ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

TG Nandish: ಕನ್ನಡದ ಖ್ಯಾತ ಸಿನಿಮಾ, ಧಾರಾವಾಹಿ ಸಂಭಾಷಣೆಗಾರ ಟಿ.ಜಿ. ನಂದೀಶ್ ಹೃದಯಾಘಾತದಿಂದ ನಿಧನ

ಕನ್ನಡದ ಖ್ಯಾತ ಸಿನಿಮಾ ಸಂಭಾಷಣೆಗಾರ ಟಿ.ಜಿ. ನಂದೀಶ್ ಹೃದಯಾಘಾತದಿಂದ ನಿಧನ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಾಳೂರು ಮೂಲದವರಾದ ಟಿ.ಜಿ. ನಂದೀಶ್ ಅವರು, ಕನ್ನಡದ ಹಲವಾರು ಧಾರವಾಹಿ, ಚಲನಚಿತ್ರಕ್ಕೆ ಸಾಕಷ್ಟು ನಟ, ನಟಿಯರನ್ನು ಪರಿಚಯಿಸುವ ಜತೆಗೆ ಕಥೆಗಳನ್ನು ಬರೆಯುವ ಮೂಲಕ ತಾರಾ ಬಳಗಕ್ಕೆ ಆಸ್ತಿಯಾಗಿದ್ದರು. ಇವರು ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

Jr NTR: ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್!

Jr NTR: ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ ಜೂ ಎನ್​​ಟಿಆರ್!

Jr NTR: ನಟನ ಹುಟ್ಟುಹಬ್ಬದಂದು ಮೊದಲ ಲುಕ್‌ ಮತ್ತು 'ಡ್ರ್ಯಾಗನ್'ಗ್ಲಿಂಪ್ಸ್‌ ಅನಾವರಣಗೊಳಿಸಿದರು. ಆಕ್ಷನ್-ಪ್ಯಾಕ್ಡ್ ಅವತಾರದಲ್ಲಿ ಅಬ್ಬರಿಸಿದ್ದಾರೆ ಜೂನಿಯರ್ ಎನ್ ಟಿಆರ್. ಆ ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿ ಭಾರಿ ವೈರಲ್ ಆಗಿದೆ. ಮೆಚ್ಚುಗೆಯ ಸುರಿಮಳೆಯೇ ಸುರಿಯುತ್ತಿದೆ. ಇದೇ ಕಾರಣಕ್ಕೆ ಜೂ ಎನ್​​ಟಿಆರ್, ಪ್ರಶಾಂತ್ ನೀಲ್​​ಗೆ ಧನ್ಯವಾದ ಹೇಳಿದ್ದಾರೆ.

ಬಾಕ್ಸ್ ಆಫೀಸ್‌ನಲ್ಲಿ ಜೋರಾಯ್ತು ಜಾರ್ಜ್‌ ಕುಟ್ಟಿ ಅಬ್ಬರ: ರಿಲೀಸ್‌ಗೂ ಮುನ್ನವೇ 25 ಕೋಟಿ ರೂ. ಬಾಚಿಕೊಂಡ 'ದೃಶ್ಯಂ 3'!

Mohanlal: ರಿಲೀಸ್‌ಗೂ ಮುನ್ನವೇ 25 ಕೋಟಿ ಲೂಟಿ ಮಾಡಿದ ʼದೃಶ್ಯಂ 3ʼ ಸಿನಿಮಾ

ಜಾರ್ಜ್ ಕುಟ್ಟಿ ಕುಟುಂಬದ ರೋಚಕ ಕಥೆಯ ‘ದೃಶ್ಯಂ 3’ ಚಿತ್ರ ಬಿಡುಗಡೆಗೂ ಮುನ್ನವೇ ವಿಶ್ವಾದ್ಯಂತ ಮುಂಗಡ ಬುಕಿಂಗ್ ಮೂಲಕ ಬರೋಬ್ಬರಿ 25 ಕೋಟಿ ರೂ. ಬಾಚಿಕೊಂಡು ಹೊಸ ದಾಖಲೆ ಬರೆದಿದೆ. ಕೇವಲ ಭಾರತದಲ್ಲೇ 10.50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಆಗಿದ್ದು, ಅದರಲ್ಲಿ ಕೇರಳದ ಪಾಲೇ 6.75 ಕೋಟಿ ರೂ. ಆಗಿದೆ. ಮೋಹನ್‌ಲಾಲ್ ಜನ್ಮದಿನದ ಅಂಗವಾಗಿ ಮೇ 21 ರಂದು ಈ ಚಿತ್ರ ಅದ್ಧೂರಿಯಾಗಿ ತೆರೆಕಾಣಲಿದೆ.

Deepika Padukone: 8 ಗಂಟೆ ಕೆಲಸದ ಶಿಫ್ಟ್ ವಿವಾದ:  ದೀಪಿಕಾಗೆ ಜ್ಯೋತಿಕ ಬೆಂಬಲ

8 ಗಂಟೆ ಕೆಲಸದ ಶಿಫ್ಟ್ ವಿವಾದ: ದೀಪಿಕಾಗೆ ಜ್ಯೋತಿಕ ಬೆಂಬಲ

Deepika Padukone: ಸಿನೆಮಾ ವೃತ್ತಿ ಜೀವನದಲ್ಲೂ ಸಹ ಎಂಟು ಗಂಟೆಗಳ ಶಿಫ್ಟ್ ಕೆಲಸ ಇರಬೇಕು ಅನ್ನೋ ಡಿಮ್ಯಾಂಡ್ ಅನ್ನು ಮುಂದಿಟ್ಟುಕೊಂಡು 'ಸ್ಪಿರಿಟ್' ಮತ್ತು 'ಕಲ್ಕಿ 2' (Kalki) ಚಿತ್ರಗಳ ಚಿತ್ರಿಕರಣಗಳಿಂದ ದೂರ ಇದ್ದಿದ್ದರು. ಅಂದಿನಿಂದ, ಹಲವಾರು ಸೆಲೆಬ್ರಿಟಿಗಳು ಇದರ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ, ಜ್ಯೋತಿಕಾ ಮತ್ತು ಸೋನಾಕ್ಷಿ ಸಿನ್ಹಾ ದೀಪಿಕಾ ಅವರ ನಿಲುವನ್ನು ಬೆಂಬಲಿಸಿದ್ದಾರೆ.

Trisha Krishnan: ಕರುಪ್ಪು ಯಶಸ್ಸಿನ ಬೆನ್ನಲ್ಲೇ ತ್ರಿಷಾ ಹೊಸ ಪೋಸ್ಟ್‌! ವಿಜಯ್‌ ಚರ್ಚೆ ಏಕೀಗ?

ಕರುಪ್ಪು ಯಶಸ್ಸಿನ ಬೆನ್ನಲ್ಲೇ ತ್ರಿಷಾ ಹೊಸ ಪೋಸ್ಟ್‌! ವಿಜಯ್‌ ಚರ್ಚೆ ಏಕೀಗ?

Trisha Krishnan: ನಟನ ಇತ್ತೀಚಿನ ಚಿತ್ರ ಕರುಪ್ಪು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ ಮತ್ತು ಬ್ಲಾಕ್‌ಬಸ್ಟರ್ ಆಗತ್ತಿದೆ. ಚಿತ್ರದ ಯಶಸ್ಸಿನ ಮಧ್ಯೆ, ತ್ರಿಶಾ ಈ ಸಾಧನೆಯನ್ನು ಆಚರಿಸಲು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಈ ಶೀರ್ಷಿಕೆ ಕಂಡು ಜೋಸೆಫ್ ವಿಜಯ್‌ಗೂ ಸಂಬಂಧ ಇದೆ ಎಂದು ಫ್ಯಾನ್ಸ್‌ ಕಮೆಂಟ್‌ ಮಾಡುತ್ತಿದ್ದಾರೆ.

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆ ಕಡೆ ಹೊರಟ ʻಜಯಂʼ ರವಿ; ಈಚೆಗಷ್ಟೇ ʻಹೆಂಡ್ತಿ ಕಿರುಕುಳ ಕೊಡ್ತಾಳೆʼ ಅಂತ ಕಣ್ಣೀರಿಟ್ಟಿದ್ದ ನಟ!

ಅಯ್ಯಪ್ಪ ಮಾಲೆ ಧರಿಸಿ ಶಬರಿಮಲೆಯತ್ತ ಹೊರಟ ನಟ ʻಜಯಂʼ ರವಿ

ತಮಿಳು ನಟ ‘ಜಯಂ’ ರವಿ ಪತ್ನಿ ಆರತಿ ಅವರೊಂದಿಗಿನ ದಾಂಪತ್ಯ ಬಿಕ್ಕಟ್ಟು ಮತ್ತು ಮಾನಸಿಕ ಕಿರುಕುಳದ ವಿವಾದದ ನಡುವೆ ಶಬರಿಮಲೆ ಅಯ್ಯಪ್ಪ ವ್ರತ ಕೈಗೊಂಡಿದ್ದಾರೆ. ಪತ್ನಿಯಿಂದಾಗಿ ನೆಮ್ಮದಿ ಕಳೆದುಕೊಂಡಿದ್ದು, ಮಕ್ಕಳನ್ನು ಭೇಟಿಯಾಗಲು ಬಿಡದಿರುವ ಕುರಿತು ರವಿ ಕಣ್ಣೀರಿಟ್ಟಿದ್ದರು.

ʻದಳಪತಿʼ ವಿಜಯ್‌ ರೀತಿಯಲ್ಲೇ ಮುದೊಂದು ದಿನ ಸಿಎಂ ಆಗ್ತಾರಾ ನಟ NTR? ಅಭಿಮಾನಿಗಳ ಆಸೆ ಈಡೇರುವುದು ಯಾವಾಗ?

ದಳಪತಿ ವಿಜಯ್‌ ಆಯ್ತು, ಈಗ Jr NTR ಸರದಿ! ತಾತನಂತೆಯೇ CM ಆಗ್ತಾರಾ ತಾರಕ್‌?

ದಕ್ಷಿಣ ಭಾರತದಲ್ಲಿ ಸಿನೆಮಾ ನಟರು ಮುಖ್ಯಮಂತ್ರಿಯಾಗುವ ಪರಂಪರೆಗೆ ದಳಪತಿ ವಿಜಯ್ ಸೇರ್ಪಡೆಯಾದ ಬೆನ್ನಲ್ಲೇ, ಈಗ ಜೂನಿಯರ್ ಎನ್‌ಟಿಆರ್ ರಾಜಕೀಯ ಪ್ರವೇಶದ ಕುರಿತು ಭಾರಿ ಚರ್ಚೆ ಆರಂಭವಾಗಿದೆ. ಸೀನಿಯರ್ ಎನ್‌ಟಿಆರ್ ಅವರಂತೆ ಜೂನಿಯರ್ ಕೂಡ ಆಂಧ್ರದ ಸಿಎಂ ಆಗಬೇಕೆಂಬುದು ಅಭಿಮಾನಿಗಳ ಆಸೆಯಾಗಿದೆ.

ಹೊಂಬಾಳೆ ಫಿಲ್ಮ್ಸ್ ಜೊತೆ ಕೈಜೋಡಿಸುತ್ತಾರಾ ಜೂ. ಎನ್‌ಟಿಆರ್? ತಾರಕ್‌ ಜನ್ಮದಿನದಂದೇ ಸಿಕ್ತಾ ದೊಡ್ಡ ಸುಳಿವು?

NTR ಜತೆ ಹೊಂಬಾಳೆ ಹೊಸ ಸಿನಿಮಾ? ತಾರಕ್‌ ಜನ್ಮದಿನಂದೇ ಸಿಕ್ತಾ ಸುಳಿವು?

‘ಮ್ಯಾನ್ ಆಫ್ ಮಾಸಸ್’ ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬಕ್ಕೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ವಿಶ್ ಮಾಡಿ ‘ಡ್ರಾಗನ್’ ಚಿತ್ರದ ಗ್ಲಿಂಪ್ಸ್ ಹಂಚಿಕೊಂಡಿರುವುದು ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸುತ್ತಿರುವ ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರದ ಕರ್ನಾಟಕ ಹಾಗೂ ಓವರ್‌ಸೀಸ್ ವಿತರಣಾ ಹಕ್ಕುಗಳನ್ನು ಹೊಂಬಾಳೆ ಪಡೆಯುವ ಸಾಧ್ಯತೆಯಿದೆ.

‌NTR ಫ್ಯಾನ್ಸ್‌ಗೆ ಇಷ್ಟವಾಯ್ತಾ 'ಡ್ರಾಗನ್' ಸಿನಿಮಾದ ಫಸ್ಟ್‌ ಗ್ಲಿಂಪ್ಸ್‌? ಸೋಶಿಯಲ್‌ ಮೀಡಿಯಾದಲ್ಲಿ ಹೇಗಿದೆ ರೆಸ್ಪಾನ್ಸ್?‌

NTR ಬರ್ತ್‌ಡೇಗೆ 'ಡ್ರಾಗನ್' ಧಮಾಕಾ; ತಾರಕ್‌ ಫ್ಯಾನ್ಸ್‌ ಖುಷಿಯಾದ್ರಾ?

ಜೂನಿಯರ್ ಎನ್‌ಟಿಆರ್ ಅವರ 42ನೇ ಹುಟ್ಟುಹಬ್ಬದ ಉಡುಗೊರೆಯಾಗಿ ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರಾಗನ್’ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ತಾರಕ್ ಅವರನ್ನು ಅಫ್ಘಾನ್ ಟ್ರೇಡಿಂಗ್ ಕಂಪನಿಯ ಮುಖ್ಯ ಕೊಲೆಗಾರ 'ಲುಗರ್' ಎಂಬ ರಗಡ್ ಪಾತ್ರದಲ್ಲಿ ಪರಿಚಯಿಸಲಾಗಿದೆ.

ಐದೇ ದಿನಕ್ಕೆ ಬಾಕ್ಸ್‌ ಆಫೀಸ್‌ನಲ್ಲಿ 160+ ಕೋಟಿ ರೂ. ದಾಟಿದ ʻಕರುಪ್ಪುʼ ಕಲೆಕ್ಷನ್‌; ಸೋಲಿನ ಸರಪಳಿ ತುಂಡರಿಸಿದ ಸೂರ್ಯ!

ಬಾಕ್ಸ್ ಆಫೀಸ್‌ನಲ್ಲಿ ‌ʻಕರುಪ್ಪುʼ ರಣಬೇಟೆ; 5 ದಿನಕ್ಕೆ 160 ಕೋಟಿ ಕಲೆಕ್ಷನ್

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಜೋಡಿಯ ‘ಕರುಪ್ಪು’ ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಐದೇ ದಿನಕ್ಕೆ 160 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಈ ಫ್ಯಾಂಟಸಿ ಆ್ಯಕ್ಷನ್ ಡ್ರಾಮಾದ ಕಲೆಕ್ಷನ್ ಭಾರತದಲ್ಲೇ 110 ಕೋಟಿ ರೂ. ದಾಟಿದೆ. ಕರ್ನಾಟಕ ಒಂದರಲ್ಲೇ 13 ಕೋಟಿ ಬಾಚಿರುವ ಆರ್‌ಜೆ ಬಾಲಾಜಿ ನಿರ್ದೇಶನದ ಈ ಚಿತ್ರ ಸೂರ್ಯ ಅವರ ಸೋಲಿನ ಸರಣಿಗೆ ಬ್ರೇಕ್ ಹಾಕಿದೆ.

Salman Khan: ಇದೊಂದು ಕಾರಣಕ್ಕೆ ಆಸ್ಪತ್ರೆಯ ಆವರಣದಲ್ಲೇ ಗರಂ ಆದ ಸಲ್ಮಾನ್‌ ಖಾನ್‌!

ಇದೊಂದು ಕಾರಣಕ್ಕೆ ಆಸ್ಪತ್ರೆಯ ಆವರಣದಲ್ಲೇ ಗರಂ ಆದ ಸಲ್ಮಾನ್‌ ಖಾನ್‌!

Salman Khan: ಮಂಗಳವಾರ, ಸಲ್ಮಾನ್ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಯಾರೋ ಒಬ್ಬರನ್ನು ಭೇಟಿ ಮಾಡುತ್ತಿರುವುದು ಕಂಡುಬಂದಿದೆ. ಆಸ್ಪತ್ರೆಗೆ ಪ್ರವೇಶಿಸಿದಾಗ ನಟ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ, ಆದರೆ ಅವರು ಆವರಣದಿಂದ ಹೊರಬರುತ್ತಿದ್ದಂತೆ ಪಾಪರಾಜಿಗಳೊಂದಿಗೆ ಅಸಮಾಧಾನಗೊಂಡು ತಾಳ್ಮೆ ಕಳೆದುಕೊಂಡಂತೆ ಕಂಡುಬಂದರು.

Amitabh Bachchan : ಆಸ್ಪತ್ರೆಗೆ ದಾಖಲಾದ್ರಾ ಅಮಿತಾಭ್‌ ಬಚ್ಚನ್? ಏನಿದು ಸುದ್ದಿ?

ಆಸ್ಪತ್ರೆಗೆ ದಾಖಲಾದ್ರಾ ಅಮಿತಾಭ್‌ ಬಚ್ಚನ್? ಏನಿದು ಸುದ್ದಿ?

Amitabh Bachchan : ವರದಿಯ ಪ್ರಕಾರ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಅಮಿತಾಬ್ ಅವರನ್ನು ಮೇ 16 ರಿಂದ ನಾನಾವತಿ ಆಸ್ಪತ್ರೆಯ ವಿಐಪಿ ವಿಭಾಗಕ್ಕೆ ದಾಖಲಿಸಲಾಗಿದೆ ಎಂದು ಹೇಳಲಾಗಿತ್ತು . ಅವರ ವಾಸ್ತವ್ಯದ ಸಮಯದಲ್ಲಿ ಅವರ ಮಗ ಅಭಿಷೇಕ್ ಬಚ್ಚನ್ ಕೂಡ ಅವರನ್ನು ಭೇಟಿ ಮಾಡಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ .

Dragon Glimpse: ‘ಡ್ರ್ಯಾಗನ್’ ಗ್ಲಿಂಪ್ಸ್ ಔಟ್‌; ಅಬ್ಬರಿಸಿದ JR NTR

Dragon Glimpse: ‘ಡ್ರ್ಯಾಗನ್’ ಗ್ಲಿಂಪ್ಸ್ ಔಟ್‌; ಅಬ್ಬರಿಸಿದ JR NTR

Dragon Glimpse: ಚಿತ್ರದ ಕಥೆ 1967ರಲ್ಲಿ ಸಾಗುತ್ತದೆ. ರುಕ್ಮಿಣಿ ವಸಂತ್ ಅವರನ್ನು ಕೂಡ ಟ್ರೇಲರ್​​ನಲ್ಲಿ ತೋರಿಸಲಾಗುತ್ತದೆ. ಈ ಚಿತ್ರದಲ್ಲಿ ಜೂನಿಯರ್ ಎನ್​​ಟಿಆರ್ ವಿಲನ್ ರೀತಿ ತೋರಿಸಲಾಗಿದೆ. ‘ಅಫ್ಗನ್ ಟ್ರೇಡಿಂಗ್ ಕಂಪನಿ’ ವಿಲನ್​​ಗಳನ್ನು ತೋರಿಸಲಾಗುತ್ತದೆ. ಕೆಜಿಎಫ್ ರೀತಿಯೇ ಇದರಲ್ಲಿ ಹಲವು ವಿಲನ್​​ಗಳಿದ್ದಾರೆ

Mouni Roy: ‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್

‘ಕಾನ್ ಫಿಲ್ಮ್ ಫೆಸ್ಟಿವಲ್’ನಲ್ಲಿ ಮೌನಿ ರಾಯ್ ಮಿಂಚಿಂಗ್

Mouni Roy: ಪತಿ ಸೂರಜ್ ನಂಬಿಯಾರ್ (Suraj Nambiar) ಅವರಿಂದ ಬೇರ್ಪಡುವುದಾಗಿ ಘೋಷಿಸುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದ ಕೆಲವೇ ದಿನಗಳ ನಂತರ , ನಟಿ ಮೌನಿ ರಾಯ್ 79 ನೇ ‘ಕಾನ್ ಫಿಲ್ಮ್ ಫೆಸ್ಟಿವಲ್’ ರೆಡ್ ಕಾರ್ಪೆಟ್ ಮೇಲೆ ಮಿಂಚಲು ಫ್ರಾನ್ಸ್‌ಗೆ ಹಾರಿದ್ದಾರೆ.

ಗಣೇಶ ಚತುರ್ಥಿಯ ರಜೆ ಮೇಲೆ ಕಣ್ಣಿಟ್ಟ ರಜನಿಕಾಂತ್‌ ನಟನೆಯ ʻಜೈಲರ್‌ 2ʼ; ಆಗಸ್ಟ್‌ನಲ್ಲೇ ದರ್ಶನ ನೀಡಲಿದೆಯಾ ʻಟಾಕ್ಸಿಕ್‌ʼ? ‌

ಗಣೇಶ ಹಬ್ಬಕ್ಕೆ ʻಜೈಲರ್ 2ʼ ಧಮಾಕಾ; ಆಗಸ್ಟ್‌ನಲ್ಲೇ ಬರಲಿದೆಯಾ ʻಟಾಕ್ಸಿಕ್ʼ?

ʻಸೂಪರ್‌ಸ್ಟಾರ್ʼ ರಜನಿಕಾಂತ್ ನಟನೆಯ 'ಜೈಲರ್ 2' ಚಿತ್ರವನ್ನು ಗಣೇಶ ಚತುರ್ಥಿಯ ಲಾಂಗ್ ವೀಕೆಂಡ್ ಸದುಪಯೋಗಪಡಿಸಿಕೊಳ್ಳಲು ಸೆಪ್ಟೆಂಬರ್ 11 ರಂದು ಬಿಡುಗಡೆ ಮಾಡಲು ಸನ್ ಪಿಕ್ಚರ್ಸ್ ನಿರ್ಧರಿಸಿದೆ. ಇತ್ತ ಜೂನ್‌ನಿಂದ ಮುಂದೂಡಲ್ಪಟ್ಟಿರುವ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾ ಆಗಸ್ಟ್‌ನಲ್ಲಿ ತೆರೆಕಾಣುವ ಮುನ್ಸೂಚನೆ ಸಿಕ್ಕಿದೆ.

OTT This Week: ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸೌತ್‌ ಸಿನಿಮಾಗಳಿವು!

ಈ ವಾರ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸೌತ್‌ ಸಿನಿಮಾಗಳಿವು!

OTT This Week: ಮಲಯಾಳಂನ ರೊಮ್ಯಾಂಟಿಕ್ ಹಾಸ್ಯ ಮಧುವಿಧುದಿಂದ ಹಿಡಿದು ತಮಿಳು ಹಾರರ್ ಚಲನಚಿತ್ರ ಸೈತಾನ್ ದಿ ಡಾರ್ಕ್ ವರೆಗೆ, ಅಮೆಜಾನ್ ಪ್ರೈಮ್ ವಿಡಿಯೋ, ಸನ್ NXT , ಆಹಾ ವಿಡಿಯೋ ಸೇರಿದಂತೆ ಅನೇಕ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ.ಯಾವುದೆಲ್ಲ ಅವು?

ಪಂಜಾಬಿ ಗಾಯಕಿ ಇಂದರ್ ಕೌರ್ ಕಾಲುವೆಯಲ್ಲಿ ಶವವಾಗಿ ಪತ್ತೆ; ಮದುವೆ ಪ್ರಪೋಸಲ್‌ ತಿರಸ್ಕರಿಸಿದ್ದಕ್ಕೆ ಕೊಲೆ ಮಾಡಿದ್ನಾ ಪಾಪಿ?

ಮದುವೆ ತಿರಸ್ಕರಿಸಿದ್ದಕ್ಕೆ ಗಾಯಕಿ ಇಂದರ್ ಹತ್ಯೆ! ಕೆನಡಾದಿಂದ ಬಂದ ಹಂತಕ?

ಅಪಹರಣಕ್ಕೊಳಗಾಗಿದ್ದ ಪಂಜಾಬ್‌ನ ಉದಯೋನ್ಮುಖ ಗಾಯಕಿ ಇಂದರ್ ಕೌರ್, ಇದೀಗ ಭೀಕರವಾಗಿ ಕೊಲೆಯಾಗಿದ್ದಾರೆ. ಕೆನಡಾದಿಂದ ಬಂದಿದ್ದ ಸುಖ್ವಿಂದರ್ ಸಿಂಗ್ ಎಂಬಾತ ಆಕೆಯನ್ನು ಕಿಡ್ನಾಪ್ ಮಾಡಿ, ಹತ್ಯೆಗೈದು ಮೃತದೇಹವನ್ನು ನೀಲೋನ್ ಕಾಲುವೆಗೆ ಎಸೆದಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ʻಕಮಲ್‌ ಹಾಸನ್‌ ಮಗಳುʼ ಎಂಬ ಸತ್ಯವನ್ನೇ ಮುಚ್ಚಿಟ್ಟಿದ್ದ ನಟಿ ಶ್ರುತಿ ಹಾಸನ್!‌ ಇದಕ್ಕೆ ಕಾರಣವೇನು ಗೊತ್ತಾ?

ʻನನ್ ಹೆಸರು ಪೂಜಾʼ; ಕಮಲ್ ಹಾಸನ್ ಮಗಳೆಂಬ ಸತ್ಯ ಮುಚ್ಚಿಟ್ಟಿದ್ದ ನಟಿ ಶ್ರುತಿ

ನಟಿ ಶ್ರುತಿ ಹಾಸನ್ ತಮ್ಮ ಬಾಲ್ಯದಲ್ಲಿ ಸ್ವಂತ ಗುರುತನ್ನು ಸೃಷ್ಟಿಸಿಕೊಳ್ಳಲು ತಂದೆ ಕಮಲ್ ಹಾಸನ್ ಅವರ ಹೆಸರನ್ನು ಮರೆಮಾಚುತ್ತಿದ್ದರು. ಸಾರ್ವಜನಿಕವಾಗಿ ಸಿಗುತ್ತಿದ್ದ ಅತಿಯಾದ ಪ್ರಚಾರದಿಂದ ಬೇಸತ್ತು, ತಾವು ಡಾಕ್ಟರ್‌ ಒಬ್ಬರ ಮಗಳು, ನನ್ನ ಹೆಸರು ‘ಪೂಜಾ ರಾಮಚಂದ್ರನ್’ ಎಂದು ಸುಳ್ಳು ಹೇಳುತ್ತಿದ್ದರಂತೆ ಅವರು.

ದರ್ಶನ್ ಜೊತೆ ಮುಖಾಮುಖಿ ಭೇಟಿಗಾಗಿ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಪತ್ನಿ ವಿಜಯಲಕ್ಷ್ಮಿ- ಪುತ್ರ ವಿನೀಶ್

ನಟ ದರ್ಶನ್‌ ಜೊತೆ ಮುಖಾಮುಖಿ ಭೇಟಿಗೆ ಮಗನೊಂದಿಗೆ ಬಂದ ಪತ್ನಿ ವಿಜಯಲಕ್ಷ್ಮಿ

ಸ್ಯಾಂಡಲ್‌ವುಡ್ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರಿಗೆ ಇಂದು 23ನೇ ವಿವಾಹ ವಾರ್ಷಿಕೋತ್ಸವ. ಅದರ ಅಂಗವಾಗಿ ಪತ್ನಿ ವಿಜಯಲಕ್ಷ್ಮಿ ಅವರು ಪುತ್ರ ವಿನೀಶ್ ಜೊತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಅವರನ್ನು ಮುಖಾಮುಖಿ ಭೇಟಿ ಆಗಲಿದ್ದಾರೆ. ಇದೇ ವೇಳೆ ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳ ವದಂತಿಗಳನ್ನು ಡಿಜಿಪಿ ಅಲೋಕ್‌ ಕುಮಾರ್‌ ತಳ್ಳಿಹಾಕಿದ್ದಾರೆ.

Addiction Movie: ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಂದರ ಕೃಷ್ಣ ಅರಸ್‌ ಮೊಮ್ಮಗನಿಗೆ ಸಾಥ್‌ ನೀಡಿದ ರಾಘವೇಂದ್ರ ರಾಜ್‌ಕುಮಾರ್

ಸುಂದರ ಕೃಷ್ಣ ಅರಸ್ ಮೊಮ್ಮಗನ 'ಅಡಿಕ್ಷನ್' ಚಿತ್ರಕ್ಕೆ ಸಾಥ್ ನೀಡಿದ ರಾಘಣ್ಣ

ಸ್ಯಾಂಡಲ್‌ವುಡ್‌ನ ಲೆಜೆಂಡ್ ನಟ ಸುಂದರ ಕೃಷ್ಣ ಅರಸ್ ಅವರ ಮೊಮ್ಮಗ ವಿಧು ಅಭಿನಯದ ‘ಅಡಿಕ್ಷನ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಈ ಸಿನಿಮಾ ಜೂನ್‌ನಲ್ಲಿ ತೆರೆಕಾಣಲಿದೆ. ಅಜಯ್ ಕುಮಾರ್ ನಿರ್ದೇಶನದ ಮತ್ತು ಬೃಂದಾ ಜಯರಾಮ್ ನಿರ್ಮಾಣದ ಈ ಚಿತ್ರವು ಮಕ್ಕಳಲ್ಲಿನ ಮೊಬೈಲ್ ಚಟದ ನೈಜ ಘಟನೆಗಳನ್ನು ಆಧರಿಸಿದೆ.

Suriya: 'ಇಸೈಜ್ಞಾನಿ' ಇಳಯರಾಜಾಗೆ ಬಹಿರಂಗವಾಗಿ ಕ್ಷಮೆ ಕೇಳಿದ ʻಕರುಪ್ಪುʼ ಟೀಮ್;‌ ಅಷ್ಟಕ್ಕೂ ಚಿತ್ರತಂಡ ಮಾಡಿದ ಎಡವಟ್ಟೇನು?

ಇಳಯರಾಜಾಗೆ ಕ್ಷಮೆ ಕೇಳಿದ ‌ʻಕರುಪ್ಪುʼ ಟೀಮ್; ಅಷ್ಟಕ್ಕೂ ಮಾಡಿದ ತಪ್ಪೇನು?

ಬಾಕ್ಸ್ ಆಫೀಸ್‌ನಲ್ಲಿ ಮೂರೇ ದಿನಕ್ಕೆ 147 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿರುವ ನಟ ಸೂರ್ಯ ಅಭಿನಯದ ‘ಕರುಪ್ಪು’ ಚಿತ್ರತಂಡವು ಸಂಗೀತ ಮಾಂತ್ರಿಕ ಇಳಯರಾಜಾ ಅವರಿಗೆ ಬಹಿರಂಗವಾಗಿ ಕ್ಷಮೆಯಾಚಿಸಿದೆ. ಚಿತ್ರದಲ್ಲಿ ಇಳಯರಾಜಾ ಅವರ ಕಾಪಿರೈಟ್ಸ್ ಕಾನೂನು ವಿಚಾರವನ್ನು ವ್ಯಂಗ್ಯ ಮಾಡಿದ್ದ ಸಂಭಾಷಣೆಗೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಎಲ್ರಿಗಿಂತ ಮುಂಚೆ ʻವಿಜಯ್‌ ಸಿಎಂ ಆಗ್ತಾರೆʼ ಎಂದಿದ್ದ GOAT ನಿರ್ದೇಶಕ ವೆಂಕಟ್‌ ಪ್ರಭು; ದಳಪತಿಗೆ ಸಿಕ್ತು ಸ್ಪೆಷಲ್ ನಂಬರ್ ಪ್ಲೇಟ್ ಗಿಫ್ಟ್

ವಿಜಯ್ CM ಆಗ್ತಾರೆ ಅಂತ 2 ವರ್ಷ ಮುಂಚೆಯೇ ಭವಿಷ್ಯ ನುಡಿದಿದ್ದ ನಿರ್ದೇಶಕ!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ನಟ ದಳಪತಿ ವಿಜಯ್ ಅವರನ್ನು 'GOAT' ಚಿತ್ರದ ನಿರ್ದೇಶಕ ವೆಂಕಟ್ ಪ್ರಭು ಭೇಟಿಯಾಗಿ ಶುಭ ಕೋರಿದ್ದಾರೆ. GOAT ಸಿನಿಮಾದ ದೃಶ್ಯವೊಂದರಲ್ಲಿ ‘TN07 CM 2026’ ನಂಬರ್ ಪ್ಲೇಟ್ ಕಾರು ಬಳಸುವ ಮೂಲಕ ವಿಜಯ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ವೆಂಕಟ್ ಪ್ರಭು ಎರಡು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದರು.

ಗ್ಯಾಂಗ್‌ಸ್ಟರ್ ಕಥೆಯೊಂದಿಗೆ ಬಂದ ಅರವಿಂದ್ ಕೌಶಿಕ್: ನಿರೀಕ್ಷೆ ಮೂಡಿಸಿದ ‘ಕಂಟ್ರಿ ಮೇಡ್ - ಭಾಗ 2’ ಟೀಸರ್!

'ಕಂಟ್ರಿ ಮೇಡ್ - ಭಾಗ 2' ಟೀಸರ್‌ನಲ್ಲಿ ಗ್ಯಾಂಗ್‌ಸ್ಟರ್ ಅಬ್ಬರ!

'ಅರ್ಧಂಬರ್ಧ ಪ್ರೇಮಕಥೆ' ಖ್ಯಾತಿಯ ಅರವಿಂದ್ ಕೌಶಿಕ್ ಇದೀಗ ಚೊಚ್ಚಲ ಬಾರಿಗೆ ರಗಡ್ ಶೈಲಿಯ ಗ್ಯಾಂಗ್‍ಸ್ಟರ್ ಕಥಾಹಂದರ ಹೊಂದಿರುವ ‘ಕಂಟ್ರಿ ಮೇಡ್‍ - ಭಾಗ 2’ ಚಿತ್ರದೊಂದಿಗೆ ಬಂದಿದ್ದು, ಇದರ ಖಡಕ್ ಟೀಸರ್ ಬಿಡುಗಡೆಯಾಗಿದೆ. ಪಾವಗಡದ ನೈಜ ವ್ಯಕ್ತಿಗಳ ಪ್ರೇರಣೆಯಿಂದ ಸೃಷ್ಟಿಯಾದ ವಿಶಿಷ್ಟ ಪಾತ್ರಗಳ ಸುತ್ತ ಈ ಸಿನಿಮಾ ಹೆಣೆಯಲ್ಪಟ್ಟಿದೆ.

ಪ್ರೈವೆಟ್‌ ಜೆಟ್‌ಗೆ ಬೇಡಿಕೆ ಇಡುವ ನಟರ ಮಧ್ಯೆ  ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿದ ಕಮಲ್‌ ಹಾಸನ್‌; ಪ್ರಶಂಸಿದ ʻಕಲ್ಕಿʼ ನಿರ್ಮಾಪಕರು!

ಪ್ರೈವೇಟ್ ಜೆಟ್ ಕೇಳೋ ನಟರ ನಡುವೆ ಎಕಾನಮಿ ಕ್ಲಾಸ್‌ನಲ್ಲಿ ಕಮಲ್ ಹಾಸನ್ ಜರ್ನಿ

ಚಿತ್ರರಂಗದಲ್ಲಿ ನಟರ ಐಷಾರಾಮಿ ವೆಚ್ಚಗಳನ್ನು ಕಡಿತಗೊಳಿಸಿ, ನಿರ್ಮಾಣ ಬಜೆಟ್ ಅನ್ನು ಸಿನಿಮಾದ ಗುಣಮಟ್ಟಕ್ಕೆ ಬಳಸಬೇಕೆಂದು ಕರೆ ನೀಡಿದ್ದ ನಟ ಕಮಲ್ ಹಾಸನ್, ತಾವೇ ಮೊದಲು ಅದನ್ನು ಪಾಲಿಸಿ ಮಾದರಿಯಾಗಿದ್ದಾರೆ. 'ಕಲ್ಕಿ 2' ಚಿತ್ರದ ಹೈದರಾಬಾದ್ ಶೂಟಿಂಗ್‌ಗಾಗಿ ಅವರು ಪ್ರೈವೇಟ್ ಜೆಟ್ ಹಾಗೂ ಬಿಸಿನೆಸ್ ಕ್ಲಾಸ್ ಸೌಕರ್ಯಗಳನ್ನು ಬದಿಗಿಟ್ಟು, ಎಕಾನಮಿ ಕ್ಲಾಸ್ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.

Loading...