ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Rudra Kala Movie: ʻದೂಧ್ ಪೇಡಾʼ ದಿಗಂತ್ ಹೊಸ ಸಿನಿಮಾಗೆ ʻಸ್ಟಾರ್‌ʼ ನಟಿ ಸಮಂತಾ ಸಾಥ್

ದಿಗಂತ್ ನಟನೆಯ 'ರುದ್ರ ಕಾಲ' ಸಿನಿಮಾದ ಟೈಟಲ್ ರಿವೀಲ್‌ ಮಾಡಿದ ಸಮಂತಾ

Diganth Rudra Kaala Movie Update: ನಟ ದಿಗಂತ್ ಅಭಿನಯದ 'ರುದ್ರ ಕಾಲ' ಚಿತ್ರದ ಶೀರ್ಷಿಕೆಯನ್ನು ಬಹುಭಾಷಾ ತಾರೆ ಸಮಂತಾ ಬಿಡುಗಡೆ ಮಾಡಿದ್ದಾರೆ. ಗೋಪಿ ನಿರ್ದೇಶನದ ಈ ಚಿತ್ರವು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿದ್ದು, ಏಪ್ರಿಲ್ 22ರಂದು ಚಿತ್ರದ ಮುಹೂರ್ತ ನಡೆಯಲಿದೆ.

ʻರಾಕಾʼ ಚಿತ್ರದ ಬೀಸ್ಟ್‌ ಲುಕ್‌ಗಾಗಿ ಗಂಟೆಗಟ್ಟಲೇ ಎಫರ್ಟ್‌ ಹಾಕುತ್ತಿರುವ ʻಐಕಾನ್‌ ಸ್ಟಾರ್ʼ ಅಲ್ಲು ಅರ್ಜುನ್‌

'ರಾಕಾ' ಚಿತ್ರದ ಬೀಸ್ಟ್ ಲುಕ್‌ಗಾಗಿ ಅಲ್ಲು ಅರ್ಜುನ್ ಭರ್ಜರಿ ತಯಾರಿ

Allu Arjun Raaka Movie Update: 'ಪುಷ್ಪ' ನಂತರ ಅಲ್ಲು ಅರ್ಜುನ್ 'ರಾಕಾ' ಚಿತ್ರದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದ್ದಾರೆ. ಅಟ್ಲೀ ನಿರ್ದೇಶನದ ಈ ಚಿತ್ರದಲ್ಲಿ ಅಲ್ಲು ಅರ್ಜುನ್‌ 'ಅರ್ಧ ಮೃಗ ಮತ್ತು ಅರ್ಧ ಮನುಷ್ಯ'ನ ವಿಶಿಷ್ಟ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಲುಕ್‌ಗಾಗಿ ಅವರು ಪ್ರತಿದಿನ ಸಾಕಷ್ಟು ಶ್ರಮ ಹಾಕುತ್ತಿದ್ದಾರೆ.

ʻಲವ್‌ ಸೀಸನ್ಸ್‌ʼ ಸಿನಿಮಾದ ಹೀರೋ ಆದ ರಂಗಭೂಮಿ ನಟ ಮುಕುಂದ ರಾಮಸ್ವಾಮಿ; ಜೂನ್‌ನಲ್ಲಿ ತೆರೆಗೆ ಬರುವುದು ಫಿಕ್ಸ್

‌ರಂಗಭೂಮಿ ಕಲಾವಿದರ ʻಲವ್‌ ಸೀಸನ್ಸ್‌ʼ ಸಿನಿಮಾ ಟೀಸರ್‌ ರಿಲೀಸ್‌

Love Seasons Movie: ಹೊಸ ಪ್ರತಿಭೆಗಳ ಸಮಾಗಮದಲ್ಲಿ ಸಿದ್ಧವಾಗಿರುವ 'ಲವ್ ಸೀಸನ್ಸ್' ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಗಮನ ಸೆಳೆಯುತ್ತಿದೆ. ಕೃತ್ವಿಕ್ ನಿರ್ದೇಶನದ ಈ ಚಿತ್ರದಲ್ಲಿ ರಂಗಭೂಮಿ ಕಲಾವಿದ ಮುಕುಂದ ರಾಮಸ್ವಾಮಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

‌Yash: ʻಟಾಕ್ಸಿಕ್ ಬರೀ ಗ್ಯಾಂಗ್‌ಸ್ಟರ್‌ ಸಿನಿಮಾ ಅಲ್ಲ..ʼ; ಅಸಲಿ ವಿಚಾರ ಬಿಚ್ಚಿಟ್ಟ ‌ʻರಾಕಿ ಭಾಯ್‌ʼ

ಟಾಕ್ಸಿಕ್ ಬರೀ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ; ಅಸಲಿ ಗುಟ್ಟು ಬಿಚ್ಚಿಟ್ಟ ಯಶ್

Toxic Movie Yash Update: ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ 'ಸಿನಿಮಾಕಾನ್ 2026' ಸಮಾವೇಶದಲ್ಲಿ ಭಾಗವಹಿಸಿದ್ದ ಯಶ್, ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್' ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ. ಇದು ಕೇವಲ ಸಾಧಾರಣ ಗ್ಯಾಂಗ್‌ಸ್ಟರ್ ಸಿನಿಮಾವಲ್ಲ, ಬದಲಾಗಿ ಮಾನವ ಮನಃಸ್ಥಿತಿಯ ಆಳವಾದ ಸೈಕಾಲಜಿ ಹೊಂದಿರುವ ವಿಶಿಷ್ಟ ಕಥೆ ಎಂದು ಅವರು ಹೇಳಿದ್ದಾರೆ.

ʻಮಾರ್ಕ್‌ʼ ನಿರ್ಮಾಪಕರ ಜೊತೆ ಶಿವಣ್ಣ ಹೊಸ ಸಿನಿಮಾ; ಸ್ಯಾಂಡಲ್‌ವುಡ್‌ಗೆ ಮರಳಿದ ಪುನೀತ್‌ ʻಚಕ್ರವ್ಯೂಹʼ ಡೈರೆಕ್ಟರ್‌

'ಮಾರ್ಕ್' ನಿರ್ಮಾಪಕರ ಜೊತೆ ಶಿವಣ್ಣ ಹೊಸ ಸಿನಿಮಾ ಘೋಷಣೆ; ಡೈರೆಕ್ಟರ್‌ ಯಾರು?

Shivarajkumar Sathyajyothi Films Movie: ʻಕಿಚ್ಚʼ ಸುದೀಪ್ ಅಭಿನಯದ 'ಮಾರ್ಕ್' ಚಿತ್ರವನ್ನು ನಿರ್ಮಿಸಿದ್ದ ಸತ್ಯಜ್ಯೋತಿ ಫಿಲ್ಮ್ಸ್ ಈಗ ಶಿವಣ್ಣನ ಹೊಸ ಸಿನಿಮಾಗೆ ಬಂಡವಾಳ ಹೂಡುತ್ತಿದೆ. ಪುನೀತ್ ರಾಜಕುಮಾರ್ ಅವರ 'ಚಕ್ರವ್ಯೂಹ' ಖ್ಯಾತಿಯ ಎಂ. ಶರವಣನ್ ಈ ಚಿತ್ರಕ್ಕೆ ನಿರ್ದೇಶಕರಾಗಿದ್ದು, ಈ ಚಿತ್ರವು ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ.

ʻಜನ ನಾಯಗನ್‌ʼ ಚಿತ್ರದ ಲೀಕ್‌ನಿಂದ ಕೆವಿಎನ್‌ ಪ್ರೊಡಕ್ಷನ್ಸ್‌ಗೆ ಸಂಕಷ್ಟ; ಕನ್ನಡ ನಿರ್ಮಾಪಕರಿಗೆ ‌ʻದಳಪತಿʼ ವಿಜಯ್ ಮಾಡಿದ ಪ್ರಾಮಿಸ್‌ ಏನು?

ʻಕೆವಿಎನ್ ಪ್ರೊಡಕ್ಷನ್ಸ್‌ʼ ಜೊತೆ ಮತ್ತೆ ಕೈಜೋಡಿಸ್ತಾರಾ ʻದಳಪತಿʼ ವಿಜಯ್?

Thalapathy Vijay 70th Movie: 'ಜನ ನಾಯಗನ್' ಚಿತ್ರದ ಸೆನ್ಸಾರ್ ವಿಳಂಬ ಮತ್ತು ಪೈರಸಿ ಲೀಕ್‌ನಿಂದಾಗಿ ಭಾರೀ ಸಂಕಷ್ಟ ಅನುಭವಿಸಿರುವ ಕರ್ನಾಟಕದ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಗೆ ಸಹಾಯ ಮಾಡಲು ವಿಜಯ್ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ರಾಜಕೀಯ ಪ್ರವೇಶದ ಹಿನ್ನೆಲೆಯಲ್ಲಿ ಚಿತ್ರರಂಗಕ್ಕೆ ವಿಜಯ್‌ ಗುಡ್‌ ಬೈ ಹೇಳುತ್ತಾರೆ ಎನ್ನಲಾಗಿತ್ತು. ಆದರೆ ಈಗ ಕೆವಿಎನ್ ಬ್ಯಾನರ್‌ನಲ್ಲೇ ತಮ್ಮ 70ನೇ ಸಿನಿಮಾವನ್ನು ಮಾಡಲು ವಿಜಯ್ ಒಪ್ಪಿಕೊಂಡಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ತಂದೆ ಧರ್ಮೇಂದ್ರ ಸಾವಿನ ಬಳಿಕ ಮಲ ಸಹೋದರಿಯರಿಗೆ ಹತ್ತಿರವಾದ ಬಾಬಿ ಡಿಯೋಲ್‌; ʻಅಪ್ಪನ ಜೊತೆ ಇನ್ನಷ್ಟು ಸಮಯ ಕಳೆಯಬೇಕಿತ್ತುʼ ಎಂದ ನಟ

ʻತಂದೆ ಧರ್ಮೇಂದ್ರ ಜತೆ ಇನ್ನಷ್ಟು ಸಮಯ ಕಳೆಯಬೇಕಿತ್ತುʼ ಎಂದ ಮಗ ಬಾಬಿ ಡಿಯೋಲ್

ಹಿರಿಯ ನಟ ಧರ್ಮೇಂದ್ರ ಅವರ ಅಗಲಿಕೆಯ ನೋವು ಡಿಯೋಲ್ ಕುಟುಂಬವನ್ನು ಹತ್ತಿರ ತಂದಿದೆ. ತಂದೆ ಇಲ್ಲದ ಶೂನ್ಯದ ಬಗ್ಗೆ ಮಾತನಾಡಿರುವ ಬಾಬಿ ಡಿಯೋಲ್, ಈ ದುಃಖವು ತಮ್ಮನ್ನು ಮಲ ಸಹೋದರಿಯರಾದ ಇಶಾ ಮತ್ತು ಅಹಾನಾ ಡಿಯೋಲ್ ಅವರೊಂದಿಗೆ ಹತ್ತಿರವಾಗಿಸಿದೆ ಎಂದು ಹೇಳಿದ್ದಾರೆ.

ʻಬಿಗ್‌ ಬಾಸ್ʼ ಖ್ಯಾತಿಯ ವಿಷ್ಣುಪ್ರಿಯಾಗೆ ವಿವಾದವೇ ವರವಾಯ್ತಾ? ಕೇಸ್ ದಾಖಲಾಗುತ್ತಿದ್ದಂತೆಯೇ ಹೆಚ್ಚಿತು ಆದಾಯ

ವಿವಾದವೇ ವರವಾಯ್ತಾ? ನಟಿ ವಿಷ್ಣುಪ್ರಿಯಾ ಆದಾಯ ದಿಢೀರ್‌ ಏರಿಕೆ ಆಗಿದ್ದೇಗೆ?

Vishnu Priya Bhimineni Controversy: ತನ್ನ ಇನ್‌ಸ್ಟಾಗ್ರಾಮ್‌ನ 'ಎಕ್ಸ್‌ಕ್ಲೂಸಿವ್ ಕಂಟೆಂಟ್' ಮೂಲಕ ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ನಟಿ ವಿಷ್ಣುಪ್ರಿಯಾ ಭೀಮಿನೇನಿ ವಿರುದ್ಧ ವಿಜಯವಾಡದಲ್ಲಿ ದೂರು ದಾಖಲಾಗಿದೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಈ ಕಾನೂನು ಸಂಕಷ್ಟವು ಅವರ ಜನಪ್ರಿಯತೆಯನ್ನು ಹೆಚ್ಚಿಸಿದ್ದು, ಆದಾಯ ಮೂರು ಪಟ್ಟು ಅಧಿಕವಾಗಿದೆ.

ʻರಾಮಾಯಣ ಚಿತ್ರದಲ್ಲಿ ರಣ್‌ಬೀರ್ - ನಾನು ಇನ್ನೂ ಮುಖಾಮುಖಿಯಾಗಿಲ್ಲʼ; ಇಂಟರೆಸ್ಟಿಂಗ್‌ ವಿಚಾರ ರಿವೀಲ್‌ ಮಾಡಿದ ನಟ ಯಶ್‌

Ramayana Movie: ರಣ್‌ಬೀರ್ ಕಪೂರ್‌ ಬಗ್ಗೆ ನಟ ಯಶ್‌ ಏನಂದ್ರು ನೋಡಿ

Ramayana Movie Update: ರಣ್‌ಬೀರ್‌ ಕಪೂರ್‌, ಯಶ್‌ ನಟನೆಯ ರಾಮಾಯಣ ಸಿನಿಮಾ ಈಗ ಜಾಗತಿಕ ಮಟ್ಟದಲ್ಲಿ ಸಂಚಲನ ಮೂಡಿಸಿದೆ. ಲಾಸ್ ಏಂಜಲ್ಸ್‌ನಲ್ಲಿ ನಡೆದ 'ಸಿನಿಮಾಕಾನ್ 2026'ರಲ್ಲಿ ಭಾಗವಹಿಸಿದ್ದ ಯಶ್, "ರಾಮಾಯಣ ಚಿತ್ರದ ಮೊದಲ ಭಾಗದಲ್ಲಿ ತಾವು ಮತ್ತು ರಣ್‌ಬೀರ್ ಎಲ್ಲಿಯೂ ಮುಖಾಮುಖಿಯಾಗಿಲ್ಲ" ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ.

ʻಗಿಲ್ಲಿ ನಟನ ಬೆಳವಣಿಗೆ ಬಗ್ಗೆ ನನಗೆ ಸಂತೋಷವಿದೆ, ಅಸೂಯೆ ಇಲ್ಲʼ; ಪ್ರಶ್ನಿಸುವವರ ಬಾಯಿ ಮುಚ್ಚಿಸಿದ ಧನುಷ್‌ ಗೌಡ

ʻಜನರು ಗಿಲ್ಲಿಯನ್ನೇ ಬೆಳೆಸಲಿ, ನಂಗೇನೂ ತೊಂದರೆ ಇಲ್ಲʼ- ಧನುಷ್‌ ಗೌಡ

Dhanush Gowda On Gilli Nata: ಧನುಷ್‌ ಗೌಡ ಅವರು ತಮ್ಮ ಹೊಸ ಆಲ್ಬಂ ಹಾಡು 'ಜಿನುಗೊ ಮಳೆ' ಬಿಡುಗಡೆ ವೇಳೆ ಮಾತನಾಡಿ, "ಗಿಲ್ಲಿ ನಟನ ಏಳಿಗೆಯ ಬಗ್ಗೆ ತಮಗೆ ಅಸೂಯೆಯಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸದ್ಯದಲ್ಲೇ ಹೊಸ ಸಿನಿಮಾದ ಮೂಲಕ ಪ್ರೇಕ್ಷಕರ ಮುಂದೆ ಬರುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

Dhurandhar: ವಿಶ್ವಾದ್ಯಂತ ₹3000 ಕೋಟಿ ಗಳಿಸಿದ ಧುರಂಧರ್; ಹೊಸ ದಾಖಲೆ ಮಾಡೇ ಬಿಡ್ತು ಮೂವಿ

ವಿಶ್ವಾದ್ಯಂತ ₹3000 ಕೋಟಿ ಗಳಿಸಿದ ಧುರಂಧರ್

Dhurandhar: ಆದಿತ್ಯ ಧರ್‌ ಅವರ ಧುರಂಧರ್ : ದಿ ರಿವೆಂಜ್ ಒಟ್ಟಾಗಿ ಅಧಿಕೃತವಾಗಿ ದೇಶದಲ್ಲಿ ಅತಿ ಹೆಚ್ಚು ಗಳಿಕೆಯ ಫ್ರಾಂಚೈಸಿಯಾಗಿ ಹೊರಹೊಮ್ಮಿವೆ. ರಣವೀರ್ ಸಿಂಗ್ , ಸಾರಾ ಅರ್ಜುನ್ ಮತ್ತು ಇತರರು ನಟಿಸಿದ ಚಲನಚಿತ್ರಗಳು ವಿಶ್ವಾದ್ಯಂತ ಒಟ್ಟಾರೆಯಾಗಿ ₹ 3,000 ಕೋಟಿಗೂ ಹೆಚ್ಚು ಗಳಿಸಿವೆ . ಧುರಂಧರ್ ಫ್ರಾಂಚೈಸ್ ತೆಲುಗು ಚಲನಚಿತ್ರೋದ್ಯಮದ ಬಾಹುಬಲಿ ಮತ್ತು ಪುಷ್ಪಾ ಫ್ರಾಂಚೈಸಿಗಳನ್ನು ಸೋಲಿಸಿದ್ದು ಮಾತ್ರವಲ್ಲದೆ, ಈ ಸಂಖ್ಯೆಗಳನ್ನು ಗಳಿಸಿದ ಏಕೈಕ ಫ್ರಾಂಚೈಸಿಯೂ ಆಗಿದೆ.

Jerax Trailer: ʻಜೆರಾಕ್ಸ್ʼ ಕಾಪಿಗೆ ಜೀವ ಬಂದ್ರೆ ಹೇಗಿರುತ್ತೆ? ಡಾಲಿ ಧನಂಜಯ್ ನಿರ್ಮಾಣದ ವೆಬ್ ಸರಣಿಯಲ್ಲಿ ಫ್ಯಾಂಟಸಿ ಕಿಕ್!

ʻಡಾಲಿʼ ಧನಂಜಯ ನಿರ್ಮಾಣದ 'ಜೆರಾಕ್ಸ್' ವೆಬ್‌ ಸರಣಿಯ ಟ್ರೇಲರ್ ರಿಲೀಸ್‌

Xerox Web Series: ಡಾಲಿ ಧನಂಜಯ ನಿರ್ಮಾಣದ, 'ಬ್ಲಿಂಕ್' ಖ್ಯಾತಿಯ ಶ್ರೀನಿಧಿ ಬೆಂಗಳೂರು ನಿರ್ದೇಶನದ ಜೆರಾಕ್ಸ್ ವೆಬ್‌ ಸರಣಿಯ ಟ್ರೇಲರ್‌ ರಿಲೀಸ್‌ ಆಗಿದೆ. ಒಂದು ನಿಗೂಢ ತಾಯಿತದಿಂದಾಗಿ ಜೆರಾಕ್ಸ್ ಕಾಪಿಗಳಿಗೆ ಜೀವ ಬಂದು, ಇಡೀ ಊರಿನಲ್ಲಿ ನಡೆಯುವ ಅಚ್ಚರಿ ಮತ್ತು ಹಾಸ್ಯದ ಘಟನೆಗಳೇ ಈ ಆರು ಸಂಚಿಕೆಗಳ ಸರಣಿಯ ಜೀವಾಳ. ಏಪ್ರಿಲ್ 24 ರಿಂದ ಇದು ಜೀ5 ನಲ್ಲಿ ಈ ವೆಬ್‌ ಸರಣಿಯು ವೀಕ್ಷಣೆಗೆ ಲಭ್ಯವಾಗಲಿದೆ.

ಬಜೆಟ್‌ 300 ಕೋಟಿ, ಕಲೆಕ್ಷನ್‌ 3 ಸಾವಿರ ಕೋಟಿ! ʻಬಾಹುಬಲಿʼ, ʻಪುಷ್ಪʼ ದಾಖಲೆಗಳನ್ನು ಪುಡಿಗಟ್ಟಿದ ʻಧುರಂಧರ್‌ʼ

3000 ಕೋಟಿ ಕ್ಲಬ್‌ಗೆ ಧುರಂಧರ್ ಎಂಟ್ರಿ: ಬಾಹುಬಲಿ, ಪುಷ್ಪ ದಾಖಲೆಗಳು ಉಡೀಸ್

Dhurandhar Box Office Record: ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಸರಣಿಯು ಒಟ್ಟಾರೆಯಾಗಿ 3,019.35 ಕೋಟಿ ರೂಪಾಯಿ ಗಳಿಸುವ ಮೂಲಕ 'ಬಾಹುಬಲಿ' ಮತ್ತು 'ಪುಷ್ಪ' ಚಿತ್ರಗಳ ದಾಖಲೆಯನ್ನು ಪುಡಿಗಟ್ಟಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ 3 ಸಾವಿರ ಕೋಟಿ ರೂಪಾಯಿ ಗಡಿ ದಾಟಿದ ಮೊದಲ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ.

NTR Neel Movie: ಎನ್‌ಟಿಆರ್‌ - ರುಕ್ಮಿಣಿ ವಸಂತ್‌ ‌ಸಿನಿಮಾಕ್ಕೆ ಆಲಿಯಾ ಭಟ್‌ ಎಂಟ್ರಿ? ವಿಲನ್‌ ಪಾತ್ರದಲ್ಲಿ ಶಾಹಿದ್‌ ಕಪೂರ್‌!

ಎನ್‌ಟಿಆರ್-ನೀಲ್ ಚಿತ್ರಕ್ಕೆ ಆಲಿಯಾ ಭಟ್ ಎಂಟ್ರಿ? ವಿಲನ್ ಆಗ್ತಾರಾ ಶಾಹಿದ್?

NTR Neel Movie Updates: ಎನ್‌ಟಿಆರ್‌ ಮತ್ತು ಪ್ರಶಾಂತ್‌ ನೀಲ್‌ ಅವರ ಮುಂದಿನ ಸಿನಿಮಾವು ಪ್ಯಾನ್-ಇಂಡಿಯಾ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸುತ್ತಿದೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿದ್ದರೂ, ಕಥೆಗೆ ತಿರುವು ನೀಡುವ ಪ್ರಮುಖ ಪಾತ್ರಕ್ಕಾಗಿ ಆಲಿಯಾ ಭಟ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಮಾತುಗಳು ಕೇಳಿಬಂದಿದೆ.

Alia Bhatt: ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಲಿಯಾ-ರಣಬೀರ್; ಕ್ಯೂಟ್‌ ಫೋಟೋಸ್‌ ವೈರಲ್‌

ನಾಲ್ಕನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಆಲಿಯಾ-ರಣಬೀರ್

Alia Bhatt: ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಬಾಲಿವುಡ್‌ನ ಅತ್ಯಂತ ಕ್ಯೂಟ್‌ ಜೋಡಿಗಳಲ್ಲಿ ಒಂದು. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ನಾಲ್ಕನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ನಟಿ ಆಲಿಯಾ ಭಟ್ ತಮ್ಮ ಪತಿ ರಣಬೀರ್ ಕಪೂರ್ ಜೊತೆಗಿನ ಆನಿವರ್ಸರಿ ವೆಕೇಷನ್‌ನ ಸುಂದರ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಪತ್ನಿ ಸಂಗೀತಾ ಫೋಟೋವನ್ನು ವಿಜಯ್‌ಗೆ ನೀಡಿದ ಅಭಿಮಾನಿ; ಹೇಗಿತ್ತು ʻದಳಪತಿʼ ರಿಯಾಕ್ಷನ್?

ಚುನಾವಣಾ ರ್‍ಯಾಲಿಯಲ್ಲಿ ನಟ ವಿಜಯ್‌ಗೆ ‌ ಅಚ್ಚರಿಯ ಗಿಫ್ಟ್‌ ನೀಡಿದ ಫ್ಯಾನ್

Thalapathy Vijay: ಟಿವಿಕೆ (TVK) ಪಕ್ಷದ ಚುನಾವಣಾ ಪ್ರಚಾರದ ವೇಳೆ ಅಭಿಮಾನಿಯೊಬ್ಬರು ನಟ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಅವರ ಮದುವೆಯ ಎಡಿಟೆಡ್ ಫೋಟೋ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಪತ್ನಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವ ಸಂಕಷ್ಟದ ಸಮಯದಲ್ಲೂ ಆ ಫೋಟೋವನ್ನು ಪ್ರೀತಿಯಿಂದ ಪಡೆದು, ಅಭಿಮಾನಿಗಳತ್ತ ಕೈ ತೋರಿಸಿದ್ದಾರೆ ವಿಜಯ್.

Akshay Kumar: 6 ವರ್ಷಗಳ ಕಾಲ ವಿದ್ಯಾ ಬಾಲನ್ ಎದುರು ಬರಲು ಹೆದರುತ್ತಿದ್ದರಂತೆ ಅಕ್ಷಯ್ ಕುಮಾರ್ ಮಗ; ಕಾರಣ ಏನು?

ವಿದ್ಯಾ ಬಾಲನ್ ಎದುರು ಬರಲು ಹೆದರುತ್ತಿದ್ದರಂತೆ ಅಕ್ಷಯ್ ಕುಮಾರ್ ಮಗ!

Akshay Kumar: ಭೂಲ್ ಭುಲೈಯಾ (2007) ಚಿತ್ರದಲ್ಲಿ ಮಂಜುಲಿಕಾ ಪಾತ್ರದಲ್ಲಿ ನಟಿಸಿದ ನಟಿ ವಿದ್ಯಾ ಬಾಲನ್ , ಬಿಡುಗಡೆಯಾದಾಗ ವೀಕ್ಷಕರನ್ನು ಭಯಭೀತಗೊಳಿಸಿದ್ದರು. ಅದು ಭಾರಿ ಯಶಸ್ಸನ್ನು ಕಂಡಿತು. ಮತ್ತು ಇಂದಿಗೂ ನೋಡುವವರನ್ನು ಭಯಭೀತಗೊಳಿಸುತ್ತಲೇ ಇದೆ. 2007ರಲ್ಲಿ ತೆರೆಕಂಡು ಸೂಪರ್ ಹಿಟ್ ಆದ ‘ಭೂಲ್ ಭುಲಯ್ಯ’ ಸಿನಿಮಾದಲ್ಲಿ ನಟಿ ವಿದ್ಯಾ ಬಾಲನ್ ಅವರು ಮಾಡಿದ್ದ ಮಂಜುಲಿಕಾ ಪಾತ್ರವನ್ನು ಕಂಡು ಆರವ್ ಎಷ್ಟು ಭಯಬಿದ್ದಿದ್ದರೆಂದರೆ, ಬರೋಬ್ಬರಿ 6 ವರ್ಷಗಳ ಕಾಲ ಅವರು ವಿದ್ಯಾ ಬಾಲನ್ ಎದುರು ಬರಲು ಹೆದರುತ್ತಿದ್ದರಂತೆ.

ಜೀ ಕನ್ನಡದಲ್ಲಿ ಸಾಧನೆ ಮಾಡಿದ ʻಕರ್ಣʼ ಧಾರಾವಾಹಿ; ʻನಿಧಿʼ ಪಾತ್ರಕ್ಕೆ ಪ್ರೀತಿ ನೀಡಿದ ಕನ್ನಡಿಗರಿಗೆ ಧನ್ಯವಾದ ಹೇಳಿದ ಭವ್ಯಾ ಗೌಡ

'ಕರ್ಣ' ಸೀರಿಯಲ್ ಮೈಲಿಗಲ್ಲು; ವೀಕ್ಷಕರಿಗೆ ʼನಿಧಿʻ ಭವ್ಯಾ ಗೌಡ‌ ಧನ್ಯವಾದ

Karna Serial: ಕಿರಣ್‌ ರಾಜ್‌, ಭವ್ಯಾ ಗೌಡ ಅಭಿನಯದ ʻಕರ್ಣʼ ಧಾರಾವಾಹಿಯು ಹೊಸ ಮೈಲಿಗಲ್ಲನ್ನು ಸೃಷ್ಟಿಸಿದೆ. ಹೌದು, ಈ ಸೀರಿಯಲ್ ಯಶಸ್ವಿಯಾಗಿ 200 ಸಂಚಿಕೆಗಳನ್ನು ಪೂರೈಸಿದೆ. ಈ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಭವ್ಯಾ ಗೌಡ, ವೀಕ್ಷಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

25 ದಿನ ಪೂರೈಸಿದ ʻಡಾರ್ಲಿಂಗ್‌ʼ ಕೃಷ್ಣ ನಟನೆಯ ʻಲವ್‌ ಮಾಕ್ಟೇಲ್‌ 3ʼ; ಇದು 2026ರ ಕನ್ನಡದ ಮೊದಲ ಹಿಟ್‌ ಚಿತ್ರ

25 ದಿನ ಪೂರೈಸಿ 2026ರ ಮೊದಲ ಬ್ಲಾಕ್ ಬಸ್ಟರ್ ಪಟ್ಟ ಪಡೆದ ʻಲವ್ ಮಾಕ್ಟೇಲ್ 3ʼ

Love Mocktail 3 Success Story: ಲವ್‌ ಮಾಕ್ಟೇಲ್‌ 3 ಸಿನಿಮಾವು ಸ್ಯಾಂಡಲ್‌ವುಡ್‌ನಲ್ಲಿ ಹೊಸ ದಾಖಲೆ ಬರೆದಿದೆ. ಮಾರ್ಚ್ 19ರಂದು ತೆರೆಕಂಡಿದ್ದ ಡಾರ್ಲಿಂಗ್ ಕೃಷ್ಣ ನಿರ್ದೇಶನದ ಈ ಚಿತ್ರ ಯಶಸ್ವಿಯಾಗಿ 25 ದಿನಗಳನ್ನು ಪೂರೈಸಿದ್ದು, 2026ರ ವರ್ಷದ ಮೊದಲ ಅಧಿಕೃತ ಸೂಪರ್ ಹಿಟ್ ಎನಿಸಿಕೊಂಡಿದೆ.

ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌ 173ನೇ ಸಿನಿಮಾಕ್ಕೆ ನಿಲ್ಲದ ಸಂಕಷ್ಟ; ಮತ್ತೊಮ್ಮೆ ನಿರ್ದೇಶಕರ ಬದಲಾವಣೆ

ರಜನಿಕಾಂತ್ ಚಿತ್ರಕ್ಕೆ ನಿರ್ದೇಶಕರದ್ದೇ ತಲೆನೋವು; ಮತ್ತೆ ಡೈರೆಕ್ಟರ್ ಚೇಂಜ್

Thalaivar 173 Director Issue: ಕಮಲ್ ಹಾಸನ್ ನಿರ್ಮಾಣದಲ್ಲಿ ರಜನಿಕಾಂತ್ ನಟಿಸಲಿರುವ ಹೊಸ ಚಿತ್ರದಿಂದ ನಿರ್ದೇಶಕ ಸಿಬಿ ಚಕ್ರವರ್ತಿ ಹೊರಬಂದಿದ್ದಾರೆ ಎನ್ನಲಾಗಿದೆ. ತೆಲುಗು ನಿರ್ಮಾಪಕರೊಂದಿಗಿನ ಕಾನೂನು ವಿವಾದವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಎರಡನೇ ಬಾರಿಗೆ ಈ ಚಿತ್ರಕ್ಕೆ ಹೀಗೆ ನಿರ್ದೇಶಕರು ಬದಲಾಗುತ್ತಿರುವುದು ಫ್ಯಾನ್ಸ್‌ಗೆ ಬೇಸರ ಮೂಡಿಸಿದೆ.

ʻದಳಪತಿʼ ವಿಜಯ್‌ಗೆ ತಪ್ಪದ ಸಂಕಷ್ಟ; ಲೋಕಲ್‌ ಕೇಬಲ್‌ ಚಾನೆಲ್‌ನಲ್ಲಿ ʻಜನ ನಾಯಗನ್‌ʼ ಸಿನಿಮಾ ಪ್ರದರ್ಶಿಸಿದ ಕಿಡಿಗೇಡಿ!

ಕೇಬಲ್ ಟಿವಿಯಲ್ಲೇ 'ಜನ ನಾಯಗನ್' ಸಿನಿಮಾ ಪ್ರದರ್ಶಿಸಿದ ಕಿಡಿಗೇಡಿ ಅರೆಸ್ಟ್

Jana Nayagan Movie On Cable TV: ದಳಪತಿ ವಿಜಯ್ ಅವರ ಜನ ನಾಯಗನ್‌ ಸಿನಿಮಾವನ್ನು ಕೊಯಮತ್ತೂರು ಸಮೀಪದ 'ರಾಶಿ ಕೇಬಲ್ ಟಿವಿ' ಮಾಲೀಕ ಪಳನಿಸ್ವಾಮಿ ಎಂಬಾತ ಅಕ್ರಮವಾಗಿ ತಮ್ಮ ಕೇಬಲ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದಾನೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದು, ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

Asha Bhosle: ಆಶಾ ಭೋಸ್ಲೆ ನಿಧನದ ಬಳಿಕ ಭಾವುಕ ಪೋಸ್ಟ್‌ ಹಂಚಿಕೊಂಡ ಮೊಮ್ಮಗಳು

ಆಶಾ ಭೋಸ್ಲೆ ನಿಧನದ ಬಳಿಕ ಭಾವುಕ ಪೋಸ್ಟ್‌ ಹಂಚಿಕೊಂಡ ಮೊಮ್ಮಗಳು

Asha Bhosle: ಆಶಾ ಭೋಸ್ಲೆ ಏಪ್ರಿಲ್ 12 ರಂದು ಮುಂಬೈನಲ್ಲಿ ನಿಧನರಾದರು . 92 ವರ್ಷ ವಯಸ್ಸಾಗಿದ್ದ ಅವರು ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯವಾಗಿರಲಿಲ್ಲ. ಏಪ್ರಿಲ್ 11 ರಂದು, ಅವರ ಮೊಮ್ಮಗಳು ಜನೈ ಭೋಸ್ಲೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಜ್ಜಿಯನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಘೋಷಿಸಿದರು. ತಮ್ಮ ಕುಟುಂಬದ ಗೌಪ್ಯತೆಯನ್ನು ಕೋರಿದ್ದರು.

Ram Charan: ನಾನು ಸ್ವಲ್ಪ 'ಒರಟು' ತಂದೆ; ಹೀಗೇಕೆ ಅಂದ್ರು ರಾಮ್ ಚರಣ್?

Ram Charan: ನಾನು ಸ್ವಲ್ಪ 'ಒರಟು' ತಂದೆ; ಹೀಗೇಕೆ ಅಂದ್ರು ರಾಮ್ ಚರಣ್?

Ram Charan: ನಟ ರಾಮ್ ಚರಣ್ ಅವರು ಮೂವರು ಮಕ್ಕಳ ತಂದೆ. ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ನಟ ತಾನು ರಫ್‌ ತಂದೆ ಎಂದು ಹೇಳಿದ್ದಾರೆ. ರಾಮ್ ಚರಣ್ ತಮ್ಮ ಮಕ್ಕಳು ನನ್ನ ಹೃದಯ ಬಡಿತ ಎಂದು ಕರೆದರು. ಅವರು ಇಲ್ಲದಿದ್ದಾಗ ಇಡೀ ಮನೆ ಹೇಗೆ ಬದಲಾಗುತ್ತದೆ ಎಂಬುದನ್ನು ಹಂಚಿಕೊಂಡರು.

Ram Pothineni: ಏಕಾಂತಕ್ಕೆ ಒಗ್ಗಿಕೊಂಡಿರುವೆ; ನಟ ರಾಮ್ ಪೋಥಿನೇನಿ ಮುಕ್ತ ಮಾತು

ಏಕಾಂತಕ್ಕೆ ಒಗ್ಗಿಕೊಂಡಿರುವೆ; ನಟ ರಾಮ್ ಪೋಥಿನೇನಿ ಮುಕ್ತ ಮಾತು

Ram Pothineni: ತೆಲುಗು ಸ್ಟಾರ್ ರಾಮ್ ಪೋಥಿನೇನಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರ ಇತ್ತೀಚಿನ ಚಿತ್ರ 'ಆಂಧ್ರ ಕಿಂಗ್ ತಾಲೂಕ' ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದರೂ, ಅದು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಷ್ಟು ಪ್ರದರ್ಶನ ನೀಡಲಿಲ್ಲ. ಪ್ರಸ್ತುತ, ತಮ್ಮ ಮುಂದಿನ ಯೋಜನೆಯ ಮೇಲೆ ಕೇಂದ್ರೀಕರಿಸಿರುವ ರಾಮ್, ಚಲನಚಿತ್ರ ಕೆಲಸದಲ್ಲಿ ನಿರತರಾಗಿದ್ದಾರೆ. ಏತನ್ಮಧ್ಯೆ, ಅವರ ವೈಯಕ್ತಿಕ ಜೀವನದ ಬಗ್ಗೆ ಮತ್ತೆ ಚರ್ಚೆಗಳು ಪ್ರಾರಂಭವಾಗಿವೆ. ವಿಶೇಷವಾಗಿ ಮದುವೆ ಮತ್ತು ಪ್ರೀತಿಯ ಬಗ್ಗೆ ಅವರ ಇತ್ತೀಚಿನ ಕಾಮೆಂಟ್‌ಗಳು ಅಭಿಮಾನಿಗಳಲ್ಲಿ ಆಸಕ್ತಿಯನ್ನು ಹುಟ್ಟುಹಾಕುತ್ತಿವೆ.

Loading...