ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಗಾಯಕ ಕುಮಾರ್ ಸಾನು; 50 ಕೋಟಿ ರುಪಾಯಿ ಪರಿಹಾರ ಕೋರಿ ಅರ್ಜಿ ಸಲ್ಲಿಕೆ

ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕುಮಾರ್ ಸಾನು

Kumar Sanu files defamation case: ಪ್ರಸಿದ್ಧ ಗಾಯಕ ಕುಮಾರ್ ಸಾನು ತಮ್ಮ ಮಾಜಿ ಪತ್ನಿಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ಹೂಡಿದ್ದಾರೆ. ಅವರು ಈ ಮೊಕದ್ದಮೆಯಲ್ಲಿ 50 ಕೋಟಿ ರುಪಾಯಿ ಪರಿಹಾರ ಕೇಳಿದ್ದಾರೆ. ಮಾಜಿ ಪತ್ನಿಯ ಆರೋಪವು ದುರುದ್ದೇಶಪೂರಿತ ಮತ್ತು ಖ್ಯಾತಿಗೆ ಗಂಭೀರ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

The Raja Saab Movie ಇವೆಂಟ್‌ನಲ್ಲಿ ತಳ್ಳಾಟ; ಜನಸಂದಣಿಯಲ್ಲಿ ಪರದಾಡಿದ ನಟಿ ನಿಧಿ ಅಗರ್ವಾಲ್‌, ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ವಿರುದ್ಧ?

The Raja Saab: ಜನಸಂದಣಿಯಲ್ಲಿ ಪರದಾಡಿದ ನಿಧಿ ಅಗರ್ವಾಲ್‌! ಮುಂದೇನಾಯ್ತು?

The Raja Saab Event Chaos: ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ನಡೆದ 'ದಿ ರಾಜಾ ಸಾಬ್' ಚಿತ್ರದ ಎರಡನೇ ಹಾಡು 'ಸಹನಾ ಸಹನಾ' ಬಿಡುಗಡೆ ಸಮಾರಂಭದಲ್ಲಿ ಅಭಿಮಾನಿಗಳು ಅತಿರೇಕದ ವರ್ತನೆ ಭಾರಿ ಸದ್ದು ಮಾಡಿದೆ. ನಟಿ ನಿಧಿ ಅಗರ್ವಾಲ್ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಮುಗಿಬಿದ್ದ ಪರಿಣಾಮ ತೀವ್ರ ತಳ್ಳಾಟ ನಡೆದಿದೆ. ಘಟನೆ ನಂತರ ಪೊಲೀಸರು ಕೇಸ್‌ ದಾಖಲು ಮಾಡಿದ್ದಾರೆ.

ದೊಡ್ಡವರಿಗೆ ಟಕ್ಕರ್‌ ಕೊಡುವಂತಹ ಮಕ್ಕಳು ನಿಮ್ಮ ಮನೆಯಲ್ಲಿದ್ದಾರಾ?  ಹಾಗಿದ್ರೆ ಬೆಂಗಳೂರಿನಲ್ಲಿ ನಡೆಯುವ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಆಡಿಷನ್‌ಗೆ ಬನ್ನಿ!

ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಆಡಿಷನ್‌ ಎಲ್ಲಿ? ಯಾವಾಗ?

Gicchi Gili Gili Juniors Audition: ಕಲರ್ಸ್‌ ಕನ್ನಡ ವಾಹಿನಿಯ ಯಶಸ್ವಿ ಶೋ 'ಗಿಚ್ಚಿ ಗಿಲಿಗಿಲಿ' ಈಗ ಮಕ್ಕಳಿಗಾಗಿ ವಿಶೇಷ ಆವೃತ್ತಿಯನ್ನು ತರುತ್ತಿದೆ. 'ಗಿಚ್ಚಿ ಗಿಲಿಗಿಲಿ ಜೂನಿಯರ್ಸ್' ಹೆಸರಿನಲ್ಲಿ ಆರಂಭವಾಗಲಿರುವ ಈ ರಿಯಾಲಿಟಿ ಶೋಗಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 21ರಂದು ಆಡಿಷನ್ ನಡೆಯಲಿದೆ.

Malayalam OTT: ಕುತೂಹಲ ಕೆರಳಿಸುವ ಈ ಮಲಯಾಳಂ ಸಿನಿಮಾಗಳು ಒಟಿಟಿಗೆ ಎಂಟ್ರಿ; ಸ್ಟ್ರೀಮಿಂಗ್‌ ಎಲ್ಲಿ?

ಕುತೂಹಲ ಕೆರಳಿಸುವ ಈ ಮಲಯಾಳಂ ಸಿನಿಮಾಗಳು ಒಟಿಟಿಗೆ ಎಂಟ್ರಿ ಯಾವಾಗ?

Malayalam cinema lights up OTT : ಮಲಯಾಳಂ ಸಿನಿಮಾ ಈ ವಾರ ಮೂರು ಹೊಸ ಚಿತ್ರಗಳು ಬಿಡುಗಡೆಯಾಗಿದ್ದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಎಂಟ್ರಿ ಕೊಡಲಿದೆ. ಈ ವಾರವೂ OTT ಅಭಿಮಾನಿಗಳಿಗೆ ಹಲವು ವಿಷಯಗಳು ಕಾದಿವೆ. ಅದು ಮಮ್ಮುಟ್ಟಿ ಅವರ ಮನಮುಟ್ಟುವ ತನಿಖಾ ಸರಣಿಯಾಗಿರಲಿ ಅಥವಾ ನಿವಿನ್ ಪೌಲಿ ಅವರ ಸಾಮಾಜಿಕವಾಗಿ ಪ್ರಸ್ತುತವಾದ ಕಥೆಯಾಗಿರಲಿ, ಎಲ್ಲರಿಗೂ ಒಂದು ರಸದೌತಣ ಇದೆ.

45 ಚಿತ್ರದ ವಿತರಣಾ ಹಕ್ಕುಗಳನ್ನು ಖರೀದಿಸಿದ ಭಾರತದ ಖ್ಯಾತ ಪ್ರೊಡಕ್ಷನ್‌ ಸಂಸ್ಥೆಗಳು; ಶಿವಣ್ಣ- ಉಪ್ಪಿ ಚಿತ್ರಕ್ಕೆ ವಿದೇಶದಲ್ಲಿ ಹೇಗಿದೆ ರೆಸ್ಪಾನ್ಸ್?

'45' ಚಿತ್ರದ ಐದು ಭಾಷೆಯ ವಿತರಣಾ ಹಕ್ಕುಗಳು ಯಾರ ಪಾಲಾಯ್ತು?

45 Movie Update: ಅರ್ಜುನ್ ಜನ್ಯ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ '45' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳು ದಾಖಲೆ ಮೊತ್ತಕ್ಕೆ ಜೀ ನೆಟ್‌ವರ್ಕ್ (Zee Network) ಪಾಲಾಗಿವೆ. ಕೆನಡಾದಲ್ಲಿ ಎರಡು ದಿನ ಮೊದಲೇ ಅಂದರೆ ಡಿಸೆಂಬರ್ 23 ರಂದೇ ಶೋಗಳು ಆರಂಭವಾಗಲಿದ್ದು, ಈಗಾಗಲೇ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ.

Ravichandran: 'ಒಂದು ವರ್ಷ ಬರೀ ಕಣ್ಣೋಟದಲ್ಲೇ ಲವ್ವು..'; 'ಬಿಗ್‌ ಬಾಸ್‌' ಮನೆಯಲ್ಲಿ  'ಪ್ರೇಮ್‌ ಕಹಾನಿ' ಬಿಚ್ಚಿಟ್ಟ 'ಕ್ರೇಜಿ ಸ್ಟಾರ್‌'

BBK 12: ಕಾಲೇಜಿನಲ್ಲಿ ಅರಳಿದ್ದ ಲವ್; ಇದು ರವಿಚಂದ್ರನ್ 'ಪ್ರೇಮ್‌ ಕಹಾನಿ'!‌

BBK 12 Ravichandran: ಬಿಗ್ ಬಾಸ್ ಮನೆಗೆ ಅತಿಥಿಯಾಗಿ ಆಗಮಿಸಿರುವ 'ಕನಸುಗಾರ' ರವಿಚಂದ್ರನ್, ತಮ್ಮ ಕಾಲೇಜು ದಿನಗಳ ರೊಮ್ಯಾಂಟಿಕ್ ಪ್ರೇಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಬೈಕ್ ಏರಿ ಕಾಲೇಜಿಗೆ ಹೋಗುತ್ತಿದ್ದ ದಿನಗಳಲ್ಲಿ, ಒಂದು ಹುಡುಗಿಯ ನಗುವಿಗೆ ಮನಸೋತ ಕಥೆಯನ್ನು ಅವರು ಹಂಚಿಕೊಂಡಿದ್ದಾರೆ.

Pyar Movie: ರಾಶಿಕಾ ಶೆಟ್ಟಿಗಾಗಿ ʻಬಿಗ್‌ ಬಾಸ್‌ʼ ಮನೆಯೊಳಗೆ ಕಾಲಿಟ್ಟ ನಟ ರವಿಚಂದ್ರನ್;‌ ದೊಡ್ಮನೆ ಈಗ ಸಖತ್‌ ಕಲರ್‌ಫುಲ್

ರವಿಚಂದ್ರನ್‌ ಸಿನಿಮಾದಲ್ಲಿ ಮಗಳಾದ ರಾಶಿಕಾ; ದೊಡ್ಮನೆಯಲ್ಲಿ ಕ್ರೇಜಿ‌ ಸ್ಟಾರ್

BBK 12 Special Entry: ಬಿಗ್ ಬಾಸ್ ಕನ್ನಡ 12ರ ಮನೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಅದ್ದೂರಿ ಎಂಟ್ರಿ ನೀಡಿದ್ದಾರೆ. ತಾವು ನಟಿಸಿರುವ 'ಪ್ಯಾರ್' (Pyar) ಚಿತ್ರದ ಪ್ರಚಾರಕ್ಕಾಗಿ ಅವರು ದೊಡ್ಮನೆಗೆ ಆಗಮಿಸಿದ್ದಾರೆ. ವಿಶೇಷವೆಂದರೆ, ಬಿಗ್ ಬಾಸ್ ಸ್ಪರ್ಧಿ ರಾಶಿಕಾ ಶೆಟ್ಟಿ ಈ ಸಿನಿಮಾದಲ್ಲಿ ರವಿಚಂದ್ರನ್ ಅವರ ಮಗಳಾಗಿ ನಟಿಸಿದ್ದಾರೆ.

ʻಕೊರಗಜ್ಜʼ ಚಿತ್ರಕ್ಕಾಗಿ ಸೃಷ್ಟಿಯಾಯ್ತು AI ಸಾಂಗ್;‌ ಲಿಯೋನೆಲ್ ಮೆಸ್ಸಿಗೂ ಈ ಹಾಡಿಗೂ ಇದೇ ಒಂದು ಸಂಬಂಧ!

Lionel Messi: ʻಕೊರಗಜ್ಜʼ ಚಿತ್ರದ ಹೊಸ ಹಾಡಿಗೂ ಮೆಸ್ಸಿಗೂ ಇದೇ ಸಂಬಂಧ!

Koragajja Movie Update: ಸುಧೀರ್ ಅತ್ತಾವರ್ ನಿರ್ದೇಶನದ 'ಕೊರಗಜ್ಜ' ಸಿನಿಮಾ ತಂಡವು ಪ್ರೇಕ್ಷಕರಿಗೆ ಅಚ್ಚರಿಯ ಸುದ್ದಿಯೊಂದನ್ನು ನೀಡಿದೆ. ಇತ್ತೀಚೆಗೆ ಫುಟ್‌ಬಾಲ್ ದಿಗ್ಗಜ ಲಿಯೋನೆಲ್ ಮೆಸ್ಸಿ ಅವರ ಭಾರತ ಪ್ರವಾಸದ ವೇಳೆ ವೈರಲ್ ಆಗಿದ್ದ AI (ಕೃತಕ ಬುದ್ಧಿಮತ್ತೆ) ಹಾಡನ್ನು ವಿನ್ಯಾಸಗೊಳಿಸಿದ್ದ ತಂಡವೇ ಈಗ ಕೊರಗಜ್ಜ ಚಿತ್ರದ ಹಾಡನ್ನೂ ಸಿದ್ಧಪಡಿಸಿದೆ.

BBK 12: ಗಿಲ್ಲಿ ವಿರುದ್ಧ ನೆಗೆಟಿವ್‌ ಪ್ರಚಾರ ನಡೆಯುತ್ತಿದೆಯಾ? ಸ್ಪರ್ಧಿಗಳ ಪಿಆರ್‌ ಸ್ಟ್ರಾಟೆಜಿ ಬಗ್ಗೆ ವಿನಯ್‌ ಗೌಡ ಖಡಕ್‌ ಮಾತು

ಗಿಲ್ಲಿ ವಿರುದ್ಧ ನೆಗೆಟಿವ್‌ ಪ್ರಚಾರ ಮಾಡ್ತಿದ್ದಾರಾ? ವಿನಯ್ ಗೌಡ ಏನಂದ್ರು?

Vinay Gowda on BBK 12: ಬಿಗ್ ಬಾಸ್ ಕನ್ನಡ ಸೀಸನ್ 10ರ ಮಾಜಿ ಸ್ಪರ್ಧಿ ವಿನಯ್ ಗೌಡ ಅವರು ಸೀಸನ್ 12ರ ಸ್ಪರ್ಧಿಗಳ ಬಗ್ಗೆ ನಡೆಯುತ್ತಿರುವ 'ಪಿಆರ್ ಸ್ಟ್ರಾಟೆಜಿ'ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ನಟ ಗಿಲ್ಲಿ ಅವರನ್ನು ಗುರಿಯಾಗಿಸಿಕೊಂಡು ಕೆಲವು ಪಿಆರ್ ಏಜೆನ್ಸಿಗಳು ನೆಗೆಟಿವ್ ಪ್ರಚಾರ ಮಾಡುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

BBK 12: ಕ್ಯಾಪ್ಟನ್ಸಿ ರೇಸ್‌ಗೆ ಎಂಟ್ರಿ ಕೊಟ್ಟ ಗಿಲ್ಲಿ; ಕ್ಯಾಪ್ಟನ್‌ ರಾಶಿಕಾ ಶೆಟ್ಟಿ ಲೆಕ್ಕಾಚಾರಗಳೆಲ್ಲಾ ಉಲ್ಟಾ ಪಲ್ಟಾ!

Bigg Boss 12: ರಾಶಿಕಾ ಲೆಕ್ಕಾಚಾರಗಳನ್ನ ಉಲ್ಟಾಪಲ್ಟಾ ಮಾಡಿದ ಗಿಲ್ಲಿ ನಟ!

BBK 12 Captaincy Race: ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ರಾಶಿಕಾ ಶೆಟ್ಟಿ ಅವರ ಲೆಕ್ಕಾಚಾರಗಳು ಸಂಪೂರ್ಣವಾಗಿ ತಲೆಕೆಳಗಾಗಿವೆ. ಗಿಲ್ಲಿ ನಟ ಮತ್ತು ರಘು ಅವರನ್ನು ರಾಶಿಕಾ ನಾಮಿನೇಟ್ ಮಾಡಿದ್ದರೂ, 'ಇಟ್ಟ ಗುರಿ ತಪ್ಪಲ್ಲ' ಟಾಸ್ಕ್‌ನಲ್ಲಿ ಗೆಲ್ಲುವ ಮೂಲಕ ಅವರಿಬ್ಬರೂ ನಾಮಿನೇಷನ್‌ನಿಂದ ಬಚಾವ್‌ ಆಗಿದ್ದಲ್ಲದೆ, ಕ್ಯಾಪ್ಟನ್ಸಿ ರೇಸ್‌ಗೆ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ.

ರಶ್ಮಿಕಾ ಬಳಿಕ ಎಐ ದುರ್ಬಳಕೆ ವಿರುದ್ಧ ಧ್ವನಿ ಎತ್ತಿದ ಶ್ರೀಲೀಲಾ: ಡಿಜಿಟಲ್ ಜವಾಬ್ದಾರಿ ಇರಲಿ ಎಂದು ಕಿವಿಮಾತು

ಡೀಪ್‌ಫೇಕ್ ವಿಡಿಯೊ ಬಗ್ಗೆ ನಟಿ ಶ್ರೀಲೀಲಾ ಕಿವಿ ಮಾತು

Sreeleela: ಎಐ ತಂತ್ರಜ್ಞಾನದ ದುರ್ಬಳಕೆ ಮತ್ತು ಡೀಪ್‌ಫೇಕ್ ವಿಡಿಯೊ ಕಂಟೆಂಟ್‌ ಬಗ್ಗೆ ಬಹುಭಾಷಾ ನಟಿ, ಕನ್ನಡತಿ ಶ್ರೀಲೀಲಾ ಧ್ವನಿ ಎತ್ತಿದ್ದಾರೆ. ಈ ತಂತ್ರಜ್ಞಾನಗಳು ಕ್ಷಿಪ್ರವಾಗಿ ಬೆಳೆಯುತ್ತಿರುವ ಕಾಲ ಘಟ್ಟದಲ್ಲಿ ಒಂದಷ್ಟು ಡಿಜಿಟಲ್ ಜವಾಬ್ದಾರಿಯನ್ನು ನಾವೆಲ್ಲರೂ ಹೊಂದುವುದು ಅಗತ್ಯ ಕಿವಿ ಮಾತು ಹೇಳಿದ್ದಾರೆ.

Web Series:   ಪಿ. ಸಿ. ಶೇಖರ್ ಡೈರೆಕ್ಷನ್‌ ಮೊದಲ ವೆಬ್ ಸಿರೀಸ್! ಎಲ್ಲಿ ಸ್ಟ್ರೀಮಿಂಗ್‌?

ಪಿ.ಸಿ.ಶೇಖರ್ ಡೈರೆಕ್ಷನ್‌ ಮೊದಲ ವೆಬ್ ಸಿರೀಸ್! ಎಲ್ಲಿ ಸ್ಟ್ರೀಮಿಂಗ್‌?

Web Series: ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿರುವ ಪಿ.ಸಿ.ಶೇಖರ್ ಈಗ ಮೊದಲ ವೆಬ್ ಸಿರೀಸ್ ನಿರ್ದೇಶಿಸಿದ್ದಾರೆ. ಎಂಟು ಕಂತುಗಳ ಈ ವೆಬ್ ಸಿರೀಸ್ ಗೆ "Just us" ಎಂದು ನಾಮಕರಣ ಮಾಡಿದ್ದಾರೆ. ಜನವರಿ ಒಂದರಂದು ಹೊಸವರ್ಷದ ಮೊದಲ ದಿನ ಈ ವೆಬ್ ಸಿರೀಸ್ ನ ಮೊದಲನೇ ಕಂತು ಪ್ರಸಾರವಾಗಲಿದೆ.

MS Subbulakshmi: ಸಂಗೀತ ಕ್ಷೇತ್ರದ ಸಾಧಕಿ ಎಂಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಈ  ಖ್ಯಾತ ನಟಿ?

ಎಂಎಸ್ ಸುಬ್ಬಲಕ್ಷ್ಮಿ ಬಯೋಪಿಕ್‌ನಲ್ಲಿ ಈ ಖ್ಯಾತ ನಟಿ?

MS Subbulakshmi Biopic: ಎಂ.ಎಸ್. ಸುಬ್ಬುಲಕ್ಷ್ಮಿ ಇಂದಿಗೂ ಭಾರತೀಯ ಸಂಗೀತದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರು. ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಪಡೆದ ಮೊದಲ ಸಂಗೀತಗಾರ್ತಿ ಅವರು, ಮತ್ತು ಎಪ್ಪತ್ತು ವರ್ಷಗಳಿಗೂ ಹೆಚ್ಚು ಕಾಲ ಅವರ ವೃತ್ತಿಜೀವನದಲ್ಲಿ ತೊಡಗಿಸಿಕೊಂಡವರು. ಇದೀಗ ಭಾರತದ ಶ್ರೇಷ್ಠ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಅವರ ಜೀವನವನ್ನು ತೆರೆಯ ಮೇಲೆ ತರಲು ವೇದಿಕೆ ಸಜ್ಜಾಗುತ್ತಿದೆ.

Rashmika Mandanna:  ಬ್ಯಾಚುಲರೇಟ್ ಪಾರ್ಟಿಯ ಗುಂಗಲ್ಲಿ ಇದ್ದಾರಾ ರಶ್ಮಿಕಾ? ಫ್ರೆಂಡ್ಸ್‌ ಜೊತೆ ಶ್ರೀಲಾಂಕಾದಲ್ಲಿ ನ್ಯಾಶನಲ್‌ ಕ್ರಶ್‌

ಬ್ಯಾಚುಲರೇಟ್ ಪಾರ್ಟಿಯ ಗುಂಗಲ್ಲಿ ಇದ್ದಾರಾ ರಶ್ಮಿಕಾ?

Bachelorette Party: ರಶ್ಮಿಕಾ ಮಂದಣ್ಣ ಫೆಬ್ರವರಿ 2026ರಲ್ಲಿ ಉದಯಪುರದಲ್ಲಿ ವಿಜಯ್ ದೇವರಕೊಂಡ ಅವರನ್ನು ವಿವಾಹವಾಗಲಿದ್ದಾರೆ ಎಂದು ವದಂತಿಗಳಿವೆ. ಮದುವೆಯ ವದಂತಿಗಳ ನಡುವೆ, ರಶ್ಮಿಕಾ ಇತ್ತೀಚೆಗೆ ಹುಡುಗಿಯರ ಜೊತೆ ಶ್ರೀಲಂಕಾಕ್ಕೆ ಹೋಗಿದ್ದಾರೆ. ಬ್ಯಾಚುಲರೇಟ್ ಪ್ರವಾಸ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ.

Dhurandhar: ಅಕ್ಷಯ್ ಖನ್ನಾ ರೀತಿ ಪುನೀತ್‌ ರಾಜ್‌ಕುಮಾರ್‌ ಎಂಟ್ರಿ ಕೊಟ್ರೆ ಹೇಗಿರತ್ತೆ? ವೈರಲ್‌ ಆಯ್ತು ವಿಡಿಯೊ

ಅಕ್ಷಯ್ ಖನ್ನಾ ರೀತಿ ಪುನೀತ್‌ ರಾಜ್‌ಕುಮಾರ್‌ ಎಂಟ್ರಿ ಕೊಟ್ರೆ ಹೇಗಿರತ್ತೆ?

Akshaye Khanna: ‘ಧುರಂಧರ್ʼ ಸಿನಿಮಾ ಬಗ್ಗೆಯೇ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ಚಿತ್ರದ ವಿಲನ್ ಪಾತ್ರಗಳು ಸಖತ್ ಹೈಲೈಟ್ ಆಗಿವೆ. ನಟರಾದ ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಮ್​ಪಾಲ್ ಅವರು ನೆಗೆಟಿವ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪಾಕಿಸ್ತಾನದ ರಿಯಲ್ ಗ್ಯಾಂಗ್​ಸ್ಟರ್ ರೆಹಮಾನ್ ಡಕಾಯಿತ್ ಎಂಬ ಪಾತ್ರವನ್ನು ಅಕ್ಷಯ್ ಖನ್ನಾ ಅವರು ಮಾಡಿದ್ದಾರೆ.

Rachita Ram: ʻಲ್ಯಾಂಡ್‌ಲಾರ್ಡ್ʼ ಸಿನಿಮಾದಿಂದ ಬಂತು ಬಿಗ್‌ ಅಪ್‌ಡೇಟ್‌; ರಚ್ಚು ಫ್ಯಾನ್ಸ್‌ ಫುಲ್‌ ಖುಷ್‌

ʻಲ್ಯಾಂಡ್‌ಲಾರ್ಡ್ʼ ಸಿನಿಮಾದಿಂದ ಬಂತು ಬಿಗ್‌ ಅಪ್‌ಡೇಟ್‌

Duniya Vijay: ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿರುವ ಚಿತ್ರಗಳಲ್ಲಿ ʼಲ್ಯಾಂಡ್‌ಲಾರ್ಡ್ʼ ಕೂಡ ಒಂದು. ಸ್ಯಾಂಡಲ್‌ವುಡ್ ಸಲಗ, ದುನಿಯಾ ವಿಜಯ್ ಅಭಿನಯದ ಚಿತ್ರ ಇದಾಗಿದ್ದು, ಸಾರಥಿ ಫಿಲಂಸ್ ಬ್ಯಾನರ್‌ನಡಿ ಮೂಡಿಬರುತ್ತಿದೆ. ಹೇಮಂತ್ ಗೌಡ ಕೆ.ಎಸ್. ಹಾಗೂ ಕೆ.ವಿ. ಸತ್ಯಪ್ರಕಾಶ್ ನಿರ್ಮಾಣ ಮಾಡಿದ್ದು, ಜಡೇಶ ಕೆ. ಹಂಪಿ ನಿರ್ದೇಶನದ ಕನ್ನಡ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಇದಾಗಿದೆ.

Raj B Shetty: ರಾಜ್‌ - ರಿಷಬ್‌ ನಡುವೆ ಮನಸ್ತಾಪ ಇರೋದು ನಿಜನಾ? ಕ್ಲಾರಿಟಿ ಕೊಟ್ಟ ರಾಜ್ ಬಿ ಶೆಟ್ಟಿ

Raj B Shetty: ರಾಜ್‌ - ರಿಷಬ್‌ ನಡುವೆ ಮನಸ್ತಾಪ ಇರೋದು ನಿಜನಾ?

Rishab Shetty: 45 ಸಿನಿಮಾ ಟ್ರೈಲರ್‌ವನ್ನು ಮೊದಲಿಗೆ ರಿಷಬ್‌ ಅವರು ಲಾಂಚ್‌ ಮಾಡಿದ್ದರು. ಈ ವೇಳೆ ರಾಜ್‌ ಬಿ ಶೆಟ್ಟಿ ಅವರ ಹೆಸರು ಅವರು ಹೇಳಲೇ ಇಲ್ಲ. ರಿಷಬ್ ಶೆಟ್ಟಿ, ‘45’ ಸಿನಿಮಾಕ್ಕೆ ಶುಭ ಕೋರಿ ವಿಡಿಯೋ ಮಾಡಿದ್ದು, ಉದ್ದೇಶಪೂರ್ವಕವಾಗಿ ರಾಜ್ ಬಿ ಶೆಟ್ಟಿ ಹೆಸರನ್ನು ಹೇಳಿಲ್ಲ ಎಂಬ ಚರ್ಚೆಗಳು ಆಗಿದ್ದವು. ರಿಷಬ್ ಶೆಟ್ಟಿಯವರ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಬಗ್ಗೆ ರಾಜ್ ಬಿ ಶೆಟ್ಟಿಯಾಗಲಿ, ರಕ್ಷಿತ್ ಆಗಲಿ ಪೋಸ್ಟ್ ಹಂಚಿಕೊಂಡಿಲ್ಲ.

Kirtan Nadagouda Son: ಲಿಫ್ಟ್‌ನಲ್ಲಿ ಸಿಲುಕಿ KGF ಸಹ - ನಿರ್ದೇಶಕ ಕೀರ್ತನ್ ನಾಡಗೌಡ ಮಗ ಸಾವು ; ಪವನ್‌ ಕಲ್ಯಾಣ್‌ ಟ್ವೀಟ್‌

ಲಿಫ್ಟ್‌ನಲ್ಲಿ ಸಿಲುಕಿ KGF ಸಹ - ನಿರ್ದೇಶಕ ಕೀರ್ತನ್ ನಾಡಗೌಡ ಮಗ ಸಾವು

Pawan Kalyan: ಕೀರ್ತನ್‌ ನಾಡಗೌಡ ಮತ್ತು ಅವರ ಪತ್ನಿ ಸಮೃದ್ದಿ ಪಟೇಲ್‌ ಅವರ ಏಕೈಕ ಪುತ್ರ ನಾಲ್ಕೂವರೆ ವರ್ಷದ ಚಿರಂಜೀವಿ ಸೋನಾರ್ಷ್ ಕೆ. ನಾಡಗೌಡ ಕಳೆದುಕೊಂಡು ಕುಟುಂಬ ತೀವ್ರ ದುಃಖದಲ್ಲಿದೆ. ಈ ದುರಂತಕ್ಕೆ ಚಿತ್ರರಂಗದ ಹಲವು ಪ್ರಮುಖರು ಮತ್ತು ರಾಜಕೀಯ ವ್ಯಕ್ತಿಗಳು ಸಂತಾಪ ಸೂಚಿಸಿದ್ದಾರೆ. ಆಂಧ್ರಪ್ರದೇಶ ಉಪಮುಖ್ಯಮಂತ್ರಿ ಪವನ್‌ ಕಲ್ಯಾಣ್‌ ಅವರು ಸೋಶಿಯಲ್‌ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ.

BBK 12: ಶರಂಪರ ಕಿತ್ತಾಡಿದ ಚೈತ್ರಾ ಕುಂದಾಪುರ; ಫೈರ್‌ ಬ್ರ್ಯಾಂಡ್‌ ಜೊತೆ ಅಶ್ವಿನಿ ಗೌಡ ಫೈಟ್, ಸುಸ್ತಾಗಿಹೋದ ಕಾಪ್ಟನ್‌ ರಾಶಿಕಾ ಶೆಟ್ಟಿ!

Bigg Boss 12: ಚೈತ್ರಾ - ಅಶ್ವಿನಿ ಗೌಡ ಕಿತ್ತಾಟ, ಕಾಪ್ಟನ್‌ ರಾಶಿಕಾ ಕೂಗಾಟ

Chaitra Kundapura Vs Ashwini Gowda: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿ ಚೈತ್ರಾ ಕುಂದಾಪುರ ಮತ್ತು ಅಶ್ವಿನಿ ಗೌಡ ನಡುವೆ ದೊಡ್ಡ ಜಗಳವೇ ನಡೆದಿದೆ. ನಾಮಿನೇಷನ್ ಟಾಸ್ಕ್ ವೇಳೆ ಒಬ್ಬರನ್ನೊಬ್ಬರು ಪರಚಿಕೊಂಡಿದ್ದಾರೆ ಎನ್ನಲಾಗಿದ್ದು, ಅಶ್ವಿನಿ ತನ್ನ ಕೈಗೆ ಹೊಡೆದಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದಾರೆ. ಅಂತಿಮವಾಗಿ ಏನಾಯ್ತು? ಮುಂದೆ ಓದಿ.

Year Ender 2025: ಈ ವರ್ಷ ದಾಂಪತ್ಯ ಬದುಕಿಗೆ ಕಾಲಿಟ್ಟ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರೇ ನೋಡಿ; ಇಲ್ಲಿದೆ ಫುಲ್‌ ಲಿಸ್ಟ್‌

Photos: 2025ರಲ್ಲಿ ಮದುವೆಯಾದ ಕನ್ನಡದ ಸೆಲೆಬ್ರಿಟಿಗಳು ಇವ್ರೇ ನೋಡಿ

2025ರಲ್ಲಿ ಸ್ಯಾಂಡಲ್‌ವುಡ್‌ನ ಅನೇಕ ತಾರೆಯರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕೆಲ ಸೆಲೆಬ್ರಿಟಿಗಳು ಅತ್ಯಂತ ಸರಳವಾಗಿ ಮದುವೆಯಾದರೆ, ಮತ್ತೆ ಕೆಲವರು ಅದ್ದೂರಿಯಾಗಿ ಸಪ್ತಪದಿ ತುಳಿದಿದ್ದಾರೆ. 2025ರ ಈ ವರ್ಷವು ಸೆಲೆಬ್ರಿಟಿಗಳು ತಮ್ಮ ಕಲ್ಯಾಣೋತ್ಸವದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡಿದರು. ಈ ವರ್ಷ ವಿವಾಹವಾದ ಪ್ರಮುಖ ಕನ್ನಡದ ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.

ಪತಿಯಿಂದಲೇ ಅಪಹರಣಕ್ಕೊಳಗಾದ ಕಿರುತೆರೆ ನಟಿ ಚೈತ್ರಾ! ಈ ಪ್ರಕರಣ ಮುಂದೇನಾಯ್ತು ನೋಡಿ!

ಕಿರುತೆರೆ ನಟಿ ಚೈತ್ರಾ ಅಪಹರಣ ಪ್ರಕರಣ: ಮಗುವಿಗಾಗಿ ಪತಿಯಿಂದಲೇ ಕಿಡ್ನಾಪ್!

Actress Chaitra Kidnap Case: ಖ್ಯಾತ ಕಿರುತೆರೆ ನಟಿ ಚೈತ್ರಾ ಆರ್. ಅವರನ್ನು ಅವರ ಪತಿ, ನಿರ್ಮಾಪಕ ಹರ್ಷವರ್ಧನ್ ಅಪಹರಿಸಿದ್ದ ಪ್ರಕರಣ ಸುಖಾಂತ್ಯಗೊಂಡಿದೆ. ಒಂದು ವರ್ಷದ ಮಗಳ ಕಸ್ಟಡಿ ಪಡೆಯುವ ಸಲುವಾಗಿ ಪತ್ನಿ ಚೈತ್ರಾ ಅವರನ್ನು ಕಿಡ್ನಾಪ್ ಮಾಡಲಾಗಿತ್ತು. ಈ ಸಂಬಂಧ ಬೆಂಗಳೂರಿನ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಮುಂದೇನಾಯ್ತು?

39 ವರ್ಷಗಳ ಹಿಂದೆ ʻಆನಂದ್‌ʼ ಸಿನಿಮಾಕ್ಕೆ ಖರ್ಷಾಗಿದ್ದೆಷ್ಟು?  ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?  ಶಿವಣ್ಣ ಕೊಟ್ಟಿದ್ರು ಪಕ್ಕಾ ಲೆಕ್ಕ!

'ಆನಂದ್' ಸಿನಿಮಾದ ಬಾಕ್ಸ್ ಆಫೀಸ್ ಸೀಕ್ರೆಟ್ ಬಿಚ್ಚಿಟ್ಟ ಶಿವಣ್ಣ!

Anand Movie Box Office: ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿ 39 ವರ್ಷ ಪೂರೈಸಿರುವ ಶಿವರಾಜ್‌ಕುಮಾರ್, ತಮ್ಮ ಮೊದಲ ಸಿನಿಮಾ 'ಆನಂದ್' ಕುರಿತು ಆಸಕ್ತಿದಾಯಕ ಮಾಹಿತಿ ಹಂಚಿಕೊಂಡಿದ್ದಾರೆ. 1986 ರಲ್ಲಿ ತೆರೆಕಂಡ ಈ ಸಿನಿಮಾದ ಬಜೆಟ್‌ ಮತ್ತು ಬಾಕ್ಸ್ ಆಫೀಸ್‌ ಕಲೆಕ್ಷನ್‌ ಬಗ್ಗೆ ಶಿವಣ್ಣ ಮಾಹಿತಿ ನೀಡಿದ್ದ ವಿಡಿಯೋವೊಂದು ವೈರಲ್‌ ಆಗಿದೆ.

OG Movie: ಹಿಟ್‌ ಸಿನಿಮಾ ಕೊಟ್ಟ ಡೈರೆಕ್ಟರ್‌ಗೆ ಐಷಾರಾಮಿ ಕಾರು ಗಿಫ್ಟ್‌ ನೀಡಿದ‌ ಡಿಸಿಎಂ ಪವನ್‌ ಕಲ್ಯಾಣ್; ಇದರ ಬೆಲೆ ಎಷ್ಟು ಗೊತ್ತಾ?

ಅಬ್ಬಬ್ಬಾ! ಡೈರೆಕ್ಟರ್‌ಗೆ ದುಬಾರಿ ಕಾರು ಗಿಫ್ಟ್‌ ನೀಡಿದ ಪವನ್‌ ಕಲ್ಯಾಣ್!

They Call Him OG Movie: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ಅವರು 'They Call Him OG' ಸಿನಿಮಾದ ಭರ್ಜರಿ ಯಶಸ್ಸಿನ ಖುಷಿಯಲ್ಲಿ ನಿರ್ದೇಶಕ ಸುಜೀತ್‌ಗೆ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಪವನ್ ಕಲ್ಯಾಣ್ ತಮ್ಮ ವೃತ್ತಿಜೀವನದಲ್ಲಿ ನಿರ್ದೇಶಕರೊಬ್ಬರಿಗೆ ಇಷ್ಟು ದುಬಾರಿ ಗಿಫ್ಟ್ ನೀಡುತ್ತಿರುವುದು ಇದೇ ಮೊದಲು.

45 Movie: ʻಶಿವಣ್ಣ ಚಿನ್ನ ಅಲ್ಲ, ಅಪರಂಜಿʼ; ಹ್ಯಾಟ್ರಿಕ್‌ ಹೀರೋಗೆ ಹೊಗಳಿಕೆಯ ಸುರಿಮಳೆಗೈದ ಉಪೇಂದ್ರ

45 Movie: 'ಶಿವಣ್ಣ ಚಿನ್ನ ಅಲ್ಲ, ಅಪರಂಜಿ..' ಎಂದ ಉಪೇಂದ್ರ

45 Movie Trailer Release: ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ '45' ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಈ ಸಿನಿಮಾವನ್ನು ರಮೇಶ್ ರೆಡ್ಡಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ.‌ ಟ್ರೇಲರ್‌ ರಿಲೀಸ್‌ ವೇಳೆ, "ಶಿವಣ್ಣ ಚಿನ್ನ ಅಲ್ಲ, ಅಪರಂಜಿ" ಎಂದು ಉಪೇಂದ್ರ ಹೇಳಿದ್ದಾರೆ.

Loading...