ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻರಾಕಾʼ ಸಿನಿಮಾ ಶೂಟಿಂಗ್‌ಗಾಗಿ ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್? ತಂದೆಯಿಂದಲೇ ಸಿಕ್ತು ಸ್ಪಷ್ಟನೆ

ಮುಂಬೈಗೆ ಶಿಫ್ಟ್ ಆಗ್ತಾರಾ ನಟ ಅಲ್ಲು ಅರ್ಜುನ್? ತಂದೆ ಹೇಳಿದ್ದೇನು?

ಟಾಲಿವುಡ್‌ ನಟ ಅಲ್ಲು ಅರ್ಜುನ್ ಮುಂಬೈಗೆ ತಮ್ಮ ವಾಸ್ತವ್ಯ ಬದಲಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಅವರ ತಂದೆ ಅಲ್ಲು ಅರವಿಂದ್ ನಿರಾಕರಿಸಿದ್ದಾರೆ. 600 ಕೋಟಿ ಬಜೆಟ್‌ನ 'ರಾಕಾ' ಚಿತ್ರದ ಕೆಲಸಗಳು ಮುಂಬೈನಲ್ಲಿ ನಡೆಯುತ್ತಿರುವುದರಿಂದ ಅಲ್ಲು ಅರ್ಜುನ್‌ ಮುಂಬೈಗೆ ಶಿಫ್ಟ್‌ ಆಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

Yash: 'ಟಾಕ್ಸಿಕ್' ಚಿತ್ರದ ಡಿಜಿಟಲ್ ಹಕ್ಕುಗಳಿಗೆ ಭಾರಿ ಬೇಡಿಕೆ; ಒಟಿಟಿ ರೈಟ್ಸ್‌ಗಾಗಿ ನೆಟ್‌ಫ್ಲಿಕ್ಸ್‌ - ಪ್ರೈಮ್‌ ನಡುವೆ ಪೈಪೋಟಿ

'ಟಾಕ್ಸಿಕ್' ಡಿಜಿಟಲ್ ಹಕ್ಕುಗಳಿಗಾಗಿ ನೆಟ್‌ಫ್ಲಿಕ್ಸ್-ಪ್ರೈಮ್ ನಡುವೆ ಪೈಪೋಟಿ

Toxic Movie Digital Rights: ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ಒಟಿಟಿ ಹಕ್ಕುಗಳಿಗಾಗಿ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಿಡಿಯೋ ನಡುವೆ ಭಾರಿ ಪೈಪೋಟಿ ಏರ್ಪಟ್ಟಿದೆ ಎಂಬ ಮಾಹಿತಿ ಸಿಕ್ಕಿದೆ. ಕನ್ನಡ ಮತ್ತು ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರದ ಡಿಜಿಟಲ್‌ ಹಕ್ಕುಗಳು ಇನ್ನೂ ಕೂಡ ಮಾರಾಟವಾಗಿಲ್ಲ. ಹಾಗಾಗಿ, ಯಾರಿಗೆ ಈ ಚಿತ್ರದ ಹಕ್ಕುಗಳು ಸೇರಲಿವೆ ಎಂಬ ಕುತೂಹಲ ಸಿನಿಪ್ರಿಯರಲ್ಲಿದೆ.

ಗಂಡು ಮಗುವಿಗೆ ತಂದೆಯಾದ ನಟ ಮಂಜು ಪಾವಗಡ; ಪತ್ನಿ ನಂದಿನಿ ಬಗ್ಗೆ ʻಬಿಗ್‌ ಬಾಸ್‌ʼ ವಿನ್ನರ್‌ ಹೇಳಿದ್ದೇನು?

ಗಂಡು ಮಗುವಿಗೆ ತಂದೆಯಾದ ʻಬಿಗ್ ಬಾಸ್ ವಿನ್ನರ್ʼ ಮಂಜು ಪಾವಗಡ

'ಬಿಗ್ ಬಾಸ್' ಖ್ಯಾತಿಯ ಮಂಜು ಪಾವಗಡ ಅವರು ಗಂಡು ಮಗುವಿನ ತಂದೆಯಾಗಿದ್ದಾರೆ. 2025ರ ಕೊನೆಯಲ್ಲಿ ಜನಿಸಿದ ಮಗುವಿಗೆ ಈಗ 7 ತಿಂಗಳು ತುಂಬಿದ್ದು, ಶೀಘ್ರದಲ್ಲೇ ನಾಮಕರಣ ಮಾಡುವುದಾಗಿ ಅವರು ತಿಳಿಸಿದ್ದಾರೆ. ತಮ್ಮ ಪತ್ನಿ ನಂದಿನಿ ಮತ್ತು ಕುಟುಂಬದ ಬಗ್ಗೆ ಮಾತನಾಡಿರುವ ಮಂಜು, ವೃತ್ತಿಜೀವನದಲ್ಲೂ ಯಶಸ್ಸಿನತ್ತ ಹೆಜ್ಜೆ ಇಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಸ್ವಂತ ಮನೆಗೆ ಕಾಲಿಟ್ಟ ʻರಾಧಾ ಕಲ್ಯಾಣʼ ನಟಿ ಕೃತ್ತಿಕಾ ರವೀಂದ್ರ; ಇಲ್ಲಿದೆ ನೋಡಿ ಗೃಹಪ್ರವೇಶದ ವಿಡಿಯೋ

ಬೆಂಗಳೂರಿನಲ್ಲಿ ಸ್ವಂತ ಮನೆ ಕಾಲಿಟ್ಟ ಕೃತ್ತಿಕಾ; ಇದು ಸಾಗರದ ಹುಡುಗಿಯ ಸಾಧನೆ

ಕಿರುತೆರೆ ಮತ್ತು ಹಿರಿತೆರೆಯ ಜನಪ್ರಿಯ ನಟಿ ಕೃತ್ತಿಕಾ ರವೀಂದ್ರ ಅವರು ಬೆಂಗಳೂರಿನಲ್ಲಿ ತಮ್ಮ ಕನಸಿನ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಮೂಲತಃ ಸಾಗರದವರಾದ ಇವರು ತಮ್ಮ ಮನೆಗೆ 'ಶಿವ ಶಕ್ತಿ' ಎಂದು ನಾಮಕರಣ ಮಾಡಿದ್ದಾರೆ. ಕೃತ್ತಿಕಾ ಅವರು ತಮ್ಮ ಸುಂದರ ಮನೆಯ ಗೃಹಪ್ರವೇಶದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ʻಕರ್ನಾಟಕದ ಆ ನನ್ನ ಗ್ರಾಮದ ದೇವಸ್ಥಾನಕ್ಕೆ ಇಂದಿಗೂ ನಮಗೆ ಪ್ರವೇಶವಿಲ್ಲʼ; ಜಾತಿ ತಾರತಮ್ಯದ ಬಗ್ಗೆ 'ಪಂಚಾಯತ್' ನಟ ವಿನೋದ್ ಸೂರ್ಯವಂಶಿ ಬೇಸರ

ʻಹೋಟೆಲ್‌ಗೆ ಹೋದರೆ ನಾವೇ ಪ್ಲೇಟ್‌ ತೊಳೆಯಬೇಕಿತ್ತುʼ; 'ಪಂಚಾಯತ್' ನಟ ವಿನೋದ್

ಪ್ರಸಿದ್ಧ 'ಪಂಚಾಯತ್' ವೆಬ್ ಸರಣಿಯ ನಟ ವಿನೋದ್ ಸೂರ್ಯವಂಶಿ ಅವರು ಇತ್ತೀಚಿನ ಸಂದರ್ಶನದಲ್ಲಿ ಕರ್ನಾಟಕದಲ್ಲಿ ತಾವು ಅನುಭವಿಸಿದ ಭೀಕರ ಜಾತಿ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಹೋಟೆಲ್‌ನಲ್ಲಿ ಊಟ ಮಾಡಿದ ಬಳಿಕ ತಟ್ಟೆ ತೊಳೆಯುವ ಅನಿವಾರ್ಯತೆ ಇತ್ತು ಎಂದಿರುವ ಅವರು ದೇವಸ್ಥಾನಕ್ಕೆ ಪ್ರವೇಶ ನಿರಾಕರಣೆಯಂತಹ ಕಹಿ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.

Monalisa Bhosle: ಕುಂಭಮೇಳದ ಹುಡುಗಿ ಮೊನಾಲಿಸಾ ಭೋಸ್ಲೆ ಗರ್ಭಿಣಿ; ಪೊಲೀಸರಿಗೆ ತಿಳಿಸಿದ ಪತಿ ಫರ್ಮಾನ್

ಮೊನಾಲಿಸಾ ಭೋಸ್ಲೆ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ ಪತಿ ಫರ್ಮಾನ್

Monalisa Bhosle: ಕುಂಭಮೇಳದ ಹುಡುಗಿ ಮೊನಾಲಿಸಾ ಭೋಸ್ಲೆ ಅವರು ನಟ ಫರ್ಮಾನ್ ಖಾನ್ ಅವರನ್ನು ಕೇರಳದ ದೇವಾಲಯವೊಂದರಲ್ಲಿ ವಿವಾಹವಾದರು. ಅವರ ವಿವಾಹವು ಸ್ಥಳೀಯ ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಡೆಯಿತು. ಆಕೆ ಇನ್ನು ಅಪ್ರಾಪ್ತೆ ಎಂದು ಕುಟುಂಬ ಸದಸ್ಯರು ಹೇಳುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿ ವಿಚಾರಣೆ ನಡೆಯುತ್ತಿದೆ. ವರದಿಯ ಪ್ರಕಾರ, ಮೊನಾಲಿಸಾ ಗರ್ಭಿಣಿಯಾಗಿರುವುದರಿಂದ ಪ್ರಯಾಣಿಸಲು ಅಥವಾ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಫರ್ಮಾನ್ ಖಾನ್ ಈಗ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Biker Movie: ಶರ್ವಾನಂದ್ ನಟನೆಯ 'ಬೈಕರ್' ಮೂವಿ ಒಟಿಟಿ ಎಂಟ್ರಿ ಯಾವಾಗ?

Biker Movie: ಶರ್ವಾನಂದ್ ನಟನೆಯ 'ಬೈಕರ್' ಮೂವಿ ಒಟಿಟಿ ಎಂಟ್ರಿ ಯಾವಾಗ?

Biker OTT release date: ಟಾಲಿವುಡ್‌ ಹೀರೋ ಶರ್ವಾನಂದ್ ಯಾವಾಗಲೂ ವಿಭಿನ್ನ ಸ್ಕ್ರಿಪ್ಟ್‌ಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಇತ್ತೀಚಿನ ಕ್ರೀಡಾ ಆಕ್ಷನ್ ಡ್ರಾಮ 'ಬೈಕರ್' (Biker) ಉತ್ತಮ ಪ್ರತಿಕ್ರಿಯೆಯೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಏಪ್ರಿಲ್ 3, 2026 ರಂದು ಬಿಡುಗಡೆಯಾದ ಈ ಚಿತ್ರವು ತೆಲುಗಿನ ಮೊದಲ ಮೋಟೋಕ್ರಾಸ್ ರೇಸಿಂಗ್ ಹಿನ್ನೆಲೆಯ ಚಲನಚಿತ್ರವಾಗಿ ದಾಖಲೆಯನ್ನು ಸೃಷ್ಟಿಸಿತು.

Sanjay Dutt: ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಸಂಜಯ್ ದತ್ ಮೂವಿ

Sanjay Dutt: ಸಂಕೇತ ಭಾಷೆಯಲ್ಲೂ ಬಿಡುಗಡೆ ಆಗಲಿದೆ ಸಂಜಯ್ ದತ್ ಮೂವಿ

Sanjay Dutt: ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ಮಾಪಕ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶನದ "ಆಕ್ರಿ ಸವಾಲ್" ಚಿತ್ರವನ್ನು ನಿಖಿಲ್ ನಂದಾ ಮತ್ತು ಸಂಜಯ್ ದತ್ ನಿರ್ಮಿಸಿದ್ದಾರೆ, ಪುನೀತ್ ನಂದಾ, ಡಾ. ದೀಪಕ್ ಸಿಂಗ್, ಗೌರವ್ ದುಬೆ ಮತ್ತು ಉಜ್ವಲ್ ಆನಂದ್ ಸಹ-ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ಮೇ 8, 2026 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ʻಡ್ರಾಮಾ ಜೂನಿಯರ್ಸ್ʼ ಮಹಾಲಕ್ಷ್ಮಿ ಈಗ 'ಕಿಲಾಡಿ ಮೇಘ'; ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ!

ʻಡ್ರಾಮಾ ಜ್ಯೂನಿಯರ್‌ʼ ಖ್ಯಾತಿಯ ಮಹಾಲಕ್ಷ್ಮಿಈಗ ನಾಯಕಿ

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಾದ 'ಡಿಕೆಡಿ' ಮತ್ತು 'ಡ್ರಾಮಾ ಜೂನಿಯರ್ಸ್' ಮೂಲಕ ಮನೆಮಾತಾಗಿರುವ ಮಹಾಲಕ್ಷ್ಮಿ ಈಗ 'ಕಿಲಾಡಿ ಮೇಘ' ಚಿತ್ರದ ಮೂಲಕ ಪ್ರಧಾನ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಈ ಚಿತ್ರವು ಹಣದ ಲಾಲಸೆಯಿಂದ ಸಂಭವಿಸುವ ಅನಾಹುತಗಳ ಸುತ್ತ ಹೆಣೆಯಲಾದ ಹಾರರ್ ಕಥೆಯನ್ನು ಹೊಂದಿದೆ.

Prakash Raj : ರಾಮಾಯಣದ ಬಗ್ಗೆ ವಿವಾದ; ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

ರಾಮಾಯಣದ ಬಗ್ಗೆ ವಿವಾದ; ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲು

Prakash Raj :ರಾಮಾಯಣವನ್ನು ಉಲ್ಲೇಖಿಸಿ ಮಾಡಿದ ಹೇಳಿಕೆಗಳಿಗಾಗಿ ನಟ ಪ್ರಕಾಶ್ ರಾಜ್ ವಿರುದ್ಧ ದೂರು ದಾಖಲಾಗಿದ್ದು, ಅವರು ಹೊಸ ವಿವಾದದ ಕೇಂದ್ರಬಿಂದುವಾಗಿದ್ದಾರೆ . ಈ ವಿಷಯವು ರಾಜಕೀಯ ಮತ್ತು ಕಾನೂನು ವಿವಾದಕ್ಕೆ ಕಾರಣವಾಗಿದೆ, ಅವರ ಹೇಳಿಕೆಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂಬ ಆರೋಪಗಳಿವೆ.

ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷ ಪೂರೈಸಿದ ನಟ ಗಣೇಶ್; ʻಇದು ಕೇವಲ ಆರಂಭವಷ್ಟೇ..ʼ ಎಂದು ʻಗೋಲ್ಡನ್ ಸ್ಟಾರ್ʼ ಹೇಳಿದ್ಯಾಕೆ?

ಸ್ಯಾಂಡಲ್‌ವುಡ್‌ನಲ್ಲಿ 20 ವರ್ಷ ಪೂರೈಸಿದ ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಅವರು ಕನ್ನಡ ಚಿತ್ರರಂಗದಲ್ಲಿ ಹೀರೋ ಆಗಿ 20 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದ್ದಾರೆ. 2006ರ ಏಪ್ರಿಲ್ 21ರಂದು 'ಚೆಲ್ಲಾಟ' ಚಿತ್ರದ ಮೂಲಕ ಹೀರೋ ಆಗಿ ಪದಾರ್ಪಣೆ ಮಾಡಿದ್ದ ಗಣೇಶ್, ನಂತರ 'ಮುಂಗಾರು ಮಳೆ'ಯಂತಹ ಐತಿಹಾಸಿಕ ಹಿಟ್ ನೀಡಿ ಮನೆಮಾತಾಗಿದ್ದರು.

ಅಂತೂ ʻಜೈಲರ್‌ 2ʼ ಸಿನಿಮಾ ಶೂಟಿಂಗ್‌ ಮುಗೀತು! ಇದರ ಬಜೆಟ್‌ ಎಷ್ಟು? ಈ ಚಿತ್ರ ರಿಲೀಸ್‌ ಆಗೋದು ಯಾವಾಗ?

ʻಜೈಲರ್ 2ʼ ಶೂಟಿಂಗ್ ಕಂಪ್ಲೀಟ್; ಕೇಕ್ ಕತ್ತರಿಸಿ ಸಂಭ್ರಮಿಸಿದ ರಜನಿಕಾಂತ್

ನಟ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಚಿತ್ರೀಕರಣ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಈ ಸೀಕ್ವೆಲ್‌ನಲ್ಲಿ ರಮ್ಯಾ ಕೃಷ್ಣನ್, ಶಿವಣ್ಣ, ಮೋಹನ್ ಲಾಲ್ ಅವರೊಂದಿಗೆ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

Riteish Deshmuk: ರಿತೇಶ್ ದೇಶಮುಖ್ ಸಿನಿಮಾದಲ್ಲಿ ಪತ್ನಿ, ಮಗನ ಪಾತ್ರವೇನು?

Riteish Deshmuk: ರಿತೇಶ್ ದೇಶಮುಖ್ ಸಿನಿಮಾದಲ್ಲಿ ಪತ್ನಿ, ಮಗನ ಪಾತ್ರವೇನು?

Chhatrapati Shivaji Maharaj: ಬಾಲಿವುಡ್ ನಟ ರಿತೇಶ್ ದೇಶಮುಖ್ ತಮ್ಮ ಮುಂಬರುವ ಐತಿಹಾಸಿಕ ಆಕ್ಷನ್ ಡ್ರಾಮಾ ' ರಾಜಾ ಶಿವಾಜಿ' ಮೂಲಕ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗುತ್ತಿದ್ದಾರೆ . ರಿತೇಶ್ ದೇಶ್‌ಮುಖ್ ನಿರ್ದೇಶನದ ಈ ಚಿತ್ರವು ಮರಾಠ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜೀವನವನ್ನು ಆಧರಿಸಿದೆ. ಮೇ 1 ರಂದು ರಾಜಾ ಶಿವಾಜಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ʻಚೀಟರ್ ಮಲ್ಲು ಎಂಬ ಫ್ರಾಡ್..ʼ; ದರ್ಶನ್‌ ಮಾಜಿ ಮ್ಯಾನೇಜರ್‌ ಮೇಲೆ ದಿನಕರ್‌ ತೂಗುದೀಪ ಆಕ್ರೋಶ

ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ಗೆ ʻಫ್ರಾಡ್ʼ ಎಂದ ದಿನಕರ್

ಈಚೆಗೆ ದಿಢೀರ್‌ ಅಂತ ಪ್ರತ್ಯಕ್ಷವಾಗಿ ಸುದ್ದಿಗೋಷ್ಠಿ ನಡೆಸಿದ್ದ ದರ್ಶನ್ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಅವರನ್ನು ನಿರ್ದೇಶಕ ದಿನಕರ್ ತೂಗುದೀಪ 'ಮೋಸಗಾರ' ಎಂದು ಕರೆದಿದ್ದಾರೆ. ದರ್ಶನ್ ಮತ್ತು ತೂಗುದೀಪ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಲ್ಲಿಕಾರ್ಜುನ್ ಅನೇಕರಿಗೆ ವಂಚಿಸಿದ್ದಾನೆ ಎಂದು ದಿನಕರ್ ಗಂಭೀರ ಆರೋಪ ಮಾಡಿದ್ದಾರೆ.

Dhurandhar Movie: ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋ ಚಿತ್ರಮಂದಿರದಲ್ಲಿ? ರಿಲೀಸ್‌ ಯಾವಾಗ?

‘ಧುರಂಧರ್’ ಮೇಕಿಂಗ್ ವಿಡಿಯೋ ಚಿತ್ರಮಂದಿರದಲ್ಲಿ? ರಿಲೀಸ್‌ ಯಾವಾಗ?

Ranveer Singh: ಬಿಡುಗಡೆಯಾದ ಕೇವಲ ಒಂದು ತಿಂಗಳೊಳಗೆ ‘ಧುರಂಧರ್ 2’ ಸಿನಿಮಾ ಅನೇಕ ದಾಖಲೆಗಳನ್ನು ಪುಡಿಪುಡಿ ಮಾಡಿದೆ. ಭಾರತದ ಮೂರನೇ ಅತಿದೊಡ್ಡ ಸಿನಿಮಾ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ‘ಧುರಂಧರ್’ ಸಿನಿಮಾದ ತೆರೆ ಹಿಂದಿನ ವಿಷಯಗಳನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದರು. ‘ಧುರಂಧರ್’ ಸಿನಿಮಾದ ಮೇಕಿಂಗ್ ವಿಡಿಯೋವನ್ನು ದೊಡ್ಡ ಪರದೆಯಲ್ಲಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ.

Actor Yash: ‘ಕೆಜಿಎಫ್ 3’ ಸಿನಿಮಾ ಬಗ್ಗೆ ಯಶ್ ಹೇಳಿದ್ದೇನು?

Actor Yash: ‘ಕೆಜಿಎಫ್ 3’ ಸಿನಿಮಾ ಬಗ್ಗೆ ಯಶ್ ಹೇಳಿದ್ದೇನು?

Yash KGF3: ಅಮೆರಿಕಾದಲ್ಲಿ ನಡೆದ ಸಿನಿಮಾಕಾನ್ 2026 ರಲ್ಲಿ, ರಾಮಾಯಣ ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರೊಂದಿಗೆ, ಯಶ್ ತಮ್ಮ ಮುಂಬರುವ ಯೋಜನೆಗಳ ಕುರಿತು ಚರ್ಚಿಸುವ ಹಲವಾರು ಸಂದರ್ಶನಗಳಲ್ಲಿ ಭಾಗವಹಿಸಿದರು. ಈ ವೇಳೆ ಸ್ವತಃ ಯಶ್ ಅವರು ‘ಕೆಜಿಎಫ್ 3’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ.‘ಕೆಜಿಎಫ್ 3’ ಸಿನಿಮಾ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನ ಹಲವರಿಗೆ ಇದೆ. ಈ ಬಗ್ಗೆ ನಟ ಹೇಳಿದ್ದೇನು?

ಡೇಟಿಂಗ್‌ ಗಾಸಿಪ್‌ ನಡುವೆಯೇ ಮೃಣಾಲ್‌ ಠಾಕೂರ್‌ಗೆ ದೊಡ್ಡ ಆಫರ್‌ ಕೊಟ್ಟ ನಟ ಧನುಷ್!‌ ಏನಿದು ಹೊಸ ನ್ಯೂಸ್?

ಧನುಷ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರಕ್ಕೆ ಮೃಣಾಲ್ ನಾಯಕಿ?

ಡೇಟಿಂಗ್ ವದಂತಿಗಳ ನಡುವೆಯೇ ನಟ ಧನುಷ್ ತಮ್ಮ ಮುಂದಿನ ಐತಿಹಾಸಿಕ ಮಹಿಳಾ ಪ್ರಧಾನ ಚಿತ್ರಕ್ಕೆ ಮೃಣಾಲ್ ಠಾಕೂರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ವಂಡರ್‌ಬಾರ್ ಫಿಲ್ಮ್ಸ್ ಅಡಿಯಲ್ಲಿಯೇ ಈ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ.

NTR - ಪ್ರಶಾಂತ್ ನೀಲ್ ಸಿನಿಮಾದ ರಿಲೀಸ್‌ ಡೇಟ್‌ ಕೊನೆಗೂ ಫಿಕ್ಸ್; ತಾರಕ್‌ ದರ್ಶನಕ್ಕೆ 14 ತಿಂಗಳು ಕಾಯಲೇಬೇಕು ಫ್ಯಾನ್ಸ್!‌

ಪವರ್‌ಫುಲ್ ಪೋಸ್ಟರ್ ಮೂಲಕ ರಿಲೀಸ್ ಡೇಟ್ ತಿಳಿಸಿದ ‌NTR - ಪ್ರಶಾಂತ್ ನೀಲ್

ಎನ್‌ಟಿಆರ್‌ ಅಭಿನಯದ ಹೊಸ ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದ್ದು, 2027ರ ಜೂನ್ 11ರಂದು ತೆರೆಕಾಣಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಮಾಸ್ ಆಕ್ಷನ್ ಚಿತ್ರದಲ್ಲಿ ಎನ್‌ಟಿಆರ್ ಪವರ್‌ಫುಲ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಮೇ 20ರಂದು ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಗ್ಲಿಂಪ್ಸ್ ಕೂಡ ಬಿಡುಗಡೆಯಾಗಲಿದೆ.

ʻಶೇರ್‌ʼ ಆಗಿ ಗರ್ಜಿಸಲಿದ್ದಾರೆ ನಟ ಕಿರಣ್‌ ರಾಜ್;‌ ಪೊಲೀಸ್‌ ಆಫೀಸರ್‌ ರೋಲ್‌ನಲ್ಲಿ ಮಿಂಚಲಿದ್ದಾರೆ ತನಿಷಾ ಕುಪ್ಪಂಡ

ಕಿರಣ್ ರಾಜ್ ನಟನೆಯ 'ಶೇರ್' ಸಿನಿಮಾದ ರಿಲೀಸ್‌ ಡೇಟ್‌ ಘೋಷಣೆ

'ಕನ್ನಡತಿ' ಧಾರಾವಾಹಿ ಖ್ಯಾತಿಯ ಕಿರಣ್‌ ರಾಜ್‌ ನಟನೆಯ ʻಶೇರ್‌ʼ ಚಿತ್ರವು ಮೇ 15ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅನಾಥ ಹುಡುಗನಾಗಿ ಕಿರಣ್ ರಾಜ್ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

Thalapathy Vijay: ಸಂಗೀತ -ವಿಜಯ್‌ ಅವರದ್ದು ಮುಗಿದುಹೋದ ಕಥೆ; ಡಿವೋರ್ಸ್ ಬಗ್ಗೆ ತಂದೆ ಹೇಳಿದ್ದೇನು?

ಸಂಗೀತ -ವಿಜಯ್‌ ಡಿವೋರ್ಸ್ ಬಗ್ಗೆ ತಂದೆ ಎಸ್‌ಎ ಚಂದ್ರಶೇಖರ್ ಹೇಳಿದ್ದೇನು?

Thalapathy Vijay: ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನೊಂದು ದಿನ ಬಾಕಿಯಿದೆ. ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ವಿಜಯ್ ತಮಿಳುನಾಡಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದೀಗ ವಿಜಯ್ ಡಿವೋರ್ಸ್ ವಿಚಾರದ ಬಗ್ಗೆಯೂ ತಂದೆ ಚಂದ್ರಶೇಖರ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.ವಿಜಯ್ ರಾಜಕೀಯಕ್ಕೆ ಕಾಲಿಟ್ಟಾಗಿನಿಂದ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಎಸ್‌ಎಸಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ .

Kapil Sharma show:  ಕಪಿಲ್ ಶರ್ಮಾ ಶೋ ಬಗ್ಗೆ ನಟ ಪರೇಶ್ ರಾವಲ್ ಹೇಳಿದ್ದೇನು?

ಕಪಿಲ್ ಶರ್ಮಾ ಶೋ ಬಗ್ಗೆ ನಟ ಪರೇಶ್ ರಾವಲ್ ಹೇಳಿದ್ದೇನು?

Kapil Sharma show: ಕಪಿಲ್ ಶರ್ಮಾ ನಿರೂಪಣೆಯಲ್ಲಿ, ಅರ್ಚನಾ ಪೂರಣ್ ಸಿಂಗ್ ಮತ್ತು ನವಜೋತ್ ಸಿಂಗ್ ಸಿಧು ಖಾಯಂ ಅತಿಥಿಗಳಾಗಿ ಭಾಗವಹಿಸುವ ಈ ಕಾರ್ಯಕ್ರಮದಲ್ಲಿ ಸುನಿಲ್ ಗ್ರೋವರ್, ಕೃಷ್ಣ ಅಭಿಷೇಕ್ ಮತ್ತು ಕಿಕು ಶಾರದಾ ಕೂಡ ಭಾಗವಹಿಸುತ್ತಾರೆ. ಹೊಸ ಸೀಸನ್ ಈ ವರ್ಷದ ಕೊನೆಯಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ.

Prashanth Gowda: ಎಂಗೇಜ್‌ ಆದ್ರು ಗಿಚ್ಚಿ-ಗಿಲಿಗಿಲಿ ನಟ ಪ್ರಶಾಂತ್ ಗೌಡ; ಹುಡುಗಿ ಇವರೇ ನೋಡಿ

ಎಂಗೇಜ್‌ ಆದ್ರು ಗಿಚ್ಚಿ-ಗಿಲಿಗಿಲಿ ನಟ ಪ್ರಶಾಂತ್ ಗೌಡ; ಹುಡುಗಿ ಇವರೇ ನೋಡಿ

gicchi gili gili: ಪ್ರಶಾಂತ್ ಗೌಡ ಅವರು ‘ಗಿಚ್ಚಿ ಗಿಲಿ ಗಿಲಿ’ ಸೀಸನ್ 1ರಿಂದ ಸೀಸನ್ 3ರವರೆಗೆ ಇದ್ದರು. ‘ಕ್ವಾಟ್ಲೆ ಕಿಚನ್’ ಶೋ ಅಲ್ಲಿ ‘ಕ್ವಾಟ್ಲೆ ಆಫ್ ದಿ ಸೀಸನ್’ ಅವಾರ್ಡ್ ಪಡೆದರು. ‘ಬಾಯ್ಸ್ vs ಗರ್ಲ್ಸ್’ ಶೋನಲ್ಲೂ ಪ್ರಶಾಂತ್ ಮಿಂಚಿದ್ದರು. ಇನ್ನು ನಟ ಪ್ರಶಾಂತ್ ಗೌಡ ಅವರ ನಿಶ್ಚಿತಾರ್ಥಕ್ಕೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದಾರೆ. ಕಿರುತೆರೆ ಮತ್ತು ಬೆಳ್ಳಿಪರದೆಯ ಹಲವು ಗಣ್ಯರು ಈ ಕಾರ್ಯಕ್ರಮಕ್ಕೆ ಬಂದು ನವಜೋಡಿಗೆ ಶುಭ ಹಾರೈಸಿದ್ದಾರೆ.

Riteish Deshmukh: ರಾಜಾ ಶಿವಾಜಿ ಟ್ರೇಲರ್ ಬಿಡುಗಡೆ ; ರಿತೇಶ್ ದೇಶಮುಖ್ ಭಾವುಕ

ರಾಜಾ ಶಿವಾಜಿ ಟ್ರೇಲರ್ ಬಿಡುಗಡೆ ; ರಿತೇಶ್ ದೇಶಮುಖ್ ಭಾವುಕ

Riteish Deshmukh: ರಾಜಾ ಶಿವಾಜಿ ಚಿತ್ರದ ಅದ್ಧೂರಿ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ರಿತೇಶ್ ದೇಶಮುಖ್ ಮತ್ತು ಜೆನೆಲಿಯಾ ದೇಶಮುಖ್ಭ ಭಾವನಾತ್ಮಕ ಕ್ಷಣವನ್ನು ಹಂಚಿಕೊಂಡರು. ನಟ-ನಿರ್ದೇಶಕ ಅಭಿಷೇಕ್ ಬಚ್ಚನ್ ಅವರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತಾ ಭಾವುಕರಾದರು. ಮುಂಬೈನಲ್ಲಿ ನಡೆದ ತಾರಾಬಳಗದ ಕಾರ್ಯಕ್ರಮವು ಹೃದಯಸ್ಪರ್ಶಿಯಾಗಿತ್ತು, ಸಂಜಯ್ ದತ್ ಕೂಡ ಭಾವುಕರಾಗಿದ್ದರು.

Thalapathy Vijay:  ನಟ ವಿಜಯ್‌-ಸಂಗೀತಾ ಡಿವೋರ್ಸ್‌ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್‌

ನಟ ವಿಜಯ್‌ ಡಿವೋರ್ಸ್‌ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್‌

ತಮಿಳುನಾಡು ವಿಧಾನಸಭೆ ಚುನಾವಣಾ ಅಖಾಡದಲ್ಲಿರುವ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ಹಾಗೂ ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ವಿಚ್ಛೇದನದ ಪ್ರಕರಣದ ವಿಚಾರಣೆ ಇಂದು ನಡೆದಿದೆ. ಚೆಂಗಲ್ಪಟ್ಟು ಕೌಟುಂಬಿಕ ಕಲ್ಯಾಣ ನ್ಯಾಯಾಲಯದಲ್ಲಿ ಈ ಪ್ರಕರಣದ ವಿಚಾರಣೆ ನಡೆದಿದ್ದು, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಜೂನ್ 15ಕ್ಕೆ ಮುಂದೂಡಿದೆ.ಕಳೆದ ಐದು ವರ್ಷಗಳಿಂದ ವಿಜಯ್ ಅವರು ಕೌಟುಂಬಿಕ ಜೀವನದಿಂದ ಭಾವನಾತ್ಮಕವಾಗಿ ದೂರವಾಗಿದ್ದಾರೆ.

Loading...