ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Malayalam film: ಸೆಲೆಬ್ರಿಟಿಗಳೇ ಇಲ್ಲದೇ 100 ಕೋಟಿ ರೂ ಕಲೆಕ್ಷನ್‌ ಮಾಡಿದೆ ಈ ಮೂವಿ!

ಸೆಲೆಬ್ರಿಟಿಗಳೇ ಇಲ್ಲದೇ 100 ಕೋಟಿ ರೂ ಕಲೆಕ್ಷನ್‌ ಮಾಡಿದೆ ಈ ಮೂವಿ!

Malayalam film: 'ವಾಝಾ 2' ಚಿತ್ರವು ಮೊದಲ ವಾರದಲ್ಲೇ ಭಾರಿ ಸಂಚಲನ ಮೂಡಿಸಿತು, ಸಕಾರಾತ್ಮಕ ವಿಮರ್ಶೆಗಳು ಮತ್ತು ಯುವ ಪ್ರೇಕ್ಷಕರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಚಿತ್ರವು ಮೊದಲ ವಾರದಲ್ಲಿ ₹ 55 ಕೋಟಿ ಸಂಗ್ರಹಿಸಿತು. ಸವಿನ್ ಎಸ್ಎ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು (Cinema) ಎರಡು ವಾರಗಳಿಗೂ ಹೆಚ್ಚು ಕಾಲ ಬಾಕ್ಸ್ ಆಫೀಸ್‌ನಲ್ಲಿ ಅಜೇಯವಾಗಿ ಗಳಿಕೆ ಮಾಡಿದೆ.

Prashanth Neel: ‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್

‘ಮೈತ್ರಿ ಮೂವೀ ಮೇಕರ್ಸ್’ ಜೊತೆ ಕೈ ಜೋಡಿಸಿದ ಪ್ರಶಾಂತ್ ನೀಲ್

Prashanth Neel: ‘ಮೈತ್ರಿ ಮೂವೀ ಮೇಕರ್ಸ್’ ಮೊದಲ ಬಾರಿಗೆ ಈ ಸಂಸ್ಥೆ ಹಾರರ್ ಜಗತ್ತಿಗೆ ಕಾಲಿಟ್ಟಿದೆ. ಈ ಚಿತ್ರಕ್ಕೆ ‘418’ ಎಂದು ಹೆಸರಿಡಲಾಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ನಿರ್ಮಾಣ ಸಂಸ್ಥೆ 418 ಎಂಬ ಅದ್ಭುತ ಚಿತ್ರದೊಂದಿಗೆ ಹಾರರ್ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ. ಕೀರ್ತನ್ ನಾಡಗೌಡ (Kirtan Nadagouda)ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

Varun Tej: ಮೊಣಕಾಲು ಸರ್ಜರಿ ಬಳಿಕ  ವರುಣ್ ತೇಜ್‌ ಕೊಟ್ಟ ಅಪ್‌ಡೇಟ್‌ ಇದು!

Varun Tej: ಮೊಣಕಾಲು ಸರ್ಜರಿ ಬಳಿಕ ವರುಣ್ ತೇಜ್‌ ಕೊಟ್ಟ ಅಪ್‌ಡೇಟ್‌ ಇದು!

Varun Tej: ಕೆಲ ದಿನಗಳ ಹಿಂದೆ ಮೊಣಕಾಲು ಮುರಿತಕ್ಕೆ ಸರ್ಜರಿ ಮಾಡಿಸಿಕೊಂಡಿದ್ದ ನಟ ವರುಣ್ ತೇಜ್ , ಶನಿವಾರ ತಮ್ಮ ಆರೋಗ್ಯದ ಬಗ್ಗೆ ಅಭಿಮಾನಿಗಳಿಗೆ ಮತ್ತು ಸೋಷಿಯಲ್ ಮೀಡಿಯಾ ಫಾಲೋವರ್ಸ್‌ಗೆ ಮಾಹಿತಿ ನೀಡಿದ್ದಾರೆ. ಸಣ್ಣ ಶಸ್ತ್ರಚಿಕಿತ್ಸೆಯಾಗಿದ್ದು, ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಅವರ ಸಹೋದರಿ ನಿಹಾರಿಕಾ ಕೊನಿಡೇಲಾ ಅವರು ಗಾಯದಿಂದ ಚೇತರಿಸಿಕೊಂಡ ನಂತರ ಅವರ ಆರೋಗ್ಯದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮಾಹಿತಿ ಹಂಚಿಕೊಂಡರು.

Prathichaya OTT release: ರಾಜಕೀಯ ಥ್ರಿಲ್ಲರ್ ಮೂವಿ; ನಿವಿನ್ ಪೌಲಿ ಈ ಸಿನಿಮಾ ಸ್ಟ್ರೀಮಿಂಗ್‌ ಎಲ್ಲಿ?

ರಾಜಕೀಯ ಥ್ರಿಲ್ಲರ್ ಮೂವಿ; ನಿವಿನ್ ಪೌಲಿ ಈ ಸಿನಿಮಾ ಸ್ಟ್ರೀಮಿಂಗ್‌ ಎಲ್ಲಿ?

Prathichaya OTT release: 'ಪ್ರತಿಚಯ' ಚಿತ್ರದಲ್ಲಿ ನಿವಿನ್ ಪೌಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶರಫ್ ಯು ಧೀನ್ ಮತ್ತು ಬಾಲಚಂದ್ರ ಮೆನನ್ ಪ್ರಮುಖ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ.ಈ ಸಿನಿಮಾದ ವಿವಾದಾತ್ಮಕ ತುಣುಕುಗಳು ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗಿತ್ತು. ಸ್ಟ್ರೀಮಿಂಗ್‌ ಎಲ್ಲಿ?

Nikhil Siddhartha: ನಿಖಿಲ್ ಸಿದ್ದಾರ್ಥ್ ನಟನೆಯ `ಸ್ವಯಂಭು' ಸಿನಿಮಾದ ಬಾಬಾ ಧೀವರ ಸಾಂಗ್ ರಿಲೀಸ್!

`ಸ್ವಯಂಭು' ಸಿನಿಮಾದ ಬಾಬಾ ಧೀವರ ಸಾಂಗ್ ರಿಲೀಸ್!

Nikhil Siddhartha: ತೆಲುಗಿನ ಪ್ರತಿಭಾನ್ವಿತ ನಟ ನಿಖಿಲ್ ಸಿದ್ಧಾರ್ಥ್ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ 'ಸ್ವಯಂಭು' ಸಿನಿಮಾದ ಬಾಬಾ ಧೀವರ ಹಾಡು ಬಿಡುಗಡೆಯಾಗಿದೆ. ಬಹುಭಾಷೆಯಲ್ಲಿ‌ ಬಾ ಬಾ ಧೀವರ ಸಾಂಗ್ ರಿಲೀಸ್ ಆಗಿದೆ. ಕನ್ನಡದಲ್ಲಿ ಈ ಹಾಡಿಗೆ ರವಿ ಬಸ್ರೂರ್ ಸಾಹಿತ್ಯ ಬರೆದಿದ್ದು, ಸಂಗೀತ ಒದಗಿಸಿದ್ದಾರೆ. ಸಂತೋಷ್ ವೆಂಕಿ ಹಾಡಿಗೆ ಧ್ವನಿಯಾಗಿದ್ದಾರೆ. ನಿಖಿಲ್ ಸಿದ್ದಾರ್ಥ್ ಹಾಗೂ ನಭಾ ನಟೇಶ್ ಅದ್ದೂರಿ ಸೆಟ್ ನಲ್ಲಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

Kannada New Movie: 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್; ಮುಖ್ಯಮಂತ್ರಿ ಸಾಥ್‌

'ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಿತ್ರದ ಟೈಟಲ್ ಸಾಂಗ್ ರಿಲೀಸ್

Kannada New Movie: ಸಾಮಾಜಿಕ ಕಥಾಹಂದರವನ್ನು ಇಟ್ಟುಕೊಂಡು ತಯಾರಾಗಿರುವ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಿತ್ರ ಇದೀಗ ತೆರೆಗೆ ಬರಲು ಸಿದ್ಧವಾಗಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿರುವ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಿತ್ರದ ಶೀರ್ಷಿಕೆ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಚಿತ್ರದ ಶೀರ್ಷಿಕೆ ಗೀತೆಯನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

Hombale Films:  ‘ಹೊಂಬಾಳೆ ಫಿಲ್ಮ್ಸ್’ನಿಂದ ಬಿಗ್‌ ಅಪ್‌ಡೇಟ್‌; ಈ ನೂತನ ಚಿತ್ರದ ಶೀರ್ಷಿಕೆ ನಾಳೆ ಅನಾವರಣ!

Hombale Films: ‘ಹೊಂಬಾಳೆ ಫಿಲ್ಮ್ಸ್’ನಿಂದ ಬಿಗ್‌ ಅಪ್‌ಡೇಟ್‌!

Hombale Films: ಮಹಾವತಾರ ನರಸಿಂಹ’ ಚಿತ್ರದ ಮೂಲಕ ಸಂಚಲನ ಮೂಡಿಸಿದ್ದ ಅದೇ ಸೃಜನಶೀಲ ತಂಡವು ಈಗ ಮತ್ತೆ ಒಂದಾಗುತ್ತಿದ್ದು,ಮತ್ತೊಂದು ಅದ್ಭುತ ಕಥಾಹಂದರವನ್ನು ತೆರೆಯ ಮೇಲೆ ತರಲು ಸಜ್ಜಾಗಿದೆ. ವಿಶೇಷವೆಂದರೆ, ವಿಭಿನ್ನ ದೃಷ್ಟಿಕೋನ ಹಾಗೂ ಹೊಸತನದ ಕಥೆಯನ್ನು ಒಳಗೊಂಡಿರುವ ಈ ಚಿತ್ರವನ್ನು ಅಶ್ವಿನ್ ಅವರು ನಿರ್ದೇಶಿಸಲಿದ್ದಾರೆ.

Vijay Deverakonda: ಹೊಸ ಸಿನಿಮಾ ಘೋಷಿಸಿದ ವಿಜಯ್ ದೇವರಕೊಂಡ

Vijay Deverakonda: ಹೊಸ ಸಿನಿಮಾ ಘೋಷಿಸಿದ ವಿಜಯ್ ದೇವರಕೊಂಡ

Vijay Deverakonda: ತೆಲುಗು ನಟ ವಿಜಯ್ ದೇವರಕೊಂಡ ಅವರು ನಿರ್ದೇಶಕ ಶೌರ್ಯುವ ಅವರ ಸಹಯೋಗದೊಂದಿಗೆ 'ವಿಡಿಎಕ್ಸ್ ಶೌರ್ಯುವ' ಎಂಬ ಹೊಸ ಚಿತ್ರವನ್ನು ಘೋಷಿಸಿದ್ದಾರೆ. ಘೋಷಣೆಯ ಜೊತೆಗೆ, ಅವರು ಫಸ್ಟ್-ಲುಕ್ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿದರು. ಈ ಚಿತ್ರದಲ್ಲಿ ಅಂತರರಾಷ್ಟ್ರೀಯ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ ಎಂಬುದು ಗಮನಾರ್ಹ.

160 ಕೋಟಿಗೆ ಸೇಲ್‌ ಆಯ್ತು 'ಜೈಲರ್ 2' OTT ರೈಟ್ಸ್;‌ ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ರಜನಿಕಾಂತ್ ಸಿನಿಮಾ!‌ ಖರೀದಿ ಮಾಡಿದ್ಯಾರು?

ರಿಲೀಸ್‌ಗೂ ಮುನ್ನವೇ ʻಜೈಲರ್ 2ʼ ದಾಖಲೆ; ಭಾರಿ ಮೊತ್ತಕ್ಕೆ OTT ರೈಟ್ಸ್ ಸೇಲ್

ಜೈಲರ್‌ 2 ಸಿನಿಮಾದ ಒಟಿಟಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ಬರೋಬ್ಬರಿ ಅಮೇಜಾನ್ ಪ್ರೈಮ್ ವಿಡಿಯೋ ಪಾಲಾಗಿವೆ. ಇದು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತದ ಡೀಲ್ ಆಗಿದ್ದು, ರಜನಿಕಾಂತ್ ಅವರ ಸ್ಟಾರ್ ಪವರ್ ಏನೆಂಬುದನ್ನು ಸಾಬೀತುಪಡಿಸಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರವು 2026ರ ಆಗಸ್ಟ್‌ನಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

Dacoit Movie: ಬೆಂಗಳೂರು ಅಭಿಮಾನಿಗಳ ಪ್ರೀತಿಗೆ 'ಡಕಾಯತ್' ಸಿನಿಮಾ ತಂಡ ಫಿದಾ

ಬೆಂಗಳೂರು ಅಭಿಮಾನಿಗಳ ಪ್ರೀತಿಗೆ 'ಡಕಾಯತ್' ಸಿನಿಮಾ ತಂಡ ಫಿದಾ

Dacoit Movie: ಅಡಿವಿ ಶೇಷ್ ಮತ್ತು ಮೃಣಾಲ್ ಠಾಕೂರ್ ತೆರೆಹಂಚಿಕೊಂಡಿರುವ ರೊಮ್ಯಾಂಟಿಕ್ ಆ್ಯಕ್ಷನ್ ಥ್ರಿಲ್ಲರ್ 'ಡಕಾಯಿತ್' ಏಪ್ರಿಲ್ 10ರಂದು ಬಿಡುಗಡೆಯಾಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಚಿತ್ರದ ಪ್ರಚಾರಕ್ಕಾಗಿ ಅಡವಿ ಶೇಷ್‍ ಮತ್ತು ಅನುರಾಗ್‍ ಕಶ್ಯಪ್‍, ಶನಿವಾರ ಬೆಂಗಳೂರಿಗೆ ಬಂದಿದ್ದರು. ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸುತ್ತಲೇ, ಚಿತ್ರವನ್ನು ಪ್ರಚಾರ ಮಾಡಿದರು.

ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್‌ ರಾಜ್‌ ವಿರುದ್ಧ ಚಿರು ಸಹೋದರ ನಾಗ ಬಾಬು ವಾಗ್ದಾಳಿ!

ರಾಮಾಯಣ ವಿವಾದ: ಪ್ರಕಾಶ್ ರಾಜ್ ವಿರುದ್ಧ ಚಿರಂಜೀವಿ ಸಹೋದರ ತೀವ್ರ ವಾಗ್ದಾಳಿ

ರಾಮಾಯಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಪ್ರಕಾಶ್ ರಾಜ್ ವಿರುದ್ಧ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗ ಬಾಬು ತೀವ್ರವಾಗಿ ಕಿಡಿಕಾರಿದ್ದಾರೆ. ರಾಮನನ್ನು ಕೀಳಾಗಿ ಕಾಣುವುದು ವೈಚಾರಿಕತೆಯಲ್ಲ, ಅದು ಕೇವಲ ಅಹಂಕಾರ ಎಂದು ಅವರು ಟೀಕಿಸಿದ್ದಾರೆ.

ಐತಿಹಾಸಿಕ ಸಿನಿಮಾದ ಮೂಲಕ ಮರಳಿದ ʻನೆನಪಿರಲಿʼ ಪ್ರೇಮ್; ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್

ಮಾಸ್ ಅವತಾರದಲ್ಲಿ ʼನೆನಪಿರಲಿʼ ಪ್ರೇಮ್; ಐತಿಹಾಸಿಕ ಚಿತ್ರದಲ್ಲಿ ರಗಡ್ ಲುಕ್

ಲವೀ ಸ್ಟಾರ್‌ ಪ್ರೇಮ್‌ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಒಂದು ಗಿಫ್ಟ್‌ ನೀಡಿದ್ದಾರೆ. ತಮ್ಮ ಮುಂದಿನ ಐತಿಹಾಸಿಕ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ರಮೇಶ್ ಬೇಗಾರ್ ನಿರ್ದೇಶನದ ಈ ಚಿತ್ರವು ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿ ಆಧರಿಸಿದ್ದು, ಇದರ ಫಸ್ಟ್‌ ಲುಕ್‌ನಲ್ಲಿ ಪ್ರೇಮ್ ಕೈಯಲ್ಲಿ ಕತ್ತಿ ಹಿಡಿದು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ʻಮೈಸಾ' ಚಿತ್ರಕ್ಕಾಗಿ ಬ್ಯಾಂಕಾಕ್‌ನಲ್ಲಿ ರಶ್ಮಿಕಾ ಮಂದಣ್ಣ ಕಠಿಣ ತಯಾರಿ; ಪ್ರತಿದಿನ 8 ಗಂಟೆ ಶ್ರಮಿಸುತ್ತಿರುವ ʻನ್ಯಾಷನಲ್‌ ಕ್ರಶ್‌ʼ!

'ಮೈಸಾ' ಚಿತ್ರಕ್ಕಾಗಿ ಬ್ಯಾಂಕಾಕ್‌ನಲ್ಲಿ ರಶ್ಮಿಕಾ ಮಂದಣ್ಣ ಫೈಟಿಂಗ್‌ ತರಬೇತಿ

ಮೈಸಾ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಬ್ಯಾಂಕಾಕ್‌ನಲ್ಲಿ ಕಠಿಣ ತಯಾರಿ ನಡೆಸುತ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ 'ಮೈಸಾ' ಚಿತ್ರದಲ್ಲಿ 'ಗೋಂಡ್' ಸಮುದಾಯದ ಮಹಿಳೆಯಾಗಿ ನಟಿಸುತ್ತಿರುವ ರಶ್ಮಿಕಾ, ಪಾತ್ರದ ನೈಜತೆಗಾಗಿ ಪ್ರತಿದಿನ 8 ಗಂಟೆಗಳ ಕಾಲ ಮಾರ್ಷಲ್ ಆರ್ಟ್ಸ್ ಮತ್ತು ಹ್ಯಾಂಡ್-ಟು-ಹ್ಯಾಂಡ್ ಕಂಬಾಟ್ ತರಬೇತಿ ಪಡೆಯುತ್ತಿದ್ದಾರೆ.

Hera Pheri 3: ‘ಹೇರಾ ಫೆರಿ 3’ ಸದ್ಯಕ್ಕೆ ಸೆಟ್ಟೇರಲ್ಲ; ಅಕ್ಷಯ್ ಕುಮಾರ್‌

Hera Pheri 3: ‘ಹೇರಾ ಫೆರಿ 3’ ಸದ್ಯಕ್ಕೆ ಸೆಟ್ಟೇರಲ್ಲ; ಅಕ್ಷಯ್ ಕುಮಾರ್‌

Hera Pheri 3: ನಟ ಅಕ್ಷಯ್ ಕುಮಾರ್ ಈಗ ಹೇರಾ ಫೇರಿ 3 ವಿವಾದಗಳಿಂದ ಹೊರಬಂದು ಮತ್ತೆ ಟ್ರ್ಯಾಕ್‌ಗೆ ಬಂದಿದೆಯೇ ಎಂಬುದರ ಕುರಿತು ಪ್ರತಿಕ್ರಿಯಿಸಿದ್ದಾರೆ. ದುರದೃಷ್ಟವಶಾತ್, ಈ ಚಿತ್ರ ಶೀಘ್ರದಲ್ಲೇ ಪ್ರಾರಂಭವಾಗುವುದಿಲ್ಲ ಎಂದು ಅಕ್ಷಯ್ ಹೇಳಿದರು. ‘ಹೇರಾ ಫೆರಿ’ ಚಿತ್ರದ ಹಿಂದಿನ ಎರಡೂ ಭಾಗಗಳು ಭಾರಿ ಯಶಸ್ಸನ್ನು ಕಂಡವು. ಚಿತ್ರಗಳು ಉತ್ತಮ ಪ್ರತಿಕ್ರಿಯೆ ಪಡೆದವು. ಅಭಿಮಾನಿಗಳು “ಹೇರಾ ಫೆರಿ 3” ಗಾಗಿ ಕಾತರದಿಂದ ಕಾಯುತ್ತಿದ್ದಾರೆ

41ನೇ ವಯಸ್ಸಿಗೆ ಪ್ರಾಣಬಿಟ್ಟ ಕಿರುತೆರೆ ನಟ ಸಿದ್ದಾರ್ಥ್‌ ವೇಣುಗೋಪಾಲ್;‌ ಈ ಸಾವಿಗೆ ಕಾರಣವೇನು?

41ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಕಿರುತೆರೆ ನಟ ಸಿದ್ಧಾರ್ಥ್ ವೇಣುಗೋಪಾಲ್

ಮಲಯಾಳಂ ಕಿರುತೆರೆಯ ಖ್ಯಾತ ನಟ ಮತ್ತು ನಿರೂಪಕ ಸಿದ್ಧಾರ್ಥ್ ವೇಣುಗೋಪಾಲ್ (41) ಅವರು ಕ್ಯಾನ್ಸರ್‌ನಿಂದಾಗಿ ಏಪ್ರಿಲ್ 18ರಂದು ನಿಧನರಾಗಿದ್ದಾರೆ. 'ಕಸ್ತೂರಿಮಾನ್', 'ಭಾಗ್ಯಜಾತಕಂ' ಅಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಇವರುನ್ನು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ ಮಹಾಮಾರಿ ಕಾಡುತಿತ್ತು.

ಮೋಹನ್‌ಲಾಲ್‌ ಮಗ ಪ್ರಣವ್ ಜೊತೆ ಕಲ್ಯಾಣಿ ಕಲ್ಯಾಣ; ʻಇದೆಲ್ಲಾ ಶುದ್ಧ ಸುಳ್ಳುʼ ಎಂದ ನಟಿಯ ತಾಯಿ ಲಿಸ್ಸಿ

ಮೋಹನ್‌ಲಾಲ್ ಪುತ್ರನ ಜೊತೆ ಕಲ್ಯಾಣಿ ಮದುವೆ? ವದಂತಿಗಳಿಗೆ ಇಲ್ಲಿದೆ ಉತ್ತರ

ಪ್ರಣವ್ ಮೋಹನ್‌ಲಾಲ್ ಮತ್ತು ಕಲ್ಯಾಣಿ ಪ್ರಿಯದರ್ಶನ್‌ ಅವರ ಮದುವೆ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಕಲ್ಯಾಣಿ ಅವರ ತಾಯಿ ಲಿಸ್ಸಿ ಸ್ಪಷ್ಟನೆ ನೀಡಿದ್ದಾರೆ. ಪ್ರಣವ್ ಮೋಹನ್‌ಲಾಲ್ ಮತ್ತು ಕಲ್ಯಾಣಿ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾರೆ ಎಂಬುದು ಕೇವಲ ವದಂತಿ ಎಂದು ಅವರು ತಿಳಿಸಿದ್ದಾರೆ.

ಬಿಗ್‌ ಬಾಸ್‌ನಿಂದ ಎರಡ್ಮೂರು ಸಲ ಆಫರ್‌ ಬಂದರೂ ‌ʻರಾಮಾಚಾರಿʼ ನಟ ರಿತ್ವಿಕ್ ಹೋಗದಿರಲು ಕಾರಣವೇನು?

2 ಬಾರಿ ಆಫರ್ ಬಂದರೂ ಬಿಗ್‌ ಬಾಸ್‌ಗೆ ನೋ ಅಂದಿದ್ದಕ್ಕೆ ರಾಮಾಚಾರಿ?

'ರಾಮಾಚಾರಿ' ಖ್ಯಾತಿಯ ನಟ ರಿತ್ವಿಕ್ ಕೃಪಾಕರ್ ಅವರು ಬಿಗ್ ಬಾಸ್ ಕನ್ನಡದಿಂದ ಬಂದ ಆಫರ್‌ಗಳನ್ನು ತಿರಸ್ಕರಿಸಿದ್ದ ಬಗ್ಗೆ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಎರಡ್ಮೂರು ಸೀಸನ್‌ನಿಂದಲೂ ತಮಗೆ ಆಹ್ವಾನವಿತ್ತು, ಆದರೆ 'ರಾಮಾಚಾರಿ' ಧಾರಾವಾಹಿಗಾಗಿ ತಾವು ಹೋಗಲಿಲ್ಲ ಎಂದು ತಿಳಿಸಿದ್ದಾರೆ.

Yash: ʻಅಡಲ್ಟ್‌ ಕಂಟೆಂಟ್‌ ಅಂದ್ರೆ ಬರೀ ಅದೇ ಅಲ್ಲ..ʼ; ʻಟಾಕ್ಸಿಕ್‌ʼ ಕಥೆ ಬಗ್ಗೆ ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಅನುರಾಗ್‌ ಕಶ್ಯಪ್‌

ʻಅಡಲ್ಟ್ ಅಂದ್ರೆ ಬರೀ ಲೈಂಗಿಕತೆಯಲ್ಲʼ; 'ಟಾಕ್ಸಿಕ್' ರಹಸ್ಯ ಹೇಳಿದ ಅನುರಾಗ್

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ನಟ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಕುರಿತು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಎ ಫೇರಿಟೇಲ್ ಫಾರ್ ಗ್ರೋನಪ್ಸ್" ಎಂದರೆ ಅದು ಕೇವಲ ಲೈಂಗಿಕತೆಯಲ್ಲ, ಬದಲಿಗೆ ಪರಿಪೂರ್ಣ ವಯಸ್ಕರಿಗೆ ಸರಿಹೊಂದುವ ಗಂಭೀರ ಮತ್ತು ಬೋಲ್ಡ್ ಕಂಟೆಂಟ್ ಎಂದು ಅವರು ತಿಳಿಸಿದ್ದಾರೆ.

ʻಜನ ನಾಯಗನ್‌ʼ ಆಯ್ತು, ಈಗ ʻಜೈಲರ್ 2ʼ ಸರದಿ; ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್‌ ಸಿನಿಮಾದ ಶೂಟಿಂಗ್‌ ಸೆಟ್‌ ವಿಡಿಯೋ ಲೀಕ್

ಜನ ನಾಯಗನ್ ಬೆನ್ನಲ್ಲೇ ಜೈಲರ್ 2ಗೆ ಪೈರಸಿ ಶಾಕ್; ಮೇಕಿಂಗ್ ವಿಡಿಯೋ ಲೀಕ್

ನಟ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಲೀಕ್‌ ಆದ ಬೆನ್ನಲ್ಲೇ ಈಗ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಶೂಟಿಂಗ್ ಸೆಟ್ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಚಿತ್ರದ ಬಿಟಿಎಸ್ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸನ್ ಪಿಕ್ಚರ್ಸ್ ಸಂಸ್ಥೆ, ವಿಡಿಯೋ ಹಂಚಿಕೊಳ್ಳುವ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

Vidyut Jammwal: ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ಖ್ಯಾತ ನಟ

ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿದ ಖ್ಯಾತ ನಟ

Vidyut Jammwal: ಕಿಟಾವೊ ಸಕುರೈ ನಿರ್ದೇಶನದ ‘ಸ್ಟ್ರೀಟ್ ಫೈಟರ್’ ಚಿತ್ರದಲ್ಲಿ ನೋವಾ ಸೆಂಟಿನಿಯೊ, ಜೇಸನ್ ಮೊಮೊವಾ, ಅಂಡ್ರ್ಯೂ ಕೋಜಿ ಮತ್ತು ಕುರ್ಟಿಸ್ ’50 ಸೆಂಟ್’ ಜಾಕ್ಸನ್ ಅಂತಹ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಅಕ್ಟೋಬರ್ 16 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟ ವಿದ್ಯುತ್ ಜಮ್ವಾಲ್ ಅವರ ಹಾಲಿವುಡ್ ಚೊಚ್ಚಲ ಚಿತ್ರವಾಗಿದ್ದು, ಹಾಲಿವುಡ್ ವೇದಿಕೆಯಲ್ಲಿ ಗಾಯತ್ರಿ ಮಂತ್ರ ಪಠಿಸಿರುವುದು ಸಖತ್‌ ಚರ್ಚೆಗಳು ಆಗುತ್ತಿವೆ.

'ಟಾಪ್ ನಾಚ್ ಸುಂದರಿ' ಫಸ್ಟ್ ಲುಕ್ ರಿಲೀಸ್ ಮಾಡಿದ ಡಾ. ಜಯಮಾಲಾ; ಆಲ್ಬಂ ಸಾಂಗ್‌ ಮೂಲಕ ಎಂಟ್ರಿ ಕೊಟ್ಟ ನಿರೂಪಕ ಯಶವಂತ್

'ಟಾಪ್ ನಾಚ್ ಸುಂದರಿ' ಮೂಲಕ ಹೊಸ ಜರ್ನಿ ಆರಂಭಿಸಿದ ನಿರೂಪಕ ಯಶವಂತ್

'ಟಾಪ್ ನಾಚ್ ಸುಂದರಿ' ಹೆಸರಿನ ಹೊಸ ಕನ್ನಡ ಮ್ಯೂಸಿಕ್ ವಿಡಿಯೋ ಮೂಲಕ ನಿರೂಪಕ ಯಶವಂತ್ ಈಗ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅವರು ಇತ್ತೀಚೆಗೆ ಈ ಹಾಡಿನ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

Hansika Motwani: ಡಿವೋರ್ಸ್ ಬಗ್ಗೆ ಕೊನೆಗೂ ಮುಕ್ತವಾಗಿ ಮಾತನಾಡಿದ ಹನ್ಸಿಕಾ ಮೋಟ್ವಾನಿ

ಡಿವೋರ್ಸ್ ಬಗ್ಗೆ ಕೊನೆಗೂ ಮುಕ್ತವಾಗಿ ಮಾತನಾಡಿದ ಹನ್ಸಿಕಾ ಮೋಟ್ವಾನಿ

Hansika Motwani: ಅದ್ದೂರಿಯಾಗಿ ಮದುವೆಯಾದ ಹನ್ಸಿಕಾ ತಮ್ಮ ಕೈ ಹಿಡಿದ ಸೊಹೇಲ್ ಖತುರಿಯಾ ಅವರ ಕೈಯನ್ನು ಈ ವರ್ಷದ ಆರಂಭದಲ್ಲಿಯೇ ಬಿಟ್ಟಿದ್ದಾರೆ. ಮುಂಬೈನ ಬಾಂದ್ರಾದ ಕೌಟುಂಬಿಕ ನ್ಯಾಯಾಲಯವು ಮಾರ್ಚ್ 11 ರಂದು ಪರಸ್ಪರ ಒಪ್ಪಿಗೆಯ ಮೂಲಕ ದಂಪತಿಗೆ ವಿಚ್ಛೇದನ ನೀಡಿತು. ಈ ಬಗ್ಗೆ ಹೆಚ್ಚಾಗಿ ಏನೂ ಹೇಳದ ನಟಿ ಹನ್ಸಿಕಾ ವಿವರಗಳನ್ನು ಖಾಸಗಿಯಾಗಿಡಲು ಆಯ್ಕೆ ಮಾಡಿಕೊಂಡಿದ್ದಾರೆ.

ʻಹುಚ್ಚʼ ಸಿನಿಮಾ ಹೀರೋ ಥರ ಹೊಸ ಧಾರಾವಾಹಿಯಲ್ಲಿ ಮಿಂಚಲು ರೆಡಿಯಾದ ʻರಾಮಾಚಾರಿʼ ನಟ ರಿತ್ವಿಕ್ ಕೃಪಾಕರ್

'ಹುಚ್ಚ' ಸುದೀಪ್‌ ಥರ ಮಾಸ್ ಅವತಾರದಲ್ಲಿ ಮಿಂಚಲಿದ್ದಾರೆ ʻರಾಮಾಚಾರಿʼ ನಟ

'ರಾಮಾಚಾರಿ' ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟ ರಿತ್ವಿಕ್ ಕೃಪಾಕರ್, ಈಗ ಏಕಕಾಲದಲ್ಲಿ ಕಿರುತೆರೆ ಮತ್ತು ಹಿರಿತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಜೂನ್ ಕೊನೆಯ ವಾರದಲ್ಲಿ ಜನಪ್ರಿಯ ವಾಹಿನಿಯೊಂದರಲ್ಲಿ ರಿತ್ವಿಕ್‌ ಅವರ ಹೊಸ ಧಾರಾವಾಹಿ ಆರಂಭವಾಗಲಿದ್ದು, ಇಲ್ಲಿ ಅವರು 'ಹುಚ್ಚ' ಚಿತ್ರದ ಸುದೀಪ್ ಮಾದರಿಯ ರಗಡ್ ಲೋಕಲ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Rishab Shetty: ‘ಕಾಂತಾರದಲ್ಲಿ ನಟಿಸುವ ಆಸೆ ಇರಲಿಲ್ಲʼ; ರಿಷಬ್‌ ಶೆಟ್ಟಿ

‘ಕಾಂತಾರದಲ್ಲಿ ನಟಿಸುವ ಆಸೆ ಇರಲಿಲ್ಲʼ; ರಿಷಬ್‌ ಶೆಟ್ಟಿ

Rishab Shetty: ಮೊದಲ ಬಾರಿ ನಾನು 'ಕಾಂತಾರ' ಕಥೆ ಬರೆದಾಗ ನಿರ್ದೇಶನ ಮಾತ್ರ ಸಾಕು, ನಟಿಸೋದು ಬೇಡ ಎಂದುಕೊಂಡಿದ್ದೆ ಎಂದು ರಿಷಬ್ ಶೆಟ್ಟಿ ಅವರು ಐಎನ್​​ಸಿಎ 2026 ಅವಾರ್ಡ್ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ. ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಸಿನಿಮಾ ಪ್ರಶಸ್ತಿಗಳನ್ನು ‘ಕಾಂತಾರ: ಚಾಪ್ಟರ್ 1’ ಬಾಚಿಕೊಂಡಿತು. ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಿ ರಿಷಬ್ ಶೆಟ್ಟಿ ಮಾತನಾಡಲೇಬೇಕು ಎಂದು ನಿರೂಪಕರಾದ ರಾಣಾ ದಗ್ಗುಬಾಟಿ ಹಾಗೂ ಕರಣ್ ಜೋಹರ್ ಒತ್ತಾಯ ಮಾಡಿದ್ದಾರೆ. ಈ ವೇಳೆ ಹೇಳಿಕೆ ನೀಡಿದ್ದು ಹೀಗೆ.

Loading...