ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻನನಗೆ ಮದುವೆಯಾಗಿ ನಾಲ್ಕು ಮಕ್ಕಳಿವೆ..ʼ; ಸುಳ್ಳು ಸುದ್ದಿ ಹಬ್ಬಿಸಿದವರಿಗೆ ನಟಿ ತ್ರಿಷಾ ಕೃಷ್ಣನ್ ಮಸ್ತ್‌ ಕೌಂಟರ್‌!

ʻನನಗೆ ಮದುವೆಯಾಗಿದೆ, 4 ಮಕ್ಕಳಿವೆʼ; ವದಂತಿಗೆ ನಟಿ ತ್ರಿಷಾ ಮಸ್ತ್ ಕೌಂಟರ್

Trisha Krishnan Marriage: ನಟಿ ತ್ರಿಷಾ ಕೃಷ್ಣನ್ ತಮ್ಮ ಮದುವೆ ಮತ್ತು ಚಿತ್ರರಂಗದಿಂದ ನಿವೃತ್ತಿಯಾಗುವ ಸುಳ್ಳು ಸುದ್ದಿಗಳ ವಿರುದ್ಧ ಗುಡುಗಿದ್ದಾರೆ. "ನನಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ, ನಿಮ್ಮ ಕಲ್ಪನೆಗೆ ಈ ಉತ್ತರ ಸಾಕೇ?" ಎಂದು ವ್ಯಂಗ್ಯವಾಗಿ ಪ್ರಶ್ನಿಸುವ ಮೂಲಕ ವದಂತಿ ಹಬ್ಬಿಸುವವರ ಬಾಯಿ ಮುಚ್ಚಿಸಿದ್ದಾರೆ.

ʻರಾಮಾಯಣʼ ಚಿತ್ರದಲ್ಲಿ ಯಶ್‌ಗೆ ರಾವಣನ ಪಾತ್ರ ಮಾಡುವ ಮನಸ್ಸಾಗಿದ್ದೇಕೆ? ಅಸಲಿ ವಿಷ್ಯ ಬಿಚ್ಚಿಟ್ಟ ನಿರ್ದೇಶಕ ನಿತೇಶ್‌ ತಿವಾರಿ

Ramayana: ಯಶ್ ರಾವಣನಾಗಿದ್ದೇಕೆ? ಸಸ್ಪೆನ್ಸ್ ಬಿಚ್ಚಿಟ್ಟ ನಿತೇಶ್ ತಿವಾರಿ!

Ramayana Movie: ನಿತೇಶ್ ತಿವಾರಿ ನಿರ್ದೇಶನದ 'ರಾಮಾಯಣ' ಚಿತ್ರದಲ್ಲಿ ನಟ ಯಶ್ ರಾವಣನ ಪಾತ್ರ ಒಪ್ಪಿಕೊಂಡಿದ್ದು ಸಿನಿಮಾ ಲೋಕದಲ್ಲಿ ಸಂಚಲನ ಮೂಡಿಸಿದೆ. ರಾವಣನನ್ನು ಕೇವಲ ಸಾಂಪ್ರದಾಯಿಕ ಖಳನಾಯಕನಾಗಿ ತೋರಿಸದೆ, ಒಬ್ಬ ಮಹಾನ್ ಪಂಡಿತ, ಶಿವಭಕ್ತ ಮತ್ತು ಸಂಗೀತಗಾರನಾಗಿ ಆತನ ಸಂಕೀರ್ಣ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಿರುವುದು ಯಶ್ ಈ ಪಾತ್ರ ಒಪ್ಪಲು ಮುಖ್ಯ ಕಾರಣ ಎಂದು ನಿರ್ದೇಶಕರು ತಿಳಿಸಿದ್ದಾರೆ.

ʻಎಲ್ರ ಕಾಲೆಳಿಯತ್ತೆ ಕಾಲʼ ಸಿನಿಮಾ ಟ್ರೇಲರ್‌ ರಿಲೀಸ್;‌ ಈ ಚಿತ್ರದಲ್ಲಿ ಚಂದನ್‌ ಶೆಟ್ಟಿ ನಟಿಸಲು ಕಾರಣ ಇಲ್ಲಿದೆ!

Chandan Shetty: ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರದ ಟ್ರೇಲರ್‌ ರಿಲೀಸ್‌

Chandan Shetty: ಕನ್ನಡದ ಖ್ಯಾತ ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ಒಪ್ಪಿಕೊಂಡಿದ್ದ ಮೊದಲ ಸಿನಿಮಾ 'ಎಲ್ರ ಕಾಲೆಳಿಯತ್ತೆ ಕಾಲ' ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರವು 90ರ ದಶಕದ ರೆಟ್ರೋ ಹಿನ್ನೆಲೆಯ ಕಥೆಯನ್ನು ಹೊಂದಿದ್ದು, ಏಪ್ರಿಲ್ 17ರಂದು ತೆರೆಗೆ ಬರಲಿದೆ.

ದಾಂಪತ್ಯ ಬದುಕಿಗೆ ಕಾಲಿಟ್ಟ ʻಶೇಕ್ ಇಟ್ ಪುಷ್ಪವತಿʼ ಖ್ಯಾತಿಯ ನಟಿ ನಿಮಿಕಾ ರತ್ನಾಕರ್;‌ ಹುಡುಗ ಯಾರು?

ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪುಷ್ಪವತಿ' ನಿಮಿಕಾ ರತ್ನಾಕರ್!

Nimika Ratnakar Wedding: 'ಕ್ರಾಂತಿ' ಸಿನಿಮಾದ 'ಶೇಕ್ ಇಟ್ ಪುಷ್ಪವತಿ' ಹಾಡಿನ ಮೂಲಕ ಮನೆಮಾತಾದ ನಟಿ ನಿಮಿಕಾ ರತ್ನಾಕರ್ ಸದ್ದಿಲ್ಲದೆ ವಿವಾಹವಾಗಿದ್ದಾರೆ. ಏಪ್ರಿಲ್ 6ರಂದು ಮುಂಬೈ ಮೂಲದ ಉದ್ಯಮಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಅವರು, ಮದುವೆಯ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಮಹಾದೇವಪುರದ ಕಿಮ್ಸ್ ಆಸ್ಪತ್ರೆಯಲ್ಲಿ ನರವಿಜ್ಞಾನ ಸಂಸ್ಥೆ ಮತ್ತು ನರಮಾಡ್ಯುಲೇಷನ್‌ನಲ್ಲಿ ಶ್ರೇಷ್ಠತಾ ಕೇಂದ್ರ ಆರಂಭ

ನರವಿಜ್ಞಾನ ಸಂಸ್ಥೆ ಮತ್ತು ನರಮಾಡ್ಯುಲೇಷನ್‌ನಲ್ಲಿ ಶ್ರೇಷ್ಠತಾ ಕೇಂದ್ರ ಆರಂಭ

ಪಾರ್ಕಿನ್ಸನ್ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸರಳದಿಂದ ಸಂಕೀರ್ಣವಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ನರವಿಜ್ಞಾನದಲ್ಲಿನ ಪ್ರಗತಿಯ ಬಗ್ಗೆ ಮಾತನಾಡಲು ಮತ್ತು ರೋಗಿಗಳಿಗೆ ಪ್ರಯೋಜನಗಳನ್ನು ವಿವರಿಸಲು ಇದು ಉದ್ದೇಶಿಸಲಾಗಿದೆ. ಈ ಸಭೆಯು ರೋಗಿಗಳು ಮತ್ತು ಆರೈಕೆ ನೀಡುವವರಿಗೆ ತಮ್ಮ ಕಥೆಯನ್ನು ಹಂಚಿಕೊಳ್ಳಲು ಮತ್ತು ಒಗ್ಗಟ್ಟಿನ ಬಲವನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ಒದಗಿಸಿತು.

Renukaswamy Case: ʻಬಾಸ್‌ʼ ಸಿನಿಮಾ ಬಿಡುಗಡೆಯಾಗದಂತೆ ತಡೆಯಾಜ್ಞೆ ತಂದ ನಟ ದರ್ಶನ್‌; ಸಿಟಿ ಸಿವಿಲ್ ಕೋರ್ಟ್ ಹೇಳಿದ್ದೇನು?

Darshan Case: 'ಬಾಸ್' ಚಿತ್ರತಂಡಕ್ಕೆ ಶಾಕ್ ನೀಡಿದ ಸಿಟಿ ಸಿವಿಲ್ ಕೋರ್ಟ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಆಧರಿಸಿದೆ ಎನ್ನಲಾದ ನಟ ತನುಷ್ ಶಿವಣ್ಣ ಅಭಿನಯದ ‘ಬಾಸ್’ ಸಿನಿಮಾ ಬಿಡುಗಡೆಗೆ ಸಿಟಿ ಸಿವಿಲ್ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆ ನೀಡಿದೆ. ತಮ್ಮ ಗೌರವಕ್ಕೆ ಧಕ್ಕೆ ಮತ್ತು ವಿಚಾರಣೆಗೆ ಅಡ್ಡಿಯಾಗಲಿದೆ ಎಂದು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ದಾವೆಯನ್ನು ಪುರಸ್ಕರಿಸಿದ ಕೋರ್ಟ್ ಈ ಆದೇಶ ನೀಡಿದೆ.

ಮಲಯಾಳಂ ʻಸ್ಟಾರ್‌ʼ ನಟಿ ಮಂಜು ವಾರಿಯರ್‌ರನ್ನು ಸಾರ್ವಜನಿಕವಾಗಿ ತಬ್ಬಿ ಮುತ್ತಿಕ್ಕಿದ ಅಭಿಮಾನಿ; ಮುಂದೇನಾಯಿತು ನೋಡಿ!

ಮಂಜು ವಾರಿಯರ್‌ಗೆ ಮುತ್ತಿಟ್ಟ ಫ್ಯಾನ್; ಅಭಿಮಾನದ ಹೆಸರಲ್ಲಿ ಅತಿರೇಕದ ವರ್ತನೆ

ಮಲಯಾಳಂ ಚಿತ್ರರಂಗದ ಸ್ಟಾರ್‌ ನಟಿ ಮಂಜು ವಾರಿಯರ್‌ ಅವರು ಪಾಲಕ್ಕಾಡ್‌ನಲ್ಲಿ ಜ್ಯುವೆಲ್ಲರಿ ಶೋರೂಮ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದಾಗ ಮಹಿಳಾ ಅಭಿಮಾನಿಯೊಬ್ಬರಿಂದ ಮುಜುಗರ ಎದುರಿಸಿದ್ದಾರೆ. ವೇದಿಕೆ ಮೇಲೆ ನುಗ್ಗಿದ ಅಭಿಮಾನಿ ನಟಿ ಮಂಜು ಅವರನ್ನು ಬಲವಂತವಾಗಿ ಅಪ್ಪಿಕೊಂಡು ಮುತ್ತಿಕ್ಕಿದ್ದಾರೆ.

ಮದುವೆ ಬಳಿಕ ಗಂಡ ವಿಜಯ್‌ ದೇವರಕೊಂಡ ಜೊತೆ ತವರಿಗೆ ಬಂದ ರಶ್ಮಿಕಾ ಮಂದಣ್ಣ; ತಂದೆಯಿಂದ ಸಿಕ್ತು ದುಬಾರಿ ಉಡುಗೊರೆ

ಮದುವೆ ಬಳಿಕ ವಿರಾಜಪೇಟೆಗೆ ಬಂದ ರಶ್ಮಿಕಾಗೆ ತಂದೆ ಕಡೆಯಿಂದ‌ ದುಬಾರಿ ಗಿಫ್ಟ್

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ದಂಪತಿ ಮದುವೆಯ ನಂತರ ಮೊದಲ ಬಾರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಗೆ ಆಗಮಿಸಿದ್ದರು. ಏಪ್ರಿಲ್ 5ರ ರಶ್ಮಿಕಾ ಹುಟ್ಟುಹಬ್ಬ ಮತ್ತು ಕೊಡಗಿನ ಸಂಬಂಧಿಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಅದ್ದೂರಿ ಔತಣಕೂಟದಲ್ಲಿ ಭಾಗವಹಿಸಲು ಈ ಜೋಡಿ ಬಂದಿತ್ತು.

Virat Kohli: 'ಧುರಂಧರ್-2' ಚಿತ್ರದ ವಿಮರ್ಶೆ ನೀಡಿದ ವಿರಾಟ್‌ ಕೊಹ್ಲಿ

'ಧುರಂಧರ್-2' ಚಿತ್ರದ ವಿಮರ್ಶೆ ನೀಡಿದ ವಿರಾಟ್‌ ಕೊಹ್ಲಿ

Kohli Gives His Review Of Dhurandhar 2: ಚಿತ್ರದಲ್ಲಿ ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿದೆ.

ಒಂದೇ ಪ್ರೊಡಕ್ಷನ್‌ ಹೌಸ್‌ನ 3 ಸಿನಿಮಾಗಳಿಗೆ ಒಟ್ಟಿಗೆ ಮುಹೂರ್ತ; ʻಬಿಗ್‌ ಬಾಸ್‌ʼ ವಿನ್ನರ್‌ ಕಾರ್ತಿಕ್‌ ಮಹೇಶ್‌ಗೆ‌ ಸಿಕ್ತು ಬಿಗ್‌ ಚಾನ್ಸ್!

ʻಬಿಗ್ ಬಾಸ್ʼ ವಿನ್ನರ್ ಕಾರ್ತಿಕ್ ಮಹೇಶ್‌ ಈಗ 'ಸೀತಾ ರಾಮ ರಾಜು'

ಮ್ಯಾಟ್ರಿಕ್ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ಅರುಣ್‌ ಕುಮಾರ್ ಮತ್ತು ಭವ್ಯಾ ಅರುಣ್‌ಕುಮಾರ್ ಅವರು ಏಕಕಾಲಕ್ಕೆ ಮೂರು ಹೊಸ ಸಿನಿಮಾಗಳನ್ನು ಘೋಷಿಸಿದ್ದಾರೆ. ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ನಟನೆಯ 'ಸೀತಾ ರಾಮ ರಾಜು', ಪೃಥ್ವಿ ಅಂಬಾರ್ ಅಭಿನಯದ 'ದರ್ಶನ' ಮತ್ತು ತಬಲಾ ನಾಣಿ ಪ್ರಮುಖ ಪಾತ್ರದಲ್ಲಿರುವ ಇನ್ನೂ ಹೆಸರಿಡದ ಚಿತ್ರಕ್ಕೆ ಮುಹೂರ್ತ ನೆರವೇರಿದೆ.

ಕರ್ನಾಟಕದಲ್ಲಿ 'ಧುರಂಧರ್ 2' ಸಿನಿಮಾ ಈವರೆಗೂ ಗಳಿಸಿದ್ದೆಷ್ಟು? 'ಬಾಹುಬಲಿ 2' ದಾಖಲೆ ಮುರಿಯಲು ಇನ್ನೆಷ್ಟು ಕೋಟಿ ಬೇಕು?

ಕರ್ನಾಟಕದಲ್ಲಿ 'ಧುರಂಧರ್ 2' ಸುನಾಮಿ; ಸ್ಯಾಂಡಲ್‌ವುಡ್‌ನಲ್ಲಿ ರಣವೀರ್ ಅಬ್ಬರ

ಧುರಂಧರ್‌ 2 ಸಿನಿಮಾ ಕರ್ನಾಟಕದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಬಿಡುಗಡೆಯಾದ ಕೇವಲ 18 ದಿನಗಳಲ್ಲಿ ರಾಜ್ಯಾದ್ಯಂತ ದಾಖಲೆ ಮೊತ್ತ ಗಳಿಸುವ ಮೂಲಕ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಪರಭಾಷಾ ಚಿತ್ರಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.

Ranveer Singh: 18 ದಿನಗಳಿಗೆ 1600+ ಕೋಟಿ ರೂ. ಕಲೆಕ್ಷನ್‌; ʻಧುರಂಧರ್‌ 2ʼ ಆರ್ಭಟಕ್ಕೆ ದಾಖಲೆಗಳೆಲ್ಲಾ ಪುಡಿ ಪುಡಿ!

'ಧುರಂಧರ್ 2' ಬಾಕ್ಸ್ ಆಫೀಸ್ ಸುನಾಮಿ; ಭಾರತದಲ್ಲೇ 1000 ಕೋಟಿ ರೂ. ಕಲೆಕ್ಷನ್

ಧುರಂಧರ್ 2 ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದಿದೆ. ಕೇವಲ 18 ದಿನಗಳಲ್ಲಿ ವಿಶ್ವಾದ್ಯಂತ 1,622 ಕೋಟಿ ರೂಪಾಯಿ ಗಳಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಭಾರತದ ಮಾರುಕಟ್ಟೆಯೊಂದರಲ್ಲೇ 1,000 ಕೋಟಿ ರೂ. ಗಡಿ ದಾಟಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಪ್ರಿಯಾಂಕಾ ಉಪೇಂದ್ರ ನಟನೆಯ ʻಸೆಪ್ಟೆಂಬರ್ 21ʼ ಚಿತ್ರದ ಟೀಸರ್‌ ರಿಲೀಸ್;‌ ಗಮನಸೆಳೆದ 22ರ ಹರೆಯದ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ

ಪ್ರಿಯಾಂಕಾ ಉಪೇಂದ್ರ ಅಭಿನಯದ ʻಸೆಪ್ಟೆಂಬರ್ 21ʼ ಚಿತ್ರದ ಟೀಸರ್‌ ರಿಲೀಸ್

‘ಸೆಪ್ಟೆಂಬರ್ 21’ ಚಿತ್ರವು ಅಲ್ಝೈಮರ್ಸ್ (ಮರೆಗುಳಿತನ) ಕಾಯಿಲೆಯ ಸುತ್ತ ಹೆಣೆಯಲಾದ ಒಂದು ತೀವ್ರ ಭಾವನಾತ್ಮಕ ಕಥೆಯಾಗಿದೆ. 22 ವರ್ಷದ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರವೀಣ್ ಸಿಂಗ್ ಸಿಸೋಡಿಯಾ ಮರೆಗುಳಿತನ ಪೀಡಿತ ವ್ಯಕ್ತಿಯಾಗಿ ನಟಿಸಿದ್ದಾರೆ. ಸದ್ಯ ಈ ಚಿತ್ರದ ಟೀಸರ್‌ ರಿಲೀಸ್‌ ಆಗಿದೆ.

ತಮಿಳಿನ ʻಕಯಲ್ʼ ಧಾರಾವಾಹಿ ನಟಿ ಸುಭಾಷಿಣಿ ಆತ್ಮಹತ್ಯೆ; ಪತಿ ಜೊತೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನಡೆದ ಘಟನೆ!

ವಿಡಿಯೋ ಕಾಲ್‌ನಲ್ಲಿ ಪತಿ ಜತೆ ಜಗಳ? ಕಿರುತೆರೆ ನಟಿ ಸುಭಾಷಿಣಿ ಆತ್ಮಹತ್ಯೆ

ತಮಿಳಿನ 'ಕಯಲ್' ಧಾರಾವಾಹಿಯ ನಟಿ ಸುಭಾಷಿಣಿ ಅವರು ಏಪ್ರಿಲ್ 5ರ ರಾತ್ರಿ ಚೆನ್ನೈನ ತಮ್ಮ ಫ್ಲಾಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರು ಮೂಲದ ಪತಿ ಬಿಪಿನ್ ಚಂದ್ರನ್ ಅವರೊಂದಿಗೆ ವಿಡಿಯೋ ಕಾಲ್‌ನಲ್ಲಿ ಜಗಳವಾಡುತ್ತಿದ್ದ ನಟಿ, ಅದೇ ಸಮಯದಲ್ಲಿ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ʻದೇಹದ ಖಾಸಗಿ ಭಾಗಗಳನ್ನು ಜೂಮ್ ಮಾಡೋದ್ಯಾಕೆʼ ಎಂದ ಜಾಹ್ನವಿ ಕಪೂರ್;‌ ಸ್ಯಾಂಡಲ್‌ವುಡ್‌ ಆಯ್ತು, ಈಗ ಬಾಲಿವುಡ್‌ನಲ್ಲೂ ಪಾಪರಾಜಿಗಳ ಮೇಲೆ ಅಸಮಾಧಾನ

ʻಖಾಸಗಿ ಭಾಗಗಳನ್ನು ಜೂಮ್ ಮಾಡೋದ್ಯಾಕೆ?ʼ; ಪಾಪರಾಜಿಗಳ ಮೇಲೆ ಜಾಹ್ನವಿ ಗರಂ!

ಜಾಹ್ನವಿ ಕಪೂರ್ ಅವರು ಪಾಪರಾಜಿಗಳು ಮಹಿಳಾ ನಟಿಯರನ್ನು ಚಿತ್ರೀಕರಿಸುವ ಅಸಭ್ಯ ವಿಧಾನದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೇಹದ ಖಾಸಗಿ ಭಾಗಗಳನ್ನು ಜೂಮ್ ಮಾಡುವುದು ಮತ್ತು ಅನುಮತಿ ಇಲ್ಲದೆ ಲೈಂಗಿಕವಾಗಿ ಬಿಂಬಿಸುವ ವಿಡಿಯೋಗಳನ್ನು ಹರಿಬಿಡುವುದು ಖಾಸಗಿತನದ ಉಲ್ಲಂಘನೆ ಎಂದು ಅವರು ಕಿಡಿಕಾರಿದ್ದಾರೆ.

Actor Niranjan:  'ಒಡೆಯ' ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ನಿರಂಜನ್ ಮೇಲೆ ಹಲ್ಲೆ; ಬಾರ್‌ನಲ್ಲಿ ಕಿರಿಕ್‌

'ಒಡೆಯ' ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ನಟ ನಿರಂಜನ್ ಮೇಲೆ ಹಲ್ಲೆ

Darshan: ಬೆಂಗಳೂರಿನಲ್ಲಿ ನಟ ನಿರಂಜನ್ ​ ಮೇಲೆ ಬಿಯರ್​ ಬಾಟಲ್​ನಿಂದ ಹಲ್ಲೆ ನಡೆದಿದೆ. ಮಾರ್ಚ್ 28ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಒಡೆಯ ಚಿತ್ರದಲ್ಲಿ ದರ್ಶನ್ (Actor Darshan) ತಮ್ಮನ ಪಾತ್ರದಲ್ಲಿ ನಿರಂಜನ್‌ ನಟಿಸಿದ್ದರು.

Love Insurance Kompany: ತಮ್ಮ ಭಾಷಣವನ್ನು AI ಬಳಸಿ ಅನುವಾದ ಮಾಡಿದ ತಮಿಳು ನಟ; ಹುಬ್ಬೇರಿಸಿದ ಫ್ಯಾನ್ಸ್‌!

ತಮ್ಮ ಭಾಷಣವನ್ನು AI ಬಳಸಿ ಅನುವಾದ ಮಾಡಿದ ತಮಿಳು ನಟ!

pradeep ranganathan: AI ನಿಂದ ಉಂಟಾಗುವ ಅಪಾಯಗಳ ಕುರಿತು ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಲೇ ಇರುತ್ತವೆ. ಅಂತರ್ಜಾಲದಲ್ಲಿ ಸಿಗುವ ಮಾಹಿತಿಯೇ ಸತ್ಯ ಎಂದು ಹಲವರು ನಂಬುತ್ತಾರೆ. ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರ ಫೋಟೋಗಳನ್ನು ಮಾರ್ಫಿಂಗ್ ಆಗತ್ತಿದೆ. ಇನ್ನೂ ಕೆಲವರು ಈಗಾಗಲೇ AI ಬಳಸಿ ತಮ್ಮ ಕೆಲಸಗಳನ್ನು ಸುಲಭವಾಗಿಸಿಕೊಳ್ಳುತ್ತಿದ್ದಾರೆ. ತಮಿಳು ನಟ ಪ್ರದೀಪ್ ರಂಗನಾಥನ್ ವೇದಿಕೆಯಲ್ಲಿ ತಮ್ಮ ಭಾಷಣವನ್ನು chatgpt ಸಹಾಯದಿಂದ ಅನುವಾದ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Shadow Play OTT:  ಇನ್ವೆಸ್ಟಿಗೇಟಿವ್ ಥ್ರಿಲ್ಲರ್‌, ರೋಚಕ ಕ್ರೈಮ್ ಡ್ರಾಮಾ ಸಿರೀಸ್‌ ಈ ಒಟಿಟಿಯಲ್ಲಿ!

ಇನ್ವೆಸ್ಟಿಗೇಟಿವ್ ಥ್ರಿಲ್ಲರ್‌, ಕ್ರೈಮ್ ಡ್ರಾಮಾ ಸಿರೀಸ್‌ ಈ ಒಟಿಟಿಯಲ್ಲಿ!

Shadow Play OTT: ಮಲಯಾಳಂ ವೆಬ್ ಸೀರೀಸ್ ಲೋಕದಲ್ಲಿ ತನ್ನ ಹಿಡಿತ ಸಾಧಿಸಲು ಮನೋರಮಾ ಮ್ಯಾಕ್ಸ್ ಈ 'ಶ್ಯಾಡೋ ಪ್ಲೇ' (shadow play) ಸರಣಿಯನ್ನು ತಂದಿದೆ. ಮನೋರಮಾ ಮ್ಯಾಕ್ಸ್ ಮಲಯಾಳಂ ಮೂಲ ವೆಬ್ ಸರಣಿಯ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಲು ಸಜ್ಜಾಗಿದೆ. ಕ್ರೈಂ ಥ್ರಿಲ್ಲರ್ ಪ್ರಿಯರನ್ನು ಸಖತ್‌ ಕ್ರೇಜ್‌ ಹುಟ್ಟುಹಾಕಲು 'ಶ್ಯಾಡೋ ಪ್ಲೇ' ಎಂಬ ಹೊಸ ತನಿಖಾ ಸರಣಿಯು ಈ ಭಾನುವಾರ (ಏಪ್ರಿಲ್ 5) ರಿಂದ ಸ್ಟ್ರೀಮಿಂಗ್ ಆಗುತ್ತಿದೆ.

Sara Arjun: ʻಧುರಂಧರ್ʼ ಚಿತ್ರದ ಸಂಪೂರ್ಣ ತಂಡಕ್ಕೆ ಧನ್ಯವಾದ ಅರ್ಪಿಸಿದ  ಸಾರಾ ಅರ್ಜುನ್

ʻಧುರಂಧರ್ʼ ಚಿತ್ರದ ಸಂಪೂರ್ಣ ತಂಡಕ್ಕೆ ಧನ್ಯವಾದ ಅರ್ಪಿಸಿದ ಸಾರಾ ಅರ್ಜುನ್

Sara Arjun: ಧುರಂಧರ್ 2 ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಜೇಯ ಗಳಿಕೆಯಲ್ಲಿದ್ದು, ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ₹ 1000 ಕೋಟಿ ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದಿತ್ಯ ಧರ್ ನಿರ್ದೇಶನದ ಈ ಸ್ಪೈ ಆಕ್ಷನ್ ಥ್ರಿಲ್ಲರ್‌ನಲ್ಲಿ ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಮಾರ್ಚ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಭಾನುವಾರ, ಚಿತ್ರದ ನಾಯಕಿ ನಟಿ ಸಾರಾ ಅರ್ಜುನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಚಿತ್ರತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Amitabh Bachchan: 83 ವರ್ಷ ವಯಸ್ಸಿನಲ್ಲೂ, ಪ್ರತಿದಿನ ಕೆಲಸ ಮಾಡದಿರುವುದು ತುಂಬಾ ಕಷ್ಟ; ಅಮಿತಾಭ್‌ ಬಚ್ಚನ್

ಈ ವಯಸ್ಸಿನಲ್ಲೂ, ಪ್ರತಿದಿನ ಕೆಲಸ ಮಾಡದಿರುವುದು ತುಂಬಾ ಕಷ್ಟ; ಅಮಿತಾಭ್‌

Amitabh Bachchan: ಅಮಿತಾಭ್‌ ಬಚ್ಚನ್ ತಮ್ಮ ಕೆಲಸದ ಬದ್ಧತೆಗೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಭಾರತೀಯ ಚಿತ್ರರಂಗದ ಅತ್ಯುತ್ತಮ ನಟರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಆರು ದಶಕಗಳ ಕಾಲ ತಮ್ಮ ಸಮೃದ್ಧ ವೃತ್ತಿಜೀವನಕ್ಕೆ ಹೆಸರುವಾಸಿಯಾದ ನಟ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ ಮತ್ತು ವರ್ಷಗಳಲ್ಲಿ ತಮ್ಮ ಅಭಿನಯಕ್ಕಾಗಿ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ವೈಯಕ್ತಿಕ ಅಭಿಪ್ರಾಯಗಳನ್ನು ತಮ್ಮ ಬ್ಲಾಗ್‌ನಲ್ಲಿ ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಅಮಿತಾಭ್‌, ಈಗ ಪ್ರತಿದಿನ ಕೆಲಸ ಮಾಡುವ ಮಹತ್ವದ ಬಗ್ಗೆ ತೆರೆದಿಟ್ಟಿದ್ದಾರೆ ಮತ್ತು ಒಂದು ದಿನವೂ ಕೆಲಸ ಮಾಡದಿರುವುದು ತನಗೆ ಹೇಗೆ ತೊಂದರೆದಾಯಕ ಎಂದು ಹೇಳಿದ್ದಾರೆ.

ʻಧನುಷ್‌ ನಂಗೆ ತಂದೆಸಮಾನ.. ಅವ್ರ ಸ್ನೇಹ ಕಳೆದುಕೊಂಡಿದ್ದು ಬೇಸರ ನೀಡಿದೆʼ; ನಯನತಾರಾ ಪತಿ ಇದ್ದಕ್ಕಿದ್ದಂತೆಯೇ ಹಿಂಗ್ಯಾಕೆ ಹೇಳಿದ್ರು?

ʻಧನುಷ್ ನಂಗೆ ತಂದೆ ಸಮಾನ'; ನಟಿ ನಯನತಾರಾ ಪತಿ ಹಿಂಗ್ಯಾಕೆ ಹೇಳಿದ್ರು?

ನಿರ್ದೇಶಕ ವಿಘ್ನೇಶ್ ಶಿವನ್ ಅವರು ತಮ್ಮ ಮುಂದಿನ ಸಿನಿಮಾ 'ಲವ್ ಇನ್ಶೂರೆನ್ಸ್ ಕಂಪನಿ' ಪ್ರಚಾರದ ವೇಳೆ ನಟ ಧನುಷ್ ಅವರೊಂದಿಗಿನ ಸ್ನೇಹ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಧನುಷ್‌ರನ್ನು ತಮ್ಮ ತಂದೆಯ ಸ್ಥಾನದಲ್ಲಿ ಕಂಡಿದ್ದಾಗಿ ಹೇಳಿರುವ ವಿಘ್ನೇಶ್, ಅವರ ಸ್ನೇಹ ಕಳೆದುಕೊಂಡಿರುವುದು ನನ್ನ ಜೀವನದ ದೊಡ್ಡ ನಷ್ಟ ಎಂದು ಹೇಳಿಕೊಂಡಿದ್ದಾರೆ.

ನಟ ಶ್ರೇಯಸ್ ಮಂಜು ಹುಟ್ಟುಹಬ್ಬದಂದು ರಿಲೀಸ್‌ ಆಯ್ತು 'ದಿಲ್‌ದಾರ್' ಸಿನಿಮಾದ ಖಡಕ್ ಟೀಸರ್

ಶ್ರೇಯಸ್ ಮಂಜು ಬರ್ತ್‌ಡೇ ಸ್ಪೆಷಲ್: 'ದಿಲ್‌ದಾರ್' ಚಿತ್ರದ ಟೀಸರ್ ರಿಲೀಸ್

ನಟ ಶ್ರೇಯಸ್‌ ಮಂಜು ಅವರ ಹುಟ್ಟುಹಬ್ಬದ ಅಂಗವಾಗಿ 'ದಿಲ್‌ದಾರ್' ಚಿತ್ರತಂಡ ಪವರ್‌ಫುಲ್ ಟೀಸರ್ ಬಿಡುಗಡೆ ಮಾಡಿದೆ. ಮಧು ಗೌಡ ಗಂಗೂರ್ ನಿರ್ದೇಶನದ ಈ ಚಿತ್ರದಲ್ಲಿ ಶ್ರೇಯಸ್ ಹಿಂದೆಂದೂ ಕಾಣದ ಸ್ಟೈಲಿಶ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ನಟ ಶರಣ್ ಅವರ ತಂಗಿಯ ಮಗಳು ಕೀರ್ತಿ ಕೃಷ್ಣ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

Ranbir Kapoor: ರಾಮಾಯಣ ಕಥೆ ಹೇಳುವಾಗ ಮಗಳ ಪ್ರತಿಕ್ರಿಯೆ ಏನು? ರಣಬೀರ್ ಹೇಳಿದ್ದೇನು?

ರಾಮಾಯಣ ಕಥೆ ಹೇಳುವಾಗ ಮಗಳ ಪ್ರತಿಕ್ರಿಯೆ ಏನು? ರಣಬೀರ್ ಹೇಳಿದ್ದೇನು?

Ranbir Kapoor: ಬಾಲಿವುಡ್ ನಟ ರಣಬೀರ್ ಕಪೂರ್ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ಅನ್ನು ಆಯ್ದ ಪ್ರೇಕ್ಷಕರಿಗಾಗಿ ತಯಾರಕರು ಪ್ರದರ್ಶಿಸಿದರು. ನಂತರ, ತಂಡವು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಮಾತುಕತೆ ವೇಳೆ, ರಣಬೀರ್ ತನ್ನ ಮಗಳು ರಾಹಾಗೆ ರಾಮಾಯಣ ಕಥೆಗಳನ್ನು ಹೇಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ವಿಶೇಷ ವಿಚಾರವನ್ನು ಹಂಚಿಕೊಂಡಿದ್ದಾರೆ.

ಹುಟ್ಟುಹಬ್ಬದಂದೇ ʻರೌದ್ರಾವತಾರʼ ತಾಳಿದ ನಟಿ ರಶ್ಮಿಕಾ ಮಂದಣ್ಣ; ಜನ್ಮದಿನಕ್ಕಾಗಿ ಪವರ್‌ಫುಲ್ ಪೋಸ್ಟರ್ ರಿಲೀಸ್‌ ಮಾಡಿದ ʻಮೈಸಾ' ಟೀಮ್‌

ʻಬರ್ತ್‌ಡೇ ಗರ್ಲ್‌ʼ ರಶ್ಮಿಕಾಗೆ 'ಮೈಸಾ' ಚಿತ್ರತಂಡದಿಂದ ಪವರ್‌ಫುಲ್ ಗಿಫ್ಟ್

ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬದ (ಏ.5) ಪ್ರಯುಕ್ತ 'ಮೈಸಾ' ಚಿತ್ರತಂಡ ಪವರ್‌ಫುಲ್ ಪೋಸ್ಟರ್ ಬಿಡುಗಡೆ ಮಾಡಿದೆ. ಮದುವೆಯ ನಂತರದ ಮೊದಲ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ರಶ್ಮಿಕಾ, ರವೀಂದ್ರ ಪುಲ್ಲೆ ನಿರ್ದೇಶನದ ಈ ಚಿತ್ರದಲ್ಲಿ ಗೋಂಡು ಬುಡಕಟ್ಟಿನ ಹೋರಾಟಗಾರ್ತಿಯಾಗಿ ಕಾಣಿಸಿಕೊಂಡಿದ್ದಾರೆ.

Loading...