ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻಜೋಗಿʼ ಪ್ರೇಮ್ - `ಕಿಚ್ಚ' ಸುದೀಪ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ; ಅಕ್ಟೋಬರ್ 20ಕ್ಕೆ ಅದ್ಧೂರಿ ಮುಹೂರ್ತ!‌

ಸುದೀಪ್ -ʻಜೋಗಿʼ ಪ್ರೇಮ್ ಧಮಾಕಾ; ಕಿಚ್ಚನ ಬರ್ತ್‌ಡೇಗೆ ಸಿಕ್ತು ಸಖತ್ ಗಿಫ್ಟ್

ಕಿಚ್ಚ ಸುದೀಪ್‌ ಮತ್ತು ʻಜೋಗಿʼ ಪ್ರೇಮ್‌ ಜೋಡಿ ಮತ್ತೆ ಒಂದಾಗಿದೆ. ಪ್ರೇಮ್ ನಿರ್ದೇಶನದ 10ನೇ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ನಟ ಸುದೀಪ್ ಜನ್ಮದಿನದ ಪ್ರಯುಕ್ತ ಈ ಸರ್ಪ್ರೈಸ್ ಸಿಕ್ಕಿದೆ. ಅಕ್ಟೋಬರ್ 20ರಂದು ಅದ್ಧೂರಿ ಮುಹೂರ್ತ ನಿಗದಿಯಾಗಿದೆ. ಇಂದಿನ ತಲೆಮಾರಿನ ಕೌಟುಂಬಿಕ ಎಮೋಷನಲ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ ಪ್ರೇಮ್.

‘Mr. ಜಾಕ್’ ಆಗಿ ತೆರೆಮೇಲೆ ಮೋಡಿ ಮಾಡಲು ಬಂದ ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್‌!

‘Mr. ಜಾಕ್’ ಚಿತ್ರದ ಮೂಲಕ ನಿರ್ಮಾಪಕರಾದ ನಟ ಗುರುನಂದನ್‌

ನಟ ಗುರುನಂದನ್‌ ಅವರು ‘Mr. ಜಾಕ್’ ಚಿತ್ರದ ಮೂಲಕ ಮರಳಿದ್ದು, ಗೆಳೆಯರೊಡನೆ ‘ಮಂಡಿಮನೆ ಟಾಕೀಸ್’ ಸ್ಥಾಪಿಸಿ ಸ್ವತಃ ನಿರ್ಮಾಪಕರಾಗಿದ್ದಾರೆ. ಸುಮಂತ್ ಗೌಡ ನಿರ್ದೇಶನದ ಈ ಕೌಟುಂಬಿಕ ಹಾಸ್ಯ ಕಥೆಯಲ್ಲಿ ವೈವಾಹಿಕ ಬದುಕಿನ ಏರಿಳಿತ, ವಿಚ್ಛೇದನದ ಗಂಭೀರ ವಿಷಯ ಹಾಸ್ಯದ ಮೂಲಕ ಹೇಳಲಾಗಿದೆಯಂತೆ. ನಾಯಕಿಯಾಗಿ ತಪಸ್ವಿನಿ ಪೂಣಚ್ಛ ನಟಿಸಿದ್ದಾರೆ.

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ರಿಲೀಸ್; ಚಿತ್ರತಂಡಕ್ಕೆ ನಟ ಪ್ರಮೋದ್ ಶೆಟ್ಟಿ ಶುಭ ಹಾರೈಕೆ

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಪ್ರಮೋದ್ ಶೆಟ್ಟಿ

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ಲೋಕಾರ್ಪಣೆಗೊಂಡಿದ್ದು, ನಟ ಪ್ರಮೋದ್ ಶೆಟ್ಟಿ ಶುಭಕೋರಿದ್ದಾರೆ. ಚಿತ್ರಕ್ಕೆ 'ಎ' ಪ್ರಮಾಣಪತ್ರ ದೊರೆತಿದ್ದರೂ ಪ್ರತಿಯೊಬ್ಬರ ನೈಜ ಬದುಕಿನ ಎಚ್ಚರಿಕೆಯ ಪಾಠವಿದು ಎಂದಿದ್ದಾರೆ ನಿರ್ದೇಶಕ ಮನೋಜ್. ಪುನೀತ್ ರಾಜ್‌ಕುಮಾರ್ ಆಶೀರ್ವಾದ ನೆನೆದು ನಾಯಕ ಜಗ್ಗಿ ಭಾವುಕರಾಗಿದ್ದು, ಸಂಪ್ರತಿ ಆಳ್ವಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ದರ್ಶನ್‌ಗೆ ಸಣ್ಣ ರಿಲೀಫ್: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್; ಅಷ್ಟಕ್ಕೂ ಆಗಿದ್ದೇನು?

Darshan Case: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಎ-14 ಆರೋಪಿ ಪ್ರದೋಷ್ ಸಾಕ್ಷಿ ಹೇಳುವ ಪ್ರಕ್ರಿಯೆ ಸದ್ಯ ಮುಂದೂಡಿಕೆ ಆಗಿದೆ. ದರ್ಶನ್ ಪರ ವಕೀಲರ ತುರ್ತು ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದ ಹಿನ್ನೆಲೆಯಲ್ಲಿ, ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಬಂದಿದ್ದ ಪ್ರದೋಷ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ.

'ಅಲ್ಲು ಅರವಿಂದ್ ಮಾತನ್ನು ವಿವಾದ ಮಾಡುವವರು ಅಹಂ ಇರುವ ಜನರು ಮಾತ್ರ'; ಯಶ್‌ ತಾಯಿ ಹೇಳಿಕೆಗೆ ರಾಮ್‌ ಗೋಪಾಲ್‌ ವರ್ಮಾ ತಿರುಗೇಟು!

ನಟ ಯಶ್ ತಾಯಿ ಮಾತಿಗೆ ಆರ್‌ಜಿವಿ ತಿರುಗೇಟು; ಅಲ್ಲು ಅರವಿಂದ್‌ಗೆ ಸಪೋರ್ಟ್!

ʻಕೆಜಿಎಫ್ʼ ಚಿತ್ರಕ್ಕೂ ಮೊದಲು ಯಶ್ ಅಪರಿಚಿತರಾಗಿದ್ದರು ಎಂಬ ಅಲ್ಲು ಅರವಿಂದ್ ಹೇಳಿಕೆಗೆ ಯಶ್ ತಾಯಿ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರವಿಂದ್‌ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ವಿವಾದ ಸೃಷ್ಟಿಸುವವರಲ್ಲಿ ಅತಿಯಾದ ಅಹಂಕಾರವಿದೆ ಎಂದು ನೇರವಾಗಿ ತಿರುಗೇಟು ನೀಡಿದ್ದಾರೆ.

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು: ಕಾರಣವೇನು?

‘ಬಿಗ್ ಬಾಸ್‌’ ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು!

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ಪರಿಸರ ಮತ್ತು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ (NOC) ನೀಡದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

Devaraaya Movie: ‘ಕಿಚ್ಚ’ ಸುದೀಪ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್: 'ಶ್ರೀ ಕೃಷ್ಣದೇವರಾಯ'ನಾಗಿ ತೆರೆಮೇಲೆ ಮಿಂಚಲಿದ್ದಾರೆ ʻಅಭಿನಯ ಚಕ್ರವರ್ತಿʼ!

Devaraaya: ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಮಿಂಚಲಿದ್ದಾರೆ ನಟ ಸುದೀಪ್

ʻದೇವರಾಯʼ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಅವರು ವಿಜಯನಗರದ ಸಾರ್ವಭೌಮ ಶ್ರೀಕೃಷ್ಣದೇವರಾಯರಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸುದೀಪ್‌ ಜನ್ಮದಿನದಂದು ಈ ಐತಿಹಾಸಿಕ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

Kichcha Sudeep : ‘ಸ್ಕೂಲ್ ಬಸ್’ ಚಿತ್ರದಲ್ಲಿ ಕಿಚ್ಚ ಸುದೀಪ್; ಬಹುಭಾಷೆಗಳಲ್ಲಿ ರಿಲೀಸ್!

‘ಸ್ಕೂಲ್ ಬಸ್’ ಚಿತ್ರದಲ್ಲಿ ಕಿಚ್ಚ ಸುದೀಪ್; ಬಹುಭಾಷೆಗಳಲ್ಲಿ ರಿಲೀಸ್!

Kichcha Sudeep : ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಮಧ್ಯರಾತ್ರಿ ಅವರ ಫಸ್ಟ್ ಲುಕ್ ಪೋಸ್ಟರ್ First Look Poster) ಬಿಡುಗಡೆ ಮಾಡುವ ಮೂಲಕ ಈ ಮಹತ್ವದ ಪ್ರಾಜೆಕ್ಟ್‌ನಲ್ಲಿ ಅವರು ಇರುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅರ್ಪಿಸುತ್ತಿರುವ ಈ ಚಿತ್ರವು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

Billa Ranga Baasha: ‘ಬಿಲ್ಲ ರಂಗ ಬಾಷಾ’ ಚಿತ್ರದ ಹೊಸ ಪೋಸ್ಟರ್ ಔಟ್‌!

‘ಬಿಲ್ಲ ರಂಗ ಬಾಷಾ’ ಚಿತ್ರದ ಹೊಸ ಪೋಸ್ಟರ್ ಔಟ್‌!

Billa Ranga Baasha:ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿದೆ. ಬ್ಲಾಕ್‌ಬಸ್ಟರ್ 'ವಿಕ್ರಾಂತ್ ರೋಣ' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಅತ್ಯಂತ ರೋಮಾಂಚಕವಾಗಿದ್ದು, ಚಿತ್ರವು ವಿಶ್ವದರ್ಜೆಯ ಮೇಕಿಂಗ್ ಒಳಗೊಂಡಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಒದಗಿಸಿದೆ.

Kichcha Sudeep Birthday: ಕಿಚ್ಚ ಸುದೀಪ್‌ ಜನ್ಮದಿನ; ಇರಲಿದೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್!

ಕಿಚ್ಚ ಸುದೀಪ್‌ ಜನ್ಮದಿನ; ಇರಲಿದೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್!

Kichcha Sudeep Birthday:ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ (Kichcha Sudeep Birthday) ಇಂದು ತಮ್ಮ 53ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರಪಂಚಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ. 4 ಹೊಸ ಸಿನಿಮಾಗಳ ಭರ್ಜರಿ ಅನೌನ್ಸ್‌ಮೆಂಟ್ ನೀಡಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ (Surprise) ನೀಡಲಿದ್ದಾರೆ ಎನ್ನಲಾಗುತ್ತಿದೆ.

Mahesh Babu: ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ!

‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ!

Mahesh Babu: ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ಅವರ ಪುತ್ರ ಗೌತಮ್ ಘಟ್ಟಮನೇನಿ ‘ಟಾಕ್ಸಿಕ್’ ಚಿತ್ರಕ್ಕೆ ಅವರು ಅರ್ಧ ಸ್ಟಾರ್ ರೇಟಿಂಗ್ ನೀಡಿರುವುದು ಚರ್ಚೆಗೆ ಕಾರಣ ಆಗಿದೆ. ಆಗಸ್ಟ್ 26ರಂದು ಬಿಡುಗಡೆಯಾದ ಯಶ್ ಅವರ ‘ಟಾಕ್ಸಿಕ್’ ಸಿನಿಮಾಗೆ ಗೌತಮ್ ಕೇವಲ ಅರ್ಧ ಸ್ಟಾರ್ (0.5/5) ರೇಟಿಂಗ್ ನೀಡಿರುವುದು ಚರ್ಚೆಗೆ ಕಾರಣ ಆಗಿದೆ.

Mysaa Movie: ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ; ಮೈಸಾ ರಿಲೀಸ್‌ ಡೇಟ್‌ ಅನೌನ್ಸ್‌!

ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ; ಮೈಸಾ ರಿಲೀಸ್‌ ಡೇಟ್‌ ಅನೌನ್ಸ್‌!

Mysaa Movie: ಈ ಚಿತ್ರ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ವಾಸ್ತವವಾಗಿ, ಈ ವರ್ಷದ ಮೇ ತಿಂಗಳಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರು ಕೇರಳದಲ್ಲಿ ಚಿತ್ರತಂಡವು ದೀರ್ಘ ವೇಳಾಪಟ್ಟಿಯನ್ನು ಯಶಸ್ವಿಯಾಗಿ ಮುಗಿಸಿದೆ ಎಂದು ಬಹಿರಂಗಪಡಿಸಿದಾಗ ಚಿತ್ರ ಸುದ್ದಿಯಲ್ಲಿತ್ತು. ಈ ಚಿತ್ರಕ್ಕಾಗಿ ಸ್ಟಂಟ್ ಮಾಸ್ಟರ್ ಕೇಚಾ ಖಂಪಕ್ಡಿ ಕೆಲವು ಹೈ ವೋಲ್ಟೇಜ್ ಆಕ್ಷನ್ ಸನ್ನಿವೇಶಗಳನ್ನು ನೃತ್ಯ ಸಂಯೋಜನೆ ಮಾಡಿದ್ದಾರೆ.

ಕಾರು ಓವರ್‌ಟೇಕ್‌ ವಿಚಾರಕ್ಕೆ ಕಿರಿಕ್‌: ‘ದುನಿಯಾ’ ವಿಜಯ್ ಪುತ್ರನಿಂದ ವಿದ್ಯಾರ್ಥಿ ಅಪಹರಿಸಿ ಹಲ್ಲೆ ಆರೋಪ, ದೂರು ದಾಖಲು!

‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್‌ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ!

ನಟ ʻದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಲಿಸುವ ಕಾರಿನಲ್ಲಿ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ‌ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರಿನನ್ವಯ ಕೆಂಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಜಮೀರ್‌ ಪುತ್ರ, ನಟ ಝೈದ್‌ ಖಾನ್‌

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಜೈಲಿಗೆ ಬಂದ ಜಮೀರ್‌ ಪುತ್ರ ಝೈದ್‌ ಖಾನ್‌

ರೇಣುಕಾಸ್ವಾಮಿ ಕೇಸ್‌ನಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್‌ ತೂಗುದೀಪ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪತ್ನಿ ವಿಜಯಲಕ್ಷ್ಮಿ, ನಟ ಝೈದ್ ಖಾನ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Vijay Deverakonda : "ನಾನು ಪ್ರೀತಿಸಿದೆ, ಬ್ರೇಕಪ್ ಆಯ್ತು, ಕುಡಿತ  ಬಿಟ್ಟೆʼʼ: ವಿಜಯ್ ದೇವರಕೊಂಡ ಓಪನ್‌ ಟಾಕ್‌

"ನಾನು ಪ್ರೀತಿಸಿದೆ, ಬ್ರೇಕಪ್ ಆಯ್ತು, ಕುಡಿತ ಬಿಟ್ಟೆʼʼ: ವಿಜಯ್ ದೇವರಕೊಂಡ

Vijay Deverakonda :'ರೋಮಾಂಚಕಂ' ಚಿತ್ರದ ಪ್ರಚಾರದ ವೇಳೆ ವಿಜಯ್ ದೇವರಕೊಂಡ (Vijay Deavarkonda) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ವಿಜಯ್ ಆಡಿದ ಈ ಮಾತು ಚರ್ಚೆಗೆ ಕಾರಣವಾಗಿದೆ. ಬ್ರೇಕಪ್ ಬಗ್ಗೆ ಇಷ್ಟು ಓಪನ್ ಆಗಿ ಮಾತನಾಡಿದ್ದು ಕೇಳಿ ಫ್ಯಾನ್ಸ್ ಕಂಗಾಲಾಗಿದ್ದಾರೆ.

'ಗುಡ್ಡದ ಭೂತ' ಸಿನಿಮಾಕ್ಕಾಗಿ ಪೊಲೀಸ್ ಅಧಿಕಾರಿಯಾದ ಪಿ. ಲಂಕೇಶ್ ಮೊಮ್ಮಗ ಸಮರ್ಜಿತ್! ಸದ್ದಿಲ್ಲದೆ ಶೂಟಿಂಗ್‌ ಕಂಪ್ಲೀಟ್‌

'ಗುಡ್ಡದ ಭೂತ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾದ ಸಮರ್ಜಿತ್ ಲಂಕೇಶ್‌

ಸಮರ್ಜಿತ್‌ ಲಂಕೇಶ್‌ ಅವರು 'ಗುಡ್ಡದ ಭೂತ' ಎಂಬ ಸಸ್ಪೆನ್ಸ್ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಚಿತ್ರದಲ್ಲಿ 'ಎಸ್‌ಐ ಅಲೋಕ್' ಎಂಬ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರ್ಣಗೊಳಿಸಿದ್ದು, 1987ರ ಪುತ್ತೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ.

Yash Toxic: ‘ಲಗಾನ್’ ಸಿನಿಮಾ ಉದಾಹರಣೆ ನೀಡಿ ʼಟಾಕ್ಸಿಕ್‌ʼ ಬಗ್ಗೆ ಅಜನೀಶ್ ಲೋಕನಾಥ್  ಏನಂದ್ರು?

‘ಲಗಾನ್’ ಸಿನಿಮಾ ಉದಾಹರಣೆ ನೀಡಿ ಟಾಕ್ಸಿಕ್‌ ಬಗ್ಗೆ ಅಜನೀಶ್ ಏನಂದ್ರು?

Yash Toxic: ಸಂಗೀತ ಸಂಯೋಜಕ ಅಜನೀಶ್ ಲೋಕನಾಥ್ ಅವರು ಈಗ ಟಾಕ್ಸಿಕ್‌ ಕುರಿತು ಟ್ವೀಟ್‌ ಮಾಡಿದ್ದಾರೆ. ಸಿನಿಮಾಕ್ಕೆ ಬರುತ್ತಿರುವ ನೆಗೆಟಿವ್ ಕಮೆಂಟುಗಳಿಗೆ ಠಕ್ಕರ ಕೊಟ್ಟಿದ್ದಾರೆ. ‘ಟಾಕ್ಸಿಕ್’ ಸಿನಿಮಾಕ್ಕೆ ಬೆಂಬಲಿಸಿರುವ ಅಜನೀಶ್ ಲೋಕನಾಥ್ , ಹಿಂದಿಯ ‘ಲಗಾನ್’ ಸಿನಿಮಾವನ್ನು ಉದಾಹರಣೆಯಾಗಿ ನೀಡಿದ್ದಾರೆ.

ʻಬಿಗ್‌ ಬಾಸ್‌ ಕನ್ನಡ 13ʼ ಶೋ ಆರಂಭಿಸಲು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿಲ್ಲ ಅರ್ಜಿ! ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಹೇಳಿದ್ದೇನು‌?

ʻಬಿಗ್ ಬಾಸ್ 13ʼ ಆರಂಭಿಸಲು ಜಿಲ್ಲಾಡಳಿತಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ!

ʻಬಿಗ್‌ ಬಾಸ್‌ ಕನ್ನಡ 13ʼ ಪ್ರಸಾರಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಗಳು ಕಾಣಿಸುತ್ತಿವೆ. ಮಾಲಿನ್ಯ ನಿಯಂತ್ರಣ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪರಿಸರ ಸಚಿವರು ಎಚ್ಚರಿಸಿದ ಬೆನ್ನಲ್ಲೇ, "ಶೋ ನಡೆಸಲು ಯಾವುದೇ ಅಧಿಕೃತ ಅರ್ಜಿ ಬಂದಿಲ್ಲ" ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ದಸರಾ ಹಬ್ಬಕ್ಕೆ ಗಣೇಶ್ ನಟನೆಯ ‘ಬೃಂದಾವಿಹಾರಿ’‌ ಸಿನಿಮಾ ಉಡುಗೊರೆ ; ವಿಶ್ವಾದ್ಯಂತ 1,300ಕ್ಕೂ ಹೆಚ್ಚು ಪರದೆಗಳಲ್ಲಿ ರಿಲೀಸ್!

ದಸರಾ ಹಬ್ಬದ ಉಡುಗೊರೆಯಾಗಿ ಗಣೇಶ್ ನಟನೆಯ ‘ಬೃಂದಾವಿಹಾರಿ’‌ ಸಿನಿಮಾ ರಿಲೀಸ್‌

ನಟ ಗಣೇಶ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಬೃಂದಾವಿಹಾರಿ’ ದಸರಾ ಹಬ್ಬದ ವಿಶೇಷವಾಗಿ ಅಕ್ಟೋಬರ್ 16ರಂದು ವಿಶ್ವಾದ್ಯಂತ 1,300ಕ್ಕೂ ಅಧಿಕ ಪರದೆಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಶ್ರೀನಿವಾಸ ರಾಜು ನಿರ್ದೇಶನ ಮತ್ತು ಸಮೃದ್ಧಿ ವಿ. ಮಂಜುನಾಥ್ ನಿರ್ಮಾಣದ ಈ ಕೌಟುಂಬಿಕ ಸಿನಿಮಾದಲ್ಲಿ ಮಾಳವಿಕಾ ಶರ್ಮಾ ನಾಯಕಿಯಾಗಿ ನಟಿಸಿದ್ದಾರೆ.

ಧಾರಾವಾಹಿಗಳ ಕಥಾಲೋಕಕ್ಕೆ 'ಗೂಗಲ್ AI' ಎಂಟ್ರಿ; ಜೀ ಜೊತೆಗೂಡಿ ಭಾರತದಲ್ಲೇ ಮೊದಲ ವಿನೂತನ ಪ್ರಯೋಗ!

ಜೀ ಟಿವಿಯ ಧಾರಾವಾಹಿಗಳ ಕಥಾಲೋಕಕ್ಕೆ 'ಗೂಗಲ್ AI' ಎಂಟ್ರಿ

ಭಾರತೀಯ ಕಿರುತೆರೆ ಇತಿಹಾಸದಲ್ಲೇ ಮೊದಲ ಬಾರಿಗೆ ಜೀ ಟಿವಿ ಧಾರಾವಾಹಿಗಳ ಕಥಾಹಂದರದಲ್ಲಿ Google AI Mode ಅಳವಡಿಕೆಯಾಗಿದೆ. 'ದಿಲ್‌ಫ್ಲುನ್ಸರ್ ಮೊಮೆಂಟ್ಸ್' ಪರಿಕಲ್ಪನೆಯಡಿಯಲ್ಲಿ ಪಾತ್ರಗಳು ಎದುರಿಸುವ ದೈನಂದಿನ ಗೊಂದಲ ಹಾಗೂ ಸಂಕೀರ್ಣ ಸವಾಲುಗಳಿಗೆ ಗೂಗಲ್ ಕೃತಕ ಬುದ್ಧಿಮತ್ತೆ ಹೇಗೆ ನೆರವಾಗುತ್ತದೆ ಎಂಬುದನ್ನು ನೈಜವಾಗಿ ತೋರಿಸಲಾಗುತ್ತಿದೆ.

ʻಹಕ್ಕುಗಳು ನನ್ನ ಬಳಿಯಿಲ್ಲ, ಅದರ ನೆಗೆಟಿವ್ಸ್‌ ಕೂಡ ಇಲ್ಲʼ; ʻಶಾಂತಿ ಕ್ರಾಂತಿʼ ರೀ-ರಿಲೀಸ್ ಬಗ್ಗೆ ಮೊದಲ ಬಾರಿ ಮಾತಾಡಿದ ರವಿಚಂದ್ರನ್!‌

ʻಶಾಂತಿ ಕ್ರಾಂತಿʼ ರೀ-ರಿಲೀಸ್ ಅಷ್ಟು ಸುಲಭವಿಲ್ಲ! ರವಿಚಂದ್ರನ್ ಹೇಳಿದ್ದೇನು?

ʻಶಾಂತಿ ಕ್ರಾಂತಿʼ ಸಿನಿಮಾವನ್ನು ರೀ-ರಿಲೀಸ್‌ ಬಗ್ಗೆ ನಟ-ನಿರ್ದೇಶಕ ವಿ. ರವಿಚಂದ್ರನ್ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ಮೂಲ ನೆಗೆಟಿವ್ ನಾಶವಾಗಿದ್ದು, ಹಕ್ಕುಗಳು ಸಹೋದರ ಬಾಲಾಜಿ ಬಳಿಯಿವೆ ಎಂದಿದ್ದಾರೆ. ಹಳೆಯ ಪ್ರಿಂಟ್‌ಗಳ ಮೂಲಕ ಮರುರೂಪಿಸಲು ₹3 ಕೋಟಿ ವೆಚ್ಚವಾಗಲಿದ್ದು, ಮರುಸೃಷ್ಟಿ ಕಷ್ಟಸಾಧ್ಯ ಎಂದಿದ್ದಾರೆ.

ʻಕೌಸ್ತುಭ’ ಚಿತ್ರದಲ್ಲಿ ಖಡಕ್ ಪೊಲೀಸ್ ಲುಕ್‌ನಲ್ಲಿ ಪ್ರಮೋದ್ ಶೆಟ್ಟಿ; ಈ ಪಾತ್ರಕ್ಕಾಗಿ 27 ಕೆ.ಜಿ ತೂಕ ಇಳಿಸಿಕೊಂಡ ನಟ!

ʻಕೌಸ್ತುಭ’ ಚಿತ್ರಕ್ಕಾಗಿ 27 KG ತೂಕ ಇಳಿಸಿಕೊಂಡ ನಟ ಪ್ರಮೋದ್ ಶೆಟ್ಟಿ!

ಪ್ರಮೋದ್ ಶೆಟ್ಟಿ ನಟನೆಯ ʻಕೌಸ್ತುಭ’ ಚಿತ್ರದ ಮೂಲಕ ಪೂರ್ಣಪ್ರಮಾಣದ ಕಮರ್ಷಿಯಲ್ ಹೀರೋ ಆಗಿ ಹೊರಹೊಮ್ಮುತ್ತಿದ್ದಾರೆ. 'ಚಾಣಕ್ಯ' ಎಂಬ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರಕ್ಕಾಗಿ ಅವರು ಬರೋಬ್ಬರಿ 27 ಕೆ.ಜಿ ತೂಕ ಇಳಿಸಿಕೊಂಡು ಗಮನಸೆಳೆದಿದ್ದಾರೆ. ಸಿದ್ದು ವಜ್ರಪ್ಪ ನಿರ್ದೇಶನದ ಈ ಪತ್ತೆದಾರಿ ಕಥಾಹಂದರದ ಚಿತ್ರವು ರಾಜಕೀಯ ಹಾಗೂ ಸಿನಿಮಾರಂಗದ ನಂಟನ್ನು ಅನಾವರಣಗೊಳಿಸಲಿದೆಯಂತೆ.

ಎಂಎಂ ಕೀರವಾಣಿ ಪುತ್ರ ಕಾಲಭೈರವ ಜೊತೆ ಕಾವ್ಯ ಕಲ್ಯಾಣ್‌ರಾಮ್‌ ಡೇಟಿಂಗ್; ನಿರ್ದೇಶಕ ರಾಜಮೌಳಿ ಕುಟುಂಬದ ಸೊಸೆ ಆಗಲಿದ್ದಾರೆ ಈ ಜನಪ್ರಿಯ ನಟಿ!

ಆಸ್ಕರ್ ವಿಜೇತ ಕೀರವಾಣಿ ಪುತ್ರನ ಜೊತೆ ನಟಿ ಕಾವ್ಯ ಕಲ್ಯಾಣ್‌ರಾಮ್ ಮದುವೆ

ಕಾಲಭೈರವ ಮತ್ತು ಕಾವ್ಯ ಕಲ್ಯಾಣ್‌ರಾಮ್ ಜೋಡಿ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಹೇಳಿಕೊಂಡಿದೆ. ಆಸ್ಕರ್ ಪುರಸ್ಕೃತ ಕೀರವಾಣಿ ಪುತ್ರ, ಗಾಯಕ ಕಾಲಭೈರವ ಹಾಗೂ 'ಬಲಗಂ' ಖ್ಯಾತಿಯ ಕಾವ್ಯ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಭಾವನಾತ್ಮಕ ಸಂದೇಶಗಳು ವೈರಲ್ ಆಗಿವೆ. ರಾಜಮೌಳಿ ಕುಟುಂಬದ ಸಂಬಂಧಿಕರಾಗಿರುವ ಈ ಯುವ ತಾರಾ ಜೋಡಿಯ ಹೊಸ ಪಯಣಕ್ಕೆ ಚಿತ್ರರಂಗದ ಗಣ್ಯರು ಹಾರೈಸಿದ್ದಾರೆ.

ʻಬಿಗ್‌ ಬಾಸ್‌ʼ ಮನೆಗೆ ಹೋಗೋ ಚಾನ್ಸ್‌ ಮಿಸ್‌ ಮಾಡಿಕೊಂಡ ಕುಮಾರಿಗೆ ವಿನಯ್‌ ಗೌಡ ಹೇಳಿದ್ದೇನು? 5 ಲಕ್ಷ ರೂ. ಕೊಟ್ಟಿದ್ಯಾರು?

‘ಬಿಗ್‌ ಬಾಸ್‌’ಗೆ ಹೋಗುವ ಚಾನ್ಸ್‌ ಮಿಸ್‌; ಆದ್ರೂ ಕುಮಾರಿಗೆ ಒಲಿದ ಅದೃಷ್ಟ!

ಬಿಗ್‌ ಬಾಸ್‌ ಕನ್ನಡ 13 ಅಗ್ನಿಪರೀಕ್ಷೆಯ ಸ್ಪರ್ಧಿ ಲಾವಣ್ಯ ಕುಮಾರಿ ಆರೋಗ್ಯ ಸಮಸ್ಯೆಯಿಂದಾಗಿ ಶೋನಿಂದ ಹೊರಬಿದ್ದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಶೋನಿಂದ ಹೊರಬಿದ್ದರೂ, ಅವರಿಗೆ ಕೈತುಂಬಾ ಹಣ ಸಿಕ್ಕಿದೆ. ಭವಿಷ್ಯದಲ್ಲಿ ಉದ್ಯೋಗ ನೀಡುವುದಕ್ಕೂ ಭರವಸೆ ಸಿಕ್ಕಿದೆ.

Loading...