ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

MGR : ಎಂಜಿಆರ್ ಬಗ್ಗೆ ಕೀಳು ಮಾತು; ಜನರ ಬಳಿ ಕೈಮುಗಿದು ಕ್ಷಮೆ ಕೇಳಿದ ರಾಜೇಂದ್ರ ಪ್ರಸಾದ್

ಎಂಜಿಆರ್ ಬಗ್ಗೆ ಕೀಳು ಮಾತು; ಕ್ಷಮೆ ಕೇಳಿದ ರಾಜೇಂದ್ರ ಪ್ರಸಾದ್

actor Rajendra Prasad : ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ನಟ ರಾಜೇಂದ್ರ ಪ್ರಸಾದ್, ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತಮಿಳುನಾಡಿನ ಖ್ಯಾತ ನಟ-ರಾಜಕಾರಣಿ ಎಂಜಿ ರಾಮಚಂದ್ರನ್ ಅಲಿಯಾಸ್ ಎಂಜಿಆರ್ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರ ನಟನೆಯನ್ನು ಕೊಂಡಾಡುತ್ತಾ ಕಾಂತಾರಾವ್ ಮಾಡುತ್ತಿದ್ದ ಸಿನಿಮಾ, ಅವರ ಜನಪದ ಶೈಲಿನ ನಟನೆಯನ್ನು ನೋಡಿ ಎಂಜಿಆರ್ ಅಂಥಹವರೇ ಪ್ಯಾಂಟಿನಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುತ್ತಿದ್ದರು ಎಂಬ ಹೇಳಿಕೆ ವಿವಾದವಾಗಿತ್ತು.

South OTT releases this week: ಈ ವಾರ OTTಗೆ ಎಂಟ್ರಿ ಕೊಟ್ಟ ಟಾಪ್ ಸೌತ್‌ ಸಿನಿಮಾಗಳಿವು!

ಈ ವಾರ OTTಗೆ ಎಂಟ್ರಿ ಕೊಟ್ಟ ಟಾಪ್ ಸೌತ್‌ ಸಿನಿಮಾಗಳಿವು!

South OTT releases this week: ಮಾರ್ಚ್ 2026 ರ ಎರಡನೇ ಶುಕ್ರವಾರ ಸಿನಿಮಾ ಪ್ರಿಯರಿಗೆ ಒಂದು ಹಬ್ಬದ ಸಂಭ್ರಮವಾಗಿತ್ತು, ಏಕೆಂದರೆ ವಿವಿಧ ಪ್ರಕಾರಗಳ ದಕ್ಷಿಣ ಭಾರತದ ಚಲನಚಿತ್ರಗಳು ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಮತ್ತು ಜೀ 5 ನಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಥಮ ಪ್ರದರ್ಶನಗೊಂಡವು. ಕಪಲ್ ಫ್ರೆಂಡ್ಲಿಯಿಂದ ಹಿಡಿದು ಮಲಯಾಳಂ ಪೆನ್ನಮ್ ಪೊರಟ್ಟುಮ್ ಮತ್ತು ಹಾಸ್ಯ ಮಹಾಸಾಯುಲಕು ವಿಘ್ನಯಪ್ತಿವರೆಗೆ, ಪ್ರತಿಯೊಂದು ರೀತಿಯ ಚಲನಚಿತ್ರ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಈ ವಾರ ಯಾವೆಲ್ಲ ಸೌತ್‌ ಸಿನಿಮಾಗಳು ಬಂದಿವೆ ನೋಡೋಣ.

Cocktail 2: 'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ; ಫಸ್ಟ್ ಲುಕ್ ಪೋಸ್ಟರ್ ಔಟ್‌

'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ

Cocktail 2: ಹೋಮಿ ಅದಜಾನಿಯಾ ಅವರ ಕಾಕ್‌ಟೇಲ್ 2 ಟೀಸರ್ ಆದಿತ್ಯ ಧಾರ್ ಅವರ ಧುರಂಧರ್: ದಿ ರಿವೆಂಜ್ ಜೊತೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಅಭಿನಯದ ಮುಂಬರುವ ಚಿತ್ರ ಕಾಕ್‌ಟೇಲ್ 2 ರ ನಿರ್ಮಾಪಕರು ಇಂದು ಫಸ್ಟ್ ಲುಕ್ ಅನ್ನು ಹಂಚಿಕೊಂಡಿದ್ದಾರೆ. ಮಾರ್ಚ್ 18 ರಂದು ಚಿತ್ರಮಂದಿರಗಳಲ್ಲಿ ಮಾತ್ರ ಟೀಸರ್ ಬಿಡುಗಡೆಯಾಗಲಿದ್ದು, ಅಭಿಮಾನಿಗಳು ಬಹುನಿರೀಕ್ಷಿತ ಚಿತ್ರದ ಮೊದಲ ನೋಟವನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಲಿದ್ದಾರೆ.

‌Thalapathy Vijay: ಚಿತ್ರರಂಗಕ್ಕೆ ಗುಡ್‌ಬೈ ಹೇಳಿ ʻಟಿವಿಕೆʼ ಪಕ್ಷ ಸೇರುತ್ತಾರಾ ನಟಿ ತ್ರಿಷಾ ಕೃಷ್ಣನ್? ʻಕೊಡಿʼ ಸಿನಿಮಾ ಕಥೆ ನಿಜವಾಗುತ್ತಾ?

ಸಿನಿಮಾಗೆ ಗುಡ್‌ಬೈ ಹೇಳಿ ‘ಟಿವಿಕೆ’ ಪಕ್ಷ ಸೇರ್ತಾರಾ ನಟಿ ತ್ರಿಷಾ?

Trisha Politics Entry: ತಮಿಳು ನಟ ದಳಪತಿ ವಿಜಯ್ ಸ್ಥಾಪಿಸಿರುವ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷಕ್ಕೆ ನಟಿ ತ್ರಿಷಾ ಕೃಷ್ಣನ್ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ಕಾಲಿವುಡ್‌ನಲ್ಲಿ ಕೇಳಿಬಂದಿದೆ. ವಿಜಯ್ ಅವರ ಕೌಟುಂಬಿಕ ಕಲಹ ಮತ್ತು ವಿಚ್ಛೇದನದ ಚರ್ಚೆಗಳ ನಡುವೆಯೇ, ತ್ರಿಷಾ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬುದು ಈ ವದಂತಿಗೆ ಪುಷ್ಟಿ ನೀಡಿದೆ.

Neena Gupta: 66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ವದಂತಿ ಬಗ್ಗೆ ನಟಿ  ಹೇಳಿದ್ದೇನು?

66ನೇ ವಯಸ್ಸಿನಲ್ಲಿ ನೀನಾ ಗುಪ್ತಾ ಗರ್ಭಿಣಿ? ನಟಿ ಹೇಳಿದ್ದೇನು?

Neena Gupta: ಬಾಲಿವುಡ್​ನ ಹಿರಿಯ ನಟಿ ನೀನಾ ಗುಪ್ತಾ 66ನೇ ವಯಸ್ಸಿನಲ್ಲಿ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಹೈದರಾಬಾದ್‌ನಲ್ಲಿ ನಡೆದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಆರತಕ್ಷತೆಯಲ್ಲಿ ಗುಪ್ತಾ ಭಾಗವಹಿಸಿದ ನಂತರ, ಫೋಟೋಗಳು ಮತ್ತು ವೀಡಿಯೊಗಳಲ್ಲಿ ನಟಿಗೆ ಬೇಬಿ ಬಂಪ್‌ ಬಂದಿದೆ ಎಂಬ ಸುದ್ದಿ ಸಾಕಷ್ಟು ವೈರಲ್‌ ಆಯ್ತು. ಈ ಎಲ್ಲಾ ಮಾತುಗಳಿಗೆ ಇದೀಗ ನಟಿ ಸತ್ಯದ ಕುರಿತು ಸ್ಪಷ್ಟನೆ ನೀಡಿದ್ದಾರೆ.

Varalaxmi Sarathkumar: ಫ್ಯಾಕ್ಟರಿ ರೀತಿ ಮಕ್ಕಳನ್ನ ಹಡೆಯಬೇಡಿ; ನಟಿ ವರಲಕ್ಷ್ಮಿ ಶರತ್‌ಕುಮಾರ್

ಫ್ಯಾಕ್ಟರಿ ರೀತಿ ಮಕ್ಕಳನ್ನ ಹಡೆಯಬೇಡಿ; ನಟಿ ವರಲಕ್ಷ್ಮಿ ಶರತ್‌ಕುಮಾರ್

Varalaxmi Sarathkumar: ನಟಿ ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಚೊಚ್ಚಲ ತೆಲುಗು ನಿರ್ದೇಶನದ ಎಸ್ ಸರಸ್ವತಿಯ ಪ್ರಚಾರದಲ್ಲಿ ನಿರತರಾಗಿದ್ದಾರೆ . ಸಂದರ್ಶನದಲ್ಲಿ , , ಇಂದಿನ ಕಾಲದಲ್ಲಿ ಮಕ್ಕಳನ್ನು ಸಾಕಲು ಬೇಕಾದ ಹಣಕಾಸಿನ ಯೋಜನೆಗಳ ಬಗ್ಗೆ ಗಂಭೀರವಾಗಿ ಮಾತನಾಡಿದ್ದಾರೆ. ಸಹನಟಿ ಪ್ರಿಯಾಮಣಿ ಮತ್ತು ಲಕ್ಷ್ಮಿ ಮಂಚು ಸೇರಿದಂತೆ ಕೆಲವರು ಅವರ ಮಾತನ್ನು ಒಪ್ಪಿಕೊಂಡರೆ, ಇತರರು ನಟಿಯನ್ನು ಟೀಕಿಸಿದರು.

ʻಶ್ರೀಗಂಧದ ಗುಡಿʼ ಸೀರಿಯಲ್‌ಗೆ ವಿದಾಯ ಹೇಳಿದ ಸಂಜನಾ ಬುರ್ಲಿ; ಇನ್ಮುಂದೆ ಚಂದನಾ ಪಾತ್ರದಲ್ಲಿ ಮಿಂಚೋದ್ಯಾರು?

'ಶ್ರೀಗಂಧದ ಗುಡಿ' ಸೀರಿಯಲ್‌ಗೆ ಸಂಜನಾ ಬುರ್ಲಿ ಗುಡ್‌ಬೈ; ಹೊಸ ನಟಿ ಎಂಟ್ರಿ!

Sanjana Burli: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ಶ್ರೀಗಂಧದ ಗುಡಿ’ಯ ನಾಯಕಿ ಸಂಜನಾ ಬುರ್ಲಿ ಅವರು ಸೀರಿಯಲ್‌ನಿಂದ ಹೊರಬಿದ್ದಿದ್ದಾರೆ. ಇತ್ತೀಚೆಗಷ್ಟೇ ವೈದ್ಯ ಸಮರ್ಥ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ಸಂಜನಾ, ಮದುವೆಯ ತಯಾರಿಗಾಗಿ ನಟನೆಯಿಂದ ವಿರಾಮ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮುಂದೆ ಚಂದನಾ ಪಾತ್ರವನ್ನು ‘ಶುಭಸ್ಯ ಶೀಘ್ರಂ’ ಖ್ಯಾತಿಯ ನಟಿ ಸ್ನೇಹಾ ಮಂಜುನಾಥ್ ನಿಭಾಯಿಸಲಿದ್ದಾರೆ ಎಂಬ ಸುದ್ದಿ ಕಿರುತೆರೆ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ.

21 ವರ್ಷಗಳ ಬಳಿಕ 'ಆಕಾಶ್' ಸಿನಿಮಾ ರೀ-ರಿಲೀಸ್; ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ನಮ್ರತಾ ಗೌಡ ಏನಂದ್ರು ನೋಡಿ

'ಆಕಾಶ್' ಸಿನಿಮಾ ನೋಡಲು ಬಂದ ʻಅಪ್ಪು ಅಭಿಮಾನಿʼ ನಮ್ರತಾ ಗೌಡ ಏನಂದ್ರು?

Akash Movie Re-release: ʻಪವರ್ ಸ್ಟಾರ್ʼ ಪುನೀತ್ ರಾಜ್‌ಕುಮಾರ್ ಅವರ ಹುಟ್ಟುಹಬ್ಬದ (ಮಾ.17) ಅಂಗವಾಗಿ, ಅವರು ಅಭಿನಯಿಸಿದ್ದ ಎವರ್‌ಗ್ರೀನ್ ಹಿಟ್ ಸಿನಿಮಾ 'ಆಕಾಶ್' ಮಾರ್ಚ್ 13ರಂದು ರೀ-ರಿಲೀಸ್ ಆಗಿದೆ. ಈ ಸಿನಿಮಾಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಮ್ರತಾ ಗೌಡ, ಪವಿ ಪೂವಪ್ಪ ಮತ್ತು ಸುಕೃತಾ ನಾಗ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಚಿತ್ರಮಂದಿರಕ್ಕೆ ಬಂದು ಈ ಸಿನಿಮಾ ನೋಡಿದರು.

ಅಪ್ಪನ ಹೆಸರನ್ನು ಕೈಬಿಟ್ಟು ವಿಜಯ್‌ಗೆ ಶಾಕ್‌ ನೀಡಿದ್ರಾ ಪುತ್ರ ಜೇಸನ್ ಸಂಜಯ್‌? ತಾಯಿ ಸಂಗೀತ ಪರ ನಿಂತ ದಳಪತಿ ಮಗ

ʻದಳಪತಿʼ ವಿಜಯ್‌ಗೆ ಪುತ್ರನಿಂದಲೇ ಶಾಕ್? ಜೇಸನ್‌ ಸಂಜಯ್‌ ಮಾಡಿದ್ದೇನು?

Thalapathy Vijay: ನಟ ವಿಜಯ್ ಅವರ ಕೌಟುಂಬಿಕ ಬದುಕಿನ ಸಮಸ್ಯೆಗಳು ಈಗ ಬೀದಿಗೆ ಬಂದಿವೆ. ಪತ್ನಿ ಸಂಗೀತ ಅವರಿಂದ ದೂರವಿರುವ ಸುದ್ದಿಗಳ ನಡುವೆಯೇ, ಪುತ್ರ ಜೇಸನ್ ಸಂಜಯ್ ತಮ್ಮ ಹೆಸರಿನಲ್ಲಿದ್ದ ತಂದೆಯ ಇನಿಶಿಯಲ್ ‘V’ ತೆಗೆದುಹಾಕಿ, ತಾಯಿ ಹೆಸರಿನ ‘S’ ಸೇರಿಸಿಕೊಂಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.

Ranveer Singh: ನೀವಿನ್ನೂ ʻಧುರಂಧರ್‌ 1ʼ ಸಿನಿಮಾ ನೋಡಿಲ್ವಾ? ಥಿಯೇಟರ್‌ನಲ್ಲಿ ಮಿಸ್‌ ಮಾಡಿಕೊಂಡ ಪ್ರೇಕ್ಷಕರಿಗೆ ಮತ್ತೊಂದು ಚಾನ್ಸ್‌ ಕೊಟ್ಟ ಚಿತ್ರತಂಡ

1 ಸಾವಿರ ಸ್ಕ್ರೀನ್‌ಗಳಲ್ಲಿ ‘ಧುರಂಧರ್: ಪಾರ್ಟ್ 1’ ರೀ-ರಿಲೀಸ್;‌ ಹೊಸ ದಾಖಲೆ

Dhurandhar 1 Re-Release: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಮಾರ್ಚ್ 19ರಂದು ತೆರೆಗೆ ಬರಲು ಸಜ್ಜಾಗಿರುವ ಬೆನ್ನಲ್ಲೇ, ಚಿತ್ರತಂಡವು ಭಾಗ-1 ಅನ್ನು ಮಾರ್ಚ್ 13ರಂದು ವಿಶ್ವಾದ್ಯಂತ ರೀ-ರಿಲೀಸ್ ಮಾಡಿದೆ. ಈ ಚಿತ್ರವನ್ನು ಥಿಯೇಟರ್‌ನಲ್ಲಿ ಮಿಸ್ ಮಾಡಿಕೊಂಡವರಿಗೆ ಮತ್ತೊಂದು ಅವಕಾಶ ಸಿಕ್ಕಂತಾಗಿದೆ.

ಮೊನಾಲಿಸಾ ಜೊತೆ ಫರ್ಮಾನ್‌ ಖಾನ್‌ ಕಲ್ಯಾಣ; ʻಈ ಮದುವೆಗೆ ನಮ್ಮ ಒಪ್ಪಿಗೆ ಇಲ್ಲ, ಇದು ನಮಗೆ ಬೇಸರ ತರಿಸಿದೆʼ ಎಂದ ವರನ ತಂದೆ ಜಫರ್‌ ಅಲಿ

ಮೊನಾಲಿಸಾ ಜೊತೆ ಮದುವೆಯಾದ ಫರ್ಮಾನ್‌ ಖಾನ್ ಬಗ್ಗೆ ತಂದೆಗೆ ಅಸಮಾಧಾನ‌

Monalisa Marriage: ಕೇರಳದಲ್ಲಿ ನಡೆದ ಮೊನಾಲಿಸಾ ಭೋಂಸ್ಲೆ ಮತ್ತು ಫರ್ಮಾನ್ ಖಾನ್ ಅವರ ಅಂತರ್ಧರ್ಮೀಯ ವಿವಾಹಕ್ಕೆ ಈಗ ವರನ ಕಡೆಯಿಂದಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಫರ್ಮಾನ್ ತಂದೆ ಜಫರ್ ಅಲಿ ಅವರು, "ಈ ಮದುವೆಯ ಬಗ್ಗೆ ನಮಗೆ ಮೊದಲೇ ತಿಳಿದಿರಲಿಲ್ಲ, ನಮಗೆ ಈ ಸಂಬಂಧ ಇಷ್ಟವಿಲ್ಲ" ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

'ಧುರಂಧರ್ 2' ಬಾಕ್ಸ್ ಆಫೀಸ್ ಧಮಾಕಾ; 8300 ಪೇಯ್ಡ್‌ ಪ್ರೀಮಿಯರ್‌ ಶೋ, 4 ಲಕ್ಷ ಟಿಕೆಟ್‌ ಸೋಲ್ಡ್ ಔಟ್, 50 ಕೋಟಿ ರೂ. ಗಳಿಕೆ!

ಪೇಯ್ಡ್‌ ಪ್ರೀಮಿಯರ್ ಶೋಗಳಿಂದಲೇ 21 ಕೋಟಿ ರೂ. ಬಾಚಿದ 'ಧುರಂಧರ್ 2'!

Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುತ್ತಿದೆ. ಮಾರ್ಚ್ 18ರ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿದ್ದು, ಭಾರತವೊಂದರಲ್ಲೇ 21.50 ಕೋಟಿ ರೂ. ಗಳಿಕೆಯಾಗಿದೆ.

Jr NTR: ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

Jr NTR: ಜೂನಿಯರ್ ಎನ್‌ಟಿಆರ್‌ ಅವರು ಇತ್ತೀಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದು ಕೂಡ ಅವರ ತೂಕದ ಬಗ್ಗೆ. ಅನೇಕ ಅಭಿಮಾನಿಗಳು (Fans) ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫಿಟ್‌ನೆಸ್‌ ಬಗ್ಗೆ ವಿಶೇಷ ಗಮನ ಹರಿಸಿದ ಎನ್‌ಟಿಆರ್, 'ಟೆಂಪರ್' ಸಿನಿಮಾ ಸಮಯದಲ್ಲಿ ಪರ್ಫೆಕ್ಟ್ ಫಿಟ್ ಲುಕ್‌ನಲ್ಲಿ (Look) ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆ ಚಿತ್ರದ ನಂತರ ಎನ್‌ಟಿಆರ್ ಸತತ ಯಶಸ್ಸಿನ ಹಾದಿಯಲ್ಲಿದ್ದಾರೆ.

Naga Chaitanya: ಹೊಸ ಹೇರ್ ಸ್ಟೈಲ್, ರಗಡ್‌ ಲುಕ್‌; ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

Naga Chaitanya: ದಕ್ಷಿಣ ಭಾರತದ ಜನಪ್ರಿಯ ನಟ ನಾಗ ಚೈತನ್ಯ ಅವರ ಮುಂಬರುವ ಪೌರಾಣಿಕ ಥ್ರಿಲ್ಲರ್ ಚಿತ್ರ ವೃಷಕರ್ಮ. ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ಲುಕ್‌ನ ಫೋಟೋಗಳನ್ನು (Look) ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ.

ʻಜನ ನಾಯಗನ್‌ʼ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ; 120 ಕೋಟಿ ರೂ. ಡೀಲ್‌ ಕ್ಯಾನ್ಸಲ್‌ ಆಯ್ತಾ? ಏನಿದು ಹೊಸ ಮ್ಯಾಟರ್?‌

Thalapathy Vijay: 'ಜನ ನಾಯಗನ್' 120 ಕೋಟಿ ರೂ. ಡೀಲ್ ಕ್ಯಾನ್ಸಲ್ ಆಗತ್ತಾ?

ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್'ಗೆ ಸಂಕಷ್ಟಗಳ ಸರಮಾಲೆಯೇ ಮುಂದುವರಿದಿದೆ. ಸೆನ್ಸಾರ್ ಮಂಡಳಿಯ ವಿಳಂಬದಿಂದಾಗಿ ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡಲ್ಪಡುತ್ತಿದೆ. ಈ ವಿಳಂಬದಿಂದ ಬೇಸತ್ತಿರುವ ಅಮೆಜಾನ್ ಪ್ರೈಮ್ ವಿಡಿಯೋ, ಈ ಹಿಂದೆ ಮಾಡಿಕೊಂಡಿದ್ದ 120 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದವನ್ನು ರದ್ದುಗೊಳಿಸಿದೆ ಎಂಬ ವದಂತಿ ದಟ್ಟವಾಗಿ ಹರಡಿದೆ.

'ಧುರಂಧರ್ 2' ಚಿತ್ರದ ಮೊದಲ ಹಾಡು ರಿಲೀಸ್‌; ಮೋಡಿ ಮಾಡ್ತಿದೆ ಪಂಜಾಬಿ ಶೈಲಿಯ ʻಆರಿ ಆರಿʼ ಸಾಂಗ್, ಜಾದೂ ಮಾಡಿದ ಬಾಂಬೆ ರಾಕರ್ಸ್‌

'ಧುರಂಧರ್ 2' ಹವಾ ಶುರು; 'ಆರಿ ಆರಿ' ಹಾಡಿನಿಂದ ಮೋಡಿದ ʻಬಾಂಬೆ ರಾಕರ್ಸ್‌ʼ

ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೇಂಜ್' ಚಿತ್ರದ ಮೊದಲ ಹಾಡು 'ಆರಿ ಆರಿ' ಗುರುವಾರ (ಮಾ.12) ಬಿಡುಗಡೆಯಾಗಿದ್ದು, ಪಂಜಾಬಿ ಶೈಲಿಯ ಸಂಗೀತದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಶಾಶ್ವತ್ ಸಚದೇವ್ ಸಂಗೀತ ನೀಡಿದ್ದು, ಜನಪ್ರಿಯ 'ಬಾಂಬೆ ರಾಕರ್ಸ್‌' ತಂಡವು ಈ ಹಾಡಿಗೆ ಕೆಲಸ ಮಾಡಿದೆ.

Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ  ಶವವಾಗಿ ಪತ್ತೆ

Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ ಶವವಾಗಿ ಪತ್ತೆ

Hari Murali : ಬಾಲನಟನಾಗಿ ಖ್ಯಾತಿ ಗಳಿಸಿದ್ದ ಮಲಯಾಳಂ ನಟ ಹರಿ ಮುರಳಿ 27 ನೇ ವಯಸ್ಸಿನಲ್ಲಿ ನಿಧನರಾದರು. ಕೇರಳದ ಪಯ್ಯನ್ನೂರಿನ ಅಣ್ಣೂರಿನಲ್ಲಿರುವ ಅವರ ಮನೆಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ. ವರದಿಯ ಪ್ರಕಾರ, ಮುರಳಿಯವರ ಮೃತದೇಹವನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರ ಸಾವಿನ ಸಂದರ್ಭಗಳ ಕುರಿತು ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ʻ8 ವರ್ಷಗಳಿಂದ ಮೌನವಾಗಿದ್ದೆ, ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲʼ; 24 ಗಂಟೆಗಳ ಡೆಡ್‌ಲೈನ್ ಕೊಟ್ಟ ರಶ್ಮಿಕಾ ಮಂದಣ್ಣ

'8 ವರ್ಷದಿಂದ ಮೌನವಾಗಿದ್ದೆ, ಇನ್ಮುಂದೆ ಸಾಧ್ಯವಿಲ್ಲ'; ರಶ್ಮಿಕಾ ಮಂದಣ್ಣ ಗರಂ

Rashmika Mandanna: ಕಳೆದ ಎಂಟು ವರ್ಷಗಳಿಂದ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲ್ ಮತ್ತು ಕಿರುಕುಳದ ವಿರುದ್ಧ ನಟಿ ರಶ್ಮಿಕಾ ಮಂದಣ್ಣ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಸಂಭಾಷಣೆಯನ್ನು ತಿರುಚಿ ವೈರಲ್ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸುಳ್ಳು ಸುದ್ದಿ ಹರಡುವ ಮಾಧ್ಯಮಗಳು ಮತ್ತು ಇನ್‌ಫ್ಲುಯೆನ್ಸರ್‌ಗಳಿಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದಾರೆ.

ʻಅವಳು ಹಿಂದೂವಾಗಿಯೇ ಇರುತ್ತಾಳೆ, ನಾನು ಮುಸ್ಲಿಂ ಆಗಿರುತ್ತೇನೆ, ಇಲ್ಲಿ ಲವ್‌ ಜಿಹಾದ್‌ ಪ್ರಶ್ನೆಯೇ ಇಲ್ಲʼ; ಮೊನಾಲಿಸಾ ಪತಿ ಫರ್ಮಾನ್‌ ಖಾನ್ ಸ್ಪಷ್ಟನೆ

ʻಮತಾಂತರವಾಗಿಲ್ಲ, ಧರ್ಮ ಬದಲಿಸಿಲ್ಲʼ; ಮೊನಾಲಿಸಾ ಪತಿ ಫರ್ಮಾನ್‌ ಸ್ಪಷ್ಟನೆ

Monalisa Bhosle Marriage Controversy: ಮಹಾಕುಂಭಮೇಳದಲ್ಲಿ ಗಮನಸೆಳೆದಿದ್ದ ಮೊನಾಲಿಸಾ ಭೋಂಸ್ಲೆ ಮತ್ತು ನಟ ಫರ್ಮಾನ್ ಖಾನ್ ಕೇರಳದಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದು, 'ಲವ್ ಜಿಹಾದ್' ಆರೋಪ ಕೇಳಿಬಂದಿವೆ. ಆದರೆ ಈ ಜೋಡಿ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ..

Darling Krishna: ʻಲವ್‌ ಮಾಕ್‌ಟೇಲ್‌ 3ʼ‌ ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಟಿಕೆಟ್ ಬುಕಿಂಗ್‌ ಓಪನ್; ಬೆಂಗಳೂರಿನಲ್ಲಿ ಹೇಗಿದೆ ರೆಸ್ಪಾನ್ಸ್?‌

ʻಲವ್‌ ಮಾಕ್‌ಟೇಲ್‌ 3ʼ‌‌ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್‌ ಓಪನ್

Love Mocktail 3 Paid Premiere Show: `ಡಾರ್ಲಿಂಗ್' ಕೃಷ್ಣ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ 'ಲವ್ ಮಾಕ್‌ಟೇಲ್ 3' ಸಿನಿಮಾ ಯುಗಾದಿ ಹಬ್ಬದ ಅಂಗವಾಗಿ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಮಾರ್ಚ್ 18ರಂದು ಆಯೋಜಿಸಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

MGR ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ತೆಲುಗು ನಟ ರಾಜೇಂದ್ರ ಪ್ರಸಾದ್‌; ಕ್ಲಾಸ್‌ ತೆಗೆದುಕೊಂಡ ತಮಿಳು ನಟ ವಿಶಾಲ್

ಎಂಜಿಆರ್‌ಗೆ ಅವಹೇಳನ: ತೆಲುಗು ನಟ ರಾಜೇಂದ್ರ ಪ್ರಸಾದ್ ವಿರುದ್ಧ ವಿಶಾಲ್ ಗರಂ

ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ದಿಗ್ಗಜ ನಟ, ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್ (MGR) ಬಗ್ಗೆ ನೀಡಿದ ಕೀಳುಮಟ್ಟದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ತಮ್ಮ ಮಾತಿನ ಮೂಲಕ ಎಂಜಿಆರ್ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವುದನ್ನು ತಮಿಳು ನಟ ವಿಶಾಲ್ ತೀವ್ರವಾಗಿ ಖಂಡಿಸಿದ್ದಾರೆ.

ʻಆತ್ಮೀಯ ಸ್ನೇಹಿತರು, ನನ್ನ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದವರುʼ; ಪತ್ರಕರ್ತ ಕೆ. ಜೆ. ಕುಮಾರ್‌ ನಿಧನಕ್ಕೆ ಕನ್ನಡದಲ್ಲಿಯೇ ರಜನಿಕಾಂತ್‌ ಸಂತಾಪ

ಪತ್ರಕರ್ತ ಕೆ ಜೆ ಕುಮಾರ್ ನಿಧನಕ್ಕೆ ರಜನಿಕಾಂತ್ ಕಂಬನಿ; ಕನ್ನಡದಲ್ಲಿ ಟ್ವೀಟ್

ಹಿರಿಯ ಪತ್ರಕರ್ತ ಕೆ. ಜೆ. ಕುಮಾರ್ (74) ಬುಧವಾರ ಸಂಜೆ ಮೈಸೂರಿನಲ್ಲಿ ನಿಧನರಾದರು. ಕಳೆದ 5 ದಶಕಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಪ್ತ ಗೆಳೆಯರಾಗಿದ್ದರು. ಕುಮಾರ್‌ ನಿಧನಕ್ಕೆ ರಜನಿಕಾಂತ್ ಅವರು ಕನ್ನಡದಲ್ಲಿಯೇ ಟ್ವೀಟ್ ಮಾಡಿ, "ನನ್ನ ಆರಂಭದ ಕಾಲದ ಪ್ರೋತ್ಸಾಹಕರು" ಎಂದು ಕಂಬನಿ ಮಿಡಿದಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ: 6 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ, ಆರೋಪಿಗಳಲ್ಲಿ ಸುದೀಪ್‌ ಫ್ಯಾನ್ಸ್‌ ಕೂಡ ಇದ್ದಾರೆ!

ದರ್ಶನ್‌ ಪತ್ನಿ ಬಗ್ಗೆ ಅಶ್ಲೀಲ ಕಾಮೆಂಟ್; ಆರೋಪಿಗಳಲ್ಲಿ ಕಿಚ್ಚನ ಫ್ಯಾನ್ಸ್‌

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 45ನೇ ಎಸಿಎಂಎಂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದ ಆರು ಮಂದಿಯಲ್ಲಿ ನಟ ಸುದೀಪ್ ಅವರ ಅಭಿಮಾನಿಗಳೂ ಸೇರಿದ್ದು, ನಕಲಿ ಐಡಿಗಳ ಮೂಲಕ ಇವರು ಕಿರುಕುಳ ನೀಡುತ್ತಿದ್ದರು ಎಂಬುದು ಸಾಬೀತಾಗಿದೆ.

ʻಆಪರೇಷನ್ ಡ್ರೀಮ್ ಥಿಯೇಟರ್ 666ʼ ಚಿತ್ರಕ್ಕೆ ಏಜೆಂಟ್ ಕಾವೇರಿಯಾಗಿ ಎಂಟ್ರಿ ಕೊಟ್ಟ ಖ್ಯಾತ ನಟಿ ಅದಿತಿ ಬಾಲನ್

'ಏಜೆಂಟ್ ಕಾವೇರಿ'ಯಾಗಿ ಕರುನಾಡಿಗೆ ಎಂಟ್ರಿ ಕೊಟ್ಟ ತಮಿಳು ನಟಿ ಅದಿತಿ ಬಾಲನ್

'ಆಪರೇಷನ್ ಡ್ರೀಮ್ ಥಿಯೇಟರ್ 666' ಚಿತ್ರದ ಮೂಲಕ ತಮಿಳಿನ ಪ್ರತಿಭಾನ್ವಿತ ನಟಿ ಅದಿತಿ ಬಾಲನ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್‌ನಲ್ಲಿ ಅದಿತಿ 'ಏಜೆಂಟ್ ಕಾವೇರಿ' ಎಂಬ ಪ್ರಬಲ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅದಿತಿ ಬಾಲನ್ ಸೇರ್ಪಡೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Loading...