ಕೊಚ್ಚಿಯಲ್ಲಿ ಕನ್ನಡದ ʼಕೊರಗಜ್ಜʼ ಪ್ರಚಾರಕ್ಕೆ ಅಡ್ಡಿ; ಭಾರಿ ಆಕ್ರೋಶ
ಕೊರಗಜ್ಜ ಚಿತ್ರತಂಡದಿಂದ ಕೊಚ್ಚಿಯ ಪಂಚತಾರ ಹೋಟೆಲ್ನಲ್ಲಿ ಜನವರಿ 24ರಂದು ರಾತ್ರಿ 8ಕ್ಕೆ ಅದ್ಧೂರಿ ಪತ್ರಿಕಾಗೋಷ್ಠಿ ಹಾಗೂ ಭೋಜನಕೂಟ ಆಯೋಜಿಸಲಾಗಿತ್ತು. ಆದರೆ, ಪ್ರೆಸ್ ಮೀಟ್ನ ಮುಂಚಿನ ದಿನ ತಡರಾತ್ರಿ ಚಿತ್ರತಂಡಕ್ಕೆ ಮಲಯಾಳಂ ʻಛಾತಪಾಚʼ ಚಿತ್ರತಂಡದ ಪಿಆರ್ಒ ಕರೆ ಮಾಡಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಅಥವಾ ಮುಂದೂಡುವಂತೆ ದಿಢೀರ್ ಆಗಿ ತಿಳಿಸಿದ್ದರು ಎನ್ನಲಾಗಿದೆ. ಇದರಿಂದ ಕೊರಗಜ್ಜ ಚಿತ್ರತಂಡ ಅಸಮಾಧಾನ ಹೊರಹಾಕಿದೆ.