ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Shefali Shah: ಮಕ್ಕಳ ಬದಲು ನಾಯಿಗಳನ್ನು ಸಾಕಿ ಎಂದ ಖ್ಯಾತ ನಟಿ ಶೆಫಾಲಿ ಶಾ ; ಕಾರಣ ಇದು

ಮಕ್ಕಳ ಬದಲು ನಾಯಿಗಳನ್ನು ಸಾಕಿ ಎಂದ ಖ್ಯಾತ ನಟಿ ಶೆಫಾಲಿ ಶಾ

Shefali Shah: ಮದುವೆ ಮತ್ತು ಪೋಷಕರ ಸುತ್ತಲಿನ ಒತ್ತಡಗಳ ಬಗ್ಗೆ ಮಾತನಾಡುತ್ತಾ, ಯುವಜನರು ತಮ್ಮನ್ನು ಅರ್ಥಮಾಡಿಕೊಳ್ಳುವ ಮೊದಲು ಪ್ರಮುಖ ಜೀವನ ನಿರ್ಧಾರಗಳಿಗೆ ಆತುರಪಡಬಾರದು ಎಂದು ನಟಿ ಸಲಹೆ ನೀಡಿದರು. ಮಕ್ಕಳನ್ನು ಹೊಂದುವ ಬದಲು ಜನರು "ನಾಯಿಗಳನ್ನು ಸಾಕಬೇಕು" ಎಂದು ಹೇಳಿಕೆ ನೀಡಿದ್ದಾರೆ.

Chaithra Achar: ಚೈತ್ರಾ ಆಚಾರ್‌ಗೆ ಪೊಲೀಸ್‌ ಉದ್ಯೋಗಿ ಅಸಭ್ಯ ಮೆಸೇಜ್ ; ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ನಟಿ

ಚೈತ್ರಾ ಆಚಾರ್‌ಗೆ ಪೊಲೀಸ್‌ ಉದ್ಯೋಗಿ ಅಸಭ್ಯ ಮೆಸೇಜ್!

Chaithra Achar: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು, ಸೆಲೆಬ್ರಿಟಿಗಳು, ರೀಲ್ಸ್ ಸ್ಟಾರ್‌ ನಟರು ಹಾಗೂ ನಟಿಯರಿಗೆ ಅಸಭ್ಯವಾಗಿ ಕಾಮೆಂಟ್ ಮಾಡುವುದು ಕಾಮನ್‌ ಆಗಿ ಬಿಟ್ಟಿದೆ. ಆದರೆ, ಈ ಬಾರಿ ಇಂತಹದ್ದೇ ಕೃತ್ಯ ಎಸಗಿದ ಕಿಡಿಗೇಡಿಯೊಬ್ಬನಿಗೆ ಚೈತ್ರಾ ಆಚಾರ್ ಅವರು ಸರಿಯಾದ ಪಾಠ ಕಲಿಸಿದ್ದಾರೆ.

ಕನ್ನಡದಲ್ಲೂ ಬರ್ತಿದೆ ಎಸ್. ಪಿ. ಬಾಲಸುಬ್ರಹ್ಮಣ್ಯಂ - ಲಕ್ಷ್ಮೀ ನಟನೆಯ ಜನಪ್ರಿಯ ʻಮಿಥುನಂʼ ಸಿನಿಮಾ

SP ಬಾಲಸುಬ್ರಹ್ಮಣ್ಯಂ ಹುಟ್ಟುಹಬ್ಬಕ್ಕೆ 'ಮಿಥುನಂ' ಕನ್ನಡ ವರ್ಷನ್‌ ರಿಲೀಸ್‌

ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ನಟಿ ಲಕ್ಷ್ಮೀ ಅಭಿನಯದ ‘ಮಿಥುನಂ’ ಚಿತ್ರ ಈಗ ಕನ್ನಡದಲ್ಲಿ ಜೂನ್ 5 ರಂದು ತೆರೆಕಾಣಲಿದೆ. ವಿದೇಶದಲ್ಲಿರುವ ಮಕ್ಕಳಿಗಾಗಿ ಕಾಯುವ ವೃದ್ಧ ದಂಪತಿಗಳ ಭಾವುಕ ಬದುಕನ್ನು ಚಿತ್ರವು ಕಟ್ಟಿಕೊಡಲಿದ್ದು, ಎಸ್‌ಪಿಬಿ ಅವರ ಹುಟ್ಟುಹಬ್ಬದ ಅಂಗವಾಗಿ ಈ ವಿಶೇಷ ಚಿತ್ರವನ್ನು ಕನ್ನಡಿಗರಿಗೆ ಅರ್ಪಿಸಲಾಗುತ್ತಿದೆ.

Disha Patani: ಮೌನಿ ರಾಯ್ ವಿಚ್ಛೇದನಕ್ಕೆ ದಿಶಾ ಪಟಾನಿ ಕಾರಣ? ಏನಿದು ಹೊಸ ಚರ್ಚೆ?

ಮೌನಿ ರಾಯ್ ವಿಚ್ಛೇದನಕ್ಕೆ ದಿಶಾ ಪಟಾನಿ ಕಾರಣ? ಏನಿದು ಹೊಸ ಚರ್ಚೆ?

Disha Patani: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಟ್ರೋಲ್ ಶುರುವಾಗಿದ್ದು, ಮೌನಿ ರಾಯ್ ಅವರು ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳ ಕಮೆಂಟ್ ಸೆಕ್ಷನ್ ಆಫ್ ಮಾಡಿದ್ದಾರೆ. ಈ ಡಿವೋರ್ಸ್ ವಿಷಯದಲ್ಲಿ ಮೌನಿ ರಾಯ್ ಅವರ ಆಪ್ತ ಗೆಳತಿ, ನಟಿ ದಿಶಾ ಪಟಾನಿ ಹೆಸರನ್ನು ಎಳೆದು ತಂದು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

Dhurandhar: ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ದಿನ ಧುರಂಧರ್ ದಿ ರಿವೆಂಜ್ ಸ್ಟ್ರೀಮಿಂಗ್‌!

ಜಿಯೋ ಹಾಟ್‌ಸ್ಟಾರ್‌ನಲ್ಲಿ ಈ ದಿನ ಧುರಂಧರ್ ದಿ ರಿವೆಂಜ್ ಸ್ಟ್ರೀಮಿಂಗ್‌!

Dhurandhar: ಆದಿತ್ಯ ಧಾರ್ ಬರೆದು ನಿರ್ದೇಶಿಸಿ ನಿರ್ಮಿಸಿದ ಧುರಂಧರ್ ದಿ ರಿವೆಂಜ್ ಒಂದು ಹೈ-ಸ್ಟೇಕ್ಸ್ ಸ್ಪೈ ಆಕ್ಷನ್ ಥ್ರಿಲ್ಲರ್ ಆಗಿದ್ದು, ಇದನ್ನು ಜ್ಯೋತಿ ದೇಶಪಾಂಡೆ ಮತ್ತು ಲೋಕೇಶ್ ಧಾರ್ ನಿರ್ಮಿಸಿದ್ದಾರೆ. ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬೆಂಬಲದೊಂದಿಗೆ, ಈ ಚಿತ್ರದಲ್ಲಿ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಸೇರಿದಂತೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ʻಪೆದ್ದಿʼ ಟೀಮ್‌ಗೆ ಶಾಕ್‌ ಕೊಟ್ರಾ ನಟಿ ಜಾನ್ವಿ ಕಪೂರ್? ಛೇ! ರಾಮ್‌ ಚರಣ್‌ ಸಿನಿಮಾಕ್ಕೆ ಒಂದಲ್ಲಾ ಒಂದು ಸಮಸ್ಯೆಗಳು

ʻಪೆದ್ದಿʼ ಸಿನಿಮಾ ಪ್ರಚಾರದಲ್ಲಿ ಜಾನ್ವಿ ಕಪೂರ್ ಕಾಣಿಸಿಕೊಳ್ಳುತ್ತಿಲ್ಲವೇಕೆ?

ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾ ಬಿಡುಗಡೆಗೂ ಮುನ್ನವೇ ಸಾಲು ಸಾಲು ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲವೆಂದು ನಾಯಕಿ ಜಾನ್ವಿ ಕಪೂರ್ ಪ್ರಚಾರದಿಂದ ದೂರ ಉಳಿದಿರುವುದು ಚರ್ಚೆಗೆ ಕಾರಣವಾಗಿದೆ. ಅತ್ತ 350 ಕೋಟಿ ಬಜೆಟ್‌ನ ಈ ಚಿತ್ರದ ಲಾಭ ಹಂಚಿಕೆ ವಿಷಯದಲ್ಲಿ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವೆ ವಿವಾದ ಸ್ಫೋಟಗೊಂಡಿದೆ.

ಸೈಬರ್ ಕ್ರೈಂ ಲೋಕಕ್ಕೆ ಚೈತ್ರಾ ಆಚಾರ್ ಎಂಟ್ರಿ; 'ಗೀಕ್' ಟೀಸರ್ ರಿಲೀಸ್‌ ಮಾಡಿದ ಸ್ಯಾಂಡಲ್‌ವುಡ್‌ನ 50ಕ್ಕೂ ಅಧಿಕ ಸೆಲೆಬ್ರಿಟಿಗಳು

ಸೈಬರ್‌ ಕ್ರೈಂ ಕುರಿತ ‘ಗೀಕ್’ ಸಿನಿಮಾಕ್ಕೆ ನಟಿ ಚೈತ್ರಾ ಆಚಾರ್‌ ನಾಯಕಿ!

ಕನ್ನಡ ಚಿತ್ರರಂಗದಲ್ಲಿ ಡಿಜಿಟಲ್ ಅಪರಾಧಗಳ ಕರಾಳತೆಯನ್ನು ತೋರಿಸಲು ‘ಗೀಕ್’ (GEEK) ಸಿನಿಮಾ ಸಜ್ಜಾಗಿದೆ. ಸಾಫ್ಟ್‌ವೇರ್ ಎಂಜಿನಿಯರ್ ಹರಿಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಚೈತ್ರಾ ಆಚಾರ್, ಕಿರಣ್‌ ಶ್ರೀನಿವಾಸ್‌ ಮತ್ತು ಪ್ರವೀಣ್ ತೇಜ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

Peddi Movie: 'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್‌ ಫಿದಾ!

'ಪೆದ್ದಿ' ಸಿನಿಮಾದಲ್ಲಿನ ಶಿವಣ್ಣನ ಖದರ್ ನೋಡಿ ಫ್ಯಾನ್ಸ್‌ ಫಿದಾ!

Peddi Movie: ಗೌರ್‌ನಾಯ್ಡು ಎಂಬ ಪಾತ್ರದಲ್ಲಿ ಶಿವಣ್ಣ ಅಭಿನಯಿಸಿದ್ದಾರೆ. ಕುಸ್ತಿ ಅಖಾಡದಲ್ಲಿ ಅವರು ಕಾಣಿಸಿಕೊಂಡಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚು‌ ಮಾಡಿದೆ. ಮೇಕಿಂಗ್ ವಿಡಿಯೋದಲ್ಲಿ ಶಿವಣ್ಣ-ರಾಮ್ ಚರಣ್ ಒಟ್ಟಿಗೆ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಇವರಿಬ್ಬರನ್ನು ನೋಡಿ ಥ್ರಿಲ್ ಆಗಿದ್ದಾರೆ.

ನಟ ದರ್ಶನ್‌ ಮತ್ತೆ ಯಾವಾಗ ಜಾಮೀನಿಗೆ ಅರ್ಜಿ ಸಲ್ಲಿಸಬಹುದು? ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ಜಾಮೀನು ನಿರೀಕ್ಷೆಯಲ್ಲಿದ್ದ ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್‌ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದ್ದು, ಜಾಮೀನು ಅರ್ಜಿಯನ್ನು ವಜಾಗೊಳಿಸಲಾಗಿದೆ. ವಿಚಾರಣೆಯಲ್ಲಿ ಗಣನೀಯ ಪ್ರಗತಿ ಕಂಡುಬರದಿದ್ದರೆ ಮಾತ್ರ ಒಂದು ವರ್ಷದ ನಂತರ ಮರು ಅರ್ಜಿ ಸಲ್ಲಿಸಲು ಪೀಠ ಅವಕಾಶ ನೀಡಿದೆ.

Akshay Kumar: ಅಕ್ಷಯ್‌ ಕುಮಾರ್‌ ನಟನೆಯ 'ವೆಲ್ಕಮ್ ಟು ದಿ ಜಂಗಲ್' ಟೀಸರ್‌ ಔಟ್‌!

ಅಕ್ಷಯ್‌ ಕುಮಾರ್‌ ನಟನೆಯ 'ವೆಲ್ಕಮ್ ಟು ದಿ ಜಂಗಲ್' ಟೀಸರ್‌ ಔಟ್‌!

Akshay Kumar: 2007 ರಲ್ಲಿ ಬಿಡುಗಡೆಯಾದ "ವೆಲ್‌ಕಮ್" ಚಿತ್ರದಲ್ಲಿ ಅಕ್ಷಯ್ ಕುಮಾರ್, ನಾನಾ ಪಾಟೇಕರ್, ಅನಿಲ್ ಕಪೂರ್, ಮಲ್ಲಿಕಾ ಶೆರಾವತ್, ಕತ್ರಿನಾ ಕೈಫ್, ಫಿರೋಜ್ ಖಾನ್ ಮತ್ತು ಪರೇಶ್ ರಾವಲ್ ಸೇರಿದಂತೆ ಹಲವಾರು ತಾರಾಗಣವಿತ್ತು. ಇದು ಮುಂದುವರಿದ ಭಾಗ ಆಗಿದೆ. ಜೂನ್ 26 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಸಿನಿಮಾವನ್ನು ಅಹ್ಮದ್ ಖಾನ್ ನಿರ್ದೇಶಿಸಿದ್ದಾರೆ.

ಅಡೆತಡೆಗಳನ್ನು ದಾಟಿ ಥಿಯೇಟರ್‌ಗೆ ಬಂದ ʻಕರುಪ್ಪುʼ ಸಿನಿಮಾ; ನಿರ್ಮಾಪಕರ ಪಾಲಿಗೆ ಕರ್ಣನಾದ ನಟ ಸೂರ್ಯ!

ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ 'ಕರುಪ್ಪು'; ನಿರ್ಮಾಪಕರ ಕೈಹಿಡಿದ ಸೂರ್ಯ

ತಮಿಳು ನಟ ಸೂರ್ಯ ಅಭಿನಯದ 'ಕರುಪ್ಪು' ಸಿನಿಮಾ ಆರ್ಥಿಕ ಬಿಕ್ಕಟ್ಟಿನಿಂದಾಗಿ ಒಂದು ದಿನ ವಿಳಂಬವಾಗಿ ಮೇ 15ರಂದು ಬಿಡುಗಡೆಯಾಗಿದೆ. ನಿರ್ಮಾಪಕರು ಹೊಂದಿದ್ದ‌ ಆರ್ಥಿಕ ಸಂಕಷ್ಟವನ್ನು ಸ್ವತಃ ನಟ ಸೂರ್ಯ ಅವರೇ ಮುಂದೆ ನಿಂತು ನಿವಾರಿಸಿದ್ದಾರೆ.

ರಾಮಾಯಣದಲ್ಲಿ ರಾಮನ ಪಾತ್ರ ಮಾಡುತ್ತಿರುವಾಗಲೇ ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ ರಣಬೀರ್ ಕಪೂರ್: ಸರಯೂ ನದಿ ತೀರದಲ್ಲಿ ಹೊಸ ಹೂಡಿಕೆ

ಅಯೋಧ್ಯೆಯಲ್ಲಿ ಜಮೀನು ಖರೀದಿಸಿದ ʻರಾಮಾಯಣʼ ನಟ ರಣಬೀರ್ ಕಪೂರ್

ಬಾಲಿವುಡ್ ನಟ ರಣಬೀರ್ ಕಪೂರ್ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ಕೋಟಿ ರೂ. ಮೌಲ್ಯದ ಜಮೀನು ಖರೀದಿಸುವ ಮೂಲಕ ಸುದ್ದಿಯಲ್ಲಿದ್ದಾರೆ. 'ರಾಮಾಯಣ' ಸಿನಿಮಾದಲ್ಲಿ ಶ್ರೀರಾಮನಾಗಿ ನಟಿಸುತ್ತಿರುವ ರಣಬೀರ್, ಅಯೋಧ್ಯೆಯ ಆಧ್ಯಾತ್ಮಿಕ ಸೆಳೆತಕ್ಕೆ ಮಾರುಹೋಗಿ ಈ ಹೂಡಿಕೆ ಮಾಡಿದ್ದಾರೆ.

ನಟ ದರ್ಶನ್‌ಗೆ ಶಾಕ್‌ ನೀಡಿದ ಸುಪ್ರೀಂ ಕೋರ್ಟ್‌; ಜಾಮೀನು ನೀಡಲು ನಿರಾಕರಣೆ, ದಾಸನಿಗೆ ಒಂದು ವರ್ಷ ಜೈಲು ಫಿಕ್ಸ್!‌

ನಟ ದರ್ಶನ್‌ಗೆ ಸುಪ್ರೀಂ ಕೋರ್ಟ್ ಶಾಕ್; ದಾಸನಿಗೆ ಇನ್ನೂ 1 ವರ್ಷ ಜೈಲೇ ಗತಿ!

ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿರುವ ನ್ಯಾಯಾಲಯ, ಒಂದು ವರ್ಷದೊಳಗೆ 60 ಪ್ರಮುಖ ಸಾಕ್ಷಿಗಳ ವಿಚಾರಣೆ ಪೂರ್ಣಗೊಳಿಸಲು ಪ್ರಾಸಿಕ್ಯೂಷನ್‌ಗೆ ಗಡುವು ನೀಡಿದೆ.

Rajinikanth: ʻಜೈಲರ್‌ 2ʼ ಶೂಟಿಂಗ್‌ ಸೆಟ್‌ನಲ್ಲಿ ಅವಘಡ; ವಿದ್ಯುತ್ ಶಾಕ್‌ಗೆ ಬಲಿಯಾದ 28 ವರ್ಷದ ಯುವ ತಂತ್ರಜ್ಞ!

ʻಜೈಲರ್ 2ʼ ಸೆಟ್‌ನಲ್ಲಿ ಅವಘಡ; ವಿದ್ಯುತ್ ಶಾಕ್‌ಗೆ 28 ವರ್ಷದ ತಂತ್ರಜ್ಞ ಬಲಿ

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಪ್ಯಾಚ್‌ವರ್ಕ್ ಚಿತ್ರೀಕರಣದ ವೇಳೆ ಭೀಕರ ವಿದ್ಯುತ್ ಅವಘಡ ಸಂಭವಿಸಿದ್ದು, 28 ವರ್ಷದ ಎಲೆಕ್ಟ್ರಿಷಿಯನ್ ಕಾರ್ತಿಕೇಯನ್ ಮೃತಪಟ್ಟಿದ್ದಾರೆ. ಚೆನ್ನೈನ ಆದಿತ್ಯರಾಮ್ ಫಿಲ್ಮ್ ಸಿಟಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ʻಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲʼ ಎಂಬ ಬಗ್ಗೆ ನಟ ದಿಲೀಪ್‌ ರಾಜ್‌ಗೆ ಬೇಸರವಿತ್ತೇ? ಇಲ್ಲಿವೆ ಅವರೇ ಹೇಳಿದ್ದ ಮನದಾಳದ ಮಾತುಗಳು

ಪ್ರತಿಭೆಗೆ ತಕ್ಕ ಮನ್ನಣೆ ಸಿಗಲಿಲ್ಲ! ಈ ಬಗ್ಗೆ ನಟ ದಿಲೀಪ್‌ಗೆ ಬೇಸರವಿತ್ತೇ?

ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಕನ್ನಡ ಚಿತ್ರರಂಗದಲ್ಲಿ ಅವರ ಪ್ರತಿಭೆಗೆ ಸಿಗಬೇಕಾದ ಮನ್ನಣೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ತಮಗೆ ಹೆಚ್ಚಿನ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ ಎಂಬ ಕಹಿ ಸತ್ಯವನ್ನು ಬಹಳ ಹಿಂದೆಯೇ ಜೀರ್ಣಿಸಿಕೊಂಡಿದ್ದ ದಿಲೀಪ್, ಸದಾ ಉತ್ತಮ ಕಥೆಗಳಿಗಾಗಿ ಹಂಬಲಿಸುತ್ತಿದ್ದರು.

ʻನಮ್ಮ ಖಾಸಗಿತನವನ್ನು ಗೌರವಿಸಿ, ನಮ್ಮ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಬೇಡಿʼ; ಡಿವೋರ್ಸ್‌ ಬಗ್ಗೆ ಕೊನೆಗೂ ಮೌನಮುರಿದ ಮೌನಿ ರಾಯ್!‌

ಕೊನೆಗೂ ಡಿವೋರ್ಸ್ ಬಗ್ಗೆ ಮೌನಮುರಿದ ನಟಿ ಮೌನಿ ರಾಯ್!‌

'ಕೆಜಿಎಫ್' ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾದ ಬಾಲಿವುಡ್ ನಟಿ ಮೌನಿ ರಾಯ್ ದಾಂಪತ್ಯದಲ್ಲಿ ಬಿರುಕು ಮೂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಇದೀಗ ಅವರು ಪತಿ ಸೂರಜ್ ನಂಬಿಯಾರ್ ಅವರಿಂದ ವಿಚ್ಛೇದನ ಪಡೆಯುತ್ತಿರುವುದನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಜೊತೆಗೆ ಮಾಧ್ಯಮಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ʻದಿಲೀಪಾ.. ಯಾಕೋ ನೀನು ಮೌನವಾದೆ?ʼ; ಅಗಲಿದ ಗೆಳೆಯನನ್ನ ನೆನೆದು ಕಣ್ಣೀರಾದ ದಶಕದ ಸ್ನೇಹಿತರು

ನಟ ದಿಲೀಪ್ ರಾಜ್ ಅಕಾಲಿಕ ಸಾವಿಗೆ ಕಂಬನಿ ಮಿಡಿದ ಆಪ್ತ ಸ್ನೇಹಿತರು

ನಟ ಹಾಗೂ ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅವರ 25 ವರ್ಷಗಳ ಸುದೀರ್ಘ ಗೆಳೆಯರ ಬಳಗವನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ರಂಗಭೂಮಿಯ ದಿನಗಳಿಂದ ಹಿಡಿದು ಯಶಸ್ವಿ ನಿರ್ಮಾಪಕನಾಗುವವರೆಗೆ ಜೊತೆಗಿದ್ದ ಕೆ.ಎಂ. ಚೈತನ್ಯ, ಅನುಶ್ರೀ ಮತ್ತು ಶ್ರುತಿ ನಾಯ್ಡು ಅಂತಹ ಆಪ್ತರು ದಿಲೀಪ್ ಅವರ ಪ್ರತಿಭೆಯನ್ನು ಸ್ಮರಿಸಿದ್ದಾರೆ.

ʻಧುರಂಧರ್‌ʼ ಚಿತ್ರಕ್ಕೆ ಕೌಂಟರ್‌ ಕೊಡಲು ಹೋಗಿ ಎಡವಿಬಿದ್ದ ಪಾಕ್‌ನ ʻಮೆರಾ ಲಿಯಾರಿʼ ಸಿನಿಮಾ; ಸೇಲ್ ಆಗಿದ್ದು ಬರೀ ಇಪ್ಪತ್ತೆರಡೇ ಟಿಕೆಟ್!‌ ‌

ʻಧುರಂಧರ್ʼಗೆ ಕೌಂಟರ್ ಕೊಡಲು ಬಂದ 'ಮೇರಾ ಲಿಯಾರಿ' ಸಿನಿಮಾ ಅಟ್ಟರ್‌ ಫ್ಲಾಪ್‌

ಆದಿತ್ಯ ಧರ್ ನಿರ್ದೇಶನದ ಭಾರತೀಯ ಬ್ಲಾಕ್‌ಬಸ್ಟರ್ 'ಧುರಂಧರ್' ಚಿತ್ರಕ್ಕೆ ಕೌಂಟರ್‌ ಕೊಡಲು ಬಂದ ಸಿನಿಮಾ ಎಂಬ ಪ್ರಚಾರದಲ್ಲಿ ಬಿಡುಗಡೆಗೊಂಡ ಪಾಕಿಸ್ತಾನದ 'ಮೇರಾ ಲಿಯಾರಿ' ಬಾಕ್ಸ್ ಆಫೀಸ್‌ನಲ್ಲಿ ದಯನೀಯವಾಗಿ ಸೋತಿದೆ. ಚಿತ್ರರಂಗದಲ್ಲಿ ಅತಿ ದೊಡ್ಡ ಮುಖಭಂಗ ಅನುಭವಿಸಿದೆ.

Ram Charan: ʻಪೆದ್ದಿʼ ಸಿನಿಮಾದ ಮೂಲಕ ಫಾರೀನ್‌ ಮಾರ್ಕೆಟ್‌ಗೆ ಕಾಲಿಟ್ಟ ಕನ್ನಡದ ʻಹೊಂಬಾಳೆ ಫಿಲ್ಮ್ಸ್ʼ

ವಿದೇಶದಲ್ಲಿ 'ಪೆದ್ದಿ' ಚಿತ್ರವನ್ನು ರಿಲೀಸ್‌ ಮಾಡಲಿದೆ ಹೊಂಬಾಳೆ ಫಿಲ್ಮ್ಸ್

ಸ್ಯಾಂಡಲ್‌ವುಡ್‌ನ ಖ್ಯಾತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, ಈಗ ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರದ ಮೂಲಕ ಅಂತರರಾಷ್ಟ್ರೀಯ ವಿತರಣಾ ಕ್ಷೇತ್ರಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಉತ್ತರ ಅಮೆರಿಕ ಹಾಗೂ ಯುರೋಪ್ ಸೇರಿದಂತೆ ಜಾಗತಿಕ ಮಟ್ಟದಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲು ವಿಜಯ್ ಕಿರಗಂದೂರು ಸಜ್ಜಾಗಿದ್ದಾರೆ.

3 ಆಸ್ಪತ್ರೆಗಳಿಗೆ ಹೋದರೂ ಉಳಿಯಲಿಲ್ಲ ದಿಲೀಪ್‌ ರಾಜ್‌ ಜೀವ; ಪ್ರತಿಭಾವಂತ ನಟನ ಆ ಕೊನೆಯ ಕ್ಷಣಗಳು ಹೇಗಿದ್ದವು?

3 ಆಸ್ಪತ್ರೆಗಳಿಗೆ ಹೋದರೂ ಉಳಿಯಲಿಲ್ಲ ದಿಲೀಪ್‌; ಅಂತಿಮ ಕ್ಷಣಗಳು ಹೇಗಿದ್ದವು?

ಪ್ರತಿಭಾವಂತ ನಟ ದಿಲೀಪ್ ರಾಜ್ ಅವರ ನಿಧನವು ವೈದ್ಯಕೀಯ ವ್ಯವಸ್ಥೆಯ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಮೇ 13ರ ಮುಂಜಾನೆ ಎದೆನೋವಿನಿಂದ ಕುಸಿದ ದಿಲೀಪ್ ಅವರನ್ನು ಉಳಿಸಲು ಪತ್ನಿ ವಿದ್ಯಾ ಮೂರು ಆಸ್ಪತ್ರೆಗಳಿಗೆ ಅಲೆದರೂ ಸಕಾಲಕ್ಕೆ ವೈದ್ಯಕೀಯ ನೆರವು ಸಿಗಲಿಲ್ಲ!

ʻಮಿಲನʼ ಸಿನಿಮಾದ ಆಕಾಶ್‌ - ಹೇಮಂತ್‌ ಇಬ್ಬರೂ ನಮ್ಮೊಂದಿಗಿಲ್ಲ; ಅಯ್ಯೋ, ಅಪ್ಪು- ದಿಲೀಪ್‌ ರಾಜ್‌ ನಡುವೆ ಇದೆಂಥಾ ಸಾಮ್ಯತೆ?

ಅಯ್ಯೋ, ಪುನೀತ್ ‌ ರಾಜ್‌ಕುಮಾರ್‌ -‌ ದಿಲೀಪ್ ರಾಜ್ ನಡುವೆ ಇದೆಂಥಾ ಸಾಮ್ಯತೆ?

'ಮಿಲನ' ಸಿನಿಮಾದ ನಾಯಕ ಪುನೀತ್ ರಾಜ್‌ಕುಮಾರ್ ಮತ್ತು ಖಳನಾಯಕ ದಿಲೀಪ್ ರಾಜ್ ಇಬ್ಬರೂ ಹೃದಯಾಘಾತದಿಂದಲೇ ಅಕಾಲಿಕ ಮರಣ ಹೊಂದಿದ್ದು ವಿಧಿಯ ಕರಾಳ ಆಟದಂತಿದೆ. ಸಂಭಾವಿತ ನಟರಾದ ಇವರಿಬ್ಬರೂ ಕೇವಲ ನಟರಾಗಿ ಮಾತ್ರವಲ್ಲದೆ, ತಮ್ಮದೇ ನಿರ್ಮಾಣ ಸಂಸ್ಥೆಗಳ ಮೂಲಕ ಹೊಸ ಪ್ರತಿಭೆಗಳಿಗೆ ಆಸರೆಯಾಗಿದ್ದರು.

ʻಅವರನ್ನು ಮತ್ತೆ ನೋಡುವವರೆಗೂ ನನ್ನ ಆತ್ಮಕ್ಕೆ ಶಾಂತಿ ಸಿಗಲಾರದುʼ; ದಿಲೀಪ್‌ ರಾಜ್‌ ನಿಧನದ ಬಳಿಕ ಪತ್ನಿಯ ಮೊದಲ ಪೋಸ್ಟ್‌

ʻಮತ್ತೆ ಸಿಗುವವರೆಗೂ ಆತ್ಮಕ್ಕೆ ಶಾಂತಿ ಇಲ್ಲʼ; ದಿಲೀಪ್‌ ಪತ್ನಿಯ ಪೋಸ್ಟ್

ನಟ ದಿಲೀಪ್ ರಾಜ್ ಅವರ ಅಕಾಲಿಕ ನಿಧನದ ನಂತರ ಪತ್ನಿ ಶ್ರೀವಿದ್ಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾತುಗಳು ಕಣ್ಣಾಲಿಗಳನ್ನು ಒದ್ದೆ ಮಾಡುತ್ತಿವೆ. ಪತಿಯನ್ನು ಮತ್ತೆ ಭೇಟಿಯಾಗುವವರೆಗೂ ತಮ್ಮ ಆತ್ಮಕ್ಕೆ ಶಾಂತಿ ಸಿಗದು ಎಂದು ವಿದ್ಯಾ ಅವರು ಭಾವುಕರಾಗಿ ನುಡಿದಿದ್ದು, ದಿಲೀಪ್ ಅವರನ್ನು ಕಲೆ ಮತ್ತು ಸಿನಿಮಾದ ರೂಪದಲ್ಲಿ ಜೀವಂತವಾಗಿರಿಸುವ ನಿರ್ಧಾರ ತಳೆದಿದ್ದಾರೆ.

ರಾಮನಗರದ ಫಾರ್ಮ್‌ಹೌಸ್‌ನಲ್ಲಿ ನೆರವೇರಿದ ದಿಲೀಪ್‌ ರಾಜ್‌ ಅಂತ್ಯಕ್ರಿಯೆ; ಈಡೇರಲಿಲ್ಲ ಈ ಪ್ರತಿಭಾನ್ವಿತ ನಟನ ಕೊನೆ ಆಸೆ

ರಾಮನಗರದ ಫಾರ್ಮ್‌ಹೌಸ್‌ನಲ್ಲಿ ನೆರವೇರಿದ ನಟ ದಿಲೀಪ್ ರಾಜ್‌ ಅಂತ್ಯಕ್ರಿಯೆ

Dileep Raj Death: ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ದಿಲೀಪ್ ರಾಜ್ ಅವರ ಅಂತ್ಯಕ್ರಿಯೆಯು ರಾಮನಗರದ ಅವರ ನೆಚ್ಚಿನ ರಾಜ್‌ಶ್ರೀ ಫಾರ್ಮ್‌ಹೌಸ್‌ನಲ್ಲಿ ಬುಧವಾರ ನೆರವೇರಿತು. ಲಿಂಗಾಯತ ಸಂಪ್ರದಾಯದಂತೆ ದಿಲೀಪ್‌ ಅಣ್ಣನ ಮಗ ಅಂತ್ಯಕ್ರಿಯೆ ನೆರವೇರಿಸಿದರು.

ʻಪ್ರೀತಿಸಿ ಮದುವೆಯಾಗಿದ್ದ ದಿಲೀಪ್‌ ರಾಜ್‌ʼ; ಅಗಲಿದ ಗೆಳೆಯನನ್ನು ನೆನೆದು ನಟ ನವೀನ್‌ ಕೃಷ್ಣ ಭಾವುಕ

ʻನನ್ನ ಡೈರೆಕ್ಟರ್ ಮಾಡಿದ್ದೇ ದಿಲೀಪ್‌ʼ; ಗೆಳೆಯನ ಬಗ್ಗೆ ನವೀನ್ ಕೃಷ್ಣ ಮಾತು

ನಟ ದಿಲೀಪ್ ರಾಜ್ ಅಕಾಲಿಕ ನಿಧನಕ್ಕೆ ಅವರ ಗೆಳೆಯ ನಟ ನವೀನ್ ಕೃಷ್ಣ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕಾಲೇಜು ದಿನಗಳಿಂದಲೂ ಜೊತೆಯಾಗಿದ್ದ ಅವರು ಹಲವು ಘಟನೆಗಳನ್ನು ನವೀನ್ ಸ್ಮರಿಸಿದ್ದಾರೆ. ತಾವು ನಿರ್ದೇಶಕರಾಗಲು ದಿಲೀಪ್ ಅವರೇ ಕಾರಣ ಎಂದು ಭಾವುಕರಾಗಿದ್ದಾರೆ.

Loading...