ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Toxic Movie Teaser:  `ಟಾಕ್ಸಿಕ್‌' ಟೀಸರ್‌ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್‌ ಫುಲ್‌ ಟೆನ್ಷನ್!

`ಟಾಕ್ಸಿಕ್‌' ಟೀಸರ್‌ ನೋಡಿ ರುಕ್ಮಿಣಿ ವಸಂತ್ ಫ್ಯಾನ್ಸ್‌ ಫುಲ್‌ ಟೆನ್ಷನ್!

Rukmini Vasanth: ‘ಟಾಕ್ಸಿಕ್’ ಟೀಸರ್ ಬಿಡುಗಡೆ ಆಗಿದೆ. ‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳೋದು ಪಕ್ಕಾ ಆಗಿದೆ. ಟೀಸರ್​​ನಲ್ಲಿ ಯಶ್ ಯಂಗ್ ಲುಕ್​​ನಲ್ಲಿಯೂ ಕಾಣಿಸಿಕೊಂಡಿದ್ದು, ರಾಯನ (ಯಶ್) ಮಗ ಇರಬಹುದೇ ಎಂಬ ಪ್ರಶ್ನೆ ಮೂಡಿದೆ. ಟೀಸರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾಗಳಲ್ಲಿ ಮತ್ತೆ ಟೀಸರ್ ಬಗ್ಗೆನೇ ಚರ್ಚೆಯಾಗುತ್ತಿದೆ. ನೆಟ್ಟಿಗರು ಹಸಿಬಿಸಿ ದೃಶ್ಯಗಳಲ್ಲಿ ಇರೋ ನಾಯಕಿ ಯಾರು ಅಂತ ಹುಡುಕುವುದಕ್ಕೆ ಮುಂದಾಗಿದ್ದಾರೆ.

Actor Yash: ಇದೊಂದು ಕಾರಣಕ್ಕೆ ರಾವಣನ ಪಾತ್ರಕ್ಕೆ ಯಶ್‌ ಸೂಕ್ತ ಆಯ್ಕೆಯಂತೆ!

ಇದೊಂದು ಕಾರಣಕ್ಕೆ ರಾವಣನ ಪಾತ್ರಕ್ಕೆ ಯಶ್‌ ಸೂಕ್ತ ಆಯ್ಕೆಯಂತೆ!

Ravana Role Yash: ಈ ವರ್ಷ ಬಿಡುಗಡೆಯಾಗುತ್ತಿರುವ ನಟ ಯಶ್ ಅಭಿನಯದ ಎರಡು ಬಹು ನಿರೀಕ್ಷಿತ ಚಿತ್ರಗಳು - ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್ ಮತ್ತು ರಾಮಾಯಣ . ಅಭಿಮಾನಿಗಳು ಯಶ್ ಅವರ ಟಾಕ್ಸಿಕ್ ಚಿತ್ರದ ಟೀಸರ್ ಅನ್ನು ನೋಡಿ ಸಖತ್‌ ಖುಷ್‌ ಆಗಿದ್ದಾರೆ. ಕನ್ನಡ, ಹಿಂದಿ, ಮಲಯಾಳಂ, ತೆಲುಗು ವರ್ಷನ್​​ಗಳಲ್ಲಿ ಟೀಸರ್ ಬಿಡುಗಡೆ ಆಗಿದೆ. ‘ಟಾಕ್ಸಿಕ್’ ಟೀಸರ್​​ನ ಕೊನೆಯಲ್ಲಿ ಯಶ್ ಅವರು ಯಂಗ್ ಲುಕ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ಜೊತೆಗೆ ಇನ್ನೊಂದು ಶೇಡ್‌ನಲ್ಲಿ ಉಗ್ರಾವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಯಶ್‌.

Cocktail 2: ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ? ಇರಲಿದ್ದಾರೆ ಈ ಖ್ಯಾತ ನಟಿ

ಸಲಿಂಗ ಕಾಮಿ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ? ಇರಲಿದ್ದಾರೆ ಈ ಖ್ಯಾತ ನಟಿ

Kriti Sanon: 2012ರ ಬಹುನಿರೀಕ್ಷಿತ ಚಿತ್ರ ಕಾಕ್‌ಟೇಲ್‌ನ ಮುಂದುವರಿದ ಭಾಗ ಕಾಕ್ಟೇಲ್ 2 ಚಿತ್ರೀಕರಣ ಅಧಿಕೃತವಾಗಿ ಪೂರ್ಣಗೊಂಡಿದೆ. ರಶ್ಮಿಕಾ ಮಂದಣ್ಣ , ಕೃತಿ ಸನೋನ್ ಮತ್ತು ಶಾಹಿದ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹೋಮಿ ಅದಜಾನಿಯಾ ನಿರ್ದೇಶನದ ಈ ಚಿತ್ರ ಮತ್ತೊಮ್ಮೆ ಸುದ್ದಿಯಾಗಿದೆ. ರಶ್ಮಿಕಾ ಮತ್ತು ಕೃತಿ ಈ ಚಿತ್ರದಲ್ಲಿ ಬೋಲ್ಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಬಿಟ್‌ ಕಾಯಿನ್ ಹಗರಣ ಪ್ರಕರಣ: ನಟಿ ಶಿಲ್ಪಾ ಶೆಟ್ಟಿಪತಿ ರಾಜ್ ಕುಂದ್ರಾಗೆ ಬಿಗ್ ರಿಲೀಫ್

ಬಿಟ್ ಕಾಯಿನ್ ಹಗರಣ: ರಾಜ್ ಕುಂದ್ರಾಗೆ ಬಿಗ್ ರಿಲೀಫ್

ಬಿಟ್ ಕಾಯಿನ್ ಹಗರಣ ಪ್ರಕರಣದಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾಗೆ ನ್ಯಾಯಾಲಯ ಬಿಗ್ ರಿಲೀಫ್ ನೀಡಿದೆ. 150 ಕೋಟಿ ರೂಪಾಯಿಗಳ ಬಿಟ್‌ಕಾಯಿನ್ ಹಗರಣ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ ಕುಂದ್ರಾ ಅವರು ವಿದೇಶಕ್ಕೆ ಪ್ರಯಾಣಿಸುವ ಮೊದಲು 1 ಲಕ್ಷ ರೂಪಾಯಿಗಳ ಶ್ಯೂರಿಟಿಯನ್ನು ಸಲ್ಲಿಸಲು ಮತ್ತು ನ್ಯಾಯಾಲಯದ ಪೂರ್ವಾನುಮತಿ ಪಡೆಯಲು ವಿಶೇಷ ನ್ಯಾಯಾಲಯವು ಆದೇಶಿಸಿದೆ.

Actor Darshan: ಯಾವ ಶತ್ರುವಿಗೂ ಬೇಡ; ದರ್ಶನ್‌ ಬರ್ತ್‌ಡೇ ದಿನ ಅಪ್ಪ ಮಗನ ಭಾವುಕ ಕ್ಷಣಗಳನ್ನು ವಿವರಿಸಿದ ಧನ್ವೀರ್!

ದರ್ಶನ್‌ ಬರ್ತ್‌ಡೇ ದಿನ ಅಪ್ಪ ಮಗನ ಭಾವುಕ ಕ್ಷಣಗಳನ್ನು ವಿವರಿಸಿದ ಧನ್ವೀರ್!

Dhanveerah: ದರ್ಶನ್ ಅಭಿಮಾನಿಗಳು ವಿಶೇಷವಾಗಿಯೇ ಜನ್ಮ ದಿನ ಆಚರಣೆ ಮಾಡಿದ್ದರು. ತಮ್ಮ ಏರಿಯಾಗಳಲ್ಲಿ ಅನ್ನ ಸಂತರ್ಪಣೆ ಮಾಡಿದ್ದರು. ಆಶ್ರಮಗಳಿಗೆ ಹೋಗಿ ಹಣ್ಣುಹಂಪಲು ವಿತರಣೆ ಮಾಡಿದ್ದರು. ಧನ್ವೀರ್ ನಟನೆಯ 'ಹಯಗ್ರೀವ' ಸಿನಿಮಾ ಬಿಡುಗಡೆಯಾಗುತ್ತಿದೆ. ಪ್ರಮೋಷನ್‌ ಕೂಡ ಭರದಿಂದ ಸಾಗುತ್ತಿದೆ. ಸಂದರ್ಶನವೊಂದರಲ್ಲಿ ಬರ್ತ್‌ಡೇ ದಿನ ತಂದೆಯನ್ನು ಭೇಟಿ ಮಾಡಿದ ವಿನೀಶ್ ಬಗ್ಗೆ ಧನ್ವೀರ್‌ ಮಾತನಾಡಿ ಬೇಸರ ಹೊರ ಹಾಕಿದ್ದಾರೆ.

ʻಕರುನಾಡ ಚಕ್ರವರ್ತಿʼ ಶಿವರಾಜ್‌ಕುಮಾರ್‌ ವೃತ್ತಿ ಬದುಕಿಗೆ 40 ವರ್ಷ; ಸಿಎಂ ಸಿದ್ದರಾಮಯ್ಯ - ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಏನ್‌ ಹೇಳಿದ್ರು ನೋಡಿ!

ಶಿವಣ್ಣ ವೃತ್ತಿ ಬದುಕಿಗೆ 40 ವರ್ಷ; ಶುಭಕೋರಿದ ಸಿಎಂ ಸಿದ್ದರಾಮಯ್ಯ

ShivaRajkumar: ನಟ ಶಿವರಾಜ್‌ಕುಮಾರ್‌ ಅವರು ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದು, ಆ ಸಂಭ್ರಮವನ್ನು ಸ್ಯಾಂಡಲ್‌ವುಡ್‌ ಆಚರಿಸುತ್ತಿದೆ. 1986ರಲ್ಲಿ 'ಆನಂದ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಹ್ಯಾಟ್ರಿಕ್ ಹೀರೋ, ಯಶಸ್ವಿ ನಾಲ್ಕು ದಶಕಗಳನ್ನು ಪೂರೈಸಿದ್ದಾರೆ. ಈ ಐತಿಹಾಸಿಕ ಮೈಲಿಗಲ್ಲಿಗೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಹಾಗೂ ಆಂಧ್ರಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅವರು ಪ್ರೀತಿಯ ಶುಭಾಶಯ ಕೋರಿದ್ದಾರೆ.

ಕೃತ್ತಿಕಾ ರವೀಂದ್ರ ನಟನೆಯ ʻರಾಜನಿವಾಸʼ ಚಿತ್ರವನ್ನು ʻಕಾಂತಾರʼದ ಜೊತೆ ಹೋಲಿಕೆ; ಟ್ರೇಲರ್‌ ನೋಡಿ ಕಾಮೆಂಟ್‌ ಮಾಡಿದವರಿಗೆ ನಿರ್ದೇಶಕರ ಉತ್ತರ!

Kruttika Ravindra: ರಾಜನಿವಾಸ ಟ್ರೇಲರ್ ಬಗ್ಗೆ ನಿರ್ದೇಶಕರು ಹೇಳಿದ್ದೇನು?

Rajanivasa Kannada Movie: ಕೃತ್ತಿಕಾ ರವೀಂದ್ರ ಮತ್ತು ರಾಘವ್ ನಟನೆಯ ರಾಜನಿವಾಸ ಟ್ರೇಲರ್ ಬಿಡುಗಡೆಯಾಗಿದ್ದು, ತುಳುನಾಡಿನ ಹಿನ್ನೆಲೆಯ ಕಾರಣ ಪ್ರೇಕ್ಷಕರು ಇದನ್ನು 'ಕಾಂತಾರ' ಚಿತ್ರಕ್ಕೆ ಹೋಲಿಕೆ ಮಾಡುತ್ತಿದ್ದಾರೆ. ಈ ಬಗ್ಗೆ ನಿರ್ದೇಶಕ ಮಿಥುನ್ ಸುವರ್ಣ ಸ್ಪಷ್ಟನೆ ನೀಡಿದ್ದಾರೆ.

Maarnami Review: ಕರಾವಳಿ ಸೊಗಡಿನ ಮಾರ್ನಮಿಯಲ್ಲಿ ಪ್ರೀತಿಯ ದೀಪಾವಳಿ ಮತ್ತು ದ್ವೇಷದ ರಕ್ತದೊಕುಳಿ!

ರಿತ್ವಿಕ್ - ಚೈತ್ರಾ ಆಚಾರ್ ನಟನೆಯ 'ಮಾರ್ನಮಿ' ‌ ಹೇಗಿದೆ? ರೇಟಿಂಗ್‌ ಎಷ್ಟು?

Maarnami Movie Review: ಕರಾವಳಿಯ ಮಾರ್ನಮಿ ಹಬ್ಬ ಹಾಗೂ ಹುಲಿವೇಷದ ಹಿನ್ನೆಲೆಯಲ್ಲಿ ಮೂಡಿಬಂದಿರುವ ಮಾರ್ನಮಿ ಚಿತ್ರದಲ್ಲಿ ರಿತ್ವಿಕ್ ಮಠದ್ ಮತ್ತು ಚೈತ್ರಾ ಆಚಾರ್ ಅವರ ನಟನೆ ಹೈಲೈಟ್‌ ಆಗಿದೆ. ಚರಣ್ ರಾಜ್ ಸಂಗೀತವು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

Sarala Subbarao Review: ಸರಳ ಸುಂದರ ಸುಬ್ಬರಾವ್ ಪರಿವಾರ; ದಾಂಪತ್ಯ ಜೀವನ ಕುರಿತ ನವಿರಾದ ಕಥಾಹಂದರ

ಅಜಯ್‌ ರಾವ್‌ ನಟನೆಯ ʻಸರಳ ಸುಬ್ಬರಾವ್ʼ‌ ಚಿತ್ರ ಹೇಗಿದೆ? ಈ ಬಾರಿ ಗೆಲ್ತಾರಾ?

Sarala Subbarao Review: ತ್ರಿವೇಣಿ ಅವರ 'ವಸಂತ ಗಾನ' ಕಾದಂಬರಿ ಆಧಾರಿತ 'ಸರಳ ಸುಬ್ಬರಾವ್' ಚಿತ್ರವು 70ರ ದಶಕದ ಸುಂದರ ದಾಂಪತ್ಯದ ಕಥೆಯಾಗಿದೆ. ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರದಲ್ಲಿ ಇಂಗ್ಲಿಷ್ ಪ್ರೊಫೆಸರ್ ಆಗಿ ಅಜಯ್ ರಾವ್ ಹಾಗೂ ಸರಳ ಪಾತ್ರದಲ್ಲಿ ಮಿಶಾ ನಾರಂಗ್ ಮಿಂಚಿದ್ದಾರೆ. ಈ ಚಿತ್ರದ ವಿಮರ್ಶೆ ಇಲ್ಲಿದೆ.

Toxic movie teaser OUT:  ಟಾಕ್ಸಿಕ್‌ ಟೀಸರ್ ಔಟ್‌! ಯಶ್ ಕ್ಲೀನ್ ಶೇವ್ ಲುಕ್‌, ಸ್ಟೈಲ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

ಟಾಕ್ಸಿಕ್‌ ಟೀಸರ್ ಔಟ್‌! ಯಶ್ ಲುಕ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

Yash Toxic: `ರಾಕಿಂಗ್ ಸ್ಟಾರ್' ಯಶ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್' ಟೀಸರ್ ಈಗ ಬಿಡುಗಡೆಯಾಗಿದೆ. ಟಾಕ್ಸಿಕ್ ಒಂದು ಕ್ರೂರ ಆಕ್ಷನ್-ಥ್ರಿಲ್ಲರ್ ಕಥೆ ಅನ್ನೋದರಲ್ಲಿ ಡೌಟೇ ಇಲ್ಲ. ಟಾಕ್ಸಿಕ್‌ ಟೀಸರ್‌ ರಕ್ತಸಿಕ್ತವಾಗಿದೆ. ಯಶ್‌ ಅವರ ಇನ್ನೊಂದು ಲುಕ್‌ ಅನಾವರಣಗೊಂಡಿದೆ. ಯಶ್‌ ಅವರ ಎರಡು ಶೇಡ್‌ನಲ್ಲಿ ಕಂಡ ಅಭಿಮಾನಿಗಳು ಥ್ರಿಲ್‌ ಆಗಿದ್ದಾರೆ. ರಕ್ತ, ಭಯ ಮತ್ತು ದ್ರೋಹದ ಮೂಲಕ ತನ್ನ ಸಾಮ್ರಾಜ್ಯವನ್ನು ರೂಪಿಸಿಕೊಳ್ಳುವ ನಾಯಕನ ಕಥೆ ಅಂತ ಕಮೆಂಟ್‌ ಮಾಡ್ತಿದ್ದಾರೆ ಫ್ಯಾನ್ಸ್‌.

Second Case Of Seetharam : ತಮಿಳಿನಲ್ಲಿಯೂ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ರಿಲೀಸ್: ಡ್ರೀಮ್ ವಾರಿಯರ್ಸ್‌ ಪಿಕ್ಚರ್ಸ್ ಸಾಥ್

ತಮಿಳಿನಲ್ಲಿಯೂ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ರಿಲೀಸ್

vijay raghavendra: ಡ್ರೀಮ್ ವಾರಿಯರ್ ಪಿಕ್ಚರ್ಸ್, ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದು. ಧೀರನ್, ಅರುವಿ, ಎನ್‌ಜಿಕೆ, ರಾಕ್ಷಸಿ, ಖೈದಿ, ಭೋಲಾ ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳು ಈ ಸಂಸ್ಥೆಯಡಿ ನಿರ್ಮಾಣಗೊಂಡಿವೆ. ಇದೀಗ ಡ್ರೀಮ್ ವಾರಿಯರ್ ಪಿಕ್ಚರ್ಸ್ ಸಂಸ್ಥೆ ಜೊತೆ ನಿರ್ದೇಶಕ‌ ಕಂ ನಿರ್ಮಾಪಕ ಪವನ್ ಒಡೆಯರ್ ಕೈ ಜೋಡಿಸಿದ್ದಾರೆ.

Second Case Of Seetharam Review: ಸರಣಿ ಕೊಲೆಗಳ ಕೇಸ್‌ನಲ್ಲಿ ಆದಿಯಿಂದ ಅಂತ್ಯದವರೆಗೂ ರೋಚಕವಾಗಿ ಸಾಗುವ ಸೀತಾರಾಮ್‌ನ ತನಿಖೆ!

ʻಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

ʻಸೆಕೆಂಡ್‌ ಕೇಸ್‌ ಆಫ್‌ ಸೀತಾರಾಮ್‌ʼ ಚಿತ್ರವು ಈ ಹಿಂದೆ ಬಂದಿದ್ದ ʻಸೀತಾರಾಮ್ ಬಿನೋಯ್ʼ ಸರಣಿಯ ಎರಡನೇ ಭಾಗವಾಗಿದ್ದು, ಮೊದಲ ಭಾಗಕ್ಕಿಂತಲೂ ಹೆಚ್ಚು ರೋಚಕವಾಗಿದೆ. ಮಲೆನಾಡಿನ ಹಿನ್ನೆಲೆಯಲ್ಲಿ ನಡೆಯುವ ಸರಣಿ ಕೊಲೆಗಳ ತನಿಖೆಯನ್ನು ಇನ್ಸ್‌ಪೆಕ್ಟರ್ ಸೀತಾರಾಮ್ ಹೇಗೆ ಮಾಡುತ್ತಾರೆ ಎಂಬುದು ಸಿನಿಮಾದ ಸಾರಾಂಶ.

Kichcha Sudeep: ರಾಜಮೌಳಿಯ ‘ವಾರಣಾಸಿ’ ಸಿನಿಮಾದಲ್ಲಿ ಸುದೀಪ್? ಪಾತ್ರ ಏನು?

ರಾಜಮೌಳಿಯ ‘ವಾರಣಾಸಿ’ ಸಿನಿಮಾದಲ್ಲಿ ಸುದೀಪ್? ಪಾತ್ರ ಏನು?

Sudeep: ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಚಿತ್ರ 'ವಾರಣಾಸಿ'ಯ ತಾರಾಗಣ ಮತ್ತು ಚಿತ್ರೀಕರಣದ ಸುತ್ತ ಭಾರಿ ಚರ್ಚೆ ನಡೆಯುತ್ತಿರುವಂತೆಯೇ, ಹೊಸ ಮಾಹಿತಿಯೊಂದು ಹೊರಬೀಳುತ್ತಿದೆ. ನಟ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳು ನಿಜವೇ ಎಂಬುದನ್ನು ತಯಾರಕರು ಇನ್ನೂ ದೃಢಪಡಿಸಿಲ್ಲ. 'ಬಾಹುಬಲಿ; ದಿ ಬಿಗಿನಿಂಗ್" ಚಿತ್ರದಲ್ಲಿ ಅಸ್ಲಾಂ ಖಾನ್ ಆಗಿ ಸುದೀಪ್ ಮಿಂಚಿದ್ದರು. ಇಡೀ 'ಬಾಹುಬಲಿ' ಸರಣಿ ಸಿನಿಮಾ ಶುರುವಾಗುವುದೇ ಕಟ್ಟಪ್ಪ ಹಾಗೂ ಅಸ್ಲಾಂ ಖಾನ್ ಭೇಟಿ ಸನ್ನಿವೇಶದಿಂದ.

Shiva Rajkumar:  ಶಿವರಾಜ್‌ ಕುಮಾರ್‌ಗೆ 40 ವರ್ಷಗಳ ಸಿನಿ ಪಯಣದ ಸಂಭ್ರಮ! ಗೀತಾ ಪಿಕ್ಚರ್ಸ್ ಸ್ಪೆಷಲ್‌ ಪೋಸ್ಟ್‌

ಶಿವರಾಜ್‌ ಕುಮಾರ್‌ಗೆ 40 ವರ್ಷಗಳ ಸಿನಿ ಪಯಣದ ಸಂಭ್ರಮ!

Shivaraj Kumar: ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅವರು ಚಿತ್ರರಂಗಕ್ಕೆ ಪ್ರವೇಶಿಸಿ 40 ವರ್ಷಗಳು ಭರ್ತಿಯಾಗಿವೆ. 1986ರಲ್ಲಿ 'ಆನಂದ್' ಸಿನಿಮಾ ಮೂಲ ಶಿವಣ್ಣ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಅಲ್ಲಿಂದ 'ರಥಸಪ್ತಮಿ', 'ಮನಮೆಚ್ಚಿದ ಹುಡುಗಿ' ಸೇರಿ ಮೂರು ಬ್ಯಾಕ್‌ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟು ಹ್ಯಾಟ್ರಿಕ್ ಹೀರೋ ಆದರು. ಇಲ್ಲಿಂದ ಶಿವಣ್ಣ ತಿರುಗಿ ನೋಡಿದ್ದೇ ಇಲ್ಲ. 'ಜೋಗಯ್ಯ' ಸಿನಿಮಾ ಮೂಲಕ ಸೆಂಚುರಿ ಸ್ಟಾರ್ ಆದರು. ಇನ್ನು 150 ಸಿನಿಮಾಗಳ ಕಡೆಗೆ ಇವರ ಪಯಣ ಮುನ್ನುಗ್ಗುತ್ತಿದೆ.

Kamal Haasan: ಕಮಲ್ ಹಾಸನ್-ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಟೈಟಲ್‌ ಫಿಕ್ಸ್‌!

ಕಮಲ್ -ಶಿವಕಾರ್ತಿಕೇಯನ್ ಜೋಡಿಯ ಹೊಸ ಸಿನಿಮಾಗೆ ಟೈಟಲ್‌ ಫಿಕ್ಸ್‌!

Seyon: ರಾಜ್ ಕಮಲ್ ಇಂಟರ್ನ್ಯಾಷನಲ್ ಹಾಗೂ ಟರ್ಮಿರಿಕ್ ಮೀಡಿಯಾ ಬ್ಯಾನರ್ ನಡಿ ಕಮಲ್ ಹಾಸನ್ ಹಾಗೂ ಆರ್ ಮಹೇಂದ್ರನ್ ನಿರ್ಮಾಣದಲ್ಲಿ ಸಿಯೋನ್ ಸಿನಿಮಾ ಮೂಡಿ ಬರ್ತಿದೆ. ಶಿವಕಾರ್ತಿಕೇಯನ್ ಹುಟ್ಟುಹಬ್ಬದ ವಿಶೇಷವಾಗಿ ಗ್ಲಿಂಪ್ಸ್ ಬಿಡುಗಡೆ ಮಾಡಲಾಗಿದೆ. ಹಣೆಯಲ್ಲಿ ವಿಭೂತಿ ಧರಿಸಿ, ಕೈಯಲ್ಲಿ ಕತ್ತಿ ಹಿಡಿದು ಶಿವಕಾರ್ತಿಕೇಯನ್ ಮಾಸ್ ಅವತಾರ ತಾಳಿದ್ದಾರೆ.

'ದಿ ಕೇರಳ ಸ್ಟೋರಿ 2'  ಚಿತ್ರತಂಡದ ವಿರುದ್ಧ ಪಿಣರಾಯಿ ವಿಜಯನ್ ಕೆಂಡ; ʻಸಿನಿಮಾ ಅಲ್ಲ, ಸುಳ್ಳು ಪ್ರಚಾರʼ ಎಂದ ಸಿಎಂ!

ʻದಿ ಕೇರಳ ಸ್ಟೋರಿ 2ʼ ಸಿನಿಮಾ ಮೇಲೆ ಸಿಎಂ ಪಿಣರಾಯಿ ವಿಜಯನ್ ಗರಂ!

ದಿ ಕೇರಳ ಸ್ಟೋರಿ 2 ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಈ ಸಿನಿಮಾವು ರಾಜ್ಯದ ಜಾತ್ಯತೀತ ಸಂಪ್ರದಾಯವನ್ನು ದುರ್ಬಲಗೊಳಿಸುವ ಮತ್ತು ಕೋಮು ದ್ವೇಷ ಹರಡುವ ಉದ್ದೇಶಪೂರ್ವಕ ಸಂಚು" ಎಂದು ಅವರು ಕರೆದಿದ್ದಾರೆ.

Sathish Ninasam: ಸದ್ದು ಮಾಡಿದ ʻದಿ ರೈಸ್‌ ಆಫ್‌ ಅಶೋಕʼ ಟ್ರೇಲರ್;‌ ಸಿನಿಪ್ರೇಮಿಗಳಿಗೆ ರವಿಚಂದ್ರನ್‌ ಕೊಟ್ರು ನೋಡಿ ಬೊಂಬಾಟ್‌ ಸಲಹೆ

The Rise Of Ashoka Trailer: ನೀನಾಸಂ ಸತೀಶ್‌ಗೆ ರವಿಮಾಮ ಹೇಳಿದ್ದೇನು?

The Rise of Ashoka: ಸತೀಶ್‌ ನೀನಾಸಂ ಅವರ ದಿ ರೈಸ್‌ ಆಫ್‌ ಅಶೋಕ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಸ್ಯಾಂಡಲ್‌ವುಡ್‌ನ ತಾರಾಬಳಗವೇ ಒಂದಾಗಿತ್ತು. ಸತೀಶ್ ನೀನಾಸಂ ಅವರ ಶ್ರಮವನ್ನು ಕೊಂಡಾಡಿದ ರವಿಚಂದ್ರನ್ ಅವರು, ವಿಮರ್ಶಕರ ದೃಷ್ಟಿಯಿಂದ ಸಿನಿಮಾ ನೋಡುವ ಬದಲು ಪ್ರೇಕ್ಷಕರಾಗಿ ಮೈಮರೆಯಲು ಸಲಹೆ ನೀಡಿದರು. ಫೆಬ್ರವರಿ 27ರಂದು ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಅದ್ದೂರಿಯಾಗಿ ಬಿಡುಗಡೆ ಆಗುತ್ತಿದೆ.

ʻಬಿಗ್‌ ಬಾಸ್‌ʼ ಗೆದ್ದ ಮೇಲೆ ಗಿಲ್ಲಿ ನಟನಿಗೆ ಸಿಕ್ಕಿತ್ತು ʻಕಾಟೇರʼ ಡೈರೆಕ್ಟರ್‌ ತರುಣ್‌ ಸುಧೀರ್‌ ಕಡೆಯಿಂದ ಅತ್ಯಮೂಲ್ಯ ಸಲಹೆ

ʻಬಿಗ್ ಬಾಸ್ʼ ವಿನ್ನರ್ ಗಿಲ್ಲಿ ನಟನಿಗೆ ತರುಣ್ ಸುಧೀರ್ ಹೇಳಿದ ಕಿವಿಮಾತೇನು?

ಗಿಲ್ಲಿ ನಟ ಅವರು ಬಿಗ್ ಬಾಸ್ ಕನ್ನಡ ಸೀಸನ್ 12ರ ಗೆಲುವಿನ ನಂತರ ಸಖತ್ ಬ್ಯುಸಿಯಾಗಿದ್ದಾರೆ. ನಿರ್ದೇಶಕ ತರುಣ್ ಸುಧೀರ್ ಅವರು ಗಿಲ್ಲಿ ನಟನಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದು, ನಟನೆಗಿಂತ ಹೆಚ್ಚಾಗಿ ಬರವಣಿಗೆ ಮತ್ತು ನಿರ್ದೇಶನದತ್ತ ಗಮನ ಹರಿಸಲು ಸೂಚಿಸಿದ್ದಾರೆ. ಬಿಗ್ ಬಾಸ್ ಯಶಸ್ಸಿನ ನಂತರ ಉಂಟಾಗುತ್ತಿರುವ ಒತ್ತಡವನ್ನು ಸಂಭ್ರಮದ ಭಾಗವಾಗಿ ಸ್ವೀಕರಿಸುವಂತೆ ಗಿಲ್ಲಿಗೆ ತರುಣ್ ಕಿವಿಮಾತು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ - ವಿಜಯ್‌ ದೇವರಕೊಂಡ ಮದುವೆಗೆ ಆಹ್ವಾನದ ಜೊತೆ ಉಡುಗೊರೆ; ಏನಿದೆ ವೆಡ್ಡಿಂಗ್‌ ಕಾರ್ಡ್‌ ಬಾಕ್ಸ್‌ನಲ್ಲಿ? ವಿಡಿಯೋ ವೈರಲ್‌

ರಶ್ಮಿಕಾ - ವಿಜಯ್ ಮದುವೆ ಆಹ್ವಾನದ ಜೊತೆ‌ ಗಿಫ್ಟ್‌ ಹ್ಯಾಂಪರ್ ಬಾಕ್ಸ್‌!

ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆ ಆಮಂತ್ರಣ ಪತ್ರಿಕೆ ಮತ್ತು ಗಿಫ್ಟ್ ಹ್ಯಾಂಪರ್ ಬಾಕ್ಸ್ ಈಗ ಇಂಟರ್ನೆಟ್‌ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯ್‌ಪುರದಲ್ಲಿ ವಿಜಯ್ ದೇವರಕೊಂಡ ಜೊತೆ ಮದುವೆಯಾಗಲಿರುವ ರಶ್ಮಿಕಾ, ಆಹ್ವಾನಿತರಿಗೆ 'ನ್ಯಾಷನಲ್ ಕ್ರಶ್' ಪರ್ಫ್ಯೂಮ್ ಮತ್ತು 'ರೌಡಿ' ಬ್ರ್ಯಾಂಡ್ ಟಿ-ಶರ್ಟ್ ಇರುವ ವಿಶೇಷ ಬಾಕ್ಸ್ ಕಳುಹಿಸಿದ್ದಾರೆ.

Photos: ʻಗಿಚ್ಚಿ ಗಿಲಿಗಿಲಿʼ ಖ್ಯಾತಿಯ ಚಿಲ್ಲರ್‌ ಮಂಜು ಮದುವೆ ಫಿಕ್ಸ್;‌ ಹುಡುಗಿ ಯಾರು? ಎಂಗೇಜ್‌ಮೆಂಟ್‌ ಆಗಿದ್ದೆಲ್ಲಿ?

ಚಿಲ್ಲರ್ ಮಂಜು ಬದುಕಿಗೆ ಕಾರುಣ್ಯ ಎಂಟ್ರಿ: ಸದ್ದಿಲ್ಲದೆ ನಡೆದ ನಿಶ್ಚಿತಾರ್ಥ

ಕಲರ್ಸ್‌ ಕನ್ನಡ ವಾಹಿನಿಯ ʻಗಿಚ್ಚಿ ಗಿಲಿಗಿಲಿʼ ಮತ್ತು ʻಮಜಾಭಾರತʼ ರಿಯಾಲಿಟಿ ಶೋಗಳ ಮೂಲಕ ಫೇಮಸ್‌ ಆಗಿರುವ ನಟ ಚಿಲ್ಲರ್‌ ಮಂಜು (ಮಂಜುನಾಥ್‌). ತಮ್ಮ ಕಾಮಿಡಿ ಟೈಮಿಂಗ್‌ ಹಾಗೂ ಎಕ್ಸ್‌ಪ್ರೆಶನ್‌ಗಳಿಂದ ಕಿರುತೆರೆ ವೀಕ್ಷಕರ ಮನಸ್ಸು ಗೆದ್ದಿರುವ ಮಂಜ, ಒಂದು ಗುಡ್‌ ನ್ಯೂಸ್‌ ನೀಡಿದ್ದಾರೆ. ಅದೇನಪ್ಪ ಅಂದ್ರೆ, ಅವರು ಸದ್ದಿಲ್ಲದೇ ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾರೆ. ಕಾರುಣ್ಯಾ ಎಂಬುವವರ ಜೊತೆಗೆ ಚಿಲ್ಲರ್ ಮಂಜ ಎಂಗೇಜ್‌ ಆಗಿದ್ದು, ಈಚೆಗೆ ಸಿಂಪಲ್‌ ಆಗಿ ಅವರ ಎಂಗೇಜ್‌ಮೆಂಟ್‌ ನಡೆದಿದೆ. ಇದೇ ಶೋನ ಕಲಾವಿದರಾದ ಹಾಸ್ಯ ನಟ ಶಿವು ಹಾಗೂ ಮಾನಸ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಚಿಲ್ಲರ್ ಮಂಜು ಕೂಡ ಎಂಗೇಜ್‌ ಆಗಿದ್ದಾರೆ. ಈಚೆಗೆ ಬೆಂಗಳೂರಿನಲ್ಲಿ ಈ ಎಂಗೇಜ್‌ಮೆಂಟ್‌ ನಡೆದಿದೆ ಎಂದು ಹೇಳಲಾಗಿದೆ. ಇಲ್ಲಿವೆ ನೋಡಿ ಚಿಲ್ಲರ್‌ ಮಂಜು ಮತ್ತು ಕಾರುಣ್ಯಾ ಅವರ ಎಂಗೇಜ್‌ಮೆಂಟ್‌ ಫೋಟೋಗಳು.

Toxic Teaser: ದಿಢೀರ್‌ ಅಂತ ಸರ್ಪ್ರೈಸ್‌ ನೀಡಿದ ‌ʻರಾಕಿಂಗ್‌ ಸ್ಟಾರ್‌ʼ ಯಶ್; ರಾಯನ ಮತ್ತೊಂದು ಝಲಕ್‌ ನೋಡಲು ನೀವು ರೆಡಿನಾ?

ರಕ್ತಸಿಕ್ತ ರಣರಂಗದಲ್ಲಿ 'ರಾಯ'ನ ಅಬ್ಬರ; ಬರ್ತಿದೆ ʻಟಾಕ್ಸಿಕ್‌‌ʼ ಟೀಸರ್‌

Toxic Teaser Release Date: ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ ಅನ್ನು ದಿಢೀರ್‌ ಎಂದು ಘೋಷಣೆ ಮಾಡಲಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ 'ರಾಯ' ಎಂಬ ರಗಡ್ ಪಾತ್ರದಲ್ಲಿ ಯಶ್ ಕಾಣಿಸಿಕೊಂಡಿದ್ದು, ಈಗ ರಿಲೀಸ್‌ ಆಗಿರುವ ಹೊಸ ಪೋಸ್ಟರ್ ಭೀಕರ ಹಿಂಸಾಚಾರದ ಸುಳಿವು ನೀಡಿದೆ.

Raakshasa Web Series: ನಿರೂಪಕಿ ಅನುಶ್ರೀ ಮದುವೆಯಲ್ಲಿ ಆಗಿದ್ದೇನು? ವಿಜಯ್‌ ರಾಘವೇಂದ್ರ - ತರುಣ್‌ ಸುಧೀರ್‌ ಥ್ಯಾಂಕ್ಸ್‌ ಹೇಳಿದ್ದೇಕೆ? ಇಲ್ಲಿದೆ ಇಂಟರೆಸ್ಟಿಂಗ್‌ ಕಥೆ

ಅನುಶ್ರೀ ಮದುವೆಯಲ್ಲಿ ಫಿಕ್ಸ್ ಆಗಿತ್ತು ವಿಜಯ್ ರಾಘವೇಂದ್ರ ವೆಬ್‌ ಸೀರೀಸ್!

ನಿರ್ಮಾಪಕ ತರುಣ್ ಸುಧೀರ್ ಮತ್ತು ನಟ ವಿಜಯ್ ರಾಘವೇಂದ್ರ ಅವರ ಈ ಬಹುನಿರೀಕ್ಷಿತ ರಾಕ್ಷಸ ವೆಬ್ ಸರಣಿ ಫೆಬ್ರವರಿ 20ರಿಂದ ಜೀ5ನಲ್ಲಿ ಸ್ಟ್ರೀಮಿಂಗ್‌ ಆಗಲಿದೆ. ಈ ಪ್ರಾಜೆಕ್ಟ್‌ಗೆ ವಿಜಯ್‌ ರಾಘವೇಂದ್ರ ಆಯ್ಕೆ ಆಗಿದ್ದು ನಿರೂಪಕಿ ಅನುಶ್ರೀ ಮದುವೆಯಲ್ಲಿ ಅನ್ನೋದು ವಿಶೇಷ. ಉತ್ತರ ಕರ್ನಾಟಕದ ಸೊಗಡಿನ ಕಥೆಯನ್ನು ಹೊಂದಿರುವ ಈ ಸರಣಿಯಲ್ಲಿ ಮಯೂರಿ ಕ್ಯಾತರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Suhana Syed: ʻಸವದತ್ತಿ ಯಲ್ಲಮ್ಮʼ ಅಂತ ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್‌

Suhana Syed: ಹೆಸರು ಬದಲಿಸಿಕೊಳ್ಳಿ ಅಂದವರಿಗೆ ಸುಹಾನಾ ಗರಂ ರಿಯಾಕ್ಷನ್‌

Suhana Syed singer: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಮೂಲಕ ಖ್ಯಾತಿ ಪಡೆದ ಗಾಯಕಿ ಸುಹಾನಾ ಸೈಯದ್‌ . ಇತ್ತೀಚೆಗಷ್ಟೇ ನಿತಿನ್‌ ಶಿವಾಂಶ್‌ ಅವರನ್ನು ಮದುವೆಯಾಗಿದ್ದರು. ಇವರಿಬ್ಬರ ಧರ್ಮ ಬೇರೆ ಬೇರೆ ಆಗಿದ್ದ ಕಾರಣ ಈ ಸುದ್ದಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಇವರ ಧರ್ಮ ಬೇರೆಯಾದ ಕಾರಣ ಕುಟುಂಬಸ್ಥರ ವಿರೋಧದ ನಡುವೆಯು ಅವರನ್ನು ಒಪ್ಪಿಸಿ ಮದುವೆಯಾಗೋದು ಸುಲಭ ಮಾತಾಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸುಹಾನಾ ಸಖತ್ ಆಕ್ಟೀವ್ ಆಗಿದ್ದಾರೆ.

Vijay Deverakonda: ವಿಜಯ್‌ ದೇವರಕೊಂಡ ಮನೆ ಈಗ ಝಗಮಗ! ಮದುವೆ ತಯಾರಿ ಹೇಗಿದೆ?

ವಿಜಯ್‌ ದೇವರಕೊಂಡ ಮನೆ ಈಗ ಝಗಮಗ! ಮದುವೆ ತಯಾರಿ ಹೇಗಿದೆ?

Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈ ತಿಂಗಳು ಉದಯಪುರದಲ್ಲಿ ವಿವಾಹವಾಗಲಿದ್ದಾರೆ. ಈ ಜೋಡಿ ಇನ್ನೂ ಮೌನವಾಗಿದ್ದು, ಇತ್ತೀಚೆಗೆ ಒಟ್ಟಿಗೆ ಕಾಣಿಸಿಕೊಂಡಿರುವ ಮತ್ತು ಸೋರಿಕೆಯಾದ ವಿವಾಹ ಆಮಂತ್ರಣ ಪತ್ರಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ಮದುವೆ ಆಗುತ್ತಿರೋದು ಫಿಕ್ಸ್‌ ಎನ್ನಲಾಗುತ್ತಿದೆ. ಹೂವಿನ ಅಲಂಕಾರ ಮತ್ತು ದೀಪಗಳಿಂದ ಅಲಂಕರಿಸಲ್ಪಟ್ಟ ವಿಜಯ್ ದೇವರಕೊಂಡ ಅವರ ಮನೆಯ ವಿಡಿಯೋ ಇದೀಗ ವೈರಲ್‌ ಆಗಿದೆ.

Loading...