ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

ಅಲ್ಲು ಅರ್ಜುನ್‌ ಬಗ್ಗೆ ಇಲ್ಲಸಲ್ಲದ ಹೇಳಿಕೆ; ಅಖಾಡಕ್ಕಿಳಿದ ‌ʻಐಕಾನ್‌ ಸ್ಟಾರ್‌ʼ ಟೀಮ್, ಮಾತಾಡಿದವರೀಗ ಕೋರ್ಟ್‌ ಮೆಟ್ಟಿಲು ಹತ್ತೋದು ಗ್ಯಾರಂಟಿ!

ಅಲ್ಲು ಅರ್ಜುನ್ ವರ್ಚಸ್ಸಿಗೆ ಧಕ್ಕೆ ತಂದವರ ವಿರುದ್ಧ ಮಾನನಷ್ಟ ಮೊಕದ್ದಮೆ‌!

Allu Arjun Controversy: ಅಲ್ಲು ಅರ್ಜುನ್‌ ಅವರ ಪ್ರೊಟೊಕಾಲ್‌ ಕುರಿತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಲ್ಲು ಅರ್ಜುನ್ ಅವರನ್ನು ಭೇಟಿಯಾಗಲು 42 ಕಠಿಣ ನಿಯಮಗಳಿವೆ ಎಂಬ ಸುಳ್ಳು ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ಅವರ ತಂಡ ಕಾನೂನು ಸಮರಕ್ಕೆ ಮುಂದಾಗಿದೆ.

Ranveer Singh: ರಣವೀರ್ ಸಿಂಗ್‌ಗೆ  ಬೆದರಿಕೆ ಕರೆ; ವಾಯ್ಸ್‌ ಮೆಸೇಜ್‌ನಲ್ಲಿ ಕೋಟಿ ಕೋಟಿ ಹಣಕ್ಕೆ ಡಿಮ್ಯಾಂಡ್‌

ರಣವೀರ್ ಸಿಂಗ್‌ಗೆ ಬೆದರಿಕೆ ಕರೆ; ಹಣಕ್ಕೆ ಡಿಮ್ಯಾಂಡ್‌

Ranveer Singh : ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಮಂಗಳವಾರ, ಫೆಬ್ರವರಿ 10 ರಂದು ವಾಟ್ಸಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಕಳಿಸಿ ಬೆದರಿಕೆ ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ ಕೋಟ್ಯಂತರ ರೂಪಾಯಿಗಳನ್ನು ಬೇಡಿಕೆಯಿಡಲಾಗಿದೆ ಎಂದು ವರದಿಯಾಗಿದೆ. ಈ ಸಂದೇಶವು ಭದ್ರತಾ ಕಳವಳವನ್ನು ಹುಟ್ಟುಹಾಕಿದ್ದು, ಮುಂಬೈ ಪೊಲೀಸರು ನಟನ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಬೆದರಿಕೆ ಕಳುಹಿಸಿದವರು ಮತ್ತು ಅದರ ಹಿಂದಿನ ಉದ್ದೇಶವನ್ನು ಪತ್ತೆಹಚ್ಚಲು ಅವರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Anirudh Bhat: ನಾನು ಫುಲ್ ಟೈಮ್ ವಿಡಿಯೋ ಎಡಿಟರ್, ಪಾರ್ಟ್ ಟೈಮ್ ಆಕ್ಟರ್! ಅನಿರುದ್ಧ್ ಭಟ್

ಅನಿರುದ್ಧ್ ಭಟ್ ವಿಲನ್ ಆದ ಕಥೆಯಿದು

Anirudh Bhat rakkasapuradhol: ರವಿ ಸಾರಂಗ ನಿರ್ದೇಶನದಲ್ಲಿ ರಾಜ್‌ ಬಿ ಶೆಟ್ಟಿ ನಟನೆಯ 'ರಕ್ಕಸಪುರದೋಳ್' ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ರಾಜ್‌. ಬಿ ಶೆಟ್ಟಿ ಹಾಗೂ ಗೋಪಾಲಕೃಷ್ಣ ದೇಶಪಾಂಡೆ ಬಿಟ್ಟರೆ ಬಹುತೇಕ ಹೊಸಬರೇ ಚಿತ್ರದಲ್ಲಿ ನಟಿಸಿದ್ದಾರೆ.'ರಕ್ಕಸಪುರದೋಳ್' ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ ಎದುರು ರಕ್ಕಸನಂತೆ ಅಬ್ಬರಿಸಿರುವ ಅನಿರುದ್ಧ್ ಭಟ್ ಎಲ್ಲರ ಗಮನ ಸೆಳೆದಿದ್ದಾರೆ.

ದರ್ಶನ್‌ ಹುಟ್ಟುಹಬ್ಬ; ʻಡಿ ಬಾಸ್‌ʼ ಅನುಪಸ್ಥಿತಿಯಲ್ಲೂ ಅರ್ಥಪೂರ್ಣವಾಗಿ ಸೆಲೆಬ್ರೇಟ್‌ ಮಾಡಲು ʻಸೆಲೆಬ್ರಿಟೀಸ್‌ʼ ರೆಡಿ

ದರ್ಶನ್ ಜನ್ಮದಿನ: ‌ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಲು ಡಿ ಫ್ಯಾನ್ಸ್ ಕರೆ

Darshan Birthday Celebration: ನಟ ದರ್ಶನ್ ಜೈಲಿನಲ್ಲಿದ್ದರೂ, ಅವರ ಹುಟ್ಟುಹಬ್ಬವನ್ನು (ಫೆಬ್ರವರಿ 16) ಸಮಾಜಮುಖಿ ಕೆಲಸಗಳ ಮೂಲಕ ಆಚರಿಸಲು 'ಡಿ ಕಂಪನಿ' ಮತ್ತು ಅಭಿಮಾನಿಗಳು ನಿರ್ಧರಿಸಿದ್ದಾರೆ. ಹೂವು, ಕೇಕ್ ಮತ್ತು ಪಟಾಕಿಗಳ ಅಬ್ಬರದ ಬದಲು ಅನಾಥಾಶ್ರಮಗಳಿಗೆ ಅನ್ನದಾನ, ಬಟ್ಟೆ ವಿತರಣೆ ಮತ್ತು ರಕ್ತದಾನ ಶಿಬಿರಗಳನ್ನು ಆಯೋಜಿಸಲು ಕರೆ ನೀಡಿದ್ದಾರೆ.

Sushma Raj: ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼ ಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು: ತಂದೆ ನೆನೆದು ಭಾವುಕ!

ʻಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫುʼ ಖ್ಯಾತಿಯ ಸುಷ್ಮಾ ರಾಜ್​ಗೆ ಗಂಡು ಮಗು

sushma Raj : ಕರಾವಳಿಯ ʻಹೆಣ್ಣು ಹುಲಿʼ ಎಂದೇ ಫೇಮಸ್‌ ಆಗಿರುವ ಸುಷ್ಮಾ ರಾಜ್‌ಗೆ ಗಂಡು ಮಗುವಿನ ಜನನವಾಗಿದೆ.ಫೆಬ್ರವರಿಯಲ್ಲಿ ನಿಧನರಾದ ತಮ್ಮ ತಂದೆ ಅಶೋಕ್ ಅವರೇ ಮಗನಾಗಿ ಮರುಹುಟ್ಟು ಪಡೆದಿದ್ದಾರೆ ಎಂದು, 'ಅಶೋಕ್ ರಾಜ್ ಈಸ್ ಬ್ಯಾಕ್' ಎಂದು ಬರೆದುಕೊಂಡಿದ್ದಾರೆ. ಕನ್ನಡದ ಕೆಲ ಧಾರಾವಾಹಿ , ಸಿನಿಮಾಗಳಲ್ಲಿ ನಟಿಸಿರುವ, ಹುಲಿ ಕುಣಿತದಲ್ಲಿಯೇ ಜನಪ್ರಿಯತೆ ಪಡೆದಿದ್ದರು ನಟಿ ಸುಷ್ಮಾ ರಾಜ್ ಕಾಡಬೆಟ್ಟು.

'ವೀರ ಕಂಬಳ' ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ನಟನೆ: ಈ ಸಿನಿಮಾ ಯಾವಾಗ ಬಿಡುಗಡೆ?

'ವೀರ ಕಂಬಳ' ಚಿತ್ರದಲ್ಲಿ ಬಣ್ಣ ಹಚ್ಚಿದ ಡಾ. ವೀರೇಂದ್ರ ಹೆಗ್ಗಡೆ

ಕರಾವಳಿಯ ಜಾನಪದ ಕ್ರೀಡೆ ಕಂಬಳದ ಹಿನ್ನೆಲೆಯಲ್ಲಿ 'ವೀರ ಕಂಬಳ' ಚಿತ್ರ ಮೂಡಿಬರುತ್ತಿದ್ದು, ಫೆಬ್ರವರಿ 27ರಂದು ತೆರೆಗೆ ಬರಲು ಸಿದ್ಧವಾಗಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ನಟಿಸಿರುವುದು ವಿಶೇಷ.

Chaithra Kundapura: ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಮಹಿಳಾ ಸ್ಪರ್ಧಿ ಬಗ್ಗೆ ಚೈತ್ರಾ ಕುಂದಾಪುರ ಹೊಸ ಪೋಸ್ಟ್‌!

ಯಾರಿಗೆ ಎಷ್ಟು ಗಂಡಂದಿರು ಇದ್ದಾರೆ? ಚೈತ್ರಾ ಕುಂದಾಪುರ ಹೊಸ ಪೋಸ್ಟ್‌!

Chaithra Kundapura: ಬಿಗ್​​ ಬಾಸ್ ಗುಂಗಿನಿಂದ ಜನ ಹೊರಗೆ ಬಂದಿದ್ರೂ, ಸ್ಪರ್ಧಿಗಳು ಮಾತ್ರ ಇದುವೆರೆಗೆ ಅದೇ ಗುಂಗಿನಲ್ಲಿ ಇರುವಂತಿದೆ. ಬಿಗ್​ ಬಾಸ್​ ಸೀಸನ್​ 12ರ ಶೋನಲ್ಲಿ ವೈಲ್ಡ್​​ ಕಾರ್ಡ್ ಎಂಟ್ರಿ ಮೂಲಕ ರಜತ್ ಹಾಗೂ ಚೈತ್ರಾ ಕುಂದಾಪುರ ಬಿಗ್​​ ಬಾಸ್​ ಮನೆಗೆ ಬಂದಿದ್ರು. ಆಗ ಚೈತ್ರಾ ಹಾಗೂ ಅಶ್ವಿನಿ ನಡುವೆ ವಾರ್ ಜೋರಾಗಿತ್ತು. ಇದೀಗ ಅಶ್ವಿನಿ ಪೋಸ್ಟ್ ಒಂದನ್ನ​ ಶೇರ್​​ ಮಾಡಿದ್ದು, ಚೈತ್ರಾ ಕುಂದಾಪುರ ಅವರನ್ನು ಕೆರಳುವಂತೆ ಮಾಡಿದೆ. ಆದರೆ ಈ ಶೀತಲಸಮರ ಬಿಗ್‌ ಬಾಸ್‌ ಮನೆಯಿಂದ ಆಚೆ ಬಂದಮೇಲೂ ನಿಲ್ಲುವಂತೆ ಕಾಣುತ್ತಿಲ್ಲ.

Yash: ʻಟಾಕ್ಸಿಕ್‌ʼ ಚಿತ್ರದ ಓವರ್‌ಸೀಸ್‌ ಹಕ್ಕುಗಳು ದುಬಾರಿ ಮೊತ್ತಕ್ಕೆ ಸೇಲ್;‌ ಖರೀದಿ ಮಾಡಿದವರು ಯಾರು?

Toxic ಚಿತ್ರದ ಐತಿಹಾಸಿಕ ವಿದೇಶಿ ಡೀಲ್; ದಾಖಲೆ ಮೊತ್ತಕ್ಕೆ ಹಕ್ಕುಗಳು ಸೇಲ್!

Toxic Movie Overseas Rights: ಟಾಕ್ಸಿಕ್‌ ಸಿನಿಮಾದ ವಿತರಣಾ ವ್ಯವಹಾರವು ಈಗ ಜಾಗತಿಕ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಫಾರ್ಸ್ ಫಿಲ್ಮ್ (Phars Film) ಸಂಸ್ಥೆಯು 'ಟಾಕ್ಸಿಕ್' ಚಿತ್ರದ ವಿದೇಶಿ ಹಕ್ಕುಗಳನ್ನು ದುಬಾರಿ ಮೊತ್ತಕ್ಕೆ ಖರೀದಿ ಮಾಡಿದೆ. ಮಾರ್ಚ್ 19 ರಂದು ಈ ಸಿನಿಮಾ ತೆರೆಕಾಣುತ್ತಿದೆ.

ಮತ್ತೊಂದು ಥ್ರಿಲ್ಲಿಂಗ್‌ ಕೇಸ್‌ ಜೊತೆ ಬಂದ ನಟ ವಿಜಯ್ ರಾಘವೇಂದ್ರ; ಕುತೂಹಲ ಕೆರಳಿಸಿದ ʻಸೀತಾರಾಮ್‌ʼ!

Second Case of Seetharam Movie: ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ

Second Case of Sitharam Movie: ವಿಜಯ್ ರಾಘವೇಂದ್ರ ಮತ್ತೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. 'ಸೀತಾರಾಮ್ ಬಿನೋಯ್: ಕೇಸ್ ನಂಬರ್ 18' ಚಿತ್ರದ ಮುಂದುವರಿದ ಭಾಗವಾಗಿರುವ ʻಸೆಕೆಂಡ್ ಕೇಸ್ ಆಫ್‌ ಸೀತಾರಾಮ್ʼ ಸಸ್ಪೆನ್ಸ್ ಥ್ರಿಲ್ಲರ್ ಅನ್ನು ದೇವಿ ಪ್ರಸಾದ್ ಶೆಟ್ಟಿ ನಿರ್ದೇಶಿಸಿದ್ದಾರೆ. ಚಿತ್ರದ ಪವರ್‌ಫುಲ್ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಕಲರ್ಸ್‌ ಕನ್ನಡದಲ್ಲಿ ದೊಡ್ಮನೆ ಹಬ್ಬದ ಮೆರುಗು; ಭರ್ಜರಿ ಮನರಂಜನೆ ನೀಡಲು ಬಿಗ್ ಬಾಸ್ ಕನ್ನಡ 12 ಸ್ಪರ್ಧಿಗಳು ರೆಡಿ

ಕಲರ್ಸ್‌ ದೊಡ್ಮನೆ ಹಬ್ಬ; ʻಬಿಗ್ ಬಾಸ್ʼ ಸ್ಪರ್ಧಿಗಳಿಂದ ಭರ್ಜರಿ ಮನರಂಜನೆ!

Colors Dodmane Habba: ಕಲರ್ಸ್‌ ಕನ್ನಡ ವಾಹಿನಿಯು ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಸ್ಪರ್ಧಿಗಳನ್ನೆಲ್ಲಾ ಒಟ್ಟಾಗಿ ಸೇರಿಸಿ ಕಲರ್ಸ್‌ ದೊಡ್ಮನೆ ಹಬ್ಬ ಎಂಬ ದೃಶ್ಯ ವೈಭವದ ಅದ್ದೂರಿ ಸಮಾರಂಭವನ್ನು ವೀಕ್ಷಕರ ಮುಂದಿಡಲು ರೆಡಿಯಾಗಿದೆ. ಫೆಬ್ರವರಿ 14ರಂದು ಈ ಶೋ ಪ್ರಸಾರವಾಗಲಿದೆ.

‌Bigg Boss 12: ʻನನಗೂ ಪರಚಿದ ಕಲೆಗಳಿವೆ, ಆದ್ರೆ ಸಿಂಪತಿ ತಗೋಳೋ ಹುಚ್ಚು ನನಗಿಲ್ಲʼ; ಅಶ್ವಿನಿ ಗೌಡ ವಿರುದ್ಧ ಕಿಡಿಕಾರಿದ್ರಾ ಚೈತ್ರಾ ಕುಂದಾಪುರ?

ಬಿಗ್ ಬಾಸ್‌ ಮುಗಿದರೂ ನಿಲ್ಲದ ಜಗಳ; ಅಶ್ವಿನಿ ಮೇಲೆ ಚೈತ್ರಾ ಕುಂದಾಪುರ ಕಿಡಿ!

ಬಿಗ್ ಬಾಸ್ ಮನೆಯೊಳಗೆ ಅತಿಥಿಯಾಗಿ ಹೋಗಿದ್ದ ಚೈತ್ರಾ ಕುಂದಾಪುರ ಮತ್ತು ಸ್ಪರ್ಧಿ ಅಶ್ವಿನಿ ಗೌಡ ನಡುವಿನ ಜಗಳ ಮುಂದುವರಿದಿದೆ. ಟಾಸ್ಕ್ ವೇಳೆ ಅಶ್ವಿನಿ ತಮಗೆ ಗಾಯಗೊಳಿಸಿದ್ದನ್ನು ಹೇಳಿರುವ ಚೈತ್ರಾ, "ಸಿಂಪತಿ ಗಿಟ್ಟಿಸಿಕೊಳ್ಳಲು ನನ್ನ ಬಳಿ ಪಿಆರ್ ಟೀಮ್ ಇಲ್ಲ" ಎಂದು ಅಶ್ವಿನಿ ಗೌಡ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ʻಸೂಪರ್‌ ಹಿಟ್‌ʼ ಸಿನಿಮಾಗೆ ಅದೃಷ್ಟ‌ ತಂದುಕೊಟ್ಟ ʻಬಿಗ್‌ ಬಾಸ್‌ʼ ಗಿಲ್ಲಿ ನಟ; ಬಾಯ್ತುಂಬಾ ಹೊಗಳಿದ ಡೈರೆಕ್ಟರ್‌!

'ಸೂಪರ್ ಹಿಟ್' ಚಿತ್ರಕ್ಕೆ ಬಂಪರ್ ಬ್ಯುಸಿನೆಸ್ ತಂದುಕೊಟ್ಟ ಗಿಲ್ಲಿ ನಟ!

Super Hit Movie News: ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತರಾದ ಗಿಲ್ಲಿ ನಟ ಅಭಿನಯದ 'ಸೂಪರ್ ಹಿಟ್' ಚಿತ್ರಕ್ಕೆ ಭರ್ಜರಿ ಹೈಪ್ ಸಿಕ್ಕಿದೆ. ವಿಜಯಾನಂದ್ ನಿರ್ದೇಶನದ ಈ ಕಾಮಿಡಿ ಸಸ್ಪೆನ್ಸ್ ಥ್ರಿಲ್ಲರ್ ಫೆಬ್ರವರಿ 27ಕ್ಕೆ ತೆರೆಗೆ ಬರಲಿದ್ದು, ಗಿಲ್ಲಿಯ ಬಿಗ್ ಬಾಸ್ ಗೆಲುವಿನ ಪ್ರಭಾವದಿಂದ ಈ ಚಿತ್ರದ ಬ್ಯುಸಿನೆಸ್ ಉತ್ತಮವಾಗಿ ನಡೆಯುತ್ತಿದೆ ನಿರ್ದೇಶಕರು ಸಂತಸ ಹಂಚಿಕೊಂಡಿದ್ದಾರೆ.

Kannada Movie: ಉತ್ತರ ಕರ್ನಾಟಕದ ಸೊಗಡಿನ ಕಥೆ; ʻಹುಬ್ಬಳ್ಳಿ ಹಂಟರ್ಸ್ʼ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

ʻಹುಬ್ಬಳ್ಳಿ ಹಂಟರ್ಸ್ʼ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

Hubballi Hunters: ಕನ್ನಡದ ಸೂಪರ್ ಹಿಟ್ ಸಿನಿಮಾ ಬೆಲ್ ಬಾಟಮ್ ನಿರ್ಮಾಪಕ ಸಂತೋಷ್ ಕುಮಾರ್ ಕೆಸಿ ಹೊಸ ಸಿನಿಮಾ ನಿರ್ಮಾಣಕ್ಕಿಳಿದಿರುವುದು ಗೊತ್ತೇ ಇದೆ. ತಮ್ಮದೇ ಗೋಲ್ಡನ್ ಹಾರ್ಸ್ ಸಿನಿಮಾ ಬ್ಯಾನರ್‌ನಡಿ‌ ಹುಬ್ಬಳ್ಳಿ ಹಂಟರ್ಸ್ ಎಂಬ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಈ ಹಿಂದೆ ಎಡಗೈ ಅಪಘಾತಕ್ಕೆ ಕಾರಣ ಚಿತ್ರ ನಿರ್ದೇಶಿಸಿದ್ದ ಸಮರ್ಥ್ ಬಿ‌ ಕಡ್ಕೋಲ್ ಹುಬ್ಬಳ್ಳಿ ಹಂಟರ್ಸ್ ನಿರ್ದೇಶಕರು. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದ ಪ್ರಮೋದ್ ಶೆಟ್ಟಿ ಹುಬ್ಬಳ್ಳಿ ಹಂಟರ್ಸ್ ಸಿನಿಮಾದ ನಾಯಕ. ಮಹಾನಟಿ‌ ಖ್ಯಾತಿಯ ಧನ್ಯಶ್ರೀ ಸುಜಿತ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿದ್ದಾರೆ.

Ram Charan: ನಟ ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು; ಸಂಭ್ರಮಿಸಿದ್ದು ಹೀಗೆ

ರಾಮ್ ಚರಣ್, ಉಪಾಸನಾ ಬಾಳಲ್ಲಿ ಅವಳಿ ಮಕ್ಕಳು; ಸಂಭ್ರಮಿಸಿದ್ದು ಹೀಗೆ!

Ram Charan: ಜನವರಿ 31 ರಂದು ರಾಮ್ ಚರಣ್ ಮತ್ತು ಉಪಾಸನಾ ಕೊನಿಡೇಲಾ ಅವಳಿ ಮಕ್ಕಳನ್ನು ಸ್ವಾಗತಿಸಿದರು. ರಾಮ್ ಮತ್ತು ಉಪಾಸನಾಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗು ಆಗಿದೆ. ರಾಮ್ ಚರಣ್ ಮತ್ತು ಉಪಾಸನ ಅವರ ಈ ಸಂತೋಷದ ಕ್ಷಣಗಳ ವಿಡಿಯೋ ವೈರಲ್‌ ಆಗಿದೆ. ಉಪಾಸನಾ ಅಪೊಲೊದಲ್ಲಿಯೇ (apollo) ಡೆಲವರಿ ಮಾಡಿಕೊಂಡಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರ ಮೊದಲ ಮಗು, ಮಗಳು ಕ್ಲಿನ್ ಕಾರಾ ಕೊನಿಡೇಲಾ ಜನಿಸಿದ ಆಸ್ಪತ್ರೆಯಲ್ಲಿನ ಅದೇ ಹೆರಿಗೆ ಕೊಠಡಿಯನ್ನು ಸಹ ಆರಿಸಿಕೊಂಡರು.

Allu Arjun: ಖ್ಯಾತ ಬಾಲಿವುಡ್​ನ  ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಮೂವಿ?

ಖ್ಯಾತ ಬಾಲಿವುಡ್​ನ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಮೂವಿ?

Sanjay Leela Bhansali: ಅಲ್ಲು ಅರ್ಜುನ್ ಪ್ರಸ್ತುತ ಅಟ್ಲೀ ನಿರ್ದೇಶನದ ತಾತ್ಕಾಲಿಕವಾಗಿ AA22xA6 ಎಂಬ ತಮ್ಮ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ, ಯಾವುದೇ ಅಧಿಕೃತವಾಗಿ ಅಪ್‌ಡೇಟ್‌ ಮಾಡದಿದ್ದರೂ, ನಟ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರೊಂದಿಗೆ ಸಿನಿಮಾ ಮಾಡಬಹುದು ಎಂಬ ಊಹಾಪೋಹಗಳಿದ್ದವು. ಆದಾಗ್ಯೂ, ಈಗ ಈ ಯೋಜನೆ ವಿಳಂಬವಾಗಿದೆ ಮತ್ತು ನಟ ಅದನ್ನು ಕೈಬಿಟ್ಟಿಲ್ಲ ಎಂದು ತೋರುತ್ತದೆ.

Amitabh Bachchan: ʻಅತ್ತೆ-ಮಾವ ನನ್ನ ಹೆಂಡತಿಯನ್ನು ಕಳುಹಿಸುತ್ತಿಲ್ಲʼ;  ಅಮಿತಾಭ್ ಕೈಯಲ್ಲಿ ಪೋಸ್ಟರ್‌!

ಅಭಿಮಾನಿಗಳ ಮುಂದೆ ಪೋಸ್ಟರ್‌ ಹಿಡಿದು ನಿಂತ ಅಮಿತಾಭ್‌!

Amitabh Bachchan: ಮುಂಬೈನಲ್ಲಿ ಭಾನುವಾರ ಅಭಿಮಾನಿಗಳೊಂದಿಗಿನ ಭೇಟಿಯಲ್ಲಿ ನಟ ಅಮಿತಾಬ್ ಬಚ್ಚನ್ ಪೋಸ್ಟರ್ ಹಿಡಿದು ಕುಳಿತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪೋಸ್ಟರ್‌ನಲ್ಲಿ ಬರೆಯಲಾದ ಸಂದೇಶವು ಅನೇಕ ಜನರನ್ನು ಅಚ್ಚರಿಗೊಳಿಸುತ್ತಿದೆ. ವಾಸ್ತವವಾಗಿ, ಅಮಿತಾಬ್ ಬಚ್ಚನ್ ಪ್ರತಿ ಭಾನುವಾರ ತಮ್ಮ ಮನೆಯ ಹೊರಗೆ ತಮ್ಮ ಅಭಿಮಾನಿಗಳನ್ನು ಭೇಟಿಯಾಗುತ್ತಾರೆ. ಭಾನುವಾರ ಅಭಿಮಾನಿಗಳೊಂದಿಗಿನ ಅವರ ಭೇಟಿಯ ಸಮಯದಲ್ಲಿ ಪೋಸ್ಟರ್‌ ಗಮನ ಸೆಳೆದಿದೆ.

Vijay Sethupathi : ʻರಾಮಾಯಣʼ ಸಿನಿಮಾದಲ್ಲಿ ವಿಜಯ್ ಸೇತುಪತಿ? ವದಂತಿಗಳ ಬಗ್ಗೆ ಕೊನೆಗೂ ಕ್ಲಾರಿಟಿ ಕೊಟ್ಟ ನಟ

ʻರಾಮಾಯಣʼ ಸಿನಿಮಾದಲ್ಲಿ ವಿಜಯ್ ಸೇತುಪತಿ?

Ramayana: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಪೌರಾಣಿಕ ಚಿತ್ರ 'ರಾಮಾಯಣ' ಘೋಷಣೆಯಾದ ಕ್ಷಣದಿಂದಲೇ ಸಾಕಷ್ಟು ಸಂಚಲನ ಸೃಷ್ಟಿಸಿತು. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟಿಸಿರುವ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಇತ್ತೀಚೆಗೆ, ಮೂವೀಸ್ ಸಿಂಗಾಪುರದ ವರದಿಯ ಪ್ರಕಾರ, ರಾಮಾಯಣದ ನಿರ್ಮಾಪಕರು ಚಿತ್ರದಲ್ಲಿ ರಾವಣನ ಕಿರಿಯ ಸಹೋದರ ವಿಭೀಷಣ ಪಾತ್ರದ ವಿಚಾರವಾಗಿ ವಿಜಯ್ ಸೇತುಪತಿ ಅವರೊಂದಿಗೆ ಚರ್ಚೆಯಲ್ಲಿದ್ದಾರೆ.

ʻಬಿಗ್‌ ಬಾಸ್‌ʼನಿಂದ ಬಂದ ದುಡ್ಡಲ್ಲಿ ಗಿಲ್ಲಿ ನಟ 25 ಎಕರೆ ಜಮೀನು ತಗೊಂಡ್ರಾ? ವೈರಲ್‌ ಸುದ್ದಿಗೆ ತಮ್ಮದೇ ಸ್ಟೈಲ್‌ನಲ್ಲಿ ಡಿಚ್ಚಿ ಕೊಟ್ಟ ಪಳಾರ್!‌

ಗಿಲ್ಲಿ ನಟ 25 ಎಕರೆ ಜಮೀನು ತಗೊಂಡ್ರಾ? ವೈರಲ್ ಸುದ್ದಿ ಬಗ್ಗೆ ಹೇಳಿದ್ದೇನು?

25 ಎಕರೆ ಜಮೀನು ಖರೀದಿ ಮಾಡಿದ್ದಾರೆ ಎಂಬ ವೈರಲ್ ಸುದ್ದಿಗೆ ಸ್ವತಃ ಬಿಗ್ ಬಾಸ್ ವಿಜೇತ ಗಿಲ್ಲಿ ನಟ ಬ್ರೇಕ್ ಹಾಕಿದ್ದಾರೆ. 25 ಎಕರೆ ಜಮೀನು ಖರೀದಿಸಿ ಫಾರ್ಮ್‌ಹೌಸ್ ಮಾಡಿದ್ದಾರೆ ಎಂಬ ವದಂತಿಯನ್ನು ತಳ್ಳಿಹಾಕಿರುವ ಅವರು, "ನಾನು ಜಮೀನು ತಗೊಂಡಿರುವ ವಿಚಾರ ನನಗೇ ಗೊತ್ತಿಲ್ಲ" ಎಂದು ತಮಾಷೆ ಮಾಡಿದ್ದಾರೆ.

Prakash Raj: Spirit ಚಿತ್ರದಿಂದ ಪ್ರಕಾಶ್​ ರಾಜ್​  ಔಟ್ ಆಗಿದ್ದು ಹೌದಾ? ನಿಜಕ್ಕೂ ಆಗಿದ್ದೇನು?

Spirit ಚಿತ್ರದಿಂದ ಪ್ರಕಾಶ್​ ರಾಜ್​ ಔಟ್ ಆಗಿದ್ದು ಹೌದಾ?

spirit Movie: ಸಂದೀಪ್ ರೆಡ್ಡಿ ವಂಗಾ ಅವರ ಸ್ಪಿರಿಟ್ ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಪ್ರಭಾಸ್ ಮತ್ತು ತ್ರಿಪ್ತಿ ದಿಮ್ರಿ ನಟಿಸಿರುವ ಈ ಚಿತ್ರವು ಮಾರ್ಚ್ 7, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ಕೆಲವು ದಿನಗಳಿಂದ, ನಟ ಪ್ರಕಾಶ್ ರಾಜ್ ಅವರು ಚಿತ್ರದ ತಂಡದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಯೋಜನೆಯಿಂದ ಹೊರನಡೆದಿದ್ದಾರೆ ಎಂದು ವರದಿಗಳಿವೆ.

Gilli Nata: ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

ದರ್ಶನ್ ಭೇಟಿ ಆಗ್ತಾರಾ ಗಿಲ್ಲಿ ? ಕೊನೆಗೂ ಕ್ಲಾರಿಟಿ ಕೊಟ್ಟ ನಟ

Gilli Nata: ಬಿಗ್​​ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟನಿಗೆ ಸಾಲು ಸಾಲು ಚಿತ್ರಗಳಲ್ಲಿ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಗಿಲ್ಲಿ ನಟ ಪ್ರಮುಖ ಪಾತ್ರ ಮಾಡಿರುವ ‘ಸೂಪರ್ ಸ್ಟಾರ್ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಆ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗಿಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜೈಲಿನಲ್ಲಿರುವ ದರ್ಶನ್ ಭೇಟಿಗೆ ಹೋಗ್ತೀರಾ ಎನ್ನುವ ಪ್ರಶ್ನೆ ಕೂಡ ಎದುರಾಗಿತ್ತು. ಈ ಬಗ್ಗೆ ಗಿಲ್ಲಿ ಉತ್ತರ ನೀಡಿದ್ದು ಹೀಗೆ.

ಬಾಕ್ಸ್‌ ಆಫೀಸ್‌ ಮಾತ್ರವಲ್ಲ, ಕಿರುತೆರೆಯಲ್ಲೂ ʻಕಾಂತಾರ: ಚಾಪ್ಟರ್‌ 1ʼ ಅಬ್ಬರ; ಟಿಆರ್‌ಪಿಯಲ್ಲಿ ಹೊಸ ದಾಖಲೆ!

ಬಾಕ್ಸ್‌ ಆಫೀಸ್‌ ಆಯ್ತು, ಈಗ ಕಿರುತೆರೆಯಲ್ಲೂ Kantara: Chapter 1 ದರ್ಬಾರ್

Kantara-Chapter 1 TRP Record: ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ ʻಕಾಂತಾರ: ಚಾಪ್ಟರ್‌ 1ʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 900 ಕೋಟಿ ರೂ. ಗಳಿಸಿದ ಬೆನ್ನಲ್ಲೇ, ಜೀ ಕನ್ನಡದಲ್ಲಿ ಪ್ರಸಾರವಾದ ತನ್ನ 'ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್' ಮೂಲಕ ಕಿರುತೆರೆಯಲ್ಲೂ ದಾಖಲೆ ಬರೆದಿದೆ.

Gilli Nata: ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ! ಸ್ಪಷ್ಟನೆ ಕೊಟ್ಟ ನಟ

ಈ ಕಾರಣಕ್ಕೆ ತಮ್ಮದೇ ಸಿನಿಮಾ ಪ್ರಚಾರಕ್ಕೆ ಹೋಗಿಲ್ಲ ಗಿಲ್ಲಿ!

Gilli Nata Bigg Boss : ಬಿಗ್​​ಬಾಸ್ ಕನ್ನಡ ಸೀಸನ್ 12 ವಿನ್ನರ್ ಗಿಲ್ಲಿ ನಟ (Gilli Nata) ಕರ್ನಾಟಕದಲ್ಲಿ ಸದ್ಯ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಗಿಲ್ಲಿ ನಟನಿಗೆ ಅವಕಾಶಗಳು ಸಿಗುತ್ತಿವೆ. ಅಲ್ಲದೆ ಬಿಗ್ ಬಾಗ್ ಗೂ ಮುನ್ನವೇ ಹಲವು ಚಿತ್ರಗಳಲ್ಲಿ ಗಿಲ್ಲಿ ನಟ ಅಭಿನಯಿಸಿದ್ದರು. ಸರ್ಕಾರಿ ಶಾಲೆ ಎಚ್​​8 ಹೆಸರಿನ ಸಿನಿಮಾನಲ್ಲಿ ಗಿಲ್ಲಿ ನಟ ನಟಿಸಿದ್ದು, ಬಿಡುಗಡೆ ಕೂಡ ಕಂಡಿತ್ತು.

ʻಹೃದಯಂʼ ಚಿತ್ರಕ್ಕಾಗಿ ʻಮಹಾನಟಿʼ ಖ್ಯಾತಿಯ ಆರಾಧನಾ ಭಟ್‌ಗೆ ಜೋಡಿಯಾದ ಪೃಥ್ವಿ ಶಾಮನೂರು

ʻಹೃದಯಂʼ ಚಿತ್ರಕ್ಕೆ ಮುಹೂರ್ತ; ಪೃಥ್ವಿ ಶಾಮನೂರುಗೆ 'ಮಹಾನಟಿ' ಆರಾಧನಾ ಜೋಡಿ

Hrudayam Movie News: 'ಪದವಿಪೂರ್ವ' ಖ್ಯಾತಿಯ ಪೃಥ್ವಿ ಶಾಮನೂರು ಮತ್ತು 'ಮಹಾನಟಿ' ಶೋ ಮೂಲಕ ಮನೆಮಾತಾದ ಆರಾಧನಾ ಭಟ್ ಹೃದಯಂ ಚಿತ್ರದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ರಜತ್ ಸೂರ್ಯವಂಶಿ ನಿರ್ದೇಶನದ ಈ ಸಿನಿಮಾ 2000-2006ರ ಕಾಲಘಟ್ಟದಲ್ಲಿ ನಡೆಯುವ ನೈಜ ಪ್ರೇಮಕಥೆಯನ್ನು ಹೊಂದಿದ್ದು, ಶ್ರೀಬಂಡೆ ಮಹಾಂಕಾಳಮ್ಮ ದೇವಸ್ಥಾನದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಮುಹೂರ್ತ ನೆರವೇರಿಸಿಕೊಂಡಿದೆ.

40ನೇ ವಯಸ್ಸಿನಲ್ಲಿ ಮತ್ತೆ ತಾಯಿಯಾಗುತ್ತಿದ್ದಾರೆ ಸೋನಮ್‌ ಕಪೂರ್; ಅದ್ದೂರಿಯಾಗಿ ನಡೆದ ಸೀಮಂತ ಶಾಸ್ತ್ರ

40ನೇ ವಯಸ್ಸಿನಲ್ಲಿ ಸೋನಮ್‌ ಗರ್ಭಿಣಿ; ಅದ್ದೂರಿಯಾಗಿ ನಡೆದ ಸೀಮಂತ ಶಾಸ್ತ್ರ!

ನಟಿ ಸೋನಮ್‌ ಕಪೂರ್‌ ಅವರು 40ನೇ ವಯಸ್ಸಿನಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಆ ಹಿನ್ನಲೆಯಲ್ಲಿ ಫೆಬ್ರವರಿ 8ರಂದು ಮುಂಬೈನಲ್ಲಿ ಅದ್ದೂರಿ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಪತಿ ಆನಂದ್ ಅಹುಜಾ ಮತ್ತು ಕಪೂರ್ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆದ ಈ ಸಮಾರಂಭಕ್ಕೆ ಕರೀನಾ ಕಪೂರ್ ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದ್ದಾರೆ.

Loading...