ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Keerthy Suresh: ಬಾಡಿ ಶೇಮಿಂಗ್, ಸರ್ಜರಿ ವದಂತಿ; ಕೀರ್ತಿ ಸುರೇಶ್ ಗರಂ ಪ್ರತಿಕ್ರಿಯೆ

ಬಾಡಿ ಶೇಮಿಂಗ್, ಸರ್ಜರಿ ವದಂತಿ; ಕೀರ್ತಿ ಸುರೇಶ್ ಗರಂ ಪ್ರತಿಕ್ರಿಯೆ

Keerthy Suresh: ಸರ್ಜರಿ ವದಂತಿಗಳ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮನದ ಮಾತುಗಳನ್ನು ಹೊರಹಾಕಿದ್ದಾರೆ. ಸದಾ ಸೌಮ್ಯವಾಗಿ ಕಾಣಿಸಿಕೊಳ್ಳುವ ನಟಿ, ಇತ್ತೀಚೆಗೆ ತಮಗಾದ ದೈಹಿಕ ಮತ್ತು ಮಾನಸಿಕ ಹಿನ್ನಡೆಯ ಬಗ್ಗೆಯೂ ಮುಕ್ತವಾಗಿ ಮಾತನಾಡಿದ್ದಾರೆ.ಕೀರ್ತಿ ಹಲವು ವರ್ಷಗಳಿಂದ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.

Mahakali Movie: ಭೂಮಿ ಶೆಟ್ಟಿಯ 'ಮಹಾಕಾಳಿ' ಸಿನಿಮಾದಲ್ಲಿ ಈ ಖ್ಯಾತ ಬಾಲಿವುಡ್‌ ನಟ ಎಂಟ್ರಿ!

ಭೂಮಿ ಶೆಟ್ಟಿಯ 'ಮಹಾಕಾಳಿ' ಸಿನಿಮಾದಲ್ಲಿ ಈ ಖ್ಯಾತ ಬಾಲಿವುಡ್‌ ನಟ ಎಂಟ್ರಿ!

Mahakali Movie: ಮಹಾಕಾಳಿ ಚಿತ್ರವನ್ನ ಮಹಿಳಾ ಸೂಪರ್ ಹೀರೋ ಚಿತ್ರ ಅಂತಲೇ ಕರೆಯಲಾಗುತ್ತಿದೆ. ವಿಶೇಷವಾಗಿ ಈ ಸಿನಿಮಾದ ಸ್ಟೋರಿಯನ್ನ ಪ್ರಶಾಂತ್ ವರ್ಮಾ ಬರೆದಿದ್ದಾರೆ. ಹನುಮಾನ್ ಚಿತ್ರದ ಮೂಲಕವೇ ಹೆಸರಾದ ಪ್ರಶಾಂತ್ ವರ್ಮಾ, ಈ ಒಂದು ಚಿತ್ರದ ಕಥೆ ಬರೆದು ಡೈರೆಕ್ಷನ್ ಹೊಣೆಯನ್ನ ಪೂಜಾ ಅಪರ್ಣಾ ಕೊಲ್ಲೂರು ಅವರಿಗೆ ಕೊಟ್ಟಿದ್ದಾರೆ.

ʻಖುಷಿಯಿಂದ ನೆಮ್ಮದಿಯಾಗಿರುವ ಸಂಸಾರವನ್ನು ದೇವರು ನಾಶ ಮಾಡುತ್ತಾನೆʼ; ದಿಲೀಪ್‌ ರಾಜ್‌ ಪತ್ನಿಯ ನೋವಿನ ಪೋಸ್ಟ್‌!

ʻದೇವರಿದ್ದಾನೆ, ಹುಷಾರಾಗಿರಿʼ; ದಿಲೀಪ್ ಪತ್ನಿ ಇಂಥ ಎಚ್ಚರಿಕೆ ನೀಡಿದ್ದೇಕೆ?

ನಟ ಮತ್ತು ನಿರ್ಮಾಪಕ ದಿವಂಗತ ದಿಲೀಪ್ ರಾಜ್ ಅವರ ಅಕಾಲಿಕ ಮರಣದ ಆಘಾತದಿಂದ ಅವರ ಕುಟುಂಬ ಇಂದಿಗೂ ಹೊರಬಂದಿಲ್ಲ. ಪತ್ನಿ ಶ್ರೀವಿದ್ಯಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿದ್ದು, ಸದಾ ನಗುತ್ತಾ ಖುಷಿಯಿಂದ ಇರುವ ಸಂಸಾರದ ಮೇಲೆ ದೇವರ ಕಣ್ಣು ಬೀಳುತ್ತದ, ದೇವರು ಅಂತಹ ಕುಟುಂಬವನ್ನು ನಾಶ ಮಾಡುತ್ತಾನೆ ಎಂದು ನೋವನ್ನು ಹೊರಹಾಕಿದ್ದಾರೆ.

Peddi Trailer Review: ಕ್ರಾಸ್‌ಓವರ್ ಅಥ್ಲೀಟ್ ಆಗಿ ಧೂಳೆಬ್ಬಿಸಿದ ʻಗ್ಲೋಬಲ್ ಸ್ಟಾರ್ʼ ರಾಮ್ ಚರಣ್; ಗುರುವಾಗಿ ಬಂದ ಶಿವಣ್ಣ!

ʻಪೆದ್ದಿʼ ಟ್ರೇಲರ್ ಧಮಾಕಾ; ರಾಮ್ ಚರಣ್‌ಗೆ ಗುರುವಾಗಿ ಬಂದ ಶಿವರಾಜ್‌ಕುಮಾರ್‌

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ ಪ್ಯಾನ್-ಇಂಡಿಯಾ 'ಪೆದ್ದಿ' ಚಿತ್ರದ ರಗಡ್ ಟ್ರೇಲರ್ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಬುಚ್ಚಿ ಬಾಬು ಸನಾ ನಿರ್ದೇಶನದ ಈ ಸ್ಪೋರ್ಟ್ಸ್ ಡ್ರಾಮಾದಲ್ಲಿ ರಾಮ್ ಚರಣ್ ಕ್ರಾಸ್‌ಓವರ್ ಅಥ್ಲೀಟ್ ಆಗಿ ಕಾಣಿಸಿಕೊಂಡರೆ, ಶಿವರಾಜ್‌ಕುಮಾರ್ ಕುಸ್ತಿ ಹೇಳಿಕೊಡುವ ಪವರ್‌ಫುಲ್ ಗುರು 'ಗೌರ್ ನಾಯ್ಡು' ಪಾತ್ರದಲ್ಲಿ ಅಬ್ಬರಿಸಿದ್ದಾರೆ.

Rashmika Mandanna: ವೇದಿಕೆ ಮೇಲೆ ಇದೊಂದು ಕಾರಣಕ್ಕೆ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ!

ವೇದಿಕೆ ಮೇಲೆ ಇದೊಂದು ಕಾರಣಕ್ಕೆ ಕ್ಷಮೆಯಾಚಿಸಿದ ರಶ್ಮಿಕಾ ಮಂದಣ್ಣ!

Rashmika Mandanna: ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದು 2024 ರಲ್ಲಿ ಬಿಡುಗಡೆಯಾದ ತೇರಿ ಬಾತೋ ಮೇ ಐಸಾ ಉಲ್ಜಾ ಜಿಯಾ ನಂತರ ಶಾಹಿದ್ ಕಪೂರ್ ಮತ್ತು ಕೃತಿ ಸನೋನ್ ಅವರ ಎರಡನೇ ಸಿನಿಮಾ. ಹೋಮಿ ಅಡಜಾನಿಯಾ ನಿರ್ದೇಶನದ ಮೊದಲ ಕಾಕ್‌ಟೈಲ್ 2012 ರಲ್ಲಿ ಬಿಡುಗಡೆಯಾಯಿತು ಮತ್ತು ಸೈಫ್ ಅಲಿ ಖಾನ್, ದೀಪಿಕಾ ಪಡುಕೋಣೆ ಮತ್ತು ಡಯಾನಾ ಪೆಂಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

MBBS ಪಾಸ್‌ ಮಾಡಿ ಡಾಕ್ಟರ್‌ ಆದ ಶ್ರೀಲೀಲಾ ಮುಂದೇನು ಮಾಡ್ತಾರೆ? ಅಮ್ಮನಿಂದಲೇ ಸಿಕ್ತು ಹೊಸ ಅಪ್ಡೇಟ್‌!

MBBS ಮುಗಿಸಿದ ನಟಿ ಶ್ರೀಲೀಲಾ ಈಗೇನ್‌ ಮಾಡ್ತಿದ್ದಾರೆ? ತಾಯಿ ಹೇಳಿದ್ರು ಸತ್ಯ

ಎಂಬಿಬಿಎಸ್ ಮುಗಿಸಿ ಡಾಕ್ಟರ್ ಆಗಿರುವ ನಟಿ ಶ್ರೀಲೀಲಾ ಜೂನ್‌ನಲ್ಲಿ ನಡೆಯಲಿರುವ ನೀಟ್-ಪಿಜಿ ಪರೀಕ್ಷೆಯ ಉನ್ನತ ಶಿಕ್ಷಣದ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ. ಈ ವಿಷಯವನ್ನು ಅವರ ತಾಯಿ ಡಾ. ಸ್ವರ್ಣಲತಾ ಖಚಿತಪಡಿಸಿದ್ದಾರೆ. ಇತ್ತೀಚಿನ ಚಿತ್ರಗಳ ಸೋಲಿನಿಂದಾಗಿ ಹೊಸ ಸಿನಿಮಾಗಳಿಂದ ದೂರವಿರುವ ಶ್ರೀಲೀಲಾ, ಸದ್ಯ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿದ್ದಾರಂತೆ.

‌Love Punch: ಸಖತ್‌ ಬೋಲ್ಡ್‌ ಅವತಾರ ತಾಳಿದ ನಟಿ ಮೌನ ಗುಡ್ಡೆಮನೆ; ಇದು ದಿಲೀಪ್‌ ರಾಜ್‌ ನಿರ್ದೇಶನದ ಮೈಕ್ರೋ ಸೀರೀಸ್‌!

ಚಾರು‌ ಇಮೇಜ್ ಬದಲಿಸಿದ ಮೌನ ಗುಡ್ಡೆಮನೆ; ಬಿಕಿನಿ ಅವತಾರಕ್ಕೆ ಫ್ಯಾನ್ಸ್ ಫಿದಾ

'ರಾಮಾಚಾರಿ' ಧಾರಾವಾಹಿ ಖ್ಯಾತಿಯ ನಟಿ ಮೌನ ಗುಡ್ಡೆಮನೆ ತಮ್ಮ ಇಮೇಜ್ ಬದಲಿಸಿ, 'ಲವ್ ಪಂಚ್' ಮೈಕ್ರೋ ಸರಣಿಯಲ್ಲಿ ಸಖತ್‌ ಬೋಲ್ಡ್ & ಗ್ಲಾಮರಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಿಧನರಾದ ನಟ ದಿಲೀಪ್ ರಾಜ್ ಆಕ್ಷನ್ ಕಟ್ ಹೇಳಿರುವ ಮೈಕ್ರೋ ಸರಣಿ ಸದ್ಯ ಜೀ-5ನ ಬುಲೆಟ್‌ ಆಪ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಸಿಎಂ ವಿಜಯ್‌ - ತ್ರಿಶಾ ಬಗ್ಗೆ ಕೇಳಿದ್ದಕ್ಕೆ ಉರಿದುಬಿದ್ದ ನಟಿ ಮಾಳವಿಕಾ ಮೋಹನನ್;‌ ವಿಡಿಯೋ ವೈರಲ್‌!

ವಿಜಯ್-ತ್ರಿಶಾ ಬಗ್ಗೆ ಪ್ರಶ್ನೆ; ಮೀಡಿಯಾದವರ ಮೇಲೆ ಮಾಳವಿಕಾ ಮೋಹನನ್ ಆಕ್ರೋಶ!

ತಮಿಳು ನಟ ವಿಜಯ್ ಹಾಗೂ ತ್ರಿಶಾ ಅವರ ವೈಯಕ್ತಿಕ ವಿಚಾರಗಳ ಕುರಿತು ಚೆನ್ನೈ ಇವೆಂಟ್‌ನಲ್ಲಿ ಪ್ರಶ್ನೆ ಕೇಳಿದ ಮಾಧ್ಯಮಗಳ ವಿರುದ್ಧ ನಟಿ ಮಾಳವಿಕಾ ಮೋಹನನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೀಳು ಅಭಿರುಚಿಯ ಮತ್ತು ಸನ್ಸೇಷನಲ್ ಸುದ್ದಿಗಾಗಿ ಮುಜುಗರ ತಂದವರ ವಿರುದ್ಧ ಟ್ವಿಟರ್‌ನಲ್ಲಿ ಮಾಳವಿಕಾ ಮೋಹನನ್ ಆಕ್ರೋಶ ಹೊರಹಾಕಿದ್ದಾರೆ.

Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ  ‘ಕರುಪ್ಪು’!

Karuppu Box Office: ಮೂರೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ‘ಕರುಪ್ಪು’!

Karuppu Box Office: ಸಾಲು ಸಾಲು ಸೋಲುಗಳ ನಂತರ ''ಕರುಪ್ಪು'' (Karuppu) ಚಿತ್ರದ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಕರುಪ್ಪು ಭಾರತ ಮತ್ತು ವಿದೇಶಗಳಲ್ಲಿ ತನ್ನ ಮೊದಲ ವಾರಾಂತ್ಯದಲ್ಲಿ ಸಖತ್‌ ಆಗಿ ಆಟ ಮುಂದುವರಿಸಿದೆ. ಬರೋಬ್ಬರಿ 20 ವರ್ಷಗಳ ನಂತರ ಸೂರ್ಯ ಜೊತೆ ತ್ರಿಶಾ (Trisha) ಅಭಿನಯಿಸಿರುವ ಸಿನಿಮಾ ಇದು.

K Rajan: ಖ್ಯಾತ ತಮಿಳು ನಿರ್ಮಾಪಕ  ಕೆ.ರಾಜನ್‌ ಆತ್ಮಹತ್ಯೆ; ಕಾರಣ ಏನು?

ಖ್ಯಾತ ತಮಿಳು ನಿರ್ಮಾಪಕ ಕೆ.ರಾಜನ್‌ ಆತ್ಮಹತ್ಯೆ; ಕಾರಣ ಏನು?

K Rajan: ಕೆ ರಾಜನ್ ಅವರ ನಿಧನದ ಸುದ್ದಿ ಇಡೀ ಚಿತ್ರರಂಗಕ್ಕೆ ಆಘಾತದ ಸೃಷ್ಟಿಸಿದ್ದು ಸಂತಾಪ ಸೂಚಿಸಿದ್ದಾರೆ ತಾರೆಯರು. ವರದಿಗಳ ಪ್ರಕಾರ, ಚೆನ್ನೈನ ಅಡಯಾರ್ ಸೇತುವೆಯಿಂದ ಅವರು ನದಿಗೆ ಹಾರಿದ್ದಾರೆ ಎನ್ನಲಾಗಿದೆ. ಬಳಿಕ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಅವರ ಮೃತದೇಹವನ್ನು ಹೊರತೆಗೆದು ಆಸ್ಪತ್ರೆಗೆ ರವಾನಿಸಿದರು. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

Jayam Ravi: ಯಾವಾಗಲೂ ಪುರುಷನೇ ತಪ್ಪಿತಸ್ಥನಲ್ಲ; ಜಯಂ ರವಿಗೆ ಸಾಥ್‌ ಕೊಟ್ಟ ಮೀರಾ ಚೋಪ್ರಾ

ಯಾವಾಗಲೂ ಪುರುಷನೇ ತಪ್ಪಿತಸ್ಥನಲ್ಲ; ಜಯಂ ರವಿಗೆ ಖ್ಯಾತ ನಟಿ ಸಾಥ್‌

Jayam Ravi: ತಮಿಳು ಸ್ಟಾರ್ ಹೀರೋ ರವಿ ಮೋಹನ್ (Ravi Mohan) ಅಲಿಯಾಸ್ ಜಯಂ ರವಿ ಅವರ ವೈಯಕ್ತಿಕ ಜೀವನವು ಬೀದಿ ರಂಪಾಟ ಆಗಿದೆ . ಒಂದೆಡೆ, ಅವರ ಗೆಳತಿ ಮತ್ತು ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರ ಬ್ರೇಕಪ್‌, ಮತ್ತೊಂದೆಡೆ, ಅವರ ಪತ್ನಿಯೊಂದಿಗಿನ ಜಗಳಗಳು ಅವರನ್ನು ಮಾನಸಿಕವಾಗಿ ಖಿನ್ನತೆಗೆ ಒಳಪಡಿಸಿವೆ.

ಕೊರಗಜ್ಜ ದೈವಕ್ಕೆ ಹರಕೆಯ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್; ಅಭಿಮಾನಿಗಳು ಹೇಳಿದ್ದೇನು?

ಕೊರಗಜ್ಜನ ಸನ್ನಿಧಿಯಲ್ಲಿ ಹರಕೆ ಕೋಲ ಸೇವೆ ಸಲ್ಲಿಸಿದ ನಟಿ ರಚಿತಾ ರಾಮ್

ಸ್ಯಾಂಡಲ್‌ವುಡ್‌ ನಟಿ ರಚಿತಾ ರಾಮ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ, ಶನಿವಾರ ರಾತ್ರಿ ಹರಕೆಯ ಕೋಲ ಸೇವೆ ಸಲ್ಲಿಸಿದ್ದಾರೆ. ಕರಾವಳಿಯ ಶಕ್ತಿಶಾಲಿ ದೈವದ ಕೃಪೆಗೆ ಪಾತ್ರರಾಗಿರುವ ವಿಡಿಯೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

Ravi Mohan: ರವಿ ಮೋಹನ್‌ಗೆ ಖುಷ್ಬೂ ಖಡಕ್ ತಿರುಗೇಟು! ಟ್ವೀಟ್‌ನಲ್ಲಿ ಏನಿದೆ?

ರವಿ ಮೋಹನ್‌ಗೆ ಖುಷ್ಬೂ ಖಡಕ್ ತಿರುಗೇಟು! ಟ್ವೀಟ್‌ನಲ್ಲಿ ಏನಿದೆ?

Ravi Mohan: ಪತ್ರಿಕಾಗೋಷ್ಠಿಯಲ್ಲಿ, ಅವರು ತಮ್ಮ ವೈವಾಹಿಕ ಜೀವನದಲ್ಲಿ ಭಾವನಾತ್ಮಕ ಯಾತನೆ ಮತ್ತು ದೀರ್ಘಕಾಲದ ಸಮಸ್ಯೆಗಳ ಬಗ್ಗೆ ಹಲವಾರು ಆರೋಪಗಳನ್ನು ಮಾಡಿದರು. ಒಬ್ಬಳು ನಟಿ ಇದ್ದಾಳೆ ಅವಳಿಂದನೇ ನನ್ನ ಕುಟುಂಬ ಛಿದ್ರ ಛಿದ್ರವಾಯ್ತು ಎಂದು ಕಿಡಿ ಕಾರಿದರು. ಜಯಂ ರವಿ ಆಡಿದ ಈ ಮಾತುಗಳನ್ನು ಕೇಳಿ ಹಲವರು ಆ 'ಇಡ್ಲಿ ನಟಿ' ಬೇರೆ ಯಾರು ಅಲ್ಲ ಬದಲಿಗೆ ಖುಷ್ಬೂ (Kushboo Sundar) ಎನ್ನುವ ತೀರ್ಮಾನಕ್ಕೆ ಬಂದರು. ಜಯಂ ರವಿ ಆಡಿದ ಇಡ್ಲಿ ಮಾತಿಗೆ ಖುಷ್ಬೂ ಈಗ ತಿರುಗೇಟು ಕೊಟ್ಟಿದ್ದಾರೆ.

Actor Yash: 'ಟಾಕ್ಸಿಕ್' ರಿಲೀಸ್ ತಡವಾಗಲು ಕಾರಣ ಇದು;  ಅಸಲಿ ವಿಚಾರ ಬಿಚ್ಚಿಟ್ಟ ಯಶ್

'ಟಾಕ್ಸಿಕ್' ರಿಲೀಸ್ ತಡವಾಗಲು ಕಾರಣ ಇದು! ಯಶ್ ಹೇಳಿದ್ದೇನು?

Toxic Movie: ಆರಂಭದಲ್ಲಿ ಈ ಚಿತ್ರವನ್ನು ಮಾರ್ಚ್ 19ರಂದು ವಿಶ್ವಾದ್ಯಂತ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ಮಧ್ಯಪ್ರಾಚ್ಯದಲ್ಲಿ ನಡೆದ ಇರಾನ್-ಇಸ್ರೇಲ್ ಸಂಘರ್ಷದ ಕಾರಣದಿಂದಾಗಿ ಬಿಡುಗಡೆಯನ್ನು ಜೂನ್ 4ಕ್ಕೆ ಮುಂದೂಡಲಾಗಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಸಿನಿಮಾ ರಿಲೀಸ್‌ (Release) ವಿಳಂಬದ ಬಗ್ಗೆ ಯಶ್‌ ಮಾತನಾಡಿದ್ದಾರೆ. ಈ ನಿರ್ಧಾರವು ತನ್ನ ಅಭಿಮಾನಿಗಳಿಗೆ ಇಷ್ಟವಾಗುವುದಿಲ್ಲ ಎಂದು ತಿಳಿದಿತ್ತು ಎಂದು ಒಪ್ಪಿಕೊಂಡಿದ್ದಾರೆ.

ಸತತ ಸೋಲಿನಿಂದ ಕಂಗೆಟ್ಟ ರಾಮ್‌ ಪೋತಿನೇನಿ; ಗೆಲುವಿಗಾಗಿ ಹೊಸ ಸಾಹಸಕ್ಕೆ ಮುಂದಾದ ತೆಲುಗು ನಟ

ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ನೀಡಿದ ನಟ ರಾಮ್; ಸಕ್ಸಸ್‌ಗಾಗಿ ಹೊಸ ಸಾಹಸ!

ಸತತ ಸೋಲುಗಳಿಂದ ಕಂಗಾಲಾಗಿರುವ ಟಾಲಿವುಡ್ ನಟ ರಾಮ್ ಪೋತಿನೇನಿ ತಮ್ಮ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಿದ್ದಾರೆ. ತಮ್ಮ ವೃತ್ತಿಜೀವನದ 23ನೇ ಚಿತ್ರಕ್ಕೆ ಅವರೇ ಸ್ವತಃ ಆಕ್ಷನ್ ಕಟ್ ಹೇಳುತ್ತಿದ್ದು, ನಿರ್ದೇಶಕರಾಗಿ ಹೊಸ ಅವತಾರ ಎತ್ತಿದ್ದಾರೆ. ಈ ಚಿತ್ರವು ಡಿಸೆಂಬರ್‌ನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ಕ್ರಿಕೆಟರ್ ತಿಲಕ್‌ ವರ್ಮಾ ಜೊತೆ ನಟಿ ಶ್ರೀಲೀಲಾ ಡೇಟಿಂಗ್ ಮಾಡ್ತಿರೋದು ನಿಜವೇ? ಇಲ್ಲಿದೆ ನೋಡಿ ಅಸಲಿ ಸತ್ಯ!

ಕ್ರಿಕೆಟರ್ ತಿಲಕ್ ವರ್ಮಾ ಜೊತೆ ಶ್ರೀಲೀಲಾ ಡೇಟಿಂಗ್?; ಈ ಸುದ್ದಿ ನಿಜವೇ?

ಬಹುಭಾಷಾ ನಟಿ ಶ್ರೀಲೀಲಾ ಮತ್ತು ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ತಿಲಕ್ ವರ್ಮಾ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿವೆ. ಆದರೆ, ಈ ಸುದ್ದಿ ನಿಜವೇ? ಇಂತಹದ್ದೊಂದು ಗಾಸಿಪ್ ಹುಟ್ಟಿಕೊಳ್ಳಲು ಕಾರಣವೇನು?

ಬಾಕ್ಸ್‌ ಆಫೀಸ್‌ನಲ್ಲಿ ಕೊನೆಗೂ ಗೆದ್ದ ನಟ ಸೂರ್ಯ; ಎರಡನೇ ದಿನಕ್ಕೆ ದಾಖಲೆ ಮೊತ್ತ ಬಾಚಿಕೊಂಡ ʻಕರುಪ್ಪುʼ!

Suriya: ಕರುಪ್ಪು ಬಾಕ್ಸ್ ಆಫೀಸ್ ಸುನಾಮಿ; ಕೇವಲ 2 ದಿನಕ್ಕೆ 70 ಕೋಟಿ ಲೂಟಿ

ಹಣಕಾಸಿನ ಸಂಕಷ್ಟಗಳನ್ನು ದಾಟಿ ತೆರೆಕಂಡ ನಟ ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಎರಡು ದಿನಗಳಲ್ಲಿ 70 ಕೋಟಿ ರೂ. ಗಳಿಸಿ ಭರ್ಜರಿ ಇತಿಹಾಸ ಸೃಷ್ಟಿಸಿದೆ. ಮೊದಲ ದಿನ 29 ಕೋಟಿ ಗಳಿಸಿದ್ದ ಚಿತ್ರ, ಎರಡನೇ ದಿನ 40 ಕೋಟಿ ದಾಟುವ ಮೂಲಕ ಶೇ.55 ರಷ್ಟು ಅದ್ಭುತ ಪ್ರಗತಿ ಕಂಡಿದೆ.

ಸಾಲ್ಟ್ & ಪೆಪ್ಪರ್ ಲುಕ್‌ನಲ್ಲಿ ಸರ್ಪ್ರೈಸ್‌ ನೀಡಿದ ಶಿವಣ್ಣ; ಸದ್ದಿಲ್ಲದೇ ಅನೌನ್ಸ್‌ ಆಯ್ತು ʻಬೇಲ್‌ʼ ಸಿನಿಮಾದ ರಿಲೀಸ್‌ ಡೇಟ್‌!

ಶಿವಣ್ಣನ ಸಾಲ್ಟ್ & ಪೆಪ್ಪರ್ ಖದರ್; 'ಬೇಲ್' ಸಿನಿಮಾ ರಿಲೀಸ್ ಡೇಟ್ ಫಿಕ್ಸ್!

ʻಕರುನಾಡ ಚಕ್ರವರ್ತಿʼ ಡಾ. ಶಿವರಾಜ್‌ಕುಮಾರ್ ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ 'ಬೇಲ್' ಸಿನಿಮಾದ ಬಿಡುಗಡೆ ದಿನಾಂಕ ಸದ್ದಿಲ್ಲದೆ ಅನೌನ್ಸ್ ಆಗಿದೆ. ಪವನ್ ಒಡೆಯರ್ ನಿರ್ದೇಶನದ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಈ ಹೈ-ವೋಲ್ಟೇಜ್ ಆಕ್ಷನ್ ಡ್ರಾಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ತೆರೆಕಾಣಲಿದೆ.

ಸಿಎಂ ವಿಜಯ್‌ ಭೇಟಿ ಮಾಡಿದ ನಟ ಕಮಲ್‌ ಹಾಸನ್;‌ ಚಿತ್ರರಂಗದ ಉಳಿವಿಗಾಗಿ ʻದಳಪತಿʼ ಎದುರು ʻಉಳಗನಾಯಗನ್ʼ ಇಟ್ಟ ಡಿಮ್ಯಾಂಡ್‌ಗಳೇನು?

ವಿಜಯ್‌ಗೆ ಕಮಲ್ ಹಾಸನ್ ಬಿಗ್ ರಿಕ್ವೆಸ್ಟ್; ಸಿಎಂ ಮುಂದಿಟ್ಟ ಬೇಡಿಕೆಗಳೇನು?

ನಟ, ರಾಜಕಾರಣಿ ಕಮಲ್ ಹಾಸನ್ ಅವರು ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಿ ಚಿತ್ರರಂಗದ ಉಳಿವಿಗಾಗಿ ಪ್ರಮುಖ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಒಟಿಟಿ ಆರಂಭ, ಶೇ.4ರಷ್ಟು ಮನರಂಜನಾ ತೆರಿಗೆ ರದ್ದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ʻವಿಜಯ್‌ ಸಿಎಂ ಆಗಿದ್ದಕ್ಕೆ ನಾನ್ಯಾಕೆ ಅಸೂಯೆ ಪಟ್ಟುಕೊಳ್ಳಲಿ?ʼ; ಎಲ್ಲಾ ಊಹಾಪೋಹಗಳಿಗೆ ʻತಲೈವಾʼ ರಜನಿಕಾಂತ್‌ ಫುಲ್‌ ಸ್ಟಾಪ್

ʻNTR - MGR ಗೆಲುವಿಗಿಂತ ವಿಜಯ್‌ ಗೆಲುವು ದೊಡ್ಡದುʼ ಎಂದ ರಜನಿಕಾಂತ್

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲಿನ ಬಳಿಕ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಕುರಿತು ನಟ ರಜನಿಕಾಂತ್ ಭಾನುವಾರ ಸ್ಪಷ್ಟನೆ ನೀಡಿದ್ದಾರೆ. ನೂತನ ಸಿಎಂ ವಿಜಯ್ ಅವರ ಗೆಲುವನ್ನು ತಡೆಯಲು ತಾವೇನೂ ಪ್ಲಾನ್ ಮಾಡಿಲ್ಲ ಎಂದ ಅವರು, ಸ್ಟಾಲಿನ್ ತಮ್ಮ 40 ವರ್ಷಗಳ ಹಳೆಯ ಸ್ನೇಹಿತ ಎಂದು ಹೇಳಿದ್ದಾರೆ.

Ravi Mohan: ರವಿ ಮೋಹನ್ ವಿವಾದ; ಮಗಳನ್ನು ಸಮರ್ಥಿಸಿಕೊಂಡ ಸುಜಾತಾ ವಿಜಯಕುಮಾರ್

ರವಿ ಮೋಹನ್ ವಿವಾದ; ಮಗಳನ್ನು ಸಮರ್ಥಿಸಿಕೊಂಡ ಸುಜಾತಾ ವಿಜಯಕುಮಾರ್

Ravi Mohan: ಇತ್ತೀಚೆಗೆ ಜಯಂ ರವಿ ಅವರು ಸಿನಿಮಾಗಳ ಬದಲಿಗೆ ತಮ್ಮ ಖಾಸಗಿ ಬದುಕಿನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಜಯಂ ರವಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಗಾಯಕಿ ಕೆನೀಶಾ ಪ್ರಾನ್ಸಿಸ್​ ಜೊತೆ ಸಂಬಂಧದಲ್ಲಿದ್ದರು. ಇದೀಗ ರವಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮುಖ ಘೋಷಣೆ ಮಾಡಿದ್ದಾರೆ. ‘ವಿಚ್ಛೇದನ ಸಿಗುವವರೆಗೆ ನಾನು ಸಿನಿಮಾಗಳಲ್ಲಿ ನಟಿಸುವುದಿಲ್ಲ’ ಎಂದಿದ್ದಾರೆ.ಆರತಿಯ ತಾಯಿ, ನಿರ್ಮಾಪಕಿ ಸುಜಾತಾ ವಿಜಯಕುಮಾರ್ ( ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಮ್ಮ ಮಗಳನ್ನು ಸಮರ್ಥಿಸಿಕೊಂಡಿದ್ದಾರೆ.

Vicky Kaushal: ಮಗನ ಮೊದಲ ಲುಕ್‌ ಹಂಚಿಕೊಂಡ ಕತ್ರಿನಾ! ಪತಿಯ ಬರ್ತ್‌ಡೇ ಸೆಲೆಬ್ರೇಶನ್‌ ಹೇಗಿತ್ತು?

Vicky Kaushal: ಮಗನ ಮೊದಲ ಲುಕ್‌ ಹಂಚಿಕೊಂಡ ಕತ್ರಿನಾ!

Vicky Kaushal: ಸಾಮಾಜಿಕ ಮಾಧ್ಯಮದಲ್ಲಿ ಹೃದಯಸ್ಪರ್ಶಿ ಟಿಪ್ಪಣಿ ಮತ್ತು ಕುಟುಂಬದ ಸುಂದರ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ. ಮಗ ವಿಹಾನ್‌ನ (Vihaan) ಮೊದಲ ಲುಕ್‌ ಕೂಡ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದೆ, ಅಭಿಮಾನಿಗಳು ದಂಪತಿಯ ಮುದ್ದಾದ ಕುಟುಂಬ ಕ್ಷಣಗಳನ್ನು ನೋಡಿ ಸಂತೋಷಪಟ್ಟರು.

Ravi Mohan: ನನ್ನ ಸಂಸಾರ ಹಾಳು ಮಾಡಿದ್ದು ಆ ಮೂರು ಅಕ್ಷರದ ನಟಿ; ನಟ ರವಿ ಸ್ಫೋಟಕ ಹೇಳಿಕೆ

ನನ್ನ ಸಂಸಾರ ಹಾಳು ಮಾಡಿದ್ದು ಆ ಮೂರು ಅಕ್ಷರದ ನಟಿ; ನಟ ರವಿ

Ravi Mohan: ತಮಿಳು ನಟ ಜಯಂ ರವಿ ಅವರು ಸಿನಿಮಾಗಳ ಬದಲಿಗೆ ತಮ್ಮ ಖಾಸಗಿ ಬದುಕಿನಿಂದಾಗಿ ಹೆಚ್ಚು ಸುದ್ದಿಯಲ್ಲಿದ್ದಾರೆ. ಜಯಂ ರವಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ಗಾಯಕಿ ಕೆನೀಶಾ ಪ್ರಾನ್ಸಿಸ್​ ಜೊತೆ ಸಂಬಂಧದಲ್ಲಿದ್ದರು. ಇದೀಗ ರವಿ ಚೆನ್ನೈನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಮುಖ ಘೋಷಣೆ ಮಾಡಿದ್ದಾರೆ. ತಮ್ಮ ಕುಟುಂಬವನ್ನು ಹಾಳುಮಾಡಲು ಯತ್ನಿಸಿದ ನಟಿಯೊಬ್ಬರ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

Yash Toxic: ಟಾಕ್ಸಿಕ್ ರಿಲೀಸ್‌ ವಿಳಂಬ ಆಗಿದ್ದೇಕೆ? ತಾರಾ ಸುತಾರಿಯಾ ಹೇಳಿದ್ದೇನು?

ಟಾಕ್ಸಿಕ್ ರಿಲೀಸ್‌ ವಿಳಂಬ ಆಗಿದ್ದೇಕೆ? ತಾರಾ ಸುತಾರಿಯಾ ಹೇಳಿದ್ದೇನು?

Yash Toxic: ಚಿತ್ರ ಈಗಾಗಲೇ ಪೂರ್ಣಗೊಂಡಿದ್ದು, ಜಾಗತಿಕ ವಿತರಣೆ ಹಾಗೂ ಪಾಲುದಾರಿಕೆಗಳ ವ್ಯವಸ್ಥೆಯನ್ನು ಸರಿಹೊಂದಿಸುವ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಮೊದಲು ಘೋಷಿಸಿದ್ದ ಜೂನ್ 4ರಂದು ಚಿತ್ರ ಬಿಡುಗಡೆಯಾಗುವುದಿಲ್ಲ. ಬದಲಾಗಿ, ಜಾಗತಿಕ ಮಟ್ಟದಲ್ಲಿ ಒಂದೇ ದಿನ ಬಿಡುಗಡೆಯಾಗುವಂತೆ ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ತಂಡ ಹೇಳಿಕೊಂಡಿತ್ತು.

Loading...