ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ʻಕಿರಿಕ್‌ ಪಾರ್ಟಿʼ ಖ್ಯಾತಿಯ ಸಂಯುಕ್ತಾ ಹೆಗಡೆಗೆ ಸಿಕ್ತು ಭರ್ಜರಿ ಚಾನ್ಸ್‌; ಸಣ್ಣ ಗ್ಯಾಪ್‌ನ ನಂತರ ತಮಿಳು ನಟ ವಿಕ್ರಮ್‌ ಸಿನಿಮಾದಲ್ಲಿ ಮಿಂಚಿಂಗ್!‌

ಸಂಯುಕ್ತಾ ಹೆಗಡೆಗೆ ನಟ ವಿಕ್ರಮ್ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದ್ದೇಗೆ?

ತಮಿಳು ನಟ ವಿಕ್ರಮ್‌ ಅವರ 'ಚಿಯಾನ್ 63' ಚಿತ್ರಕ್ಕೆ 'ಕಿರಿಕ್ ಪಾರ್ಟಿ' ಖ್ಯಾತಿಯ ನಟಿ ಸಂಯುಕ್ತಾ ಹೆಗಡೆ ಆಯ್ಕೆ ಆಗಿದ್ದಾರೆ. 'ವೀರ ಧೀರ ಶೂರನ್ 2' ಬಳಿಕ ಒಂದು ವರ್ಷ ಬ್ರೇಕ್ ತಗೊಂಡಿದ್ದ ವಿಕ್ರಮ್ ಈ ಚಿತ್ರದಲ್ಲಿ ಶೆಫ್ ಪಾತ್ರ ಮಾಡುತ್ತಿದ್ದು, ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್‌ನಡಿ ಈ ಸಿನಿಮಾ ಮೂಡಿಬರುತ್ತಿದೆ. ಈ ಚಿತ್ರದ ಶೂಟಿಂಗ್‌ನಲ್ಲಿ ಸಂಯುಕ್ತಾ ಹೆಗಡೆ ಆಗಲೇ ಭಾಗಿಯಾಗಿದ್ದಾರೆ.

Drishyam 3 OTT:   ಮೋಹನ್‌ಲಾಲ್ ಕ್ರೈಮ್ ಥ್ರಿಲ್ಲರ್ 'ದೃಶ್ಯಂ 3' ಒಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್; ಸ್ಟ್ರೀಮಿಂಗ್‌ ಯಾವಾಗಿನಿಂದ?

'ದೃಶ್ಯಂ 3' ಒಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್; ಸ್ಟ್ರೀಮಿಂಗ್‌ ಯಾವಾಗಿನಿಂದ?

Drishyam 3 OTT: ದೃಶ್ಯಂ (2013) ಮತ್ತು ದೃಶ್ಯಂ 2 (2021) ಭಾರತಾದ್ಯಂತ ಹಿಟ್ ಆಗಿದ್ದವು ಮತ್ತು ಹಿಂದಿ, ಸಿಂಹಳ, ಮ್ಯಾಂಡರಿನ್ ಮತ್ತು ಕೊರಿಯನ್ ಸೇರಿದಂತೆ ಬಹು ಭಾಷೆಗಳಲ್ಲಿ ರೀಮೇಕ್ ಮಾಡಲ್ಪಟ್ಟವು. ಇನ್ನು ಜಾರ್ಜ್‌ಕುಟ್ಟಿಯ ಈ ಮೈಂಡ್ ಗೇಮ್‌ನ ನೀವು ಕನ್ನಡದಲ್ಲಿಯೂ ಕೂಡ ನೋಡಬಹುದು. ತಮಿಳು, ತೆಲುಗು ಮತ್ತು ಕನ್ನಡಕ್ಕೆ ಈ ಚಿತ್ರವನ್ನು ಡಬ್ ಮಾಡಲಾಗಿದೆ.ಅಂದ್ಹಾಗೇ ''ದೃಶ್ಯಂ 3'' ಜಾರ್ಜ್‌ ಕುಟ್ಟಿಯ ಕೊನೆ ಆಟ ಎಂದು ಹೇಳಲಾಗಿದೆಯಾದರೂ, ಮುಂದಿನ ದಿನಗಳಲ್ಲಿ ''ದೃಶ್ಯಂ 4'' ಬಂದರೂ ಬರಬಹುದು. ಇದೀಗ ದೃಶ್ಯಂ 3 ಸಿನಿಮಾ ಒಟಿಟಿ (Cinema OTT) ಜಗತ್ತಿಗೆ ಕಾಲಿಡುತ್ತಿದೆ. ಸ್ಟ್ರೀಮಿಂಗ್‌ ಎಲ್ಲಿ? ಯಾವಾಗಿನಿಂದ?

‌KGF ಶ್ರೀನಿಧಿ ಶೆಟ್ಟಿ ಬಳಿಕ ಕನ್ನಡ ಮತ್ತೋರ್ವ `ಸ್ಟಾರ್‌' ನಟಿ ಜೊತೆಗೆ ಕೈಜೋಡಿಸಿದ ತೆಲುಗು ನಟ ನಾನಿ; ಯಾವ ಸಿನಿಮಾ?

KGF ಶ್ರೀನಿಧಿ ಶೆಟ್ಟಿ ಬಳಿಕ ನಾನಿ ಕಣ್ಣಿಗೆ ಬಿದ್ದ ಕನ್ನಡದ ಮತ್ತೋರ್ವ ನಟಿ!

ತೆಲುಗು ನಟ, ನಿರ್ಮಾಪಕ ನಾನಿ ಅವರ ಹೊಸದೊಂದು ಸಿನಿಮಾವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ. 'ದಂಡೋರ' ಖ್ಯಾತಿಯ ಮುರಳಿಕಾಂತ್ ದೇವಸೋತ್ ನಿರ್ದೇಶಿಸಲಿರುವ ಈ ವಿಶಿಷ್ಟ ಸಿನಿಮಾವನ್ನು ನಾನಿ ತಮ್ಮದೇ 'ವಾಲ್ ಪೋಸ್ಟರ್ ಸಿನಿಮಾ' ಬ್ಯಾನರ್ ಅಡಿಯಲ್ಲಿ ಅತ್ಯಂತ ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿದ್ದು, ಆಗಸ್ಟ್ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದೆ. ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್‌ ನಟಿಯೊಬ್ಬರು ನಾಯಕಿಯಾಗಿ ನಟಿಸುತ್ತಿದ್ದಾರೆ.

Radhika Pandit: ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌; ಸ್ಪೆಷಲ್ ವಿಡಿಯೋದಲ್ಲಿದೆ ಈ ಹಾಡು!

ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಂಡ ರಾಧಿಕಾ ಪಂಡಿತ್‌

Radhika Pandit: ಇನ್ನುಳಿದಂತೆ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ರಾಧಿಕಾ ಇರುವ ಫೋಟೊ, ವೀಡಿಯೋ ಹಂಚಿಕೊಳ್ಳುತ್ತಾರೆ. ಕೆಲ ದಿನಗಳ ಹಿಂದೆ ಮಕ್ಕಳ ಜೊತೆ ಕೂರ್ಗ್, ಮಡಿಕೇರಿಗೆ ತೆರಳಿ ಒಂದಷ್ಟು ಸಮಯ ಕಳೆದಿದ್ದರು.ಯಶ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಿದ್ದರಿಂದ ಈ ವೇಳೆ ಫ್ಯಾಮಿಲಿ ಜೊತೆ ಕಾಣಿಸಿಕೊಂಡಿರಲಿಲ್ಲ. ಸದ್ಯ ರಾಧಿಕಾ ಪಂಡಿತ್ ಒಂದಷ್ಟು ಸೆಲ್ಫಿ ಫೋಟೊಗಳನ್ನು ಕೊಲಾಜ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ.

ಚುನಾವಣಾ ರಾಜಕಾರಣಕ್ಕೆ ರಜನಿಕಾಂತ್ ಹೆಸರು ಬಳಸದಂತೆ ಕಟ್ಟುನಿಟ್ಟಿನ ಆದೇಶ: ತಲೈವಾ ಅಭಿಮಾನಿಗಳ ಸಂಘದಿಂದ ಪ್ರಕಟಣೆ

ರಜನಿಕಾಂತ್ ಹೆಸರು ಬಳಸದಂತೆ ಅಭಿಮಾನಿಗಳ ಸಂಘದಿಂದ ಕಟ್ಟುನಿಟ್ಟಿನ ಆದೇಶ

ರಾಜಕೀಯ ವಿದ್ಯಮಾನಗಳಲ್ಲಿ ‘ಸೂಪರ್‌ಸ್ಟಾರ್’ ರಜನಿಕಾಂತ್ ಅವರ ಹೆಸರು ಮತ್ತು ಭಾವಚಿತ್ರಗಳನ್ನು ದುರುಪಯೋಗಪಡಿಸಿಕೊಳ್ಳುವುದಕ್ಕೆ ಸಂಪೂರ್ಣ ಬ್ರೇಕ್ ಹಾಕುವ ನಿಟ್ಟಿನಲ್ಲಿ ಅಖಿಲ ಭಾರತ ರಜನಿಕಾಂತ್ ಅಭಿಮಾನಿಗಳ ಕಲ್ಯಾಣ ಸಂಘವು ಅಧಿಕೃತ ಪ್ರಕಟಣೆ ಹೊರಡಿಸಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ಛೇ! ಕಂಗನಾ ರಣಾವತ್‌ ಚಿತ್ರಕ್ಕೆ ಇಂಥ ಸ್ಥಿತಿಯೇ? ಮೊದಲ ದಿನವೇ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿದ 'ಭಾರತ್ ಭಾಗ್ಯ ವಿಧಾತ' ಸಿನಿಮಾ!

ಮತ್ತೆ ಮತ್ತೆ ಸೋಲಿನ ಸುಳಿಗೆ ಸಿಲುಕುತ್ತಿರುವ ಸಂಸದೆ ಕಂಗನಾ ರಣಾವತ್‌!

26/11 ಮುಂಬೈ ದಾಳಿಯ ನೈಜ ಘಟನೆಗಳ ಆಧಾರಿತ, ನಟಿ, ಸಂಸದೆ ಕಂಗನಾ ರಣಾವತ್ ಅಭಿನಯದ ‘ಭಾರತ್ ಭಾಗ್ಯ ವಿಧಾತ’ ಚಿತ್ರಕ್ಕೆ ನೀರಸ ಆರಂಭ ಸಿಕ್ಕಿದೆ. ದೇಶಾದ್ಯಂತ 2,181 ಶೋಗಳನ್ನು ಹೊಂದಿದ್ದರೂ ಶೇ.11 ರಷ್ಟು ಮಾತ್ರ ಆಕ್ಯುಪೆನ್ಸಿ ದಾಖಲಾಗಿದೆ. ಕಂಗನಾ ಅವರ ಸೋಲಿನ ಸರಣಿ ಮುಂದುವರಿದಿದೆ.

ರಂಗಾಯಣ ರಘು ನಟನೆಯ 400ನೇ ಸಿನಿಮಾದ ಟೈಟಲ್ ರಿವೀಲ್; ಸಾಥ್ ನೀಡಿದ ʻಡಾಲಿʼ ಧನಂಜಯ್

ನಟ ರಂಗಾಯಣ ರಘು ಅಭಿನಯದ 400ನೇ ಸಿನಿಮಾದ ಟೈಟಲ್ ಅನೌನ್ಸ್‌!

ಸ್ಯಾಂಡಲ್‌ವುಡ್‌ನ ಜನಪ್ರಿಯ ಪೋಷಕ ನಟ ರಂಗಾಯಣ ರಘು ಅವರ ವೃತ್ತಿಜೀವನದ 400ನೇ ಮೈಲಿಗಲ್ಲಿನ ಚಿತ್ರ ‘ಹೊಸ ಜೀವನ’ ಅಧಿಕೃತವಾಗಿ ಪ್ರಕಟವಾಗಿದ್ದು, ಇದರ ಶೀರ್ಷಿಕೆಯನ್ನು ನಟರಾಕ್ಷಸ ಡಾಲಿ ಧನಂಜಯ್ ಅನಾವರಣಗೊಳಿಸಿದ್ದಾರೆ. ಕಿರುಚಿತ್ರಗಳ ಮೂಲಕ ಖ್ಯಾತಿ ಪಡೆದಿದ್ದ ಮೋಹನ್ ಕುಮಾರ್ ಹನುಮಯ್ಯ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಜೂನ್‌ 15ಕ್ಕೆ‌ ತಮಿಳುನಾಡು ಸಿಎಂ ವಿಜಯ್‌ಗೆ ಬಿಗ್‌ ಡೇ; ʻದಳಪತಿʼ ಕುಟುಂಬದಲ್ಲಿ ಬೀಸಲಿದೆಯಾ ತಂಗಾಳಿ?

ಜೂ.15ಕ್ಕೆ CM ವಿಜಯ್‌ಗೆ ಬಿಗ್ ಡೇ; ಫ್ಯಾಮಿಲಿ ಕೋರ್ಟ್‌ನಲ್ಲಿ ದಳಪತಿ ಸಂಸಾರ

ತಮಿಳುನಾಡು ಮುಖ್ಯಮಂತ್ರಿಯಾಗಿ ಐತಿಹಾಸಿಕ ಸಾಧನೆ ಮಾಡಿರುವ ನಟ ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತ ಸ್ವರ್ಣಲಿಂಗಂ ಅವರ ವಿಚ್ಛೇದನ ಪ್ರಕರಣ ಜೂನ್ 15 ರಂದು ಚೆನ್ನೈ ಕೌಟುಂಬಿಕ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಗೆ ಬರಲಿದೆ.

ಸದ್ದಿಲ್ಲದೇ ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ Obsession; ಮ್ಯಾಜಿಕ್‌ ಮಾಡಿದ 7 ಕೋಟಿ ಬಜೆಟ್‌ನ ಹಾಲಿವುಡ್‌ ಸಿನಿಮಾ!

ಕರುನಾಡಿನಲ್ಲಿ ಬಾಕ್ಸ್‌ ಆಫೀಸ್‌ ಲೂಟಿ ಹೊಡೆದ 7 ಕೋಟಿ ಬಜೆಟ್‌ನ 'ಅಬ್ಸೆಷನ್'

ಯಾವುದೇ ಸ್ಟಾರ್ ತಾರಾಗಣವಿಲ್ಲದೆ ಕೇವಲ 7 ಕೋಟಿ ಬಜೆಟ್‌ನಲ್ಲಿ ಕರಿ ಬೇಕರ್ ನಿರ್ದೇಶಿಸಿರುವ ಹಾಲಿವುಡ್‌ನ ‘ಅಬ್ಸೆಷನ್’ ಸಿನಿಮಾ ಭಾರತದಲ್ಲಿ 15 ದಿನಗಳಲ್ಲಿ 65+ ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಯಾವುದೇ ಪ್ರಚಾರವಿಲ್ಲದೆ ಕರ್ನಾಟಕದಲ್ಲೂ ದಾಖಲೆ ಪ್ರಮಾಣದ ಗಳಿಕೆಯನ್ನು ಈ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ ಮಾಡಿದೆ.

Kangana Ranaut: ಬಾಕ್ಸ್ ಆಫೀಸ್​​ನಲ್ಲಿ ಕಂಗನಾ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ; ಕಲೆಕ್ಷನ್‌ ಎಷ್ಟು?

ಬಾಕ್ಸ್ ಆಫೀಸ್​​ನಲ್ಲಿ ಕಂಗನಾ ಸಿನಿಮಾ ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ

Kangana Ranaut: ಬಾಕ್ಸ್ ಆಫೀಸ್‌ನಲ್ಲಿ ತೀವ್ರ ಪೈಪೋಟಿಯನ್ನು ಎದುರಿಸಿತು, ದಿಲ್ಜಿತ್ ದೋಸಾಂಜ್ ನಟಿಸಿದ ಮೈ ವಾಪಸ್ ಆವುಂಗಾ ಮತ್ತು ಮನೋಜ್ ಬಾಜ್‌ಪೇಯಿ ನಟಿಸಿದ ಗವರ್ನರ್ ಜೊತೆಗೆ ಬಿಡುಗಡೆಯಾಗಿದೆ. ಸಕಾರಾತ್ಮಕ ವಿಮರ್ಶೆಗಳನ್ನು ಪಡೆದಿದ್ದರೂ, ಚಿತ್ರವು ತನ್ನ ಆರಂಭಿಕ ದಿನಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸಲು ಹೆಣಗಾಡಿದೆ. ಮೊದಲ ದಿನ ಕೇವಲ 1 ಕೋಟಿ ರೂ. ಸಂಗ್ರಹಿಸಿದ್ದು, ಪ್ರೇಕ್ಷಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

Dhamaal 4 Trailer: ಅಜಯ್ ದೇವಗನ್ ‘ಧಮಾಲ್ 4’ ಟ್ರೇಲರ್ ರಿಲೀಸ್: ಭರ್ಜರಿ ಕಾಮಿಡಿಗೆ ಫ್ಯಾನ್ಸ್‌ ಫಿದಾ

‘ಧಮಾಲ್ 4’ ಟ್ರೇಲರ್ ರಿಲೀಸ್: ಭರ್ಜರಿ ಕಾಮಿಡಿಗೆ ಫ್ಯಾನ್ಸ್‌ ಫಿದಾ

Dhamaal 4 Trailer: ಈ ಚಿತ್ರಗಳ ಸೀಕ್ವೆಲ್‌ಗಳು ಸಹ ಬಿಡುಗಡೆಯಾಗಿವೆ. ಮತ್ತು ಪ್ರೇಕ್ಷಕರು ಅವುಗಳನ್ನು ಪ್ರೀತಿಯಿಂದ ನೋಡಿ ಆನಂದಿಸಿದ್ದಾರೆ. ಅಕ್ಷಯ್ ಕುಮಾರ್ ಕೆಲವೇ ದಿನಗಳಲ್ಲಿ ವೆಲ್ಕಮ್ ನ ಮೂರನೇ ಕಂತನ್ನು ಬಿಡುಗಡೆ ಮಾಡುತ್ತಿದ್ದಾರೆ. ಕೆಲವೇ ದಿನಗಳ ನಂತರ, ಅಜಯ್ ದೇವಗನ್ ಅದೇ ಹಳೆಯ ಹಾಸ್ಯ ಸಿನಿಮಾ ಧಮಾಲ್ ನ ನಾಲ್ಕನೇ ಕಂತನ್ನು ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದಾರೆ.

Raghava Lawrence:  ರಾಘವ್ ಲಾರೆನ್ಸ್ ರಾಜಕೀಯಕ್ಕೆ ಪ್ರವೇಶ; ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

ರಾಘವ್ ಲಾರೆನ್ಸ್ ರಾಜಕೀಯಕ್ಕೆ ಪ್ರವೇಶ; ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

Raghava Lawrence: ವಿಜಯ್ ಅವರಿಂದ ತೆರವಾದ ತಿರುಚ್ಚಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧಿಸಬಹುದೆಂಬ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ, ನಟ-ಚಲನಚಿತ್ರ ನಿರ್ಮಾಪಕ ರಾಘವ ಲಾರೆನ್ಸ್ ಶುಕ್ರವಾರ ರಾಜಕೀಯ ಪ್ರವೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದ ಸ್ಥಾನಕ್ಕೆ ಲಾರೆನ್ಸ್ ಅವರನ್ನು ಲಿಂಕ್ ಮಾಡಲಾಗಿದೆ ಎಂಬ ವರದಿಗಳ ನಂತರ ಈ ಘೋಷಣೆ ಬಂದಿದೆ.

Actor Suriya:  ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

Actor Suriya: ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

Actor Suriya: ಛಾಯಾಗ್ರಾಹಕ ಜಿಕೆ ವಿಷ್ಣು, ಸಂಪಾದಕ ಆರ್ ಕಲೈವಾಣನ್ ಮತ್ತು ಸಂಗೀತ ಸಂಯೋಜಕ ಸಾಯಿ ಅಭ್ಯಂಕರ್ ಅವರಿಗೆ ಮಹೀಂದ್ರಾ ಬಿಇ6 ಬ್ಯಾಟ್‌ಮ್ಯಾನ್ ಆವೃತ್ತಿಯ ಕಾರುಗಳನ್ನು ಉ ಡುಗೊರೆಯಾಗಿ ನೀಡಿದ ನಂತರ, ಅವರು ಆರ್‌ಜೆ ಬಾಲಾಜಿಗೆ ಹೊಚ್ಚ ಹೊಸ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದರು. ಈ ವಾರ ಸಿನಿಮಾ ಓಟಿಟಿಗೆಗೂ ಬಂದಿದೆ. ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.

ವರ್ಷಾನುಗಟ್ಟಲೇ ಸಿನಿಮಾ ಶೂಟಿಂಗ್‌ ಮಾಡೋರಿಗೆ 94 ವರ್ಷದ ಸಿಂಗೀತಂ ಶ್ರೀನಿವಾಸ ರಾವ್ ಟಾಂಗ್‌;‌ 77 ದಿನಗಳಲ್ಲಿ ʻಸಿಂಗ್‌ ಗೀತಂʼ ಚಿತ್ರೀಕರಣ ಫಿನೀಶ್‌

ಕೇವಲ 77 ದಿನದಲ್ಲಿ ʻಸಿಂಗ್ ಗೀತಂʼ ಚಿತ್ರದ ಶೂಟಿಂಗ್‌ ಮುಗಿಸಿದ್ದ ಸಿಂಗೀತಂ!

94 ವರ್ಷದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ವರ್ಷಗಟ್ಟಲೆ ಶೂಟಿಂಗ್ ಎಳೆಯುವ ಇಂದಿನ ತಲೆಮಾರಿಗೆ ಮಾದರಿಯಾಗಿ ತಮ್ಮ ‘ಸಿಂಗ್ ಗೀತಂ’ ಸಿನಿಮಾವನ್ನು ಕೇವಲ 77 ದಿನಗಳಲ್ಲಿ ಪೂರ್ಣಗೊಳಿಸಿ ಜೂನ್ 12 ರಂದು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ.

8 Kannada Movie: ಬಾಲಿವುಡ್‌ನ ಅನುರಾಗ್‌ ಕಶ್ಯಪ್‌ ನಟನೆಯ ಮೊದಲ ಕನ್ನಡ ಸಿನಿಮಾದ ಟೀಸರ್‌ ರಿಲೀಸ್

‌8 Movie: ಅನುರಾಗ್ ಕಶ್ಯಪ್ ನಟನೆಯ ಮೊದಲ ಕನ್ನಡದ ಸಿನಿಮಾದ ಟೀಸರ್‌ ರಿಲೀಸ್

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಚೊಚ್ಚಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ‘8’ (ಎಂಟು) ಚಿತ್ರದ ಸಸ್ಪೆನ್ಸ್ ಹಾಗೂ ಎಮೋಷನಲ್ ಟೀಸರ್ ಬಿಡುಗಡೆಯಾಗಿ ಭಾರಿ ಸಂಚಲನ ಮೂಡಿಸಿದೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಖ್ಯಾತಿಯ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರವು ಮನುಷ್ಯನ ಜೀವನದಲ್ಲಿ ಸಿಗುವ ಎರಡನೇ ಅವಕಾಶದ ಕಥಾಹಂದರವನ್ನು ಹೊಂದಿದೆ.

ಭಾರತೀಯ OTT ರಂಗದಲ್ಲಿ ಹೊಸ ಕ್ರಾಂತಿ; 100 ಮಿಲಿಯನ್ ದಾಟಿದ ಜಿಯೋಹಾಟ್‌ಸ್ಟಾರ್ ಬಳಕೆದಾರರ ಸಂಖ್ಯೆ!

OTT ಲೋಕದಲ್ಲಿ ಜಿಯೋಹಾಟ್‌ಸ್ಟಾರ್ ಧಮಾಕಾ; 10 ಕೋಟಿ ದಾಟಿದ ಬಳಕೆದಾರರ ಸಂಖ್ಯೆ

ಜಿಯೋಹಾಟ್‌ಸ್ಟಾರ್ ಒಟಿಟಿ ವೇದಿಕೆಯ ಪ್ರೀಮಿಯಂ ಮೈಕ್ರೋ-ಕಂಟೆಂಟ್ ವಿಭಾಗವಾದ ‘TADKA’ 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತಲುಪುವ ಮೂಲಕ ಭಾರತೀಯ ಡಿಜಿಟಲ್ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇಂದಿನ ಅವಸರದ ಬದುಕಿಗೆ ಸೂಕ್ತವಾದ 30 ರಿಂದ 60 ಸೆಕೆಂಡುಗಳ ವರ್ಟಿಕಲ್ ಶೈಲಿಯ ಕಥೆಗಳು ಯುವ ಸಮೂಹವನ್ನು ಸೆಳೆದಿದೆ.

ಪ್ರಿಯಾ ಜೊತೆ ಮದುವೆ ಆಗೋದಾಗಿ ಮೊದಲು ಸಂಚಿತ್‌‌ ಸಂಜೀವ್‌ಗೆ ಹೇಳಿದ್ದ ನಟ ಸುದೀಪ್; ಅಂದು ಜೂನಿಯರ್‌ ಕಿಚ್ಚ ಏನ್‌ ಹೇಳಿದ್ರು ಗೊತ್ತಾ?

ಪ್ರಿಯಾ - ಸುದೀಪ್ ಮದುವೆಗೆ ನೋ ಎಂದಿದ್ದ ಸಂಚಿತ್! ಇಲ್ಲಿದೆ ಆ ಕ್ಯೂಟ್‌ ಕಾರಣ

ನಟ ಕಿಚ್ಚ ಸುದೀಪ್ ಅವರು ಪ್ರಿಯಾ ಅವರನ್ನು ಮದುವೆಯಾಗುವ ನಿರ್ಧಾರವನ್ನು ಮೊದಲು ಸೋದರಳಿಯ ಸಂಚಿತ್ ಸಂಜೀವ್‌ಗೆ ತಿಳಿಸಿದ್ದರಂತೆ. ಆದರೆ ಆಗ ಸಂಚಿತ್ ಮಾತ್ರ ಈ ಮದುವೆ ಬೇಡ ಎಂದು ಹೇಳಿದ್ದರಂತೆ! ಈ ತಮಾಷೆಯ ಪ್ರಸಂಗವನ್ನು ಸಂಚಿತ್‌ ಅವರೇ ಹೇಳಿಕೊಂಡಿದ್ದಾರೆ.

ʻಮಹಾನ್ ಕಿಲಾಡಿʼ ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಟ್ಟ ‌ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಿಂಚು; ಜಡ್ಜ್‌ ಸ್ಥಾನದಲ್ಲಿ ಗಣೇಶ್‌ ಸಹೋದರ ಮಹೇಶ್‌ ಕೃಷ್ಣ

ಮಿಂಚು ಸಾರಥ್ಯದ ʻಮಹಾನ್ ಕಿಲಾಡಿʼ ಶೋಗೆ ನಟ ಗಣೇಶ್ ಸೋದರ ಮಹೇಶ್ ಕೃಷ್ಣ ಜಡ್ಜ್

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಿಂಚು ಸಾರಥ್ಯದಲ್ಲಿ 'ಮಹಾನ್ ಕಿಲಾಡಿ' ಎಂಬ ಹೊಸ ರಿಯಾಲಿಟಿ ಶೋ ಅಧಿಕೃತವಾಗಿ ಸಜ್ಜಾಗಿದ್ದು, ಇದರ ಪೋಸ್ಟರ್ ಹಾಗೂ ಟ್ರೇಲರ್ ಲೋಕಾರ್ಪಣೆಗೊಂಡಿದೆ. ಚಿತ್ರರಂಗದಲ್ಲಿ ಅವಕಾಶ ವಂಚಿತರಾದಾಗ ಧೃತಿಗೆಡದೆ ಮಿಂಚು ಈ ವೇದಿಕೆ ಸೃಷ್ಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಕೃಷ್ಣ ಜಡ್ಜ್ ಆಗಿರುವ ಈ ಶೋ ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ.

ರಾಯರ ಸನ್ಯಾಸ ದೀಕ್ಷೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿ

ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಸೀರಿಯಲ್‌ನಲ್ಲಿ ರಾಯರ ಪಟ್ಟಾಭಿಷೇಕ

ಜೀ ಕನ್ನಡ ವಾಹಿನಿಯ ಯಶಸ್ವಿ ಭಕ್ತಿ ಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಅತ್ಯಂತ ನಿರ್ಣಾಯಕ ಘಟ್ಟ ತಲುಪಿದೆ. ವೆಂಕಟನಾಥರು ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವಾಗ ಪತ್ನಿ ಸರಸ್ವತಿಯ ಮಾನಸಿಕ ತೊಳಲಾಟ ಪ್ರೇಕ್ಷಕರನ್ನು ಭಾವುಕರನ್ನಾಗಿಸಿದೆ.

Ram Charan: ʻಪೆದ್ದಿʼ ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್‌ ಪಡೆದ ಹಣವೆಷ್ಟು? ವಿವಾದದ ನಂತರ ಸದ್ದು ಮಾಡಿದ ಸಂಭಾವನೆ ಮ್ಯಾಟರ್!‌

Ram Charan: ʻಪೆದ್ದಿʼ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಜಾನ್ವಿ ಕಪೂರ್

ತೆಲುಗು ನಟ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದರೂ, ನಾಯಕಿ ಜಾನ್ವಿ ಕಪೂರ್ ಅವರ 'ಅಚ್ಚೀಯಮ್ಮ' ಪಾತ್ರ ತೀವ್ರ ವಿವಾದಕ್ಕೆ ಈಡಾಗಿದ್ದು ಗೊತ್ತೇ ಇದೆ. ಈ ಮಧ್ಯೆ ಈ ಚಿತ್ರಕ್ಕಾಗಿ ಜಾನ್ವಿ ತಮ್ಮ ವೃತ್ತಿಜೀವನದಲ್ಲೇ ಗರಿಷ್ಠ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ʻಆ ಕಿಡಿಗೇಡಿಗಳನ್ನು ಸುಮ್ನೆ ಬಿಡಲ್ಲʼ; ಸಾವಿನ ವದಂತಿ ಹಬ್ಬಿಸಿದವರಿಗೆ ಹಿರಿಯ ನಟ ದೊಡ್ಡಣ್ಣ ಖಡಕ್‌ ವಾರ್ನಿಂಗ್!‌

ಸಾವಿನ ವದಂತಿ ಹಬ್ಬಿಸಿದವರಿಗೆ ಹಿರಿಯ ನಟ ದೊಡ್ಡಣ್ಣ ಖಡಕ್‌ ವಾರ್ನಿಂಗ್!‌

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಆಘಾತಕಾರಿ ಸುಳ್ಳು ಸುದ್ದಿ ಮತ್ತು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆತಂಕ ಮೂಡಿಸಿತ್ತು. ಈ ಕುರಿತು ಸ್ವತಃ ದೊಡ್ಡಣ್ಣ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ತಾವು ಸಂಪೂರ್ಣ ಆರೋಗ್ಯವಾಗಿ ಮತ್ತು ನೆಮ್ಮದಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Prakash Raj: ಧರ್ಮಸ್ಥಳ ಬುರುಡೆ ಪ್ರಕರಣ;  ಖಡಕ್ ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್

ಧರ್ಮಸ್ಥಳ ಬುರುಡೆ ಪ್ರಕರಣ; ಖಡಕ್ ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್

Prakash Raj: ಮೊದಲು ಬುರುಡೆ ಗ್ಯಾಂಗ್ ಜೊತೆಗಿದ್ದ ಚಿನ್ನಯ್ಯ ಇದೀಗ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಹಲವು ಸ್ಫೋಟಕ ಸಂಗತಿ ಹೊರಬಿದ್ದಿದೆ. ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು ಕೇಳಿಬಂದಿದೆ ಈ ಕುರಿತು ಮಾಧ್ಯಮಗಳಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ, ಪ್ರಕಾಶ್ ರಾಜ್ ಈ ಆರೋಪಗಳನ್ನು ಸುಳ್ಳು ಎಂದು ಖಂಡಿಸಿ, ಶೀಘ್ರದಲ್ಲೇ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.

OTT This Week: ಈ ವಾರ OTTಯಲ್ಲಿ ಈ ಐದು ತೆಲುಗು ಸಿನಿಮಾಗಳನ್ನು ನೋಡಿ!

ಈ ವಾರ OTTಯಲ್ಲಿ ಈ ಐದು ತೆಲುಗು ಸಿನಿಮಾಗಳನ್ನು ನೋಡಿ!

OTT This Week: ನೆಟ್‌ಫ್ಲಿಕ್ಸ್‌, ಸನ್‌ನೆಕ್ಸ್ಟ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.ಹೊಸ ತೆಲುಗು ಚಲನಚಿತ್ರಗಳು ಮತ್ತು ಸಿರೀಸ್‌ಗಳು ಶೀಘ್ರದಲ್ಲೇ ಸ್ಟ್ರೀಮಿಂಗ್ (Series) ಪ್ಲಾಟ್‌ಫಾರ್ಮ್‌ಗಳಲ್ಲಿ ಬರಲಿವೆ. ಪ್ರೇಕ್ಷಕರು ಹೊಸ ಬಿಡುಗಡೆಗಳನ್ನು ಆನಂದಿಸಲು ಇದು ಸೂಕ್ತ ಸಮಯ. ಯಾವೆಲ್ಲ ಸಿನಿಮಾಗಳು (Cinema) ರಿಲೀಸ್‌?

Akshay Kumar: ಸಿನಿ ಇಂಡಸ್ಟ್ರಿಗೆ ಗುಡ್‌ಬೈ?  ಅಕ್ಷಯ್ ಕುಮಾರ್ ಏಕಾಏಕಿ ಹೀಗೇಕೆ ಅಂದ್ರು?

ಸಿನಿ ಇಂಡಸ್ಟ್ರಿಗೆ ಗುಡ್‌ಬೈ? ಅಕ್ಷಯ್ ಕುಮಾರ್ ಏಕಾಏಕಿ ಹೀಗೇಕೆ ಅಂದ್ರು?

Akshay Kumar: ಅಕ್ಷಯ್ ಕುಮಾರ್ ಇದುವರೆಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಆಕ್ಷನ್, ಹಾಸ್ಯ, ಪ್ರಣಯ ಮತ್ತು ಸಾಮಾಜಿಕ ವಿಷಯ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶೀಘ್ರದಲ್ಲೇ, ಅವರ 'ವೆಲ್‌ಕಮ್' ಚಿತ್ರದ ಮುಂದುವರಿದ ಭಾಗ 'ವೆಲ್‌ಕಮ್ ಟು ದಿ ಜಂಗಲ್' ಬಿಡುಗಡೆಯಾಗಲಿದೆ. 'ವೆಲ್‌ಕಮ್ ಟು ದಿ ಜಂಗಲ್' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಅವರು ಪ್ರತಿದಿನ ನಿವೃತ್ತಿಯ ಬಗ್ಗೆ ಯೋಚಿಸುವುದಾಗಿ ಹೇಳಿದರು.

Loading...