ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

BBK 13 Elimination: ʻಬಿಗ್‌ ಬಾಸ್‌ʼ ಮನೆಯೊಳಗೆ ಕಾಲಿಡದೇ ಎಲಿಮಿನೇಟ್ ಆದ ಪ್ರಥಮಾ ಪ್ರಸಾದ್! ಇದು ಇತಿಹಾಸದಲ್ಲೇ ಮೊದಲು!

BBK 13: ʻಬಿಗ್ ಬಾಸ್ʼ ಮನೆಯೊಳಗೆ ಕಾಲಿಡದೇ ಪ್ರಥಮಾ ಪ್ರಸಾದ್ ಎಲಿಮಿನೇಟ್

Prathama Prasad Eviction: ʻಬಿಗ್ ಬಾಸ್ʼ ಕನ್ನಡ ಸೀಸನ್ 13ರಲ್ಲಿ ಅನಿರೀಕ್ಷಿತ ಆಘಾತ ತಂದಿದೆ. ಮೊದಲ ವಾರದಲ್ಲೇ ನಾಮಿನೇಟ್ ಆಗಿ ಕಡಿಮೆ ಮತ ಪಡೆದ ನಟಿ ಪ್ರಥಮಾ ಪ್ರಸಾದ್, ಮುಖ್ಯ ಮನೆಯೊಳಗೆ ಪ್ರವೇಶಿಸದೆಯೇ ಹೊರಬಿದ್ದು ಶೋ ಇತಿಹಾಸದಲ್ಲೇ ಮೊದಲ ಸ್ಪರ್ಧಿಯಾದರು. ತಾಯಿಯ ನೆರಳಿನಿಂದಾಚೆಗೆ ಸ್ವಂತ ಅಸ್ಮಿತೆ ಕಂಡುಕೊಳ್ಳಲು ಬಂದಿದ್ದ ಪ್ರಥಮಾ, ಬೇಸರದಿಂದ ಬಿಗ್‌ ಬಾಸ್‌ ವೇದಿಕೆಯಿಂದ ನಿರ್ಗಮಿಸಿದರು.

ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಬಾಚಿಕೊಂಡ ರವಿತೇಜ ನಟನೆಯ ‘ಇರುಮುಡಿ’ ಒಟಿಟಿಗೆ ಎಂಟ್ರಿ! ಯಾವಾಗ, ಎಲ್ಲಿ ವೀಕ್ಷಿಸಬಹುದು?

ರವಿತೇಜ ನಟನೆಯ ‘ಇರುಮುಡಿ’ ಚಿತ್ರದ OTT ರಿಲೀಸ್‌ ಡೇಟ್‌ ಫಿಕ್ಸ್!‌

Irumudi OTT Release Date: ʻಮಾಸ್ ಮಹಾರಾಜʼ ರವಿತೇಜ ಹಾಗೂ ಪ್ರಿಯಾ ಭವಾನಿ ಶಂಕರ್ ನಟಿಸಿರುವ ‘ಇರುಮುಡಿ’ ಸಿನಿಮಾವು ಸೆಪ್ಟೆಂಬರ್ 18ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗಲಿದೆ. 45 ಕೋಟಿ ವೆಚ್ಚದಲ್ಲಿ ತಯಾರಾಗಿ 208 ಕೋಟಿ ಬಾಚಿದ ಈ ಚಿತ್ರ, ಮದ್ಯವ್ಯಸನಿ ಅಪ್ಪ ಹಾಗೂ ಮುದ್ದು ಮಗಳ ನಡುವಿನ ಭಾವನಾತ್ಮಕ ಪಯಣವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದೆ.

ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ; ಪೋಸ್ಟರ್, ಆಹ್ವಾನ ಪತ್ರಿಕೆ ಬಿಡುಗಡೆ!

ಲತಾ ಮಂಗೇಶ್ಕರ್ ಸ್ಮರಣಾರ್ಥ ಬೆಂಗಳೂರಿನಲ್ಲಿ ‘ಚಿಟ್ಟೀ ಆಯೀ ಹೈ’ ಸಂಗೀತ ಸಂಜೆ

Lata Mangeshkar tribute: ʻಗಾನಕೋಗಿಲೆʼ ಲತಾ ಮಂಗೇಶ್ಕರ್ ಸ್ಮರಣಾರ್ಥ ನಡೆಯಲಿರುವ 'ಚಿಟ್ಟೀ ಆಯೀ ಹೈ' ಕಾರ್ಯಕ್ರಮ ಇದೇ ಸೆಪ್ಟೆಂಬರ್ 19ರಂದು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಅದ್ದೂರಿಯಾಗಿ ಜರುಗಲಿದೆ. ಕಮಲ್ ರಾಜ್ ನೇತೃತ್ವದಲ್ಲಿ ನಡೆಯಲಿರುವ ಈ ಅಪರೂಪದ ಗಾನ ನಮನಕ್ಕೆ ಲತಾ ಅವರ ಸಹೋದರಿ ಉಷಾ ಮಂಗೇಶ್ಕರ್ ಕುಟುಂಬ ಸಮೇತರಾಗಿ ಸಾಕ್ಷಿಯಾಗಲಿದ್ದಾರೆ.

Duniya Vijay: ನಟ ವಿನಯ್‌ ರಾಜ್‌ಕುಮಾರ್‌ ಈಗ ‘ಸ್ಯಾಂಡಲ್ ಮಯೂರʼ; ‘ಸಿಟಿ ಲೈಟ್ಸ್’ ಟ್ರೇಲರ್ ರಿಲೀಸ್‌ ಮಾಡಿ ಶಿವಣ್ಣ ಹೇಳಿದ್ದೇನು?

Vinay Rajkumar: ‘ಸಿಟಿ ಲೈಟ್ಸ್’ ಟ್ರೇಲರ್ ರಿಲೀಸ್‌ ಮಾಡಿದ ಶಿವಣ್ಣ

City Lights Trailer: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ವಿನಯ್ ರಾಜ್‌ಕುಮಾರ್ ನಟನೆಯ ʻಸಿಟಿ ಲೈಟ್ಸ್‌ʼ ಸಿನಿಮಾದ ಟ್ರೇಲರ್‌ ರಿಲೀಸ್‌ ಮಾಡಿದ್ದಾರೆ. ಜೊತೆಗೆ ವಿನಯ್‌ ಮಾಸ್ ಅವತಾರವನ್ನು ಕೊಂಡಾಡಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಈ ಸಿನಿಮಾದಲ್ಲಿ ಅವರ ಪುತ್ರಿ ಮೋನಿಷಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 18 ರಂದು ರಾಜ್ಯಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

ಶ್ರೀರಾಮ್ ಗಂಧರ್ವ ಸಾರಥ್ಯದ 'ಕನಸಲು..' ಆಲ್ಬಮ್ ಸಾಂಗ್‌ ರಿಲೀಸ್‌; ಹಾಡಾಗಿ ಬಂತು ಟೈಲರ್‌ ಲವ್‌ ಸ್ಟೋರಿ!

ಶ್ರೀರಾಮ್ ಗಂಧರ್ವ ಸಾರಥ್ಯದ 'ಕನಸಲು..' ಆಲ್ಬಮ್ ಸಾಂಗ್‌ ರಿಲೀಸ್‌

Kanasalu Album Song: ಗ್ರಾಮೀಣ ಹಿನ್ನೆಲೆಯ ಟೈಲರಿಂಗ್ ಅಂಗಡಿಯ ಹುಡುಗ ಹಾಗೂ ಗ್ರಾಹಕಿ ಮೀರಾ ನಡುವಿನ ಪರಿಶುದ್ಧ ಪ್ರೇಮಕಥೆಯನ್ನು ʻಕನಸಲುʼ ಆಲ್ಬಂ ಸಾಂಗ್ ಅನಾವರಣಗೊಳಿಸಿದೆ. ಶ್ರೀರಾಮ್ ಗಂಧರ್ವ ಅವರ ಸರ್ವತೋಮುಖ ಸಾರಥ್ಯದಲ್ಲಿ ಮೂಡಿಬಂದಿರುವ ಈ ವಿಡಿಯೋ ಆಲ್ಬಮ್ ಅನ್ನು ಆನಂದ್ ಆಡಿಯೋ ಬಿಡುಗಡೆ ಮಾಡಿದೆ.

ಸಿಲ್ವರ್‌ಸ್ಟೋನ್‌ನಲ್ಲಿ ತಮಿಳುನಾಡು ಸಿಎಂ ವಿಜಯ್ ಜೊತೆ ತ್ರಿಷಾ ಕೃಷ್ಣನ್ ಪ್ರತ್ಯಕ್ಷ: ಅಜಿತ್ ರೇಸಿಂಗ್ ಟ್ರ್ಯಾಕ್‌ನಲ್ಲಿ ವಿಡಿಯೋ ವೈರಲ್‌

ಸಿಲ್ವರ್‌ಸ್ಟೋನ್‌ನಲ್ಲಿ ಸಿಎಂ ವಿಜಯ್ -‌ ತ್ರಿಷಾ ಜೋಡಿ ವಿಡಿಯೋ ವೈರಲ್!

ಸಿಲ್ವರ್‌ಸ್ಟೋನ್ ಸರ್ಕ್ಯೂಟ್‌ನಲ್ಲಿ ನಡೆದ ‘ಮಿಚೆಲಿನ್ ಲೆ ಮ್ಯಾನ್ಸ್ ಕಪ್’ ರೇಸ್‌ನಲ್ಲಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ವಿಡಿಯೋ ವೈರಲ್‌ ಆಗಿದೆ. ಅಜಿತ್ ಕುಮಾರ್ ಸ್ಪರ್ಧಿಸಿದ ಈ ಪಂದ್ಯಾವಳಿಗೆ ವಿಜಯ್ ಚಾಲನೆ ನೀಡಿದ್ದು, ಗ್ಯಾಲರಿಯಲ್ಲಿ ತ್ರಿಷಾ ಜೊತೆ ನಿಂತು ರೇಸ್ ವೀಕ್ಷಿಸಿದರು.

ಕೇವಲ ಐದೇ ದಿನಕ್ಕೆ ‘ತೆಲುಗು ಬಿಗ್ ಬಾಸ್’ ಮನೆಯಿಂದ ಹೊರಬಿದ್ದ ಕನ್ನಡತಿ ಚೈತ್ರಾ ರೈ: ಶಾಕಿಂಗ್ ಎಲಿಮಿನೇಷನ್‌ಗೆ ಕಾರಣವೇನು?

ಛೇ! ಐದೇ ದಿನಕ್ಕೆ ತೆಲುಗು ಬಿಗ್‌ ಬಾಸ್‌ನಿಂದ ಹೊರಬಿದ್ದ ಕನ್ನಡತಿ ಚೈತ್ರಾ ರೈ

Chaithra Rai Eviction: ತೆಲುಗು ಬಿಗ್‌ಬಾಸ್ ಮೊದಲ ವಾರವೇ ಸಂಚಲನ ಮೂಡಿಸಿದೆ. ಕೇವಲ ಐದೇ ದಿನಕ್ಕೆ ಕನ್ನಡತಿ ಚೈತ್ರಾ ರೈ ಅನಿರೀಕ್ಷಿತ ಮಿಡ್-ವೀಕ್ ಎಲಿಮಿನೇಷನ್ ಮೂಲಕ ಹೊರಬಿದ್ದಿದ್ದಾರೆ. ಹಸುಗೂಸನ್ನು ಬಿಟ್ಟು ವೃತ್ತಿಬದುಕಿನ ಹೊಸ ಕನಸುಗಳೊಂದಿಗೆ ದೊಡ್ಮನೆ ಪ್ರವೇಶಿಸಿದ್ದ ಚೈತ್ರಾಗೆ ಆಘಾತ ಎದುರಾಗಿದೆ.

BBK 13: ‘ಇಲ್ಲಿ ನಿಮಗಿಂತಲೂ ದೊಡ್ಡ ಕಲಾವಿದರಿದ್ದಾರೆ..’; ಓಂ ಪ್ರಕಾಶ್ ರಾವ್ ಮಾತು ಕೇಳಿ ‘ಕಿಚ್ಚ’ ಸುದೀಪ್‌ಗೆ ನಗುವೋ ನಗು!

ʻಬಿಗ್‌ ಬಾಸ್‌ʼನಲ್ಲಿ ʻಕಿಚ್ಚʼ ಸುದೀಪ್‌ಗೇ ಶಾಕ್ ಕೊಟ್ಟ ಓಂ ಪ್ರಕಾಶ್ ರಾವ್!

Bigg Boss Kannada 13: ಈ ಸೀಸನ್‌ನ ಮೊದಲ ವಾರದ ಪಂಚಾಯ್ತಿಯಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವ್ ಹಾರಿಸಿದ ಹಾಸ್ಯ ಚಟಾಕಿಗೆ ಕಿಚ್ಚ ಸುದೀಪ್ ನಗೆಗಡಲಲ್ಲಿ ತೇಲಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಸುದೀಪ್‌ಗಿಂತಲೂ ದೊಡ್ಡ ನಟರೆಂದು ವ್ಯಂಗ್ಯವಾಡಿದಾಗ, 'ಹುಚ್ಚ' ಸಿನಿಮಾ ನೆನೆದು ಸುದೀಪ್ ಪ್ರತ್ಯುತ್ತರ ನೀಡಿದರು.

ʻನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್. ಮರ್ಯಾದೆಯಿಂದ ಮಾತನಾಡಬೇಕುʼ; ಸುಖಾಸುಮ್ಮನೆ ನಾಲಿಗೆ ಹರಿಬಿಟ್ಟ ಗಗನ್‌ ಚಿನ್ನಪ್ಪಗೆ ಬಿಸಿ ಮುಟ್ಟಿಸಿದ ‌ʻಕಿಚ್ಚʼ ಸುದೀಪ್

ʻನಾನಿಲ್ಲಿ ಹೋಸ್ಟ್, ನೀವು ಕಂಟೆಸ್ಟೆಂಟ್ʼ; ಗಗನ್‌ಗೆ ಬೆಂಡೆತ್ತಿದ ಸುದೀಪ್

Bigg Boss Kannada 13: ಸ್ಪರ್ಧಿ ಗಗನ್ ಚಿನ್ನಪ್ಪನ ಅಸಂಬದ್ಧ ಮಾತಿಗೆ ʻಕಿಚ್ಚʼ ಸುದೀಪ್‌ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಟದ ಶ್ಲಾಘನೆ ವೇಳೆ ಸುದೀಪ್‌ಗೆ ವ್ಯಂಗ್ಯವಾಗಿ ಮಾತನಾಡಲು ಹೋದ ಗಗನ್‌ಗೆ ಗಂಭೀರ ಎಚ್ಚರಿಕೆ ನೀಡಲಾಯಿತು. 'ನಾನಿಲ್ಲಿ ನಿರೂಪಕ, ನೀವೊಬ್ಬ ಸ್ಪರ್ಧಿ, ಮರ್ಯಾದೆ ಇರಲಿ' ಎಂದು ಕಿಚ್ಚ ಖಾರವಾಗಿ ಗುಡುಗಿದಾಗ, ಗಗನ್ ಹೆದರಿ 3 ಬಾರಿ ಕ್ಷಮೆಯಾಚಿಸಿದರು.

Hanuman Ansh : 100 ಕೋಟಿ ರೂ‌  OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

100 ಕೋಟಿ ರೂ‌ OTT ಒಪ್ಪಂದ ಬಗ್ಗೆ ʻಹನುಮಾನ್ ಅಂಶ್’ ತಂಡ ಹೇಳಿದ್ದೇನು?

Hanuman Ansh : ಹನುಮಾನ್ ಅಂಶ್' ಚಿತ್ರದ ಬಾಕ್ಸ್ ಆಫೀಸ್ ಯಶಸ್ಸಿನ ಸುತ್ತ ಹರಿದಾಡುತ್ತಿರುವ ಸುದ್ದಿಗಳ ನಡುವೆ, ನಿರ್ಮಾಪಕಿ ರಾಗಿಣಿ ಸೋನಾ (Ragini sona) ಅವರು ಚಿತ್ರವು 100 ಕೋಟಿ ರೂ.ಗಳ ಬೃಹತ್ OTT ಒಪ್ಪಂದವನ್ನು ಪಡೆದುಕೊಂಡಿದೆ ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅವರ ಪ್ರಕಾರ, ಅಂತಹ ಹೇಳಿಕೆಗಳು ಆಧಾರರಹಿತ ಊಹಾಪೋಹಗಳಾಗಿವೆ.

Toxic Actor: 'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ  ಖಡಕ್ ಉತ್ತರ

'ಟಾಕ್ಸಿಕ್' ನೆಗೆಟಿವ್ ರಿವ್ಯೂಸ್‌ಗೆ ಯಶ್ ಸಹನಟ ಖಡಕ್ ಉತ್ತರ

Toxic Actor: ಟಾಕ್ಸಿಕ್: ಎ ಫೇರಿ ಟೇಲ್ (Toxic) ಫಾರ್ ಗ್ರೋನ್-ಅಪ್ಸ್ ಆಗಸ್ಟ್ 26 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆದರೆ ವಿಮರ್ಶಕರು ಮತ್ತು ಪ್ರೇಕ್ಷಕರು ಇದನ್ನು ಟೀಕಿಸಿದರು. ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿದ ಈ ಚಿತ್ರವು ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದ್ದರೂ ಸಹ ವಿಶ್ವದಾದ್ಯಂತ ಸುಮಾರು ₹ 300 ಕೋಟಿ ಗಳಿಸಿದೆ. ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ ನಟ ಬೆನೆಡಿಕ್ಟ್ ಗ್ಯಾರೆಟ್, ನಕಾರಾತ್ಮಕ ವಿಮರ್ಶೆಗಳ ವಿರುದ್ಧ ಅದನ್ನು ಸಮರ್ಥಿಸಿಕೊಂಡರು.

Kannada New Movie: ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ʼಅಮರಾವತಿ ಪೊಲೀಸ್ ಸ್ಟೇಷನ್ʼ ಚಿತ್ರತಂಡ

ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದ ʼಅಮರಾವತಿ ಪೊಲೀಸ್ ಸ್ಟೇಷನ್ʼ ಚಿತ್ರತಂಡ

Amaravathi Police Station Movie: ಅಮರಾವತಿ ಪೊಲೀಸ್ ಸ್ಟೇಷನ್ ಚಿತ್ರದ ಅಂತಿಮ ಹಂತದ ಚಿತ್ರೀಕರಣವು ಅರಸೀಕೆರೆಯ ಗಿಜಿಹಳ್ಳಿ ಬಳಿ ಇರುವ ಯಾರ್ಡ್‌ವೊಂದರಲ್ಲಿ ನಡೆಯಿತು. ಕಳೆದ ನಾಲ್ಕೈದು ದಿನಗಳಿಂದ ಅರಸೀಕೆರೆ ತಾಲೂಕಿನ ಶ್ರೀ ಜೇನುಕಲ್ಲು ಸಿದ್ದೇಶ್ವರ ಸ್ವಾಮಿಯ ಸನ್ನಿಧಿ ಹಾಗೂ ಸುತ್ತಮುತ್ತಲು ಚಿತ್ರೀಕರಣ ಮಾಡಲಾಗಿದೆ.

The Paradise: ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

ರಿಲೀಸ್‌ ಆಗ್ತಿಲ್ಲ ನಾನಿ ಸಿನಿಮಾ ಟ್ರೇಲರ್‌! ಕಾರಣ ಇದು

The Paradise: ಶ್ರೀಕಾಂತ್ ಒಡೆಲಾ ಮತ್ತು ನಾನಿ ಅವರ ಎರಡನೇ ಚಿತ್ರ 'ದಿ ಪ್ಯಾರಡೈಸ್' ( The Paradise) ಘೋಷಣೆಯಾದಾಗ, ಚಲನಚಿತ್ರ ನಿರ್ಮಾಪಕ ಮತ್ತು ನಟ ಇನ್ನೇನು ಕಾಯ್ದಿರಿಸಿದ್ದಾರೆ ಎಂದು ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಬದಲಾಗಿ, ಚಿತ್ರದ ಬಿಡುಗಡೆಯನ್ನು ಹಲವು ಬಾರಿ ವಿಳಂಬ ಮಾಡಲಾಯಿತು. ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತಂಡವು ಈಗ 'ದಿ ಪ್ಯಾರಡೈಸ್' ( The Paradise Trailer) ಚಿತ್ರದ ಟ್ರೇಲರ್ ಇರುವುದಿಲ್ಲ ಎಂದು ಘೋಷಿಸಿದೆ.

Spirit Movie: ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ  ಸಹೋದರ ಖಡಕ್ ವಾರ್ನಿಂಗ್

ವಿಮರ್ಶಕರಿಗೆ ಸಂದೀಪ್ ರೆಡ್ಡಿ ವಂಗಾ ಸಹೋದರ ಖಡಕ್ ವಾರ್ನಿಂಗ್

Spirit Movie: ಸಂದೀಪ್ ರೆಡ್ಡಿ ವಂಗಾ ಅವರ ಸಹೋದರ, ಭದ್ರಕಳಿ ಪಿಕ್ಚರ್ಸ್‌ನ ಪ್ರಣಯ್ ರೆಡ್ಡಿ ವಂಗಾ ಇತ್ತೀಚೆಗೆ ರೋಮಂಚಕಂ ಎಂಬ ಚಿತ್ರವನ್ನು ನಿರ್ಮಿಸಿದರು. ಈ ಚಿತ್ರ ಸೆಪ್ಟೆಂಬರ್ 3 ರಂದು ಬಿಡುಗಡೆಯಾಯಿತು ಮತ್ತು ನೀರಸ ವಿಮರ್ಶೆಗಳನ್ನು ಪಡೆಯಿತು. ತಮ್ಮ 'ರೋಮಾಂಚಕಂ' ಚಿತ್ರದ ಸೋಲಿಗೆ ನೆಗೆಟಿವ್ ರಿವ್ಯೂಗಳೇ ಕಾರಣ ಎಂದಿರುವ ಅವರು, ಪ್ರಭಾಸ್ ನಟನೆಯ 'ಸ್ಪಿರಿಟ್' ಸಿನಿಮಾವನ್ನು ಮುಗಿಸಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

Shrimad Bhagavatam Part 1: ಸಾಗರ್ ಪಿಕ್ಚರ್ಸ್‌ನಿಂದ  ಬರಲಿದೆ  ‘ಶ್ರೀಮದ್ಭಾಗವತಂ’; ಪೋಸ್ಟರ್‌ ಔಟ್‌

ಸಾಗರ್ ಪಿಕ್ಚರ್ಸ್‌ನಿಂದ ಬರಲಿದೆ ‘ಶ್ರೀಮದ್ಭಾಗವತಂ’; ಪೋಸ್ಟರ್‌ ಔಟ್‌

Shrimad Bhagavatam Part 1: ಶ್ರೀಮದ್ ಭಾಗವತ ಭಾಗ I: ವಿಷ್ಣುರತವನ್ನು ತರುತ್ತಿದೆ. ಪೌರಾಣಿಕ ಕಥಾಹಂದರದ ಸಿನಿಮಾಗಳ ಬಗ್ಗೆ ಪ್ರೇಕ್ಷಕರ ಆಸಕ್ತಿ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ‘ಸಾಗರ್ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್’ ಸಂಸ್ಥೆಯ ಕಡೆಯಿಂದ 7 ಭಾಗಗಳ ಬೃಹತ್ ಸಿನಿಮಾ ಘೋಷಣೆ ಆಗಿದೆ. ತಯಾರಕರು ಮುಂಬರುವ ಚಿತ್ರದ ಟೀಸರ್ ಪೋಸ್ಟರ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದ್ದು, ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಶ್ರೀ ಕೃಷ್ಣನ ಆಶೀರ್ವಾದ ಹಸ್ತವನ್ನು ಚಿತ್ರಿಸುವ ಮತ್ತು ಧಾರ್ಮಿಕ, ಸ್ಮರಣೀಯ ಮತ್ತು ಸಂಪ್ರದಾಯದಲ್ಲಿ ಮುಳುಗಿರುವ ಈ ಪೋಸ್ಟರ್ ಮುಂದಿನ ಏಳು ಭಾಗಗಳಿಗೆ ನಾಂದಿ ಹಾಡುತ್ತದೆ.

BBK 13: ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’; ‘ಬಿಗ್‌ ಬಾಸ್’‌ನಲ್ಲಿದ್ದಾರೆ ಆ ಒಬ್ಬ ನತದೃಷ್ಟ ಸ್ಪರ್ಧಿ, ಭಾನುವಾರ ಸೀಕ್ರೆಟ್ ರಿವೀಲ್!

ಬಿಗ್ ಬಾಸ್ ಮನೆಯ ಹೊಸ್ತಿಲು ತುಳಿಯುವ ಮುನ್ನವೇ ಹೊರಬೀಳಲಿದ್ದಾರಾ ಆ ಸ್ಪರ್ಧಿ?

Bigg Boss Kannada Season 13: ಬಿಗ್‌ ಬಾಸ್‌ 13 ಶೋ ಆರಂಭದಲ್ಲೇ ಅಚ್ಚರಿಯ ತಿರುವು ಪಡೆದುಕೊಂಡಿದೆ. ಮೇನ್‌ ಮನೆ ಪ್ರವೇಶಿಸಲು ವಿಫಲರಾಗಿ ವಿಮಾನದ ಕಿರಿದಾದ ಸೀಟುಗಳಲ್ಲೇ ರಾತ್ರಿ ಕಳೆಯುತ್ತಿರುವ ಸ್ಪರ್ಧಿಗಳಲ್ಲಿ ಒಬ್ಬರು ಮನೆಯ ಒಳಾಂಗಣವನ್ನೂ ನೋಡದೆ ನೇರವಾಗಿ ಹೊರಹೋಗಲಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

KBC 18: IIT ವೃತ್ತಿಯ ಜತೆ ಪತ್ನಿಯನ್ನೂ ನೀಡಿದೆ; ಅಮಿತಾಬ್ ಮುಂದೆ ಕೆಬಿಸಿ  ಸ್ಪರ್ಧಿ ಹೇಳಿದ್ದೇನು?

IIT ವೃತ್ತಿಯ ಜತೆ ಪತ್ನಿಯನ್ನೂ ನೀಡಿದೆ; ಕೆಬಿಸಿ ಸ್ಪರ್ಧಿ ಹೇಳಿದ್ದೇನು?

KBC 18: ಅಮಿತಾಬ್ ಬಚ್ಚನ್ ಪ್ರಸ್ತುತ ಕೌನ್ ಬನೇಗಾ ಕರೋಡ್ ಪತಿ 18 ಅನ್ನು ಆಯೋಜಿಸುವಲ್ಲಿ ನಿರತರಾಗಿದ್ದಾರೆ . ಸವಾಲಿನ ಪ್ರಶ್ನೆಗಳೊಂದಿಗೆ ಸ್ಪರ್ಧಿಗಳನ್ನು ಕಠಿಣ ಸ್ಥಾನದಲ್ಲಿ ಇಡುವುದರ ಜೊತೆಗೆ, ಬಿಗ್ ಬಿ ಅವರ ಕಥೆಗಳನ್ನು ಕೇಳುತ್ತಾರೆ ಮತ್ತು ಕೆಲವೊಮ್ಮೆ ಅವರೊಂದಿಗೆ ತಮಾಷೆಯ ಮಾತುಗಳಲ್ಲಿ ತೊಡಗುತ್ತಾರೆ. ಇತ್ತೀಚಿನ ಸಂಚಿಕೆ ಒಂದರಲ್ಲಿ, ವೃತ್ತಿಜೀವನದ ಜೊತೆಗೆ, ಐಐಟಿ (IIT) ಹೆಂಡತಿಯನ್ನು ಸಹ ನೀಡಿದೆ ಎಂದು ಬಹಿರಂಗಪಡಿಸಿದ ಸ್ಪರ್ಧಿಯ ಕುರಿತು ಅಮಿತಾಭ್‌ ಮಾತನಾಡಿದ್ದಾರೆ .

‘ಕೊನೆಪಕ್ಷ ನಟಿ ವಾಮಿಕಾಗೆ ಒಂದು ಸ್ಕೂಟಿಯನ್ನಾದ್ರೂ ಕೊಡಿ..’: ‘ಡಿಸಿ’ ಸಿನಿಮಾ ನಿರ್ಮಾಪಕರ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು, ಅಷ್ಟಕ್ಕೂ ಆಗಿದ್ದೇನು?

ʻನಟಿ ವಾಮಿಕಾಗೆ ಸ್ಕೂಟಿಯಾದ್ರೂ ಕೊಡಿʼ; DC ನಿರ್ಮಾಪಕರ ಮೇಲೆ ಫ್ಯಾನ್ಸ್‌ ಗರಂ

DC Movie Success: ʻಡಿಸಿʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಹಿಟ್‌ ಎನಿಸಿಕೊಂಡ ಹಿನ್ನೆಲೆಯಲ್ಲಿ ನಿರ್ಮಾಪಕ ಕಲಾನಿಧಿ ಮಾರನ್ ಚಿತ್ರತಂಡಕ್ಕೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಚಿತ್ರದ ನಾಯಕಿ ವಾಮಿಕಾ ಗಬ್ಬಿ ಅವರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ನಟಿಯರಿಗೂ ಗೌರವ ನೀಡಿ ಎಂದು ನಿರ್ಮಾಪಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗರಂ ಆಗಿದ್ದಾರೆ.

BBK 13: ನಟಿ ಆಸಿಯಾ ಫಿರ್ದೋಸ್ ಹಿಂದೆ ಬಿದ್ರಾ ಧನುಷ್?‌ ʻಬಿಗ್‌ ಬಾಸ್‌ʼ ಮನೆಯಲ್ಲಿ ಇವರದ್ದೇ ಮೊದಲ ಲವ್‌ ಸ್ಟೋರಿ!

ʻಪ್ರೀತಿಗೆ ಬೆಲೆ ಸಿಗ್ತಿಲ್ಲ ಮಂಜʼ; ʻಬಿಗ್ ಬಾಸ್‌ʼ ಮನೇಲಿ ಹೊಸ ಲವ್ ಸ್ಟೋರಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಆರಂಭದಲ್ಲೇ ಕನ್ನಡಿಗರ ಗಮನ ಸೆಳೆದಿದೆ. ಸ್ಪರ್ಧಿಗಳಾದ ಧನುಷ್ ಹಾಗೂ ನಟಿ ಆಸಿಯಾ ಫಿರ್ದೋಸ್ ನಡುವಿನ ತುಂಟಾಟ, ಸರಸದ ಮಾತುಗಳು ಮನೆಯೊಳಗೆ ಹೊಸ ಪ್ರೇಮ ಚಿಗುರೊಡೆದಿರುವ ಸೂಚನೆ ನೀಡಿವೆ. "ಪ್ರೀತಿಗೆ ಬೆಲೆ ಸಿಗ್ತಿಲ್ಲ" ಎಂಬ ಧನುಷ್ ಮಾತುಗಳು ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.

Search Movie: ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ನಟನೆಯ ಹೊಸ ಸಿನಿಮಾಗೆ ಕ್ಲ್ಯಾಪ್‌ ಮಾಡಿದ ಶ್ರೀನಗರ ಕಿಟ್ಟಿ

ಎಸ್‌. ನಾರಾಯಣ್ ಮಗ ಪಂಕಜ್ ನಟನೆಯ ‘ಸರ್ಚ್’ ಶುರು: ಶ್ರೀನಗರ ಕಿಟ್ಟಿ ಸಾಥ್

Search Kannada Movie: ಎಸ್.‌ ನಾರಾಯಣ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ʻಸರ್ಚ್‌ʼ ಸಿನಿಮಾವು ನಾಗರಭಾವಿಯ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ಆಚರಿಸಿಕೊಂಡಿದೆ. ನಟ ಶ್ರೀನಗರ ಕಿಟ್ಟಿ ಕ್ಯಾಮೆರಾ ಚಾಲನೆ ಮಾಡಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಕ್ಲ್ಯಾಪ್ ಮಾಡಿದ್ದಾರೆ. ಒಂದು ರಾತ್ರಿಯ ರೋಚಕ ಘಟನೆಯನ್ನು ಆಧರಿಸಿದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 15 ರಿಂದ ಶುರುವಾಗಲಿದೆ.

ಡ್ಯಾನ್ಸ್ ಫ್ಲೋರ್‌ನಲ್ಲಿ ತಾಯಂದಿರ ಮ್ಯಾಜಿಕ್; ಜೀ ಕನ್ನಡದಲ್ಲಿ ಶುರುವಾಗ್ತಿದೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್' ಶೋ!

ಡ್ಯಾನ್ಸ್ ಫ್ಲೋರ್‌ನಲ್ಲಿ ಅಮ್ಮಂದಿರು; ಶುರುವಾಗ್ತಿದೆ DKD ಸೂಪರ್ ಮಾಮ್ ಶೋ!

Dance Karnataka Dance: ಜೀ ಕನ್ನಡದಲ್ಲಿ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ –ಸೂಪರ್ ಮಾಮ್ʼ ಶೋ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಳ್ಳುತ್ತಿದೆ. ಈ ಶೋ ಮೂಲಕ ಕರುನಾಡಿನ ತ್ಯಾಗಮಯಿ ತಾಯಂದಿರು ತಮ್ಮ ಹಳೆಯ ಕನಸುಗಳನ್ನು ನನಸು ಮಾಡಿಕೊಳ್ಳಲು ವೇದಿಕೆಗೆ ಮರಳುತ್ತಿದ್ದಾರೆ. ದೈನಂದಿನ ಮನೆ ಕೆಲಸಗಳು, ಕುಟುಂಬದ ಜವಾಬ್ದಾರಿಗಳ ಆಚೆಗೂ ಅವರಲ್ಲಿರುವ ನೃತ್ಯ ಕೌಶಲವನ್ನು ಜಗತ್ತಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

America America 2 Review: ಭಾವನೆಗಳ ಸಾಗರದಲ್ಲಿ ನೀಲ್‌, ನೀನಾದ್‌, ನುಡಿಯ ಹೊಯ್ದಾಟ!

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರ ಹೇಗಿದೆ?

America America 2 Movie Review: 'ಅಮೆರಿಕಾ! ಅಮೆರಿಕಾ!!' ಸಿನಿಮಾ 1997ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಇದಾದ ಸುಮಾರು 3 ದಶಕಗಳ ನಂತರ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಬಂದಿದೆ. ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾದರೆ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದಾರೆ. ಈ ಸಿನಿಮಾ ವಿಮರ್ಶೆ ಓದಿ.

Samantha: ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

Samantha: ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವಿಷಯವನ್ನು ಅಧಿಕೃತಗೊಳಿಸಿದ ದಂಪತಿ ಈ ವರ್ಷದ ಜೂನ್‌ನಲ್ಲಿ ತಾವು ಪೋಷಕರಾಗಲಿದ್ದೇವೆ ಎಂದು ಘೋಷಿಸಿದರು. ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂದುಕೊಂಡಿದ್ದ ತಮಗೆ ಈ ಗರ್ಭಧಾರಣೆ (Pregnancy) ದೊಡ್ಡ ಸರ್ಪ್ರೈಸ್ ನೀಡಿದೆ ಎಂದು ಹೇಳಿಕೊಂಡಿದ್ದಾರೆ.

DC producer gifts BMW: ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ ಕೊಟ್ಟ ಕಲಾನಿಧಿ ಮಾರನ್

ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ

DC producer gifts BMW: ಚಿತ್ರದ ಯಶಸ್ವಿ ಪ್ರದರ್ಶನದ ನಂತರ ಚಿತ್ರದ ಪ್ರಮುಖ ತಂಡಕ್ಕೆ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ನಿರ್ದೇಶಕ ಅರುಣ್ ಮಾಥೇಶ್ವರನ್, ನಟ ಲೋಕೇಶ್ ಕನಕರಾಜ್ ಮತ್ತು ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ (Anirudh Ravichandar) ಅವರಿಗೆ ಬಿಎಂಡಬ್ಲ್ಯು ಕಾರುಗಳನ್ನು ನೀಡಲಾಯಿತು.

Loading...