ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻದಳಪತಿʼ ವಿಜಯ್‌, ಅಜಿತ್‌, ಸೂರ್ಯ ಪಾಲಿಗೆ ಲಕ್ಕಿಯಾದ ನಟಿ ತ್ರಿಶಾ ಕೃಷ್ಣನ್ ;‌ 25 ವರ್ಷಗಳಾದರೂ ಕುಂದದ ʻಕುಂದವೈʼ ಚಾರ್ಮ್‌!

ವಿಜಯ್, ಅಜಿತ್, ಸೂರ್ಯಗೆ ‌ನಟಿ ತ್ರಿಶಾ ಲಕ್ಕಿ ಚಾರ್ಮ್! ಹೇಗೆ ಗೊತ್ತಾ?

ದಕ್ಷಿಣ ಭಾರತದ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದರೂ ನಟಿ ತ್ರಿಷಾ ಕೃಷ್ಣನ್ ಅವರ ವರ್ಚಸ್ಸು ಕೊಂಚವೂ ಕುಂದಿಲ್ಲ. ದಳಪತಿ ವಿಜಯ್, ಅಜಿತ್ ಕುಮಾರ್ ಹಾಗೂ ಸೂರ್ಯ ಅವರ ಸಾರ್ವಕಾಲಿಕ ಗರಿಷ್ಠ ಗಳಿಕೆಯ ಚಿತ್ರಗಳಿಗೆ ಇವರೇ ನಾಯಕಿಯಾಗಿದ್ದು, ತ್ರಿಶಾ ಈಗ ಉದ್ಯಮದ 'ಲಕ್ಕಿ ಚಾರ್ಮ್' ಆಗಿ ಹೊರಹೊಮ್ಮಿದ್ದಾರೆ.

Don 3 Movie: ʻಧುರಂಧರ್‌ʼ ಹೀರೋ ರಣವೀರ್ ಸಿಂಗ್‌ಗೆ ಬಿಗ್‌ ಶಾಕ್! ಚಿತ್ರರಂಗದಿಂದಲೇ ನಿಷೇಧ, ಯಾಕಿಂಥ ನಿರ್ಧಾರ?

ಚಿತ್ರರಂಗದಿಂದ ನಟ ರಣವೀರ್ ಸಿಂಗ್‌ ಬ್ಯಾನ್‌! ಇಂಥ ನಿರ್ಧಾರಕ್ಕೆ ಕಾರಣವೇನು?

'ಡಾನ್ 3' ಚಿತ್ರದಿಂದ ಕೊನೆ ಕ್ಷಣದಲ್ಲಿ ಹೊರನಡೆದ ಕಾರಣಕ್ಕೆ ನಟ ರಣವೀರ್ ಸಿಂಗ್ ಅವರನ್ನು 'ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್' (FWICE) ಚಿತ್ರರಂಗದಿಂದ ಅಧಿಕೃತವಾಗಿ ನಿಷೇಧಿಸಿದೆ. ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳಿಗಾಗಿ ಆಗಿರುವ 45 ಕೋಟಿ ರೂಪಾಯಿಗಳ ಭಾರಿ ನಷ್ಟವನ್ನು ರಣವೀರ್ ಅವರೇ ಭರಿಸಬೇಕು ಎಂದು ನಿರ್ಮಾಪಕ ಫರ್ಹಾನ್ ಅಖ್ತರ್ ಒತ್ತಾಯಿಸಿದ್ದಾರೆ.

ʻಡಿಯರ್ ಹಸ್ಬೆಂಡ್’ ಸಿನಿಮಾಕ್ಕಾಗಿ ಒಂದಾದ ಸೂರಜ್ ಗೌಡ - ಶರಣ್ಯಾ ಶೆಟ್ಟಿ; ಕಂಪ್ಲೀಟ್ ಆಯ್ತು ಸಾಂಗ್ಸ್ ರೆಕಾರ್ಡಿಂಗ್

ʻಡಿಯರ್ ಹಸ್ಬೆಂಡ್ʼ ಚಿತ್ರಕ್ಕಾಗಿ ಟಪೋರಿ ಸಾಂಗ್‌ ಹಾಡಿದ ಬಾಲಿವುಡ್‌ ಗಾಯಕ

ಸೂರಜ್ ಗೌಡ ಹಾಗೂ ಶರಣ್ಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘ಡಿಯರ್ ಹಸ್ಬೆಂಡ್’ ಚಿತ್ರದ ಹಾಡುಗಳ ಧ್ವನಿಮುದ್ರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ವೀರ್ ಸಮರ್ಥ್ ಸಂಗೀತದಲ್ಲಿ ಮೂಡಿಬಂದಿರುವ ಮಂಡ್ಯ ಸೊಗಡಿನ ‘ಮಾಲಾಶ್ರೀ ಸಿಕ್ಕಳೋ...’ ಟಪೋರಿ ಗೀತೆಗೆ ಬಾಲಿವುಡ್‌ನ ನಕಾಶ್ ಧ್ವನಿಯಾಗಿದ್ದಾರೆ.

Crazy Brahma Event: ʻನಮ್‌ ಯಜಮಾನ್ರು ಅಂದು ಕನಸುಗಾರ, ಇಂದು ಮಾತುಗಾರʼ; ರವಿಚಂದ್ರನ್‌ಗೆ ಹಂಸಲೇಖ ಬಹುಪರಾಕ್‌

ʻಕ್ರೇಜಿ-ಬ್ರಹ್ಮʼ ಇವೆಂಟ್‌ನಲ್ಲಿ ರವಿಚಂದ್ರನ್ - ಹಂಸಲೇಖ ‌ಜೋಡಿಯ ಮ್ಯಾಜಿಕ್

'ಕ್ರೇಜಿಸ್ಟಾರ್' ರವಿಚಂದ್ರನ್ ಹಾಗೂ 'ನಾದಬ್ರಹ್ಮ' ಹಂಸಲೇಖ ಜೋಡಿಯನ್ನು ಒಂದೇ ವೇದಿಕೆಯಲ್ಲಿ ಗೌರವಿಸಲು ಮೇ 30ರಂದು ಕೆಂಗೇರಿ ಬಳಿಯ ಜೆ.ಕೆ.ಗ್ರಾಂಡ್ ಅರೇನಾದಲ್ಲಿ "ಕ್ರೇಜಿ - ಬ್ರಹ್ಮ" ಮೆಗಾ ಇವೆಂಟ್ ಆಯೋಜಿಸಲಾಗಿದೆ. ಈ ಜೋಡಿಯ 16 ವರ್ಷಗಳ ಸಂಗೀತ ಪಯಣವನ್ನು ಕೊಂಡಾಡುವ ಈ ಕಾರ್ಯಕ್ರಮದ ಅಂಗವಾಗಿ 80 ಅಡಿಯ ಬೃಹತ್ ಕಟೌಟ್ ಅನಾವರಣಗೊಳಿಸಲಾಗಿದೆ.

ಧನುಷ್‌ ನಟನೆಯ ʻಕರʼ ಸಿನಿಮಾದ ಒಟಿಟಿ ರಿಲೀಸ್‌ ಡೇಟ್‌ ಘೋಷಣೆ; ಯಾವಾಗ, ಎಲ್ಲಿ ನೋಡಬಹುದು?

ಧನುಷ್ ನಟನೆಯ ‘ಕರ’ OTT ಸ್ಟ್ರೀಮಿಂಗ್ ಡೇಟ್ ಅನೌನ್ಸ್‌;‌ ಫ್ಯಾನ್ಸ್‌ ಖುಷ್‌!

ತಮಿಳು ನಟ ಧನುಷ್ ಮತ್ತು ಮಮಿತಾ ಬೈಜು ಅಭಿನಯದ ‘ಕರ’ ಸಿನಿಮಾ ಮೇ 28 ರಿಂದ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಜಾಗತಿಕವಾಗಿ ಸ್ಟ್ರೀಮಿಂಗ್ ಆಗಲಿದೆ. ವಿಘ್ನೇಶ್ ರಾಜಾ ನಿರ್ದೇಶನದ ಈ ಥ್ರಿಲ್ಲರ್ ಚಿತ್ರವು 1990ರ ಗಲ್ಫ್ ಯುದ್ಧದ ಹಿನ್ನೆಲೆಯಲ್ಲಿ, ಬ್ಯಾಂಕ್ ದರೋಡೆ ಮತ್ತು ಅಪರಾಧ ಲೋಕಕ್ಕೆ ಮರಳುವ ಮಾಜಿ ಕಳ್ಳನೊಬ್ಬನ ಕಥೆಯನ್ನು ಒಳಗೊಂಡಿದೆ.

Padma Awards 2026: ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ; ಇಲ್ಲಿದೆ ಕಂಪ್ಲೀಟ್‌ ಲಿಸ್ಟ್‌

ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿ ಪ್ರದಾನ; ಇಲ್ಲಿದೆ ಲಿಸ್ಟ್‌

Padma Awards 2026: ಈ ವರ್ಷ ಭಾರತ ಸರ್ಕಾರ ಒಟ್ಟು 131 ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ. ಈ ಪಟ್ಟಿಯಲ್ಲಿ ಐದು ಪದ್ಮವಿಭೂಷಣ ಗೌರವಗಳು, 13 ಪದ್ಮಭೂಷಣ ಪ್ರಶಸ್ತಿಗಳು ಮತ್ತು 113 ಪದ್ಮಶ್ರೀ ಗೌರವಗಳು ಸೇರಿವೆ. ಕಲೆ, ಸಾಹಿತ್ಯ, ಕ್ರೀಡೆ, ವಿಜ್ಞಾನ, ವೈದ್ಯಕೀಯ ಮತ್ತು ಸಾರ್ವಜನಿಕ ಸೇವೆಯಂತಹ ಕ್ಷೇತ್ರಗಳಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳಿಗೆ ಈ ಗೌರವಗಳನ್ನು ನೀಡಲಾಗುತ್ತದೆ.

Jagapathi Babu: ಖಿನ್ನತೆಯಿಂದ ಹೊರಬರಲು ಪ್ರಭಾಸ್‌ ಸಹಾಯ! ಜಗಪತಿ ಬಾಬು ಮುಕ್ತ ಮಾತು

ಖಿನ್ನತೆಯಿಂದ ಹೊರಬರಲು ಸಹಾಯ ಮಾಡಿದ್ದೇ ಪ್ರಭಾಸ್‌ ಎಂದ ಖ್ಯಾತ ನಟ!

Actor Prabhas: ಹಿರಿಯ ನಟ ಜಗಪತಿ ಬಾಬು ಇತ್ತೀಚೆಗೆ ಪ್ರಭಾಸ್ ಬಗ್ಗೆ ಮೆಚ್ಚುಗೆ ಮಾತು ಮಾತನಾಡಿದರು. ನಟ ಖಿನ್ನತೆಯಿಂದ ಬಳಲುತ್ತಿದ್ದಾಗ ಸಹಾಯ ಮಾಡಿದ ಸಂದರ್ಭವನ್ನು ನೆನಪಿಸಿಕೊಂಡರು. ಜೀವನದಲ್ಲಿ ಕಠಿಣ ಭಾವನಾತ್ಮಕ ಹಂತವನ್ನು ಎದುರಿಸುತ್ತಿದ್ದಾಗ ಪ್ರಭಾಸ್ ಹೇಗೆ ಆತ್ಮವಿಶ್ವಾಸ ತುಂಬಿದರು ಎಂಬುದನ್ನು ಜಗಪತಿ ಹಂಚಿಕೊಂಡರು. ಪ್ರಭಾಸ್ ಚಿತ್ರೀಕರಣದಿಂದ ಹಿಂತಿರುಗುವಾಗ ತಮ್ಮನ್ನು ಲವಲವಿಕೆಯಿಂದ ಮತ್ತು ಪ್ರೇರಣೆಯಿಂದ ಇರಿಸಿಕೊಳ್ಳಲು ವೈಯಕ್ತಿಕವಾಗಿ ಭೇಟಿ ಮಾಡಲು ಬಂದಿದ್ದರು ಎಂದು ನಟ ಬಹಿರಂಗಪಡಿಸಿದರು.

Thalapathy Vijay: ʻಜನ ನಾಯಗನ್‌ʼ ಚಿತ್ರಕ್ಕೆ ಸಿಕ್ತು ಹೊಸ ರಿಲೀಸ್‌ ಡೇಟ್‌? ಒಂದೇ ದಿನ 2 ಸಿನಿಮಾ ರಿಲೀಸ್‌ ಮಾಡಲಿದೆಯಾ `ಕೆವಿಎನ್‌ ಪ್ರೊಡಕ್ಷನ್ಸ್'?‌

ಸಿಎಂ ವಿಜಯ್ ಹುಟ್ಟುಹಬ್ಬದ ಉಡುಗೊರೆಯಾಗಿ ಬರಲಿದೆಯಾ ʻಜನ ನಾಯಗನ್‌ʼ?

ತಮಿಳುನಾಡು ಸಿಎಂ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಸೆನ್ಸಾರ್ ಮಂಡಳಿಯಲ್ಲಿ ಐದು ತಿಂಗಳಿನಿಂದ ಪ್ರಮಾಣಪತ್ರ ಸಿಗದೆ ನೆನೆಗುದಿಗೆ ಬಿದ್ದಿದೆ. ಆದರೆ ಟಿಕೆಟ್ ಬುಕಿಂಗ್ ಆಪ್‌ಗಳಲ್ಲಿ ಈ ಚಿತ್ರವು ಜೂನ್ 19 ರಂದು ಬಿಡುಗಡೆಯಾಗಲಿದೆ ಎಂದು ತೋರಿಸುತ್ತಿರುವುದು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ʻರಾಜಕಾರಣದ ಮೂಲಕ ನನ್ನ 3ನೇ ಇನ್ನಿಂಗ್ಸ್‌ ಆರಂಭಿಸಿದ್ದೇನೆʼ ಎಂದ ನಿರೂಪಕಿ ಜಾಹ್ನವಿ; ಜೆಡಿಎಸ್‌ ಪಕ್ಷ ಸೇರಿದ ಮಾಜಿ ʻಬಿಗ್‌ ಬಾಸ್‌ʼ ಸ್ಪರ್ಧಿ

JDS ಸೇರಿ ʻ3ನೇ ಇನ್ನಿಂಗ್ಸ್ ಆರಂಭʼ ಎಂದ ʻಬಿಗ್ ಬಾಸ್ʼ ಜಾಹ್ನವಿ

ಕಿರುತೆರೆ ನಿರೂಪಕಿ ಹಾಗೂ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಾಹ್ನವಿ ಅವರು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮಾಧ್ಯಮ ಹಾಗೂ ರಿಯಾಲಿಟಿ ಶೋಗಳ ಯಶಸ್ಸಿನ ಬಳಿಕ ಇದು ತಮ್ಮ ಮೂರನೇ ಇನ್ನಿಂಗ್ಸ್ ಎಂದು ಬಣ್ಣಿಸಿರುವ ಅವರು, ಸಮಾಜ ಸೇವೆಯೇ ತಮ್ಮ ಏಕೈಕ ಹೆಗ್ಗುರಿಯಾಗಿದೆ ಎಂದಿದ್ದಾರೆ.

ಗೋಡೆ ಮೇಲಿದ್ದ ಮಹಿಳೆಯ ಚಿತ್ರಕ್ಕೂ ಅಶ್ಲೀಲ ಸನ್ನೆ; ವಿಕೃತ ಮನಸ್ಸಿನ ಯುವಕರ ಮೇಲೆ ನಟಿ ಭೂಮಿ ಪೆಡ್ನೇಕರ್ ಕೆಂಡಾಮಂಡಲ

ಅಶ್ಲೀಲ ಸನ್ನೆ ತೋರಿಸಿದ ಯುವಕರ ಮೇಲೆ ನಟಿ ಭೂಮಿ ಪೆಡ್ನೇಕರ್ ಗರಂ!

ಸ್ವಿಮ್ಮಿಂಗ್ ಪೂಲ್ ಗೋಡೆ ಮೇಲಿದ್ದ ಮಹಿಳೆಯ ಚಿತ್ರಕ್ಕೆ ಪುರುಷರು ಅಶ್ಲೀಲ ಸನ್ನೆ ಮಾಡಿದ ವೀಡಿಯೋ ವೈರಲ್‌ ಆಗಿದ್ದು, ನಟಿ ಭೂಮಿ ಪೆಡ್ನೇಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ಇದು ಯುವ ಪೀಳಿಗೆಯ ಆತಂಕಕಾರಿ ವಿಕೃತ ಮನಸ್ಥಿತಿಯನ್ನು ಬಿಂಬಿಸುತ್ತದೆ ಎಂದಿದ್ದಾರೆ.

Toxic movie:  ‘ಟಾಕ್ಸಿಕ್’ ಟೀಸರ್, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ ಯಶ್ ತಾಯಿ ಪುಷ್ಪಾ

‘ಟಾಕ್ಸಿಕ್’ ಟೀಸರ್, ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ ಯಶ್ ತಾಯಿ ಪುಷ್ಪಾ

Toxic movie: ಚಿತ್ರರಂಗದ ಸಮಸ್ಯೆಗಳ ಬಗ್ಗೆ ಯಶ್‌ ಅಮ್ಮ ಪುಷ್ಪಾ ಅರುಣ್‌ಕುಮಾರ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಟ್ರೆಂಡ್‌ಗೆ ತಕ್ಕಂತೆ ಸಿನಿಮಾಗಳು ಬರ್ತಿವೆ. ಪ್ರೇಕ್ಷಕರಿಗೆ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡ್ತಾರೆ. ಅಭಿರುಚಿ ಬದಲಾದಂತೆ ಕಥೆ, ಸಿನಿಮಾ ಎಲ್ಲವೂ ಬದಲಾಗುತ್ತದೆ ಎಂದು ಪುಷ್ಪಾ ಅರುಣ್‌ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Ananya Panday: ಭರತನಾಟ್ಯ ದೃಶ್ಯ ವೈರಲ್;  ಭಾರಿ ಟೀಕೆಗೆ ಗುರಿಯಾದ ಅನನ್ಯಾ ಪಾಂಡೆ

ಭರತನಾಟ್ಯ ದೃಶ್ಯ ವೈರಲ್; ಭಾರಿ ಟೀಕೆಗೆ ಗುರಿಯಾದ ಅನನ್ಯಾ ಪಾಂಡೆ

Ananya Panday Trolled: ಚಿತ್ರದ ಭರತನಾಟ್ಯ ನೃತ್ಯ ಸನ್ನಿವೇಶವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅನನ್ಯಾ ಪಾಂಡೆ ಟೀಕೆಗೆ ಗುರಿಯಾಗಿದ್ದಾರೆ. ಸಾಂಪ್ರದಾಯಿಕ ಉಡುಪಿನಲ್ಲಿ ನಟಿ ಭರತನಾಟ್ಯ ಪ್ರದರ್ಶಿಸುವ ಕಿರು ತುಣುಕು ವ್ಯಾಪಕ ಟೀಕೆಗೆ ಗುರಿಯಾಗಿದೆ. ಕೆಲವು ನೆಟಿಜನ್‌ಗಳು ಈ ನೃತ್ಯ ಚಲನೆಗಳನ್ನು 'ರೊಬೊಟಿಕ್' ಎಂದು ಕರೆದಿದ್ದಾರೆ. ಏತನ್ಮಧ್ಯೆ, ಇನ್ನೂ ಕೆಲವರು ಭರತನಾಟ್ಯಕ್ಕೆ ಮಾಡುವ ಸಂಪೂರ್ಣ ಗೌರವ ಎಂದು ಕರೆದಿದ್ದಾರೆ.

Kangana Ranaut:  ಐಶ್ವರ್ಯಾ ರೈ ಲುಕ್ ಬಗ್ಗೆ ಟ್ರೋಲ್‌ ಮಾಡಿದವರಿಗೆ ಕಂಗನಾ ತಿರುಗೇಟು!

ಐಶ್ವರ್ಯಾ ರೈ ಲುಕ್ ಬಗ್ಗೆ ಟ್ರೋಲ್‌ ಮಾಡಿದವರಿಗೆ ಕಂಗನಾ ತಿರುಗೇಟು!

Kangana Ranaut: ಕ್ಯಾನೆಸ್‌ನಲ್ಲಿ ಯಾವಾಗಲೂ ತಮ್ಮ ಲುಕ್‌ಗಳಿಂದ ಗಮನ ಸೆಳೆಯುತ್ತಾರೆ, ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಭಾಗವು ಐಶರ್ಯಾ ಅವರ ಲುಕ್‌ಗಳನ್ನು ಟ್ರೋಲ್ ಮಾಡಿದೆ. ನಟಿ ಕಂಗನಾ ರನೌತ್ ಅವರು ಐಶ್ವರ್ಯಾ ಅವರನ್ನು ಬೆಂಬಲಿಸಿ, ಅವರು 'ಅದ್ಭುತವಾಗಿ ಕಾಣುತ್ತಾರೆ' ಎಂದು ಕಾಮೆಂಟ್ ಮಾಡಿದ್ದಾರೆ.

Hera Pheri 3: ʻಹೇರಾ ಫೇರಿ 3’ ಸಿನಿಮಾದಿಂದ ಮತ್ತೆ  ಹೊರಬಂದ ಪರೇಶ್ ರಾವಲ್? ಕಾರಣ ಏನು?

ʻಹೇರಾ ಫೇರಿ 3’ ಸಿನಿಮಾದಿಂದ ಮತ್ತೆ ಹೊರಬಂದ ಪರೇಶ್ ರಾವಲ್?

Hera Pheri 3: ಕಳೆದ ವರ್ಷ, ಹೇರಾ ಫೆರಿ 3 ಚಿತ್ರೀಕರಣ ಪ್ರಾರಂಭವಾಗುವ ಹಂತದಲ್ಲಿದ್ದಾಗ, ಪರೇಶ್ ರಾವಲ್ ಹಠಾತ್ತನೆ ಚಿತ್ರದಿಂದ ಹಿಂದೆ ಸರಿದರು, ಇದು ನ್ಯಾಯಾಲಯದ ಪ್ರಕರಣಕ್ಕೆ ಕಾರಣವಾಯಿತು. ವಿವಾದದ ನಂತರ, ಅವರು ಮತ್ತೆ ಚಿತ್ರಕ್ಕೆ ಸೇರಿಕೊಂಡರು. ಪರೇಶ್ ರಾವಲ್ ಅವರು ಇದೀಗ ಎರಡನೇ ಬಾರಿ ಸಿನಿಮಾದಿಂದ ಹೊರಗೆ ಬಂದಿದ್ದಾರೆ.

Ragini IPS 2: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್‌ ಮಾಡಿದ ನಟಿ ರಾಗಿಣಿ ದ್ವಿವೇದಿ; ನಿರ್ದೇಶಕರಾಗಿ ಎಂಟ್ರಿ ಕೊಟ್ಟ ಜಗ್ಗೇಶ್‌ ಮಕ್ಕಳು

ಜನ್ಮದಿನದಂದೇ ಫ್ಯಾನ್ಸ್‌ಗೆ ಬಿಗ್ ಗಿಫ್ಟ್ ನೀಡಿದ ನಟಿ ರಾಗಿಣಿ ದ್ವಿವೇದಿ

ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ 'ರಾಗಿಣಿ ಐಪಿಎಸ್ 2' ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ನವರಸ ನಾಯಕ ಜಗ್ಗೇಶ್ ಅವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ಜಂಟಿಯಾಗಿ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಗಲ್ಲಾಪೆಟ್ಟಿಗೆಯಲ್ಲಿ ದಾಖಲೆ ಬರೆದ ಸೂರ್ಯ ನಟನೆಯ ʻಕರುಪ್ಪುʼ ಸಿನಿಮಾ; ಕರುನಾಡಿನಲ್ಲಿ 9 ದಿನಕ್ಕೆ ಆದ ಗಳಿಕೆ ಎಷ್ಟು?

ಬಾಕ್ಸ್ ಆಫೀಸ್‌ನಲ್ಲಿ Karuppu ಹವಾ; ಕರ್ನಾಟಕದಲ್ಲಿ ಆದ ಗಳಿಕೆ ಎಷ್ಟು?‌

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ 'ಕರುಪ್ಪು' ಸಿನಿಮಾ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ ಕೇವಲ 9 ದಿನಗಳಲ್ಲಿ ಬರೋಬ್ಬರಿ 217.74 ಕೋಟಿ ರೂಪಾಯಿ ಗಳಿಸಿ ಭರ್ಜರಿ ಇತಿಹಾಸ ಸೃಷ್ಟಿಸಿದೆ. ಆರ್‌ಜೆ ಬಾಲಾಜಿ ನಿರ್ದೇಶನದ ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾ ಕರ್ನಾಟಕದಲ್ಲೂ ಭಾರಿ ಸಂಚಲನ ಮೂಡಿಸಿದ್ದು, ದಾಖಲೆ ಪ್ರಮಾಣದ ಹಣವನ್ನು ಬಾಚಿಕೊಂಡಿದೆ.

ʻಧುರಂಧರ್‌ʼ ಸಿನಿಮಾದ ಸಕ್ಸಸ್‌ನಲ್ಲಿ ತೇಲುತ್ತಿದ್ದ ನಟ ರಣವೀರ್‌ ಸಿಂಗ್‌ಗೆ ಶಾಕ್‌ ನೀಡಿದ ಬಾಲಿವುಡ್‌ ಡೈರೆಕ್ಟರ್!‌ ಅಷ್ಟಕ್ಕೂ ಏನಿದು ವಿವಾದ?

ʻಧುರಂಧರ್‌ʼ ಹೀರೋ ರಣವೀರ್ ಸಿಂಗ್ ಶಾಕ್! 40 ಕೋಟಿ ನಷ್ಟ ಆಯ್ತು ಅಂತ ದೂರು

ಬಾಲಿವುಡ್ ನಟ ರಣವೀರ್ ಸಿಂಗ್ ಕ್ರಿಯೇಟಿವ್ ಭಿನ್ನಾಭಿಪ್ರಾಯಗಳಿಂದಾಗಿ 'ಡಾನ್ 3' ಚಿತ್ರದಿಂದ ಹೊರನಡೆದಿದ್ದು, ನಿರ್ದೇಶಕ ಫರ್ಹಾನ್ ಅಖ್ತರ್ ಅವರು ಒಕ್ಕೂಟಕ್ಕೆ ದೂರು ನೀಡಿದ್ದಾರೆ. ರಣವೀರ್ ಅವರ ಹಠಾತ್ ನಿರ್ಧಾರದಿಂದ ಶೂಟಿಂಗ್ ಅಸ್ತವ್ಯಸ್ತಗೊಂಡು 40 ಕೋಟಿ ರೂ. ನಷ್ಟ ಸಂಭವಿಸಿದೆ ಎಂದು ನಿರ್ಮಾಣ ಸಂಸ್ಥೆ ಆಕ್ರೋಶ ಹೊರಹಾಕಿದೆ.

‌Photos: ತಂದೆ - ತಾಯಿಯ 50ನೇ ಮದುವೆ ವಾರ್ಷಿಕೋತ್ಸವದಲ್ಲಿ ಮಿಂಚಿದ ನಟ ರಕ್ಷಿತ್‌ ಶೆಟ್ಟಿ; ಫ್ಯಾನ್ಸ್‌ ಕಣ್ಣಿಗೆ ಬಿದ್ದ ʻಸಿಂಪಲ್‌ ಸ್ಟಾರ್‌ʼ

ತಂದೆ-ತಾಯಿಯ 50ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟ ರಕ್ಷಿತ್ ಶೆಟ್ಟಿ

ಸ್ಯಾಂಡಲ್‌ವುಡ್‌ ನಟ ರಕ್ಷಿತ್ ಶೆಟ್ಟಿ ಅವರು ಕಳೆದ ಕೆಲವು ವರ್ಷಗಳಿಂದ ಬೆಳ್ಳಿಪರದೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರಾದರೂ, ಇದೀಗ ತಮ್ಮ ಕುಟುಂಬದ ವಿಶೇಷ ಸಂಭ್ರಮವೊಂದರಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ರಕ್ಷಿತ್ ಶೆಟ್ಟಿ ಅವರ ತಂದೆ ಶ್ರೀಧರ್ ಶೆಟ್ಟಿ ಮತ್ತು ತಾಯಿ ರಂಜನಾ ಶ್ರೀಧರ್ ಶೆಟ್ಟಿ ಅವರು ತಮ್ಮ ವೈವಾಹಿಕ ಜೀವನದ ಸುವರ್ಣ ಮಹೋತ್ಸವದ (50ನೇ ವಿವಾಹವಾರ್ಷಿಕೋತ್ಸವ) ಸಂಭ್ರಮದಲ್ಲಿದ್ದು, ಇಡೀ ಕುಟುಂಬ ಒಟ್ಟಾಗಿ ಈ ಸುದಿನವನ್ನು ಆಚರಿಸಿದೆ. ಈ ಹಿರಿಯ ಜೋಡಿಯ 50 ವರ್ಷಗಳ ತುಂಬು ದಾಂಪತ್ಯದ ಸವಿನೆನಪಿಗಾಗಿ ದೇವಸ್ಥಾನವೊಂದರಲ್ಲಿ ಸರಳ ಹಾಗೂ ಸುಂದರವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕುಟುಂಬ ಸಮೇತರಾಗಿ ಭಾಗವಹಿಸಿದ್ದ ಶೆಟ್ಟಿ ಕುಟುಂಬದವರು ವಿಶೇಷ ಪೂಜೆ, ಹೋಮ-ಹವನಗಳನ್ನು ನೆರವೇರಿಸುವ ಮೂಲಕ ತಂದೆ-ತಾಯಿಯ ಮದುವೆ ದಿನವನ್ನು ಅರ್ಥಪೂರ್ಣವಾಗಿ ಸಂಭ್ರಮಿಸಿದ್ದಾರೆ. ಈ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ ನೋಡಿ.

ಮೂರೇ ದಿನದಲ್ಲಿ ಬಾಕ್ಸ್‌ ಆಫೀಸ್‌ನಲ್ಲಿ 117 ಕೋಟಿ ಬಾಚಿಕೊಂಡ ʻದೃಶ್ಯಂ 3ʼ; ಕರ್ನಾಟಕದಲ್ಲಿ ಮೋಹನ್‌ಲಾಲ್‌ ಸಿನಿಮಾಗೆ ಸಿಕ್ಕ ಹಣವೆಷ್ಟು?

ಬಾಕ್ಸ್ ಆಫೀಸ್‌ನಲ್ಲಿ ʻದೃಶ್ಯಂ 3ʼ ಸುನಾಮಿ; ಕರ್ನಾಟಕದಿಂದ ಸಿಕ್ಕ ಹಣವೆಷ್ಟು?

ನಟ ಮೋಹನ್‌ಲಾಲ್ ಅವರ 66ನೇ ಜನ್ಮದಿನದ ಅಂಗವಾಗಿ ಮೇ 21 ರಂದು ಬಿಡುಗಡೆಯಾದ 'ದೃಶ್ಯಂ 3' ಚಿತ್ರವು ಕೇವಲ ಮೂರೇ ದಿನಗಳಲ್ಲಿ ವಿಶ್ವಾದ್ಯಂತ ಬರೋಬ್ಬರಿ 117.17 ಕೋಟಿ ರೂಪಾಯಿ ಗಳಿಸಿ ಭರ್ಜರಿ ಇತಿಹಾಸ ಸೃಷ್ಟಿಸಿದೆ. ಜೀತು ಜೋಸೆಫ್ ನಿರ್ದೇಶನದ ಈ ಕಲ್ಟ್ ಫ್ಯಾಮಿಲಿ ಥ್ರಿಲ್ಲರ್ ಚಿತ್ರಕ್ಕೆ ಕರ್ನಾಟಕದಲ್ಲೂ ಅಭೂತಪೂರ್ವ ರೆಸ್ಪಾನ್ಸ್ ಸಿಕ್ಕಿದೆ.

ʻಮೃತ್ಯುದೇವತೆʼ ಸಿನಿಮಾದ ʻನಮ್ಮಾವ ಮಾದೇವʼ ಹಾಡು ರಿಲೀಸ್‌; ಇದು ವಂಚಕರ ಜಾಲಕ್ಕೆ ಸಿಕ್ಕಿಬೀಳುವ ಹೆಣ್ಣುಮಕ್ಕಳ ಹೋರಾಟದ ಕಥೆ

ಅದೊಂದು ಸೀನ್‌ನಿಂದ ‘ಮೃತ್ಯುದೇವತೆ’ ರಿಲೀಸ್ ತಡ! ಸೆನ್ಸಾರ್‌ ಹೇಳಿದ್ದೇನು?‌

ಸಮಾಜದಲ್ಲಿ ಹೆಣ್ಣುಮಕ್ಕಳು ವಂಚಕರ ಜಾಲಕ್ಕೆ ಬಲಿಯಾಗುವುದನ್ನು ತಡೆದು ಶೋಷಕರನ್ನು ಶಿಕ್ಷಿಸುವ ಕಥೆ ಹೊಂದಿರುವ 'ಮೃತ್ಯುದೇವತೆ' ಚಿತ್ರದ 'ನಮ್ಮಾವ ಮಾದೇವ' ಹಾಡು ಬಿಡುಗಡೆಯಾಗಿದೆ. ನವೀನ್ ಮಹಾದೇವ್ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ಸ್ವಿಗ್ಗಿ ಡೆಲಿವರಿ ಹುಡುಗಿಯಾಗಿ ಸಾರಿಕಾ ರಾವ್ ನಟಿಸಿದ್ದಾರೆ.

ʻರಾಯರ ದರ್ಶನʼ ಆಲ್ಬಂ ಸಾಂಗ್‌ಗೆ ಧ್ವನಿ ನೀಡಿದ ʻಬ್ರಹ್ಮಕಳಶʼ ಖ್ಯಾತಿಯ ಅಬ್ಬಿ; ಮಂತ್ರಾಲಯದಲ್ಲಿ ಬಿಡುಗಡೆಯಾಗಲಿರುವ ಹಾಡು

ʻಕಾಂತಾರʼ ಖ್ಯಾತಿಯ ಅಬ್ಬಿ ಕಂಠದಲ್ಲಿ ‌ರಾಯರ ಕುರಿತ ಭಕ್ತಿ ಗೀತೆ

ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿಗಳ ಮಹಿಮೆ ಸಾರುವ ‘ರಾಯರ ದರ್ಶನ’ ಆಲ್ಬಂ ಸಾಂಗ್ ಜೂನ್ 20 ರಂದು ಶ್ರೀ ಸುಬುಧೇಂದ್ರ ತೀರ್ಥರ ದಿವ್ಯ ಸಾನಿಧ್ಯದಲ್ಲಿ ಲೋಕಾರ್ಪಣೆಯಾಗಲಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಮತ್ತು ಟಿಎನ್‌ಐಟಿ ಲಾಂಛನದಲ್ಲಿ ಸುಗುಣ ರಘು ನಿರ್ಮಿಸಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

Peddi Movie: ಲಕ್ಷಾಂತರ ಜನರ ಎದುರು ದೊಡ್ಡ ಎಡವಟ್ಟು ಮಾಡಿದ ನಟ ರಾಮ್‌ ಚರಣ್!‌ ಕೊನೆಗೆ ಜಸ್‌ಪ್ರೀತ್ ಬುಮ್ರಾ ಬಳಿ ಕ್ಷಮೆ ಕೇಳಿದ್ದೇಕೆ?

ಬುಮ್ರಾ ಫುಟ್‌ಬಾಲ್ ‌ಆಡ್ತಾರಾ? ಪೆದ್ದಿ ಇವೆಂಟ್‌ನಲ್ಲಿ ರಾಮ್ ಚರಣ್ ಎಡವಟ್ಟು

ನಟ ರಾಮ್ ಚರಣ್ ಭೋಪಾಲ್‌ನಲ್ಲಿ ನಡೆದ ತಮ್ಮ 'ಪೆದ್ದಿ' ಚಿತ್ರದ ಕಾರ್ಯಕ್ರಮದಲ್ಲಿ ಕ್ರಿಕೆಟಿಗ ಜಸ್‌ಪ್ರೀತ್ ಬುಮ್ರಾ ಅವರನ್ನು ಹೊಗಳುವ ಭರದಲ್ಲಿ, ಅವರು ಅದ್ಭುತವಾಗಿ ಫುಟ್‌ಬಾಲ್ ಆಡುತ್ತಾರೆ ಎಂದು ಕ್ರೀಡೆಯನ್ನೇ ಅದಲುಬದಲು ಮಾಡಿ ಮಾತನಾಡಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.

Ramayana Movie: ದೀಪಾವಳಿಗೂ ಮುನ್ನವೇ 'ರಾಮಾಯಣ' ರಿಲೀಸ್‌?

ದೀಪಾವಳಿಗೂ ಮುನ್ನವೇ 'ರಾಮಾಯಣ' ರಿಲೀಸ್‌?

Ramayana Movie: ಈ ಚಿತ್ರವನ್ನು ನಿತೇಶ್ ತಿವಾರಿ ನಿರ್ದೇಶನದಲ್ಲಿ ನಮಿತ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ಸೇರಿದಂತೆ ಅನೇಕ ನಟರು ನಟಿಸಿದ್ದಾರೆ. ಇದರ ಮೊದಲ ಭಾಗ 2026ರಲ್ಲಿ ಮತ್ತು ಮುಂದಿನ ಭಾಗ 2027ರಲ್ಲಿ ಬಿಡುಗಡೆಯಾಗಲಿದೆ. 'ರಾಮಾಯಣ' 2026ರ ಅಕ್ಟೋಬರ್ 30 ರಂದು ಬಿಡುಗಡೆಯಾಗಬಹುದು. ಅಂದಹಾಗೆ, ಈ ವರ್ಷದ ಆರಂಭದಲ್ಲಿ ಚಿತ್ರತಂಡ ರಣಬೀರ್ ಕಪೂರ್ ಅವರ ರಾಮನ ಅವತಾರದ ಪ್ರೋಮೋವನ್ನು ಬಿಡುಗಡೆ ಮಾಡಿತ್ತು.

Jana Nayagan: ಸಿಎಂ ವಿಜಯ್ ಅವರನ್ನು ಭೇಟಿಯಾದ ʻಜನ ನಾಯಗನ್ʼ ಸಹ-ನಿರ್ಮಾಪಕ; ಮೂವಿ ರಿಲೀಸ್‌ ಯಾವಾಗ?

ಸಿಎಂ ವಿಜಯ್ ಅವರನ್ನು ಭೇಟಿಯಾದ ʻಜನ ನಾಯಗನ್ʼ ಸಹ-ನಿರ್ಮಾಪಕ

Jana Nayagan: ನಟನಾಗಿ ವಿಜಯ್ ಅವರ ಕೊನೆಯ ಚಿತ್ರ ಜನ ನಾಯಗನ್ ಐದು ತಿಂಗಳಿನಿಂದ ಸುದ್ದಿಯಲ್ಲಿದೆ. ಎಚ್ ವಿನೋತ್ ನಿರ್ದೇಶನದ ಚಿತ್ರವನ್ನು ಬಿಡುಗಡೆ ಮಾಡಲು ತಂಡ ನಿರ್ಧರಿಸಿತ್ತು. ಆದರೆ ಕೆಲವು ದಿನಗಳ ಮೊದಲು (ಸಿಬಿಎಫ್‌ಸಿ) ವಿಚಾರದಲ್ಲಿ ಸಿಲುಕಿಕೊಂಡಿದೆ. ಶನಿವಾರ, ಲೋಹಿತ್ ಎನ್‌ಕೆ ಸಿಎಂ ವಿಜಯ್ ಅವರನ್ನು ಭೇಟಿಯಾಗಿ ಅಭಿನಂದಿಸಿದ್ದಾರೆ. ಹೀಗಾಗಿ ಫ್ಯಾನ್ಸ್‌, ಸಿನಿಮಾ ಅಪ್‌ಡೇಟ್‌ಗೆ ನಿರೀಕ್ಷಿಸುತ್ತಿದ್ದಾರೆ.

Loading...