ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Kannada New Movie: ಮೇಲುಕೋಟೆಯಲ್ಲಿ 'ಸೆಲೆಬ್ರಿಟಿ' ಸಾಂಗ್ ಶೂಟ್!  ಪ್ರಿಯಾಂಕಾ ಆಚಾರ್ ಹೊಸ ಸಿನಿಮಾ

Kannada New Movie: ಮೇಲುಕೋಟೆಯಲ್ಲಿ 'ಸೆಲೆಬ್ರಿಟಿ' ಸಾಂಗ್ ಶೂಟ್!

Kannada New Movie: ಯುವ ನಟ ಅಶ್ವಿನ್ ನಾಯಕನಾಗಿ ಚಿತ್ರರಂಗಕ್ಕೆ ಪರಿಯಚವಾಗುತ್ತಿರುವ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಇಂದು ಮೇಲುಕೋಟೆಯಲ್ಲಿ ಹಾಡಿನ ಚಿತ್ರೀಕರಣ ನಡೆಸಲಾಗಿದೆ. ನಾಯಕ ಹಾಗೂ ನಾಯಕಿ ನಡುವಿನ ಕಪಲ್ ಸಾಂಗ್ ಗೆ ಜಾನಿ ಮಾಸ್ಟರ್ ಕೊರಿಯೋಗ್ರಫಿ ಮಾಡಿದ್ದು, ನಾಯಕ ಅಶ್ವಿನ್ ಹಾಗೂ ನಾಯಕಿ ಪ್ರಿಯಾಂಕಾ ಆಚಾರ್ ಹೆಜ್ಜೆ ಹಾಕಿದ್ದಾರೆ.

Chinmayi Sripaada: ಕೇತನ್ ಅಗರ್ವಾಲ್‌ ಪ್ರಕರಣದ ಬಗ್ಗೆ ಮಾತನಾಡಿದ್ದಕ್ಕೆ ಟೀಕೆ! ಮಕ್ಕಳ ಸಾವು ಬಯಸಿದ ಟ್ರೋಲರ್ಸ್: ಗಾಯಕಿ ಚಿನ್ಮಯಿ ಶ್ರೀಪಾದ ಕಿಡಿ

ಕೇತನ್ ಅಗರ್ವಾಲ್‌ ಪ್ರಕರಣದ ಬಗ್ಗೆ ಮಾತನಾಡಿದ್ದಕ್ಕೆ ಟೀಕೆ! ಗಾಯಕಿ ಕಿಡಿ

Chinmayi Sripaada: ರಾಹುಲ್ ರವೀಂದ್ರನ್ ವ್ಯಕ್ತಪಡಿಸಿದ ಅಭಿಪ್ರಾಯಕ್ಕೆ ಸಿಟ್ಟಾದ ಟ್ರೋಲರ್‌ಗಳು, ಅವರ 3 ವರ್ಷದ ಅವಳಿ ಮಕ್ಕಳ ಸಾವನ್ನು ಬಯಸುವ ಮಟ್ಟಿಗೆ ಆಕ್ರೋಶ ಹೊರ ಹಾಕಿದ್ದಾರೆ. ನೀವು ನನ್ನ ಮಕ್ಕಳನ್ನು ನಿಂದಿಸಿದರೆ, ನಿಮಗೆ ಸುದೀರ್ಘವಾದ ಆದರೆ ಅತ್ಯಂತ ಭಯಾನಕವಾದ ಜೀವನ ಸಿಗಲಿ ಎಂದು ನಾನು ಹಾರೈಸುತ್ತೇನೆ’ ಎಂದು ಚಿನ್ಮಯಿ ಎಚ್ಚರಿಕೆ ನೀಡಿದ್ದಾರೆ.

ʻವಾರ್ನಿಂಗ್‌ ಕೊಡ್ತಾರೆ, ಟಾರ್ಚರ್‌ ಮಾಡ್ತಾರೆ, ಪ್ಲೀಸ್‌ ಹೀಗೆಲ್ಲಾ ಮಾಡಬೇಡಿʼ; ಅಭಿಮಾನಿಯ ಅತಿರೇಕದ ವರ್ತನೆ ಬಗ್ಗೆ ಭವ್ಯಾ ಗೌಡ ಬೇಸರ

ನಟಿ ಭವ್ಯಾ ಗೌಡ ಅಕ್ಕನ ಹೂವಿನ ಅಂಗಡಿಗೆ ನುಗ್ಗಿ ಕಿರಿಕ್‌ ಮಾಡಿದ ಯುವತಿ!

ಬಿಗ್ ಬಾಸ್ ಮಾಜಿ ಸ್ಪರ್ಧಿ ಹಾಗೂ ‘ಕರ್ಣ’ ಧಾರಾವಾಹಿಯ ನಟಿ ಭವ್ಯಾ ಗೌಡ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಅಭಿಮಾನಿಯೊಬ್ಬಳ ಅತಿರೇಕದ ವರ್ತನೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಭವ್ಯಾ ಸಹೋದರಿ ದಿವ್ಯಾ ಗೌಡ ಅವರ ಹೂವಿನ ಅಂಗಡಿಗೆ ಯುವತಿಯೊಬ್ಬಳು ಬಟ್ಟೆಬರೆ ಸಮೇತ ಬಂದು ಕಿರಿಕ್ ಮಾಡಿದ್ದಾಳೆ.

Rishab shetty: `ಕಾಂತಾರ' ಮುಂದಿನ ಭಾಗದ ಬಗ್ಗೆ ರಿಷಬ್‌ ಬಿಗ್‌ ಅಪ್‌ಡೇಟ್‌! ಫ್ಯಾನ್ಸ್‌ ಖುಷ್‌

`ಕಾಂತಾರ' ಮುಂದಿನ ಭಾಗದ ಬಗ್ಗೆ ರಿಷಬ್‌ ಬಿಗ್‌ ಅಪ್‌ಡೇಟ್‌!

Kantara: ಮೂಲಗಳ ಪ್ರಕಾರ, ಕಾಂತಾರದ ಮುಂದಿನ ಅಧ್ಯಾಯದಲ್ಲೂ ದೈವಿಕ ಶಕ್ತಿಗಳು ಕಥೆಯ ಕೇಂದ್ರಬಿಂದುವಾಗಲಿವೆ. ರಾಜಮನೆತನ ಮತ್ತು ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷ ಮತ್ತೊಂದು ಹಂತಕ್ಕೆ ಸಾಗಲಿದ್ದು, ಹೊಸ ತಲೆಮಾರಿನ ಕಥೆಯೊಂದಿಗೆ ದೈವ, ನಂಬಿಕೆ ಮತ್ತು ಸಂಪ್ರದಾಯಗಳ ಹೋರಾಟವನ್ನು ಚಿತ್ರಿಸುವ ಸಾಧ್ಯತೆ ಇದೆ.

ಸಿಎಂ ʻದಳಪತಿʼ ವಿಜಯ್ ರೀತಿ ತಮಿಳುನಾಡು ರಾಜಕೀಯಕ್ಕೆ ಕಾಲಿಡ್ತಾರಾ ನಟ ಧನುಷ್? ಸುಳಿವು ಕೊಡ್ತು ಅದೊಂದು ಬೆಳವಣಿಗೆ!

CM ವಿಜಯ್ ಹಾದಿಯಲ್ಲೇ ರಾಜಕೀಯಕ್ಕೆ ಧನುಷ್ ಎಂಟ್ರಿ? ಸಿಕ್ಕೇ ಬಿಡ್ತು ಸುಳಿವು!

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿ ಮುಖ್ಯಮಂತ್ರಿ ಗದ್ದುಗೆ ಏರಿದ ದಳಪತಿ ವಿಜಯ್ ಅವರ ಐತಿಹಾಸಿಕ ಯಶಸ್ಸು ಈಗ ನಟ ಧನುಷ್ ಅವರಿಗೂ ರಾಜಕೀಯ ಪ್ರೇರಣೆ ನೀಡಿದಂತಿದೆ. ಇತ್ತೀಚೆಗೆ ಚೆನ್ನೈನಲ್ಲಿ ನಡೆದ 'ಆಲ್ ಇಂಡಿಯಾ ಧನುಷ್ ಫ್ಯಾನ್ಸ್ ಅಸೋಸಿಯೇಷನ್' ಸಭೆಯಲ್ಲಿ ರಾಜಕೀಯ ಪಕ್ಷಗಳ ಮಾದರಿಯಲ್ಲೇ ವಿಶೇಷ ಧ್ವಜವೊಂದನ್ನು ಬಿಡುಗಡೆ ಮಾಡಲಾಗಿದೆ.

Varanasi Movie: ʼವಾರಣಾಸಿʼ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು? ವೈರಲ್ ಆಗಿರುವ ಫೋಟೊದ ಅಸಲಿ ಸತ್ಯ ಏನು?

ʼವಾರಣಾಸಿʼ ಚಿತ್ರದಲ್ಲಿ ಶ್ರೀರಾಮನಾಗಿ ಮಹೇಶ್ ಬಾಬು?

Mahesh Babu: ವೈರಲ್‌ ಆಗಿರುವ ದೃಶ್ಯವು ಗ್ರಾಮೀಣ ವಾತಾವರಣದ ನಡುವೆ ಇರುವಂತೆ ಕಾಣುತ್ತದೆ. ಅಸಲಿಗೆ ಲೀಕ್ ಆಗಿದ್ದು ಎನ್ನಲಾಗುತ್ತಿರುವ ಫೋಟೊ ನಿಜವಾದ ಫೋಟೊ ಅಲ್ಲ, ಬದಲಿಗೆ ಅಭಿಮಾನಿಗಳು ಕ್ರಿಯೇಟ್ ಮಾಡಿರುವ ನಕಲಿ ಫೋಟೊ. ಎಐ ಹಾಗೂ ಗ್ರಾಫಿಕ್ಸ್ ಬಳಸಿ ಯಾರೋ ಈ ಫೋಟೊ ಸೃಷ್ಟಿಸಿದ್ದು, ಅದನ್ನೇ ಹಲವರು ‘ವಾರಣಾಸಿ’ ಸೆಟ್​​ನ ಲೀಕ್ಡ್ ಫೋಟೊ ಎಂಬ ಒಕ್ಕಣೆಯೊಟ್ಟಿಗೆ ಹಂಚಿಕೊಳ್ಳುತ್ತಿದ್ದಾರೆ.

ಬುಡಕಟ್ಟು ಮಹಿಳೆಯಾದ ʻನ್ಯಾಷನಲ್‌ ಕ್ರಶ್‌ʼ; ‘ಮೈಸಾ’ ಟೀಸರ್ ನೋಡಿ ʻರಶ್ಮಿಕಾ 2.0ʼ ಎಂದ ಚಿತ್ರತಂಡ!

'ಮೈಸಾ' ಚಿತ್ರದಲ್ಲಿ ನಿಮಗೆ ರಶ್ಮಿಕಾ 2.0 ಕಾಣಿಸ್ತಾರೆ ಎಂದ ಚಿತ್ರತಂಡ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ತಮ್ಮ ವೃತ್ತಿಜೀವನದಲ್ಲೇ ಚೊಚ್ಚಲ ಬಾರಿಗೆ ಬುಡಕಟ್ಟು ಮಹಿಳೆಯಾಗಿ 'ಮೈಸಾ' ಎಂಬ ಮಹಿಳಾ ಪ್ರಧಾನ ಆಕ್ಷನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ರವೀಂದ್ರ ಪುಲ್ಲೆ ನಿರ್ದೇಶನದ ಈ ಭಾರಿ ಬಜೆಟ್ ಚಿತ್ರಕ್ಕಾಗಿ ರಶ್ಮಿಕಾ ಯಾವುದೇ ಡ್ಯೂಪ್ ಇಲ್ಲದೆ ಮಾರ್ಷಲ್ ಆರ್ಟ್ಸ್ ಸಾಹಸಗಳನ್ನು ನಿರ್ವಹಿಸಿದ್ದು, ಚಿತ್ರತಂಡ ಇದನ್ನು ‘ರಶ್ಮಿಕಾ 2.0’ ಎಂದು ಕರೆದಿದೆ.

ʻಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುವ ವ್ಯಕ್ತಿʼ: ಪ್ರಜ್ವಲ್‌ ದೇವರಾಜ್‌‌ ನಿಸ್ವಾರ್ಥ ಗುಣವನ್ನು ಕೊಂಡಾಡಿದ ಪತ್ನಿ ರಾಗಿಣಿ ಚಂದ್ರನ್‌

ಪತಿ ಪ್ರಜ್ವಲ್‌ ದೇವರಾಜ್‌‌ ನಿಸ್ವಾರ್ಥ ಗುಣವನ್ನು ಕೊಂಡಾಡಿದ ಪತ್ನಿ ರಾಗಿಣಿ

ಪ್ರಜ್ವಲ್ ದೇವರಾಜ್ ನಟನೆಯ 'ಕರಾವಳಿ' ಚಿತ್ರದ ಟ್ರೇಲರ್‌ನಲ್ಲಿ ನಾಯಕನ ಧ್ವನಿಯನ್ನು ಬದಲಿಸಿ ಬೇರೆಯವರಿಂದ ಡಬ್ಬಿಂಗ್ ಮಾಡಿಸಿರುವುದು ಮತ್ತು ಸಂಭಾವನೆ ಬಾಕಿ ವಿಚಾರ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ವಿವಾದ ಸೃಷ್ಟಿಸಿದೆ. ಈ ಗದ್ದಲದ ನಡುವೆ ಪ್ರಜ್ವಲ್ ಪತ್ನಿ ರಾಗಿಣಿ ಚಂದ್ರನ್ ಇನ್‌ಸ್ಟಾಗ್ರಾಮ್‌ನಲ್ಲಿ ಪತಿಯ ನಿಸ್ವಾರ್ಥ ವ್ಯಕ್ತಿತ್ವ ಹಾಗೂ ಮೌಲ್ಯಗಳನ್ನು ಕೊಂಡಾಡಿದ್ದಾರೆ.

ಜಿಯೋಹಾಟ್‌ಸ್ಟಾರ್‌ನಲ್ಲಿ ಇತಿಹಾಸ ಸೃಷ್ಟಿಸಿದ 'ಪ್ರೀತಮ್ ಆಂಡ್ ಪೆಡ್ರೊ'; ರಾಜ್‌ಕುಮಾರ್ ಹಿರಾನಿ OTT ಎಂಟ್ರಿಗೆ ದಾಖಲೆಯ ಓಪನಿಂಗ್!

OTT ಲೋಕದಲ್ಲಿ ಇತಿಹಾಸ ಸೃಷ್ಟಿಸಿದ 'ಪ್ರೀತಮ್ ಆಂಡ್ ಪೆಡ್ರೊ' ವೆಬ್‌ ಸೀರೀಸ್

ಬಾಲಿವುಡ್‌ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸಾರಥ್ಯದ ಚೊಚ್ಚಲ ಒಟಿಟಿ ವೆಬ್ ಸರಣಿ 'ಪ್ರೀತಮ್ ಆಂಡ್ ಪೆಡ್ರೊ' ಜಿಯೋಹಾಟ್‌ಸ್ಟಾರ್ ಪ್ಲಾಟ್‌ಫಾರ್ಮ್‌ನಲ್ಲಿ ಸಾರ್ವಕಾಲಿಕ ವೀಕ್ಷಣೆ ಪಡೆದು, ದಾಖಲೆ ಬರೆದಿದೆ. ಅರ್ಷದ್ ವಾರ್ಸಿ ಮುಖ್ಯ ಭೂಮಿಕೆಯಲ್ಲಿರುವ ಈ ಶೋ ಸದ್ಯ ಕನ್ನಡ ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳಲ್ಲಿ ಧೂಳೆಬ್ಬಿಸುತ್ತಿದೆ.

40 ಅದೃಷ್ಟಶಾಲಿ ಅಭಿಮಾನಿಗಳ ಕನಸು ನನಸು: ಮುಂಬೈನಲ್ಲಿ ಶಾರುಖ್ ಖಾನ್ ಭೇಟಿಯಾಗಿ ಆಸೆ ಈಡೇರಿಸಿಕೊಂಡ ಫ್ಯಾನ್ಸ್

ಶಾರುಖ್ ಖಾನ್ ಜತೆ ಹರಟೆ ಹೊಡೆದು, ಫೋಟೋ ಕ್ಲಿಕ್ಕಿಸಿಕೊಂಡ 40 ಅದೃಷ್ಟಶಾಲಿಗಳು

ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರನ್ನು ಮುಖಾಮುಖಿ ಭೇಟಿಯಾಗುವ ಮೂಲಕ ದೇಶದ ವಿವಿಧ ಮೂಲೆಗಳಿಂದ ಬಂದಿದ್ದ 40 ಅದೃಷ್ಟಶಾಲಿ ಗ್ರಾಹಕರು ತಮ್ಮ ಜೀವಮಾನದ ದೊಡ್ಡ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಐಟಿಸಿಯ ಸನ್‌ಫೀಸ್ಟ್ ಡಾರ್ಕ್ ಫ್ಯಾಂಟಸಿ ಹಮ್ಮಿಕೊಂಡಿದ್ದ 'ಹರ್ ದಿಲ್ ಕಿ ಫ್ಯಾಂಟಸಿ' ಅಭಿಯಾನದ ಭಾಗವಾಗಿ ಮುಂಬೈನಲ್ಲಿ ಈ ಭಾವುಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತೆರೆಮೇಲೆ ಬರಲಿದೆ ಸೌರವ್‌ ಗಂಗೂಲಿ ಬಯೋಪಿಕ್: 'ದಾದಾ' ಪಾತ್ರದಲ್ಲಿ ರಾಜ್‌ಕುಮಾರ್ ರಾವ್, ಗಮನಸೆಳೆದ ಫಸ್ಟ್ ಲುಕ್!

ದಾದಾ ಸಿನಿಮಾ ಫಸ್ಟ್‌ಲುಕ್ ರಿಲೀಸ್; ಗಂಗೂಲಿ ಪಾತ್ರದಲ್ಲಿ ರಾಜ್‌ಕುಮಾರ್ ರಾವ್

ಟೀಮ್ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಜನ್ಮದಿನದ ಅಂಗವಾಗಿ ಅವರ ಬಹುನಿರೀಕ್ಷಿತ ಬಯೋಪಿಕ್ 'ದಾದಾ – ದಿ ಸೌರವ್ ಗಂಗೂಲಿ ಸ್ಟೋರಿ' ಚಿತ್ರದ ಅಧಿಕೃತ ಫಸ್ಟ್-ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಾಜ್‌ಕುಮಾರ್ ರಾವ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

‌ʻರಾಕಿಂಗ್‌ ಸ್ಟಾರ್‌ʼ ಯಶ್‌ಗೆ ಸ್ಪೆಷಲ್‌ ಥ್ಯಾಂಕ್ಸ್‌ ಹೇಳಿದ ʻಟಾಕ್ಸಿಕ್‌ʼ ನಟಿ ಹುಮಾ ಖುರೇಷಿ; ಏನ್‌ ಕಾರಣ?

ʻಟಾಕ್ಸಿಕ್‌ʼ ಹೀರೋ ಯಶ್‌ಗೆ ಸ್ಪೆಷಲ್‌ ಥ್ಯಾಂಕ್ಸ್‌ ಹೇಳಿದ ನಟಿ ಹುಮಾ ಖುರೇಷಿ

ಬಾಲಿವುಡ್ ನಟಿ ಹುಮಾ ಖುರೇಷಿ ಬೆಂಗಳೂರಿಗೆ ಭೇಟಿ ನೀಡಿ, ತಮ್ಮ 'ಬೇಬಿ ಡು ಡೈ ಡು' ಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ನೀಡಿದ ಯಶ್ ಹಾಗೂ ನಿರ್ದೇಶಕಿ ಗೀತೂ ಮೋಹನ್ ದಾಸ್ ಅವರಿಗೆ ವಿಶೇಷ ಧನ್ಯವಾದ ಅರ್ಪಿಸಿದ್ದಾರೆ. ಇದೇ ವೇಳೆ 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಜೊತೆ ನಟಿಸುತ್ತಿರುವ ಅನುಭವ ಹಂಚಿಕೊಂಡಿದ್ದಾರೆ.

ಕಿಯಾರಾ ಅಡ್ವಾಣಿ ಜೊತೆ ಯಶ್‌ ಭರ್ಜರಿ ರೊಮ್ಯಾನ್ಸ್;‌ 'ಟಾಕ್ಸಿಕ್' ಚಿತ್ರದ 'ತಬಾಹಿ' ವಿಡಿಯೋ ಸಾಂಗ್‌ ರಿಲೀಸ್!

Toxic: ʻತಬಾಹಿʼ ಹಾಡಿನಲ್ಲಿ ಕಿಯಾರಾಗೆ ಮುತ್ತಿನ ಮಳೆಗರೆದ ಯಶ್!

Tabaahi song out: ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಬಹುನಿರೀಕ್ಷಿತ ಮೊದಲ ವಿಡಿಯೋ ಸಾಂಗ್ 'ತಬಾಹಿ' ಬಿಡುಗಡೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ನಡುವಿನ ಬೋಲ್ಡ್ ಕೆಮಿಸ್ಟ್ರಿ ಇಂಟರ್ನೆಟ್‌ನಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ.

Dose OTT Release: ಒಂದೊಳ್ಳೆ ಸೈಕಲಾಜಿಕಲ್ ಥ್ರಿಲ್ಲರ್ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ಒಂದೊಳ್ಳೆ ಸೈಕಲಾಜಿಕಲ್ ಥ್ರಿಲ್ಲರ್ ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

Dose OTT Release: ಡೋಸ್‌ ಚಿತ್ರದಲ್ಲಿ ಸಿಜು ವಿಲ್ಸನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ, ಜೊತೆಗೆ ಅಶ್ವಿನ್ ಕುಮಾರ್, ದೃಶ್ಯ ರೇಘುನಾಥ್, ಕ್ರಿಶಾ ಕುರುಪ್, ಜಗದೀಶ್, ರೋನಿ ಡೇವಿಡ್, ಎಸ್‌ವಿ ಕೃಷ್ಣ ಶಂಕರ್, ಮಧುಪಾಲ್ ಮತ್ತು ಹಲವಾರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಭಿಲಾಷ್ ಆರ್. ನಾಯರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಶಾಂತೋ ಥಾಮಸ್ ನಿರ್ಮಿಸಿದ್ದಾರೆ.

Kiara Advani: ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ಇಂದೇ ರಿಲೀಸ್‌!

‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ಇಂದೇ ರಿಲೀಸ್‌!

Kiara Advani: ತಬಾಹಿ ಬಿಡುಗಡೆಯಾಗುವ ನಿರೀಕ್ಷೆಯಿದ್ದರೂ, ಇತ್ತೀಚಿನ ಟೀಸರ್ ರೋಮಾಂಚನವನ್ನು ಹೆಚ್ಚಿಸಿದೆ. ಕಿಯಾರಾ ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ತಬಾಹಿ’ ಹಾಡಿನಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಕಿಯಾರಾ ಅಡ್ವಾಣಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ.

Aarti Ravi: ಹೊಸ ಜೀವನದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ನಟ ರವಿ ಮೋಹನ್

ಹೊಸ ಜೀವನದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ನಟ ರವಿ ಮೋಹನ್

Aarti Ravi: ಕಳೆದ ಕೆಲವು ವರ್ಷಗಳಿಂದ ತಮ್ಮ ಪತ್ನಿ ಆರತಿ ರವಿ ಮತ್ತು ನಂತರ ತಮ್ಮ ಗೆಳತಿ ಕೆನೀಶಾ ಫ್ರಾನ್ಸಿಸ್ ಅವರಿಂದ ಬೇರ್ಪಟ್ಟ ನಂತರ ತಮ್ಮ ವೈಯಕ್ತಿಕ ಜೀವನದಲ್ಲಿ ಏರುಪೇರುಗಳನ್ನು ಅನುಭವಿಸಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ, ವಿಚ್ಛೇದನ ಅಂತಿಮವಾಗುವವರೆಗೆ ಸಿನಿಮಾ ರಂಗವನ್ನು ತೊರೆಯುವ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ನಟ ಘೋಷಿಸಿದರು. ತಮ್ಮ ತಪ್ಪುಗಳಿಂದ ನೋಯಿಸಿದವರಿಗೆ ಅವರು ಕ್ಷಮೆಯಾಚಿಸಿದರು.

ಅದ್ದೂರಿಯಾಗಿ ಬಿಡುಗಡೆಯಾಯ್ತು ‘ಕರಾವಳಿ’ ಟ್ರೈಲರ್: ಕಂಬಳದ ಕ್ರೀಡೆ, ಸಸ್ಪೆನ್ಸ್ ಕಥೆಗೆ ಪ್ರೇಕ್ಷಕರು ಫಿದಾ

ರಿಲೀಸ್‌ ಆಯ್ತು ‌ʻಕರಾವಳಿʼ ಟ್ರೈಲರ್; ನಟ ಪ್ರಜ್ವಲ್‌ ವಾಯ್ಸ್‌ ಮಿಸ್ಸಿಂಗ್!

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಗುರುದತ್ ಗಾಣಿಗ ನಿರ್ದೇಶನದ ‘ಕರಾವಳಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಟ್ರೆಂಡ್ ಸೃಷ್ಟಿಸುತ್ತಿದೆ. ಸಾಂಸ್ಕೃತಿಕ ಕ್ರೀಡೆ ಕಂಬಳವನ್ನು ಅತ್ಯಂತ ರೋಮಾಂಚಕಾರಿಯಾಗಿ ಚಿತ್ರೀಕರಿಸಲಾಗಿದೆ. ಈ ಚಿತ್ರವು ಜುಲೈ 24 ರಂದು ಬಿಡುಗಡೆಯಾಗಲಿದೆ.

Rishab Shetty Birthday: ರಿಷಬ್ ಶೆಟ್ಟಿ ಫೌಂಡೇಶನ್‌ನಿಂದ ಔಟ್‌ ಆಯ್ತು ಸ್ಪೆಷಲ್‌ ವಿಡಿಯೊ;  ಗ್ರಾಮಸ್ಥರಿಂದ  ಕೃತಜ್ಞತೆ

ರಿಷಬ್ ಶೆಟ್ಟಿ ಫೌಂಡೇಶನ್‌ನಿಂದ ಔಟ್‌ ಆಯ್ತು ಸ್ಪೆಷಲ್‌ ವಿಡಿಯೊ

Rishab Shetty Birthday: ಈ ಒಂದು ಫೌಂಡೇಶನ್ ಮೂಲಕವೇ ಶಾಲೆಯ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಎರಡು ವರ್ಷದ ಸ್ಕಾಲರ್‌ಶಿಪ್‌ ಕೂಡ ಕೊಡುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್‌ಶಿಪ್ ತುಂಬಾನೆ ಸಹಾಯವಾಗಿದೆ. ರಿಷಬ್ ಶೆಟ್ರ ಅವರ ಫೌಂಡೇಶನ್‌ನಿಂದ ಸ್ಕಾಲರ್‌ಶಿಪ್ ಪಡೆದ ಮಕ್ಕಳು ತಮ್ಮ ಮನದ ಮಾತುಗಳನ್ನು ಹೇಳಿಕೊಂಡಿದ್ದಾರೆ.

ʻನನ್ನ ಜೀವನವನ್ನು ನಾನು ಊಹಿಸಿದ್ದಕ್ಕಿಂತಲೂ ಹೆಚ್ಚು ನೀವು ಸುಂದರವಾಗಿಸಿದ್ದೀರಿʼ; ಪತಿ ರಿಷಬ್‌ ಶೆಟ್ಟಿಗೆ ವಿಶ್‌ ಮಾಡಿದ ಪತ್ನಿ ಪ್ರಗತಿ ಶೆಟ್ಟಿ

ʻನನ್ನ ಪುಟ್ಟ ಪ್ರಪಂಚದ ಬೆಳಕು ನೀವುʼ; ರಿಷಬ್‌ಗೆ ವಿಶ್ ಮಾಡಿದ ಪತ್ನಿ ಪ್ರಗತಿ

ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರ ಜನ್ಮದಿನದ ಪ್ರಯುಕ್ತ ಪತ್ನಿ ಪ್ರಗತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದಾರೆ. ತನ್ನ ಪುಟ್ಟ ಬದುಕನ್ನು ಸುಂದರವಾಗಿಸಿದ, ಆತ್ಮವಿಶ್ವಾಸ ತುಂಬಿದ ಪ್ರೀತಿಯ ಪತಿಗೆ ಧನ್ಯವಾದ ತಿಳಿಸಿರುವ ಅವರು, ತಮ್ಮ ಸುದೀರ್ಘ ದಾಂಪತ್ಯ ಪಯಣದ ಸಿಹಿ-ಕಹಿ ನೆನಪುಗಳನ್ನು ಸ್ಮರಿಸಿದ್ದಾರೆ.

Toxic: ʼಟಾಕ್ಸಿಕ್‌ʼ ಚಿತ್ರದ 'ಲೇಡೀಸ್ ಆ್ಯಂಡ್‌ ಲೇಡೀಸ್' ಟೀಸರ್‌ ಟೀಕೆಗೆ ಖಡಕ್‌ ಉತ್ತರ ಕೊಟ್ಟ ಬೆನೆಡಿಕ್ಟ್ ಗ್ಯಾರೆಟ್

'ಲೇಡೀಸ್ ಆ್ಯಂಡ್‌ ಲೇಡೀಸ್' ಟೀಸರ್‌ ಟೀಕೆಗೆ ಖಡಕ್‌ ಉತ್ತರ ಕೊಟ್ಟ ನಟ

Yash: ಟಾಕ್ಸಿಕ್ ಚಿತ್ರದಲ್ಲಿ ಬಿಡುಗಡೆಯಾಗಿರುವ ಟೀಸರ್ ನಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಸೇರಿದಂತೆ ಹಲವಾರು ಪ್ರಮುಖ ನಟಿಯರು ನಟಿಸಿಸಿದ್ದಾರೆ. ಆದರೆ, ಈ ನಟಿಯರ ಸಂಭಾಷಣೆ ಮಾತ್ರ ನೀಡಿಲ್ಲ. ಮಕ್ಕಳೇ ದೂರ ಇರಿ, ಹೆತ್ತವರೇ ನಿಮ್ಮ ಮಕ್ಕಳನ್ನು ದೂರ ಇರಿಸಿ, ಅಜ್ಜಿಯರೇ ನಿಮ್ಮ ಮೊಮ್ಮಕ್ಕಳನ್ನು ದೂರ ಇರಿಸಿ, ಮುುತ್ತಜ್ಜಿಯರೇ ನೀವು ಮೊಮ್ಮಕ್ಕಳನ್ನು ದೂರ ಇರಿಸಿ ಎಂಬ ಎಚ್ಚರಿಕೆಯ ಸಂದೇಶದೊಂದಿಗೆ ಟೀಸರ್ (Teaser) ಪ್ರಾರಂಭವಾಗಿತ್ತು.

ʻರಾಮಾಯಣʼ ಸಿನಿಮಾ ನಿರ್ಮಾಪಕರ ಜೊತೆ ಭರ್ಜರಿ ಡೀಲ್‌ ಕುದುರಿಸಿದ ಕರಣ್‌ ಜೋಹರ್;‌ ಎಷ್ಟಕ್ಕೇ ಸೇಲ್‌ ಆಯ್ತು ವಿತರಣೆ ಹಕ್ಕುಗಳು?

‘ರಾಮಾಯಣ’ ಚಿತ್ರದ ಭಾರತದ ವಿತರಣೆ ಹಕ್ಕುಗಳು ದುಬಾರಿ ಮೊತ್ತಕ್ಕೆ ಸೇಲ್

ನಿತೇಶ್‌ ತಿವಾರಿ ಅವರ ‘ರಾಮಾಯಣ’ ಸಿನಿಮಾದ ಭಾರತೀಯ ಥಿಯೇಟ್ರಿಕಲ್ ವಿತರಣಾ ಹಕ್ಕುಗಳನ್ನು ಕರಣ್ ಜೋಹರ್ ಒಡೆತನದ ಧರ್ಮ ಪ್ರೊಡಕ್ಷನ್ಸ್ ಬರೋಬ್ಬರಿ 250 ಕೋಟಿ ರೂಪಾಯಿಗೆ ತನ್ನದಾಗಿಸಿಕೊಂಡಿದೆ. ರಣಬೀರ್ ಕಪೂರ್ ಹಾಗೂ ರಾಕಿಂಗ್ ಸ್ಟಾರ್ ಯಶ್ ನಟನೆಯ ಈ ಸಿನಿಮಾದ ಮೊದಲ ಭಾಗವು 2026ರ ದೀಪಾವಳಿಗೆ ತೆರೆಕಾಣಲಿದೆ.

ʻಕರಾವಳಿ’ ಚಿತ್ರದ ಟ್ರೇಲರ್‌ನಲ್ಲಿ ಧ್ವನಿ ಇಲ್ಲ, ಈವೆಂಟ್‌ಗೂ ಬರಲಿಲ್ಲ! ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟ ಪ್ರಜ್ವಲ್ ದೇವರಾಜ್

ಮನೆಯಲ್ಲೇ ಕೂತಿದ್ದೀನಿ, ನನಗೂ ಕಷ್ಟ ಇರಲ್ವಾ?; ನಟ ಪ್ರಜ್ವಲ್ ದೇವರಾಜ್ ಬೇಸರ

‘ಕರಾವಳಿ’ ಚಿತ್ರದ ಟ್ರೇಲರ್‌ನಲ್ಲಿ ತಮ್ಮ ಧ್ವನಿ ಬಳಸದ ಹಾಗೂ ಬಾಕಿ ಇರುವ ಸಂಭಾವನೆ ನೀಡದ ಕಾರಣ ನಟ ಪ್ರಜ್ವಲ್ ದೇವರಾಜ್ ಚಿತ್ರತಂಡದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ರಾಜ್ ಬಿ. ಶೆಟ್ಟಿ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ನಟ ಪ್ರಜ್ವಲ್‌ ಸ್ಪಷ್ಟಪಡಿಸಿದ್ದಾರೆ.

ʻನನ್ನ ಅನ್ಶು, ನೀನು ಯಾವಾಗಲೂ ನನ್ನವಳೇ ಆಗಿರುತ್ತೀಯಾʼ; ತಂಗಿಯನ್ನು ಧಾರೆ ಎರೆದು ಭಾವುಕರಾದ ಅಣ್ಣ ಅರ್ಜುನ್ ಕಪೂರ್

ಗಂಡನ ಮನೆಗೆ ಹೊರಟ ಅನ್ಶುಲಾಗೆ ಭಾವುಕ ಪತ್ರ ಬರೆದ ಅಣ್ಣ ಅರ್ಜುನ್‌ ಕಪೂರ್

ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಸಹೋದರಿ ಅನ್ಶುಲಾ ಕಪೂರ್ ತಮ್ಮ ಬಹುಕಾಲದ ಗೆಳೆಯ ರೋಹನ್ ಠಕ್ಕರ್ ಅವರನ್ನು ಪಂಜಾಬಿ ಮತ್ತು ಗುಜರಾತಿ ಸಂಪ್ರದಾಯದಂತೆ ಅದ್ಧೂರಿಯಾಗಿ ವಿವಾಹವಾಗಿದ್ದಾರೆ. ಸಹೋದರಿಯ ಮದುವೆ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಂಡಿರುವ ಅರ್ಜುನ್ ಕಪೂರ್, ತಂಗಿಯ ಮುಖದ ನಗು ಎಂದಿಗೂ ಮಾಯವಾಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದಾರೆ.

5 ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿದ ನಟಿ ಕೃತಿ ಸನೋನ್; ಈ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು?

ನಟಿ ಕೃತಿ ಸನೋನ್ ಅಂಡಾಣು ಫ್ರೀಜಿಂಗ್ ಮಾಡಿಸಿದ್ದೇಕೆ? ಇಲ್ಲಿದೆ ಉತ್ತರ

ಬಾಲಿವುಡ್‌ನ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಕೃತಿ ಸನೋನ್ ತಮ್ಮ 35ನೇ ವಯಸ್ಸಿನಲ್ಲಿ ಸಾಮಾಜಿಕ ಮತ್ತು ವಯಸ್ಸಿನ ಒತ್ತಡಕ್ಕೆ ಮಣಿಯದೆ ಕೆಲವು ವರ್ಷಗಳ ಹಿಂದೆಯೇ ಅಂಡಾಣು ಫ್ರೀಜ್ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ. 'ಮಿಮಿ' ಚಿತ್ರದ ಚಿತ್ರೀಕರಣದ ಬಿಡುವಿನಲ್ಲಿ ಈ ಕಠಿಣ ವೈದ್ಯಕೀಯ ಪ್ರಕ್ರಿಯೆಗೆ ಒಳಗಾಗಿದ್ದ ಅವರು, ಅಂಡಾಣು ಫ್ರೀಜ್ ಮಾಡಿದ್ದಾರೆ. ಆ ಜರ್ನಿ ಬಗ್ಗೆ ಅವರೇ ಹೇಳಿಕೊಂಡಿದ್ದಾರೆ.

Loading...