ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Rohit Shetty: ಹಾರ್ಪಿಕ್‌ನಿಂದ ಹೊಸ 'ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್'ಗೆ ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ

ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್

ಭಾರತದ ನಗರ ಪ್ರದೇಶದ ಮನೆಗಳಲ್ಲಿ ಹಳದಿ ಕಲೆಗಳು, ಉಪ್ಪುನೀರಿನ ಪಾಚಿಯಂತಹ ಪದರ (Limescale) ಮತ್ತು ತುಕ್ಕಿನಂತಹ ಕಠಿಣ ಕಲೆಗಳು ದೊಡ್ಡ ಸಮಸ್ಯೆಯಾಗಿವೆ. ಕಾಲಾನಂತರ ದಲ್ಲಿ, ಇಂತಹ ಕಲೆಗಳನ್ನು ತೆಗೆಯುವುದು ಅಸಾಧ್ಯವೆಂದು ಗ್ರಾಹಕರು ನಂಬತೊಡಗಿದ್ದಾರೆ ಮತ್ತು ಸೂಕ್ತ ಪರಿಹಾರವಿಲ್ಲದೆ ಡಿಟರ್ಜೆಂಟ್, ಬ್ಲೀಚ್ ಅಥವಾ ಫಿನೈಲ್‌ನಂತಹ ಸಾಮಾನ್ಯ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ.

ಬಾಯ್‌ಫ್ರೆಂಡ್‌ ಫರ್ಮಾನ್‌ ಖಾನ್‌ ಜೊತೆ ಕೇರಳದಲ್ಲಿ ಮದುವೆಯಾದ ʻಕುಂಭಮೇಳ ಗರ್ಲ್‌ʼ ಮೊನಾಲಿಸಾ; ʻತಂದೆಯಿಂದ ರಕ್ಷಣೆ ಕೊಡಿʼ ಅಂತ ಪೊಲೀಸರಿಗೆ ಮನವಿ

ಕೇರಳದಲ್ಲಿ ಫರ್ಮಾನ್‌ ಖಾನ್‌ ಜೊತೆ ʻಕುಂಭಮೇಳ ಗರ್ಲ್‌ʼ ಮೊನಾಲಿಸಾ ಮದುವೆ

ʻಕುಂಭಮೇಳ ಗರ್ಲ್‌ʼ ಖ್ಯಾತಿಯ ಮೊನಾಲಿಸಾ ಭೋಂಸ್ಲೆ ಅವರು ಕೇರಳದ ಪೂವಾರ್‌ನಲ್ಲಿ ತಮ್ಮ ಪ್ರಿಯಕರ ಫರ್ಮಾನ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಂದೆ ವಿಜಯ್ ಸಿಂಗ್ ಅವರ ವಿರೋಧದ ನಡುವೆಯೂ ಪೊಲೀಸರ ರಕ್ಷಣೆ ಪಡೆದ ಮೊನಾಲಿಸಾ, ದೇವಸ್ಥಾನದಲ್ಲಿ ವಿವಾಹವಾದರು.

ʻಅಪ್ಪಟ ಅಪರಂಜಿಯೊಬ್ಬ ನಮ್ಮ ಜೀವನದಲ್ಲಿ ಬಂದಿದ್ದಾನೆʼ; ಗಂಡು ಮಗುವಿಗೆ ತಂದೆಯಾದ ಡೈರೆಕ್ಟರ್‌ ‌ʻಸಿಂಪಲ್ʼ ಸುನಿ

ಸಿಂಪಲ್ ಸುನಿ ಮನೆಗೆ ಬಂದ ಅಪ್ಪಟ ಅಪರಂಜಿ; ಗಂಡು ಮಗುವಿನ ತಂದೆಯಾದ ನಿರ್ದೇಶಕ

ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ 'ಸಿಂಪಲ್' ಸುನಿ ಅವರು ತಂದೆಯಾಗಿದ್ದಾರೆ. ಅವರ ಪತ್ನಿ ಸೌಂದರ್ಯ ಅವರು ಮಾರ್ಚ್ 11ರ ಬುಧವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿ ಸುದ್ದಿಯನ್ನು ಸುನಿ ಹಂಚಿಕೊಂಡಿದ್ದಾರೆ.

ನಾಲ್ಕೇ ವರ್ಷಕ್ಕೆ ಮುರಿದುಬಿತ್ತು ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ; ಪತಿಯಿಂದ ಸಿಕ್ಕ ಜೀವನಾಂಶ ಎಷ್ಟು?

ಹನ್ಸಿಕಾ ದಾಂಪತ್ಯಕ್ಕೆ ಅಂತ್ಯ; 4 ವರ್ಷಕ್ಕೆ ಮದುವೆ ಮುರಿದುಬಿದ್ದಿದ್ದು ಏಕೆ?

Hansika Motwani Divorce: ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಅವರ ಮದುವೆ ನಾಲ್ಕು ವರ್ಷಗಳಲ್ಲೇ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಬುಧವಾರ (ಮಾ. 11) ಇವರ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ.

'ನನಗೆ ಮದುವೆ, ಲವ್ ಅಂದ್ರೆ ಇಷ್ಟವಿಲ್ಲ...'; 'ಯಜಮಾನ' ಸೀರಿಯಲ್‌ ನಟಿ ಮಧುಶ್ರೀ ಭೈರಪ್ಪ ಹಿಂಗ್ಯಾಕೆ ಹೇಳಿದ್ರು?

'ನಮ್ಮಣ್ಣ ರೌಡಿ ಗೊತ್ತಾ'; ಪ್ರಪೋಸ್‌ ಮಾಡಿದವರಿಗೆ ಹೆದರಿಸುತ್ತಿದ್ದ ಮಧುಶ್ರೀ

Madhushree Byrappa: 'ಯಜಮಾನ' ಧಾರಾವಾಹಿಯ ನಟಿ ಮಧುಶ್ರೀ ಭೈರಪ್ಪ ಅವರು ಇತ್ತೀಚೆಗೆ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಮದುವೆ ಮತ್ತು ಪ್ರೀತಿಯ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಿದ್ದಾರೆ.

ʻ35 ವರ್ಷದವನಿಗೆ ಮದುವೆ ಮಾಡಿಕೊಡಲು ಒಪ್ಪಿದ್ದೇ ನನ್ನ ದೊಡ್ಡತನʼ; ರಶ್ಮಿಕಾ ತಾಯಿಯದ್ದು ಎನ್ನಲಾದ ಆಡಿಯೋ ವೈರಲ್!‌ ಬ್ರೇಕಪ್‌ ಹಿಂದಿನ ರಹಸ್ಯ ಹೊರಬಿತ್ತಾ?

ʻನನ್ನ ಮಗಳು ನರಳಿದ್ದಾಳೆʼ; ರಶ್ಮಿಕಾ ಅಮ್ಮನದ್ದು ಎನ್ನಲಾದ ಆಡಿಯೋ ವೈರಲ್!‌

Rashmika Mandanna Breakup: ನಟಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರದ್ದೆನ್ನಲಾದ ಆಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ. 2017ರಲ್ಲಿ ನಡೆದಿದ್ದ ರಶ್ಮಿಕಾ ಅವರ ಎಂಗೇಜ್‌ಮೆಂಟ್‌ ಮುರಿದುಬೀಳಲು ಯಾರು ಕಾರಣ ಎಂಬ ಮಾಹಿತಿ ಆ ಆಡಿಯೋದಲ್ಲಿದೆ.

ʻಧುರಂಧರ್‌ 2 ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 2 ಸಾವಿರ ಕೋಟಿ ರೂ. ಕೊಳ್ಳೆ ಹೊಡೆಯಲಿದೆʼ; ಭವಿಷ್ಯ ನುಡಿದ ರಾಮ್‌ ಗೋಪಾಲ್‌ ವರ್ಮಾ

ʻಧುರಂಧರ್‌ 2ʼ ಕಲೆಕ್ಷನ್‌ ಬಗ್ಗೆ ಹೇಳಿ ಸೌತ್ ಸಿನಿಮಾಗಳಿಗೆ ಆರ್‌ಜಿವಿ ಟಾಂಗ್

Dhurandhar 2 Movie: ನಟ ರಣವೀರ್ ಸಿಂಗ್ ಅಭಿನಯದ ʻಧುರಂಧರ್‌ 2ʼ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲಿದ್ದು, ಮಾರ್ಚ್ 18ರಂದೇ ದೇಶಾದ್ಯಂತ 4,000 ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿವೆ. ಈ ಚಿತ್ರ 2,000 ಕೋಟಿ ರೂ. ಗಳಿಸಲಿದೆ ಎಂದು ರಾಮ್ ಗೋಪಾಲ್ ವರ್ಮಾ ಭವಿಷ್ಯ ನುಡಿದಿದ್ದಾರೆ.

ʻಕಾವ್ಯ ನನ್ನನ್ನು ಅಪ್ಪಾಜಿ ಅಂತ ಕರೀತಾಳೆ, ನನ್ನ ಮಗಳ ಸ್ಥಾನ ತುಂಬಿದಳು, ನನಗೀಗ ಮೂವರು ಹೆಣ್ಣು ಮಕ್ಕಳುʼ; ʻಕೆಂಡಸಂಪಿಗೆʼ ನಟ ನಾಗರಾಜ್‌ ಕೋಟೆ

ʻನನ್ನ ಮಗಳ ಸ್ಥಾನ ತುಂಬಿದಳುʼ; ಕಾವ್ಯ ಬಗ್ಗೆ ನಟ ನಾಗರಾಜ್ ಕೋಟೆ ಭಾವುಕ ಮಾತು

'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಕಾವ್ಯ ಶೈವಗೆ ತಂದೆಯಾಗಿ ನಟಿಸಿದ್ದವರು ನಾಗರಾಜ್ ಕೋಟೆ. ಹೆಣ್ಣು ಮಕ್ಕಳು ಇಲ್ಲದ ನನಗೆ ಕಾವ್ಯ ಮಗಳ ಸ್ಥಾನ ತುಂಬಿದ್ದಾಳೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ನಾಗರಾಜ್‌ ಕೋಟೆ. "ಸಂಬಂಧಗಳು ಗಟ್ಟಿಯಾಗಲು ಹೊಟ್ಟೆಯಲ್ಲಿ ಹುಟ್ಟಬೇಕಿಲ್ಲ, ಹೃದಯದಲ್ಲಿ ಪ್ರೀತಿ ಇದ್ದರೆ ಸಾಕು" ಎಂದು ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ದಿಢೀರ್ ಅಂತ ಮುಕ್ತಾಯಗೊಂಡ 'ಯಜಮಾನ' ಧಾರಾವಾಹಿ; ʻಝಾನ್ಸಿʼ ಪಾತ್ರಧಾರಿ ಮಧುಶ್ರೀ ಭೈರಪ್ಪ ಬೇಸರಕ್ಕೆ ಕಾರಣವೇನು?

ʻಯಜಮಾನ ಅಂತ್ಯವಾಗುವ 2 ದಿನ ಮುಂಚೆ ನಮಗೆ ಗೊತ್ತಾಯ್ತುʼ; ನಟಿ ಮಧುಶ್ರೀ ಬೇಸರ

Yajamana Kannada Serial: ಯಜಮಾನ ಧಾರಾವಾಹಿ ದಿಢೀರನೆ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ನಿರ್ಧಾರದಿಂದ ವೀಕ್ಷಕರು ಮಾತ್ರವಲ್ಲದೆ ಸೀರಿಯಲ್ ತಂಡ ಕೂಡ ಬೇಸರಗೊಂಡಿದೆ. ಧಾರಾವಾಹಿಯಲ್ಲಿ 'ಝಾನ್ಸಿ' ಪಾತ್ರದ ಮೂಲಕ ಮನೆಮಾತಾಗಿದ್ದ ಮಧುಶ್ರೀ ಭೈರಪ್ಪ ಅವರು ವಿಶ್ವವಾಣಿ ಟಿವಿ ಜೊತೆ ಧಾರಾವಾಹಿ ನಿಂತಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Trisha Krishnan: ಉದ್ಯಮಿ ವರುಣ್ ಮಣಿಯನ್ ಜೊತೆಗಿನ ನಿಶ್ಚಿತಾರ್ಥ ರದ್ದಾಗಿದ್ದೇಕೆ? ತ್ರಿಶಾ ಕೊಟ್ಟ ಕಾರಣ ಏನಾಗಿತ್ತು?

ತ್ರಿಶಾ ನಿಶ್ಚಿತಾರ್ಥ ರದ್ದಾಗಿದ್ದೇಕೆ? ನಟಿ ಕೊಟ್ಟ ಕಾರಣ ಏನಾಗಿತ್ತು?

Trisha Krishnan: ತ್ರಿಶಾ ಕೃಷ್ಣನ್ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಯಶಸ್ವಿ ವೃತ್ತಿಜೀವನದ ಜೊತೆಗೆ, ಅವರ ವೈಯಕ್ತಿಕ ಜೀವನವು ಸಾರ್ವಜನಿಕರ ಗಮನವನ್ನು ಸೆಳೆದಿದೆ. ತ್ರಿಶಾ ಕಾರಣಕ್ಕೆ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂದು ಸುದ್ದಿ ಆಗ್ತಿದೆ. ಇತ್ತೀಚೆಗೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಅಲ್ಲಿಂದ ಮತ್ತಷ್ಟು ಈ ಸುದ್ದಿ ವೈರಲ್‌ ಆಗಿದೆ.

Yash Toxic movie : ‘ಟಾಕ್ಸಿಕ್’ ಜೊತೆ ಕ್ಲ್ಯಾಶ್ ತಪ್ಪಿಸಲು ರಿಲೀಸ್ ದಿನಾಂಕ ಚೇಂಜ್‌; ಯಾವುದು ಆ ಬಾಲಿವುಡ್ ಸ್ಟಾರ್ ಸಿನಿಮಾ ?

‘ಟಾಕ್ಸಿಕ್’ ಜೊತೆ ಕ್ಲ್ಯಾಶ್ , ರಿಲೀಸ್ ದಿನಾಂಕ ಚೇಂಜ್‌; ಯಾವುದು ಸಿನಿಮಾ ?

Hai Jawani Toh Ishq Hona Hai : ಬಾಲಿವುಡ್ ನಟ ವರುಣ್ ಧವನ್ ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿ ವರುಣ್ ಧವನ್, ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಟಾಕ್ಸಿಕ್’ ಚಿತ್ರತಂಡವು ಏಕಾಏಕಿ ಬಿಡುಗಡೆ ದಿನಾಂಕ ಬದಲಾಯಿಸಿದ್ದರಿಂದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ತಂಡಕ್ಕೆ ಬೇಸರ ಆಗಿತ್ತು. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಈಗ ಈ ಚಿತ್ರದ ರಿಲೀಸ್ ದಿನಾಂಕ ಬದಲಾಗಿದೆ.

ಅಶ್ಲೀಲ ಕಾಮೆಂಟ್ ಕೇಸ್, ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ! ʻಈ ಹೋರಾಟ ನನಗಾಗಿ ಅಲ್ಲ, ಎಲ್ಲಾ ಹೆಣ್ಣುಮಕ್ಕಳಿಗಾಗಿ..ʼ ಎಂದ ನಟಿ ರಮ್ಯಾ

ಅಶ್ಲೀಲ ಕಾಮೆಂಟ್ ಕೇಸ್: ಕೋರ್ಟ್‌ಗೆ ಹಾಜರಾದ ನಟಿ ರಮ್ಯಾ ಹೇಳಿದ್ದೇನು?

ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದ 11 ಆರೋಪಿಗಳ ವಿರುದ್ಧ ನಟಿ ರಮ್ಯಾ ಸಾಕ್ಷ್ಯ ಒದಗಿಸಿದ್ದಾರೆ. ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾದ ಅವರು, ಮುಚ್ಚಿದ ಕೊಠಡಿಯಲ್ಲಿ ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದರು. "ಈ ಹೋರಾಟವು ಕೇವಲ ತನಗಾಗಿ ಅಲ್ಲ, ಎಲ್ಲಾ ಹೆಣ್ಣುಮಕ್ಕಳ ಸುರಕ್ಷತೆಗಾಗಿ" ಎಂದು ರಮ್ಯಾ ಹೇಳಿದ್ದಾರೆ.

Rashmika Vijay Deverakonda: ಮೆಹೆಂದಿ ಚಿತ್ರಗಳನ್ನು ಹಂಚಿಕೊಂಡ ʻವಿರೋಶ್‌ʼ; ಜೋಡಿ ಸಂಭ್ರಮ ಹೀಗಿತ್ತು

ಮೆಹೆಂದಿ ಚಿತ್ರಗಳನ್ನು ಹಂಚಿಕೊಂಡ ʻವಿರೋಶ್‌ʼ; ಜೋಡಿ ಸಂಭ್ರಮ ಹೀಗಿತ್ತು

Rashmika: ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಅದ್ದೂರಿಯಾಗಿ ವಿವಾಹ ಆದರು. ಮದುವೆ ಬಳಿಕ ವಿಜಯ್ ಹುಟ್ಟೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು. ಹೈದರಾಬಾದ್​​ನಲ್ಲಿಯೂ ಆರತಕ್ಷತೆ ಮಾಡಲಾಯಿತು. ಸೆಲೆಬ್ರೆಟಿಗಳು ಎಂದರೆ ಅವರ ಮದುವೆ ಆಧುನಿಕ ರೀತಿಯಾಗಿ ನಡೆಯುತ್ತದೆ ಎನ್ನಲಾಗಿತ್ತು. ಆದರೆ ಉಡುಗೆ ತೊಡುಗೆಯಿಂದ ಹಿಡಿದು ವಿವಾಹದ ನಂತರ ದೇಶದ ಹತ್ತಾರು ದೇವಸ್ಥಾನಗಳಿಗೆ ಭೇಟಿ ನೀಡುವವರೆಗೂ ನಟಿ ರಶ್ಮಿಕಾ ಮತ್ತು ನಟ ವಿಜಯ್ ಹಿಂದೂ ಸಾಂಪ್ರದಾಯ ಪಾಲಿಸಿದ್ದರು.

ಭೂಮಿ ನಂಬಿ ದುಡಿಯುವ ರೈತನಿಂದ ದೇಶ ಕಾಯೋ ಸೈನಿಕನವರೆಗೆ; ʻಮಹಾಕಾಳಿ ಪುತ್ರʼ ಟೈಟಲ್‌ ಲಾಂಚ್‌

ರೈತನಿಂದ ಸೈನಿಕನವರೆಗೆ ಕನೆಕ್ಷನ್; ಶುರುವಾಯ್ತು 'ಮಹಾಕಾಳಿ ಪುತ್ರ'ನ ಆರ್ಭಟ

ʻಮಹಾಕಾಳಿ ಪುತ್ರʼ ಸಿನಿಮಾದ ಮೂಲಕ ಹೊಸ ಪ್ರತಿಭೆ ಗಿರೀಶ್ ಎಸ್.ಎಂ. ಸ್ಯಾಂಡಲ್‌ವುಡ್‌ಗೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ರೈತ ಮತ್ತು ಸೈನಿಕರ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಈ ಚಿತ್ರವು, ಮಣ್ಣಿನ ಮಗನ ಸಂಘರ್ಷ ಮತ್ತು ಸಾಧನೆಯ ಕಥೆಯನ್ನು ಹೊಂದಿದೆಯಂತೆ.

Actor Prabhas : ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್‌; ಹೊಂಬಾಳೆಯದ್ದೇ ಪ್ಲ್ಯಾನ್

ಮಲಯಾಳಂ ಖ್ಯಾತ ನಿರ್ದೇಶಕರನ್ನ ಭೇಟಿ ಮಾಡಿದ ಪ್ರಭಾಸ್‌

Actor Prabhas : ಪ್ರಭಾಸ್ ಅವರ 'ದಿ ರಾಜಾ ಸಾಬ್' ಚಿತ್ರಕ್ಕೆ ಸಿಕ್ಕ ನೀರಸ ಪ್ರತಿಕ್ರಿಯೆಯ ನಂತರವೂ ಅವರ ಉತ್ಸಾಹ ಕುಂದಿಲ್ಲ. ಸೂಪರ್ ಸ್ಟಾರ್ ಈಗಾಗಲೇ ತಮ್ಮ ಮುಂದಿನ ಯೋಜನೆಗಳನ್ನು ಯೋಜಿಸುತ್ತಿದ್ದಾರೆ. ಹನು ರಾಘವಪುಡಿ ನಿರ್ದೇಶನದ 'ಫೌಜಿ' ಚಿತ್ರದಲ್ಲಿ ಕೆಲಸ ಮಾಡುತ್ತಿರುವಾಗ, ಪ್ರಭಾಸ್ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರ 'ಸ್ಪಿರಿಟ್' ಚಿತ್ರದ ಚಿತ್ರೀಕರಣವನ್ನೂ ಪ್ರಾರಂಭಿಸಿದ್ದಾರೆ.

ಥಿಯೇಟರ್‌, ಯೂಟ್ಯೂಬ್ ಆಯ್ತು, ಈಗ ಒಟಿಟಿಗೆ ಬರ್ತಿದೆ 'ಸಿತಾರೆ ಜಮೀನ್ ಪರ್'; ಉಲ್ಟಾ ಹೊಡೆದ ಆಮಿರ್‌ ಖಾನ್‌

ಒಟಿಟಿಗೆ ಬರ್ತಿದೆ ʻಸಿತಾರೆ ಜಮೀನ್ ಪರ್ʼ; ಆಮಿರ್‌ ಖಾನ್‌ಗೆ ಭರ್ಜರಿ ಲಾಭ!

ಆಮಿರ್ ಖಾನ್ ನಟನೆಯ ʻಸಿತಾರೆ ಜಮೀನ್ ಪರ್ʼ ಸಿನಿಮಾವು ಕೊನೆಗೂ ಒಟಿಟಿಯಲ್ಲಿ ಬಿಡುಗಡೆ ಆಗುತ್ತದೆ. ಈ ಮೊದಲು ಒಟಿಟಿಗೆ ಈ ಸಿನಿಮಾವನ್ನು ನೀಡುವುದಿಲ್ಲ ಎಂದು ಚಿತ್ರಮಂದಿರದಲ್ಲಿ 225 ಕೋಟಿ ರೂ. ಬಾಚಿದ್ದ ಆಮಿರ್, ನಂತರ ಯೂಟ್ಯೂಬ್‌ನಲ್ಲಿ ಹಣ ಪಾವತಿಸಿ ನೋಡುವ ಅವಕಾಶ ನೀಡಿದ್ದರು. ಇದೀಗ ಎಂಟು ತಿಂಗಳ ಬಳಿಕ ಡಿಜಿಟಲ್ ಹಕ್ಕುಗಳನ್ನು ಮಾರಾಟ ಮಾಡುವ ಮೂಲಕ ಮತ್ತೊಮ್ಮೆ ಭರ್ಜರಿ ಲಾಭ ಮಾಡಿಕೊಂಡಿದ್ದು, ಸಿನಿಪ್ರಿಯರು ಇವರನ್ನು 'ಮಾಸ್ಟರ್ ಮೈಂಡ್' ಎಂದು ಕರೆಯುತ್ತಿದ್ದಾರೆ.

7 ಬೃಹತ್‌ ಸೆಟ್‌ಗಳಲ್ಲಿ ʻಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼಗೆ ಶೂಟಿಂಗ್‌; ಮೇಘನಾ ರಾಜ್‌ - ಕೋಮಲ್‌ ನಟನೆಯ ಈ ಚಿತ್ರಕ್ಕಿದೆ ಮತ್ತೊಂದು ಟೈಟಲ್!‌

Komal: ʻಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಶೂಟಿಂಗ್‌ ಮುಕ್ತಾಯ

Sangeetha Bar and Restaurant: ಕೋಮಲ್‌, ಮೇಘನಾ ರಾಜ್‌ ನಟನೆಯ ʻಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈ ಸಿನಿಮಾಕ್ಕೆ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಕೋಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡರೆ, ಮೇಘನಾ ರಾಜ್ ಮಹಾರಾಣಿಯ ಪಾತ್ರದಲ್ಲಿ ಮಿಂಚಿದ್ದಾರೆ.

ಗಾಯಕ ಅನಿರುದ್ಧ ಶಾಸ್ತ್ರಿ ಆರತಕ್ಷತೆಯಲ್ಲಿ ಸ್ಯಾಂಡಲ್‌ವುಡ್‌ ತಾರೆಯರ ಸಮಾಗಮ; ಇಲ್ಲಿವೆ ಸುಂದರ ಫೋಟೋಗಳು

Photos: ಅನಿರುದ್ಧ ಶಾಸ್ತ್ರಿ ರಿಸೆಪ್ಷನ್‌ನಲ್ಲಿ ಸ್ಯಾಂಡಲ್‌ವುಡ್‌ ತಾರೆಯರು

ಸ್ಯಾಂಡಲ್‌ವುಡ್‌ನ ಖ್ಯಾತ ಗಾಯಕ ಮತ್ತು ಗೀತ ರಚನಕಾರ ಅನಿರುದ್ಧ ಶಾಸ್ತ್ರಿ ಅವರು ಈಚೆಗೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ʻರಾಬರ್ಟ್‌ʼ, ʻಬಘೀರʼ, ʻಕ್ರಾಂತಿʼ, ʻಕಾಟೇರʼ, ʻದಿ ಡೆವಿಲ್‌ʼ ಮುಂತಾದ ಹಿಟ್‌ ಸಿನಿಮಾಗಳ ಗೀತೆಗೆ ಧ್ವನಿಯಾಗಿರುವ ಅನಿರುದ್ದ ಶಾಸ್ತ್ರಿ, ಹಲವು ಸಿನಿಮಾ-ಧಾರಾವಾಹಿಗಳಲಿ ಬಾಲ ನಟರಾಗಿಯೂ ಮಿಂಚಿದ್ದಾರೆ. ಫೆಬ್ರವರಿ 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಶ್ರೇಯಾ ಬಾಲಾಜಿ ಅವರ ಜೊತೆ ಶಾಸ್ತ್ರೋಕ್ತವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು ಅನಿರುದ್ಧ ಶಾಸ್ತ್ರಿ. ಈಚೆಗೆ ಈ ಜೋಡಿಯ ಮದುವೆ ಆರತಕ್ಷತೆಯು ಅದ್ದೂರಿಯಾಗಿ ನಡೆದಿತ್ತು. ಈ ಸಮಾರಂಭಕ್ಕೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಇಲ್ಲಿವೆ ನೋಡಿ ಅನಿರುದ್ಧ ಶಾಸ್ತ್ರಿಯ ಮದುವೆ ಆರತಕ್ಷತೆಯ ಕಲರ್‌ಫುಲ್‌ ಫೋಟೋಗಳು.

ಪಾಪರಾಜಿಗಳ ಮೇಲೆ ಸ್ಯಾಂಡಲ್‌ವುಡ್‌ ಗರಂ; ಅಸಭ್ಯ ಆಂಗಲ್‌ನಿಂದ ಫೋಟೋ-ವಿಡಿಯೋ ಕ್ಯಾಪ್ಚರ್‌ ಮಾಡುವುದಕ್ಕೆ ವಾಣಿಜ್ಯ ಮಂಡಳಿ ಬ್ರೇಕ್, ಖಡಕ್ ಎಚ್ಚರಿಕೆ!

ಇನ್ಮುಂದೆ ಅಸಭ್ಯ ವಿಡಿಯೋ ಹಾಕಿದ್ರೆ ಕೇಸ್; ವಾಣಿಜ್ಯ ಮಂಡಳಿ ವಾರ್ನಿಂಗ್

Paparazzi Culture in Sandalwood: ಪಾಪರಾಜಿಗಳ ವರ್ತನೆ ಇತ್ತೀಚೆಗೆ ಮಿತಿಮೀರುತ್ತಿದ್ದು, ನಟಿ ಸಪ್ತಮಿ ಗೌಡ ಎತ್ತಿದ ಧ್ವನಿಗೆ ಈಗ ಅಧಿಕೃತ ಮನ್ನಣೆ ಸಿಕ್ಕಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮಹಿಳಾ ಕಲಾವಿದರನ್ನು ಅಸಭ್ಯವಾಗಿ ಚಿತ್ರೀಕರಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.

ಮೆಗಾ ಫ್ಯಾಮಿಲಿ ಸೊಸೆ ಲಾವಣ್ಯ ತ್ರಿಪಾಠಿಗೆ ಸೋಶಿಯಲ್‌ ಮೀಡಿಯಾದಲ್ಲಿ ಕಿರುಕುಳ; ಸೈಬರ್ ಕ್ರೈಮ್ ಪೊಲೀಸರಿಗೆ ದೂರು

ʻಮೆಗಾ ಸೊಸೆʼ ಲಾವಣ್ಯ ತ್ರಿಪಾಠಿಗೆ ಸೈಬರ್ ಕಿರುಕುಳ: ದೂರು ದಾಖಲಿಸಿದ ನಟಿ

Lavanya Tripathi Cyber Case: ಟಾಲಿವುಡ್ ನಟಿ ಮತ್ತು ಮೆಗಾ ಸ್ಟಾರ್ ಚಿರಂಜೀವಿ ಅವರ ಕುಟುಂಬದ ಸೊಸೆ ಲಾವಣ್ಯ ತ್ರಿಪಾಠಿ ಅವರು ಸೈಬರ್ ಕಿರುಕುಳದ ವಿರುದ್ಧ ಹೈದರಾಬಾದ್ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಮತ್ತು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತರುವಂತೆ ಅಸಭ್ಯ ಪೋಸ್ಟ್‌ಗಳನ್ನು ಹಾಕಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

'ಜೈಲರ್ 2' ಸೆಟ್‌ಗೆ `ಕಿಂಗ್ ಖಾನ್' ಎಂಟ್ರಿ: ʻತಲೈವಾʼ ರಜನಿಕಾಂತ್ ಜೊತೆ ಖಾಕಿ ಅವತಾರದಲ್ಲಿ ಶಾರುಖ್ ಖಾನ್ ಅಬ್ಬರ!

Rajinikanth: ʻಜೈಲರ್ 2ʼ ಸಿನಿಮಾದಲ್ಲಿ ಪೊಲೀಸ್‌ ಅಧಿಕಾರಿಯಾದ ಶಾರುಖ್‌

Shah Rukh Khan In Jailer: ರಜನಿಕಾಂತ್ ಅವರ 'ಜೈಲರ್' ಸೀಕ್ವೆಲ್‌ನಲ್ಲಿ ಬಾಲಿವುಡ್ ನಟ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸುವುದು ಬಹುತೇಕ ಅಧಿಕೃತವಾಗಿದೆ. ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯ ಪಾತ್ರ ನಿರ್ವಹಿಸಲಿದ್ದು, ಶಿವರಾಜ್‌ಕುಮಾರ್, ಮೋಹನ್‌ಲಾಲ್ ಮತ್ತು ಎಸ್‌ಜೆ ಸೂರ್ಯ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.

ʻಸರ್..‌ ಪೂಜೆಗೆ ಕಾಸಿಲ್ಲಾ.. 200 ರೂ. ಕೊಡಿʼ; ಅಂದು ರವಿಚಂದ್ರನ್‌ ಮಾಡಿದ್ದ ಸಹಾಯವನ್ನು ಸದಾ ನೆನೆಯುವ ನಟ ಜಗ್ಗೇಶ್‌!

ಪೂಜೆಗೆ ಕಾಸಿಲ್ಲದಿದ್ದಾಗ ನಟ ಜಗ್ಗೇಶ್‌ಗೆ ದುಡ್ಡು ಕೊಟ್ಟಿದ್ದ ರವಿಚಂದ್ರನ್!

Jaggesh Ravichandran Story: ನಟ ಜಗ್ಗೇಶ್ ಅವರು ತಮ್ಮ ಕಷ್ಟದ ದಿನಗಳನ್ನು ಸ್ಮರಿಸುತ್ತಾ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಮಾನವೀಯತೆಯನ್ನು ಕೊಂಡಾಡಿದ್ದಾರೆ. 1987ರ ಗಣೇಶ ಚತುರ್ಥಿಯಂದು ಪೂಜೆ ಮಾಡಲು ಹಣವಿಲ್ಲದೆ ಪರದಾಡುತ್ತಿದ್ದಾಗ, ರವಿಚಂದ್ರನ್ ಅವರು ನೀಡಿದ 500 ರೂಪಾಯಿ ಸಹಾಯದಿಂದ ತಾವು ಪೂಜೆ ನೆರವೇರಿಸಿದ್ದನ್ನು ಜಗ್ಗೇಶ್ ಭಾವುಕರಾಗಿ ಹಂಚಿಕೊಂಡಿದ್ದಾರೆ.

Mammootty: ನಟ ಮಮ್ಮುಟ್ಟಿ ಬಳಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಮಮ್ಮುಟ್ಟಿ ಬಳಿ ಕ್ಷಮೆ ಯಾಚಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

Mammootty: ಕಳೆದ ವಾರ ಭೂಕುಸಿತ ಸಂತ್ರಸ್ತರಿಗಾಗಿ ನಿರ್ಮಿಸಲಾದ ಮಾದರಿ ಪಟ್ಟಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಯನಾಡ್ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ. ರಫೀಕ್ ಅವರನ್ನು ಅಗೌರವಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮ ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿದ್ದ ನಟ ಮಮ್ಮುಟ್ಟಿ ಅವರ ಬಳಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

Geetha Bhat: ಅಷ್ಟಿದ್ರೆ ಆ ಪಾತ್ರ ಮಾಡಬಾರದಿತ್ತು; ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್‌ ಉತ್ತರ

ಗೀತಾ ಭಾರತಿ ಭಟ್ ಆರೋಪದ ಬಗ್ಗೆ ಮಿಲನಾ ಖಡಕ್‌ ಉತ್ತರ

Geetha Bhat: ಬ್ರಹ್ಮಗಂಟು ಧಾರಾವಾಹಿಯಲ್ಲಿ ಗೀತಾ ಭಟ್‌ ಅವರು ನಟಿಸಿದ್ದರು. 'ಲವ್ ಮಾಕ್ಟೇಲ್' ಚಿತ್ರದಲ್ಲಿ ಬಾಡಿಶೇಮಿಂಗ್ ಡೈಲಾಗ್ ಕುರಿತು ಗೀತಾ ಭಾರತಿ ಭಟ್ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಚಿತ್ರತಂಡದ ಮಿಲನಾ ನಾಗರಾಜ್ ಮತ್ತು ನಿರ್ದೇಶಕ ಕೃಷ್ಣ (Krishna) ಸಂದರ್ಶನವೊಂದರಲ್ಲಿ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

Loading...