ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Allu Arjun: ಅಲ್ಲು ಅರ್ಜುನ್ ಬರ್ತ್‌ಡೇ ; ಮನೆ ಎದುರು ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು

ಅಲ್ಲು ಅರ್ಜುನ್ ಮನೆ ಎದುರು ಜಮಾಯಿಸಿದ ಅಭಿಮಾನಿಗಳಿಗೆ ಪೊಲೀಸರ ಲಾಠಿ ಏಟು

Allu Arjun: ಏಪ್ರಿಲ್ 8 ರಂದು ನಟ ಅಲ್ಲು ಅರ್ಜುನ್ (Allu Arjun) ತಮ್ಮ 44 ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಫ್ಯಾನ್ಸ್‌ ಮಂಗಳವಾರ ರಾತ್ರಿಯಿಂದಲೇ ಹೈದರಾಬಾದ್‌ನಲ್ಲಿರುವ ಅವರ ಜುಬಿಲಿ ಹಿಲ್ಸ್ ಮನೆಯ ಹೊರಗೆ ಅವರನ್ನು ನೋಡಲು ಮತ್ತು ವೈಯಕ್ತಿಕವಾಗಿ ಶುಭ ಹಾರೈಸಲು ಅವರು ಸಾಲುಗಟ್ಟಿ ನಿಂತಿದ್ದರು. ಜನರನ್ನು ನಿಯಂತ್ರಣ ಮಾಡಲು ಪೊಲೀಸರು ಲಾಠಿ ಬೀಸಬೇಕಾಯಿತು. ಅಲ್ಲು ಅರ್ಜುನ್ ಮನೆಯ ಹೊರಗೆ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

5 ತಿಂಗಳ ಅಂತರದಲ್ಲಿ ರಿಲೀಸ್‌ ಆಗಲಿವೆ ರಜನಿಕಾಂತ್‌ ನಟನೆಯ ಎರಡು ಬಿಗ್‌ ಬಜೆಟ್‌ ಸಿನಿಮಾಗಳು! ʻತಲೈವಾʼ ಫ್ಯಾನ್ಸ್‌ಗೆ ಹಬ್ಬವೋ ಹಬ್ಬ!

75ರ ಹರೆಯದಲ್ಲೂ ತಲೈವಾ ಅಬ್ಬರ; 5 ತಿಂಗಳ ಅಂತರದಲ್ಲಿ 2 ಸಿನಿಮಾಗಳು ರಿಲೀಸ್!

Rajinikanth New Movie: ಸೂಪರ್ ಸ್ಟಾರ್ ರಜನಿಕಾಂತ್ 75ನೇ ವಯಸ್ಸಿನಲ್ಲೂ ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ತೊಡಗಿದ್ದು, ಕೇವಲ ಐದು ತಿಂಗಳ ಅಂತರದಲ್ಲಿ ಎರಡು ಬಿಗ್‌ ಬಜೆಟ್‌ ಸಿನಿಮಾಗಳನ್ನು ಬಿಡುಗಡೆ ಮಾಡುವ ಗುರಿ ಹೊಂದಿದ್ದಾರೆ. ಆಗಸ್ಟ್‌ನಲ್ಲಿ ಸನ್‌ ಪಿಕ್ಚರ್ಸ್ ನಿರ್ಮಾಣದ 'ಜೈಲರ್ 2' ತೆರೆಕಾಣಲಿದ್ದರೆ, 2027ರ ಸಂಕ್ರಾಂತಿಗೆ ಕಮಲ್ ಹಾಸನ್ ನಿರ್ಮಾಣದ ಅವರ 173ನೇ ಸಿನಿಮಾ ಬಿಡುಗಡೆಯಾಗಲಿದೆ.

ಮಲಯಾಳಂನ ʻಪಳ್ಳಿ ಚಟ್ಟಂಬಿʼ ಚಿತ್ರಕ್ಕೆ ಸಾಥ್‌ ನೀಡಿದ ʻಹೊಂಬಾಳೆ ಫಿಲ್ಮ್ಸ್‌ʼ; ಕೊನೇ ಕ್ಷಣದಲ್ಲಿ ಈ ಸಿನಿಮಾ ಪೋಸ್ಟ್‌ಪೋನ್‌ ಆಗಿದ್ದೇಕೆ?

ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಯಕ್ಷಗಾನ -‌ ಕನ್ನಡ ಡೈಲಾಗ್

Palli Chattambi Release Date: ಮಲಯಾಳಂ ನಟ ಟೊವಿನೋ ಥಾಮಸ್ ಅಭಿನಯದ ಬಹುನಿರೀಕ್ಷಿತ ‘ಪಳ್ಳಿ ಚಟ್ಟಂಬಿ’ ಚಿತ್ರದ ಬಿಡುಗಡೆ ದಿನಾಂಕ ಬದಲಾಗಿದೆ. ಏಪ್ರಿಲ್ 10ಕ್ಕೆ ಬರಬೇಕಿದ್ದ ಈ ಸಿನಿಮಾ ಕೇರಳ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 15ಕ್ಕೆ ಮುಂದೂಡಲ್ಪಟ್ಟಿದೆ.

Actress Ashwini : ಆ ಮನುಷ್ಯನಿಗೆ ನಾನು ಒಬ್ಬಳೆ ಆಗಿರಲಿಲ್ಲ! ಲವ್‌, ಬ್ರೇಕಪ್‌ ಬಗ್ಗೆ ರಿವೀಲ್‌ ಮಾಡಿದ ಬಿಗ್‌ ಬಾಸ್‌ ಖ್ಯಾತಿಯ ಅಶ್ವಿನಿ

ಲವ್‌, ಬ್ರೇಕಪ್‌ ಬಗ್ಗೆ ರಿವೀಲ್‌ ಮಾಡಿದ ಬಿಗ್‌ ಬಾಸ್‌ ಖ್ಯಾತಿಯ ಅಶ್ವಿನಿ

Actress Ashwini :ಕನ್ನಡದ ಬಲು ಜನಪ್ರಿಯ ಧಾರಾವಾಹಿ ‘ಮುದ್ದುಲಕ್ಷ್ಮಿʼಯ ನಟಿ ಅಶ್ವಿನಿ . ಸಣ್ಣ ವಯಸ್ಸಿಗೆ ಬೆಂಗಳೂರಿಗೆ ಬಂದ ಅಶ್ವಿನಿ, ನಿರೂಪಕಿ ಆಗಿ ಸೇರಿಕೊಂಡರಂತೆ. ಬಳಿಕ ಬಿಗ್‌ ಬಾಸ್‌ ಮೂಲಕ ಮತ್ತಷ್ಟು ಫೇಮಸ್‌ ಆದರು. ನಟಿಯಾಗಿ ಗುರುತಿಸಿಕೊಳ್ಳಲು ಸತತ ಪ್ರಯತ್ನ ಮಾಡಿದ್ದಾರೆ. ಬಹಳ ಸಣ್ಣ ವಯಸ್ಸಿಗೆ ಮನೆ ಬಿಟ್ಟು ಬಂದು ಬೆಂಗಳೂರಿಗೆ ಬಂದವರು ಅಶ್ವಿನಿ. ಅವರೇ ಹೇಳಿಕೊಂಡಿರುವಂತೆ, ಎಲ್ಲರಿಗೂ ಪೋಷಕರೆಂದರೆ ಪ್ರೀತಿ, ಭಯವಾದರೆ ಪೋಷಕರ ಬಳಿ ಹೋಗುತ್ತಾರೆ. ಆದರೆ ಪೋಷಕರಿಂದಲೇ ಭಯವಾದರೆ? ಹಾಗಾಗಿ ನಾನು ಪೋಷಕರನ್ನು ಬಿಟ್ಟು ಬಂದಿದ್ದೆʼ ಎಂದು ಸಾಕಷ್ಟು ಸಲ ಹೇಳಿಕೊಂಡಿದ್ದರು. ಇದೀಗ ನಟಿ ತಮ್ಮ ಲವ್‌ ಸ್ಟೋರಿ ಹಾಗೇ ಬಾಲ್ಯದ ಕಹಿ ನೆನಪುಗಳ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

‌ʻಜೈಲರ್ 2ʼ ಸಿನಿಮಾದಲ್ಲಿ ʻಬಾದ್‌ಶಾʼ ಶಾರುಖ್‌ ಖಾನ್‌ ನಟಿಸೋದಿಲ್ಲವೇ? ಛೇ! ರಜನಿಕಾಂತ್‌ ಫ್ಯಾನ್ಸ್‌ಗೆ ನಿರಾಸೆ

‌ʻಜೈಲರ್ 2ʼ ಚಿತ್ರದಿಂದ ಬಾಲಿವುಡ್ ಶಾರುಖ್ ಔಟ್: ರಜನಿ‌ ಫ್ಯಾನ್ಸ್‌ ನಿರಾಸೆ

Shah Rukh Khan Jailer 2: ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಜೈಲರ್ 2' ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರ ಮಾಡಲಿದ್ದಾರೆ ಎಂಬ ವದಂತಿಗಳಿಗೆ ಈಗ ತೆರೆ ಬಿದ್ದಿದೆ. ತಮ್ಮ ಮಗಳು ಸುಹಾನಾ ಖಾನ್ ಅವರ ಚೊಚ್ಚಲ ಚಿತ್ರ 'ಕಿಂಗ್' ಮೇಲೆ ಹೆಚ್ಚು ಗಮನ ಹರಿಸುತ್ತಿರುವ ಶಾರುಖ್, 'ಜೈಲರ್ 2'ನಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ರಜನಿಕಾಂತ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.

ʻಪ್ರಶಾಂತ್‌ ನೀಲ್‌ - ಎನ್‌ಟಿಆರ್‌ ಸಿನಿಮಾದ ಬಗ್ಗೆ ವದಂತಿ ಹಬ್ಬಿಸಬೇಡಿʼ; ಚಿತ್ರತಂಡದಿಂದ ಬಂತು ಖಡಕ್‌ ಸ್ಪಷ್ಟನೆ

NTR-ಪ್ರಶಾಂತ್ ನೀಲ್ ಸಿನಿಮಾ ನಿಂತಿದೆಯಾ? ವದಂತಿಗೆ ಕೌಂಟರ್ ಕೊಟ್ಟ ಚಿತ್ರತಂಡ

ಜೂ. ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಹೊಸ ಚಿತ್ರದ ಶೂಟಿಂಗ್ ರದ್ದಾಗಿದೆ. ನಾಯಕನ ಲುಕ್ ಬಗ್ಗೆ ನೀಲ್‌ಗೆ ಬೇಸರವಿದೆ ಎಂಬ ವದಂತಿಗಳಿಗೆ ಮೈತ್ರಿ ಮೂವಿ ಮೇಕರ್ಸ್ ಸ್ಪಷ್ಟನೆ ನೀಡಿದೆ. ಚಿತ್ರೀಕರಣ ನಿಂತಿಲ್ಲ, ಬದಲಿಗೆ ಸಣ್ಣ ವಿರಾಮ ತೆಗೆದುಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ರಂಗಭೂಮಿಯ ಭರವಸೆಯ ನಟ ಮುರಳಿ ಆತ್ಮಹತ್ಯೆ; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ರಂಗಭೂಮಿಯ ಭರವಸೆಯ ನಟ ಮುರಳಿ ಆತ್ಮಹತ್ಯೆ

Actor Murali Death: ಬೆಂಗಳೂರಿನ ರಂಗಭೂಮಿ ಮತ್ತು ಕಿರುತೆರೆಯ ಉದಯೋನ್ಮುಖ ನಟ ಮುರಳಿ ಸಾರಕ್ಕಿ ಕೆರೆ ಬಳಿಯ ನಿರ್ಜನ ಪ್ರದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹದ ಪತ್ತೆಯಾಗಿದೆ. ಅವರ ನಿಧನಕ್ಕೆ ನಿರ್ದೇಶಕ ಮಂಸೋರೆ ಸೇರಿದಂತೆ ಹಲವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಜೀ ಕನ್ನಡದ 'ಡಾನ್ಸ್ ಕರ್ನಾಟಕ ಡಾನ್ಸ್' ಗ್ರ್ಯಾಂಡ್‌ ಫಿನಾಲೆ; ಆ 5 ಜೋಡಿಗಳಲ್ಲಿ ಯಾರ ಮಡಿಲಿಗೆ ಬೀಳಲಿದೆ ವಿನ್ನರ್‌ ಟ್ರೋಫಿ

Dance Karnataka Dance: ಫಿನಾಲೆ ತಲುಪಿದ ಟಾಪ್ 5 ಸ್ಪರ್ಧಿಗಳ ನಡುವೆ ಫೈಟ್

Dance Karnataka Dance Finale: ಜೀ ಕನ್ನಡ ವಾಹಿನಿಯ ಪ್ರತಿಷ್ಠಿತ ರಿಯಾಲಿಟಿ ಶೋ 'ಡಾನ್ಸ್ ಕರ್ನಾಟಕ ಡಾನ್ಸ್' ಅಂತಿಮ ಘಟ್ಟಕ್ಕೆ ತಲುಪಿದೆ. ಏಪ್ರಿಲ್ 11 ಮತ್ತು 12 ರಂದು ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದ್ದು, ಐದು ಪ್ರಬಲ ಜೋಡಿಗಳು ಟ್ರೋಫಿಗಾಗಿ ಸೆಣಸಲಿವೆ.

ಪತಿ ರಣವೀರ್‌ ಸಿಂಗ್‌ ನಟಿಸಿರುವ ʻಧುರಂಧರ್‌ 2ʼ ಬಗ್ಗೆ ದೀಪಿಕಾಗೆ ಅಸಮಾಧಾನ? ಅಸಲಿ ವಿಚಾರವನ್ನ ಹೊರಬಿತ್ತು ನೋಡಿ!

ʻಧುರಂಧರ್‌ 2ʼ ವಿಚಾರದಲ್ಲಿ ಟ್ರೋಲಿಗರ ಬಾಯಿಮುಚ್ಚಿಸಿದ ನಟಿ ದೀಪಿಕಾ ಪಡುಕೋಣೆ

ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಬಾಕ್ಸ್ ಆಫೀಸ್‌ನಲ್ಲಿ 1650 ಕೋಟಿ ರೂ. ಗಳಿಸಿ ದಾಖಲೆ ಬರೆಯುತ್ತಿದ್ದರೂ ಪತ್ನಿ ದೀಪಿಕಾ ಪಡುಕೋಣೆ ಏನೊಂದು ಪ್ರತಿಕ್ರಿಯೆ ನೀಡಿರಲಿಲ್ಲ. ಈ ಬಗ್ಗೆ ಹಲವು ವದಂತಿಗಳು ಹರಿದಾಡುತ್ತಿದ್ದವು. ಆದರೆ ನೆಟ್ಟಿಗರೊಬ್ಬರ ಪೋಸ್ಟ್‌ಗೆ ಕಮೆಂಟ್ ಮಾಡಿರುವ ದೀಪಿಕಾ, ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಅಲ್ಲು ಅರ್ಜುನ್ ಬರ್ತ್‌ಡೇ ಧಮಾಕಾ: ನಿರ್ದೇಶಕ ಅಟ್ಲಿ ಜೊತೆಗಿನ ಹೊಸ ಚಿತ್ರಕ್ಕೆ 'ರಾಕಾ' ಟೈಟಲ್‌ ಫಿಕ್ಸ್!‌

ಅಲ್ಲು ಅರ್ಜುನ್ ಹೊಸ ಅವತಾರ;‌ ‌ʻರಾಕಾʼ ಲುಕ್ ನೋಡಿ ಫ್ಯಾನ್ಸ್‌ ಥ್ರಿಲ್‌

ಅಲ್ಲು ಅರ್ಜುನ್‌ ಹುಟ್ಟುಹಬ್ಬದ ಸಂಭ್ರಮದಲ್ಲೇ ಅವರ ಹೊಸ ಚಿತ್ರಕ್ಕೆ ರಾಕಾ ಎಂದು ಟೈಟಲ್‌ ಇಡಲಾಗಿದೆ. ನಿರ್ದೇಶಕ ಅಟ್ಲಿ ಮತ್ತು ಅಲ್ಲು ಅರ್ಜುನ್‌ ಕಾಂಬಿನೇಷನ್‌ನ ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡಿಕೆ ಮಾಡುತ್ತಿದೆ. ಭಯಾನಕ ಕ್ರಿಯೇಚರ್ ಲುಕ್‌ನಲ್ಲಿ ಅಲ್ಲು ಅರ್ಜುನ್ ಕಾಣಿಸಿಕೊಂಡಿದ್ದು, ದೀಪಿಕಾ ಪಡುಕೋಣೆ ಈ ಸಿನಿಮಾದ ನಾಯಕಿಯಾಗಿದ್ದಾರೆ.

Nayanthara: ಪತ್ನಿಯಾಗಿ ವೇದಿಕೆ ಏರಿದ ನಯನತಾರಾ! ವಿಘ್ನೇಶ್ ಶಿವನ್ ಭಾವುಕ

Nayanthara: ಪತ್ನಿಯಾಗಿ ವೇದಿಕೆ ಏರಿದ ನಯನತಾರಾ! ವಿಘ್ನೇಶ್ ಶಿವನ್ ಭಾವುಕ

Nayanthara: ನಯನತಾರಾ ಹೆಚ್ಚಾಗಿ ಯಾವುದೇ ಸಿನಿಮಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲ್ಲ. ಕೆಲವು ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಆದರೆ, ಮಂಗಳವಾರ, ಏಪ್ರಿಲ್ 8 ರಂದು ನಡೆದ ಲವ್ ಇನ್ಶುರೆನ್ಸ್ ಕಂಪನಿಯ ಪ್ರಿ ರಿಲೀಸ್‌ ಇವೆಂಟ್‌ಗೆ ಚಿತ್ರದ ನಿರ್ಮಾಪಕಿಯಾಗಿ ಅಲ್ಲ, ಆದರೆ ವಿಘ್ನೇಶ್ ಶಿವನ್ ಅವರ ಪತ್ನಿಯಾಗಿ ವೇದಿಕೆಗೆ ಬಂದರು. ಅಷ್ಟೇ ಅಲ್ಲ ನಟಿ ಭಾವುಕರಾಗಿದ್ದಾರೆ.

Daali Dhananjaya: ಡಾಲಿ ಧನಂಜಯ ನಿರ್ಮಾಣದ ಹೊಸ ಹಾಸ್ಯ ವೆಬ್ ಸರಣಿ ಘೋಷಣೆ; ಸ್ಟ್ರೀಮಿಂಗ್‌ ಯಾವಾಗ?

ಡಾಲಿ ಧನಂಜಯ ನಿರ್ಮಾಣದ ಹೊಸ ಹಾಸ್ಯ ವೆಬ್ ಸರಣಿ ಘೋಷಣೆ

Daali Dhananjaya: ಖ್ಯಾತ ನಟ ಡಾಲಿ ಧನಂಜಯ ತಮ್ಮ ಡಾಲಿ ಪಿಕ್ಚರ್ಸ್ ಲಾಂಛನದಲ್ಲಿ “ಜೆರಾಕ್ಸ್” ಎಂಬ ಹೊಸ ಫ್ಯಾಂಟಸಿ ಕಾಮಿಡಿ ಥ್ರಿಲ್ಲರ್ ವೆಬ್ ಸರಣಿಯನ್ನು ಘೋಷಿಸಿದ್ದಾರೆ. ಇದು ಡಾಲಿ ಧನಂಜಯ ಅವರ ಮೊದಲ ಒಟಿಟಿ ನಿರ್ಮಾಣವಾಗಿದೆ. ZEE5 ಹಾಗೂ ಡಾಲಿ ಪಿಕ್ಚರ್ಸ್ ಸಹಯೋಗದಲ್ಲಿ ಮೂಡಿ ಬರುತ್ತಿರುವ ಈ ಸರಣಿಯನ್ನು ‘ಬ್ಲಿಂಕ್’ ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ.

Allu Arjun Birthday: ಲುಕ್ ಗಾಗಿ ಟ್ರೋಲ್ ಆಗಿದ್ದ ನಟ ಇಂದು ಸೂಪರ್ ಸ್ಟಾರ್! ಅಲ್ಲು ಅರ್ಜುನ್ ಸಿನಿ ಜರ್ನಿ ಹೇಗಿತ್ತು?

Allu Arjun : ಲುಕ್ ಗಾಗಿ ಟ್ರೋಲ್ ಆಗಿದ್ದ ನಟ ಇಂದು ಸೂಪರ್ ಸ್ಟಾರ್!

Allu Arjun Birthday: 2000ದ ದಶಕದ ಆರಂಭದಲ್ಲಿ, ಚಿರಂಜೀವಿ ಅವರ ಸೋದರಳಿಯ ಮತ್ತು ಅಲ್ಲು ರಾಮಲಿಂಗಯ್ಯ ಅವರ ಮೊಮ್ಮಗನ ಚೊಚ್ಚಲ ಚಿತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇತ್ತು. 20 ನೇ ವಯಸ್ಸಿನಲ್ಲಿ, ಐಷಾರಾಮಿ ಜೀವನದಲ್ಲಿ ಹುಟ್ಟಿ ಬೆಳೆದ ಅಲ್ಲು ಅರ್ಜುನ್ , ತಮ್ಮ ಚಿತ್ರಕ್ಕಾಗಿ ಹಳ್ಳಿ ಹುಡುಗನ ಪಾತ್ರವನ್ನು ನಿರ್ವಹಿಸಲು ನಿರ್ಧರಿಸಿದರು. ಮೊದಲ ಮೊದಲಿಗೆ ಸಾಕಷ್ಟು ಸೋಲು ಕಂಡಿದ್ದರೂ ಕೊನೆಗೆ ಸಿನಿಮಾ ರಂಗದಲ್ಲಿ ಹೇಗೆ ಮಿಂಚಿದ್ದರು ಎಂಬುದುನ್ನ ತಿಳಿದುಕೊಳ್ಳೋಣ.

ʻನನಗೆ ಮದುವೆಯಾಗಿ ನಾಲ್ಕು ಮಕ್ಕಳಿವೆ..ʼ; ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಟಿ ತ್ರಿಷಾ ಕೃಷ್ಣನ್ ಮಸ್ತ್‌ ಕೌಂಟರ್‌!

ʻನನಗೆ ಮದುವೆಯಾಗಿದೆ, 4 ಮಕ್ಕಳಿವೆʼ; ವದಂತಿಗೆ ನಟಿ ತ್ರಿಷಾ ಮಸ್ತ್ ಕೌಂಟರ್

Trisha Krishnan Marriage: ನಟಿ ತ್ರಿಷಾ ಕೃಷ್ಣನ್ ತಮ್ಮ ಮದುವೆ ಮತ್ತು ಚಿತ್ರರಂಗದಿಂದ ನಿವೃತ್ತಿಯಾಗುವ ಸುಳ್ಳು ಸುದ್ದಿಗಳ ವಿರುದ್ಧ ಗುಡುಗಿದ್ದಾರೆ. "ನನಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ, ನಿಮ್ಮ ಕಲ್ಪನೆಗೆ ಈ ಉತ್ತರ ಸಾಕೇ?" ಎಂದು ವ್ಯಂಗ್ಯವಾಗಿ ಪ್ರಶ್ನಿಸುವ ಮೂಲಕ ವದಂತಿ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದಾರೆ.

ʻರಾಮಾಯಣʼ ಚಿತ್ರದಲ್ಲಿ ಯಶ್‌ಗೆ ರಾವಣನ ಪಾತ್ರ ಮಾಡುವ ಮನಸ್ಸಾಗಿದ್ದೇಕೆ? ಅಸಲಿ ವಿಷ್ಯ ಬಿಚ್ಚಿಟ್ಟ ನಿರ್ದೇಶಕ ನಿತೇಶ್‌ ತಿವಾರಿ

Ramayana: ಯಶ್ ರಾವಣನಾಗಿದ್ದೇಕೆ? ಸಸ್ಪೆನ್ಸ್ ಬಿಚ್ಚಿಟ್ಟ ನಿತೇಶ್ ತಿವಾರಿ!

Ramayana Movie: ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ನಟ ಯಶ್ ರಾವಣನ ಪಾತ್ರ ಒಪ್ಪಿಕೊಂಡಿದ್ದು ಸಿನಿಮಾ ಲೋಕದಲ್ಲಿ ಸಂಚಲನ ಮೂಡಿಸಿದೆ. ರಾವಣನನ್ನು ಕೇವಲ ಸಾಂಪ್ರದಾಯಿಕ ಖಳನಾಯಕನಾಗಿ ತೋರಿಸದೆ, ಒಬ್ಬ ಮಹಾನ್ ಪಂಡಿತ, ಶಿವಭಕ್ತ ಮತ್ತು ಸಂಗೀತಗಾರನಾಗಿ ಆತನ ಸಂಕೀರ್ಣ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿರುವುದು ಯಶ್ ಈ ಪಾತ್ರ ಒಪ್ಪಲು ಮುಖ್ಯ ಕಾರಣ ಎಂದು ನಿರ್ದೇಶಕರು ತಿಳಿಸಿದ್ದಾರೆ.

ʻಎಲ್ರ ಕಾಲೆಳಿಯತ್ತೆ ಕಾಲʼ ಸಿನಿಮಾ ಟ್ರೇಲರ್‌ ರಿಲೀಸ್;‌ ಈ ಚಿತ್ರದಲ್ಲಿ ಚಂದನ್‌ ಶೆಟ್ಟಿ ನಟಿಸಲು ಕಾರಣ ಇಲ್ಲಿದೆ!

Chandan Shetty: ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರದ ಟ್ರೇಲರ್‌ ರಿಲೀಸ್‌

Chandan Shetty: ಕನ್ನಡದ ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ಒಪ್ಪಿಕೊಂಡಿದ್ದ ಮೊದಲ ಸಿನಿಮಾ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರವು 90ರ ದಶಕದ ರೆಟ್ರೋ ಹಿನ್ನೆಲೆಯ ಕಥೆಯನ್ನು ಹೊಂದಿದ್ದು, ಏಪ್ರಿಲ್ 17ರಂದು ತೆರೆಗೆ ಬರಲಿದೆ.

ದಾಂಪತ್ಯ ಬದುಕಿಗೆ ಕಾಲಿಟ್ಟ ʻಶೇಕ್ ಇಟ್ ಪುಷ್ಪವತಿʼ ಖ್ಯಾತಿಯ ನಟಿ ನಿಮಿಕಾ ರತ್ನಾಕರ್;‌ ಹುಡುಗ ಯಾರು?

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪುಷ್ಪವತಿ' ನಿಮಿಕಾ ರತ್ನಾಕರ್!

Nimika Ratnakar Wedding: 'ಕ್ರಾಂತಿ' ಸಿನಿಮಾದ 'ಶೇಕ್ ಇಟ್ ಪುಷ್ಪವತಿ' ಹಾಡಿನ ಮೂಲಕ ಮನೆಮಾತಾದ ನಟಿ ನಿಮಿಕಾ ರತ್ನಾಕರ್ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಏಪ್ರಿಲ್ 6ರಂದು ಮುಂಬೈ ಮೂಲದ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರು, ಮದುವೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಹಾದೇವಪುರದ ಕಿಮ್ಸ್ ಆಸ್ಪತ್ರೆಯಲ್ಲಿ ನರವಿಜ್ಞಾನ ಸಂಸ್ಥೆ ಮತ್ತು ನರಮಾಡ್ಯುಲೇಷನ್‌ನಲ್ಲಿ ಶ್ರೇಷ್ಠತಾ ಕೇಂದ್ರ ಆರಂಭ

ನರವಿಜ್ಞಾನ ಸಂಸ್ಥೆ ಮತ್ತು ನರಮಾಡ್ಯುಲೇಷನ್‌ನಲ್ಲಿ ಶ್ರೇಷ್ಠತಾ ಕೇಂದ್ರ ಆರಂಭ

ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸರಳದಿಂದ ಸಂಕೀರ್ಣವಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ನರವಿಜ್ಞಾನದಲ್ಲಿನ ಪ್ರಗತಿಯ ಬಗ್ಗೆ ಮಾತನಾಡಲು ಮತ್ತು ರೋಗಿಗಳಿಗೆ ಪ್ರಯೋಜನಗಳನ್ನು ವಿವರಿಸಲು ಇದು ಉದ್ದೇಶಿಸಲಾಗಿದೆ. ಈ ಸಭೆಯು ರೋಗಿಗಳು ಮತ್ತು ಆರೈಕೆ ನೀಡುವವರಿಗೆ ತಮ್ಮ ಕಥೆಯನ್ನು ಹಂಚಿಕೊಳ್ಳಲು ಮತ್ತು ಒಗ್ಗಟ್ಟಿನ ಬಲವನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸಿತು.

Renukaswamy Case: ʻಬಾಸ್‌ʼ ಸಿನಿಮಾ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದ ನಟ ದರ್ಶನ್‌; ಸಿಟಿ ಸಿವಿಲ್ ಕೋರ್ಟ್ ಹೇಳಿದ್ದೇನು?

Darshan Case: 'ಬಾಸ್' ಚಿತ್ರತಂಡಕ್ಕೆ ಶಾಕ್ ನೀಡಿದ ಸಿಟಿ ಸಿವಿಲ್ ಕೋರ್ಟ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎನ್ನಲಾದ ನಟ ತನುಷ್ ಶಿವಣ್ಣ ಅಭಿನಯದ ‘ಬಾಸ್’ ಸಿನಿಮಾ ಬಿಡುಗಡೆಗೆ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ಗೌರವಕ್ಕೆ ಧಕ್ಕೆ ಮತ್ತು ವಿಚಾರಣೆಗೆ ಅಡ್ಡಿಯಾಗಲಿದೆ ಎಂದು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ದಾವೆಯನ್ನು ಪುರಸ್ಕರಿಸಿದ ಕೋರ್ಟ್ ಈ ಆದೇಶ ನೀಡಿದೆ.

ಮಲಯಾಳಂ ʻಸ್ಟಾರ್‌ʼ ನಟಿ ಮಂಜು ವಾರಿಯರ್‌ರನ್ನು ಸಾರ್ವಜನಿಕವಾಗಿ ತಬ್ಬಿ ಮುತ್ತಿಕ್ಕಿದ ಅಭಿಮಾನಿ; ಮುಂದೇನಾಯಿತು ನೋಡಿ!

ಮಂಜು ವಾರಿಯರ್‌ಗೆ ಮುತ್ತಿಟ್ಟ ಫ್ಯಾನ್; ಅಭಿಮಾನದ ಹೆಸರಲ್ಲಿ ಅತಿರೇಕದ ವರ್ತನೆ

ಮಲಯಾಳಂ ಚಿತ್ರರಂಗದ ಸ್ಟಾರ್‌ ನಟಿ ಮಂಜು ವಾರಿಯರ್‌ ಅವರು ಪಾಲಕ್ಕಾಡ್‌ನಲ್ಲಿ ಜ್ಯುವೆಲ್ಲರಿ ಶೋರೂಮ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಮಹಿಳಾ ಅಭಿಮಾನಿಯೊಬ್ಬರಿಂದ ಮುಜುಗರ ಎದುರಿಸಿದ್ದಾರೆ. ವೇದಿಕೆ ಮೇಲೆ ನುಗ್ಗಿದ ಅಭಿಮಾನಿ ನಟಿ ಮಂಜು ಅವರನ್ನು ಬಲವಂತವಾಗಿ ಅಪ್ಪಿಕೊಂಡು ಮುತ್ತಿಕ್ಕಿದ್ದಾರೆ.

ಮದುವೆ ಬಳಿಕ ಗಂಡ ವಿಜಯ್‌ ದೇವರಕೊಂಡ ಜೊತೆ ತವರಿಗೆ ಬಂದ ರಶ್ಮಿಕಾ ಮಂದಣ್ಣ; ತಂದೆಯಿಂದ ಸಿಕ್ತು ದುಬಾರಿ ಉಡುಗೊರೆ

ಮದುವೆ ಬಳಿಕ ವಿರಾಜಪೇಟೆಗೆ ಬಂದ ರಶ್ಮಿಕಾಗೆ ತಂದೆ ಕಡೆಯಿಂದ‌ ದುಬಾರಿ ಗಿಫ್ಟ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ಮದುವೆಯ ನಂತರ ಮೊದಲ ಬಾರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಗೆ ಆಗಮಿಸಿದ್ದರು. ಏಪ್ರಿಲ್ 5ರ ರಶ್ಮಿಕಾ ಹುಟ್ಟುಹಬ್ಬ ಮತ್ತು ಕೊಡಗಿನ ಸಂಬಂಧಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ಔತಣಕೂಟದಲ್ಲಿ ಭಾಗವಹಿಸಲು ಈ ಜೋಡಿ ಬಂದಿತ್ತು.

Virat Kohli: 'ಧುರಂಧರ್-2' ಚಿತ್ರದ ವಿಮರ್ಶೆ ನೀಡಿದ ವಿರಾಟ್‌ ಕೊಹ್ಲಿ

'ಧುರಂಧರ್-2' ಚಿತ್ರದ ವಿಮರ್ಶೆ ನೀಡಿದ ವಿರಾಟ್‌ ಕೊಹ್ಲಿ

Kohli Gives His Review Of Dhurandhar 2: ಚಿತ್ರದಲ್ಲಿ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಒಂದೇ ಪ್ರೊಡಕ್ಷನ್‌ ಹೌಸ್‌ನ 3 ಸಿನಿಮಾಗಳಿಗೆ ಒಟ್ಟಿಗೆ ಮುಹೂರ್ತ; ʻಬಿಗ್‌ ಬಾಸ್‌ʼ ವಿನ್ನರ್‌ ಕಾರ್ತಿಕ್‌ ಮಹೇಶ್‌ಗೆ‌ ಸಿಕ್ತು ಬಿಗ್‌ ಚಾನ್ಸ್!

ʻಬಿಗ್ ಬಾಸ್ʼ ವಿನ್ನರ್ ಕಾರ್ತಿಕ್ ಮಹೇಶ್‌ ಈಗ 'ಸೀತಾ ರಾಮ ರಾಜು'

ಮ್ಯಾಟ್ರಿಕ್ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಅರುಣ್‌ ಕುಮಾರ್ ಮತ್ತು ಭವ್ಯಾ ಅರುಣ್‌ಕುಮಾರ್ ಅವರು ಏಕಕಾಲಕ್ಕೆ ಮೂರು ಹೊಸ ಸಿನಿಮಾಗಳನ್ನು ಘೋಷಿಸಿದ್ದಾರೆ. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಟನೆಯ 'ಸೀತಾ ರಾಮ ರಾಜು', ಪೃಥ್ವಿ ಅಂಬಾರ್ ಅಭಿನಯದ 'ದರ್ಶನ' ಮತ್ತು ತಬಲಾ ನಾಣಿ ಪ್ರಮುಖ ಪಾತ್ರದಲ್ಲಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಮುಹೂರ್ತ ನೆರವೇರಿದೆ.

ಕರ್ನಾಟಕದಲ್ಲಿ 'ಧುರಂಧರ್ 2' ಸಿನಿಮಾ ಈವರೆಗೂ ಗಳಿಸಿದ್ದೆಷ್ಟು? 'ಬಾಹುಬಲಿ 2' ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬೇಕು?

ಕರ್ನಾಟಕದಲ್ಲಿ 'ಧುರಂಧರ್ 2' ಸುನಾಮಿ; ಸ್ಯಾಂಡಲ್‌ವುಡ್‌ನಲ್ಲಿ ರಣವೀರ್ ಅಬ್ಬರ

ಧುರಂಧರ್‌ 2 ಸಿನಿಮಾ ಕರ್ನಾಟಕದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಬಿಡುಗಡೆಯಾದ ಕೇವಲ 18 ದಿನಗಳಲ್ಲಿ ರಾಜ್ಯಾದ್ಯಂತ ದಾಖಲೆ ಮೊತ್ತ ಗಳಿಸುವ ಮೂಲಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಪರಭಾಷಾ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

Loading...