ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Ram Charan: ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್‌ ಚರಣ್‌; ವಿಡಿಯೋ ಕಂಡು ನೆಟ್ಟಿಗರು ಛೀಮಾರಿ

ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್‌ ಚರಣ್‌

Ramcharan: ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಅವರಿಗೆ ನಿರೀಕ್ಷೆಯಂತೆಯೇ ಅವಳಿ ಮಕ್ಕಳು ಜನಿಸಿವೆ. ಚಿತ್ರೋದ್ಯಮದಿಂದ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿತು. ಆದರೆ ರಾಮ್ ಚರಣ್ ಅವರ ಅಭಿಮಾನಿಗಳು ಅವರ ಪತ್ನಿ ದಾಖಲಾಗಿರುವ ಆಸ್ಪತ್ರೆಗೆ ನುಗ್ಗಿ ಅವರು ಹೋಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದಾಗ ಪರಿಸ್ಥಿತಿ ಕೈ ಮೀರಿದೆ.

Sreeleela: ಧನುಷ್‌ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್

ಧನುಷ್‌ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್

Dhanush in Rajkumar Periasamy's D55: ಧನುಷ್ ಅವರ ಮುಂದಿನ ಯೋಜನೆಯಾದ 'ಡಿ55' (D 55) ನಲ್ಲಿ ನಟಿ ಶ್ರೀಲೀಲಾ ನಟಿಸಲಿದ್ದಾರೆ . ಈ ಚಿತ್ರವನ್ನು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ. ಶನಿವಾರ ಎಕ್ಸ್‌ ಖಾತೆಯಲ್ಲಿ ವುಂಡರ್‌ಬಾರ್ ಫಿಲ್ಮ್ಸ್ ಈ ಘೋಷಣೆ ಮಾಡಿದೆ. D55 ಚಿತ್ರದ ನಿರ್ಮಾಣ ಕಾರ್ಯ ಪ್ರಸ್ತುತ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣ 2026 ರ ಅಂತ್ಯದವರೆಗೆ ಮುಂದುವರಿಯಲಿದೆ.

Karikaada Trailer: ಬಿಡುಗಡೆ ಆಯ್ತು ‘ಕರಿಕಾಡ’ ಟ್ರೈಲರ್‌; ತೆರೆಗೆ ಯಾವಾಗ?

ಬಿಡುಗಡೆ ಆಯ್ತು ‘ಕರಿಕಾಡ’ ಟ್ರೈಲರ್‌; ತೆರೆಗೆ ಯಾವಾಗ?

Kannada Movie: ರಿದ್ದಿ ಎಂಟರ್ಟೈನಮೆಂಟ್ ಅಡಿ ಕಾಡ ನಟರಾಜ್ ಕಥೆ ಬರೆದು ನಿರ್ಮಾಣ ಮಾಡಿರುವ ಚಿತ್ರ‌ 'ಕರಿಕಾಡ' . ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರೆವೇರಿತು. ತನ್ನ ಕಂಟೆಂಟ್, ಮೇಕಿಂಗ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಕೆ.ವೆಂಕಟೇಶ್ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ಹೇ ಳಿದ್ದಾರೆ.

Rashmika-Vijay Wedding: ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು? ವಿಡಿಯೋದಲ್ಲಿದೆ ಮಹಾಸತ್ಯ!

ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಜೋರು?

Rashmika: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಬಗ್ಗೆ ದಿನದಿಂದ ದಿನಕ್ಕೆ ವದಂತಿಗಳು ಹೆಚ್ಚಾಗುತ್ತಲೇ ಇವೆ. ಅಕ್ಟೋಬರ್ 2025ರಲ್ಲಿ ವಿಜಯ್ ಹಾಗೂ ರಶ್ಮಿಕಾ ನಿಶ್ಚಿತಾರ್ಥ ಮಾಡಿಕೊಂಡಿತ್ತು. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೀಡಿಯೊವೊಂದು ಉದಯಪುರದ ಐಕಾನಿಕ್ ಸಿಟಿ ಪ್ಯಾಲೇಸ್‌ನಲ್ಲಿ ವಿವಾಹದ ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಹೇಳುತ್ತದೆ . ವಿಡಿಯೋ ಭರ್ಜರಿ ವೈರಲ್‌ ಆಗುತ್ತಿದೆ.

Alia Bhatt: ಆಲಿಯಾ ಭಟ್ ಅವರ ಇದೆಂಥ ನಿರ್ಧಾರ? ಫ್ಯಾನ್ಸ್‌ ಬೇಸರ

Alia Bhatt: ಆಲಿಯಾ ಭಟ್ ಅವರ ಇದೆಂಥ ನಿರ್ಧಾರ? ಫ್ಯಾನ್ಸ್‌ ಬೇಸರ

Alia Bhatt : 2022ರಲ್ಲಿ ಮಗಳು ರಾಹಾಳನ್ನು ಸ್ವಾಗತಿಸಿದ ನಂತರ , ಬಾಲಿವುಡ್ ನಟಿ ಆಲಿಯಾ ಭಟ್ ಅವರ ಜೀವನವು ಸಂಪೂರ್ಣವಾಗಿ ಬದಲಾಯಿತು. ತಾಯ್ತನವು ಅವರನ್ನು ಒಂದು ಹಂತಕ್ಕೆ ಪರಿವರ್ತಿಸಿತು, ಈಗ ಅವರು ಮೊದಲಿನ ಸ್ಥಿತಿಗೆ ಅಸಾಧ್ಯ ಎಂದು ಹೇಳುತ್ತಾರೆ. ಇತ್ತೀಚಿನ ಸಂವಾದವೊಂದರಲ್ಲಿ, ರಾಹಾ ಹುಟ್ಟಿದ ಬಳಿಕ ಸಾಮಾಜಿಕ ಮಾಧ್ಯಮದ ಬಗ್ಗೆ ಅವರನ್ನು ಹೇಗೆ ಹೆಚ್ಚು ಹಿಂಜರಿಯುವಂತೆ ಮಾಡಿದೆ ಮತ್ತು ಈಗ ನಟಿ ತನ್ನ ವೈಯಕ್ತಿಕ ಜೀವನವನ್ನು ಹೇಗೆ ಹೆಚ್ಚು ಕಟ್ಟುನಿಟ್ಟಾಗಿ ಕಾಪಾಡಿಕೊಳ್ಳುತ್ತಾರೆ ಎಂಬುದರ ಕುರಿತು ಆಲಿಯಾ ಮಾತನಾಡಿದರು.

Parasakthi OTT release: ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ'  ಒಟಿಟಿ ಎಂಟ್ರಿ ಯಾವಾಗ?

ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಒಟಿಟಿ ಎಂಟ್ರಿ ಯಾವಾಗ?

Sivakarthikeya: ಶಿವಕಾರ್ತಿಕೇಯನ್ , ಶ್ರೀಲೀಲಾ , ರವಿ ಮೋಹನ್ ಮತ್ತು ಅಥರ್ವ ನಟಿಸಿರುವ ಸುಧಾ ಕೊಂಗರ ಅವರ ರಾಜಕೀಯ ಆಕ್ಷನ್ ಡ್ರಾಮ ಪರಾಶಕ್ತಿ ಒಟಿಟಿಗೆ ಎಂಟ್ರಿ ಕೊಡಲಿದೆ. ಜನವರಿ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ವಿಮರ್ಶಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆಯಿತು ಆದರೆ ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ₹ 100 ಕೋಟಿ ಗಡಿ ದಾಟಿತ್ತು. ಒಟಿಟಿ ರಿಲೀಸ್‌ ಯಾವಾಗ ಗೊತ್ತಾ?

Rohit Shetty: ಚಲನಚಿತ್ರ ನಿರ್ಮಾಪಕ ರೋಹಿತ್ ಶೆಟ್ಟಿ ಮುಂಬೈ ನಿವಾಸದ ಬಳಿ ಗುಂಡಿನ ದಾಳಿ: ತನಿಖೆ ಆರಂಭಿಸಿದ ಪೊಲೀಸರು

ನಿರ್ಮಾಪಕ ರೋಹಿತ್ ಶೆಟ್ಟಿ ಮುಂಬೈ ನಿವಾಸದ ಬಳಿ ಗುಂಡಿನ ದಾಳಿ

Bollywood: ಬಾಲಿವುಡ್ ನಿರ್ಮಾಪಕ ರೋಹಿತ್ ಶೆಟ್ಟಿ ಅವರ ಜುಹು ನಿವಾಸದ ಹೊರಗೆ ಶನಿವಾರ ತಡರಾತ್ರಿ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಮುಂಬೈನಲ್ಲಿ ಪ್ರಮುಖ ಭದ್ರತಾ ಮತ್ತು ವಿಧಿವಿಜ್ಞಾನ ಕಾರ್ಯಾಚರಣೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ವಲಯ ಪೊಲೀಸರು ಮತ್ತು ಅಪರಾಧ ವಿಭಾಗದ ತಂಡಗಳು ಈ ಸಂಬಂಧ ತನಿಖೆ ನಡೆಸುತ್ತಿವೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

Ram Charan: ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ; ಪೋಸ್ಟ್‌ ಹಂಚಿಕೊಂಡ ಚಿರಂಜೀವಿ

ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್ ಚರಣ್ ಪತ್ನಿ ಉಪಾಸನಾ

Ramcharan Twins: ನಟ ರಾಮ್ ಚರಣ್ ಮತ್ತು ಅವರ ಪತ್ನಿ ಉದ್ಯಮಿ ಉಪಾಸನಾ ಕೊನಿಡೇಲಾ ಈಗ ಮೂರು ಮಕ್ಕಳ ಪೋಷಕರಾಗಿದ್ದಾರೆ. ರಾಮ್ ಚರಣ್ ಪತ್ನಿ ಉಪಾಸನಾ ಕೊನಿಡೆಲಾ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಹೆಣ್ಣು ಹಾಗೂ ಒಂದು ಗಂಡು ಮಗು ಜನಿಸಿದೆ. ಅಭಿಮಾನಿಗಳು ಮತ್ತು ಹಿತೈಷಿಗಳಿಂದ ದಂಪತಿಗೆ ವಿಶಸ್‌ಗಳು ಹರಿದು ಬಂದಿವೆ.

Jayamala Interview: ತವರು ಮನೆ ಸೇರುವ ತವಕವೇ ಫಿಲ್ಮ್‌ ಚೇಂಬರ್‌ ಚುನಾವಣೆಯಲ್ಲಿ ಸ್ಪರ್ಧೆಗೆ ಕಾರಣ: ನಟಿ ಜಯಮಾಲಾ

ತವರು ಮನೆ ಸೇರುವ ತವಕವೇ ಸ್ಪರ್ಧೆಗೆ ಕಾರಣ: ನಟಿ ಜಯಮಾಲಾ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಡಾ.ಜಯಮಾಲಾ ಅವರು ಶನಿವಾರ ಆಯ್ಕೆಯಾಗಿದ್ದಾರೆ. ಚುನಾವಣೆ ಹಿನ್ನೆಲೆ ವಿಶ್ವವಾಣಿಗೆ ಅವರು ನೀಡಿದ ಸಂದರ್ಶನದಲ್ಲಿ ಮುಂದೆ ವಾಣಿಜ್ಯ ಮಂಡಳಿಯ ರೂಪು ರೇಷೆಗಳೇನು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣಪಾಠ ಇಲ್ಲಿದೆ.

Karnataka Film Chamber: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೂತನ ಅಧ್ಯಕ್ಷೆಯಾಗಿ ನಟಿ ಜಯಮಾಲಾ ಆಯ್ಕೆ

ಫಿಲ್ಮ್‌ ಚೇಂಬರ್‌ ನೂತನ ಅಧ್ಯಕ್ಷೆಯಾಗಿ ನಟಿ ಜಯಮಾಲಾ ಆಯ್ಕೆ

ಕರ್ನಾಟಕ ಫಿಲ್ಮ್‌ ಚೇಂಬರ್‌ ಅಧ್ಯಕ್ಷ ಸ್ಥಾನಕ್ಕೆ ನಿರ್ಮಾಪಕ ಭಾಮಾ ಹರೀಶ್ ಮತ್ತು ಹಿರಿಯ ಜಯಮಾಲಾ ಅವರ ನಡುವೆ ತೀವ್ರ ಪೈಫೊಟಿ ಇತ್ತು. ಅಧ್ಯಕ್ಷ ಸ್ಥಾನಕ್ಕೆ ಒಟ್ಟು 813 ಮತಗಳು ಈ ಬಾರಿ ಚಲಾವಣೆ ಆಗಿದ್ದು, ಅವುಗಳಲ್ಲಿ 512 ಮತಗಳನ್ನು ಜಯಮಾಲಾ ಪಡೆದುಕೊಂಡು ಜಯಭೇರಿ ಮೊಳಗಿಸಿದ್ದಾರೆ.

94ನೇ ವಯಸ್ಸಿನಲ್ಲಿ ನಿರ್ದೇಶನಕ್ಕೆ ಮರಳಿದ ಸಿಂಗೀತಂ ಶ್ರೀನಿವಾಸ ರಾವ್;‌ ಅಣ್ಣಾವ್ರಿಗೆ ಸೂಪರ್‌ ಹಿಟ್‌ ಫಿಲ್ಮ್ಸ್‌ ಕೊಟ್ಟ ಡೈರೆಕ್ಟರ್‌ ಇವ್ರು!

94ರ ಹರೆಯದಲ್ಲೂ ಬತ್ತದ ಉತ್ಸಾಹ; ನಿರ್ದೇಶನಕ್ಕೆ ಮರಳಿದ‌ ʻದಿಗ್ಗಜʼ ಸಿಂಗೀತಂ

Singeetham Srinivasa Rao: 94ನೇ ವಯಸ್ಸಿನಲ್ಲಿ ದಿಗ್ಗಜ ಸಿಂಗೀತಂ ಶ್ರೀನಿವಾಸ ರಾವ್ ಅವರು ನಿರ್ದೇಶನಕ್ಕೆ ಮರಳಿದ್ದಾರೆ. 13 ವರ್ಷಗಳ ನಂತರ ವೈಜಯಂತಿ ಮೂವೀಸ್ ಅಡಿಯಲ್ಲಿ ತಮ್ಮ 61ನೇ ಚಿತ್ರವನ್ನು ಅವರು ಅನೌನ್ಸ್‌ ಮಾಡಿದ್ದಾರೆ. 'ಕಲ್ಕಿ 2898 ಎಡಿ' ಖ್ಯಾತಿಯ ನಾಗ್ ಅಶ್ವಿನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ದೇವಿ ಶ್ರೀ ಪ್ರಸಾದ್ ಸಂಗೀತ ನೀಡಲಿದ್ದಾರೆ.

Jana Nayagan: ಸ್ಯಾಂಡಲ್‌ವುಡ್‌ ನಿರ್ಮಾಪಕರಿಗೆ ಎದುರಾಗಿರುವ ಸಂಕಷ್ಟಕ್ಕೆ ಮರುಗಿದ ನಟ ‌ʻದಳಪತಿʼ ವಿಜಯ್!

ಕನ್ನಡ ನಿರ್ಮಾಪಕನ ಪರಿಸ್ಥಿತಿ ಕಂಡು ಮರುಗಿದ ನಟ ʻದಳಪತಿʼ ವಿಜಯ್!

Thalapathy Vijay Interview: ಜನ ನಾಯಗನ್‌ ಸಿನಿಮಾಗೆ ಎದುರಾಗಿರುವ ಅಡೆತಡೆಗಳ ಬಗ್ಗೆ ನಟ ವಿಜಯ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್‌ನ ನಿರ್ಮಾಪಕ ವೆಂಕಟ್ ನಾರಾಯಣ್ ಅವರು 400 ಕೋಟಿ ಹೂಡಿಕೆ ಮಾಡಿದ್ದು, ಚಿತ್ರ ಸೆನ್ಸಾರ್ ಸುಳಿಗೆ ಸಿಲುಕಿರುವುದು ವಿಜಯ್‌ಗೆ ನೋವು ತಂದಿದೆ.

ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡ ತೆಲುಗಿನ 5 ಸಿನಿಮಾಗಳ ಒಟಿಟಿ ಪ್ರವೇಶ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ

ಚಿರು, ರವಿ ತೇಜ, ಪ್ರಭಾಸ್ ಸಿನಿಮಾಗಳ OTT ರಿಲೀಸ್ ಡೇಟ್ ಫಿಕ್ಸ್!

Sankranthi Telugu movies OTT: ಸಂಕ್ರಾಂತಿ ಹಬ್ಬದಂದು ತೆರೆಕಂಡಿದ್ದ ತೆಲುಗು ಸಿನಿಮಾಗಳ ಒಟಿಟಿ ಬಿಡುಗಡೆಯ ದಿನಾಂಕಗಳು ಅಂತಿಮಗೊಂಡಿವೆ. ಮೆಗಾ ಸ್ಟಾರ್ ಚಿರಂಜೀವಿಯವರ 'ಮನ ಶಂಕರ ವರಪ್ರಸಾದ್ ಗಾರು' ಫೆಬ್ರವರಿ 11 ರಂದು ಜೀ5 ನಲ್ಲಿ ಬರಲಿದ್ದರೆ, ಪ್ರಭಾಸ್ ಅವರ 'ದಿ ರಾಜಾ ಸಾಬ್' ಫೆಬ್ರವರಿ 6 ರಿಂದ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಸುದೀಪ್‌ ವೃತ್ತಿ ಬದುಕಿಗೆ 30 ವರ್ಷ; ಕಾಮನ್‌ ಡಿಪಿ ರಿಲೀಸ್‌ ಮಾಡಲಿದ್ದಾರೆ ಸಿಎಂ ಸಿದ್ದರಾಮಯ್ಯ,‌ ಭಾವುಕ ಪತ್ರ ಬರೆದ ʻಕಿಚ್ಚʼ

ʻಅಭಿಮಾನಿಗಳೇ ನನ್ನ ಶಕ್ತಿʼ; ವೃತ್ತಿಬದುಕಿಗೆ 30 ವರ್ಷ, ಸುದೀಪ್ ಭಾವುಕ ಪತ್ರ

Kiccha Sudeep Completes 30 Years In KFI: ಕಿಚ್ಚ ಸುದೀಪ್‌ ಅವರ 30 ವರ್ಷಗಳ ಚಿತ್ರರಂಗದ ಪಯಣವನ್ನು ಸಂಭ್ರಮಿಸಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದೀಪ್ ಅವರ ವಿಶೇಷ ಕಾಮನ್ ಡಿಪಿಯನ್ನು ಬಿಡುಗಡೆ ಮಾಡಿ ಶುಭ ಹಾರೈಸುತ್ತಿದ್ದಾರೆ. ಅತ್ತ ಸುದೀಪ್‌ ಅವರು ಮೂರು ದಶಕಗಳ ಸುದೀರ್ಘ ಯಾನದ ಬಗ್ಗೆ ಭಾವುಕರಾಗಿ ಪತ್ರ ಬರೆದಿದ್ದಾರೆ.

Vikalpa Review: ಭಯ ಮತ್ತು ಭ್ರಮೆಯ ನಡುವಿನ ವಾಸ್ತವದ ಸೈಕಲಾಜಿಕಲ್ ಥ್ರಿಲ್ಲರ್

Vikalpa Review: ಸೈಕಲಾಜಿಕಲ್ ಥ್ರಿಲ್ಲರ್ ʻವಿಕಲ್ಪʼ ಸಿನಿಮಾದ ವಿಮರ್ಶೆ

Vikalpa Movie Review: ಭಯ ಮತ್ತು ಭ್ರಮೆಯ ನಡುವಿನ ಸಂಘರ್ಷದ ಕಥೆಯನ್ನ ವಿಕಲ್ಪ ಚಿತ್ರದ ಮೂಲಕ ನಿರ್ದೇಶಕ ಹಾಗೂ ನಟ ಪೃಥ್ವಿರಾಜ್ ಪಾಟೀಲ್ ಹೇಳಿದ್ದಾರೆ. ಯಕ್ಷಗಾನ ಕಲೆ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಬ್ಲೆಂಡ್‌ ಮಾಡಿ, ಈ ಸಿನಿಮಾ ಮಾಡಲಾಗಿದ್ದು, ಇದರ ವಿಮರ್ಶೆ ಮತ್ತು ರೇಟಿಂಗ್‌ ಬಗ್ಗೆ ಇಲ್ಲಿದೆ ಮಾಹಿತಿ.

ʻನಿಮ್ಮ ಋಣವನ್ನು ಯಾವತ್ತೂ ಮರೆಯೋಕೆ ಸಾಧ್ಯವಿಲ್ಲ ಸರ್ʼ; ಸಿ ಜೆ ರಾಯ್‌ ನಿಧನಕ್ಕೆ ʻಬಿಗ್ ಬಾಸ್‌ʼ ವಿನ್ನರ್‌ ಹನುಮಂತ ಸಂತಾಪ

ಉದ್ಯಮಿ ಸಿ.ಜೆ. ರಾಯ್ ನಿಧನಕ್ಕೆ ʻಬಿಗ್ ಬಾಸ್‌ʼ ವಿನ್ನರ್‌ ಹನುಮಂತ ಕಂಬನಿ!

CJ Roy Death News: ಗಾಯಕ ಹಾಗೂ ಬಿಗ್ ಬಾಸ್ ವಿನ್ನರ್ ಹನುಮಂತ ಅವರು ಸಿಜೆ ರಾಯ್‌ ಅವರ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಒಡೆಯ ಸಿ.ಜೆ. ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದು, ಹನುಮಂತನ ಬದುಕಿನ ಕಷ್ಟದ ದಿನಗಳಲ್ಲಿ ಅವರು ನೆರವಾಗಿದ್ದರು.

ʻಡಾಲಿʼ ಬಿರಿಯಾನಿ ಸೇವನೆ ಬಗ್ಗೆ ಭಾರಿ ಚರ್ಚೆ; ಸ್ಪಷ್ಟನೆ ಜೊತೆಗೆ ಬೇಸರವನ್ನೂ ಹಂಚಿಕೊಂಡ ನಟ ಧನಂಜಯ್‌!

"ನನ್ನ ಆಹಾರ ನನ್ನ ಆಯ್ಕೆ, ಜಾತಿ ಎಳೆದು ತರಬೇಡಿ" ಎಂದ ನಟ ಧನಂಜಯ್!

Daali Dhananjay: ನಟ ಧನಂಜಯ್ ಅವರು ಬಿರಿಯಾನಿ ಸೇವನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ಹೋಟೆಲ್‌ವೊಂದರ ಉದ್ಘಾಟನೆಯಲ್ಲಿ ಬಿರಿಯಾನಿ ಸೇವಿಸಿದ್ದಕ್ಕೆ ಜಾತಿಯನ್ನು ಬಳಸಿ ಟ್ರೋಲ್ ಮಾಡಲಾಗಿತ್ತು. ಇದಕ್ಕೆ ಉತ್ತರಿಸಿರುವ ಅವರು, "ನನ್ನ ಆಹಾರ ನನ್ನ ಇಷ್ಟ, ನಾನು ಲಿಂಗಧರಿಸಿ ಎಂದಿಗೂ ಮಾಂಸ ಸೇವಿಸಿಲ್ಲ" ಎಂದಿದ್ದಾರೆ.

Sabarimala gold theft: ಶಬರಿಮಲೆ ದೇಗುಲ ಚಿನ್ನ ಕಳವು: ʼಕಾಂತಾರʼ ನಟನಿಗೂ ಪೊಲೀಸ್‌ ತನಿಖೆ

ಶಬರಿಮಲೆ ದೇಗುಲ ಚಿನ್ನ ಕಳವು: ʼಕಾಂತಾರʼ ನಟನಿಗೂ ಪೊಲೀಸ್‌ ತನಿಖೆ

ಶಬರಿಮಲೆ ದೇವಸ್ಥಾನದಲ್ಲಿ ನಡೆದ ಚಿನ್ನ ನಾಪತ್ತೆ ಪ್ರಕರಣ 2019ರಲ್ಲಿ ಬೆಳಕಿಗೆ ಬಂದಿತ್ತು. ಶಬರಿಮಲೆ ದೇಗುಲದ ಗರ್ಭಗುಡಿಯ ಬಾಗಿಲಿನ ಚೌಕಟ್ಟುಗಳು ಹಾಗೂ ಮುಂಭಾಗದ ದ್ವಾರಪಾಲಕ ಶಿಲ್ಪಗಳ ಮೇಲೆ ಲೇಪಿಸಲಾಗಿದ್ದ ಸುಮಾರು 4 ಕಿಲೋಗ್ರಾಂ ಚಿನ್ನ ಕಳವು ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಪೊಟ್ಟಿ ಉನ್ನಿಕೃಷ್ಣನ್ ಮೊದಲ ಆರೋಪಿಯಾಗಿದ್ದು, ಆತನ ಬೆಂಗಳೂರಿನ ಆಸ್ತಿಗಳ ಮೇಲೂ ಇಡಿ ದಾಳಿ ನಡೆದಿದೆ.

The Raja Saab OTT: ಒಟಿಟಿಗೆ ಬಂತು 'ರಾಜಾಸಾಬ್'; ಪ್ರಭಾಸ್ ಕಾಮಿಡಿ ಹಾರರ್ ಥ್ರಿಲ್ಲರ್ ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬಂತು 'ರಾಜಾಸಾಬ್'; ಸ್ಟ್ರೀಮಿಂಗ್‌ ಎಲ್ಲಿ?

Prabhas: ಥಿಯೇಟ್ರಿಕಲ್‌ನಲ್ಲಿ ಬಿಡುಗಡೆಯಾದ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿಯಲ್ಲಿ, ದಿ ರಾಜಾ ಸಾಬ್ OTT ಪ್ಲಾಟ್‌ಫಾರ್ಮ್‌ನಲ್ಲಿ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿದೆ. ಶುಕ್ರವಾರ, ಜಿಯೋ ಹಾಟ್‌ಸ್ಟಾರ್ ತೆಲುಗು ನಿರ್ದೇಶಕ ಮಾರುತಿ ಅವರ ಹಾರರ್ ಹಾಸ್ಯ ಚಿತ್ರವನ್ನು ಮುಂದಿನ ವಾರದಿಂದ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ಮಾ ಡುವುದಾಗಿ ಘೋಷಿಸಿದೆ. ಚಿತ್ರಮಂದಿರಗಳಲ್ಲಿ ಮಿಸ್‌ ಮಾಡಿಕೊಂಡವರು ಈಗ ಪ್ರಭಾಸ್ ಅಭಿನಯದ ಚಿತ್ರವನ್ನು ಮನೆಯಲ್ಲಿಯೇ ವೀಕ್ಷಿಸಬಹುದು.

C.J. Roy:  ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ  ಸಿ.ಜೆ. ರಾಯ್‌ಗಿದ್ದ ನಂಟು ಎಂಥದ್ದು?

ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಸಿ.ಜೆ. ರಾಯ್‌ಗಿದ್ದ ನಂಟು ಎಂಥದ್ದು?

C.J. Roy: ಕಾನ್ಫಿಡೆಂಟ್ ಗ್ರೂಪ್ಸ್​ನ ಚೇರ್ಮನ್ ಸಿ.ಜೆ ರಾಯ್ ಅವರು ಆತ್ಮಹತ್ಯೆಗೆ 9 ಶರಣಾಗಿದ್ದಾರೆ. ರಿಯಲ್​ ಎಸ್ಟೇಟ್ ​ಉದ್ಯಮಿಯಾಗಿದ್ದ ಇವರು ಸಮಾಜ ಸೇವೆಯ ಮೂಲಕ ಕೂಡ ಗುರುತಿಸಿಕೊಂಡಿದ್ದರು. ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ಸಹಾಯ ಮಾಡಿದ್ದರು. ಜೆಸಿ ರಾಯ್ ಅವರಿಗೆ ಸಿನಿಮಾ ಮತ್ತು ಟಿವಿ ಜಗತ್ತಿನೊಂದಿಗೆ ಹತ್ತಿರದ ಬಂಧ ಇತ್ತು.

ವರ್ಲ್ಡ್ ಪಿಕಲ್ ಬಾಲ್ ಲೀಗ್: ಚಾಂಪಿಯನ್ ಆಟವನ್ನ ಮುಂದುವರೆಸಿದ ಡೈರೆಕ್ಟರ್‌ ಅಟ್ಲೀ ಟೀಮ್ 'ಬೆಂಗಳೂರು ಜವಾನ್ಸ್'

ಪುಣೆ ವಿರುದ್ಧ ʻಬೆಂಗಳೂರು ಜವಾನ್ಸ್ʼ ಕ್ಲೀನ್ ಸ್ವೀಪ್; ಅಟ್ಲೀ ಟೀಮ್ ಹವಾ!

World Pickleball League 2: ಬೆಂಗಳೂರು ತಂಡವಾಗಿರುವ 'ಬೆಂಗಳೂರು ಜವಾನ್ಸ್' ಎರಡನೇ ಸೀಸನ್‌ನಲ್ಲಿ ಪುಣೆ ಯುನೈಟೆಡ್ ವಿರುದ್ಧ 5-0 ಅಂತರದ ಭರ್ಜರಿ ಗೆಲುವು ಸಾಧಿಸಿದೆ. ನಿರ್ದೇಶಕ ಅಟ್ಲೀ ಮತ್ತು ಪ್ರಿಯಾ ಅಟ್ಲೀ ಮಾಲೀಕತ್ವದ ಈ ಚಾಂಪಿಯನ್ ತಂಡ, ತನ್ನ ಬಲಿಷ್ಠ ಪ್ರದರ್ಶನವನ್ನು ಮುಂದುವರೆಸಿದೆ.

'ಘಾರ್ಗಾ' ಚಿತ್ರಕ್ಕಾಗಿ ರಿಮಿಕ್ಸ್‌ ಆಯ್ತು 'ಬಂಗಾರಿ ಯಾರೇ ನೀ ಬುಲ್ ಬುಲ್' ಸಾಂಗ್; ದರ್ಶನ್‌ ಅಭಿಮಾನಿಗಳಿಂದಲೇ ರಿಲೀಸ್!‌

'ಘಾರ್ಗಾ' ಚಿತ್ರದಲ್ಲಿ 'ಬಂಗಾರಿ ಯಾರೇ ನೀ ಬುಲ್ ಬುಲ್' ರೀಮಿಕ್ಸ್ ಸಾಂಗ್

Gharga Movie: 'ಗಜ' ಚಿತ್ರದ ಜನಪ್ರಿಯ 'ಬಂಗಾರಿ ಯಾರೇ ನೀ ಬುಲ್ ಬುಲ್' ಹಾಡನ್ನು ಅಶ್ವಿನಿ ರಾಮ್‌ಪ್ರಸಾದ್ ನಿರ್ಮಾಣದ 'ಘಾರ್ಗಾ' ಚಿತ್ರದಲ್ಲಿ ಬಳಸಿಕೊಳ್ಳಲಾಗಿದ್ದು, ದರ್ಶನ್ ಅಭಿಮಾನಿಗಳು ಇದನ್ನು ಬಿಡುಗಡೆ ಮಾಡಿದ್ದಾರೆ. ಅರುಣ್ ರಾಮ್‌ಪ್ರಸಾದ್ ನಾಯಕನಾಗಿ ನಟಿಸಿರುವ ಈ ಹಾರರ್-ಅಡ್ವೆಂಚರಸ್ ಸಿನಿಮಾ ಫೆಬ್ರವರಿ 6 ರಂದು ತೆರೆಗೆ ಬರಲಿದ್ದು, ಸಾಯಿಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ.

Gatha Vaibhava OTT:  ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ ಬಂದಾಯ್ತು! ಸ್ಟ್ರೀಮಿಂಗ್ ಎಲ್ಲಿ?

ಸಿಂಪಲ್ ಸುನಿ ನಿರ್ದೇಶನದ ‘ಗತವೈಭವ’ ಒಟಿಟಿಗೆ ಬಂದಾಯ್ತು!

Gatha Vaibhava: ಗತವೈಭವ ಚಿತ್ರ ಕಳೆದ ವರ್ಷ ರಿಲೀಸ್ ಆಗಿತ್ತು. ನವೆಂಬರ್-14 ರಂದು ರಾಜ್ಯಾದ್ಯಂತ ತೆರೆಗೆ ಬಂದಿತ್ತು. ಸಿಂಪಲ್ ಸುನಿ ಇಲ್ಲಿ ನಾಲ್ಕು ವಿಭಿನ್ನವಾದ ಕಥೆಗಳನ್ನ ಅಷ್ಟೆ ವಿಶೇಷಾಗಿಯೇ ಹೇಳಿದ್ದರು. ಕಥೆ,ಚಿತ್ರಕಥೆ, ಸಂಭಾಷಣೆ ಹೀಗೆ ಎಲ್ಲವನ್ನು ಮಾಡಿದ್ದರು. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಗತವೈಭವ ಚಿತ್ರದಲ್ಲಿ ಆಶಿಕಾ ರಂಗನಾಥ್ ನಟಿಸಿದ್ದರು. ದುಷ್ಯಂತ್ ಈ ಚಿತ್ರದ ನಾಯಕರಾಗಿದ್ದರು. ಈ ಚಿತ್ರದ ಮೂಲಕವೇ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಪಳಗಿದ ನಾಯಕನ ರೀತಿ ನಟಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಕೂಡ ಪಡೆದುಕೊಂಡಿದ್ದರು.

Valavaara Review: ತಂಗಾಳಿಯಂತೆ ಹೃದಯ ಸೋಕುವ ಕುಂಡೇಸಿಯ ಪುಟ್ಟ ಪ್ರಪಂಚ

Valavaara Review: ಟ್ರೇಲರ್‌ ಮೂಲಕ ಗಮನಸೆಳೆದ ʻವಲವಾರʼ ಸಿನಿಮಾ ಹೇಗಿದೆ?

Valavaara Movie Review: ಸುತನ್ ಗೌಡ ಅವರ ನಿರ್ದೇಶನದ ʻವಲವಾರʼ ಸಿನಿಮಾ ತೆರೆಕಂಡಿದೆ. ಅಪ್ಪನ ಸಿಡಿಮಿಡಿ ಮತ್ತು ತಾಯಿಯ ಮಮಕಾರದ ನಡುವೆ ಬೆಳೆಯುವ ಕುಂಡೇಸಿ ಎಂಬ ಬಾಲಕನ ಸುತ್ತ ಈ ಕಥೆ ಸಾಗುತ್ತದೆ. ಮನೆಯ ಹಸು 'ಗೌರ' ಕಾಣೆಯಾದಾಗ, ಅದನ್ನು ಹುಡುಕಲು ಹೊರಡುವ ಕುಂಡೇಸಿ ಎದುರಿಸುವ ಜೀವನಾನುಭವಗಳೇ ಈ ಸಿನಿಮಾದ ಹೈಲೈಟ್‌.

Loading...