ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್: ಜೀ ಕನ್ನಡದಲ್ಲಿ ಪುಟಾಣಿಗಳ ಸ್ವರ ಸಂಭ್ರಮ

ʻಸರಿಗಮಪ ಲಿಟಲ್ ಚಾಂಪ್ಸ್ʼ ಆರಂಭಕ್ಕೆ ದಿನಗಣನೆ; ಮತ್ತೆ ಶುರು ಸಂಗೀತದ ಸುಧೆ

ʻಸರಿಗಮಪ ಲಿಟಲ್ ಚಾಂಪ್ಸ್ʼ ಹೊಸ ಆವೃತ್ತಿಯು ಏಪ್ರಿಲ್ 18ರಿಂದ ಜೀ ಕನ್ನಡ ವಾಹಿನಿಯಲ್ಲಿ ಅದ್ಧೂರಿಯಾಗಿ ಚಾಲನೆಗೊಳ್ಳಲಿದೆ. 3ರಿಂದ 15 ವರ್ಷದೊಳಗಿನ ಅಪ್ರತಿಮ ಪ್ರತಿಭೆಗಳನ್ನು ಗುರುತಿಸುವ ಈ ರಿಯಾಲಿಟಿ ಶೋನಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿ ಪುಟಾಣಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

Mallikarjun: ʻಪ್ರೇಮ ಬರಹʼ ಚಿತ್ರದ ವಿವಾದದ ಬಗ್ಗೆ ಕೊನೆಗೂ ಬಾಯಿಬಿಟ್ಟ ದರ್ಶನ್‌ ಮ್ಯಾನೇಜರ್;‌ ಅಂದು ಅರ್ಜುನ್‌ ಸರ್ಜಾರನ್ನು ಭೇಟಿಯಾದಾಗ ಆಗಿದ್ದೇನು?

Arjun Sarja: ʻಪ್ರೇಮ ಬರಹʼ ವಿವಾದದ ಬಗ್ಗೆ ದರ್ಶನ್‌ ಮ್ಯಾನೇಜರ್ ಏನಂದ್ರು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸೂಚನೆಯಂತೆ ಅರ್ಜುನ್ ಸರ್ಜಾ ನಿರ್ಮಾಣದ 'ಪ್ರೇಮ ಬರಹ' ಚಿತ್ರವನ್ನು ವಿತರಿಸಿದ್ದ ಮಲ್ಲಿಕಾರ್ಜುನ್, ಆ ಸಂದರ್ಭದಲ್ಲಿ ಉಂಟಾದ ಲೆಕ್ಕದ ವ್ಯತ್ಯಾಸಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಲೆಕ್ಕಾಚಾರದಲ್ಲಿ ಸುಮಾರು 1 ಲಕ್ಷ ರೂ. ವ್ಯತ್ಯಾಸವಾಗಿದ್ದರಿಂದ ಅರ್ಜುನ್ ಸರ್ಜಾ ಅಸಮಾಧಾನಗೊಂಡಿದ್ದರು ಎಂದು ಮಲ್ಲಿಕಾರ್ಜುನ್‌ ತಿಳಿಸಿದ್ದಾರೆ.

ನಾಪತ್ತೆಯಾಗಿದ್ದ ದರ್ಶನ್‌ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ದಿಢೀರ್‌ ಪ್ರತ್ಯಕ್ಷ; 8 ಕೋಟಿ ರೂಪಾಯಿ ಸಾಲ, 7 ವರ್ಷ ಅಜ್ಞಾತವಾಸ, ಹೊರಬಿತ್ತು ರೋಚಕ ಮಾಹಿತಿ

7 ವರ್ಷ ಅಜ್ಞಾತವಾಸದಿಂದ ವಾಪಸ್‌ ಬಂದ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್

Darshan Manager Mallikarjun Missing Case: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ 7 ವರ್ಷಗಳ ಅಜ್ಞಾತವಾಸದ ನಂತರ ಪ್ರತ್ಯಕ್ಷವಾಗಿ ಅಚ್ಚರಿಯ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಉದ್ಯಮದಲ್ಲಿ ಆದ 8 ಕೋಟಿ ರೂ. ಸಾಲದಿಂದಾಗಿ ಆತ್ಮಹತ್ಯೆಗೆ ನಿರ್ಧರಿಸಿದ್ದ ಅವರು, ನಂತರ ನಾಪತ್ತೆ ಆಗಿದ್ದರು. ಇದೀಗ ವಾಪಸ್‌ ಬಂದು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ʻಈ ಫೋಟೋದಲ್ಲಿರುವ ಸುಂದರ ಮಹಿಳೆ ನಾನಲ್ಲʼ;‌ ಡಿಸಿಎಂ ಪವನ್‌ ಕಲ್ಯಾಣ್‌ 3ನೇ ಪತ್ನಿ ಅನ್ನಾ ಹೀಗ್ಯಾಕೆ ಹೇಳಿದ್ರು?

'ಆ ಸುಂದರ ಮಹಿಳೆ ನಾನಲ್ಲ'; ಫೇಕ್ ಫೋಟೋ ಬಗ್ಗೆ ಪವನ್‌ ಪತ್ನಿ ಸ್ಪಷ್ಟನೆ

Anna Konidela Fake Photo Clarification: ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊನಿಡೇಲಾ ಅವರು ದಶಕಗಳಿಂದ ಇಂಟರ್‌ನೆಟ್‌ನಲ್ಲಿ ತಮ್ಮ ಹೆಸರಿನಲ್ಲಿ ಚಲಾವಣೆಯಾಗುತ್ತಿದ್ದ ಫೋಟೋದ ಸತ್ಯಾಸತ್ಯತೆಯನ್ನು ಬಹಿರಂಗಪಡಿಸಿದ್ದಾರೆ. ಪವನ್ ಕಲ್ಯಾಣ್ ಪಕ್ಕದಲ್ಲಿ ಕುಳಿತಿರುವ ವಿದೇಶಿ ಯುವತಿಯ ಫೋಟೋ ತನ್ನದಲ್ಲ, ಅದು 'ತೀನ್ ಮಾರ್' ಸಿನಿಮಾ ನಟಿ ಡಾನಾ ಮಾರ್ಕ್ಸ್ ಅವರದ್ದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Varun Tej: ಶೂಟಿಂಗ್ ವೇಳೆ ವರುಣ್ ತೇಜ್‌ಗೆ ಪೆಟ್ಟು, ಸರ್ಜರಿ ಬಗ್ಗೆ ಸಹೋದರಿ ಏನಂದ್ರು?

ಶೂಟಿಂಗ್ ವೇಳೆ ವರುಣ್ ತೇಜ್‌ಗೆ ಪೆಟ್ಟು, ಸರ್ಜರಿ ಬಗ್ಗೆ ಸಹೋದರಿ ಏನಂದ್ರು?

Varun Tej: ವರುಣ್ ತೇಜ್ ಸದ್ಯ 'ಬರಿ' ಎಂಬ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರೀಕರಣದ ಭಾಗವಾಗಿ ವಾಲಿಬಾಲ್ ಆಟದ ದೃಶ್ಯಗಳಿಗಾಗಿ ವರುಣ್ ತೇಜ್ ವಿಶೇಷವಾಗಿ ಅಭ್ಯಾಸ ಮಾಡುತ್ತಿದ್ದರು. ಈ ಸಮಯದಲ್ಲಿ ಅವರ ಮೊಣಕಾಲಿಗೆ ತೀವ್ರ ಗಾಯವಾಗಿದೆ ಎಂದು ತಿಳಿದುಬಂದಿದೆ. ಇದೀಗ ಚಿತ್ರದ ತಯಾರಿಯಿಂದ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ. ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾರೆ.

Peddi Postponed:  ‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ಮತ್ತೆ ʻಟಾಕ್ಸಿಕ್‌ʼ ಜೊತೆ ಕ್ಲ್ಯಾಶ್‌?

‘ಪೆದ್ದಿ’ ಸಿನಿಮಾ ರಿಲೀಸ್ ಮುಂದೂಡಿಕೆ: ಮತ್ತೆ ಟಾಕ್ಸಿಕ್‌ ಜೊತೆ ಕ್ಲ್ಯಾಶ್‌?

Peddi Postponed: ಇತ್ತೀಚೆಗೆ, ಬುಚಿ ಬಾಬು ಸನಾ ಅವರ ಪೆದ್ದಿ ಸಿನಿಮಾ ಏಪ್ರಿಲ್ 30 ರಂದು ಬಿಡುಗಡೆಯಾಗುವುದಿಲ್ಲ ಎಂಬ ವದಂತಿಗಳು ಹಬ್ಬಿದ್ದವು. ಈ ತಿಂಗಳ ಆರಂಭದಲ್ಲಿ ಚಿತ್ರದ ಬಿಡುಗಡೆ ವಿಳಂಬವಾಗುವುದಿಲ್ಲ ಎಂದು ನಟ ರಾಮ್ ಚರಣ್ ಭರವಸೆ ನೀಡಿದ್ದರೂ, ತಂಡವು ಬುಧವಾರ ಬಿಡುಗಡೆ ಮುಂದೂಡುವುದಾಗಿ ಘೋಷಿಸಿದೆ. ‘ಪೆದ್ದಿʼ ಚಿತ್ರವು ಜೂನ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಆದರೆ ನಿಖರವಾಗಿ ಹೊಸ ಬಿಡುಗಡೆ ದಿನಾಂಕವನ್ನು ತಿಳಿಸಿಲ್ಲ.

Rudra Kala Movie: ʻದೂಧ್ ಪೇಡಾʼ ದಿಗಂತ್ ಹೊಸ ಸಿನಿಮಾಗೆ ʻಸ್ಟಾರ್‌ʼ ನಟಿ ಸಮಂತಾ ಸಾಥ್

ದಿಗಂತ್ ನಟನೆಯ 'ರುದ್ರ ಕಾಲ' ಸಿನಿಮಾದ ಟೈಟಲ್ ರಿವೀಲ್‌ ಮಾಡಿದ ಸಮಂತಾ

Diganth Rudra Kaala Movie Update: ನಟ ದಿಗಂತ್ ಅಭಿನಯದ 'ರುದ್ರ ಕಾಲ' ಚಿತ್ರದ ಶೀರ್ಷಿಕೆಯನ್ನು ಬಹುಭಾಷಾ ತಾರೆ ಸಮಂತಾ ಬಿಡುಗಡೆ ಮಾಡಿದ್ದಾರೆ. ಗೋಪಿ ನಿರ್ದೇಶನದ ಈ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಏಪ್ರಿಲ್ 22ರಂದು ಚಿತ್ರದ ಮುಹೂರ್ತ ನಡೆಯಲಿದೆ.

ʻರಾಕಾʼ ಚಿತ್ರದ ಬೀಸ್ಟ್‌ ಲುಕ್‌ಗಾಗಿ ಗಂಟೆಗಟ್ಟಲೇ ಎಫರ್ಟ್‌ ಹಾಕುತ್ತಿರುವ ʻಐಕಾನ್‌ ಸ್ಟಾರ್ʼ ಅಲ್ಲು ಅರ್ಜುನ್‌

'ರಾಕಾ' ಚಿತ್ರದ ಬೀಸ್ಟ್ ಲುಕ್‌ಗಾಗಿ ಅಲ್ಲು ಅರ್ಜುನ್ ಭರ್ಜರಿ ತಯಾರಿ

Allu Arjun Raaka Movie Update: 'ಪುಷ್ಪ' ನಂತರ ಅಲ್ಲು ಅರ್ಜುನ್ 'ರಾಕಾ' ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಅಟ್ಲೀ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ 'ಅರ್ಧ ಮೃಗ ಮತ್ತು ಅರ್ಧ ಮನುಷ್ಯ'ನ ವಿಶಿಷ್ಟ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಲುಕ್‌ಗಾಗಿ ಅವರು ಪ್ರತಿದಿನ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.

ʻಲವ್‌ ಸೀಸನ್ಸ್‌ʼ ಸಿನಿಮಾದ ಹೀರೋ ಆದ ರಂಗಭೂಮಿ ನಟ ಮುಕುಂದ ರಾಮಸ್ವಾಮಿ; ಜೂನ್‌ನಲ್ಲಿ ತೆರೆಗೆ ಬರುವುದು ಫಿಕ್ಸ್

‌ರಂಗಭೂಮಿ ಕಲಾವಿದರ ʻಲವ್‌ ಸೀಸನ್ಸ್‌ʼ ಸಿನಿಮಾ ಟೀಸರ್‌ ರಿಲೀಸ್‌

Love Seasons Movie: ಹೊಸ ಪ್ರತಿಭೆಗಳ ಸಮಾಗಮದಲ್ಲಿ ಸಿದ್ಧವಾಗಿರುವ 'ಲವ್ ಸೀಸನ್ಸ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಕೃತ್ವಿಕ್ ನಿರ್ದೇಶನದ ಈ ಚಿತ್ರದಲ್ಲಿ ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

‌Yash: ʻಟಾಕ್ಸಿಕ್ ಬರೀ ಗ್ಯಾಂಗ್‌ಸ್ಟರ್‌ ಸಿನಿಮಾ ಅಲ್ಲ..ʼ; ಅಸಲಿ ವಿಚಾರ ಬಿಚ್ಚಿಟ್ಟ ‌ʻರಾಕಿ ಭಾಯ್‌ʼ

ಟಾಕ್ಸಿಕ್ ಬರೀ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ; ಅಸಲಿ ಗುಟ್ಟು ಬಿಚ್ಚಿಟ್ಟ ಯಶ್

Toxic Movie Yash Update: ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ 'ಸಿನಿಮಾಕಾನ್ 2026' ಸಮಾವೇಶದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಇದು ಕೇವಲ ಸಾಧಾರಣ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ, ಬದಲಾಗಿ ಮಾನವ ಮನಃಸ್ಥಿತಿಯ ಆಳವಾದ ಸೈಕಾಲಜಿ ಹೊಂದಿರುವ ವಿಶಿಷ್ಟ ಕಥೆ ಎಂದು ಅವರು ಹೇಳಿದ್ದಾರೆ.

ʻಮಾರ್ಕ್‌ʼ ನಿರ್ಮಾಪಕರ ಜೊತೆ ಶಿವಣ್ಣ ಹೊಸ ಸಿನಿಮಾ; ಸ್ಯಾಂಡಲ್‌ವುಡ್‌ಗೆ ಮರಳಿದ ಪುನೀತ್‌ ʻಚಕ್ರವ್ಯೂಹʼ ಡೈರೆಕ್ಟರ್‌

'ಮಾರ್ಕ್' ನಿರ್ಮಾಪಕರ ಜೊತೆ ಶಿವಣ್ಣ ಹೊಸ ಸಿನಿಮಾ ಘೋಷಣೆ; ಡೈರೆಕ್ಟರ್‌ ಯಾರು?

Shivarajkumar Sathyajyothi Films Movie: ʻಕಿಚ್ಚʼ ಸುದೀಪ್ ಅಭಿನಯದ 'ಮಾರ್ಕ್' ಚಿತ್ರವನ್ನು ನಿರ್ಮಿಸಿದ್ದ ಸತ್ಯಜ್ಯೋತಿ ಫಿಲ್ಮ್ಸ್ ಈಗ ಶಿವಣ್ಣನ ಹೊಸ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಪುನೀತ್ ರಾಜಕುಮಾರ್ ಅವರ 'ಚಕ್ರವ್ಯೂಹ' ಖ್ಯಾತಿಯ ಎಂ. ಶರವಣನ್ ಈ ಚಿತ್ರಕ್ಕೆ ನಿರ್ದೇಶಕರಾಗಿದ್ದು, ಈ ಚಿತ್ರವು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ.

ʻಜನ ನಾಯಗನ್‌ʼ ಚಿತ್ರದ ಲೀಕ್‌ನಿಂದ ಕೆವಿಎನ್‌ ಪ್ರೊಡಕ್ಷನ್ಸ್‌ಗೆ ಸಂಕಷ್ಟ; ಕನ್ನಡ ನಿರ್ಮಾಪಕರಿಗೆ ‌ʻದಳಪತಿʼ ವಿಜಯ್ ಮಾಡಿದ ಪ್ರಾಮಿಸ್‌ ಏನು?

ʻಕೆವಿಎನ್ ಪ್ರೊಡಕ್ಷನ್ಸ್‌ʼ ಜೊತೆ ಮತ್ತೆ ಕೈಜೋಡಿಸ್ತಾರಾ ʻದಳಪತಿʼ ವಿಜಯ್?

Thalapathy Vijay 70th Movie: 'ಜನ ನಾಯಗನ್' ಚಿತ್ರದ ಸೆನ್ಸಾರ್ ವಿಳಂಬ ಮತ್ತು ಪೈರಸಿ ಲೀಕ್‌ನಿಂದಾಗಿ ಭಾರೀ ಸಂಕಷ್ಟ ಅನುಭವಿಸಿರುವ ಕರ್ನಾಟಕದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗೆ ಸಹಾಯ ಮಾಡಲು ವಿಜಯ್ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ವಿಜಯ್‌ ಗುಡ್‌ ಬೈ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ಕೆವಿಎನ್ ಬ್ಯಾನರ್‌ನಲ್ಲೇ ತಮ್ಮ 70ನೇ ಸಿನಿಮಾವನ್ನು ಮಾಡಲು ವಿಜಯ್ ಒಪ್ಪಿಕೊಂಡಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ತಂದೆ ಧರ್ಮೇಂದ್ರ ಸಾವಿನ ಬಳಿಕ ಮಲ ಸಹೋದರಿಯರಿಗೆ ಹತ್ತಿರವಾದ ಬಾಬಿ ಡಿಯೋಲ್‌; ʻಅಪ್ಪನ ಜೊತೆ ಇನ್ನಷ್ಟು ಸಮಯ ಕಳೆಯಬೇಕಿತ್ತುʼ ಎಂದ ನಟ

ʻತಂದೆ ಧರ್ಮೇಂದ್ರ ಜತೆ ಇನ್ನಷ್ಟು ಸಮಯ ಕಳೆಯಬೇಕಿತ್ತುʼ ಎಂದ ಮಗ ಬಾಬಿ ಡಿಯೋಲ್

ಹಿರಿಯ ನಟ ಧರ್ಮೇಂದ್ರ ಅವರ ಅಗಲಿಕೆಯ ನೋವು ಡಿಯೋಲ್ ಕುಟುಂಬವನ್ನು ಹತ್ತಿರ ತಂದಿದೆ. ತಂದೆ ಇಲ್ಲದ ಶೂನ್ಯದ ಬಗ್ಗೆ ಮಾತನಾಡಿರುವ ಬಾಬಿ ಡಿಯೋಲ್, ಈ ದುಃಖವು ತಮ್ಮನ್ನು ಮಲ ಸಹೋದರಿಯರಾದ ಇಶಾ ಮತ್ತು ಅಹಾನಾ ಡಿಯೋಲ್ ಅವರೊಂದಿಗೆ ಹತ್ತಿರವಾಗಿಸಿದೆ ಎಂದು ಹೇಳಿದ್ದಾರೆ.

ʻಬಿಗ್‌ ಬಾಸ್ʼ ಖ್ಯಾತಿಯ ವಿಷ್ಣುಪ್ರಿಯಾಗೆ ವಿವಾದವೇ ವರವಾಯ್ತಾ? ಕೇಸ್ ದಾಖಲಾಗುತ್ತಿದ್ದಂತೆಯೇ ಹೆಚ್ಚಿತು ಆದಾಯ

ವಿವಾದವೇ ವರವಾಯ್ತಾ? ನಟಿ ವಿಷ್ಣುಪ್ರಿಯಾ ಆದಾಯ ದಿಢೀರ್‌ ಏರಿಕೆ ಆಗಿದ್ದೇಗೆ?

Vishnu Priya Bhimineni Controversy: ತನ್ನ ಇನ್‌ಸ್ಟಾಗ್ರಾಮ್‌ನ 'ಎಕ್ಸ್‌ಕ್ಲೂಸಿವ್ ಕಂಟೆಂಟ್' ಮೂಲಕ ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ನಟಿ ವಿಷ್ಣುಪ್ರಿಯಾ ಭೀಮಿನೇನಿ ವಿರುದ್ಧ ವಿಜಯವಾಡದಲ್ಲಿ ದೂರು ದಾಖಲಾಗಿದೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಈ ಕಾನೂನು ಸಂಕಷ್ಟವು ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದು, ಆದಾಯ ಮೂರು ಪಟ್ಟು ಅಧಿಕವಾಗಿದೆ.

ʻರಾಮಾಯಣ ಚಿತ್ರದಲ್ಲಿ ರಣ್‌ಬೀರ್ - ನಾನು ಇನ್ನೂ ಮುಖಾಮುಖಿಯಾಗಿಲ್ಲʼ; ಇಂಟರೆಸ್ಟಿಂಗ್‌ ವಿಚಾರ ರಿವೀಲ್‌ ಮಾಡಿದ ನಟ ಯಶ್‌

Ramayana Movie: ರಣ್‌ಬೀರ್ ಕಪೂರ್‌ ಬಗ್ಗೆ ನಟ ಯಶ್‌ ಏನಂದ್ರು ನೋಡಿ

Ramayana Movie Update: ರಣ್‌ಬೀರ್‌ ಕಪೂರ್‌, ಯಶ್‌ ನಟನೆಯ ರಾಮಾಯಣ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಲಾಸ್ ಏಂಜಲ್ಸ್‌ನಲ್ಲಿ ನಡೆದ 'ಸಿನಿಮಾಕಾನ್ 2026'ರಲ್ಲಿ ಭಾಗವಹಿಸಿದ್ದ ಯಶ್, "ರಾಮಾಯಣ ಚಿತ್ರದ ಮೊದಲ ಭಾಗದಲ್ಲಿ ತಾವು ಮತ್ತು ರಣ್‌ಬೀರ್ ಎಲ್ಲಿಯೂ ಮುಖಾಮುಖಿಯಾಗಿಲ್ಲ" ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.

ʻಗಿಲ್ಲಿ ನಟನ ಬೆಳವಣಿಗೆ ಬಗ್ಗೆ ನನಗೆ ಸಂತೋಷವಿದೆ, ಅಸೂಯೆ ಇಲ್ಲʼ; ಪ್ರಶ್ನಿಸುವವರ ಬಾಯಿ ಮುಚ್ಚಿಸಿದ ಧನುಷ್‌ ಗೌಡ

ʻಜನರು ಗಿಲ್ಲಿಯನ್ನೇ ಬೆಳೆಸಲಿ, ನಂಗೇನೂ ತೊಂದರೆ ಇಲ್ಲʼ- ಧನುಷ್‌ ಗೌಡ

Dhanush Gowda On Gilli Nata: ಧನುಷ್‌ ಗೌಡ ಅವರು ತಮ್ಮ ಹೊಸ ಆಲ್ಬಂ ಹಾಡು 'ಜಿನುಗೊ ಮಳೆ' ಬಿಡುಗಡೆ ವೇಳೆ ಮಾತನಾಡಿ, "ಗಿಲ್ಲಿ ನಟನ ಏಳಿಗೆಯ ಬಗ್ಗೆ ತಮಗೆ ಅಸೂಯೆಯಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸದ್ಯದಲ್ಲೇ ಹೊಸ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Dhurandhar: ವಿಶ್ವಾದ್ಯಂತ ₹3000 ಕೋಟಿ ಗಳಿಸಿದ ಧುರಂಧರ್; ಹೊಸ ದಾಖಲೆ ಮಾಡೇ ಬಿಡ್ತು ಮೂವಿ

ವಿಶ್ವಾದ್ಯಂತ ₹3000 ಕೋಟಿ ಗಳಿಸಿದ ಧುರಂಧರ್

Dhurandhar: ಆದಿತ್ಯ ಧರ್‌ ಅವರ ಧುರಂಧರ್ : ದಿ ರಿವೆಂಜ್ ಒಟ್ಟಾಗಿ ಅಧಿಕೃತವಾಗಿ ದೇಶದಲ್ಲಿ ಅತಿ ಹೆಚ್ಚು ಗಳಿಕೆಯ ಫ್ರಾಂಚೈಸಿಯಾಗಿ ಹೊರಹೊಮ್ಮಿವೆ. ರಣವೀರ್ ಸಿಂಗ್ , ಸಾರಾ ಅರ್ಜುನ್ ಮತ್ತು ಇತರರು ನಟಿಸಿದ ಚಲನಚಿತ್ರಗಳು ವಿಶ್ವಾದ್ಯಂತ ಒಟ್ಟಾರೆಯಾಗಿ ₹ 3,000 ಕೋಟಿಗೂ ಹೆಚ್ಚು ಗಳಿಸಿವೆ . ಧುರಂಧರ್ ಫ್ರಾಂಚೈಸ್ ತೆಲುಗು ಚಲನಚಿತ್ರೋದ್ಯಮದ ಬಾಹುಬಲಿ ಮತ್ತು ಪುಷ್ಪಾ ಫ್ರಾಂಚೈಸಿಗಳನ್ನು ಸೋಲಿಸಿದ್ದು ಮಾತ್ರವಲ್ಲದೆ, ಈ ಸಂಖ್ಯೆಗಳನ್ನು ಗಳಿಸಿದ ಏಕೈಕ ಫ್ರಾಂಚೈಸಿಯೂ ಆಗಿದೆ.

Jerax Trailer: ʻಜೆರಾಕ್ಸ್ʼ ಕಾಪಿಗೆ ಜೀವ ಬಂದ್ರೆ ಹೇಗಿರುತ್ತೆ? ಡಾಲಿ ಧನಂಜಯ್ ನಿರ್ಮಾಣದ ವೆಬ್ ಸರಣಿಯಲ್ಲಿ ಫ್ಯಾಂಟಸಿ ಕಿಕ್!

ʻಡಾಲಿʼ ಧನಂಜಯ ನಿರ್ಮಾಣದ 'ಜೆರಾಕ್ಸ್' ವೆಬ್‌ ಸರಣಿಯ ಟ್ರೇಲರ್ ರಿಲೀಸ್‌

Xerox Web Series: ಡಾಲಿ ಧನಂಜಯ ನಿರ್ಮಾಣದ, 'ಬ್ಲಿಂಕ್' ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶನದ ಜೆರಾಕ್ಸ್ ವೆಬ್‌ ಸರಣಿಯ ಟ್ರೇಲರ್‌ ರಿಲೀಸ್‌ ಆಗಿದೆ. ಒಂದು ನಿಗೂಢ ತಾಯಿತದಿಂದಾಗಿ ಜೆರಾಕ್ಸ್ ಕಾಪಿಗಳಿಗೆ ಜೀವ ಬಂದು, ಇಡೀ ಊರಿನಲ್ಲಿ ನಡೆಯುವ ಅಚ್ಚರಿ ಮತ್ತು ಹಾಸ್ಯದ ಘಟನೆಗಳೇ ಈ ಆರು ಸಂಚಿಕೆಗಳ ಸರಣಿಯ ಜೀವಾಳ. ಏಪ್ರಿಲ್ 24 ರಿಂದ ಇದು ಜೀ5 ನಲ್ಲಿ ಈ ವೆಬ್‌ ಸರಣಿಯು ವೀಕ್ಷಣೆಗೆ ಲಭ್ಯವಾಗಲಿದೆ.

ಬಜೆಟ್‌ 300 ಕೋಟಿ, ಕಲೆಕ್ಷನ್‌ 3 ಸಾವಿರ ಕೋಟಿ! ʻಬಾಹುಬಲಿʼ, ʻಪುಷ್ಪʼ ದಾಖಲೆಗಳನ್ನು ಪುಡಿಗಟ್ಟಿದ ʻಧುರಂಧರ್‌ʼ

3000 ಕೋಟಿ ಕ್ಲಬ್‌ಗೆ ಧುರಂಧರ್ ಎಂಟ್ರಿ: ಬಾಹುಬಲಿ, ಪುಷ್ಪ ದಾಖಲೆಗಳು ಉಡೀಸ್

Dhurandhar Box Office Record: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸರಣಿಯು ಒಟ್ಟಾರೆಯಾಗಿ 3,019.35 ಕೋಟಿ ರೂಪಾಯಿ ಗಳಿಸುವ ಮೂಲಕ 'ಬಾಹುಬಲಿ' ಮತ್ತು 'ಪುಷ್ಪ' ಚಿತ್ರಗಳ ದಾಖಲೆಯನ್ನು ಪುಡಿಗಟ್ಟಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ 3 ಸಾವಿರ ಕೋಟಿ ರೂಪಾಯಿ ಗಡಿ ದಾಟಿದ ಮೊದಲ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.

NTR Neel Movie: ಎನ್‌ಟಿಆರ್‌ - ರುಕ್ಮಿಣಿ ವಸಂತ್‌ ‌ಸಿನಿಮಾಕ್ಕೆ ಆಲಿಯಾ ಭಟ್‌ ಎಂಟ್ರಿ? ವಿಲನ್‌ ಪಾತ್ರದಲ್ಲಿ ಶಾಹಿದ್‌ ಕಪೂರ್‌!

ಎನ್‌ಟಿಆರ್-ನೀಲ್ ಚಿತ್ರಕ್ಕೆ ಆಲಿಯಾ ಭಟ್ ಎಂಟ್ರಿ? ವಿಲನ್ ಆಗ್ತಾರಾ ಶಾಹಿದ್?

NTR Neel Movie Updates: ಎನ್‌ಟಿಆರ್‌ ಮತ್ತು ಪ್ರಶಾಂತ್‌ ನೀಲ್‌ ಅವರ ಮುಂದಿನ ಸಿನಿಮಾವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿದ್ದರೂ, ಕಥೆಗೆ ತಿರುವು ನೀಡುವ ಪ್ರಮುಖ ಪಾತ್ರಕ್ಕಾಗಿ ಆಲಿಯಾ ಭಟ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

Alia Bhatt: ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಲಿಯಾ-ರಣಬೀರ್; ಕ್ಯೂಟ್‌ ಫೋಟೋಸ್‌ ವೈರಲ್‌

ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಲಿಯಾ-ರಣಬೀರ್

Alia Bhatt: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಲಿವುಡ್‌ನ ಅತ್ಯಂತ ಕ್ಯೂಟ್‌ ಜೋಡಿಗಳಲ್ಲಿ ಒಂದು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ನಟಿ ಆಲಿಯಾ ಭಟ್ ತಮ್ಮ ಪತಿ ರಣಬೀರ್ ಕಪೂರ್ ಜೊತೆಗಿನ ಆನಿವರ್ಸರಿ ವೆಕೇಷನ್‌ನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಪತ್ನಿ ಸಂಗೀತಾ ಫೋಟೋವನ್ನು ವಿಜಯ್‌ಗೆ ನೀಡಿದ ಅಭಿಮಾನಿ; ಹೇಗಿತ್ತು ʻದಳಪತಿʼ ರಿಯಾಕ್ಷನ್?

ಚುನಾವಣಾ ರ್‍ಯಾಲಿಯಲ್ಲಿ ನಟ ವಿಜಯ್‌ಗೆ ‌ ಅಚ್ಚರಿಯ ಗಿಫ್ಟ್‌ ನೀಡಿದ ಫ್ಯಾನ್

Thalapathy Vijay: ಟಿವಿಕೆ (TVK) ಪಕ್ಷದ ಚುನಾವಣಾ ಪ್ರಚಾರದ ವೇಳೆ ಅಭಿಮಾನಿಯೊಬ್ಬರು ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ಮದುವೆಯ ಎಡಿಟೆಡ್ ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸಂಕಷ್ಟದ ಸಮಯದಲ್ಲೂ ಆ ಫೋಟೋವನ್ನು ಪ್ರೀತಿಯಿಂದ ಪಡೆದು, ಅಭಿಮಾನಿಗಳತ್ತ ಕೈ ತೋರಿಸಿದ್ದಾರೆ ವಿಜಯ್.

Akshay Kumar: 6 ವರ್ಷಗಳ ಕಾಲ ವಿದ್ಯಾ ಬಾಲನ್ ಎದುರು ಬರಲು ಹೆದರುತ್ತಿದ್ದರಂತೆ ಅಕ್ಷಯ್ ಕುಮಾರ್ ಮಗ; ಕಾರಣ ಏನು?

ವಿದ್ಯಾ ಬಾಲನ್ ಎದುರು ಬರಲು ಹೆದರುತ್ತಿದ್ದರಂತೆ ಅಕ್ಷಯ್ ಕುಮಾರ್ ಮಗ!

Akshay Kumar: ಭೂಲ್ ಭುಲೈಯಾ (2007) ಚಿತ್ರದಲ್ಲಿ ಮಂಜುಲಿಕಾ ಪಾತ್ರದಲ್ಲಿ ನಟಿಸಿದ ನಟಿ ವಿದ್ಯಾ ಬಾಲನ್ , ಬಿಡುಗಡೆಯಾದಾಗ ವೀಕ್ಷಕರನ್ನು ಭಯಭೀತಗೊಳಿಸಿದ್ದರು. ಅದು ಭಾರಿ ಯಶಸ್ಸನ್ನು ಕಂಡಿತು. ಮತ್ತು ಇಂದಿಗೂ ನೋಡುವವರನ್ನು ಭಯಭೀತಗೊಳಿಸುತ್ತಲೇ ಇದೆ. 2007ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿ ವಿದ್ಯಾ ಬಾಲನ್ ಅವರು ಮಾಡಿದ್ದ ಮಂಜುಲಿಕಾ ಪಾತ್ರವನ್ನು ಕಂಡು ಆರವ್ ಎಷ್ಟು ಭಯಬಿದ್ದಿದ್ದರೆಂದರೆ, ಬರೋಬ್ಬರಿ 6 ವರ್ಷಗಳ ಕಾಲ ಅವರು ವಿದ್ಯಾ ಬಾಲನ್ ಎದುರು ಬರಲು ಹೆದರುತ್ತಿದ್ದರಂತೆ.

ಜೀ ಕನ್ನಡದಲ್ಲಿ ಸಾಧನೆ ಮಾಡಿದ ʻಕರ್ಣʼ ಧಾರಾವಾಹಿ; ʻನಿಧಿʼ ಪಾತ್ರಕ್ಕೆ ಪ್ರೀತಿ ನೀಡಿದ ಕನ್ನಡಿಗರಿಗೆ ಧನ್ಯವಾದ ಹೇಳಿದ ಭವ್ಯಾ ಗೌಡ

'ಕರ್ಣ' ಸೀರಿಯಲ್ ಮೈಲಿಗಲ್ಲು; ವೀಕ್ಷಕರಿಗೆ ʼನಿಧಿʻ ಭವ್ಯಾ ಗೌಡ‌ ಧನ್ಯವಾದ

Karna Serial: ಕಿರಣ್‌ ರಾಜ್‌, ಭವ್ಯಾ ಗೌಡ ಅಭಿನಯದ ʻಕರ್ಣʼ ಧಾರಾವಾಹಿಯು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಹೌದು, ಈ ಸೀರಿಯಲ್ ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭವ್ಯಾ ಗೌಡ, ವೀಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

Loading...