ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻಟಾಕ್ಸಿಕ್‌ʼ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡವರಿಗೆ ಇಲ್ಲಿದೆ ಮತ್ತೊಂದು ಚಾನ್ಸ್, OTT ಅಂಗಳಕ್ಕೆ ಯಶ್‌ ಸಿನಿಮಾ! ಯಾವಾಗ, ಎಲ್ಲಿ ಪ್ರಸಾರ?

ಥಿಯೇಟರ್‌ನಲ್ಲಿ ಮಿಸ್ ಆಯ್ತಾ? OTTಗೆ ಬರ್ತಿದೆ ಯಶ್ ನಟನೆಯ ‘ಟಾಕ್ಸಿಕ್’!

Toxic OTT Release Date: ಯಶ್‌, ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ನಟನೆಯ ಬಹುನಿರೀಕ್ಷಿತ ʻಟಾಕ್ಸಿಕ್ʼ‌ ಸಿನಿಮಾವು ಓಟಿಟಿಗೆ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ದಾಂಪತ್ಯ ಜೀವನದ 20ನೇ ವಸಂತಕ್ಕೆ ಕಾಲಿಟ್ಟ ಸೂರ್ಯ-ಜ್ಯೋತಿಕಾ; ವಿದೇಶದ ಚರ್ಚ್‌ನಲ್ಲಿ‌ ಮಕ್ಕಳೆದುರು ಮತ್ತೊಮ್ಮೆ ಮದುವೆಯಾದ ಸ್ಟಾರ್ ಜೋಡಿ‌

ಮಕ್ಕಳ ಸಮ್ಮುಖದಲ್ಲಿ ನಟ ಸೂರ್ಯ - ಜ್ಯೋತಿಕಾ ಮರುಮದುವೆ; ವಿಡಿಯೋಗಳು ವೈರಲ್

Suriya Jyothika Marriage: ಸೂರ್ಯ ಮತ್ತು ಜ್ಯೋತಿಕಾ ಅವರ ದಾಂಪತ್ಯಕ್ಕೆ ಈಗ 20 ವರ್ಷಗಳ ಸಂಭ್ರಮ. ಈ ಜೋಡಿ ವಿದೇಶದ ಚರ್ಚ್‌ನಲ್ಲಿ ಮಕ್ಕಳ ಸಮ್ಮುಖದಲ್ಲಿ ವೈವಾಹಿಕ ಪ್ರತಿಜ್ಞೆಗಳನ್ನು ನವೀಕರಿಸಿಕೊಂಡಿದೆ. ಮಗ ದೇವ್ ಜೊತೆ ಬಿಳಿ ಗೌನ್ ತೊಟ್ಟು ಬಂದ ಪತ್ನಿಯನ್ನು ಕಂಡು ನಟ ಸೂರ್ಯ ಆನಂದಭಾಷ್ಪ ಸುರಿಸಿದರು. ಈ ವಿಡಿಯೋ ಸಖತ್‌ ವೈರಲ್‌ ಆಗಿದೆ.

ಗಣಪತಿಗೆ ಆರತಿ ಮಾಡುವಾಗ ನಟ ಸಲ್ಮಾನ್ ಖಾನ್ ಎಡವಟ್ಟು;  ಅಣ್ಣನನ್ನು ತಿದ್ದಿದ ತಂಗಿ ಅರ್ಪಿತಾ! ‌

ಗಣಪತಿಗೆ ಆರತಿ ಬೆಳಗುವಾಗ ಸಲ್ಮಾನ್ ಎಡವಟ್ಟು; ತಪ್ಪು ತಿದ್ದಿದ ತಂಗಿ ಅರ್ಪಿತಾ

Salman Khan: ಗಣಪತಿ ಪೂಜೆಯ ವೇಳೆ ಆರತಿ ತಟ್ಟೆಯನ್ನು ಸಲ್ಮಾನ್‌ ಖಾನ್ ಉಲ್ಟಾ ತಿರುಗಿಸಿ ಎಡವಟ್ಟು ಮಾಡಿಕೊಂಡ ಘಟನೆ ನಡೆದಿದೆ.‌ ಈ ವೇಳೆ ತಕ್ಷಣವೇ ಸಹೋದರಿ ಅರ್ಪಿತಾ ಅಣ್ಣನ ಕೈಹಿಡಿದು ತಿದ್ದಿದ್ದು, ಸಲ್ಮಾನ್ ನಗುತ್ತಲೇ ಸರಿಪಡಿಸಿಕೊಂಡ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

1980ರ ರೆಟ್ರೋ ಕಾಲದ ‘ಬೊಮ್ ಭಾಯ್’ ಚಿತ್ರಕ್ಕಾಗಿ ಒಂದಾದ ಶರಣ್, ದಿಗಂತ್, ನಿಶ್ವಿಕಾ ನಾಯ್ಡು

Bom Bhai Movie: 1980ರ ರೆಟ್ರೋ ಕಾಲಕ್ಕೆ ಕರೆದೊಯ್ಯಲಿದ್ದಾರೆ ಶರಣ್-ದಿಗಂತ್

Bom Bhai Movie: 1980ರ ದಶಕದ ರೆಟ್ರೋ ಕಾಲಘಟ್ಟದ ಹಿನ್ನೆಲೆಯುಳ್ಳ ‘ಬೊಮ್ ಭಾಯ್’ ಚಿತ್ರದಲ್ಲಿ ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಪ್ರಮುಖ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಶಶಿಧರ್ ನಿರ್ದೇಶನದ ಈ ಸಿನಿಮಾಕ್ಕೆ ಪಿ.ಆರ್.ಎಫ್ ಸ್ಟುಡಿಯೋಸ್ ಬಂಡವಾಳ ಹೂಡಿದ್ದು, ದೀಪಕ್ ಛಾಯಾಗ್ರಹಣವಿದೆ.

Bigg Boss 13: ‘ನೀನೇ ನೆಟ್ಟಗಿಲ್ಲ, ಇನ್ನೊಬ್ರಿಗೆ ಏನು ಹೇಳೋಕೆ ಬರ್ತೀಯಾ..?’; ವೈಷ್ಣವಿ, ಕಾವ್ಯ ಗೌಡ ವಿರುದ್ಧ ಗುಡುಗಿದ ಕಿರಣ್ ಶಾಸ್ತ್ರಿ!

ʻನೀನೇ ನೆಟ್ಟಿಗಿಲ್ಲʼ; ವೈಷ್ಣವಿ ಮೇಲೆ ವಾಗ್ದಾಳಿ ಮಾಡಿದ ಕಿರಣ್‌ ಶಾಸ್ತೀ!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್ ಕದನ ಸ್ಫೋಟಗೊಂಡಿದೆ. ಮಂಜನ ಅವಹೇಳನಕಾರಿ ಮಾತುಗಳಿಗೆ ಕಾವ್ಯ ಗೌಡ ಖಡಕ್ ತಿರುಗೇಟು ನೀಡಿದ ಬೆನ್ನಲ್ಲೇ, ಕಿರಣ್ ಶಾಸ್ತ್ರಿ ಅಖಾಡಕ್ಕಿಳಿದು ಕಾವ್ಯ ನಡೆಯನ್ನು ಪ್ರಶ್ನಿಸಿದ್ದಾರೆ. ನಂತರ ಮಧ್ಯಪ್ರವೇಶಿಸಿದ ವೈಷ್ಣವಿ ಕೌಂಡಿನ್ಯ ಅವರ ಮೇಲೆ ಕಿರಣ್ ತೀವ್ರ ವಾಗ್ದಾಳಿ ನಡೆಸಿದ್ದು, "ನೀನೇ ನೆಟ್ಟಿಗಿಲ್ಲ" ಎಂದು ಕಿಡಿಕಾರಿದ್ದಾರೆ.

ʻಬಿಗ್‌ ಬಾಸ್ ಕನ್ನಡ 13ʼರ ಮೊದಲ ಪೈಲಟ್ ಆದ ಸಂಗೀತಾ ಭಟ್; ಚಾನ್ಸ್‌ ಮಿಸ್‌ ಆಗಿದ್ದಕ್ಕೆ ಕಿರುಚಾಡಿ ರಂಪಾಟ ಮಾಡಿದ ಕಿರಣ್ ಶಾಸ್ತ್ರಿ!

ತಾಂಡವ್‌ಗೆ ‘ಬಳೆ ತೊಟ್ಕೊಳ್ಳಿ..ʼ ಎಂದ ಕಿರಣ್ ಮೇಲೆ ಮಹಿಳಾ ಸ್ಪರ್ಧಿಗಳು ಗರಂ!

Bigg Boss 13: ಟಾಸ್ಕ್‌ನಲ್ಲಿ ಗೆದ್ದು ನಟಿ ಸಂಗೀತಾ ಭಟ್ ಗೆದ್ದು ನೇರವಾಗಿ ಕ್ಯಾಪ್ಟನ್ಸಿ ರೇಸ್ ಪ್ರವೇಶಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಅವಕಾಶ ವಂಚಿತರಾದ ಕಿರಣ್ ಶಾಸ್ತ್ರಿ ಆಕ್ರೋಶಗೊಂಡು ಮನೆಯವರ ವಿರುದ್ಧ ‘ಬಳೆ ತೊಟ್ಟು ಕೂತ್ಕೊಳ್ಳಿ’ ಎಂದು ಕೀಳಾಗಿ ಕೂಗಾಡಿದರು. ಇದಕ್ಕೆ ನಟಿ ವೈಷ್ಣವಿ, ತಾಂಡವ್ ಹಾಗೂ ಗಗನ್ ಚಿನ್ನಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

ʻಈಯಮ್ಮ ವಿಲನ್‌ ಆಂಟಿ, ಡುಮ್ಮಿ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆʼ; ʻಬಿಗ್‌ ಬಾಸ್ʼ‌ ಶೋನಿಂದ ಒಂದೇ ವಾರಕ್ಕೆ ಹೊರಬಂದ ನಟಿ ಪ್ರಥಮಾ ಪ್ರಸಾದ್‌ ಖಡಕ್‌ ರಿಯಾಕ್ಷನ್

ʻಬಿಗ್ ಬಾಸ್‌ʼ ಶೋನಿಂದ ಹೊರಬರುತ್ತಿದ್ದಂತೆಯೇ ನಟಿ ಪ್ರಥಮಾ ಪ್ರಸಾದ್ ಆಕ್ರೋಶ!

ನಟಿ ಪ್ರಥಮಾ ಪ್ರಸಾದ್‌ ಅವರು ಬಿಗ್‌ ಬಾಸ್‌ ರಿಯಾಲಿಟಿ ಶೋನ ಮೊದಲ ವಾರದಲ್ಲೇ ಎಲಿಮಿನೇಟ್ ಆಗಿದ್ದು, ತಮ್ಮ ವಿರುದ್ಧ ಹರಿದಾಡುತ್ತಿರುವ ಬಾಡಿ ಶೇಮಿಂಗ್ ಹಾಗೂ ಟ್ರೋಲ್‌ಗಳಿಗೆ ತಿರುಗೇಟು ನೀಡಿದ್ದಾರೆ. ಟಿವಿ ಸಂಚಿಕೆಗಳಲ್ಲಿ ಕೇವಲ ಜಗಳವನ್ನಷ್ಟೇ ತೋರಿಸಿ, ತಮ್ಮ ಮಾನವೀಯ ಕಾಳಜಿಯನ್ನು ಕಡೆಗಣಿಸಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಗಟ್ಟಿದನಿಯ ಮಹಿಳೆಯರ ಆತ್ಮಗೌರವವನ್ನು ಸಮಾಜ ದುರಹಂಕಾರವೆಂದು ತಪ್ಪಾಗಿ ಗ್ರಹಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ʻನಾನು ಗೆಲ್ಲೋದಕ್ಕೆ ಹೋದವನಲ್ಲ, ರಂಜಿಸಲು ಹೋದವನು..ʼ; ಮತ್ತೆ ‌ʻಬಿಗ್‌ ಬಾಸ್‌ʼ ಮನೆಗೆ ವಾಪಸ್‌ ಹೋಗ್ತಾರಾ ಓಂ ಪ್ರಕಾಶ್‌ ರಾವ್?

ʻಬಿಗ್ ಬಾಸ್ʼ ಮನೆಗೆ ನಿರ್ದೇಶಕ ಓಂ ಪ್ರಕಾಶ್ ರಾವ್ ರೀ-ಎಂಟ್ರಿ?

Bigg Boss Kannada 13: ಬಿಗ್‌ ಬಾಸ್‌ ಶೋನಿಂದ ಅನಿವಾರ್ಯವಾಗಿ ಹೊರಬಂದ ನಿರ್ದೇಶಕ ಓಂ ಪ್ರಕಾಶ್ ರಾವ್, ಆಹಾರದ ಸಮಸ್ಯೆ ಮತ್ತು ಅನಾರೋಗ್ಯವೇ ತಮ್ಮ ನಿರ್ಗಮನಕ್ಕೆ ಕಾರಣವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ಟ್ರೋಫಿ ಗೆಲ್ಲುವ ಆಸೆ ಇರಲಿಲ್ಲ, ಕೇವಲ ರಂಜನೆ ತಮ್ಮ ಗುರಿಯಾಗಿತ್ತು ಎಂದಿರುವ ಅವರು, ಆರೋಗ್ಯ ಸುಧಾರಿಸಿದರೆ ಮರುಪ್ರವೇಶಿಸುವ ಸಾಧ್ಯತೆಯ ಸುಳಿವು ನೀಡಿದ್ದಾರೆ.

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌; ನೇಹಾ ಕಕ್ಕರ್‌ಗಿಂತಲೂ ವಾಯ್ಸ್‌ ಚೆನ್ನಾಗಿದೆ ಎಂದು ಗಾಯಕಿಯ ಕಾಲೆಳೆದ ನೆಟ್ಟಿಗರು

ಏಕಕಾಲಕ್ಕೆ ಪುರುಷ-ಸ್ತ್ರೀ ಧ್ವನಿಯಲ್ಲಿ ಹಾಡಿದ ಸೋನು ನಿಗಮ್‌

Sonu Nigam: ಭಾರತೀಯ ಚಿತ್ರರಂಗದ ಸರ್ವಶ್ರೇಷ್ಠ ಹಿನ್ನಲೆ ಗಾಯಕರಲ್ಲಿ ಒಬ್ಬರಾದ ಸೋನು ನಿಗಮ್‌ ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಈ ವೇಳೆ ಹಾಡೊಂದನ್ನು ಏಕಕಾಲಕ್ಕೆ ಪುರುಷ ಮತ್ತು ಸ್ತ್ರೀ ಧ್ವನಿಯಲ್ಲಿ ಹಾಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್‌ ಆಗಿದ್ದು, ಗಾಯಕನ ಪ್ರತಿಭೆಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ.

BBK 13: ʻನಂಗೆ ಸ್ಟ್ರೋಕ್‌ ಆಗುವ ಸಾಧ್ಯತೆ ಇತ್ತು...ʼ; ನಿರ್ದೇಶಕ ಓಂ ಪ್ರಕಾಶ್ ರಾವ್ ಆರೋಗ್ಯ ಹದಗೆಡಲು ಊಟವೇ ಕಾರಣವಾಯ್ತಾ?

ಬಿಗ್‌ ಬಾಸ್‌ನಲ್ಲಿ ಓಂ ಪ್ರಕಾಶ್ ರಾವ್ ಆರೋಗ್ಯ ಹದಗೆಡಲು ಊಟವೇ ಕಾರಣವಾಯ್ತಾ?

Om Prakash Rao: ಬಿಗ್ ಬಾಸ್ ಮನೆಯಲ್ಲಿ ನೀಡಲಾದ ಆಹಾರ ಪದ್ಧತಿಯಿಂದಾಗಿ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಓಂ ಪ್ರಕಾಶ್‌ ರಾವ್‌ ಹೇಳಿದ್ದಾರೆ. ಮಧುಮೇಹ ಮತ್ತು ರಕ್ತದೊತ್ತಡ ಮಿತಿಮೀರಿ ಹೆಚ್ಚಿದ್ದರಿಂದ ಪಾರ್ಶ್ವವಾಯು ಸಂಭವಿಸುವ ಆತಂಕ ಎದುರಾಗಿತ್ತು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ʼಕಾಂತಾರ 3' ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ರಿಷಬ್‌ ಶೆಟ್ಟಿ; ಚಿತ್ರ ಯಾವಾಗ ಆರಂಭ?

ʼಕಾಂತಾರ 3' ಬಂದೇ ಬರುತ್ತೆ: ರಿಷಬ್‌ ಶೆಟ್ಟಿ ಬಿಗ್‌ ಅಪ್‌ಡೇಟ್‌

Rishab Shetty: ಕನ್ನಡ ಚಿತ್ರರಂಗವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದ ʼಕಾಂತಾರʼ ಚಿತ್ರದ ಸೀಕ್ವೆಲ್‌ಗಾಗಿ ಕಾಯುತ್ತಿರುವವರಿಗಾಗಿ ರಿಷಬ್‌ ಶೆಟ್ಟಿ ಗುಡ್‌ನ್ಯೂಸ್‌ ನೀಡಿದ್ದಾರೆ. ಕೇರಳಂನ ತಿರುವನಂತಪುರಂಗೆ ಆಗಮಿಸಿದ ರಿಷಬ್‌ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ʼಕಾಂತಾರ 3ʼ ಸದ್ಯದಲ್ಲೇ ಆರಂಭವಾಗಲಿದೆ ಎಂದಿದ್ದಾರೆ.

ಪ್ರತಿಷ್ಠಿತ ಮೆಲ್ಬೋರ್ನ್ ಫಿಲಂ ಫೆಸ್ಟಿವಲ್‌ಗೆ ಸಿದ್ದು ಪೂರ್ಣಚಂದ್ರ ನಿರ್ದೇಶನದ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಆಯ್ಕೆ!

ಮೆಲ್ಬೋರ್ನ್ ಫೆಸ್ಟಿವಲ್‌ಗೆ ಆಯ್ಕೆಯಾದ ಕನ್ನಡದ ‘ಪುಟ್ಟಣ್ಣನ ಕತ್ತೆ’ ಸಿನಿಮಾ

ಆಸ್ಟ್ರೇಲಿಯಾದ ಪ್ರತಿಷ್ಠಿತ ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‌ಗೆ ‘ಪುಟ್ಟಣ್ಣನ ಕತ್ತೆ’ ಸಿನಿಮಾ ಅಧಿಕೃತವಾಗಿ ಆಯ್ಕೆಯಾಗಿ ಜಾಗತಿಕ ಮನ್ನಣೆ ಪಡೆದಿದೆ. ಸಿದ್ದು ಪೂರ್ಣಚಂದ್ರ ನಿರ್ದೇಶನದ ಈ ಸಿನಿಮಾವು ನಗರಕ್ಕೆ ವಲಸೆ ಬಂದು ಕತ್ತೆ ಹಾಲು ಮಾರಿ ಬದುಕುವ ಗ್ರಾಮೀಣ ಜನರ ನೈಜ, ಸಂಕೀರ್ಣ ಬದುಕಿನ ಕಥೆಯನ್ನು ಹೇಳುತ್ತದೆಯಂತೆ.

‘ಬಿಗ್ ಬಾಸ್‌ 13’ ಮನೆಯಲ್ಲಿ ಮಹಿಳಾ ಸ್ಪರ್ಧಿಗೆ ʻಮೂಳೆ ಮುರಿತೀನಿʼ ಅಂತ ಬೆದರಿಕೆ ಹಾಕಿ, ತೊಡೆ ತಟ್ಟಿದ ಮಂಜನ ನಡೆ ಸರಿಯೇ? ಕಿಚ್ಚನ ಪಂಚಾಯಿತಿ ಮೇಲೆ ವೀಕ್ಷಕರು ಕಣ್ಣು!

ಸೌಂದರ್ಯಗೆ ʻಮೂಳೆ ಮುರಿತೀನಿʼ ಅಂತ ಬೆದರಿಕೆ ಹಾಕಿದ ಮಂಜ; ವೀಕ್ಷಕರು ಗರಂ!

Bigg Boss Kannada 13: ಬಿಗ್‌ ಬಾಸ್‌ ಮನೆಯ ಮೊದಲ ವಾರದ ಕಣ್ಗಾವಲು ಟಾಸ್ಕ್ ವೇಳೆ ಸ್ಪರ್ಧಿಗಳ ನಡುವೆ ತೀವ್ರ ಮಾರಾಮಾರಿ ನಡೆದಿದೆ. ಕಾಮನ್ ಮ್ಯಾನ್ ಸ್ಪರ್ಧಿಗಳಾದ ಮಂಜ ಮತ್ತು ಧನುಷ್ ಮಹಿಳಾ ಸ್ಪರ್ಧಿಗಳ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ಸೌಂದರ್ಯ ಶೆಟ್ಟಿಗೆ ಮೂಳೆ ಮುರಿಯುವ ಜೀವಬೆದರಿಕೆ ಹಾಕಿ, ಅವರ ಮುಂದೆ ತೊಡೆ ತಟ್ಟಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಮಂಜನ ವಿರುದ್ಧ ಪ್ರೇಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ʻಭಾರತ ರತ್ನʼ ಎಂ. ಎಸ್‌. ಸುಬ್ಬುಲಕ್ಷ್ಮೀ ಬಯೋಪಿಕ್‌ನಲ್ಲಿ ರಶ್ಮಿಕಾ ಮಂದಣ್ಣ ನಟನೆ; ನಿರ್ಮಾಣದ ಹೊಣೆಹೊತ್ತ ರಾಕ್‌ಲೈನ್ ವೆಂಕಟೇಶ್‌

ಗಾಯಕಿ ಎಂ. ಎಸ್. ಸುಬ್ಬುಲಕ್ಷ್ಮಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ರಶ್ಮಿಕಾ

ʻಭಾರತ ರತ್ನʼ ಎಂ. ಎಸ್‌. ಸುಬ್ಬುಲಕ್ಷ್ಮೀ ಬಯೋಪಿಕ್‌ನಲ್ಲಿ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಟಿಸುವುದು ಖಚಿತವಾಗಿದೆ. ‘ಎಂ.ಎಸ್. – ಎ ಲೆಗಸಿ ಆನ್ ಸ್ಕ್ರೀನ್’ ಹೆಸರಿನ ಈ ಸಿನಿಮಾವನ್ನು ರಾಕ್‌ಲೈನ್ ವೆಂಕಟೇಶ್, ಅಲ್ಲು ಅರವಿಂದ್ ಹಾಗೂ ಬನ್ನಿ ವಾಸು ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಗೌತಮ್ ತಿನ್ನನೂರಿ ನಿರ್ದೇಶನದ ಈ ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡಲಿದ್ದಾರೆ.

‘ಬಿಗ್ ಬಾಸ್‌’ ಮನೇಲಿ ಮತ್ತೆ ‘ಬಳೆ’ ಕಿರಿಕ್; ʻನಾಲಾಯಕ್‌ ನನ್ ಮಕ್ಳ.. ನಿಮ್ಮ ಯೋಗ್ಯತೆಗೆ ಬೆಂಕಿ ಹಾಕ..ʼ ಎನ್ನುತ್ತಾ ಹದ್ದುಮೀರಿ ವರ್ತಿಸಿದ ಕಿರಣ್‌ ಶಾಸ್ತ್ರಿ, ಕೆರಳಿದ ಗಗನ್‌!

BBK 13: ʻನಿಮ್ ಯೋಗ್ಯತೆಗೆ ಬೆಂಕಿ ಹಾಕ..ʼ ಎಂದ ಕಿರಣ್‌ಗೆ ಗಗನ್ ವಾರ್ನಿಂಗ್!

‘ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ ವೇಳೆ ನಿಯಮ ಮುರಿದ ಆರೋಪ ಹೊತ್ತ ಕಿರಣ್ ಶಾಸ್ತ್ರಿ, ಉಸ್ತುವಾರಿ ತಾಂಡವ್ ಮೇಲೆ ಆಕ್ರೋಶಗೊಂಡಿದ್ದಾರೆ. ಸಹನೆ ಕಳೆದುಕೊಂಡ ಕಿರಣ್‌, "ಬಳೆ ತೊಟ್ಟುಕೊಳ್ಳಿ" ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಗಗನ್ ಖಡಕ್ ತಿರುಗೇಟು ನೀಡಿದ್ದಾರೆ.

BBK 13: ಗಗನ್‌ ಚಿನ್ನಪ್ಪ, ತಾಂಡವ್‌ಗೆ‌ ಬಿಗ್ ಶಾಕ್‌ ನೀಡಿದ ಕಿರಣ್‌ ಶಾಸ್ತ್ರಿ; ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಮಾಡಿದ 'ಬಿಗ್‌ ಬಾಸ್'!

ಗಗನ್ - ತಾಂಡವ್‌ಗೆ ಶಾಕ್ ನೀಡಿದ ಕಿರಣ್; ಕ್ಯಾಪ್ಟನ್ಸಿ ರೇಸ್ ಉಲ್ಟಾಪಲ್ಟಾ!

ಬಿಗ್‌ ಬಾಸ್‌ ಕ್ಯಾಪ್ಟನ್ಸಿ ರೇಸ್‌ನಲ್ಲಿ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಪ್ರಬಲ ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಹೊರಬಿದ್ದಿದ್ದಾರೆ. ದಿನಸಿ ಖರೀದಿಯ ‘ಬಿಗ್ ಪೇಟೆ’ ಟಾಸ್ಕ್‌ನಲ್ಲಿ ಕಿರಣ್ ಶಾಸ್ತ್ರಿ ಚಾಣಾಕ್ಷ ನಡೆ ಇಡೀ ಮನೆಯ ಲೆಕ್ಕಾಚಾರವನ್ನೇ ಬದಲಿಸಿತು. ಜಗದೀಶ್ ಮತ್ತು ಅವಿನಾಶ್ ಸುಲಭವಾಗಿ ಸ್ಥಾನ ತ್ಯಾಗ ಮಾಡಿದ್ದು ಅಚ್ಚರಿ ಮೂಡಿಸಿತು.

Bigg Boss 13: ಬೆಂಕಿ ಹಚ್ಚಿದ ‘ಡೋಲು ಬೋಲು’ ಮಾತು! ʻಎಲ್ಲಿಂದ ಬರ್ತಾರೋ ಚೈಲ್ಡ್‌ ಚಪಾತಿಗಳು..ʼ ಎಂದು ಗುಡುಗಿದ ಗಗನ್‌ ಚಿನ್ನಪ್ಪ!

ʻಬಿಗ್ ಬಾಸ್ʼ ಮನೆಯಲ್ಲಿ ರಾದ್ಧಾಂತ; ‘ಡೋಲು ಬೋಲು’ ಮಾತಿಗೆ ಕೆರಳಿದ ಗಗನ್!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಜಟಾಪಟಿ ಆರಂಭದಲ್ಲೇ ತಾರಕಕ್ಕೇರಿದೆ. ಧನುಷ್ ಮಂಜುನಾಥ್ ಆಡಿದ ‘ಡೋಲು ಬೋಲು’ ಎಂಬ ಗೇಲಿ ಮಾತಿಗೆ ಸಿಡಿದೆದ್ದ ಗಗನ್ ಚಿನ್ನಪ್ಪ, ‘ಎಲ್ಲಿಂದ ಬರ್ತಾರೋ ಈ ಚೈಲ್ಡ್ ಚಪಾತಿಗಳು’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ʻಟಾಕ್ಸಿಕ್‌ʼ ಬಳಿಕ ಕೆವಿಎನ್‌ ಪ್ರೊಡಕ್ಷನ್ಸ್‌ನಿಂದ ಹೊಸ ಸಿನಿಮಾ ಘೋಷಣೆ; 'ಮಂಗಳ ಗೌರಿ' ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ – ರುಕ್ಮಿಣಿ ವಸಂತ್!

‘ಮಂಗಳ ಗೌರಿ’ ಚಿತ್ರಕ್ಕಾಗಿ ಒಂದಾದ ಮಾಲಾಶ್ರೀ - ರುಕ್ಮಿಣಿ ವಸಂತ್

Mangala Gowri Movie: ಕೆವಿಎನ್ ಪ್ರೊಡಕ್ಷನ್ಸ್ ಮತ್ತು ದಾಕ್ಷಾಯಣಿ ಟಾಕೀಸ್ ಜಂಟಿ ನಿರ್ಮಾಣದ ʻಮಂಗಳ ಗೌರಿʼ ಚಿತ್ರದಲ್ಲಿ ನಟಿ ಮಾಲಾಶ್ರೀ ಹಾಗೂ ರುಕ್ಮಿಣಿ ವಸಂತ್ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ರಾಹುಲ್ ಪಿಕೆ ನಿರ್ದೇಶನದ ಈ ಸಿನಿಮಾದಲ್ಲಿ ರುಕ್ಮಿಣಿ ಖಾಕಿ ತೊಟ್ಟು ಕಾನ್‌ಸ್ಟೆಬಲ್ ಪಾತ್ರದಲ್ಲಿ ಮಿಂಚುತ್ತಿದ್ದು, ಫಸ್ಟ್‌ ಲುಕ್‌ ಎಲ್ಲರ ಗಮನಸೆಳೆಯುತ್ತಿದೆ.

BBK 13: ಹಬ್ಬದ ಹೊತ್ತಿನಲ್ಲಿ ʻಬಿಗ್‌ ಬಾಸ್‌ʼ ಮನೆಯೊಳಗೆ ಆತಂಕ! ದಿಢೀರ್‌ ಅಂತ ಹೊರಗೆ ಬಂದ ಸ್ಪರ್ಧಿ ಓಂ ಪ್ರಕಾಶ್‌ ರಾವ್, ಅಷ್ಟಕ್ಕೂ ಆಗಿದ್ದೇನು?

ಮಾನಸಿಕ ಒತ್ತಡಕ್ಕೆ ಸಿಲುಕಿದ್ರಾ ಓಂ ಪ್ರಕಾಶ್ ರಾವ್? ʻಬಿಗ್ ಬಾಸ್ʼನಿಂದ ಔಟ್‌

ಬಿಗ್‌ ಬಾಸ್‌ ಕನ್ನಡ 13ರ ರಿಯಾಲಿಟಿ ಶೋನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿ ತುರ್ತಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾನಸಿಕ ಒತ್ತಡದಿಂದ ಅವರು ಅಸ್ವಸ್ಥಗೊಂಡಿದ್ದಾರೆ ಎಂದು ಹೇಳಲಾಗಿದೆ.

ಗೌರಿ ಗಣೇಶ ಹಬ್ಬದ ಪ್ರಯುಕ್ತ ʻರಾಮಾಯಣʼ ಸಿನಿಮಾದ ‘ಜೈ ಜೈ ರಾಮ್’ ಹಾಡು ರಿಲೀಸ್;‌ ರಣಬೀರ್‌ ಕಫೂರ್‌ - ಸಾಯಿ ಪಲ್ಲವಿ ಫ್ಯಾನ್ಸ್‌ ಖುಷ್‌

‘ರಾಮಾಯಣ’ ಚಿತ್ರದ ʻಜೈ ಜೈ ರಾಮ್‌ʼ ಹಾಡಿಗೆ ಅಭಿಮಾನಿಗಳು ಫಿದಾ

ʻರಾಮಾಯಣʼ ಚಿತ್ರದ ಮೊದಲು ಹಾಡು ಅಧಿಕೃತವಾಗಿ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಮೆಚ್ಚುಗೆ ಪಡೆದುಕೊಂಡಿದೆ. ರಣಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಜೋಡಿ ಎಲ್ಲರ ಗಮನಸೆಳೆದಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ರಾವಣನಾಗಿ ಅಬ್ಬರಿಸಲಿದ್ದು, ಮೊದಲ ಭಾಗವು ದೀಪಾವಳಿ ಹಬ್ಬದ ಪ್ರಯುಕ್ತ ತೆರೆಕಾಣಲಿದೆ.

ʻನನ್ನ ಉಳಿತಾಯದ ಹಣವನ್ನೆಲ್ಲಾ ಹೂಡಿಕೆ ಮಾಡಿದೆ..ʼ; 250 ಕೋಟಿ ಗಳಿಸಿದ ʻಹನುಮಾನ್ ಅಂಶ್ʼ ಚಿತ್ರದ ನಿರ್ಮಾಪಕಿ ಅನುಪ್ರಿಯಾ ನಗರ್ ಹೇಳಿದ ಸಕ್ಸಸ್‌ ಸ್ಟೋರಿ!

ʻಹನುಮಾನ್‌ ಅಂಶ್‌ʼ ಚಿತ್ರದಿಂದ ಬಂದ ಹಣವನ್ನು ದಾನ ಮಾಡಲು ಮುಂದಾದ ನಿರ್ಮಾಪಕಿ

ʻಹನುಮಾನ್‌ ಅಂಶ್ʼ‌ ಸಿನಿಮಾವು ದೇಶಾದ್ಯಂತ ಭರ್ಜರಿ ಯಶಸ್ಸು ಕಂಡಿದ್ದು, 2 ಕೋಟಿ ಬಜೆಟ್‌ನಲ್ಲಿ ತಯಾರಾಗಿ 250 ಕೋಟಿಗೂ ಹೆಚ್ಚು ಗಳಿಕೆ ಮಾಡಿ, ಇತಿಹಾಸ ಸೃಷ್ಟಿಸಿದೆ. ನೀಮ್ ಕರೋಲಿ ಬಾಬಾ ಅವರ ಬೋಧನೆಗಳಾಧಾರಿತ ಈ ಚಿತ್ರಕ್ಕೆ 21 ವರ್ಷದ ಅನುಪ್ರಿಯಾ ನಗರ್ ತಮ್ಮ ಸಂಪೂರ್ಣ ಉಳಿತಾಯ ಹೂಡಿಕೆ ಮಾಡಿದ್ದರು.

ಯುವ ರಾಜ್‌ಕುಮಾರ್ ನಟನೆಯ 3ನೇ ಚಿತ್ರಕ್ಕೆ ‘ಪವರ್‌ಮ್ಯಾನ್‌’ ಟೈಟಲ್‌; ಈ ಚಿತ್ರಕ್ಕಾಗಿ ಖಡಕ್‌ ಟೀಮ್‌ ರೆಡಿ ಮಾಡಿದ ತರುಣ್ ಸುಧೀರ್!

ಗಣೇಶ ಹಬ್ಬದಂದು ಯುವ ರಾಜ್‌ಕುಮಾರ್ ನಟನೆಯ ‘ಪವರ್‌ಮ್ಯಾನ್‌’ ಸಿನಿಮಾ ಅನೌನ್ಸ್

ಗಣೇಶ ಚತುರ್ಥಿಯ ಸಂದರ್ಭದಲ್ಲಿ ಯುವ ರಾಜ್‌ಕುಮಾರ್‌ ನಟನೆಯ ʻಪವರ್‌ಮ್ಯಾನ್‌ʼ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದ್ದು, ಜಡೇಶ ಕೆ. ಹಂಪಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ತರುಣ್ ಸುಧೀರ್ ಮತ್ತು ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸುತ್ತಿರುವ ಈ ಬಿಗ್ ಬಜೆಟ್ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

Bigg Boss 13: ವೀಕೆಂಡ್‌ ಸಂಚಿಕೆಯಲ್ಲಿ ಧರಿಸಲು ಸೂಕ್ತ ಉಡುಪಿಲ್ಲದೆ ಕಣ್ಣೀರಿಟ್ಟ ಜಗ್ಗಾ ಮಮ್ಮಿ; ಬಟ್ಟೆ ಕಳುಹಿಸಿದ ನಟ ಕಿಚ್ಚ ಸುದೀಪ್‌ಗೆ ಎಲ್ಲರಿಂದ ಮೆಚ್ಚುಗೆ

BBK 13: ಬಟ್ಟೆಗಾಗಿ ಜಗ್ಗಾ ಮಮ್ಮಿ ಬೇಸರ; ಉಡುಗೊರೆ ಕಳಿಸಿದ ʻಕಿಚ್ಚʼ ಸುದೀಪ್

ಬಿಗ್‌ ಬಾಸ್‌ ಕನ್ನಡ 13 ರಿಯಾಲಿಟಿ ಶೋನಲ್ಲಿ ಸೂಕ್ತ ಬಟ್ಟೆಯಿಲ್ಲದೇ ಕೊರಗುತ್ತಿದ್ದ ಜಗ್ಗಾ ಮಮ್ಮಿ ನೆರವಿಗೆ ಕಿಚ್ಚ ಸುದೀಪ್ ಧಾವಿಸಿದ್ದಾರೆ. ಬಡತನದ ಕಾರಣದಿಂದ ಬಿಗ್‌ ಬಾಸ್‌ ವೇದಿಕೆಗೆ ಸ್ನೇಹಿತನ ಬಟ್ಟೆ ಧರಿಸಿ ಬಂದಿದ್ದ ಜಗ್ಗಾ ಮಮ್ಮಿಗೆ ಈಗ ವಾರಾಂತ್ಯದ ಸಂಚಿಕೆಗಾಗಿ ಬಟ್ಟೆಗಳಿರಲಿಲ್ಲ. ಅದಕ್ಕಾಗಿ ಸುದೀಪ್ ವಿಶೇಷ ಉಡುಪುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

Photos: ಕರ್ನಾಟಕ ನಕ್ಷೆಯ ಡಾಲರ್‌ನಲ್ಲಿ ಮಿಂಚಿದ ʻಡಾಲಿʼ ಮಗನ ಹೆಸರು; ನಟ ಧನಂಜಯ್ ಪುತ್ರನಿಗೆ ಇಮ್ಮಡಿ ಪುಲಕೇಶಿ ನಂಟು!

ಮಗನಿಗೆ ʻಎರೆಯʼ ಎಂದು ನಾಮಕರಣ ಮಾಡಿದ ʻಡಾಲಿʼ ಧನಂಜಯ್; ಈ ಹೆಸರಿನ ಅರ್ಥವೇನು?

ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ಗೌರಿ-ಗಣೇಶ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮ ಮುದ್ದಾದ ಮಗನ ಹೆಸರನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಕರ್ನಾಟಕದ ನಕ್ಷೆಯಿರುವ ಚಿನ್ನದ ಡಾಲರ್‌ನ ಮಧ್ಯಭಾಗದಲ್ಲಿ ಮಗನ ಹೆಸರು ಕೆತ್ತಿಸಿ ಪ್ರದರ್ಶಿಸುವ ಮೂಲಕ, ಪುಟ್ಟ ಕಂದನಿಗೆ ‘ಎರೆಯ’ ಎಂದು ನಾಮಕರಣ ಮಾಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ. ಕನ್ನಡ ನೆಲ, ಜಲ ಹಾಗೂ ಭಾಷೆಯ ಮೇಲೆ ಅಪಾರ ಪ್ರೇಮ ಹೊಂದಿರುವ ಧನಂಜಯ್ ಅವರು ಮಗನಿಗಿಟ್ಟಿರುವ ಈ ಹೆಸರಿನ ಹಿಂದೆ ಸುಂದರವಾದ ಪರಂಪರೆ ಮತ್ತು ಐತಿಹಾಸಿಕ ಹಿನ್ನೆಲೆಯಿದೆ. ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿಯ ಬಾಲ್ಯದ ಹೆಸರಾಗಿರುವ ‘ಎರೆಯ’ ಎಂಬುದು ಪುರಾತನ ಕನ್ನಡದ ಅರ್ಥಪೂರ್ಣ ಪದವಾಗಿದ್ದು, ಇದಕ್ಕೆ ‘ಒಡೆಯ’, ‘ಸ್ವಾಮಿ’ ಹಾಗೂ ‘ಅಧಿಪತಿ’ ಎಂಬ ಗಂಭೀರ ಅರ್ಥಗಳಿವೆ. ಇಲ್ಲಿವೆ ನೋಡಿ ‘ಡಾಲಿ’ ಮಗನ ಮುದ್ದಾದ ಫೋಟೋಗಳು.

Loading...