ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Chennai Love Story:  OTTಗೆ ಬರಲಿದೆ `ಚೆನ್ನೈ ಲವ್ ಸ್ಟೋರಿ'; ಸ್ಟ್ರೀಮಿಂಗ್‌ ಎಲ್ಲಿ?

OTTಗೆ ಬರಲಿದೆ `ಚೆನ್ನೈ ಲವ್ ಸ್ಟೋರಿ'; ಸ್ಟ್ರೀಮಿಂಗ್‌ ಎಲ್ಲಿ?

Chennai Love Story: ಭಾರಿ ನಿರೀಕ್ಷೆಗಳ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚೆನ್ನೈ ಲವ್ ಸ್ಟೋರಿ ಚಿತ್ರವು ಆ ನಿರೀಕ್ಷೆಗಳನ್ನು ಪೂರೈಸಿತು ಮತ್ತು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಯಶಸ್ಸನ್ನು ಕಂಡಿತು. ಸುಮಾರು ರೂ. 16 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವಾದ್ಯಂತ ರೂ. 60 ಕೋಟಿಯವರೆಗೆ ಸಂಗ್ರಹಿಸಿತು. ಕಿರಣ್ ಅಬ್ಬಾವರಾಮ್ ಅವರ ವ್ಯಾಪ್ತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಚಿತ್ರ ಇದು.

ಹಿಂದೂ ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ʻಕಾಫೀರ್‌ʼ ಎಂದು ಟೀಕೆ! ಗಳಗಳನೆ ಅತ್ತ ತೆಲುಗು ನಟಿ ಫಾರಿಯಾ ಅಬ್ದುಲ್ಲಾ

ಬೋನಾಲು ವೇಳೆ ಕಳಶ ಹೊತ್ತಿದ್ದಕ್ಕೆ ಕಾಫಿರ್ ಪಟ್ಟ; ಕಣ್ಣೀರಿಟ್ಟ ನಟಿ ಫಾರಿಯಾ!

ತೆಲುಗು ಚಿತ್ರರಂಗದ ಖ್ಯಾತ ನಟಿ ಫಾರಿಯಾ ಅಬ್ದುಲ್ಲಾ ತೆಲಂಗಾಣದ ಸಾಂಪ್ರದಾಯಿಕ ‘ಬೋನಾಲು’ ಉತ್ಸವದಲ್ಲಿ ಕಳಶ ಹೊತ್ತು ನೃತ್ಯ ಮಾಡಿದ್ದಕ್ಕೆ ಕೆಲ ಮುಸ್ಲಿಮರಿಂದ ‘ಕಾಫಿರ್’ ಎಂದು ತೀವ್ರ ನಿಂದನೆಗೆ ಗುರಿಯಾಗಿದ್ದಾರೆ. ಈ ಧಾರ್ಮಿಕ ದ್ವೇಷದ ವಿರುದ್ಧ ಕಣ್ಣೀರಿಡುತ್ತಲೇ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ ನಟಿ ಫಾರಿಯಾ.

ʻನಾಚಿಕೆ ಇಲ್ಲದವರು, ಮಗಳ ವಯಸ್ಸಿನ ಹುಡುಗಿ ಜೊತೆ ಓಡಾಡ್ತಿದ್ದಾರೆʼ; ಪತ್ನಿಯ ಕೀಳುಮಟ್ಟದ ಲೇವಡಿಗೆ ನಟ ಗೋವಿಂದಾ ಖಡಕ್‌ ತಿರುಗೇಟು!

ಪತ್ನಿ ಸುನೀತಾ ನೀಡಿದ ಕೀಳುಮಟ್ಟದ ಟೀಕೆಗೆ ನಟ ಗೋವಿಂದಾ ಖಡಕ್ ತಿರುಗೇಟು!

ಬಾಲಿವುಡ್ ನಟ ಗೋವಿಂದಾ ಮತ್ತು ಪತ್ನಿ ಸುನೀತಾ ಅಹುಜಾ ನಡುವಿನ ಜಟಾಪಟಿ ತೀವ್ರಗೊಂಡಿದೆ. ನಟಿ ಕೋಮಲ್ ರಾಣಿ ಜೊತೆ ಕಾಣಿಸಿಕೊಂಡಿದ್ದಕ್ಕೆ ಪತ್ನಿ ಲೇವಡಿ ಮಾಡಿದ್ದಕ್ಕೆ ಗೋವಿಂದಾ ತಿರುಗೇಟು ನೀಡಿದ್ದಾರೆ. ತಮ್ಮ ವೃತ್ತಿಪರ ಕೆಲಸಗಳಿಗೆ ಅಡ್ಡಿಪಡಿಸದೆ ಮಿತಿಯಲ್ಲಿದ್ದರೆ ಒಳಿತು ಎಂದು ಎಚ್ಚರಿಸಿದ್ದಾರೆ.

'ಎ ಡೇಟ್‌' ಚಿತ್ರದ ರ‍್ಯಾಪ್ ಶೈಲಿಯ 'ಬ್ಯಾಡ್ ಗೈ' ಆಂಥಮ್ ಸಾಂಗ್ ಬಿಡುಗಡೆ; ತೆರೆಗೆ ಬರಲು ಸಜ್ಜಾದ ಹೊಸಬರ ಪ್ರಯೋಗಾತ್ಮಕ ಸಿನಿಮಾ

ಹೊಸಬರ 'ಎ ಡೇಟ್‌' ಚಿತ್ರದ 'ಬ್ಯಾಡ್ ಗೈ' ಆಂಥಮ್ ಸಾಂಗ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಪ್ರಯೋಗಶೀಲ ಕಥಾಹಂದರ ಹೊಂದಿರುವ ‘ಎ ಡೇಟ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಬೆಂಗಳೂರಿನ ಹಿನ್ನೆಲೆಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಇಬ್ಬರು ಅಪರಿಚಿತರ ಒಂದು ದಿನದ ಪಯಣವನ್ನು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಯೋಧರ ಜೊತೆ ಕಾಲ ಕಳೆದ ಸೈಫ್ ಅಲಿ ಖಾನ್; ʻಭಾರತೀಯ ಸೇನೆ ಸದಾ ನಮ್ಮನ್ನು ಕಾಪಾಡುತ್ತದೆ ಅಂತ ನನ್ ಮಕ್ಕಳಿಗೆ ಹೇಳ್ತಿರ್ತಿನಿʼ ಎಂದ ನಟ

80ನೇ ಸ್ವಾತಂತ್ರ್ಯ ದಿನಾಚರಣೆಯಂದು ಯೋಧರೊಂದಿಗೆ ಕಾಲ ಕಳೆದ ಸೈಫ್ ಅಲಿ ಖಾನ್

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಜಮ್ಮು-ಕಾಶ್ಮೀರದ ಉರಿ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಮಯ ಕಳೆದಿದ್ದಾರೆ. ಯೋಧರೊಂದಿಗೆ ಭೋಜನ ಸವಿದು ಕ್ರಿಕೆಟ್ ಆಡಿದ ಅವರು, ಜಾಗತಿಕ ಸಂಘರ್ಷಗಳಿಂದ ಭಯಪಡುವ ತಮ್ಮ ಮಕ್ಕಳಿಗೆ ಭಾರತೀಯ ಸೇನೆಯೇ ರಕ್ಷಾಕವಚ ಎಂದು ಧೈರ್ಯ ತುಂಬುವುದಾಗಿ ತಿಳಿಸಿದರು.

ಸ್ಯಾಂಡಲ್‌ವುಡ್‌ಗೆ ಮರಳಿದ ʻಕೆಜಿಎಫ್‌ʼ ಚೆಲುವೆ ಶ್ರೀನಿಧಿ ಶೆಟ್ಟಿ; ಸದ್ದಿಲ್ಲದೇ ಹೊಸ ಸಿನಿಮಾ ಆರಂಭಿಸಿದ ಅನೂಪ್‌ ಭಂಡಾರಿ!

ಸ್ಯಾಂಡಲ್‌ವುಡ್‌ಗೆ ಮರಳಿದ ಶ್ರೀನಿಧಿ ಶೆಟ್ಟಿ; ಯಾವುದು ಆ ಸಿನಿಮಾ?

ಪರಭಾಷಾ ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯವಾಗಿದ್ದ ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ಇದೀಗ ಭಂಡಾರಿ ಸಹೋದರರ ನೂತನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಮರುಪ್ರವೇಶ ಮಾಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ‌ ನಿರೂಪ್ ಭಂಡಾರಿ ನಾಯಕನಾಗಿ ನಟಿಸುತ್ತಿದ್ದಾರೆ.

ʻರಾವಣನ ಪಾತ್ರವನ್ನ ನನಗಿಂತ ಉತ್ತಮವಾಗಿ ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ’: ‘ಆಪ್ ಕಿ ಅದಾಲತ್’ನಲ್ಲಿ ರಾಕಿಂಗ್ ಸ್ಟಾರ್ ಯಶ್ ಖಡಕ್ ಮಾತು

ʻರಾವಣನ ಪಾತ್ರಕ್ಕೆ ನಾನೇ ಬೆಸ್ಟ್ʼ; 'ಆಪ್ ಕಿ ಅದಾಲತ್' ಶೋನಲ್ಲಿ ಯಶ್ ಮಾತು

'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಯಶ್, ತಾವು 'ರಾಮಾಯಣ' ಸಿನಿಮಾದಲ್ಲಿ ರಾವಣನ ಪಾತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡೆ ಎಂಬುದರ ಹಿಂದಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪ್ರಭು ಶ್ರೀರಾಮನ ದೈವಿಕತೆಯನ್ನು ಪರಿಣಾಮಕಾರಿಯಾಗಿ ತೋರಿಸಲು ಎದುರಾಳಿ ರಾವಣ ಅಷ್ಟೇ ಪ್ರಬಲವಾಗಿರಬೇಕು ಎಂದು ಯಶ್‌ ಹೇಳಿದ್ದಾರೆ.

ರಿಷಬ್‌ ಶೆಟ್ಟಿಯ ʻಜೈ ಹನುಮಾನ್ʼ ಸಿನಿಮಾದಲ್ಲಿ ಶ್ರೀರಾಮನ ಪಾತ್ರ ಮಾಡೋದ್ಯಾರು? ಕುತೂಹಲ ಮೂಡಿಸಿದ‌ ನಿರ್ದೇಶಕ ಪ್ರಶಾಂತ್ ವರ್ಮಾ ಪ್ಲ್ಯಾನ್!

ರಿಷಬ್‌ ಶೆಟ್ಟಿಯ ʻಜೈ ಹನುಮಾನ್ʼ ಚಿತ್ರದಲ್ಲಿ ರಾಮನ ಪಾತ್ರ ಮಾಡೋದ್ಯಾರು?

'ಹನು-ಮಾನ್' ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಪ್ರಶಾಂತ್ ವರ್ಮಾ ಸಾರಥ್ಯದಲ್ಲಿ ಮೂಡಿಬರುತ್ತಿರುವ 'ಜೈ ಹನುಮಾನ್' ಚಿತ್ರದಲ್ಲಿ ರಿಷಬ್ ಶೆಟ್ಟಿ ಹನುಮಂತನಾಗಿ ನಟಿಸುತ್ತಿದ್ದಾರೆ. ಈ ಪೌರಾಣಿಕ ಸಿನಿಮಾದಲ್ಲಿ ಅತ್ಯಂತ ಮಹತ್ವದ ಶ್ರೀರಾಮನ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

Trisha: ಧ್ವಜಾರೋಹಣ ಕಾರ್ಯಕ್ರಮದಲ್ಲಿ ಸಿಎಂ ವಿಜಯ್ ಅಪ್ಪ- ಅಮ್ಮನ ಪಕ್ಕದಲ್ಲೇ ಬಂದು ಕುಳಿತ ತ್ರಿಶಾ!

ಮತ್ತೆ ಸಿಎಂ ವಿಜಯ್ ಅಪ್ಪ- ಅಮ್ಮನ ಪಕ್ಕದಲ್ಲೇ ಬಂದು ಕುಳಿತ ತ್ರಿಶಾ!

Vijay: ಶನಿವಾರ ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ನಟಿ ತ್ರಿಶಾ ಕೃಷ್ಣನ್ ಭಾಗವಹಿಸಿದ್ದರು. ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಅವರ ಧ್ವಜಾರೋಹಣ ಸಮಾರಂಭಕ್ಕೂ ಮುನ್ನ ಅವರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಕಾರ್ಯಕ್ರಮದ ಹಲವಾರು ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಬ್ರೇಕಪ್ ರೂಮರ್ಸ್ ಬೆನ್ನಲ್ಲಿಯೇ ನಟಿ ಹಳದಿ ಬಣ್ಣದ ಸೀರೆ ಉಟ್ಟುಕೊಂಡು ಇವೆಂಟ್​ನಲ್ಲಿ ಭಾಗಿಯಾಗಿದ್ದು ಮೊದಲ ಸೀಟ್​​ನಲ್ಲಿಯೇ ಕುಳಿತುಕೊಂಡಿದ್ದರು.

Govinda: ಮಗಳ ವಯಸ್ಸಿನ ಯುವತಿ ಜೊತೆ ಗೋವಿಂದ ಸುತ್ತಾಟ; ಟೀಕಿಸಿದ ಪತ್ನಿ

Govinda: ಮಗಳ ವಯಸ್ಸಿನ ಯುವತಿ ಜೊತೆ ಗೋವಿಂದ ಸುತ್ತಾಟ; ಟೀಕಿಸಿದ ಪತ್ನಿ

Govinda: ಗೋವಿಂದ ಅವರ ಪತ್ನಿ ಸುನಿತಾ ಅಹುಜಾ , ನಟ ಕೋಮಲ್ ರಾಣಿ ಸ್ವರ್ಣಕರ್ ಅವರೊಂದಿಗೆ ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಎಂಬ ವದಂತಿಗಳ ನಡುವೆ, ಅವರಿಬ್ಬರ ನಡುವಿನ ಸಂಬಂಧವನ್ನು ಉಲ್ಲೇಖಿಸಿದ್ದಾರೆ. ಶುಕ್ರವಾರ ಮುಂಬೈನಲ್ಲಿ ನಡೆದ ಪಾಪರಾಜಿ ಸಂವಾದದ ಸಂದರ್ಭದಲ್ಲಿ, ಸುನಿತಾ, ಗೋವಿಂದ "ತನ್ನ ಮಗಳಾಗುವಷ್ಟು ಚಿಕ್ಕ ವಯಸ್ಸಿನ ಹುಡುಗಿಯ ಜೊತೆ ಸುತ್ತಾಡುತ್ತಿದ್ದಾರೆ" ಎಂದು ಹೇಳಿದರು. ಈ ರೀತಿ ಹೇಳಿಕೆ ನೀಡುವ ಮೂಲಕ ಗೋವಿಂದ ಮೇಲೆ ತಮಗೆ ಇರುವ ಅಸಮಾಧಾನವನ್ನು ಹೊರಹಾಕಿದ್ದಾರೆ.

7 ವರ್ಷಗಳ ನಂತರ ಇನ್‌ಸ್ಟಾಗ್ರಾಮ್ DP ಬದಲಿಸಿದ ನಟ ಪ್ರಭಾಸ್: 'ಫೌಜಿ' ಮೇನಿಯಾ ಶುರು ಎಂದ ‌‘ಡಾರ್ಲಿಂಗ್‌’ ಫ್ಯಾನ್ಸ್

Fauji Movie: 7 ವರ್ಷದ ಬಳಿಕ ಸೋಷಿಯಲ್ ಮೀಡಿಯಾ DP ಬದಲಿಸಿದ ಪ್ರಭಾಸ್

ಪ್ಯಾನ್-ಇಂಡಿಯಾ ಸೂಪರ್‌ಸ್ಟಾರ್ ಪ್ರಭಾಸ್ ಏಳು ವರ್ಷಗಳ ನಂತರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ 'ಬಾಹುಬಲಿ' ಪ್ರೊಫೈಲ್ ಚಿತ್ರವನ್ನು ಬದಲಿಸಿ, ಮುಂಬರುವ 'ಫೌಜಿ' ಚಿತ್ರದ ರಗಡ್ ಸೈನಿಕನ ಲುಕ್ ಅಪ್‌ಡೇಟ್ ಮಾಡಿದ್ದಾರೆ. ಹನು ರಾಘವಪೂಡಿ ನಿರ್ದೇಶನದಲ್ಲಿ ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಈ ಪೀರಿಯಾಡಿಕ್ ಆಕ್ಷನ್ ಡ್ರಾಮಾ ಡಿಸೆಂಬರ್ 3ರಂದು ಬಿಡುಗಡೆಯಾಗಲಿದೆ.

Cocktail 2 OTT release: ರಶ್ಮಿಕಾ ಅಭಿನಯದ ಕಾಕ್ಟೇಲ್ 2 ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ರಶ್ಮಿಕಾ ಅಭಿನಯದ ಕಾಕ್ಟೇಲ್ 2 ಸಿನಿಮಾ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

Cocktail 2 OTT release: 'ಕಾಕ್‌ಟೇಲ್ 2' ಅನ್ನು ದಿನೇಶ್ ವಿಜನ್, ಲವ್ ರಂಜನ್, ಪ್ರಮಿತಾ ಆರ್ ವಿಜನ್ ಮತ್ತು ಅಂಕುರ್ ಗರ್ಗ್ ನಿರ್ಮಿಸಿದ್ದಾರೆ. ಕಾಕ್‌ಟೇಲ್ 2, 2012ರ ಕಲ್ಟ್2012ರ ಜುಲೈ 13ರಂದು ತೆರೆಕಂಡ ಮೂಲ​​ ಚಿತ್ರದಲ್ಲಿ ದೀಪಿಕಾ ಪಡುಕೋಣೆ​​ ವೆರೋನಿಕಾ ಪಾತ್ರದಲ್ಲಿ, ಸೈಫ್ ಅಲಿ ಖಾನ್ ಅವರು ಗೌತಮ್ ಕಪೂರ್ (ಗುಟ್ಲು) ಪಾತ್ರದಲ್ಲಿ ಮತ್ತು ಡಯಾನಾ ಪೆಂಟಿ ಅವರು ಕಾಯ್ ಮೀರಾ ಎಂಬ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಹಿಟ್ ಅಗಿ ಮೂವರಿಗೂ ಹೆಸರು ತಂದುಕೊಟ್ಟಿತ್ತು. ಹಿಟ್ ಕಾಕ್‌ಟೇಲ್‌ನ ಸೀಕ್ವೆಲ್​. ಆದ್ರೆ ಇದು ಮೊದಲ ಭಾಗದ ಮುಂದುವರಿದ ಕಥೆಯಲ್ಲ.

ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ನಟ ಯಶ್ ಅಂದು ಹೋಗಲಿಲ್ಲ ಏಕೆ? ಕಾರಣ ಬಹಿರಂಗಪಡಿಸಿದ ʻರಾಕಿ ಭಾಯ್ʼ!‌

ಅಂದು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಅಂತ್ಯಕ್ರಿಯೆಗೆ ಯಶ್ ಹೋಗಲಿಲ್ಲ ಏಕೆ?

ʻರಾಕಿಂಗ್ ಸ್ಟಾರ್ʼ ಯಶ್ ಅವರು 'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ಈ ಹಿಂದೆ ಮಂಡ್ಯದ ಅಭಿಮಾನಿ ರಾಮಕೃಷ್ಣ ಅವರ ಅಂತ್ಯಕ್ರಿಯೆಗೆ ತಾವು ಹೋಗದಿರಲು ಇದ್ದ ಬಲವಾದ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಆತ್ಮಹತ್ಯೆಯಂತಹ ದುಡುಕಿನ ಕೃತ್ಯಗಳಿಗೆ ಹಾಜರಾದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವ ಸಾಧ್ಯತೆಯಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

Priyanka Chopra: ಶ್ರೀದೇವಿ ಜನ್ಮದಿನ; 'ಎಂಪ್ರೆಸ್' ಬಯಾಗ್ರಫಿ ಕವರ್ ಪೇಜ್ ರಿಲೀಸ್

ಶ್ರೀದೇವಿ ಜನ್ಮದಿನಕ್ಕೆ ಪ್ರಿಯಾಂಕಾ ಚೋಪ್ರಾ ನಮನ

Priyanka Chopra: ನಟಿ ಪ್ರಿಯಾಂಕಾ ಚೋಪ್ರಾ ಅವರು "ಎಂಪ್ರೆಸ್: ದಿ ಡೆಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ"ಯ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ. ಇದು ದಿವಂಗತ ನಟಿಯ ಐದು ದಶಕಗಳ ವೃತ್ತಿಜೀವನ ಕುರಿತ ಕಥೆಯಾಗಿದೆ. ಶ್ರೀದೇವಿ ಅವರ ಜೀವನ ಆಧಾರಿತ ಮುಂಬರುವ 'ಎಂಪ್ರೆಸ್' ಬಯಾಗ್ರಫಿಯ ಮೊದಲ ನೋಟವನ್ನು ಹಂಚಿಕೊಳ್ಳುವ ಮೂಲಕ ಪ್ರಿಯಾಂಕಾ ಚೋಪ್ರಾ ಭಾರತೀಯ ಚಿತ್ರರಂಗದ ಈ ಮಹಾನ್ ನಟಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

IFFM 2026ರಲ್ಲಿ ರಿಷಬ್ ಶೆಟ್ಟಿಗೆ ಡಬಲ್ ಧಮಾಕ: ‘ಲೀಡರ್‌ಶಿಪ್ ಇನ್ ಸಿನಿಮಾ’ ಜೊತೆಗೆ ‘ಕಾಂತಾರ: ಚಾಪ್ಟರ್ 1’ ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗರಿ

ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್​ನಲ್ಲಿ ರಿಷಬ್‌ಗೆ 2 ಪ್ರಶಸ್ತಿ!

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಪ್ರತಿಷ್ಠಿತ 'NAB IFFM Awards 2026' ಸಮಾರಂಭದಲ್ಲಿ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಎರಡು ಪ್ರಮುಖ ಪ್ರಶಸ್ತಿಗಳು ಲಭಿಸಿವೆ. ಭಾರತೀಯ ಚಿತ್ರರಂಗದ ಅನುಪಮ ಸೇವೆಗಾಗಿ 'ಲೀಡರ್‌ಶಿಪ್ ಇನ್ ಸಿನಿಮಾ' ಹಾಗೂ 'ಕಾಂತಾರ: ಚಾಪ್ಟರ್ 1' ಚಿತ್ರದ ಅಪೂರ್ವ ಮೇಕಿಂಗ್‌ಗಾಗಿ 'ಅತ್ಯುತ್ತಮ ನಿರ್ದೇಶಕ' ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

‘ನಾನು ಇಂದಿಗೂ ಶಾರುಖ್ ಫ್ಯಾನ್, ನಮ್ಮ ಹಿರಿಯರಿಗಿಂತ ನಾನೇ ದೊಡ್ಡವನು ಅಂದುಕೊಂಡ ದಿನವೇ ನನ್ ಕಥೆ ಮುಗೀತು’; ‘ಆಪ್ ಕಿ ಅದಾಲತ್’ನಲ್ಲಿ ಯಶ್‌ ಓಪನ್‌ ಟಾಕ್!

ʻಆಪ್ ಕಿ ಅದಾಲತ್‌ʼ ಶೋನಲ್ಲಿ ಶಾರುಖ್‌ ಖಾನ್ ಬಗ್ಗೆ ನಟ ಯಶ್ ಹೇಳಿದ್ದೇನು?

ಹಿರಿಯ ಪತ್ರಕರ್ತ ರಜತ್ ಶರ್ಮಾ ನಡೆಸಿಕೊಡುವ 'ಆಪ್ ಕಿ ಅದಾಲತ್' ಕಾರ್ಯಕ್ರಮದ ಕಟಕಟೆಯಲ್ಲಿ ಕಾಣಿಸಿಕೊಂಡ ಮೊಟ್ಟಮೊದಲ ಕನ್ನಡ ನಟ ಎಂಬ ಹೆಗ್ಗಳಿಕೆಗೆ ರಾಕಿಂಗ್ ಸ್ಟಾರ್ ಯಶ್ ಪಾತ್ರರಾಗಿದ್ದಾರೆ. ಈ ಶೋನಲ್ಲಿ ಶಾರುಖ್ ಖಾನ್ ಅವರ 'ಝೀರೋ' ಎದುರು ಕೆಜಿಎಫ್ ಗೆದ್ದರೂ, ಹಿರಿಯ ನಟರನ್ನು ಗೌರವಿಸುವುದಾಗಿ ಯಶ್ ವಿನಮ್ರತೆ ಮೆರೆದಿದ್ದಾರೆ.

ʻಟಾಕ್ಸಿಕ್ʼ ಶೂಟಿಂಗ್‌ ಟೈಮ್‌ನಲ್ಲಿ ಗರ್ಭಿಣಿ ಕಿಯಾರಾ ಅಡ್ವಾಣಿಗೆ ಬಾಡಿಗಾರ್ಡ್ ಆಗಿದ್ದ ಯಶ್: ಬಾಲಿವುಡ್‌ ನಟಿಯ ಡೆಡಿಕೇಷನ್‌ಗೆ ʻರಾಕಿಂಗ್ ಸ್ಟಾರ್ʼ ಫಿದಾ!

'ಟಾಕ್ಸಿಕ್' ಶೂಟಿಂಗ್ ‌ವೇಳೆ ಗರ್ಭಿಣಿ ಕಿಯಾರಾಗೆ ಬಾಡಿಗಾರ್ಡ್‌ ಆಗಿದ್ದ ಯಶ್!

ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರೀಕರಣದ ವೇಳೆ ಗರ್ಭಿಣಿಯಾಗಿದ್ದ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರ ಬದ್ಧತೆಯನ್ನು ನಟ ಯಶ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಮುಂಬೈನಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಯಶ್, ಸೆಟ್‌ನಲ್ಲಿ ಕಿಯಾರಾಗೆ ಬೌನ್ಸರ್‌ನಂತೆ ಕಾಳಜಿ ವಹಿಸಿದ್ದಾಗಿ ತಿಳಿಸಿದರು.

Yash: ʻಟಾಕ್ಸಿಕ್‌ʼ ಸಿನಿಮಾಗೆ ಸಿಕ್ತು ʻಎʼ ಸರ್ಟಿಫಿಕೇಟ್! 3.14 ಗಂಟೆ ಅವಧಿಯ ಈ ಚಿತ್ರದ ಒಂದೆಳೆ ಏನು?

Yash: ʻಟಾಕ್ಸಿಕ್ʼ ಸಿನಿಮಾಗೆ ‘A’ ಸರ್ಟಿಫಿಕೇಟ್; ಈ ಚಿತ್ರದ ಅವಧಿ ಎಷ್ಟು?

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಸಿನಿಮಾಗೆ ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ 'A' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ದೊರೆತಿದೆ. 3 ಗಂಟೆ 14 ನಿಮಿಷಗಳ ಸುದೀರ್ಘ ಅವಧಿಯ ಈ ಚಿತ್ರದಲ್ಲಿ 'ರಾಯ' ಮತ್ತು 'ಟಿಕೆಟ್' ಎಂಬ ದ್ವಿಪಾತ್ರಗಳಲ್ಲಿ ತಂದೆ-ಮಗನಾಗಿ ಯಶ್ ಅಭಿನಯಿಸಿದ್ದಾರೆ.

29 ವರ್ಷಗಳ ನಂತರ ʻಅಮೆರಿಕಾ ಅಮೆರಿಕಾʼ ಚಿತ್ರಕ್ಕೆ ಸಿಕ್ವೇಲ್;‌ ರಿಲೀಸ್‌ ಡೇಟ್‌ ಘೋಷಣೆ ಮಾಡಿದ ನಾಗತಿಹಳ್ಳಿ ಚಂದ್ರಶೇಖರ್‌

29 ವರ್ಷಗಳ ಬಳಿಕ ʻಅಮೆರಿಕಾ ಅಮೆರಿಕಾʼ ಸೀಕ್ವೆಲ್; ಬಿಡುಗಡೆ ದಿನಾಂಕ ಘೋಷಣೆ

ಕನ್ನಡ ಚಿತ್ರರಂಗದ ಸರ್ವಕಾಲಿಕ ಹಿಟ್‌ ಸಿನಿಮಾ 'ಅಮೆರಿಕಾ ಅಮೆರಿಕಾ' ಬಿಡುಗಡೆಯಾಗಿ 29 ವರ್ಷಗಳ ನಂತರ ಸೀಕ್ವೆಲ್ ‘ಅಮೆರಿಕಾ ಅಮೆರಿಕಾ 2’ ತೆರೆಗೆ ಬರಲು ಸಜ್ಜಾಗಿದೆ. ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಮನೋಮೂರ್ತಿ ಕಾಂಬಿನೇಷನ್‌ನ ಈ 7ನೇ ಚಿತ್ರದ 'ರನ್ ರನ್' ಗೀತೆ ಬಿಡುಗಡೆಯಾಗಿದ್ದು, ಪೃಥ್ವಿ ಅಂಬರ್, ನಿರೂಪ್ ಭಂಡಾರಿ ಹಾಗೂ ಶಾನ್ವಿ ಶ್ರೀವಾಸ್ತವ್ ನಟಿಸಿರುವ ಈ ಸಿನಿಮಾವನ್ನುಕೆವಿಎನ್ ಪ್ರೊಡಕ್ಷನ್ಸ್ ಬಿಡುಗಡೆ ಮಾಡಲಿದೆ.

ನಟ ದರ್ಶನ್ ಜೈಲು ಸೇರಿ ಇಂದಿಗೆ 1 ವರ್ಷ: ʻನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲʼ ಎಂದು ಪತ್ನಿ ವಿಜಯಲಕ್ಷ್ಮಿ ಭಾವುಕ ಪೋಸ್ಟ್

ದರ್ಶನ್ ಜೈಲು ಸೇರಿ 1 ವರ್ಷ; 'ನೋವು ತಾಳಲು ಸಾಧ್ಯವಾಗುತ್ತಿಲ್ಲ' ಎಂದ ಪತ್ನಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಭರ್ತಿ ಒಂದು ವರ್ಷ ಪೂರೈಸಿದ್ದು, ಪತ್ನಿ ವಿಜಯಲಕ್ಷ್ಮಿ "ನೋವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ, ಕಾಲ ಮತ್ತು ದೇವರಿಗೆ ಎಲ್ಲವನ್ನು ಬಿಟ್ಟಿದ್ದೇನೆ" ಎಂದು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಇತ್ತ ಸಹ-ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗುವುದನ್ನು ವಿರೋಧಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

Sonu Nigam: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದೇಕೆ ಸೋನು ನಿಗಮ್?

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದೇಕೆ ಗಾಯಕ?

Sonu Nigam: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ಕುರಿತು ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರತಿಭಟನೆಯ ಬಗ್ಗೆ ಸೋನು ನಿಗಮ್ ಪ್ರತಿಕ್ರಿಯೆ ನೀಡದೇ ಇರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.ಸೋನು ಈಗ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಸೋನು ನಿಗಮ್ ಅವರು ಮೌನ ವಹಿಸಿದ್ದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ.

‘ಶಾಂತಿ ಕ್ರಾಂತಿ’ ರೀ-ರಿಲೀಸ್‌ ಬಗ್ಗೆ ಕೊನೆಗೂ ಸಿಕ್ತು ಕ್ಲಾರಿಟಿ; ಹಕ್ಕುಗಳನ್ನು ಹೊಂದಿರುವ ರವಿಚಂದ್ರನ್‌ ಸಹೋದರ ಬಾಲಾಜಿ ಬಿಚ್ಚಿಟ್ಟ ಸತ್ಯವಿದು!

ʻಶಾಂತಿ ಕ್ರಾಂತಿʼ ರೀ-ರಿಲೀಸ್‌; ರವಿಚಂದ್ರನ್ ಸಹೋದರ ಹೇಳಿದ್ರು ಅಸಲಿ ಸತ್ಯ!

ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಅಭಿನಯದ 'ಶಾಂತಿ ಕ್ರಾಂತಿ' ಸಿನಿಮಾದ ಮರುಬಿಡುಗಡೆ ಸುದ್ದಿ ಸದ್ಯ ಭಾರಿ ಚರ್ಚೆಯಲ್ಲಿದ್ದು, ಈ ಬಗ್ಗೆ ಅದರ ಹಕ್ಕುಗಳನ್ನು ಹೊಂದಿರುವ ರವಿ ಸಹೋದರ ಬಾಲಾಜಿ ವೀರಾಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ನೆಗೆಟಿವ್ಸ್‌ಗಳು ಹಾಳಾಗಿದ್ದು, ಹೊಸ ಮೂಲಗಳನ್ನು ಹುಡುಕಲಾಗುತ್ತಿದೆ. ಅದಕ್ಕೆ ಹೆಚ್ಚು ಸಮಯ ಬೇಕಾಗಲಿದೆ ಎಂದು ಹೇಳಿದ್ದಾರೆ.

Dulquer Salmaan: ದುಲ್ಕರ್ ಸಲ್ಮಾನ್ ಈ ಮೂವಿ ಪೋಸ್ಟ್‌ಪೋನ್‌! ಕಾರಣ ಇದು

Dulquer Salmaan: ದುಲ್ಕರ್ ಸಲ್ಮಾನ್ ಈ ಮೂವಿ ಪೋಸ್ಟ್‌ಪೋನ್‌!

I'm Game : ದುಲ್ಕರ್ ಸಲ್ಮಾನ್ (Dulquer Salmaan) ಅವರ ಮುಂಬರುವ ಚಿತ್ರ ಐ ಆ್ಯಮ್ ಗೇಮ್ (I am Game) ಗಾಗಿ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗುತ್ತದೆ . ಮಲಯಾಳಂ ಚಿತ್ರ ಆಗಸ್ಟ್ 20 ರಂದು ಓಣಂ ಬಿಡುಗಡೆಗೆ ನಿಗದಿಯಾಗಿತ್ತು, ಆದರೆ ಈಗ ಅದನ್ನು ಮುಂದೂಡಲಾಗಿದೆ. ಬಿಡುಗಡೆ ದಿನಾಂಕವನ್ನು ಏಕೆ ಬದಲಾಯಿಸಲಾಯಿತು ಎಂದು ದುಲ್ಕರ್ ತಮ್ಮ ಇನ್ಸ್ಟಾಗ್ರಾಮ್ (instagram) ಖಾತೆಯಲ್ಲಿ ವಿವರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿ; ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲೂ ಬಿಗ್ ಶಾಕ್!

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಕೋರಿ ನಟ ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಸಹ-ಆರೋಪಿ ಮಾಫಿ ಸಾಕ್ಷಿಯಾಗುವುದನ್ನು ಇತರ ಆರೋಪಿಗಳು ಪ್ರಶ್ನಿಸಲು ಅಧಿಕಾರವಿಲ್ಲವೆಂದು ಸ್ಪಷ್ಟಪಡಿಸಿದೆ.

Loading...