ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Actor Upendra: ಸಿಲಿಂಡರ್‌ಗೂ ನನಗೂ ಲಿಂಕ್‌ ಇಲ್ಲ;  ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ

ಸಿಲಿಂಡರ್‌ಗೂ ನನಗೂ ಲಿಂಕ್‌ ಇಲ್ಲ; ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ

Upendra: ಸಿನಿಮಾ ಆಗಲಿ, ರಾಜಕೀಯ ವಿಚಾರಗಳೇ ಆಗಲಿ ಅಥವಾ ಸಮಾಜದ ಆಗು ಹೋಗುಗಳ ಕುರಿತು ಹೇಳುವ ರೀತಿ ಉಪೇಂದ್ರ ಅವರ ಸ್ಟೈಲ್‌ ಬೆರೆಯೇ. ಉಪ್ಪಿ ಶೇರ್ ಮಾಡಿದ ಪ್ರತಿ ಪೋಸ್ಟ್‌ನಲ್ಲೂ ಸೀಕ್ರೆಟ್‌ ಅರ್ಥಗಳು ಒಳಗೊಂಡಿರುತ್ತೆ. ಅದೇ ರೀತಿ ನಿನ್ನೆ ಕೂಡ ಒಂದು ಪೋಸ್ಟ್ ಶೇರ್ ಮಾಡಿದ್ದರು. ಇಂದೂ ಒಂದು ಪೋಸ್ಟ್‌ ಶೇರ್‌ ಮಾಡಿದ್ದಾರೆ. ನಾನು ಶೇರ್‌ ಮಾಡಿದ ಲಿಂಕ್‌ಗೂ ಸಿಲಿಂಡರ್‌ ಫೋಟೋಗೂ ನೀವು ತಿಳಿದುಕೊಂಡ ರೀತಿಗೂ ಸಂಬಂಧವಿಲ್ಲ ಎಂದಿದ್ದಾರೆ.

Rashmika Mandanna: ಹಳದಿ ಶಾಸ್ತ್ರದ ಫೋಟೊ ಹಂಚಿಕೊಂಡ ವಿರೋಶ್‌; ಜೋಡಿ ಸಂಭ್ರಮ ಹೀಗಿತ್ತು

ಹಳದಿ ಶಾಸ್ತ್ರದ ಫೋಟೊ ಹಂಚಿಕೊಂಡ ವಿರೋಶ್‌!

Viiaj Devarkonda: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಹಳದಿ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೋಳಿಗಿಂತ ಕಡಿಮೆಯೇನಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ರಶ್ಮಿಕಾ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ಕಾರ್ಯಕ್ರಮದ ಚಿತ್ರಗಳನ್ನು ಹಂಚಿಕೊಂಡರು, "ಹಲ್ದಿ + ಹೋಳಿಯಂತೆ ಭಾಸವಾಗುತ್ತಿದೆ" ಎಂದು ಬಹಿರಂಗಪಡಿಸಿದರು.

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮೊಮ್ಮಗನ ವಿಶ್ವ ದಾಖಲೆ: ರೂಬಿಕ್ಸ್ ಕ್ಯೂಬ್‌ನಲ್ಲಿ ಶಿವತೇಜ ಮ್ಯಾಜಿಕ್!

ರೂಬಿಕ್ಸ್ ಕ್ಯೂಬ್‌ನಲ್ಲಿ ರಾಕ್‌ಲೈನ್‌ ವೆಂಕಟೇಶ್‌ ಮೊಮ್ಮಗನ ವಿಶ್ವ ದಾಖಲೆ

ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಮೊಮ್ಮಗ ಶಿವತೇಜ ವೈ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ಕೇವಲ 1 ಗಂಟೆ 27 ನಿಮಿಷಗಳಲ್ಲಿ 21 ಬಾರಿ ಮಿಶ್ರಣಗೊಂಡ 'ಮೆಗಾಮಿಂಕ್ಸ್ ರೂಬಿಕ್ಸ್ ಕ್ಯೂಬ್' ಬಿಡಿಸುವ ಮೂಲಕ ಇಂಡಿಯಾ, ಏಷ್ಯಾ ಮತ್ತು ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತ್ರಿವಳಿ ದಾಖಲೆ ಬರೆದಿದ್ದಾರೆ.

Dharmendra: ಆಸ್ಕರ್​ ವೇದಿಕೆಯಲ್ಲಿ ಧರ್ಮೇಂದ್ರಗೆ ತಪ್ಪಿದ ಗೌರವ; ಅತ್ಯಂತ ನಾಚಿಕೆಗೇಡು ಎಂದ ಹೇಮಾ ಮಾಲಿನಿ

ಧರ್ಮೇಂದ್ರಗೆ ತಪ್ಪಿದ ಗೌರವ; ಅತ್ಯಂತ ನಾಚಿಕೆಗೇಡು ಎಂದ ಹೇಮಾ ಮಾಲಿನಿ

Hema Malini : ನಟ ಧರ್ಮೇಂದ್ರ ಅವರ ಬಗ್ಗೆ 98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ 'ಇನ್ ಮೆಮೋರಿಯಮ್' ವಿಭಾಗದಲ್ಲಿ ಯಾವುದೇ ಉಲ್ಲೇಖ ಇರಲಿಲ್ಲ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಇದೀಗ ಹಿರಿಯ ನಟಿ ಮತ್ತು ರಾಜಕಾರಣಿ ಹೇಮಾ ಮಾಲಿನಿ ಪ್ರತಿಕ್ರಿಯಿಸಿದ್ದಾರೆ . ಆಸ್ಕರ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ವಿಸ್ತೃತ ಪಟ್ಟಿಯಲ್ಲಿ ಧರ್ಮೇಂದ್ರ ಅವರನ್ನು ಗೌರವಿಸಲಾಗಿದ್ದರೂ, ನೇರ ಪ್ರಸಾರದಿಂದ ಅವರನ್ನು ಕೈಬಿಡಲಾಗಿದೆ ಎಂಬುದು ಭಾರತದಾದ್ಯಂತ ಅನೇಕ ಅಭಿಮಾನಿಗಳನ್ನು (Fans) ನಿರಾಶೆಗೊಳಿಸಿತು. ಈ ಬಗ್ಗೆ ಹೇಮಾ ಮಾಲಿನಿ ಇದು ಅತ್ಯಂತ "ನಾಚಿಕೆಗೇಡು" ಎಂದು ಕರೆದಿದ್ದಾರೆ.

Actress Sreeleela: ವೇದಿಕೆಯಲ್ಲಿ ನಟ ಮಹೇಶ್ ಕಂಡು ಶ್ರೀಲೀಲಾ ಗರಂ? ಅಸಲಿ ಮ್ಯಾಟರ್‌ ಏನು?

ವೇದಿಕೆಯಲ್ಲಿ ನಟ ಮಹೇಶ್ ಕಂಡು ಶ್ರೀಲೀಲಾ ಗರಂ? ಅಸಲಿ ಮ್ಯಾಟರ್‌ ಏನು?

Actress Sreeleela: "ಉಸ್ತಾದ್ ಭಗತ್ ಸಿಂಗ್" ಚಿತ್ರದ ಪೂರ್ವ ಬಿಡುಗಡೆ ಸಮಾರಂಭದಲ್ಲಿ ನಾಯಕಿ ಶ್ರೀಲೀಲಾ ಮತ್ತು ನಟ ರಂಗಸ್ಥಳಂ ಮಹೇಶ್ ನಡುವಿನ ಒಂದು ಸಣ್ಣ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಭಾನುವಾರ(ಮಾರ್ಚ್ 15) ಸಂಜೆ ಚಿತ್ರದ ಪ್ರೀ-ರಿಲೀಸ್ ಈವೆಂಟ್ ಹೈದರಾಬಾದ್‌ನಲ್ಲಿ ನಡೀತು. ಕಾರ್ಯಕ್ರಮದ ವೇಳೆ ಶ್ರೀಲೀಲಾ ಅವರು ತಮ್ಮ ಹಿಂದೆ ನಿಂತಿದ್ದ ನಟ ಮಹೇಶ್ ಆಚಂಟ ಕಡೆಗೆ ಅಸಮಾಧಾನದಿಂದ ತಿರುಗಿ ನೋಡಿದರು ಎನ್ನಲಾಗುತ್ತಿದೆ. ಈ ವಿಡಿಯೋ ಈಗ ವೈರಲ್‌ ಆಗಿದೆ.

ನಂಬಿಕೆಯ ಸುತ್ತ ಹೊಸೆಯಲ್ಪಟ್ಟ ವಿಶಿಷ್ಟ ಪ್ರೇಮಕಥೆ; ಶೂಟಿಂಗ್‌ ಮುಗಿಸಿದ ರಂಗಭೂಮಿ ಕಲಾವಿದರ ʻಲವ್‌ ಸೀಸನ್ಸ್‌ʼ ಸಿನಿಮಾ

ರಂಗಭೂಮಿ ಕಲಾವಿದರ 'ಲವ್ ಸೀಸನ್ಸ್' ಸಿನಿಮಾ ಶೂಟಿಂಗ್ ಕಂಪ್ಲೀಟ್‌

ನವಿರು ಪ್ರೇಮಕಥೆಯ ಎಳೆ ಇರುವ ಲವ್‌ ಸೀಸನ್ಸ್‌ ಸಿನಿಮಾವು ಚಿತ್ರೀಕರಣ ಪೂರೈಸಿದೆ. ರಂಗಭೂಮಿ ಹಿನ್ನೆಲೆಯ ಕೃತ್ವಿಕ್ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ 'ನಟನಾ' ಸಂಸ್ಥೆಯ ಮುಕುಂದ ರಾಮಸ್ವಾಮಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಬೆಂಗಳೂರಿನ ಗಲ್ಲಿಗಳ ನೈಜ ಕಥೆ ಈ ಚಿತ್ರದಲ್ಲಿದ್ದು, ರಂಗಭೂಮಿಯ ದಿಗ್ಗಜ ಕಲಾವಿದರ ದಂಡೇ ಚಿತ್ರದಲ್ಲಿದೆ.

Shreya Ghoshal: ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅಚ್ಚರಿಯ ಹೇಳಿಕೆ!

ಅರಿಜಿತ್ ಬೆನ್ನಲ್ಲೇ ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಅಚ್ಚರಿಯ ಹೇಳಿಕೆ!

Shreya Ghoshal: ಬಾಲಿವುಡ್‌ನಲ್ಲಿ ಹಿನ್ನೆಲೆ ಗಾಯನದಿಂದ ದೂರ ಸರಿಯುವ ಅರಿಜಿತ್ ಸಿಂಗ್ ಅವರ ನಿರ್ಧಾರದ ಬಗ್ಗೆ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ವಿರಾಮ ತೆಗೆದುಕೊಳ್ಳುವ ಆಲೋಚನೆ ಕೂಡ ಅವರ ಮನಸ್ಸಿಗೆ ಬಂದಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ರೀತಿ ನಿರ್ಧಾರ ಮಾಡಿದ ಅರಿಜಿತ್ ಅವರ ಧೈರ್ಯವನ್ನು ಗಾಯಕಿ ಶ್ಲಾಘಿಸಿದ್ದಾರೆ.

ಒಟಿಟಿ ವೇದಿಕೆಗಳು ಒದ್ದಾಡುತ್ತಿವೆಯೇ? ಲಾಭದ ಹಾದಿಗಾಗಿ ಈಗ ಜಾಹೀರಾತುಗಳೇ ಗತಿ! ಹಿಂಗಾದ್ರೆ ಮುಂದೇನಾಗ್ಬೋದು ಭವಿಷ್ಯ?

ಹಿಂಗೆ ಆದ್ರೆ ಮುಂದೇನಾಗ್ಬೋದು OTT ವೇದಿಕೆಗಳ ಭವಿಷ್ಯ? ಏನ್ ಹೇಳತ್ತೆ ವರದಿ?

ಒಟಿಟಿ ವೇದಿಕೆಗಳ ಸವಾಲಿನ ಕುರಿತಾದ ವರದಿಯು ಡಿಜಿಟಲ್ ಮನರಂಜನಾ ಲೋಕದ ಆತಂಕಕಾರಿ ಸತ್ಯಗಳನ್ನು ಬಿಚ್ಚಿಟ್ಟಿದೆ. ಕೋವಿಡ್ ಕಾಲದಲ್ಲಿ ಭಾರಿ ಏರಿಕೆ ಕಂಡಿದ್ದ ಒಟಿಟಿ ಮಾರುಕಟ್ಟೆ ಈಗ ಸ್ಯಾಚುರಶನ್ ಹಂತ ತಲುಪಿದ್ದು, ಲಾಭ ಗಳಿಸಲು ಜಾಹೀರಾತು ಆಧಾರಿತ ಮಾದರಿಗಳಿಗೆ ಮೊರೆ ಹೋಗುತ್ತಿದೆ.

ʻಬಾಸ್‌ ಸಿನಿಮಾಗೆ ಸೆನ್ಸಾರ್‌ ಸೆರ್ಟಿಫಿಕೇಟ್‌ ಕೊಡಬಾರದು..ʼ; ನಟ ದರ್ಶನ್‌ ಲಾಯರ್‌ ಕಡೆಯಿಂದ ನೋಟಿಸ್! ನಿರ್ದೇಶಕರು ಹೇಳಿದ್ದೇನು?

'ಬಾಸ್' ಚಿತ್ರಕ್ಕೆ ಸರ್ಟಿಫಿಕೇಟ್ ನೀಡದಂತೆ ಸೆನ್ಸಾರ್ ಮಂಡಳಿಗೆ ನೋಟಿಸ್‌!

ತನುಷ್‌ ಶಿವಣ್ಣ ನಟನೆಯ ʻಬಾಸ್‌ʼ ಚಿತ್ರಕ್ಕೆ ನಟ ದರ್ಶನ್ ಪರ ವಕೀಲರು ನೋಟಿಸ್ ನೀಡುವ ಮೂಲಕ ತಡೆ ಒಡ್ಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಈ ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಹೋಲುತ್ತಿದೆ ಎಂದು ಆರೋಪಿಸಿ ಸೆನ್ಸಾರ್ ಮಂಡಳಿಗೆ ದೂರು ನೀಡಲಾಗಿದೆ. ಆದರೆ, ಇದು ಯಾವುದೇ ವ್ಯಕ್ತಿಯನ್ನು ಉದ್ದೇಶಿಸಿ ಮಾಡಿದ ಸಿನಿಮಾ ಅಲ್ಲ ಎಂದು ನಿರ್ದೇಶಕ ಲವ ಸ್ಪಷ್ಟಪಡಿಸಿದ್ದಾರೆ.

ಸಲ್ಮಾನ್‌ ಖಾನ್‌ ನಟನೆಯ ʻಬ್ಯಾಟಲ್ ಆಫ್ ಗಲ್ವಾನ್ʼ ಚಿತ್ರದ ಟೈಟಲ್‌ ಚೇಂಜ್;‌ ʻಮಾತೃಭೂಮಿʼ ಎಂದು ಬದಲಾವಣೆ ಮಾಡಿದ್ದೇಕೆ?

ಸಲ್ಮಾನ್ ಖಾನ್ ಹೊಸ ಚಿತ್ರದ ಟೈಟಲ್ ದಿಢೀರ್‌ ಚೇಂಜ್: ಹೊಸ ಶೀರ್ಷಿಕೆ ಏನು?

ಸಲ್ಮಾನ್ ಖಾನ್ ಅವರ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಶೀರ್ಷಿಕೆಯನ್ನ ಈಗ 'ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್' ಎಂದು ಬದಲಾವಣೆ ಮಾಡಲಾಗಿದೆ. ಅಪೂರ್ವ ಲಖಿಯಾ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್ ಸೈನಿಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ʻಸು ಫ್ರಮ್‌ ಸೋʼ ಬಳಿಕ ಬರ್ತಿದೆ ಮತ್ತೊಂದು ಕರಾವಳಿ ಸೊಗಡಿನ ಹಾಸ್ಯ ಪ್ರಧಾನ ಸಿನಿಮಾ; ʻಮ್ಯಾರೇಜ್‌ ಪಾರ್ಟಿʼ ಚಿತ್ರದಲ್ಲಿ ಯಾರೆಲ್ಲಾ ಇದ್ದಾರೆ? ‌

ಕನ್ನಡಿಗರನ್ನು ನಗಿಸಲು ಬರ್ತಿದೆ ಕರಾವಳಿ ಸೊಗಡಿನ 'ಮ್ಯಾರೇಜ್ ಪಾರ್ಟಿ' ಚಿತ್ರ

'ಅಧಿಪತ್ರ' ಖ್ಯಾತಿಯ ಚಯನ್ ಶೆಟ್ಟಿ ನಿರ್ದೇಶನದ ʻಮ್ಯಾರೇಜ್‌ ಪಾರ್ಟಿʼ ಚಿತ್ರದಲ್ಲಿ ವಿನೀತ್ ಕುಮಾರ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದು, ಪ್ರಕಾಶ್ ತುಮಿನಾಡು ಹಾಗೂ ನವೀನ್ ಡಿ. ಪಡೀಲ್ ಅಂತಹ ದಿಗ್ಗಜ ಕಲಾವಿದರಿದ್ದಾರೆ. ಕುಂದಾಪುರ ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

‘ಪೊಲೀಸ್ ಕಂಪ್ಲೇಂಟ್’ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್ - ರಾಗಿಣಿ ದ್ವಿವೇದಿ; ಟೀಸರ್‌ ರಿಲೀಸ್‌ ಮಾಡಿದ ನಟಿ ಪ್ರೇಮಾ

‌'ಪೊಲೀಸ್ ಕಂಪ್ಲೇಂಟ್' ಚಿತ್ರದಲ್ಲಿ ರಾಗಿಣಿ-ವರಲಕ್ಷ್ಮೀ ಜುಗಲ್‌ಬಂದಿ!

‘ಪೊಲೀಸ್ ಕಂಪ್ಲೇಂಟ್’ ಸಿನಿಮಾದ ಮೂಲಕ ನಟಿ ರಾಗಿಣಿ ದ್ವಿವೇದಿ ಮತ್ತೆ ಆ್ಯಕ್ಷನ್ ಅವತಾರ ತಾಳಿದ್ದಾರೆ. ವರಲಕ್ಷ್ಮೀ ಶರತ್‌ಕುಮಾರ್ ಜೊತೆಗೂಡಿ ನಟಿಸಿರುವ ಈ ಚಿತ್ರವು ಆ್ಯಕ್ಷನ್, ಹಾರರ್ ಮತ್ತು ತಾಯಿ-ಮಗನ ಎಮೋಷನಲ್ ಕಥಾಹಂದರ ಹೊಂದಿದೆ. ಇತ್ತೀಚೆಗಷ್ಟೇ ನಟಿ ಪ್ರೇಮಾ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್‌ ಜೊತೆ ತೆಲುಗು ನಟ ಪ್ರಭಾಸ್‌ ಕಮಿಟ್‌ ಆಗಿದ್ದ ಆ ಮೂರು ಸಿನಿಮಾಗಳ ಅಪ್ಡೇಟ್‌ ಏನು? ಯಾವಾಗ ಶುರುವಾಗಲಿವೆ?

ಹೊಂಬಾಳೆ ಜೊತೆ ಪ್ರಭಾಸ್ ಹ್ಯಾಟ್ರಿಕ್; ಆ 3 ಚಿತ್ರಗಳಿಗೆ ನಿರ್ದೇಶಕರು ಯಾರು?

ಪ್ರಭಾಸ್‌ ಮತ್ತು ಹೊಂಬಾಳೆ ಫಿಲ್ಮ್ಸ್‌ ಕಾಂಬಿನೇಷನ್‌ನ ಮೂರು ಮೆಗಾ ಸಿನಿಮಾಗಳ ಬಗ್ಗೆ ಕುತೂಹಲಕಾರಿ ಅಪ್‌ಡೇಟ್‌ಗಳು ಹೊರಬಿದ್ದಿವೆ. 'ಸಲಾರ್ 2' ಶೂಟಿಂಗ್ ಮುಂದಿನ ವರ್ಷ ಆರಂಭ ಆಗುವ ಸಾಧ್ಯತೆ ಇದ್ದು, ಮಲಯಾಳಂನ ದಿಂಜಿತ್ ಅಯ್ಯತಾನ್ ಹಾಗೂ 'ಅಮರನ್' ಖ್ಯಾತಿಯ ರಾಜ್‌ಕುಮಾರ್ ಪೆರಿಯಾಸ್ವಾಮಿ ಅವರು ಪ್ರಭಾಸ್‌ಗೆ ಆಕ್ಷನ್ ಕಟ್ ಹೇಳುವ ಸಾಧ್ಯತೆ ದಟ್ಟವಾಗಿದೆ.

Dhurandhar 2 : ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ 120 ಕೋಟಿ ಗಳಿಕೆ ದಾಟಿದೆ ‘ಧುರಂಧರ್ 2’!

ಕೇವಲ ಅಡ್ವಾನ್ಸ್ ಬುಕಿಂಗ್‌ನಿಂದಲೇ 120 ಕೋಟಿ ಗಳಿಕೆ ದಾಟಿದೆ ‘ಧುರಂಧರ್ 2’!

Dhurandhar 2 :ರಣವೀರ್ ಸಿಂಗ್ ನಟಿಸಿದ ಆದಿತ್ಯ ಧರ್ ಅವರ ಸ್ಪೈ ಥ್ರಿಲ್ಲರ್ ಧುರಂಧರ್ 2: ದಿ ರಿವೆಂಜ್ , ಮಾರ್ಚ್ 19 ರ ಗುರುವಾರ ಈದ್, ಯುಗಾದಿ ಮತ್ತು ಗುಡಿ ಪಾಡ್ವಾ ಸಂದರ್ಭದಲ್ಲಿ ಬಿಡುಗಡೆಯಾಲಿದೆ. ರಿಲೀಸ್‌ ಆಗೋ ನಾಲ್ಕು ದಿನಗಳ ಮೊದಲೇ ದೇಶೀಯವಾಗಿ ಮತ್ತು ವಿಶ್ವಾದ್ಯಂತ ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್‌ ಮಾಡಿದೆ. ಬಹು ನಿರೀಕ್ಷಿತ ಸೀಕ್ವೆಲ್ ಈಗಾಗಲೇ ಭಾರತದಲ್ಲಿ 60 ಕೋಟಿ ರೂ.ಗಳನ್ನು ಮತ್ತು ವಿಶ್ವಾದ್ಯಂತ ಮುಂಗಡ ಬುಕಿಂಗ್ ನಿಂದಲೇ 100 ಕೋಟಿ ಗಳಿಕೆ ದಾಟಿದೆ.

Dharmendra:  ಹಿರಿಯ ನಟನನ್ನೇ ಆಸ್ಕರ್ ಮರೆತುಬಿಟ್ಟಿತೇ? ನಟ ಧರ್ಮೇಂದ್ರ ಫ್ಯಾನ್ಸ್‌ ಬೇಸರ

ಹಿರಿಯ ನಟನನ್ನೇ ಆಸ್ಕರ್ ಮರೆತುಬಿಟ್ಟಿತೇ? ನಟ ಧರ್ಮೇಂದ್ರ ಫ್ಯಾನ್ಸ್‌ ಬೇಸರ

Oscars 2026 In Memoriam segment: 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ರಾತ್ರಿ ಲಾಸ್ ಏಂಜಲೀಸ್‌ನಲ್ಲಿ ನಡೆಯಿತು. ಹಾಲಿವುಡ್‌ನ 2025ರ ಅತ್ಯುತ್ತಮ ಮತ್ತು ಪ್ರತಿಭಾನ್ವಿತರನ್ನು ಸನ್ಮಾನಿಸಲಾಯಿತು. ಕಳೆದ ವರ್ಷದಲ್ಲಿ ನಿಧನರಾದ ನಟರು, ಚಲನಚಿತ್ರ ನಿರ್ಮಾಪಕರು ಮತ್ತು ತಂತ್ರಜ್ಞರನ್ನು ಸನ್ಮಾನಿಸುವ ಇನ್ ಮೆಮೋರಿಯಮ್ ವಿಭಾಗವನ್ನು ಸಂಜೆ ನಡೆಸಲಾಯಿತು. ಬಾಲಿವುಡ್ ದಂತಕಥೆ ಧರ್ಮೇಂದ್ರ ಅವರನ್ನು ಆಸ್ಕರ್ 2026 ‘ಮೆಮೋರಿಯಮ್’ ವಿಭಾಗದಲ್ಲಿ ಸೇರಿಸಲಾಗಿಲ್ಲ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Oscars 2026 Winners List: ಆಸ್ಕರ್ ಪ್ರಶಸ್ತಿ ಘೋಷಣೆ: ವಿಜೇತರ ಪಟ್ಟಿ ಇಲ್ಲಿದೆ

Oscars 2026: ಆಸ್ಕರ್ ಪ್ರಶಸ್ತಿ ಘೋಷಣೆ: ವಿಜೇತರ ಪಟ್ಟಿ ಇಲ್ಲಿದೆ

Oscars 2026 Winners List: ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದ 88ನೇ ಅಕಾಡೆಮಿ ಅವಾರ್ಡ್, ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಈಗಾಗಲೇ ನಾಮಿನೇಟ್ ಆಗಿರುವ ಸಿನಿಮಾಗಳ ಪೈಕಿ 'ಸಿನ್ನೆರ್ಸ್' 16 ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಹಾಗೇ ಟೈಟಾನಿಕ್ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೋ ನಟಿಸಿದ 'ಒನ್ ಬ್ಯಾಟಲ್ ಆಫ್ಟರ್ ಎನದರ್' ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆಮಿ ಮ್ಯಾಡಿಗನ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಪಡೆದುಕೊಂಡರು .

CSK Over IPL Jersey: ಸಿಎಸ್​​ಕೆ ವಿರುದ್ಧ ಮದ್ರಾಸ್ ಹೈಕೋರ್ಟ್​​ನಲ್ಲಿ ದಾವೆ ಹೂಡಿದ ಸನ್ ಪಿಕ್ಚರ್ಸ್

CSK ವಿರುದ್ಧ ಮದ್ರಾಸ್ ಹೈಕೋರ್ಟ್​​ನಲ್ಲಿ ದಾವೆ ಹೂಡಿದ ಸನ್ ಪಿಕ್ಚರ್ಸ್

Madras HC Hears: ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟ್ ಲಿಮಿಟೆಡ್ (ಸಿಎಸ್‌ಕೆ) ವಿರುದ್ಧ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ಮೇಲೆ ಸನ್ ಟಿವಿ ನೆಟ್‌ವರ್ಕ್ (Sun TV Network) ಲಿಮಿಟೆಡ್ ಮದ್ರಾಸ್ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದೆ. ಈ ವಿವಾದವು ಐಪಿಎಲ್ 2026 ತಂಡದ ಜೆರ್ಸಿಗಾಗಿ ಬಿಡುಗಡೆಯಾದ ಪ್ರಚಾರದ ವೀಡಿಯೊಗೆ ಸಂಬಂಧಿಸಿದೆ. ವೀಡಿಯೊದಲ್ಲಿ ಜೈಲರ್, ಜೈಲರ್-2 ಮತ್ತು ಕೂಲಿ ಚಿತ್ರಗಳ ಆಡಿಯೊ ಟ್ರ್ಯಾಕ್‌ಗಳು, ಹಿನ್ನೆಲೆ ಸಂಗೀತ ಮತ್ತು ಸಂಭಾಷಣೆಗಳನ್ನು ಅನುಮತಿಯಿಲ್ಲದೆ ಬಳಸಲಾಗಿದೆ ಎಂದು ಸನ್ ಟಿವಿ ಹೇಳಿಕೊಂಡಿದೆ.

Ramayana Movie:  ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ ನಟ ಫೈಸಲ್ ಮಲಿಕ್; ಪಾತ್ರ ಯಾವುದು?

ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ ನಟ ಫೈಸಲ್ ಮಲಿಕ್

Ramayana Movie: ಚಲನಚಿತ್ರ ನಿರ್ಮಾಪಕ ನಿತೇಶ್ ತಿವಾರಿ ಅವರ ರಾಮಾಯಣ ಘೋಷಣೆಯಾದಾಗಿನಿಂದ ತಾರಾಗಣದ ಬಗ್ಗೆ ಕುತೂಹಲ ಮೂಡಿಸಿದೆ. ನಟ ಬಾಬಿ ಡಿಯೋಲ್ ಈ ಹಿಂದೆ ರಾವಣ (ಯಶ್) ನ ಕಿರಿಯ ಸಹೋದರ ಕುಂಭಕರ್ಣ ಪಾತ್ರಕ್ಕೆ ಸೆಲೆಕ್ಟ್‌ ಆಗಿದ್ದರು ಎನ್ನಲಾಗಿತ್ತು. ಆದರೀಗ ಅವರು ಈ ಪಾತ್ರ ನಿಭಾಯಿಸುತ್ತಿಲ್ಲ ಎನ್ನಲಾಗಿದೆ. ಪಂಚಾಯತ್‌ ಚಿತ್ರದಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಮತ್ತು ಇತ್ತೀಚೆಗೆ ಸುಬೇದಾರ್ ಚಿತ್ರದಲ್ಲಿ ಕಾಣಿಸಿಕೊಂಡ ಫೈಸಲ್ ಮಲಿಕ್ , ಈ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಚಿತ್ರದ ಮೊದಲ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ್ದಾರೆ, ಈ ದೀಪಾವಳಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.

Praneetha Subhash: ಎಚ್.ಎಸ್.ಡಬ್ಲ್ಯೂ.ದಿಂದ ಭಾರತದ ಮೊದಲ ಅತ್ಯಂತ ವೇಗದ ಸಿಂಗಲ್-ಹೆಡ್ ಎಂಬ್ರಾಯಿಡರಿ ಯಂತ್ರ `ಟರ್ಬೊ 1.5’ ಬೆಂಗಳೂರಿನಲ್ಲಿ ಬಿಡುಗಡೆ

ನಟಿ ಪ್ರಣೀತಾ ಸುಭಾಷ್ ರಿಂದ ಎಂಬ್ರಾಯಿಡರಿ ಯಂತ್ರಗಳ ಅನಾವರಣ

ಎಚ್.ಎಸ್.ಡಬ್ಲ್ಯೂ. ತನ್ನ ಸಿಂಗಲ್ ಹೆಡ್ ಎಂಬ್ರಾಯಿಡರಿ ಮೆಷಿನ್ ಗಳ ಸುತ್ತಲೂ ಪ್ರತಿಷ್ಠೆ ಯನ್ನು ನಿರ್ಮಿಸಿಕೊಂಡಿದ್ದು ಇದನ್ನು ಬೊಟಿಕ್ ಮಾಲೀಕರು, ಗಾರ್ಮೆಂಟ್ ಉದ್ಯಮಗಳು ಮತ್ತು ಸ್ವತಂತ್ರ ಉದ್ಯಮಿಗಳು ಬಳಸುತ್ತಿದ್ದು ಅವರಲ್ಲಿ ಬಹುತೇಕರು ತಮ್ಮ ಮನೆಯಿಂದಲೇ ಎಂಬ್ರಾಯಿಡರಿ ಕೆಲಸ ನಿರ್ವಹಿಸುತ್ತಾರೆ.

Arjun Das: `ಹೃದಯ ಒಡೆದಿದೆ'; ಈ ಸೌತ್‌ ನಟನ ಹಿಂದಿದೆ ಕಹಿ ಅಧ್ಯಾಯ

Arjun Das: `ಹೃದಯ ಒಡೆದಿದೆ'; ಈ ಸೌತ್‌ ನಟನ ಹಿಂದಿದೆ ಕಹಿ ಅಧ್ಯಾಯ

Arjun Das: ಸಿನಿರಂಗದಲ್ಲಿ ಪ್ರೇಮ ಪ್ರಕರಣ, ಬ್ರೇಕ್ ಅಪ್ , ಮದುವೆ ಮತ್ತು ವಿಚ್ಛೇದನಗಳು ಸಾಮಾನ್ಯ. ಒಂದಲ್ಲ ಒಂದು ತಾರೆಯರು ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ‘ಕೈದಿ’, ‘ಮಾಸ್ಟರ್’ ಚಿತ್ರಗಳ ಮೂಲಕ ಖಡಕ್ ವಿಲನ್ ಆಗಿ ಅತ್ಯುತ್ತಮ ನಟನಾಗಿ ಗುರುತಿಸಿಕೊಂಡಿರುವ ಅರ್ಜುನ್ ದಾಸ್ (Arjun Das), ಬ್ರೇಕಪ್‌ ಸುದ್ದಿ ಸಾಕಷ್ಟು ಚರ್ಚೆಯಲ್ಲಿದೆ.

Film Critics Academy Awards: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ : ಅತೀ ಹೆಚ್ಚು ನಾಮನಿರ್ದೇಶಿತರು ಯಾರು?

ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ : ನಾಮನಿರ್ದೇಶಿತರು ಯಾರು?

Film Critics Academy Awards: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 7ನೇ ವರ್ಷದ ಪ್ರಶಸ್ತಿ ಸಮಾರಂಭಕ್ಕೂ ಮುನ್ನ ಟ್ರೋಫಿ ಅನಾವರಣ ಮತ್ತು ನಾಮ ನಿರ್ದೇಶಿತರ ಹೆಸರುಗಳನ್ನು ಘೋಷಿಸಲಾಯಿತು. ಟ್ರೋಫಿ ಅನಾವರಣ ಕಾರ್ಯಕ್ರಮಕ್ಕೆ ಖ್ಯಾತ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಕೆ.ಎಂ ಚೈತನ್ಯ, ಖ್ಯಾತ ನಟಿ ಪೂಜಾ ಗಾಂಧಿ ಹಾಗೂ ನಟ ಶ್ರೀನಗರ ಕಿಟ್ಟಿ, ಅಂಬರ್ಸ್ಟೋನ್ ಪ್ರಾಪರ್ಟೀಸ್ ಸೇಲ್ಸ್ ಹೆಡ್ ಸುನೀಲ್, ಮಾರ್ಕೆಟಿಂಗ್ ಹಡೆ ಅನೂಪ್, ಮಾರ್ಕೆಟಿಂಗ್ ಜನರಲ್ ಮ್ಯಾನೇಜರ್ ಶ್ವೇತಾ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಸಿನಿಮಾದ ಹಿರಿಯ ಪಿ.ಆರ್.ಓ ವಿಜಯ್ ಕುಮಾರ್ ಅವರ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

Anurag Dobhal: ಯೂಟ್ಯೂಬರ್ ಅನುರಾಗ್ ದೊಭಾಲ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

ಯೂಟ್ಯೂಬರ್ ಅನುರಾಗ್ ದೊಭಾಲ್ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ

Anurag Dobhal condition serious : ಬಿಗ್ ಬಾಸ್ 17 ಸ್ಪರ್ಧಿ ಮತ್ತು ಯೂಟ್ಯೂಬರ್ ಅನುರಾಗ್ ದೋಭಾಲ್ ಅವರನ್ನು ಗುರುವಾರ ಐಸಿಯುನಿಂದ ಬಿಡುಗಡೆ ಮಾಡಿದ ನಂತರ ಅವರ ಸ್ಥಿತಿ ಇನ್ನಷ್ಟು ಹದಗೆಟ್ಟಿದೆ ಎಂದು ವರದಿಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಇರುವಾಗಲೇ ಅವರ ಕಾರು ಅಪಘಾತಕ್ಕೀಡಾಗಿ ಅವರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಮ್ಯಾನೇಜರ್ ರೋಹಿತ್ ಪಾಂಡೆ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುತ್ತಾ, ಅವರ ಸ್ಥಿತಿ ಗಂಭೀರವಾಗಿದೆ ಮತ್ತು ಅಂದಿನಿಂದ ಹದಗೆಟ್ಟಿದೆ ಎಂದು ಹೇಳಿದ್ದಾರೆ.

R Madhavan: ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಆರ್. ಮಾಧವನ್; ಆಗಿದ್ದೇನು?

ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಆರ್. ಮಾಧವನ್; ಆಗಿದ್ದೇನು?

R Madhavan: ಆರ್. ಮಾಧವನ್ ಅವರ ಹೆಸರಿನಲ್ಲಿ ಕಿಡಿಗೇಡಿಯೊಬ್ಬ ನಕಲಿ ಸೋಶಿಯಲ್ ಮೀಡಿಯಾ ಖಾತೆಯನ್ನು ತೆರೆದು ಜನರ ದಾರಿ ತಪ್ಪಿಸುತ್ತಿದ್ದಾನೆ. ಈ ವಿಷಯದ ಬಗ್ಗೆ ಸ್ವತಃ ಮಾಧವನ್ ಅವರೇ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ನಟ ಇತ್ತೀಚೆಗೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತಮ್ಮನ್ನು ಪ್ರತಿನಿಧಿಸುವುದಾಗಿ ಯಾರೋ ಸುಳ್ಳು ಹೇಳಿಕೊಳ್ಳುತ್ತಿದ್ದಾರೆ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Thalapathy Vijay: ಶೀಘ್ರದಲ್ಲಿಯೇ ತ್ರಿಶಾ ಮದುವೆ? ತಾಯಿ ಉಮಾ ಸುಳಿವು ನೀಡಿದ್ದೇನು?

ಶೀಘ್ರದಲ್ಲಿಯೇ ತ್ರಿಶಾ ಮದುವೆ? ತಾಯಿ ಉಮಾ ಸುಳಿವು ನೀಡಿದ್ದೇನು?

Thalapathy Vijay: ವಿಜಯ್ ಮತ್ತು ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ವಿವಾದ ಆರಂಭವಾದ ನಂತರ, ಇತ್ತೀಚೆಗೆ ನಡೆದ ಆರತಕ್ಷತೆಯಲ್ಲಿ ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇಬ್ಬರೂ ಒಂದೇ ರೀತಿಯ ಉಡುಪುಗಳಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ನಂತರ, ಸಂಗೀತಾ ಅವರ ವಿಚ್ಛೇದನ ಅರ್ಜಿಯಿಂದ ಉಂಟಾದ ಗೊಂದಲದ ನಡುವೆ, ತ್ರಿಶಾ ಅವರೊಂದಿಗಿನ ಸಂಬಂಧವನ್ನು ಅಧಿಕೃತಗೊಳಿಸಲು ವಿಜಯ್ ಈ ದಿಟ್ಟ ಕ್ರಮ ಕೈಗೊಂಡಿದ್ದಾರೆ ಎಂದು ವದಂತಿ ಹಬ್ಬಿತ್ತು.

Loading...