ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ರವಿಚಂದ್ರನ್‌, ಕಾಶೀನಾಥ್‌ ಸೇರಿ ಸ್ಯಾಂಡಲ್‌ವುಡ್‌ ಹೀರೋಗಳಿಗೆ ಭರ್ಜರಿ ಗೆಲುವು ತಂದುಕೊಟ್ಟಿದ್ದ ಕೆ. ಭಾಗ್ಯರಾಜ್‌ ಸಿನಿಮಾಗಳು; ಇಲ್ಲಿದೆ ರಿಮೇಕ್‌ ಚಿತ್ರಗಳ ಲಿಸ್ಟ್!‌

ಕೆ. ಭಾಗ್ಯರಾಜ್‌ ಸಿನಿಮಾಗಳನ್ನು ರಿಮೇಕ್‌ ಮಾಡಿ ಗೆದ್ದಿದ್ದ ಕನ್ನಡ ಹೀರೋಗಳು

ತಮಿಳು ಚಿತ್ರರಂಗದ ಪ್ರಖ್ಯಾತ ನಟ, ನಿರ್ದೇಶಕ ಹಾಗೂ ‘ಕಿಂಗ್ ಆಫ್ ಸ್ಕ್ರೀನ್‌ಪ್ಲೇ’ ಎಂದೇ ಖ್ಯಾತರಾಗಿದ್ದ ಕೆ. ಭಾಗ್ಯರಾಜ್ ನಿಧನರಾಗಿದ್ದಾರೆ. ಮಧ್ಯಮ ವರ್ಗದ ಕೌಟುಂಬಿಕ ಹಾಗೂ ಹಾಸ್ಯ ಪ್ರಧಾನ ಕಥೆಗಳ ಮೂಲಕ ದಕ್ಷಿಣ ಭಾರತದಲ್ಲಿ ಹೊಸ ಅಲೆ ಎಬ್ಬಿಸಿದ್ದ ಇವರ ಚಿತ್ರಗಳು ಸ್ಯಾಂಡಲ್‌ವುಡ್‌ನ ಹತ್ತಾರು ಬ್ಲಾಕ್‌ಬಸ್ಟರ್ ಸಿನಿಮಾಗಳಿಗೆ ಮೂಲ ಪ್ರೇರಣೆಯಾಗಿದ್ದವು.

‌ʻಜನ ನಾಯಗನ್ʼ ನಿರ್ಮಾಪಕ ವೆಂಕಟ್‌ ನಾರಾಯಣ್‌ಗೆ ತಮಿಳುನಾಡು ಸರ್ಕಾರದಲ್ಲಿ ಪ್ರಮುಖ ಹುದ್ದೆ; ಸಿಎಂ ವಿಜಯ್‌ ನಡೆಗೆ ಡಿಎಂಕೆ ಆಕ್ರೋಶ

CM Vijay: ʻಜನ ನಾಯಗನ್‌ʼ ನಿರ್ಮಾಪಕರಿಗೆ ಸರ್ಕಾರದಲ್ಲಿ ಪ್ರಮುಖ ಹುದ್ದೆ!

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' ನಿರ್ಮಾಪಕ ಕೆ. ವೆಂಕಟ್ ನಾರಾಯಣ್ (KVN) ಅವರನ್ನು ದೆಹಲಿ ವಿಶೇಷ ಪ್ರತಿನಿಧಿಯಾಗಿ ತಮಿಳುನಾಡು ಸರ್ಕಾರ ಒಂದು ವರ್ಷದ ಅವಧಿಗೆ ನೇಮಕ ಮಾಡಿದೆ. ಸಿಎಂ ವಿಜಯ್ ಅವರ ಈ ನಡೆಗೆ ತಮಿಳುನಾಡಿನ ಪ್ರತಿಪಕ್ಷ ಡಿಎಂಕೆ ತೀವ್ರ ಆಕ್ರೋಶ ಹೊರಹಾಕಿದೆ.

10 ವರ್ಷಗಳ ಬಳಿಕ ಪುನಃ ಒಂದಾದ ʻಪ್ರೇಮಂʼ ಜೋಡಿ; ನಿವಿನ್‌ ಪೌಲಿ ʻವಿಜಯಂʼ ಚಿತ್ರಕ್ಕೆ ಆಲ್ಫೋನ್ಸ್ ಪುತ್ರೆನ್ ಡೈರೆಕ್ಷನ್‌

10 ವರ್ಷದ ಬಳಿಕ ʻಪ್ರೇಮಂʼ ಜೋಡಿ ವಾಪಸ್; ನಿವಿನ್ ಪೌಲಿ 50ನೇ ಸಿನಿಮಾ ಘೋಷಣೆ‌

ಮಲಯಾಳಂ ಚಿತ್ರರಂಗದ ಬ್ಲಾಕ್‌ಬಸ್ಟರ್ ಚಿತ್ರಗಳಾದ 'ನೇರಂ' ಮತ್ತು 'ಪ್ರೇಮಂ' ನೀಡಿದ್ದ ನಟ ನಿವಿನ್ ಪೌಲಿ ಹಾಗೂ ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ ಹತ್ತು ವರ್ಷಗಳ ನಂತರ ತಮ್ಮ ಹೊಸ ಚಿತ್ರ ‘ವಿಜಯಂ’ ಮೂಲಕ ಮತ್ತೆ ಒಂದಾಗಿದ್ದಾರೆ. ನಿವಿನ್ ಪೌಲಿ ಅವರ ವೃತ್ತಿಬದುಕಿನ 50ನೇ ಮೈಲಿಗಲ್ಲಿನ ಈ ಚಿತ್ರವು ರೇಸಿಂಗ್ ಲೋಕದ ಹಿನ್ನೆಲೆಯಲ್ಲಿ ಮೂಡಿಬರಲಿದೆ.

ʻಕೆಂಪಾಂಬುಧಿʼ ಸಿನಿಮಾ ಟೀಸರ್ ‌ರಿಲೀಸ್; ನಾಡಪ್ರಭು ಕೆಂಪೇಗೌಡರ ಇತಿಹಾಸ ಹೇಳುವ ಸಿನಿಮಾಕ್ಕೆ ‘ನೆನಪಿರಲಿ’ ಪ್ರೇಮ್ ಹೀರೋ

‘ನೆನಪಿರಲಿ’ ಪ್ರೇಮ್ ನಟನೆಯ ʻಕೆಂಪಾಂಬುಧಿʼ ಸಿನಿಮಾ ಟೀಸರ್ ‌ರಿಲೀಸ್

ಬೆಂಗಳೂರು ನಗರದ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಇತಿಹಾಸ ಸಾರುವ, ‘ನೆನಪಿರಲಿ’ ಪ್ರೇಮ್ ಹಾಗೂ ಮೇಘನಾ ಗಾಂವ್ಕರ್ ನಟನೆಯ ‘ಕೆಂಪಾಂಬುಧಿ’ ಚಿತ್ರದ ಭವ್ಯ ಟೀಸರ್ ಬಿಡುಗಡೆಯಾಗಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಮತ್ತು ಹೊಂಬಾಳೆ ಮ್ಯೂಸಿಕ್ ಸಹಯೋಗದ ಈ ಚಿತ್ರವನ್ನು ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿ ಆಧರಿಸಿ ರಮೇಶ್ ಬೇಗಾರ್ ನಿರ್ದೇಶಿಸಿದ್ದಾರೆ.

ತಮಿಳು ನಿರ್ಮಾಪಕ ಸುಧನ್ ಸುಂದರಂ ಜೊತೆ ನಿಶ್ಚಿತಾರ್ಥ ಶರ್ಮಿಳಾ ಮಾಂಡ್ರೆ; ಇಲ್ಲಿವೆ ಈ ಜೋಡಿಯ ಎಂಗೇಜ್‌ಮೆಂಟ್‌ ಫೋಟೋಗಳು

Photos: ತಮಿಳು ನಿರ್ಮಾಪಕ ಸುಧನ್ ಜೊತೆ ಶರ್ಮಿಳಾ ಮಾಂಡ್ರೆ ಎಂಗೇಜ್‌ಮೆಂಟ್‌

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಹಾಗೂ ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಅವರು ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಸುಧನ್ ಸುಂದರಂ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಇವರಿಬ್ಬರ ನಿಶ್ಚಿತಾರ್ಥ ಸಮಾರಂಭವು ಅತ್ಯಂತ ವೈಭವ ಹಾಗೂ ಸಾಂಪ್ರದಾಯಿಕವಾಗಿ ನೆರವೇರಿದೆ. ಆಪ್ತ ಕುಟುಂಬಸ್ಥರು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗದ ಹಿತೈಷಿಗಳ ಸಮ್ಮುಖದಲ್ಲಿ ನಡೆದ ಈ ಸುಂದರ ಸಮಾರಂಭದಲ್ಲಿ ಜೋಡಿಯು ಉಂಗುರ ಬದಲಾಯಿಸಿಕೊಂಡಿತು. ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟನೆ ಮತ್ತು ಸಿನಿಮಾ ನಿರ್ಮಾಣದ ಮೂಲಕ ಶರ್ಮಿಳಾ ಮಾಂಡ್ರೆ ಗುರುತಿಸಿಕೊಂಡಿದ್ದರೆ, ಸುಧನ್ ಸುಂದರಂ ತಮಿಳು ಚಿತ್ರರಂಗದ ಯಶಸ್ವಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿವೆ ನಿಶ್ಚಿತಾರ್ಥದ ಸಮಾರಂಭದ ಫೋಟೋಗಳು.

Moda Kavida Vaatavarana Review: ಪ್ರೇಕ್ಷಕರೆದೆಗೆ ತಂಪೆರೆಯುತ್ತಲೇ ಬಿಸಿ ಮುಟ್ಟಿಸುವ ಹವಾಮಾನವಿದು..

ನಿರ್ದೇಶಕ ʻಸಿಂಪಲ್ʼ ಸುನಿಯ ‘ಮೋಡ ಕವಿದ ವಾತಾವರಣ’ ಸಿನಿಮಾ ಹೇಗಿದೆ?

ನಿರ್ದೇಶಕ ಸಿಂಪಲ್ ಸುನಿ ಅವರ ‘ಮೋಡ ಕವಿದ ವಾತಾವರಣ’ ಸಿನಿಮಾ ತೆರೆಕಂಡಿದ್ದು, ಶೀಲಂ ಎಂ. ಸ್ವಾಮಿ ಮೊದಲ ಬಾರಿಗೆ ಹೀರೋ ಆಗಿ ಸ್ಯಾಂಡಲ್‌ವಡ್‌ಗೆ ಕಾಲಿಟ್ಟಿದ್ದಾರೆ. ಈ ಚಿತ್ರವು ಮೇಲ್ನೋಟಕ್ಕೆ ರೊಮ್ಯಾಂಟಿಕ್ ಕಾಮಿಡಿಯಂತೆ ಆರಂಭವಾದರೂ, ನಂತರ ಪೌರಾಣಿಕ ಕನೆಕ್ಷನ್ ಜೊತೆಗೆ ಸೈಕಾಲಜಿಕಲ್ ಥ್ರಿಲ್ಲರ್ ಆಗಿಯೂ ಬದಲಾಗುತ್ತದೆ. ಈ ಚಿತ್ರದ ಪೂರ್ತಿ ವಿಮರ್ಶೆ ಇಲ್ಲಿದೆ.

'ಬಾಹುಬಲಿ' ಬ್ಲಾಕ್‌ಬಸ್ಟರ್‌ ಹಿಟ್‌ ಆದ್ಮೇಲೆ 2-3 ವರ್ಷ ನಿದ್ದೆ ಮಾಡಲು ಒದ್ದಾಡಿದ್ದ ನಟ ಪ್ರಭಾಸ್! ಅಂಥದ್ದೇನಾಗಿತ್ತು?

ʻಬಾಹುಬಲಿ ಹಿಟ್ ಆದ್ಮೇಲೆ 2- 3 ವರ್ಷ ನಿದ್ದೆ ಇರಲಿಲ್ಲʼ- ನಟ ಪ್ರಭಾಸ್

'ಬಾಹುಬಲಿ' ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಬರೋಬ್ಬರಿ 2-3 ವರ್ಷಗಳ ಕಾಲ ತಮಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪ್ಯಾನ್-ಇಂಡಿಯಾ ನಟ ಪ್ರಭಾಸ್ ಹೇಳಿದ್ದಾರೆ. ಸಾಕ್ಷ್ಯಚಿತ್ರದಲ್ಲಿ ಮಾತನಾಡಿರುವ ಅವರು, ಚಿತ್ರದ ನಂತರ ಜವಾಬ್ದಾರಿ ಸಾವಿರ ಪಟ್ಟು ಹೆಚ್ಚಾಗಿ ತೀವ್ರ ಒತ್ತಡ ಎದುರಿಸಿದ್ದಾಗಿ ತಿಳಿಸಿದ್ದಾರೆ.

ʻಬಿಲ್ಲ ರಂಗ ಬಾಷಾʼ ಶೂಟಿಂಗ್ ಆರಂಭ; ಹೇಳಿದ ದಿನದಂದೇ ಅಖಾಡಕ್ಕಿಳಿದ ಕಿಚ್ಚ ಸುದೀಪ್, ವದಂತಿಗಳಿಗೆ ಬ್ರೇಕ್!

ಹೇಳಿದ ದಿನದಂದೇ 'ಬಿಲ್ಲ ರಂಗ ಬಾಷಾ' ಸಿನಿಮಾದ ಶೂಟಿಂಗ್‌ ಆರಂಭಿಸಿದ ಸುದೀಪ್

ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಬಿಲ್ಲ ರಂಗ ಬಾಷಾ' (BRB) ಚಿತ್ರದ ಶೂಟಿಂಗ್ ಜೂನ್ 26 ರಂದು ಅಧಿಕೃತವಾಗಿ ಪುನರಾರಂಭಗೊಂಡಿದೆ. ಚಿತ್ರ ನಿಂತುಹೋಗಿದೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಿದ್ದು, ನಿರ್ದೇಶಕ ಅನೂಪ್ ಭಂಡಾರಿ ಯುದ್ಧ ಆರಂಭವಾಗಿದೆ ಎಂದು ಘೋಷಿಸಿದ್ದಾರೆ.

ನಂದಮೂರಿ ಬಾಲಕೃಷ್ಣ ನಟನೆಯ 112ನೇ ಸಿನಿಮಾಗೆ ಮುಹೂರ್ತ; ಮಾವನ ಸಿನಿಮಾಗೆ ಅಳಿಯನಿಂದಲೇ ಕ್ಲ್ಯಾಪ್!‌

ಬಾಲಯ್ಯ 112ನೇ ಚಿತ್ರಕ್ಕೆ ಮುಹೂರ್ತ; ಮಾವನ ಸಿನಿಮಾಕ್ಕೆ ಅಳಿಯನ ಕ್ಲ್ಯಾಪ್

ನಟ ನಂದಮೂರಿ ಬಾಲಕೃಷ್ಣ ಅವರ 112ನೇ ಚಿತ್ರದ ಮುಹೂರ್ತ ಸಮಾರಂಭ ಆಂಧ್ರಪ್ರದೇಶದ ಅಮರಾವತಿಯಲ್ಲಿ ನೆರವೇರಿದೆ. ಬಾಲಯ್ಯ ಅವರ ಮಾವನ ಚಿತ್ರಕ್ಕೆ ಅಳಿಯ ಹಾಗೂ ಸಚಿವ ನಾರಾ ಲೋಕೇಶ್ ಮೊದಲ ಕ್ಲ್ಯಾಪ್ ಮಾಡಿದ್ದು, ಮಗಳು ತೇಜಸ್ವಿನಿ ಪ್ರಥಮ ದೃಶ್ಯ ನಿರ್ದೇಶಿಸಿದ್ದಾರೆ.

ʻಮದರ್‌ ಪ್ರಾಮಿಸ್‌ʼ‌ ಸಿನಿಮಾ ಟ್ರೇಲರ್‌: ಜುಲೈ 10ಕ್ಕೆ ಥಿಯೇಟರ್‌ನಲ್ಲಿ ‌ʻಡಾಲಿʼ ಧನಂಜಯ್‌ ಗ್ಯಾಂಗ್‌ನ ಹಾವಳಿ ಫಿಕ್ಸ್!

ʻಡಾಲಿʼ ಧನಂಜಯ್ ಗ್ಯಾಂಗ್‌ನ ʻಮದರ್‌ ಪ್ರಾಮಿಸ್‌ʼ ಟ್ರೇಲರ್ ಧಮಾಕಾ!‌‌

ನಟ ಧನಂಜಯ ಅವರ 'ಡಾಲಿ ಪಿಕ್ಚರ್ಸ್' ನಿರ್ಮಾಣದ, ಅವರ ಆಪ್ತ ಗೆಳೆಯ ಪೂರ್ಣ ಮೈಸೂರು ನಿರ್ದೇಶನದ ‘ಮದರ್ ಪ್ರಾಮಿಸ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಗೆಳೆತನ, ಗ್ಯಾಂಗ್ ವಾರ್, ಕ್ರಿಕೆಟ್ ಬೆಟ್ಟಿಂಗ್ ಹಾಗೂ ತಾಯಿ ಸೆಂಟಿಮೆಂಟ್ ಒಳಗೊಂಡ ಈ ವಿಶಿಷ್ಟ ಕಾಮಿಡಿ ಥ್ರಿಲ್ಲರ್ ಚಿತ್ರವು ಜುಲೈ 10ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

Prajwal Devaraj: ʻಕರಾವಳಿʼ ಚಿತ್ರಕ್ಕಾಗಿ 700 ವರ್ಷಗಳ ಇತಿಹಾಸವಿರುವ ಕಟಪಾಡಿ ಕಂಬಳದಲ್ಲಿ ಇದೇ ಮೊದಲ ಬಾರಿಗೆ ಶೂಟಿಂಗ್

700 ವರ್ಷಗಳ ಇತಿಹಾಸವಿರುವ ಕಟಪಾಡಿ ಕಂಬಳದಲ್ಲಿ ‘ಕರಾವಳಿ’ ಚಿತ್ರದ ಶೂಟಿಂಗ್!

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ನಟನೆಯ 'ಕರಾವಳಿ' ಚಿತ್ರದ ‘ಸೋಲ್ ಆಫ್ ಕರಾವಳಿ’ ಹಾಡು ಬಿಡುಗಡೆಯಾಗಿದೆ. 700 ವರ್ಷಗಳ ಭವ್ಯ ಇತಿಹಾಸವಿರುವ ಪ್ರಸಿದ್ಧ ಕಟಪಾಡಿ ಕಂಬಳದ ನೈಜ ಟ್ರ್ಯಾಕ್‌ನಲ್ಲಿ ಈ ಹಾಡನ್ನು ಇದೇ ಮೊದಲ ಬಾರಿಗೆ ಚಿತ್ರೀಕರಿಸಿರುವುದು ವಿಶೇಷ. ಗುರುದತ್ ಗಾಣಿಗ ನಿರ್ದೇಶನದ ಈ ಸಿನಿಮಾ ಜುಲೈ 24ಕ್ಕೆ ತೆರೆಕಾಣಲಿದೆ.

ಈ ವಾರದ ಕಿರುತೆರೆ TRP ಲೆಕ್ಕಾಚಾರ ಉಲ್ಟಾ ಪಲ್ಟಾ; ಅಬ್ಬರಿಸಿದ ʻಕಲರ್ಸ್ ಕನ್ನಡʼ ಧಾರಾವಾಹಿಗಳು

ಈ ವಾರದ ಟಿಆರ್‌ಪಿಯಲ್ಲಿ ಕಲರ್ಸ್ ಕನ್ನಡ ಧಾರಾವಾಹಿಗಳ ಗಮನಾರ್ಹ ಸಾಧನೆ

ಕನ್ನಡ ಕಿರುತೆರೆಯ ಟಿಆರ್‌ಪಿ ರೇಟಿಂಗ್ ಪಟ್ಟಿಯಲ್ಲಿ ಇಷ್ಟು ದಿನ ಏಕಸ್ವಾಮ್ಯ ಹೊಂದಿದ್ದ ಜೀ ಕನ್ನಡ ವಾಹಿನಿಗೆ ಈಗ ಕಲರ್ಸ್ ಕನ್ನಡದಿಂದ ಅನಿರೀಕ್ಷಿತ ಆಘಾತ ಎದುರಾಗಿದೆ. ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯು 6.6 ರೇಟಿಂಗ್‌ನೊಂದಿಗೆ ಇಡೀ ಪ್ರಥಮ ಸ್ಥಾನ ಉಳಿಸಿಕೊಂಡಿದ್ದರೂ, ಕಲರ್ಸ್ ಕನ್ನಡದ 'ನಂದಗೋಕುಲ', 'ಶ್ರೀಗಂಧದ ಗುಡಿ' ಸೇರಿದಂತೆ 5 ಪ್ರಮುಖ ಧಾರಾವಾಹಿಗಳು ಭರ್ಜರಿ ರೇಟಿಂಗ್ ಪಡೆದುಕೊಂಡು, ತೀವ್ರ ಪೈಪೋಟಿ ನೀಡಿವೆ.

ʻನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ..ʼ; ವಿನೀಶ್‌ ಕಾರು ಅಪಘಾತದ ಕುರಿತು ವಿಜಯಲಕ್ಷ್ಮೀ ದರ್ಶನ್‌ ಸ್ಪಷ್ಟನೆ

ದರ್ಶನ್ ಪುತ್ರನ ಕಾರು ಅಪಘಾತ: ʻಸುಳ್ಳು ಸುದ್ದಿ ನಂಬಬೇಡಿʼ ಎಂದ ವಿಜಯಲಕ್ಷ್ಮಿ

ನಟ ದರ್ಶನ್ ಪುತ್ರ ವಿನೀಶ್ ಕಾರು ಅಪಘಾತ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿ ಸಂಪೂರ್ಣ ಸುಳ್ಳು ಎಂದು ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟಪಡಿಸಿದ್ದಾರೆ. ವಾಹನವನ್ನು ಚಾಲಕನೇ ಚಲಾಯಿಸುತ್ತಿದ್ದು, ಬೈಕ್ ಸವಾರರೇ ಬಂದು ಗುದ್ದಿದ್ದಾರೆ. ಮಾನವೀಯತೆಯಿಂದ ವಿನೀಶ್ ಕಾರಿನಿಂದ ಕೆಳಗಿಳಿದಿದ್ದನ್ನು ತಪ್ಪಾಗಿ ಬಿಂಬಿಸಲಾಗಿದೆ. ಎಂದು ಅವರು ಹೇಳಿದ್ದಾರೆ.

Balaramana Dinagalu Review: 80ರ ದಶಕದ ಬೆಂಗಳೂರಿನ ಭೂಗತ ಲೋಕದ ಬಲವಾದ ಕಥೆ

ವಿನೋದ್‌ ಪ್ರಭಾಕರ್‌ ಅಭಿನಯದ ʻಬಲರಾಮನ ದಿನಗಳುʼ ಸಿನಿಮಾ ಹೇಗಿದೆ?

'ಆ ದಿನಗಳು' ಚಿತ್ರ ತೆರೆಕಂಡು 19 ವರ್ಷಗಳ ನಂತರ ನಿರ್ದೇಶಕ ಕೆ. ಎಂ. ಚೈತನ್ಯ 80-90ರ ದಶಕದ ಬೆಂಗಳೂರು ಭೂಗತ ಲೋಕದ ಹಿನ್ನೆಲೆಯಲ್ಲಿ 'ಬಲರಾಮನ ದಿನಗಳು' ಚಿತ್ರವನ್ನು ಪಕ್ಕಾ ಮಾಸ್ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿ ವಿನೋದ್ ಪ್ರಭಾಕರ್ ಆಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ.

ಮಂಗಳೂರಿಗೆ ಬಂದಿಳಿದ ʻಕಿಂಗ್ʼ ಖಾನ್: 'ಆನ್ ಇವ್ನಿಂಗ್ ವಿತ್ ಶಾರುಖ್ ಖಾನ್' ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ

ಮಂಗಳೂರಿಗೆ ಬಂದಿಳಿದ ಶಾರುಖ್‌; ಏರ್‌ಪೋರ್ಟ್ ಬಳಿ ಮುಗಿಬಿದ್ದ ಫ್ಯಾನ್ಸ್‌

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರು ರೋಹನ್ ಕಾರ್ಪೊರೇಶನ್ ಹಮ್ಮಿಕೊಂಡಿರುವ 'ಆನ್ ಇವನಿಂಗ್ ವಿತ್ ಶಾರುಖ್ ಖಾನ್' ಕಾರ್ಯಕ್ರಮಕ್ಕಾಗಿ ಗುರುವಾರ ಸಂಜೆ ಮಂಗಳೂರಿಗೆ ಬಂದಿಳಿದಿದ್ದಾರೆ. ಶಾರುಖ್‌ ಮಂಗಳೂರಿಗೆ ಆಗಮಿಸುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ, ತಮ್ಮ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಲು ವಿಮಾನ ನಿಲ್ದಾಣದ ಹೊರಗೆ ಅಭಿಮಾನಿಗಳ ದಂಡೇ ನೆರೆದಿತ್ತು.

ನಟಿ ಕೃಷಿ ತಾಪಂಡ ಫ್ಲಾಟ್‌ನಲ್ಲಿ ಗೆಳೆಯ ವೈಶಾಖ್ ಆತ್ಮಹತ್ಯೆ; ಪತ್ನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?

ಕೃಷಿ ತಾಪಂಡ ಗೆಳೆಯ ವೈಶಾಖ್ ಆತ್ಮಹತ್ಯೆ;‌ ಪತ್ನಿ ನೀಡಿದ ದೂರಿನಲ್ಲಿ ಏನಿದೆ?

ಕನ್ನಡ ನಟಿ ಕೃಷಿ ತಾಪಂಡ ಅವರ ರಾಜರಾಜೇಶ್ವರಿ ನಗರದ ಅಪಾರ್ಟ್‌ಮೆಂಟ್ ಬೆಡ್‌ರೂಮ್‌ನಲ್ಲಿ ಅವರ ಆಪ್ತ ಗೆಳೆಯ ವೈಶಾಖ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರ ಪತ್ನಿ ಮೇಘನಾ ನೀಡಿದ ದೂರಿನನ್ವಯ ದಾಂಪತ್ಯದಲ್ಲಿ ವಿರಸವಿತ್ತು ಎನ್ನಲಾಗಿದ್ದು, ಸ್ಥಳದಲ್ಲಿ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.

ಡಾ‌. ಪ್ರದೀಪ್‌ ಕೆಂಚನೂರುಗೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಡಾ‌. ಪ್ರದೀಪ್‌ ಕೆಂಚನೂರುಗೆ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಮುಂಬೈನಲ್ಲಿ ನಡೆದ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಕಿರುಚಿತ್ರ 'ದಿ ಹಗ್ ಆಫ್ ಎಂಪಿನೆಸ್' (ಖಾಲಿತನದ ಅಪ್ಪುಗೆ) ರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಪ್ರಶಸ್ತಿ ಗೆದ್ದಿದೆ. ಚಿತ್ರದ ನಿರ್ದೇಶಕ ಡಾ. ಪ್ರದೀಪ್ ಕೆಂಚನೂರು ಅವರಿಗೆ ಪ್ರೀ ಪ್ರೆಸ್ತಿ ಅಂತಾರಾಷ್ಟ್ರೀಯ ಕ್ರಿಟಿಕ್ ಅಸೋಸಿಯೇಷನ್ ನೀಡುವ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿಯನ್ನ ನೀಡಿ ಗೌರವಿಸಲಾಗಿದೆ.

ಸಿಎಂ ವಿಜಯ್‌ ಹುಟ್ಟುಹಬ್ಬವನ್ನು ಆಚರಿಸಲಿಲ್ವಾ ನಟಿ ತ್ರಿಷಾ ಕೃಷ್ಣನ್? AI ಫೋಟೋ ಶೇರ್‌ ಮಾಡಿ ಯಾಮಾರಿಸಿದ್ರಾ? ಗಾಯಕಿಯ ಹೊಸ ಆರೋಪ!

ವಿಜಯ್ ಬರ್ತ್‌ಡೇ ಫೋಟೋ ನಕಲಿ? ಎಐ ಫೋಟೋ ಬಳಸಿ ಯಾಮಾರಿಸಿದ್ರಾ ನಟಿ ತ್ರಿಶಾ?

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್ ಅವರ 52ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಹಂಚಿಕೊಂಡಿದ್ದ ಫೋಟೋ ಸಂಪೂರ್ಣ ನಕಲಿ ಹಾಗೂ ಎಐ (AI) ಜನರೇಟೆಡ್ ಎಂದು ವಿವಾದಾತ್ಮಕ ಗಾಯಕಿ ಸುಚಿತ್ರಾ ಆರೋಪಿಸಿದ್ದಾರೆ. ಸುಚಿತ್ರಾ ಲೇವಡಿ ಮಾಡಿರುವ ವಿಡಿಯೋ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

'ಲವ್ ಸೀಸನ್ಸ್' ಚಿತ್ರದ ರೋಚಕ ಟ್ರೇಲರ್ ರಿಲೀಸ್: ಹೀರೋ ಮುಕುಂದ ರಾಮಸ್ವಾಮಿ ಬರ್ತ್‌ಡೇಗೆ ಚಿತ್ರತಂಡದಿಂದ ಸ್ಪೆಷಲ್‌ ಗಿಫ್ಟ್‌!

ʻಲವ್ ಸೀಸನ್ಸ್ʼ ಟ್ರೇಲರ್ ರಿಲೀಸ್: ಹೀರೋ ಜನ್ಮದಿನಕ್ಕೆ ಚಿತ್ರತಂಡದ ಗಿಫ್ಟ್

ಸ್ಯಾಂಡಲ್‌ವುಡ್‌ನ ಮುಂಬರುವ ಬಹುನಿರೀಕ್ಷಿತ ಚಿತ್ರ ‘ಲವ್ ಸೀಸನ್ಸ್’ ಅಧಿಕೃತ ಟ್ರೇಲರ್ ನಟ ಮುಕುಂದ ರಾಮಸ್ವಾಮಿ ಅವರ ಜನ್ಮದಿನದ ಅಂಗವಾಗಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಕೃತ್ವಿಕ್ ನಿರ್ದೇಶನದ ಹಾಗೂ ಎನ್.ಆರ್ ಮಂಜುನಾಥ ನಿರ್ಮಾಣದ ಈ ಚಿತ್ರದಲ್ಲಿ ರಂಗಭೂಮಿ ಹಿನ್ನೆಲೆಯ ಪ್ರತಿಭೆಗಳು ನಟಿಸಿದ್ದಾರೆ. ಈ ಚಿತ್ರವು ಜುಲೈ 3 ರಂದು ರಾಜ್ಯಾದ್ಯಂತ ತೆರೆಕಾಣಲಿದೆ.

ರೇಣುಕಾಸ್ವಾಮಿ ಕೊಲೆ ಕೇಸ್: ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೇಕೆ ನಟ ದರ್ಶನ್?

ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದೇಕೆ ನಟ ದರ್ಶನ್?

ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ವಿಳಂಬಗತಿಯನ್ನು ಉಲ್ಲೇಖಿಸಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ನಟ ದರ್ಶನ್ ತೂಗುದೀಪ ಸುಪ್ರೀಂ ಕೋರ್ಟ್‌ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿಗಳ ವಿಚಾರಣೆಗೆ ನಿಗದಿಪಡಿಸಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸಲು ದರ್ಶನ್‌ ಕೋರಿದ್ದಾರೆ.

ʻಮೋದಿ ಇವೆಂಟ್ ಮ್ಯಾನೇಜ್‌ಮೆಂಟ್ ವೈಫಲ್ಯʼ ಎಂದು ಲೇವಡಿ ಮಾಡಿದ ಟಿಎಂಸಿ ನಾಯಕನಿಗೆ ನಟ ಅನಿಲ್‌ ಕುಮಾರ್‌ ಖಡಕ್‌ ಉತ್ತರ! ಅಷ್ಟಕ್ಕೂ ಆಗಿದ್ದೇನು?

ʻದೇಶ ಮುನ್ನಡೆಸಲು ಮೋದಿಯೇ ಅತ್ಯುತ್ತಮ ಆಯ್ಕೆʼ ಎಂದ ನಟ ಅನಿಲ್ ಕುಮಾರ್

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತಲಾಘವ ಗಮನಿಸದೆ ಮುಂದೆ ಸಾಗಿದ ವಿಡಿಯೋ ಬಳಸಿ ಟ್ರೋಲ್ ಮಾಡಿದ ಟಿಎಂಸಿ ವಕ್ತಾರ ಸಾಕೇತ್ ಗೋಖಲೆಗೆ ನಟ, ವಿಜ್ಞಾನಿ ಡಾ. ಅನಿಲ್ ಕುಮಾರ್ ರಸ್ತೋಗಿ ಖಡಕ್ ಉತ್ತರ ನೀಡಿದ್ದಾರೆ.

ಭಾರತದಲ್ಲಿ ಹಾಲಿವುಡ್‌ನ Obsession ಸಿನಿಮಾ‌ ಬ್ಲಾಕ್‌ಬಸ್ಟರ್‌ ಹಿಟ್; ಕಲೆಕ್ಷನ್‌ ರಿಪೋರ್ಟ್‌ ಕೇಳಿ ದಂಗಾದ ನಿರ್ದೇಶಕ!

ಭಾರತದಲ್ಲಿನ ʻಒಬ್ಸೆಷನ್ʼ ಕಲೆಕ್ಷನ್‌ ರಿಪೋರ್ಟ್‌ ಕೇಳಿ ದಂಗಾದ ನಿರ್ದೇಶಕ!

ಕೇವಲ ಬರೀ 7 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಾಣವಾದ ‘ಒಬ್ಸೆಷನ್’ ಚಿತ್ರವು ವಿಶ್ವಾದ್ಯಂತ 2,240 ಕೋಟಿ ರೂ. ಕೊಳ್ಳೆಹೊಡೆದು ಐತಿಹಾಸಿಕ ದಾಖಲೆ ಬರೆದಿದೆ. ಭಾರತದಲ್ಲೂ ಈ ಚಿತ್ರಕ್ಕೆ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದ್ದು, ಭಾರತದಲ್ಲಿನ ಕಲೆಕ್ಷನ್ ರಿಪೋರ್ಟ್‌ ಕೇಳಿ ನಿರ್ದೇಶಕ ಕರಿ ಬಾರ್ಕರ್ ಆಶ್ಚರ್ಯ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ.

ನಟ ರಾಮ್‌ ಚರಣ್‌ಗೆ ಹೊಸ ಬಿರುದು ನೀಡಿದ ಪ್ರಧಾನಿ ನರೇಂದ್ರ ಮೋದಿ; ಅಪ್ಪ ಚಿರಂಜೀವಿ ಖುಷಿಗೆ ಪಾರವೇ ಇಲ್ಲ!

ರಾಮ್ ಚರಣ್‌ಗೆ ಹೊಸ ಬಿರುದು ಕೊಟ್ಟ ಪ್ರಧಾನಿ ಮೋದಿ; ಅಪ್ಪ ಚಿರಂಜೀವಿ ಭಾವುಕ

'ಪೆದ್ದಿ' ಚಿತ್ರದ ಭರ್ಜರಿ ಯಶಸ್ಸು ಕಂಡಿರುವ ನಟ ರಾಮ್ ಚರಣ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ 'ನ್ಯೂ ಏಜ್ ಮೆಗಾಸ್ಟಾರ್' ಎಂಬ ವಿಶೇಷ ಬಿರುದು ನೀಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ಪ್ರಧಾನಿ ಆಡಿದ ಈ ಮಾತುಗಳಿಗೆ ಮೆಗಾಸ್ಟಾರ್ ಚಿರಂಜೀವಿ ಭಾವುಕ ಟ್ವೀಟ್ ಮಾಡಿ, ಮಗನ ಸಾಧನೆಯನ್ನು ಕೊಂಡಾಡಿದ್ದಾರೆ.

'ಗೌರಿ ಕಲ್ಯಾಣ' ಸೀರಿಯಲ್‌ನಿಂದ ನಟ ನಿಖಿಲ್ ಔಟ್: ಅನಿಕೇತ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಪ್ರಭಂಜನ್ ನಾಯ್ಡು!

ʻಗೌರಿ ಕಲ್ಯಾಣʼ ಧಾರಾವಾಹಿಯ ಅನಿಕೇತ್ ಪಾತ್ರಕ್ಕೆ ಬಣ್ಣ ಹಚ್ಚಲಿರುವ ಪ್ರಭಂಜನ್

ಕಲರ್ಸ್ ಕನ್ನಡ ವಾಹಿನಿಯ ‘ಗೌರಿ ಕಲ್ಯಾಣ’ ಧಾರಾವಾಹಿಯಿಂದ ಅನಿಕೇತ್ ಪಾತ್ರಧಾರಿ ನಟ ನಿಖಿಲ್ ಎನ್. ದಿಢೀರ್ ಹೊರನಡೆದಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಆ ಪಾತ್ರಕ್ಕೆ 'ಶ್ರಾವಣಿ ಸುಬ್ರಹ್ಮಣ್ಯ' ಖ್ಯಾತಿಯ ಪ್ರಭಂಜನ್ ನಾಯ್ಡು ಬಣ್ಣ ಹಚ್ಚುತ್ತಿದ್ದಾರೆ.

Loading...