ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

BBK 12: ʻಬಿಗ್‌ ಬಾಸ್‌ ಮನೆಯಲ್ಲಿರುವ ಗಂಡಸರು ಸತ್ತ ಹೆಣದ ಥರ ಇರ್ತಾರೆʼ; ಜಾಹ್ನವಿ ಮಾತಿಗೆ ʻಕಿಚ್ಚʼ ಸುದೀಪ್‌ ಶಾಕ್‌!

BBK 12: ಅಬ್ಬಬ್ಬಾ! ʻಗಿಲ್ಲಿಗೆ ಸೊಂಟನೇ ಇಲ್ಲʼ ಎಂದ ಜಾಹ್ನವಿ!

BBK 12: 'ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ' ಸಂಚಿಕೆಯಲ್ಲಿ ಜಾಹ್ನವಿ ಅವರು ಬಿಗ್‌ ಬಾಸ್ ಮನೆಯಲ್ಲಿರುವ ಗಂಡು ಮಕ್ಕಳ ಬಗ್ಗೆ ನೀಡಿದ ಹೇಳಿಕೆಗೆ ಕಿಚ್ಚ ಸುದೀಪ್ ಶಾಕ್‌ ಆಗಿದ್ದಾರೆ ಮತ್ತು ಬಿದ್ದು ಬಿದ್ದು ನಕ್ಕಿದ್ದಾರೆ. "ಈ ಮನೆಯಲ್ಲಿ ಹೆಣ್ಣು ಮಕ್ಕಳೇ ಸ್ಟ್ರಾಂಗ್ ಗುರು" ಎಂದು ಸುದೀಪ್‌ ಹೇಳಿದ್ದರು. ಅದಕ್ಕೆ ಜಾಹ್ನವಿ ಮಾಡಿದ ಕಾಮೆಂಟ್ ಎಲ್ಲರನ್ನೂ ನಕ್ಕು ನಗಿಸಿದೆ ಮತ್ತು ಅಚ್ಚರಿಯನ್ನು ಉಂಟು ಮಾಡಿದೆ.

SS Rajamouli: ʻನನಗೆ ದೇವರಲ್ಲಿ ನಂಬಿಕೆ ಇಲ್ಲʼ; ಎಸ್.ಎಸ್. ರಾಜಮೌಳಿ ಹೇಳಿಕೆ ವಿರುದ್ಧ ಭಾರಿ ಟೀಕೆ

ನನಗೆ ದೇವರಲ್ಲಿ ನಂಬಿಕೆ ಇಲ್ಲ ಎಂದ ರಾಜಮೌಳಿ; ಭಾರಿ ಟೀಕೆ

Varanasi Movie: ರಾಮೋಜಿ ಫಿಲ್ಮ್‌ಸಿಟಿಯಲ್ಲಿ ನಡೆಯುತ್ತಿರುವ ‘ಗ್ಲೋಬ್ ಟ್ರೋಟರ್’ ಈವೆಂಟ್‌ನಲ್ಲಿ ಪ್ರದರ್ಶಿಸಲಾದ ವಿಡಿಯೋದಲ್ಲಿ ಮಹೇಶ್‌ ಬಾಬು ಅವರ ಫಸ್ಟ್‌ ಲುಕ್ ಜೊತೆಗೆ ಶೀರ್ಷಿಕೆಯನ್ನು ಸಹ ರಿವೀಲ್ ಮಾಡಲಾಗಿದೆ. 2027ರ ಮಾರ್ಚ್‌ನಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಸ್. ರಾಜಮೌಳಿ, ತಾವು ದೇವರನ್ನು ನಂಬುವುದಿಲ್ಲ ಎಂದು ಬಹಿರಂಗಪಡಿಸಿದರು. ಆರ್.ಆರ್.ಆರ್ ಮತ್ತು ಬಾಹುಬಲಿಯಂತಹ ಅವರ ಕೆಲವು ಪ್ರಮುಖ ಕೃತಿಗಳು ಹಿಂದೂ ಪುರಾಣಗಳಿಂದ ಪ್ರೇರಿತವಾಗಿವೆ. ಆದರೀಗ ನಿರ್ದೇಶಕರ ಈ ಹೇಳಿಕೆ ಭಾರಿ ಟೀಕೆಗೆ ಗುರಿಯಾಗಿದೆ.

Full Meals Movie: ನ.21ಕ್ಕೆ ಮನರಂಜನೆಯ 'ಫುಲ್ ಮೀಲ್ಸ್' ಬಡಿಸಲು ಬರುತ್ತಿದ್ದಾರೆ ಲಿಖಿತ್ ಶೆಟ್ಟಿ

ನ.21ಕ್ಕೆ 'ಫುಲ್ ಮೀಲ್ಸ್' ಬಡಿಸಲು ಬರುತ್ತಿದ್ದಾರೆ ಲಿಖಿತ್ ಶೆಟ್ಟಿ

Sandalwood News: ಲಿಖಿತ್‌ ಶೆಟ್ಟಿ ನಿರ್ಮಾಣ ಹಾಗೂ ನಟನೆಯ ʼಫುಲ್ ಮೀಲ್ಸ್ʼ ಚಿತ್ರ ಈ ವಾರ ನವೆಂಬರ್ 21ಕ್ಕೆ ತೆರೆಗೆ ಬರಲು ಸಿದ್ಧವಾಗಿದೆ. ಖುಷಿ ರವಿ, ತೇಜಸ್ವಿನಿ ಶರ್ಮ ನಾಯಕಿಯರಾಗಿ ನಟಿಸಿರುವ ಈ ಚಿತ್ರವನ್ನು ಎನ್.ವಿನಾಯಕ ನಿರ್ದೇಶಿಸಿದ್ದಾರೆ.

SSMB29: ಕೊಟ್ಟ ಮಾತಿಗೆ ತಪ್ಪಿ ನಡೆಯದ ರಾಜಮೌಳಿ; 'ವಾರಣಾಸಿ' ಚಿತ್ರಕ್ಕಿದೆ 15 ವರ್ಷಗಳ ಹಿಂದಿನ ಒಪ್ಪಂದದ ಇತಿಹಾಸ!

Rajamouli: 'ವಾರಣಾಸಿ' ಚಿತ್ರಕ್ಕಾಗಿ 15 ವರ್ಷಗಳ ಹಿಂದೆಯೇ ಆಗಿತ್ತು ಒಪ್ಪಂದ

SSMB29: ರಾಜಮೌಳಿ ಅವರು ತಮ್ಮ ಮೆಗಾ ಪ್ರಾಜೆಕ್ಟ್ 'ವಾರಣಾಸಿ' ಸಿನಿಮಾ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಸಾವಿರ ಕೋಟಿ ಬಜೆಟ್‌ನ ಈ ಚಿತ್ರದ ಫಸ್ಟ್‌ ಲುಕ್ ರಿಲೀಸ್ ಆಗಿದ್ದು, ಇದರ ಹಿಂದೆ 15 ವರ್ಷಗಳ ಹಳೆಯ ಕಥೆಯಿದೆ. ಈ ಸಿನಿಮಾ ಮಾಡಲು ನಿರ್ಮಾಪಕ ಡಾ. ಕೆ. ಎಲ್. ನಾರಾಯಣ ಅವರಿಂದ 2010ರ ಆಸುಪಾಸಿನಲ್ಲಿ ರಾಜಮೌಳಿ ಅಡ್ವಾನ್ಸ್ ಪಡೆದು ಕಮಿಟ್ ಆಗಿದ್ದರು.

Mango Pachcha: ಸಂಕ್ರಾಂತಿಗೊಂದು ಕನ್ನಡ ಸಿನಿಮಾ; 'ಕಿಚ್ಚ' ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಫಿಕ್ಸ್

ʻಕಿಚ್ಚʼ ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ರಿಲೀಸ್ ಡೇಟ್ ಫಿಕ್ಸ್!

Mango Pachcha Movie Release On January 15th: ಸುದೀಪ್‌ ಅಕ್ಕನ ಮಗ ಸಂಚಿತ್‌ ಸಂಜೀವ್‌ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾವು 2026ರ ಸಂಕ್ರಾಂತಿ ಹಬ್ಬದಂದು, ಅಂದರೆ ಜನವರಿ 15ಕ್ಕೆ ಬಿಡುಗಡೆಯಾಗಲಿದೆ. ಸಂಚಿತ್ ನಟನೆಯ ಈ ಚೊಚ್ಚಲ ಚಿತ್ರವು ಈಗಾಗಲೇ ಟೀಸರ್ ಮತ್ತು ರೆಟ್ರೋ ಲುಕ್‌ನಿಂದ ನಿರೀಕ್ಷೆ ಹೆಚ್ಚಿಸಿದೆ.

Devil Movie: 'ಡೆವಿಲ್' ಮೂರನೇ ಸಾಂಗ್‌ ಔಟ್‌! ದರ್ಶನ್‌ ಖದರ್‌ಗೆ ಫಿದಾ ಆದ್ರು ಫ್ಯಾನ್ಸ್‌

'ಡೆವಿಲ್' ಮೂರನೇ ಸಾಂಗ್‌ ಔಟ್‌! ದರ್ಶನ್‌ ಖದರ್‌ಗೆ ಫಿದಾ ಆದ್ರು ಫ್ಯಾನ್ಸ್‌

Alohomora: ದರ್ಶನ್‌ ಖದರ್‌ಗೆ ಫ್ಯಾನ್ಸ್‌ ಅಂತೂ ಫಿದಾ ಆಗಿದ್ದಾರೆ. ಈ ಹಾಡಿನಲ್ಲಿ ಹಲವು ಡ್ಯಾನ್ಸರ್ಸ್‌ ಜೊತೆಗೆ ದರ್ಶನ್ ಡ್ಯಾನ್ಸ್ ಮಾಡಿದ್ದಾರೆ. ಡೆವಿಲ್ ಚಿತ್ರದ ಎರಡು ಹಾಡು ರಿಲೀಸ್ ಆಗಿವೆ. ಇದ್ರೇ ನೆಮ್ದಿಯಾಗ್ ಇರ್ಬೇಕ್ ಅನ್ನೋ ಹಾಡು ಮೊದಲು ರಿಲೀಸ್ ಆಗಿದೆ. ಒಂದೆ ಒಂದು ಸಲ ಅನ್ನೋದು ಎರಡನೇ ಸಾಂಗ್ ಆಗಿದೆ. ಪ್ರಕಾಶ್ ನಿರ್ದೇಶನದ 'ಡೆವಿಲ್' ಸಿನಿಮಾ ಡಿಸೆಂಬರ್ 12ರಂದು ತೆರೆಗೆ ಬರಲಿದೆ. ಮಹೇಶ್ ಮಂಜ್ರೇಕರ್, ಅಚ್ಯುತ್‌ ಕುಮಾರ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಈ ಹಿಂದೆ 'ತಾರಕ್' ಚಿತ್ರದಲ್ಲಿ ದರ್ಶನ್- ಪ್ರಕಾಶ್ ಒಟ್ಟಿಗೆ ಕೆಲಸ ಮಾಡಿ ಗೆದ್ದಿದ್ದರು.

Varanasi Movie:  ರಾಜಮೌಳಿಯನ್ನು ಹೊಗಳಿ, ಕುಂಭ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಪೃಥ್ವಿರಾಜ್

ʻಕುಂಭʼ ಪಾತ್ರದ ಬಗ್ಗೆ ನಟ ಪೃಥ್ವಿರಾಜ್ ಹೇಳಿದ್ದೇನು?

Prithviraj Sukumaran: ಮಹೇಶ್ ಬಾಬು ಈ ಚಿತ್ರದಲ್ಲಿ ಕುಂಭ ಪಾತ್ರದಲ್ಲಿ ನಟಿಸಿದ್ದಾರೆ, ಪ್ರಿಯಾಂಕಾ ಚೋಪ್ರಾ ಮಂದಾಕಿನಿ ಪಾತ್ರದಲ್ಲಿ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರತಿಸ್ಪರ್ಧಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು 2027 ರಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.ಈ ಚಿತ್ರದ ಫಸ್ಟ್‌ ಲುಕ್‌ನಲ್ಲಿ ನಂದಿಯನ್ನು ಏರಿ, ತ್ರಿಶೂಲ ಹಿಡಿದು ಮಹೇಶ್‌ ಬಾಬು ಕಾಣಿಸಿಕೊಂಡಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಗ್ಲೋಬ್ ಟ್ರಾಟರ್ ಕಾರ್ಯಕ್ರಮದಲ್ಲಿ ಪೃಥ್ವಿರಾಜ್ ಹಾಜರಿದ್ದರು. ರಾಜಮೌಳಿ ಅವರೊಂದಿಗಿನ ತಮ್ಮ ಸಹಯೋಗದ ಬಗ್ಗೆ ಮಾತನಾಡಿದರು.

K Ramp OTT: ರೊಮ್ಯಾಂಟಿಕ್‌ ಕಾಮಿಡಿ ಮೂವಿ 'ಕೆ-ರ‍್ಯಾಂಪ್' ಒಟಿಟಿ ಎಂಟ್ರಿ ಯಾವಾಗ?

ರೊಮ್ಯಾಂಟಿಕ್‌ ಕಾಮಿಡಿ ಮೂವಿ 'ಕೆ-ರ‍್ಯಾಂಪ್' ಒಟಿಟಿ ಎಂಟ್ರಿ ಯಾವಾಗ?

ದೀಪಾವಳಿ ವಾರಾಂತ್ಯದಲ್ಲಿ ಅಕ್ಟೋಬರ್ 18, 2025 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರವು ಇಂದು ನವೆಂಬರ್ 15, 2025 ರಂದು ಡಿಜಿಟಲ್ ಪ್ರೀಮಿಯರ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಯನ್ನು ಪಡೆದ ನಂತರ, ಚಿತ್ರವು ಮನೆಯಲ್ಲಿ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ.

Marutha Movie: ಅದ್ಧೂರಿಯಾಗಿ ನೆರವೇರಿತು ʼಮಾರುತʼ ಚಿತ್ರದ ಪ್ರೀ ರಿಲೀಸ್ ಇವೆಂಟ್; ನ.21ಕ್ಕೆ ಸಿನಿಮಾ ರಿಲೀಸ್‌

ಅದ್ಧೂರಿಯಾಗಿ ನೆರವೇರಿತು ʼಮಾರುತʼ ಚಿತ್ರದ ಪ್ರೀ ರಿಲೀಸ್ ಇವೆಂಟ್

Sandalwood News: ಡಾ.ಎಸ್. ನಾರಾಯಣ್ ನಿರ್ದೇಶನದ, ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ʼಮಾರುತʼ ಚಿತ್ರದ ಪ್ರೀ ರಿಲೀಸ್ ಇವೆಂಟ್ ಅದ್ಧೂರಿಯಾಗಿ ನೆರವೇರಿತು. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಥಾಹಂದರ ಹೊಂದಿರುವ ಈ ಚಿತ್ರ ನವೆಂಬರ್ 21ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

SSMB29: ರಾಜಮೌಳಿ - ಮಹೇಶ್‌ ಬಾಬು ಸಿನಿಮಾಕ್ಕೆ ಟೈಟಲ್‌ ಫಿಕ್ಸ್;‌ ಫಸ್ಟ್‌ ಲುಕ್‌ ಹೇಗಿದೆ? ಈ ಚಿತ್ರ ರಿಲೀಸ್‌ ಆಗೋದ್ಯಾವಾಗ?

SSMB29: ಮಹೇಶ್‌ ಬಾಬು - ರಾಜಮೌಳಿ ಸಿನಿಮಾದ ಟೈಟಲ್‌ ಘೋಷಣೆ!

SSMB29: ಮಹೇಶ್‌ ಬಾಬು ಅವರ ಮುಂದಿನ ಸಿನಿಮಾದ ಟೈಟಲ್ ʻವಾರಣಾಸಿʼ ಎಂದು ಹೈದರಾಬಾದ್‌ನ ʻಗ್ಲೋಬ್ ಟ್ರೋಟರ್ʼ ಈವೆಂಟ್‌ನಲ್ಲಿ ಘೋಷಣೆಯಾಗಿದೆ. ರಾಜಮೌಳಿ ನಿರ್ದೇಶನದ ಈ ಚಿತ್ರಕ್ಕೆ ಮಹೇಶ್‌ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ. ಪೃಥ್ವಿರಾಜ್ ಸುಕುಮಾರನ್ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Bigg Boss 12: ʻಸುಮ್‌ ಸುಮ್ನೆ ಜಗಳ ಮಾಡೋಣ, ಮಾತು ಬಿಡೋಣʼ; ಜಾಹ್ನವಿ - ಅಶ್ವಿನಿ ಗೌಡಗೆ ಕಿಚ್ಚನ ಕ್ಲಾಸ್!‌

ಮೈಕ್‌ ಕೆಳಗಿಟ್ಟು ಪ್ಲ್ಯಾನ್‌ ಮಾಡಿದ ಜಾಹ್ನವಿ-ಅಶ್ವಿನಿಗೆ ಕಿಚ್ಚನ ಕ್ಲಾಸ್‌

Bigg Boss Kannada 12: ‌ಬಿಗ್‌ ಬಾಸ್‌ ಮನೆಯ ಈ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಜಾಹ್ನವಿ ಮತ್ತು ಅಶ್ವಿನಿ ಗೌಡ 'ಸುಮ್ ಸುಮ್ನೆ ಜಗಳ ಮಾಡೋಣ' ಎಂದು ಮೈಕ್ ತೆಗೆದಿಟ್ಟು ಪ್ಲಾನ್ ಮಾಡಿರುವುದು ಬಯಲಾಗಿದೆ. ಇವರಿಗೆ ಕಿಚ್ಚ ಸುದೀಪ್‌ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

Rachita Ram: 8 ವರ್ಷಗಳ ಬಳಿಕ ಧ್ರುವ ಸರ್ಜಾಗೆ ಜೋಡಿಯಾಗ್ತಾರೆ ನಟಿ ರಚಿತಾ ರಾಮ್! ಯಾವ ಸಿನಿಮಾ, ಡೈರೆಕ್ಟರ್‌ ಯಾರು?

ಧ್ರುವ ಸರ್ಜಾ ಹೊಸ ಸಿನಿಮಾಗೆ ರಚಿತಾ ರಾಮ್ ನಾಯಕಿ?

Rachita Ram New Movie: 'ಆಕ್ಷನ್‌ ಪ್ರಿನ್ಸ್‌' ಧ್ರುವ ಸರ್ಜಾ ಮತ್ತು ರಚಿತಾ ರಾಮ್‌ ಅವರು 8 ವರ್ಷಗಳ ಬಳಿಕ ಮತ್ತೆ ಒಂದಾಗುವ ಸಾಧ್ಯತೆ ಇದೆ. 2017ರಲ್ಲಿ ತೆರೆಕಂಡ 'ಭರ್ಜರಿ' ಸಿನಿಮಾದ ಬಳಿಕ ಈ ಜೋಡಿ ಈಗ ಹೊಸ ಸಿನಿಮಾಕ್ಕೆ ಸಿದ್ಧವಾಗುತ್ತಿದೆ. ಈ ಚಿತ್ರವನ್ನು ʻಕೆರೆಬೇಟೆʼ ಖ್ಯಾತಿಯ ರಾಜ್‌ ಗುರು ನಿರ್ದೇಶಿಸಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಬೇಕಿದೆ.

Love OTP: ʻಎಲ್ರೂ ಸಿನಿಮಾ ಚೆನ್ನಾಗಿದೆ ಅಂತಾರೆ, ಆದ್ರೆ ಜನರು ಬರ್ತಿಲ್ಲʼ; ಲೈವ್‌ನಲ್ಲೇ ಕಣ್ಣೀರಿಟ್ಟ ನಟ ಅನೀಶ್‌

ಜನರು ʻಲವ್‌ OTPʼ ಸಿನಿಮಾ ನೋಡ್ತಿಲ್ಲ ಎಂದು ಅನೀಶ್‌ ಕಣ್ಣೀರು

Love OTP Kannada Movie: ಅನೀಶ್‌ ತೇಜೇಶ್ವರ್‌ ನಟಿಸಿ, ನಿರ್ದೇಶನ ಮಾಡಿರುವ ʻಲವ್‌ ಓಟಿಪಿʼ ಸಿನಿಮಾಕ್ಕೆ ಉತ್ತಮ ವಿಮರ್ಶೆ ಸಿಕ್ಕಿದ್ದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಈ ಬಗ್ಗೆ ಅನೀಶ್‌ ತೇಜೇಶ್ವರ್‌ ನೊಂದುಕೊಂಡಿದ್ದಾರೆ. ನವೆಂಬರ್ 14 ರಂದು ತೆರೆಕಂಡ ಈ ಚಿತ್ರಕ್ಕೆ ವಿಮರ್ಶಕರಿಂದ, ಬುಕ್ ಮೈ ಶೋನಲ್ಲಿ ಉತ್ತಮ ರೇಟಿಂಗ್ ಸಿಕ್ಕಿದೆ. ಬೇಸರಗೊಂಡಿರುವ ಅನೀಶ್ ಲೈವ್‌ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.

ಬಾಲಿವುಡ್ ನಟ ರಾಜ್ ಕುಮಾರ್ ರಾವ್‌ ದಂಪತಿಗೆ ಹೆಣ್ಣು ಮಗು-ಸ್ಪೆಷಲ್‌ ಪೋಸ್ಟ್ ವೈರಲ್

ಬಾಲಿವುಡ್ ನಟ ರಾಜ್ ಕುಮಾರ್ ರಾವ್‌ ದಂಪತಿಗೆ ಹೆಣ್ಣು ಮಗು!

Rajkummar Rao: ರಾಜ್ ಕುಮಾರ್ ರಾವ್ ಅವರು ಪತ್ರಲೇಖಾ (Patralekhaa) ಅವರನ್ನು ಪ್ರೀತಿಸಿ ವಿವಾಹವಾಗಿದ್ದಾರೆ. ನವೆಂಬರ್ 15ಕ್ಕೆ ಈ ಜೋಡಿ ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮಾಚರಣೆಯನ್ನು ಸೆಲಬ್ರೇಟ್ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಈ ದಂಪತಿ ಹೊಸ ವಿಚಾರ ರಿವಿಲ್ ಮಾಡಿ ಗುಡ್ ನ್ಯೂಸ್ ಒಂದನ್ನು ನೀಡಿದೆ.

BBK 12: ಈ ವಾರ ಎಂಟು ಮಂದಿ ನಾಮಿನೇಟ್!‌ ʻಬಿಗ್‌ ಬಾಸ್‌ʼ ಮನೆಯಿಂದ ಯಾರಿಗೆ ಸಿಗಲಿದೆ ಗೇಟ್‌ ಪಾಸ್?

ಈ ವಾರ ʻಬಿಗ್‌ ಬಾಸ್‌ʼ ಮನೆಯಿಂದ ಯಾರಿಗೆ ಸಿಗಲಿದೆ ಗೇಟ್‌ ಪಾಸ್?‌

ಬಿಗ್‌ ಬಾಸ್‌ ಮನೆಯಲ್ಲಿ ಈ ವಾರ ಬರೋಬ್ಬರಿ 8 ಮಂದಿ ಪ್ರಬಲ ಸ್ಪರ್ಧಿಗಳು ನಾಮಿನೇಟ್‌ ಆಗಿದ್ದಾರೆ. ಕ್ಯಾಪ್ಟನ್‌ ಮಾಳು ನಿಪನಾಳ್ ನಾಮಿನೇಟ್ ಮಾಡಿದವರಲ್ಲಿ ಅಶ್ವಿನಿ, ಜಾಹ್ನವಿ, ರಕ್ಷಿತಾ, ರಘು, ರಾಶಿಕಾ, ಕಾಕ್ರೋಚ್ ಸುಧಿ ಮುಂತಾದವರು ಇದ್ದಾರೆ.

The Girlfriend OTT : ರಶ್ಮಿಕಾ ಮಂದಣ್ಣ ಅಭಿನಯದ 'ದಿ ಗರ್ಲ್​​​ಫ್ರೆಂಡ್​' ಒಟಿಟಿ ಎಂಟ್ರಿ ಯಾವಾಗ?

ರಶ್ಮಿಕಾ ಮಂದಣ್ಣ ಅಭಿನಯದ 'ದಿ ಗರ್ಲ್​​​ಫ್ರೆಂಡ್​' ಒಟಿಟಿ ಎಂಟ್ರಿ ಯಾವಾಗ?

ತೆಲುಗು ರೊಮ್ಯಾಂಟಿಕ್‌ ಸಿನಿಮಾ 'ದಿ ಗರ್ಲ್‌ಫ್ರೆಂಡ್' (The Girlfriend) ಬಿಡುಗಡೆಯಾದ ಸುಮಾರು ಒಂದು ವಾರದ ನಂತರವೂ ಬಾಕ್ಸ್ ಆಫೀಸ್‌ನಲ್ಲಿ (Box Office) ಪ್ರದರ್ಶನ ಮುಂದುವರಿಸಿದೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ದೀಕ್ಷಿತ್ ಶೆಟ್ಟಿ (Dheekshith Shetty) ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, ಅನು ಇಮ್ಯಾನುಯೆಲ್, ರಾಹುಲ್ ರವೀಂದ್ರನ್, ರಾವ್ ರಮೇಶ್ ಮತ್ತು ರೋಹಿಣಿ ಮೊಲ್ಲೇಟಿ ಬೆಂಬಲ ನೀಡಿದ್ದಾರೆ. ಕೃಷ್ಣನ್ ವಸಂತ್ ಕ್ಯಾಮರಾ ವರ್ಕ್​​, ಚೋಟಾ ಕೆ.ಪ್ರಸಾದ್ ಸಂಕಲನ ಈ ಸಿನಿಮಾಗಿದೆ.

Globe Trotter OTT: ಒಟಿಟಿಯಲ್ಲಿ ʻGlobe Trotterʼ ಈವೆಂಟ್! ರಾಜಮೌಳಿ - ಮಹೇಶ್‌ ಬಾಬು ಸಿನಿಮಾ ಕಾರ್ಯಕ್ರಮ ಲೈವ್‌ ಸ್ಟ್ರೀಮಿಂಗ್‌ ಎಲ್ಲಿ? ಯಾವಾಗ?

ಒಟಿಟಿಯಲ್ಲಿ ʻGlobe Trotterʼ ಈವೆಂಟ್! ಲೈವ್‌ ಸ್ಟ್ರೀಮಿಂಗ್‌ ಎಲ್ಲಿ?

ಮಹೇಶ್ ಬಾಬು, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ನಟಿಸಿರುವ ಈ (Globe Trotter ) ಮುಂಬರುವ ಚಿತ್ರವು ಭಾರತೀಯ ಚಿತ್ರರಂಗದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಲಿದೆ. ಕುಂಭ (kumbha) ಪಾತ್ರದಲ್ಲಿ ಪೃಥ್ವಿರಾಜ್ ಅವರ ಮೊದಲ ಲುಕ್‌ ಬಿಡುಗಡೆಯಾದ ನಂತರ ಸಿನಿಪ್ರಿಯರಲ್ಲಿ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ. ಎಸ್.ಎಸ್. ರಾಜಮೌಳಿ ನೇತೃತ್ವದಲ್ಲಿ ಮತ್ತು ಸೂಪರ್‌ಸ್ಟಾರ್ ಮಹೇಶ್ ಬಾಬು (Mahesh Babu) ಅವರ ಅಭಿಮಾನಿಗಳಿಂದ ನಡೆಸಲ್ಪಡುವ ಕಾರ್ಯಕ್ರಮವು ನವೆಂಬರ್ 15 ರಂದು ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಲಿದೆ.

Kamini Kaushal: ಬಾಲಿವುಡ್ ಹಿರಿಯ ನಟಿ ಕಾಮಿನಿ ಕೌಶಲ್  98ನೇ ವಯಸ್ಸಿಗೆ ನಿಧನ

ಬಾಲಿವುಡ್ ಹಿರಿಯ ನಟಿ ಕಾಮಿನಿ ಕೌಶಲ್ 98ನೇ ವಯಸ್ಸಿಗೆ ನಿಧನ

ನಟಿ ಕಾಮಿನಿ ಕೌಶಲ್ ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನು (Bollywood) ಆಳಿದವರು. ಹಿಂದಿ ಚಿತ್ರರಂಗದಲ್ಲಿ ಅತ್ಯಂತ ಗೌರವಾನ್ವಿತ ಮತ್ತು ಪ್ರೀತಿಯ ನಟಿಯರಲ್ಲಿ ಒಬ್ಬರಾಗಿದ್ದರು. ದಿಲೀಪ್ ಕುಮಾರ್ ಮತ್ತು ರಾಜ್ ಕಪೂರ್ ಅವರಂತಹ ಹಿರಿಯ ನಟರೊಂದಿಗೆ ಕೆಲಸ ಮಾಡಿದರು. ಶಾರುಖ್ ಖಾನ್ ಅವರ ಚೆನ್ನೈ ಎಕ್ಸ್‌ಪ್ರೆಸ್, 2019 ರಲ್ಲಿ ಕಬೀರ್ ಸಿಂಗ್ ಮತ್ತು 2022 ರಲ್ಲಿ ಲಾಲ್ ಸಿಂಗ್ ಚಡ್ಡಾ ಚಿತ್ರಗಳಲ್ಲಿ ಕಾಣಿಸಿಕೊಂಡರು.

Nishaanchi OTT: ಅನುರಾಗ್ ಕಶ್ಯಪ್ ನಿರ್ದೇಶನದ ʻನಿಶಾಂಚಿʼ ಸಿನಿಮಾ! 2 ಪಾರ್ಟ್‌ಗಳು ಏಕಕಾಲಕ್ಕೆ ಸ್ಟ್ರೀಮಿಂಗ್‌, ಎಲ್ಲಿ?

ಅನುರಾಗ್ ಕಶ್ಯಪ್ ನಿರ್ದೇಶನದ ʻನಿಶಾಂಚಿʼ! ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌

ಅನುರಾಗ್ ಕಶ್ಯಪ್ (Anurag Kashyap) ಅವರ ಎರಡು ಭಾಗಗಳ ಕ್ರೈಂ ಡ್ರಾಮ ಮೂವಿ, 'ನಿಶಾಂಚಿ' (Nishaanchi)ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಈ ಚಿತ್ರದಲ್ಲಿ ಐಶ್ವರ್ಯ ಠಾಕ್ರೆ ಮತ್ತು ವೇದಿಕಾ ಪಿಂಟೊ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿಶಾಂಚಿ ಸೆಪ್ಟೆಂಬರ್ 19, 2025 ರಂದು ಬಿಡುಗಡೆಯಾಯಿತು (Release). ಮಿಶ್ರ ವಿಮರ್ಶೆಗಳನ್ನು ಪಡೆದುಕೊಂಡಿತ್ತು. ಇದರಲ್ಲಿ ಮೊಹಮ್ಮದ್ ಜೀಶನ್ ಅಯ್ಯೂಬ್ ಮತ್ತು ಕುಮುದ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Saalumarada Thimmakka Death: ʻವೃಕ್ಷಮಾತೆʼ ಸಾಲುಮರದ ತಿಮ್ಮಕ್ಕ ನಿಧನಕ್ಕೆ ಕಂಬನಿ ಮಿಡಿದ ಡಿಸಿಎಂ ಪವನ್‌ ಕಲ್ಯಾಣ್‌

ಸಾಲುಮರದ ತಿಮ್ಮಕ್ಕ ನಿಧನಕ್ಕೆ ನಟ ಪವನ್‌ ಕಲ್ಯಾಣ್‌ ಸಂತಾಪ

ಸಾಲುಮರದ ತಿಮ್ಮಕ್ಕ ಅವರು 114 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ನಿಧನಕ್ಕೆ ಆಂಧ್ರ ಪ್ರದೇಶದ ಡಿಸಿಎಂ, ನಟ ಪವನ್‌ ಕಲ್ಯಾಣ್‌ ಅವರು ಟ್ವೀಟ್‌ ಮೂಲಕ ಸಂತಾಪ ಸೂಚಿಸಿದ್ದಾರೆ. 'ವೃಕ್ಷಮಾತೆ' ತಿಮ್ಮಕ್ಕ ಅವರು ನಮ್ಮೆಲ್ಲರಿಗೂ ದೊಡ್ಡ ಸ್ಫೂರ್ತಿ ಎಂದಿದ್ದಾರೆ.

Anirudh Ravichander : ಸಂಗೀತ ನಿರ್ದೇಶಕ ಅನಿರುದ್ದ್ ಜೊತೆಗೆ ಕಾವ್ಯಾ ಮಾರನ್ ಡೇಟಿಂಗ್‌? ವಿಡಿಯೊ ವೈರಲ್‌

ಸಂಗೀತ ನಿರ್ದೇಶಕ ಅನಿರುದ್ದ್ ಜೊತೆಗೆ ಕಾವ್ಯಾ ಮಾರನ್ ಡೇಟಿಂಗ್‌?

ಭಾರತದ ಟಾಪ್ ಉದ್ಯಮಿಗಳಲ್ಲಿ ಒಬ್ಬರಾಗಿರುವ ಕಲಾನಿಧಿ ಮಾರನ್ ಅವರ ಪುತ್ರಿ ಕಾವ್ಯಾ ಮಾರನ್ (Kavya Maran). ಸನ್​​ರೈಸಸ್ ಹೈದರಾಬಾದ್ ತಂಡದ ಮಾಲಕಿ ಆಗಿರುವ ಜೊತೆಗೆ ಇನ್ನೂ ಹಲವಾರು ಉದ್ಯಮಗಳನ್ನು ಅವರು ನಿಭಾಯಿಸುತ್ತಿದ್ದಾರೆ. ಇದೇ ವರ್ಷ ಜೂನ್ ತಿಂಗಳಲ್ಲಿ ಇವರಿಬ್ಬರ ಮದುವೆ (Marriage) ಸುದ್ದಿ ಹರಿದಾಡಿತ್ತು. ಆಗ ಟ್ವೀಟ್ ಮಾಡಿದ್ದ ಅನಿರುದ್ಧ್ ಅದೆಲ್ಲ ಸುಳ್ಳು ಎಂದಿದ್ದರು. ನ್ಯೂಯಾರ್ಕ್ ಬೀದಿಗಳಲ್ಲಿ ಒಟ್ಟಿಗೆ ಅಡ್ಡಾಡುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ. ಈ ಜೋಡಿಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ಹರಿದಾಡುತ್ತಿವೆ.

'ವಾರ್ತೆಗಳು.. ಓದುತ್ತಿರುವವರು ಶಂಕರ್‌ನಾಗ್' ಸಿನಿಮಾಕ್ಕೆ ಹೀರೋ ಆದ ನಾಗಶೇಖರ್

ನಾಗಶೇಖರ್ ಈಗ ಹೀರೋ ಕಮ್‌ ಮ್ಯೂಸಿಕ್‌ ಡೈರೆಕ್ಟರ್!

ನಾಗಶೇಖರ್ ಅವರು ನಿರ್ದೇಶನಕ್ಕೆ ಸ್ವಲ್ಪ ವಿರಾಮ ನೀಡಿ 'ವಾರ್ತೆಗಳು ಓದುತ್ತಿರುವವರು ಶಂಕರ್‌ನಾಗ್' ಸಿನಿಮಾದ ಮೂಲಕ ಹೀರೋ ಆಗಿ ಬಡ್ತಿ ಪಡೆದುಕೊಂಡಿದ್ಧಾರೆ. ಅವರ ಹುಟ್ಟುಹಬ್ಬದಂದು (ನ. 11) ಈ ವಿಭಿನ್ನ ಟೈಟಲ್‌ನ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ಇದೇ ಚಿತ್ರಕ್ಕೆ ಸಂಗೀತ ನಿರ್ದೇಶನವನ್ನೂ ಮಾಡುವ ಮೂಲಕ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ ನಾಗಶೇಖರ್.‌

BBK 12: ಕ್ಯಾಪ್ಟನ್‌ ಪಟ್ಟಕ್ಕೇರಿದ್ದ ಮಾಳು ನಿಪನಾಳ್‌ ಈಗ ʻಜೈಲುʼ ಹಕ್ಕಿ!  ತಪ್ಪಾಗಿದ್ದು ಎಲ್ಲಿ? ‌

BBK 12: ಮಾಳುಗೆ ʻಕಳಪೆʼ‌ ಪಟ್ಟ ನೀಡಿದ ʻಬಿಗ್ ಬಾಸ್‌ʼ ಸ್ಪರ್ಧಿಗಳು!

ಬಿಗ್‌ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್‌ ಆಗಿದ್ದ ಮಾಳು ನಿಪನಾಳ್‌ ಅವರು ಈಗ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಕ್ಯಾಪ್ಟನ್‌ ಆಗಿದ್ದರಿಂದ ಅವರಿಗೆ ಸಿಕ್ಕಿದ್ದ ನಾಮಿನೇಟ್‌ ಮಾಡುವ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲೆ ಬಂದಿದೆ.

ಹಿರಿಯ ನಟ ಧರ್ಮೇಂದ್ರ ಫ್ಯಾಮಿಲಿಯ ಖಾಸಗಿತನಕ್ಕೆ ಧಕ್ಕೆ; ಆಸ್ಪತ್ರೆ ಸಿಬ್ಬಂದಿ ಅರೆಸ್ಟ್!‌

ಧರ್ಮೇಂದ್ರ ಫ್ಯಾಮಿಲಿಯ ಖಾಸಗಿ ಕ್ಷಣಗಳ ವಿಡಿಯೋ ರೆಕಾರ್ಡ್; ಸಿಬ್ಬಂದಿ ಬಂಧನ!

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಅವರ ಐಸಿಯು ವಿಡಿಯೋ ವೈರಲ್‌ ಆದ ನಂತರ, ಕುಟುಂಬದ ಖಾಸಗಿತನಕ್ಕೆ ಧಕ್ಕೆ ತಂದ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಧರ್ಮೇಂದ್ರ ಅವರನ್ನು ನವೆಂಬರ್‌ 13ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಮಾಡಿ ಮನೆಗೆ ಕರೆತರಲಾಗಿದೆ.

Loading...