ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

'ಕರಾವಳಿ' ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ ರಿಲೀಸ್;‌ ʻಮುದ್ದು ಗುಮ್ಮʼ ಹಾಡನ್ನು ಮುದ್ದಾಗಿ ಹಾಡಿದ ಸಿದ್ ಶ್ರೀರಾಮ್

Prajwal: 'ಕರಾವಳಿ' ಚಿತ್ರದ ರೊಮ್ಯಾಂಟಿಕ್ ಹಾಡಿಗೆ ಸಿದ್ ಶ್ರೀರಾಮ್ ಧ್ವನಿ

ಕರಾವಳಿ ಸಿನಿಮಾದ ಬಹುನಿರೀಕ್ಷಿತ 'ಮುದ್ದು ಗುಮ್ಮ' ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದ್ದು, ಸಿದ್ ಶ್ರೀರಾಮ್ ಅವರ ಕಂಠಸಿರಿಯಲ್ಲಿ ಈ ಹಾಡು ಮೂಡಿಬಂದಿದೆ. ಸಚಿನ್ ಬಸ್ರೂರು ಸಂಗೀತ ಹಾಗೂ ಪ್ರಮೋದ್ ಮರವಂತೆ ಸಾಹಿತ್ಯವಿರುವ ಈ ಹಾಡಿನಲ್ಲಿ ಪ್ರಜ್ವಲ್ ದೇವರಾಜ್ ಮತ್ತು ಸಂಪದಾ ಜೋಡಿ ಮುದ್ದಾಗಿ ಕಾಣಿಸಿಕೊಂಡಿದೆ.

ʻಬಿಗ್‌ ಬಾಸ್‌ʼ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಸೂರಜ್‌ ನಟಿಸುತ್ತಿರುವ ʻಪವಿತ್ರ ಬಂಧನʼ ಕಥೆ ಏನು? ಈ ಸೀರಿಯಲ್‌ ಪ್ರಸಾರ ಆಗೋದ್ಯಾವಾಗ?

ಬಿಗ್ ಬಾಸ್ ಸೂರಜ್ ಈಗ ಸೀರಿಯಲ್ ಹೀರೋ; 'ಪವಿತ್ರ ಬಂಧನ'ದಲ್ಲಿ ಏನು ಪಾತ್ರ?

ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ಅವರ ನಟನೆಯ ಚೊಚ್ಚಲ ಸೀರಿಯಲ್ ಪವಿತ್ರ ಬಂಧನ ಪ್ರಸಾರಕ್ಕೆ ಅಣಿಯಾಗಿದೆ. ರಾಮನಗರದ ಸ್ವಾಭಿಮಾನಿ ಹುಡುಗಿ ಪವಿತ್ರಾ ಮತ್ತು ಶಿಸ್ತಿನ ಉದ್ಯಮಿ ದೇವ್‌ದತ್ ದೇಶಮುಖ್ ಅನಿವಾರ್ಯವಾಗಿ ವಿವಾಹವಾಗುವ ವಿಚಿತ್ರ ಸನ್ನಿವೇಶದ ಕಥೆ ಇದಾಗಿದೆ. ಜನವರಿ 27 ರಿಂದ ಕಲರ್ಸ್‌ ಕನ್ನಡದಲ್ಲಿ ಈ ಸೀರಿಯಲ್‌ ಪ್ರಸಾರವಾಗಲಿದೆ.

ʻಗೌರಿ ಕಲ್ಯಾಣʼ ಧಾರಾವಾಹಿಗೆ ನಾಯಕಿಯಾದ ಶಿಲ್ಪಾ ಕಾಮತ್‌; ಈ ಸೀರಿಯಲ್‌ ಯಾವಾಗ ಪ್ರಸಾರ?

'ಗೌರಿ ಕಲ್ಯಾಣ' ಸೀರಿಯಲ್‌ಗೆ ನಾಯಕಿಯಾದ ಶಿಲ್ಪಾ ಕಾಮತ್!

Gowri Kalyana Serial: ನಟಿ ಶಿಲ್ಪಾ ಕಾಮತ್‌ ಮುಖ್ಯಭೂಮಿಕೆಯಲ್ಲಿರುವ ಗೌರಿ ಕಲ್ಯಾಣ ಧಾರಾವಾಹಿಯು ಕಲರ್ಸ್‌ ಕನ್ನಡದಲ್ಲಿ ಜನವರಿ 27ರಿಂದ ಪ್ರತಿ ರಾತ್ರಿ 8ಕ್ಕೆ ಪ್ರಸಾರವಾಗಲಿದೆ. ತನ್ನ ಮೂವರು ಹೆಣ್ಣು ಮಕ್ಕಳನ್ನು ಶ್ರೀಮಂತ ಮನೆತನಕ್ಕೆ ಸೊಸೆಯಾಗಿ ಕಳುಹಿಸಬೇಕೆಂಬ ತಾಯಿ ಕಾಂತಲಕ್ಷ್ಮಿಯ ಹಂಬಲವೇ ಈ ಕಥೆಯ ಜೀವಾಳ.

ʻಬಿಗ್‌ ಬಾಸ್‌ ಕನ್ನಡ 12ʼ ಶೋನಲ್ಲಿ ಗೆದ್ದ ಗಿಲ್ಲಿ ನಟನಿಗೆ ಸಿಕ್ತು ಸಿಎಂ ಸಿದ್ದರಾಮಯ್ಯ ಆಶೀರ್ವಾದ; ಇಲ್ಲಿವೆ ನೋಡಿ ಫೋಟೋಗಳು

Photos: ಸಿಎಂ ಸಿದ್ದರಾಮಯ್ಯ ಆಶೀರ್ವಾದ ಪಡೆದ ಬಿಗ್ ಬಾಸ್ ವಿನ್ನರ್ ಗಿಲ್ಲಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಮಹತ್ವದ ಗೆಲುವು ದಾಖಲಿಸಿರುವ ಗಿಲ್ಲಿ ನಟ ಅವರು ಇಂದು (ಜ.22) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಗೃಹ ಕಚೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಗಿಲ್ಲಿ ನಟ ಆಶೀರ್ವಾದ ಪಡೆದುಕೊಂಡಿದ್ದಾರೆ. ಗಿಲ್ಲಿ ಜನಪ್ರಿಯತೆಯ ಬಗ್ಗೆ ಸಿದ್ದರಾಮಯ್ಯ ಅವರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಗಿಲ್ಲಿ ನಟನ ಪೋಷಕರ ಬಗ್ಗೆ ವಿಚಾರಿಸಿದ್ದಾರೆ.

ʻಅಮೃತ ಅಂಜನ್‌ʼ ಸಿನಿಮಾವನ್ನು ಟಾರ್ಗೆಟ್‌ ಮಾಡಲಾಗಿದ್ಯಾ? ಸುಧಾಕರ್‌ ಗೌಡ ಹೇಳಿದ್ದೇನು?

ʻಅಮೃತ ಅಂಜನ್ʼ ಸಿನಿಮಾ ಟಾರ್ಗೆಟ್; ನಟ ಸುಧಾಕರ್ ಗೌಡ ಬೇಸರ

Amrutha Anjan Movie: ಸುಧಾಕರ್‌ ಗೌಡ ನಟನೆಯ ಅಮೃತ ಅಂಜನ್‌ ಸಿನಿಮಾವು ಬಿಡುಗಡೆಗೆ ಸಜ್ಜಾಗಿದ್ದು, ಕಿರುಚಿತ್ರದಿಂದ ಬೆಳ್ಳಿತೆರೆಗೆ ಬಂದ ಈ ಟೀಮ್‌ ಜನರ ಬೆಂಬಲ ಕೋರಿದ್ದಾರೆ. ಈ ಮಧ್ಯೆ ನಟ ಸುಧಾಕರ್ ಗೌಡ ಅವರು "ಒಬ್ಬ ಸ್ಟಾರ್ ನಟನ ತಂಡ ನನ್ನನ್ನು ಟಾರ್ಗೆಟ್ ಮಾಡುತ್ತಿದೆ" ಎಂದು ಅಳಲು ತೋಡಿಕೊಂಡಿದ್ದಾರೆ.

ನಾಡಿನ ಹಲವು ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ; ಈ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು?

ಉದಯ ಕನ್ನಡಿಗ-2025: ಶಿವಣ್ಣ, ಪ್ರಕಾಶ್ ರಾಜ್ ಸೇರಿ ಹಲವು ಸಾಧಕರಿಗೆ ಸನ್ಮಾನ!

ಝಗಮಗಿಸುವ ವೇದಿಕೆ, ವರ್ಣರಂಜಿತ ನೃತ್ಯಗಳ ಮಧ್ಯೆ ಶಿವರಾಜ್‌ಕುಮಾರ್‌, ಪ್ರಕಾಶ್‌ ರಾಜ್‌, ಡಾಲಿ ಧನಂಜಯ್, ಶ್ರೀನಾಥ್, ಉಮಾಶ್ರೀ, ಸಾಧುಕೋಕಿಲ, ಸಾಹಿತಿ ಜೋಗಿ, ಕವಿ ಬಿ.ಆರ್.ಲಕ್ಷ್ಮಣರಾವ್‌ ಸೇರಿದಂತೆ ಕರುನಾಡಿನ ವಿವಿಧ ಕ್ಷೇತ್ರಗಳ ಸಾಧಕರಿಗೆ ʻಉದಯ ಕನ್ನಡಿಗ-2025ʼ ಪುರಸ್ಕಾರ ನೀಡಿ ಗೌರವಿಸಲಾಗಿದೆ. ಇದೇ ಶನಿವಾರ (ಜ.24) ಮತ್ತು ಭಾನುವಾರ (ಜ.25) ಸಂಜೆ 6 ಗಂಟೆಗೆ ಈ ಸಮಾರಂಭ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಯಾರೆಲ್ಲಾ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮುಂದೆ ಓದಿ.

ʻಗೆಲುವಿನ ಬೆನ್ನಲ್ಲೇ ಹೊಸ ಹೆಜ್ಜೆ, ಹೊಸ ದಾರಿ ಕಡೆ ಮುಖ ಮಾಡುವ ಹೊತ್ತುʼ; ಕನ್ನಡಿಗರಿಗೆ ಧನ್ಯವಾದ ಹೇಳಿದ ಗಿಲ್ಲಿ ನಟ

ʻನನ್ನ ಬಗ್ಗೆ ಒಂದೇ ಒಂದು ನೆಗೆಟಿವ್ ವಿಡಿಯೋ ನೋಡಿಲ್ಲʼ- ಗಿಲ್ಲಿ ನಟ

Bigg Boss 12 Winner Gilli Nata: ಸಾಮಾಜಿಕ ಜಾಲತಾಣದಲ್ಲಿ ಗಿಲ್ಲಿ ನಟ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ತಮಗೆ ಬೆಂಬಲ ನೀಡಿದ ಸೈನಿಕರು, ಆಟೋ ಚಾಲಕರು ಮತ್ತು ಕನ್ನಡಿಗರಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ. ಅಭಿಮಾನಿಗಳು ತಮ್ಮ ಹೆಸರಿನ ಹಚ್ಚೆ ಹಾಕಿಸಿಕೊಂಡಿರುವುದು ಹಾಗೂ ಸಂಕ್ರಾಂತಿಯಂದು ಹೋರಿಗಳ ಮೇಲೆ ಚಿತ್ರ ಬಿಡಿಸಿ ಗೌರವಿಸಿದ್ದಕ್ಕೆ ಭಾವುಕರಾಗಿದ್ದಾರೆ.

Pallichattambi: ಟೋವಿನೋ ಥಾಮಸ್ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಔಟ್‌! ತೆರೆಗೆ ಯಾವಾಗ?

ಟೋವಿನೋ ಥಾಮಸ್ ಹೊಸ ಸಿನಿಮಾದ ಮೋಷನ್ ಪೋಸ್ಟರ್ ಔಟ್‌!

Tovino Thomas: ಮಲಯಾಳಂ ನಟ ಟೊವಿನೋ ಥಾಮಸ್ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. ಇದೀಗ ಅವರು ಪಳ್ಳಿಚಟ್ಟಂಬಿ ಸಿನಿಮಾ ಮೂಲಕ ಮಾಸ್ ಅವತಾರ ತಾಳಿದ್ದಾರೆ. ಡಿಜೋ ಜೋಸ್ ಆಂಟೋನಿ ಸಾರಥ್ಯದ ಪಳ್ಳಿಚಟ್ಟಂಬಿ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.‌ ಜೊತೆಗೆ ಚಿತ್ರತಂಡ ರಿಲೀಸ್ ಡೇಟ್ ಕೂಡ ಘೋಷಿಸಿದೆ.

Kantara Chapter 1: ಕಿರುತೆರೆಗೆ ಎಂಟ್ರಿ ಕೊಡ್ತಿದೆ ಕಾಂತಾರ ಚಾಪ್ಟರ್ 1; ಯಾವಾಗ? ಎಷ್ಟೊತ್ತಿಗೆ?

ಕಿರುತೆರೆಗೆ ಎಂಟ್ರಿ ಕೊಡ್ತಿದೆ ಕಾಂತಾರ ಚಾಪ್ಟರ್ 1; ಯಾವಾಗ? ಎಷ್ಟೊತ್ತಿಗೆ?

Rishab Shetty: ಬಾಕ್ಸ್ ಆಫೀಸ್ ನಲ್ಲಿ ಅತೀ ಹೆಚ್ಚು ಸಕ್ಸಸ್ ಪಡೆದ ಕಾಂತಾರ: ಚಾಪ್ಟರ್ 1 ಕಿರುತೆರೆಗೆ ಬರ್ತಿದೆ. ರಿಷಬ್ ಶೆಟ್ಟಿ ಯ ಅದ್ಬುತ ಅಭಿನಯ ಪ್ರೇಕ್ಷಕರನ್ನು ಮತ್ತೊಂದು ಜಗತ್ತಿಗೆ ಕೊಂಡೊಯ್ಯುತ್ತದೆ. ಬರ್ಮೆ ಪಾತ್ರದಲ್ಲಿ ಅವರ ಅಭಿನಯ ನೈಜವಾಗಿದ್ದು, ಭಾರೀ ಶಕ್ತಿ ಮತ್ತು ಆಧ್ಯಾತ್ಮಿಕತೆಯಿಂದ ತುಂಬಿದ್ದು, ಸಿನಿಮಾ ನೋಡುವ ಪ್ರೇಕ್ಷಕರಿಗೆ ಉತ್ತಮ ಮನರಂಜನೆ ನೀಡುತ್ತದೆ. ಮೊದಲಾರ್ಧದಲ್ಲಿ ಬಲವಾದ ಪೌರಾಣಿಕ ಮತ್ತು ಭಾವನಾತ್ಮಕ ದೃಶ್ಯಗಳಿದ್ದರೆ, ದ್ವಿತೀಯಾರ್ಧದಲ್ಲಿ ಅದ್ಭುತವಾದ ಆಕ್ಷನ್, ಮತ್ತು ಪ್ರಬಲ ದೈವಿಕ ಕ್ಷಣಗಳು ಕಾಣಸಿಗಲಿದೆ.

Alpha Movie Song: ವಿಜಯ್‌ ನಿರ್ದೇಶನದ ‘ಆಲ್ಫಾ’; ಟೈಟಲ್ ಟ್ರ್ಯಾಕ್‌ಗೆ ಫಿದಾ ಆದ ಅಭಿಮಾನಿಗಳು

ವಿಜಯ್‌ ನಿರ್ದೇಶನದ ‘ಆಲ್ಫಾ’; ಟೈಟಲ್ ಟ್ರ್ಯಾಕ್‌ಗೆ ಫಿದಾ ಆದ ಅಭಿಮಾನಿಗಳು

Kannada Movie: L A ಪ್ರೊಡಕ್ಷನ್ಸ್ ಲಾಂಛನದಲ್ಲಿ ಆನಂದ್ ಕುಮಾರ್ ನಿರ್ಮಾಣದ, ವಿಜಯ್ ನಿರ್ದೇಶನದ ಹಾಗೂ ಹೇಮಂತ್ ಕುಮಾರ್ ಎಂಬ ನೂತನ ಪ್ರತಿಭೆ ನಾಯಕನಾಗಿ ನಟಿಸಿರುವ `ಆಲ್ಫಾ' MEN LOVE VENGEANCE ಚಿತ್ರದ ಟೈಟಲ್ ಟ್ರ್ಯಾಕ್ಇ ತ್ತೀಚೆಗೆ ಮಂತ್ರಿ ಮಾಲ್ ನಲ್ಲಿ ಸಹಾಸ್ರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಯತು. ಅನೂಪ್ ಸೀಳನ್‌ ಸಂಗೀತ ಸಂಯೋಜಿಸಿರುವ, ನಾಗಾರ್ಜುನ ಶರ್ಮ ಬರೆದಿರುವ ಹಾಗೂ ವ್ಯಾಸರಾಜ ಸೋಸಲೆ ಹಾಡಿರುವ ಶೀರ್ಷಿಕೆ ಗೀತೆ ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ.

Gilli Nata: ಸುದೀಪ್ ಹಾಗೂ ಶಿವಣ್ಣ ಭೇಟಿ ಮಾಡಿದ ಗಿಲ್ಲಿ ನಟ; ತಾರೆಯರ ಶುಭ ಹಾರೈಕೆ

ಸುದೀಪ್ ಹಾಗೂ ಶಿವಣ್ಣ ಭೇಟಿ ಮಾಡಿದ ಗಿಲ್ಲಿ ನಟ

Shivanna: ಗಿಲ್ಲಿ ಬಿಗ್‌ ಬಾಸ್‌ ವಿನ್ನರ್‌ ಆಗಿರೋದು ಗೊತ್ತೇ ಇದೆ. ಗಿಲ್ಲಿ ಕ್ರೇಜ್‌ ಜೋರಾಗಿದೆ. ಈಗ ಅವರು ಶಿವರಾಜ್​​​ಕುಮಾರ್ಹಾ ಗೂ ಸುದೀಪ್ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ. ಗಿಲ್ಲಿ ಗೆಲ್ಲದಕ್ಕೂ ಮುಂಚೆ ಶಿವಣ್ಣ ಅವರು ಗಿಲ್ಲಿ ಗೆದ್ದೆ ಗೆಲ್ತಾನೆ ಅಂತ ಭವಿಷ್ಯ ನುಡಿದ್ದರು. ಅದರಂತೆ ಆಗಿದೆ.

Amitabh Bachchan: ಅಮಿತಾಭ್‌ ಬಚ್ಚನ್ ಮನೆಯಲ್ಲಿ 'ಗೋಲ್ಡನ್ ಟಾಯ್ಲೆಟ್'!  ವಿಜಯ್ ವರ್ಮಾ ಸೆಲ್ಫಿ ವೈರಲ್‌

ಅಮಿತಾಭ್‌ ಬಚ್ಚನ್ ಮನೆಯಲ್ಲಿ 'ಗೋಲ್ಡನ್ ಟಾಯ್ಲೆಟ್'!

Vijay Varma: ಪ್ರಸಿದ್ಧ ನಟ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವ ಕೆಲವು ಹಿಂದಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ವೈರಲ್ ಟ್ರೆಂಡ್‌ಗೆ ಸೇರ್ಪಡೆಗೊಂಡಿದೆ ವಿಜಯ್ ವರ್ಮಾ ಫೋಟೋ. ತಮ್ಮ 2016 ರ ನೆನಪಿನ ಪುಟಗಳಲ್ಲಿ ತಮ್ಮ ಚಿತ್ರಗಳನ್ನು ಹಂಚಿಕೊಂಡರು. ಅವರ ಚಿತ್ರಗಳ ಕ್ಯಾರೋಸೆಲ್‌ನಲ್ಲಿ, ಅಭಿಮಾನಿಗಳ ವ್ಯಾಪಕ ಗಮನ ಸೆಳೆದ ಕ್ಷಣಗಳಲ್ಲಿ ಒಂದು, ಹಿರಿಯ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ಅ ವರ ಮನೆ ಜಲ್ಸಾದಲ್ಲಿ ಅವರ ಸೆಲ್ಫಿ .

Shiva Rajkumar: ಶಿವಣ್ಣನ ತೋಳಿನಲ್ಲಿ ಮಗುವಾದ ಪ್ರೀತಮ್‌! ಹ್ಯಾಟ್ರಿಕ್‌ ಹೀರೋ ಕ್ಯೂಟ್‌ ವಿಡಿಯೋ ವೈರಲ್‌

ಶಿವಣ್ಣನ ತೋಳಿನಲ್ಲಿ ಮಗುವಾದ ಪ್ರೀತಮ್‌! ಕ್ಯೂಟ್‌ ವಿಡಿಯೋ ವೈರಲ್‌

Shivanna: ಜನಮನ್ನಣೆ ಗಳಿಸಿರುವ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ರಿಯಾಲಿಟಿ ಶೋ ‘ಡಾನ್ಸ್ ಕರ್ನಾಟಕ ಡಾನ್ಸ್’ ಹೊಸ ಸೀಸನ್‌ ನವೆಂಬರ್‌ 15ರಂದು ಆರಂಭವಾಯ್ತು. ಹೊಸ ಥೀಮ್‌ಗಳು, ಅದ್ಭುತ ಪ್ರತಿಭೆಗಳ ಪ್ರದರ್ಶನಗಳೊಂದಿಗೆ ಈ ಬಾರಿಯ ಶೋ ಮತ್ತಷ್ಟು ಮನ ರಂಜನೆ ನೀಡುತ್ತಲೇ ಇದೆ. ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 5’ರಲ್ಲಿ ಗದಗದಿಂದ ಪ್ರೀತಂ ಎಂಬ ಬಾಲಕ ಬಂದಿದ್ದಾನೆ. ಆತನಿಗೆ ಇನ್ನೂ ಏಳುವರ್ಷ. ಆದರೆ, ಅವನ ಪ್ರತಿಭೆ ಮಾತ್ರ ವಯಸ್ಸಿಗೂ ಮೀರಿದ್ದು.

Siddu Moolimani: ಹಾರರ್ ಕಾಮಿಡಿ ಸಸ್ಪೆನ್ಸ್ 'ಸೀಟ್ ಎಡ್ಜ್'  ಟ್ರೈಲರ್‌ ಔಟ್‌! ಒಂದೊಳ್ಳೆ  ಯೂಟ್ಯೂಬರ್‌ ಕತೆ

ಹಾರರ್ ಕಾಮಿಡಿ ಸಸ್ಪೆನ್ಸ್ 'ಸೀಟ್ ಎಡ್ಜ್' ಟ್ರೈಲರ್‌ ಔಟ್‌!

Siddu Moolimani: 'ಲವ್ ಯು ಮುದ್ದು' ಚಿತ್ರದ ನಂತರ ಯುವನಟ ಸಿದ್ಧು ಮೂಲಿಮನಿ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ 'ಸೀಟ್‌ ಎಡ್ಜ್‌' ತೆರೆಗೆ ಬರಲು ತಯಾರಾಗಿದೆ. ಇದೇ ಜನವರಿ 30ಕ್ಕೆ 'ಸೀಟ್ ಎಡ್ಜ್' ಚಿತ್ರ ತೆರೆಗೆ ಬರಲಿದ್ದು, ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯ ನಡೆಸುತ್ತಿರುವ ಚಿತ್ರತಂಡ, ಇದೀಗ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದೆ. ಇನ್ನು 'ಸೀಟ್ ಎಡ್ಜ್' ಚಿತ್ರ ವ್ಲಾಗರ್ ಹುಡುಗನೊಬ್ಬನ ಘೋಸ್ಟ್ ಹಂಟಿಂಗ್ ಕುರಿತಾದ ಕಥಾಹಂದರವನ್ನು ಹೊಂದಿರುವ ಚಿತ್ರವಾಗಿದೆ.

Priyanka Achar: ಕಿಚ್ಚ ಸುದೀಪ್ ಶಿಷ್ಯನ ಚೊಚ್ಚಲ ಸಿನಿಮಾಗೆ 'ಏಳುಮಲೆ' ಪ್ರಿಯಾಂಕಾ ನಾಯಕಿ!

ಕಿಚ್ಚ ಸುದೀಪ್ ಶಿಷ್ಯನ ಚೊಚ್ಚಲ ಸಿನಿಮಾಗೆ ಪ್ರಿಯಾಂಕಾ ಆಚಾರ್‌ ನಾಯಕಿ!

Kannada Movie: ಏಳುಮಲೆ ಸಿನಿಮಾ ಮೂಲಕ ಕನ್ನಡ ಸಿನಿಮಾ ಪ್ರೇಮಿಗಳಿಗೆ ಪರಿಚಿತರಾಗಿದವರು ನಟಿ ಪ್ರಿಯಾಂಕಾ ಆಚಾರ್. ಚೊಚ್ಚಲ ಚಿತ್ರದಲ್ಲಿಯೇ ತಮ್ಮನ್ನು ತಾವು ನಾಯಕಿಯಾಗಿ ನಿರೂಪಿಸಿಕೊಂಡಿರುವ 'ಮಹಾನಟಿ' ಇದೀಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಮೂಲತಃ ಮೈಸೂರಿನವರಾದ ಪ್ರಿಯಾಂಕಾ ಆಚಾರ್‌ , ಚಿಕ್ಕಂದಿನಿಂದಲೇ ನಟಿಯಾಗಬೇಕೆಂದು ಬಯಸಿದ್ದರು. ಅದಕ್ಕಾಗಿ ಪ್ರಿಯಾಂಕಾ ಸಾಕಷ್ಟು ಸೀರಿಯಲ್ ಮತ್ತು ಸಿನಿಮಾಗಳಿಗೆ ಆಡಿಷನ್‌ ನೀಡಿದ್ದರು.

Vikalpa Trailer:  ಸೈಕಾಲಜಿಕಲ್‌ ಥ್ರಿಲ್ಲರ್‌ ʻವಿಕಲ್ಪʼ ಟ್ರೈಲರ್‌ ಔಟ್‌; ತೆರೆಗೆ ಯಾವಾಗ?

ಸೈಕಾಲಜಿಕಲ್‌ ಥ್ರಿಲ್ಲರ್‌ ʻವಿಕಲ್ಪʼ ಟ್ರೈಲರ್‌ ಔಟ್‌; ತೆರೆಗೆ ಯಾವಾಗ?

psychological thriller : ಈಗಾಗಲೇ ತನ್ನ ಟೈಟಲ್‌ , ಟೀಸರ್‌ ಮತ್ತು ಹಾಡುಗಳ ಮೂಲಕ ಚಂದನವನದಲ್ಲಿ ಒಂದಷ್ಟು ಸಿನಿಪ್ರಿಯರ ಮನ ಮತ್ತು ಗಮನ ಎರಡನ್ನೂ ಸೆಳೆದಿರುವ 'ವಿಕಲ್ಪ' ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. 'ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌' (ಪಿಟಿಎಸ್‌ಡಿ) ಎಂಬ ಮಾನಸಿಕ ವ್ಯಾಧಿಯ ಎಳೆಯನ್ನು ಆಧಾರಿಸಿ ತೆರೆಗೆ ಬರುತ್ತಿರುವ ಸೈಕಾಲಜಿಕಲ್‌-ಥ್ರಿಲ್ಲರ್‌ ಕಥಾಹಂದರದ ಚಿತ್ರ ಇದಾಗಿದೆ.

Akshay Kumar: ಬಾಲಿವುಡ್‌ ಸ್ಟಾರ್‌ ಅಕ್ಷಯ್ ಕುಮಾರ್ ಕಾರು ಭೀಕರ  ಅಪಘಾತ! ನಜ್ಜುಗುಜ್ಜಾದ ಆಟೋ

ಅಕ್ಷಯ್ ಕುಮಾರ್ ಕಾರು ಭೀಕರ ಅಪಘಾತ! ನಜ್ಜುಗುಜ್ಜಾದ ಆಟೋ

Akshay Kumar's convoy vehicle : ಸೋಮವಾರ ರಾತ್ರಿ ಮುಂಬೈನ ಜುಹು ಪ್ರದೇಶದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಬೆಂಗಾವಲು ವಾಹನವು ಮರ್ಸಿಡಿಸ್ ಕಾರು ಮತ್ತು ಆಟೋ ರಿಕ್ಷಾ ನಡುವೆ ಭೀಕರ ಅಪಘಾತ ಸಂಭವಿಸಿದೆ. ನಟ ಮತ್ತು ಪತ್ನಿ ಟ್ವಿಂಕಲ್ ಖನ್ನಾ ಮುಂದೆ ಬೇರೆ ಕಾರಿನಲ್ಲಿದ್ದರು. ರಾತ್ರಿ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಮೂಲಗಳು ದೃಢಪಡಿಸಿವೆ. ಪ್ರಾಥಮಿಕ ವರದಿ ಪ್ರಕಾರ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಟೋದಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಸ್ಥಳಿಯರು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ.

Gramayana Movie: ವಿನಯ್​, ಮೇಘಾ ಶೆಟ್ಟಿ ʻಗ್ರಾಮಾಯಣʼಮೂವಿ ಸಾಂಗ್‌ ಔಟ್‌:  ಶಿವರಾಜ್‌ಕುಮಾರ್‌ ಸಾಥ್‌

ವಿನಯ್​, ಮೇಘಾ ಶೆಟ್ಟಿ ʻಗ್ರಾಮಾಯಣʼಮೂವಿ ಸಾಂಗ್‌ ಔಟ್‌

Benki Kannada Song: ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ನಿರ್ದೇಶನದ ಹಾಗೂ ವಿನಯ್ ರಾಜಕುಮಾರ್ - ಮೇಘ ಶೆಟ್ಟಿ ನಾಯಕ - ನಾಯಕಿಯಾಗಿ ಅಭಿನಯಿಸಿರುವ ʻಗ್ರಾಮಾಯಣʼ ಚಿತ್ರದ ʻಬೆಂಕಿʼ ಹಾಡನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅನಾವರಣ ಮಾಡಿದರು. ಹಾಡು ತುಂಬಾ ಚೆನ್ನಾಗಿದೆ. ಚಿತ್ರ ಯಶಸ್ವಿಯಾಗಲೆಂದು ಶಿವಣ್ಣ ಹಾರೈಸಿದರು. ಗೀತಾ ಶಿವರಾಜಕುಮಾರ್ ಅವರು ಉಪಸ್ಥಿತರಿದ್ದರು. ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರುವ ಈ ಹಾಡನ್ನು ಕಪಿಲ ಕಪಿಲನ್ ಹಾಗೂ ಐರಾ ಉಡುಪಿ ಹಾಡಿದ್ದಾರೆ.

Rukmini Vasanth: ಬೆಂಗಳೂರಿನಲ್ಲಿ ಅತ್ಯಂತ ದೊಡ್ಡ ಎಕ್ಸ್ಪೀರಿಯೆನ್ಸ್ ಹಬ್ ಪ್ರಾರಂಭ; ನಟಿ ರುಕ್ಮಿಣಿ ವಸಂತ್ ಅವರಿಂದ ಉದ್ಘಾಟನೆ

ಬೆಂಗಳೂರಿನಲ್ಲಿ ಅತ್ಯಂತ ದೊಡ್ಡ ಎಕ್ಸ್ಪೀರಿಯೆನ್ಸ್ ಹಬ್ ಪ್ರಾರಂಭ

ಎರಡು ಮಹಡಿಗಳಲ್ಲಿ 6,200 ಚದರ ಅಡಿ ವಿಸ್ತೀರ್ಣ ಹೊಂದಿರುವ ಈ ಕೇಂದ್ರವು ಮ್ಯಾಜಿಕ್ ಹೋಮ್ ನ ಅತ್ಯಂತ ದೊಡ್ಡ ಹಾಗೂ ತಲ್ಲೀನಗೊಳಿಸುವ ತಾಣವಾಗಿದ್ದು ಗೃಹ ಮಾಲೀಕರು ಆವಿಷ್ಕರಿಸುವ, ಅನುಭವ ಪಡೆದುಕೊಳ್ಳುವ ಮತ್ತು ಒಳಾಂಗಣಗಳನ್ನು ಆಯ್ಕೆ ಮಾಡುವ ವಿಧಾನವನ್ನು ಸಂಪೂರ್ಣ ಮರು ರೂಪಿಸಲು ವಿನ್ಯಾಸಗೊಳಿಸಲಾಗಿದೆ.

Bigg Boss 12: ʻನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ, ಊರಗೆಲ್ಲಾ ಗೊತ್ತೂ ಗಿಲ್ಲಿ ಗಮ್ಮತ್ತುʼ;  ಪಳಾರ್‌ ಗಿಲ್ಲಿ  ನಟನ ಬಗ್ಗೆ ʻಬಿಗ್‌ ಬಾಸ್‌ʼ ಪಂಚ್‌ ಲೈನ್

ಎದುರಾಳಿಗೆ ಚಮಕ್ ನೀಡೋ ಚಾಲಾಕಿ, ಮರುಭೂಮಿಯಲ್ಲೂ ಹೂ ಬೆಳೆಸೋ ಕಲೆಗಾರ ಗಿಲ್ಲಿ!

Bigg Boss Kannada Season 12 Finale: ಬಿಗ್ ಬಾಸ್ ಕನ್ನಡ 12ರ ಫಿನಾಲೆಯಲ್ಲಿ ಗಿಲ್ಲಿ ನಟ ಸಂಚಲನ ಮೂಡಿಸುತ್ತಿದ್ದು, ಅವರ ಬಗ್ಗೆ ಬಿಗ್ ಬಾಸ್ ತಂಡವು ವಿಶಿಷ್ಟವಾಗಿ ಪಂಚ್ ಲೈನ್‌ಗಳನ್ನು ಹಂಚಿಕೊಂಡಿದೆ. ಗಿಲ್ಲಿಯನ್ನು "ನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ" ಎಂದು ವರ್ಣಿಸಿರುವ ತಂಡ, ಅವರ ಐದು ಪ್ರಮುಖ ಗುಣಗಳನ್ನು ಪಟ್ಟಿ ಮಾಡಿದೆ.

ʻರೇಗಿಸಿದ್ರೆ ಸುಮ್ನಿರೋಲ್ಲ ಕಾವ್ಯ, ತನ್ನವರನ್ನ ಬಿಟ್ಕೋಡಲ್ಲ ರಕ್ಷಿತಾ, ಮಗುಮನಸ್ಸಿನ ಹೃದಯವಂತ ರಘುʼ; ಈ ಮೂವರ ಬಗ್ಗೆ ʻಬಿಗ್ ಬಾಸ್‌ʼ ಹೇಳಿದ್ದೇನು?

ರಘು, ಕಾವ್ಯ, ರಕ್ಷಿತಾ ಬಗ್ಗೆ 'ಪಂಚ್' ಲೈನ್‌ ಹೇಳಿದ ʻಬಿಗ್ ಬಾಸ್ʼ!

Bigg Boss Kannada 12: ಫಿನಾಲೆ ಅಂತಿಮ ಘಟ್ಟದಲ್ಲಿರುವ ರಘು, ಕಾವ್ಯ ಮತ್ತು ರಕ್ಷಿತಾ ಶೆಟ್ಟಿ ಅವರ ವ್ಯಕ್ತಿತ್ವದ ಬಗ್ಗೆ ಬಿಗ್ ಬಾಸ್ ತಂಡ ವಿಶ್ಲೇಷಣೆ ಮಾಡಿದೆ. ಮ್ಯೂಟೆಂಟ್ ರಘು ಅವರನ್ನು "ಮಗು ಮನಸ್ಸಿನ ಹೃದಯವಂತ" ಎಂದು ಕರೆದರೆ, ಕಾವ್ಯ ಅವರನ್ನು "ನಗೆ ಮಲ್ಲಿಗೆ" ಎಂದು ಬಣ್ಣಿಸಲಾಗಿದೆ. ಇನ್ನು ರಕ್ಷಿತಾ ಅವರನ್ನು "ಚೋಟ್ ಮೆಣಸಿನಕಾಯಿ" ಎಂದು ಬಿಗ್ ಬಾಸ್ ಕರೆದಿದ್ದಾರೆ.

ನಿಜ ಜೀವನದಲ್ಲಿ ಲಾ ಓದಿದ್ದರೂ ಲಾಯರ್‌ ಆಗಲಿಲ್ಲ ನಟ ಕೋಮಲ್‌; ಆದರೂ ಕರಿಕೋಟು ಧರಿಸುವ ಚಾನ್ಸ್‌ ಕೊಟ್ಟ ʻತೆನಾಲಿʼ!

ನಿಜ ಜೀವನದ ಕನಸು ತೆರೆಮೇಲೆ ನನಸು: ಕರಿಕೋಟು ಧರಿಸಿ ಲಾಯರ್ ಆದ ನಟ ಕೋಮಲ್

ನಟ ಕೋಮಲ್ ಕುಮಾರ್ ಅವರು ಇದೇ ಮೊದಲ ಬಾರಿಗೆ ತೆರೆಮೇಲೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಕೋಮಲ್ ಅವರು ನಿಜ ಜೀವನದಲ್ಲೂ ಕಾನೂನು ಪದವಿ ಪಡೆದಿದ್ದಾರೆ. ಈ ಹಿಂದಿನ 'ಮರೀಚಿ' ಚಿತ್ರದ ನಿರ್ದೇಶಕ ಸಿದ್ದ್ರುವ್ ಸಿದ್ದು ಅವರು ಕೋಮಲ್ ಅವರಿಗಾಗಿ 'ತೆನಾಲಿ ಡಿಎ ಎಲ್‌ಎಲ್‌ಬಿ' ಎಂಬ ವಿಭಿನ್ನ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ.

AR Rahman: ವಿವಾದ ಹುಟ್ಟುಹಾಕಿದ್ದ ʻಧರ್ಮʼದ ಹೇಳಿಕೆ: ಟೀಕೆಯ ನಂತರ ಮೌನ ಮುರಿದ AR ರೆಹಮಾನ್‌!

ಟೀಕೆಯ ನಂತರ ಮೌನ ಮುರಿದ AR ರೆಹಮಾನ್‌!

Music composer AR Rahman: ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರು ಭಾನುವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಧರ್ಮದ ಕಾರಣದಿಂದ ತಮಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿದೆ ಎಂದು ಎ.ಆರ್. ರೆಹಮಾನ್ ಹೇಳಿದ್ದರು. ಅಲ್ಲದೇ ‘ಛಾವ’ ಸಿನಿಮಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಎ.ಆರ್. ರೆಹಮಾನ್ ಹೇಳಿಕೆ ಭಾರಿ ಚರ್ಚೆಗಳನ್ನುಂಟು ಮಾಡಿತ್ತು.

Bigg Boss 12: ಕಾವ್ಯ ವಾರ್ನಿಂಗ್‌ಗೆ ಗಿಲ್ಲಿ ನಟ ಡೋಂಟ್‌ ಕೇರ್;‌ ʻಕಾವು ನಮ್ ಮಾವನ ಮಗಳುʼ ಎಂದು ಮತ್ತೆ ಕಾಲೆಳೆದ ಪಳಾರ್!‌

ಕಾವ್ಯ ವಾರ್ನಿಂಗ್‌ಗೆ ಡೋಂಟ್ ಕೇರ್; ಫಿನಾಲೆ ವೇದಿಕೆಯಲ್ಲಿ ಗಿಲ್ಲಿ ಕಾಮಿಡಿ

Bigg Boss Kannada 12 Pre Finale Episode: ಗಿಲ್ಲಿ ನಟ ಮತ್ತು ಕಾವ್ಯ ಶೈವ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ತಮ್ಮ ವಿಭಿನ್ನ ಬಾಂಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಇತ್ತೀಚೆಗೆ ಗಿಲ್ಲಿ ನೀಡುವ 'ಕಾವು' ಎಂಬ ಅಡ್ಡಹೆಸರು ಮತ್ತು ಪದೇ ಪದೇ ರೇಗಿಸುವುದು ಕಾವ್ಯ ಅವರಿಗೆ ಕಿರಿಕಿರಿ ಉಂಟುಮಾಡಿದೆ. ಆದರೂ ಗಿಲ್ಲಿ ರೇಗಿಸುವುದನ್ನ ನಿಲ್ಲಿಸಿಲ್ಲ.

Loading...