ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Reba Monica: ಮಗಳು ಹುಟ್ಟಿದ ಸಿಹಿ ಸುದ್ದಿ ಹಂಚಿಕೊಂಡ 'ರತ್ನನ್‌ ಪ್ರಪಂಚ' ನಟಿ ರೆಬಾ

ಮಗಳು ಹುಟ್ಟಿದ ಸಿಹಿ ಸುದ್ದಿ ಹಂಚಿಕೊಂಡ 'ರತ್ನನ್‌ ಪ್ರಪಂಚ' ನಟಿ ರೆಬಾ

Reba Monica: ʻರತ್ನನ್‌ ಪ್ರಪಂಚʼ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ 2022ರಲ್ಲಿ ಅವರು ಜೋಮನ್ ಜೋಸೆಫ್ ಅವರನ್ನು ಮದುವೆಯಾಗಿದ್ದರು. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಈ ಹಿಂದೆ ತಿಳಿಸಿದ್ದರು. ಈಗ, ತಮಗೆ ಹೆಣ್ಣು ಮಗು (Girl Child) ಜನಿಸಿರುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ರೇಬಾ ಮೋನಿಕಾ ಜಾನ್ ತಮ್ಮ ಮಗುವಿನ ಕೆಲವು ಮೊದಲ ಫೋಟೋಗಳನ್ನು ಸಹ ಬಿಡುಗಡೆ ಮಾಡಿದರು.

Prajwal Devaraj: ಗಲ್ಫ್ ರಾಷ್ಟ್ರಗಳಲ್ಲಿ ರಿಲೀಸ್‌ ಆಗಲಿದೆ ಕನ್ನಡದ ʻಕರಾವಳಿʼ; ಈವರೆಗೂ ಈ ಸಿನಿಮಾ ಬಾಚಿಕೊಂಡ ಹಣವೆಷ್ಟು?

ವಿದೇಶದಲ್ಲಿ ರಿಲೀಸ್‌ ಆಗಲಿದೆ ʻಕರಾವಳಿʼ; ಈವರೆಗೂ ಎಷ್ಟಾಯ್ತು ಕಲೆಕ್ಷನ್‌?

ಪ್ರಜ್ವಲ್ ದೇವರಾಜ್ ಹಾಗೂ ರಾಜ್ ಬಿ. ಶೆಟ್ಟಿ ಅಭಿನಯದ 'ಕರಾವಳಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿ, ಭರ್ಜರಿ ಯಶಸ್ಸು ಕಂಡಿದೆ. ಕಂಬಳದ ಹಿನ್ನೆಲೆಯ ಈ ಚಿತ್ರವು ಜುಲೈ 31ರಿಂದ ದುಬೈ ಹಾಗೂ ಅಬುಧಾಬಿಯಲ್ಲಿ ಬಿಡುಗಡೆಯಾಗಲಿದೆ.

'ಬುಲ್ಲಿ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ಊರ್ವಶಿ ಪುತ್ರಿ ತೇಜಾ; ಹೀರೋ ʻಬಿಗ್‌ ಬಾಸ್‌ʼ ಭುವನ್‌ ಹೇಳಿದ್ದೇನು?

ಸ್ಯಾಂಡಲ್‌ವುಡ್‌ಗೆ ನಟಿ ಊರ್ವಶಿ ಪುತ್ರಿ ತೇಜಾ ಎಂಟ್ರಿ; ಸಿನಿಮಾದ ಹೆಸರೇನು?

'ಬಿಗ್ ಬಾಸ್' ಖ್ಯಾತಿಯ ಭುವನ್ ಪೊನ್ನಣ್ಣ ನಾಯಕನಾಗಿ ನಟಿಸುತ್ತಿರುವ 'ಬುಲ್ಲಿ' ಚಿತ್ರದ ಮೂಲಕ ಬಹುಭಾಷಾ ಹಿರಿಯ ನಟಿ ಊರ್ವಶಿ ಅವರ ಮಗಳು ತೇಜಾ ನಾಯರ್ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. 10 ವರ್ಷಗಳ ನಂತರ ಕನ್ನಡಕ್ಕೆ ಮರಳಿರುವ ಊರ್ವಶಿ ಕೂಡ ಈ ಚಿತ್ರದಲ್ಲಿದ್ದು, ಈಗಾಗಲೇ ಮೊದಲ ಹಂತದ ಶೂಟಿಂಗ್ ಪೂರ್ಣಗೊಂಡಿದೆ.

Rao Bahadur OTT Release: ಸತ್ಯದೇವ್ ಅವರ 'ರಾವ್ ಬಹದ್ದೂರ್' ಈ ಒಟಿಟಿಯಲ್ಲಿ ಬಿಡುಗಡೆ

ಸತ್ಯದೇವ್ ಅವರ 'ರಾವ್ ಬಹದ್ದೂರ್' ಈ ಒಟಿಟಿಯಲ್ಲಿ ಬಿಡುಗಡೆ

Rao Bahadur OTT Release: ರಾವ್ ಬಹದ್ದೂರ್ ಒಂದು ಮನೋವೈಜ್ಞಾನಿಕ ಡಾರ್ಕ್ ಕಾಮಿಡಿ ಚಿತ್ರವಾಗಿದ್ದು, ಇದನ್ನು ವೆಂಕಟೇಶ್ ಮಹಾ ಬರೆದು, ನಿರ್ದೇಶಿಸಿ, ಸಂಪಾದಿಸಿದ್ದಾರೆ. 2020 ರ ಉಮಾ ಮಹೇಶ್ವರ ಉಗ್ರ ರೂಪಸ್ಯ ಚಿತ್ರದ ನಂತರ ಸತ್ಯದೇವ್ ಅವರೊಂದಿಗಿನ ಅವರ ಎರಡನೇ ಚಿತ್ರ ಇದಾಗಿದ್ದು, ಇದು 2016 ರ ಫಹದ್ ಫಾಸಿಲ್ ಅಭಿನಯದ ಮಹೇಶಿಂತೆ ಪ್ರತಿಕಾರಂ ಚಿತ್ರದ ರಿಮೇಕ್ ಆಗಿದೆ.

ಅಯ್ಯೋ, ಶುರುವಾಗುವುದಕ್ಕೂ ಮುನ್ನ ನಿಂತುಹೋಯ್ತಾ ರಿಷಬ್‌ ಶೆಟ್ಟಿಯ ಪ್ಯಾನ್‌ ಇಂಡಿಯಾ ಸಿನಿಮಾ? ಟಾಲಿವುಡ್‌ನಿಂದ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!

ಶುರುವಾಗೋ ಮುನ್ನವೇ ನಿಂತುಹೋಯ್ತಾ ನಟ ರಿಷಬ್ ಶೆಟ್ಟಿಯ ಬಿಗ್ ಬಜೆಟ್ ಸಿನಿಮಾ?

'ಕಾಂತಾರ: ಚಾಪ್ಟರ್ 1' ಖ್ಯಾತಿಯ ರಿಷಬ್ ಶೆಟ್ಟಿ ಹಾಗೂ ತೆಲುಗಿನ ಪ್ರತಿಷ್ಠಿತ 'ಸಿತಾರಾ ಎಂಟರ್‌ಟೇನ್‌ಮೆಂಟ್ಸ್' ಕಾಂಬಿನೇಷನ್‌ನ 18ನೇ ಶತಮಾನದ ಐತಿಹಾಸಿಕ ಆಕ್ಷನ್ ಸಿನಿಮಾ ರದ್ದಾಗಿದೆ ಎಂದು ವರದಿಯಾಗಿದೆ. ನಿರ್ದೇಶಕ ಅಶ್ವಿನ್ ಗಂಗರಾಜು ಸಾರಥ್ಯದ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಾಪಕ ನಾಗವಂಶಿ ಯೋಜನೆ ಕೈಬಿಡಲು ಕಾರಣ ಏನು?

‘ಸೋಲ್‌ಮೇಟ್’ ಚಿತ್ರದ ಪೋಸ್ಟರ್ ಅನಾವರಣಗೊಳಿಸಿದ ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್

‘ಸೋಲ್‌ಮೇಟ್’ ಚಿತ್ರದ ಫಸ್ಟ್‌ಲುಕ್‌ ರಿಲೀಸ್‌ ಮಾಡಿದ ನಟ ಶಿವರಾಜ್‌ಕುಮಾರ್‌

‘4N6’ ಚಿತ್ರದ ಮೂಲಕ ಗಮನಸೆಳೆದಿದ್ದ ನಟ ನವೀನ್ ಕುಮಾರ್ ಸ್ವತಃ ನಿರ್ದೇಶಿಸಿ, ನಟಿಸುತ್ತಿರುವ 'ಸೋಲ್‌ಮೇಟ್' ಸಿನಿಮಾದ ಆಕರ್ಷಕ ಪೋಸ್ಟರ್ ಅನ್ನು ನಟ ಡಾ. ಶಿವರಾಜ್‌ಕುಮಾರ್ ಅನಾವರಣಗೊಳಿಸಿದ್ದಾರೆ. 'ಅಭ್ಯುದಯ ಪ್ರೊಡಕ್ಷನ್' ಬ್ಯಾನರ್ ಅಡಿಯಲ್ಲಿ ನವೀನ್ ಗೌಡ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಕಿರುತೆರೆ ಖ್ಯಾತಿಯ ಶಿಲ್ಪಾ ಹಾಗೂ ಸೌಜನ್ಯ ನಾಯಕಿಯರಾಗಿದ್ದಾರೆ.

ಮಣಿಕಟ್ಟು ‌ಸರ್ಜರಿ‌ ಯಶಸ್ವಿ: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬೆನ್ನಲ್ಲೇ ಪತ್ನಿ ಜೊತೆ ಕೊಯಮತ್ತೂರಿನ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ನಟ ರಾಮ್ ಚರಣ್ ಭೇಟಿ!

‌ಸರ್ಜರಿಯಾದ ಎರಡೇ ದಿನಕ್ಕೆ ಟೆಂಪಲ್‌ ರನ್‌ ಆರಂಭಿಸಿದ ನಟ ರಾಮ್‌ ಚರಣ್

'ಪೆದ್ದಿ' ಚಿತ್ರೀಕರಣದ ವೇಳೆ ಮಣಿಕಟ್ಟಿನ ಗಾಯಕ್ಕೆ ಒಳಗಾಗಿದ್ದ ನಟ ರಾಮ್ ಚರಣ್ ಅವರಿಗೆ ಕೊಯಮತ್ತೂರಿನ ಗಂಗಾ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ತಕ್ಷಣವೇ ಪತ್ನಿ ಉಪಾಸನಾ ಜೊತೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ರಿಷಬ್ ಶೆಟ್ಟಿಗೆ ‘ಲೀಡರ್‌ಶಿಪ್ ಇನ್ ಸಿನಿಮಾ’ ಅಂತಾರಾಷ್ಟ್ರೀಯ ಅವಾರ್ಡ್; ಮೆಲ್ಬೋರ್ನ್ ಚಲನಚಿತ್ರೋತ್ಸವದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪ್ರದಾನ

ನಟ ರಿಷಬ್ ಶೆಟ್ಟಿಗೆ ಸಿಕ್ತು ‘ಲೀಡರ್‌ಶಿಪ್ ಇನ್ ಸಿನಿಮಾ’ ಪ್ರಶಸ್ತಿ!

'ಕಾಂತಾರ' ಚಿತ್ರದ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತೀಯ ಚಿತ್ರರಂಗದ ಕೀರ್ತಿ ಹೆಚ್ಚಿಸಿದ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 'ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಆಫ್ ಮೆಲ್ಬೋರ್ನ್' (IFFM) 2026 ರಲ್ಲಿ ಪ್ರತಿಷ್ಠಿತ 'ಲೀಡರ್‌ಶಿಪ್ ಇನ್ ಸಿನಿಮಾ ಅವಾರ್ಡ್' ನೀಡಲಾಗುತ್ತಿದೆ.

‘ನನ್ನ ತಂದೆ ಸಾಯುವುದಕ್ಕೆ ನಾನೇ ಸಹಾಯ ಮಾಡಿದೆ’; ಹೃದಯವಿದ್ರಾವಕ ಸತ್ಯ ಬಿಚ್ಚಿಟ್ಟ ನಟ ರಾಮ್ ಕಪೂರ್! ಅಷ್ಟಕ್ಕೂ ಆಗಿದ್ದೇನು?

‘ನನ್ನ ತಂದೆ ಸಾಯುವುದಕ್ಕೆ ನಾನೇ ಸಹಾಯ ಮಾಡಿದೆ’- ಬಾಲಿವುಡ್‌ ನಟ ರಾಮ್ ಕಪೂರ್

'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಟ ರಾಮ್ ಕಪೂರ್ ತಮ್ಮ ತಂದೆಯ ಸಾವಿನ ಅತ್ಯಂತ ಹೃದಯವಿದ್ರಾವಕ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆಯ ಅಂತಿಮ ಇಚ್ಛೆಯಂತೆ, ಅವರು ಗೌರವಯುತವಾಗಿ ಕೊನೆಯುಸಿರೆಳೆಯಲು ತಾವೇ ನೆರವಾಗಿದ್ದಾಗಿ ಹೇಳಿದ್ದಾರೆ.

ನೆಚ್ಚಿನ ಅಭಿಮಾನಿಗಳಿಗೆ 5 ಲಕ್ಷ ರೂ. ಅಪಘಾತ ವಿಮೆ ಮಾಡಿಸಿದ ಅಲ್ಲು ಅರ್ಜುನ್‌; ರಿಯಲ್‌ ಲೈಫ್‌ನಲ್ಲೂ ಹೀರೋ ಎನಿಸಿಕೊಂಡ ಪುಷ್ಪರಾಜ್

ವಾವ್! ಅಭಿಮಾನಿಗಳಿಗೆ ಅಪಘಾತ ವಿಮೆ ಮಾಡಿಸಿದ ನಟ ಅಲ್ಲು ಅರ್ಜುನ್‌

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಹೈದರಾಬಾದ್‌ನಲ್ಲಿ ನಡೆದ 'AAFA Annual Summit 2026' ಫ್ಯಾನ್ಸ್ ಮೀಟ್‌ನಲ್ಲಿ ಭಾಗವಹಿಸಿ, ಆಗಮಿಸಿದ್ದ 1,000ಕ್ಕೂ ಹೆಚ್ಚು ಅಭಿಮಾನಿಗಳಿಗೆ ಭಾರಿ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿಗೂ 3 ರಿಂದ 5 ಲಕ್ಷ ರೂಪಾಯಿ ಮೌಲ್ಯದ ಉಚಿತ 'ಅಪಘಾತ ವಿಮೆ' ಕಾರ್ಡ್ ವಿತರಿಸಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

Ramayana: ಭಾರೀ ಮೊತ್ತಕ್ಕೆ ಮಾರಾಟವಾಯ್ತು ಮ್ಯೂಸಿಕ್ ಹಕ್ಕು! ‘ರಾಮಾಯಣ’ ಬಿಗ್‌ ಅಪ್‌ಡೇಟ್‌

Ramayana: ಭಾರೀ ಮೊತ್ತಕ್ಕೆ ಮಾರಾಟವಾಯ್ತು ಮ್ಯೂಸಿಕ್ ಹಕ್ಕು!

Ramayana: ಟಿ-ಸೀರೀಸ್ ಸಂಸ್ಥೆಯು 75 ಕೋಟಿ ರೂಪಾಯಿಗೆ ಈ ಚಿತ್ರದ ಆಡಿಯೋ (Audio Rights) ಹಕ್ಕುಗಳನ್ನು ಖರೀದಿಸಿದೆ. ಟಿ-ಸೀರೀಸ್ ಚಿತ್ರದ ಎರಡೂ ಭಾಗಗಳ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಈ ಒಪ್ಪಂದವು ಯಾವುದೇ ಭಾರತೀಯ ಸಂಗೀತ ಕಂಪನಿಯಿಂದ ನಡೆದ ಅತಿದೊಡ್ಡ ಸಂಗೀತ ಹಕ್ಕುಗಳ ಒಪ್ಪಂದಗಳಲ್ಲಿ ಒಂದಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕರಾದ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಮೊದಲ ಬಾರಿಗೆ ಭಾರತೀಯ ಚಲನಚಿತ್ರವೊಂದರಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

Allu Arjun: ಹುಡುಗಿ ಮನೆ ಮುಂದೆ ಕಾಯಿರಿ, ಆದ್ರೆ ಟ್ರೋಲ್ ಮಾಡ್ಬೇಡಿ; ಅಲ್ಲು ಅರ್ಜುನ್‌

ಹುಡುಗಿ ಮನೆ ಮುಂದೆ ಕಾಯಿರಿ, ಆದ್ರೆ ಟ್ರೋಲ್ ಮಾಡ್ಬೇಡಿ; ಅಲ್ಲು ಅರ್ಜುನ್‌

Allu Arjun: ಹೈದರಾಬಾದ್‌ನಲ್ಲಿ ನಡೆದ ‘ಅಲ್ಲು ಅರ್ಜುನ್‌ ಫ್ಯಾನ್ಸ್‌ ಅಸೋಸಿಯೇಷನ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲು ಅರ್ಜುನ್ ಸಾವಿರಾರು ಅಭಿಮಾನಿಗಳನ್ನು ಭೇಟಿಯಾದರು. ತಮ್ಮ ಟ್ರೇಡ್‌ಮಾರ್ಕ್ ಕಪ್ಪು ಉಡುಪನ್ನು ಧರಿಸಿ, ಸಂವಹನ ನಡೆಸಿ, ವರ್ಷಕ್ಕೆ ಕನಿಷ್ಠ ಒಂದು ಒಳ್ಳೆಯ ಕಾರ್ಯವನ್ನು ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹಿಸಿದರು.

Ramayana Movie: ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಘೋಷಣೆ

ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಘೋಷಣೆ

Ramayana Movie:ಟ್ರೇಲರ್ ಅನ್ನು ಮೂಲತಃ ಜುಲೈ 24 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ನಂತರ ಮುಂದೂಡಲಾಯಿತು .ನಿರ್ಮಾಪಕ ನಮಿತ್ ಮಲ್ಹೋತ್ರ ಅವರು ದಿನಾಂಕ ನಿಗದಿ ಮಾಡಿದ್ದಾರೆ. ಜುಲೈ 30ರಂದು ಈ ಸಿನಿಮಾದ ಟ್ರೇಲರ್ ಅನಾವರಣ ಆಗಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಅಭಿಮಾನಿಗಳ ಕಾತರ ಹೆಚ್ಚಾಗಿದೆ.

Batwara 1947 Trailer:  ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದ ಕಥೆ; ʼಬಟ್ವಾರಾʼ ಟ್ರೈಲರ್‌ ಔಟ್‌

ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದ ಕಥೆ; ʼಬಟ್ವಾರಾʼ ಟ್ರೈಲರ್‌ ಔಟ್‌

Batwara: ಆಕ್ಷನ್‌ ಪ್ಯಾಕ್ಡ್‌ನಿಂದ ಕೂಡಿದೆ. ಟ್ರೇಲರ್‌ಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಬಟ್ವಾರಾ 1947 ರ ಟ್ರೇಲರ್ ಹೃದಯಸ್ಪರ್ಶಿಯಾಗಿದೆ. ಭಾರತ-ಪಾಕಿಸ್ತಾನ ವಿಭಜನೆಯ ನಂತರದ ಕುರಿತಾಗಿ ಇದೆ. ಟ್ರೇಲರ್‌ನ ಆರಂಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಶುಭ ಸುದ್ದಿ ಕೇಳಿಬರುತ್ತದೆ ಒಟ್ಟಿಗೆ ಬಾಳುತ್ತಿದ್ದ ಜನರಲ್ಲಿ ಹಿಂಸೆ, ಭಯ ಮತ್ತು ಬಲವಂತದ ವಲಸೆ ಹೇಗೆ ಬಿರುಕು ಮೂಡಿಸುತ್ತದೆ ಎಂಬುದನ್ನು ಸನ್ನಿ ಡಿಯೋಲ್ ಆಘಾತದಿಂದ ನೋಡುವ ದೃಶ್ಯಗಳಿವೆ.

‘ಪ್ಲೀಸ್.. ಇನ್ಮುಂದೆ ಎಲ್ಲರೂ ನನ್ನನ್ನು ಅನ್ನಾ ಕೊಣಿದೇಲ ಅಂತಲೇ ಕರೆಯಿರಿ’; ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಪತ್ನಿಯ ಮನವಿ!

ಎಲ್ಲರಿಗೂ ತಮ್ಮ ಹೆಸರಿನ ಬಗ್ಗೆ ಕ್ಲಾರಿಟಿ ಕೊಟ್ಟ DCM ಪವನ್ ಕಲ್ಯಾಣ್ ಪತ್ನಿ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊಣಿದೇಲ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರು ಮತ್ತು ಮನೆತನದ ಸರ್‌ನೇಮ್ ಕುರಿತು ಖಡಕ್ ಸ್ಪಷ್ಟನೆ ನೀಡಿದ್ದಾರೆ. ತಮ್ಮನ್ನು 'ಅನ್ನಾ ಲೆಜ್ನೆವಾ' ಬದಲು 'ಅನ್ನಾ ಕೊಣಿದೇಲ' ಎಂದೇ ಕರೆಯಬೇಕೆಂದು ವಿನಂತಿಸಿದ್ದಾರೆ.

OTT Movie Releases This Week: ಒಟಿಟಿಯಲ್ಲಿ ಈ ವಾರ ಸೌತ್‌ ಸಿನಿಮಾಗಳ ಅಬ್ಬರ!

ಒಟಿಟಿಯಲ್ಲಿ ಈ ವಾರ ಸೌತ್‌ ಸಿನಿಮಾಗಳ ಅಬ್ಬರ!

OTT Movie Releases This Week: ಸಿನಿ ಪ್ರಿಯರಿಗೆ ಸಿಹಿ ಉಣ ಬಡಿಸಲು ಹಲವು ವಿಭಿನ್ನ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿವೆ. ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಅಪರಾಧ ಥ್ರಿಲ್ಲರ್‌ ಸಿನಿಮಾದಿಂದ ಹಿಡಿದು ಸೈಕಲಾಜಿಕಲ್ ಥ್ರಿಲ್ಲರ್‌ವರೆಗೆ ಎಲ್ಲಾ ಜಾನರ್‌ಗಳು ಸಿನಿಮಾಗಳು (Cinema OTT) ಒಟಿಟಿಗೆ ಬಂದಿವೆ?

‘ಚರಂಡಿ ತಲೆಮಾರು’ ಹೇಳಿಕೆಗೆ ಆಕ್ರೋಶ: ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್‌ಗೆ ತಿರುಗೇಟು ನೀಡಿದ ಸಿಜೆಪಿ!

ಕಂಗನಾ ರಣಾವತ್‌ 'ಚರಂಡಿ ತಲೆಮಾರು' ಹೇಳಿಕೆಗೆ ಸಿಜೆಪಿ ಖಡಕ್ ತಿರುಗೇಟು!‌

ಬಿಜೆಪಿ ಸಂಸದೆ ಕಂಗನಾ ರಣಾವತ್ ದೇಶದ ಯುವತಿಯರನ್ನು ‘ಚರಂಡಿ ತಲೆಮಾರು’ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಕಂಗನಾ ಮಾತುಗಳನ್ನು ಅವರ ಸ್ವಂತ ಬಿಜೆಪಿ ಪಕ್ಷವೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದೆ.

ಪ್ರತಿ ತಿಂಗಳು 40 ಲಕ್ಷ ರೂ. ಜೀವನಾಂಶ ಕೇಳಿದ್ದ ಪತ್ನಿ ಆರತಿ; ನಟ 'ಜಯಂ' ರವಿಗೆ ಕೌಟುಂಬಿಕ ನ್ಯಾಯಾಲಯ ಹೇಳಿದ್ದೇನು?

ಪತ್ನಿ ಆರತಿಗೆ ತಿಂಗಳಿಗೆ 40 ಲಕ್ಷ ಕೊಡ್ಬೇಕಿಲ್ಲ; ನಟ 'ಜಯಂ' ರವಿಗೆ ರಿಲೀಫ್

ತಮಿಳು ನಟ 'ಜಯಂ' ರವಿ ಮತ್ತು ಅವರ ಪತ್ನಿ ಆರತಿ ವಿಚ್ಛೇದನ ಪ್ರಕರಣದಲ್ಲಿ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ನಟನಿಗೆ ಬಿಗ್ ರಿಲೀಫ್ ನೀಡಿದೆ. ತಿಂಗಳಿಗೆ 40 ಲಕ್ಷ ರೂಪಾಯಿ (ವರ್ಷಕ್ಕೆ 4.80 ಕೋಟಿ ರೂ.) ಜೀವನಾಂಶ ಕೇಳಿದ್ದ ಪತ್ನಿ ಆರತಿ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್‌ಗೆ ‌ʻಬಿಗ್ ಬಾಸ್‌ʼ ಕನ್ನಡದಿಂದ ಆಫರ್; ಆದರೆ ಈ ಶೋಗೆ ʻನಾನು ಹೋಗಲ್ಲʼ ಎಂದಿದ್ದೇಕೆ?

ʻಬಿಗ್ ಬಾಸ್‌ ಕನ್ನಡʼ ಶೋನಿಂದ ಅಬ್ದುಲ್ ರಜಾಕ್‌ಗೆ ಆಫರ್‌; ಮುಂದೇನಾಯ್ತು?

ಕನ್ನಡ ಕಿರುತೆರೆಯ ಬಹುನಿರೀಕ್ಷಿತ 'ಬಿಗ್ ಬಾಸ್ ಕನ್ನಡ ಸೀಸನ್ 13' ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಚ್ ಆಗಲಿದ್ದು, ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಅವರಿಗೆ ಬಿಗ್ ಬಾಸ್ ಕಾಸ್ಟಿಂಗ್ ತಂಡದಿಂದ ಬಂದಿದ್ದ ಆಹ್ವಾನವನ್ನು ಅವರು ನಿರಾಕರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೋ ಪ್ರತಿನಿಧಿ ಜೊತೆಗಿನ ಸಂಭಾಷಣೆಯ ಆಡಿಯೋ ಕ್ಲಿಪ್ ಅನ್ನು ಅವರು ಹಂಚಿಕೊಂಡಿದ್ದಾರೆ.

‌ʻಕೃಷ್ಣʼ ಅಜಯ್‌ ರಾವ್ ನಟನೆಯ ‘ಪಾರ್ಟ್ನರ್’ ಚಿತ್ರದ ಹೊಸ ಸಾಂಗ್‌ ರಿಲೀಸ್;‌ ಸ್ಯಾಂಡಲ್‌ವುಡ್‌ಗೆ ಮರಳಿದ ಗಾಯಕ ಕುನಾಲ್‌ ಗಾಂಜವಾಲಾ

ಸ್ಯಾಂಡಲ್‌ವುಡ್‌ಗೆ ಮರಳಿದ ಬಾಲಿವುಡ್‌ನ ಖ್ಯಾತ ಗಾಯಕ ಕುನಾಲ್‌ ಗಾಂಜವಾಲಾ

'ಕೃಷ್ಣ' ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ನಟನೆಯ ಶಿವತೇಜಸ್ ನಿರ್ದೇಶನದ 'ಪಾರ್ಟ್ನರ್' ಚಿತ್ರದ 'ಅಮೋರಾ' ಹಾಡು ಬಿಡುಗಡೆಯಾಗಿದೆ. ಬಾಲಿವುಡ್‌ನ ಪ್ರಸಿದ್ಧ ಗಾಯಕ ಕುನಾಲ್ ಗಂಜಾವಾಲಾ ಈ ಗೀತೆಯ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಈ ಹಾಡಿಗೆ ನಕುಲ್ ಅಭಯಂಕರ್ ಸಂಗೀತವಿದೆ.

‘ನನ್ನ ತಾಯಿ 6 ತಿಂಗಳು ನನ್ನೊಂದಿಗೆ ಮಾತುಬಿಟ್ಟರು, ವಾಟ್ಸಾಪ್‌ನಲ್ಲಿ ಬ್ಲಾಕ್‌ ಮಾಡಿದ್ದರು’; ನಟಿ ಭಾಗ್ಯಶ್ರೀ ಬೋರ್ಸೆಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ?

ನಟಿ ಭಾಗ್ಯಶ್ರೀ ಬೋರ್ಸೆ ನೋವಿನ ಕಥೆ; ಅವ್ರ ಕುಟುಂಬದವರು ಹೀಗೇಕೆ ಮಾಡಿದ್ರು?

'ಲೇನಿನ್' ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟಿ ಭಾಗ್ಯಶ್ರೀ ಬೋರ್ಸೆ, ತಮ್ಮ ಸಿನಿಮಾ ರಂಗದ ಪ್ರವೇಶಕ್ಕೆ ಕುಟುಂಬದಿಂದ ಎದುರಾಗಿದ್ದ ತೀವ್ರ ವಿರೋಧವನ್ನು ನೆನಪಿಸಿಕೊಂಡಿದ್ದಾರೆ. ನಟಿಯಾಗುವ ನಿರ್ಧಾರದಿಂದಾಗಿ ತಾಯಿ ಆರು ತಿಂಗಳು ಮಾತನ್ನೇ ಬಂದ್ ಮಾಡಿ ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಅಯ್ಯಯ್ಯೋ, ತೆಲುಗು ಹೀರೋಗಳ ಮೇಲೆ ಯಾರ ಕಣ್ಣು ಬಿತ್ತೋ? ಒಬ್ಬರಾದ ಮೇಲೊಬ್ಬರಿಗೆ ಶಸ್ತ್ರಚಿಕಿತ್ಸೆ, ಟಾಲಿವುಡ್ ನಟರ ಅಭಿಮಾನಿಗಳಲ್ಲಿ ಆತಂಕ!

ಟಾಲಿವುಡ್ ನಟರ ಮೇಲೆ ಯಾರ ಕಣ್ಣು ಬಿತ್ತೋ? ಒಬ್ಬರಾದ ಮೇಲೊಬ್ಬರಿಗೆ ಸರ್ಜರಿ!

ತೆಲುಗು ಚಿತ್ರರಂಗದ ಪ್ರಮುಖ ನಟರು ಸಾಲಾಗಿ ಗಾಯಗೊಳ್ಳುತ್ತಿರುವುದು ಅಭಿಮಾನಿಗಳನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಇತ್ತೀಚೆಗೆ ನಂದಮೂರಿ ಬಾಲಕೃಷ್ಣ, ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಸೇರಿದಂತೆ ಮುಂತಾದವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಇಲ್ಲಿದೆ ಒಂದು ಸ್ಪೆಷಲ್‌ ಸ್ಟೋರಿ.

Pavala Shyamala: ತೆಲುಗಿನ ಖ್ಯಾತ ಹಿರಿಯ ನಟಿ ಪಾವಲ ಶ್ಯಾಮಲ ಇನ್ನಿಲ್ಲ

ತೆಲುಗಿನ ಖ್ಯಾತ ಹಿರಿಯ ನಟಿ ಪಾವಲ ಶ್ಯಾಮಲ ಇನ್ನಿಲ್ಲ

Pavala Shyamala: ಹಾಸ್ಯ ಪಾತ್ರಗಳಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ ಹಿರಿಯ ನಟಿ ಪಾವಲಾ ಶ್ಯಾಮಲಾ (75) (pavala shyamala) ನಿಧನರಾಗಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ಹಾಸ್ಯ ನಟಿಯಾಗಿ ನಟಿಸಿದ್ದ ಪಾವಲ ಶಾಮಲ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. (ಜುಲೈ 28) ಬೆಳಿಗ್ಗೆ ಹೈದರಾಬಾದ್​​ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

Ramayana Movie: ʻರಾಮಾಯಣʼ ಸೆಟ್‌ನಲ್ಲಿ ಶಿವನ ಭಕ್ತಿಗೀತೆ! ನಟ ಯಶ್‌ ಹೇಳಿದ್ದೇನು?

ʻರಾಮಾಯಣʼ ಸೆಟ್‌ನಲ್ಲಿ ಶಿವನ ಭಕ್ತಿಗೀತೆ! ನಟ ಯಶ್‌ ಹೇಳಿದ್ದೇನು?

Ramayana Movie:. ರಾಮಾಯಣ ಸಿನಿಮಾದಲ್ಲಿ ರಾವಣನ (Ravana) ಪಾತ್ರಕ್ಕಾಗಿ ನಟ ಯಶ್ ಸೆಟ್‌ನಲ್ಲಿ ದೊಡ್ಡ ಸ್ಪೀಕರ್ ಇಟ್ಟು ಶಿವನ ಹಾಡುಗಳನ್ನು ಗಟ್ಟಿಯಾಗಿ ಹಾಕುತ್ತಿದ್ದರಂತೆ. ಸಂಗೀತದ ಸೌಂಡ್ ಎಷ್ಟು ಹೆಚ್ಚಾಗಿರುತ್ತಿತ್ತೆಂದರೆ ಸೆಟ್‌ನಲ್ಲಿದ್ದ ಉಳಿದವರು ಮಾತನಾಡಲು ಕಷ್ಟಪಡುತ್ತಿದ್ದರು. ಯಶ್ ಈ ತಮಾಷೆಯ ನೆನಪನ್ನು ನಗುತ್ತಲೇ ನೆನಪಿಸಿಕೊಂಡಿದ್ದಾರೆ.

Loading...