ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲʼ ಎಂಬ ಬಗ್ಗೆ ನಟ ದಿಲೀಪ್‌ ರಾಜ್‌ಗೆ ಬೇಸರವಿತ್ತೇ? ಇಲ್ಲಿವೆ ಅವರೇ ಹೇಳಿದ್ದ ಮನದಾಳದ ಮಾತುಗಳು

ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿಲ್ಲ! ಈ ಬಗ್ಗೆ ನಟ ದಿಲೀಪ್‌ಗೆ ಬೇಸರವಿತ್ತೇ?

ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗದಲ್ಲಿ ಅವರ ಪ್ರತಿಭೆಗೆ ಸಿಗಬೇಕಾದ ಮನ್ನಣೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ತಮಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ ಎಂಬ ಕಹಿ ಸತ್ಯವನ್ನು ಬಹಳ ಹಿಂದೆಯೇ ಜೀರ್ಣಿಸಿಕೊಂಡಿದ್ದ ದಿಲೀಪ್, ಸದಾ ಉತ್ತಮ ಕಥೆಗಳಿಗಾಗಿ ಹಂಬಲಿಸುತ್ತಿದ್ದರು.

ʻನಮ್ಮ ಖಾಸಗಿತನವನ್ನು ಗೌರವಿಸಿ, ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿʼ; ಡಿವೋರ್ಸ್‌ ಬಗ್ಗೆ ಕೊನೆಗೂ ಮೌನಮುರಿದ ಮೌನಿ ರಾಯ್!‌

ಕೊನೆಗೂ ಡಿವೋರ್ಸ್ ಬಗ್ಗೆ ಮೌನಮುರಿದ ನಟಿ ಮೌನಿ ರಾಯ್!‌

'ಕೆಜಿಎಫ್' ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾದ ಬಾಲಿವುಡ್ ನಟಿ ಮೌನಿ ರಾಯ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಇದೀಗ ಅವರು ಪತಿ ಸೂರಜ್ ನಂಬಿಯಾರ್ ಅವರಿಂದ ವಿಚ್ಛೇದನ ಪಡೆಯುತ್ತಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಜೊತೆಗೆ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ʻದಿಲೀಪಾ.. ಯಾಕೋ ನೀನು ಮೌನವಾದೆ?ʼ; ಅಗಲಿದ ಗೆಳೆಯನನ್ನ ನೆನೆದು ಕಣ್ಣೀರಾದ ದಶಕದ ಸ್ನೇಹಿತರು

ನಟ ದಿಲೀಪ್ ರಾಜ್ ಅಕಾಲಿಕ ಸಾವಿಗೆ ಕಂಬನಿ ಮಿಡಿದ ಆಪ್ತ ಸ್ನೇಹಿತರು

ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅವರ 25 ವರ್ಷಗಳ ಸುದೀರ್ಘ ಗೆಳೆಯರ ಬಳಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ರಂಗಭೂಮಿಯ ದಿನಗಳಿಂದ ಹಿಡಿದು ಯಶಸ್ವಿ ನಿರ್ಮಾಪಕನಾಗುವವರೆಗೆ ಜೊತೆಗಿದ್ದ ಕೆ.ಎಂ. ಚೈತನ್ಯ, ಅನುಶ್ರೀ ಮತ್ತು ಶ್ರುತಿ ನಾಯ್ಡು ಅಂತಹ ಆಪ್ತರು ದಿಲೀಪ್ ಅವರ ಪ್ರತಿಭೆಯನ್ನು ಸ್ಮರಿಸಿದ್ದಾರೆ.

ʻಧುರಂಧರ್‌ʼ ಚಿತ್ರಕ್ಕೆ ಕೌಂಟರ್‌ ಕೊಡಲು ಹೋಗಿ ಎಡವಿಬಿದ್ದ ಪಾಕ್‌ನ ʻಮೆರಾ ಲಿಯಾರಿʼ ಸಿನಿಮಾ; ಸೇಲ್ ಆಗಿದ್ದು ಬರೀ ಇಪ್ಪತ್ತೆರಡೇ ಟಿಕೆಟ್!‌ ‌

ʻಧುರಂಧರ್ʼಗೆ ಕೌಂಟರ್ ಕೊಡಲು ಬಂದ 'ಮೇರಾ ಲಿಯಾರಿ' ಸಿನಿಮಾ ಅಟ್ಟರ್‌ ಫ್ಲಾಪ್‌

ಆದಿತ್ಯ ಧರ್ ನಿರ್ದೇಶನದ ಭಾರತೀಯ ಬ್ಲಾಕ್‌ಬಸ್ಟರ್ 'ಧುರಂಧರ್' ಚಿತ್ರಕ್ಕೆ ಕೌಂಟರ್‌ ಕೊಡಲು ಬಂದ ಸಿನಿಮಾ ಎಂಬ ಪ್ರಚಾರದಲ್ಲಿ ಬಿಡುಗಡೆಗೊಂಡ ಪಾಕಿಸ್ತಾನದ 'ಮೇರಾ ಲಿಯಾರಿ' ಬಾಕ್ಸ್ ಆಫೀಸ್‌ನಲ್ಲಿ ದಯನೀಯವಾಗಿ ಸೋತಿದೆ. ಚಿತ್ರರಂಗದಲ್ಲಿ ಅತಿ ದೊಡ್ಡ ಮುಖಭಂಗ ಅನುಭವಿಸಿದೆ.

Ram Charan: ʻಪೆದ್ದಿʼ ಸಿನಿಮಾದ ಮೂಲಕ ಫಾರೀನ್‌ ಮಾರ್ಕೆಟ್‌ಗೆ ಕಾಲಿಟ್ಟ ಕನ್ನಡದ ʻಹೊಂಬಾಳೆ ಫಿಲ್ಮ್ಸ್ʼ

ವಿದೇಶದಲ್ಲಿ 'ಪೆದ್ದಿ' ಚಿತ್ರವನ್ನು ರಿಲೀಸ್‌ ಮಾಡಲಿದೆ ಹೊಂಬಾಳೆ ಫಿಲ್ಮ್ಸ್

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಈಗ ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದ ಮೂಲಕ ಅಂತರರಾಷ್ಟ್ರೀಯ ವಿತರಣಾ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಉತ್ತರ ಅಮೆರಿಕ ಹಾಗೂ ಯುರೋಪ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ವಿಜಯ್ ಕಿರಗಂದೂರು ಸಜ್ಜಾಗಿದ್ದಾರೆ.

3 ಆಸ್ಪತ್ರೆಗಳಿಗೆ ಹೋದರೂ ಉಳಿಯಲಿಲ್ಲ ದಿಲೀಪ್‌ ರಾಜ್‌ ಜೀವ; ಪ್ರತಿಭಾವಂತ ನಟನ ಆ ಕೊನೆಯ ಕ್ಷಣಗಳು ಹೇಗಿದ್ದವು?

3 ಆಸ್ಪತ್ರೆಗಳಿಗೆ ಹೋದರೂ ಉಳಿಯಲಿಲ್ಲ ದಿಲೀಪ್‌; ಅಂತಿಮ ಕ್ಷಣಗಳು ಹೇಗಿದ್ದವು?

ಪ್ರತಿಭಾವಂತ ನಟ ದಿಲೀಪ್ ರಾಜ್ ಅವರ ನಿಧನವು ವೈದ್ಯಕೀಯ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಮೇ 13ರ ಮುಂಜಾನೆ ಎದೆನೋವಿನಿಂದ ಕುಸಿದ ದಿಲೀಪ್ ಅವರನ್ನು ಉಳಿಸಲು ಪತ್ನಿ ವಿದ್ಯಾ ಮೂರು ಆಸ್ಪತ್ರೆಗಳಿಗೆ ಅಲೆದರೂ ಸಕಾಲಕ್ಕೆ ವೈದ್ಯಕೀಯ ನೆರವು ಸಿಗಲಿಲ್ಲ!

ʻಮಿಲನʼ ಸಿನಿಮಾದ ಆಕಾಶ್‌ - ಹೇಮಂತ್‌ ಇಬ್ಬರೂ ನಮ್ಮೊಂದಿಗಿಲ್ಲ; ಅಯ್ಯೋ, ಅಪ್ಪು- ದಿಲೀಪ್‌ ರಾಜ್‌ ನಡುವೆ ಇದೆಂಥಾ ಸಾಮ್ಯತೆ?

ಅಯ್ಯೋ, ಪುನೀತ್ ‌ ರಾಜ್‌ಕುಮಾರ್‌ -‌ ದಿಲೀಪ್ ರಾಜ್ ನಡುವೆ ಇದೆಂಥಾ ಸಾಮ್ಯತೆ?

'ಮಿಲನ' ಸಿನಿಮಾದ ನಾಯಕ ಪುನೀತ್ ರಾಜ್‌ಕುಮಾರ್ ಮತ್ತು ಖಳನಾಯಕ ದಿಲೀಪ್ ರಾಜ್ ಇಬ್ಬರೂ ಹೃದಯಾಘಾತದಿಂದಲೇ ಅಕಾಲಿಕ ಮರಣ ಹೊಂದಿದ್ದು ವಿಧಿಯ ಕರಾಳ ಆಟದಂತಿದೆ. ಸಂಭಾವಿತ ನಟರಾದ ಇವರಿಬ್ಬರೂ ಕೇವಲ ನಟರಾಗಿ ಮಾತ್ರವಲ್ಲದೆ, ತಮ್ಮದೇ ನಿರ್ಮಾಣ ಸಂಸ್ಥೆಗಳ ಮೂಲಕ ಹೊಸ ಪ್ರತಿಭೆಗಳಿಗೆ ಆಸರೆಯಾಗಿದ್ದರು.

ʻಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗಲಾರದುʼ; ದಿಲೀಪ್‌ ರಾಜ್‌ ನಿಧನದ ಬಳಿಕ ಪತ್ನಿಯ ಮೊದಲ ಪೋಸ್ಟ್‌

ʻಮತ್ತೆ ಸಿಗುವವರೆಗೂ ಆತ್ಮಕ್ಕೆ ಶಾಂತಿ ಇಲ್ಲʼ; ದಿಲೀಪ್‌ ಪತ್ನಿಯ ಪೋಸ್ಟ್

ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನದ ನಂತರ ಪತ್ನಿ ಶ್ರೀವಿದ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾತುಗಳು ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿವೆ. ಪತಿಯನ್ನು ಮತ್ತೆ ಭೇಟಿಯಾಗುವವರೆಗೂ ತಮ್ಮ ಆತ್ಮಕ್ಕೆ ಶಾಂತಿ ಸಿಗದು ಎಂದು ವಿದ್ಯಾ ಅವರು ಭಾವುಕರಾಗಿ ನುಡಿದಿದ್ದು, ದಿಲೀಪ್ ಅವರನ್ನು ಕಲೆ ಮತ್ತು ಸಿನಿಮಾದ ರೂಪದಲ್ಲಿ ಜೀವಂತವಾಗಿರಿಸುವ ನಿರ್ಧಾರ ತಳೆದಿದ್ದಾರೆ.

ರಾಮನಗರದ ಫಾರ್ಮ್‌ಹೌಸ್‌ನಲ್ಲಿ ನೆರವೇರಿದ ದಿಲೀಪ್‌ ರಾಜ್‌ ಅಂತ್ಯಕ್ರಿಯೆ; ಈಡೇರಲಿಲ್ಲ ಈ ಪ್ರತಿಭಾನ್ವಿತ ನಟನ ಕೊನೆ ಆಸೆ

ರಾಮನಗರದ ಫಾರ್ಮ್‌ಹೌಸ್‌ನಲ್ಲಿ ನೆರವೇರಿದ ನಟ ದಿಲೀಪ್ ರಾಜ್‌ ಅಂತ್ಯಕ್ರಿಯೆ

Dileep Raj Death: ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆಯು ರಾಮನಗರದ ಅವರ ನೆಚ್ಚಿನ ರಾಜ್‌ಶ್ರೀ ಫಾರ್ಮ್‌ಹೌಸ್‌ನಲ್ಲಿ ಬುಧವಾರ ನೆರವೇರಿತು. ಲಿಂಗಾಯತ ಸಂಪ್ರದಾಯದಂತೆ ದಿಲೀಪ್‌ ಅಣ್ಣನ ಮಗ ಅಂತ್ಯಕ್ರಿಯೆ ನೆರವೇರಿಸಿದರು.

ʻಪ್ರೀತಿಸಿ ಮದುವೆಯಾಗಿದ್ದ ದಿಲೀಪ್‌ ರಾಜ್‌ʼ; ಅಗಲಿದ ಗೆಳೆಯನನ್ನು ನೆನೆದು ನಟ ನವೀನ್‌ ಕೃಷ್ಣ ಭಾವುಕ

ʻನನ್ನ ಡೈರೆಕ್ಟರ್ ಮಾಡಿದ್ದೇ ದಿಲೀಪ್‌ʼ; ಗೆಳೆಯನ ಬಗ್ಗೆ ನವೀನ್ ಕೃಷ್ಣ ಮಾತು

ನಟ ದಿಲೀಪ್ ರಾಜ್ ಅಕಾಲಿಕ ನಿಧನಕ್ಕೆ ಅವರ ಗೆಳೆಯ ನಟ ನವೀನ್ ಕೃಷ್ಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕಾಲೇಜು ದಿನಗಳಿಂದಲೂ ಜೊತೆಯಾಗಿದ್ದ ಅವರು ಹಲವು ಘಟನೆಗಳನ್ನು ನವೀನ್ ಸ್ಮರಿಸಿದ್ದಾರೆ. ತಾವು ನಿರ್ದೇಶಕರಾಗಲು ದಿಲೀಪ್ ಅವರೇ ಕಾರಣ ಎಂದು ಭಾವುಕರಾಗಿದ್ದಾರೆ.

ʻತಮಿಳುನಾಡಿನಲ್ಲಿ ಸೆಟ್ಲ್‌ ಆಗಿ 52 ವರ್ಷ ಆಯ್ತು, ಕನ್ನಡದ ಟಚ್‌ ಬಿಟ್ಟುಹೋಗಿದೆ. ಆದ್ರೆ ಕನ್ನಡವನ್ನು ಮರೆತಿಲ್ಲ..ʼ- ನಟ ರಜನಿಕಾಂತ್‌

ʻಕನ್ನಡ ಮರೆತಿಲ್ಲ, ಆದ್ರೆ ಟಚ್‌ ಬಿಟ್ಟುಹೋಗಿದೆʼ; ಬೆಂಗಳೂರಲ್ಲಿ ರಜನಿ ಮಾತು

ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ನಡೆದ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಜನ್ಮದಿನೋತ್ಸವದಲ್ಲಿ ಪಾಲ್ಗೊಂಡ ನಟ ರಜನಿಕಾಂತ್, ತಮ್ಮ ಕನ್ನಡದ ನಂಟನ್ನು ಸ್ಮರಿಸಿದ್ದಾರೆ. ತಮಿಳುನಾಡಿನಲ್ಲಿ ನೆಲೆಸಿ 52 ವರ್ಷಗಳಾದರೂ ಕನ್ನಡ ಮರೆತಿಲ್ಲ ಎಂದು ಹೇಳಿದ್ದಾರೆ.

Dileep Raj: ಒಂದು ಧಾರಾವಾಹಿ, ಇಬ್ಬರು ಕಲಾವಿದರು, 1 ವರ್ಷದ ಅವಧಿಯಲ್ಲಿ ಹೃದಯಾಘಾತದಿಂದ ಅಕಾಲಿಕ ‌ಸಾವು! ಛೇ.. ಇದು ಕಾಕತಾಳೀಯವೋ? ವಿಧಿಯಾಟವೋ?

ಒಂದೇ ತಿಂಗಳು, ಒಂದೇ ಕಾರಣ; ದಿಲೀಪ್-ರಾಕೇಶ್ ಪೂಜಾರಿ ಸಾವಿನಲ್ಲಿದೆ ಸಾಮ್ಯತೆ

ಕನ್ನಡದ ಜನಪ್ರಿಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿಪರ್ಯಾಸವೆಂದರೆ, ಕಳೆದ ವರ್ಷ ಮೇ 12 ರಂದು ಇದೇ ಧಾರಾವಾಹಿಯ ನಟ ರಾಕೇಶ್ ಪೂಜಾರಿ ಕೂಡ ಹೃದಯಾಘಾತದಿಂದಲೇ ಮೃತಪಟ್ಟಿದ್ದರು.

ಅಂದು ಸೀರಿಯಲ್‌ನಲ್ಲಿ ‌ʻಸ್ಟಾರ್‌ʼ ಆಗಿದ್ದ ದಿಲೀಪ್‌ ರಾಜ್‌ಗೆ ʻಬಾಯ್‌ಫ್ರೆಂಡ್‌ʼ ಸಿನಿಮಾದಲ್ಲಿ ಚಾನ್ಸ್‌ ಸಿಕ್ಕಿದ್ದೇಗೆ? ದರ್ಶನ್‌‌, ಪ್ರೇಮ್‌ಗೂ ಹೋಗಿತ್ತು ಈ ಚಿತ್ರದ ಆಫರ್!‌

ದರ್ಶನ್, ಪ್ರೇಮ್‌ಗೆ ಹೋಗಿದ್ದ ಸಿನಿಮಾ ಆಫರ್ ದಿಲೀಪ್ ರಾಜ್‌ ಪಾಲಾಗಿದ್ದೇಗೆ?

ಕನ್ನಡದ ಪ್ರತಿಭಾವಂತ ನಟ ದಿಲೀಪ್ ರಾಜ್ ಅವರ ನಿಧನ ಸ್ಯಾಂಡಲ್‌ವುಡ್‌ನಲ್ಲಿ ಮೌನ ಆವರಿಸುವಂತೆ ಮಾಡಿದೆ. 'ಬಾಯ್‌ಫ್ರೆಂಡ್' ಚಿತ್ರದ ಮೂಲಕ ಹೀರೋ ಆಗಿ ಪದಾರ್ಪಣೆ ಮಾಡಿದ್ದ ಅವರ ಸಿನಿಮಾ ಪಯಣದ ಹಿಂದೆ ರೋಚಕ ಕಥೆಯಿದೆ. ದರ್ಶನ್ ಮತ್ತು ಪ್ರೇಮ್ ಅವರಂತಹ ಘಟಾನುಘಟಿ ನಟರಿಗೆ ಹೋಗಬೇಕಿದ್ದ ಸಿನಿಮಾ ಆಫರ್, ಅಂದು ದಿಲೀಪ್ ಪಾಲಾಗಿದ್ದರ ಬಗ್ಗೆ ಸಂಗೀತ ನಿರ್ದೇಶಕ ಕೆ.ಎಂ. ಇಂದ್ರ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.

ʻನಮ್ಮ ತಂಡದಲ್ಲಿ ದಿಲೀಪ್‌ ರಾಜ್‌ಗೇ ಮೊದಲು ಪಾಪ್ಯುಲಾರಿಟಿ ಸಿಕ್ಕಿದ್ದುʼ; ಹಳೆಯ ದಿನಗಳನ್ನು ನೆನೆದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌

ʻನಮ್ ಟೀಮ್‌ನಲ್ಲಿ ದಿಲೀ‌ಪ್‌ಗೇ ಮೊದಲು ಪಾಪ್ಯುಲಾರಿಟಿ ಸಿಕ್ಕಿದ್ದುʼ- ಗಣೇಶ್‌

ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ ಅವರ ನಿಧನಕ್ಕೆ 'ಗೋಲ್ಡನ್ ಸ್ಟಾರ್' ಗಣೇಶ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. 2000ನೇ ಇಸವಿಯಲ್ಲಿ ರಂಗಭೂಮಿಯಿಂದ ಒಟ್ಟಿಗೆ ಪಯಣ ಆರಂಭಿಸಿದ್ದ ದಿನಗಳನ್ನು ನೆನೆದ ಗಣೇಶ್, ತಮ್ಮ ತಂಡದಲ್ಲಿ ಮೊದಲು ಜನಪ್ರಿಯತೆ ಗಳಿಸಿದ್ದೇ ದಿಲೀಪ್ ಎಂದು ಭಾವುಕರಾಗಿದ್ದಾರೆ.

ಹಾರ್ಟ್‌ ಚೆಕಪ್‌ ಮಾಡಿಸಿಕೊಳ್ಳೋಕೂ ಮುಂಚೆಯೇ ಇಹಲೋಕ ತ್ಯಜಿಸಿದ ದಿಲೀಪ್‌ ರಾಜ್;‌ ʻಬಾಯ್‌ಫ್ರೆಂಡ್‌ʼ ಬದುಕಲ್ಲಿ ವಿಧಿಯ ಅಟ್ಟಹಾಸ

ಇಂದೇ ಇತ್ತು ಅಪಾಯಿಂಟ್‌ಮೆಂಟ್; ವೈದ್ಯರ ಭೇಟಿಗೂ ಮುನ್ನವೇ ದಿಲೀಪ್ ರಾಜ್ ಸಾವು

ಕನ್ನಡ ಚಿತ್ರರಂಗದ ಖ್ಯಾತ ನಟ ಮತ್ತು ನಿರ್ಮಾಪಕ ದಿಲೀಪ್ ರಾಜ್ (47) ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗೋವಾ ಪ್ರವಾಸದ ವೇಳೆ ಕಾಣಿಸಿಕೊಂಡಿದ್ದ ಎದೆನೋವಿನ ಹಿನ್ನೆಲೆಯಲ್ಲಿ ಇಂದೇ ವೈದ್ಯರ ತಪಾಸಣೆಗೆ ಸಮಯ ನಿಗದಿಯಾಗಿತ್ತು. ಆದರೆ ಚಿಕಿತ್ಸೆಗೂ ಮುನ್ನವೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ.

Ek Din Movie: ಸಿನಿಮಾ ಸೋಲಿನ ಬಗ್ಗೆ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಹೇಳಿದ್ದೇನು?

ಸಿನಿಮಾ ಸೋಲಿನ ಬಗ್ಗೆ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಹೇಳಿದ್ದೇನು?

Ek Din Movie: ನಟ ಜುನೈದ್ ಖಾನ್ ಮಾತನಾಡಿದ್ದು , ತಂಡದ ನಿರೀಕ್ಷೆಗಳ ಹೊರತಾಗಿಯೂ ಚಿತ್ರವು ಹೆಚ್ಚಿನ ವೀಕ್ಷಕರನ್ನು ತಲುಪಲಿಲ್ಲ ಎಂದು ಹೇಳಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ತಮ್ಮ ತಂದೆ, ನಟ-ನಿರ್ಮಾಪಕ ಅಮೀರ್ ಖಾನ್ (Aamir Khan) ಅವರು ಚಿತ್ರದ ಭವಿಷ್ಯದ ಬಗ್ಗೆ ಇನ್ನೂ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ.

ಸಿಎಂ ವಿಜಯ್‌ ನಡೆಗೆ ಬಹುಪರಾಕ್‌ ಹೇಳಿದ ಕಮಲ್‌ ಹಾಸನ್;‌ ʻದಳಪತಿʼ ಹೆಸರು ಹೇಳ್ತಿದ್ದಂತೆ ಕೈಮುಗಿದು ಹೊರಟ ರಜನಿಕಾಂತ್!‌

ವಿಜಯ್‌ಗೆ ಕಮಲ್‌‌ ಹಾಸನ್ ಮೆಚ್ಚುಗೆ; ʻದಳಪತಿʼ ಹೆಸರು ಕೇಳಿ ರಜನಿ‌ ಸೈಲೆಂಟ್!

ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ನಟ ವಿಜಯ್ ಸಮಾಜಮುಖಿ ನಿರ್ಧಾರ ಕೈಗೊಂಡಿದ್ದಾರೆ. ದೇವಸ್ಥಾನ, ಶಾಲೆ ಹಾಗೂ ಬಸ್ ನಿಲ್ದಾಣಗಳ 500 ಮೀಟರ್ ವ್ಯಾಪ್ತಿಯಲ್ಲಿರುವ 717 ಮದ್ಯದ ಅಂಗಡಿಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ. ವಿಜಯ್ ಅವರ ಈ ನಡೆಯನ್ನು ನಟ ಕಮಲ್ ಹಾಸನ್ ಮುಕ್ತವಾಗಿ ಶ್ಲಾಘಿಸಿದ್ದಾರೆ.

Alia Bhatt: ಕೇನ್ಸ್ ಫೆಸ್ಟಿವಲ್‌ನಲ್ಲಿ ಆಲಿಯಾ ಭಟ್ ಮಿಂಚಿಂಗ್‌! ಲುಕ್‌ಗೆ ಫಿದಾ ಆದ್ರು ಫ್ಯಾನ್ಸ್‌

ಕೇನ್ಸ್ ಫೆಸ್ಟಿವಲ್‌ನಲ್ಲಿ ಆಲಿಯಾ ಭಟ್ ಮಿಂಚಿಂಗ್‌!

Cannes 2026 look: ಮೇ 12 ರಂದು ಬಿಡುಗಡೆಯಾದ ಹೊಸ ಫೋಟೋಗಳಲ್ಲಿ, ಆಲಿಯಾ ಯಶ್ ಪಾಟೀಲ್ ಅವ ಕಸ್ಟಮ್ ಲ್ಯಾಂಡ್‌ಸ್ಕೇಪ್-ಪ್ರಿಂಟ್ ಬಾಲ್ ಗೌನ್ ಧರಿಸಿರುವುದು ಕಂಡುಬರುತ್ತದೆ, ಚಿನ್ನದ ಸ್ಟಡ್‌ಗಳು ಮತ್ತು ಸ್ಟೇಟ್‌ಮೆಂಟ್ ರಿಂಗ್ ಅನ್ನು ಒಳಗೊಂಡಿದ್ದವು. ಆಲಿಯಾ, ಇವಾ ಲೊಂಗೋರಿಯಾ ಮತ್ತು ವಿಯೋಲಾ ಡೇವಿಸ್‌ರಂತಹ ತಾರೆಯರನ್ನು ಒಳಗೊಂಡಂತೆ ಉನ್ನತ ಮಟ್ಟದ ಅಂತರರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ.

ʻನಕಾರಾತ್ಮಕತ ಹೇಳಿಕೆ ನೀಡಬೇಡಿʼ; ಸನಾತನ ಧರ್ಮ ನಿರ್ಮೂಲನಾ ಕಿಡಿ ಹೊತ್ತಿಸಿದ ಉದಯನಿಧಿ ಸ್ಟಾಲಿನ್‌ಗೆ ನಟ ಅನಿರುದ್ಧ ತೀವ್ರ ಆಕ್ಷೇಪ

ʻಸನಾತನ ಧರ್ಮ ನಿರ್ಮೂಲನೆ ಮಾಡಬೇಕುʼ ಎಂದ ಉದಯನಿಧಿಗೆ ನಟ ಅನಿರುದ್ಧ ತಿರುಗೇಟು

Udayanidhi Stalin: ತಮಿಳುನಾಡು ವಿಧಾನಸಭೆಯಲ್ಲಿ ಉದಯನಿಧಿ ಸ್ಟಾಲಿನ್ ಅವರು "ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು" ಎಂಬ ವಿವಾದಾತ್ಮಕ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಈ ನಕಾರಾತ್ಮಕ ನಿಲುವಿಗೆ ಸ್ಯಾಂಡಲ್‌ವುಡ್ ನಟ ಅನಿರುದ್ಧ ಜತ್ಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ʻನಾನು ರಾಮ, ಕೃಷ್ಣನನ್ನು ನೋಡಿಲ್ಲ, ಆದರೆ ಮೋದಿಯವರನ್ನು ನೋಡಿದ್ದೇನೆʼ; ಭಾವುಕರಾದ ತೆಲುಗಿನ ಹಿರಿಯ ನಟ

ʻನಾನು ರಾಮನನ್ನು ನೋಡಿಲ್ಲ, ಆದರೆ ಮೋದಿಯನ್ನು ನೋಡಿದ್ದೇನೆʼ- ತೆಲುಗು ನಟ

ತೆಲುಗು ಚಿತ್ರರಂಗದ ಹಿರಿಯ ನಟ ಹಾಗೂ ಸಾಹಿತಿ ತನಿಕೇಳ್ಳ ಭರಣಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕ್ಷಣಗಳನ್ನು ಭಾವುಕವಾಗಿ ಹಂಚಿಕೊಂಡಿದ್ದಾರೆ. ಮೋದಿ ಅವರನ್ನು ಶ್ರೀರಾಮ, ಶ್ರೀಕೃಷ್ಣ ಮತ್ತು ಸ್ವಾಮಿ ವಿವೇಕಾನಂದರಿಗೆ ಹೋಲಿಸಿರುವ ಅವರು, ಪ್ರಧಾನಿಯವರನ್ನು ಭೇಟಿಯಾಗಿ ಹಸ್ತಲಾಘವ ಮಾಡಿದ್ದರಿಂದ ತಮ್ಮ ಜನ್ಮ ಸಾರ್ಥಕವಾಯಿತು ಎಂದು ಹೇಳಿದ್ದಾರೆ.

ಕನ್ನಡಕ್ಕೆ ರಿಮೇಕ್‌ ಆಗಲಿದೆಯಾ ʻದೃಶ್ಯಂ 3ʼ ಸಿನಿಮಾ? ಕುತೂಹಲ ಹುಟ್ಟಿಸಿದ ನಿರ್ಮಾಪಕರ ಆ ಒಂದು ನಡೆ!

ʻದೃಶ್ಯಂ 3ʼ ರಿಲೀಸ್‌ಗೆ ಕೌಂಟ್‌ಡೌನ್; ರಿಮೇಕ್‌ನಲ್ಲಿ ರವಿಚಂದ್ರನ್ ನಟನೆ?

ಮಲಯಾಳಂನ ಜನಪ್ರಿಯ ಸಸ್ಪೆನ್ಸ್ ಥ್ರಿಲ್ಲರ್ 'ದೃಶ್ಯಂ 3' ಮೇ 21ರಂದು ಬಿಡುಗಡೆಗೆ ಸಜ್ಜಾಗಿದ್ದು, ಕನ್ನಡ ಆವೃತ್ತಿಯ ಬಗ್ಗೆ ಕುತೂಹಲ ಮೂಡಿಸಿದೆ. ತಮಿಳು ಮತ್ತು ತೆಲುಗಿಗೆ ಸಿನಿಮಾ ಡಬ್ ಆಗುತ್ತಿದ್ದರೂ, ಕನ್ನಡ ಡಬ್ಬಿಂಗ್ ಬಗ್ಗೆ ಮಾಹಿತಿಯಿಲ್ಲದಿರುವುದು ರವಿಚಂದ್ರನ್ ನಟನೆಯಲ್ಲಿ ರಿಮೇಕ್ ಆಗುವ ಮುನ್ಸೂಚನೆ ನೀಡಿದೆ.

Photos: ʻನಾನು ಶಿವನ ಅಚ್ಚುಮೆಚ್ಚಿನ ಮಗು...ʼ; ಒಬ್ಬಂಟಿಯಾಗಿ ಕೇದಾರನಾಥ ಯಾತ್ರೆ ಮಾಡಿದ ನಟಿ ಕೃತ್ತಿಕಾ ರವೀಂದ್ರ

Photos: ಏಕಾಂಗಿಯಾಗಿ ಕೇದಾರನಾಥ ಯಾತ್ರೆ ಮಾಡಿದ ನಟಿ ಕೃತ್ತಿಕಾ ರವೀಂದ್ರ

ನಟಿ ಕೃತ್ತಿಕಾ ರವೀಂದ್ರ ಅವರಿಗೆ ಪ್ರವಾಸ ಮಾಡುವುದು ಎಂದರೆ, ಅಚ್ಚುಮೆಚ್ಚು. ಅದರಲ್ಲೂ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದನ್ನು ಅವರು ಎಂದಿಗೂ ಮಿಸ್‌ ಮಾಡಿಕೊಳ್ಳುವುದಿಲ್ಲ. ಈ ಹಿಂದೆ ದೇಶದ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದ ಕೃತ್ತಿಕಾ ಅವರು ಈ ಬಾರಿ ಕೇದಾರನಾಥ ಯಾತ್ರೆ ಮಾಡಿದ್ದಾರೆ. "ಕೇದಾರನಾಥಕ್ಕೆ ಒಬ್ಬಳೇ ಟ್ರೆಕ್ (Solo Trek) ಹೋಗಬೇಕೆಂಬ ಆಸೆ ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲಿತ್ತು. ಆದರೆ ಅಷ್ಟೊಂದು ಆತ್ಮವಿಶ್ವಾಸವಿರಲಿಲ್ಲ. ಒಂದು ತಿಂಗಳ ಹಿಂದೆ ಈ ಯಾತ್ರೆಯನ್ನು ಯೋಜಿಸಿದಾಗ ನಾನು ನಿಜಕ್ಕೂ ಹಿಂಜರಿಯುತ್ತಿದ್ದೆ. ಆದರೆ ಆ ಪರಶಿವನ ಮೇಲೆ ನನಗೆ ಅಪಾರ ನಂಬಿಕೆಯಿತ್ತು. ಹೇಗಾದರೂ ಮಾಡಿ ಆತನೇ ನನಗೆ ಎಲ್ಲವನ್ನೂ ಸುಲಭವಾಗಿಸುತ್ತಾನೆ ಎಂದುಕೊಂಡಿದ್ದೆ. ಆತ ಮಾಡಿದ್ದೂ ಕೂಡ ಅದನ್ನೇ.." ಎಂದು ಹೇಳಿರುವ ಕೃತ್ತಿಕಾ ಈ ಯಾತ್ರೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ʻದಳಪತಿʼ ವಿಜಯ್‌ ಸಿಎಂ ಆಗುತ್ತಿದ್ದಂತೆಯೇ ಬದಲಾಯ್ತು ʻಜನ ನಾಯಗನ್‌ʼ ಚಿತ್ರದ ನಸೀಬು; ಡಿಜಿಟಲ್‌ ಹಕ್ಕುಗಳಿಗಾಗಿ ಮುಗಿಬಿದ್ದ OTT ‌ಪ್ಲಾಟ್‌ಫಾರ್ಮ್ಸ್!

ಬದಲಾಯ್ತು 'ಜನ ನಾಯಗನ್' ನಸೀಬು; ವಿಜಯ್ CM ಆಗುತ್ತಿದ್ದಂತೆ ಭಾರಿ ಡಿಮ್ಯಾಂಡ್

ದಳಪತಿ ವಿಜಯ್ ತಮಿಳುನಾಡು ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಅವರ ಕೊನೆಯ ಸಿನಿಮಾ 'ಜನ ನಾಯಗನ್' ಡಿಜಿಟಲ್ ಮಾರುಕಟ್ಟೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಈ ಹಿಂದೆ ಅಮೆಜಾನ್ ಪ್ರೈಮ್ ಒಪ್ಪಂದ ಮುರಿದುಕೊಂಡಿದ್ದರೂ, ಈಗ ಓಟಿಟಿ ಸಂಸ್ಥೆಗಳು ಭಜರ್ರಿ ಹಣ ನೀಡಲು ಪೈಪೋಟಿ ನಡೆಸುತ್ತಿವೆ.

ʻಆಕೆಯ ದೇಹ, ಆಕೆಯ ದೇವರು, ಕೇಳಲು ನೀನ್ಯಾರುʼ; ಬೆನ್ನಿನ ಮೇಲೆ ದೇವರ ಟ್ಯಾಟೂ ಹಾಕಿಸಿಕೊಂಡ‌ ʻಕಿಚ್ಚʼ ಸುದೀಪ್‌ ಪುತ್ರಿ ಸಾನ್ವಿಗೆ ಚಕ್ರವರ್ತಿ ಚಂದ್ರಚೂಡ್ ಬೆಂಬಲ

ʻಆಕೆಯ ದೇಹ, ಆಕೆಯ ದೇವರು, ಕೇಳಲು ನೀನ್ಯಾರುʼ; ಸಾನ್ವಿಗೆ ಚಂದ್ರಚೂಡ್ ಬೆಂಬಲ

ʻಕಿಚ್ಚʼ ಸುದೀಪ್ ಪುತ್ರಿ ಸಾನ್ವಿ ತಮ್ಮ ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಮಡಿ-ಮೈಲಿಗೆಯ ಹೆಸರಿನಲ್ಲಿ ಟ್ರೋಲ್ ಮಾಡುತ್ತಿರುವವರಿಗೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಖಡಕ್ ಉತ್ತರ ನೀಡಿದ್ದಾರೆ.

Loading...