ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Ramayana Movie: ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ

ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ

Ramayana Movie: ನಿತೇಶ್ ತಿವಾರಿ ಅವರ ರಾಮಾಯಣದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ, ಇದರಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ರಮಾನಂದ್ ಸಾಗರ್ ಅವರ ರಾಮಾಯಣ ಟಿವಿ ಕಾರ್ಯಕ್ರಮದೊಂದಿಗೆ ಹೋಲಿಕೆಗಳ ನಡುವೆ, ಈ ಕಾರ್ಯಕ್ರಮದಲ್ಲಿ ಸೀತೆಯ ಪಾತ್ರ ವಹಿಸಿದ್ದ ನಟಿ ದೀಪಿಕಾ ಚಿಖ್ಲಿಯಾ ಹೊಸದಾಗಿ ಬಿಡುಗಡೆಯಾದ ಟೀಸರ್‌ಗೆ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಡೆಯೋ ಥ್ರಿಲ್ಲರ್ ಕಥೆಗೆ ರಾಜೇಶ್‌ ಧ್ರುವ ಹೀರೋ; ಏಪ್ರಿಲ್‌ 10ಕ್ಕೆ ಬರ್ತಿದೆ ʻಪೀಟರ್ʼ

ಕರ್ನಾಟಕ-ಕೇರಳ ಗಡಿ ಭಾಗದ ರೋಚಕ ಕಥೆ 'ಪೀಟರ್'; ಏಪ್ರಿಲ್ 10ಕ್ಕೆ ರಿಲೀಸ್

ಪೀಟರ್‌ ಸಿನಿಮಾದ ಮೂಲಕ ನಟ ರಾಜೇಶ್ ಧ್ರುವ ಮತ್ತು ನಿರ್ದೇಶಕ ಸುಕೇಶ್ ಶೆಟ್ಟಿ ಕರ್ನಾಟಕ-ಕೇರಳ ಗಡಿ ಭಾಗದ ಕಥೆಯನ್ನು ಬೆಳ್ಳಿಪರದೆಗೆ ತರುತ್ತಿದ್ದಾರೆ. ಮಡಿಕೇರಿಯ ಭಾಗಮಂಡಲದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು ಏಪ್ರಿಲ್ 10ರಂದು ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Ram Charan: ‘ಪೆದ್ದಿ’ ಹೊಸ ಪೋಸ್ಟರ್‌ ಔಟ್‌; ರಿಲೀಸ್ ದಿನಾಂಕವೇ ಇಲ್ಲ, ಫ್ಯಾನ್ಸ್‌ ಶಾಕ್‌

‘ಪೆದ್ದಿ’ ಹೊಸ ಪೋಸ್ಟರ್‌ ಔಟ್‌; ರಿಲೀಸ್ ದಿನಾಂಕವೇ ಇಲ್ಲ, ಫ್ಯಾನ್ಸ್‌ ಶಾಕ್‌

Ram Charan: ಟಾಲಿವುಡ್‌ನಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಯೋಜನೆಗಳಲ್ಲಿ ಪೆದ್ದಿ ಕೂಡ ಒಂದು. ಈ ಸಿನಿಮಾ ರಿಲೀಸ್‌ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಬಿಡುಗಡೆ ದಿನಾಂಕ ಮುಂದೂಡಿಕೆ ಆಗಬಹುದು ಎಂಬ ಅಂತೆ-ಕಂತೆಗಳು ಕೂಡ ಕೇಳಿಬರುತ್ತಿವೆ. . ಇವುಗಳ ನಡುವೆ ಚಿತ್ರತಂಡ ಹನುಮ ಜಯಂತಿಯ ಅಂಗವಾಗಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ ಎಲ್ಲಿಯೂ ರಿಲೀಸ್‌ ಡೇಟ್‌ ಬಗ್ಗೆ ಬರೆದುಕೊಂಡಿಲ್ಲ.

ತಾಯಿ ಅಂತ್ಯಕ್ರಿಯೆ ವೇಳೆ ನಾಸ್ತಿಕರಾದ ಪ್ರಕಾಶ್‌ ರಾಜ್‌‌ ಚರ್ಚ್‌ನಲ್ಲಿ ಪ್ರಾರ್ಥಿಸಿದ್ದೇಕೆ? ಎಲ್ಲಾ ಪ್ರಶ್ನೆಗೂ ಒಂದೇ ಮಾತಿನಲ್ಲಿ ಫುಲ್‌ಸ್ಟಾಪ್!

ಚರ್ಚ್​​ನಲ್ಲಿ ಪ್ರಾರ್ಥನೆ ಮಾಡಿದ್ದಕ್ಕೆ ಟೀಕೆ; ಪ್ರಕಾಶ್ ರಾಜ್ ಹೇಳಿದ್ದೇನು?

ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿ ಸ್ವರ್ಣಲತಾ ಅವರ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿಸಿದ್ದಕ್ಕೆ ಕೇಳಿಬಂದ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ತಾವು ನಾಸ್ತಿಕರಾದರೂ, ತಾಯಿಯ ನಂಬಿಕೆಯನ್ನು ಗೌರವಿಸುವುದು ಮಗನಾಗಿ ತಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.

Aakhri Sawaal Teaser out:  ಆರ್​ಎಸ್​ಎಸ್​ ಕುರಿತಾದ ಸಂಜಯ್ ದತ್ ಆಖ್ರಿ ಸವಾಲ್ ಚಿತ್ರದ ಟೀಸರ್ ಔಟ್‌

ಆರ್​ಎಸ್​ಎಸ್​ ಕುರಿತಾದ ಸಂಜಯ್ ದತ್ ಆಖ್ರಿ ಸವಾಲ್ ಚಿತ್ರದ ಟೀಸರ್ ಔಟ್‌

Aakhri Sawaal Teaser out: ಸಂಜಯ್ ದತ್ ಪ್ರಸ್ತುತ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಈಗ, ಸಂಜು ಬಾಬಾ ಅವರ ಮುಂದಿನ ಚಿತ್ರ 'ಆಕ್ರಿ ಸವಾಲ್' ಗೆ ಸಜ್ಜಾಗಿದ್ದು, ಅದರ ಟೀಸರ್ ಅನ್ನು ತಯಾರಕರು ಬಿಡುಗಡೆ ಮಾಡಿದ್ದಾರೆ. ಆರ್​ಎಸ್​ಎಸ್​ ಬಗ್ಗೆ ಪರ-ವಿರೋಧದ ಅಭಿಪ್ರಾಯಗಳಿವೆ. ಅವುಗಳನ್ನೇ ಇಟ್ಟುಕೊಂಡು ‘ಆಖ್ರಿ ಸವಾಲ್’ ಸಿನಿಮಾ ಮಾಡಲಾಗಿದೆ. ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ʻಪ್ರಿಯಾಂಕಾ ಚೋಪ್ರಾ ತಟ್ಟೆ ತೊಳೆದರೆ ದೊಡ್ಡ ಸುದ್ದಿ, ನಾನು ರಾಯರ ಮಠದಲ್ಲಿ ಕಸಗುಡಿಸಿದರೆ ಅಣಕʼ- ನಟ ಜಗ್ಗೇಶ್‌ ಬೇಸರ!

'ಪ್ರಿಯಾಂಕಾ ತಟ್ಟೆ ತೊಳೆದರೆ ಸುದ್ದಿ, ನಾನು ಕಸಗುಡಿಸಿದರೆ ಅಣಕ'- ಜಗ್ಗೇಶ್

ನಟ ಜಗ್ಗೇಶ್‌ ಅವರು ಮಂತ್ರಾಲಯದ ರಾಯರ ಮಠದಲ್ಲಿ ಕಸಗುಡಿಸುವ ಸೇವೆ ಮಾಡುವುದನ್ನು ಅಣಕಿಸುವವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಂತಹ ನಟಿಯರು ದೇವಸ್ಥಾನದಲ್ಲಿ ಸೇವೆ ಮಾಡಿದರೆ ದೊಡ್ಡ ಸುದ್ದಿಯಾಗುತ್ತದೆ, ಆದರೆ ತಾವು ಮಾಡಿದರೆ ಅಪಹಾಸ್ಯ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

21 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ನಟಿಸಿದ ಆದಿತ್ಯ - ಶ್ರೀನಗರ ಕಿಟ್ಟಿ; ʻಟೆರರ್ʼ‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

21 ವರ್ಷಗಳ ನಂತರ ಒಂದಾದ ಆದಿತ್ಯ - ಕಿಟ್ಟಿ; 'ಟೆರರ್' ರಿಲೀಸ್ ಡೇಟ್ ಫಿಕ್ಸ್!

ʻಟೆರರ್ʼ‌ ಚಿತ್ರದ ಮೂಲಕ ಡೆಡ್ಲಿ ಸ್ಟಾರ್ ಆದಿತ್ಯ ಮತ್ತು ಶ್ರೀನಗರ ಕಿಟ್ಟಿ ಬರೋಬ್ಬರಿ 21 ವರ್ಷಗಳ ನಂತರ ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಂಜನ್ ಶಿವರಾಮ್ ಗೌಡ ನಿರ್ದೇಶನದ ಈ ಚಿತ್ರವು ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ. ಹಿರಿಯ ಕಲಾವಿದರಾದ ದೇವರಾಜ್, ಶಶಿಕುಮಾರ್ ಮತ್ತು ಕುಮಾರ್ ಬಂಗಾರಪ್ಪ ಅವರನ್ನೊಳಗೊಂಡ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.

ʻಯಾಕೆ ಅನ್‌ಫಾಲೋ ಮಾಡಿದೆ ಅಂತ ರಿಷಬ್‌ನ ನಾನು ಕೇಳಿಲ್ಲʼ; ನಟ ಪ್ರಮೋದ್‌ ಶೆಟ್ಟಿ ಹೇಳಿದ್ರು ಅಸಲಿ ವಿಷ್ಯ!

ರಿಷಬ್ ಅನ್‌ಫಾಲೋ ಮಾಡಿದ್ದರ ಬಗ್ಗೆ ಅಸಲಿ ವಿಷಯ ಬಿಚ್ಚಿಟ್ಟ ಪ್ರಮೋದ್ ಶೆಟ್ಟಿ

ರಿಷಬ್‌ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಆಪ್ತ ಗೆಳೆಯರನ್ನೇ ಅನ್‌ಫಾಲೋ ಮಾಡಿರುವ ಕುರಿತು ನಟ ಪ್ರಮೋದ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಇದು ಕೇವಲ ಸೋಶಿಯಲ್ ಮೀಡಿಯಾ ಏಜೆನ್ಸಿಯ ಸ್ಟ್ರಾಟೆಜಿ ಇರಬಹುದೇ ಹೊರತು, ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ ಎಂದು ಅವರು ತಿಳಿಸಿದ್ದಾರೆ.

ʻಟಾಕ್ಸಿಕ್‌ʼ ಬಳಿಕ ಸದ್ದಿಲ್ಲದೇ ಕೆವಿಎನ್‌ ಪ್ರೊಡಕ್ಷನ್ಸ್‌ ಜೊತೆ ಮತ್ತೊಂದು ಸಿನಿಮಾಕ್ಕೆ ಕೈಜೋಡಿಸಿದ ನಟಿ ರುಕ್ಮಿಣಿ ವಸಂತ್

'ಟಾಕ್ಸಿಕ್' ಬೆನ್ನಲ್ಲೇ ಕೆವಿಎನ್ ಜೊತೆ ರುಕ್ಮಿಣಿ ವಸಂತ್ ಹೊಸ ಸಿನಿಮಾ

ನಟಿ ರುಕ್ಮಿಣಿ ವಸಂತ್‌ ಅವರು 'ಟಾಕ್ಸಿಕ್' ಚಿತ್ರದ ನಂತರ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಮತ್ತೊಂದು ಹೊಸ ಕನ್ನಡ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಆರಂಭವಾಗಿದ್ದು, ವಿಶೇಷ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ.

Youth Movie: ಅಂದು ಟೀ ಬಿಲ್‌ ಕೊಡಲು 50 ರೂ. ಇರಲಿಲ್ಲ, ಇಂದು ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್‌! ಮ್ಯಾಜಿಕ್‌ ಮಾಡಿದ 24 ವರ್ಷದ ಕೆನ್ ಕರುಣಾಸ್!‌

Youth Movie: ಬಾಕ್ಸ್‌ ಆಫೀಸ್‌ನಲ್ಲಿ ಸದ್ದಿಲ್ಲದೇ ಮ್ಯಾಜಿಕ್‌ ಮಾಡಿದ ಕೆನ್‌

ಯೂತ್ ಚಿತ್ರದ ಮೂಲಕ 24 ವರ್ಷದ ಕೆನ್ ಕರುಣಾಸ್ ಕಾಲಿವುಡ್‌ನಲ್ಲಿ ಅಚ್ಚರಿ ಮೂಡಿಸಿದ್ದಾರೆ. ಧುರಂಧರ್‌ 2 ಸಿನಿಮಾದ ಪೈಪೋಟಿಯ ನಡುವೆಯೂ ಮಾರ್ಚ್ 19ರಂದು ಬಿಡುಗಡೆಯಾದ ಈ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ನಟ ಧನುಷ್ ಅವರ ಬಳಿ ಸಹಾಯಕನಾಗಿ ಪಳಗಿದ್ದ ಕೆನ್, ಹಣಕಾಸಿನ ತೀವ್ರ ಮುಗ್ಗಟ್ಟಿನ ನಡುವೆಯೂ ನಿರ್ಮಾಪಕ ಕರುಪ್ಪಯ್ಯ ಅವರ ಬೆಂಬಲದೊಂದಿಗೆ ಈ ಚಿತ್ರ ಮಾಡಿ, ಯಶಸ್ವಿ ಆಗಿದ್ದಾರೆ.

ಮಾಲಿವುಡ್‌ನಿಂದ ಬದಲಾಗಬಹುದೇ ನಟಿ ಅನುಷ್ಕಾ ಶೆಟ್ಟಿ ಅದೃಷ್ಟ? ಅಚ್ಚರಿ ಮೂಡಿಸಿದ ಸ್ವೀಟಿಯ ಹೊಸ ಸಿನಿಮಾ

ಅನುಷ್ಕಾ ಶೆಟ್ಟಿ ಅದೃಷ್ಟ ಬದಲಿಸುತ್ತಾ ಮಾಲಿವುಡ್? 15 ಭಾಷೆಗಳಲ್ಲಿ 'ಕಥನಾರ್'

ನಟಿ ಅನುಷ್ಕಾ ಶೆಟ್ಟಿ ಅವರು 'ಬಾಹುಬಲಿ 2' ನಂತರ ಎದುರಿಸುತ್ತಿರುವ ಸೋಲುಗಳಿಗೆ 'ಕಥನಾರ್' ಚಿತ್ರದ ಮೂಲಕ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ. ಮಲಯಾಳಂನ ಜಯಸೂರ್ಯ ನಟನೆಯ ಈ ಅದ್ದೂರಿ ಚಿತ್ರದಲ್ಲಿ ಅನುಷ್ಕಾ ಪ್ರಮುಖ ಪಾತ್ರ ಮಾಡಿದ್ದು, ಸಿನಿಮಾ 15 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

Ramayana Teaser: ಮರ್ಯಾದಾ ಪುರುಷೋತ್ತಮ ʻರಾಮʼನ ಅವತಾರದಲ್ಲಿ ರಣಬೀರ್‌ ಕಪೂರ್; ಲುಕ್‌ ಕಂಡು ಫ್ಯಾನ್ಸ್‌ ಬಹುಪರಾಕ್

ʻರಾಮʼನ ಅವತಾರದಲ್ಲಿ ರಣಬೀರ್‌ ಕಪೂರ್; ಲುಕ್‌ ಕಂಡು ಫ್ಯಾನ್ಸ್‌ ಬಹುಪರಾಕ್

Ranbir Kapoor: ನಮಿತ್ ಮಲ್ಹೋತ್ರಾ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ಎರಡು ಭಾಗಗಳ ಸಿನಿಮೀಯ ಸರಣಿ 'ರಾಮಾಯಣ' ತನ್ನ ಮಹತ್ವದ ಅಧ್ಯಾಯವನ್ನು ತೆರೆದಿದೆ. ಈ ಮಹಾಕಾವ್ಯದ ಫಸ್ಟ್‌ ಲುಕ್‌ನಲ್ಲಿ ರಣಬೀರ್ ಕಪೂರ್ ಅವರು 'ರಾಮ'ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಬಾರಿ ಅಕಾಡೆಮಿ ಪ್ರಶಸ್ತಿ ವಿಜೇತ ಡಿಎನ್‌ಇಜಿ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

Ramayana Teaser: ರಾಮಾಯಣದ 'ರಾಮ' ಟೀಸರ್ ಔಟ್‌; ಭಗವಾನ್ ʻಶ್ರೀರಾಮʼನಾಗಿ ಮಿಂಚಿದ  ರಣಬೀರ್ ಕಪೂರ್

'ರಾಮ' ಟೀಸರ್ ಔಟ್‌; ಭಗವಾನ್ ʻಶ್ರೀರಾಮʼನಾಗಿ ಮಿಂಚಿದ ರಣಬೀರ್!

Ramayana Teaser: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಹಿಂದೂ ಪೌರಾಣಿಕ ಕಥೆ ರಾಮಾಯಣದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಈ ಮಹಾಕಾವ್ಯದ ಫಸ್ಟ್‌ ಲುಕ್‌ನಲ್ಲಿ ರಣಬೀರ್ ಕಪೂರ್ ಅವರು 'ರಾಮ'ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ನಿತೇಶ್ ತಿವಾರಿ ಅವರ ರಾಮಾಯಾಣ ಸಿನಿಮಾದ ರಾಮ್ (Ram) ಎನ್ನುವಂತಹ ಟೀಸರ್ ರಿಲೀಸ್ ಆಗಿದ್ದು ಮುಖ್ಯವಾಗಿ ಇದು ರಣಬೀರ್ ಕಪೂರ್ ಮೇಲೆ ಫೋಕಸ್ ಮಾಡಿದೆ. ಈ ಚಿತ್ರದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ.

Shah Rukh Khan: ಜಾಹೀರಾತಿನಲ್ಲಿ ಅಭಿನಯಕ್ಕಾಗಿ ಪ್ರಶಂಸೆ ಪಡೆದ 4 ವರ್ಷದ ಬಾಲಕ; ಈ ನಟನೇ ಆತನಿಗೆ ಸ್ಫೂರ್ತಿ

ಜಾಹೀರಾತಿನಲ್ಲಿ ಅಭಿನಯಕ್ಕಾಗಿ ಪ್ರಶಂಸೆ ಪಡೆದ 4 ವರ್ಷದ ಬಾಲಕ!

Shah Rukh Khan: ದೆಹಲಿಯ 4 ವರ್ಷದ ಬಾಲನಟ ಅವ್ಯಾನ್ ಸಪ್ರಾ , ಹೊಸ ಡೆಟ್ಟಾಲ್ ಜಾಹೀರಾತಿನಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಪಡೆಯುತ್ತಿದ್ದಾರೆ. ಭಾವನಾತ್ಮಕ ಕ್ಷಣಗಳಲ್ಲಿ ತನ್ನ ಅಭಿನಯದಿಂದ ಅನೇಕರನ್ನು ರಂಜಿಸಿದ ಪುಟ್ಟ ಹುಡುಗ ಶಾರುಖ್ ಖಾನ್ ಅವರಿಂದ ನಟನೆಯನ್ನು ಕಲಿತಿದ್ದಾನೆ ಎಂದು ಅವನ ಪೋಷಕರು ಹೇಳುತ್ತಾರೆ. ಈ ಜಾಹೀರಾತು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

Ramayana Rama glimpse : ‘ರಾಮಾಯಣ’ ಟೀಸರ್ ರಿಲೀಸ್‌ಗೂ ಮುನ್ನ ಆಲಿಯಾ ಭಟ್‌ ಹೇಳಿದ್ದೇನು? ವಿಡಿಯೋ ವೈರಲ್‌

‘ರಾಮಾಯಣ’ ಟೀಸರ್ ರಿಲೀಸ್‌ಗೂ ಮುನ್ನ ಆಲಿಯಾ ಭಟ್‌ ಹೇಳಿದ್ದೇನು?

Ramayana Rama glimpse : ಹನುಮ ಜಯಂತಿ ಹಿನ್ನೆಲೆಯಲ್ಲಿ ಶ್ರೀರಾಮನ ಟೀಸರ್ ರಿಲೀಸ್ ಮಾಡಲಾಗ್ತಿದೆ. ಮುಂಬೈನಲ್ಲಿ ಒಂದು ದಿನ ಮುನ್ನ ಮಾಧ್ಯಮದವರಿಗೆ ಟೀಸರ್ ಪ್ರದರ್ಶನ ಮಾಡಲಾಗಿದೆ. ನೋಡಿದವರು ಹುಬ್ಬೇರಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀರಾಮನ ದರ್ಶನವಾಗಲಿದೆ. ರಣಬೀರ್ ಅವರ ಪತ್ನಿ ಮತ್ತು ನಟಿ ಆಲಿಯಾ ಭಟ್ ಬಹುನಿರೀಕ್ಷಿತ ಚಿತ್ರದ ಬಗ್ಗೆ ಮಾತನಾಡುತ್ತಾ, ತಮ್ಮ ಪತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

Raja Shivaji teaser: ‘ರಾಜಾ ಶಿವಾಜಿ’ ಪಾತ್ರದಲ್ಲಿ ರಿತೇಶ್ ದೇಶ್‌ಮುಖ್; ಸಲ್ಮಾನ್ ಖಾನ್ ಅತಿಥಿ ಪಾತ್ರ?

‘ರಾಜಾ ಶಿವಾಜಿ’ ಪಾತ್ರದಲ್ಲಿ ರಿತೇಶ್ ದೇಶ್‌ಮುಖ್!

Raja Shivaji teaser: ಮಂಗಳವಾರ ಸಂಜೆ ಜಿಯೋಸ್ಟುಡಿಯೋಸ್, ರಾಜಾ ಶಿವಾಜಿ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿತು . ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ನಟ ರಿತೇಶ್ ದೇಶ್​ಮುಖ್ ಅವರು ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಅವರು ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಎರಡು ನಿಮಿಷಗಳ ವೀಡಿಯೊವನ್ನು ಜಿಯೋಸ್ಟುಡಿಯೋಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ.

ಅಲ್ಲು ಅರ್ಜುನ್ ಅಭಿಮಾನಿಗಳಿಂದ ಮಹತ್ವದ ಕೆಲಸ; ಗರ್ಭಕಂಠದ ಕ್ಯಾನ್ಸರ್ ತಡೆಗೆ ʻಎಚ್‌ಪಿವಿ ಲಸಿಕೆʼ ಜಾಗೃತಿ ಅಭಿಯಾನ

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕಾಗಿ ಮಹತ್ಕಾರ್ಯಕ್ಕೆ ಕೈಹಾಕಿದ ಫ್ಯಾನ್ಸ್‌

ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು 'ಎಚ್‌ಪಿವಿ ಲಸಿಕೆ' ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಏಪ್ರಿಲ್ 8ರಂದು ‌ಅಲ್ಲು ಅರ್ಜುನ್ ಜನ್ಮದಿನವಿದ್ದು, ವರ್ಷವಿಡೀ ಈ ಸಮಾಜಮುಖಿ ಕಾರ್ಯ ನಡೆಸಲು ಅಭಿಮಾನಿ ಸಂಘ ನಿರ್ಧರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮತ್ತೆ 'ರಾಣಿ'ಯಾಗಿ ಮಿಂಚಲು ಸಜ್ಜಾದ ಸಂಸದೆ ಕಂಗನಾ ರಣಾವತ್; 13 ವರ್ಷಗಳ ನಂತರ ಬರಲಿದೆ 'ಕ್ವೀನ್ 2'!

13 ವರ್ಷದ ನಂತರ ಬರ್ತಿದೆ 'ಕ್ವೀನ್' ಸೀಕ್ವೇಲ್; 'ರಾಣಿ' ಆಲಿದ್ದಾರೆ ಕಂಗನಾ

ʻಕ್ವೀನ್‌ 2ʼ ಚಿತ್ರದ ಮೂಲಕ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮತ್ತೆ ತೆರೆಯ ಮೇಲೆ ರಾಣಿ ಮೆಹ್ರಾ ಆಗಿ ಮಿಂಚಲು ಸಜ್ಜಾಗಿದ್ದಾರೆ. 13 ವರ್ಷಗಳ ಹಿಂದೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಈ ಚಿತ್ರದ ಸೀಕ್ವೆಲ್ ಏಪ್ರಿಲ್ ಅಂತ್ಯಕ್ಕೆ ಸೆಟ್ಟೇರಲಿದೆ. ಮೊದಲ ಭಾಗದಲ್ಲಿ ವಿದೇಶಿ ಪ್ರವಾಸ ಮಾಡಿದ್ದ ರಾಣಿ, ಈ ಬಾರಿ ಭಾರತದ ವಿವಿಧ ನಗರಗಳಲ್ಲಿ ಪಯಣ ಮಾಡಲಿದ್ದಾರೆ.

ಮೂರ್ಖರ ದಿನದಂದು ದಿಢೀರ್‌ ಅಂತ ಪ್ರೆಸ್‌ಮೀಟ್‌ ಮಾಡಿದ್ದೇಕೆ ಉಪೇಂದ್ರ? ಜನರಿಗೆ ʻರಿಯಲ್‌ ಸ್ಟಾರ್‌ʼ ಕೊಟ್ಟ ಸಂದೇಶ ಏನ್‌ ಗೊತ್ತಾ?

ಇದು ಮೂರ್ಖರ ದಿನವಲ್ಲ, ಇದು ಬುದ್ಧಿವಂತರ ದಿನ! ನಟ ಉಪೇಂದ್ರ ಹೊಸ ಸಂದೇಶ

ನಟ ಉಪೇಂದ್ರ ಅವರು ಏಪ್ರಿಲ್ 1ರಂದು 'ದಿ ರಿಯಲ್ ಪ್ರಜಾಕೀಯ' ಎಂಬ ಮೊಬೈಲ್ ಅಪ್ಲಿಕೇಶನ್ ರಿಲೀಸ್‌ ಮಾಡಿದ್ದಾರೆ. ಜೊತೆಗೆ ಎಡ-ಬಲ ಸಿದ್ಧಾಂತಗಳ ನಡುವೆ ಸಿಲುಕದೆ, ಪ್ರಜೆಗಳು ಸ್ವತಂತ್ರವಾಗಿ ಯೋಚಿಸಿ ಸರ್ಕಾರದ ಮಾಲೀಕರೆಂದು ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಮತ್ತೆ ಬರ್ತಿದೆ ಜೀ ಕನ್ನಡದ ಜನಪ್ರಿಯ 'ಜೋಡಿ ನಂ.1' ಶೋ; ಜಡ್ಜ್‌ ಟೀಮ್‌ಗೆ ʻಅಮೃತಧಾರೆʼ ಭೂಮಿ - ಗೌತಮ್ ಎಂಟ್ರಿ

'ಜೋಡಿ ನಂ.1' ಶೋನಲ್ಲಿ ʻಅಮೃತಧಾರೆʼ ಸೀರಿಯಲ್‌ನ ಭೂಮಿ - ಗೌತಮ್ ಜಡ್ಜ್!

ಜೋಡಿ ನಂ.1 ರಿಯಾಲಿಟಿ ಶೋ ಏಪ್ರಿಲ್ 4ರಿಂದ ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ಸಂಚಲನ ಮೂಡಿಸಲಿದೆ. ಅಮೃತಧಾರೆ ಖ್ಯಾತಿಯ ಛಾಯಾ ಸಿಂಗ್, ರಾಜೇಶ್ ನಟರಂಗ, ಲವ್ಲೀ ಸ್ಟಾರ್ ಪ್ರೇಮ್ ಮತ್ತು ಮಾಳವಿಕಾ ಅವಿನಾಶ್ ತೀರ್ಪುಗಾರರಾಗಿ ಆಗಮಿಸುತ್ತಿದ್ದಾರೆ. ಹಿರಿಯ ಮತ್ತು ಕಿರಿಯ ದಂಪತಿಗಳ ನಡುವಿನ ಹೊಂದಾಣಿಕೆ, ಪ್ರೀತಿ ಮತ್ತು ಸವಾಲುಗಳ ಪರೀಕ್ಷೆಯೇ ಈ ಶೋನ ಜೀವಾಳ.

ತಮಿಳುನಾಡು ಎಲೆಕ್ಷನ್ ಮುಗಿದ್ಮೇಲೆ ʻದಳಪತಿʼ ವಿಜಯ್‌ ಫ್ಯಾನ್ಸ್‌ಗೆ ಬಿಗ್‌ ಗಿಫ್ಟ್!‌  ಇದು ʻಜನ ನಾಯಗನ್‌ʼ ಟೀಮ್‌ ಹೊಸ ಲೆಕ್ಕಾಚಾರ

Vijay: ತಮಿಳುನಾಡು ಎಲೆಕ್ಷನ್ ಮುಗಿದ ಮರುಕ್ಷಣವೇ ಜನ ನಾಯಗನ್ ಅಬ್ಬರ ಫಿಕ್ಸ್‌

Thalapathy Vijay: ಜನ ನಾಯಗನ್‌ ಸಿನಿಮಾ ಬಿಡುಗಡೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 23 ರಂದು ಮುಕ್ತಾಯವಾಗಲಿದ್ದು, ಮತದಾನ ಪ್ರಕ್ರಿಯೆ ಮುಗಿದ ಮರುದಿನವೇ ಅಂದರೆ ಏಪ್ರಿಲ್ 24 ಅಥವಾ ಏಪ್ರಿಲ್ 30 ರಂದು ಈ ಚಿತ್ರವನ್ನು ಬಿಡುಗಡೆ ಮಾಡಲು ಕೆವಿಎನ್ ಪ್ರೊಡಕ್ಷನ್ಸ್ ಸಿದ್ಧತೆ ನಡೆಸುತ್ತಿದೆಯಂತೆ.

ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ: ಚಂದನ್‌ ಶೆಟ್ಟಿಗೆ ಇದು ಸ್ಪೆಷಲ್‌ ಫಿಲ್ಮ್!‌ ಯಾಕೆ ಗೊತ್ತಾ?

Chandan Shetty: 'ಎಲ್ರ ಕಾಲೆಳಿಯತ್ತೆ ಕಾಲ' ರಿಲೀಸ್ ಡೇಟ್ ಫಿಕ್ಸ್

Elra Kaleliyatte Kala: ಚಂದನ್‌ ಶೆಟ್ಟಿ ನಟನೆಯ ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ ಆಗಿದೆ. ಇದು ಚಂದನ್ ಶೆಟ್ಟಿ ನಾಯಕನಾಗಿ ನಟಿಸಲು ಒಪ್ಪಿಕೊಂಡ ಮೊದಲ ಚಿತ್ರವಾಗಿದ್ದು, ನಟ ಸುಜಯ್ ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

7.23 ಗಂಟೆಯ ʻಧುರಂಧರ್‌ʼ ಮಹಾ ಮ್ಯಾರಥಾನ್; ಎರಡು ಪಾರ್ಟ್‌ಗಳನ್ನು ಒಟ್ಟಿಗೆ ನೋಡುವ ಚಾನ್ಸ್‌! ಇದು ನಿಜವೇ?

ʻಧುರಂಧರ್ʼ ಮಹಾ ಮ್ಯಾರಾಥಾನ್: ಒಂದೇ ಶೋನಲ್ಲಿ ಎರಡು ಪಾರ್ಟ್!‌

Ranveer Singh Dhurandhar Marathon: ಹಾಂಕಾಂಗ್‌ನ ವಿತರಣಾ ಸಂಸ್ಥೆ 'ಎಎ ಟೆಕ್' ಏಪ್ರಿಲ್ 12 ರಂದು 'ಧುರಂಧರ್' ಮತ್ತು ಅದರ ಸೀಕ್ವೆಲ್ 'ಧುರಂಧರ್: ದಿ ರಿವೆಂಜ್' ಎರಡನ್ನೂ ಒಟ್ಟಿಗೆ ಪ್ರದರ್ಶಿಸಲು ಮುಂದಾಗಿದೆ. ಸುಮಾರು 7 ಗಂಟೆ 23 ನಿಮಿಷಗಳ ಸುದೀರ್ಘ ಅವಧಿಯ ಈ ಪ್ರದರ್ಶನವು ಮೂರು ವಿರಾಮಗಳೊಂದಿಗೆ ಒಟ್ಟು 9 ಗಂಟೆಗಳ ಕಾಲ ನಡೆಯಲಿದೆ.

ಶೂಟಿಂಗ್‌ ಸೆಟ್‌ನಲ್ಲಿ ಯುವ ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಿರ್ದೇಶಕ ರಂಜಿತ್ ಬಂಧನ!

ಸಿನಿಮಾ ಸೆಟ್‌ನಲ್ಲಿ ಲೈಂಗಿಕ ದೌರ್ಜನ್ಯ; ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್

Malayalam Director Ranjith Arrest: ಚಿತ್ರೀಕರಣ ಹಂತದಲ್ಲಿರುವ ಸಿನಿಮಾದ ಸೆಟ್‌ನಲ್ಲಿ ಯುವ ನಟಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊಚ್ಚಿ ಪೊಲೀಸರು ನಿರ್ದೇಶಕ ರಂಜಿತ್ ಅವರನ್ನು ಬಂಧಿಸಿದ್ದಾರೆ. ರಂಜಿತ್ ವಿರುದ್ಧ ಈ ಹಿಂದೆಯೂ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.

Loading...