ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Chiranjeevi: ಸಿನಿಮಾ ನೋಡುವಾಗಲೇ ಚಿರಂಜೀವಿ ಅಭಿಮಾನಿ ಕುಸಿದು ಬಿದ್ದು ಸಾವು

ಸಿನಿಮಾ ನೋಡುವಾಗಲೇ ಚಿರಂಜೀವಿ ಅಭಿಮಾನಿ ಕುಸಿದು ಬಿದ್ದು ಸಾವು

Chiranjeevi: ಚಿರಂಜೀವಿ ಮತ್ತು ನಯನತಾರಾ ಅಭಿನಯದ ' ಮನ ಶಂಕರ ವರ ಪ್ರಸಾದ್ ಗಾರು' ಚಿತ್ರ ಜನವರಿ 12, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಸಿನಿಮಾ ಮಂದಿರಗಳ ವೀಡಿಯೊಗಳು ಮತ್ತು ಫೋಟೋಗಳು ಇಂಟರ್ನೆಟ್‌ನಲ್ಲಿ ದಿನವಿಡೀ ಟ್ರೆಂಡಿಂಗ್ ಆಗಿದ್ದವು. ಆದಾಗ್ಯೂ, ಹೈದರಾಬಾದ್‌ನ ಥಿಯೇಟರ್‌ನಲ್ಲಿ ಒಂದು ದುರಂತ ಘಟನೆ ಸಂಭವಿಸಿದೆ. ಅಭಿಮಾನಿಯೊಬ್ಬರು ಸಿನಿಮಾ ನೋಡುತ್ತಿದ್ದಾಗ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸಿನಿಮಾ ಪ್ರದರ್ಶನದ ಸಮಯದಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದರು.

Yash:  ಪಾರ್ಟ್​ನರ್​ ಆಗಿರುವ ಹೆಮ್ಮೆಯಿದೆ!  ನಿರ್ಮಾಪಕ ನಮಿತ್ ಮಲ್ಹೋತ್ರಾ ಬಗ್ಗೆ ಯಶ್‌ ಪೋಸ್ಟ್‌

ನಿರ್ಮಾಪಕ ನಮಿತ್ ಮಲ್ಹೋತ್ರಾ ಬಗ್ಗೆ ಯಶ್‌ ಪೋಸ್ಟ್‌

Yash Ramayana: ಮುಂಬರುವ ಚಿತ್ರ ರಾಮಾಯಣದ ಸುತ್ತ ನಿರೀಕ್ಷೆಗಳು ಹೆಚ್ಚಾಗುತ್ತಿರುವಂತೆಯೇ, ನಟ-ನಿರ್ಮಾಪಕ ಯಶ್ ಇತ್ತೀಚೆಗೆ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರಿಗೆ ಹೃತ್ಪೂರ್ವಕ ಸಂದೇಶವನ್ನು ಹಂಚಿಕೊಂಡರು . ಕೆಲವು ದಿನಗಳ ಹಿಂದೆ ಯಶ್ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಸ್ವಲ್ಪ ಸಮಯದ ನಂತರ ಈ ಅಪ್‌ಡೇಟ್‌ ಬಂದಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ವಿಶೇಷವಾಗಿ ಶುಭಕೋರಿದ್ದರು. ಇದೀಗ, ಯಶ್​ ಧನ್ಯವಾದ ಅರ್ಪಿಸಿದ್ದಾರೆ.

Prabhas: ಮಿಶ್ರ ಪ್ರತಿಕ್ರಿಯೆ ಇದ್ದರೂ 3 ದಿನಕ್ಕೆ 183 ಕೋಟಿ ರೂ. ಬಾಚಿಕೊಂಡ ʻದಿ ರಾಜಾ ಸಾಬ್‌ʼ; ಆದ್ರೆ ನಿರ್ಮಾಪಕರು ಲಾಭ ಗಳಿಸ್ತಾರಾ?

3 ದಿನಕ್ಕೆ 183 ಕೋಟಿ ಬಾಚಿದ ರಾಜಾ ಸಾಬ್; ಆದರೂ ನಿರ್ಮಾಪಕರಿಗೆ ನಷ್ಟದ ಭೀತಿ?

Prabhas The Raja Saab: 'ದಿ ರಾಜಾ ಸಾಬ್' ಚಿತ್ರವು 3 ದಿನಗಳಲ್ಲಿ ಜಾಗತಿಕವಾಗಿ 183 ಕೋಟಿ ರೂ. ಗಳಿಸಿದೆ. ಆದರೆ, 400 ಕೋಟಿ ರೂ. ಬಜೆಟ್‌ನ ಈ ಚಿತ್ರಕ್ಕೆ ಭಾನುವಾರವೇ ಕಲೆಕ್ಷನ್ ಕುಸಿತ ಕಂಡಿರುವುದು ಆತಂಕ ಮೂಡಿಸಿದೆ. ಇಂದು ಚಿರಂಜೀವಿ ಅವರ ಸಿನಿಮಾ ಬಿಡುಗಡೆಯಾಗಿರುವುದರಿಂದ ಮತ್ತು ರಾಜಾ ಸಾಬ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದರಿಂದ, ನಿರ್ಮಾಪಕರಿಗೆ ನಿರೀಕ್ಷಿತ ಲಾಭ ಸಿಗುವುದು ಅನುಮಾನ ಎಂದು ಬಾಕ್ಸ್ ಆಫೀಸ್ ಪಂಡಿತರು ವಿಶ್ಲೇಷಿಸಿದ್ದಾರೆ.

ಇತಿಹಾಸ ಸೃಷ್ಟಿಸಿದ ʻಕುಣಿಗಲ್ ಉತ್ಸವʼ; 35 ಸಾವಿರ ಜನರ ಎದುರು ʻಕಿಚ್ಚʼ ಸುದೀಪ್‌ಗೆ ಸನ್ಮಾನಿಸಿದ ಡಿ.ಕೆ. ಶಿವಕುಮಾರ್‌

ಕುಣಿಗಲ್ ಉತ್ಸವ: 35 ಸಾವಿರ ಜನರ ಎದುರು ಕಿಚ್ಚನಿಗೆ ಡಿಕೆ ಶಿವಕುಮಾರ್ ಸನ್ಮಾನ

ಕುಣಿಗಲ್ ನಗರದ ಇತಿಹಾಸದಲ್ಲೇ ಮೊಟ್ಡ ಮೊದಲ ಬಾರಿಗೆ ಸುಮಾರು 35 ಸಾವಿರ ಜನರ ಸಮ್ಮುಖದಲ್ಲಿ 'ಕುಣಿಗಲ್ ಉತ್ಸವ' ನಡೆಯಿತು. ಸಿನಿಮಾ ಸೆಟ್‌ಗಿಂತಲೂ ಅದ್ದೂರಿಯಾಗಿ ಹಾಕಲಾಗಿದ್ದ ಬೃಹತ್ ಸೆಟ್‌ನಲ್ಲಿ ಶಾಸಕ‌ ಡಾ. ರಂಗನಾಥ್ ಅವರ ನೇತೃತ್ವದಲ್ಲಿ ಈ ವರ್ಣರಂಜಿತ ಸಮಾರಂಭ ನಡೆಯಿತು. ಮೂರು ದಿನಗಳ ಕಾಲ‌ ನಡೆದ ಈ ಅದ್ದೂರಿ ಉತ್ಸವದ ಕೊನೆಯ ದಿನದ ಸಮಾರಂಭವು ಕಿಚ್ಚ ಸುದೀಪ್, ಮಾಲಾಶ್ರೀ, ಅನು ಪ್ರಭಾಕರ್, ನೆನಪಿರಲಿ ಪ್ರೇಮ್, ಡಾಲಿ ಧನಂಜಯ್, ಜೈದ್ ಖಾನ್, ಆರಾಧನಾ ರಾಮ್, ನಿರ್ಮಾಪಕ ಸಂಜಯ್‌ ಗೌಡ್ರು‌ ಸೇರಿದಂತೆ ಅನೇಕ ಸ್ಯಾಂಡಲ್‌ವುಡ್ ತಾರೆಗಳ ಆಗಮನದಿಂದ ರಂಗೇರಿತ್ತು. ಕೊರೆವ ಚಳಿಯನ್ನೂ ಲೆಕ್ಕಿಸದೇ 35 ರಿಂದ 40 ಸಾವಿರ ಸಂಖ್ಯೆಯಲ್ಲಿ ನೆರೆದಿದ್ದ ಜನರು ಸತತ ಮೂರು ಗಂಟೆಗಳ ಕಾಲ ನಡೆದ ನವೀನ್ ಸಜ್ಜು, ಚಂದನ್ ಶೆಟ್ಟಿ ಅವರ ಸಂಗೀತ ಸಂಜೆ ಕಾರ್ಯಕ್ರಮವನ್ನು ಖುಷಿಯಿಂದ ಆನಂದಿಸಿದರು.

ʻಡಿಯರ್ ಹಸ್ಬೆಂಡ್ʼ ಸಿನಿಮಾ ಟೀಸರ್‌ ರಿಲೀಸ್‌ ಮಾಡಿದ ಸುದೀಪ್; ಹೊಸ ಪ್ರತಿಭೆಗಳಿಗೆ ʻಕಿಚ್ಚʼ ಹೇಳಿದ್ದೇನು?

'ಡಿಯರ್ ಹಸ್ಬೆಂಡ್' ಟೀಸರ್ ರಿಲೀಸ್: ಹೊಸಬರ ಬೆನ್ನು ತಟ್ಟಿದ ಕಿಚ್ಚ ಸುದೀಪ್!

Dear Husband Teaser: 'ಡಿಯರ್ ಹಸ್ಬೆಂಡ್' ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಹೊಸಬರಿಗೆ ಸಾಥ್ ನೀಡಿದ್ದಾರೆ ಸುದೀಪ್. ಗುರುರಾಜ ಕುಲಕರ್ಣಿ ನಿರ್ದೇಶನದ ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಪ್ರವೀಣ್‌, ಸೂರಜ್ ಗೌಡ ಮತ್ತು ಶರಣ್ಯಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ.

ಮಗಳಿಗೆ ʻಕುವೀರʼ ಎಂದು ನಾಮಕರಣ ಮಾಡಿ ಮೊದಲ ಬಾರಿಗೆ ಫೋಟೋ ಹಂಚಿಕೊಂಡ ನಟ ರಿಷಿ; ಈ ಹೆಸರಿನ ಅರ್ಥ ಏನು?

ರಿಷಿ ಮಗಳ ಹೆಸರು ಕುವೀರ; ಮೊದಲ ವರ್ಷದ ಹುಟ್ಟುಹಬ್ಬಕ್ಕೆ ಫೋಟೋ ರಿವೀಲ್

'ಆಪರೇಷನ್ ಅಲಮೇಲಮ್ಮ' ಮತ್ತು 'ಕವಲುದಾರಿ'ಯಂತಹ ಹಿಟ್ ಸಿನಿಮಾಗಳ ಮೂಲಕ ಮನೆಮಾತಾಗಿರುವ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ರಿಷಿ (Rishi) ಅವರು ಕಳೆದ ವರ್ಷ ಹೆಣ್ಣು ಮಗುವಿನ ತಂದೆಯಾಗಿದ್ದರು. ರಿಷಿ ಅವರು ತಮ್ಮ ಪತ್ನಿ ಸ್ವಾತಿ ಅವರೊಂದಿಗೆ ಮೊದಲ ಮಗುವನ್ನು ಬರಮಾಡಿಕೊಂಡಿದ್ದರು. ಮಗುವಿನ ಆಗಮನದ ಸುದ್ದಿಯನ್ನು ಇನ್‌ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದ ರಿಷಿ, ಇದೀಗ ತಮ್ಮ ಮುದ್ದಾದ ಮಗಳ ಫೋಟೋವನ್ನು ಶೇರ್ ಮಾಡಿದ್ದಾರೆ. ಮತ್ತು ಮಗಳಿಗೆ ಇಟ್ಟಿರುವ ಹೆಸರನ್ನು ಕೂಡ ರಿವೀಲ್‌ ಮಾಡಿದ್ದಾರೆ.

Prabhas: ʻಧುರಂಧರ್‌ʼ ಅಬ್ಬರಕ್ಕೆ ಬಾಲಿವುಡ್‌ನಲ್ಲಿ ಮಂಕಾದ ʻದಿ ರಾಜಾ ಸಾಬ್‌ʼ; 38ನೇ ದಿನದಲ್ಲೂ ಕಲೆಕ್ಷನ್‌ ಕಿಂಗ್‌ ಆದ ರಣವೀರ್‌ ಸಿಂಗ್‌!

'ರಾಜಾ ಸಾಬ್'ಗೆ ರಣವೀರ್ ಪಂಚ್: 38ನೇ ದಿನವೂ 'ಧುರಂಧರ್' ಕಲೆಕ್ಷನ್ ಕಿಂಗ್!

Ranveer Singh: 'ಧುರಂಧರ್' ಸಿನಿಮಾ 38ನೇ ದಿನವೂ ಬಾಕ್ಸ್ ಆಫೀಸ್‌ನಲ್ಲಿ ಪಾರುಪತ್ಯ ಮೆರೆದಿದೆ. ವಿಶ್ವಾದ್ಯಂತ 1280+ ಕೋಟಿ ರೂ. ಗಳಿಸಿರುವ ಈ ಚಿತ್ರ, ಹಿಂದಿ ಬೆಲ್ಟ್‌ನಲ್ಲಿ ಪ್ರಭಾಸ್ ಅವರ ಹೊಸ ಚಿತ್ರ 'ದಿ ರಾಜಾ ಸಾಬ್'ಗಿಂತ ಹೆಚ್ಚು ಗಳಿಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ʻಟಾಕ್ಸಿಕ್‌ʼ ಟೀಸರ್‌ ಬಗ್ಗೆ ʻಆಮ್‌ ಆದ್ಮಿʼ ಕೆಂಡಾಮಂಡಲ;  ʻಇದೇನಾ ಫ್ಯಾಮಿಲಿ ಸಿನಿಮಾ?' ಎಂದು ಮಹಿಳಾ ಆಯೋಗಕ್ಕೆ ದೂರು!

'ಟಾಕ್ಸಿಕ್' ಟೀಸರ್ ವಿರುದ್ಧ ಕೆಂಡಾಮಂಡಲ: ಮಹಿಳಾ ಆಯೋಗಕ್ಕೆ ದೂರು ಸಲ್ಲಿಕೆ!

Toxic Movie Teaser: ಯಶ್‌ ಅವರ ಟಾಕ್ಸಿಕ್‌ ಸಿನಿಮಾದ ಟೀಸರ್‌ ವಿರುದ್ಧ ಆಮ್ ಆದ್ಮಿ ಪಕ್ಷದ ಮಹಿಳಾ ಘಟಕ ಇಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಟೀಸರ್‌ನಲ್ಲಿರುವ ಅಶ್ಲೀಲ ದೃಶ್ಯಗಳು ಮಹಿಳೆಯರು ಮತ್ತು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತಿವೆ ಎಂದು ಆರೋಪಿಸಲಾಗಿದೆ.

ʻಬಿಗ್‌ ಬಾಸ್‌ 12ʼ ಫಿನಾಲೆ ರಣರಂಗ; ಕೊನೇ ವಾರದಲ್ಲಿ 6 ಮಂದಿಗೆ ನಾಮಿನೇಷನ್‌ ಭೀತಿ, ಮಿಡ್‌ ವೀಕ್‌ನಲ್ಲಿ ಮನೆಯಿಂದ ಎಲಿಮಿನೇಟ್‌ ಆಗೋದ್ಯಾರು?

ಫಿನಾಲೆ ವಾರದಲ್ಲಿ ಶಾಕಿಂಗ್ ಟ್ವಿಸ್ಟ್ ನೀಡಿದ ಬಿಗ್ ಬಾಸ್! ಯಾರು ಎಲಿಮಿನೇಟ್?

Bigg Boss Kannada Season 12: ಬಿಗ್‌ ಬಾಸ್‌ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಮನೆಯಲ್ಲಿ ಆತಂಕ ಮನೆಮಾಡಿದೆ. ಧನುಷ್ ಹೊರತುಪಡಿಸಿ ಉಳಿದ ಆರು ಸ್ಪರ್ಧಿಗಳು ನಾಮಿನೇಟ್ ಆಗಿದ್ದು, ಈ ವಾರ 'ಮಿಡ್ ವೀಕ್ ಎಲಿಮಿನೇಷನ್' ನಡೆಯಲಿದೆ. ಮಂಗಳವಾರದವರೆಗೆ ಮಾತ್ರ ವೋಟಿಂಗ್ ಅವಕಾಶವಿದ್ದು, ಯಾರು ಹೊರಹೋಗುತ್ತಾರೆಂಬ ಕುತೂಹಲ ಹೆಚ್ಚಿದೆ.

ʻಬಿಗ್‌ ಬಾಸ್‌ʼ ಮನೆಯಲ್ಲಿ 2ನೇ ಬಾರಿಗೆ ಭಾವುಕರಾಗಿ ಕಣ್ಣೀರಿಟ್ಟ ರಘು; ರಕ್ಷಿತಾ ಶೆಟ್ಟಿ ಪ್ರಬುದ್ಧತೆಗೆ ಕಿಚ್ಚ ಸುದೀಪ್‌ ಬಹುಪರಾಕ್!

ರಘುಗೆ ಒಲಿದ 'ಉತ್ತಮ' ಪಟ್ಟ; ರಕ್ಷಿತಾ ಪ್ರಬುದ್ಧತೆಗೆ ಕಿಚ್ಚನ ಬಹುಪರಾಕ್

Bigg Boss Kannada Season 12: ಬಿಗ್‌ ಬಾಸ್‌ ಫಿನಾಲೆ ಸಮೀಪಿಸುತ್ತಿದ್ದಂತೆ ಮನೆಯಲ್ಲಿ ಭಾವನಾತ್ಮಕ ಕ್ಷಣಗಳು ಎದುರಾಗಿವೆ. 'ಸೂಪರ್ ಸಂಡೇ' ಸಂಚಿಕೆಯಲ್ಲಿ ರಕ್ಷಿತಾ ಶೆಟ್ಟಿ ತಮ್ಮ 'ಉತ್ತಮ' ಮೆಡಲ್ ಅನ್ನು ರಘುಗೆ ನೀಡುವ ಮೂಲಕ ಎಲ್ಲರ ಮನಗೆದ್ದರು. ಇದನ್ನು ಕಂಡು ರಘು ಭಾವುಕರಾದರು.

Ekam OTT:  ಏಳು ಕಥೆಗಳ ಒಂದು ಸುಂದರ ಪ್ರಯಾಣ;  ಒಟಿಟಿಗೆ ಬಂದಿದೆ ಏಕಂ ಸಿರೀಸ್‌!

ಏಳು ಕಥೆಗಳ ಒಂದು ಸುಂದರ ಪ್ರಯಾಣ; ಒಟಿಟಿಗೆ ಬಂದಿದೆ ಏಕಂ ಸಿರೀಸ್‌!

Raj B shetty: ಏಕಂ ಚಿತ್ರದಲ್ಲಿ ಹಲವಾರು ಕಥೆಗಳಿವೆ. ಇದು ಬೇರೆ ರೀತಿಯ ಚಿತ್ರವೇ ಆಗಿದೆ. ಕರಾವಳಿ ಸೊಡಗಿನ ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಇದ್ದಾರೆ. ಕಥಾ ಸಂಗ್ರಹವನ್ನು ಹೊಂದಿರುವ "ಏಕಂ" ಎಂಬ ವೆಬ್ ಸರಣಿ ಇದೀಗ ಒಟಿಟಿಯಲ್ಲಿ ಬಿಡುಗಡೆ ಆಗಿದೆ."ಏಕಂ" ಒಂದು ವಿಭಿನ್ನವಾದ ಕಥಾ ಸಂಗ್ರಹವಾಗಿದೆ. ಈ ವೆಬ್ ಸರಣಿಯು ಕರಾವಳಿ ಕರ್ನಾಟಕದಲ್ಲಿ ನಡೆಯುವ 7 ವಿವಿಧ‌ ಕಥೆಗಳನ್ನು 7 ಸಂಚಿಕೆಗಳಲ್ಲಿ ಹೇಳಲಿದೆ.

‌ʻಜನ ನಾಯಗನ್ʼ ಪೈಪೋಟಿ ಇಲ್ಲದೇ ಪೊಂಗಲ್‌ಗೆ ಸಿಂಗಲ್‌ ಆಗಿ ಅಖಾಡಕ್ಕಿಳಿದ ʻಪರಾಶಕ್ತಿʼ ಚಿತ್ರದ ಕಲೆಕ್ಷನ್‌ ಎಷ್ಟು? ದಾಖಲೆ ಬರೆಯುತ್ತಾರಾ ಶಿವಕಾರ್ತಿಕೇಯನ್?

'ಜನ ನಾಯಗನ್' ಇಲ್ಲದ ಅಖಾಡದಲ್ಲಿ 'ಪರಾಶಕ್ತಿ' ದರ್ಬಾರ್ ಮಾಡ್ತಾ?

Sivakarthikeyan: ದಳಪತಿ ವಿಜಯ್ ಅವರ 'ಜನ ನಾಯಗನ್' ಪೋಸ್ಟ್‌ಪೋನ್‌ ಆಗಿದ್ದರಿಂದ 'ಪರಾಶಕ್ತಿ' ಚಿತ್ರವು ಪೊಂಗಲ್‌ಗೆ ಸೋಲೋ ಆಗಿ ಬಿಡುಗಡೆಯಾಗಿದೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ಮೊದಲ ದಿನ ಈ ಸಿನಿಮಾವು ಜಾಗತಿಕವಾಗಿ 27 ಕೋಟಿ ರೂ. ಗಳಿಸಿದೆ.

Prashant Tamang: ʻಇಂಡಿಯನ್‌ ಐಡಲ್‌ 3’ ವಿನ್ನರ್‌, ಗಾಯಕ ಪ್ರಶಾಂತ್‌ ತಮಾಂಗ್‌ ಇನ್ನಿಲ್ಲ

ʻಇಂಡಿಯನ್‌ ಐಡಲ್‌ 3’ ವಿನ್ನರ್‌ ಪ್ರಶಾಂತ್‌ ತಮಾಂಗ್‌ ಇನ್ನಿಲ್ಲ

Indian Idol 3 Winner: ಇಂಡಿಯನ್ ಐಡಲ್‌ನ ಮೂರನೇ ಸೀಸನ್ ಗೆದ್ದ ನಂತರ ಮನೆಮಾತಾದ ಗಾಯಕ ಮತ್ತು ನಟ ಪ್ರಶಾಂತ್ ತಮಾಂಗ್ಭಾ ನುವಾರ ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು.ಅವರಿಗೆ 43 ವರ್ಷ ವಯಸ್ಸಾಗಿತ್ತು. ದೆಹಲಿಯ ಮನಯೆಲ್ಲಿರುವಾಗ ಹೃದಯಾಘಾತದಿಂದ ಕುಸಿದು ಬಿದ್ದ ಪ್ರಶಾಂತ್ ತಮಾಂಗ್ ನಿಧನರಾಗಿದ್ದಾರೆ.

ʻದಿ ರಾಜಾ ಸಾಬ್‌ʼ ಕಲೆಕ್ಷನ್‌ನಲ್ಲಿ ಕುಸಿತ; ಪ್ರಭಾಸ್‌ ಸಿನಿಮಾಗೆ 2ನೇ ದಿನ ಸಿಕ್ಕ ರೆಸ್ಪಾನ್ಸ್‌ ಹೇಗಿದೆ ನೋಡಿ?

ಬಾಕ್ಸ್ ಆಫೀಸ್‌ನಲ್ಲಿ ʻರಾಜಾ ಸಾಬ್‌ʼಗೆ ಆಘಾತ: 2ನೇ ದಿನದ ಗಳಿಕೆಯಲ್ಲಿ ಕುಸಿತ

The Raja Saab Box Office Collection: 'ದಿ ರಾಜಾ ಸಾಬ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಿಶ್ರ ಫಲಿತಾಂಶ ಕಂಡಿದೆ. ಮೊದಲ ದಿನ ವಿಶ್ವಾದ್ಯಂತ 112 ಕೋಟಿ ಗಳಿಸಿದ್ದ ಚಿತ್ರ, ಎರಡನೇ ದಿನ ಭಾರತದಲ್ಲಿ ಶೇ.50ರಷ್ಟು ಕುಸಿತ ಕಂಡು ಕೇವಲ 27.85 ಕೋಟಿ ರೂ. ಗಳಿಸಿದೆ.

Rakshith Shetty: ಹುಟ್ಟೂರಿನಲ್ಲಿ ನೇಮೋತ್ಸವದಲ್ಲಿ ಭಾಗಿಯಾದ ರಕ್ಷಿತ್‌ ಶೆಟ್ಟಿ

ಹುಟ್ಟೂರಿನಲ್ಲಿ ನೇಮೋತ್ಸವದಲ್ಲಿ ಭಾಗಿಯಾದ ರಕ್ಷಿತ್‌ ಶೆಟ್ಟಿ

Simple Star Rakshith: ನಟ ರಕ್ಷಿತ್‌ ಶೆಟ್ಟಿ ಇತ್ತೀಚೆಗೆ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮುಂಬರುವ ಸಿನಿಮಾಗಳ ಸ್ಕ್ರಿಪ್ಟ್ ಕೆಲಸದಲ್ಲಿ ರಕ್ಷಿತ್ ಶೆಟ್ಟಿ ಅವರು ಬ್ಯುಸಿಯಾಗಿದ್ದಾರೆ. ಇದೀಗ . ಉಡುಪಿ ತಾಲೂಕಿನ ಅಲೆವೂರಿನ ಕಲ್ಯಾಣ ನಗರದಲ್ಲಿ ನೇಮೋತ್ಸವ ನಡೆದಿದೆ. ಅಲೆವೂರು ದೊಡ್ಡಮನೆ ಮನೆತನದವರು ನಿರ್ವಹಿಸುವ ನೇಮೋತ್ಸವದಲ್ಲಿ ಭಾಗಿಯಾಗಿದ್ದಾರೆ. ವೈದ್ಯನಾಥ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಈ ವಿಡಿಯೋಗಳು ವೈರಲ್‌ ಆಗಿವೆ.

ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಹಿಂದಿ ʻಬಿಗ್‌ ಬಾಸ್‌ʼ ಖ್ಯಾತಿಯ ನಟಿ ಕೃತಿ ವರ್ಮಾ; ʻಕರಿಕಾಡʼ ಸಿನಿಮಾದಲ್ಲಿ ರತುನಿಯಾಗಿ ಮಿಂಚಿದ ಬಾಲಿವುಡ್‌ ಬ್ಯೂಟಿ

'ಕರಿಕಾಡ'ದಲ್ಲಿ ಹಿಂದಿ 'ಬಿಗ್ ಬಾಸ್' ಬ್ಯೂಟಿ ಕೃತಿ ವರ್ಮಾ ಮಸ್ತ್ ಡ್ಯಾನ್ಸ್!

Bollywood Actress Kriti Verma: ನಟಿ ಕೃತಿ ವರ್ಮಾ ಸ್ಯಾಂಡಲ್‌ವುಡ್‌ಗೆ ಅದ್ದೂರಿಯಾಗಿ ಕಾಲಿಟ್ಟಿದ್ದಾರೆ. ಗಿಲ್ಲಿ ವೆಂಕಟೇಶ್ ನಿರ್ದೇಶನದ 'ಕರಿಕಾಡ' ಚಿತ್ರದ 'ರತುನಿ ರತುನಿ' ಎಂಬ ಹಾಡಿನಲ್ಲಿ ಅವರು ಸಖತ್ ಸ್ಟೆಪ್ ಹಾಕಿದ್ದಾರೆ. ಕಾಡ ನಟರಾಜ್ ನಾಯಕನಾಗಿರುವ ಈ ಚಿತ್ರಕ್ಕೆ ಅವರ ಪತ್ನಿ ದೀಪ್ತಿ ದಾಮೋದರ್ ಬಂಡವಾಳ ಹೂಡಿರುವುದು ವಿಶೇಷ.

ವಿಜಯ್‌ ದೇವರಕೊಂಡ ಸಿನಿಮಾಗಳ ಮೇಲೆ ಸಂಘಟಿತ ದಾಳಿ; ಆಘಾತಕಾರಿ ವಿಚಾರ ಹೊರಹಾಕಿದ ತೆಲುಗು ನಟ

ಚಿರು ಚಿತ್ರಕ್ಕೆ ಕೋರ್ಟ್ ರಕ್ಷಣೆ: ವಿಜಯ್ ದೇವರಕೊಂಡಗೆ ಖುಷಿಯೋ? ಬೇಸರವೋ?

Actor Vijay Deverakonda: ಚಿರಂಜೀವಿ ಅವರ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರಕ್ಕೆ ಬುಕ್‌ ಮೈ ಶೋನಲ್ಲಿ ರೇಟಿಂಗ್‌ ಬ್ಯಾನ್‌ ಮಾಡಿರುವ ಕೋರ್ಟ್ ಆದೇಶದ ಬಗ್ಗೆ ವಿಜಯ್‌ ದೇವರಕೊಂಡ ಪ್ರತಿಕ್ರಿಯಿಸಿದ್ದಾರೆ. 'ಡಿಯರ್ ಕಾಮ್ರೇಡ್' ಸಮಯದಿಂದಲೇ ತಮ್ಮ ಮೇಲೂ ಸಂಘಟಿತ ದಾಳಿ ನಡೆಯುತ್ತಿದೆ ಎಂದು ಅವರು ನೋವು ತೋಡಿಕೊಂಡಿದ್ದಾರೆ.

ಚಿರಂಜೀವಿ ಸಿನಿಮಾಕ್ಕೂ ದ್ವೇಷಿಗಳಿದ್ದಾರಾ? ʻಡೆವಿಲ್‌ʼ, ʻಮಾರ್ಕ್‌ʼ, ʻ45ʼ ಹಾದಿಯನ್ನೇ ತುಳಿದ ʻಮನ ಶಂಕರ ವರಪ್ರಸಾದ್‌ ಗಾರುʼ!

ಚಿರಂಜೀವಿ ಹೊಸ ಚಿತ್ರಕ್ಕೆ ನೆಗೆಟಿವ್ ರೇಟಿಂಗ್ ಕೊಡುವವರಿಗೆ ಶಾಕ್!

Mega Star Chiranjeevi: ಬಹುನಿರೀಕ್ಷಿತ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರತಂಡ ಮಹತ್ವದ ನಿರ್ಧಾರ ಕೈಗೊಂಡಿದೆ. ಕನ್ನಡದ 'ಡೆವಿಲ್' ಮತ್ತು '45' ಸಿನಿಮಾಗಳಂತೆ, ಈ ಚಿತ್ರಕ್ಕೂ ಬುಕ್‌ಮೈಶೋನಲ್ಲಿ ರೇಟಿಂಗ್ ಮತ್ತು ವಿಮರ್ಶೆ ನೀಡದಂತೆ ಕೋರ್ಟ್ ತಡೆಯಾಜ್ಞೆ ತಂದಿದೆ.

Bigg Boss 12: ʻನನಗೆ ರೇಗಿಸಬೇಡ, ಅದು ನಂಗೆ ಇಷ್ಟ ಆಗಲ್ಲʼ; ಫಿನಾಲೆ ಹೊಸ್ತಿಲಲ್ಲಿ ಗಿಲ್ಲಿಗೆ ಕಾವ್ಯ ಶೈವ ಖಡಕ್ ವಾರ್ನಿಂಗ್!

ಬಿಗ್ ಬಾಸ್ 12: ಸುದೀಪ್ ಎದುರೇ ಹೈಡ್ರಾಮಾ! ಗಿಲ್ಲಿಗೆ ಕಾವ್ಯ ವಾರ್ನಿಂಗ್‌

Bigg Boss Kannada Season 12: ಬಿಗ್‌ ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯಲ್ಲಿ ಅನಿರೀಕ್ಷಿತ ತಿರುವುಗಳು ಎದುರಾಗಿವೆ. 'ಸೂಪರ್ ಸಂಡೇ' ಸಂಚಿಕೆಯಲ್ಲಿ ಕಾವ್ಯ ಶೈವ ಅವರು ಗಿಲ್ಲಿ ನಟನ ವಿರುದ್ಧ ಸಿಡಿದೆದ್ದಿದ್ದಾರೆ. "ನನ್ನನ್ನು ರೇಗಿಸಬೇಡ, ಅದು ನನಗೆ ಇಷ್ಟ ಆಗಲ್ಲ" ಎಂದು ಸುದೀಪ್ ಎದುರೇ ನೇರವಾಗಿ ಹೇಳುವ ಮೂಲಕ ಶಾಕ್ ನೀಡಿದ್ದಾರೆ.

ʻಬಿಗ್‌ ಬಾಸ್‌ʼ ಸೂರಜ್ ಸಿಂಗ್‌ಗೆ ಒಲಿದ 'ಪವಿತ್ರ ಬಂಧನ'; ಇನ್ಮೇಲೆ ಪ್ರತಿದಿನ ಕಲರ್ಸ್‌ ಕನ್ನಡದಲ್ಲಿ ಬರ್ತಾರೆ ವೈಲ್ಡ್ ಕಾರ್ಡ್ ಹೀರೋ!

Pavitra bandhana: ‌ಬಿಗ್ ಬಾಸ್ ಮುಗಿಯುವ ಮುನ್ನವೇ ಸೂರಜ್‌ಗೆ ಜಾಕ್‌ಪಾಟ್

Bigg Boss Suraj Singh: ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆಯೇ ಸೂರಜ್‌ ಸಿಂಗ್‌ ಅವರಿಗೆ ಬಂಪರ್ ಆಫರ್ ಪಡೆದಿದ್ದಾರೆ. ಕಲರ್ಸ್ ಕನ್ನಡದ 'ಪವಿತ್ರ ಬಂಧನ' ಧಾರಾವಾಹಿಗೆ ನಾಯಕನಾಗಿ ಆಯ್ಕೆಯಾಗುವ ಮೂಲಕ ಅವರು ಕಿರುತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

Vivek Oberoi : ಆಸ್ಕರ್‌ ರೇಸ್‌ನಲ್ಲಿ ಕಾಂತಾರ; ಅಭಿನಂದಿಸಿ ಹೊಗಳಿದ  ವಿವೇಕ್ ಒಬೆರಾಯ್

ಆಸ್ಕರ್‌ ರೇಸ್‌ನಲ್ಲಿ ಕಾಂತಾರ; ಅಭಿನಂದಿಸಿ ಹೊಗಳಿದ ವಿವೇಕ್ ಒಬೆರಾಯ್

Kantara: 98ನೇ ಅಕಾಡೆಮಿ ಪ್ರಶಸ್ತಿಗಳಲ್ಲಿ ಪರಿಗಣನೆಗೆ ಅರ್ಹವಾಗಿರುವ 317 ಚಲನಚಿತ್ರಗಳ ಪಟ್ಟಿಯನ್ನು ಅಕಾಡೆಮಿ ಪ್ರಕಟಿಸಿದೆ. ಇದರಲ್ಲಿ ಅತ್ಯುತ್ತಮ ಚಿತ್ರ ವಿಭಾಗಕ್ಕೆ ಅರ್ಹತೆ ಪಡೆದ 201 ಚಲನಚಿತ್ರಗಳು ಸೇರಿವೆ. ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ನಾಲ್ಕು ಭಾರತೀಯ ಚಲನಚಿತ್ರಗಳೆಂದರೆ ರಿಷಬ್ ಶೆಟ್ಟಿ ಅವರ ಕಾಂತಾರ: ಅಧ್ಯಾಯ 1, ಅನುಪಮ್ ಖೇರ್ ಅವರ ತನ್ವಿ ದಿ ಗ್ರೇಟ್, ಎಂ. ಶಶಿಕುಮಾರ್ ಅವರ ಪ್ರವಾಸಿ ಕುಟುಂಬ ಮತ್ತು ಅನಿಮೇಟೆಡ್ ಮಹಾಕಾವ್ಯ ಮಹಾವತಾರ ನರಸಿಂಹ.

ʻಬಿಗ್‌ ಬಾಸ್‌ʼ ಕನ್ನಡ 12ರಲ್ಲಿ ರಘುಗೆ ಒಮ್ಮೆಯೂ ಸಿಗಲಿಲ್ಲ ʻಉತ್ತಮʼ; ಬೇಸರಗೊಂಡ ಗೆಳೆಯನಿಗೆ ಖತರ್ನಾಕ್‌ ಸಲಹೆ ಕೊಟ್ಟ ಗಿಲ್ಲಿ ನಟ!

ರಘುಗೆ ಒಮ್ಮೆಯೂ ಸಿಗದ 'ಉತ್ತಮ'; ಗೆಳೆಯನ ಬೇಸರಕ್ಕೆ ಗಿಲ್ಲಿಯ ಖತರ್ನಾಕ್ ಸಲಹೆ

Bigg Boss Kannada 12 Update: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ನಡುವೆ ಅಸಮಾಧಾನ ಹೊಗೆಯಾಡುತ್ತಿದೆ. ಸದಾ ಅಡುಗೆ ಮತ್ತು ಟಾಸ್ಕ್‌ನಲ್ಲಿ ತೊಡಗಿಸಿಕೊಂಡರೂ ತಮಗೆ ಒಮ್ಮೆಯೂ 'ಉತ್ತಮ' ಪಟ್ಟ ಸಿಕ್ಕಿಲ್ಲ ಎಂದು ರಘು ಬೇಸರ ವ್ಯಕ್ತಪಡಿಸಿದ್ದಾರೆ.

ʻಬಿಗ್‌ ಬಾಸ್‌ ಕನ್ನಡ 12ʼ ಮುಗಿಯೋದ್ರೊಳಗೆ ಅಶ್ವಿನಿ ಗೌಡ - ಧ್ರುವಂತ್‌ ಕನಸನ್ನು ನನಸು ಮಾಡಿದ ʻಕಿಚ್ಚʼ ಸುದೀಪ್;‌ ಕಣ್ಣೀರಿಟ್ಟ ರಾಜಮಾತೆ!

Bigg Boss 12 ಫಿನಾಲೆಗೂ ಮುನ್ನ ಅಶ್ವಿನಿ-ಧ್ರುವಂತ್‌ಗೆ ದೊಡ್ಡ ಉಡುಗೊರೆ!

Bigg Boss Kannada 12 Update: ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಒಂದು ವಾರ ಬಾಕಿ ಇರುವಂತೆ, ಕಿಚ್ಚ ಸುದೀಪ್ ಅವರು ಈ ಸೀಸನ್‌ನ ಕೊನೆಯ 'ಕಿಚ್ಚನ ಚಪ್ಪಾಳೆ'ಯನ್ನು ಅಶ್ವಿನಿ ಗೌಡ ಮತ್ತು ಧ್ರುವಂತ್‌ಗೆ ನೀಡಿ ಗೌರವಿಸಿದ್ದಾರೆ. ಈ ಸೀಸನ್‌ನಲ್ಲಿ ಒಮ್ಮೆಯೂ ಕ್ಯಾಪ್ಟನ್ ಆಗದ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ಪಡೆಯಬೇಕೆಂಬ ದೊಡ್ಡ ಕನಸಿತ್ತು.

ʻಕೆಜಿಎಫ್ʼ ರೈಟರ್ ಸಿನಿಮಾಗೆ ಸಾಥ್‌ ನೀಡಿದ ಬಾಲಿವುಡ್‌ನ ರೆಮೋ ಡಿಸೋಜಾ; ದುಬೈನಲ್ಲಿ ಕನ್ನಡದ 'ವೈಲ್ಡ್ ಟೈಗರ್ ಸಫಾರಿ' ಟೀಸರ್‌ ರಿಲೀಸ್‌!

ದುಬೈ ಗ್ಲೋಬಲ್ ವಿಲೇಜ್‌ನಲ್ಲಿ ಕನ್ನಡದ ವೈಲ್ಡ್ ಟೈಗರ್ ಸಫಾರಿ ಟೀಸರ್‌ ರಿಲೀಸ್

Wild Tiger Safari Update: 'ಕೆಜಿಎಫ್' ಸಂಭಾಷಣೆಕಾರ ಚಂದ್ರಮೌಳಿ ನಿರ್ದೇಶನದ 'ವೈಲ್ಡ್ ಟೈಗರ್ ಸಫಾರಿ' ಚಿತ್ರದ ಟೀಸರ್ ದುಬೈನ ಗ್ಲೋಬಲ್ ವಿಲೇಜ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಬಾಲಿವುಡ್ ನಿರ್ದೇಶಕ ರೆಮೋ ಡಿಸೋಜಾ ಟೀಸರ್ ಲಾಂಚ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Loading...