ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Thalapathy Vijay Net Worth: 'ದಳಪತಿ' ವಿಜಯ್ ಹೆಸರಲ್ಲಿದೆ ಕೋಟಿ ಕೋಟಿ ಆಸ್ತಿ;  ಪತ್ನಿ ಬಳಿ ಎಷ್ಟಿದೆ?

'ದಳಪತಿ' ವಿಜಯ್ ಹೆಸರಲ್ಲಿದೆ ಕೋಟಿ ಕೋಟಿ ಆಸ್ತಿ; ಪತ್ನಿ ಬಳಿ ಎಷ್ಟಿದೆ?

Thalapathy Vijay Net Worth: ನಟ ವಿಜಯ್ ಹಲವು ವರ್ಷಗಳಿಂದ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ದಕ್ಷಿಣ ಭಾರತದ ಪ್ರಮುಖ ನಟ ವಿಜಯ್ ಅವರ ಸಿನಿಮಾಗಳಿಂದಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ, ಆದರೆ ಈಗ ಅವರು ಬೇರೆಯದೇ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಅದರಂತೆ, ಈ ಪರಿವರ್ತನೆಯ ಸಮಯದಲ್ಲಿ, ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು. ಚುನಾವಣಾ ಮಾರ್ಗಸೂಚಿಗಳ ಪ್ರಕಾರ, ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಆಸ್ತಿ, ಇತರ ಆಸ್ತಿಗಳನ್ನು ವಿವರಿಸುವ ಅಫಿಡವಿಟ್ ಅನ್ನು ಸಲ್ಲಿಸಬೇಕು. ವಿಜಯ್ ತಮ್ಮ ನಾಮನಿರ್ದೇಶನದ ಸಮಯದಲ್ಲಿ ಈ ವಿವರಗಳನ್ನು ಉಲ್ಲೇಖಿಸಿದ್ದಾರೆ, ಇದು ಅವರ ಅಭಿಮಾನಿಗಳು ಮತ್ತು ಇತರರಲ್ಲಿ ಚರ್ಚೆಯಾಗಿದೆ.

ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ಶೋನ ಪ್ರತಿ ಸ್ಪರ್ಧಿಗೂ 50 ಸಾವಿರ ರೂ. ನೀಡಿದ ಶಿವಣ್ಣ ದಂಪತಿ; ಇದೇ ನೋಡಿ ದೊಡ್ಮನೆಯ ದೊಡ್ಡ ಗುಣ!

ಡಿಕೆಡಿ ಸ್ಪರ್ಧಿಗಳಿಗೆ ತಲಾ 50 ಸಾವಿರ ರೂ. ನೆರವು ನೀಡಿದ ಶಿವಣ್ಣ ದಂಪತಿ!

Shivarajkumar Charity Work: ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನ ತೀರ್ಪುಗಾರರಾಗಿರುವ ಡಾ. ಶಿವರಾಜ್‌ಕುಮಾರ್‌ ಅವರು ಕ್ವಾರ್ಟರ್ ಫಿನಾಲೆಯಲ್ಲಿ ನೀಡಿದ್ದ ಭರವಸೆಯಂತೆ ಪ್ರತಿಯೊಬ್ಬ ಸ್ಪರ್ಧಿ, ಕೋರಿಯೋಗ್ರಾಫರ್ ಮತ್ತು ಮೆಂಟರ್‌ಗೆ ತಲಾ 50 ಸಾವಿರ ರೂ.ಗಳ ಚೆಕ್ ವಿತರಿಸಿದ್ದಾರೆ.

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

ಉದ್ಯೋಗ್ ಯೋಗದಾನ್ ಪುರಸ್ಕಾರವು ಕೈಗಾರಿಕಾ ವಲಯದ ಅತ್ಯುನ್ನತ ಮನ್ನಣೆ ಯಾಗಿದ್ದು, ತಮ್ಮ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿ ಶಾಶ್ವತ ಹೆಜ್ಜೆಗುರುತು ಮೂಡಿಸಿದ ವ್ಯಕ್ತಿಗಳನ್ನು ಗೌರವಿಸುವ ಪ್ರಶಸ್ತಿಯಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟಿ, ಉದ್ಯಮಿ ಮತ್ತು ಸ್ವಾಸ್ಥ್ಯ ಪ್ರತಿಪಾದಕಿಯಾದ ಶಿಲ್ಪಾ ಶೆಟ್ಟಿ ಕುಂದ್ರಾ(Shilpa Shetty Kundra) ಅವರು ಪ್ರಶಸ್ತಿ ಪ್ರದಾನ ಮಾಡಿದರು

ʻಗ್ಯಾಂಗ್ಸ್ ಆಫ್‍ ಯುಕೆ ಚಿತ್ರಕ್ಕೂ ಭೀಮಾತೀರದ ಹಂತಕರಿಗೂ ಸಂಬಂಧವಿಲ್ಲʼ- ನಿರ್ದೇಶಕ ರವಿ ಶ್ರೀವತ್ಸ ಸ್ಪಷ್ಟನೆ

ʻಗ್ಯಾಂಗ್ಸ್ ಆಫ್ ಯುಕೆʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ರವಿ ಶ್ರೀವತ್ಸ

Gangs of UK Movie: ನಿರ್ದೇಶಕ ರವಿ ಶ್ರೀವತ್ಸ ಅವರು ʻಗ್ಯಾಂಗ್ಸ್ ಆಫ್ ಯುಕೆʼ ಏಪ್ರಿಲ್ 10ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಚಿತ್ರವು ಭೀಮಾತೀರದ ಹಂತಕರ ಕಥೆಯಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದು ವ್ಯವಸ್ಥೆಯ ವಿರುದ್ಧ ನೊಂದವರ ಮತ್ತು ತಾಯಿಯ ರಕ್ತಕಣ್ಣೀರಿನ ಕಥೆಯಾಗಿದೆ ಎಂದು ತಿಳಿಸಿದ್ದಾರೆ.

‘ಶ್ರೀಕೃಷ್ಣ’ ಚಿತ್ರದ ‘ಉಧೋ ಉಧೋ ಯಲ್ಲವ್ವ’ ಸಾಂಗ್‌ ರಿಲೀಸ್;‌ ಹೊಸ ಸಾಹಸಕ್ಕೆ ಮುಂದಾದ ಶಂಕರ್‍ ರಾಜ ವರ್ಮಾ

'ಶ್ರೀಕೃಷ್ಣ' ಚಿತ್ರದ 'ಉಧೋ ಉಧೋ ಯಲ್ಲವ್ವ' ಸಾಂಗ್ ರಿಲೀಸ್

Shreekrishna Kannada Movie: ನಿರ್ದೇಶಕ ಶಂಕರ್ ರಾಜ ವರ್ಮಾ ಅವರು ನಟ ಮತ್ತು ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಶ್ರೀಕೃಷ್ಣ ಚಿತ್ರದ ಮೊದಲ ಹಾಡು ‘ಉಧೋ ಉಧೋ ಯಲ್ಲವ್ವ’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೇ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದ ʻಧುರಂಧರ್‌ 2ʼ; ರಣವೀರ್‌ ಸಿಂಗ್‌ ಅಬ್ಬರದ ಎದುರು ʻಬಾಹುಬಲಿ 2ʼ ರೆಕಾರ್ಡ್‌ ಪೀಸ್‌ ಪೀಸ್!‌

ಕರ್ನಾಟಕದಲ್ಲಿ ಧುರಂಧರ್ 2 ಅಬ್ಬರ: 11 ದಿನದಲ್ಲಿ ಹೊಸ ದಾಖಲೆ ಸೃಷ್ಟಿ

ಧುರಂಧರ್‌ 2 ಸಿನಿಮಾವು ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ವಿಶ್ವದಾದ್ಯಂತ 1365 ಕೋಟಿ ರೂ. ಗಳಿಸಿದ್ದು, ಕರ್ನಾಟಕದಲ್ಲಿಯೂ ದಾಖಲೆ ಮೊತ್ತವನ್ನು ಬಾಚಿಕೊಂಡಿದೆ. ಜೊತೆಗೆ 'ಬಾಹುಬಲಿ 2' ದಾಖಲೆಯನ್ನು ಅತಿ ವೇಗವಾಗಿ ಮುರಿದಿದೆ. ಉತ್ತರ ಅಮೆರಿಕಾದಲ್ಲೂ 22 ಮಿಲಿಯನ್ ಡಾಲರ್ ಗಳಿಸಿ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

2025ರ ಅತ್ಯುತ್ತಮ ಸಿನಿಮಾ 'ಕಾಂತಾರ ಚಾಪ್ಟರ್ 1'; ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ

Photos: ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್: ಯಾರಿಗೆಲ್ಲಾ ಪ್ರಶಸ್ತಿ ಸಿಕ್ತು?

7ನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ. 'ಕಾಂತಾರ: ಚಾಪ್ಟರ್ 1' ಚಿತ್ರವು ಒಟ್ಟು 9 ಪ್ರಶಸ್ತಿಗಳನ್ನು ಗೆದ್ದಿದ್ದು ವಿಶೇಷವಾಗಿತ್ತು. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 'ಕಾಂತಾರ: ಚಾಪ್ಟರ್ 1' ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, 'ಗತ ವೈಭವ' ಚಿತ್ರಕ್ಕಾಗಿ ಆಶಿಕಾ ರಂಗನಾಥ್‌ ಅವರು ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರವಾದರು. ಉಳಿದಂತೆ ಯಾರಿಗೆಲ್ಲಾ ಪ್ರಶಸ್ತಿ ಸಿಕ್ಕಿದೆ ಎಂಬುದರ ಮಾಹಿತಿ ಜೊತೆಗೆ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ.

Chandanavana Film Critics Awards: ಅತ್ಯುತ್ತಮ ನಟ ರಿಷಬ್ ಶೆಟ್ಟಿ, ಅತ್ಯುತ್ತಮ ನಟಿ ಆಶಿಕಾ ರಂಗನಾಥ್; 9 ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡ ʻಕಾಂತಾರ 1ʼ

ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್: ʻಕಾಂತಾರ 1ʼಗೆ 9 ವಿಭಾಗದಲ್ಲಿ ಪ್ರಶಸ್ತಿ

Chandanavana Film Critics Awards: 7ನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2025ನೇ ಸಾಲಿನ ಅತ್ಯುತ್ತಮ ಸಾಧಕರನ್ನು ಗೌರವಿಸಲಾಯಿತು. 'ಕಾಂತಾರ: ಚಾಪ್ಟರ್ 1' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಹಾಗೂ ನಿರ್ದೇಶಕ ಪ್ರಶಸ್ತಿ ಪಡೆದರೆ, ಆಶಿಕಾ ರಂಗನಾಥ್ 'ಗತ ವೈಭವ' ಚಿತ್ರಕ್ಕಾಗಿ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದರು.

ʻಓಡು ಗೆಲುವೆ ನೀ ಆದಷ್ಟು ದೂರ.. ಪಡೆದೆ ತೀರುವೆವು ನೀ ಹೋದಷ್ಟು ದೂರʼ; ಸದ್ದಿಲ್ಲದೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ‌ʻಡಾಲಿʼ ಧನಂಜಯ್

ಡಾಲಿ ಧನಂಜಯ್ ಸರ್ಪ್ರೈಸ್; 6 ತಿಂಗಳು ಟೇಬಲ್ ಮೇಲಿದ್ದ ಕಥೆ ಈಗ ಬೆಳ್ಳಿತೆರೆಗೆ

ಡಾಲಿ ಧನಂಜಯ್‌ ಅವರು ತಮ್ಮ ಮುಂದಿನ ಸಿನಿಮಾ ಕುರಿತು ಸದ್ದಿಲ್ಲದೆ ಅಪ್‌ಡೇಟ್ ನೀಡಿದ್ದಾರೆ. ಗೆಳೆಯ ಪೂರ್ಣಚಂದ್ರ ಬರೆದಿದ್ದ ಚಿತ್ರಕಥೆಯನ್ನು ಆರು ತಿಂಗಳ ನಂತರ ಓದಿದ ಧನಂಜಯ್, ಅದಕ್ಕೆ ಫಿದಾ ಆಗಿ ತಾವೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಘೋಷಣೆಯಾಗಲಿದೆ.

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ; ಬೆಂಗಳೂರಿನಲ್ಲಿ ಅಂತ್ಯಕ್ರಿಯೆ

ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ಇನ್ನಿಲ್ಲ

ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ (85) ಅವರು ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಅವರು, ಪ್ರಕಾಶ್ ರಾಜ್ ಅವರ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಅಗಲಿಕೆಯಿಂದ ನಟ ಪ್ರಕಾಶ್ ರಾಜ್ ತೀವ್ರ ದುಃಖದಲ್ಲಿದ್ದಾರೆ.

Rishab Shetty: ರಕ್ಷಿತ್‌ ಶೆಟ್ಟಿ ಸೇರಿ ಎಲ್ಲರನ್ನ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

ರಕ್ಷಿತ್‌ ಶೆಟ್ಟಿ ಸೇರಿ ಎಲ್ಲರನ್ನ ಅನ್‌ಫಾಲೋ ಮಾಡಿದ ರಿಷಬ್‌ ಶೆಟ್ಟಿ!

Rishab Shetty: ಯುಗಾದಿ ಹಬ್ಬದಂದು ರಿಷಬ್‌ ಅವರು ಮುಂದಿನ ಚಿತ್ರದ ಬಗ್ಗೆ ಸುಳಿವು ನೀಡಿದ ನಂತರ ಹೊಂಬಾಳೆ ಫಿಲ್ಮ್ಸ್‌ನ್ನು ಅನ್‌ಫಾಲೋ ಮಾಡಿದ್ದರು. ಈ ಬಗ್ಗೆ ವದಂತಿ ವೈರಲ್‌ ಆಗುತ್ತಿರುವಾಗಲೇ ಇದೀಗ ರುಕ್ಮಿಣಿ ವಸಂತ್‌ ಹಾಗೂ ರಾಜ್‌ ಬಿ ಶೆಟ್ಟಿ ಅವರನ್ನು ಅನ್‌ಫಾಲೋ ಮಾಡಿದ್ದರು. ರಿಷಬ್ ಈ ನಡೆಗೆ ಕಾರಣ ಏನು ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೀತಿತ್ತು. ಸ್ನೇಹಿತ ರಕ್ಷಿತ್ ಶೆಟ್ಟಿ ಅವರನ್ನು ಕೂಡ ಅನ್‌ಫಾಲೋ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Sonam Kapoor : ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್

Sonam Kapoor : ಗಂಡು ಮಗುವಿಗೆ ಜನ್ಮ ನೀಡಿದ ಸೋನಂ ಕಪೂರ್

Sonam Kapoor : ಸೋನಂ ಎರಡನೇ ಬಾರಿಗೆ ತಾಯಿ ಆಗಿದ್ದಾರೆ. ಅವರಿಗೆ ಗಂಡು ಮಗು ಜನಿಸಿದೆ. ಈ ಬಗ್ಗೆ ಇನ್​​ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೋನಂ ಕಪೂರ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ನಟಿ ಸೋನಂ ಕಪೂರ್ ಹಾಗೂ ಉದ್ಯಮಿ ಆನಂದ್ ಅಹೂಜಾ ಅಭಿಮಾನಿಗಳಿಗೆ ಸಂತಸ ತಂದಿದೆ.

Dhurandhar 2: ಭಾರತದಲ್ಲೇ ಸಾವಿರ ಕೋಟಿ ಕಲೆಕ್ಷನ್! ಧುರಂಧರ್ 2 ಬಾಕ್ಸ್ ಆಫೀಸ್ ಹೊಸ ದಾಖಲೆ

ಭಾರತದಲ್ಲೇ ಸಾವಿರ ಕೋಟಿ ಕಲೆಕ್ಷನ್! ಧುರಂಧರ್ 2 ಬಾಕ್ಸ್ ಆಫೀಸ್ ಹೊಸ ದಾಖಲೆ

Dhurandhar 2: ಕಳೆದ ವರ್ಷ ಡಿಸೆಂಬರ್ 5ರಂದು ಬಂದ ‘ಧುರಂಧರ್’ ಸಿನಿಮಾ ಹಿಟ್ ಆದ ಹಿನ್ನೆಲೆಯಲ್ಲಿ ‘ಧುರಂಧರ್ 2’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಅದರಂತೆ ಧುರಂಧರ್‌ 2 ಸಿನಿಮಾ ಬಗ್ಗೆಯೂ ಒಳ್ಳೆಯ ರೆಸ್ಪಾನ್ಸ್‌ ಬಂದಿದೆ. ಟ್ರೇಡ್ ವೆಬ್‌ಸೈಟ್ ಸ್ಯಾಕ್ನಿಲ್ಕ್ ಪ್ರಕಾರ, ರಣವೀರ್ ಸಿಂಗ್ ಅವರ ಸ್ಪೈ ಆಕ್ಷನ್ ಥ್ರಿಲ್ಲರ್ ಧುರಂಧರ್: ದಿ ರೆವೆಂಗ್ ಇ ಕೇವಲ 11 ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು ಜೀವಮಾನದ ಸಂಗ್ರಹವನ್ನು ಮೀರಿಸಿದೆ.

Tollywood star Venkatesh : ವಿದ್ಯಾರ್ಥಿ ಭವನ್ ದೋಸೆ ಸವಿದ ಟಾಲಿವುಡ್ ಸ್ಟಾರ್ ವೆಂಕಟೇಶ್

ವಿದ್ಯಾರ್ಥಿ ಭವನ್ ದೋಸೆ ಸವಿದ ಟಾಲಿವುಡ್ ಸ್ಟಾರ್ ವೆಂಕಟೇಶ್

Tollywood star Venkatesh : ಜನಪ್ರಿಯ ತೆಲುಗು ನಟ ದಗ್ಗುಬಾಟಿ ವೆಂಕಟೇಶ್ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ವೆಂಕಟೇಶ್ ಅವರು ಭೇಟಿ ನೀಡಿದ್ದು ಬೆಂಗಳೂರಿನ ಹೆಮ್ಮೆಯ ವಿದ್ಯಾರ್ಥಿ ಭವನ್ ಹೋಟೆಲಿಗೆ. ಗಾಂಧಿ ಬಜಾರಿನ ಈ ನೂರು ವರ್ಷಕ್ಕೂ ಹಳೆಯ ಹೋಟೆಲ್​​ಗೆ ಭೇಟಿ ನೀಡಿದ ವೆಂಕಟೇಶ್ ಅವರು ಹೋಟೆಲ್​​ನ ಹಲವು ಖಾದ್ಯಗಳನ್ನು ಸವಿದಿದ್ದಾರೆ. ಟಾಲಿವುಡ್ ತಾರೆ ಬೆಂಗಳೂರಿನ ಅತ್ಯಂತ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ, ಸಿಗ್ನೇಚರ್ ದೋಸೆಗಳು ಮತ್ತು ಸಾಂಪ್ರದಾಯಿಕ ಉಪಾಹಾರಕ್ಕೆ ಹೆಸರುವಾಸಿಯಾದ ಐಕಾನಿಕ್ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದಾರೆ.

Rahul Arunodoy Banerjee : ಧಾರವಾಹಿ ಶೂಟಿಂಗ್ ನಡುವೆ ದುರಂತ; ಖ್ಯಾತ ನಟ  ರಾಹುಲ್ ನಿಧನ

ಧಾರವಾಹಿ ಶೂಟಿಂಗ್ ನಡುವೆ ದುರಂತ; ಖ್ಯಾತ ನಟ ರಾಹುಲ್ ನಿಧನ

Rahul Arunodoy Banerjee : ಜನಪ್ರಿಯ ಬಂಗಾಳಿ ನಟ ರಾಹುಲ್ ಬ್ಯಾನರ್ಜಿ ಒಡಿಶಾದಲ್ಲಿ ದೋಣಿ ಅಪಘಾತದಲ್ಲಿ ನಿಧನರಾಗಿದ್ದಾರೆ. ತಲ್ಸಾರಿ ಬೀಚ್‌ನಲ್ಲಿ ತಮ್ಮ ದೂರದರ್ಶನ ಕಾರ್ಯಕ್ರಮ ಭೋಲೆ ಬಾಬಾ ಪರ್ ಕರೇಗಾ ಚಿತ್ರೀಕರಣದಲ್ಲಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ಚಿತ್ರೀಕರಣದ ಸಮಯದಲ್ಲಿ ಅವರು ಸಮುದ್ರಕ್ಕೆ ಬಿದ್ದು, ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ʻಧುರಂಧರ್‌ 2 ಚಿತ್ರವನ್ನ ಗಂಭೀರವಾಗಿ ಪರಿಗಣಿಸಿ, ಇಲ್ಲವಾದರೆ...ʼ; ಚಿತ್ರರಂಗಕ್ಕೆ ಎಚ್ಚರಿಕೆ ನೀಡಿದ ರಾಮ್‌ ಗೋಪಾಲ್‌ ವರ್ಮಾ!

Dhurandhar 2: 'ಹೊಸ ಪಾಠವೆಂದು ಭಾವಿಸಿ..'- ಎಚ್ಚರಿಕೆ ನೀಡಿದ RGV

Ranveer Singh: ಧುರಂಧರ್‌ 2 ಚಿತ್ರವು 10 ದಿನಗಳಲ್ಲಿ 1200 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಚಿತ್ರವನ್ನು 'ಪರಮಾಣು ಬಾಂಬ್'ಗೆ ಹೋಲಿಸಿದ್ದು, ಚಿತ್ರರಂಗದ ಮೌನವನ್ನು ಪ್ರಶ್ನಿಸಿದ್ದಾರೆ.

Dhurandhar 2: 'ಧುರಂಧರ್ 2' ಚಿತ್ರದ ಶೂಟಿಂಗ್‌ ವೇಳೆ ಗರ್ಭಿಣಿ ದೀಪಿಕಾರನ್ನ ಹೇಗೆ ಕೇರ್‌ ಮಾಡಿದ್ರು ಗೊತ್ತಾ ರಣವೀರ್‌?

ಶೂಟಿಂಗ್‌ ವೇಳೆ ಗರ್ಭಿಣಿ ದೀಪಿಕಾರನ್ನ ಹೇಗೆ ಕೇರ್‌ ಮಾಡಿದ್ರು ರಣವೀರ್‌?

Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ಇತ್ತೀಚಿನ ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ( ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದಾರೆ. ಈ ಚಿತ್ರದ ಚಿತ್ರೀಕರಣದಲ್ಲಿದ್ದಾಗ, ಅವರ ಪತ್ನಿ ಮತ್ತು ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದರು. ದಂಪತಿ 2024 ರಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಇತ್ತೀಚೆಗೆ ಮಿರ್ಚಿ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ, 'ಧುರಂಧರ್ 2' ನಟ ಅಭಯ್ ಅರೋರಾ, 'ರಣವೀರ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮ್ಮ ಕುಟುಂಬವನ್ನು ಹೇಗೆ ನೋಡಿಕೊಂಡರು ಎಂಬುದನ್ನು ಹೇಳಿಕೊಂಡಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬಿಗ್‌ ಬಾಸ್‌ 18ʼ ಖ್ಯಾತಿಯ ರಜತ್ ದಲಾಲ್; ಮದುವೆಯಾದ ಹುಡುಗಿ ಯಾರು?

ʻಬಿಗ್‌ ಬಾಸ್ 18ʼ ರಜತ್ ದಲಾಲ್ ಕೈ ಹಿಡಿದ ಹುಡುಗಿ ಯಾರು? ಫೋಟೋಗಳು ಇಲ್ಲಿವೆ

Bigg Boss 18 Rajat Dalal Wedding: ಬಿಗ್‌ ಬಾಸ್‌ 18 ಖ್ಯಾತಿಯ ಇನ್‌ಫ್ಲುಯೆನ್ಸರ್ ರಜತ್ ದಲಾಲ್ ಭಾನುವಾರ (ಮಾ. 29) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಖಾಸಗಿಯಾಗಿ ನಡೆದ ಈ ವಿವಾಹ ಸಮಾರಂಭದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

Akhil Akkineni: ‘ಪೆದ್ದಿ’ ಸಿನಿಮಾಕ್ಕಾಗಿ ಅಖಿಲ್ ಅಕ್ಕಿನೇನಿ ಸಿನಿಮಾ ಪೋಸ್ಟ್‌ಪೋನ್‌! ಹೊಸ ದಿನಾಂಕ ರಿವೀಲ್‌

‘ಪೆದ್ದಿ’ ಸಿನಿಮಾಕ್ಕಾಗಿ ಅಖಿಲ್ ಅಕ್ಕಿನೇನಿ ಸಿನಿಮಾ ಪೋಸ್ಟ್‌ಪೋನ್‌!

Akhil Akkineni: ರಾಮ್ ಚರಣ್ ಮತ್ತು ಜಾಹ್ನವಿ ಕಪೂರ್ ಅವರ 'ಪೆದ್ದಿ' ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಕ್ಲ್ಯಾಶ್‌ ತಡೆಗಟ್ಟಲು ನಾಗಾರ್ಜುನ ಅಕ್ಕಿನೇನಿ ಅವರ ಪುತ್ರ ಅಖಿಲ್ ಅಕ್ಕಿನೇನಿ ಅವರ ಮುಂಬರುವ ತೆಲುಗು ಚಿತ್ರ ಲೆನಿನ್ ಚಿತ್ರವನ್ನು ಮುಂದೂಡಲಾಗಿದೆ. ‘ಟಾಕ್ಸಿಕ್’ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗಿದ್ದು, ಆ ನಂತರದ ಹಲವು ಸಿನಿಮಾಗಳ ಬಿಡುಗಡೆ ಮೇಲೆ ಪರಿಣಾಮ ಬೀರಿದೆ. ಸುಮಾರು ಆಗಸ್ಟ್ ತಿಂಗಳ ವರೆಗೆ ಅದರ ನಂತರದ ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕಗಳು ಸಹ ( Akhil Akkineni) ಬದಲಾಗಿವೆ. ಇದೀಗ ತೆಲುಗಿನ ‘ಲೆನಿನ್’ ಸಿನಿಮಾದ ಬಿಡುಗಡೆ ಸಹ ಮುಂದೂಡಲಾಗಿದೆ.

ಶಾಕಾಹಾರಿ ಆಹಾರ, ಬೆಳ್ಳಂಬೆಳಗ್ಗೆಯೇ ವರ್ಕ್‌ಔಟ್; ʻಪೆದ್ದಿʼ ಚಿತ್ರದ  ಪೈಲ್ವಾನ್ ಲುಕ್‌ಗಾಗಿ ರಾಮ್ ಚರಣ್ 8 ತಿಂಗಳ ಶ್ರಮ

Peddi Movie: ಅಯ್ಯಪ್ಪ ದೀಕ್ಷೆಯಲ್ಲೇ ಮೈಕಟ್ಟು ಹುರಿಗೊಳಿಸಿದ ನಟ ರಾಮ್ ಚರಣ್

Ram Charan Peddi Movie: ನಟ ರಾಮ್ ಚರಣ್ ಅವರು ಪೆದ್ದಿ ಚಿತ್ರದ ಪೈಲ್ವಾನ್‌ ಪಾತ್ರಕ್ಕಾಗಿ ಕಳೆದ 8 ತಿಂಗಳುಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅಯ್ಯಪ್ಪ ದೀಕ್ಷೆಯ ಅವಧಿಯಲ್ಲೇ ಕಟ್ಟುನಿಟ್ಟಾದ ಶಾಖಾಹಾರಿ ಆಹಾರ ಸೇವಿಸಿ, ಪ್ರತಿದಿನ ಬೆಳಿಗ್ಗೆ 5:30ಕ್ಕೆ ವರ್ಕ್‌ಔಟ್ ಮಾಡುವ ಮೂಲಕ ಪೈಲ್ವಾನ್ ಮೈಕಟ್ಟು ಪಡೆದಿದ್ದಾರೆ.

Ulidavaru Kandante Movie: ʻರಸ್ತೆಯಲ್ಲೂ ಇರಲಿ ಸಹನೆʼ ಎಂದ ಹುಬ್ಬಳ್ಳಿ-ಧಾರಾವಾಡ ಪೊಲೀಸರ ಕ್ರಿಯೇಟಿವಿಟಿಗೆ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಫಿದಾ

ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಟ್ವೀಟ್ ಬಳಸಿ ಪೊಲೀಸರ ಸಂಚಾರ ಜಾಗೃತಿ

ರಕ್ಷಿತ್‌ ಶೆಟ್ಟಿ ಅವರ ಟ್ವೀಟ್‌ ಬಳಸಿಕೊಂಡು ಹುಬ್ಬಳ್ಳಿ-ಧಾರವಾಡ ಪೊಲೀಸರು ವಿಶಿಷ್ಟವಾಗಿ ಸಂಚಾರ ಜಾಗೃತಿ ಮೂಡಿಸಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಕ್ಷಿತ್ ಮಾಡಿದ ಟ್ವೀಟ್ ಅನ್ನು ರೀ-ಪೋಸ್ಟ್ ಮಾಡಿರುವ ಪೊಲೀಸರು, ಚಿತ್ರದ ಡೈಲಾಗ್‌ ಅನ್ನು ಬಳಸಿ ರಸ್ತೆಯಲ್ಲಿ ಓವರ್‌ಟೇಕ್ ಮಾಡುವಾಗ ಜಾಗರೂಕರಾಗಿರಲು ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಲು ಡಾ. ವಿಷ್ಣುವರ್ಧನ್‌ ಮೊಮ್ಮಗ ಜ್ಯೇಷ್ಠ ರೆಡಿ; ಮೊದಲ ಸಿನಿಮಾಕ್ಕಾಗಿ ಭರ್ಜರಿ ತಯಾರಿ‌

ಸ್ಯಾಂಡಲ್‌ವುಡ್‌ಗೆ ವಿಷ್ಣು ಮೊಮ್ಮಗನ ಎಂಟ್ರಿ; ತಾತನ ಹಾದಿಯಲ್ಲಿ ಜ್ಯೇಷ್ಠ

Dr Vishnuvardhan Grandson Jyeshtavardhan: ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್‌ ಅವರ ಮೊಮ್ಮಗ ಜ್ಯೇಷ್ಠವರ್ಧನ್‌ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ನಟ ಅನಿರುದ್ಧ್ ಜತ್ಕರ್ ಪುತ್ರನಾದ ಜ್ಯೇಷ್ಠ, ನೇರವಾಗಿ ನಟನೆಗೆ ಇಳಿಯದೆ ಕಳೆದ ಹಲವು ವರ್ಷಗಳಿಂದ ನೃತ್ಯ ಮತ್ತು ನಟನೆಯಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ.

ʻಧುರಂಧರ್‌ 2ʼ ಸಿನಿಮಾದ ಹಿಟ್‌ ಆಗಿದ್ದಕ್ಕೆ ರಣವೀರ್‌ ಸಿಂಗ್‌ಗೆ 5 ಕೋಟಿಯ ಹಮ್ಮರ್‌ ಕಾರ್‌ ಉಡುಗೊರೆಯಾಗಿ ಸಿಕ್ತಾ? ಈ ಸುದ್ದಿಯ ಅಸಲಿಯತ್ತೇನು?

ರಣವೀರ್ ಸಿಂಗ್‌ಗೆ 5 ಕೋಟಿಯ ಹಮ್ಮರ್ ಗಿಫ್ಟ್? ಅಸಲಿ ಸತ್ಯ ಇಲ್ಲಿದೆ!

Ranveer Singh: ʻಧುರಂಧರ್‌ 2ʼ ಚಿತ್ರವು ವಿಶ್ವದಾದ್ಯಂತ 1100 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ದೇಶಕ ಆದಿತ್ಯ ಧರ್ ಅವರು ರಣವೀರ್‌ಗೆ 5 ಕೋಟಿ ಮೌಲ್ಯದ ಹಮ್ಮರ್ ಕಾರನ್ನು ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದು ನಿಜವೇ?

ಈ ವರ್ಷದ ಮೊದಲ ಬ್ಲಾಕ್‌ ಬಸ್ಟರ್‌ ಹಿಟ್‌ ʻಲವ್‌ ಮಾಕ್ಟೇಲ್‌ 3ʼ; ವಿದೇಶದಲ್ಲೂ ರಿಲೀಸ್‌ ಆಯ್ತು ಕನ್ನಡ ಸಿನಿಮಾ

ಯುಎಸ್‌ಎ, ಆಸ್ಟ್ರೇಲಿಯಾದಲ್ಲಿ 'ಲವ್ ಮಾಕ್ಟೇಲ್ 3' ಕ್ರೇಜ್ ಶುರು

Love Mocktail 3: ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 3' ಸಿನಿಮಾ 2026ರ ಮೊದಲ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೆ ಮಾಡಿರುವ ಈ ಸಿನಿಮಾ ಈಗ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜರ್ಮನಿಯಂತಹ ದೇಶಗಳಲ್ಲೂ ಬಿಡುಗಡೆಯಾಗಿದೆ.

Loading...