ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Sonu Nigam: ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದೇಕೆ ಸೋನು ನಿಗಮ್?

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದೇಕೆ ಗಾಯಕ?

Sonu Nigam: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಇತರ ಪರೀಕ್ಷಾ ಅಕ್ರಮಗಳ ಕುರಿತು ದೆಹಲಿಯಲ್ಲಿ ನಡೆದ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಪ್ರತಿಭಟನೆಯ ಬಗ್ಗೆ ಸೋನು ನಿಗಮ್ ಪ್ರತಿಕ್ರಿಯೆ ನೀಡದೇ ಇರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.ಸೋನು ಈಗ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಸೋನು ನಿಗಮ್ ಅವರು ಮೌನ ವಹಿಸಿದ್ದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ.

‘ಶಾಂತಿ ಕ್ರಾಂತಿ’ ರೀ-ರಿಲೀಸ್‌ ಬಗ್ಗೆ ಕೊನೆಗೂ ಸಿಕ್ತು ಕ್ಲಾರಿಟಿ; ಹಕ್ಕುಗಳನ್ನು ಹೊಂದಿರುವ ರವಿಚಂದ್ರನ್‌ ಸಹೋದರ ಬಾಲಾಜಿ ಬಿಚ್ಚಿಟ್ಟ ಸತ್ಯವಿದು!

ʻಶಾಂತಿ ಕ್ರಾಂತಿʼ ರೀ-ರಿಲೀಸ್‌; ರವಿಚಂದ್ರನ್ ಸಹೋದರ ಹೇಳಿದ್ರು ಅಸಲಿ ಸತ್ಯ!

ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಅಭಿನಯದ 'ಶಾಂತಿ ಕ್ರಾಂತಿ' ಸಿನಿಮಾದ ಮರುಬಿಡುಗಡೆ ಸುದ್ದಿ ಸದ್ಯ ಭಾರಿ ಚರ್ಚೆಯಲ್ಲಿದ್ದು, ಈ ಬಗ್ಗೆ ಅದರ ಹಕ್ಕುಗಳನ್ನು ಹೊಂದಿರುವ ರವಿ ಸಹೋದರ ಬಾಲಾಜಿ ವೀರಾಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರದ ನೆಗೆಟಿವ್ಸ್‌ಗಳು ಹಾಳಾಗಿದ್ದು, ಹೊಸ ಮೂಲಗಳನ್ನು ಹುಡುಕಲಾಗುತ್ತಿದೆ. ಅದಕ್ಕೆ ಹೆಚ್ಚು ಸಮಯ ಬೇಕಾಗಲಿದೆ ಎಂದು ಹೇಳಿದ್ದಾರೆ.

Dulquer Salmaan: ದುಲ್ಕರ್ ಸಲ್ಮಾನ್ ಈ ಮೂವಿ ಪೋಸ್ಟ್‌ಪೋನ್‌! ಕಾರಣ ಇದು

Dulquer Salmaan: ದುಲ್ಕರ್ ಸಲ್ಮಾನ್ ಈ ಮೂವಿ ಪೋಸ್ಟ್‌ಪೋನ್‌!

I'm Game : ದುಲ್ಕರ್ ಸಲ್ಮಾನ್ (Dulquer Salmaan) ಅವರ ಮುಂಬರುವ ಚಿತ್ರ ಐ ಆ್ಯಮ್ ಗೇಮ್ (I am Game) ಗಾಗಿ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗುತ್ತದೆ . ಮಲಯಾಳಂ ಚಿತ್ರ ಆಗಸ್ಟ್ 20 ರಂದು ಓಣಂ ಬಿಡುಗಡೆಗೆ ನಿಗದಿಯಾಗಿತ್ತು, ಆದರೆ ಈಗ ಅದನ್ನು ಮುಂದೂಡಲಾಗಿದೆ. ಬಿಡುಗಡೆ ದಿನಾಂಕವನ್ನು ಏಕೆ ಬದಲಾಯಿಸಲಾಯಿತು ಎಂದು ದುಲ್ಕರ್ ತಮ್ಮ ಇನ್ಸ್ಟಾಗ್ರಾಮ್ (instagram) ಖಾತೆಯಲ್ಲಿ ವಿವರಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿ; ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲೂ ಬಿಗ್ ಶಾಕ್!

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್‌ಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗುವ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶಿಸಲು ಕೋರಿ ನಟ ದರ್ಶನ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಪೀಠವು ಸಹ-ಆರೋಪಿ ಮಾಫಿ ಸಾಕ್ಷಿಯಾಗುವುದನ್ನು ಇತರ ಆರೋಪಿಗಳು ಪ್ರಶ್ನಿಸಲು ಅಧಿಕಾರವಿಲ್ಲವೆಂದು ಸ್ಪಷ್ಟಪಡಿಸಿದೆ.

ಅಯ್ಯೋ, ಟಾಕ್ಸಿಕ್‌ ರಿಲೇಷನ್‌ಶಿಪ್‌ನಿಂದ ನಲುಗಿಹೋದರೇ ನಟಿ ಅನುಪಮಾ ಪರಮೇಶ್ವರನ್?‌ ಎಲ್ಲರ ಕಣ್ಣು ಆ ಸ್ಟಾರ್‌ ಹೀರೋ ಪುತ್ರನ ಮೇಲೆ ಬಿತ್ತು!

`ಅನ್ನಿಯನ್ ರೀತಿ ಟಾರ್ಚರ್‌ ಕೊಡ್ತಿದ್ದʼ; ಶಾಕಿಂಗ್‌ ವಿಚಾರ ತಿಳಿಸಿದ ಅನುಪಮಾ

ನಟಿ ಅನುಪಮಾ ಪರಮೇಶ್ವರನ್ ತಮ್ಮ ಕಳೆದ ಎರಡು ವರ್ಷಗಳ ಟಾಕ್ಸಿಕ್ ರಿಲೇಶನ್‌ಶಿಪ್ ಕುರಿತು ಸಂದರ್ಶನವೊಂದರಲ್ಲಿ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಮಾಜಿ ಪ್ರೇಮಿಯ ನಾರ್ಸಿಸಿಸ್ಟಿಕ್ ನಡವಳಿಕೆಯನ್ನು 'ಅನ್ನಿಯನ್' ಚಿತ್ರದ ಪಾತ್ರಕ್ಕೆ ಹೋಲಿಸಿರುವ ಅವರು, ಆತ್ಮಹತ್ಯೆಯ ಹಂತಕ್ಕೆ ತಲುಪಿದ್ದಾಗಿ ಹೇಳಿದ್ದಾರೆ!

'777 ಚಾರ್ಲಿ' ಡೈರೆಕ್ಟರ್‌ ಕಿರಣ್‌ರಾಜ್‌ಗೆ ಬಾಲಿವುಡ್‌ನಿಂದ ಬಿಗ್‌ ಆಫರ್!‌ ಸೈಫ್‌ ಅಲಿ ಖಾನ್‌ ಅಥವಾ ಕಾರ್ತಿಕ್‌ ಆರ್ಯನ್‌ಗೆ ಆಕ್ಷನ್‌ - ಕಟ್‌?

ʻ777 ಚಾರ್ಲಿʼ ಡೈರೆಕ್ಟರ್‌ ಕಿರಣ್‌ರಾಜ್‌ಗೆ ಬಾಲಿವುಡ್‌ನಿಂದ ಬಂತು ಆಫರ್!‌

'777 ಚಾರ್ಲಿ' ಸಿನಿಮಾ ಮೂಲಕ ಜಾಗತಿಕ ಗಮನ ಸೆಳೆದಿದ್ದ ನಿರ್ದೇಶಕ ಕೆ. ಕಿರಣ್‌ರಾಜ್ ಅವರಿಗೆ ಬಾಲಿವುಡ್‌ನಿಂದ ಭಾರಿ ಆಫರ್ ಬಂದಿದೆ. ಪ್ರಮುಖ ನಿರ್ಮಾಣ ಸಂಸ್ಥೆ ಹಾಗೂ ಬಾಲಿವುಡ್ ನಟರಾದ ಸೈಫ್ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರೊಂದಿಗೆ ಕಿರಣ್‌ರಾಜ್ ಕಥೆಯ ಕುರಿತು ಚರ್ಚೆ ನಡೆಸಿದ್ದಾರೆ.

‘ರೋಡ್‌ ರೇಜ್‌’ ಕಿರುಚಿತ್ರ ಬಿಡುಗಡೆ ಮಾಡಿದ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌; ಸಾಥ್‌ ನೀಡಿದ 'ರೋರಿಂಗ್‌ ಸ್ಟಾರ್‌' ಶ್ರೀಮುರಳಿ

ʻರೋಡ್ ರೇಜ್ʼ ಕಿರುಚಿತ್ರ ಬಿಡುಗಡೆ; ಹಿನ್ನೆಲೆ ಧ್ವನಿ ನೀಡಿದ ನಟ ಶ್ರೀಮುರಳಿ

ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ಸವಾರರ ನಡುರಸ್ತೆ ಗಲಾಟೆಗಳನ್ನು ತಡೆಯಲು ನಿರ್ಮಾಣಗೊಂಡಿರುವ ‘ರೋಡ್‌ ರೇಜ್‌’ ಜಾಗೃತಿ ಕಿರುಚಿತ್ರವನ್ನು ನಗರ ಪೊಲೀಸ್ ಕಮಿಷನರ್ ಸೀಮಂತ್‌ ಕುಮಾರ್‌ ಸಿಂಗ್‌ ಬಿಡುಗಡೆಗೊಳಿಸಿದರು. ಸೂರ್ಯ ನಿರ್ದೇಶನದ ಹಾಗೂ ರಾಜಶೇಖರ್ ಸೋಮಶೇಖರ್ ನಿರ್ಮಿಸಿದ ಈ ಚಿತ್ರಕ್ಕೆ 'ರೋರಿಂಗ್ ಸ್ಟಾರ್' ಶ್ರೀಮುರಳಿ ಹಿನ್ನೆಲೆ ಧ್ವನಿ ನೀಡಿದ್ದಾರೆ.

'ರಾಕಿ ಭಾಯ್' ಮನೆಗೆ ಲಗ್ನಪತ್ರಿಕೆ ಹಿಡಿದು ಹೋದ ನಟ ಚಿಕ್ಕಣ್ಣ; ಯಶ್‌ - ರಾಧಿಕಾ ಪಂಡಿತ್‌ಗೆ ತಲುಪಿತು ಮದುವೆ ಆಹ್ವಾನ

ʻರಾಕಿ ಭಾಯ್‌ʼ ಯಶ್‌ ದಂಪತಿಗೆ ಮದುವೆ ಲಗ್ನಪತ್ರಿಕೆ ನೀಡಿದ ನಟ ಚಿಕ್ಕಣ್ಣ

ಸ್ಯಾಂಡಲ್‌ವುಡ್ ನಟ ಚಿಕ್ಕಣ್ಣ ಮತ್ತು ಪಾವನಾ ಅವರ ಮದುವೆಯನ್ನು ಆಗಸ್ಟ್ 29 ಮತ್ತು 30ರಂದು ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ಹಿರಿಯರು ನಿಶ್ಚಯಿಸಿದ್ದಾರೆ. ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು 'ರಾಕಿಂಗ್ ಸ್ಟಾರ್' ಯಶ್-ರಾಧಿಕಾ ದಂಪತಿಯನ್ನು ಖುದ್ದಾಗಿ ಭೇಟಿಯಾಗಿ ತಲುಪಿಸಿ ಹಾರೈಕೆ ಪಡೆದಿದ್ದಾರೆ ಚಿಕ್ಕಣ್ಣ.

Yash: ಮಗಳು ರಿಷಿಕಾ ಟೀಕಿಸುತ್ತಿರುವ ʻಟಾಕ್ಸಿಕ್‌ʼ ಸಿನಿಮಾವನ್ನು ಹೊಗಳಿದ್ದ ತಂದೆ ರಾಜೇಂದ್ರ ಸಿಂಗ್‌ ಬಾಬು! ಅಂದು ಈ ಹಿರಿಯ ನಿರ್ದೇಶಕರು ಹೇಳಿದ್ದೇನು?

Toxic: ಯಶ್‌ಗೆ ರಿಷಿಕಾ ಟೀಕೆ, ರಾಜೇಂದ್ರ ಸಿಂಗ್‌ ಬಾಬು ಕೊಂಡಾಡಿದ್ದೇಕೆ?

ಯಶ್ ನಟನೆಯ 'ಟಾಕ್ಸಿಕ್' ಸಿನಿಮಾವು ಆಗಸ್ಟ್ 26 ರಂದು ಬಿಡುಗಡೆಯಾಗಲಿದೆ. ಈಗಾಗಲೇ ಭಾರಿ ನಿರೀಕ್ಷೆ ಹುಟ್ಟಿಸಿರುವ ಈ ಸಿನಿಮಾವನ್ನು ನಟಿ ರಿಷಿಕಾ ಸಿಂಗ್ ಟೀಕಿಸಿದ್ದು, ಯಶ್ ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಈ ನಡುವೆ, ಅವರ ತಂದೆ ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ಈ ಹಿಂದೆಯೇ ಯಶ್ ಅವರ ಹೆಮ್ಮೆಯಿಂದ ಮಾತನಾಡಿದ್ದ ಸಂದರ್ಶನದ ವಿಡಿಯೋ ವೈರಲ್ ಆಗಿದೆ.

'ರಿಯಲ್‌ ಸ್ಟಾರ್‌' ಉಪೇಂದ್ರ ನಟನೆಯ 'ನೆಕ್ಸ್ಟ್‌ ಲೆವೆಲ್‌' ಚಿತ್ರಕ್ಕೆ ಮುಹೂರ್ತ: ಉಪ್ಪಿಗೆ ಜೋಡಿಯಾದ ಆರಾಧನಾ ರಾಮ್‌, ಸಾಥ್‌ ನೀಡಿದ ನಿರಂಜನ್‌!

Next Level Movie: ಉಪೇಂದ್ರಗೆ ಜೋಡಿಯಾದ ಮಾಲಾಶ್ರೀ ಮಗಳು ಆರಾಧನಾ ರಾಮ್‌

'ರಿಯಲ್ ಸ್ಟಾರ್' ಉಪೇಂದ್ರ ಅಭಿನಯದ, ಅರವಿಂದ್ ಕೌಶಿಕ್ ನಿರ್ದೇಶನದ 'ನೆಕ್ಸ್ಟ್ ಲೆವೆಲ್' ದ್ವಿಭಾಷಾ ಸಿನಿಮಾದ ಮುಹೂರ್ತ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿದೆ. 'ಕಾಟೇರ' ಖ್ಯಾತಿಯ ಆರಾಧನಾ ರಾಮ್ ನಾಯಕಿಯಾಗಿದ್ದು, ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ಪ್ರಮುಖ ಪಾತ್ರದಲ್ಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್; ಪ್ರದೋಷ್‌ ಮಾಫಿ ಸಾಕ್ಷಿ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್!

ಪ್ರದೋಷ್‌ ಮಾಫಿ ಸಾಕ್ಷಿ ವಿಚಾರವಾಗಿ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ-14 ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ'ಯಾಗಲು ಸಿಸಿಹೆಚ್‌ ಕೋರ್ಟ್‌ ನೀಡಿದ್ದ ಅನುಮತಿಯನ್ನು ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಮಾಫಿ ಸಾಕ್ಷಿ ಅರ್ಜಿಯ ಆಕ್ಷೇಪಣೆಗೆ ಸಿಸಿಹೆಚ್‌ ಕೋರ್ಟ್‌ ಅವಕಾಶ ನೀಡಿರಲಿಲ್ಲವೆಂದು ಹಿರಿಯ ವಕೀಲ ಹಷ್ಮತ್ ಪಾಷಾ ಮೇಲ್ಮನವಿ ಸಲ್ಲಿಸಿದ್ದು, ಹೈಕೋರ್ಟ್‌ ತುರ್ತು ವಿಚಾರಣೆ ಕೈಗೆತ್ತಿಕೊಳ್ಳಲಿದೆ.

KBC 18: ಅಮಿತಾಭ್ ಬಚ್ಚನ್ ಶೋನಲ್ಲಿ ಯಶ್ ಹವಾ; ರಾಕಿಂಗ್‌ ಸ್ಟಾರ್‌ ಬಗ್ಗೆ ಪ್ರಶ್ನೆ ಏನು?

ಅಮಿತಾಭ್ ಶೋನಲ್ಲಿ ಯಶ್ ಹವಾ; ರಾಕಿಂಗ್‌ ಸ್ಟಾರ್‌ ಬಗ್ಗೆ ಪ್ರಶ್ನೆ ಏನು?

KBC 18: (ಕೆಬಿಸಿ) (KBC18) ಪ್ರಸ್ತುತ ತನ್ನ 18 ನೇ ಸೀಸನ್ ನಲ್ಲಿದೆ. ಆಗಸ್ಟ್ 10 ರಂದು ಪ್ರಥಮ ಪ್ರದರ್ಶನಗೊಂಡಿತು, ಅಮಿತಾಬ್ ಬಚ್ಚನ್ ನಿರೂಪಕರಾಗಿ ಮರಳಿದ್ದಾರೆ. ಇತ್ತೀಚಿನ ಸಂಚಿಕೆಯ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಯಶ್ ಅವರ ಮುಂಬರುವ ಚಿತ್ರ ಟಾಕ್ಸಿಕ್ ಬಿಡುಗಡೆಗೆ ಮುಂಚಿತವಾಗಿ ಅವರ ಬಗ್ಗೆ ಪ್ರಶ್ನೆಯನ್ನು ಒಳಗೊಂಡಿದೆ . 'ಕೆಜಿಎಫ್' ಸರಣಿಯ ಯಶಸ್ಸಿನ ನಂತರ ಯಶ್ ಅವರ ಜನಪ್ರಿಯತೆಯು ರಾಷ್ಟ್ರೀಯ ಹಾಗೂ ಜಾಗತಿಕ ಮಟ್ಟಕ್ಕೆ ತಲುಪಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Shakeela: ಅತಿಯಾದ ಮೊಬೈಲ್ ಬಳಕೆ; ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ

ಅತಿಯಾದ ಮೊಬೈಲ್ ಬಳಕೆ; ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಟಿ ಶಕೀಲಾ

Shakeela: ಕುತ್ತಿಗೆಯ ನರಕ್ಕೆ ತೀವ್ರ ಹಾನಿಯಾದ ನಂತರ ನಟಿ ಶಕೀಲಾ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಚಿಕಿತ್ಸೆಯ ನಂತರ ಮನೆಗೆ ಹಿಂದಿರುಗಿದ ನಂತರ, ನಟಿ ತಮ್ಮ ಆರೋಗ್ಯ ಸ್ಥಿತಿ ಮತ್ತು ಅವರು ಎದುರಿಸಿದ ತೊಂದರೆಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

Bigg Boss 20: ‘ಬಿಗ್ ಬಾಸ್ 20’ ಟ್ರೇಲರ್ ಔಟ್‌; ಈ ಸಲ ಕೂಡ ಇರಲಿದೆ ಬಿಗ್‌ ಟ್ವಿಸ್ಟ್‌

‘ಬಿಗ್ ಬಾಸ್ 20’ ಟ್ರೇಲರ್ ಔಟ್‌; ಈ ಸಲ ಕೂಡ ಇರಲಿದೆ ಬಿಗ್‌ ಟ್ವಿಸ್ಟ್‌

Bigg Boss 20: ಬಿಗ್ ಬಾಸ್ ಹಿಂದಿ ಸೀಸನ್ 20ರ (Bigg Boss Hindi 20) ಅಧಿಕೃತ ಟ್ರೇಲರ್ (Trailer) ಅನ್ನು ಅನಾವರಣಗೊಳಿಸಲಾಗಿದ್ದು, ಸಲ್ಮಾನ್ ಖಾನ್ "ಎಕ್ಸ್‌ಟ್ರಾ ಜೀವನ್ ದಾನ್" ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ್ದಾರೆ. ಈ ಹೊಸ ನಿಯಮವು ಸ್ಪರ್ಧಿಗಳ ಆಟದ ರೀತಿ ಹಾಗೂ ಅವರು ತೆಗೆದುಕೊಳ್ಳುವ ನಿರ್ಧಾರಗಳನ್ನು ಸಂಪೂರ್ಣವಾಗಿ ಬದಲಾಯಿಸುವ ಸಾಧ್ಯತೆಯಿದೆ.

‘ಶಾಂತಿ ಕ್ರಾಂತಿ’ ರೀ-ರಿಲೀಸ್‌ ಮಾಡೋಕೆ ರೈಟ್ಸ್‌ ಕೇಳಲು ಹೋದವರಿಗೆ ʻಕ್ರೇಜಿ ಸ್ಟಾರ್‌ʼ ರವಿಚಂದ್ರನ್‌ ಹೇಳಿದ್ದೇನು?

ʻಶಾಂತಿ ಕ್ರಾಂತಿʼ ರೀ- ರಿಲೀಸ್‌ ಬಗ್ಗೆ ರವಿಚಂದ್ರನ್ ಏನಂದ್ರು ಗೊತ್ತಾ?

‘ಕ್ರೇಜಿ ಸ್ಟಾರ್’ ರವಿಚಂದ್ರನ್ ಅವರ ‘ಶಾಂತಿ ಕ್ರಾಂತಿ’ ಸಿನಿಮಾ ರೀ-ರಿಲೀಸ್ ಕುರಿತ ವದಂತಿಗಳಿಗೆ ನಿರ್ದೇಶಕ ರವೀಂದ್ರ ವೆಂಶಿ ಫೇಸ್‌ಬುಕ್ ಪೋಸ್ಟ್ ಮೂಲಕ ಒಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಅದರ ರಿಲೀಸ್‌ ಹಕ್ಕುಗಳನ್ನು ಕೇಳಲು ಹೋದಾಗ, ರವಿಚಂದ್ರನ್ ಏನು ಹೇಳಿದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ.

ಸೈಫ್‌ ಅಲಿ ಖಾನ್‌ ಎದುರು ಅಕ್ಷಯ್‌ ಕುಮಾರ್ ಸೈಕೋ ವಿಲನ್‌;‌ ʻಹೈವಾನ್‌ʼ ಸಿನಿಮಾ ಟೀಸರ್‌ ರಿಲೀಸ್, ಬಾಲಿವುಡ್‌ಗೆ KVN ಪ್ರೊಡಕ್ಷನ್ಸ್‌ ಎಂಟ್ರಿ!

Haiwaan Teaser: ಸೈಫ್‌ ಅಲಿ ಖಾನ್‌ ಎದುರು ಅಕ್ಷಯ್‌ ಕುಮಾರ್ ಸೈಕೋ ವಿಲನ್‌!

ಅಕ್ಷಯ್ ಕುಮಾರ್ ಮತ್ತು ಸೈಫ್ ಅಲಿ ಖಾನ್ ಅಭಿನಯದ 'ಹೈವಾನ್' ಸಿನಿಮಾದ 45 ಸೆಕೆಂಡುಗಳ ಟೀಸರ್ ಬಿಡುಗಡೆಯಾಗಿದೆ. ಕನ್ನಡದ ಪ್ರಸಿದ್ಧ 'ಕೆವಿಎನ್ ಪ್ರೊಡಕ್ಷನ್ಸ್' ನಿರ್ಮಿಸಿರುವ ಈ ಕ್ರೈಮ್-ಥ್ರಿಲ್ಲರ್ ಚಿತ್ರಕ್ಕೆ ಪ್ರಿಯದರ್ಶನ್ ನಿರ್ದೇಶನವಿದೆ. ಮಲಯಾಳಂನ 'ಒಪ್ಪಂ' ರಿಮೇಕ್ ಆಗಿರುವ ಈ ಚಿತ್ರದಲ್ಲಿ ಸೈಫ್ ಅಂಧನಾಗಿ ನಟಿಸಿದ್ದರೆ, ಅಕ್ಷಯ್ ಸೈಕೋ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಜಿಯೋಸ್ಟಾರ್‌ನಲ್ಲಿ ಪ್ರೀಮಿಯರ್ ಲೀಗ್‌ಗೆ ಭರ್ಜರಿ ಸ್ಪಂದನೆ; 9 ಬಿಲಿಯನ್ ನಿಮಿಷಕ್ಕೂ ಅಧಿಕ ವೀಕ್ಷಣೆ!

ಜಿಯೋಸ್ಟಾರ್‌ನಲ್ಲಿ ಪ್ರೀಮಿಯರ್ ಲೀಗ್ ದಾಖಲೆ; 9 ಬಿಲಿಯನ್ ನಿಮಿಷ ವೀಕ್ಷಣೆ

ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಯ ಭರ್ಜರಿ ಜನಪ್ರಿಯತೆಯನ್ನು ಎತ್ತಿಹಿಡಿಯುವ ‘ದಿ ಬ್ಯೂಟಿಫುಲ್ ಗೇಮ್‌ಸ್ ಇಂಡಿಯನ್ ಡೆಕೇಡ್’ ವರದಿಯನ್ನು ಜಿಯೋಸ್ಟಾರ್ ಬಿಡುಗಡೆ ಮಾಡಿದೆ. 2025/26ರ ಪ್ರೀಮಿಯರ್ ಲೀಗ್ ಟೂರ್ನಿಯು ಬರೋಬ್ಬರಿ 9.04 ಬಿಲಿಯನ್ ನಿಮಿಷಗಳಷ್ಟು ವೀಕ್ಷಣೆ ಪಡೆದು ಹೊಸ ದಾಖಲೆ ಬರೆದಿದೆ.

ಕನ್ನಡಕ್ಕೆ ನಟಿ ಮಾಧುರಿ ದೀಕ್ಷಿತ್ ಎಂಟ್ರಿ; ಶಿವಣ್ಣನ ʻಎ ಫಾರ್‌ ಆನಂದ್‌ʼ ಚಿತ್ರಕ್ಕಾಗಿ ಬರ್ತಾರಾ ʻಧಕ್ ಧಕ್ʼ ಬ್ಯೂಟಿ?

ಬಾಲಿವುಡ್‌ ನಟಿ ಮಾಧುರಿ ದೀಕ್ಷಿತ್ ಕನ್ನಡಕ್ಕೆ ಎಂಟ್ರಿ?

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅಭಿನಯದ ಹಾಗೂ ಶ್ರೀನಿ ನಿರ್ದೇಶನದ 'ಎ ಫಾರ್ ಆನಂದ್' ಸಿನಿಮಾದ ಪ್ರಮುಖ ಪಾತ್ರಕ್ಕಾಗಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಕರೆತರಲು ಚಿತ್ರತಂಡ ಪ್ಲ್ಯಾನ್‌ ಮಾಡಿಕೊಂಡಿದೆ. ಗೀತಾ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದಲ್ಲಿ ಗುರು-ಶಿಷ್ಯರ ಕಥೆ ಇದೆ.

ʻಗಂಡುಮಕ್ಕಳಿಗೆ ಮರ್ಯಾದೆ ಇದ್ದರೆ ಚಂದ ಕಂದʼ; ಪಂಚಿಂಗ್‌ ಡೈಲಾಗ್‌ ಹೊಡೆಯುತ್ತ ʻಟಾಕ್ಸಿಕ್‌ʼ ಹೀರೋ ಯಶ್‌ಗೆ ಟಕ್ಕರ್‌ ಕೊಟ್ರಾ ರಿಷಿಕಾ ಸಿಂಗ್?

'ಟಾಕ್ಸಿಕ್'ಗೆ ಟಾಂಗ್‌‌ ಕೊಟ್ಟ ನಟಿ ರಿಷಿಕಾ ಸಿಂಗ್; ಯಶ್ ಫ್ಯಾನ್ಸ್ ಗರಂ!

ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟ್ರೇಲರ್ ವಿಶ್ವದಾದ್ಯಂತ ಭಾರಿ ಮೆಚ್ಚುಗೆ ಪಡೆಯುತ್ತಿರುವ ಬೆನ್ನಲ್ಲೇ, ನಟಿ ರಿಷಿಕಾ ಸಿಂಗ್ ಯಶ್ ವಿರುದ್ಧ ನೀಡಿದ ವೀಡಿಯೋ ಹೇಳಿಕೆ ಕ್ರಾಂತಿಕಾರಕ ವಿವಾದಕ್ಕೆ ಕಾರಣವಾಗಿದೆ. ಟ್ರೇಲರ್‌ನಲ್ಲಿನ ದೃಶ್ಯಗಳನ್ನು ಲೇವಡಿ ಮಾಡಿ ಯಶ್‌ಗೆ ಕರ್ನಾಟಕದಿಂದ ಜಾಗ ಖಾಲಿ ಮಾಡಿಸುವುದಾಗಿ ರಿಷಿಕಾ ಎಚ್ಚರಿಸಿದ್ದಾರೆ.

ಶಬರಿಮಲೆಯಲ್ಲಿ ಶೂಟಿಂಗ್‌ ಮಾಡಲು ಮೋಹನ್‌ಲಾಲ್ ನಟನೆಯ 'ಅತಿಮನೋಹರಂ' ಚಿತ್ರತಂಡಕ್ಕೆ ಅನುಮತಿ; ಕಟ್ಟುನಿಟ್ಟಿನ ಷರತ್ತು ವಿಧಿಸಿದ ದೇವಸ್ವಂ ಮಂಡಳಿ!

Mohanlal: ಶಬರಿಮಲೆಯಲ್ಲಿ ಶೂಟಿಂಗ್‌ ಮಾಡಲು 'ಅತಿಮನೋಹರಂ' ಟೀಮ್‌ಗೆ ಅನುಮತಿ!

ಮಲಯಾಳಂ ʻಸೂಪರ್‌ಸ್ಟಾರ್ʼ ಮೋಹನ್‌ಲಾಲ್ ಅಭಿನಯದ 'ಅತಿಮನೋಹರಂ' ಚಿತ್ರೀಕರಣಕ್ಕೆ ಶಬರಿಮಲೆ ಸನ್ನಿಧಾನದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿಯು ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ಅನುಮತಿ ನೀಡಿದೆ. ತರುಣ್ ಮೂರ್ತಿ ನಿರ್ದೇಶನದ ಈ ಸಿನಿಮಾದಲ್ಲಿ ಮೋಹನ್‌ಲಾಲ್ ಸಬ್-ಇನ್ಸ್‌ಪೆಕ್ಟರ್ ಪಾತ್ರದಲ್ಲಿದ್ದು, ಡಿಸೆಂಬರ್ 24 ರಂದು ಚಿತ್ರ ಬಿಡುಗಡೆಯಾಗಲಿದೆ.

ಆಸ್ಕರ್ ವಿಜೇತ 'ನಾಟು ನಾಟು' ಹಾಡಿನ ಗಾಯಕ ರಾಹುಲ್ ಸಿಪ್ಲಿಗಂಜ್ ವಿರುದ್ಧ FIR: ಬೆದರಿಕೆ, ಬ್ಲ್ಯಾಕ್‌ಮೇಲ್ ಆರೋಪ ಹೊರಿಸಿದ ಯುವತಿ!

ಆಸ್ಕರ್ ವಿಜೇತ 'ನಾಟು ನಾಟು' ಹಾಡಿನ ಗಾಯಕ ರಾಹುಲ್ ಸಿಪ್ಲಿಗಂಜ್‌ಗೆ ಸಂಕಷ್ಟ!

ಆಸ್ಕರ್ ಪ್ರಶಸ್ತಿ ವಿಜೇತ 'ಆರ್‌ಆರ್‌ಆರ್' ಚಿತ್ರದ 'ನಾಟು ನಾಟು' ಹಾಡಿನ ಗಾಯಕ ಹಾಗೂ ಬಿಗ್ ಬಾಸ್ ತೆಲುಗು 3 ವಿಜೇತ ರಾಹುಲ್ ಸಿಪ್ಲಿಗಂಜ್ ವಿರುದ್ಧ ವಿಶಾಖಪಟ್ಟಣದಲ್ಲಿ ಎಫ್‌ಐಆರ್ ದಾಖಲಾಗಿದೆ. ಯುವತಿಯೊಬ್ಬರು ರಾಹುಲ್ ಸೇರಿದಂತೆ ಒಟ್ಟು 12 ಜನರ ವಿರುದ್ಧ ದೂರು ನೀಡಿದ್ದಾರೆ.

‘ಡಿಸಿ’ ಸೂಪರ್‌ ಹಿಟ್‌ ಬೆನ್ನಲ್ಲೇ ರಿಷಬ್‌ ಶೆಟ್ಟಿ ನಟನೆಯ ‘ಜೈ ಹನುಮಾನ್‌’ ಸಿನಿಮಾಗೆ ನಾಯಕಿಯಾದ ವಾಮಿಕಾ ಗಬ್ಬಿ!

'ಡಿಸಿ' ನಟಿ ವಾಮಿಕಾಗೆ ಜ್ಯಾಕ್‌ಪಾಟ್‌; ರಿಷಬ್‌ ಶೆಟ್ಟಿ ಸಿನಿಮಾಕ್ಕೆ ನಾಯಕಿ!

ನಿರ್ದೇಶಕ ಲೋಕೇಶ್‌ ಕನಕರಾಜ್‌ ನಟನೆಯ 'ಡಿಸಿ' ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿಗೂ ಹೆಚ್ಚು ಕಲೆಕ್ಷನ್‌ ಮಾಡಿ ಯಶಸ್ಸು ಕಂಡ ಬೆನ್ನಲ್ಲೇ, ನಟಿ ವಾಮಿಕಾ ಗಬ್ಬಿ ಅವರಿಗೆ ಬೃಹತ್ ಪ್ಯಾನ್ ಇಂಡಿಯಾ ಆಫರ್ ಸಿಕ್ಕಿದೆ. 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ, ಪ್ರಶಾಂತ್ ವರ್ಮಾ ನಿರ್ದೇಶನದ 'ಜೈ ಹನುಮಾನ್' ಚಿತ್ರತಂಡವನ್ನು ಅವರು ಸೇರಿಕೊಂಡಿದ್ದಾರೆ.

ಜನಪ್ರಿಯ ‘ಆಪ್ ಕಿ ಅದಾಲತ್’ ಶೋನಲ್ಲಿ ʻರಾಕಿಂಗ್ ಸ್ಟಾರ್ʼ ಯಶ್; ಮೋದಿ, ವಾಜಪೇಯಿ ಕುಳಿತ ಕುರ್ಚಿಯಲ್ಲಿ ಈಗ ಕನ್ನಡಿಗ ರಾಕಿ ಭಾಯ್‌ಗೆ ಸ್ಥಾನ!

‌ʻಆಪ್ ಕಿ ಅದಾಲತ್‌ʼ ಶೋನಲ್ಲಿ ಕನ್ನಡಿಗ ನಟ ಯಶ್; ಫ್ಯಾನ್ಸ್‌ ಫುಲ್‌ ಖುಷ್!

'ಕೆಜಿಎಫ್', 'ಟಾಕ್ಸಿಕ್' ನಟ ಯಶ್ ಅವರು ಪತ್ರಕರ್ತ ರಜತ್ ಶರ್ಮಾ ನಿರೂಪಣೆಯ ಪ್ರಸಿದ್ಧ 'ಆಪ್ ಕಿ ಅದಾಲತ್' ಶೋನಲ್ಲಿ ಭಾಗವಹಿಸಿದ ಮೊಟ್ಟಮೊದಲ ಅಪ್ಪಟ ಕನ್ನಡಿಗ ಎಂಬ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಾಲಿವುಡ್ ಸೂಪರ್‌ಸ್ಟಾರ್‌ಗಳು ಕುಳಿತಿದ್ದ ಕಟಕಟೆಯಲ್ಲಿ ಕುಳಿತ ಯಶ್ ಅವರ ಶ್ರಮವನ್ನು ರಜತ್ ಶರ್ಮಾ ಕೊಂಡಾಡಿದ್ದಾರೆ.

ʻಮನೆಯಲ್ಲಿದ್ದ ಹಣಕಾಸಿನ ಸಮಸ್ಯೆಯಿಂದಾಗಿ ನಾನು ನಟನಾದೆʼ; ಸೂರ್ಯ ಬಿಚ್ಚಿಟ್ಟ ಅಸಲಿ ಸತ್ಯ ಇದು!

ʻಮನೆಯಲ್ಲಿದ್ದ ಹಣಕಾಸಿನ ಸಮಸ್ಯೆಯಿಂದಾಗಿ ನಾನು ನಟನಾದೆʼ ಎಂದ ಸೂರ್ಯ

'ವಿಶ್ವನಾಥ್ ಅಂಡ್ ಸನ್ಸ್' ಸಿನಿಮಾದ ಪ್ರಚಾರದ ವೇಳೆ ತಮಿಳು ನಟ ಸೂರ್ಯ ಕೆಲ ರೋಚಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ತಮಗೆ ನಟನೆಯ ಯಾವುದೇ ತರಬೇತಿ ಇರಲಿಲ್ಲ, ಕೇವಲ ಮನೆಯಲ್ಲಿದ್ದ ತೀವ್ರ ಆರ್ಥಿಕ ಕಷ್ಟದಿಂದಾಗಿ ಹಣ ಗಳಿಸಲು ನಟನಾದೆ ಎಂದು ಸೂರ್ಯ ಹೇಳಿದ್ದಾರೆ.

Loading...