ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Rashmika Mandanna:  ಮತ್ತೆ ಕೆಲಸದ ಕಡೆಗೆ ಗಮನ ಹರಿಸಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್‌

ಮತ್ತೆ ಕೆಲಸದ ಕಡೆಗೆ ಗಮನ ಹರಿಸಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್‌

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರ ಮೂರು ದಿನಗಳ ಆಚರಣೆಯು ಪ್ರೀತಿ, ನಗು ಮತ್ತು ಮರೆಯಲಾಗದ ನೆನಪುಗಳಿಂದ ತುಂಬಿತ್ತು. ಈ ಜೋಡಿ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ತಾರಾಬಳಗದ ಆರತಕ್ಷತೆಯನ್ನು ಸಹ ಆಯೋಜಿಸಿತ್ತು, ಇದರಲ್ಲಿ ಕರಣ್ ಜೋಹರ್, ಅಲ್ಲು ಅರ್ಜುನ್, ಕೃತಿ ಸನೋನ್, ರಾಮ್ ಚರಣ್, ಮೃಣಾಲ್ ಠಾಕೂರ್, ರಾಣಾ ದಗ್ಗುಬಾಟಿ ಮತ್ತು ಹಲವಾರು ಇತರ ಗಣ್ಯರು ಭಾಗವಹಿಸಿದ್ದರು.

Sara Ali Khan: ಕೇದಾರನಾಥ, ಬದ್ರಿನಾಥ್​​ ದೇವಾಲಯಕ್ಕೆ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾಗೆ ಪ್ರವೇಶವಿಲ್ಲ!ಕಾರಣ ಇದು

ಕೇದಾರನಾಥ ದೇವಾಲಯಕ್ಕೆ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾಗೆ ಪ್ರವೇಶವಿಲ್ಲ!

Sara Ali Khan: ಬಾಲಿವುಡ್ ನಟಿ ಸಾರಾ ಅಲಿ ಖಾನ್, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಪದೇ ಪದೇ ಭೇಟಿ ನೀಡುತ್ತಲೇ ಇರುತ್ತಾರೆ. ಸಾರಾ ಅಲಿ ಖಾನ್ಇತ್ತೀಚೆಗೆ ಮಹಾಶಿವರಾತ್ರಿಯಂದು ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಇನ್ನು ಮುಂದೆ ಅವರು ಈ ದೇವಾಲಯಗಳಿಗೆ ಭೇಟಿ ನೀಡುವಂತಿಲ್ಲ. ಕಾರಣ ಏನು?

ʻಯಶ್‌ ಡಿಪ್ರೆಷನ್‌ನಲ್ಲಿದ್ದಾರೆʼ ಎಂದಿದ್ದ ತೆಲುಗು ಜ್ಯೋತಿಷಿ ವೇಣು ಸ್ವಾಮಿ ಮೇಲೆ ʻರಾಕಿ ಭಾಯ್‌ʼ ಅಮ್ಮ ಪುಷ್ಪಾ ಗರಂ

ʻಯಶ್‌ಗೆ ಖಿನ್ನತೆʼ ಅಂತ್ಹೇಳಿದ್ದ ಜ್ಯೋತಿಷಿಗೆ ತಾಯಿ ಪುಷ್ಪಾ ವಾರ್ನಿಂಗ್!

ಹೈದರಾಬಾದ್‌ನ ಜ್ಯೋತಿಷಿ ವೇಣು ಸ್ವಾಮಿ ಅವರು ಯಶ್ ಖಿನ್ನತೆಯಲ್ಲಿದ್ದಾರೆ ಎಂದು ನೀಡಿದ್ದ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ತಕ್ಕ ಉತ್ತರ ನೀಡಿದ್ದಾರೆ. "ನನ್ನ ಮಗ ಕಲ್ಲುಗುಂಡು, ಅವನ ಬಗ್ಗೆ ಗೊತ್ತಿಲ್ಲದೆ ಪಬ್ಲಿಸಿಟಿಗಾಗಿ ಮಾತನಾಡಬೇಡಿ" ಎಂದು ಜ್ಯೋತಿಷಿಯ ವಿರುದ್ಧ ಅವರು ಹರಿಹಾಯ್ದಿದ್ದಾರೆ.

Actor Darshan: ದರ್ಶನ್‌ಗೆ​ ಕೊಂಚ ನಿರಾಳ; ಇನ್ನೋರ್ವ ಆರೋಪಿಗೆ ದಂಡ

ದರ್ಶನ್‌ಗೆ​ ಕೊಂಚ ನಿರಾಳ; ಇನ್ನೋರ್ವ ಆರೋಪಿಗೆ ದಂಡ

Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ, ಅವರ ಕುಟುಂಬಸ್ಥರು ಒಳಗೆ ಬಂದು ಭೇಟಿಯಾಗಲು ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ಭೇಟಿಗೆ ಅವಕಾಶ ನೀಡುವಂತೆ ಕೋರಿ ದರ್ಶನ್​ ಅವರು ಮಾಡಿಕೊಂಡಿರುವ ಮನವಿಯನ್ನು ಸೆಷನ್ಸ್​ ಕೋರ್ಟ್​ ಮಾನ್ಯ ಮಾಡಿದೆ. ಈ ಮೂಲಕ ಜೈಲಿನ ಒಳ ಸಂದರ್ಶನಕ್ಕೆ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದ್ದು, ಇನ್ನು ಅವರ ಕುಟುಂಬಸ್ಥರು ನಟನನ್ನು ಜೈಲಿನ ಒಳಗೆ ಭೇಟಿ ಮಾಡಬಹುದಾಗಿದೆ. ಕಳೆದ ವಿಚಾರಣೆ ವೇಳೆ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪವನ್ (ಎ3) ಪರ ವಕೀಲರು, ಪ್ರಕರಣದ ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದರು ಪವನ್ ಪರ ವಕೀಲರ ಅರ್ಜಿ ಕುರಿತು ಆದೇಶ ನೀಡಿರುವ ನ್ಯಾಯಲಯವು, ಪವನ್ ಪರ ವಕೀಲರಿಗೆ ದಂಡ ವಿಧಿಸಿದೆ.

KD: The Devil: 'ಚೋಲಿ ಕೆ ಪೀಚೆ ಕ್ಯಾ ಹೈ, ʻಪೀಲಿಂಗ್ಸ್‌ʼ ಚೆನ್ನಾಗಿತ್ತಾ? ರಕ್ಷಿತಾ ಖಡಕ್‌ ರಿಯಾಕ್ಷನ್

'ಚೋಲಿ ಕೆ ಪೀಚೆ ಕ್ಯಾ ಹೈ, ಪೀಲಿಂಗ್ಸ್‌ ಚೆನ್ನಾಗಿತ್ತಾ? ರಕ್ಷಿತಾ ರಿಯಾಕ್ಷನ್

KD: The Devil: ʻಕೆಡಿʼ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ಈಗ ವಿವಾದದ ಸುಳಿಗೆ ಸಿಲುಕಿದೆ. ಕಳಪೆ ಸಾಹಿತ್ಯದ ವಿರುದ್ಧ ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಚಿತ್ರದ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಹಿಂದಿ ವರ್ಷನ್ ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ದೂರು ದಾಖಲಾಗಿ ಚಿತ್ರತಂಡಕ್ಕೆ ನೋಟಿಸ್ ಜಾರಿಯಾಗಿದೆ.ಈ ಬಗ್ಗೆ ಇದೀಗ ರಕ್ಷಿತಾ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಪತಿಯ ಬೆಂಬಲಕ್ಕೆ ನಿಂತಿದ್ದಾರೆ.

KD-The Devil Movie: ಸೆರಗಿನ ತಂಟೆಗೆ ಹೋದ ʻಕೆಡಿʼ ಟೀಮ್‌; ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದೇನು?

'ಕೆಡಿ' ಹಾಡಿನ ಬಗ್ಗೆ ರಾಜ್ಯ ಮಹಿಳಾ ಆಯೋಗ ಗರಂ; ಸೆನ್ಸಾರ್ ಮಂಡಳಿಗೆ ಪತ್ರ

ಕೆಡಿ ಚಿತ್ರದ ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ವಿವಾದ ತಾರಕಕ್ಕೇರಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಈಗ ಮಧ್ಯಪ್ರವೇಶಿಸಿದೆ. ಹಾಡಿನಲ್ಲಿರುವ ಅಶ್ಲೀಲ ಸಾಹಿತ್ಯ ಮತ್ತು ಹೆಣ್ಣು ಮಕ್ಕಳ ಕುರಿತಾದ ಹಗುರ ಪದಬಳಕೆಯನ್ನು ಖಂಡಿಸಿರುವ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಸೆನ್ಸಾರ್ ಮಂಡಳಿ ಹಾಗೂ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ʻನಂಗೆ ನಯನತಾರಾ ಬೇಕು, ಮದುವೆ ಮಾಡಿಸ್ತಾರಾʼ; ಎಐಎಡಿಎಂಕೆ ಸಂಸದನ ಕೀಳುಮಟ್ಟದ ಹೇಳಿಕೆ, ನೆಟ್ಟಿಗರಿಂದ ತೀವ್ರ ತರಾಟೆ!

ʻನಂಗೆ ನಯನತಾರಾ ಬೇಕು..ʼ; ನಾಲಿಗೆ ಹರಿಬಿಟ್ಟ AIADMK ಸಂಸದ ಸಿ ವಿ ಷಣ್ಮುಗಂ

ಮಹಿಳಾ ಸುರಕ್ಷತೆಗಾಗಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ AIADMK ಪಕ್ಷದ ಸಂಸದ ಸಿ ವಿ ಷಣ್ಮುಗಂ, ಸಿಎಂ ಸ್ಟಾಲಿನ್ ಅವರನ್ನು ಟೀಕಿಸುವ ಭರದಲ್ಲಿ ನಟಿ ನಯನತಾರಾ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಇಂತಹ ಅಸಭ್ಯ ಮಾತುಗಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು, ಸಂಸದನ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

Jogi Prem: ಯೂಟ್ಯೂಬ್‌ನಿಂದ ಸೈಡಿಗೆ ಸರಿದ ʻಕೆಡಿʼ ಚಿತ್ರದ ಹಿಂದಿ ವರ್ಷನ್‌ ಸಾಂಗ್;‌ ನೋಟಿಸ್‌ ಕೊಟ್ಟಿದ್ದು ಯಾರು?

ಯೂಟ್ಯೂಬ್‌ನಿಂದ 'ಕೆಡಿ' ಹಿಂದಿ ಹಾಡು ಔಟ್; ದಾಖಲಾಯ್ತು ದೂರು!

ಕೆಡಿ ಚಿತ್ರದ ಕಾಂಟ್ರವರ್ಸಿ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಚಿತ್ರದ ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆʼ ಹಾಡಿನ ಹಿಂದಿ ವರ್ಷನ್‌ 'ಸರ್ಕೆ ಚುನರ್ ತೇರಿ ಸರ್ಕೆ' ಎಂಬ ಹಿಂದಿ ಹಾಡಿನಲ್ಲಿ ಅಶ್ಲೀಲ ಸಾಹಿತ್ಯವಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ನೋಟಿಸ್ ನೀಡಿದೆ. ಅದರ ಬೆನ್ನಲ್ಲೇ ಯೂಟ್ಯೂಬ್‌ನಿಂದ ಹಾಡನ್ನು ತೆಗೆದುಹಾಕಲಾಗಿದೆ. ದೆಹಲಿ ಪೊಲೀಸರಿಗೂ ಈ ಬಗ್ಗೆ ದೂರು ಸಲ್ಲಿಕೆಯಾಗಿದೆ.

ʻನಿನ್ನ ಹುಟ್ಟುಹಬ್ಬ ನಮ್ಮೆಲ್ಲರಿಗೂ ಹಬ್ಬʼ; ಪುನೀತ್‌ ಜನ್ಮದಿನಕ್ಕೆ ಶಿವಣ್ಣನ ಸ್ಪೆಷಲ್‌ ಪೋಸ್ಟ್‌, ವಿಶ್‌ ಮಾಡಿದ ರಶ್ಮಿಕಾ !

ಅಪ್ಪು ಜನ್ಮದಿನ: ʻನಿನ್ನ ಹುಟ್ಟುಹಬ್ಬ ನಮ್ಮೆಲ್ಲರಿಗೂ ಹಬ್ಬʼ ಎಂದ ಶಿವಣ್ಣ!

‌ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನದ ಪ್ರಯುಕ್ತ ಇಡೀ ಕರ್ನಾಟಕವೇ ಅವರನ್ನು ನೆನೆಯುತ್ತಿದೆ. ಪುನೀತ್‌ ರಾಜ್‌ಕುಮಾರ್ ಇಲ್ಲದಿದ್ದರೂ ಅವರ 51ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದು, ಹಿರಿಯಣ್ಣ ಶಿವರಾಜ್‌ಕುಮಾರ್ ಅಂತರಾಳದ ಮಾತುಗಳ ಮೂಲಕ ತಮ್ಮನಿಗೆ ಶುಭಾಶಯ ಕೋರಿದ್ದಾರೆ.

ಅಂದು ʻಅಯ್ಯʼ ಸಿನಿಮಾಗೆ ಬಂದ ಸ್ಥಿತಿಯೇ ʻಕೆಡಿʼ ಚಿತ್ರಕ್ಕೂ ಬರಬಹುದೇ? ʻಸೆರಗು ಸರ್ಸೆʼ ಹಾಡನ್ನು ಮೂಲೆಗೆ ಸರಿಸಿದ ಸಿನಿಪ್ರಿಯರು!

ʻಜೋಗಿʼ ಪ್ರೇಮ್ ಬರೆದ ʻಸೆರಗ ಸರ್ಸೆ' ಹಾಡಿಗೆ ಸಿನಿಪ್ರಿಯರ ಕೆಂಗಣ್ಣು!

ʻಕೆಡಿʼ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ಈಗ ವಿವಾದದ ಸುಳಿಗೆ ಸಿಲುಕಿದೆ. 2005ರಲ್ಲಿ ದರ್ಶನ್ ನಟನೆಯ 'ಅಯ್ಯ' ಚಿತ್ರದ ಹಾಡಿಗೆ ಸೆನ್ಸಾರ್ ಕತ್ತರಿ ಬಿದ್ದಂತೆ, ಈಗ 'ಕೆಡಿ' ಚಿತ್ರದ ಹಾಡಿಗೂ ಅದೇ ಸ್ಥಿತಿ ಬರಬಹುದೇ ಎಂಬ ಚರ್ಚೆ ಶುರುವಾಗಿದೆ. ಕಳಪೆ ಸಾಹಿತ್ಯದ ವಿರುದ್ಧ ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ.

KD Movie: ‘ಸರ್ಸೆ ನಿನ್ನ ಸೆರಗ’ ಹಾಡಿನ ಸಾಹಿತ್ಯಕ್ಕೆ ಆಕ್ರೋಶ; ಪ್ರೇಮ್ ವಿರುದ್ಧ ಜನರು ಗರಂ

‘ಸರ್ಸೆ ನಿನ್ನ ಸೆರಗ’ ಹಾಡಿನ ಸಾಹಿತ್ಯಕ್ಕೆ ಆಕ್ರೋಶ!

Director Prem: ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ ನಟಿಸಿರುವ ‘ಕೆಡಿʼ ಸಿನಿಮಾದ ಹೊಸ ಹಾಡು ಔಟ್‌ ಆಗಿರೋದು ಗೊತ್ತೇ ಇದೆ. ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್​​ನಲ್ಲಿ ಬಿಡುಗಡೆ ಆಗಿರುವ ‘ಸೆರಗ ಸರ್ಸೆ’ ಹಾಡು ಲಿರಿಕಲ್ ಹಾಡಾಗಿದ್ದು, ಹಾಡಿನ ವಿಡಿಯೋಗಳು ಕಡಿಮೆ ಇವೆ. ಈ ಹಾಡಿನಲ್ಲಿ ನೋರಾ ಫತೇಹಿ ಅವರು ಡ್ಯಾನ್ಸ್ ಮಾಡಿದ್ದಾರೆ. ಆದ್ದರಿಂದ ದೊಡ್ಡ ಮಟ್ಟದ ಪ್ರಚಾರ ಸಿಕ್ಕಿದೆ. ಇವರೊಂದಿಗೆ ಬಾಲಿವುಡ್‌ ನಟರಾದ ಸಂಜಯ್ ದತ್, ಶಿಲ್ಪಾ ಶೆಟ್ಟಿ ನಟಿಸಿದ್ದಾರೆ. ಹಾಗೇ ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 'ಕೆಡಿ' ಸಿನಿಮಾದ ನಾಲ್ಕನೇ ಹಾಡಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗುತ್ತಿದೆ.

Khushbu Sundar: ತ್ರಿಶಾ ಅತ್ಯಂತ ಸೌಮ್ಯ ಸ್ವಭಾವದವರು; ನಟಿಯ ಬೆಂಬಲಕ್ಕೆ ನಿಂತ ಖುಷ್ಬೂ ಸುಂದರ್

Khushbu Sundar: ತ್ರಿಶಾ ಬೆಂಬಲಕ್ಕೆ ನಿಂತ ಖುಷ್ಬೂ ಸುಂದರ್

Vijay and Trisha Krishnan: ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದಾಗ ಇನ್ನಷ್ಟು ವದಂತಿಗಳು ಹೆಚ್ಚಾಯ್ತು. ತಮಿಳುನಾಡು ಚುನಾವಣೆ ಅನೌನ್ಸ್ ಆದ ಬೆನ್ನಲ್ಲೇ ವಿಜಯ್‌ಗೆ ಇದೆಲ್ಲ ಬೇಡವಾಗಿತ್ತು ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಅದರಲ್ಲೂ ತ್ರಿಶಾರನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಈಗ, ನಟಿ-ರಾಜಕಾರಣಿ ಖುಷ್ಬು ಸುಂದರ್ ನಟನ ವೈಯಕ್ತಿಕ ಜೀವನದ ಬಗ್ಗೆ ಹಾಗೂ ತ್ರಿಶಾ ಅವರನ್ನು ಬೆಂಬಲಿಸಿ ಮಾತನಾಡಿದ್ದಾರೆ ತ್ರಿಶಾ ಬಗ್ಗೆ ಆಗುತ್ತಿರೋ ಚರ್ಚೆ, ಹರಡುತ್ತಿರೋ ವದಂತಿಗಳನ್ನು ಗಮನಿಸಿರೋ ನಟಿ ಖುಷ್ಬೂ ಸಂದರ್ಶನವೊಂದರಲ್ಲಿ ತ್ರಿಶಾ ಸಪೋರ್ಟ್‌ಗೆ ಬಂದಿದ್ದಾರೆ.

Puneeth Birthday: ಸಹಾಯ ಮಾಡಿದ ಮೇಲೆ ಇದೊಂದು ಕಂಡಿಷನ್‌ ಹಾಕುತ್ತಿದ್ರಂತೆ ಪುನೀತ್ ! ಏನದು?

ಸಹಾಯ ಮಾಡಿದ ಮೇಲೆ ಇದೊಂದು ಕಂಡಿಷನ್‌ ಹಾಕುತ್ತಿದ್ರಂತೆ ಪುನೀತ್ ! ಏನದು?

Puneeth Birthday: ಪುನೀತ್ ರಾಜ್​​ಕುಮಾರ್ ಅವರಿಗೆ ಇಂದು (ಮಾರ್ಚ್ 17) ಜನ್ಮದಿನ. ಕನ್ನಡ ಚಿತ್ರರಂಗದ ಧ್ರುವತಾರೆ, ಅಪ್ಪು ಎಂದೇ ಆಪ್ತವಾಗಿ ಕರೆಯಲ್ಪಡುವ ಪುನೀತ್ ರಾಜ್‌ಕುಮಾರ್ ಅವರನ್ನು ಇಂದಿಗೂ ಸ್ಮರಿಸುತ್ತಾರೆ ಫ್ಯಾನ್ಸ್‌. ಪುನೀತ್‌ ಅವರನ್ನು ಕೇವಲ ನಟನೆಗೆ ಮಾತ್ರವಲ್ಲ, ಅವರ ಸಮಾಜ ಸೇವೆ, ನಿರೂಪಣೆ, ಸೇರಿದಂತೆ ಅನೇಕ ವಿಚಾರಗಳಿಗೆ ಖ್ಯಾತಿ ಗಳಿಸಿದ್ದಾರೆ. ಕನ್ನಡದ ಕೋಟ್ಯಧಿಪತಿಯಲ್ಲಿ ನಿರೂಪಕರಾಗಿದ್ದರು. ಈ ವೇಳೆ ಅವರು ಹಲವರ ಸಹಾಯಕ್ಕೆ ನಿಂತಿದ್ದರು. ಈ ಬಗ್ಗೆ ಯಾರೊಬ್ಬರಿಗೂ ಅವರು ಹೇಳಿಕೊಳ್ಳುತ್ತಾ ಇರಲಿಲ್ಲ ಎಂಬುದು ವಿಶೇಷ. ಹಾಗಾದ್ರೆ ಸಹಾಯ ಮಾಡಿದ ಬಳಿಕ ಪುನೀತ್ ರಾಜ್​​ಕುಮಾರ್ ಹಾಕುತ್ತಿದ್ದ ಆ ಒಂದು ಕಂಡಿಷನ್‌ ಏನಾಗಿತ್ತು?

Puneeth Rajkumar Birthday: ಇಂದು ಪುನೀತ್‌ ರಾಜ್‌ಕುಮಾರ್‌ ಜನ್ಮದಿನ; ಅಪ್ಪು ಪ್ರಯಾಣವೇ ಸ್ಫೂರ್ತಿದಾಯಕ

ಇಂದು ಪುನೀತ್‌ ರಾಜ್‌ಕುಮಾರ್‌ ಜನ್ಮದಿನ; ಅಪ್ಪು ಪ್ರಯಾಣವೇ ಸ್ಫೂರ್ತಿದಾಯಕ

Puneeth Rajkumar Birthday: ಮಾರ್ಚ್‌ 17 ದಿವಂಗತ ಪುನೀತ್‌ ರಾಜ್‌ಕುಮಾರ್‌ ಅವರ ಜನ್ಮದಿನ. ಕನ್ನಡಿಗರ ಹೃದಯದಲ್ಲಿ ಅಜರಾಮರ ಆಗಿರುವ ರಾಜಕುಮಾರನನ್ನು ಕರುನಾಡೇ ನೆನಪಿಸಿಕೊಳ್ಳುತ್ತಿದೆ. ಅಭಿಮಾನಿಗಳು ಅಪ್ಪುವಿನ ಜನ್ಮದಿನದ ನೆನಪಿನಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.

Actor Upendra: ಸಿಲಿಂಡರ್‌ಗೂ ನನಗೂ ಲಿಂಕ್‌ ಇಲ್ಲ;  ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ

ಸಿಲಿಂಡರ್‌ಗೂ ನನಗೂ ಲಿಂಕ್‌ ಇಲ್ಲ; ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ

Upendra: ಸಿನಿಮಾ ಆಗಲಿ, ರಾಜಕೀಯ ವಿಚಾರಗಳೇ ಆಗಲಿ ಅಥವಾ ಸಮಾಜದ ಆಗು ಹೋಗುಗಳ ಕುರಿತು ಹೇಳುವ ರೀತಿ ಉಪೇಂದ್ರ ಅವರ ಸ್ಟೈಲ್‌ ಬೆರೆಯೇ. ಉಪ್ಪಿ ಶೇರ್ ಮಾಡಿದ ಪ್ರತಿ ಪೋಸ್ಟ್‌ನಲ್ಲೂ ಸೀಕ್ರೆಟ್‌ ಅರ್ಥಗಳು ಒಳಗೊಂಡಿರುತ್ತೆ. ಅದೇ ರೀತಿ ನಿನ್ನೆ ಕೂಡ ಒಂದು ಪೋಸ್ಟ್ ಶೇರ್ ಮಾಡಿದ್ದರು. ಇಂದೂ ಒಂದು ಪೋಸ್ಟ್‌ ಶೇರ್‌ ಮಾಡಿದ್ದಾರೆ. ನಾನು ಶೇರ್‌ ಮಾಡಿದ ಲಿಂಕ್‌ಗೂ ಸಿಲಿಂಡರ್‌ ಫೋಟೋಗೂ ನೀವು ತಿಳಿದುಕೊಂಡ ರೀತಿಗೂ ಸಂಬಂಧವಿಲ್ಲ ಎಂದಿದ್ದಾರೆ.

Rashmika Mandanna: ಹಳದಿ ಶಾಸ್ತ್ರದ ಫೋಟೊ ಹಂಚಿಕೊಂಡ ವಿರೋಶ್‌; ಜೋಡಿ ಸಂಭ್ರಮ ಹೀಗಿತ್ತು

ಹಳದಿ ಶಾಸ್ತ್ರದ ಫೋಟೊ ಹಂಚಿಕೊಂಡ ವಿರೋಶ್‌!

Viiaj Devarkonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಹಳದಿ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೋಳಿಗಿಂತ ಕಡಿಮೆಯೇನಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡರು, "ಹಲ್ದಿ + ಹೋಳಿಯಂತೆ ಭಾಸವಾಗುತ್ತಿದೆ" ಎಂದು ಬಹಿರಂಗಪಡಿಸಿದರು.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮೊಮ್ಮಗನ ವಿಶ್ವ ದಾಖಲೆ: ರೂಬಿಕ್ಸ್ ಕ್ಯೂಬ್‌ನಲ್ಲಿ ಶಿವತೇಜ ಮ್ಯಾಜಿಕ್!

ರೂಬಿಕ್ಸ್ ಕ್ಯೂಬ್‌ನಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಮೊಮ್ಮಗನ ವಿಶ್ವ ದಾಖಲೆ

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಮೊಮ್ಮಗ ಶಿವತೇಜ ವೈ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕೇವಲ 1 ಗಂಟೆ 27 ನಿಮಿಷಗಳಲ್ಲಿ 21 ಬಾರಿ ಮಿಶ್ರಣಗೊಂಡ 'ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್' ಬಿಡಿಸುವ ಮೂಲಕ ಇಂಡಿಯಾ, ಏಷ್ಯಾ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತ್ರಿವಳಿ ದಾಖಲೆ ಬರೆದಿದ್ದಾರೆ.

Dharmendra: ಆಸ್ಕರ್​ ವೇದಿಕೆಯಲ್ಲಿ ಧರ್ಮೇಂದ್ರಗೆ ತಪ್ಪಿದ ಗೌರವ; ಅತ್ಯಂತ ನಾಚಿಕೆಗೇಡು ಎಂದ ಹೇಮಾ ಮಾಲಿನಿ

ಧರ್ಮೇಂದ್ರಗೆ ತಪ್ಪಿದ ಗೌರವ; ಅತ್ಯಂತ ನಾಚಿಕೆಗೇಡು ಎಂದ ಹೇಮಾ ಮಾಲಿನಿ

Hema Malini : ನಟ ಧರ್ಮೇಂದ್ರ ಅವರ ಬಗ್ಗೆ 98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ 'ಇನ್ ಮೆಮೋರಿಯಮ್' ವಿಭಾಗದಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದೀಗ ಹಿರಿಯ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದಾರೆ . ಆಸ್ಕರ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಸ್ತೃತ ಪಟ್ಟಿಯಲ್ಲಿ ಧರ್ಮೇಂದ್ರ ಅವರನ್ನು ಗೌರವಿಸಲಾಗಿದ್ದರೂ, ನೇರ ಪ್ರಸಾರದಿಂದ ಅವರನ್ನು ಕೈಬಿಡಲಾಗಿದೆ ಎಂಬುದು ಭಾರತದಾದ್ಯಂತ ಅನೇಕ ಅಭಿಮಾನಿಗಳನ್ನು (Fans) ನಿರಾಶೆಗೊಳಿಸಿತು. ಈ ಬಗ್ಗೆ ಹೇಮಾ ಮಾಲಿನಿ ಇದು ಅತ್ಯಂತ "ನಾಚಿಕೆಗೇಡು" ಎಂದು ಕರೆದಿದ್ದಾರೆ.

Actress Sreeleela: ವೇದಿಕೆಯಲ್ಲಿ ನಟ ಮಹೇಶ್ ಕಂಡು ಶ್ರೀಲೀಲಾ ಗರಂ? ಅಸಲಿ ಮ್ಯಾಟರ್‌ ಏನು?

ವೇದಿಕೆಯಲ್ಲಿ ನಟ ಮಹೇಶ್ ಕಂಡು ಶ್ರೀಲೀಲಾ ಗರಂ? ಅಸಲಿ ಮ್ಯಾಟರ್‌ ಏನು?

Actress Sreeleela: "ಉಸ್ತಾದ್ ಭಗತ್ ಸಿಂಗ್" ಚಿತ್ರದ ಪೂರ್ವ ಬಿಡುಗಡೆ ಸಮಾರಂಭದಲ್ಲಿ ನಾಯಕಿ ಶ್ರೀಲೀಲಾ ಮತ್ತು ನಟ ರಂಗಸ್ಥಳಂ ಮಹೇಶ್ ನಡುವಿನ ಒಂದು ಸಣ್ಣ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಭಾನುವಾರ(ಮಾರ್ಚ್ 15) ಸಂಜೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಹೈದರಾಬಾದ್‌ನಲ್ಲಿ ನಡೀತು. ಕಾರ್ಯಕ್ರಮದ ವೇಳೆ ಶ್ರೀಲೀಲಾ ಅವರು ತಮ್ಮ ಹಿಂದೆ ನಿಂತಿದ್ದ ನಟ ಮಹೇಶ್ ಆಚಂಟ ಕಡೆಗೆ ಅಸಮಾಧಾನದಿಂದ ತಿರುಗಿ ನೋಡಿದರು ಎನ್ನಲಾಗುತ್ತಿದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

ನಂಬಿಕೆಯ ಸುತ್ತ ಹೊಸೆಯಲ್ಪಟ್ಟ ವಿಶಿಷ್ಟ ಪ್ರೇಮಕಥೆ; ಶೂಟಿಂಗ್‌ ಮುಗಿಸಿದ ರಂಗಭೂಮಿ ಕಲಾವಿದರ ʻಲವ್‌ ಸೀಸನ್ಸ್‌ʼ ಸಿನಿಮಾ

ರಂಗಭೂಮಿ ಕಲಾವಿದರ 'ಲವ್ ಸೀಸನ್ಸ್' ಸಿನಿಮಾ ಶೂಟಿಂಗ್ ಕಂಪ್ಲೀಟ್‌

ನವಿರು ಪ್ರೇಮಕಥೆಯ ಎಳೆ ಇರುವ ಲವ್‌ ಸೀಸನ್ಸ್‌ ಸಿನಿಮಾವು ಚಿತ್ರೀಕರಣ ಪೂರೈಸಿದೆ. ರಂಗಭೂಮಿ ಹಿನ್ನೆಲೆಯ ಕೃತ್ವಿಕ್ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ 'ನಟನಾ' ಸಂಸ್ಥೆಯ ಮುಕುಂದ ರಾಮಸ್ವಾಮಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಗಲ್ಲಿಗಳ ನೈಜ ಕಥೆ ಈ ಚಿತ್ರದಲ್ಲಿದ್ದು, ರಂಗಭೂಮಿಯ ದಿಗ್ಗಜ ಕಲಾವಿದರ ದಂಡೇ ಚಿತ್ರದಲ್ಲಿದೆ.

Shreya Ghoshal: ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅಚ್ಚರಿಯ ಹೇಳಿಕೆ!

ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅಚ್ಚರಿಯ ಹೇಳಿಕೆ!

Shreya Ghoshal: ಬಾಲಿವುಡ್‌ನಲ್ಲಿ ಹಿನ್ನೆಲೆ ಗಾಯನದಿಂದ ದೂರ ಸರಿಯುವ ಅರಿಜಿತ್ ಸಿಂಗ್ ಅವರ ನಿರ್ಧಾರದ ಬಗ್ಗೆ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿರಾಮ ತೆಗೆದುಕೊಳ್ಳುವ ಆಲೋಚನೆ ಕೂಡ ಅವರ ಮನಸ್ಸಿಗೆ ಬಂದಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ರೀತಿ ನಿರ್ಧಾರ ಮಾಡಿದ ಅರಿಜಿತ್ ಅವರ ಧೈರ್ಯವನ್ನು ಗಾಯಕಿ ಶ್ಲಾಘಿಸಿದ್ದಾರೆ.

ಒಟಿಟಿ ವೇದಿಕೆಗಳು ಒದ್ದಾಡುತ್ತಿವೆಯೇ? ಲಾಭದ ಹಾದಿಗಾಗಿ ಈಗ ಜಾಹೀರಾತುಗಳೇ ಗತಿ! ಹಿಂಗಾದ್ರೆ ಮುಂದೇನಾಗ್ಬೋದು ಭವಿಷ್ಯ?

ಹಿಂಗೆ ಆದ್ರೆ ಮುಂದೇನಾಗ್ಬೋದು OTT ವೇದಿಕೆಗಳ ಭವಿಷ್ಯ? ಏನ್ ಹೇಳತ್ತೆ ವರದಿ?

ಒಟಿಟಿ ವೇದಿಕೆಗಳ ಸವಾಲಿನ ಕುರಿತಾದ ವರದಿಯು ಡಿಜಿಟಲ್ ಮನರಂಜನಾ ಲೋಕದ ಆತಂಕಕಾರಿ ಸತ್ಯಗಳನ್ನು ಬಿಚ್ಚಿಟ್ಟಿದೆ. ಕೋವಿಡ್ ಕಾಲದಲ್ಲಿ ಭಾರಿ ಏರಿಕೆ ಕಂಡಿದ್ದ ಒಟಿಟಿ ಮಾರುಕಟ್ಟೆ ಈಗ ಸ್ಯಾಚುರಶನ್ ಹಂತ ತಲುಪಿದ್ದು, ಲಾಭ ಗಳಿಸಲು ಜಾಹೀರಾತು ಆಧಾರಿತ ಮಾದರಿಗಳಿಗೆ ಮೊರೆ ಹೋಗುತ್ತಿದೆ.

ʻಬಾಸ್‌ ಸಿನಿಮಾಗೆ ಸೆನ್ಸಾರ್‌ ಸೆರ್ಟಿಫಿಕೇಟ್‌ ಕೊಡಬಾರದು..ʼ; ನಟ ದರ್ಶನ್‌ ಲಾಯರ್‌ ಕಡೆಯಿಂದ ನೋಟಿಸ್! ನಿರ್ದೇಶಕರು ಹೇಳಿದ್ದೇನು?

'ಬಾಸ್' ಚಿತ್ರಕ್ಕೆ ಸರ್ಟಿಫಿಕೇಟ್ ನೀಡದಂತೆ ಸೆನ್ಸಾರ್ ಮಂಡಳಿಗೆ ನೋಟಿಸ್‌!

ತನುಷ್‌ ಶಿವಣ್ಣ ನಟನೆಯ ʻಬಾಸ್‌ʼ ಚಿತ್ರಕ್ಕೆ ನಟ ದರ್ಶನ್ ಪರ ವಕೀಲರು ನೋಟಿಸ್ ನೀಡುವ ಮೂಲಕ ತಡೆ ಒಡ್ಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುತ್ತಿದೆ ಎಂದು ಆರೋಪಿಸಿ ಸೆನ್ಸಾರ್ ಮಂಡಳಿಗೆ ದೂರು ನೀಡಲಾಗಿದೆ. ಆದರೆ, ಇದು ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಮಾಡಿದ ಸಿನಿಮಾ ಅಲ್ಲ ಎಂದು ನಿರ್ದೇಶಕ ಲವ ಸ್ಪಷ್ಟಪಡಿಸಿದ್ದಾರೆ.

ಸಲ್ಮಾನ್‌ ಖಾನ್‌ ನಟನೆಯ ʻಬ್ಯಾಟಲ್ ಆಫ್ ಗಲ್ವಾನ್ʼ ಚಿತ್ರದ ಟೈಟಲ್‌ ಚೇಂಜ್;‌ ʻಮಾತೃಭೂಮಿʼ ಎಂದು ಬದಲಾವಣೆ ಮಾಡಿದ್ದೇಕೆ?

ಸಲ್ಮಾನ್ ಖಾನ್ ಹೊಸ ಚಿತ್ರದ ಟೈಟಲ್ ದಿಢೀರ್‌ ಚೇಂಜ್: ಹೊಸ ಶೀರ್ಷಿಕೆ ಏನು?

ಸಲ್ಮಾನ್ ಖಾನ್ ಅವರ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಶೀರ್ಷಿಕೆಯನ್ನ ಈಗ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಎಂದು ಬದಲಾವಣೆ ಮಾಡಲಾಗಿದೆ. ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Loading...