ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Dhurandhar 2 Review: ಆದಿತ್ಯ ಧರ್‌ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!

Ranveer Singh: ʻಧುರಂಧರ್‌ 2ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Dhurandhar The Revenge Review: ʻಧುರಂಧರ್‌ 2ʼ ಸಿನಿಮಾ ಮೂಲಕ ನಿರ್ದೇಶಕ ಆದಿತ್ಯ ಧರ್ ಮತ್ತೊಂದು ಮಾಸ್ಟರ್‌ಪೀಸ್ ಚಿತ್ರವನ್ನು ನೀಡಿದ್ದಾರೆ. ಭಾರತೀಯ ಸೈನಿಕನಾಗಬೇಕಿದ್ದ ಜಸ್ಕೀರತ್ ಸಿಂಗ್, ಹಮ್ಝಾ ಅಲಿ ಮಝಾರಿಯಾಗಿ ಪಾಕಿಸ್ತಾನದೊಳಗೆ ನುಗ್ಗಿ ಆತಂಕವಾದಿಗಳನ್ನು ಮಟ್ಟಹಾಕುವ ರೋಚಕ ಕಥೆಯೇ ಈ ಸಿನಿಮಾ.

ಅನುಷ್ಕಾ ಶೆಟ್ಟಿ ಮದುವೆ ವದಂತಿಗೆ ಬ್ರೇಕ್: ಸುಳ್ಳು ಸುದ್ದಿ ಹರಡುವವರ ವಿರುದ್ಧ 'ಸ್ವೀಟಿ' ತಂಡ ಗರಂ!

ಮದುವೆ ಸುದ್ದಿಗೆ ನಟಿ ಅನುಷ್ಕಾ ಶೆಟ್ಟಿ ತೀವ್ರ ಅಸಮಾಧಾನ

ನಟಿ ಅನುಷ್ಕಾ ಶೆಟ್ಟಿ ಮದುವೆ ಕುರಿತ ವದಂತಿಗಳ ಬಗ್ಗೆ ಅವರ ತಂಡ ಬೇಸರ ವ್ಯಕ್ತಪಡಿಸಿದೆ. ಬೆಂಗಳೂರು ಉದ್ಯಮಿಯೊಂದಿಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಅವರ ತಂಡ, ಮದುವೆ ಎಂಬುದು ಅತ್ಯಂತ ವೈಯಕ್ತಿಕ ವಿಷಯ ಎಂದು ಹೇಳಿದೆ. ಪದೇಪದೇ ವದಂತಿ ಹರಡುವುದು ಖಾಸಗಿತನದ ಮೇಲಿನ ಅತಿಕ್ರಮಣ ಎಂದು ತಂಡವು ಖಂಡಿಸಿದೆ.

Love Mocktail 3 Review: ತಂದೆ - ಮಗಳ ಬಾಂಧವ್ಯದ ಕಥೆಯಲ್ಲಿ ಭಾವನಾತ್ಮಕ ಏರಿಳಿತಗಳು

Darling Krishna: ʻಲವ್‌ ಮಾಕ್ಟೇಲ್‌ 3ʼ ಚಿತ್ರ ಹೇಗಿದೆ? ರೇಟಿಂಗ್‌ ಎಷ್ಟು?

Love Mocktail 3 Kannada Review: ʻಡಾರ್ಲಿಂಗ್ʼ ಕೃಷ್ಣ ಈ ಬಾರಿ ಕೇವಲ ಪ್ರೇಮಕಥೆಗೆ ಸೀಮಿತವಾಗದೆ ತಂದೆ-ಮಗಳ ಭಾವನಾತ್ಮಕ ಸಂಬಂಧವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪಾರ್ಟ್ 2ರಲ್ಲಿ ಪರಿಚಯವಾದ ಪುಟ್ಟ ಮಗಳ ಸುತ್ತ ಕಥೆ ಸಾಗಲಿದ್ದು, ಈ ಬಾರಿ ಬಾಲನಟಿ ಸಂವೃತಾ ಮತ್ತು ಕೃಷ್ಣ ಅವರ ಜುಗಲ್‌ಬಂದಿ ಇರಲಿದೆ.

Dhurandhar 2: 'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ

'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ!

PM Narendra Modi: ಆದಿತ್ಯ ಧರ್ ಅವರ ಧುರಂಧರ್ 2 ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2014 ರ ವಿಜಯೋತ್ಸವ ಭಾಷಣವನ್ನು ಪ್ರಮುಖ ದೃಶ್ಯದಲ್ಲಿ ತೋರಿಸಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ಚಿತ್ರದೊಳಗಿನ ದೂರದರ್ಶನದಲ್ಲಿ ತೋರಿಸಲಾದ ಈ ಕ್ಷಣವು, ವೀಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಿ ರಿಲೀಸ್‌ ಪ್ರಾರಂಭಿಸುತ್ತಿದ್ದಂತೆ, ಪ್ರೇಕ್ಷಕರು ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Dhurandhar 2 Twitter Review: ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ಸಿನಿಮಾ ನೋಡಿದವರು ಏನಂದ್ರು?

ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ನೋಡಿದವರು ಏನಂದ್ರು?

Dhurandhar 2 : ಧುರಂಧರ್ ದಿ ರಿವೆಂಜ್ ಬಾಲಿವುಡ್ ಚಿತ್ರವಾಗಿದ್ದು, ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ನಟಿಸಿದ್ದಾರೆ. ಆದಿತ್ಯ ಧರ್ ಈ ಚಿತ್ರವನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿದ್ದಾರೆ. ಆಕ್ಷನ್, ಸ್ಪೈ ಥ್ರಿಲ್ಲರ್ ಆಗಿರುವ ಈ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಆದಿತ್ಯ ಧರ್, ಲೋಕೇಶ್ ಧರ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಸಿನಿಮಾ ನೋಡಿದವರು ಧುರಂಧರ್ ದಿ ರಿವೆಂಜ್ ಗೆ ಪಾಸಿಟಿವ್ ರೇಟಿಂಗ್ಕೂ ಡ ನೀಡಿದ್ದಾರೆ. ಹಾಗಾದರೆ ಧುರಂಧರ್ ಭಾಗ 2 ಹೇಗಿದೆ ಮತ್ತು ಅದರ ರೇಟಿಂಗ್ ಏನು ಎಂದು ತಿಳಿದುಕೊಳ್ಳೋಣ.

Jogi Prem: ನನ್ನ ಉದ್ದೇಶ ಅದಾಗಿರಲಿಲ್ಲ, ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್

ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್

KD movie: ಜೋಗಿ ಪ್ರೇಮ್‌ ಅವರ ʻಕೆಡಿʼ ಚಿತ್ರದ ಐಟಂ ಸಾಂಗ್‌ ವಿವಾದ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂದು ಹಿಂದಿ ವರ್ಷನ್‌ ಅನ್ನು ತೆಗೆದು ಹಾಕಲಾಗಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಕುರಿತ ಚರ್ಚೆಗೆ ಬ್ರೇಕ್‌ ಬಿದ್ದಿಲ್ಲ. ಅತ್ತ ಹಾಡಿನಲ್ಲಿ ಡ್ಯಾನ್ಸ್‌ ಮಾಡಿರುವ ನೋರಾ ಫತೇಹಿ ಕೂಡ ಪ್ರೇಮ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಇದೀಗ ಹಾಡು ಬರೆದ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Dhurandhar 2: ಕೊನೆಯ ಕ್ಷಣದಲ್ಲಿ ‘ಧುರಂಧರ್ 2’ ಪ್ರೀಮಿಯರ್ ರದ್ದು; ಅಭಿಮಾನಿಗಳಿಗೆ ನಿರಾಸೆ

ಕೊನೆಯ ಕ್ಷಣದಲ್ಲಿ ‘ಧುರಂಧರ್ 2’ ಪ್ರೀಮಿಯರ್ ರದ್ದು!

Dhurandhar 2: ಧುರಂಧರ್‌ 2 ಭಾರತದಲ್ಲಿ ಹಿಂದಿ ಪ್ರೀಮಿಯರ್ ಶೋ ಹೊರತಾಗಿ ಇತರೆ ಭಾಷೆಯ ಎಲ್ಲ ಪ್ರೀಮಿಯರ್ ಶೋ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಪ್ಯಾನ್-ಇಂಡಿಯಾ ಚಿತ್ರವಾಗಿ ಸ್ಥಾನ ಪಡೆದಿರುವ ಈ ಸಿನಿಮಾ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳೊಂದಿಗೆ ಹಿಂದಿಯಲ್ಲಿ ಬಿಡುಗಡೆಯಾಗಲು ನಿರ್ಧರಿಸಲಾಗಿತ್ತು. ಕೊನೆಯ ಕ್ಷಣದ ತಾಂತ್ರಿಕ ದೋಷಗಳಿಂದಾಗಿ ಹಠಾತ್ ಪ್ರೀಮಿಯರ್ ಶೋ ರದ್ದು ಮಾಡಲಾಗಿದೆ ಎಂದು ವರದಿಯಾಗಿದೆ.

ಮತ್ತೆ ಒಂದಾದ ʻಕೃಷ್ಣಂ ಪ್ರಣಯಂ ಸಖಿʼ ಟೀಮ್;‌ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಈಗ ʻಬೃಂದಾ ವಿಹಾರಿʼ, ಈ ಸಿನಿಮಾ ರಿಲೀಸ್‌ ಯಾವಾಗ?

ಯುಗಾದಿ ಹಬ್ಬದ ಪ್ರಯುಕ್ತ ಅನೌನ್ಸ್‌ ಆಯ್ತು ನಟ ಗಣೇಶ್ ಹೊಸ ಸಿನಿಮಾ ಟೈಟಲ್

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಿರ್ದೇಶಕ ಶ್ರೀನಿವಾಸರಾಜು ಜೋಡಿ ಮತ್ತೆ ಒಂದಾಗಿದೆ. 'ಕೃಷ್ಣಂ ಪ್ರಣಯ ಸಖಿ' ಭರ್ಜರಿ ಯಶಸ್ಸಿನ ನಂತರ ಮೂಡಿಬರುತ್ತಿರುವ ಈ ಹೊಸ ಚಿತ್ರಕ್ಕೆ ಯುಗಾದಿ ಪ್ರಯುಕ್ತ ಶೀರ್ಷಿಕೆ ಅನಾವರಣಗೊಳಿಸಲಾಗಿದ್ದು, ʻಬೃಂದಾ ವಿಹಾರಿʼ ಎಂದು ಹೆಸರಿಡಲಾಗಿದೆ. ದೇವಿಕಾ ಭಟ್ ಮತ್ತು ಮಾಳವಿಕ ಶರ್ಮಾ ನಾಯಕಿಯರಾಗಿ ನಟಿಸಿದ್ದಾರೆ.

Jogi Prem: ಪಾರ್ಲಿಮೆಂಟ್‌ ತಲುಪಿದ ʻಕೆಡಿʼ ಸಿನಿಮಾ ಹಾಡಿನ ವಿವಾದ; ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಏನಂದ್ರು ನೋಡಿ!

ಪಾರ್ಲಿಮೆಂಟ್‌ನಲ್ಲಿ 'ಕೆಡಿ' ಹಾಡಿನ ಸದ್ದು: ಕೇಂದ್ರ ಸಚಿವ ಖಡಕ್ ಎಚ್ಚರಿಕೆ

ಕೆಡಿ ಹಾಡಿನ ವಿವಾದ ಈಗ ಸಂಸತ್ತಿನ ಮೆಟ್ಟಿಲೇರಿದೆ. 'ಕೆಡಿ' ಚಿತ್ರದ ಹಿಂದಿ ಹಾಡಿನ ಅಶ್ಲೀಲ ಸಾಹಿತ್ಯದ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಪ್ರಶ್ನೆ ಎದ್ದಿದ್ದು, ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಉತ್ತರಿಸಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜ ಮತ್ತು ಸಂಸ್ಕೃತಿಯ ಚೌಕಟ್ಟಿನೊಳಗಿರಬೇಕು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ʻಧುರಂಧರ್‌ 2ʼ ಸಿನಿಮಾ ರಿಲೀಸ್‌ಗೆ ಕ್ಷಣಗಣನೆ; ಈ ಟೈಮ್‌ನಲ್ಲಿ ಅತಿ ಮುಖ್ಯ ಮನವಿ ಮಾಡಿಕೊಂಡ ನಿರ್ದೇಶಕ ಆದಿತ್ಯ ಧರ್!‌ ಏನದು?

'ಧುರಂಧರ್ 2' ಪ್ರೀಮಿಯರ್‌ಗೂ ಮುನ್ನ ನಿರ್ದೇಶಕ ಆದಿತ್ಯ ಮಾಡಿದ ಮನವಿ ಏನು?

ನಿರ್ದೇಶದ ಆದಿತ್ಯ ಧರ್ ಅವರು 'ಧುರಂಧರ್: ದಿ ರಿವೇಂಜ್' ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳು ಆರಂಭವಾಗುವ ಮುನ್ನ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಚಿತ್ರದ ಸಸ್ಪೆನ್ಸ್ ಮತ್ತು ತಿರುವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬೇಡಿ ಹಾಗೂ ಪೈರಸಿ ಆವೃತ್ತಿಗಳನ್ನು ನೋಡಬೇಡಿ ಎಂದು ವಿನಂತಿಸಿದ್ದಾರೆ.

ಯುಗಾದಿ ಹಬ್ಬಕ್ಕೆ ಎರಡು ಗುಡ್‌ ನ್ಯೂಸ್‌ ನೀಡಿದ ʻಸಾರಥಿʼ, ʻಲ್ಯಾಂಡ್‌ಲಾರ್ಡ್ʼ‌ ನಿರ್ಮಾಪಕರು; ದರ್ಶನ್‌ ಫ್ಯಾನ್ಸ್‌ ಖುಷಿಗೂ ಇಲ್ಲಿದೆ ಕಾರಣ!

ದರ್ಶನ್ ಅಭಿಮಾನಿಗಳಿಗೆ ಯುಗಾದಿ ಗಿಫ್ಟ್; ಮತ್ತೆ ತೆರೆಗೆ ಬರ್ತಿದೆ 'ಸಾರಥಿ'

ನಿರ್ಮಾಪಕ ಕೆ.ವಿ. ಸತ್ಯಪ್ರಕಾಶ್ ಯುಗಾದಿ ಹಬ್ಬಕ್ಕೆ ದರ್ಶನ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದ್ದಾರೆ. 15 ವರ್ಷಗಳ ಹಿಂದೆ ಬಾಕ್ಸ್ ಆಫೀಸ್ ಧೂಳೀಪಟ ಮಾಡಿದ್ದ 'ಸಾರಥಿ' ಸಿನಿಮಾ ಮತ್ತೆ ರೀ-ರಿಲೀಸ್‌ ಮಾಡಲು ಸಜ್ಜಾಗಿದ್ದಾರೆ. ಇದರ ಜೊತೆಗೆ ನಿರ್ದೇಶಕ ಪಿ. ಸಿ. ಶೇಖರ್ ಅವರೊಂದಿಗೆ ಸತ್ಯಪ್ರಕಾಶ್ ಹೊಸ ಸಿನಿಮಾವನ್ನು ಘೋಷಿಸಿದ್ದು, ಈ ಚಿತ್ರದ ಬಗ್ಗೆ ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

ʻಜೋಗಿʼ ಪ್ರೇಮ್‌ ವಿರುದ್ಧ ತಿರುಗಿಬಿದ್ದ ನೋರಾ ಫತೇಹಿ; ʻನನಗೆ ಹೇಳದೆಯೇ ಇದನ್ನೆಲ್ಲಾ ಮಾಡಿದ್ರುʼ ಎಂದ ಬಾಲಿವುಡ್‌ ನಟಿ

ʻಕೆಡಿʼ ಟೀಮ್‌ ವಿರುದ್ಧ ವಿರುದ್ಧ ನಟಿ ನೋರಾ ಫತೇಹಿ ಗರಂ!

ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ..ʼ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ನಟಿ ನೋರಾ ಫತೇಹಿ ಅವರು ನಿರ್ದೇಶಕ ಪ್ರೇಮ್ ಮತ್ತು ಚಿತ್ರತಂಡದ ವಿರುದ್ಧ ಬಹಿರಂಗವಾಗಿ ಕಿಡಿಕಾರಿದ್ದಾರೆ. ಹಾಡಿನ ಹಿಂದಿ ವರ್ಷನ್‌ನ ಅಶ್ಲೀಲ ಸಾಹಿತ್ಯದ ಬಗ್ಗೆ ತಮಗೆ ಯಾವುದೇ ಅರಿವಿರಲಿಲ್ಲ ಮತ್ತು ತಮ್ಮ ಅನುಮತಿಯಿಲ್ಲದೆ ಈ ರೀತಿ ಚಿತ್ರೀಕರಿಸಲಾಗಿದೆ ಎಂದು ನೋರಾ ಆರೋಪಿಸಿದ್ದಾರೆ.

ಬಾಲಿವುಡ್‌ನ ಶಿವಾಂಗಿ ವರ್ಮಾ ಜೊತೆ ಹೆಜ್ಜೆ ಹಾಕಿದ 'ಡೆಡ್ಲಿ'‌ ಆದಿತ್ಯ;  'ಟೆರರ್' ಚಿತ್ರದ ʻಬೊಂಬೆ ಬೊಂಬೆʼ ಹಾಡಿಗೆ ಫ್ಯಾನ್ಸ್ ಫಿದಾ!

'ಡೆಡ್ಲಿ' ಆದಿತ್ಯ ಜೊತೆ 'ಬೊಂಬೆ ಬೊಂಬೆ' ಹಾಡಿಗೆ ಶಿವಾಂಗಿ ವರ್ಮಾ ಹೆಜ್ಜೆ

ʻಟೆರರ್‌ʼ ಚಿತ್ರದ ʻಬೊಂಬೆ ಬೊಂಬೆʼ ಹಾಡು ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. 'ಡೆಡ್ಲಿ' ಸ್ಟಾರ್ ಆದಿತ್ಯ ಮತ್ತು ಬಾಲಿವುಡ್ ಬೆಡಗಿ ಶಿವಾಂಗಿ ವರ್ಮಾ ಅವರ ಜುಗಲ್‌ಬಂದಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಹಾಡಿಗೆ ಬಾಲಿವುಡ್‌ನ ಮಮತಾ ಶರ್ಮಾ ಧ್ವನಿ ನೀಡಿದ್ದಾರೆ. ಈ ಗ್ಯಾಂಗ್‌ಸ್ಟರ್ ಸಿನಿಮಾ ಏಪ್ರಿಲ್ 10ರಂದು ತೆರೆಕಾಣಲಿದೆ.

ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್‌ ಅಬ್ಬರ: 'ಧುರಂಧರ್ 2' ಸಿನಿಮಾದ ಫಸ್ಟ್‌ ಡೇ ಕಲೆಕ್ಷನ್‌ ಎಷ್ಟಾಗಬಹುದು?

Ranveer Singh: ಮೊದಲ ದಿನವೇ 'ಧುರಂಧರ್ 2' ದಾಖಲೆ ಕಲೆಕ್ಷನ್‌ ಪಕ್ಕಾ!

'ಧುರಂಧರ್: ದಿ ರಿವೇಂಜ್' ಚಿತ್ರವು ಮಾರ್ಚ್ 19ರಂದು ಜಾಗತಿಕವಾಗಿ ತೆರೆಕಾಣಲಿದ್ದು, ರಣವೀರ್ ಸಿಂಗ್ ಅವರ ವೃತ್ತಿಜೀವನದ ಅತಿದೊಡ್ಡ ಓಪನಿಂಗ್ ಪಡೆಯುವ ಸಿನಿಮಾ ಇದಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್ ಈಗಾಗಲೇ ಪೇಯ್ಡ್ ಪ್ರಿವ್ಯೂಗಳಿಂದ 45 ಕೋಟಿ ರೂ. ಬಾಚಿಕೊಂಡಿದ್ದು, ಮೊದಲ ದಿನ ದಾಖಲೆ ಪ್ರಮಾಣದ ಗಳಿಕೆ ಆಗೋದು ನಿಶ್ಚಿತ ಎನ್ನಲಾಗಿದೆ.

OTT releases: ಲ್ಯಾಂಡ್‌ಲಾರ್ಡ್, ವಲವಾರ ಸೇರಿದಂತೆ ಈ ವಾರ ಒಟಿಟಿಗೆ ಎಂಟ್ರಿಕೊಡಲಿರುವ ಚಿತ್ರಗಳಿವು

`ಲ್ಯಾಂಡ್‌ಲಾರ್ಡ್' ಸೇರಿದಂತೆ ಈ ವಾರ ಒಟಿಟಿಗೆ ಎಂಟ್ರಿಕೊಡಲಿರುವ ಚಿತ್ರಗಳಿವು

Friday OTT releases: ವಾರಾಂತ್ಯ ಸಮೀಪಿಸುತ್ತಿದೆ, ಅಂದರೆ OTT ಪ್ಲಾಟ್‌ಫಾರ್ಮ್‌ಗಳಲ್ಲಿ (OTT Platform) ಹೊಸ ಚಲನಚಿತ್ರಗಳು ಮತ್ತು ಸಿರೀಸ್‌ ಸೇರಿದಂತೆ ಉಳಿದ ಕಾರ್ಯಕ್ರಮಗಳು ಬರಲಿವೆ. ಆಕ್ಷನ್-ಪ್ಯಾಕ್ಡ್ ಸೂಪರ್‌ಹೀರೋ, ಥ್ರಿಲ್ಲರ್‌ಗಳು ಅಥವಾ ಭಾವನಾತ್ಮಕ ಥರಹದ ಕಥೆಗಳನ್ನು ನೋಡಲು ಬಯಸೋದಾದರೆ ಹಲವು ಸಿನಿಮಾಗಳು ಒಟಿಟಿಗೆ ಎಂಟ್ರಿ ಕೊಟ್ಟಿದೆ. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ZEE5 ಮತ್ತು ಜಿಯೋಹಾಟ್‌ಸ್ಟಾರ್‌ನಂತಹ ವೇದಿಕೆಗಳಲ್ಲಿ ಹಲವಾರು ಹೊಸ ಮೂವೀಸ್‌ ಬಿಡುಗಡೆಯಾಗಲಿವೆ. ಯಾವೆಲ್ಲ?

Kangana Ranaut: ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!

ಪ್ರೇಮ್ ಬರೆದ ‘ಸೆರಗ ಸರ್ಸೆ’ ಹಾಡಿಗೆ ಕಂಗನಾ ರಣಾವತ್ ಕಿಡಿ!

Kangana Ranaut: ನೋರಾ ಫತೇಹಿ ಮತ್ತು ಸಂಜಯ್ ದತ್ ಅಭಿನಯದ ಕನ್ನಡ ಚಿತ್ರ ಕೆಡಿ - ದಿ ಡೆವಿಲ್‌ನ " ಸರ್ಕೆ ಚುನರ್ ತೇರಿ ಸರ್ಕೆ " ಹಾಡಿನ ಅಶ್ಲೀಲ ಸಾಹಿತ್ಯ ಮತ್ತು ಅಶ್ಲೀಲ ನೃತ್ಯ ಸಂಯೋಜನೆಯಿಂದಾಗಿ ಪ್ರೇಕ್ಷಕರಿಂದ ಭಾರಿ ಟೀಕೆಗೆ ಗುರಿಯಾಯಿತು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಇದರ ಬಗ್ಗೆ ಕಾನೂನು ನೋಟಿಸ್ ಜಾರಿ ಮಾಡಿದೆ. ನಂತರ ಹಾಡನ್ನು ಯೂಟ್ಯೂಬ್ ಮತ್ತು ಇತರ ಪ್ಲ್ಯಾಟ್‌ಫಾರ್ಮ್‌ನಿಂದ ತೆಗೆದುಹಾಕಲಾಗಿದೆ.

Rashmika Mandanna:  ಮತ್ತೆ ಕೆಲಸದ ಕಡೆಗೆ ಗಮನ ಹರಿಸಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್‌

ಮತ್ತೆ ಕೆಲಸದ ಕಡೆಗೆ ಗಮನ ಹರಿಸಿದ ರಶ್ಮಿಕಾ ಮಂದಣ್ಣ; ಫೋಟೋ ವೈರಲ್‌

Rashmika Mandanna: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. 'ದಿ ವೆಡ್ಡಿಂಗ್ ಆಫ್ ವಿರೋಶ್' ಎಂದು ಪ್ರೀತಿಯಿಂದ ಕರೆಯಲ್ಪಡುವ ಅವರ ಮೂರು ದಿನಗಳ ಆಚರಣೆಯು ಪ್ರೀತಿ, ನಗು ಮತ್ತು ಮರೆಯಲಾಗದ ನೆನಪುಗಳಿಂದ ತುಂಬಿತ್ತು. ಈ ಜೋಡಿ ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ತಾರಾಬಳಗದ ಆರತಕ್ಷತೆಯನ್ನು ಸಹ ಆಯೋಜಿಸಿತ್ತು, ಇದರಲ್ಲಿ ಕರಣ್ ಜೋಹರ್, ಅಲ್ಲು ಅರ್ಜುನ್, ಕೃತಿ ಸನೋನ್, ರಾಮ್ ಚರಣ್, ಮೃಣಾಲ್ ಠಾಕೂರ್, ರಾಣಾ ದಗ್ಗುಬಾಟಿ ಮತ್ತು ಹಲವಾರು ಇತರ ಗಣ್ಯರು ಭಾಗವಹಿಸಿದ್ದರು.

Sara Ali Khan: ಕೇದಾರನಾಥ, ಬದ್ರಿನಾಥ್​​ ದೇವಾಲಯಕ್ಕೆ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾಗೆ ಪ್ರವೇಶವಿಲ್ಲ!ಕಾರಣ ಇದು

ಕೇದಾರನಾಥ ದೇವಾಲಯಕ್ಕೆ ಸೈಫ್‌ ಅಲಿ ಖಾನ್‌ ಪುತ್ರಿ ಸಾರಾಗೆ ಪ್ರವೇಶವಿಲ್ಲ!

Sara Ali Khan: ಬಾಲಿವುಡ್ ನಟಿ ಸಾರಾ ಅಲಿ ಖಾನ್, ಕೇದಾರನಾಥ ಮತ್ತು ಬದರಿನಾಥ ದೇವಾಲಯಗಳಿಗೆ ಪದೇ ಪದೇ ಭೇಟಿ ನೀಡುತ್ತಲೇ ಇರುತ್ತಾರೆ. ಸಾರಾ ಅಲಿ ಖಾನ್ಇತ್ತೀಚೆಗೆ ಮಹಾಶಿವರಾತ್ರಿಯಂದು ಉತ್ತರಾಖಂಡದ ಬದರಿನಾಥ ಮತ್ತು ಕೇದಾರನಾಥ ದೇವಾಲಯಗಳಿಗೆ ಭೇಟಿ ನೀಡಿದ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಇನ್ನು ಮುಂದೆ ಅವರು ಈ ದೇವಾಲಯಗಳಿಗೆ ಭೇಟಿ ನೀಡುವಂತಿಲ್ಲ. ಕಾರಣ ಏನು?

ʻಯಶ್‌ ಡಿಪ್ರೆಷನ್‌ನಲ್ಲಿದ್ದಾರೆʼ ಎಂದಿದ್ದ ತೆಲುಗು ಜ್ಯೋತಿಷಿ ವೇಣು ಸ್ವಾಮಿ ಮೇಲೆ ʻರಾಕಿ ಭಾಯ್‌ʼ ಅಮ್ಮ ಪುಷ್ಪಾ ಗರಂ

ʻಯಶ್‌ಗೆ ಖಿನ್ನತೆʼ ಅಂತ್ಹೇಳಿದ್ದ ಜ್ಯೋತಿಷಿಗೆ ತಾಯಿ ಪುಷ್ಪಾ ವಾರ್ನಿಂಗ್!

ಹೈದರಾಬಾದ್‌ನ ಜ್ಯೋತಿಷಿ ವೇಣು ಸ್ವಾಮಿ ಅವರು ಯಶ್ ಖಿನ್ನತೆಯಲ್ಲಿದ್ದಾರೆ ಎಂದು ನೀಡಿದ್ದ ಹಳೆಯ ಸಂದರ್ಶನದ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ತಕ್ಕ ಉತ್ತರ ನೀಡಿದ್ದಾರೆ. "ನನ್ನ ಮಗ ಕಲ್ಲುಗುಂಡು, ಅವನ ಬಗ್ಗೆ ಗೊತ್ತಿಲ್ಲದೆ ಪಬ್ಲಿಸಿಟಿಗಾಗಿ ಮಾತನಾಡಬೇಡಿ" ಎಂದು ಜ್ಯೋತಿಷಿಯ ವಿರುದ್ಧ ಅವರು ಹರಿಹಾಯ್ದಿದ್ದಾರೆ.

Actor Darshan: ದರ್ಶನ್‌ಗೆ​ ಕೊಂಚ ನಿರಾಳ; ಇನ್ನೋರ್ವ ಆರೋಪಿಗೆ ದಂಡ

ದರ್ಶನ್‌ಗೆ​ ಕೊಂಚ ನಿರಾಳ; ಇನ್ನೋರ್ವ ಆರೋಪಿಗೆ ದಂಡ

Actor Darshan: ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್‌ಗೆ, ಅವರ ಕುಟುಂಬಸ್ಥರು ಒಳಗೆ ಬಂದು ಭೇಟಿಯಾಗಲು ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ಭೇಟಿಗೆ ಅವಕಾಶ ನೀಡುವಂತೆ ಕೋರಿ ದರ್ಶನ್​ ಅವರು ಮಾಡಿಕೊಂಡಿರುವ ಮನವಿಯನ್ನು ಸೆಷನ್ಸ್​ ಕೋರ್ಟ್​ ಮಾನ್ಯ ಮಾಡಿದೆ. ಈ ಮೂಲಕ ಜೈಲಿನ ಒಳ ಸಂದರ್ಶನಕ್ಕೆ ನ್ಯಾಯಾಧೀಶರು ಒಪ್ಪಿಗೆ ಸೂಚಿಸಿದ್ದು, ಇನ್ನು ಅವರ ಕುಟುಂಬಸ್ಥರು ನಟನನ್ನು ಜೈಲಿನ ಒಳಗೆ ಭೇಟಿ ಮಾಡಬಹುದಾಗಿದೆ. ಕಳೆದ ವಿಚಾರಣೆ ವೇಳೆ, ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪವನ್ (ಎ3) ಪರ ವಕೀಲರು, ಪ್ರಕರಣದ ತನಿಖಾಧಿಕಾರಿಗಳ ವಿರುದ್ಧವೇ ಆರೋಪ ಮಾಡಿದ್ದರು ಪವನ್ ಪರ ವಕೀಲರ ಅರ್ಜಿ ಕುರಿತು ಆದೇಶ ನೀಡಿರುವ ನ್ಯಾಯಲಯವು, ಪವನ್ ಪರ ವಕೀಲರಿಗೆ ದಂಡ ವಿಧಿಸಿದೆ.

KD: The Devil: 'ಚೋಲಿ ಕೆ ಪೀಚೆ ಕ್ಯಾ ಹೈ, ʻಪೀಲಿಂಗ್ಸ್‌ʼ ಚೆನ್ನಾಗಿತ್ತಾ? ರಕ್ಷಿತಾ ಖಡಕ್‌ ರಿಯಾಕ್ಷನ್

'ಚೋಲಿ ಕೆ ಪೀಚೆ ಕ್ಯಾ ಹೈ, ಪೀಲಿಂಗ್ಸ್‌ ಚೆನ್ನಾಗಿತ್ತಾ? ರಕ್ಷಿತಾ ರಿಯಾಕ್ಷನ್

KD: The Devil: ʻಕೆಡಿʼ ಚಿತ್ರದ 'ಸರ್ಸೆ ನಿನ್ನ ಸೆರಗ ಸರ್ಸೆ' ಹಾಡು ಈಗ ವಿವಾದದ ಸುಳಿಗೆ ಸಿಲುಕಿದೆ. ಕಳಪೆ ಸಾಹಿತ್ಯದ ವಿರುದ್ಧ ಗಾಯಕ ಅರ್ಮಾನ್ ಮಲಿಕ್ ಸೇರಿದಂತೆ ಅನೇಕರು ಆಕ್ರೋಶ ಹೊರಹಾಕಿದ್ದಾರೆ. ಚಿತ್ರದ ಸಾಹಿತ್ಯದ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ. ಹಿಂದಿ ವರ್ಷನ್ ಸಾಹಿತ್ಯದ ಬಗ್ಗೆ ಆಕ್ರೋಶ ವ್ಯಕ್ತವಾಗಿದ್ದು ದೂರು ದಾಖಲಾಗಿ ಚಿತ್ರತಂಡಕ್ಕೆ ನೋಟಿಸ್ ಜಾರಿಯಾಗಿದೆ.ಈ ಬಗ್ಗೆ ಇದೀಗ ರಕ್ಷಿತಾ ಪ್ರೇಮ್ ಪ್ರತಿಕ್ರಿಯಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಪತಿಯ ಬೆಂಬಲಕ್ಕೆ ನಿಂತಿದ್ದಾರೆ.

KD-The Devil Movie: ಸೆರಗಿನ ತಂಟೆಗೆ ಹೋದ ʻಕೆಡಿʼ ಟೀಮ್‌; ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಹೇಳಿದ್ದೇನು?

'ಕೆಡಿ' ಹಾಡಿನ ಬಗ್ಗೆ ರಾಜ್ಯ ಮಹಿಳಾ ಆಯೋಗ ಗರಂ; ಸೆನ್ಸಾರ್ ಮಂಡಳಿಗೆ ಪತ್ರ

ಕೆಡಿ ಚಿತ್ರದ ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ ಹಾಡಿನ ವಿವಾದ ತಾರಕಕ್ಕೇರಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗ ಈಗ ಮಧ್ಯಪ್ರವೇಶಿಸಿದೆ. ಹಾಡಿನಲ್ಲಿರುವ ಅಶ್ಲೀಲ ಸಾಹಿತ್ಯ ಮತ್ತು ಹೆಣ್ಣು ಮಕ್ಕಳ ಕುರಿತಾದ ಹಗುರ ಪದಬಳಕೆಯನ್ನು ಖಂಡಿಸಿರುವ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ಸೆನ್ಸಾರ್ ಮಂಡಳಿ ಹಾಗೂ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

ʻನಂಗೆ ನಯನತಾರಾ ಬೇಕು, ಮದುವೆ ಮಾಡಿಸ್ತಾರಾʼ; ಎಐಎಡಿಎಂಕೆ ಸಂಸದನ ಕೀಳುಮಟ್ಟದ ಹೇಳಿಕೆ, ನೆಟ್ಟಿಗರಿಂದ ತೀವ್ರ ತರಾಟೆ!

ʻನಂಗೆ ನಯನತಾರಾ ಬೇಕು..ʼ; ನಾಲಿಗೆ ಹರಿಬಿಟ್ಟ AIADMK ಸಂಸದ ಸಿ ವಿ ಷಣ್ಮುಗಂ

ಮಹಿಳಾ ಸುರಕ್ಷತೆಗಾಗಿ ನಡೆಸುತ್ತಿದ್ದ ಪ್ರತಿಭಟನೆಯಲ್ಲಿ AIADMK ಪಕ್ಷದ ಸಂಸದ ಸಿ ವಿ ಷಣ್ಮುಗಂ, ಸಿಎಂ ಸ್ಟಾಲಿನ್ ಅವರನ್ನು ಟೀಕಿಸುವ ಭರದಲ್ಲಿ ನಟಿ ನಯನತಾರಾ ಅವರ ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಇಂತಹ ಅಸಭ್ಯ ಮಾತುಗಳಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು, ಸಂಸದನ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

Jogi Prem: ಯೂಟ್ಯೂಬ್‌ನಿಂದ ಸೈಡಿಗೆ ಸರಿದ ʻಕೆಡಿʼ ಚಿತ್ರದ ಹಿಂದಿ ವರ್ಷನ್‌ ಸಾಂಗ್;‌ ನೋಟಿಸ್‌ ಕೊಟ್ಟಿದ್ದು ಯಾರು?

ಯೂಟ್ಯೂಬ್‌ನಿಂದ 'ಕೆಡಿ' ಹಿಂದಿ ಹಾಡು ಔಟ್; ದಾಖಲಾಯ್ತು ದೂರು!

ಕೆಡಿ ಚಿತ್ರದ ಕಾಂಟ್ರವರ್ಸಿ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ಚಿತ್ರದ ʻಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆʼ ಹಾಡಿನ ಹಿಂದಿ ವರ್ಷನ್‌ 'ಸರ್ಕೆ ಚುನರ್ ತೇರಿ ಸರ್ಕೆ' ಎಂಬ ಹಿಂದಿ ಹಾಡಿನಲ್ಲಿ ಅಶ್ಲೀಲ ಸಾಹಿತ್ಯವಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ನೋಟಿಸ್ ನೀಡಿದೆ. ಅದರ ಬೆನ್ನಲ್ಲೇ ಯೂಟ್ಯೂಬ್‌ನಿಂದ ಹಾಡನ್ನು ತೆಗೆದುಹಾಕಲಾಗಿದೆ. ದೆಹಲಿ ಪೊಲೀಸರಿಗೂ ಈ ಬಗ್ಗೆ ದೂರು ಸಲ್ಲಿಕೆಯಾಗಿದೆ.

Loading...