ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Kangana Ranaut: ಕಂಗನಾ ನಟನೆಯ ಈ ಸಿನಿಮಾಕ್ಕೆ ಹರಿಯಾಣದಲ್ಲಿ ತೆರಿಗೆ ವಿನಾಯಿತಿ

ಕಂಗನಾ ನಟನೆಯ ಈ ಸಿನಿಮಾಕ್ಕೆ ಹರಿಯಾಣದಲ್ಲಿ ತೆರಿಗೆ ವಿನಾಯಿತಿ

Kangana Ranaut: ಹೊಸ ಚಿತ್ರ ಭಾರತ್ ಭಾಗ್ಯ ವಿಧಾತವನ್ನು ( Bharat Bhhagya Viddhaata) ಹರಿಯಾಣದಾದ್ಯಂತ ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ನಯಬ್ ಸಿಂಗ್ ಸೈನಿ ವಿಶೇಷ ಪ್ರದರ್ಶನದ ನಂತರ ಚಂಡೀಗಢದಲ್ಲಿ ಈ ಘೋಷಣೆ ಮಾಡಿದರು , ಈ ಪ್ರದರ್ಶನದಲ್ಲಿ ಅವರು ರನೌತ್ ಮತ್ತು ರಾಜ್ಯದ ಹಿರಿಯ ನಾಯಕರೊಂದಿಗೆ ಭಾಗವಹಿಸಿದ್ದರು. ಸಿನಿಮಾದ ಕಥಾವಸ್ತು ಚೆನ್ನಾಗಿದೆಯಾದರೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ (Box Office) ಬಲು ನೀರಸ ಪ್ರದರ್ಶನ ತೋರುತ್ತಿದೆ.

Rashmika Mandanna: ವೇದಿಕೆಯಲ್ಲೇ ಪತಿಯ ಬೆವರು ಒರೆಸಿದ ರಶ್ಮಿಕಾ;  ವಿಡಿಯೊ ವೈರಲ್‌

ವೇದಿಕೆಯಲ್ಲೇ ಪತಿಯ ಬೆವರು ಒರೆಸಿದ ರಶ್ಮಿಕಾ; ವಿಡಿಯೊ ವೈರಲ್‌

Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ತಮ್ಮ ಚಲನಚಿತ್ರಗಳಿಗೆ ಮಾತ್ರವಲ್ಲದೆ ತಮ್ಮ ಸಾಮಾಜಿಕ ಕಾರ್ಯಗಳಿಗೂ ಹೆಸರುವಾಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ, ಬೆವರುತ್ತಿದ್ದ ತಮ್ಮ ಪತಿ ವಿಜಯ ದೇವರಕೊಂಡ ಅವರ ಹಣೆಯ ಮೇಲಿದ್ದ ಬೆವರನ್ನು ಪ್ರೀತಿಯಿಂದ ಒರೆಸಿದ್ದಾರೆ.ಬಳಿಕ ಅವರ ಮೀಸೆಯನ್ನು ಸರಿ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗಿದೆ.

Raghava Lawrence : ಈ ಕಾರಣಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಾಘವ ಲಾರೆನ್ಸ್!

ಈ ಕಾರಣಕ್ಕೆ ರಾಜಕೀಯಕ್ಕೆ ಎಂಟ್ರಿ ಕೊಟ್ಟ ರಾಘವ ಲಾರೆನ್ಸ್!

Raghava Lawrence : ರಾಘವ ಲಾರೆನ್ಸ್ ರಾಜಕೀಯ ಪ್ರವೇಶದ ಸುಳಿವು ನೀಡಿದ್ದು, ತಮ್ಮ ಭವಿಷ್ಯದ ಯೋಜನೆಗಳ ಕುರಿತು ಶೀಘ್ರದಲ್ಲೇ ಮಹತ್ವದ ಘೋಷಣೆ ಮಾಡುವುದಾಗಿ ಹೇಳಿದ್ದಾರೆ. ಭಾನುವಾರ, ಅವರು ಚೆನ್ನೈನ ಉತ್ತಂಡಿಯಲ್ಲಿರುವ ತಮ್ಮ ನಿವಾಸದಲ್ಲಿ ಅಭಿಮಾನಿಗಳನ್ನು ಭೇಟಿಯಾದರು. ತಮ್ಮ ಉದ್ದೇಶಿತ ರಾಜಕೀಯ ಪ್ರಯಾಣದ ಬಗ್ಗೆ ಚರ್ಚಿಸಿದರು ಮತ್ತು ಮುಂದಿನ ಹೆಜ್ಜೆ ಇಡುವ ಮೊದಲು ಅವರ ಅಭಿಪ್ರಾಯಗಳನ್ನು ಪಡೆದರು.

Salman Khan:  ಸಲ್ಮಾನ್ ಖಾನ್ ಹೊಸ ಲುಕ್ ಫುಲ್ ವೈರಲ್ ! ಈ ಸಿನಿಮಾದ ಪಾತ್ರ ನೆನಪಿಸಿದ ಫ್ಯಾನ್ಸ್‌

ಸಲ್ಮಾನ್ ಖಾನ್ ಹೊಸ ಲುಕ್ ಫುಲ್ ವೈರಲ್!

Salman Khan: ಆಮಿರ್ ಖಾನ್ ಪ್ರೊಡಕ್ಷನ್ಸ್‌ನ 25 ವರ್ಷಾಚರಣೆಯ ಅದ್ಧೂರಿ ಆಚರಣೆಗೆ ಸಲ್ಮಾನ್ ಖಾನ್ ಆಗಮಿಸಿದಾಗ ಎಲ್ಲರ ಕಣ್ಣುಗಳು ಅವರ ಮೇಲೆಯೇ ಇದ್ದವು. ವೇದಿಕೆಯಲ್ಲಿ ನಟ ಸಲ್ಮಾನ್ ಖಾನ್ ಅವರ ಹೊಸ ಲುಕ್ ನೋಡಿ, ಪಕ್ಕದಲ್ಲಿದ್ದ ಕರೀನಾ ಕಪೂರ್ ಖಾನ್ ಅವರಿಗೂ ಅಚ್ಚರಿ ಆಯಿತು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಜನರು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

CM Vijay: ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್;  ಬೆಳ್ಳಿಯ ಖಡ್ಗ ಅರ್ಪಿಸಿದ್ದೇಕೆ?

ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದ ಸಿಎಂ ವಿಜಯ್

CM Vijay: ತಾವೇ ಸ್ವತಃ ತಂದಿದ್ದ ಸುಂದರವಾದ ಬೆಳ್ಳಿಯ ಖಡ್ಗವನ್ನು ಮೂಕಾಂಬಿಕಾ ದೇವಿಗೆ ಭಕ್ತಿಪೂರ್ವಕವಾಗಿ ಉಡುಗೊರೆಯಾಗಿ ನೀಡಿದರು. . ದಶಕಗಳ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಹಾಗೂ ಸಿನಿಮಾ ದಂತಕಥೆ ಎಂ.ಜಿ. ರಾಮಚಂದ್ರನ್ ಅವರು ಇದೇ ಕೊಲ್ಲೂರು ಮೂಕಾಂಬಿಕೆಗೆ 1 ಕೆಜಿ ತೂಕದ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು.

Cocktail 2: ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್! ತೀವ್ರ ಆಕ್ರೋಶಗೊಂಡ ಶಾಹಿದ್, ವಿಡಿಯೋ ವೈರಲ್‌

ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್; ತೀವ್ರ ಆಕ್ರೋಶಗೊಂಡ ಶಾಹಿದ್!

Rashmika Mandanna: ಕಾಕ್‌ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಗದ್ದಲದ ಬೆನ್ನಲ್ಲೇ ಚಿತ್ರತಂಡವು ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಆರಂಭವಾಗಿರುವುದಾಗಿ ಘೋಷಿಸಿದೆ. ಬಾಲಿವುಡ್ ಸ್ಟೈಲ್ ರೊಮ್ಯಾಂಟಿಕ್ ಎಂಟರ್‌ಟೈನ್‌ಮೆಂಟ್ ಸಿನಿಮಾ ಇದು. ಪ್ರೀತಂ ಸಂಗೀತದಲ್ಲಿ 'ಕಾಕ್‌ಟೇಲ್'-2 ಸಿನಿಮಾ ಸಾಂಗ್ಸ್ ಮೂಡಿ ಬಂದಿದೆ. ಮದುವೆ ಬಳಿಕ ಬಿಡುಗಡೆ ಆಗುತ್ತಿರುವ ರಶ್ಮಿಕಾಳ ಮೊದಲ ಸಿನಿಮಾ ಇದು. ಕೊಡಗಿನ ಚೆಲುವೆಗೆ ಬಾಲಿವುಡ್ ಹೊಸದೇನು ಅಲ್ಲ.

Mouni Roy: ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್  ಹೇಳಿದ್ದೇನು?

ದಿಶಾ ಪಟಾನಿ ಜೊತೆಗಿನ ಸಂಬಂಧಕ್ಕೆ ಮೌನಿ ರಾಯ್ ಹೇಳಿದ್ದೇನು?

Mouni Roy: ಸೂರಜ್ ನಂಬಿಯಾರ್ ಅವರಿಂದ ಬೇರ್ಪಡುವುದಾಗಿ ಘೋಷಿಸಿದಾಗಿನಿಂದ, ಮೌನಿ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಅಷ್ಟೇ ಅಲ್ಲ, ಈ ಸಮಯದಲ್ಲಿ ದಿಶಾ ಪಟಾನಿ (Disha Pathani) ಕೂಡ ಹೆಸರು ಕೇಳಿ ಬಂದಿತ್ತು. ಮೌನಿ ಮತ್ತು ದಿಶಾ ತುಂಬಾ ಒಳ್ಳೆಯ ಸ್ನೇಹಿತರು ಮತ್ತು ಇದೆಲ್ಲವೂ ಅವರ ಸ್ನೇಹದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈಗ, ಮೌನಿ ಅಂತಿಮವಾಗಿ ಈ ಸಂಬಂಧದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

ʻಕಿರಿಕ್‌ ಪಾರ್ಟಿʼ ಖ್ಯಾತಿಯ ಸಂಯುಕ್ತಾ ಹೆಗಡೆಗೆ ಸಿಕ್ತು ಭರ್ಜರಿ ಚಾನ್ಸ್‌; ಸಣ್ಣ ಗ್ಯಾಪ್‌ನ ನಂತರ ತಮಿಳು ನಟ ವಿಕ್ರಮ್‌ ಸಿನಿಮಾದಲ್ಲಿ ಮಿಂಚಿಂಗ್!‌

ಸಂಯುಕ್ತಾ ಹೆಗಡೆಗೆ ನಟ ವಿಕ್ರಮ್ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದೇಗೆ?

ತಮಿಳು ನಟ ವಿಕ್ರಮ್‌ ಅವರ 'ಚಿಯಾನ್ 63' ಚಿತ್ರಕ್ಕೆ 'ಕಿರಿಕ್ ಪಾರ್ಟಿ' ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಆಯ್ಕೆ ಆಗಿದ್ದಾರೆ. 'ವೀರ ಧೀರ ಶೂರನ್ 2' ಬಳಿಕ ಒಂದು ವರ್ಷ ಬ್ರೇಕ್ ತಗೊಂಡಿದ್ದ ವಿಕ್ರಮ್ ಈ ಚಿತ್ರದಲ್ಲಿ ಶೆಫ್ ಪಾತ್ರ ಮಾಡುತ್ತಿದ್ದು, ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಡಿ ಈ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಶೂಟಿಂಗ್‌ನಲ್ಲಿ ಸಂಯುಕ್ತಾ ಹೆಗಡೆ ಆಗಲೇ ಭಾಗಿಯಾಗಿದ್ದಾರೆ.

Drishyam 3 OTT:   ಮೋಹನ್‌ಲಾಲ್ ಕ್ರೈಮ್ ಥ್ರಿಲ್ಲರ್ 'ದೃಶ್ಯಂ 3' ಒಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್; ಸ್ಟ್ರೀಮಿಂಗ್‌ ಯಾವಾಗಿನಿಂದ?

'ದೃಶ್ಯಂ 3' ಒಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್; ಸ್ಟ್ರೀಮಿಂಗ್‌ ಯಾವಾಗಿನಿಂದ?

Drishyam 3 OTT: ದೃಶ್ಯಂ (2013) ಮತ್ತು ದೃಶ್ಯಂ 2 (2021) ಭಾರತಾದ್ಯಂತ ಹಿಟ್ ಆಗಿದ್ದವು ಮತ್ತು ಹಿಂದಿ, ಸಿಂಹಳ, ಮ್ಯಾಂಡರಿನ್ ಮತ್ತು ಕೊರಿಯನ್ ಸೇರಿದಂತೆ ಬಹು ಭಾಷೆಗಳಲ್ಲಿ ರೀಮೇಕ್ ಮಾಡಲ್ಪಟ್ಟವು. ಇನ್ನು ಜಾರ್ಜ್‌ಕುಟ್ಟಿಯ ಈ ಮೈಂಡ್ ಗೇಮ್‌ನ ನೀವು ಕನ್ನಡದಲ್ಲಿಯೂ ಕೂಡ ನೋಡಬಹುದು. ತಮಿಳು, ತೆಲುಗು ಮತ್ತು ಕನ್ನಡಕ್ಕೆ ಈ ಚಿತ್ರವನ್ನು ಡಬ್ ಮಾಡಲಾಗಿದೆ.ಅಂದ್ಹಾಗೇ ''ದೃಶ್ಯಂ 3'' ಜಾರ್ಜ್‌ ಕುಟ್ಟಿಯ ಕೊನೆ ಆಟ ಎಂದು ಹೇಳಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ''ದೃಶ್ಯಂ 4'' ಬಂದರೂ ಬರಬಹುದು. ಇದೀಗ ದೃಶ್ಯಂ 3 ಸಿನಿಮಾ ಒಟಿಟಿ (Cinema OTT) ಜಗತ್ತಿಗೆ ಕಾಲಿಡುತ್ತಿದೆ. ಸ್ಟ್ರೀಮಿಂಗ್‌ ಎಲ್ಲಿ? ಯಾವಾಗಿನಿಂದ?

‌KGF ಶ್ರೀನಿಧಿ ಶೆಟ್ಟಿ ಬಳಿಕ ಕನ್ನಡ ಮತ್ತೋರ್ವ `ಸ್ಟಾರ್‌' ನಟಿ ಜೊತೆಗೆ ಕೈಜೋಡಿಸಿದ ತೆಲುಗು ನಟ ನಾನಿ; ಯಾವ ಸಿನಿಮಾ?

KGF ಶ್ರೀನಿಧಿ ಶೆಟ್ಟಿ ಬಳಿಕ ನಾನಿ ಕಣ್ಣಿಗೆ ಬಿದ್ದ ಕನ್ನಡದ ಮತ್ತೋರ್ವ ನಟಿ!

ತೆಲುಗು ನಟ, ನಿರ್ಮಾಪಕ ನಾನಿ ಅವರ ಹೊಸದೊಂದು ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. 'ದಂಡೋರ' ಖ್ಯಾತಿಯ ಮುರಳಿಕಾಂತ್ ದೇವಸೋತ್ ನಿರ್ದೇಶಿಸಲಿರುವ ಈ ವಿಶಿಷ್ಟ ಸಿನಿಮಾವನ್ನು ನಾನಿ ತಮ್ಮದೇ 'ವಾಲ್ ಪೋಸ್ಟರ್ ಸಿನಿಮಾ' ಬ್ಯಾನರ್ ಅಡಿಯಲ್ಲಿ ಅತ್ಯಂತ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದು, ಆಗಸ್ಟ್ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್‌ ನಟಿಯೊಬ್ಬರು ನಾಯಕಿಯಾಗಿ ನಟಿಸುತ್ತಿದ್ದಾರೆ.

Radhika Pandit: ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌; ಸ್ಪೆಷಲ್ ವಿಡಿಯೋದಲ್ಲಿದೆ ಈ ಹಾಡು!

ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌

Radhika Pandit: ಇನ್ನುಳಿದಂತೆ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ರಾಧಿಕಾ ಇರುವ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಮಕ್ಕಳ ಜೊತೆ ಕೂರ್ಗ್, ಮಡಿಕೇರಿಗೆ ತೆರಳಿ ಒಂದಷ್ಟು ಸಮಯ ಕಳೆದಿದ್ದರು.ಯಶ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಈ ವೇಳೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿರಲಿಲ್ಲ. ಸದ್ಯ ರಾಧಿಕಾ ಪಂಡಿತ್ ಒಂದಷ್ಟು ಸೆಲ್ಫಿ ಫೋಟೊಗಳನ್ನು ಕೊಲಾಜ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ.

ಚುನಾವಣಾ ರಾಜಕಾರಣಕ್ಕೆ ರಜನಿಕಾಂತ್ ಹೆಸರು ಬಳಸದಂತೆ ಕಟ್ಟುನಿಟ್ಟಿನ ಆದೇಶ: ತಲೈವಾ ಅಭಿಮಾನಿಗಳ ಸಂಘದಿಂದ ಪ್ರಕಟಣೆ

ರಜನಿಕಾಂತ್ ಹೆಸರು ಬಳಸದಂತೆ ಅಭಿಮಾನಿಗಳ ಸಂಘದಿಂದ ಕಟ್ಟುನಿಟ್ಟಿನ ಆದೇಶ

ರಾಜಕೀಯ ವಿದ್ಯಮಾನಗಳಲ್ಲಿ ‘ಸೂಪರ್‌ಸ್ಟಾರ್’ ರಜನಿಕಾಂತ್ ಅವರ ಹೆಸರು ಮತ್ತು ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಸಂಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಕಲ್ಯಾಣ ಸಂಘವು ಅಧಿಕೃತ ಪ್ರಕಟಣೆ ಹೊರಡಿಸಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ಛೇ! ಕಂಗನಾ ರಣಾವತ್‌ ಚಿತ್ರಕ್ಕೆ ಇಂಥ ಸ್ಥಿತಿಯೇ? ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದ 'ಭಾರತ್ ಭಾಗ್ಯ ವಿಧಾತ' ಸಿನಿಮಾ!

ಮತ್ತೆ ಮತ್ತೆ ಸೋಲಿನ ಸುಳಿಗೆ ಸಿಲುಕುತ್ತಿರುವ ಸಂಸದೆ ಕಂಗನಾ ರಣಾವತ್‌!

26/11 ಮುಂಬೈ ದಾಳಿಯ ನೈಜ ಘಟನೆಗಳ ಆಧಾರಿತ, ನಟಿ, ಸಂಸದೆ ಕಂಗನಾ ರಣಾವತ್ ಅಭಿನಯದ ‘ಭಾರತ್ ಭಾಗ್ಯ ವಿಧಾತ’ ಚಿತ್ರಕ್ಕೆ ನೀರಸ ಆರಂಭ ಸಿಕ್ಕಿದೆ. ದೇಶಾದ್ಯಂತ 2,181 ಶೋಗಳನ್ನು ಹೊಂದಿದ್ದರೂ ಶೇ.11 ರಷ್ಟು ಮಾತ್ರ ಆಕ್ಯುಪೆನ್ಸಿ ದಾಖಲಾಗಿದೆ. ಕಂಗನಾ ಅವರ ಸೋಲಿನ ಸರಣಿ ಮುಂದುವರಿದಿದೆ.

ರಂಗಾಯಣ ರಘು ನಟನೆಯ 400ನೇ ಸಿನಿಮಾದ ಟೈಟಲ್ ರಿವೀಲ್; ಸಾಥ್ ನೀಡಿದ ʻಡಾಲಿʼ ಧನಂಜಯ್

ನಟ ರಂಗಾಯಣ ರಘು ಅಭಿನಯದ 400ನೇ ಸಿನಿಮಾದ ಟೈಟಲ್ ಅನೌನ್ಸ್‌!

ಸ್ಯಾಂಡಲ್‌ವುಡ್‌ನ ಜನಪ್ರಿಯ ಪೋಷಕ ನಟ ರಂಗಾಯಣ ರಘು ಅವರ ವೃತ್ತಿಜೀವನದ 400ನೇ ಮೈಲಿಗಲ್ಲಿನ ಚಿತ್ರ ‘ಹೊಸ ಜೀವನ’ ಅಧಿಕೃತವಾಗಿ ಪ್ರಕಟವಾಗಿದ್ದು, ಇದರ ಶೀರ್ಷಿಕೆಯನ್ನು ನಟರಾಕ್ಷಸ ಡಾಲಿ ಧನಂಜಯ್ ಅನಾವರಣಗೊಳಿಸಿದ್ದಾರೆ. ಕಿರುಚಿತ್ರಗಳ ಮೂಲಕ ಖ್ಯಾತಿ ಪಡೆದಿದ್ದ ಮೋಹನ್ ಕುಮಾರ್ ಹನುಮಯ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಜೂನ್‌ 15ಕ್ಕೆ‌ ತಮಿಳುನಾಡು ಸಿಎಂ ವಿಜಯ್‌ಗೆ ಬಿಗ್‌ ಡೇ; ʻದಳಪತಿʼ ಕುಟುಂಬದಲ್ಲಿ ಬೀಸಲಿದೆಯಾ ತಂಗಾಳಿ?

ಜೂ.15ಕ್ಕೆ CM ವಿಜಯ್‌ಗೆ ಬಿಗ್ ಡೇ; ಫ್ಯಾಮಿಲಿ ಕೋರ್ಟ್‌ನಲ್ಲಿ ದಳಪತಿ ಸಂಸಾರ

ತಮಿಳುನಾಡು ಮುಖ್ಯಮಂತ್ರಿಯಾಗಿ ಐತಿಹಾಸಿಕ ಸಾಧನೆ ಮಾಡಿರುವ ನಟ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಅವರ ವಿಚ್ಛೇದನ ಪ್ರಕರಣ ಜೂನ್ 15 ರಂದು ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಗೆ ಬರಲಿದೆ.

ಸದ್ದಿಲ್ಲದೇ ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ Obsession; ಮ್ಯಾಜಿಕ್‌ ಮಾಡಿದ 7 ಕೋಟಿ ಬಜೆಟ್‌ನ ಹಾಲಿವುಡ್‌ ಸಿನಿಮಾ!

ಕರುನಾಡಿನಲ್ಲಿ ಬಾಕ್ಸ್‌ ಆಫೀಸ್‌ ಲೂಟಿ ಹೊಡೆದ 7 ಕೋಟಿ ಬಜೆಟ್‌ನ 'ಅಬ್ಸೆಷನ್'

ಯಾವುದೇ ಸ್ಟಾರ್ ತಾರಾಗಣವಿಲ್ಲದೆ ಕೇವಲ 7 ಕೋಟಿ ಬಜೆಟ್‌ನಲ್ಲಿ ಕರಿ ಬೇಕರ್ ನಿರ್ದೇಶಿಸಿರುವ ಹಾಲಿವುಡ್‌ನ ‘ಅಬ್ಸೆಷನ್’ ಸಿನಿಮಾ ಭಾರತದಲ್ಲಿ 15 ದಿನಗಳಲ್ಲಿ 65+ ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಯಾವುದೇ ಪ್ರಚಾರವಿಲ್ಲದೆ ಕರ್ನಾಟಕದಲ್ಲೂ ದಾಖಲೆ ಪ್ರಮಾಣದ ಗಳಿಕೆಯನ್ನು ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಮಾಡಿದೆ.

Kangana Ranaut: ಬಾಕ್ಸ್ ಆಫೀಸ್​​ನಲ್ಲಿ ಕಂಗನಾ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ; ಕಲೆಕ್ಷನ್‌ ಎಷ್ಟು?

ಬಾಕ್ಸ್ ಆಫೀಸ್​​ನಲ್ಲಿ ಕಂಗನಾ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ

Kangana Ranaut: ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಿತು, ದಿಲ್ಜಿತ್ ದೋಸಾಂಜ್ ನಟಿಸಿದ ಮೈ ವಾಪಸ್ ಆವುಂಗಾ ಮತ್ತು ಮನೋಜ್ ಬಾಜ್‌ಪೇಯಿ ನಟಿಸಿದ ಗವರ್ನರ್ ಜೊತೆಗೆ ಬಿಡುಗಡೆಯಾಗಿದೆ. ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದ್ದರೂ, ಚಿತ್ರವು ತನ್ನ ಆರಂಭಿಕ ದಿನಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ಹೆಣಗಾಡಿದೆ. ಮೊದಲ ದಿನ ಕೇವಲ 1 ಕೋಟಿ ರೂ. ಸಂಗ್ರಹಿಸಿದ್ದು, ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Dhamaal 4 Trailer: ಅಜಯ್ ದೇವಗನ್ ‘ಧಮಾಲ್ 4’ ಟ್ರೇಲರ್ ರಿಲೀಸ್: ಭರ್ಜರಿ ಕಾಮಿಡಿಗೆ ಫ್ಯಾನ್ಸ್‌ ಫಿದಾ

‘ಧಮಾಲ್ 4’ ಟ್ರೇಲರ್ ರಿಲೀಸ್: ಭರ್ಜರಿ ಕಾಮಿಡಿಗೆ ಫ್ಯಾನ್ಸ್‌ ಫಿದಾ

Dhamaal 4 Trailer: ಈ ಚಿತ್ರಗಳ ಸೀಕ್ವೆಲ್‌ಗಳು ಸಹ ಬಿಡುಗಡೆಯಾಗಿವೆ. ಮತ್ತು ಪ್ರೇಕ್ಷಕರು ಅವುಗಳನ್ನು ಪ್ರೀತಿಯಿಂದ ನೋಡಿ ಆನಂದಿಸಿದ್ದಾರೆ. ಅಕ್ಷಯ್ ಕುಮಾರ್ ಕೆಲವೇ ದಿನಗಳಲ್ಲಿ ವೆಲ್ಕಮ್ ನ ಮೂರನೇ ಕಂತನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೆಲವೇ ದಿನಗಳ ನಂತರ, ಅಜಯ್ ದೇವಗನ್ ಅದೇ ಹಳೆಯ ಹಾಸ್ಯ ಸಿನಿಮಾ ಧಮಾಲ್ ನ ನಾಲ್ಕನೇ ಕಂತನ್ನು ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.

Raghava Lawrence:  ರಾಘವ್ ಲಾರೆನ್ಸ್ ರಾಜಕೀಯಕ್ಕೆ ಪ್ರವೇಶ; ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

ರಾಘವ್ ಲಾರೆನ್ಸ್ ರಾಜಕೀಯಕ್ಕೆ ಪ್ರವೇಶ; ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

Raghava Lawrence: ವಿಜಯ್ ಅವರಿಂದ ತೆರವಾದ ತಿರುಚ್ಚಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧಿಸಬಹುದೆಂಬ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ, ನಟ-ಚಲನಚಿತ್ರ ನಿರ್ಮಾಪಕ ರಾಘವ ಲಾರೆನ್ಸ್ ಶುಕ್ರವಾರ ರಾಜಕೀಯ ಪ್ರವೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದ ಸ್ಥಾನಕ್ಕೆ ಲಾರೆನ್ಸ್ ಅವರನ್ನು ಲಿಂಕ್ ಮಾಡಲಾಗಿದೆ ಎಂಬ ವರದಿಗಳ ನಂತರ ಈ ಘೋಷಣೆ ಬಂದಿದೆ.

Actor Suriya:  ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

Actor Suriya: ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

Actor Suriya: ಛಾಯಾಗ್ರಾಹಕ ಜಿಕೆ ವಿಷ್ಣು, ಸಂಪಾದಕ ಆರ್ ಕಲೈವಾಣನ್ ಮತ್ತು ಸಂಗೀತ ಸಂಯೋಜಕ ಸಾಯಿ ಅಭ್ಯಂಕರ್ ಅವರಿಗೆ ಮಹೀಂದ್ರಾ ಬಿಇ6 ಬ್ಯಾಟ್‌ಮ್ಯಾನ್ ಆವೃತ್ತಿಯ ಕಾರುಗಳನ್ನು ಉ ಡುಗೊರೆಯಾಗಿ ನೀಡಿದ ನಂತರ, ಅವರು ಆರ್‌ಜೆ ಬಾಲಾಜಿಗೆ ಹೊಚ್ಚ ಹೊಸ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದರು. ಈ ವಾರ ಸಿನಿಮಾ ಓಟಿಟಿಗೆಗೂ ಬಂದಿದೆ. ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.

ವರ್ಷಾನುಗಟ್ಟಲೇ ಸಿನಿಮಾ ಶೂಟಿಂಗ್‌ ಮಾಡೋರಿಗೆ 94 ವರ್ಷದ ಸಿಂಗೀತಂ ಶ್ರೀನಿವಾಸ ರಾವ್ ಟಾಂಗ್‌;‌ 77 ದಿನಗಳಲ್ಲಿ ʻಸಿಂಗ್‌ ಗೀತಂʼ ಚಿತ್ರೀಕರಣ ಫಿನೀಶ್‌

ಕೇವಲ 77 ದಿನದಲ್ಲಿ ʻಸಿಂಗ್ ಗೀತಂʼ ಚಿತ್ರದ ಶೂಟಿಂಗ್‌ ಮುಗಿಸಿದ್ದ ಸಿಂಗೀತಂ!

94 ವರ್ಷದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ವರ್ಷಗಟ್ಟಲೆ ಶೂಟಿಂಗ್ ಎಳೆಯುವ ಇಂದಿನ ತಲೆಮಾರಿಗೆ ಮಾದರಿಯಾಗಿ ತಮ್ಮ ‘ಸಿಂಗ್ ಗೀತಂ’ ಸಿನಿಮಾವನ್ನು ಕೇವಲ 77 ದಿನಗಳಲ್ಲಿ ಪೂರ್ಣಗೊಳಿಸಿ ಜೂನ್ 12 ರಂದು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ.

8 Kannada Movie: ಬಾಲಿವುಡ್‌ನ ಅನುರಾಗ್‌ ಕಶ್ಯಪ್‌ ನಟನೆಯ ಮೊದಲ ಕನ್ನಡ ಸಿನಿಮಾದ ಟೀಸರ್‌ ರಿಲೀಸ್

‌8 Movie: ಅನುರಾಗ್ ಕಶ್ಯಪ್ ನಟನೆಯ ಮೊದಲ ಕನ್ನಡದ ಸಿನಿಮಾದ ಟೀಸರ್‌ ರಿಲೀಸ್

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಚೊಚ್ಚಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ‘8’ (ಎಂಟು) ಚಿತ್ರದ ಸಸ್ಪೆನ್ಸ್ ಹಾಗೂ ಎಮೋಷನಲ್ ಟೀಸರ್ ಬಿಡುಗಡೆಯಾಗಿ ಭಾರಿ ಸಂಚಲನ ಮೂಡಿಸಿದೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಖ್ಯಾತಿಯ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರವು ಮನುಷ್ಯನ ಜೀವನದಲ್ಲಿ ಸಿಗುವ ಎರಡನೇ ಅವಕಾಶದ ಕಥಾಹಂದರವನ್ನು ಹೊಂದಿದೆ.

ಭಾರತೀಯ OTT ರಂಗದಲ್ಲಿ ಹೊಸ ಕ್ರಾಂತಿ; 100 ಮಿಲಿಯನ್ ದಾಟಿದ ಜಿಯೋಹಾಟ್‌ಸ್ಟಾರ್ ಬಳಕೆದಾರರ ಸಂಖ್ಯೆ!

OTT ಲೋಕದಲ್ಲಿ ಜಿಯೋಹಾಟ್‌ಸ್ಟಾರ್ ಧಮಾಕಾ; 10 ಕೋಟಿ ದಾಟಿದ ಬಳಕೆದಾರರ ಸಂಖ್ಯೆ

ಜಿಯೋಹಾಟ್‌ಸ್ಟಾರ್ ಒಟಿಟಿ ವೇದಿಕೆಯ ಪ್ರೀಮಿಯಂ ಮೈಕ್ರೋ-ಕಂಟೆಂಟ್ ವಿಭಾಗವಾದ ‘TADKA’ 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತಲುಪುವ ಮೂಲಕ ಭಾರತೀಯ ಡಿಜಿಟಲ್ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇಂದಿನ ಅವಸರದ ಬದುಕಿಗೆ ಸೂಕ್ತವಾದ 30 ರಿಂದ 60 ಸೆಕೆಂಡುಗಳ ವರ್ಟಿಕಲ್ ಶೈಲಿಯ ಕಥೆಗಳು ಯುವ ಸಮೂಹವನ್ನು ಸೆಳೆದಿದೆ.

ಪ್ರಿಯಾ ಜೊತೆ ಮದುವೆ ಆಗೋದಾಗಿ ಮೊದಲು ಸಂಚಿತ್‌‌ ಸಂಜೀವ್‌ಗೆ ಹೇಳಿದ್ದ ನಟ ಸುದೀಪ್; ಅಂದು ಜೂನಿಯರ್‌ ಕಿಚ್ಚ ಏನ್‌ ಹೇಳಿದ್ರು ಗೊತ್ತಾ?

ಪ್ರಿಯಾ - ಸುದೀಪ್ ಮದುವೆಗೆ ನೋ ಎಂದಿದ್ದ ಸಂಚಿತ್! ಇಲ್ಲಿದೆ ಆ ಕ್ಯೂಟ್‌ ಕಾರಣ

ನಟ ಕಿಚ್ಚ ಸುದೀಪ್ ಅವರು ಪ್ರಿಯಾ ಅವರನ್ನು ಮದುವೆಯಾಗುವ ನಿರ್ಧಾರವನ್ನು ಮೊದಲು ಸೋದರಳಿಯ ಸಂಚಿತ್ ಸಂಜೀವ್‌ಗೆ ತಿಳಿಸಿದ್ದರಂತೆ. ಆದರೆ ಆಗ ಸಂಚಿತ್ ಮಾತ್ರ ಈ ಮದುವೆ ಬೇಡ ಎಂದು ಹೇಳಿದ್ದರಂತೆ! ಈ ತಮಾಷೆಯ ಪ್ರಸಂಗವನ್ನು ಸಂಚಿತ್‌ ಅವರೇ ಹೇಳಿಕೊಂಡಿದ್ದಾರೆ.

Loading...