭರ್ಜರಿ' ಸಿನಿಮಾದ ಬಳಿಕ ಈ ಜೋಡಿ ಈಗ ಹೊಸ ಸಿನಿಮಾಕ್ಕೆ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ʻಕೆರೆಬೇಟೆʼ ಖ್ಯಾತಿಯ ರಾಜ್‌ ಗುರು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

Love OTP: ʻಎಲ್ರೂ ಸಿನಿಮಾ ಚೆನ್ನಾಗಿದೆ ಅಂತಾರೆ, ಆದ್ರೆ ಜನರು ಬರ್ತಿಲ್ಲʼ; ಲೈವ್‌ನಲ್ಲೇ ಕಣ್ಣೀರಿಟ್ಟ ನಟ ಅನೀಶ್‌

ಜನರು ʻಲವ್‌ OTPʼ ಸಿನಿಮಾ ನೋಡ್ತಿಲ್ಲ ಎಂದು ಅನೀಶ್‌ ಕಣ್ಣೀರು

Love OTP Kannada Movie: ಅನೀಶ್‌ ತೇಜೇಶ್ವರ್‌ ನಟಿಸಿ, ನಿರ್ದೇಶನ ಮಾಡಿರುವ ʻಲವ್‌ ಓಟಿಪಿʼ ಸಿನಿಮಾಕ್ಕೆ ಉತ್ತಮ ವಿಮರ್ಶೆ ಸಿಕ್ಕಿದ್ದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಈ ಬಗ್ಗೆ ಅನೀಶ್‌ ತೇಜೇಶ್ವರ್‌ ನೊಂದುಕೊಂಡಿದ್ದಾರೆ. ನವೆಂಬರ್ 14 ರಂದು ತೆರೆಕಂಡ ಈ ಚಿತ್ರಕ್ಕೆ ವಿಮರ್ಶಕರಿಂದ, ಬುಕ್ ಮೈ ಶೋನಲ್ಲಿ ಉತ್ತಮ ರೇಟಿಂಗ್ ಸಿಕ್ಕಿದೆ. ಬೇಸರಗೊಂಡಿರುವ ಅನೀಶ್ ಲೈವ್‌ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

ಬಾಲಿವುಡ್ ನಟ ರಾಜ್ ಕುಮಾರ್ ರಾವ್‌ ದಂಪತಿಗೆ ಹೆಣ್ಣು ಮಗು-ಸ್ಪೆಷಲ್‌ ಪೋಸ್ಟ್ ವೈರಲ್

ಬಾಲಿವುಡ್ ನಟ ರಾಜ್ ಕುಮಾರ್ ರಾವ್‌ ದಂಪತಿಗೆ ಹೆಣ್ಣು ಮಗು!

Rajkummar Rao: ರಾಜ್ ಕುಮಾರ್ ರಾವ್ ಅವರು ಪತ್ರಲೇಖಾ (Patralekhaa) ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ನವೆಂಬರ್ 15ಕ್ಕೆ ಈ ಜೋಡಿ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಸೆಲಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಈ ದಂಪತಿ ಹೊಸ ವಿಚಾರ ರಿವಿಲ್ ಮಾಡಿ ಗುಡ್ ನ್ಯೂಸ್ ಒಂದನ್ನು ನೀಡಿದೆ.

Loading...