ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

ಪಾಪರಾಜಿಗಳ ಮೇಲೆ ಸ್ಯಾಂಡಲ್‌ವುಡ್‌ ಗರಂ; ಅಸಭ್ಯ ಆಂಗಲ್‌ನಿಂದ ಫೋಟೋ-ವಿಡಿಯೋ ಕ್ಯಾಪ್ಚರ್‌ ಮಾಡುವುದಕ್ಕೆ ವಾಣಿಜ್ಯ ಮಂಡಳಿ ಬ್ರೇಕ್, ಖಡಕ್ ಎಚ್ಚರಿಕೆ!

ಇನ್ಮುಂದೆ ಅಸಭ್ಯ ವಿಡಿಯೋ ಹಾಕಿದ್ರೆ ಕೇಸ್; ವಾಣಿಜ್ಯ ಮಂಡಳಿ ವಾರ್ನಿಂಗ್

Paparazzi Culture in Sandalwood: ಪಾಪರಾಜಿಗಳ ವರ್ತನೆ ಇತ್ತೀಚೆಗೆ ಮಿತಿಮೀರುತ್ತಿದ್ದು, ನಟಿ ಸಪ್ತಮಿ ಗೌಡ ಎತ್ತಿದ ಧ್ವನಿಗೆ ಈಗ ಅಧಿಕೃತ ಮನ್ನಣೆ ಸಿಕ್ಕಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಹಿಳಾ ಕಲಾವಿದರನ್ನು ಅಸಭ್ಯವಾಗಿ ಚಿತ್ರೀಕರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿಗೆ ಸೋಶಿಯಲ್‌ ಮೀಡಿಯಾದಲ್ಲಿ ಕಿರುಕುಳ; ಸೈಬರ್ ಕ್ರೈಮ್ ಪೊಲೀಸರಿಗೆ ದೂರು

ʻಮೆಗಾ ಸೊಸೆʼ ಲಾವಣ್ಯ ತ್ರಿಪಾಠಿಗೆ ಸೈಬರ್ ಕಿರುಕುಳ: ದೂರು ದಾಖಲಿಸಿದ ನಟಿ

Lavanya Tripathi Cyber Case: ಟಾಲಿವುಡ್ ನಟಿ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರ ಕುಟುಂಬದ ಸೊಸೆ ಲಾವಣ್ಯ ತ್ರಿಪಾಠಿ ಅವರು ಸೈಬರ್ ಕಿರುಕುಳದ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತೆ ಅಸಭ್ಯ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

'ಜೈಲರ್ 2' ಸೆಟ್‌ಗೆ `ಕಿಂಗ್ ಖಾನ್' ಎಂಟ್ರಿ: ʻತಲೈವಾʼ ರಜನಿಕಾಂತ್ ಜೊತೆ ಖಾಕಿ ಅವತಾರದಲ್ಲಿ ಶಾರುಖ್ ಖಾನ್ ಅಬ್ಬರ!

Rajinikanth: ʻಜೈಲರ್ 2ʼ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾದ ಶಾರುಖ್‌

Shah Rukh Khan In Jailer: ರಜನಿಕಾಂತ್ ಅವರ 'ಜೈಲರ್' ಸೀಕ್ವೆಲ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುವುದು ಬಹುತೇಕ ಅಧಿಕೃತವಾಗಿದೆ. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದು, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಎಸ್‌ಜೆ ಸೂರ್ಯ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ʻಸರ್..‌ ಪೂಜೆಗೆ ಕಾಸಿಲ್ಲಾ.. 200 ರೂ. ಕೊಡಿʼ; ಅಂದು ರವಿಚಂದ್ರನ್‌ ಮಾಡಿದ್ದ ಸಹಾಯವನ್ನು ಸದಾ ನೆನೆಯುವ ನಟ ಜಗ್ಗೇಶ್‌!

ಪೂಜೆಗೆ ಕಾಸಿಲ್ಲದಿದ್ದಾಗ ನಟ ಜಗ್ಗೇಶ್‌ಗೆ ದುಡ್ಡು ಕೊಟ್ಟಿದ್ದ ರವಿಚಂದ್ರನ್!

Jaggesh Ravichandran Story: ನಟ ಜಗ್ಗೇಶ್ ಅವರು ತಮ್ಮ ಕಷ್ಟದ ದಿನಗಳನ್ನು ಸ್ಮರಿಸುತ್ತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಾನವೀಯತೆಯನ್ನು ಕೊಂಡಾಡಿದ್ದಾರೆ. 1987ರ ಗಣೇಶ ಚತುರ್ಥಿಯಂದು ಪೂಜೆ ಮಾಡಲು ಹಣವಿಲ್ಲದೆ ಪರದಾಡುತ್ತಿದ್ದಾಗ, ರವಿಚಂದ್ರನ್ ಅವರು ನೀಡಿದ 500 ರೂಪಾಯಿ ಸಹಾಯದಿಂದ ತಾವು ಪೂಜೆ ನೆರವೇರಿಸಿದ್ದನ್ನು ಜಗ್ಗೇಶ್ ಭಾವುಕರಾಗಿ ಹಂಚಿಕೊಂಡಿದ್ದಾರೆ.

Mammootty: ನಟ ಮಮ್ಮುಟ್ಟಿ ಬಳಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಮಮ್ಮುಟ್ಟಿ ಬಳಿ ಕ್ಷಮೆ ಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

Mammootty: ಕಳೆದ ವಾರ ಭೂಕುಸಿತ ಸಂತ್ರಸ್ತರಿಗಾಗಿ ನಿರ್ಮಿಸಲಾದ ಮಾದರಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಯನಾಡ್ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ರಫೀಕ್ ಅವರನ್ನು ಅಗೌರವಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಮಮ್ಮುಟ್ಟಿ ಅವರ ಬಳಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

Geetha Bhat: ಅಷ್ಟಿದ್ರೆ ಆ ಪಾತ್ರ ಮಾಡಬಾರದಿತ್ತು; ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್‌ ಉತ್ತರ

ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್‌ ಉತ್ತರ

Geetha Bhat: ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್‌ ಅವರು ನಟಿಸಿದ್ದರು. 'ಲವ್ ಮಾಕ್ಟೇಲ್' ಚಿತ್ರದಲ್ಲಿ ಬಾಡಿಶೇಮಿಂಗ್ ಡೈಲಾಗ್ ಕುರಿತು ಗೀತಾ ಭಾರತಿ ಭಟ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಚಿತ್ರತಂಡದ ಮಿಲನಾ ನಾಗರಾಜ್ ಮತ್ತು ನಿರ್ದೇಶಕ ಕೃಷ್ಣ (Krishna) ಸಂದರ್ಶನವೊಂದರಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

Ranveer Singh: ಧುರಂಧರ್ 2ರ ಹೊಸ ಪೋಸ್ಟರ್  ಔಟ್‌! ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ

ಧುರಂಧರ್ 2ರ ಹೊಸ ಪೋಸ್ಟರ್ ಔಟ್‌! ಅಭಿಮಾನಿಗಳಲ್ಲಿ ಹೆಚ್ಚಾಯ್ತು ನಿರೀಕ್ಷೆ

Dhurandhar 2 poster: ಮಾರ್ಚ್ 19 ರಂದು ಬಿಡುಗಡೆಯಾಗಲಿರುವ 'ಧುರಂಧರ್: ದಿ ರಿವೆಂಜ್ ' ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿರುವ ರಣವೀರ್ ಸಿಂಗ್, ನಟನನ್ನು ಎರಡು ವಿಭಿನ್ನ ಪಾತ್ರಗಳಲ್ಲಿ ಚಿತ್ರಿಸಿದ್ದಾರೆ. ಚಿತ್ರ ಬಿಡುಗಡೆಯಾಗುವ ಹತ್ತು ದಿನಗಳ ಮೊದಲು ಬಿಡುಗಡೆಯಾದ ಈ ಪೋಸ್ಟರ್ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿದೆ ಮತ್ತು ಆಕ್ಷನ್-ಪ್ಯಾಕ್ಡ್ (Action packed) ಸೀಕ್ವೆಲ್‌ಗೆ ಮುಂಚೂಣಿಗೆ ಆವೇಗವನ್ನು ನೀಡಿದೆ. ಈ ಚಿತ್ರವು ಮಾರ್ಚ್ 19 ರಂದು ವಿಶ್ವಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಿದೆ.

Vijay-Trisha: ವಿಚ್ಛೇದನ ಪ್ರಕರಣದ ನಡುವೆ ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!

ವಿಜಯ್-ತ್ರಿಷಾ ಬಗ್ಗೆ ಈ ಬಾಲಿವುಡ್ ಸೆಲೆಬ್ರಿಟಿ ಭರ್ಜರಿ ಸಪೋರ್ಟ್!

Vijay-Trisha: ನಟ-ರಾಜಕಾರಣಿ ವಿಜಯ್ ಮತ್ತು ತ್ರಿಷಾ ಅವರ ವಿವಾಹ ಆರತಕ್ಷತೆಯಲ್ಲಿ ಇತ್ತೀಚೆಗೆ ಒಟ್ಟಿಗೆ ಭಾಗವಹಿಸಿದ್ದಾಗಿನಿಂದ ಭಾರಿ ಚರ್ಚೆಯಲ್ಲಿ ಇದ್ದಾರೆ. ಚಲನಚಿತ್ರ ನಿರ್ಮಾಪಕ ವಿಕ್ರಮ್ ಭಟ್ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವಿಜಯ್ ಮತ್ತು ತ್ರಿಷಾ ಅವರನ್ನು ಸಮರ್ಥಿಸಿಕೊಂಡು ಬರೆದುಕೊಂಡಿದ್ದಾರೆ. ವಿಜಯ್ ಮತ್ತು ತ್ರಿಶಾದಲ್ಲಿ ನನಗೆ ಮೆಚ್ಚುವಂತಹದ್ದು ಇದೆ ಎಂದು ಬರೆದಿದ್ದಾರೆ.

Ramayana Movie: ಲೀಕ್‌ ಆಯ್ತು ರಣಬೀರ್-ಸಾಯಿ ಪಲ್ಲವಿ ʻರಾಮಾಯಣʼ ಮೂವಿ ಲುಕ್‌! ವೈರಲ್ ಫೋಟೋಗಳ ಹಿಂದಿನ ಸತ್ಯವಾದ್ರೂ ಏನು?

ಲೀಕ್‌ ಆಯ್ತು ರಣಬೀರ್-ಸಾಯಿ ಪಲ್ಲವಿ ʻರಾಮಾಯಣʼ ಮೂವಿ ಲುಕ್‌!

Ramayana Movie: ನಿತೇಶ್ ತಿವಾರಿ ಅವರ ರಾಮಾಯಣ 2026ರ ಬಹುನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ರಾಕಿಂಗ್ ಸ್ಟಾರ್ ಯಶ್ ರಾವಣನಾಗಿ, ಸನ್ನಿ ಡಿಯೋಲ್ ಹನುಮಾನ್ ಆಗಿ ಮತ್ತು ರವಿ ದುಬೆ ಲಕ್ಷ್ಮಣನಾಗಿ ನಟಿಸಿರುವ ಈ ಚಿತ್ರವು ಈ ವರ್ಷದ ದೀಪಾವಳಿಯಂದು ಚಿತ್ರಮಂದಿರಗಳಿಗೆ ಬರಲಿದೆ. ಇದಕ್ಕೂ ಮುನ್ನ, ತಯಾರಕರು ಕಳೆದ ವರ್ಷ ತಾರಾಬಳಗದ ಬಗ್ಗೆ ಟೀಸರ್ ಬಿಡುಗಡೆ ಮಾಡಿದ್ದರು .ಇತ್ತೀಚೆಗೆ ರಣಬೀರ್ (Ranabir) ಮತ್ತು ಸಾಯಿ ಪಾತ್ರಧಾರಿಗಳ ಹೊಸ ಚಿತ್ರಗಳು ವೈರಲ್ ಆಗಿದೆ. ಈ ಫೋಟೋಗಳು ರೀಲ್‌? ರಿಯಲ್‌?

ʻಶೆಡ್‌ನಲ್ಲಿ ಹಲ್ಲೆ, ಮೋರಿಯಲ್ಲಿ ಶವʼ; ರೇಣುಕಾಸ್ವಾಮಿ ಕೊಲೆ ಪ್ರಕರಣ ನೆನಪಿಸಿದ ʻಬಾಸ್‌ʼ ಸಿನಿಮಾ ಟೀಸರ್‌! ಚಿತ್ರತಂಡ ಹೇಳೋದೇನು?

ʻನನ್‌ ಬಿಟ್ಬಿಡಿ.. ಹೆಂಡ್ತಿ ಪ್ರೆಗ್ನೆಂಟುʼ; ಸದ್ದು ಮಾಡಿದ 'ಬಾಸ್' ಟೀಸರ್‌!

Boss Movie Controversy: ತನುಷ್ ಶಿವಣ್ಣ ನಾಯಕನಾಗಿ ನಟಿಸಿರುವ 'ಬಾಸ್: ಸತ್ಯಮೇವ ಜಯತೇ' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಇದು 2024ರ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎಂಬ ಅನುಮಾನ ಮೂಡಿಸಿದೆ. ಟೀಸರ್‌ನಲ್ಲಿರುವ ಶೆಡ್‌ನಲ್ಲಿ ಹಲ್ಲೆ, ಶವ ಸಾಗಾಟ ಎಲ್ಲವು ಆ ಪ್ರಕರಣವನ್ನು ನೆನಪಿಸುತ್ತಿವೆ.

Photos: ʻನಿನ್ನ ನಗು ಮಾಸದಂತೆ ನೋಡಿಕೊಳ್ಳುವೆʼ; ಭಾವಿ ಪತ್ನಿ ಕಾವ್ಯರನ್ನು ಪರಿಚಯಿಸಿದ ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್

ಪ್ರೀತಿಸಿದ ಹುಡುಗಿಯನ್ನು ಪರಿಚಯಿಸಿದ ತೆಲುಗು ನಟ ಬೆಲ್ಲಂಕೊಂಡ ಶ್ರೀನಿವಾಸ್‌

ತೆಲುಗಿನಲ್ಲಿ ಅಲ್ಲು ಸಿರೀಶ್,‌ ವಿಜಯ್‌ ದೇವರಕೊಂಡ ಹೀಗೆ ಸಾಲು ಸಾಲು ಹೀರೋಗಳು ಬ್ಯಾಚುಲರ್‌ ಲೈಫ್‌ಗೆ ಗುಡ್ ಬೈ ಹೇಳಿ ಮದುವೆ ಆಗುತ್ತಿದ್ದಾರೆ. ಆ ಸಾಲಿಗೆ ಈಗ ತೆಲುಗು ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್‌ ಕೂಡ ಸೇರಿಕೊಂಡಿದ್ದಾರೆ. ಕಾವ್ಯ ಎಂಬುವವರನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿರುವ ಬೆಲ್ಲಂಕೊಂಡ ಶ್ರೀನಿವಾಸ್‌, ಇದೀಗ ಕುಟುಂಬದವರ ಒಪ್ಪಿಗೆ ಮೇರೆಗೆ ಮದುವೆಯಾಗಲು ರೆಡಿಯಾಗಿದ್ದಾರೆ. ಅದಕ್ಕೂ ಮೊದಲು ಮದುವೆ ನಿಶ್ಚಯದ ವಿಚಾರವನ್ನು ಬಹಿರಂಗಪಡಿಸಿದ್ದಾರೆ. "ಇದು ನಿಶ್ಚಿತಾರ್ಥವಲ್ಲ, ಕೇವಲ ಒಂದು ಸಣ್ಣ ಕುಟುಂಬದ ಘೋಷಣೆಯಷ್ಟೇ.. ಸಂಭ್ರಮಾಚರಣೆಗಳು ಇನ್ನು ಮುಂದೆ ಶುರುವಾಗಬೇಕಿದೆ ಮತ್ತು ದಿನಾಂಕಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು" ಎಂದು ಹೇಳಿದ್ದಾರೆ. ಇಲ್ಲಿವೆ ನೋಡಿ ಈ ಜೋಡಿಯ ಫೋಟೋಗಳು.

Raj B Shetty: 25 ದಿನ ಪೂರೈಸಿದ ʻರಕ್ಕಸಪುರದೋಳ್ʼ; ಮೊದಲ ಚಿತ್ರದಲ್ಲೇ ಗೆಲುವು ಕಂಡ ಫೈಟ್‌ ಮಾಸ್ಟರ್‌ ಡಾ. ರವಿವರ್ಮ

ಯಶಸ್ವಿಯಾಗಿ 25 ದಿನ ಪೂರೈಸಿ, 50ನೇ ದಿನದತ್ತ 'ರಕ್ಕಸಪುರದೋಳ್' ಸಿನಿಮಾ

Rakkasapuradol Movie: ರಾಜ್ ಬಿ. ಶೆಟ್ಟಿ ಅಭಿನಯದ 'ರಕ್ಕಸಪುರದೋಳ್' ಚಿತ್ರವು ಚಿತ್ರಮಂದಿರಗಳಲ್ಲಿ ಭರ್ಜರಿ 25 ದಿನಗಳನ್ನು ಪೂರೈಸಿದೆ. ಖ್ಯಾತ ಸಾಹಸ ನಿರ್ದೇಶಕ ಡಾ. ಕೆ. ರವಿವರ್ಮ ಅವರ ನಿರ್ಮಾಣದ ಮೊದಲ ಸಿನಿಮಾವೇ 2026ರ ಮೊದಲ 'ಸೂಪರ್ ಹಿಟ್' ಪಟ್ಟಕ್ಕೇರಿದೆ. ರವಿ ಸಾರಂಗ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವು 50ನೇ ದಿನದ ಸಂಭ್ರಮಾಚರಣೆಗೆ ಸಜ್ಜಾಗುತ್ತಿದೆ.

ಕೊನೆಗೂ ರವಿತೇಜ - ಆಶಿಕಾ ರಂಗನಾಥ್ ಒಟ್ಟಿಗೆ ನಟಿಸಿರುವ ʻಭರ್ತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾ ಒಟಿಟಿ ರಿಲೀಸ್‌ ಫಿಕ್ಸ್‌

ಕೊನೆಗೂ ಒಟಿಟಿಗೆ ಬರ್ತಿದೆ ರವಿತೇಜ ನಟನೆಯ ʻಭರ್ತ ಮಹಾಶಯುಲಕು ವಿಜ್ಞಪ್ತಿ'!

Ravi Teja OTT Release Date: ನಟ ರವಿತೇಜ ಅಭಿನಯದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಒಟಿಟಿ ರಿಲೀಸ್‌ ಡೇಟ್‌ ಕೊನೆಗೂ ನಿಗದಿಯಾಗಿದೆ. ಜನವರಿ 13 ರಂದು ಸಂಕ್ರಾಂತಿ ಹಬ್ಬಕ್ಕೆ ತೆರೆಕಂಡಿದ್ದ ಈ ಸಿನಿಮಾದಲ್ಲಿ ಆಶಿಕಾ ರಂಗನಾಥ್ ಮತ್ತು ಡಿಂಪಲ್ ಹಯಾತಿ ನಾಯಕಿಯರಾಗಿರುವ ಕಾಣಿಸಿಕೊಂಡಿದ್ದಾರೆ.

Thalapathy Vijay: ಛೇ.. ʻಜನ ನಾಯಗನ್‌ʼಗೆ ಪುನಃ ಇದೆಂಥ ಸಂಕಷ್ಟ? ಸಿನಿಮಾ ನೋಡೋದನ್ನ ಸೆನ್ಸಾರ್‌ ಮಂಡಳಿ ಪೋಸ್ಟ್‌ಫೋನ್‌ ಮಾಡಿದ್ದೇಕೆ?

ಮಂಡಳಿ ಸದಸ್ಯರು ʻಜನ ನಾಯಗನ್‌ʼ ಚಿತ್ರದ ಸೆನ್ಸಾರ್ ಮಾಡಲು ʻನೋʼ ಎಂದಿದ್ದೇಕೆ?

Thalapathy Vijay Jana Nayagan: ದಳಪತಿ ವಿಜಯ್ ಅವರ ಕೊನೇ ಚಿತ್ರ 'ಜನ ನಾಯಗನ್' ಬಿಡುಗಡೆಗೆ ಮತ್ತೊಮ್ಮೆ ಅಡ್ಡಿ ಎದುರಾಗಿದೆ. ಇಂದು (ಮಾ.9) ಮಧ್ಯಾಹ್ನ 2 ಗಂಟೆಗೆ ಸೆನ್ಸಾರ್ ಮಂಡಳಿಯ ಪುನರ್ ಪರಿಶೀಲನಾ ಸಮಿತಿಯು ಚಿತ್ರವನ್ನು ವೀಕ್ಷಿಸಬೇಕಿತ್ತು. ಆದರೆ ಆ ಪ್ರಕ್ರಿಯೆಯನ್ನು ಮುಂದೂಡಲಾಗಿದೆ. ಕಾರಣವೇನು?

'ಕೋಟಿಗೊಬ್ಬ' ಚಿತ್ರಕ್ಕೆ 25ರ ಸಂಭ್ರಮ; ‌ ವಿಷ್ಣುವರ್ಧನ್‌ ಜೊತೆಗಿನ ನೆನಪುಗಳನ್ನು ಹಂಚಿಕೊಂಡ ಉಪೇಂದ್ರ, ಗಣೇಶ್‌, ದೇವರಾಜ್

ಕೋಟಿಗೊಬ್ಬ ಚಿತ್ರಕ್ಕೆ 25 ವರ್ಷ; ‌ವಿಷ್ಣು ನೆನೆದು ಸ್ಯಾಂಡಲ್‌ವುಡ್‌ ಭಾವುಕ

Vishnuvardhan Kotigobba 25 Years: ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್ ಅಭಿನಯದ 'ಕೋಟಿಗೊಬ್ಬ' ಸಿನಿಮಾ ಬಿಡುಗಡೆಯಾಗಿ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಿರ್ಮಾಪಕ ಸೂರಪ್ಪ ಬಾಬು ಭವ್ಯ ಸಮಾರಂಭ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಉಪೇಂದ್ರ, ಗಣೇಶ್, ದೇವರಾಜ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ವಿಷ್ಣು ಸರ್ ಅವರೊಂದಿಗಿನ ತಮ್ಮ ಆತ್ಮೀಯ ಒಡನಾಟವನ್ನು ಹಂಚಿಕೊಂಡರು.

ʻನೋ toxicity, ಓನ್ಲೀ ಧುರಂಧರ್‌ʼ; ಯಶ್‌ ಸಿನಿಮಾವನ್ನೇ ಟ್ರೋಲ್‌ ಮಾಡಿದ್ರಾ ನಟಿ ಸಾರಾ ಅರ್ಜುನ್?‌ ಅಸಲಿ ವಿಚಾರ ಇಲ್ಲಿದೆ!

ash: ಟಾಕ್ಸಿಕ್‌ ಚಿತ್ರವನ್ನೇ ಟ್ರೋಲ್‌ ಮಾಡಿದ್ರಾ ʻಧುರಂಧರ್ʼ ನಟಿ‌ ಸಾರಾ?‌

Sara Arjun Toxic Movie Controversy: 'ಧುರಂಧರ್ 2' ನಟಿ ಸಾರಾ ಅರ್ಜುನ್ ಅವರು ಯಶ್ ಅವರ 'ಟಾಕ್ಸಿಕ್' ಸಿನಿಮಾವನ್ನು ಟ್ರೋಲ್ ಮಾಡಿದ್ದಾರೆ ಎಂಬ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ನೋ ಟಾಕ್ಸಿಸಿಟಿ, ಓನ್ಲಿ ಧುರಂಧರ್" ಎಂಬ ಈ ಟ್ವೀಟ್ ನಕಲಿ ಖಾತೆಯಿಂದ ಬಂದಿದ್ದು, ಇದಕ್ಕೆ ಸಾರಾ ತಂದೆ ರಾಜ್ ಅರ್ಜುನ್ ಗರಂ ಆಗಿದ್ದಾರೆ.

ಗೆಲುವಿಗಾಗಿ ಮತ್ತೆ ಸೌತ್‌ ಇಂಡಿಯನ್‌ ಡೈರೆಕ್ಟರ್‌ ಹಿಂದೆ ಬಿದ್ದ ಸಲ್ಮಾನ್‌ ಖಾನ್;‌ ನಾಯಕಿಯಾಗಿ ನಯನತಾರಾ ಫಿಕ್ಸ್!‌

ತೆಲುಗು ನಿರ್ಮಾಪಕ-ನಿರ್ದೇಶಕರ ಜೊತೆ ಕೈಜೋಡಿಸಿದ ಸಲ್ಮಾನ್‌ ಖಾನ್

‌Salman Khan New Movie: ಸಲ್ಮಾನ್ ಖಾನ್ ಅವರು ಕಳೆದ ಕೆಲವು ವರ್ಷಗಳಿಂದ ಬಾಕ್ಸ್ ಆಫೀಸ್‌ನಲ್ಲಿ ಮಂಕಾಗಿದ್ದು, ತಮ್ಮ ಫಾರ್ಮ್‌ಗೆ ಮರಳಲು ತೆಲುಗು ನಿರ್ದೇಶಕರ ಮೊರೆ ಹೋಗಿದ್ದಾರೆ. ಸದ್ಯ ಸಲ್ಮಾನ್ 'ಬ್ಯಾಟಲ್ ಆಫ್ ಗಾಲ್ವಾನ್' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಅದರ ಬೆನ್ನಲ್ಲೇ ಈ ಹೊಸ ಚಿತ್ರ ಆರಂಭವಾಗಲಿದೆ.

Trisha Krishnan : ಪಾರ್ಥಿಬನ್‌ ಹೆಸರೇಳದೇ ಕೆಂಡ ಕಾರಿದ ತ್ರಿಷಾ; ಕ್ಷಮೆಯಾಚಿಸಿದ ನಿರ್ದೇಶಕ

ಪಾರ್ಥಿಬನ್‌ ಹೆಸರೇಳದೇ ಕೆಂಡ ಕಾರಿದ ತ್ರಿಷಾ; ಕ್ಷಮೆಯಾಚಿಸಿದ ನಿರ್ದೇಶಕ

Trisha Krishnan : ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ-ನಿರ್ದೇಶಕ ಆರ್ ಪಾರ್ಥಿಬನ್ ಮಾಡಿದ ಹೇಳಿಕೆಗಳ ಬಗ್ಗೆ ತ್ರಿಶಾ ಕೃಷ್ಣನ್ ಭಾನುವಾರ ಮೌನ ಮುರಿದರು. ಯಾವುದೇ ಹೆಸರುಗಳನ್ನು ಉಲ್ಲೇಖಿಸದೆ, ವ್ಯಕ್ತಪಡಿಸಿದರು. ಈ ಕುರಿತು ಟ್ವೀಟ್ ಮಾಡಿರುವ ತ್ರಿಶಾ ''ಮೂರ್ಖತನದ ಪರಮಾವಧಿ'' ಎಂದು ಹೇಳಿದ್ದಾರೆ. ತ್ರಿಶಾ ಅವರ ಪ್ರತಿಕ್ರಿಯೆಯ ನಂತರ ಪಾರ್ಥಿಬನ್ ಕ್ಷಮೆಯಾಚಿಸಿದರು, ತಮ್ಮ ಮಾತುಗಳಿಗೆ ವಿಷಾದ ವ್ಯಕ್ತಪಡಿಸಿದರು.

Landlord movie OTT: 'ಲ್ಯಾಂಡ್‌ಲಾರ್ಡ್' ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

'ಲ್ಯಾಂಡ್‌ಲಾರ್ಡ್' ಒಟಿಟಿ ಎಂಟ್ರಿ ಯಾವಾಗ? ಸ್ಟ್ರೀಮಿಂಗ್‌ ಎಲ್ಲಿ?

Landlord movie OTT: ನಟ ದುನಿಯಾ ವಿಜಯ್‌ ಅಭಿನಯದ "ಲ್ಯಾಂಡ್ ಲಾರ್ಡ್" ಸಿನಿಮಾ ಇತ್ತೀಚೆಗಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಜಡೇಶ್ ಕೆ ಹಂಪಿ ನಿರ್ದೇಶನ ಮಾಡಿದ್ದ ಈ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಯಶಸ್ಸು ಗಳಿಸಿತ್ತು. ವಿಜಯ್ ಜೊತೆಗೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದರು. ರಾಜ್‌. ಬಿ ಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದರು. ಇನ್ನು ವಿಜಯ್ ಪುತ್ರಿ ರಿತನ್ಯಾ ಸಿನಿಮಾದಲ್ಲೂ ಮಗಳ ಪಾತ್ರದಲ್ಲೇ ಕಾಣಿಸಿಕೊಂಡಿದ್ದರು.

Trisha Krishnan: ಬಹಿರಂಗ ವೇದಿಕೆಯಲ್ಲೇ ತ್ರಿಷಾ ಬಗ್ಗೆ ಪಾರ್ತಿಬನ್ ವ್ಯಂಗ್ಯ; ಖಡಕ್‌ ಆಗಿ ತಿರುಗೇಟು ಕೊಟ್ಟ ನಟಿ!

ಪಾರ್ತಿಬನ್ ವ್ಯಂಗ್ಯ; ಖಡಕ್‌ ಆಗಿ ತಿರುಗೇಟು ಕೊಟ್ಟ ತ್ರಿಷಾ!

Trisha Krishnan: ನಿರ್ದೇಶಕ, ನಟ ಪಾರ್ತಿಬನ್ ಬಹಿರಂಗ ವೇದಿಕೆಯಲ್ಲೇ ತ್ರಿಶಾ ಬಗ್ಗೆ ವ್ಯಂಗ್ಯವಾಡಿರೋದು ಭಾರಿ ಚರ್ಚೆಗಳು ಆಗುತ್ತಿವೆ. ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರಗಳಲ್ಲಿ, ತ್ರಿಶಾ ಕುಂಡವೈ ಪಾತ್ರವನ್ನು ನಿರ್ವಹಿಸಿದರೆ, ಪಾರ್ತಿಬನ್ ಎರಡನೇ ಚಿತ್ರದಲ್ಲಿ ಚಿನ್ನ ಪಜುವೆಟ್ಟರಾಯರ್ ಪಾತ್ರವನ್ನು ನಿರ್ವಹಿಸಿದರು.ಈ ಕುಂಡವೈಯನ್ನು ಕೆಲವು ದಿನಗಳವರೆಗೆ ಮನೆಯಲ್ಲಿ ಇಡಬೇಕು. ಅದು ಒಳ್ಳೆಯದು. ಅವರನ್ನು ಹೊರಗೆ ಬರಲು ಬಿಡಬೇಡಿ ಎಂದು ವ್ಯಂಗ್ಯವಾಡಿದ್ದರು. ಈ ಬಗ್ಗೆ ಈಗ ತ್ರಿಷಾ ತಿರುಗೇಟು ಕೊಟ್ಟಿದ್ದಾರೆ.

Kalki 2898 AD: ಅಬ್ಬಬ್ಬಾ! ಒಂದು ದಿನಕ್ಕೆ 15 ಕೋಟಿ ರೂ. ಸಂಭಾವನೆ; ಕಮಲ್‌ ಹಾಸನ್‌ ಈಗ ಭಾರತದ ದುಬಾರಿ ನಟ!

ಭಾರತದ ಅತ್ಯಂತ ದುಬಾರಿ ನಟ ಕಮಲ್‌ ಹಾಸನ್‌: ʻಕಲ್ಕಿʼಗಾಗಿ ದುಬಾರಿ ಸಂಭಾವನೆ

Kamal Haasan: ಕಲ್ಕಿ ಸಿನಿಮಾಕ್ಕಾಗಿ ಕಮಲ್‌ ಹಾಸನ್‌ ಪಡೆಯುತ್ತಿರುವ ಸಂಭಾವನೆ ಈಗ ಚರ್ಚೆಗೆ ಕಾರಣವಾಗಿದೆ. ಸ್ಕ್ರೀನ್ ರೈಟರ್ ಯುಗಿ ಸೇತು ನೀಡಿರುವ ಮಾಹಿತಿಯಂತೆ, ಕಮಲ್ ಹಾಸನ್ ಅವರು ಕೇವಲ 10 ದಿನಗಳ ಚಿತ್ರೀಕರಣಕ್ಕಾಗಿ 150 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅಂದರೆ ದಿನಕ್ಕೆ ಬರೋಬ್ಬರಿ 15 ಕೋಟಿ ರೂ. ಪಡೆಯುವ ಮೂಲಕ ಅವರು ಭಾರತದ ಅತ್ಯಂತ ದುಬಾರಿ ನಟ ಎನಿಸಿಕೊಂಡಿದ್ದಾರೆ.

Junior NTR: ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದ ಹಾಗೆ ಇರತ್ತೆ; ಕನ್ನಡದಲ್ಲೇ ಜ್ಯೂನಿಯರ್‌ ಎನ್‌ಟಿಆರ್‌ ಭಾಷಣ

ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದ ಹಾಗೆ ಇರತ್ತೆ; Junior NTR

Junior NTR: ಟೈಗರ್‌ ಜೂನಿಯರ್ ಎನ್‌ಟಿಆರ್ಅ ವರು ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಬೆಂಗಳೂರಿನ ಮಹದೇವಪುರದಲ್ಲಿ ನಿರ್ಮಾಣವಾಗಿರುವ ಕಿಮ್ಸ್ ಆಸ್ಪತ್ರೆಯ ಉದ್ಘಾಟನಾ ಸಮಾರಂಭಕ್ಕೆ ಎನ್‌ಟಿಆರ್‌ ಅವರನ್ನು ವಿಶೇಷ ಅತಿಥಿಯನ್ನಾಗಿ ಕರೆಸಲಾಗಿತ್ತು. ಕನ್ನಡದಲ್ಲೇ ತಮ್ಮ ಭಾಷಣ ಮಾಡಿ ಕನ್ನಡ ನೆಲದ ಬಗ್ಗೆ ಕೊಂಡಾಡಿದ್ದಾರೆ.ರಜೆಯ ಮಜಾ ಕಳೆಯಲು ಮಕ್ಕಳು ಊರಿಗೆ ಬಂದಂತಹ ಅನುಭವವಾಗುತ್ತದೆ. ಈ ಕಾರಣಕ್ಕಾಗಿಯೇ ಕರ್ನಾಟಕ ನನಗೆ ಯಾವಾಗಲೂ ತುಂಬಾ ಸ್ಪೆಷಲ್" ಎಂದರು.

Vijay and Trisha Krishnan: ತ್ರಿಷಾ ಬಗ್ಗೆ ಬಹಿರಂಗ ವೇದಿಕೆಯಲ್ಲೇ ನಿರ್ದೇಶಕ ಪಾರ್ತಿಬನ್ ವ್ಯಂಗ್ಯ!

ತ್ರಿಷಾ ಬಗ್ಗೆ ಬಹಿರಂಗ ವೇದಿಕೆಯಲ್ಲೇ ನಿರ್ದೇಶಕ ಪಾರ್ತಿಬನ್ ವ್ಯಂಗ್ಯ!

Vijay and Trisha Krishnan: ನಟ ಮತ್ತು ಟಿವಿಕೆ ಮುಖ್ಯಸ್ಥ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿವಾಹ ಆರತಕ್ಷತೆಯಲ್ಲಿ ಭಾಗವಹಿಸಿದ್ದಾಗಿನಿಂದ ಭಾರಿ ಚರ್ಚೆಗಳು ಆಗುತ್ತಿವೆ. ವಿಜಯ್‌ ಪತ್ನಿ ಸಂಗೀತಾ ಸೊರ್ನಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಈ ಬೆಳವಣಿಗೆ ಆಗಿದ್ದು ವಿವಾದ ಸಷ್ಟಿಸಿದೆ. ನಟ, ನಿರ್ದೇಶಕ ಸಮುದ್ರಖನಿ ಬಳಿಕ ಇದೀಗ ಮತ್ತೊಬ್ಬ ನಟ, ನಿರ್ದೇಶಕ ಪಾರ್ತಿಬನ್ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಹಿರಂಗ ವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದಾರೆ.

ʻನಾನು ಫ್ಯಾನ್ ಅಲ್ವಾ? ನಂಗ್ಯಾಕೆ ಮದುವೆಗೆ ಕರೆಯಲಿಲ್ಲʼ; ಕೋಪಗೊಂಡ ಪುಟ್ಟ ಅಭಿಮಾನಿಯನ್ನು ರಶ್ಮಿಕಾ - ವಿಜಯ್‌ ದೇವರಕೊಂಡ ಕೂಲ್‌ ಮಾಡಿದ್ದೇಗೆ?

ʻನಂಗ್ಯಾಕೆ ಮದುವೆಗೆ ಕರೆಯಲಿಲ್ಲ?ʼ; ವಿಜಯ್-ರಶ್ಮಿಕಾಗೆ ಪುಟಾಣಿಯ ಪ್ರಶ್ನೆ

Vijay & Rashmika: ತ್ತೀಚೆಗಷ್ಟೇ ವಿವಾಹವಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಂಪತಿಯ ಮೇಲೆ ಪುಟ್ಟ ಬಾಲಕಿ 'ಲಕ್ಕಿ ತಲ್ಲಿ' ಮುನಿಸಿಕೊಂಡಿದ್ದಾಳೆ. "ನಾನು ಫ್ಯಾನ್ ಅಲ್ವಾ? ನನ್ನನ್ನ ಯಾಕೆ ಮದುವೆಗೆ ಕರೆಯಲಿಲ್ಲ?" ಎಂದು ಅವಳು ಮಾಡಿದ ವಿಡಿಯೋ ವೈರಲ್ ಆಗಿದೆ. ಇದಕ್ಕೆ ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಅವರ ಉತ್ತರವೇನು?

Loading...