ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

ʻಮಂಜುಮ್ಮೆಲ್‌ ಬಾಯ್ಸ್‌ʼ ಡೈರೆಕ್ಟರ್‌ ಚಿದಂಬರಂ ವಿರುದ್ಧ FIR; ನಟಿಯಿಂದ ಲೈಂಗಿಕ ಕಿರುಕುಳದ ಗಂಭೀರ ಆರೋಪ!

ʻಮಂಜುಮ್ಮೆಲ್‌ ಬಾಯ್ಸ್‌ʼ ನಿರ್ದೇಶಕ ಚಿದಂಬರಂ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ

Director Chidambaram Case: 'ಮಂಜುಮ್ಮೆಲ್ ಬಾಯ್ಸ್' ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದ ನಿರ್ದೇಶಕ ಚಿದಂಬರಂ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿಬಂದಿದೆ. 2022ರಲ್ಲಿ ಕೊಚ್ಚಿಯ ಅಪಾರ್ಟ್‌ಮೆಂಟ್‌ನಲ್ಲಿ ನಟಿಯೊಬ್ಬರಿಗೆ ಕಿರುಕುಳ ನೀಡಿದ ದೂರಿನನ್ವಯ ಎರ್ನಾಕುಲಂ ಪೊಲೀಸರು FIR ದಾಖಲಿಸಿದ್ದಾರೆ.

Ranveer Singh: ʻಧುರಂಧರ್‌ 2ʼ ಸಿನಿಮಾ ಅವಧಿ 235 ನಿಮಿಷ! ರಿಲೀಸ್‌ಗೆ 17 ದಿನ ಬಾಕಿ ಇರುವಾಗ ಫ್ಯಾನ್ಸ್‌ ಕಾಡುತ್ತಿದೆ ದೊಡ್ಡ ಪ್ರಶ್ನೆ!

'ಧುರಂಧರ್ 2' ಅವಧಿ ಬರೋಬ್ಬರಿ 4 ಗಂಟೆ? ಫ್ಯಾನ್ಸ್‌ಗೆ ಕಾಡ್ತಿದೆ ಹೊಸ ಚಿಂತೆ!

Dhurandhar 2 Movie Updates: ಕಳೆದ ವರ್ಷ 1300 ಕೋಟಿ ರೂ. ಬಾಚಿದ್ದ 'ಧುರಂಧರ್' ಚಿತ್ರದ ಸೀಕ್ವೆಲ್ ಮಾರ್ಚ್ 19ಕ್ಕೆ ಬಿಡುಗಡೆಯಾಗಲಿದೆ. ಆದರೆ, ಸರಿಯಾದ ಪ್ರಮೋಷನ್ ಮಾಡದೇ ಇರುವ ಚಿತ್ರತಂಡದ ಬಗ್ಗೆ ಸಿನಿಪ್ರಿಯರಲ್ಲಿ ಬೇಸರ ಮೂಡಿಸಿದೆ.

Tabaahi Song: ʻಟಾಕ್ಸಿಕ್‌ʼ ಸಿನಿಮಾದ ಮೊದಲ ಸಾಂಗ್‌ ರಿಲೀಸ್‌; ʻತಬಾಹಿʼ ಹಾಡಿನಲ್ಲಿ ಬಯಲಾಯ್ತು ನಟ ಯಶ್ ಚಾಣಕ್ಷತನ!

'ಟಾಕ್ಸಿಕ್' ಚಿತ್ರದ 'ತಬಾಹಿ' ಸಾಂಗ್ ರಿಲೀಸ್; ಸಸ್ಪೆನ್ಸ್ ಕಾಪಾಡಿಕೊಂಡ ಯಶ್!

Toxic First Song Tabaahi: ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಬಹುನಿರೀಕ್ಷಿತ 'ತಬಾಹಿ' ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ವಿಶಾಲ್ ಮಿಶ್ರಾ ಸಂಗೀತ ನೀಡಿ ಹಾಡಿರುವ ಈ ಹಾಡಿಗೆ ಕನ್ನಡದಲ್ಲಿ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದಾರೆ. ವಿಶೇಷವೆಂದರೆ, ಚಿತ್ರದ ಕಥೆಯ ಯಾವುದೇ ಸುಳಿವು ಬಿಟ್ಟುಕೊಡಬಾರದು ಎಂಬ ಕಾರಣಕ್ಕೆ ಯಶ್ ಕೇವಲ ಒಂದು ಪೋಸ್ಟರ್ ಬಳಸಿ ಹಾಡನ್ನು ರಿಲೀಸ್ ಮಾಡುವ ಮೂಲಕ ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಿದ್ದಾರೆ.

Yash: ʻಟಾಕ್ಸಿಕ್‌ʼ ಚಿತ್ರದಲ್ಲಿ ಕಿಯಾರಾ ಅಡ್ವಾಣಿ ಪಾತ್ರವೇನು? ಪಡೆದ ಸಂಭಾವನೆ ಎಷ್ಟು? ಹೊರಬಿತ್ತು ಅಚ್ಚರಿಯ ವಿಚಾರ!

ಯಶ್ ಎದುರು ಸಖತ್‌ ಸವಾಲಿನ ಪಾತ್ರವನ್ನ ನಿಭಾಯಿಸಿದ್ರಾ ಕಿಯಾರಾ ಅಡ್ವಾಣಿ?

Toxic Movie Updates: ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಮೊದಲ ಹಾಡು ಬಿಡುಗಡೆಗೆ ಸಜ್ಜಾಗಿರುವ ಬೆನ್ನಲ್ಲೇ, ನಟಿ ಕಿಯಾರಾ ಅಡ್ವಾಣಿ ಅವರ ಪಾತ್ರದ ಕುರಿತು ಕುತೂಹಲಕಾರಿ ವಿಚಾರಗಳು ಹೊರಬಿದ್ದಿವೆ. ಜೊತೆಗೆ ಅವರು ಈ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ವೈರಲ್‌ ಆಗಿದೆ.

ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ ಮದುವೆ ಆರತಕ್ಷತೆ; ಅಭಿಮಾನಿಗಳಲ್ಲಿ ʻವಿರೋಶ್‌ʼ ಜೋಡಿಯ ವಿನಂತಿ ಏನು?

ವಿಜಯ್‌ - ರಶ್ಮಿಕಾ ರಿಸೆಪ್ಷನ್; ಆಹ್ವಾನ ಪತ್ರಿಕೆ ಇಲ್ಲದಿದ್ದರೆ ನೋ ಎಂಟ್ರಿ!

Virosh Reception Updates: ಫೆಬ್ರವರಿ 26 ರಂದು ಖಾಸಗಿಯಾಗಿ ಮದುವೆಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ. ಭದ್ರತೆ ಮತ್ತು ಸಂಚಾರ ದಟ್ಟಣೆಯ ಹಿತದೃಷ್ಟಿಯಿಂದ, ಆಹ್ವಾನ ಪತ್ರಿಕೆ ಇಲ್ಲದ ಅಭಿಮಾನಿಗಳು ಸಮಾರಂಭದ ಸ್ಥಳಕ್ಕೆ ಬರಬಾರದೆಂದು ಜೋಡಿ ವಿನಂತಿಸಿದೆ.

ಅಲ್ಲು ಅರ್ಜುನ್ ಮನೆಯಲ್ಲಿ ಮದುವೆ ಸಂಭ್ರಮ; ಸಿರೀಶ್ 'ವರಪೂಜೆ' ಶಾಸ್ತ್ರದಲ್ಲಿ ಮಿಂಚಿದ ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ

ನಟ ಅಲ್ಲು ಸಿರೀಶ್‌ 'ವರಪೂಜೆ' ಶಾಸ್ತ್ರದಲ್ಲಿ ಮಿಂಚಿದ ವಿರೋಶ್‌ ಜೋಡಿ

Allu Sirish Wedding Updates: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಿರುಪತಿಯಲ್ಲಿ ದೇವರ ದರ್ಶನ ಮುಗಿಸಿ, ನಂತರ ಅಲ್ಲು ಅರ್ಜುನ್ ಅವರ ಸಹೋದರ ಅಲ್ಲು ಸಿರೀಶ್ ಮದುವೆಯ ಪೂರ್ವಭಾವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಸಿರೀಶ್ ಅವರ ವರಪೂಜೆ ಶಾಸ್ತ್ರವು ಅಲ್ಲು ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆದಿದ್ದು, ಈ ಸಂಭ್ರಮದಲ್ಲಿ ವಿರೋಶ್ ಜೋಡಿ ಹಾಜರಾಗಿತ್ತು.

Photos: ಗುಬ್ಬಿ ಶಾಸಕ ಶ್ರೀನಿವಾಸ್ ಪುತ್ರ, ನಟ ದುಷ್ಯಂತ್ - ರಚನಾ ಮದುವೆ ಆರತಕ್ಷತೆಯಲ್ಲಿ ಸಿದ್ದರಾಮಯ್ಯ ಭಾಗಿ; ನವಜೋಡಿಗೆ ಸಿಎಂ ಶುಭ ಹಾರೈಕೆ

Photos: ನಟ ದುಷ್ಯಂತ್-ರಚನಾ ಅದ್ದೂರಿ ಆರತಕ್ಷತೆ; ನವಜೋಡಿಗೆ ಹಾರೈಸಿದ ಸಿಎಂ

ಗುಬ್ಬಿ ಕ್ಷೇತ್ರದ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಪುತ್ರ, ಹಾಗೂ ʻಗತವೈಭವʼ ಚಿತ್ರದ ನಟ ದುಷ್ಯಂತ್‌ ಅವರು ಫೆ.26ರಂದು ಮಾಜಿ ಸಂಸದ ಎಸ್. ಪಿ. ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದರು. ಎರಡು ರಾಜಕೀಯ ಕುಟುಂಬಗಳ ನಡುವೆ ನಡೆದ ಈ ಮದುವೆಯು ಬಹಳ ಅದ್ದೂರಿಯಾಗಿ ನಡೆದಿತ್ತು. ಇಂದು (ಮಾ.1) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆರತಕ್ಷತೆಯು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಜೊತೆಗೆ ಅನೇಕ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಆರತಕ್ಷತೆಯಲ್ಲಿ ಭಾಗವಹಿಸಿ, ನವಜೋಡಿಗೆ ಶುಭ ಹಾರೈಸಿದರು. ಈ ಜೋಡಿಯ ಮದುವೆ ಆರತಕ್ಷತೆಯ ಫೋಟೋಗಳು ಇಲ್ಲಿವೆ ನೋಡಿ.

ಇದು ರಶ್ಮಿಕಾ - ವಿಜಯ್‌ ದೇವರಕೊಂಡ ಜೋಡಿಯ 'ಹಿಂದಿನ ಜನ್ಮದ' ಫೋಟೋನಾ? 'ರಣಬಾಲಿ' ಚಿತ್ರದ ಮದುವೆ ಪೋಸ್ಟರ್ ಹಿಂದಿನ ಗುಟ್ಟು ಬಿಚ್ಚಿಟ್ಟ ಡೈರೆಕ್ಟರ್!‌

'ರಣಬಾಲಿ' ಮದುವೆ ಪೋಸ್ಟರ್ ಹಿಂದಿನ ಗುಟ್ಟು ತಿಳಿದು ವಿಜಯ್ ದೇವರಕೊಂಡ ಭಾವುಕ

Ranabaali Movie Poster Updates: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ 'ರಣಬಾಲಿ' ಚಿತ್ರದ ವಿವಾಹದ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಈ ಪೋಸ್ಟರ್‌ಗೆ ಸ್ಫೂರ್ತಿ ಏನು ಎಂಬ ಮಾಹಿತಿಯನ್ನು ನಿರ್ದೇಶಕ ರಾಹುಲ್ ಸಾಂಕೃತ್ಯಾಯನ್ ತಿಳಿಸಿದ್ದಾರೆ.

ಭಾರಿ ಸದ್ದು ಮಾಡಿದ್ದ ʻದಿ ಕೇರಳ ಸ್ಟೋರಿ 2ʼ ಸಿನಿಮಾ ಈವರೆಗೂ ಗಳಿಸಿದ ಹಣವೆಷ್ಟು? ಈ ಕಲೆಕ್ಷನ್‌ನಿಂದ ದಾಖಲೆ ಆಗಲು ಸಾಧ್ಯವೇ?

ಗಳಿಕೆಯಲ್ಲಿ ಹಿಂದೆ ಬಿದ್ದ 'ಕೇರಳ ಸ್ಟೋರಿ 2'; ಈವರೆಗಿನ ಕಲೆಕ್ಷನ್ ಎಷ್ಟು?

The Kerala Story 2 Box Office: ಭಾರಿ ವಿವಾದ ಮತ್ತು ಕಾನೂನು ಹೋರಾಟದ ನಡುವೆ ಫೆಬ್ರವರಿ 27 ರಂದು ಬಿಡುಗಡೆಯಾದ 'ದಿ ಕೇರಳ ಸ್ಟೋರಿ 2: ಗೋಸ್ ಬಿಯಾಂಡ್' ಸಿನಿಮಾ ಎರಡು ದಿನಗಳಲ್ಲಿ ಸಾಧಾರಣ ಗಳಿಕೆ ಮಾಡಿದೆ. ಮೊದಲ ದಿನ ಕೇವಲ 75 ಲಕ್ಷ ರೂ. ಗಳಿಸಿದ್ದ ಈ ಚಿತ್ರ, ಎರಡನೇ ದಿನಕ್ಕೆ ಕೊಂಚ ಚೇತರಿಕೆ ಕಂಡಿದೆ.

ಸಾ ರಾ ಮಹೇಶ್‌ ನಿರ್ಮಾಣದ ಮೊದಲ ಚಿತ್ರಕ್ಕೆ ಸಾಥ್ ನೀಡಿದ ನಟ ಸುದೀಪ್; ʻಸೆಲೆಬ್ರಿಟಿʼ ಚಿತ್ರದ ಹೀರೋಗೆ ʻಕಿಚ್ಚʼ ಹೇಳಿದ್ದೇನು?

ಸುದೀಪ್‌ಗೆ ʻನಾನು ನಿಮ್ ಅಭಿಮಾನಿʼ ಎಂದ ʻಯಾರೇ ನೀನು ಚೆಲುವೆʼ ನಟಿ ಸಂಗೀತಾ

Celebrity Movie Title Launch: ಜೆಡಿಎಸ್ ನಾಯಕ, ಮಾಜಿ ಸಚಿವ ಸಾ. ರಾ. ಮಹೇಶ್ ಅವರ 'ಗೌರಿ ಆರ್ಟ್ಸ್' ನಿರ್ಮಾಣ ಸಂಸ್ಥೆಯ ಚೊಚ್ಚಲ ಚಿತ್ರದ ಶೀರ್ಷಿಕೆಯನ್ನು ನಟ ಕಿಚ್ಚ ಸುದೀಪ್ ಅನಾವರಣಗೊಳಿಸಿದ್ದಾರೆ. ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರಕ್ಕೆ ಕಿರಣ್ ವಿಶ್ವನಾಥ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.

'ಜೈ ಹಿಂದ್ ಜೈ ಸಿಂಧ್' ಚಿತ್ರದ ಮೂಲಕ ಮತ್ತೆ ಬಾಲಿವುಡ್‌ಗೆ ಇಂದ್ರಜಿತ್ ಲಂಕೇಶ್‌ ಎಂಟ್ರಿ; ಉತ್ತರಾಖಂಡದಲ್ಲಿ ನಡೆಯುತ್ತಿದೆ ಶೂಟಿಂಗ್

ಬಾಲಿವುಡ್‌ನಲ್ಲಿ ಹೊಸ ಹಿಂದಿ ಸಿನಿಮಾ ಘೋಷಿಸಿದ ಇಂದ್ರಜಿತ್ ಲಂಕೇಶ್‌

Indrajit Lankesh New Movie: 'ಶಕೀಲಾ' ಚಿತ್ರದ ನಂತರ ಇಂದ್ರಜಿತ್ ಲಂಕೇಶ್ ಅವರು ಮತ್ತೊಮ್ಮೆ ಬಾಲಿವುಡ್‌ಗೆ ಮರಳಿದ್ದಾರೆ. ಅವರ ನಿರ್ದೇಶನದ 'ಜೈ ಹಿಂದ್ ಜೈ ಸಿಂಧ್' ಚಿತ್ರದ ಕೊನೆಯ ಹಂತದ ಚಿತ್ರೀಕರಣ ಈಗ ಉತ್ತರಾಖಂಡದಲ್ಲಿ ನಡೆಯುತ್ತಿದೆ. ದೇಶ ವಿಭಜನೆಯ ಹಿನ್ನೆಲೆಯುಳ್ಳ ಈ ಪ್ರೇಮಕಥೆಯಲ್ಲಿ ಜಯಪ್ರದಾ ಮತ್ತು ಮಹೇಶ್ ಮಂಜ್ರೇಕರ್ ಅವರಂತಹ ಹಿರಿಯ ಕಲಾವಿದರು ನಟಿಸುತ್ತಿದ್ದಾರೆ.

ಇರಾನ್​​​ - ಇಸ್ರೇಲ್​​​ ಯುದ್ಧ: ಅಬುಧಾಬಿ ಏರ್‌ಪೋರ್ಟ್‌ನಲ್ಲಿ ಸಿಲುಕಿದ ಡ್ರೋನ್‌ ಪ್ರತಾಪ್‌, ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿದ್ದೇನು?

ಇರಾನ್-ಇಸ್ರೇಲ್ ನಡುವೆ ಸಮರ: ಅಬುಧಾಬಿಯಲ್ಲಿ ಡ್ರೋನ್‌ ಪ್ರತಾಪ್‌ಗೆ ಸಂಕಷ್ಟ!

Iran-Israel War Updates: ಮಧ್ಯಪ್ರಾಚ್ಯದಲ್ಲಿ ಇರಾನ್, ಇಸ್ರೇಲ್ ಮತ್ತು ಅಮೆರಿಕ ನಡುವಿನ ಯುದ್ಧ ತೀವ್ರಗೊಂಡ ಹಿನ್ನೆಲೆಯಲ್ಲಿ ಗಲ್ಫ್ ರಾಷ್ಟ್ರಗಳ ವಿಮಾನಯಾನ ಸೇವೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಅಬುಧಾಬಿ ಏರ್‌ಪೋರ್ಟ್‌ನಲ್ಲಿ ಸಿಲುಕಿದ್ದು, ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ತಂದೆ ಮೇಲೆ ಅಸಮಾಧಾನಗೊಂಡರೇ ʻದಳಪತಿʼ ವಿಜಯ್‌ ಪುತ್ರ? ದಿಢೀರ್‌ ಅಂತ ಎಲ್ಲರ ಕಣ್ಣು ಮಗ ಜೇಸನ್‌ ಸಂಜಯ್‌ ಮೇಲೆ ಬಿದ್ದಿದ್ದೇಕೆ?

ʻದಳಪತಿʼ ಕುಟುಂಬದಲ್ಲಿ ಬಿರುಕು; ಅಪ್ಪನ ಮೇಲೆ ವಿಜಯ್‌ ಪುತ್ರನಿಗೆ ಕೋಪವೇ?

Vijay Family Crisis: ತಮಿಳು ನಟ ವಿಜಯ್ ಅವರ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ. ಪತ್ನಿ ಸಂಗೀತ ಸ್ವರ್ಣಲಿಂಗಂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, ವಿಜಯ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಬೆನ್ನಲ್ಲೇ, ಮಗ ಜೇಸನ್ ಸಂಜಯ್ ಅವರು ತಮ್ಮ ತಂದೆಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಫಾಲೋ ಮಾಡುತ್ತಿಲ್ಲ ಎಂಬ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.

ದೇಶಾದ್ಯಂತ ಫ್ಯಾನ್ಸ್‌ಗೆ ಸಿಹಿ ವಿತರಣೆ, ದೇವಸ್ಥಾನಗಳಲ್ಲಿ ಅನ್ನದಾನ ಏರ್ಪಡಿಸಿದ 'ವಿರೋಶ್' ಜೋಡಿ; ವಿಜಯ್ ದೇವರಕೊಂಡ - ರಶ್ಮಿಕಾಗೆ ವ್ಯಾಪಕ ಮೆಚ್ಚುಗೆ

ದೇವಸ್ಥಾನಗಳಲ್ಲಿ ಅನ್ನದಾನ, ಫ್ಯಾನ್ಸ್‌ಗೆ ಸಿಹಿ; ʻವಿರೋಶ್‌ʼ ಜೋಡಿ ಘೋಷಣೆ

ViRosh Wedding Celebration: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ವಿವಾಹದ ಸಂತಸವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ. ಮಾರ್ಚ್ 1ರಂದು ದೇಶದ ಪ್ರಮುಖ ನಗರಗಳಲ್ಲಿ ಅಭಿಮಾನಿಗಳಿಗೆ ಸಿಹಿ ಹಂಚುತ್ತಿದ್ದಾರೆ. ಇದರ ಜೊತೆಗೆ ಕರ್ನಾಟಕ, ತೆಲಂಗಾಣ ಸೇರಿದಂತೆ ದೇಶದ 16 ಪ್ರಮುಖ ದೇವಾಲಯಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

Rakshith Shetty: ಬೇಸರದ ವಿಚಾರಕ್ಕೆ ಪೋಸ್ಟ್ ಹಾಕಿದ ರಕ್ಷಿತ್ ಶೆಟ್ಟಿ

Rakshith Shetty: ಬೇಸರದ ವಿಚಾರಕ್ಕೆ ಪೋಸ್ಟ್ ಹಾಕಿದ ರಕ್ಷಿತ್ ಶೆಟ್ಟಿ

Rakshith shetty: ಸ್ಯಾಂಡಲ್​ವುಡ್ ನಟ ರಕ್ಷಿತ್ ಶೆಟ್ಟಿ ಅವರು ಇತ್ತೀಚಿನ ದಿನಗಳಲ್ಲಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಈ ಹಿಂದೆ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ರಾಜ್ ಶೆಟ್ಟಿ ಮೂವರೂ ಒಬ್ಬರಿಗೊಬ್ಬರು ಪರಸ್ಪರ ಚಿತ್ರಗಳನ್ನು ಪ್ರೋತ್ಸಾಹಿಸುತ್ತಾ, ಪ್ರೀತಿಯ ಮಾತುಗಳನ್ನು ಆಡುತ್ತಾ ಸಾರ್ವಜನಿಕವಾಗಿ ಹೇಳಿಕೆಗಳನ್ನು ನೀಡುತ್ತಾ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು. ರಕ್ಷಿತ್‌ ಸಿನಿಮಾ ಅಪ್‌ಡೇಟ್‌ ವಿಚಾರವೂ ಈ ಹಿಂದೆ ಪ್ರಮೋದ್‌ ಶೆಟ್ಟಿ ಅವರು ಸಣ್ಣ ಹಿಂಟ್‌ ಕೊಟ್ಟಿದ್ದರೇ ಹೊರತು ರಕ್ಷಿತ್‌ ಯಾವುದೇ ಸುಳಿವು ನೀಡರಲಿಲ್ಲ. ಆದರೀಗ ಏಕಾಏಕಿ ಇನ್‌ಸ್ಟಾದಲ್ಲಿ ಬೇಸರದ ಪೋಸ್ಟ್‌ವೊಂದನ್ನು ಶೇರ್‌ ಮಾಡಿದ್ದಾರೆ.

Saami Special Surprise:  ತೆರೆಮೇಲೆ ಸತಿ-ಪತಿಯಾದ ವಿರೋಶ್;  ಚಿತ್ರದ ಮೊದಲ ಹಾಡು ರಿಲೀಸ್

ತೆರೆಮೇಲೆ ಸತಿ-ಪತಿಯಾದ ವಿರೋಶ್; ಚಿತ್ರದ ಮೊದಲ ಹಾಡು ರಿಲೀಸ್

Rashmika mandanna: ಹೊಸ ಬಾಳಿಗೆ ಕಾಲಿಟ್ಟಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಜೋಡಿಯ ಹೊಸ ಚಿತ್ರ ರಣಬಾಲಿಯ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ. ಏನಯ್ಯ ಸ್ವಾಮಿ ಗೀತೆಯಲ್ಲಿ ವಿಜಯ್ ರಶ್ಮಿಕಾ ಗಂಡ ಹೆಂಡತಿಯಾಗಿ ಅಭಿನಯಿಸಿದ್ದಾರೆ. ಈ ಜೋಡಿಯ ಆನ್ ಸ್ಕ್ರೀನ್ ರೋಮ್ಯಾನ್ಸ್ ಸಖತ್ ಆಗಿದೆ.

Gandhi Talks OTT: ಡೈಲಾಗ್ಸ್ ಇಲ್ಲದೇ ಮೋಡಿ ಮಾಡಿದ ವಿಜಯ್ ಸೇತುಪತಿಯ ಈ ಮೂವಿ ಒಟಿಟಿಗೆ ಎಂಟ್ರಿ!

ಡೈಲಾಗ್ಸ್ ಇಲ್ಲದೇ ಮೋಡಿ; ವಿಜಯ್ ಸೇತುಪತಿಯ ಈ ಮೂವಿ ಒಟಿಟಿಗೆ!

Vijay Sethupathi: ವಿಜಯ್ ಸೇತುಪತಿ ಅಭಿನಯದ 'ಗಾಂಧಿ ಟಾಕ್ಸ್' ಎಂಬ ಮೂಕ ಭಾರತೀಯ ಚಿತ್ರ ಅಧಿಕೃತವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. 2026 ರಲ್ಲಿ ಬಿಡುಗಡೆಯಾದ ಈ ಚಿತ್ರವು ಈಗ ಸ್ಟ್ರೀಮಿಂಗ್‌ಗೆ ಲಭ್ಯವಿದೆ. ವಿಜಯ್ ಸೇತುಪತಿ , ಅರವಿಂದ್ ಸ್ವಾಮಿ , ಅದಿತಿ ರಾವ್ ಹೈದರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ವಿಶಿಷ್ಟ ಚಿತ್ರದ ಸ್ಟ್ರೀಮಿಂಗ್ ವಿವರಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

Anirudh Shastri: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅನಿರುದ್ಧ್ ಶಾಸ್ತ್ರಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗಾಯಕ ಅನಿರುದ್ಧ್ ಶಾಸ್ತ್ರಿ

Anirudh Shastri Marriage: 'ಸರಿಗಮಪ', 'ಎದೆ ತುಂಬಿ ಹಾಡುವೆನು' ರಿಯಾಲಿಟಿ ಶೋಗಳ ಮೂಲಕ ಜನಪ್ರಿಯತೆ ಪಡೆದುಕೊಂಡಿರುವ ಗಾಯಕ ಅನಿರುದ್ಧ ಶಾಸ್ತ್ರಿ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೆ. 26ರಂದು ಕುಟುಂಬಸ್ಥರ ಸಮ್ಮುಖದಲ್ಲಿ ಅನಿರುದ್ಧ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗಾಯಕ ಅನಿರುದ್ಧ್‌ ಶಾಸ್ತ್ರಿ - ಭರತನಾಟ್ಯ ಕಲಾವಿದೆ ಶ್ರೇಯಾ ಬಾಲಾಜಿ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.

Yami Gautam: ಧುರಂಧರ್ 2 ಸಿನಿಮಾ ಹೇಗಿರಲಿದೆ? ನಟಿ ಯಾಮಿ ಗೌತಮ್ ಹೇಳಿದ್ದೇನು?

ಧುರಂಧರ್ 2 ಸಿನಿಮಾ ಹೇಗಿರಲಿದೆ? ನಟಿ ಯಾಮಿ ಗೌತಮ್ ಹೇಳಿದ್ದೇನು?

Yami Gautam: ಆದಿತ್ಯ ಧರ್ ಅವರ ಬಹುನಿರೀಕ್ಷಿತ ಸೀಕ್ವೆಲ್‌, ರಣವೀರ್ ಸಿಂಗ್ ಧುರಂಧರ್ : ದಿ ರಿವೆಂಜ್ , ಈಗಾಗಲೇ 2026 ರ ಅತ್ಯಂತ ಚರ್ಚಿತ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ. ಯಾಮಿ ಗೌತಮ್ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ವರದಿಯಾಗಿದೆ. ಇದೀಗ ಈ ಸಿನಿಮಾ ಬಗ್ಗೆ ಯಾಮಿ ಸಂದರ್ಶನವೊಂದರಲ್ಲಿ ರಿವೀಲ್‌ ಮಾಡಿದ್ದಾರೆ.

Pragathi Shetty Birthday: ಪ್ರೀತಿ ಬೆಳೆಸುತ್ತಿರು, ಕೀರ್ತಿ ಗಳಿಸುತ್ತಿರು; ಮುದ್ದಿನ ಮಡದಿ ಪ್ರಗತಿ ಶೆಟ್ಟಿಗೆ ರಿಷಬ್‌ ಕ್ಯೂಟ್‌ ವಿಶ್‌

ಮುದ್ದಿನ ಮಡದಿ ಪ್ರಗತಿ ಶೆಟ್ಟಿಗೆ ರಿಷಬ್‌ ಕ್ಯೂಟ್‌ ವಿಶ್‌

Rishab Shetty: ‘ಕಾಂತಾರ’ ಸಿನಿಮಾ ನಟ ರಿಷಬ್ ಶೆಟ್ಟಿ ಅವರು ಮುದ್ದಿನ ಮಡದಿ ಪ್ರಗತಿ ಶೆಟ್ಟಿಗೆ ಕ್ಯೂಟ್‌ ಆಗಿ ಬರ್ತ್‌ಡೇ ವಿಶ್‌ ಮಾಡಿದ್ದಾರೆ. ಪ್ರಗತಿ ಶೆಟ್ಟಿ ಅವರು ಸದ್ಯ ಸಿನಿಮಾಗಳಿಗೆ ಕಾಸ್ಟ್ಯೂಮ್ ಡಿಸೈನ್ ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಸಿನಿಮಾ ಸೇರಿದಂತೆ ಬೇರೆ ಬೇರೆಯ ಸಿನಿಮಾಗಳಿಗೂ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದರು.ರಿಷಬ್ ಶೆಟ್ಟಿ ಅವರು ಪತ್ನಿಯ ಜನ್ಮದಿನಕ್ಕೆ ವಿಶೇಷವಾದ ವಿಡಿಯೋ ಹಂಚಿಕೊಂಡಿದ್ದು ರಿಷಬ್‌ ಹೆಂಡತಿಯನ್ನು ಹೊಗಳಿದ್ದಾರೆ.

Ranabaali Movie : ʻರಣಬಾಲಿʼ ಸಿನಿಮಾದ ವಿಜಯ್‌ -ರಶ್ಮಿಕಾ ಲುಕ್‌ ಔಟ್‌! ತೆರೆ ಮೇಲೆ ಮತ್ತೆ ಒಂದಾದ ವಿರೋಷ್‌

ʻರಣಬಾಲಿʼ ಸಿನಿಮಾದ ವಿಜಯ್‌ -ರಶ್ಮಿಕಾ ಲುಕ್‌ ಔಟ್‌!

Ranabaali Movie :ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ರಣಬಾಲಿ' ಚಿತ್ರದ ನಿರ್ಮಾಪಕರು ಚಿತ್ರದ ಹೊಸ ಅಪ್ಡೇಟ್ ಅನ್ನು ಬಹಿರಂಗಪಡಿಸಿದ್ದಾರೆ. ಈ ಪಿರಿಯಡ್ ಡ್ರಾಮಾ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗಲಿದೆ. ಹೊಸ ಪೋಸ್ಟರ್‌ ಈಗ ಔಟ್‌ ಆಗಿದೆ. ಈ ಹಿಂದೆ ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ನಟಿಸಿದ್ದ ಈ ಜೋಡಿ, ರಾಹುಲ್ ಸಂಕೃತ್ಯಾನ್ ನಿರ್ದೇಶನದ ಬಹುನಿರೀಕ್ಷಿತ ಐತಿಹಾಸಿಕ ಚಿತ್ರ 'ರಣಬಾಲಿ'ಯಲ್ಲಿ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ.

ʻಕವಳʼ ಚಿತ್ರಕ್ಕಾಗಿ ಸ್ಯಾಂಡಲ್‌ವುಡ್‌ಗೆ ಬಂದ ತಮಿಳು ನಟ ಸಮುಥಿರಕನಿ; ಕ್ಲ್ಯಾಪ್‌ ಮಾಡಿ ಹಾರೈಸಿದ ʻ‌ಕ್ರೇಜಿ ಸ್ಟಾರ್‌ʼ ರವಿಚಂದ್ರನ್

'ಕವಳ' ಮೂಲಕ ಸ್ಯಾಂಡಲ್‌ವುಡ್‌ಗೆ ವಿಲನ್ ಆಗಿ ತಮಿಳು ನಟ ಸಮುಥಿರಕನಿ ಎಂಟ್ರಿ

Kavala Movie Launch: ನಟ ಮತ್ತು ನಿರ್ದೇಶಕ ಸಮುಥಿರಕನಿ ಅವರು 'ಕವಳ' ಚಿತ್ರದ ಮೂಲಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. 'ಆರ್‌ಎಕ್ಸ್ ಸೂರಿ' ಖ್ಯಾತಿಯ ಶ್ರೀ ಜೈ ನಿರ್ದೇಶನದ ಈ ಚಿತ್ರಕ್ಕೆ 'ಕ್ರೇಜಿ ಸ್ಟಾರ್' ರವಿಚಂದ್ರನ್ ಈ ಚಿತ್ರಕ್ಕೆ ಚಾಲನೆ ನೀಡಿದ್ದಾರೆ.

Toxic Movie: ಯಶ್‌ ಹೊತ್ತು ಸಾಗುತ್ತಿರುವ ಈ ಚೆಲುವೆ ಯಾರು? ಸೋಶಿಯಲ್‌ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದ ಹೊಸ ರೊಮ್ಯಾಂಟಿಕ್ ಪೋಸ್ಟರ್

Yash: ʻಟಾಕ್ಸಿಕ್ʼ ಸಿನಿಮಾದ ರೊಮ್ಯಾಂಟಿಕ್ ಪೋಸ್ಟರ್ ವೈರಲ್!

Toxic Movie Updates: ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಮೊದಲ ಹಾಡು 'ತಬಾಹಿ' ಬಿಡುಗಡೆಗೆ ಸಜ್ಜಾಗಿದೆ. ಈ ಹಾಡಿನ ಪೋಸ್ಟರ್‌ನಲ್ಲಿ ಯಶ್ ಅವರು ನಟಿಯೊಬ್ಬರನ್ನು ಹೊತ್ತುಕೊಂಡು ಹೋಗುತ್ತಿರುವ ರೊಮ್ಯಾಂಟಿಕ್ ಲುಕ್ ಈಗ ಸೋಷಿಯಲ್ ಮೀಡಿಯಾದಲ್ಲಿ ಕಿಡಿ ಹೊತ್ತಿಸಿದೆ. ಜೊತೆಗೆ ಆ ನಟಿ ಯಾರು ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ.

Kichcha Sudeep: ಚಿಕ್ಕನಾಯಕನಹಳ್ಳಿಗೆ ಶನಿವಾರ ‘ಕಿಚ್ಚ’ನ ಲಗ್ಗೆ; ಹೊಸ ಚಿತ್ರದ ಟೈಟಲ್ ಟೀಸರ್ ಲಾಂಚ್

ಚಿಕ್ಕನಾಯಕನಹಳ್ಳಿಗೆ ಶನಿವಾರ ನಟ ಕಿಚ್ಚ ಸುದೀಪ್‌ ಭೇಟಿ

ನಟ ಸುದೀಪ್ ಅವರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆಯೇ ಇಡೀ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಡಿವಿಪಿ ಶಾಲಾ ಮೈದಾನದಲ್ಲಿ ಚಿತ್ರತಂಡದಿಂದ ಬೃಹತ್ ವೇದಿಕೆ ನಿರ್ಮಾಣವಾಗುತ್ತಿದ್ದು, ಕಿಚ್ಚನ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಕಾತುರದಿಂದ ಕಾಯುತ್ತಿದ್ದಾರೆ.

Loading...