ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

ಸಾಲು ಸಾಲು ಸೋಲುಗಳಿಂದ ಕಂಗೆಟ್ಟ ನಟ ರವಿ ತೇಜ; ಈ ಬಾರಿ ಸಂಭಾವನೆಯನ್ನೇ ಮುಟ್ಟದ 'ಮಾಸ್‌ ಮಹಾರಾಜ', ಕಾರಣವೇನು ಗೊತ್ತಾ?

ಸತತ ಸೋಲಿನಿಂದ ಕಂಗೆಟ್ಟ ನಟ ರವಿ ತೇಜ! ಅದಕ್ಕಾಗಿ ತಗೊಂಡ್ರು ಹೊಸ ನಿರ್ಧಾರ

Ravi Teja: ತೆಲುಗು ನಟ ರವಿ ತೇಜ ಕಳೆದ ಎರಡು ವರ್ಷಗಳಲ್ಲಿ ಐದು ಸಿನಿಮಾಗಳ ಸೋಲನ್ನು ಅನುಭವಿಸಿದ್ದಾರೆ. ಹೀಗಾಗಿ, ಕಿಶೋರ್ ತಿರುಮಲ ನಿರ್ದೇಶನದ 'ಭರ್ತ ಮಹಾಶಯುಲಕು ವಿಜ್ಞಪ್ತಿ' ಸಿನಿಮಾದ ಗೆಲುವಿಗಾಗಿ ಅವರು ಕಾತರಿಸಿದ್ದಾರೆ. ಈ ಚಿತ್ರಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಅನ್ನೋದು ವಿಶೇಷ.

ಶುರುವಾಯ್ತು 'ಮಾರ್ಕ್‌' - '45' ಸಿನಿಮಾಗಳ ಅಡ್ವಾನ್ಸ್‌ ‌ಟಿಕೆಟ್‌ ಬುಕಿಂಗ್;‌ ಇಲ್ಲೊಂದು ಸಣ್ಣ ಟ್ವಿಸ್ಟ್‌ ಇದೆ, ನೀವು ಅದನ್ನು ಗಮನಿಸಿದ್ರಾ?

'ಮಾರ್ಕ್‌' - '45' ಸಿನಿಮಾಗಳ ಅಡ್ವಾನ್ಸ್‌ ‌ಟಿಕೆಟ್‌ ಬುಕಿಂಗ್ ಶುರು!

Kannada Box Office Updates: ಡಿಸೆಂಬರ್ 25ರಂದು ಏಕಕಾಲಕ್ಕೆ ತೆರೆಕಾಣಲಿರುವ '45' ಮತ್ತು 'ಮಾರ್ಕ್' ಸಿನಿಮಾಗಳ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಶುರುವಾಗಿದೆ. 45 ಸಿನಿಮಾ ಒಂದು ದಿನ ಮೊದಲೇ ಅಂದರೆ ಡಿಸೆಂಬರ್ 24ರ ಸಂಜೆ 7 ಗಂಟೆಯಿಂದಲೇ 'ಪೇಯ್ಡ್ ಪ್ರೀಮಿಯರ್' ಶೋಗಳನ್ನು ಆರಂಭಿಸುತ್ತಿದೆ. ‌

Mark: ʻಒಂದು ಪಡೆ ಯುದ್ಧಕ್ಕೆ ರೆಡಿ ಆಗ್ತಿದೆ, ನಾವು ಯುದ್ಧಕ್ಕೆ ಸಿದ್ಧʼ; ಹುಬ್ಬಳ್ಳಿಯಲ್ಲಿ ಗುಡುಗಿದ ʻಕಿಚ್ಚʼ ಸುದೀಪ್‌!

Mark Movie: ಹುಬ್ಬಳ್ಳಿಯಲ್ಲಿ ಗುಡುಗಿದ ʻಕಿಚ್ಚʼ ಸುದೀಪ್‌! ಯಾರ ವಿರುದ್ಧ?

Kiccha Sudeep: ಕಿಚ್ಚ ಸುದೀಪ್ ಅವರ 'ಮಾರ್ಕ್' ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುದೀಪ್ ತಮ್ಮ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. "ಹೊರಗಡೆ ಒಂದು ಪಡೆ ಯುದ್ಧಕ್ಕೆ ರೆಡಿಯಾಗುತ್ತಿದೆ, ಯುದ್ಧಕ್ಕೆ ಸಿದ್ಧ" ಎಂದು ಹೇಳುವ ಮೂಲಕ ಕಿಚ್ಚ ಹವಾ ಎಬ್ಬಿಸಿದ್ದಾರೆ.

Actor Upendra:  ಉಪ್ಪಿ ಕೊನೆಯ ಬಾರಿ ಅತ್ತಿದ್ದು ಇದೊಂದು ವಿಚಾರಕ್ಕೆ! ಕನ್ನಡಿಯ ಮುಂದೆ ಸತ್ಯ ರಿವೀಲ್‌

ಉಪ್ಪಿ ಕೊನೆಯ ಬಾರಿ ಅತ್ತಿದ್ದು ಇದೊಂದು ವಿಚಾರಕ್ಕೆ!

45 Movie: ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಅಸಲಿಗೆ ಈ ಸಿನಿಮಾ ಇದೇ ವರ್ಷದ ಮಧ್ಯ ಭಾಗದಲ್ಲಿಯೇ ಬಿಡುಗಡೆ ಆಗಬೇಕಿತ್ತು. ಮೇ ತಿಂಗಳಲ್ಲೇ ಸಿನಿಮಾ ರಿಲೀಸ್ ಆಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು ಆದರೆ ನಾನಾ ಕಾರಣಗಳಿಗಾಗಿ ಸಿನಿಮಾ ತಡವಾಗುತ್ತಲೇ ಬಂತು. ರಿಯಲ್ ಸ್ಟಾರ್ ಉಪೇಂದ್ರ ಅವರು '45' ಸಿನಿಮಾ ಪ್ರಚಾರದ ವೇಳೆ, ತಾವು ಮೊದಲ ಬಾರಿಗೆ ಕಣ್ಣೀರು ಹಾಕಿದ ಕ್ಷಣವನ್ನು ಬಹಿರಂಗಪಡಿಸಿದ್ದಾರೆ.

BBK 12: ಕಾವ್ಯ ವಿರುದ್ಧದ ರಕ್ಷಿತಾ ಶೆಟ್ಟಿಯ ದ್ವೇಷ ಅತಿರೇಕಕ್ಕೆ ಹೋಯ್ತಾ? ರಜತ್‌ ಕೊಟ್ಟ ತಿರುಗೇಟಿಗೆ ಗಿಲ್ಲಿ ವಂಶದ ಕುಡಿ ಫುಲ್‌ ಸೈಲೆಂಟ್‌!

BBK 12: ಕ್ಯಾಪ್ಟನ್‌ ಆಯ್ಕೆ ಬಗ್ಗೆ ‌ರಕ್ಷಿತಾ ಅಸಮಾಧಾನ; ರಜತ್ ತಿರುಗೇಟು!

BBK 12: ಬಿಗ್ ಬಾಸ್ ಮನೆಯಲ್ಲಿ ಕಾವ್ಯ ಶೈವ ಕ್ಯಾಪ್ಟನ್ ಆಗಿ ಆಯ್ಕೆಯಾದದ್ದನ್ನು ರಕ್ಷಿತಾ ಶೆಟ್ಟಿ ಮುಕ್ತವಾಗಿ ವಿರೋಧಿಸಿದ್ದಾರೆ. "ಕಾವ್ಯಗೆ ಕ್ಯಾಪ್ಟನ್ ಆಗುವ ಅರ್ಹತೆ ಇಲ್ಲ, ಮನೆಯವರು ಸೇರಿ ಅವರನ್ನು ಗೆಲ್ಲಿಸಿದ್ದಾರೆ" ಎಂದು ರಕ್ಷಿತಾ ವಾದಿಸಿದರು. ಆದರೆ ಈ ವಾದಕ್ಕೆ ರಜತ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

Toxic: 'ಟಾಕ್ಸಿಕ್‌' ಸಿನಿಮಾ ನಾಯಕಿಯ ಫಸ್ಟ್‌ ಲುಕ್‌ ರಿಲೀಸ್‌; Nadia ಪಾತ್ರದಲ್ಲಿ ಮಿಂಚಿದ ಕಿಯಾರಾ ಅಡ್ವಾಣಿ

Toxic: ಯಶ್‌ಗೆ ನಾಯಕಿಯಾದ ಕಿಯಾರಾ ಅಡ್ವಾಣಿ; ಫಸ್ಟ್‌ ಲುಕ್‌ ರಿಲೀಸ್‌

Toxic Kiara Advani First Look: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಚಿತ್ರದಲ್ಲಿ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು 'ನಾದಿಯಾ' (Nadia) ಎಂಬ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರತಂಡವು ಇಂದು (ಡಿ.21) ಈ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದೆ.

Sivakarthikeyan:  ನಟ ಶಿವಕಾರ್ತಿಕೇಯನ್ ಕಾರು ಅಪಘಾತ; ಅಸಲಿಗೆ ಆಗಿದ್ದೇನು? ವೈರಲ್‌ ಆಯ್ತು ವಿಡಿಯೊ

ನಟ ಶಿವಕಾರ್ತಿಕೇಯನ್ ಕಾರು ಅಪಘಾತ; ಅಸಲಿಗೆ ಆಗಿದ್ದೇನು?

Sivakarthikeyan car: ಚೆನ್ನೈನ ಸೆಂಟ್ರಲ್ ಕೈಲಾಶ್ ಪ್ರದೇಶದಲ್ಲಿ ನಟ ಶಿವಕಾರ್ತಿಕೇಯನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್, ಶಿವಕಾರ್ತಿಕೇಯನ್ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ವರದಿಯಾಗಿದೆ. ಚೆನ್ನೈನ ಮಧ್ಯ ಕೈಲಾಶ್ ಪ್ರದೇಶದಲ್ಲಿ ಹೋಗುತ್ತಿದ್ದಾಗ ಟ್ರಾಫಿಕ್ ಜಾಮ್‌ನಿಂದಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ʻಧುರಂಧರ್‌ʼ; 16ನೇ ದಿನ ಮತ್ತೊಂದು ದೊಡ್ಡ ದಾಖಲೆ ಸೃಷ್ಟಿಸಿದ ರಣವೀರ್‌ ಸಿಂಗ್‌ ಸಿನಿಮಾ

Ranveer Singh: ಭಾರತದಲ್ಲಿ 500 ಕೋಟಿ ರೂ. ಕ್ಲಬ್‌ ಸೇರಿದ ʻಧುರಂಧರ್‌ʼ

Dhurandhar Box Office Report: ಆದಿತ್ಯ ಧರ್ ನಿರ್ದೇಶನದ 'ಧುರಂಧರ್' ಸಿನಿಮಾ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಇತಿಹಾಸ ಬರೆಯುತ್ತಿದೆ. ಬಿಡುಗಡೆಯಾದ 16ನೇ ದಿನ ಈ ಚಿತ್ರವು 33.50 ಕೋಟಿ ರೂ. ಗಳಿಸುವ ಮೂಲಕ, ತನ್ನ ಮೊದಲ ದಿನದ ಗಳಿಕೆಯನ್ನೇ (28 ಕೋಟಿ ರೂ.) ಮೀರಿಸಿದೆ. ಸದ್ಯ ಭಾರತದಲ್ಲಿ 516.50 ಕೋಟಿ ರೂ. ಹಾಗೂ ವಿಶ್ವಾದ್ಯಂತ 750 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಈ ಚಿತ್ರವು, ಶೀಘ್ರದಲ್ಲೇ 'ಛಾವಾ' ಮತ್ತು 'ಕಾಂತಾರ ಚಾಪ್ಟರ್ 1' ದಾಖಲೆಗಳನ್ನು ಮುರಿಯಲಿದೆ.

BBK 12: ಕಾವ್ಯ ತಾಯಿ ವಿಷ್ಯಕ್ಕೆ ಹೋದ ಅಶ್ವಿನಿ ಗೌಡಗೆ ಸಿಕ್ತು ಸಖತ್ ಕ್ಲಾಸ್‌; ʻಅವ್ರ ಅಮ್ಮನ ಬಗ್ಗೆ ಮಾತಾಡಿದ್ಯಾಕೆʼ ಎಂದು ಗರಂ ಆದ ʻಕಿಚ್ಚʼ ಸುದೀಪ್!‌

BBK 12: ಕಾವ್ಯ ತಾಯಿ ಬಗ್ಗೆ ಮಾತಾಡಿದ ಅಶ್ವಿನಿಗೆ ಕಿಚ್ಚನ ಸಖತ್ ಕ್ಲಾಸ್‌!

BBK 12 Weekend Update: ಬಿಗ್ ಬಾಸ್ ಕನ್ನಡ 12ರ ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಅಶ್ವಿನಿ ಗೌಡ ಅವರ ಅಶಿಸ್ತಿನ ಮಾತಿನ ಬಗ್ಗೆ ಗಂಭೀರವಾಗಿ ಪ್ರಶ್ನಿಸಿದ್ದಾರೆ. ನೀರಿನ ಟಬ್ ಟಾಸ್ಕ್ ವೇಳೆ ಕಾವ್ಯ ಶೈವ ಅವರ ಜೊತೆ ಜಗಳವಾಡುವಾಗ ಅಶ್ವಿನಿ ಅವರು ಕಾವ್ಯ ತಾಯಿಯನ್ನು ಎಳೆತಂದಿದ್ದರು. "ನಿನ್ನ ಅಮ್ಮನ ಬಳಿ ಹೇಳ್ಕೋ" ಎಂಬ ಅಶ್ವಿನಿ ಮಾತನ್ನು ಕಿಚ್ಚ ತೀವ್ರವಾಗಿ ಖಂಡಿಸಿದರು.

BBK 12: 'ಬಿಗ್‌ ಬಾಸ್‌' ಅಡ್ಡಕ್ಕೆ ಧ್ರುವಂತ್‌ - ರಕ್ಷಿತಾ ರೀ ಎಂಟ್ರಿ; ಅದಕ್ಕೂ ಮುನ್ನ ನಡೀತು ಹೈಡ್ರಾಮಾ, ಇವರಿಬ್ರು ವಾಪಸ್‌ ಮನೆಯೊಳಗೆ ಬಂದಿದ್ದೇಗೆ?

'ಬಿಗ್‌ ಬಾಸ್‌' ಮನೆಗೆ ಧ್ರುವಂತ್‌ - ರಕ್ಷಿತಾ ವಾಪಸ್‌ ಬಂದಿದ್ದು ಹೇಗೆ?

BBK 12 Update: ಬಿಗ್ ಬಾಸ್ ಕನ್ನಡ 12ರ ಸೀಕ್ರೆಟ್ ರೂಮ್ ಟ್ವಿಸ್ಟ್ ಮುಕ್ತಾಯಗೊಂಡಿದೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರನ್ನು ವಾಪಸ್ ಮುಖ್ಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್ ಜೊತೆ ಇರಲಾರದೆ ರಕ್ಷಿತಾ ಗೋಳಾಡಿದ್ದು, ಸುದೀಪ್ ಅವರ ಎದುರು ಮನೆಗೆ ಹೋಗಲು ಹಠ ಹಿಡಿದಿದ್ದರು.

The Script Craft: ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ಪ್ರಭಾಸ್‌; ನಿರ್ದೇಶಕರಿಗೆ, ಕಥೆಗಾರರಿಗೆ ಇಲ್ಲಿದೆ ಸಖತ್‌ ಚಾನ್ಸ್!‌

ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ʻಬಾಹುಬಲಿʼ ನಟ ಪ್ರಭಾಸ್‌

The Script Craft Launch: ಪ್ಯಾನ್‌ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲದೆ, ಹೊಸ ಪ್ರತಿಭೆಗಳನ್ನು ಬೆಳೆಸುವಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರು ಇಂದು ಘೋಷಿಸಿರುವ 'ದಿ ಸ್ಕ್ರಿಪ್ಟ್ ಕ್ರಾಫ್ಟ್' ಅಭಿಯಾನವು ಪ್ರಪಂಚದಾದ್ಯಂತ ಇರುವ ಕಿರುಚಿತ್ರ ನಿರ್ದೇಶಕರು ಮತ್ತು ಕಥೆಗಾರರಿಗೆ ಸಿನಿಮಾ ರಂಗಕ್ಕೆ ನೇರ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.

Jana Nayagan: ʻದಳಪತಿʼ ವಿಜಯ್‌ ಕೊನೇ ಚಿತ್ರವು ಟಾರ್ಗೆಟ್‌ ಆಯ್ತಾ? ʻಜನ ನಾಯಗನ್‌ʼ ಎದುರು ಬರ್ತಿದೆಯಾ ಮತ್ತೊಂದು ತಮಿಳು ಸಿನಿಮಾ?

Thalapathy Vijay: ತಮಿಳುನಾಡಿನಲ್ಲಿ ʻಜನ ನಾಯಗನ್‌ʼ ಟಾರ್ಗೆಟ್‌ ಆಯ್ತಾ?

Jana Nayagan Movie Update: ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' 2026ರ ಜನವರಿ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕನ್ನಡದ ಕೆವಿಎನ್ (KVN) ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ತಮಿಳುನಾಡಿನ ರಾಜಕೀಯ ಮೇಲಾಟಗಳ ನಡುವೆ ಪೈಪೋಟಿ ಎದುರಾಗಿದೆ. ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಚಿತ್ರವು ಜನವರಿ 14ರ ಬದಲು ವಿಜಯ್ ಚಿತ್ರ ಬಿಡುಗಡೆಯಾದ ಮರುದಿನವೇ (ಜ.10) ತೆರೆಗೆ ಬರಲಿದೆ ಎಂಬ ಸುದ್ದಿ ಹಬ್ಬಿದೆ.

BBK 12: ಈ ವಾರ ಕೂಡ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದರೂ ಇಬ್ಬರು ಸ್ಪರ್ಧಿಗಳು ಬಿಗ್‌ ಬಾಸ್‌ನಿಂದ ಹೊರಬೀಳುವುದು ಖಚಿತ!

BBK 12: ಈ ವಾರ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದ್ರೂ ಇಬ್ರೂ ಎಲಿಮಿನೇಟ್!

BBK 12 Weekend Twist: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ಈ ವಾರವೂ ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಭೀತಿ ಇಲ್ಲ. ಯಾಕೆಂದರೆ ಕಳೆದ ವಾರದಂತೆ ಈ ವಾರವೂ ವೋಟಿಂಗ್ ಲೈನ್ಸ್ ತೆರೆದಿಲ್ಲ. ಆದರೆ, ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಂತೆ ಮಿಂಚುತ್ತಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ಈ ವಾರ ಮನೆಯಿಂದ ಹೊರಹೋಗುವುದು ಖಚಿತ ಎನ್ನಲಾಗುತ್ತಿದೆ.

ʻಧುರಂಧರ್‌ʼ ಚಿತ್ರದ ನಟಿ ಸಾರಾ ಅರ್ಜುನ್‌ ಭುಜಕ್ಕೆ ಮುತ್ತು ಕೊಟ್ಟಿದ್ದ ರಾಕೇಶ್‌ ಬೇಡಿ; ನೆಟ್ಟಿಗರ ಟೀಕೆಗಳಿಗೆ ಸಿಕ್ತು ಭಾವನಾತ್ಮಕ ಪ್ರತಿಕ್ರಿಯೆ!

Dhurandhar: ಸಾರಾ ಭುಜಕ್ಕೆ ಮುತ್ತಿಟ್ಟಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಾಕೇಶ್‌

Dhurandhar Controversy: 'ಧುರಂಧರ್' ಸಿನಿಮಾ 500 ಕೋಟಿ ಕ್ಲಬ್ ಸೇರಿ ದಾಖಲೆ ಬರೆಯುತ್ತಿರುವ ಹೊತ್ತಲ್ಲೇ, ಹಿರಿಯ ನಟ ರಾಕೇಶ್ ಬೇಡಿ ಅವರು ನಟಿ ಸಾರಾ ಅರ್ಜುನ್ ಅವರ ಭುಜಕ್ಕೆ ಮುತ್ತಿಟ್ಟ ವಿಡಿಯೋ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ರಾಕೇಶ್ ಬೇಡಿ ಪ್ರತಿಕ್ರಿಯಿಸಿದ್ದಾರೆ.

BBK 12: ʻಕಳಪೆʼ ಕೊಡುವ ವಿಚಾರದಲ್ಲಿ ಅಶ್ವಿನಿ ಗೌಡ ಹೀಗೆ ಮಾತಾಡಿದ್ದು ಸರಿನಾ? ಅದೊಂದು ಮಾತು ಈಗ ಚರ್ಚೆಗೆ ಬಂತು!

ʻಕಳಪೆʼ ಕೊಡುವ ವಿಚಾರದಲ್ಲಿ ಅಶ್ವಿನಿ ಗೌಡ ಹೀಗೆ ಮಾತಾಡಿದ್ದು ಸರಿನಾ?

BBK 12: ಬಿಗ್ ಬಾಸ್ ಕನ್ನಡ 12ರ ಶುಕ್ರವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಅವರ ಒಂದು ನಡೆ ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಚೈತ್ರಾ ಕುಂದಾಪುರ ಅವರಿಗೆ ಕಳಪೆ ಪಟ್ಟ ನೀಡುವ ಸಂದರ್ಭದಲ್ಲಿ ಅಶ್ವಿನಿ ಅವರು, "ಇಡೀ ಮನೆಯವರು ಚೈತ್ರಾಗೆ ಕಳಪೆ ಅಂತ ನಿರ್ಧಾರ ಮಾಡಿದ್ದಾರೆ, ಹಾಗಾಗಿ ನಾನು ಅವರಿಗೆ ಕಳಪೆ ನೀಡುತ್ತಿದ್ದೇನೆ" ಎಂದಿದ್ದು ವೀಕ್ಷಕರಲ್ಲಿ ಬೇಸರ ಮೂಡಿಸಿದೆ.

BBK 12: ಸೀಕ್ರೆಟ್‌ ರೂಮ್‌ನ ಸೀಕ್ರೆಟ್‌ ಬಯಲಾಗೋದು ಯಾವಾಗ? ʻಕಿಚ್ಚʼ ಸುದೀಪ್‌ ಎದುರು ಗೋಳಾಡಿದ ರಕ್ಷಿತಾ!

BBK 12: ʻಕಿಚ್ಚʼ ಸುದೀಪ್‌ ಎದುರು ಗೋಳಾಡಿದ ರಕ್ಷಿತಾ! ಏನ್‌ ಪ್ರಾಬ್ಲಂ?

BBK 12 Weekend Episode: ಬಿಗ್ ಬಾಸ್ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರ ಪರಿಸ್ಥಿತಿ ಈಗ ಕಿಚ್ಚ ಸುದೀಪ್ ಅವರ ವೀಕೆಂಡ್ ಪಂಚಾಯಿತಿಗೆ ತಲುಪಿದೆ. ಇಂದಿನ (ಡಿ.20) ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ರಕ್ಷಿತಾ ಸೀಕ್ರೆಟ್ ರೂಮ್‌ನಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್‌ ಇನ್ನಿಲ್ಲ; ಬಹುಮುಖ ಪ್ರತಿಭೆಯ ಬದುಕು ಅಂತ್ಯ

ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್‌ ಇನ್ನಿಲ್ಲ

Sreenivasan Death: ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ ಹಾಗೂ ನಿರ್ದೇಶಕ ಶ್ರೀನಿವಾಸನ್ (69) ಅವರು ಶನಿವಾರ (ಡಿಸೆಂಬರ್ 20) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

BBK 12: ʻಬಿಗ್ ಬಾಸ್ʼ ಮನೆಯ ಕ್ಯಾಪ್ಟನ್ ಆದ ಕಾವ್ಯ ಶೈವ; ಅದೊಂದು ವಿಚಾರದಲ್ಲಿ ಗಿಲ್ಲಿ ಸೀರಿಯಸ್ ಆಗಿಬಿಟ್ರಾ?

‌ʻಬಿಗ್ ಬಾಸ್ʼ ಮನೆಗೆ ಇನ್ಮೇಲೆ ಕಾವ್ಯ ಕ್ಯಾಪ್ಟನ್; ಗಿಲ್ಲಿ ಬದಲಾಗಿದ್ದೇಕೆ?

BBK 12 Update: ಬಿಗ್ ಬಾಸ್ ಕನ್ನಡ 12ರಲ್ಲಿ ಕಾವ್ಯ ಶೈವ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸೂರಜ್ ಸಿಂಗ್ ವಿರುದ್ಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮನೆಯ ಬಹುತೇಕ ಸದಸ್ಯರು ಕಾವ್ಯ ಪರವಾಗಿ ವೋಟ್ ಹಾಕಿದರು. ಆದರೆ, ಕಾವ್ಯ ಕ್ಯಾಪ್ಟನ್ ಆದರೂ ಅವರ ಆಪ್ತ ಗೆಳೆಯ ಗಿಲ್ಲಿ ನಟ ಕ್ಯಾಪ್ಟನ್ ರೂಮ್‌ಗೆ ಹೋಗಲು ನಿರಾಕರಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

ರಾಚಯ್ಯ - ನಿಂಗವ್ವ ರೊಮ್ಯಾಂಟಿಕ್‌ ಗೀತೆಗೆ ಆಲ್‌ ದಿ ಬೆಸ್ಟ್‌ ಹೇಳಿದ ಸ್ಯಾಂಡಲ್‌ವುಡ್‌ ಕಪಲ್ಸ್;‌ ʻಲ್ಯಾಂಡ್‌ಲಾರ್ಡ್‌ʼ ರಿಲೀಸ್‌ಗೆ ದಿನಗಣನೆ

Duniya VIjay: ʻಲ್ಯಾಂಡ್‌ಲಾರ್ಡ್ʼ ಚಿತ್ರದ ʻನಿಂಗವ್ವʼ ಸಾಂಗ್‌ ರಿಲೀಸ್‌

Landlord Song Launch: ಜಡೇಶ್ ಕೆ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಚಿತ್ರದ "ನಿಂಗವ್ವ ನಿಂಗವ್ವ" ಎಂಬ ರೊಮ್ಯಾಂಟಿಕ್ ಹಾಡು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತವಿರುವ ಈ ಹಾಡಿನಲ್ಲಿ ದುನಿಯಾ ವಿಜಯ್ (ರಾಚಯ್ಯ) ಮತ್ತು ರಚಿತಾ ರಾಮ್ (ನಿಂಗವ್ವ) ಜೋಡಿಯ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಅನ್ಯರ ಚಿಂತೆ ಬಿಟ್ಟು, ನಿಮ್ಮ ಗೆಲುವಿನ ಚಿಂತೆ ಮಾಡುತ್ತೀರಿ'; ತಿಳಿಯದೇ ಮಾತನಾಡುವವರಿಗೆ ತಮ್ಮ ಸಾಧನೆ ತೆರದಿಟ್ಟ ಜಗ್ಗೇಶ್‌!

'ಅನ್ಯರ ಚಿಂತೆ ಬಿಟ್ಟು, ನಿಮ್ಮ ಗೆಲುವಿನ ಚಿಂತೆ ಮಾಡುತ್ತೀರಿ' ಎಂದ ಜಗ್ಗೇಶ್‌

Jaggesh MP Report: ಕರ್ನಾಟಕದ ರಾಜ್ಯಸಭಾ ಸಂಸದರಾಗಿರುವ ನಟ ಜಗ್ಗೇಶ್ ಅವರು ಕಳೆದ 2.5 ವರ್ಷಗಳಲ್ಲಿ ಸಂಸತ್ತಿನಲ್ಲಿ ತಾವು ಮಾಡಿದ ಕೆಲಸಗಳ ವಿವರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಸಾಧನೆಯನ್ನು ಪ್ರಶ್ನಿಸುವವರಿಗೆ ಉತ್ತರವಾಗಿ, ಇದುವರೆಗೆ 10 ಅಧಿವೇಶನಗಳಲ್ಲಿ 268 ಪ್ರಶ್ನೆಗಳನ್ನು ಕೇಳಿರುವುದಾಗಿ ಅವರು ತಿಳಿಸಿದ್ದಾರೆ.

Darshan: ಥೇಟ್ ‌ಅಪ್ಪನಂತೆಯೇ ಮಿಂಚಿದ ವಿನೀಶ್;‌ ʻದಿ ಡೆವಿಲ್‌ʼ ಸಿನಿಮಾದ ಮೇಕಿಂಗ್‌ ಫೋಟೋಗಳನ್ನು ಕಂಡು ʻಡಿ ಬಾಸ್‌ʼ ಫ್ಯಾನ್ಸ್‌ಗೆ ಖುಷಿಯೋ ಖುಷಿ

Photos: ಥೇಟ್ ‌ಅಪ್ಪನಂತೆಯೇ ಮಿಂಚಿದ ದರ್ಶನ್ ಪುತ್ರ ವಿನೀಶ್‌

ನಟ ದರ್ಶನ್‌ ಅವರ ನಟನೆಯ ʻದಿ ಡೆವಿಲ್ʼ‌ ಸಿನಿಮಾವು ಈಚೆಗಷ್ಟೇ ತೆರೆಕಂಡಿತ್ತು. ದರ್ಶನ್‌ ಅಭಿಮಾನಿಗಳು ಈ ಚಿತ್ರವನ್ನು ದೊಡ್ಡಮಟ್ಟದಲ್ಲಿ ವೆಲ್‌ಕಮ್‌ ಮಾಡಿದರು. ಸದ್ಯ ಈ ಚಿತ್ರದ ಮೇಕಿಂಗ್‌ ಸ್ಟಿಲ್‌ಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಿದೆ. ಅದರಲ್ಲೂ ಪ್ರಮುಖವಾಗಿ ಪುತ್ರ ವಿನೀಶ್‌ ಜೊತೆಗೆ ದರ್ಶನ್‌ ಇರುವಂತಹ ಫೋಟೋಗಳು ಎಲ್ಲರ ಗಮನಸೆಳೆಯುತ್ತಿವೆ. ಜೊತೆಗೆ ರಾಜಸ್ಥಾನಕ್ಕೆ ಹೋದಾಗಿನ ಫೋಟೋಗಳು ಕೂಡ ಇಲ್ಲಿವೆ ನೋಡಿ.

ಅಬ್ಬಬ್ಬಾ! ʻಧುರಂಧರ್‌ʼ ಚಿತ್ರವನ್ನ ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ ರಾಮ್‌ ಗೋಪಾಲ್‌ ವರ್ಮಾ; ನಿರ್ದೇಶಕರು ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ʻಧುರಂಧರ್‌ʼ ಚಿತ್ರಕ್ಕೆ ರಾಮ್‌ ಗೋಪಾಲ್‌ ವರ್ಮಾ ಭಾರಿ ಶ್ಲಾಘನೆ!

RGV Reviews Dhurandhar: ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ನಿರ್ದೇಶಕ ಆದಿತ್ಯ ಧರ್ ಭಾರತೀಯ ಚಿತ್ರರಂಗದ ಭವಿಷ್ಯವನ್ನೇ ಬದಲಿಸಿದ್ದಾರೆ, ಇದೊಂದು ಕ್ವಾಂಟಮ್ ಲೀಪ್ (ದೈತ್ಯ ಜಿಗಿತ)" ಎಂದು ಆರ್‌ಜಿವಿ ಬಣ್ಣಿಸಿದ್ದಾರೆ.

Shilpa Shetty: ʻಆಧಾರವಿಲ್ಲದೇ ನನ್ನ ಹೆಸರನ್ನು ತಳುಕು ಹಾಕುವ ಪ್ರಯತ್ನʼ; 60 ಕೋಟಿ ರೂ. ವಂಚನೆ ಕೇಸ್‌ ಬಗ್ಗೆ ಮೌನಮುರಿದ ಶಿಲ್ಪಾ ಶೆಟ್ಟಿ

60 ಕೋಟಿ ರೂ. ವಂಚನೆ ಕೇಸ್‌ ಬಗ್ಗೆ ಮೌನಮುರಿದ ನಟಿ ಶಿಲ್ಪಾ ಶೆಟ್ಟಿ

Shilpa Shetty: ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಮೇಲಿನ ವಂಚನೆ ಆರೋಪಗಳ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಉದ್ಯಮಿ ದೀಪಕ್ ಕೊಠಾರಿ ಅವರು ಮಾಡಿರುವ 60 ಕೋಟಿ ರೂ. ವಂಚನೆ ಆರೋಪಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಿಲ್ಪಾ ಶೆಟ್ಟಿಯ ಮುಂಬೈ ಮನೆ ಮೇಲೆ ಐಟಿ ರೇಡ್‌ ಸುದ್ದಿ ಸುಳ್ಳಾ?  ವಕೀಲ ಹೇಳಿದ್ದೇನು?

ಶಿಲ್ಪಾ ಶೆಟ್ಟಿ ಮನೆ ಮೇಲೆ ಆದಾಯ ತೆರಿಗೆ ದಾಳಿ ನಿರಾಕರಿಸಿದ ವಕೀಲರು

Shilpa Shetty: ನಟಿ ಶಿಲ್ಪಾ ಶೆಟ್ಟಿಯ ಮುಂಬೈ ನಿವಾಸದ ಮೇಲೆ ಯಾವುದೇ ಆದಾಯ ತೆರಿಗೆ ದಾಳಿ ನಡೆದಿಲ್ಲವೆಂದು ಅವರ ವಕೀಲ ಪ್ರಶಾಂತ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ದುರ್ಬಾವನೆಯುಳ್ಳ ವ್ಯಕ್ತಿಗಳು ಸುಳ್ಳು ವರದಿ ಹರಡಿದ್ದು, ಅಂಥವರು ಕಾನೂನು ಕ್ರಮಕ್ಕೆ ಒಳಗಾಗಬೇಕಾಗಬಹುದು ಎಂದು ಎಚ್ಚರಿಸಲಾಗಿದೆ.

Loading...