ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Desert Warrior: ಬಜೆಟ್‌ 1400 ಕೋಟಿ, ಕಲೆಕ್ಷನ್‌ 6 ಕೋಟಿ; ಇದು ಜಗತ್ತಿನ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಫ್ಲಾಪ್‌ ಸಿನಿಮಾ!

'ಡೆಸರ್ಟ್ ವಾರಿಯರ್': ಇದು ಜಗತ್ತಿನ ಅತ್ಯಂತ ಕಳಪೆ ಕಲೆಕ್ಷನ್‌ ಮಾಡಿದ ಸಿನಿಮಾ

ಸೌದಿ ಅರೇಬಿಯಾದ ಎಂ‌ಬಿಸಿ ಸ್ಟುಡಿಯೋಸ್ ನಿರ್ಮಿಸಿದ 1400 ಕೋಟಿ ರೂಪಾಯಿ ಬಜೆಟ್‌ನ 'ಡೆಸರ್ಟ್ ವಾರಿಯರ್' ಸಿನಿಮಾ ವಿಶ್ವ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಸೋಲು ಕಂಡಿತ್ತು. ಹಾಲಿವುಡ್ ಘಟಾನುಘಟಿ ನಟರು ಮತ್ತು ಭಾರಿ ವಿಎಫ್‌ಎಕ್ಸ್ ಹೊಂದಿದ್ದರೂ, ಚಿತ್ರವು ವಿಶ್ವಾದ್ಯಂತ ಕೇವಲ 6 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಶಕ್ತವಾಗಿತ್ತು.

'ಧೈರ್ಯವಿದ್ರೆ ನನ್ ಜೊತೆ ಚರ್ಚೆಗೆ ಬನ್ನಿ'; ಬಿಜೆಪಿಯನ್ನು ಟೀಕಿಸುವ ನಟ ಪ್ರಕಾಶ್‌ ರಾಜ್‌ಗೆ ಟಾಲಿವುಡ್‌ ನಿರ್ಮಾಪಕನ ಓಪನ್‌ ಚಾಲೆಂಜ್!‌

ನಟ ಪ್ರಕಾಶ್ ರಾಜ್‌ಗೆ ಟಾಲಿವುಡ್ ನಿರ್ಮಾಪಕ ಓಪನ್ ಚಾಲೆಂಜ್ ಹಾಕಿದ್ದೇಕೆ?

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಬಿಜೆಪಿ ವಿರೋಧಿ ನಿಲುವಿನ ವಿರುದ್ಧ ಟಾಲಿವುಡ್ ನಿರ್ಮಾಪಕ ಮಧುರ ಶ್ರೀಧರ್ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ. ಪ್ರಕಾಶ್ ರಾಜ್ ಅವರನ್ನು ಸಂಕುಚಿತ ಮನಸ್ಸಿನ "ಹುಸಿ ಜಾತ್ಯತೀತವಾದಿ" ಎಂದು ಕರೆದಿರುವ ರೆಡ್ಡಿ, ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.

30 ವರ್ಷಗಳ ಹಿಂದೆಯೇ ತಮ್ಮ ಪೊಲಿಟಿಕಲ್‌ ಪವರ್‌ ತೋರಿಸಿದ್ದ ʻಸೂಪರ್‌ ಸ್ಟಾರ್‌ʼ ರಜನಿಕಾಂತ್;‌ ಅಂದು ಕಂಗಾಲಾಗಿತ್ತು ಜಯಲಲಿತಾ ಪಾರ್ಟಿ!

ʻತಲೈವಾʼ ರಜನಿಕಾಂತ್‌ ನೀಡಿದ ಹೇಳಿಕೆಗೆ ಧೂಳೀಪಟವಾಗಿತ್ತು ಜಯಲಲಿತಾ ಪಾರ್ಟಿ!

ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ತಾರೆಯರ ಪ್ರಭಾವ ಅಪ್ರತಿಮ. 1996ರ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನೀಡಿದ ಒಂದೇ ಒಂದು ಹೇಳಿಕೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವನ್ನು ಧೂಳೀಪಟ ಮಾಡಿತ್ತು. ಭ್ರಷ್ಟಾಚಾರದ ಆರೋಪ ಮತ್ತು ರಜನಿ ಹವಾ ಸೇರಿ 225 ಸ್ಥಾನಗಳಿದ್ದ ಪಕ್ಷವನ್ನು ಕೇವಲ 4 ಸ್ಥಾನಗಳಿಗೆ ಕುಸಿಯುವಂತೆ ಮಾಡಿದ್ದ ಆ ರೋಚಕ ಮಾಹಿತಿ ಇಲ್ಲಿದೆ.

Dhurandhar Movie: ಶೀಘ್ರದಲ್ಲೇ ತೆರೆಗೆ ಬರಲಿದೆಯೇ ‘ಧುರಂಧರ್ 3’? ಏನಿದು ಸುದ್ದಿ?

Dhurandhar Movie: ಶೀಘ್ರದಲ್ಲೇ ತೆರೆಗೆ ಬರಲಿದೆಯೇ ‘ಧುರಂಧರ್ 3’?

Dhurandhar Movie: ರಣವೀರ್ ಸಿಂಗ್ ಅಭಿನಯದ ಈ ಚಿತ್ರದ ಎರಡೂ ಭಾಗಗಳು ಬಿಡುಗಡೆಯಾದ ನಂತರ, ಅಭಿಮಾನಿಗಳು ಮೂರನೇ ಪಾರ್ಟ್‌ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.ಈ ವಿಷಯದ ಬಗ್ಗೆ ಚಲನಚಿತ್ರ ತಂಡವು ಈ ಹಿಂದೆ ಮೌನವನ್ನು ಕಾಯ್ದುಕೊಂಡಿತ್ತು. ಆದಾಗ್ಯೂ, ತೆರೆಮರೆಯಲ್ಲಿ, ನಿರ್ಮಾಪಕರು ಏನೋ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಇತ್ತೀಚೆಗೆ, ಜಿಯೋ ಸ್ಟುಡಿಯೋಸ್‌ನ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ, ಧುರಂಧರ್ 3 ಬಗ್ಗೆ ಮಹತ್ವದ ಸುಳಿವನ್ನು ನೀಡಿದ್ದಾರೆ.

Urvashi Rautela: ಇದೊಂದು ವಿಚಾರಕ್ಕೆ ಬಾಲಯ್ಯ ನೆನೆದ ಊರ್ವಶಿ ರೌಟೇಲಾ!

ಇದೊಂದು ವಿಚಾರಕ್ಕೆ ಬಾಲಯ್ಯ ನೆನೆದ ಊರ್ವಶಿ ರೌಟೇಲಾ!

Urvashi Rautela: ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ತಮ್ಮ ಬಹಿರಂಗ ಹೇಳಿಕೆಗಳು ಮತ್ತು ಹಲವಾರು ವಿವಾದಾತ್ಮಕ ಕ್ಷಣಗಳಿಗಾಗಿ ಸುದ್ದಿಯಲ್ಲಿ ಇರುತ್ತಾರೆ. 'ಡಾಕು ಮಹಾರಾಜ್' ಚಿತ್ರದ 'ಡಬಡಿ ಡಿಬಿಡಿ' ಹಾಡಿನ ವಿವಾದದ ಬಗ್ಗೆ ನಟಿ ಊರ್ವಶಿ ರೌಟೇಲಾ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ನಂದಮೂರಿ ಬಾಲಕೃಷ್ಣ ಜೊತೆ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ.

Kannada Serial: ಕಿರುತೆರೆಗೆ ರೀ ಎಂಟ್ರಿ ಕೊಡಲು ಸಜ್ಜಾದ್ರು ಧನುಷ್‌, ಧ್ರುವಂತ್‌!

ಕಿರುತೆರೆಗೆ ರೀ ಎಂಟ್ರಿ ಕೊಡಲು ಸಜ್ಜಾದ್ರು ಧನುಷ್‌, ಧ್ರುವಂತ್‌!

Kannada Serial: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳಾದ ಧನುಷ್ ಗೌಡ ಮತ್ತು ಧ್ರುವಂತ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಇಬರಿಬ್ಬರಿಗೆ ತಮ್ಮದೇ ಆದ ಫ್ಯಾನ್ಸ್‌ ವರ್ಗವಿದೆ. ಕಿರುತೆರೆ ಯಾವಾಗ ಕಮ್‌ಬ್ಯಾಕ್‌ ಮಾಡ್ತಾರೆ ಅಂತ ಅವರ ಫ್ಯಾನ್ಸ್‌ ತುದಿಗಾಲಲ್ಲಿ ಕಾಯ್ತಾ ಇದ್ದರು. ಧ್ರುವಂತ್ ಮತ್ತು ಧನುಷ್ ಗೌಡ ಇಬ್ಬರೂ ಸಹ ಮತ್ತೆ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.

Love Mocktail 3: ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

Love Mocktail 3 : ಲವ್ ಮಾಕ್ಟೇಲ್ 3 ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಐವತ್ತು ದಿನಗಳನ್ನು ದಾಟಿಕೊಳ್ಳುವ ಮೂಲಕ ಈ ಗೆಲುವಿಗೆ ಮತ್ತಷ್ಟು ರಂಗು ಬಂದಂತಾಗಿದೆ. ಬಿಡುಗಡೆಗೆ ಸುಮುಹೂರ್ತ ಒದಗಿ ಬಂದಿದ್ದರೂ ಸಹ, ಈ ಚಿತ್ರಕ್ಕೆ ಧುರಂಧರ್ 2 ನಂಥಾ ಮಹಾ ಸವಾಲು ಎದುರಾಗಿತ್ತು. ಅದೆಲ್ಲವನ್ನೂ ಎದುರಿಸಿದ ಲವ್ ಮಾಕ್ಟೇಲ್ 3 ಇದೀಗ ನೂರರ ಗಡಿಯತ್ತ ದಾಪುಗಾಲಿಡುತ್ತಿದೆ.

TVK ಪಕ್ಷದ ಗೆಲುವಿನ ಎಫೆಕ್ಟ್‌‌, ʻಜನ ನಾಯಗನ್‌ʼ ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ ಭರ್ಜರಿ ಚೇಂಜ್: ವಿಜಯ್‌ ಫ್ಯಾನ್ಸ್‌ ಸಖತ್‌ ಥ್ರಿಲ್!

ʻಜನ ನಾಯಗನ್ʼ ಟೈಟಲ್ ಕಾರ್ಡ್ ಚೇಂಜ್; ʻದಳಪತಿʼ ವಿಜಯ್ ಫ್ಯಾನ್ಸ್ ಥ್ರಿಲ್

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಜಯ ಸಾಧಿಸಿರುವ ಬೆನ್ನಲ್ಲೇ, ಅವರ ಕೊನೆಯ ಸಿನಿಮಾ 'ಜನ ನಾಯಗನ್' ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಜಾಹೀರಾತುಗಳಲ್ಲಿ "ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್" ಎಂದು ಸಂಬೋಧಿಸಲಾಗಿದ್ದು, ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ʻಏಕ್ ದಿನ್ ಚಿತ್ರಕ್ಕೆ ನಾನು ಸರಿಯಾದ ಆಯ್ಕೆ ಆಯ್ಕೆಯಾಗಿರಲಿಲ್ಲʼ; ಆಮಿರ್‌ ಖಾನ್‌ ಮಗನ ಸಿನಿಮಾದ ಬಗ್ಗೆ ಸಾಯಿ ಪಲ್ಲವಿ ಹಿಂಗ್ಯಾಕೆ ಹೇಳಿದ್ರು?

ʻಆಮಿರ್‌ ಮಗನ ಸಿನಿಮಾಕ್ಕೆ ನಾನು ಸೂಕ್ತ ಆಯ್ಕೆ ಆಗಿರಲಿಲ್ಲʼ- ಸಾಯಿ ಪಲ್ಲವಿ

ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ 'ಏಕ್ ದಿನ್' ಸಿನಿಮಾ ಸೋಲಿನ ಬೆನ್ನಲ್ಲೇ ನಾಯಕಿ ಸಾಯಿ ಪಲ್ಲವಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಚಿತ್ರದ ಪಾತ್ರಕ್ಕೆ ತಾವು ಸರಿಯಾದ ಆಯ್ಕೆಯಲ್ಲ ಮತ್ತು ಗ್ಲಾಮರಸ್ ಆದ ಹೊಸ ಮುಖ ಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Actress Simran:  ಬಾಲಿವುಡ್ ಸೌತ್‌ ತಾರೆಗಳಿಗೆ ಗೌರವವೇ ನೀಡಲ್ಲ; ಟೀಕಿಸಿದ ನಟಿ ಸಿಮ್ರಾನ್‌

ಬಾಲಿವುಡ್ ಸೌತ್‌ ತಾರೆಗಳಿಗೆ ಗೌರವವೇ ನೀಡಲ್ಲ; ಟೀಕಿಸಿದ ನಟಿ ಸಿಮ್ರಾನ್‌

Actress Simran: ಹಿಂದಿ ಚಲನಚಿತ್ರ ಸೆಟ್‌ಗಳಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ನಟಿ ಸಿಮ್ರಾನ್‌ ಸಂದರ್ಶನವೊಂದರಲ್ಲಿ (Interview) ಹೇಳಿಕೊಂಡಿದ್ದಾರೆ. ಸೌತ್‌ ನಟರ ಬಗ್ಗೆ ನಿರ್ಮಾಪಕರು ಕೂಡ ಚೌಕಾಶಿ ಮಾಡುತ್ತಾರೆ. ನನ್ನ ಜೀವನದ ಅರ್ಧಕ್ಕಿಂತ ಹೆಚ್ಚಿನದನ್ನು ನಾನು ಸಿನಿಮಾಗೆ ನೀಡಿದ್ದೇನೆ ಮತ್ತು ಅದರ ಹೊರತಾಗಿಯೂ, ನನಗೆ ಹೋದ ಕಡೆ ಗೌರವ ಕೊರತೆಯಿದ್ದರೆ, ಅದು ನೋವುಂಟು ಮಾಡುತ್ತದೆ. ಅದು ಅರ್ಥಹೀನ ಎಂದು ನೇರವಾಗಿ ಹೇಳಿದ್ದಾರೆ.

ʻಅಂದು 9 ಲಕ್ಷ, ಇಂದು 2 ಕೋಟಿʼ; ಹೊಸ ದಾಖಲೆ ಬರೆದ ಸತೀಶ್‌ ನೀನಾಸಂ - ರ‌ಚಿತಾ ರಾಮ್ ʻಅಯೋಗ್ಯ 2ʼ ಸಿನಿಮಾ

ದಾಖಲೆ ಮೊತ್ತಕ್ಕೆ 'ಅಯೋಗ್ಯ 2' ಆಡಿಯೋ ಸೇಲ್; ಸತೀಶ್ ಚಿತ್ರಕ್ಕೆ ಬೇಡಿಕೆ‌

ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ 2' ಚಿತ್ರದ ಆಡಿಯೋ ಹಕ್ಕುಗಳು ಬರೋಬ್ಬರಿ 2 ಕೋಟಿ ರೂ.ಗಳಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಮೊದಲ ಭಾಗದ 'ಏನಮ್ಮಿ ಏನಮ್ಮಿ' ಹಾಡಿನ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಆನಂದ್ ಆಡಿಯೋ ಸಂಸ್ಥೆ ಈ ಭಾರಿ ಮೊತ್ತಕ್ಕೆ ಹಕ್ಕುಗಳನ್ನು ಖರೀದಿಸಿದೆ.

Dr Rajkumar: ʻಪ್ರಚಾರಕ್ಕಾಗಿ ಮಾತಾಡುವವರ ಕಂಡು ಅಸಹ್ಯವಾಯಿತುʼ; ನಟ ಜಗ್ಗೇಶ್‌ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ?

ಪ್ರಚಾರಕ್ಕಾಗಿ ಹಿರಿಯರನ್ನು ನಿಂದಿಸಬೇಡಿ; ವಾರ್ನಿಂಗ್ ಕೊಟ್ಟ ಜಗ್ಗೇಶ್

ಡಾ. ರಾಜ್‌ಕುಮಾರ್ ಸಮಾಧಿ ಕುರಿತ ನಟ ಚೇತನ್ ಅಹಿಂಸಾ ಅವರ ವಿವಾದಾತ್ಮಕ ಹೇಳಿಕೆಗೆ ನಟ ಜಗ್ಗೇಶ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗಕ್ಕೆ ಅಡಿಪಾಯ ಹಾಕಿದ ಸಾಧಕರ ಬಗ್ಗೆ ಪ್ರಚಾರಕ್ಕಾಗಿ ಹಗುರವಾಗಿ ಮಾತನಾಡುವುದು ಅಸಹ್ಯ ಎಂದು ಜಗ್ಗೇಶ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.

Nora Fatehi: ‘ಸರ್ಸೆ ಸರ್ಸೆ’ ಹಾಡು ವಿವಾದ; ಮಹಿಳಾ ಆಯೋಗದ ಮುಂದೆ ನೋರಾ ಫತೇಹಿ ಕ್ಷಮೆ

‘ಸರ್ಸೆ ಸರ್ಸೆ’ ವಿವಾದ ; ಮಹಿಳಾ ಆಯೋಗದ ಮುಂದೆ ನೋರಾ ಫತೇಹಿ ಕ್ಷಮೆ

Nora Fatehi: ʻಸರ್ಸೆ ಸರ್ಸೆʼ ಚಿತ್ರದ ಹಾಡಿನಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಸಮನ್ಸ್ ಜಾರಿಯಾದ ನಂತರ ನಟಿ ನೋರಾ ಫತೇಹಿ ಗುರುವಾರ ರಾಷ್ಟ್ರೀಯ ಮಹಿಳಾ ಆಯೋಗದ (NCW) ಮುಂದೆ ಹಾಜರಾದರು . ವಿವಾದವನ್ನು ಉಲ್ಲೇಖಿಸಿದ ನೋರಾ, ಭಾವನೆಗಳನ್ನು ನೋಯಿಸುವ ಉದ್ದೇಶ ಎಂದಿಗೂ ಇರಲಿಲ್ಲ ಎಂದು ಸ್ಪಷ್ಟಪಡಿಸಿದರು, ತಮ್ಮನ್ನು ಆ ಪರಿಸ್ಥಿತಿಗೆ ತಳ್ಳಲಾಗಿದೆ ಎಂದು ಹೇಳಿದರು. ಈ ವಿಷಯಕ್ಕೆ ಸಂಬಂಧಿಸಿದಂತೆ ನಟಿ ಕ್ಷಮೆಯಾಚಿಸಿದರು.

Maa Inti Bangaram: ‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ; ಹೊಸ ದಿನಾಂಕ ರಿವೀಲ್‌

‘ಮಾ ಇಂಟಿ ಬಂಗಾರಂ’ ಬಿಡುಗಡೆ ಮುಂದೂಡಿಕೆ; ಹೊಸ ದಿನಾಂಕ ರಿವೀಲ್‌

Maa Inti Bangaram: ಮಾ ಇಂಟಿ ಬಂಗಾರಂ ನಂದಿನಿ ರೆಡ್ಡಿ ನಿರ್ದೇಶನದ ಈ ಸಿನಿಮಾ, ಸಮಂತಾ ರುತ್ ಪ್ರಭು, ರಾಜ್ ನಿಡಿಮೋರು ಮತ್ತು ಹಿಮಾಂಕ್ ದುವ್ವೂರು ನಿರ್ಮಿಸಿದ್ದಾರೆ. ಸಮಂತಾ ಅವರಲ್ಲದೆ, ದಿಗಂತ್ ಮತ್ತು ಗುಲ್ಶನ್ ದೇವಯ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಹಿಂದೆ ನಿಗದಿಯಾಗಿದ್ದ ದಿನಾಂಕದಂದು ಚಿತ್ರ ತೆರೆಗೆ ಬರುತ್ತಿಲ್ಲ, ಬದಲಿಗೆ ಬೇರೆ ದಿನಾಂಕವನ್ನು ರಿಲೀಸ್​​ಗೆ ನಿಗದಿ ಮಾಡಲಾಗುತ್ತಿದೆ. ಮೇ 15 ರಂದು ಬಿಡುಗಡೆಯಾಗಬೇಕಿದ್ದ ಚಿತ್ರವನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಮುಂದೂಡಲಾಗಿರುವುದರಿಂದ ಅಭಿಮಾನಿಗಳು ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಕಾರಣ ಆದ್ರೂ ಏನು?

ದಿಢೀರ್‌ ಅಂತ ʻದಳಪತಿʼ ವಿಜಯ್‌ ಪರ ಬ್ಯಾಟ್‌ ಬೀಸಿದ ಕಮಲ್‌ ಹಾಸನ್‌‌ - ಪ್ರಕಾಶ್‌ ರಾಜ್;‌ ತಮಿಳುನಾಡು ರಾಜ್ಯಪಾಲರ ಧೋರಣೆಗೆ ಸಿಡಿಸಿಡಿ!

ʻದಳಪತಿʼ ವಿಜಯ್ ಪರ ಬ್ಯಾಟ್ ಬೀಸಿದ ಕಮಲ್ ಹಾಸನ್ - ಪ್ರಕಾಶ್ ರಾಜ್

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಅತಿಹೆಚ್ಚು ಸ್ಥಾನ ಗೆದ್ದಿದ್ದರೂ, ಬಹುಮತಕ್ಕೆ 10 ಸೀಟುಗಳ ಕೊರತೆ ಎದುರಾಗಿದೆ. ಈ ನಡುವೆ ಸರ್ಕಾರ ರಚನೆಗೆ ಮುನ್ನವೇ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಇದೀಗ ರಾಜ್ಯಪಾಲರ ನಡೆಯನ್ನು ಖಂಡಿಸಿ, ವಿಜಯ್ ಪರವಾಗಿ ಕಮಲ್ ಹಾಸನ್ ಮತ್ತು ಪ್ರಕಾಶ್ ರಾಜ್ ನಿಂತಿರುವುದು ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

Actor Yash: ಜಾಗತಿಕ ಮ್ಯಾಗಜಿನ್‌ನಲ್ಲಿ ರಾಕಿಂಗ್‌ ಸ್ಟಾರ್‌ ಮಿಂಚಿಂಗ್‌; ಇದು ‘ದಿ ಯಶ್ ಎಫೆಕ್ಟ್’!

Actor Yash: ಜಾಗತಿಕ ಮ್ಯಾಗಜಿನ್‌ನಲ್ಲಿ ರಾಕಿಂಗ್‌ ಸ್ಟಾರ್‌ ಮಿಂಚಿಂಗ್‌!

Actor Yash: ಅಂತಾರಾಷ್ಟ್ರೀಯ ನಿಯತಕಾಲಿಕೆ ‘ವೆರೈಟಿ’ ತನ್ನ ಕವರ್ ಪೇಜ್ ಮೇಲೆ ಯಶ್ ಅವರ ಫೋಟೋವನ್ನು ಫೀಚರ್ ಮಾಡಿದೆ. ‘ಇದು ಯಶ್ ಎಫೆಕ್ಟ್’ ಎಂದು ಬರೆದಿದೆ. ಐಷಾರಾಮಿ ಕಾರಿನ ಒಳಗೆ ಬಿಳಿ ಬಣ್ಣದ ಸೂಟ್ ಹಾಗೂ ಹ್ಯಾಟ್ ಧರಿಸಿ ಯಶ್ ಸ್ಟೈಲಿಶ್‌ ಪೋಸ್‌ ಕೊಟ್ಟಿದ್ದಾರೆ. ಈ ಪೋಟೋಗೆ ಭರ್ಜರಿ ಪ್ರತಿಕ್ರಿಯೆ ಬರುತ್ತಿದೆ. ಇನ್ನೂ ಕೆಲವರು ಗೀತು ಮೋಹನ್‌ ದಾಸ್‌ ಅವರೊಂದಿಗೆ ಯಶ್‌ ಸಿನಿಮಾ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ನಟ ವಿಜಯ್‌ ಸಹೋದರಿ ವಿದ್ಯಾ ಸಾವನ್ನಪ್ಪಿದ್ದು ಹೇಗೆ? ʻದಳಪತಿʼ ಬದುಕನ್ನೇ ಬದಲಿಸಿತು ತಂಗಿಯ ನಿಧನ!

ವಿಜಯ್ ಕೈಯಲ್ಲೇ ಪ್ರಾಣಬಿಟ್ಟಿದ್ದ ತಂಗಿ; ಮೌನಿಯಾದ ʻದಳಪತಿʼ ಕಣ್ಣೀರಿನ ಕಥೆ!

ತಮಿಳುನಾಡು ಸಿಎಂ ಆಗಲು ಸಜ್ಜಾಗಿರುವ ನಟ ವಿಜಯ್ ಅವರ ಯಶಸ್ಸಿನ ಹಿಂದೆ ಮರೆಯಲಾಗದ ನೋವಿನ ಕಥೆಯಿದೆ. 1984ರಲ್ಲಿ ತಮ್ಮ ಮುದ್ದಿನ ತಂಗಿ ವಿದ್ಯಾ ಅವರನ್ನು ಅಕಾಲಿಕವಾಗಿ ಕಳೆದುಕೊಂಡ ವಿಜಯ್, ಅತ್ಯಂತ ಚಟುವಟಿಕೆಯ ಹುಡುಗನಿಂದ ಮೌನಿಯಾಗಿ, ಅಂತರ್ಮುಖಿಯಾಗಿ ಬದಲಾದರು.

‘ಬಾವ ಬಾವ’ ಹಾಡಿನಿಂದ ಸದ್ದು ಮಾಡಿದ ʻಸಿಟಿಲೈಟ್ಸ್‌ʼ; ವಿಜಯ್‌ ಕುಮಾರ್‌ ನಿರ್ದೇಶನದಲ್ಲಿ ವಿನಯ್‌ ರಾಜ್‌ಕುಮಾರ್‌ಗೆ ಹೊಸ ಲುಕ್‌!

ವಿನಯ್ ನಟನೆಯ 'ಸಿಟಿಲೈಟ್ಸ್‌' ಚಿತ್ರದ 'ಬಾವ ಬಾವ' ಸಾಂಗ್ ರಿಲೀಸ್!

ನಟ ಮತ್ತು ನಿರ್ದೇಶಕ ದುನಿಯಾ ವಿಜಯ್ ಸಾರಥ್ಯದ ‘ಸಿಟಿಲೈಟ್ಸ್‌’ ಚಿತ್ರದ ‘ಬಾವ ಬಾವ’ ಎಂಬ ರ್ಯಾಪ್ ಸಾಂಗ್ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ವಿನಯ್ ರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಈ ಚಿತ್ರದ ಮೂಲಕ ವಿಜಯ್ ಪುತ್ರಿ ಮೋನಿಷಾ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

Trisha Krishnan: ತಿರುಚ್ಚಿರಾಪಳ್ಳಿ ಕ್ಷೇತ್ರದಿಂದ ತ್ರಿಷಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ?

ತಿರುಚ್ಚಿರಾಪಳ್ಳಿ ಕ್ಷೇತ್ರದಿಂದ ತ್ರಿಷಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ?

Tiruchirappalli East: ನಟಿ ತ್ರಿಶಾ ಕೃಷ್ಣನ್ ಕೂಡ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೇರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ದಳಪತಿ ವಿಜಯ್ ಹಾಗೂ ನಟಿ ತ್ರಿಷಾ ‘ಗಿಲ್ಲ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ತೆರೆಹಂಚಿಕೊಂಡಿದ್ದಾರೆ. ಜನ್ಮದಿನದಂದು ತಿರುಪತಿಗೆ ಭೇಟಿ ನೀಡಿದ್ದ ತ್ರಿಷಾ, ಆನಂತರ ವಿಜಯ್‌ ನಿವಾಸಕ್ಕೆ ತೆರಳಿದ್ದರು. ಇದೀಗ ತ್ರಿಷಾ ರಾಜಕೀಯಕ್ಕೆ ಬರೋದು ಗ್ಯಾರೆಂಟಿ ಎಂಬ ಗಾಳಿಸುದ್ದಿ ಹಬ್ಬಿದೆ.

Aamir Khan:‌ 3 ಇಡಿಯಟ್ಸ್’ ಸೀಕ್ವೆಲ್‌ನಲ್ಲಿ ಇರಲಿದ್ದಾರೆ ಈ ಬಾಲಿವುಡ್ ಖ್ಯಾತ ನಟ?

3 ಇಡಿಯಟ್ಸ್’ ಸೀಕ್ವೆಲ್‌ನಲ್ಲಿ ಇರಲಿದ್ದಾರೆ ಈ ಬಾಲಿವುಡ್ ಖ್ಯಾತ ನಟ?

Aamir Khan:‌ ರಾಜ್​ಕುಮಾರ್ ಹಿರಾನಿ ನಿರ್ದೇಶಿಸಿ, ಆಮಿರ್ ಖಾನ್, ಮಾಧವನ್, ಶರ್ಮನ್ ಜೋಶಿ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ಬ್ಲಾಕ್ ಬಸ್ಟರ್ ಆದ ಜೊತೆಗೆ ಕಲ್ಟ್ ಕ್ಲಾಸಿಕ್ ಎನಿಸಿಕೊಂಡಿದೆ. ನಾಲ್ಕು ಜನ ಗೆಳೆಯರ ಕತೆಯನ್ನು ರಾಜ್​ಕುಮಾರ್ ಹಿರಾನಿ ಈ ಬಾರಿ ನಿರ್ದೇಶಿಸಲಿದ್ದು ಈ ಸಿನಿಮಾಕ್ಕೆ ‘4 ಇಡಿಯಟ್ಸ್’ ಎಂದು ಹೆಸರಿಡಲಾಗುತ್ತಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಅಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರ ಜೊತೆ ಈ ನಟ ಇರಲಿದ್ದಾರಂತೆ.

Ranbir Kapoor : ಪಾಪರಾಜಿಗಳ ಮೇಲೆ ರಣಬೀರ್ ಕಪೂರ್ ಗರಂ; ವಿಡಿಯೋ ವೈರಲ್‌

ಪಾಪರಾಜಿಗಳ ಮೇಲೆ ರಣಬೀರ್ ಕಪೂರ್ ಗರಂ; ವಿಡಿಯೋ ವೈರಲ್‌

Ranbir Kapoor :. ಪಾಪರಾಜಿಗಳು ಅಕ್ಷರಶಃ ಅವರನ್ನು ಸುತ್ತುವರಿದು ಫೋಟೋ ತೆಗೆಯಲು ಮುಗಿಬಿದ್ದರು. ರಣಬೀರ್ ಕಪೂರ್ (Ranbir Kapoor) ಅವರು ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ ಘಟನೆ ನಡೆದಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಮಂಗಳವಾರ, ರಣಬೀರ್ ಮತ್ತು ಆಲಿಯಾ 'ದಾದಿ ಕಿ ಶಾದಿ' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಲು ಮುಂಬೈಗೆ ತೆರಳಿದರು.

Madhuri Dikshit: ಮಾಧುರಿ ದೀಕ್ಷಿತ್ ಅವರೊಂದಿಗೆ ಎಂಎಸ್‌ಡಿ ಇಂಡಿಯಾದಿಂದ ದೇಶವ್ಯಾಪಿ ಸರ್ವೈಕಲ್ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭ

ದೇಶವ್ಯಾಪಿ ಸರ್ವೈಕಲ್ ಕ್ಯಾನ್ಸರ್ ಜಾಗೃತಿ ಅಭಿಯಾನ ಆರಂಭ

ಸರ್ವೈಕಲ್ ಕ್ಯಾನ್ಸರ್ ಭಾರತದಲ್ಲಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್‌ ಗಳಲ್ಲಿ ಒಂದಾಗಿದೆ..ಸಮಯಕ್ಕೆ ಸರಿಯಾಗಿ ವೈದ್ಯರ ಸಲಹೆ ಪಡೆಯುವುದು ಮತ್ತು ಸರಿಯಾದ ನಿರೋಧಾತ್ಮಕ ಕ್ರಮಗಳನ್ನು ಅನುಸರಿಸುವುದರಿಂದ ಈ ರೋಗವನ್ನು ಬಹುಪಾಲು ತಡೆಯಬಹುದು, ಆದರೂ ಭಾರತದಲ್ಲಿ ಪ್ರತಿ ಏಳು ನಿಮಿಷಕ್ಕೊಮ್ಮೆ ಸುಮಾರು ಒಬ್ಬ ಮಹಿಳೆ ಸಾವನ್ನಪ್ಪುತ್ತಾರೆ.

Deepika Padukone: ಬೀಚ್‌ನಲ್ಲಿ ಶಾರುಖ್, ದೀಪಿಕಾ ರೊಮ್ಯಾನ್ಸ್; ಮತ್ತೆ ಲೀಕ್‌ ಆಯ್ತು ದೃಶ್ಯ

ಬೀಚ್‌ನಲ್ಲಿ ಶಾರುಖ್, ದೀಪಿಕಾ ರೊಮ್ಯಾನ್ಸ್; ಮತ್ತೆ ಲೀಕ್‌ ಆಯ್ತು ದೃಶ್ಯ

Deepika Padukone: ನಿರ್ದೇಶಕ ಸಿದ್ಧಾರ್ಥ್ ಆನಂದ್ ಅಭಿಮಾನಿಗಳು ಚಿತ್ರದ ಸೋರಿಕೆಯಾದ ವಿಷಯಗಳನ್ನು ಹಂಚಿಕೊಳ್ಳದಂತೆ ಕೇಳಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗಿರುವ ಹೊಸ ವೀಡಿಯೊದಲ್ಲಿ ನಟರಾದ ಶಾರುಖ್ ಖಾನ್ (Sharukh Khan) ಮತ್ತು ದೀಪಿಕಾ ಪಡುಕೋಣೆ ದಕ್ಷಿಣ ಆಫ್ರಿಕಾದ ಸೂರ್ಯಾಸ್ತದ ಸಮಯದ ಬೀಚ್‌ನಲ್ಲಿ ರೊಮ್ಯಾಂಟಿಕ್‌ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು.

Karan Johar: ಮೆಟ್ ಗಾಲಾದಲ್ಲಿ ಮಿಂಚಿದ  ಕರಣ್ ಜೋಹರ್; ಶಾರುಖ್‌ ಬಗ್ಗೆ ಏನು ಹೇಳಿದ್ರು?

Karan Johar: ಮೆಟ್ ಗಾಲಾದಲ್ಲಿ ಮಿಂಚಿದ ಕರಣ್ ಜೋಹರ್!

Met Gala: ಮೆಟ್ ಗಾಲಾ 2026 ರಲ್ಲಿ ಕರಣ್ ಜೋಹರ್ ತಮ್ಮ ಚೊಚ್ಚಲ ಪ್ರದರ್ಶನ ನೀಡಿದರು. ಈ ಪ್ರತಿಷ್ಠಿತ ಕಾರ್ಯಕ್ರಮಕ್ಕೆ ಹಾಜರಾದ ಮೊದಲ ಭಾರತೀಯ ಚಲನಚಿತ್ರ ನಿರ್ಮಾಪಕರಾಗಿ ಐತಿಹಾಸಿಕ ಕ್ಷಣವನ್ನು ಗುರುತಿಸಿದರು. ಈ ಸಂದರ್ಭಕ್ಕಾಗಿ, ಅವರು ಮನೀಶ್ ಮಲ್ಹೋತ್ರಾ ಅವರ ಕಸ್ಟಮ್ ಧರಿಸಿದ್ದರು, ಬಟ್ಟೆಯ ವಿನ್ಯಾಸವು ರಾಜಾ ರವಿವರ್ಮರ ಸಾಂಪ್ರದಾಯಿಕ ಕಲಾಕೃತಿಗಳಿಂದ ಸ್ಫೂರ್ತಿ ಪಡೆದಿದೆ.

Loading...