ಕೇದಾರನಾಥಕ್ಕೆ ತೆರಳಿ ಶಿವನ ದರ್ಶನ ಪಡೆದ ಯುವ ರಾಜಕುಮಾರ್
Yuvarajkumar: ಯುವರಾಜಕುಮಾರ್ ಕೇದಾರನಾಥಕ್ಕೆ ತೆರಳಿ, ಶಿವನ ದರ್ಶನ (Shiva) ಪಡೆದು ಬಂದಿದ್ದಾರೆ,ಕೇದಾರನಾಥ ದೇವಸ್ಥಾನ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಇದು ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಒಂದು. ಯಾತ್ರೆಯಲ್ಲಿ ತಾನು ಜಿವನದ ಬಗ್ಗೆ ಏನೇನು ಕಲಿತೆ ಎನ್ನುವುದನ್ನು ನಟ ತಿಳಿಸಿದ್ದಾರೆ. ಸಾಮಾನ್ಯರಂತೆ ಕೇದಾರನಾಥ ದೇವಸ್ಥಾನಕ್ಕೆ ಚಾರಣ ಮಾಡುವ ಮೂಲಕ ತಲುಪಿದ್ದಾರೆ.