ಆತ್ಮಕಥೆ ಬರೆಯುವಲ್ಲಿ ರಜನಿಕಾಂತ್ ಬ್ಯುಸಿ! ಬರಲಿದೆಯಾ ʻತಲೈವಾʼ ಬಯೋಪಿಕ್?
ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿ ಆನಂತ ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ಆಗಿ ಹೊರಹೊಮ್ಮಿರುವ ರಜನಿಕಾಂತ್ ಅವರ ಜೀವನ ಪಯಣ ಈಗ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ. ರಜನಿಕಾಂತ್ ಪ್ರಸ್ತುತ ತಾವು ಬರೆಯುತ್ತಿರುವ ಆತ್ಮಕಥೆಯನ್ನು ಆಧರಿಸಿ ಬಯೋಪಿಕ್ ನಿರ್ಮಿಸುವ ಕುರಿತು ಆಪ್ತರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ.