ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Vijay Deverakonda: ಫ್ಯಾನ್ಸ್‌ ತಂದಿದ್ದ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡ ವಿಜಯ್ ದೇವರಕೊಂಡ

ಫ್ಯಾನ್ಸ್‌ ತಂದಿದ್ದ ಕೇಕ್‌ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡ ವಿಜಯ್!

Vijay Deverakonda: ಈ ವರ್ಷದ ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬ ಸ್ವಲ್ಪ ವಿಶೇಷವಾಗಿದೆ. 37ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟ. ವಿಜಯ್ ದೇವರಕೊಂಡ ಫೆಬ್ರವರಿ 26, 2026 ರಂದು ನಟಿ ರಶ್ಮಿಕಾ ಮಂದಣ್ಣ ಅವರನ್ನು ವಿವಾಹವಾದರು. ದಂಪತಿ ತಮ್ಮ ಹೈದರಾಬಾದ್ ನಿವಾಸದ ಬಾಲ್ಕನಿಯಲ್ಲಿ ಹೊರಗೆ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳತ್ತ ಕೈ ಬೀಸಿದರು. ರಶ್ಮಿಕಾ ಮಂದಣ್ಣ ಕೂಡ ಅವರೊಂದಿಗೆ ಇದ್ದರು, ಎಲ್ಲರೂ ನಗುತ್ತಾ ಕೈ ಬೀಸಿದರು.

Ajaneesh B Lokanath: ಅಜನೀಶ್ ಲೋಕನಾಥ್‌ ನೇತೃತ್ವದಲ್ಲಿ ಮ್ಯೂಸಿಕ್ ಕಾನ್ಸರ್ಟ್! ಇಲ್ಲಿದೆ ಡಿಟೇಲ್ಸ್‌

ಅಜನೀಶ್ ಲೋಕನಾಥ್‌ ನೇತೃತ್ವದಲ್ಲಿ ಮ್ಯೂಸಿಕ್ ಕಾನ್ಸರ್ಟ್!

Ajaneesh B Lokanath: ಅಜನೀಶ್ ಲೋಕನಾಥ್ ನೇತೃತ್ವದಲ್ಲಿ ಇದೇ ತಿಂಗಳ‌ 16ರಂದು ಕನ್ನಡದ ಮೊದಲ ಮ್ಯೂಸಿಕ್ ಕಾನ್ಸರ್ಟ್ ನಡೆಯುತ್ತಿದೆ. ಈ ಬಗ್ಗೆ ನಿನ್ನೆ ಬೆಂಗಳೂರಿನ ಉತ್ಸವ್ ಲೆಗಸಿಯಲ್ಲಿ ಸುದ್ದಿಗೋಷ್ಟಿಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅಜನೀಶ್ ಲೋಕನಾಥ್, ಲಹರಿ ಮುಖ್ಯಸ್ಥ ವೇಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Actor Yash: ಸೀತಾ ಸ್ವಯಂವರದ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾದ ಯಶ್‌!

ಸೀತಾ ಸ್ವಯಂವರದ ದೃಶ್ಯಗಳ ಚಿತ್ರೀಕರಣದಲ್ಲಿ ಭಾಗಿಯಾದ ಯಶ್‌!

Actor Yash: ಮುಂಬೈನಲ್ಲಿ ನಡೆಯುತ್ತಿರುವ ವೇಳಾಪಟ್ಟಿಯ ಭಾಗವಾಗಿ ಯಶ್ ಏಪ್ರಿಲ್‌ನಿಂದ ರಾವಣನ ಭಾಗಗಳನ್ನು ಚಿತ್ರೀಕರಿಸುತ್ತಿದ್ದಾರೆ. ಯಶ್ ರಾವಣನ ಪಾತ್ರವರ್ಗವನ್ನು ವ್ಯಾಪಕವಾಗಿ ಪ್ರಶಂಸಿಸಲಾಗಿದೆ. ಈ ಚಿತ್ರದಲ್ಲಿ ರಣಬೀರ್ ಕಪೂರ್, ಯಶ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಮತ್ತು ರವಿ ದುಬೆ ನಟಿಸಿದ್ದಾರೆ. ಮೊದಲ ಭಾಗವು ಈ ವರ್ಷದ ದೀಪಾವಳಿಯಲ್ಲಿ ಚಿತ್ರಮಂದಿರಗಳಿಗೆ ಬರಲಿದೆ.

Rohit Sharma: ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ; ಏನಿದು ಶೋ?

ಕಿರುತೆರೆ ಲೋಕಕ್ಕೆ ಎಂಟ್ರಿ ಕೊಟ್ಟ ರೋಹಿತ್ ಶರ್ಮಾ; ಏನಿದು ಶೋ?

Rohit Sharma: ರೋಹಿತ್ ಶರ್ಮಾ ಅವರ ಈ ಪ್ರೋಮೊ ಸದ್ಯ ವ್ಯಾಪಕವಾಗಿ ವೈರಲ್ ಆಗಿದ್ದು ಹಿಟ್ ಮ್ಯಾನ್ ಅಭಿಮಾನಿಗಳಿಗೆ ಈ ಪ್ರೋಮೋ ಸಖತ್‌ ಇಷ್ಟ ಆಗಿದೆ. ಕಾರ್ಯಕ್ರಮದ ಬಗ್ಗೆ ಅಥವಾ ಅದರ ಪ್ರಕಾರದ ಬಗ್ಗೆ ಇನ್ನೂ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲವಾದರೂ, ಟೀಸರ್ ಸಖತ್‌ ಮೋಜಿನಿಂದ ಕೂಡಿದೆ.

Ram Charan: 'ಪೆದ್ದಿ' ಸೆಟ್‌ಗೆ ಚಿರಂಜೀವಿ ಸರ್ಪ್ರೈಸ್ ವಿಸಿಟ್; ವಿಡಿಯೋ ವೈರಲ್‌

'ಪೆದ್ದಿ' ಸೆಟ್‌ಗೆ ಚಿರಂಜೀವಿ ಸರ್ಪ್ರೈಸ್ ವಿಸಿಟ್; ವಿಡಿಯೋ ವೈರಲ್‌

Ram Charan: ಜೂನ್ 4 ರಂದು ತೆರೆಗೆ ಬರಲಿರುವ ಈ ಚಿತ್ರದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದು, ದೊಡ್ಡ ತಾರಾಗಣವೇ ಇದೆ. ಹಿರಿಯ ನಟರಾದ ಶಿವರಾಜ್‌ಕುಮಾರ್, ಜಗಪತಿ ಬಾಬು, ದಿವ್ಯೆಂದು ಮತ್ತು ಬೋಮನ್ ಇರಾನಿ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.ಈ ವಿಡಿಯೋದಲ್ಲಿ ಮೆಗಾಸ್ಟಾರ್ ಚಿರಂಜೀವಿ ಹಾಗೂ 'ಪುಷ್ಪ' ಖ್ಯಾತಿಯ ನಿರ್ದೇಶಕ ಸುಕುಮಾರ್ 'ಪೆದ್ದಿ' ಸೆಟ್‌ಗೆ ಭೇಟಿ ನೀಡಿರುವ ದೃಶ್ಯಗಳಿವೆ.

Daali Dhananjay: ಗುರಿ ಸಾಧನೆಗೆ ಶ್ರಮ ಮತ್ತು ಸಮಯ ಅಗತ್ಯ : ನಟ ಡಾಲಿ ಧನಂಜಯ್

ಗುರಿ ಸಾಧನೆಗೆ ಶ್ರಮ ಮತ್ತು ಸಮಯ ಅಗತ್ಯ : ನಟ ಡಾಲಿ ಧನಂಜಯ್

ನಾವು ಅಂದುಕೊಂಡಂತೆ ಎಲ್ಲವನ್ನೂ ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ, ಎಂದಿಗೂ ಧೃತಿ ಗೆಡಬೇಡಿ. ಸೋಲನ್ನು ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಸೋಲನ್ನು ಅನುಭವಿಸಬೇಕು. ಸೋಲಿನ ಅನುಭವವಾದಾಗಲೇ ಗೆಲುವಿನ ದಾರಿ ತಿಳಿಯುತ್ತದೆ. ಆದ್ದರಿಂದ, ಸೋತು ಗೆಲ್ಲೋಣ ಎಂದು ತಮ್ಮ ಜೀವನದ ಅನುಭವ ಹಂಚಿಕೊಂಡರು.

ʻನಾದಯೋಗಿ ಡಾ. ರಾಜಕುಮಾರ್' ಪುಸ್ತಕ ರಿಲೀಸ್‌ ಮಾಡಿದ ಅಣ್ಣಾವ್ರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್; ʻಪೂರ್ವ ಆಫ್ರಿಕಾಕ್ಕೂ ತಲುಪಲಿದೆ ಈ ಕೃತಿʼ

ʻನಾದಯೋಗಿ ಡಾ. ರಾಜ್‌ಕುಮಾರ್ʼ ಬಿಡುಗಡೆ ಮಾಡಿದ ಪೂರ್ಣಿಮಾ ರಾಮ್‌ಕುಮಾರ್‌

ವರನಟ ಡಾ. ರಾಜ್‌ಕುಮಾರ್ ಅವರ ಅಪ್ರತಿಮ ಸಂಗೀತ ಜ್ಞಾನವನ್ನು ಪರಿಚಯಿಸುವ "ನಾದಯೋಗಿ ಡಾ. ರಾಜಕುಮಾರ್" ಪುಸ್ತಕ ಇತ್ತೀಚೆಗೆ ಅದ್ದೂರಿಯಾಗಿ ಲೋಕಾರ್ಪಣೆಗೊಂಡಿತು. ಅಣ್ಣಾವ್ರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್ ಈ ಕೃತಿಯನ್ನು ಅನಾವರಣಗೊಳಿಸಿದರು. ವಿಶೇಷವೆಂದರೆ, ಈ ಪುಸ್ತಕವು ಪೂರ್ವ ಆಫ್ರಿಕಾಕ್ಕೂ ತಲುಪಲಿದೆ.

Aakhri Sawal Trailer: ಗಾಂಧಿ ಹತ್ಯೆ, ಬಾಬರಿ ಮಸೀದಿ ಧ್ವಂಸ! ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಟ್ರೈಲರ್‌ ಔಟ್‌

ಆರ್​ಎಸ್​ಎಸ್​ ಕುರಿತ ‘ಆಖ್ರಿ ಸವಾಲ್’ ಟ್ರೈಲರ್‌ ಔಟ್‌

Aakhri Sawal Trailer: ಈ ಚಿತ್ರವು ಭಾರತೀಯ ಸೈನ್ ಲ್ಯಾಂಗ್ವೇಜ್ ಅಥವಾ ಸಂಕೇತ ಭಾಷೆಯಲ್ಲಿ ಬಿಡುಗಡೆ ಆಗಲಿರುವ ಭಾರತದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಅಭಿಜೀತ್ ಮೋಹನ್ ವಾರಂಗ್ ನಿರ್ದೇಶಿಸಿದ ಈ ಚಿತ್ರವು 2026 ರ ಅತ್ಯಂತ ಚರ್ಚೆಯ ಸಿನಿಮಾ ಆಗಲಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತ ಕಥೆ ಇದೆ. ಇದೀಗ ಟ್ರೇಲರ್ ಬಿಡುಗಡೆಯಾಗಿದೆ.

ಮನೆಯಲ್ಲೇ ಕುಳಿತು ಈ 4 ಸೂಪರ್‌ ಹಿಟ್‌ ಸಿನಿಮಾಗಳನ್ನು ನೋಡಿ; ಈ ವಾರ ಒಟಿಟಿಯಲ್ಲಿ ಯಾವೆಲ್ಲಾ ಚಿತ್ರಗಳು ಬರ್ತಿವೆ ಗೊತ್ತಾ?

ಸಿನಿಪ್ರಿಯರಿಗೆ ಹಬ್ಬದೂಟ; ಈ ವಾರ ಒಟಿಟಿಗೆ ಬಂದಿವೆ 4 ಹಿಟ್ ಸಿನಿಮಾಗಳು

OTT releases of this week: ಚಿತ್ರಮಂದಿರಗಳಲ್ಲಿ ಕೋಟಿ ಕೋಟಿ ಲೂಟಿ ಮಾಡಿದ ನಾಲ್ಕು ಯಶಸ್ವಿ ಸಿನಿಮಾಗಳು ಈ ವಾರ ಓಟಿಟಿ ವೇದಿಕೆಗೆ ಲಗ್ಗೆ ಇಟ್ಟಿವೆ. ಅಡಿವಿ ಶೇಷ್ ನಟನೆಯ ಆಕ್ಷನ್ ಸಿನಿಮಾ 'ಡಕಾಯಿತ್', ಮಲಯಾಳಂನ 'ವಾಳಾ 2' ಮುಂತಾದ ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿವೆ.

Actor Yash:  ಭಾರತದ ಜನಪ್ರಿಯ ಬಿಜಿಎಂಐ ಗೇಮಿನಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌!

ಭಾರತದ ಜನಪ್ರಿಯ ಬಿಜಿಎಂಐ ಗೇಮಿನಲ್ಲಿ ರಾಕಿಂಗ್‌ ಸ್ಟಾರ್‌ ಯಶ್‌!

Toxic Movie: ಬಿಜಿಎಂಐ ತನ್ನ ಅದ್ಭುತ ಪ್ರಚಾರ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿದೆ. ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಗೇಮ್‌ ಜೊತೆ 'ಟಾಕ್ಸಿಕ್' ಚಿತ್ರತಂಡ ಒಪ್ಪಂದ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಇದಕ್ಕೂ ಮುಂಚೆ ಯಶ್‌ ಅವರು 'ವೆರೈಟಿ' ನಿಯತಕಾಲಿಕೆಯ ಕವರ್ ಪೇಜ್‌ನಲ್ಲಿ ಯಶ್ ಕಾಣಿಸಿಕೊಂಡಿದ್ದು ಸಖತ್‌ ಸೌಂಡ್‌ ಮಾಡಿದ್ದರು. ಇದೀಗ ಮತ್ತೆ ಸುದ್ದಿಯಾಗಿದ್ದಾರೆ ಯಶ್‌.

ಅಂದು ಶಾರುಖ್‌ ನಟನೆಯ ʻಜೀರೋʼ ಎದುರು ಗೆದ್ದು ಅಬ್ಬರಿಸಿದ್ದ ಯಶ್‌;‌ ಮತ್ತೆ ʻಟಾಕ್ಸಿಕ್‌ʼ ಮೂಲಕ ʻಕಿಂಗ್‌ಖಾನ್‌ʼಗೆ ಠಕ್ಕರ್‌ ಕೊಡ್ತಾರಾ ʼರಾಕಿ ಭಾಯ್‌ʼ?

ʻಟಾಕ್ಸಿಕ್‌ʼ ಸಿನಿಮಾಗೆ ಅಚ್ಚರಿಯ ರಿಲೀಸ್‌ ಡೇಟ್‌ ಫಿಕ್ಸ್ ಮಾಡಿದ್ರಾ ಯಶ್‌?

ನಟ ಯಶ್ ಅವರ 'ಟಾಕ್ಸಿಕ್' ಮತ್ತು ಶಾರುಖ್ ಖಾನ್ ಅವರ 'ಕಿಂಗ್' ಸಿನಿಮಾ ಡಿಸೆಂಬರ್‌ನಲ್ಲಿ ಬಾಕ್ಸ್ ಆಫೀಸ್ ಮುಖಾಮುಖಿಯಾಗುವುದು ಬಹುತೇಕ ಖಚಿತವಾಗಿದೆ. 2018ರಲ್ಲಿ 'ಜೀರೋ' ಚಿತ್ರವನ್ನು ಹಿಂದಿಕ್ಕಿ 'ಕೆಜಿಎಫ್' ಇತಿಹಾಸ ಬರೆದಿತ್ತು. ಈಗ ಅದೇ ಮಾದರಿಯಲ್ಲಿ ಯಶ್ ತಮ್ಮ ನೆಚ್ಚಿನ ಡಿಸೆಂಬರ್ ತಿಂಗಳಲ್ಲೇ ಹಾಲಿವುಡ್ ಗುಣಮಟ್ಟದ 'ಟಾಕ್ಸಿಕ್' ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ.

ʻನಂದಗೋಕುಲʼ ಧಾರಾವಾಹಿಯಲ್ಲಿ ಅಣ್ಣ-ತಮ್ಮಂದಿರ ಗುಟ್ಟು ರಟ್ಟು; ಪತ್ನಿಯರ ಮುಂದೆ ಸವಾಲಿನ ರಹಸ್ಯ ಬಹಿರಂಗ!

ʻನಂದಗೋಕುಲʼ ಸೀರಿಯಲ್: ಹೆಂಡತಿಯರ ಮುಂದೆ ರಟ್ಟಾಯ್ತು ಸಹೋದರರ ಗುಟ್ಟು!

ಕಲರ್ಸ್ ಕನ್ನಡದ 'ನಂದಗೋಕುಲ' ಧಾರಾವಾಹಿಯಲ್ಲಿ ಕೇಶವ ಮತ್ತು ವಲ್ಲಭನ 'ಸಹೋದರರ ಸವಾಲ್' ಪ್ರಹಸನ ಈಗ ಮೋಜಿನ ತಿರುವು ಪಡೆದಿದೆ. ಮಾವನಿಂದ ಅವಮಾನಕ್ಕೊಳಗಾದ ಕೇಶವ ಸರ್ಕಾರಿ ಕೆಲಸ ಪಡೆಯಲು ಶಪಥ ಮಾಡುತ್ತಾನೆ. ಈ ರಹಸ್ಯವನ್ನು ಪತ್ನಿಯರ ಮುಂದೆ ಹೇಳಬಾರದೆಂದು ಅಣ್ಣ-ತಮ್ಮಂದಿರು ನಿರ್ಧರಿಸಿದರೂ, ಅಂತಿಮವಾಗಿ ಇಬ್ಬರೂ ಒಬ್ಬರ ಗುಟ್ಟನ್ನು ಮತ್ತೊಬ್ಬರ ಹೆಂಡತಿಯರ ಮುಂದೆ ರಟ್ಟಾಗಿಬಿಡುತ್ತದೆ.

Desert Warrior: ಬಜೆಟ್‌ 1400 ಕೋಟಿ, ಕಲೆಕ್ಷನ್‌ 6 ಕೋಟಿ; ಇದು ಜಗತ್ತಿನ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಫ್ಲಾಪ್‌ ಸಿನಿಮಾ!

'ಡೆಸರ್ಟ್ ವಾರಿಯರ್': ಇದು ಜಗತ್ತಿನ ಅತ್ಯಂತ ಕಳಪೆ ಕಲೆಕ್ಷನ್‌ ಮಾಡಿದ ಸಿನಿಮಾ

ಸೌದಿ ಅರೇಬಿಯಾದ ಎಂ‌ಬಿಸಿ ಸ್ಟುಡಿಯೋಸ್ ನಿರ್ಮಿಸಿದ 1400 ಕೋಟಿ ರೂಪಾಯಿ ಬಜೆಟ್‌ನ 'ಡೆಸರ್ಟ್ ವಾರಿಯರ್' ಸಿನಿಮಾ ವಿಶ್ವ ಸಿನಿಮಾ ಇತಿಹಾಸದಲ್ಲೇ ಅತಿದೊಡ್ಡ ಸೋಲು ಕಂಡಿತ್ತು. ಹಾಲಿವುಡ್ ಘಟಾನುಘಟಿ ನಟರು ಮತ್ತು ಭಾರಿ ವಿಎಫ್‌ಎಕ್ಸ್ ಹೊಂದಿದ್ದರೂ, ಚಿತ್ರವು ವಿಶ್ವಾದ್ಯಂತ ಕೇವಲ 6 ಕೋಟಿ ರೂಪಾಯಿ ಗಳಿಸುವಲ್ಲಿ ಮಾತ್ರ ಶಕ್ತವಾಗಿತ್ತು.

'ಧೈರ್ಯವಿದ್ರೆ ನನ್ ಜೊತೆ ಚರ್ಚೆಗೆ ಬನ್ನಿ'; ಬಿಜೆಪಿಯನ್ನು ಟೀಕಿಸುವ ನಟ ಪ್ರಕಾಶ್‌ ರಾಜ್‌ಗೆ ಟಾಲಿವುಡ್‌ ನಿರ್ಮಾಪಕನ ಓಪನ್‌ ಚಾಲೆಂಜ್!‌

ನಟ ಪ್ರಕಾಶ್ ರಾಜ್‌ಗೆ ಟಾಲಿವುಡ್ ನಿರ್ಮಾಪಕ ಓಪನ್ ಚಾಲೆಂಜ್ ಹಾಕಿದ್ದೇಕೆ?

ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಬಿಜೆಪಿ ವಿರೋಧಿ ನಿಲುವಿನ ವಿರುದ್ಧ ಟಾಲಿವುಡ್ ನಿರ್ಮಾಪಕ ಮಧುರ ಶ್ರೀಧರ್ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ. ಪ್ರಕಾಶ್ ರಾಜ್ ಅವರನ್ನು ಸಂಕುಚಿತ ಮನಸ್ಸಿನ "ಹುಸಿ ಜಾತ್ಯತೀತವಾದಿ" ಎಂದು ಕರೆದಿರುವ ರೆಡ್ಡಿ, ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.

30 ವರ್ಷಗಳ ಹಿಂದೆಯೇ ತಮ್ಮ ಪೊಲಿಟಿಕಲ್‌ ಪವರ್‌ ತೋರಿಸಿದ್ದ ʻಸೂಪರ್‌ ಸ್ಟಾರ್‌ʼ ರಜನಿಕಾಂತ್;‌ ಅಂದು ಕಂಗಾಲಾಗಿತ್ತು ಜಯಲಲಿತಾ ಪಾರ್ಟಿ!

ʻತಲೈವಾʼ ರಜನಿಕಾಂತ್‌ ನೀಡಿದ ಹೇಳಿಕೆಗೆ ಧೂಳೀಪಟವಾಗಿತ್ತು ಜಯಲಲಿತಾ ಪಾರ್ಟಿ!

ತಮಿಳುನಾಡು ರಾಜಕೀಯದಲ್ಲಿ ಸಿನಿಮಾ ತಾರೆಯರ ಪ್ರಭಾವ ಅಪ್ರತಿಮ. 1996ರ ಚುನಾವಣೆಯಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ನೀಡಿದ ಒಂದೇ ಒಂದು ಹೇಳಿಕೆ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷವನ್ನು ಧೂಳೀಪಟ ಮಾಡಿತ್ತು. ಭ್ರಷ್ಟಾಚಾರದ ಆರೋಪ ಮತ್ತು ರಜನಿ ಹವಾ ಸೇರಿ 225 ಸ್ಥಾನಗಳಿದ್ದ ಪಕ್ಷವನ್ನು ಕೇವಲ 4 ಸ್ಥಾನಗಳಿಗೆ ಕುಸಿಯುವಂತೆ ಮಾಡಿದ್ದ ಆ ರೋಚಕ ಮಾಹಿತಿ ಇಲ್ಲಿದೆ.

Dhurandhar Movie: ಶೀಘ್ರದಲ್ಲೇ ತೆರೆಗೆ ಬರಲಿದೆಯೇ ‘ಧುರಂಧರ್ 3’? ಏನಿದು ಸುದ್ದಿ?

Dhurandhar Movie: ಶೀಘ್ರದಲ್ಲೇ ತೆರೆಗೆ ಬರಲಿದೆಯೇ ‘ಧುರಂಧರ್ 3’?

Dhurandhar Movie: ರಣವೀರ್ ಸಿಂಗ್ ಅಭಿನಯದ ಈ ಚಿತ್ರದ ಎರಡೂ ಭಾಗಗಳು ಬಿಡುಗಡೆಯಾದ ನಂತರ, ಅಭಿಮಾನಿಗಳು ಮೂರನೇ ಪಾರ್ಟ್‌ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು.ಈ ವಿಷಯದ ಬಗ್ಗೆ ಚಲನಚಿತ್ರ ತಂಡವು ಈ ಹಿಂದೆ ಮೌನವನ್ನು ಕಾಯ್ದುಕೊಂಡಿತ್ತು. ಆದಾಗ್ಯೂ, ತೆರೆಮರೆಯಲ್ಲಿ, ನಿರ್ಮಾಪಕರು ಏನೋ ದೊಡ್ಡ ಯೋಜನೆ ಹಾಕಿಕೊಂಡಿದ್ದಾರೆ. ಇತ್ತೀಚೆಗೆ, ಜಿಯೋ ಸ್ಟುಡಿಯೋಸ್‌ನ ಸಹ-ನಿರ್ಮಾಪಕಿ ಜ್ಯೋತಿ ದೇಶಪಾಂಡೆ, ಧುರಂಧರ್ 3 ಬಗ್ಗೆ ಮಹತ್ವದ ಸುಳಿವನ್ನು ನೀಡಿದ್ದಾರೆ.

Urvashi Rautela: ಇದೊಂದು ವಿಚಾರಕ್ಕೆ ಬಾಲಯ್ಯ ನೆನೆದ ಊರ್ವಶಿ ರೌಟೇಲಾ!

ಇದೊಂದು ವಿಚಾರಕ್ಕೆ ಬಾಲಯ್ಯ ನೆನೆದ ಊರ್ವಶಿ ರೌಟೇಲಾ!

Urvashi Rautela: ನಟ-ರಾಜಕಾರಣಿ ನಂದಮೂರಿ ಬಾಲಕೃಷ್ಣ (Nandamuri Balakrishna) ಅವರು ತಮ್ಮ ಬಹಿರಂಗ ಹೇಳಿಕೆಗಳು ಮತ್ತು ಹಲವಾರು ವಿವಾದಾತ್ಮಕ ಕ್ಷಣಗಳಿಗಾಗಿ ಸುದ್ದಿಯಲ್ಲಿ ಇರುತ್ತಾರೆ. 'ಡಾಕು ಮಹಾರಾಜ್' ಚಿತ್ರದ 'ಡಬಡಿ ಡಿಬಿಡಿ' ಹಾಡಿನ ವಿವಾದದ ಬಗ್ಗೆ ನಟಿ ಊರ್ವಶಿ ರೌಟೇಲಾ ಕೊನೆಗೂ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ನಂದಮೂರಿ ಬಾಲಕೃಷ್ಣ ಜೊತೆ ಕೆಲಸ ಮಾಡಿದ ಅನುಭವವನ್ನೂ ಹಂಚಿಕೊಂಡಿದ್ದಾರೆ.

Kannada Serial: ಕಿರುತೆರೆಗೆ ರೀ ಎಂಟ್ರಿ ಕೊಡಲು ಸಜ್ಜಾದ್ರು ಧನುಷ್‌, ಧ್ರುವಂತ್‌!

ಕಿರುತೆರೆಗೆ ರೀ ಎಂಟ್ರಿ ಕೊಡಲು ಸಜ್ಜಾದ್ರು ಧನುಷ್‌, ಧ್ರುವಂತ್‌!

Kannada Serial: ಬಿಗ್ ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಗಳಾದ ಧನುಷ್ ಗೌಡ ಮತ್ತು ಧ್ರುವಂತ್ ಈಗ ಮತ್ತೆ ಸುದ್ದಿಯಾಗಿದ್ದಾರೆ. ಇಬರಿಬ್ಬರಿಗೆ ತಮ್ಮದೇ ಆದ ಫ್ಯಾನ್ಸ್‌ ವರ್ಗವಿದೆ. ಕಿರುತೆರೆ ಯಾವಾಗ ಕಮ್‌ಬ್ಯಾಕ್‌ ಮಾಡ್ತಾರೆ ಅಂತ ಅವರ ಫ್ಯಾನ್ಸ್‌ ತುದಿಗಾಲಲ್ಲಿ ಕಾಯ್ತಾ ಇದ್ದರು. ಧ್ರುವಂತ್ ಮತ್ತು ಧನುಷ್ ಗೌಡ ಇಬ್ಬರೂ ಸಹ ಮತ್ತೆ ಕಿರುತೆರೆಗೆ ಎಂಟ್ರಿ ಕೊಡೋದಕ್ಕೆ ರೆಡಿಯಾಗಿದ್ದಾರೆ ಎಂದು ವರದಿಯಾಗಿದೆ.

Love Mocktail 3: ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

ಚಿತ್ರಮಂದಿರಗಳಲ್ಲಿ ಯಶಸ್ವಿ 50 ದಿನ ಪೂರೈಸಿದ ʻಲವ್‌ ಮಾಕ್ಟೇಲ್‌ 3’

Love Mocktail 3 : ಲವ್ ಮಾಕ್ಟೇಲ್ 3 ಚಿತ್ರ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಐವತ್ತು ದಿನಗಳನ್ನು ದಾಟಿಕೊಳ್ಳುವ ಮೂಲಕ ಈ ಗೆಲುವಿಗೆ ಮತ್ತಷ್ಟು ರಂಗು ಬಂದಂತಾಗಿದೆ. ಬಿಡುಗಡೆಗೆ ಸುಮುಹೂರ್ತ ಒದಗಿ ಬಂದಿದ್ದರೂ ಸಹ, ಈ ಚಿತ್ರಕ್ಕೆ ಧುರಂಧರ್ 2 ನಂಥಾ ಮಹಾ ಸವಾಲು ಎದುರಾಗಿತ್ತು. ಅದೆಲ್ಲವನ್ನೂ ಎದುರಿಸಿದ ಲವ್ ಮಾಕ್ಟೇಲ್ 3 ಇದೀಗ ನೂರರ ಗಡಿಯತ್ತ ದಾಪುಗಾಲಿಡುತ್ತಿದೆ.

TVK ಪಕ್ಷದ ಗೆಲುವಿನ ಎಫೆಕ್ಟ್‌‌, ʻಜನ ನಾಯಗನ್‌ʼ ಚಿತ್ರದ ಟೈಟಲ್‌ ಕಾರ್ಡ್‌ನಲ್ಲಿ ಭರ್ಜರಿ ಚೇಂಜ್: ವಿಜಯ್‌ ಫ್ಯಾನ್ಸ್‌ ಸಖತ್‌ ಥ್ರಿಲ್!

ʻಜನ ನಾಯಗನ್ʼ ಟೈಟಲ್ ಕಾರ್ಡ್ ಚೇಂಜ್; ʻದಳಪತಿʼ ವಿಜಯ್ ಫ್ಯಾನ್ಸ್ ಥ್ರಿಲ್

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಭರ್ಜರಿ ಜಯ ಸಾಧಿಸಿರುವ ಬೆನ್ನಲ್ಲೇ, ಅವರ ಕೊನೆಯ ಸಿನಿಮಾ 'ಜನ ನಾಯಗನ್' ಚಿತ್ರದ ಟೈಟಲ್ ಕಾರ್ಡ್‌ನಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ. ಚಿತ್ರಮಂದಿರಗಳಲ್ಲಿ ಪ್ರದರ್ಶನವಾಗುತ್ತಿರುವ ಜಾಹೀರಾತುಗಳಲ್ಲಿ "ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್" ಎಂದು ಸಂಬೋಧಿಸಲಾಗಿದ್ದು, ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ʻಏಕ್ ದಿನ್ ಚಿತ್ರಕ್ಕೆ ನಾನು ಸರಿಯಾದ ಆಯ್ಕೆ ಆಯ್ಕೆಯಾಗಿರಲಿಲ್ಲʼ; ಆಮಿರ್‌ ಖಾನ್‌ ಮಗನ ಸಿನಿಮಾದ ಬಗ್ಗೆ ಸಾಯಿ ಪಲ್ಲವಿ ಹಿಂಗ್ಯಾಕೆ ಹೇಳಿದ್ರು?

ʻಆಮಿರ್‌ ಮಗನ ಸಿನಿಮಾಕ್ಕೆ ನಾನು ಸೂಕ್ತ ಆಯ್ಕೆ ಆಗಿರಲಿಲ್ಲʼ- ಸಾಯಿ ಪಲ್ಲವಿ

ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಅಭಿನಯದ 'ಏಕ್ ದಿನ್' ಸಿನಿಮಾ ಸೋಲಿನ ಬೆನ್ನಲ್ಲೇ ನಾಯಕಿ ಸಾಯಿ ಪಲ್ಲವಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ಚಿತ್ರದ ಪಾತ್ರಕ್ಕೆ ತಾವು ಸರಿಯಾದ ಆಯ್ಕೆಯಲ್ಲ ಮತ್ತು ಗ್ಲಾಮರಸ್ ಆದ ಹೊಸ ಮುಖ ಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Actress Simran:  ಬಾಲಿವುಡ್ ಸೌತ್‌ ತಾರೆಗಳಿಗೆ ಗೌರವವೇ ನೀಡಲ್ಲ; ಟೀಕಿಸಿದ ನಟಿ ಸಿಮ್ರಾನ್‌

ಬಾಲಿವುಡ್ ಸೌತ್‌ ತಾರೆಗಳಿಗೆ ಗೌರವವೇ ನೀಡಲ್ಲ; ಟೀಕಿಸಿದ ನಟಿ ಸಿಮ್ರಾನ್‌

Actress Simran: ಹಿಂದಿ ಚಲನಚಿತ್ರ ಸೆಟ್‌ಗಳಲ್ಲಿ ತಮ್ಮನ್ನು ಕಡೆಗಣಿಸಲಾಗಿದೆ ಮತ್ತು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ನಟಿ ಸಿಮ್ರಾನ್‌ ಸಂದರ್ಶನವೊಂದರಲ್ಲಿ (Interview) ಹೇಳಿಕೊಂಡಿದ್ದಾರೆ. ಸೌತ್‌ ನಟರ ಬಗ್ಗೆ ನಿರ್ಮಾಪಕರು ಕೂಡ ಚೌಕಾಶಿ ಮಾಡುತ್ತಾರೆ. ನನ್ನ ಜೀವನದ ಅರ್ಧಕ್ಕಿಂತ ಹೆಚ್ಚಿನದನ್ನು ನಾನು ಸಿನಿಮಾಗೆ ನೀಡಿದ್ದೇನೆ ಮತ್ತು ಅದರ ಹೊರತಾಗಿಯೂ, ನನಗೆ ಹೋದ ಕಡೆ ಗೌರವ ಕೊರತೆಯಿದ್ದರೆ, ಅದು ನೋವುಂಟು ಮಾಡುತ್ತದೆ. ಅದು ಅರ್ಥಹೀನ ಎಂದು ನೇರವಾಗಿ ಹೇಳಿದ್ದಾರೆ.

ʻಅಂದು 9 ಲಕ್ಷ, ಇಂದು 2 ಕೋಟಿʼ; ಹೊಸ ದಾಖಲೆ ಬರೆದ ಸತೀಶ್‌ ನೀನಾಸಂ - ರ‌ಚಿತಾ ರಾಮ್ ʻಅಯೋಗ್ಯ 2ʼ ಸಿನಿಮಾ

ದಾಖಲೆ ಮೊತ್ತಕ್ಕೆ 'ಅಯೋಗ್ಯ 2' ಆಡಿಯೋ ಸೇಲ್; ಸತೀಶ್ ಚಿತ್ರಕ್ಕೆ ಬೇಡಿಕೆ‌

ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ 2' ಚಿತ್ರದ ಆಡಿಯೋ ಹಕ್ಕುಗಳು ಬರೋಬ್ಬರಿ 2 ಕೋಟಿ ರೂ.ಗಳಿಗೆ ಮಾರಾಟವಾಗಿ ದಾಖಲೆ ನಿರ್ಮಿಸಿವೆ. ಮೊದಲ ಭಾಗದ 'ಏನಮ್ಮಿ ಏನಮ್ಮಿ' ಹಾಡಿನ ಅಭೂತಪೂರ್ವ ಯಶಸ್ಸಿನ ಹಿನ್ನೆಲೆಯಲ್ಲಿ ಆನಂದ್ ಆಡಿಯೋ ಸಂಸ್ಥೆ ಈ ಭಾರಿ ಮೊತ್ತಕ್ಕೆ ಹಕ್ಕುಗಳನ್ನು ಖರೀದಿಸಿದೆ.

Dr Rajkumar: ʻಪ್ರಚಾರಕ್ಕಾಗಿ ಮಾತಾಡುವವರ ಕಂಡು ಅಸಹ್ಯವಾಯಿತುʼ; ನಟ ಜಗ್ಗೇಶ್‌ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದು ಯಾರಿಗೆ?

ಪ್ರಚಾರಕ್ಕಾಗಿ ಹಿರಿಯರನ್ನು ನಿಂದಿಸಬೇಡಿ; ವಾರ್ನಿಂಗ್ ಕೊಟ್ಟ ಜಗ್ಗೇಶ್

ಡಾ. ರಾಜ್‌ಕುಮಾರ್ ಸಮಾಧಿ ಕುರಿತ ನಟ ಚೇತನ್ ಅಹಿಂಸಾ ಅವರ ವಿವಾದಾತ್ಮಕ ಹೇಳಿಕೆಗೆ ನಟ ಜಗ್ಗೇಶ್ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ. ಚಿತ್ರರಂಗಕ್ಕೆ ಅಡಿಪಾಯ ಹಾಕಿದ ಸಾಧಕರ ಬಗ್ಗೆ ಪ್ರಚಾರಕ್ಕಾಗಿ ಹಗುರವಾಗಿ ಮಾತನಾಡುವುದು ಅಸಹ್ಯ ಎಂದು ಜಗ್ಗೇಶ್ ಪರೋಕ್ಷವಾಗಿ ಕಿಡಿಕಾರಿದ್ದಾರೆ.

Loading...