ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Allu Arjun: ರಾಮ್ ಚರಣ್ 'ಪೆದ್ದಿ' ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್‌! ಏನಂದ್ರು?

ರಾಮ್ ಚರಣ್ 'ಪೆದ್ದಿ' ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್‌! ಏನಂದ್ರು?

Allu Arjun: ಅಲ್ಲು ಅರ್ಜುನ್ ಅವರ ಈ ಟ್ವೀಟ್‌ನಿಂದ ಮೆಗಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಡುವೆ ಹಲವು ದಿನಗಳಿಂದ ಸ್ಪರ್ಧೆ ನಡೆಯುತ್ತಿದೆ ಎಂಬ ಮಾತುಗಳಿವೆ. ಇದರ ಜೊತೆಗೆ ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಸ್ವಲ್ಪ ಅಂತರವಿದೆ ಎಂಬ ವದಂತಿಗಳೂ ಹಬ್ಬಿದ್ದವು. ಇನ್ನು, 'ಪೆದ್ದಿ' ಸಿನಿಮಾ ವಿಶ್ವಾದ್ಯಂತ ಐದು ದಿನಗಳಲ್ಲಿ 249 ಕೋಟಿ ರೂ. ಗಳಿಸಿದೆ.

Karikaada Kannada movie: ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ  ಈ ಒಟಿಟಿಯಲ್ಲಿ ಪ್ರಸಾರ!

ನಟರಾಜ್ ಅಭಿನಯದ ‘ಕರಿಕಾಡ’ ಸಿನಿಮಾ ಈ ಒಟಿಟಿಯಲ್ಲಿ ಪ್ರಸಾರ!

Karikaada Kannada movie: ಕರಿಕಾಡ ಚಿತ್ರದಲ್ಲಿ ಹಳ್ಳಿ ಯುವಕನಾಗಿ ನಟರಾಜ್ ಅದ್ಭುತ ನಟನೆ ನೀಡಿದ್ದರು.‌ ಮೊದಲ ಚಿತ್ರದಲ್ಲೇ ನಟನೆಯೊಂದಿಗೆ ಸಾಹಸ ಸನ್ನಿವೇಶಗಳಲ್ಲಿ ಕೂಡ ಸ್ವತಃ ಭಾಗಿಯಾಗಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್ ಇಂಥದೊಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಸಹೋದ್ಯೋಗಿಗಳಿಂದ ಹಿಡಿದು ಪರಿಚಿತ ವಲಯದಲ್ಲಿ ಅಚ್ಚರಿ ಮೂಡಿಸಿತ್ತು.

ಪತ್ನಿ ಆರತಿ ಜೊತೆಗಿನ ವಿಚ್ಛೇದನ ಪ್ರಕರಣದಲ್ಲಿ ನಟ ರವಿ ಮೋಹನ್‌ಗೆ ಹಿನ್ನಡೆ; ಜೀವನಾಂಶ ಅರ್ಜಿಯ ವಿಚಾರಣೆಗೆ ಕಾಲಾವಕಾಶ ಕೇಳಿದ್ದಕ್ಕೆ ಹೈಕೋರ್ಟ್ ಹೇಳಿದ್ದೇನು?

ನಟ ʻಜಯಂʼ ರವಿಗೆ ಹೈಕೋರ್ಟ್ ಶಾಕ್; ಪತ್ನಿ ಜೀವನಾಂಶ ಕೇಸ್‌ನಲ್ಲಿ ಹಿನ್ನಡೆ!

ಪತ್ನಿ ಆರತಿ ಸಲ್ಲಿಸಿರುವ ಮಧ್ಯಂತರ ಜೀವನಾಂಶ ಅರ್ಜಿಯ ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೋರಿದ್ದ ನಟ ರವಿ ಮೋಹನ್ (ʻಜಯಂʼ ರವಿ) ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಟನಿಗೆ ಭಾರಿ ಹಿನ್ನಡೆಯಾಗಿದೆ. ಮಕ್ಕಳ ಶಾಲಾ ಶುಲ್ಕ ಹಾಗೂ ಜೀವನಾಂಶ ಪಾವತಿಸದ ಕಾರಣ ಆರತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Kangana Ranaut: ಸಿನಿಮಾ ರಂಗದಲ್ಲಿ ಈ ಮೊದಲು ಕಂಗನಾ ಇಮೇಜ್ ಹೇಗಿತ್ತು? ಸತ್ಯ ತೆರೆದಿಟ್ಟ ನಟಿ

ಸಿನಿಮಾ ರಂಗದಲ್ಲಿ ಈ ಮೊದಲು ಕಂಗನಾ ಇಮೇಜ್ ಹೇಗಿತ್ತು? ಸತ್ಯ ತೆರೆದಿಟ್ಟ ನಟಿ

Kangana Ranaut: ಒಂದು ಕಾಲದಲ್ಲಿ ‘ರಾಸ್ಕಲ್ಸ್’ ಮತ್ತು ‘ಡಬಲ್ ಧಮಾಲ್’ ರೀತಿಯ ಕಮರ್ಷಿಯಲ್ ಸಿನಿಮಾಗಳು ಮಾಡಿದ್ದಕ್ಕೆ ಹೆಸರುವಾಸಿಯಾಗಿದ್ದರು. ಆ ಪಾತ್ರಗಳು ಅವರ ಆರಂಭಿಕ ಪರದೆಯ ಇಮೇಜ್ ಅನ್ನು ವ್ಯಾಖ್ಯಾನಿಸಿದವು ಆದರೆ ಅವರ ವೃತ್ತಿಜೀವನದ ಹಾದಿಯನ್ನು ನಿರ್ಧರಿಸಲಿಲ್ಲ ಎಂದು ಹೇಳಿದ್ದಾರೆ. ಚಿತ್ರದ ಪ್ರಚಾರದ ವೇಳೆ ಅವರು ತಮ್ಮ ಹಳೆಯ ದಿನಗಳ ಹೋರಾಟವನ್ನು ಬಿಚ್ಚಿಟ್ಟಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸಲು ಸಜ್ಜಾದ ಸ್ಯಾಂಡಲ್‌ವುಡ್‌ನ ಯುವ ತಂಡ: ಬಂದಿದೆ ‘ನಮ್ಮೂರು ನಮ್ಮವರು’ ಆಲ್ಬಂ

ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಬಂತು ‌ʻನಮ್ಮೂರು ನಮ್ಮವರುʼ ಸಾಂಗ್

ಸಮಾಜದಲ್ಲಿ ಮಿತಿಮೀರುತ್ತಿರುವ ಭ್ರಷ್ಟಾಚಾರ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆಗಳು ಸಜ್ಜಾಗಿದ್ದು, ‘ನಮ್ಮೂರು ನಮ್ಮವರು’ ಕ್ರಾಂತಿಕಾರಿ ಮ್ಯೂಸಿಕ್ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ. ಆರೋಹ ಫಿಲಂಸ್ ಲಾಂಛನದಲ್ಲಿ ವಕೀಲ ಸಂದೀಪ್ ಪಾಟೀಲ್ ಬೆಂಬಲದೊಂದಿಗೆ ಮೂಡಿಬಂದಿರುವ ಈ ಜಾಗೃತಿ ಗೀತೆಗೆ ಮಯೂರ್ ಅಂಬೇಕಲ್ಲು ಸಂಗೀತ ನೀಡಿದ್ದಾರೆ.

ʻಟಾಕ್ಸಿಕ್‌ ಚಿತ್ರಕ್ಕೆ 100 ದಿನಗಳ ರೀ-ಶೂಟ್‌, 40 ಕೋಟಿ ಹೆಚ್ಚುವರಿ ಖರ್ಚುʼ; ಯಶ್‌ ಸಿನಿಮಾ ಕುರಿತ ಈ ವದಂತಿಗೆ ಕೊನೆಗೂ ಸಿಕ್ತು ಕ್ಲಾರಿಟಿ!

ʻಟಾಕ್ಸಿಕ್ʼಗೆ 100 ದಿನಗಳ ರೀ-ಶೂಟ್? ಮತ್ತೆ 40 ಕೋಟಿ ಖರ್ಚು! ಇಲ್ಲಿದೆ ಸತ್ಯ

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 500 ಕೋಟಿ ರೂ. ಭಾರಿ ಬಜೆಟ್‌ನ 'ಟಾಕ್ಸಿಕ್' ಸಿನಿಮಾ 100 ದಿನಗಳ ಕಾಲ ರೀ-ಶೂಟಿಂಗ್ ಆಗುತ್ತಿದ್ದು, 40 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂಬ ವದಂತಿಗಳನ್ನು ಚಿತ್ರತಂಡದ ಆಪ್ತ ಮೂಲಗಳು ತಳ್ಳಿಹಾಕಿವೆ. ಜಾಗತಿಕ ಮಾರುಕಟ್ಟೆ ಮತ್ತು ಇರಾನ್ ಯುದ್ಧದ ಕಾರಣಗಳಿಂದ ಬಿಡುಗಡೆ ದಿನಾಂಕ ವಿಳಂಬವಾಗಿದ್ದೇ ಈ ಊಹಾಪೋಹಗಳಿಗೆ ಮೂಲ ಕಾರಣ ಎನ್ನಲಾಗಿದೆ.

ಒಟಿಟಿಯಲ್ಲೂ ಭರ್ಜರಿ ದಾಖಲೆ ಬರೆದ ʻಧುರಂಧರ್‌ 2ʼ; ಮೊದಲ ವಾರಾಂತ್ಯದಲ್ಲೇ 5 ಕೋಟಿ ವೀಕ್ಷಕರನ್ನು ತಲುಪಿದ ರಣವೀರ್‌ ಸಿಂಗ್‌ ಸಿನಿಮಾ

ಒಟಿಟಿಯಲ್ಲೂ ಮುಂದುವರಿದ ʻಧುರಂಧರ್ 2ʼ ಅಬ್ಬರ; ಸೃಷ್ಟಿಯಾಯ್ತು ಹೊಸ ದಾಖಲೆ

ನಟ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೇಂಜ್’ ಸಿನಿಮಾವು ಜಿಯೋ ಹಾಟ್‌ಸ್ಟಾರ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿ, ಮೊದಲ ವಾರಾಂತ್ಯದಲ್ಲೇ ಬರೋಬ್ಬರಿ 5 ಕೋಟಿ ವೀಕ್ಷಕರನ್ನು ತಲುಪುವ ಮೂಲಕ ಇತಿಹಾಸ ಸೃಷ್ಟಿಸಿದೆ. ಆದಿತ್ಯ ಧರ್ ನಿರ್ದೇಶನದ ಈ ಹೈ-ವೋಲ್ಟೇಜ್ ಆಕ್ಷನ್ ಸಿನಿಮಾ ಥಿಯೇಟರ್‌ಗಿಂತ 5 ಪಟ್ಟು ಹೆಚ್ಚು ವೀಕ್ಷಣೆ ಪಡೆದಿದ್ದು ವಿಶೇಷ.

ಸೋಮವಾರದ ಪರೀಕ್ಷೆಯಲ್ಲಿ ʻಪೆದ್ದಿʼ ಪಾಸ್‌; ಕರ್ನಾಟಕದಲ್ಲಿ ರಾಮ್‌ ಚರಣ್‌ ಸಿನಿಮಾಗೆ ಈವರೆಗೂ ಸಿಕ್ಕ ಹಣವೆಷ್ಟು?

Peddi Collection‌: ಐದೇ ದಿನಕ್ಕೆ ಹೊಸ ದಾಖಲೆ ಬರೆದ ರಾಮ್‌ ಚರಣ್ ಸಿನಿಮಾ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಕೇವಲ ಐದೇ ದಿನಗಳಲ್ಲಿ 315 ಕೋಟಿ ರೂ. ಗಳಿಸಿದೆ. ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಅತ್ಯಂತ ವೇಗವಾಗಿ 300 ಕೋಟಿ ಕ್ಲಬ್ ಸೇರಿದ ಮೊದಲ ಸೋಲೋ ಚಿತ್ರ ಇದಾಗಿದೆ. ಕರ್ನಾಟಕದಲ್ಲಿಯೂ ಪೆದ್ದಿ ಸಿನಿಮಾ ಉತ್ತಮ ಗಳಿಕೆ ಮಾಡುತ್ತಿದೆ.

‌ʻಸ್ಲಮ್‌ಡಾಗ್‌ʼ ಟೀಸರ್‌ ರಿಲೀಸ್: ತಮಿಳು ನಟ ವಿಜಯ್‌ ಸೇತುಪತಿ ಎದುರು ಅಬ್ಬರಿಸಿದ ʻಸ್ಯಾಂಡಲ್‌ವುಡ್‌ ಸಲಗʼ‌

ʻಸ್ಲಮ್‌ಡಾಗ್‌ʼ ಚಿತ್ರದಲ್ಲಿ ಅಬ್ಬರಿಸಿದ ಕನ್ನಡ ನಟ ʻದುನಿಯಾʼ ವಿಜಯ್‌

ಪುರಿ ಜಗನ್ನಾಥ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ಸ್ಲಮ್‌ಡಾಗ್: 33 ಟೆಂಪಲ್ ರೋಡ್’ ಟೀಸರ್ ಮುಂಬೈನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಚಿತ್ರದಲ್ಲಿ ವಿಜಯ್ ಸೇತುಪತಿ ಭಿಕ್ಷುಕನಾಗಿ ಪವರ್‌ಫುಲ್ ಸಂಭಾಷಣೆಗಳ ಮೂಲಕ ಮಿಂಚಿದ್ದರೆ, ಸ್ಯಾಂಡಲ್‌ವುಡ್ ‘ಸಲಗ’ ದುನಿಯಾ ವಿಜಯ್ ರಗಡ್ ವಿಲನ್ ಆಗಿ ವಿಶಿಷ್ಟ ಮ್ಯಾನರಿಸಂ ಮೂಲಕ ಅಬ್ಬರಿಸಿದ್ದಾರೆ.

ಶಿವಾನಂದ ನೀಲಣ್ಣವರ‌ ಸಾವಿರಾರು ಕೋಟಿ ವಂಚನೆ ಕೇಸ್‌ನಲ್ಲಿ ಪೊಲೀಸರು ಬಾಲಿವುಡ್‌ ನಟಿ ಸನ್ನಿ ಲಿಯೋನ್‌ಗೆ ನೋಟಿಸ್‌ ನೀಡಿರೋದ್ಯಾಕೆ?

ಶಿವಾನಂದ ನೀಲಣ್ಣವರ್ ಕೇಸ್: ನಟಿ ಸನ್ನಿ ಲಿಯೋನ್‌ಗೆ ನೋಟಿಸ್‌ ಕೊಟ್ಟಿದ್ಯಾಕೆ?

ಬೆಳಗಾವಿ ಮೂಲದ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯು 40,700 ಗ್ರಾಹಕರಿಂದ 2,400 ಕೋಟಿ ರೂ. ವಸೂಲಿ ಮಾಡಿ ವಂಚಿಸಿದ ಪ್ರಕರಣಕ್ಕೆ ಚಿತ್ರರಂಗದ ನಂಟು ಬಯಲಾಗಿದೆ. ಆರೋಪಿ ಶಿವಾನಂದ ನೀಲಣ್ಣವರ ಜನರಿಂದ ಪಡೆದ ಹಣವನ್ನು 'ಚಾಂಪಿಯನ್' ಸಿನಿಮಾ ನಿರ್ಮಾಣಕ್ಕೆ ಹಾಗೂ ನಟಿ ಸನ್ನಿ ಲಿಯೋನ್‌ಗೆ 1 ಕೋಟಿ ರೂ. ಸಂಭಾವನೆ ನೀಡಲು ಅಕ್ರಮವಾಗಿ ಬಳಸಿದ್ದಾನೆ.

OTT Movies: ಜೂನ್ ಮೊದಲ ವಾರದಲ್ಲೇ ಭರ್ಜರಿ ಮನರಂಜನೆ; ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ರಿಲೀಸ್‌?

OTT Movies: ಒಟಿಟಿಯಲ್ಲಿ ಯಾವೆಲ್ಲ ಸಿನಿಮಾಗಳು ರಿಲೀಸ್‌?

OTT Movies: ಹಾರರ್ ಕಾಮಿಡಿಯಿಂದ ಹಿಡಿದು ಕ್ರೈಮ್ ಥ್ರಿಲ್ಲರ್‌ಗಳವರೆಗೆ, ರಿಯಾಲಿಟಿ ಶೋಗಳಿಂದ ಹಿಡಿದು ಕೌಟುಂಬಿಕ ಭಾವನಾತ್ಮಕ ಕಥೆಗಳವರೆಗೆ, ವೈವಿಧ್ಯಮಯ ವಿಷಯವನ್ನು ಲಭ್ಯಗೊಳಿಸಲಾಗುತ್ತಿದೆ. ಚಿತ್ರಮಂದಿರಗಳಿಗೆ ಹೋಗಲು ಸಾಧ್ಯವಾಗದ ಪ್ರೇಕ್ಷಕರು ಸಹ ಈಗ ಈ ಸಿನಿಮಾಗಳನ್ನು ಮನೆಯಿಂದಲೇ ಆನಂದಿಸುವ ಅವಕಾಶ ಇದೆ.

Ram Charan: 'ಪೆದ್ದಿ' ಚಿತ್ರದ ವಿರುದ್ಧ ಕೇಸ್ ದಾಖಲಿಸುವಂತೆ ಆಗ್ರಹ; ಏನಿದು ವಿವಾದ?

'ಪೆದ್ದಿ' ಚಿತ್ರದ ವಿರುದ್ಧ ಕೇಸ್ ದಾಖಲಿಸುವಂತೆ ಆಗ್ರಹ; ಏನಿದು ವಿವಾದ?

Ram Charan: 'ಪೆದ್ದಿ' ಚಿತ್ರವು ವಿವಾದಗಳಿಂದ ಸುತ್ತುವರಿದಿದೆ. ಇತ್ತೀಚಿನವರೆಗೂ ಲವ್ ಟ್ರ್ಯಾಕ್ ದೃಶ್ಯಗಳನ್ನು ಟೀಕಿಸಲಾಗಿತ್ತು ಮತ್ತು ನಿರ್ದೇಶಕ ಬುಚಿ ಬಾಬು ಕ್ಷಮೆಯಾಚಿಸಿ ದೃಶ್ಯಗಳನ್ನು ಟ್ರಿಮ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಈಗ ಚಿತ್ರವು ಮತ್ತೊಂದು ಹೊಸ ವಿವಾದಕ್ಕೆ ಸಿಲುಕಿದೆ. ಇದು ಕಾನೂನು ತೊಂದರೆಗಳನ್ನು ಎದುರಿಸುತ್ತಿದೆ.

Sandalwood Actor Shivraj Kumar: ಸೀಕಲ್ ಗ್ರಾಮಕ್ಕೆ ನಟ ಶಿವಣ್ಣ ದಂಪತಿ ಭೇಟಿ

ಸೀಕಲ್ ಗ್ರಾಮಕ್ಕೆ ನಟ ಶಿವಣ್ಣ ದಂಪತಿ ಭೇಟಿ

ಅಧಿಕ ಮಾಸದಲ್ಲಿ ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಹೋಮ ಮತ್ತು ಶ್ರೀಸತ್ಯನಾರಾಯಣಸ್ವಾಮಿ ಪೂಜೆ ನೆರವೇರಿಸಲಾಗಿದೆ. ಸಕಾಲಕ್ಕೆ ಮಳೆ ಬೆಳೆ ಸಮಸ್ತ ಜನರು ಸುಖ ಶಾಂತಿ ನೆಮ್ಮದಿಯಿಂದ ಬಾಳಲಿ ಎಂದು ದೇವರನ್ನು ಮೊರೆ ಹೋಗಿದ್ದೇವೆ. ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇ ಗೌಡ( Chamundeshwari MLA GT Deve Gowda) ,ನಟ ಶಿವರಾಜ್ ಕುಮಾರ್ ದಂಪತಿ ಮತ್ತು ಖ್ಯಾತ ಜ್ಯೋತಿಷಿ ಆನಂದ್ ಗುರೂಜಿ ಭಾಗವಹಿಸಿದ್ದಾರೆ

Deepika Padukone: ಬಾಲ್ಕನಿಯಲ್ಲಿ‌ ನಿಂತು ದೀಪಿಕಾ ಜೋಡಿ ಮಾತು; ಲೀಕ್‌ ಆಯ್ತು ಫೋಟೋ

ಬಾಲ್ಕನಿಯಲ್ಲಿ‌ ನಿಂತು ದೀಪಿಕಾ ಜೋಡಿ ಮಾತು; ಲೀಕ್‌ ಆಯ್ತು ಫೋಟೋ

Deepika Padukone: ದೀಪಿಕಾಳ ಬೇಬಿ ಬಂಪ್‌ ಫೋಟೋ ಗಮನ ಸೆಳೆದಿದೆ. ದೀಪಿಕಾ ಸಡಿಲವಾದ ಬಿಳಿ ಬಣ್ಣದ ಸೆಟ್‌ನಲ್ಲಿ ಕಾಣಿಸಿಕೊಂಡರೆ, ರಣವೀರ್ ಕೆಂಪು ಟಿ-ಶರ್ಟ್ ಮತ್ತು ಕಪ್ಪು ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು. ಆನ್‌ಲೈನ್‌ನಲ್ಲಿ ಹಂಚಿಕೊಂಡಿರುವ ದೃಶ್ಯಗಳಲ್ಲಿ, ಇಬ್ಬರೂ ಮನೆಯ ಕೆಲಸಗಳನ್ನು ನೋಡುವಾಗ ವಿವರಗಳನ್ನು ಚರ್ಚಿಸುತ್ತಿರುವಂತೆ ಕಂಡುಬಂದಿದೆ. ಮತ್ತೊಂದು ಫೋಟೋ ಸೆಟ್‌ನಲ್ಲಿ ಅವರು ಬಾಲ್ಕನಿಯಲ್ಲಿ ಇದ್ದುದನ್ನು ಸಹ ತೋರಿಸಲಾಗಿದೆ. ಅಂದಿನಿಂದ ಈ ಚಿತ್ರಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಪ್ರಸಾರವಾಗಿವೆ.

ʻಅಂದು ನಮಗೆ ಸ್ಕ್ರಿಪ್ಟ್ ಇರುತ್ತಿರಲಿಲ್ಲ, ರಿಹರ್ಸಲ್‌ಗಳು ಕೂಡ ನಡೆಯುತ್ತಿರಲಿಲ್ಲʼ; 90ರ ದಶಕದ ಚಿತ್ರರಂಗ ನೆನೆದು ಕರಿಷ್ಮಾ ಕಪೂರ್ ಭಾವುಕ

90ರ ದಶಕದ ಬಾಲಿವುಡ್ ಸಿನಿಮಾಗಳ ರಹಸ್ಯ ಬಿಚ್ಚಿಟ್ಟ ನಟಿ ಕರಿಷ್ಮಾ ಕಪೂರ್!

ಬಾಲಿವುಡ್‌ನ 90ರ ದಶಕದ ಸ್ಟಾರ್ ನಟಿ ಕರಿಷ್ಮಾ ಕಪೂರ್ ತಮ್ಮ ಹಳೇ ದಿನಗಳನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಅಂದು ಸ್ಕ್ರಿಪ್ಟ್ ಇಲ್ಲದಿದ್ದರೂ ಕೇವಲ ಕಠಿಣ ಪರಿಶ್ರಮ, ಚಿತ್ರರಂಗದ ಮೇಲಿನ ಹುಚ್ಚು ಹಾಗೂ ದಿಗ್ಗಜ ಕಲಾವಿದರ ಒಡನಾಟದಿಂದ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು ಎಂದು ಶ್ಲಾಘಿಸಿದ್ದಾರೆ.

Ram Charan: ʻಪೆದ್ದಿʼ ಸಿನಿಮಾದಲ್ಲಿ ನಾಯಕಿಯ ಪಾತ್ರಕ್ಕೆ ಅಪಮಾನ; ನಟಿ ಜಾನ್ವಿ ಕಪೂರ್‌ ಬೆಂಬಲಕ್ಕೆ ನಿಂತ ಜಗಪತಿ ಬಾಬು

'ಪೆದ್ದಿ' ಚಿತ್ರದ ವಿವಾದ; ಜಾನ್ವಿ ಕಪೂರ್ ಬೆಂಬಲಕ್ಕೆ ನಿಂತ ನಟ ಜಗಪತಿ ಬಾಬು

ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರದಲ್ಲಿ ನಟಿ ಜಾನ್ವಿ ಕಪೂರ್ ಪಾತ್ರವನ್ನು ಅತಿಯಾಗಿ ಗ್ಲಾಮರೈಸ್ ಮಾಡಿ, ಕ್ಯಾಮೆರಾ ಆಂಗಲ್‌ಗಳ ಮೂಲಕ ಅಪಮಾನಿಸಲಾಗಿದೆ ಎಂಬ ತೀವ್ರ ಆಕ್ರೋಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದೆ. ನಟಿಯನ್ನು ವೈಯಕ್ತಿಕವಾಗಿ ಟಾರ್ಗೆಟ್ ಮಾಡುತ್ತಿರುವುದನ್ನು ನಟ ಜಗಪತಿ ಬಾಬು ಖಂಡಿಸಿದ್ದು, ಜಾನ್ವಿ ಬೆಂಬಲಕ್ಕೆ ನಿಂತಿದ್ದಾರೆ.

Toxic Movie: ಗೀತು ಮೋಹನ್‌ದಾಸ್ ಹುಟ್ಟುಹಬ್ಬ; ‘ಟಾಕ್ಸಿಕ್’ ಮೇಕಿಂಗ್ ವಿಡಿಯೋ ಔಟ್‌!

ಗೀತು ಮೋಹನ್‌ದಾಸ್ ಹುಟ್ಟುಹಬ್ಬ; ‘ಟಾಕ್ಸಿಕ್’ ಮೇಕಿಂಗ್ ವಿಡಿಯೋ ಔಟ್‌!

Toxic Movie:ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದಲ್ಲಿ ಯಶ್ ನಾಯಕನಾಗಿ ನಟಿಸಿದ್ದಾರೆ ಮತ್ತು ಅವರನ್ನು ದ್ವಿರೂಪದಲ್ಲಿ ತೋರಿಸಿದ್ದಾರೆ. ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಟಾಕ್ಸಿಕ್' ಬಿಡುಗಡೆ ವಿವರಗಳು ಈ ವರ್ಷದ ಆರಂಭದಲ್ಲಿ, ಚಿತ್ರದ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಚಿತ್ರವು ಆರಂಭದಲ್ಲಿ ಜೂನ್ 4 ರಂದು ಚಿತ್ರಮಂದಿರಗಳಿಗೆ ಬರಲು ನಿರ್ಧರಿಸಲಾಗಿತ್ತು.

ಶಾಲಾ ಪ್ರವಾಸದಲ್ಲಿ ದಾರಿ ತಪ್ಪಿದ ಮುಗ್ಧ ಮಕ್ಕಳು; ‘ಅಂಬರ ಗುಡ್ಡ’ ಸಿನಿಮಾದಲ್ಲಿದೆ ರೋಚಕ ಕಥೆ!

‘ಅಂಬರ ಗುಡ್ಡ’ ಸಿನಿಮಾದ ಟ್ರೇಲರ್‌ ರಿಲೀಸ್;‌ ಕಾಡಿನಲ್ಲಿ ಮಕ್ಕಳ ಹೋರಾಟ

ಸ್ಯಾಂಡಲ್‌ವುಡ್‌ನಲ್ಲಿ ವಿರಳವಾಗುತ್ತಿರುವ ಮಕ್ಕಳ ಸಿನಿಮಾಗಳ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರುವ ಸಾಹಸಮಯ ಚಿತ್ರ ‘ಅಂಬರ ಗುಡ್ಡ’ ಜೂನ್ 26ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಶಾಲಾ ಪ್ರವಾಸಕ್ಕೆ ತೆರಳಿ ದಟ್ಟ ಕಾಡಿನಲ್ಲಿ ಕಳೆದುಹೋಗುವ ಮುಗ್ಧ ಮಕ್ಕಳ ರೋಚಕ ಹೋರಾಟದ ಕಥೆಯನ್ನು ನಿರ್ದೇಶಕ ವಿಷ್ಣು ತೇಜ ಕಟ್ಟಿಕೊಟ್ಟಿದ್ದಾರೆ.

ನಾಲ್ಕೇ ದಿನಕ್ಕೆ 300 ಕೋಟಿ ರೂ. ಗಡಿ ತಲುಪಿದ ʻಪೆದ್ದಿʼ; ಸೋಮವಾರದ ಅಗ್ನಿಪರೀಕ್ಷೆಯಲ್ಲಿ ಪಾಸಾಗಲಿದೆಯಾ ರಾಮ್‌ ಚರಣ್‌ ಸಿನಿಮಾ?

Ram Charan: ಕೇವಲ 4 ದಿನಕ್ಕೆ 300 ಕೋಟಿ ಗಡಿ ತಲುಪಿದ ʻಪೆದ್ದಿʼ ಸಿನಿಮಾ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ಮೊದಲ ವೀಕೆಂಡ್‌ನಲ್ಲೇ ವಿಶ್ವಾದ್ಯಂತ ಬರೋಬ್ಬರಿ 292.50 ಕೋಟಿ ರೂಪಾಯಿ ಗಳಿಸಿ 300 ಕೋಟಿಯ ಗಡಿ ತಲುಪಿದೆ. ಬುಚ್ಚಿಬಾಬು ಸಾನ ನಿರ್ದೇಶನದ ಈ ಚಿತ್ರ ಮೊದಲ ದಿನವೇ 135.36 ಕೋಟಿ ರೂ. ಬಾಚಿತ್ತು.

ʻ100 ಕೋಟಿ ಮೌಲ್ಯದ ಬಂಗಲೆ, ಐಷಾರಾಮಿ ಕಾರುಗಳು, ದುಬಾರಿ ಆಭರಣಗಳುʼ; ನಟಿ ಶಿಲ್ಪಾ ಶೆಟ್ಟಿ ಬಳಿ ಎಷ್ಟೆಲ್ಲಾ ಆಸ್ತಿ ಇದೆ ಗೊತ್ತಾ?

ನಟಿ ಶಿಲ್ಪಾ ಶೆಟ್ಟಿ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

ಮಂಗಳೂರು ಮೂಲದ ಬಹುಭಾಷಾ ನಟಿ ಶಿಲ್ಪಾ ಶೆಟ್ಟಿ ಇಂದು (ಜೂನ್‌ 8) ತಮ್ಮ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, 2026ರ ವೇಳೆಗೆ ಅವರ ಒಟ್ಟು ಆಸ್ತಿ ಮೌಲ್ಯ ಸುಮಾರು 275 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮುಂಬೈನ ಜುಹುನಲ್ಲಿರುವ 100 ಕೋಟಿ ರೂ. ಮೌಲ್ಯದ 'ಕಿನಾರಾ' ಬಂಗಲೆ, ಬಾಸ್ಟಿಯನ್ ರೆಸ್ಟೋರೆಂಟ್ ಸರಣಿ ಹೀಗೆ ಉದ್ಯಮಿಯಾಗಿಯೂ ಸಾಮ್ರಾಜ್ಯ ಕಟ್ಟಿದ್ದಾರೆ.

ಥ್ರಿಲ್ಲರ್‌ ಮಂಜು ನಿರ್ದೇಶನದ ಸಿನಿಮಾದ ʻಡೆಡ್ಲಿ ಕಿಲ್ಲರ್ʼ ಸಿನಿಮಾಕ್ಕೆ ಸಾಥ್‌ ನೀಡಿದ ನಟಿ ರಾಗಿಣಿ ದ್ವಿವೇದಿ

ʻಡೆಡ್ಲಿ ಕಿಲ್ಲರ್ʼ ಟ್ರೇಲರ್ ರಿಲೀಸ್; ಥ್ರಿಲ್ಲರ್ ಮಂಜುಗೆ ನಟಿ ರಾಗಿಣಿ ಸಾಥ್

'ಪೊಲೀಸ್ ಸ್ಟೋರಿ' ಖ್ಯಾತಿಯ ಖ್ಯಾತ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು 15 ವರ್ಷಗಳ ಬಳಿಕ ನಿರ್ದೇಶಿಸಿರುವ 'ಡೆಡ್ಲಿ ಕಿಲ್ಲರ್' ಚಿತ್ರದ ಭರ್ಜರಿ ಟ್ರೇಲರ್ ಅನ್ನು ನಟಿ ರಾಗಿಣಿ ದ್ವಿವೇದಿ ಬಿಡುಗಡೆ ಮಾಡಿದ್ದಾರೆ. ಕೀರ್ತಿ ಸಿಲ್ವರ್ ಸ್ಕ್ರೀನ್ ಅಡಿ ಮೂಡಿಬಂದಿರುವ ಈ ಕಾಡಿನ ಹಿನ್ನೆಲೆಯ ಸಸ್ಪೆನ್ಸ್ ಹಾರರ್ ಚಿತ್ರದಲ್ಲಿ ಅಭಯ್‌ವೀರ್ ಹಾಗೂ ನಿವೀಕ್ಷಾ ಮುಖ್ಯ ಭೂಮಿಕೆಯಲ್ಲಿದ್ದಾರೆ.

ʻಕನಸು ಕಾಣಲು ಎಲ್ಲರಿಗೂ ಹಕ್ಕಿದೆ...ʼ; ಸುದೀಪ್‌ ಎದುರಲ್ಲೇ ನೆಪೋಟಿಸಂ ಕುರಿತ ಚರ್ಚೆಗೆ ಶಿವರಾಜ್‌ಕುಮಾರ್‌ ಖಡಕ್‌ ರಿಯಾಕ್ಷನ್‌!

ನೆಪೋಟಿಸಂ ಕುರಿತ ಪ್ರಶ್ನೆಗೆ ಶಿವರಾಜ್‌ಕುಮಾರ್‌ ಖಡಕ್‌ ರಿಯಾಕ್ಷನ್

ನಟ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಪ್ರದರ್ಶನಕ್ಕೆ ಬಂದಿದ್ದ ಶಿವರಾಜ್‌ಕುಮಾರ್, ಇತ್ತೀಚೆಗೆ ಕೇಳಿಬಂದ ನೆಪೋಟಿಸಂ ಪ್ರಶ್ನೆಗೆ ಮಾಧ್ಯಮಗಳ ಎದುರು ತೀವ್ರ ಬೇಸರ ಹೊರಹಾಕಿದ್ದಾರೆ. ಚಿತ್ರರಂಗದಲ್ಲಿ ಪ್ರತಿಯೊಬ್ಬ ಮಗುವಿಗೂ ಕನಸು ಕಾಣುವ ಹಕ್ಕಿದೆ ಎಂದು ಶಿವಣ್ಣ ಹೇಳಿದ್ದಾರೆ.

Karuppu OTT release:  ಸೂಪರ್ ​ಹಿಟ್ ʻಕರುಪ್ಪುʼ ಈ ಒಟಿಟಿಗೆ ಎಂಟ್ರಿ! ಸ್ಟ್ರೀಮಿಂಗ್‌ ಯಾವಾಗಿನಿಂದ?

ಸೂಪರ್ ​ಹಿಟ್ ʻಕರುಪ್ಪುʼ ಈ ಒಟಿಟಿಗೆ ಎಂಟ್ರಿ! ಸ್ಟ್ರೀಮಿಂಗ್‌ ಯಾವಾಗಿನಿಂದ?

Karuppu OTT release: ಆರ್‌ಜೆ ಬಾಲಾಜಿ ನಿರ್ದೇಶನದ ಈ ಫ್ಯಾಂಟಸಿ ಆಕ್ಷನ್ ಎಂಟರ್‌ಟೈನರ್ ಪ್ರದೇಶಗಳಾದ್ಯಂತ ಪ್ರೇಕ್ಷಕರನ್ನು ಆಕರ್ಷಿಸಿದೆ ಮತ್ತು ವರ್ಷದ ಅತಿದೊಡ್ಡ ತಮಿಳು ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ತೆಲುಗಿನಲ್ಲಿ ವೀರಭದ್ರು ಎಂಬ ಹೆಸರಿನಲ್ಲಿ ಬಿಡುಗಡೆಯಾದ ಈ ಚಿತ್ರವು ಇತ್ತೀಚೆಗೆ ವಿಶ್ವಾದ್ಯಂತ ಪ್ರಮುಖ ಮೈಲಿಗಲ್ಲನ್ನು ದಾಟಿದೆ. ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ.

Kangana Ranaut: ನರ್ಸ್​​ಗಳ ವೃತ್ತಿಯ ಬಗ್ಗೆ ಕಂಗನಾ ಮಾತು

Kangana Ranaut: ನರ್ಸ್​​ಗಳ ವೃತ್ತಿಯ ಬಗ್ಗೆ ಕಂಗನಾ ಮಾತು

Kangana Ranaut: 'ಭಾರತ್ ಭಾಗ್ಯ ವಿಧಾತ' ಚಿತ್ರ ಬಿಡುಗಡೆಯಾಗುವ ಮುನ್ನ , ನಟಿ-ರಾಜಕಾರಣಿ ಕಂಗನಾ ರನೌತ್, ಆರೋಗ್ಯ ರಕ್ಷಣೆಯಲ್ಲಿ ದಾದಿಯರು ನಿರ್ಣಾಯಕ ಪಾತ್ರ ವಹಿಸಿದ್ದರೂ ಅವರಿಗೆ ಗೌರವ ಮತ್ತು ಮನ್ನಣೆ ಇಲ್ಲ ಎಂದು ಹೇಳಿದ್ದಾರೆ. 26/11 ಭಯೋತ್ಪಾದಕ ದಾಳಿಯ ಸಮಯದಲ್ಲಿ ಮುಂಬೈನ ಕಾಮಾ ಆಸ್ಪತ್ರೆ ಸಿಬ್ಬಂದಿಯ ನೈಜ ಕಥೆಯಿಂದ ಪ್ರೇರಿತವಾದ ಈ ಚಿತ್ರವು ದಾದಿಯರು, ವಾರ್ಡ್ ಬಾಯ್‌ಗಳು ಮತ್ತು ಆಸ್ಪತ್ರೆ ಕೆಲಸಗಾರರನ್ನು ತನ್ನ ಕಥೆಯ ಹೃದಯಭಾಗದಲ್ಲಿ ಇರಿಸುತ್ತದೆ ಎಂದಿದ್ದಾರೆ.

Loading...