ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

BBK 12: 'ಬಿಗ್‌ ಬಾಸ್‌' ಅಡ್ಡಕ್ಕೆ ಧ್ರುವಂತ್‌ - ರಕ್ಷಿತಾ ರೀ ಎಂಟ್ರಿ; ಅದಕ್ಕೂ ಮುನ್ನ ನಡೀತು ಹೈಡ್ರಾಮಾ, ಇವರಿಬ್ರು ವಾಪಸ್‌ ಮನೆಯೊಳಗೆ ಬಂದಿದ್ದೇಗೆ?

'ಬಿಗ್‌ ಬಾಸ್‌' ಮನೆಗೆ ಧ್ರುವಂತ್‌ - ರಕ್ಷಿತಾ ವಾಪಸ್‌ ಬಂದಿದ್ದು ಹೇಗೆ?

BBK 12 Update: ಬಿಗ್ ಬಾಸ್ ಕನ್ನಡ 12ರ ಸೀಕ್ರೆಟ್ ರೂಮ್ ಟ್ವಿಸ್ಟ್ ಮುಕ್ತಾಯಗೊಂಡಿದೆ. ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರನ್ನು ವಾಪಸ್ ಮುಖ್ಯ ಮನೆಗೆ ಕಳುಹಿಸಿಕೊಟ್ಟಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿ ಧ್ರುವಂತ್ ಜೊತೆ ಇರಲಾರದೆ ರಕ್ಷಿತಾ ಗೋಳಾಡಿದ್ದು, ಸುದೀಪ್ ಅವರ ಎದುರು ಮನೆಗೆ ಹೋಗಲು ಹಠ ಹಿಡಿದಿದ್ದರು.

The Script Craft: ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ಪ್ರಭಾಸ್‌; ನಿರ್ದೇಶಕರಿಗೆ, ಕಥೆಗಾರರಿಗೆ ಇಲ್ಲಿದೆ ಸಖತ್‌ ಚಾನ್ಸ್!‌

ಹೊಸ ಪ್ರತಿಭೆಗಳ ಬೆಂಬಲಕ್ಕೆ ನಿಂತ ʻಬಾಹುಬಲಿʼ ನಟ ಪ್ರಭಾಸ್‌

The Script Craft Launch: ಪ್ಯಾನ್‌ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ಕೇವಲ ಸಿನಿಮಾಗಳಲ್ಲಷ್ಟೇ ಅಲ್ಲದೆ, ಹೊಸ ಪ್ರತಿಭೆಗಳನ್ನು ಬೆಳೆಸುವಲ್ಲಿಯೂ ಮುಂಚೂಣಿಯಲ್ಲಿದ್ದಾರೆ. ಅವರು ಇಂದು ಘೋಷಿಸಿರುವ 'ದಿ ಸ್ಕ್ರಿಪ್ಟ್ ಕ್ರಾಫ್ಟ್' ಅಭಿಯಾನವು ಪ್ರಪಂಚದಾದ್ಯಂತ ಇರುವ ಕಿರುಚಿತ್ರ ನಿರ್ದೇಶಕರು ಮತ್ತು ಕಥೆಗಾರರಿಗೆ ಸಿನಿಮಾ ರಂಗಕ್ಕೆ ನೇರ ಪ್ರವೇಶ ಒದಗಿಸುವ ಗುರಿಯನ್ನು ಹೊಂದಿದೆ.

Jana Nayagan: ʻದಳಪತಿʼ ವಿಜಯ್‌ ಕೊನೇ ಚಿತ್ರವು ಟಾರ್ಗೆಟ್‌ ಆಯ್ತಾ? ʻಜನ ನಾಯಗನ್‌ʼ ಎದುರು ಬರ್ತಿದೆಯಾ ಮತ್ತೊಂದು ತಮಿಳು ಸಿನಿಮಾ?

Thalapathy Vijay: ತಮಿಳುನಾಡಿನಲ್ಲಿ ʻಜನ ನಾಯಗನ್‌ʼ ಟಾರ್ಗೆಟ್‌ ಆಯ್ತಾ?

Jana Nayagan Movie Update: ದಳಪತಿ ವಿಜಯ್ ಅವರ ಕೊನೆಯ ಚಿತ್ರ 'ಜನ ನಾಯಗನ್' 2026ರ ಜನವರಿ 9ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕನ್ನಡದ ಕೆವಿಎನ್ (KVN) ಸಂಸ್ಥೆ ನಿರ್ಮಿಸಿರುವ ಈ ಚಿತ್ರಕ್ಕೆ ತಮಿಳುನಾಡಿನ ರಾಜಕೀಯ ಮೇಲಾಟಗಳ ನಡುವೆ ಪೈಪೋಟಿ ಎದುರಾಗಿದೆ. ಶಿವಕಾರ್ತಿಕೇಯನ್ ಅಭಿನಯದ 'ಪರಾಶಕ್ತಿ' ಚಿತ್ರವು ಜನವರಿ 14ರ ಬದಲು ವಿಜಯ್ ಚಿತ್ರ ಬಿಡುಗಡೆಯಾದ ಮರುದಿನವೇ (ಜ.10) ತೆರೆಗೆ ಬರಲಿದೆ ಎಂಬ ಸುದ್ದಿ ಹಬ್ಬಿದೆ.

BBK 12: ಈ ವಾರ ಕೂಡ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದರೂ ಇಬ್ಬರು ಸ್ಪರ್ಧಿಗಳು ಬಿಗ್‌ ಬಾಸ್‌ನಿಂದ ಹೊರಬೀಳುವುದು ಖಚಿತ!

BBK 12: ಈ ವಾರ ವೋಟಿಂಗ್‌ ಲೈನ್‌ ತೆರೆದಿಲ್ಲ; ಆದ್ರೂ ಇಬ್ರೂ ಎಲಿಮಿನೇಟ್!

BBK 12 Weekend Twist: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ ಈ ವಾರವೂ ನಾಮಿನೇಟ್ ಆದ ಸ್ಪರ್ಧಿಗಳಿಗೆ ಎಲಿಮಿನೇಷನ್ ಭೀತಿ ಇಲ್ಲ. ಯಾಕೆಂದರೆ ಕಳೆದ ವಾರದಂತೆ ಈ ವಾರವೂ ವೋಟಿಂಗ್ ಲೈನ್ಸ್ ತೆರೆದಿಲ್ಲ. ಆದರೆ, ಮನೆಯೊಳಗೆ ವೈಲ್ಡ್ ಕಾರ್ಡ್ ಸ್ಪರ್ಧಿಗಳಂತೆ ಮಿಂಚುತ್ತಿದ್ದ ಚೈತ್ರಾ ಕುಂದಾಪುರ ಮತ್ತು ರಜತ್ ಅವರು ಈ ವಾರ ಮನೆಯಿಂದ ಹೊರಹೋಗುವುದು ಖಚಿತ ಎನ್ನಲಾಗುತ್ತಿದೆ.

ʻಧುರಂಧರ್‌ʼ ಚಿತ್ರದ ನಟಿ ಸಾರಾ ಅರ್ಜುನ್‌ ಭುಜಕ್ಕೆ ಮುತ್ತು ಕೊಟ್ಟಿದ್ದ ರಾಕೇಶ್‌ ಬೇಡಿ; ನೆಟ್ಟಿಗರ ಟೀಕೆಗಳಿಗೆ ಸಿಕ್ತು ಭಾವನಾತ್ಮಕ ಪ್ರತಿಕ್ರಿಯೆ!

Dhurandhar: ಸಾರಾ ಭುಜಕ್ಕೆ ಮುತ್ತಿಟ್ಟಿದ್ದಕ್ಕೆ ಸ್ಪಷ್ಟನೆ ಕೊಟ್ಟ ರಾಕೇಶ್‌

Dhurandhar Controversy: 'ಧುರಂಧರ್' ಸಿನಿಮಾ 500 ಕೋಟಿ ಕ್ಲಬ್ ಸೇರಿ ದಾಖಲೆ ಬರೆಯುತ್ತಿರುವ ಹೊತ್ತಲ್ಲೇ, ಹಿರಿಯ ನಟ ರಾಕೇಶ್ ಬೇಡಿ ಅವರು ನಟಿ ಸಾರಾ ಅರ್ಜುನ್ ಅವರ ಭುಜಕ್ಕೆ ಮುತ್ತಿಟ್ಟ ವಿಡಿಯೋ ವಿವಾದ ಸೃಷ್ಟಿಸಿತ್ತು. ಈ ಬಗ್ಗೆ ರಾಕೇಶ್ ಬೇಡಿ ಪ್ರತಿಕ್ರಿಯಿಸಿದ್ದಾರೆ.

BBK 12: ʻಕಳಪೆʼ ಕೊಡುವ ವಿಚಾರದಲ್ಲಿ ಅಶ್ವಿನಿ ಗೌಡ ಹೀಗೆ ಮಾತಾಡಿದ್ದು ಸರಿನಾ? ಅದೊಂದು ಮಾತು ಈಗ ಚರ್ಚೆಗೆ ಬಂತು!

ʻಕಳಪೆʼ ಕೊಡುವ ವಿಚಾರದಲ್ಲಿ ಅಶ್ವಿನಿ ಗೌಡ ಹೀಗೆ ಮಾತಾಡಿದ್ದು ಸರಿನಾ?

BBK 12: ಬಿಗ್ ಬಾಸ್ ಕನ್ನಡ 12ರ ಶುಕ್ರವಾರದ ಸಂಚಿಕೆಯಲ್ಲಿ ಅಶ್ವಿನಿ ಗೌಡ ಅವರ ಒಂದು ನಡೆ ವೀಕ್ಷಕರಲ್ಲಿ ಅಸಮಾಧಾನ ಮೂಡಿಸಿದೆ. ಚೈತ್ರಾ ಕುಂದಾಪುರ ಅವರಿಗೆ ಕಳಪೆ ಪಟ್ಟ ನೀಡುವ ಸಂದರ್ಭದಲ್ಲಿ ಅಶ್ವಿನಿ ಅವರು, "ಇಡೀ ಮನೆಯವರು ಚೈತ್ರಾಗೆ ಕಳಪೆ ಅಂತ ನಿರ್ಧಾರ ಮಾಡಿದ್ದಾರೆ, ಹಾಗಾಗಿ ನಾನು ಅವರಿಗೆ ಕಳಪೆ ನೀಡುತ್ತಿದ್ದೇನೆ" ಎಂದಿದ್ದು ವೀಕ್ಷಕರಲ್ಲಿ ಬೇಸರ ಮೂಡಿಸಿದೆ.

BBK 12: ಸೀಕ್ರೆಟ್‌ ರೂಮ್‌ನ ಸೀಕ್ರೆಟ್‌ ಬಯಲಾಗೋದು ಯಾವಾಗ? ʻಕಿಚ್ಚʼ ಸುದೀಪ್‌ ಎದುರು ಗೋಳಾಡಿದ ರಕ್ಷಿತಾ!

BBK 12: ʻಕಿಚ್ಚʼ ಸುದೀಪ್‌ ಎದುರು ಗೋಳಾಡಿದ ರಕ್ಷಿತಾ! ಏನ್‌ ಪ್ರಾಬ್ಲಂ?

BBK 12 Weekend Episode: ಬಿಗ್ ಬಾಸ್ ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಶೆಟ್ಟಿ ಮತ್ತು ಧ್ರುವಂತ್ ಅವರ ಪರಿಸ್ಥಿತಿ ಈಗ ಕಿಚ್ಚ ಸುದೀಪ್ ಅವರ ವೀಕೆಂಡ್ ಪಂಚಾಯಿತಿಗೆ ತಲುಪಿದೆ. ಇಂದಿನ (ಡಿ.20) ಸಂಚಿಕೆಯ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ರಕ್ಷಿತಾ ಸೀಕ್ರೆಟ್ ರೂಮ್‌ನಿಂದ ಹೊರಬರಲು ಹರಸಾಹಸ ಪಡುತ್ತಿದ್ದಾರೆ ಎಂಬುದು ಗೊತ್ತಾಗಿದೆ.

ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್‌ ಇನ್ನಿಲ್ಲ; ಬಹುಮುಖ ಪ್ರತಿಭೆಯ ಬದುಕು ಅಂತ್ಯ

ಮಲಯಾಳಂ ಚಿತ್ರರಂಗದ ಹಿರಿಯ ನಟ ಶ್ರೀನಿವಾಸನ್‌ ಇನ್ನಿಲ್ಲ

Sreenivasan Death: ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ ಹಾಗೂ ನಿರ್ದೇಶಕ ಶ್ರೀನಿವಾಸನ್ (69) ಅವರು ಶನಿವಾರ (ಡಿಸೆಂಬರ್ 20) ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

BBK 12: ʻಬಿಗ್ ಬಾಸ್ʼ ಮನೆಯ ಕ್ಯಾಪ್ಟನ್ ಆದ ಕಾವ್ಯ ಶೈವ; ಅದೊಂದು ವಿಚಾರದಲ್ಲಿ ಗಿಲ್ಲಿ ಸೀರಿಯಸ್ ಆಗಿಬಿಟ್ರಾ?

‌ʻಬಿಗ್ ಬಾಸ್ʼ ಮನೆಗೆ ಇನ್ಮೇಲೆ ಕಾವ್ಯ ಕ್ಯಾಪ್ಟನ್; ಗಿಲ್ಲಿ ಬದಲಾಗಿದ್ದೇಕೆ?

BBK 12 Update: ಬಿಗ್ ಬಾಸ್ ಕನ್ನಡ 12ರಲ್ಲಿ ಕಾವ್ಯ ಶೈವ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಸೂರಜ್ ಸಿಂಗ್ ವಿರುದ್ಧ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮನೆಯ ಬಹುತೇಕ ಸದಸ್ಯರು ಕಾವ್ಯ ಪರವಾಗಿ ವೋಟ್ ಹಾಕಿದರು. ಆದರೆ, ಕಾವ್ಯ ಕ್ಯಾಪ್ಟನ್ ಆದರೂ ಅವರ ಆಪ್ತ ಗೆಳೆಯ ಗಿಲ್ಲಿ ನಟ ಕ್ಯಾಪ್ಟನ್ ರೂಮ್‌ಗೆ ಹೋಗಲು ನಿರಾಕರಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

ರಾಚಯ್ಯ - ನಿಂಗವ್ವ ರೊಮ್ಯಾಂಟಿಕ್‌ ಗೀತೆಗೆ ಆಲ್‌ ದಿ ಬೆಸ್ಟ್‌ ಹೇಳಿದ ಸ್ಯಾಂಡಲ್‌ವುಡ್‌ ಕಪಲ್ಸ್;‌ ʻಲ್ಯಾಂಡ್‌ಲಾರ್ಡ್‌ʼ ರಿಲೀಸ್‌ಗೆ ದಿನಗಣನೆ

Duniya VIjay: ʻಲ್ಯಾಂಡ್‌ಲಾರ್ಡ್ʼ ಚಿತ್ರದ ʻನಿಂಗವ್ವʼ ಸಾಂಗ್‌ ರಿಲೀಸ್‌

Landlord Song Launch: ಜಡೇಶ್ ಕೆ ಹಂಪಿ ನಿರ್ದೇಶನದ 'ಲ್ಯಾಂಡ್‌ಲಾರ್ಡ್' ಚಿತ್ರದ "ನಿಂಗವ್ವ ನಿಂಗವ್ವ" ಎಂಬ ರೊಮ್ಯಾಂಟಿಕ್ ಹಾಡು ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಅಜನೀಶ್ ಲೋಕನಾಥ್ ಅವರ ಸಂಗೀತವಿರುವ ಈ ಹಾಡಿನಲ್ಲಿ ದುನಿಯಾ ವಿಜಯ್ (ರಾಚಯ್ಯ) ಮತ್ತು ರಚಿತಾ ರಾಮ್ (ನಿಂಗವ್ವ) ಜೋಡಿಯ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

'ಅನ್ಯರ ಚಿಂತೆ ಬಿಟ್ಟು, ನಿಮ್ಮ ಗೆಲುವಿನ ಚಿಂತೆ ಮಾಡುತ್ತೀರಿ'; ತಿಳಿಯದೇ ಮಾತನಾಡುವವರಿಗೆ ತಮ್ಮ ಸಾಧನೆ ತೆರದಿಟ್ಟ ಜಗ್ಗೇಶ್‌!

'ಅನ್ಯರ ಚಿಂತೆ ಬಿಟ್ಟು, ನಿಮ್ಮ ಗೆಲುವಿನ ಚಿಂತೆ ಮಾಡುತ್ತೀರಿ' ಎಂದ ಜಗ್ಗೇಶ್‌

Jaggesh MP Report: ಕರ್ನಾಟಕದ ರಾಜ್ಯಸಭಾ ಸಂಸದರಾಗಿರುವ ನಟ ಜಗ್ಗೇಶ್ ಅವರು ಕಳೆದ 2.5 ವರ್ಷಗಳಲ್ಲಿ ಸಂಸತ್ತಿನಲ್ಲಿ ತಾವು ಮಾಡಿದ ಕೆಲಸಗಳ ವಿವರವನ್ನು ಬಹಿರಂಗಪಡಿಸಿದ್ದಾರೆ. ತಮ್ಮ ಸಾಧನೆಯನ್ನು ಪ್ರಶ್ನಿಸುವವರಿಗೆ ಉತ್ತರವಾಗಿ, ಇದುವರೆಗೆ 10 ಅಧಿವೇಶನಗಳಲ್ಲಿ 268 ಪ್ರಶ್ನೆಗಳನ್ನು ಕೇಳಿರುವುದಾಗಿ ಅವರು ತಿಳಿಸಿದ್ದಾರೆ.

Darshan: ಥೇಟ್ ‌ಅಪ್ಪನಂತೆಯೇ ಮಿಂಚಿದ ವಿನೀಶ್;‌ ʻದಿ ಡೆವಿಲ್‌ʼ ಸಿನಿಮಾದ ಮೇಕಿಂಗ್‌ ಫೋಟೋಗಳನ್ನು ಕಂಡು ʻಡಿ ಬಾಸ್‌ʼ ಫ್ಯಾನ್ಸ್‌ಗೆ ಖುಷಿಯೋ ಖುಷಿ

Photos: ಥೇಟ್ ‌ಅಪ್ಪನಂತೆಯೇ ಮಿಂಚಿದ ದರ್ಶನ್ ಪುತ್ರ ವಿನೀಶ್‌

ನಟ ದರ್ಶನ್‌ ಅವರ ನಟನೆಯ ʻದಿ ಡೆವಿಲ್ʼ‌ ಸಿನಿಮಾವು ಈಚೆಗಷ್ಟೇ ತೆರೆಕಂಡಿತ್ತು. ದರ್ಶನ್‌ ಅಭಿಮಾನಿಗಳು ಈ ಚಿತ್ರವನ್ನು ದೊಡ್ಡಮಟ್ಟದಲ್ಲಿ ವೆಲ್‌ಕಮ್‌ ಮಾಡಿದರು. ಸದ್ಯ ಈ ಚಿತ್ರದ ಮೇಕಿಂಗ್‌ ಸ್ಟಿಲ್‌ಗಳನ್ನು ಚಿತ್ರತಂಡ ಹಂಚಿಕೊಳ್ಳುತ್ತಿದೆ. ಅದರಲ್ಲೂ ಪ್ರಮುಖವಾಗಿ ಪುತ್ರ ವಿನೀಶ್‌ ಜೊತೆಗೆ ದರ್ಶನ್‌ ಇರುವಂತಹ ಫೋಟೋಗಳು ಎಲ್ಲರ ಗಮನಸೆಳೆಯುತ್ತಿವೆ. ಜೊತೆಗೆ ರಾಜಸ್ಥಾನಕ್ಕೆ ಹೋದಾಗಿನ ಫೋಟೋಗಳು ಕೂಡ ಇಲ್ಲಿವೆ ನೋಡಿ.

ಅಬ್ಬಬ್ಬಾ! ʻಧುರಂಧರ್‌ʼ ಚಿತ್ರವನ್ನ ತಮ್ಮದೇ ಶೈಲಿಯಲ್ಲಿ ವಿಮರ್ಶೆ ಮಾಡಿದ ರಾಮ್‌ ಗೋಪಾಲ್‌ ವರ್ಮಾ; ನಿರ್ದೇಶಕರು ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ʻಧುರಂಧರ್‌ʼ ಚಿತ್ರಕ್ಕೆ ರಾಮ್‌ ಗೋಪಾಲ್‌ ವರ್ಮಾ ಭಾರಿ ಶ್ಲಾಘನೆ!

RGV Reviews Dhurandhar: ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ರಣವೀರ್ ಸಿಂಗ್ ನಟನೆಯ 'ಧುರಂಧರ್' ಚಿತ್ರವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ನಿರ್ದೇಶಕ ಆದಿತ್ಯ ಧರ್ ಭಾರತೀಯ ಚಿತ್ರರಂಗದ ಭವಿಷ್ಯವನ್ನೇ ಬದಲಿಸಿದ್ದಾರೆ, ಇದೊಂದು ಕ್ವಾಂಟಮ್ ಲೀಪ್ (ದೈತ್ಯ ಜಿಗಿತ)" ಎಂದು ಆರ್‌ಜಿವಿ ಬಣ್ಣಿಸಿದ್ದಾರೆ.

Shilpa Shetty: ʻಆಧಾರವಿಲ್ಲದೇ ನನ್ನ ಹೆಸರನ್ನು ತಳುಕು ಹಾಕುವ ಪ್ರಯತ್ನʼ; 60 ಕೋಟಿ ರೂ. ವಂಚನೆ ಕೇಸ್‌ ಬಗ್ಗೆ ಮೌನಮುರಿದ ಶಿಲ್ಪಾ ಶೆಟ್ಟಿ

60 ಕೋಟಿ ರೂ. ವಂಚನೆ ಕೇಸ್‌ ಬಗ್ಗೆ ಮೌನಮುರಿದ ನಟಿ ಶಿಲ್ಪಾ ಶೆಟ್ಟಿ

Shilpa Shetty: ನಟಿ ಶಿಲ್ಪಾ ಶೆಟ್ಟಿ ಅವರು ತಮ್ಮ ಮೇಲಿನ ವಂಚನೆ ಆರೋಪಗಳ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಉದ್ಯಮಿ ದೀಪಕ್ ಕೊಠಾರಿ ಅವರು ಮಾಡಿರುವ 60 ಕೋಟಿ ರೂ. ವಂಚನೆ ಆರೋಪಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಿಲ್ಪಾ ಶೆಟ್ಟಿಯ ಮುಂಬೈ ಮನೆ ಮೇಲೆ ಐಟಿ ರೇಡ್‌ ಸುದ್ದಿ ಸುಳ್ಳಾ?  ವಕೀಲ ಹೇಳಿದ್ದೇನು?

ಶಿಲ್ಪಾ ಶೆಟ್ಟಿ ಮನೆ ಮೇಲೆ ಆದಾಯ ತೆರಿಗೆ ದಾಳಿ ನಿರಾಕರಿಸಿದ ವಕೀಲರು

Shilpa Shetty: ನಟಿ ಶಿಲ್ಪಾ ಶೆಟ್ಟಿಯ ಮುಂಬೈ ನಿವಾಸದ ಮೇಲೆ ಯಾವುದೇ ಆದಾಯ ತೆರಿಗೆ ದಾಳಿ ನಡೆದಿಲ್ಲವೆಂದು ಅವರ ವಕೀಲ ಪ್ರಶಾಂತ್ ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ದುರ್ಬಾವನೆಯುಳ್ಳ ವ್ಯಕ್ತಿಗಳು ಸುಳ್ಳು ವರದಿ ಹರಡಿದ್ದು, ಅಂಥವರು ಕಾನೂನು ಕ್ರಮಕ್ಕೆ ಒಳಗಾಗಬೇಕಾಗಬಹುದು ಎಂದು ಎಚ್ಚರಿಸಲಾಗಿದೆ.

14 ದಿನಗಳಲ್ಲಿ ‌ʻಧುರಂಧರ್‌ʼ ಸಿನಿಮಾ ಗಳಿಸಿದ ಹಣವೆಷ್ಟು?  ʻಕಾಂತಾರ: ಚಾಪ್ಟರ್‌ 1ʼ ಚಿತ್ರದ ದಾಖಲೆ ಬ್ರೇಕ್‌ ಮಾಡಲು ಇನ್ನೆಷ್ಟು ಕೋಟಿ ಬೇಕು?

ʻಕಾಂತಾರʼ ದಾಖಲೆ ಬ್ರೇಕ್‌ ಮಾಡಲು ‌ʻಧುರಂಧರ್‌ʼಗೆ ಇನ್ನೆಷ್ಟು ಕೋಟಿ ಬೇಕು?

Dhurandhar Box Office Report: ರಣವೀರ್ ಸಿಂಗ್ ನಟನೆಯ 'ಧುರಂಧರ್' ಸಿನಿಮಾ 14 ದಿನಗಳಲ್ಲಿ ಜಾಗತಿಕವಾಗಿ 700 ಕೋಟಿ ರೂ. ಗಳಿಸುವ ಮೂಲಕ ಇತಿಹಾಸ ಬರೆದಿದೆ. ಭಾರತವೊಂದರಲ್ಲೇ ಈ ಚಿತ್ರವು 479.50 ಕೋಟಿ ರೂ. ಕಲೆಕ್ಷನ್ ಮಾಡಿದ್ದು, ಇಂದು (ಡಿ.19) 500 ಕೋಟಿ ಗಡಿ ದಾಟುವುದು ಖಚಿತವಾಗಿದೆ.

SVC 59: ಹಳ್ಳಿ ಹೈದನಾಗಿ ಮಿಂಚಲಿದ್ದಾರೆ ನಟ ವಿಜಯ್ ದೇವರಕೊಂಡ; ಫ್ಯಾನ್ಸ್‌ಗೆ ಸರ್ಪ್ರೈಸ್‌ ನೀಡಲು ರೆಡಿಯಾದ ರೌಡಿ ಬಾಯ್!‌

SVC 59: ಹೊಸ ಚಿತ್ರದಲ್ಲಿ ಹಳ್ಳಿ ಹೈದನಾಗಿ ಮಿಂಚಲಿದ್ದಾರೆ ವಿಜಯ್ ದೇವರಕೊಂಡ

SVC 59 Movie Update: ವಿಜಯ್ ದೇವರಕೊಂಡ ನಟನೆಯ ಮುಂದಿನ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ. ಡಿಸೆಂಬರ್ 22ರಂದು ಸಂಜೆ 7.29ಕ್ಕೆ ಅಧಿಕೃತ ಶೀರ್ಷಿಕೆ ಹೊರಬೀಳಲಿದೆ. ರವಿ ಕಿರಣ್ ಕೋಲ ನಿರ್ದೇಶನದ ಈ ಚಿತ್ರದಲ್ಲಿ ವಿಜಯ್ ಹಳ್ಳಿ ಬ್ಯಾಕ್‌ಡ್ರಾಪ್‌ನ ಮಾಸ್ ಯುವಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಪಾಕಿಸ್ತಾನದ ಪಾರ್ಟಿ ಸಂಭ್ರಮದಲ್ಲಿ ಧುರಂದರ್ ಹಾಡಿನ ಹವಾ: ವಿಡಿಯೊ ವೈರಲ್!

ಪಾಕಿಸ್ತಾನದ ಪಾರ್ಟಿಯಲ್ಲಿ ಭಾರತೀಯ ಸಿನಿಮಾ ಹಾಡು; ವಿಡಿಯೊ ವೈರಲ್

Dhurandhar Movie: ಪಾಕಿಸ್ತಾನದ ಪಾರ್ಟಿ ಒಂದರಲ್ಲಿ ಧುರಂದರ್ ಸಿನಿಮಾದ ಐಕಾನಿಕ್ ಹಾಡನ್ನು ಬಳಸಿದ್ದು ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ರೀಲ್ಸ್ ಮತ್ತು ಮೇಮ್ಸ್ ನಲ್ಲಿ ಈ ಮ್ಯೂಸಿಕ್ ಫೇಮಸ್ ಆಗಿದೆ. ಅಂತೆಯೇ ಧುರಂದರ್ ಸಿನಿಮಾಕ್ಕೆ ಪಾಕಿಸ್ತಾನದಲ್ಲಿ ವಿರೋಧ ಇದ್ದರೂ ಕೂಡ ಅದರ ಮ್ಯೂಸಿಕ್ ಮಾತ್ರ ಎಲ್ಲರು ಮೆಚ್ಚಿ ಕೊಂಡಿದ್ದಾರೆ ಎಂಬುದಕ್ಕೆ ಈ ವಿಡಿಯೋ ಒಂದು ಸಾಕ್ಷಿ ಎಂದು ಹೇಳಬಹುದು.

Annayya: ಮಾರಿಗುಡಿ ಮನೆಮಗ ಶಿವಣ್ಣನ 'ಮಡಿಲು' ಯೋಜನೆ; ಜಾಗೃತಿ ಮೂಡಿಸಿದ ಅಣ್ಣಯ್ಯನಿಗೆ ಭಾರಿ ಮೆಚ್ಚುಗೆ

'ಮಡಿಲು' ಯೋಜನೆ ಮೂಲಕ ಜಾಗೃತಿ ಮೂಡಿಸಿದ ʻಅಣ್ಣಯ್ಯʼ

Annayya Serial: ವಿಭಿನ್ನ ಕಥಾಹಂದರದ ಮೂಲಕ ಗಮನ ಸೆಳೆದಿರುವ ಜೀ ಕನ್ನಡದ 'ಅಣ್ಣಯ್ಯ' ಧಾರಾವಾಹಿಯಲ್ಲಿ ಈಗ ಕ್ರಾಂತಿಕಾರಿ ಬದಲಾವಣೆಯ ಸಂದೇಶವೊಂದು ಮೂಡಿಬಂದಿದೆ. ಕಥಾನಾಯಕ ಶಿವು (ವಿಕಾಶ್ ಉತ್ತಯ್ಯ), ತನ್ನ ತಂಗಿಯರಷ್ಟೇ ಅಲ್ಲದೆ ಊರಿನ ಎಲ್ಲಾ ಹೆಣ್ಣುಮಕ್ಕಳ ಹಿತದೃಷ್ಟಿಯಿಂದ 'ಮಡಿಲು' ಎಂಬ ಯೋಜನೆಯನ್ನು ಆರಂಭಿಸಿದ್ದಾನೆ.

BBK 12: 'ಬಿಗ್ ಬಾಸ್' ಸೀಕ್ರೆಟ್ ರೂಮ್ ಬಗ್ಗೆ ಆ ಇಬ್ಬರು ಸದಸ್ಯರಿಗೆ ಬಂತು ಡೌಟ್; ಸತ್ಯ ಗೊತ್ತಾಗೋದು ಯಾವಾಗ?

'ಬಿಗ್ ಬಾಸ್' ಸೀಕ್ರೆಟ್ ರೂಮ್ ಬಗ್ಗೆ ಆ ಇಬ್ಬರು ಸದಸ್ಯರಿಗೆ ಬಂತು ಡೌಟ್!

BBK 12 Secret Room Twist: ಬಿಗ್ ಬಾಸ್ ಕನ್ನಡ 12ರ ಮನೆಯಲ್ಲಿ 'ಸೀಕ್ರೆಟ್ ರೂಮ್' ಎನ್ನುವುದು ಈಗ ಸೀಕ್ರೆಟ್ ಆಗಿ ಉಳಿದಿಲ್ಲ! ಧ್ರುವಂತ್ ಮತ್ತು ರಕ್ಷಿತಾ ಶೆಟ್ಟಿ ಅವರನ್ನು ಮನೆಯಿಂದ ಎಲಿಮಿನೇಟ್ ಮಾಡದೆ ಸೀಕ್ರೆಟ್ ರೂಮ್‌ನಲ್ಲಿ ಇಡಲಾಗಿದೆ ಎಂಬ ಬಲವಾದ ಅನುಮಾನವನ್ನು ಕಾವ್ಯ ಮತ್ತು ಗಿಲ್ಲಿ ನಟ ವ್ಯಕ್ತಪಡಿಸಿದ್ದಾರೆ.

ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಗಾಯಕ ಕುಮಾರ್ ಸಾನು; 50 ಕೋಟಿ ರುಪಾಯಿ ಪರಿಹಾರ ಕೋರಿ ಅರ್ಜಿ ಸಲ್ಲಿಕೆ

ಮಾಜಿ ಪತ್ನಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ ಕುಮಾರ್ ಸಾನು

Kumar Sanu files defamation case: ಪ್ರಸಿದ್ಧ ಗಾಯಕ ಕುಮಾರ್ ಸಾನು ತಮ್ಮ ಮಾಜಿ ಪತ್ನಿಯ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ನ್ಯಾಯಾಲಯದಲ್ಲಿ ಹೂಡಿದ್ದಾರೆ. ಅವರು ಈ ಮೊಕದ್ದಮೆಯಲ್ಲಿ 50 ಕೋಟಿ ರುಪಾಯಿ ಪರಿಹಾರ ಕೇಳಿದ್ದಾರೆ. ಮಾಜಿ ಪತ್ನಿಯ ಆರೋಪವು ದುರುದ್ದೇಶಪೂರಿತ ಮತ್ತು ಖ್ಯಾತಿಗೆ ಗಂಭೀರ ಹಾನಿಯನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

The Raja Saab Movie ಇವೆಂಟ್‌ನಲ್ಲಿ ತಳ್ಳಾಟ; ಜನಸಂದಣಿಯಲ್ಲಿ ಪರದಾಡಿದ ನಟಿ ನಿಧಿ ಅಗರ್ವಾಲ್‌, ಪೊಲೀಸರು ಕೇಸ್‌ ದಾಖಲಿಸಿದ್ದು ಯಾರ ವಿರುದ್ಧ?

The Raja Saab: ಜನಸಂದಣಿಯಲ್ಲಿ ಪರದಾಡಿದ ನಿಧಿ ಅಗರ್ವಾಲ್‌! ಮುಂದೇನಾಯ್ತು?

The Raja Saab Event Chaos: ಹೈದರಾಬಾದ್‌ನ ಲುಲು ಮಾಲ್‌ನಲ್ಲಿ ನಡೆದ 'ದಿ ರಾಜಾ ಸಾಬ್' ಚಿತ್ರದ ಎರಡನೇ ಹಾಡು 'ಸಹನಾ ಸಹನಾ' ಬಿಡುಗಡೆ ಸಮಾರಂಭದಲ್ಲಿ ಅಭಿಮಾನಿಗಳು ಅತಿರೇಕದ ವರ್ತನೆ ಭಾರಿ ಸದ್ದು ಮಾಡಿದೆ. ನಟಿ ನಿಧಿ ಅಗರ್ವಾಲ್ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ ಸಾವಿರಾರು ಅಭಿಮಾನಿಗಳು ಮುಗಿಬಿದ್ದ ಪರಿಣಾಮ ತೀವ್ರ ತಳ್ಳಾಟ ನಡೆದಿದೆ. ಘಟನೆ ನಂತರ ಪೊಲೀಸರು ಕೇಸ್‌ ದಾಖಲು ಮಾಡಿದ್ದಾರೆ.

ದೊಡ್ಡವರಿಗೆ ಟಕ್ಕರ್‌ ಕೊಡುವಂತಹ ಮಕ್ಕಳು ನಿಮ್ಮ ಮನೆಯಲ್ಲಿದ್ದಾರಾ?  ಹಾಗಿದ್ರೆ ಬೆಂಗಳೂರಿನಲ್ಲಿ ನಡೆಯುವ ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಆಡಿಷನ್‌ಗೆ ಬನ್ನಿ!

ʻಗಿಚ್ಚಿ ಗಿಲಿಗಿಲಿ ಜೂನಿಯರ್ಸ್ʼ ಆಡಿಷನ್‌ ಎಲ್ಲಿ? ಯಾವಾಗ?

Gicchi Gili Gili Juniors Audition: ಕಲರ್ಸ್‌ ಕನ್ನಡ ವಾಹಿನಿಯ ಯಶಸ್ವಿ ಶೋ 'ಗಿಚ್ಚಿ ಗಿಲಿಗಿಲಿ' ಈಗ ಮಕ್ಕಳಿಗಾಗಿ ವಿಶೇಷ ಆವೃತ್ತಿಯನ್ನು ತರುತ್ತಿದೆ. 'ಗಿಚ್ಚಿ ಗಿಲಿಗಿಲಿ ಜೂನಿಯರ್ಸ್' ಹೆಸರಿನಲ್ಲಿ ಆರಂಭವಾಗಲಿರುವ ಈ ರಿಯಾಲಿಟಿ ಶೋಗಾಗಿ ಬೆಂಗಳೂರಿನಲ್ಲಿ ಡಿಸೆಂಬರ್ 21ರಂದು ಆಡಿಷನ್ ನಡೆಯಲಿದೆ.

Malayalam OTT: ಕುತೂಹಲ ಕೆರಳಿಸುವ ಈ ಮಲಯಾಳಂ ಸಿನಿಮಾಗಳು ಒಟಿಟಿಗೆ ಎಂಟ್ರಿ; ಸ್ಟ್ರೀಮಿಂಗ್‌ ಎಲ್ಲಿ?

ಕುತೂಹಲ ಕೆರಳಿಸುವ ಈ ಮಲಯಾಳಂ ಸಿನಿಮಾಗಳು ಒಟಿಟಿಗೆ ಎಂಟ್ರಿ ಯಾವಾಗ?

Malayalam cinema lights up OTT : ಮಲಯಾಳಂ ಸಿನಿಮಾ ಈ ವಾರ ಮೂರು ಹೊಸ ಚಿತ್ರಗಳು ಬಿಡುಗಡೆಯಾಗಿದ್ದು, ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಎಂಟ್ರಿ ಕೊಡಲಿದೆ. ಈ ವಾರವೂ OTT ಅಭಿಮಾನಿಗಳಿಗೆ ಹಲವು ವಿಷಯಗಳು ಕಾದಿವೆ. ಅದು ಮಮ್ಮುಟ್ಟಿ ಅವರ ಮನಮುಟ್ಟುವ ತನಿಖಾ ಸರಣಿಯಾಗಿರಲಿ ಅಥವಾ ನಿವಿನ್ ಪೌಲಿ ಅವರ ಸಾಮಾಜಿಕವಾಗಿ ಪ್ರಸ್ತುತವಾದ ಕಥೆಯಾಗಿರಲಿ, ಎಲ್ಲರಿಗೂ ಒಂದು ರಸದೌತಣ ಇದೆ.

Loading...