ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸಿನಿಮಾ

Vijay Deverakonda: ‘ಕಿಂಗ್ಡಮ್ 2’ ಮಾಡೋದಿಲ್ಲ ಎಂದ ನಿರ್ಮಾಪಕ! ವಿಜಯ್ ದೇವರಕೊಂಡ ಬ್ಯಾಡ್‌ ಲಕ್‌

‘ಕಿಂಗ್ಡಮ್ 2’ ಮಾಡೋದಿಲ್ಲ ಎಂದ ನಿರ್ಮಾಪಕ!

Kingdom : ಗೌತಮ್ ತಿನ್ನನುರಿ ಅವರ ವಿಜಯ್ ದೇವರಕೊಂಡ ಅಭಿನಯದ ಕಿಂಗ್‌ಡಮ್ ಚಿತ್ರದ ಮುಂದುವರಿದ ಭಾಗ ರದ್ದಾಗಿದೆ. ನಿರ್ಮಾಪಕ ನಾಗ ವಂಶಿ ಐಡಲ್‌ಬ್ರೈನ್‌ಗೆ ನೀಡಿದ ಸಂದರ್ಶನದಲ್ಲಿ ಈ ಸುದ್ದಿಯನ್ನು ದೃಢಪಡಿಸಿದರು , ಅಲ್ಲಿ ಚಿತ್ರದ ಬಾಕ್ಸ್ ಆಫೀಸ್ ಗಳಿಕೆಯ ನೀರಸ ಪ್ರದರ್ಶನದ ಕಾರಣವನ್ನು ಚರ್ಚಿಸಲು ಅವರು ನಿರಾಕರಿಸಿದ್ದಾರೆ. ಈ ಹಿಂದೆ ವಿಜಯ್ ನಟಿಸಬೇಕಿದ್ದ ಮೂರು ಸಿನಿಮಾಗಳು ನಿಂತು ಹೋಗಿದ್ದವು ಇದೀಗ ಈ ಸಿನಿಮಾ ಸೇರಿ ಸಂಖ್ಯೆ ಒಟ್ಟೂ ನಾಲ್ಕಕ್ಕೆ ಏರಿದೆ.

BBK 12: ರೂಲ್ಸ್‌ ಬ್ರೇಕ್‌ ಮಾಡಿದ್ರೂ ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಕೊನೇ ʻಕ್ಯಾಪ್ಟನ್‌ʼ ಆದ ಧನುಷ್;‌ ಗಿಲ್ಲಿ ಮುಂದೆ ಸೋತ ಅಶ್ವಿನಿ ಗೌಡ! ಏನಿದು ಟ್ವಿಸ್ಟ್?

ರೂಲ್ಸ್ ಬ್ರೇಕ್ ಆದರೂ ಧನುಷ್‌ಗೆ ಕ್ಯಾಪ್ಟನ್ ಪಟ್ಟ; ಅಶ್ವಿನಿ ಗೌಡಗೆ ನಿರಾಸೆ

Bigg Boss Kannada 12: ಈ ಬಾರಿ ಬಿಗ್‌ ಬಾಸ್‌ ಕನ್ನಡ 12ರ ಕೊನೆಯ ಕ್ಯಾಪ್ಟನ್ ಆಗಿ ಧನುಷ್ ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ನಿಯಮ ಉಲ್ಲಂಘನೆಯಾಗಿದ್ದರಿಂದ, ಅಂತಿಮ ತೀರ್ಪನ್ನು ಬಿಗ್ ಬಾಸ್ ಸ್ಪರ್ಧಿಗಳ ವಿವೇಚನೆಗೆ ಬಿಟ್ಟಿದ್ದರು. ವೋಟಿಂಗ್ ಪ್ರಕ್ರಿಯೆಯಲ್ಲಿ ಧನುಷ್ ಅವರಿಗೆ ಹೆಚ್ಚಿನ ಬೆಂಬಲ ಸಿಕ್ಕಿದ್ದರಿಂದ ಅವರು ಈ ಸೀಸನ್‌ನ ಕೊನೆಯ ಕ್ಯಾಪ್ಟನ್ ಎನಿಸಿಕೊಂಡರು.

2025ರಲ್ಲಿ ಮೂರು ಬ್ಲಾಕ್‌ ಬಸ್ಟರ್‌ ಸಿನಿಮಾಗಳನ್ನು ಕೊಟ್ಟ ಮೋಹನ್‌ಲಾಲ್‌ಗೆ ವರ್ಷಾಂತ್ಯದಲ್ಲಿ ʻಬಿಗ್ʼ ಶಾಕ್!‌ ಹಿಂಗ್ಯಾಕಾಯ್ತು ಗುರು?

ಛೇ! 70 ಕೋಟಿ ರೂ. ಬಜೆಟ್‌ನ ಮೋಹನ್‌ಲಾಲ್‌ ಸಿನಿಮಾ 2 ಕೋಟಿ ಕೂಡ ಗಳಿಸಲಿಲ್ಲ!

ಮಲಯಾಳಂ ನಟ ಮೋಹನ್‌ಲಾಲ್ ಅವರಿಗೆ 2025ರ ಮೊದಲ ಎಂಟು ತಿಂಗಳು ಸುವರ್ಣಕಾಲವಾಗಿತ್ತು. L2: Empuraan, Thudarum ಮತ್ತು Hridayapoorvam ನಂತಹ ಚಿತ್ರಗಳ ಮೂಲಕ 600 ಕೋಟಿಗೂ ಅಧಿಕ ಹಣವನ್ನು ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದರು. ಆದರೆ, ವರ್ಷಾಂತ್ಯದಲ್ಲಿ ತೆರೆಕಂಡ ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರ 'ವೃಷಭ' ಹೀನಾಯವಾಗಿ ಸೋತಿದೆ.

ಈ‌ ವೆಡ್ಡಿಂಗ್ ಫೋಟೋಗ್ರಾಫರ್ ಲವ್‌ ಸ್ಟೋರಿಯನ್ನ ಥಿಯೇಟರ್‌ನಲ್ಲಿ ಮಿಸ್‌ ಮಾಡ್ಕೊಂಡ್ರಾ? ಒಟಿಟಿಗೆ ಬಂತು ನೋಡಿ ʻಫುಲ್ ಮೀಲ್ಸ್ʼ

Full Meals OTT Release: ಫೋಟೋಗ್ರಾಫರ್ ಲವ್ ಸ್ಟೋರಿ ಈಗ ಒಟಿಟಿಯಲ್ಲಿ ಲಭ್ಯ

Full Meals OTT Release: ನಟ ಲಿಖಿತ್ ಶೆಟ್ಟಿ ಹಾಗೂ ಖುಷಿ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ ರೊಮ್ಯಾಂಟಿಕ್ ಕಾಮಿಡಿ ಚಿತ್ರ 'ಫುಲ್ ಮೀಲ್ಸ್' ಈಗ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. 2025ರ ನವೆಂಬರ್‌ನಲ್ಲಿ ಬಿಡುಗಡೆಯಾಗಿ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದ ಈ ಸಿನಿಮಾ, ಒಬ್ಬ ಮಧ್ಯಮ ವರ್ಗದ ವೆಡ್ಡಿಂಗ್ ಫೋಟೋಗ್ರಾಫರ್‌ನ ಕನಸು ಮತ್ತು ಪ್ರೇಮ ಪಯಣದ ಕಥೆಯನ್ನು ಹೊಂದಿದೆ.

ಐಷಾರಾಮಿ ಮನೆಗೆ ಕಾಲಿಟ್ಟ ತರುಣ್‌ ಸುಧೀರ್‌ - ಸೋನಲ್‌ ದಂಪತಿ; ಇಲ್ಲಿವೆ ನೋಡಿ ಗೃಹಪ್ರವೇಶದ ಫೋಟೋಗಳು

Photos: ಕನಸಿನ ಅರಮನೆಗೆ ಕಾಲಿಟ್ಟ ತರುಣ್ ಸುಧೀರ್ - ಸೋನಲ್ ದಂಪತಿ

ಸ್ಯಾಂಡಲ್‌ವುಡ್‌ನಲ್ಲಿ ʻಚೌಕʼ, ‘ರಾಬರ್ಟ್’‌, ‘ಕಾಟೇರ’ ಥರದ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಿರ್ದೇಶಕ ತರುಣ್‌ ಕಿಶೋರ್ ಸುಧೀರ್‌ ‌ ಮತ್ತು ಅವರ ಪತ್ನಿ, ನಟಿ ಸೋನಲ್‌ ಮೊಂಥೆರೋ ತಮ್ಮ ಬದುಕಿನ ಹೊಸ ಮೈಲಿಗಲ್ಲನ್ನು ತಲುಪಿದ್ದಾರೆ. ಹೌದು, ಈ ದಂಪತಿ ಇದೀಗ ಬೆಂಗಳೂರಿನ ಪ್ರತಿಷ್ಠಿತ ಏರಿಯಾದಲ್ಲಿ ಐಷಾರಾಮಿ ಮನೆಯೊಂದನ್ನು ಖರೀಸಿದ್ದಾರೆ. ಈಚೆಗೆ ತಮ್ಮ ಕನಸಿನ ಆ ಹೊಸ ಐಷಾರಾಮಿ ಮನೆಗೆ ಅದ್ಧೂರಿಯಾಗಿ ಗೃಹಪ್ರವೇಶ ಮಾಡಿದ್ದಾರೆ. ಈ ಗೃಹಪ್ರವೇಶ ಸಮಾರಂಭದಲ್ಲಿ ತರುಣ್‌ ಸುಧೀರ್‌ ಹಾಗೂ ಸೋನಲ್‌ ಮೊಂಥೆರೋ ಕುಟುಂಬಸ್ಥರು, ಸ್ಯಾಂಡಲ್‌ವುಡ್‌ನ ಹಲವು ಗಣ್ಯರು ಭಾಗವಹಿಸಿ, ಶುಭ ಹಾರೈಸಿದರು. ಇಲ್ಲಿವೆ ನೋಡಿ ಫೋಟೋಗಳು.

Thalapathy Vijay: ʻಜನ ನಾಯಗನ್‌ʼ ಚಿತ್ರದ ಬಗ್ಗೆ ಇದ್ದ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗುವ ಸಮಯ ಬಂದೇಬಿಡ್ತು; ಕಾತರದಲ್ಲಿ ವಿಜಯ್‌ ಫ್ಯಾನ್ಸ್‌!

'ಜನ ನಾಯಗನ್' ಸಿನಿಮಾ ರಿಮೇಕ್ ಹೌದೋ ಅಲ್ಲವೋ? ಉತ್ತರ ಸಿಗುವ ಸಮಯ ಬಂದೇಬಿಡ್ತು

Thalapathy Vijay: ತಮಿಳು ನಟ ವಿಜಯ್‌ ಅವರ 69ನೇ ಹಾಗೂ ಅಂತಿಮ ಚಿತ್ರ 'ಜನ ನಾಯಗನ್' ಜನವರಿ 9ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ತೆಲುಗಿನ 'ಭಗವಂತ್ ಕೇಸರಿ' ಚಿತ್ರದ ರಿಮೇಕ್ ಎಂಬ ಗುಸುಗುಸು ಕೇಳಿಬರುತ್ತಿದ್ದು, ಚಿತ್ರತಂಡ ಈ ಬಗ್ಗೆ ನಿಗೂಢತೆ ಕಾಯ್ದುಕೊಂಡಿದೆ. ಈ ಎಲ್ಲಾ ಅನುಮಾನಗಳಿಗೆ ಈಗ ತೆರೆಬೀಳುವ ಸಮಯ ಬಂದಿದೆ.

ಬಾಕ್ಸ್‌ ಆಫೀಸ್‌ನಲ್ಲಿ ಇನ್ನೂ ನಿಂತಿಲ್ಲ ʻಧುರಂಧರ್‌ʼ ಅಬ್ಬರʼ; ಕರ್ನಾಟಕದಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ?

'ಧುರಂಧರ್' ಧಮಾಕ; ಕರ್ನಾಟಕದಲ್ಲಿ ಈ ಸಿನಿಮಾ ಗಳಿಸಿದ ಹಣವೆಷ್ಟು ಗೊತ್ತಾ?

Dhurandhar Movie: ರಣವೀರ್ ಸಿಂಗ್ ಅವರ ವೃತ್ತಿ ಬದುಕಿನಲ್ಲೇ ಅತಿ ದೊಡ್ಡ ಹಿಟ್ ಆಗಿ ಧುರಂಧರ್‌ ಸಿನಿಮಾ ಹೊರಹೊಮ್ಮಿದೆ. 250 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಈಗಾಗಲೇ ವಿಶ್ವದಾದ್ಯಂತ 1150 ಕೋಟಿ ರೂ. ಬಾಚಿಕೊಂಡಿದೆ. ಕರ್ನಾಟಕದಲ್ಲಿ ಈ ಸಿನಿಮಾ ಕೊಳ್ಳೆ ಹೊಡೆದ ಹಣ ಎಷ್ಟು ಗೊತ್ತಾ?

BBK 12: 'ಬಿಗ್‌ ಬಾಸ್‌' ಮನೆಯ ಕೊನೆಯ ಕ್ಯಾಪ್ಟನ್‌ ಯಾರು? ಕೊನೇ ಕ್ಷಣದಲ್ಲಿ ಧನುಷ್‌ಗೆ ಬಿಗ್‌ ಶಾಕ್!‌ ಕಾರಣವೇನು?

Bigg Boss ಮನೆಯ ಕೊನೆಯ ಕ್ಯಾಪ್ಟನ್ ಯಾರು? ಧನುಷ್‌ಗೆ ಬಿಗ್ ಶಾಕ್‌!

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮುಕ್ತಾಯಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಈ ಸೀಸನ್‌ನ ಕೊನೆಯ ಕ್ಯಾಪ್ಟನ್ಸಿ ಆಯ್ಕೆ ಪ್ರಕ್ರಿಯೆ ಭಾರಿ ಹೈಡ್ರಾಮಾಗೆ ಕಾರಣವಾಗಿದೆ. ಅಶ್ವಿನಿ ಗೌಡ ಮತ್ತು ಧನುಷ್ ನಡುವಿನ ಅಂತಿಮ ಹಣಾಹಣಿಯಲ್ಲಿ ಧನುಷ್ ಗೆದ್ದಂತೆ ಕಂಡರೂ, ಅವರು ನಿಯಮ ಉಲ್ಲಂಘಿಸಿ ಆಟವಾಡಿದ್ದಾರೆ ಎನ್ನಲಾಗಿದೆ.

BBK 12: ʻಇಲ್ಲಿದ್ರೆ ಆನಂದ, ಮನೆಗೋದ್ರೆ ಗೋವಿಂದ, ನಾವು ಉಳ್ದಿರೋದೇ ಜನರಿಂದʼ; ʻಬಿಗ್‌ ಬಾಸ್‌ʼ ಮನೆಯಲ್ಲಿ ಮಸ್ತ್‌ ಆಗಿ ಹಾಡು ಬರೆದ ಗಿಲ್ಲಿ ನಟ

ಹೊಸ ವರ್ಷಕ್ಕೆ ಮಸ್ತ್ ಹಾಡು ಬರೆದ ಗಿಲ್ಲಿ ನಟ; ಇಲ್ಲಿದೆ ಫುಲ್ ಲಿರಿಕ್ಸ್!

Gilli Nata: ಬಿಗ್ ಬಾಸ್ ಮನೆಯ ಹೊಸ ವರ್ಷದ ಟಾಸ್ಕ್‌ನಲ್ಲಿ ಗಿಲ್ಲಿ ನಟ ಅವರು ತಮ್ಮ ಅದ್ಭುತ ಪ್ರತಿಭೆಯನ್ನು ತೋರಿಸಿದ್ದಾರೆ. ಮನೆಯ ಪ್ರತಿಯೊಬ್ಬ ಸದಸ್ಯರ ಗುಣಲಕ್ಷಣಗಳನ್ನು ಆಧರಿಸಿ ಅವರು ಬರೆದ ರ್ಯಾಪ್ ಹಾಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

Chowkidar Movie : ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌! ಪಾತ್ರ ಏನು?

ಗಿಲ್ಲಿ ನಟ ನಟಿಸಿರೋ ಮತ್ತೊಂದು ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

Pruthvi Ambaar: ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದಲ್ಲಿ ಮೂಡಿ ಬಂದಿರುವ ಸಿನಿಮಾ ಚೌಕಿದಾರ್. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಚೌಕಿದಾರ್ ರಿಲೀಸ್ ಡೇಟ್ ಅನೌನ್ಸ್ ಮಾಡಿ, ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ.

ರೋಮ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ; ಫೋಟೋ ಹಂಚಿಕೊಂಡು ಸಿಕ್ಕಿಬಿದ್ದ ಜೋಡಿ!

Photos: ರೋಮ್‌ನಲ್ಲಿ ವಿಜಯ್ ದೇವರಕೊಂಡ - ರಶ್ಮಿಕಾ ನ್ಯೂ ಇಯರ್ ಸೆಲೆಬ್ರೇಷನ್

ನಟಿ ರಶ್ಮಿಕಾ ಮಂದಣ್ಣ ಈಚೆಗೆ ರೋಮ್‌ಗೆ ಹೋಗಿದ್ದರು. ಅಲ್ಲಿನ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದರು. ಇದೀಗ ಅದೇ ಊರಿಗೆ ಭೇಟಿ ನೀಡಿ, ಅಲ್ಲಿನ ಫೋಟೋಗಳನ್ನು ವಿಜಯ್ ದೇವರಕೊಂಡ ಕೂಡ ಹಂಚಿಕೊಂಡಿದ್ದಾರೆ. ಒಂದು ಫೋಟೋದಲ್ಲಿ ಐತಿಹಾಸಿಕ 'ಕೊಲೋಸಿಯಮ್' ಮುಂದೆ ಪೋಸ್ ವಿಜಯ್ ದೇವರಕೊಂಡ, ನೀಡಿದ್ದರೆ, ಮತ್ತೊಂದು ಚಿತ್ರದಲ್ಲಿ ಅವರ ಭುಜದ ಮೇಲೆ ಮಹಿಳೆಯೊಬ್ಬರು ತಲೆ ಇಟ್ಟಿರುವುದು ಕಂಡುಬಂದಿದೆ. ಆ ಚಿತ್ರದಲ್ಲಿ ಮಹಿಳೆಯ ಮುಖ ಕಾಣಿಸುತ್ತಿಲ್ಲವಾದರೂ, ಅವರು ರಶ್ಮಿಕಾ ಮಂದಣ್ಣ ಅವರೇ ಇರಬಹುದು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಈ ಮೂಲಕ ಇಬ್ಬರು ರೋಮ್‌ನಲ್ಲಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ ಎಂಬುದಕ್ಕೆ ಸಾಕ್ಷಿ ಪುರಾವೆ ಸಿಕ್ಕಿವೆ.

BBK 12: ಛೇ... ಹೊಸ ವರ್ಷದಲ್ಲೂ ಅದೇ ಹಳೇ ಜಗಳ; ಧ್ರುವಂತ್‌ಗೆ ಬರೀ ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಾರಂತೆ ಗಿಲ್ಲಿ ನಟ!

'ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಿನಿ'; ಧ್ರುವಂತ್‌ಗೆ ಗಿಲ್ಲಿ ನಟ ವಾರ್ನಿಂಗ್

Bigg Boss Kannada 12: ಹೊಸ ವರ್ಷದ ಸಂಭ್ರಮಕ್ಕಾಗಿ ಬಿಗ್ ಬಾಸ್ ನೀಡಿದ 'ಹಾಡು ಬರೆಯುವ' ಟಾಸ್ಕ್ ಜಗಳಕ್ಕೆ ನಾಂದಿ ಹಾಡಿದೆ. ಗಿಲ್ಲಿ ನಟ ಅವರು ಧ್ರುವಂತ್ ಅವರ ಡೈನಿಂಗ್ ಹಾಲ್ ಕ್ಲೀನಿಂಗ್ ಕೆಲಸವನ್ನು ಲೇವಡಿ ಮಾಡಿ ಹಾಡು ಬರೆದಿದ್ದಕ್ಕೆ ಧ್ರುವಂತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು, ಗಿಲ್ಲಿ ನಟ "ಉಗುರಲ್ಲೇ ಹೊಡೆದು ಸಾಯಿಸಿಬಿಡ್ತಿನಿ" ಎಂದು ಹೇಳುವ ಹಂತಕ್ಕೆ ಜಗಳ ತಲುಪಿದೆ.

Mark: ಅಭಿಮಾನಿಗಳ ಪ್ರೀತಿ ಕಂಡು ಭಾವುಕರಾದ ಸುದೀಪ್;‌ ಹೊಸ ವರ್ಷಕ್ಕೆ ಕಿಚ್ಚ ಕೊಡ್ತಿರುವ ಗಿಫ್ಟ್‌ ಏನು ಗೊತ್ತಾ?

Mark: ಫ್ಯಾನ್ಸ್‌ ಪ್ರೀತಿ ಕಂಡು 'ಮನ ತುಂಬಿ ಬಂದಿದೆ' ಎಂದ ʼಕಿಚ್ಚʼ ಸುದೀಪ್

Mark Movie: ಕಿಚ್ಚ ಸುದೀಪ್‌ ಅಭಿನಯದ 'ಮಾರ್ಕ್' ಚಿತ್ರದ ಅಭೂತಪೂರ್ವ ಯಶಸ್ಸಿನಿಂದ ಸುದೀಪ್ ಭಾವುಕರಾಗಿದ್ದಾರೆ. ಬೆಂಗಳೂರು ಮತ್ತು ಮೈಸೂರಿನ ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದ ಅವರು, ಅಭಿಮಾನಿಗಳ ಸಂಭ್ರಮ ಕಂಡು ಧನ್ಯತಾ ಭಾವ ವ್ಯಕ್ತಪಡಿಸಿದ್ದಾರೆ ಮತ್ತು ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ.

ಹುಬ್ಬಳ್ಳಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ಭೇಟಿ ಮಾಡಿದ್ದ ಅಭಿಮಾನಿ ಗೌರಮ್ಮ ಇನ್ನಿಲ್ಲ

ಪುನೀತ್‌ ರಾಜ್‌ಕುಮಾರ್‌ ಅಭಿಮಾನಿ ಗೌರಮ್ಮ ನಿಧನ

ಪುನೀತ್‌ ರಾಜ್‌ಕುಮಾರ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಹುಬ್ಬಳ್ಳಿಯ ವೀರಾಪೂರ ಓಣಿಯ ನಿವಾಸಿ ಗೌರಮ್ಮ ಮಲ್ಲೇಶಪ್ಪ ಕಂಬಳಿ (94) ಬುಧವಾರ ನಿಧನರಾದರು. ತಮ್ಮ ಅಪ್ಪಟ ಅಭಿಮಾನಿಯನ್ನು ಕಾಣಲು ಸ್ವತಃ ಪುನೀತ್ ರಾಜ್‌ಕುಮಾರ್ ಅವರೇ ಹಿಂದೆ ಗೌರಮ್ಮ ಅವರ ಮನೆಗೆ ಭೇಟಿ ನೀಡಿ ಸಮಯ ಕಳೆದಿದ್ದರು.

ಮೊದಲ ಬಾರಿಗೆ ಬಣ್ಣ ಹಚ್ಚಿದ  ಸಂಗೀತ ನಿರ್ದೇಶಕ ಎ. ಆರ್‌. ರೆಹಮಾನ್‌; ಯಾವ ಸಿನಿಮಾಕ್ಕಾಗಿ ಗೊತ್ತಾ?

ಬಣ್ಣದ ಲೋಕಕ್ಕೆ ನಟರಾಗಿ ಎಂಟ್ರಿ ಕೊಟ್ಟ ಎ ಆರ್ ರೆಹಮಾನ್!

ಎ ಆರ್‌ ರೆಹಮಾನ್‌ ಅವರು ಇದೇ ಮೊದಲ ಬಾರಿಗೆ ಪ್ರಭುದೇವ ಅಭಿನಯದ 'ಮೂನ್‌ವಾಕ್' (Moonwalk) ಎಂಬ ಕಾಮಿಡಿ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಮನೋಜ್ ಎನ್‌ಎಸ್ ನಿರ್ದೇಶನದ ಈ ಚಿತ್ರದಲ್ಲಿ ಅವರು 'ಆಂಗ್ರಿ ಡೈರೆಕ್ಟರ್' ಪಾತ್ರ ನಿರ್ವಹಿಸಲಿದ್ದಾರೆ.

BBK 12: ʻಮಾರ್ಕ್‌ʼ ನೋಡಲು ಬಂದ ಸುದೀಪ್‌ ಎದುರು ಗಿಲ್ಲಿ ನಟನಿಗೆ ಜೈಕಾರ; ಕಿಚ್ಚನಿಗೆ ಮಾತಿನ ಮಲ್ಲನ ಫ್ಯಾನ್ಸ್‌ ಬೇಡಿಕೆ ಏನು?

Bigg Boss 12: 'ಗಿಲ್ಲಿ ಗೆಲ್ಲಬೇಕು..'; ಸುದೀಪ್ ಎದುರೇ ಅಭಿಮಾನಿಗಳ ಬೇಡಿಕೆ

Kiccha Sudeep: 'ಮಾರ್ಕ್' ಸಿನಿಮಾವು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಈಚೆಗೆ ಸುದೀಪ್‌ ಥಿಯೇಟರ್‌ಗೆ ಭೇಟಿ ನೀಡಿ, ಫ್ಯಾನ್ಸ್‌ ಜೊತೆ ಚಿತ್ರ ವೀಕ್ಷಿಸಿದ್ದಾರೆ. ಈ ವೇಳೆ ಬಿಗ್ ಬಾಸ್ ಸ್ಪರ್ಧಿ ಗಿಲ್ಲಿ ನಟನ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. "ಗಿಲ್ಲಿ ಗೆಲ್ಲಬೇಕು" ಎಂದು ಅಭಿಮಾನಿಗಳು ಕೂಗಿದಾಗ ಸುದೀಪ್ ಸ್ಮೈಲ್ ನೀಡಿದರು.

Spirit first look: ಫ್ಯಾನ್ಸ್‌ಗೆ ನ್ಯೂ ಇಯರ್‌ ಗಿಫ್ಟ್‌; ರಗಡ್‌ ಲುಕ್‌ನಲ್ಲಿ ಪ್ರಭಾಸ್‌! 'ಸ್ಪಿರಿಟ್' ಹೊಸ ಪೋಸ್ಟರ್‌ ಔಟ್‌

ಫ್ಯಾನ್ಸ್‌ಗೆ ನ್ಯೂ ಇಯರ್‌ ಗಿಫ್ಟ್‌; ರಗಡ್‌ ಲುಕ್‌ನಲ್ಲಿ ಪ್ರಭಾಸ್‌!

Prabhas: ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಸ್ಪಿರೀಟ್' ಚಿತ್ರದ ಹೊಸ ಪೋಸ್ಟರ್ ಔಟ್‌ ಆಗಿದೆ. ಹೊಸ ವರ್ಷದಂದು ಪ್ರಭಾಸ್‌ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಪ್ರಭಾಸ್ ಮತ್ತು ತೃಪ್ತಿ ಡಿಮ್ರಿ ಹೊಸ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮುಂಬರುವ ಚಲನಚಿತ್ರ ಪೋಸ್ಟರ್‌ನ ಮೊದಲ ನೋಟವನ್ನು ಅನಾವರಣಗೊಳಿಸುವ ಮೂಲಕ ಅಭಿಮಾನಿಗಳಿಗೆ ವಿಶೇಷ ಅಚ್ಚರಿ ಮೂಡಿಸಿದರು.

Kichcha Sudeep: ವಿಜಯಲಕ್ಷ್ಮಿ ದರ್ಶನ್‌ ಬಗ್ಗೆ ಕೇಳಿದ ಪ್ರಶ್ನೆ; ಲೈಫಲ್ಲಿ ನನ್ನ ಬಗ್ಗೆ ಮಾತಾಡಿ, ಪಕ್ಕದ್ಮನೆ ಬಗ್ಗೆ ಅಲ್ಲ ಎಂದ ಕಿಚ್ಚ

ವಿಜಯಲಕ್ಷ್ಮಿ ಬಗ್ಗೆ ಕೇಳಿದ ಪ್ರಶ್ನೆಗೆ ಸುದೀಪ್ ರಿಯಾಕ್ಷನ್ ಹೇಗಿತ್ತು?

Sudeep: ನಟ ದರ್ಶನ್‌ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗುರುವಾರ (ಡಿ.31) ದಿಢೀರ್‌ ಎಂದು ನಗರ ಪೊಲೀಸ್ ಆಯುಕ್ತರ ಕಛೇರಿ ಆಗಮಿಸಿದ್ದರು. ತಮ್ಮ ವಕೀಲರ ಜೊತೆಗೆ ಆಗಮಿಸಿದ್ದ ಅವರು, ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ತಮ್ಮ ಬಗ್ಗೆ ಅಶ್ಲೀಲವಾಗಿ ಕಾಮೆಂಟ್‌ ಮಾಡಿದವರ ವಿರುದ್ಧ ವಿಜಯಲಕ್ಷ್ಮಿ ದೂರು ನೀಡಿದ್ದರು.

Varanasi : ʻವಾರಣಾಸಿʼ ಟೈಟಲ್‌ ಟೀಸರ್‌ ಬಿಡುಗಡೆ ಕಾರ್ಯಕ್ರಮ ತಯಾರಿ ಹೇಗಿತ್ತು ಗೊತ್ತಾ? BTS ವಿಡಿಯೊ ಔಟ್‌

ʻವಾರಣಾಸಿʼ ಟೈಟಲ್‌ ಟೀಸರ್‌ ಬಿಡುಗಡೆ ಕಾರ್ಯಕ್ರಮ ತಯಾರಿ ಹೇಗಿತ್ತು ಗೊತ್ತಾ?

SS Rajamouli: ಎಸ್.ಎಸ್. ರಾಜಮೌಳಿ ಅವರ ಮುಂಬರುವ ಚಿತ್ರ ವಾರಣಾಸಿಯ ಟೈಟಲ್ ಟೀಸರ್ ಮಹತ್ವ ಮತ್ತೊಮ್ಮೆ ಸಾಬೀತಾಗಿದೆ. ಚಿತ್ರದ ಅದ್ದೂರಿ ಬಿಡುಗಡೆ (Release Programme) ಕಾರ್ಯಕ್ರಮದ ನಿರ್ಮಾಣವನ್ನು ದಾಖಲಿಸುವ ತೆರೆಮರೆಯ ವೀಡಿಯೊವನ್ನು ತಯಾರಕರು ಬಿಡುಗಡೆ ಮಾಡಿದ್ದಾರೆ. ಕಾರ್ಯಕ್ರಮದ ಹಿಂದಿನ 20 ದಿನಗಳ ತಯಾರಿ ಹೇಗಿತ್ತು ಎಂಬುದು ವಿಡಿಯೋದಲ್ಲಿದೆ.

New Year OTT releases 2026:  ಪ್ರೇಕ್ಷಕರಿಗೆ ಬಿಗ್ ಮನರಂಜನೆ; ಈ ವಾರ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಸಿನಿಮಾಗಳಿವು

ಈ ವಾರ ಒಟಿಟಿಯಲ್ಲಿ ನೀವು ನೋಡಲೇಬೇಕಾದ ಸಿನಿಮಾಗಳಿವು

OTT Movies: ಹೊಸ ವರ್ಷಕ್ಕೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತ ಹೊಸ ವರ್ಷದಂದು ಜನ ಭರ್ಜರಿ ಸಂಭ್ರಮಾಚರಣೆ ಮಾಡುತ್ತಾರೆ. ಜೊತೆಗೆ ಹೊಸ ವರ್ಷವು ಸಮೃದ್ಧಿ, ಯಶಸ್ಸು ಮತ್ತು ಸಂತೋಷವನ್ನು ತರಲಿ ಎಂದು ಎಲ್ಲರೂ ತಮ್ಮ ಪ್ರೀತಿ ಪಾತ್ರರಿಗೆ ಶುಭಾಶಯಗಳನ್ನು ತಿಳಿಸಿ ಹರಸುತ್ತಾರೆ. ಹೊಸ ವರ್ಷದ ಮುನ್ನಾದಿನದಂದು ಕೆಲವು ಸಿನಿಮಾಗಳು ಒಟಿಟಿ ಎಂಟ್ರಿ ಕೊಡುತ್ತಿವೆ. ಮನೆಯಲ್ಲೇ ಸಂಭ್ರಮಾಚರಣೆ ಮಾಡುತ್ತ ಈ ಸಿನಿಮಾಗಳನ್ನು ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

Alia Bhatt:  ಇದೊಂದು ಕಾರಣಕ್ಕೆ ಒಟ್ಟಿಗೆ ಹಲವು ಸಿನಿಮಾಗಳನ್ನ ಮಾಡ್ತಾ ಇಲ್ವಂತೆ ಆಲಿಯಾ ಭಟ್‌!

ಇದೊಂದು ಕಾರಣಕ್ಕೆ ಒಟ್ಟಿಗೆ ಹಲವು ಸಿನಿಮಾಗಳನ್ನ ಮಾಡ್ತಾ ಇಲ್ವಂತೆ ಆಲಿಯಾ!

Raha: ಹೆರಿಗೆಯ ನಂತರ ಕೆಲಸಕ್ಕೆ ಮರಳುವುದರಿಂದ ಹಿಡಿದು ಅರ್ಥಪೂರ್ಣ ಪಾತ್ರಗಳನ್ನು ಆಯ್ಕೆ ಮಾಡುವವರೆಗೆ, ಬಾಲಿವುಡ್ ನಟಿಯರು ಮುಂದಿದ್ದಾರೆ. 2022 ರಲ್ಲಿ ತನ್ನ ಮಗಳು ರಾಹಾಳನ್ನು ಸ್ವಾಗತಿಸಿದ ಆಲಿಯಾ ಭಟ್ , ನೀಡಿದ ಇತ್ತೀಚಿನ ಸಂದರ್ಶನದಲ್ಲಿ , ಚಲನಚಿತ್ರಗಳ ಮೇಲಿನ ಪ್ರೀತಿ ಬದಲಾಗದೆ ಇದ್ದರೂ, ತನ್ನ ಕೆಲಸದ ವೇಗವನ್ನು ಹೇಗೆ ನಿಧಾನಗೊಳಿಸಿದ್ದೇನೆ ಎಂಬುದರ ಕುರಿತು ಮಾತನಾಡಿದರು.

Theertharoopa Thandeyavarige Review: ಬದುಕಿನ ಹುಡುಕಾಟದಲ್ಲಿ ಬಹಿರಂಗವಾಗುವ ಅಂತರಂಗದ ಸತ್ಯಗಳು!

'ತೀರ್ಥರೂಪ ತಂದೆಯವರಿಗೆ' ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Theertharoopa Thandeyavarige Movie Review: ತಂದೆಯ ಅಸ್ತಿತ್ವವನ್ನು ಹುಡುಕುವ ಒಬ್ಬ ಟ್ರಾವೆಲ್ ವ್ಲಾಗರ್‌ನ ಭಾವುಕ ಕಥೆಯನ್ನು ಒಳಗೊಂಡ ತೀರ್ಥರೂಪ ತಂದೆಯವರಿಗೆ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಅವರು ಹೇಗಿದೆ? ಯಾವ ರೀತಿಯ ಜಾನರ್‌ನ ಸಿನಿಮಾ ಇದು? ಇಲ್ಲಿದೆ ಸಿನಿಮಾ ವಿಮರ್ಶೆ, ಓದಿ.

Bhuvann Ponnannaa: ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಇದೊಂದು ಕೆಲಸ ಮಾಡೇ ಮಾಡ್ತಾರಂತೆ ಭುವನ್‌ ಪೊನ್ನಣ್ಣ; ಏನದು?

ಹುಟ್ಟುಹಬ್ಬಕ್ಕೆ ತಪ್ಪದೇ ಇದೊಂದು ಕೆಲಸ ಮಾಡೇ ಮಾಡ್ತಾರಂತೆ ಭುವನ್‌!

Bhuvann: ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುವ ಭುವನ್‌ ಪೊನ್ನಣ್ಣ ತಮ್ಮ ಹುಟ್ಟುಹಬ್ಬದಂದು (ಡಿ.30) ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿದ್ದಾರೆ. ಈಗಾಗಲೇ ತಮ್ಮ ಮದುವೆ ಹಾಗೂ ಮಗಳ ವಿಚಾರದಲ್ಲಿ ಭುವನ್‌ ಸಂಸ್ಕೃತಿ ಸಂಪ್ರದಾಯವನ್ನ ಫಾಲೋ ಮಾಡೋ ನಾಯಕ ನಟ ಅಂತ ಪ್ರೂವ್‌ ಮಾಡಿದ್ದಾರೆ. ಹುಟ್ಟುಹಬ್ಬದ ಖುಷಿಯಲ್ಲಿದ್ದ ಭುವನ್‌ ಪ್ರತಿ ತಮ್ಮ ಹುಟ್ಟುಹಬ್ಬಕ್ಕೆ ತಪ್ಪದೇ ಒಂದು ಕೆಲಸವನ್ನ ಮಾಡೇ ಮಾಡ್ತಾರಂತೆ. ಏನದು?

ತಂದೆಯಿಂದಲೇ ʻಫಾದರ್‌ʼ ಚಿತ್ರದ ಥೀಮ್ ವಿಡಿಯೋ ರಿಲೀಸ್‌ ಮಾಡಿಸಿದ ಆರ್‌. ಚಂದ್ರು; ಇದು ಪ್ರಕಾಶ್‌ ರಾಜ್‌ - ʻಡಾರ್ಲಿಂಗ್‌ʼ ಕೃಷ್ಣ ಸಿನಿಮಾ

Father: ತಂದೆಯಿಂದಲೇ 'ಫಾದರ್' ಥೀಮ್ ವಿಡಿಯೋ ರಿಲೀಸ್ ಮಾಡಿಸಿದ ಆರ್. ಚಂದ್ರು

Father Movie: ಅಪ್ಪ-ಮಗನ ಭಾವನಾತ್ಮಕ ಸಂಬಂಧದ ಕಥೆಯನ್ನು ಫಾದರ್‌ ಸಿನಿಮಾ ಹೊಂದಿದ್ದು, ಆರ್. ಚಂದ್ರು ಅವರ ತಂದೆಯವರಿಂದಲೇ ಈ ಚಿತ್ರದ ಥೀಮ್ ವಿಡಿಯೋ ಬಿಡುಗಡೆಗೊಂಡಿದೆ. ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ರಾಜಮೋಹನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

Loading...