ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Ram Charan: ಬರ್ತ್‌ಡೇಗೂ ಮುನ್ನ ಫ್ಯಾನ್ಸ್‌ ಭೇಟಿ ಮಾಡಿದ ರಾಮ್ ಚರಣ್! ಹೇಗಿದ್ದಾರೆ ನಟ?

ಬರ್ತ್‌ಡೇಗೂ ಮುನ್ನ ಫ್ಯಾನ್ಸ್‌ ಭೇಟಿ ಮಾಡಿದ ರಾಮ್ ಚರಣ್! ಹೇಗಿದ್ದಾರೆ ನಟ?

Ramcharan: ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟಿಸಿ, ಬುಚ್ಚಿ ಬಾಬು ಸನಾ ನಿರ್ದೇಶನ ಮಾಡುತ್ತಿರುವ ‘ಪೆದ್ದಿ’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟ ಇತ್ತೀಚೆಗೆ ಗಾಯಗೊಂಡರು. ಗುರುವಾರ ಸೆಟ್‌ಗೆ ಹಿಂತಿರುಗುವ ಮೊದಲು ನಟನಿಗೆ ಸಣ್ಣ ಶಸ್ತ್ರಚಿಕಿತ್ಸೆ ಮಾಡಬೇಕಾಯಿತು. ಇದೀಗ ತಮ್ಮ ಹುಟ್ಟುಹಬ್ಬಕ್ಕೂ ಮುನ್ನ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ. ಮೆಚ್ಚಿನ ನಟನನ್ನು ನೋಡಿ ಫ್ಯಾನ್ಸ್‌ ಖುಷ್‌ ಆಗಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

New OTT Releases: ಈ ತಿಂಗಳ ಕೊನೆ ವಾರ ಯಾವೆಲ್ಲಾ ಚಿತ್ರಗಳು ಒಟಿಟಿಗೆ ಬರ್ತಿವೆ?

ಈ ತಿಂಗಳ ಕೊನೆ ವಾರ ಯಾವೆಲ್ಲಾ ಚಿತ್ರಗಳು ಒಟಿಟಿಗೆ ಬರ್ತಿವೆ?

New OTT Releases: ಈ ವಾರ, ನೆಟ್‌ಫ್ಲಿಕ್ಸ್ , ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಜಿಯೋಹಾಟ್‌ಸ್ಟಾರ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಪ್ರೇಕ್ಷಕರಿಗೆ ಹೊಸ ಹೊಸ ಸಿನಿಮಾಗಳನ್ನು ನೀಡ್ತಾ ಇವೆ. ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳ ಅಭಿಮಾನಿಯಾಗಿರಲಿ, ಭಾವನಾತ್ಮಕ ಪ್ರಯಾಣಗಳಾಗಿರಲಿ ಅಥವಾ ಸಂಗೀತವಾಗಿರಲಿ, ಈ ವಾರ ಸಖತ್‌ ಚಾಯ್ಸ್‌ ಇವೆ. ರಾಣಿ ಮುಖರ್ಜಿಯವರ ಮರ್ದಾನಿ 3 ಕೂಡ ಒಟಿಟಿಗೆ ಬಂದಿದೆ. ಕಳೆದೆರಡು ತಿಂಗಳಲ್ಲಿ ಬಿಡುಗಡೆಯಾಗಿದ್ದ ಸಿನಿಮಾಗಳು ಒಟಿಟಿಗೆ ಬರಲಿವೆ. ಈ ವಾರ ಒಂದಷ್ಟು ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್ ಬಿಡುಗಡೆಗೆ ಆಗ್ತಿವೆ.

Ranveer Singh: ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್ 2' ಸುನಾಮಿ; ಈವರೆಗೂ ಸೃಷ್ಟಿಯಾದ 9 ಅದ್ಭುತ ದಾಖಲೆಗಳು ಇಲ್ಲಿವೆ ನೋಡಿ

Ranveer Singh: ʻಧುರಂಧರ್ 2' ಸೃಷ್ಟಿಸಿದ 9 ಸಾರ್ವತ್ರಿಕ ದಾಖಲೆಗಳು

Dhurandhar 2 Box Office Records: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಬಿಡುಗಡೆಯಾದ ಕೇವಲ ಏಳು ದಿನಗಳಲ್ಲಿ ವಿಶ್ವದಾದ್ಯಂತ 1006.50 ಕೋಟಿ ರೂಪಾಯಿ ಗಳಿಸುವ ಮೂಲಕ ಇತಿಹಾಸ ನಿರ್ಮಿಸಿದೆ. ಈ ಮೂಲಕ ಅತಿ ವೇಗವಾಗಿ ಸಾವಿರ ಕೋಟಿ ಕ್ಲಬ್ ಸೇರಿದ ಭಾರತದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಹಲವು ದಾಖಲೆಗಳನ್ನು ಸೃಷ್ಟಿಸಿದೆ.

Ashitha Maria:`ಸರ್ಸೆ ಸೆರಗ ಸರ್ಸೆ'ಗೆ ನನ್ನನ್ನೇ ತೆಗೊಳ್ಬೋದಿತ್ತು, ಆ ಹಾಡಿನಲ್ಲಿ ಅಂಥ ತಪ್ಪೇನಿತ್ತು? ನಟಿ ಆಶಿತಾ

`ಸರ್ಸೆ ಸೆರಗ ಸರ್ಸೆ'ಗೆ ನನ್ನನ್ನೇ ತೆಗೊಳ್ಬೋದಿತ್ತು: ನಟಿ ಆಶಿತಾ

Sarse Seraga Sarse: ಹಲವು ವರ್ಷಗಳಿಂದ ಆಶಿತಾ ಸಿನಿಮಾಗಳಿಂದ ಸಂಪೂರ್ಣವಾಗಿ ದೂರ ಉಳಿದಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟೀವ್‌ ಆಗಿರುವ ಆಶಿತಾ ಅಭಿಮಾನಿಗಳಿಗೆ ಹೆಚ್ಚು ಕನೆಕ್ಟ್‌ ಆಗಿದ್ದಾರೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ 'ಕೆಡಿ' ಚಿತ್ರದ 'ಸರ್ಸೆ ಸರ್ಸೆ' ಸಾಂಗ್ ವಿವಾದ ಸೃಷ್ಟಿಸಿತ್ತು. ನೋರಾ ಫತೇಹಿ ಕೂಡ ಈ ಬಗ್ಗೆ ಅಸಮಾಧನ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಟಿ ಆಶಿತಾ ಮಾರಿಯಾ ವಿಶ್ವವಾಣಿ ವಿಶೇಷ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸರ್ಸೆ ಸೆರಗ ಸರ್ಸೆ ಹಾಡಿಗೆ ನನ್ನನ್ನೇ ತೆಗೊಳ್ಬೋದಿತ್ತು.‌ ಆ ಹಾಡಿನಲ್ಲಿ ಅಂಥ ತಪ್ಪೇನಿತ್ತು? ಎಂದು ನೇರವಾಗಿ ಮಾತನಾಡಿದ್ದಾರೆ.

‌ʻವಿರೋಶ್‌ʼ ಮದುವೆ ಸಂಭ್ರಮಕ್ಕೆ ಒಂದು ತಿಂಗಳು; ಈ ಖುಷಿಯ ಕ್ಷಣದ ಬಗ್ಗೆ ವಿಜಯ್‌ ದೇವರಕೊಂಡ - ರಶ್ಮಿಕಾ ಹೇಳಿದ್ದೇನು?

'ವಿರೋಶ್' ದಾಂಪತ್ಯಕ್ಕೆ 1 ತಿಂಗಳ ಸಂಭ್ರಮ; ರಶ್ಮಿಕಾ-ವಿಜಯ್ ಹೇಳಿದ್ದೇನು?

Rashmika Mandanna Vijay Deverakonda Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ತಮ್ಮ ವಿವಾಹದ ಒಂದು ತಿಂಗಳ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಈ ಸುಂದರ ಪಯಣಕ್ಕೆ ಕಾರಣರಾದ ಆಪ್ತ ಗೆಳತಿ ಐಶ್ವರ್ಯಾ ಮತ್ತು ವೆಡ್ಡಿಂಗ್ ಪ್ಲಾನರ್ ಪ್ರಿಯಾ ಮಗಂತಿ ಅವರಿಗೆ ಈ ಜೋಡಿ ಧನ್ಯವಾದ ಅರ್ಪಿಸಿದೆ.

Sanjay Dutt: ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’ ಫಸ್ಟ್ ಲುಕ್ ಪೋಸ್ಟರ್ ಔಟ್‌!

ಸಂಜಯ್ ದತ್ ಹೊಸ ಸಿನಿಮಾ ‘ಆಖ್ರಿ ಸವಾಲ್’ ಫಸ್ಟ್ ಲುಕ್ ಪೋಸ್ಟರ್ ಔಟ್‌!

Sanjay Dutt: ಸಂಜಯ್ ದತ್ ಅಭಿನಯದ ‘ಧುರಂಧರ್: ದಿ ರಿವೆಂಜ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದು, ಅದರಲ್ಲಿ ಅವರು ಪಾಕಿಸ್ತಾನಿ ಪೊಲೀಸ್ ಅಧಿಕಾರಿ ಚೌಧರಿ ಅಸ್ಲಂ ಪಾತ್ರದಲ್ಲಿ ಮಿಂಚಿದ್ದಾರೆ. ಈ ಪಾತ್ರಕ್ಕೆ ಮೆಚ್ಚುಗೆ ಕೂಡ ವ್ಯಕ್ತವಾಗಿದೆ. ‘ಧುರಂಧರ್ 2’ ಯಶಸ್ಸಿನ ಬಳಿಕ ಅವರ ಹೊಸ ಸಿನಿಮಾ ‘ಆಖ್ರಿ ಸವಾಲ್ ರಿಲೀಸ್​ಗೆ ಸಜ್ಜಾಗಿದೆ. ಈ ಚಿತ್ರವು ಮೇ 15, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಕರ್ನಾಟಕದಲ್ಲಿ 70 ಕೋಟಿ ರೂ. ದಾಟಿದ ʻಧುರಂಧರ್‌ 2ʼ ಕಲೆಕ್ಷನ್‌; ಏಳೇ ದಿನದಲ್ಲಿ ಪರಭಾಷಾ ಚಿತ್ರಗಳ ದಾಖಲೆಗಳು ಧೂಳೀಪಟ!

ಕರ್ನಾಟಕದಲ್ಲಿ 'ಧುರಂಧರ್ 2' ಅಬ್ಬರ; ಪರಭಾಷಾ ಚಿತ್ರಗಳ ರೆಕಾರ್ಡ್ ಧೂಳೀಪಟ

Dhurandhar 2: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಸಿನಿಮಾ ಕರ್ನಾಟಕದಲ್ಲಿ ಕೇವಲ ಏಳು ದಿನಗಳಲ್ಲಿ 73 ಕೋಟಿ ರೂಪಾಯಿ ಗಳಿಸಿ ಐತಿಹಾಸಿಕ ದಾಖಲೆ ಬರೆದಿದೆ. ಬೆಂಗಳೂರಿನಲ್ಲಿ ಸಿಕ್ಕಾಪಟ್ಟೆ ಶೋಗಳು ಮತ್ತು ಆರಂಭಿಕ ದಿನಗಳ ದುಬಾರಿ ಟಿಕೆಟ್ ದರ ಈ ಬೃಹತ್ ಗಳಿಕೆಗೆ ಕಾರಣವಾಗಿದೆ ಎನ್ನಬಹುದು.

ʻಆಪರೇಷನ್ ಸಿಂಧೂರ್‌ʼ ಕುರಿತ ಸಿನಿಮಾ ಮಾಡಲಿದ್ದಾರೆ ʻಕಾಶ್ಮೀರ್‌ ಫೈಲ್ಸ್‌ʼ ವಿವೇಕ್‌ ಅಗ್ನಿಹೋತ್ರಿ; ಅದ್ರೆ, ಡೈರೆಕ್ಟರ್‌ ಬಗ್ಗೆ ನೆಟ್ಟಿಗರಿಗೆ ಬೇಸರವೇಕೆ?

ವಿವೇಕ್ ಅಗ್ನಿಹೋತ್ರಿ ಕೈಸೇರಿದ 'ಆಪರೇಷನ್ ಸಿಂಧೂರ್' ಸಿನಿಮಾ!

Operation Sindoor Movie: ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ 'ಆಪರೇಷನ್ ಸಿಂಧೂರ್' ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. 2025ರಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ಪಾಕಿಸ್ತಾನದೊಳಗೆ ನುಗ್ಗಿ ನಡೆಸಿದ ಗುಪ್ತ ಕಾರ್ಯಾಚರಣೆಯ ಕಥೆ ಇದಾಗಿದೆ. ಈ ಚಿತ್ರಕ್ಕೆ ಭೂಷಣ್ ಕುಮಾರ್ ನಿರ್ಮಾಪಕರು.

‌ʻಫಸ್ಟ್ ನೈಟ್ ವಿತ್ ದೆವ್ವʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ ಮಾಡಿದ ‌ʻಬಿಗ್‌ ಬಾಸ್‌ʼ ಪ್ರಥಮ್‌

ಪ್ರಥಮ್‌ ನಟನೆಯ 'ಫಸ್ಟ್ ನೈಟ್ ವಿತ್ ದೆವ್ವ' ರಿಲೀಸ್ ಡೇಟ್ ಫಿಕ್ಸ್

First Night With Devva: ಬಿಗ್ ಬಾಸ್ ವಿಜೇತ ಪ್ರಥಮ್ ನಾಯಕನಾಗಿ ನಟಿಸಿರುವ 'ಫಸ್ಟ್ ನೈಟ್ ವಿತ್ ದೆವ್ವ' ಸಿನಿಮಾ ಏಪ್ರಿಲ್ 3ರಂದು ತೆರೆಕಾಣಲಿದೆ. ಮದುವೆಯಾದ ಕೂಡಲೇ ಪತ್ನಿ ದೆವ್ವ ಎಂದು ತಿಳಿದ ನಾಯಕನ ಫಸ್ಟ್ ನೈಟ್ ನಡೆಯುತ್ತದೆಯೇ ಇಲ್ಲವೇ ಎಂಬ ಕಥಾಹಂದರವನ್ನು ಈ ಚಿತ್ರ ಹೊಂದಿದೆಯಂತೆ.

Jogi Prem: ‌'ಕೆಡಿ' ಅಖಾಡಕ್ಕೆ ಕಾಲಭೈರವನಾಗಿ ಎಂಟ್ರಿ ಕೊಟ್ಟ ಸುದೀಪ್; ಧ್ರುವ ಸರ್ಜಾ ಚಿತ್ರದ ಪವರ್ ಹೆಚ್ಚಿಸಿದ ʻಕಿಚ್ಚʼ

Jogi Prem: ʻಕೆಡಿʼ ಚಿತ್ರಕ್ಕೆ ಕಾಲಭೈರವನಾಗಿ ಸುದೀಪ್ ಎಂಟ್ರಿ!

Kiccha Sudeep As Kaala Bhairava: ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಸಿನಿಮಾದಲ್ಲಿ ನಟ ಕಿಚ್ಚ ಸುದೀಪ್ ಅವರು 'ಕಾಲಭೈರವ' ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡವು ಇಂದು ಸುದೀಪ್ ಅವರ ಪಾತ್ರವನ್ನು ಅಧಿಕೃತವಾಗಿ ಪರಿಚಯಿಸಿದ್ದು, ಈ ಪಾತ್ರ ಸಮಾಜದಲ್ಲಿ 'Chaos' ಸೃಷ್ಟಿಸುತ್ತದೆ ಎಂದು ಚಿತ್ರತಂಡವು ಬಣ್ಣಿಸಿದೆ.

ಟೀಸರ್‌ನಿಂದಲೇ ಸದ್ದು ಮಾಡಿರುವ ʻಬಾಸ್ʼ ಚಿತ್ರದ ಮೊದಲ ಹಾಡು ರಿಲೀಸ್‌; ಈ ಸಿನಿಮಾ ರಿಲೀಸ್‌ ಆಗೋದ್ಯಾ‌ವಾಗ?

ವಿವಾದದ ನಡುವೆಯು ಹೊಸ ಹಾಡನ್ನು ರಿಲೀಸ್‌ ಮಾಡಿದ ʻಬಾಸ್‌ʼ ಸಿನಿಮಾ ಟೀಮ್!‌

Boss Movie Release Date: ತನುಷ್ ಶಿವಣ್ಣ ನಟನೆಯ 'ಬಾಸ್' ಸಿನಿಮಾ ತೆರೆಕಾಣಲು ಸಿದ್ಧವಾಗಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆಯನ್ನು ಹೋಲುತ್ತದೆ ಎಂಬ ವಿವಾದದಿಂದಾಗಿ ದರ್ಶನ್ ಪರ ವಕೀಲರು ನೋಟಿಸ್ ನೀಡಿದ್ದರೂ, ಚಿತ್ರವು ಸದ್ಯ ಸೆನ್ಸಾರ್ ಮಂಡಳಿಯಿಂದ 'ಯು/ಎ' ಪ್ರಮಾಣಪತ್ರ ಪಡೆದುಕೊಂಡಿದೆ. ಇತ್ತೀಚೆಗೆ ಮೊದಲ ಹಾಡು ಕೂಡ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ʻಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಗ್ಯಾರಂಟಿʼ; ʻಧುರಂಧರ್‌ 2ʼ ಡೈರೆಕ್ಟರ್‌ ಆದಿತ್ಯ ಧರ್‌ ಇದ್ದಕ್ಕಿದ್ದಂತೆಯೇ ಗರಂ ಆಗಿದ್ದೇಕೆ?

'ಧುರಂಧರ್ 2' ಚಿತ್ರಕ್ಕೆ AI ಕಾಟ; ಕಿಡಿಗೇಡಿಗಳ ವಿರುದ್ಧ ಆದಿತ್ಯ ಧರ್ ಗರಂ!

Dhurandhar 2 AI Controversy: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರದ ಅಧಿಕೃತ ದೃಶ್ಯಗಳನ್ನು ಎಐ ಬಳಸಿ ತಿರುಚಲಾಗುತ್ತಿದೆ ಎಂದು ನಿರ್ದೇಶಕ ಆದಿತ್ಯ ಧರ್ ಕಿಡಿಕಾರಿದ್ದಾರೆ. ವಿಶೇಷವಾಗಿ ರಣವೀರ್ ಸಿಂಗ್ ಪೇಟ ಧರಿಸಿ ಧೂಮಪಾನ ಮಾಡುತ್ತಿರುವಂತೆ ಸೃಷ್ಟಿಸಲಾದ ನಕಲಿ ಚಿತ್ರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Varanasi Set Pics Unveiled: ʻವಾರಣಾಸಿʼ ಸೆಟ್ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ! ರಾಜಮೌಳಿ ಸಿನಿಮಾ ಫೋಟೊ ಲೀಕ್

ʻವಾರಣಾಸಿʼ ಸೆಟ್ ನೋಡಿದ್ರೆ ಫಿದಾ ಆಗೋದು ಗ್ಯಾರಂಟಿ! ಫೋಟೊ ಲೀಕ್

SS Rajamouli: ಚಲನಚಿತ್ರ ನಿರ್ಮಾಪಕ ಎಸ್.ಎಸ್. ರಾಜಮೌಳಿ ಅವರ ಮುಂದಿನ ದೊಡ್ಡ ಪ್ರಾಜೆಕ್ಟ್‌ ಅಂದರೆ ಅದುವೇ 'ವಾರಣಾಸಿ'. ಇದೀಗ ಸಿನಿಮಾದ ಸೆಟ್‌ಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಟಾಪ್ ಟ್ರೆಂಡ್‌ಗಳನ್ನು ಗಳಿಸಿದೆ. ಚಿತ್ರದ ಟೀಸರ್ ಬಿಡುಗಡೆಗೂ ಮುನ್ನ, ಚಿತ್ರದ ಪ್ರಮುಖ ತಾರೆಯರಾದ ಮಹೇಶ್ ಬಾಬು , ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಭಾಗವಹಿಸಿದ್ದ ಅದ್ದೂರಿ ಅನಾವರಣ ಕಾರ್ಯಕ್ರಮಕ್ಕಾಗಿ ಹಲವಾರು ಅಂತರರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳನ್ನು ಭಾರತಕ್ಕೆ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.

ʻಅಮೃತಧಾರೆ ಸೀರಿಯಲ್‌ ಮಾಡುವಾಗಲೇ ನಾವು  ಪ್ರೀತಿಸ್ತಿದ್ವಿʼ; ರಾಣವ್‌ ಜೊತೆಗಿನ ಲವ್‌ ಸ್ಟೋರಿ ಬಿಚ್ಚಿಟ್ಟ ನಟಿ ರಾಧಾ ಭಗವತಿ

ಅಮೃತಧಾರೆ ಸೆಟ್‌ನಲ್ಲಿ ಶುರುವಾಯ್ತು ಪ್ರೀತಿ; ಇದು ರಾಧಾ ಭಗವತಿ ಲವ್ ಸ್ಟೋರಿ

Radha Bhagavati Raanav Love Story: 'ಅಮೃತಧಾರೆ' ಧಾರಾವಾಹಿಯ ಜೈದೇವ್-ಮಲ್ಲಿ ಪಾತ್ರಧಾರಿಗಳಾದ ರಾಣವ್ ಮತ್ತು ರಾಧಾ ಭಗವತಿ ನಿಜ ಜೀವನದಲ್ಲಿ ಒಂದಾಗುತ್ತಿದ್ದಾರೆ. ತಮ್ಮ ಲವ್‌ ಸ್ಟೋರಿ ಬಗ್ಗೆ ʻವಿಶ್ವವಾಣಿʼ ಟಿವಿಗೆ ನೀಡಿದ ಸಂದರ್ಶನದಲ್ಲಿ ರಾಧಾ ಭಗವತಿ ಮನಬಿಚ್ಚಿ ಮಾತನಾಡಿದ್ದಾರೆ.

ʻದೇಶಭಕ್ತಿಗಾಗಿ ಒಬ್ಬ ಸೈನಿಕ ಪಡುವ ಶ್ರಮವೇ ಈ ಸಿನಿಮಾದ ಆತ್ಮʼ; ʻಧುರಂಧರ್‌ 2ʼ ಚಿತ್ರವನ್ನು ಹಾಡಿಹೊಗಳಿದ ಶಿವರಾಜ್‌ಕುಮಾರ್‌

'ಧುರಂಧರ್ 2'ಗೆ ಶಿವಣ್ಣ ಫಿದಾ; ರಣವೀರ್ ನಟನೆಗೆ ಸೆಂಚುರಿ ಸ್ಟಾರ್ ಮೆಚ್ಚುಗೆ

Dhurandhar 2: ರಣವೀರ್ ಸಿಂಗ್ ನಟನೆಯ 'ಧುರಂಧರ್ 2' ಚಿತ್ರವನ್ನು ನಟ ಶಿವರಾಜ್‌ಕುಮಾರ್ ನೋಡಿದ್ದು, ದೇಶಭಕ್ತಿಗಾಗಿ ಸೈನಿಕ ಪಡುವ ಶ್ರಮವೇ ಈ ಸಿನಿಮಾದ ಆತ್ಮ ಎಂದು ಹೊಗಳಿದ್ದಾರೆ. ಚಿತ್ರದ ಸಂಗೀತ ಮತ್ತು ಆದಿತ್ಯ ಧರ್ ಅವರ ನಿರ್ದೇಶನಕ್ಕೆ ಶಿವಣ್ಣ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʻಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಬಾವತೀಶ್ ರಸ್ತೆ ಅಪಘಾತಕ್ಕೆ ಬಲಿ; ನಿಂತಿದ್ದ ಬಸ್ಸಿಗೆ ಗುದ್ದಿದ ಬೈಕ್!‌

ರಸ್ತೆ ಅಪಘಾತಕ್ಕೆ ಬಲಿಯಾದ ‘ಹಳ್ಳಿ ಹೈದ ಪ್ಯಾಟೆಗೆ ಬಂದ’ ಖ್ಯಾತಿಯ ಬಾವತೀಶ್

'ಹಳ್ಳಿ ಹೈದ ಪ್ಯಾಟೆಗೆ ಬಂದ' ಸೀಸನ್ 3ರ ಖ್ಯಾತ ಸ್ಪರ್ಧಿ ಬಾವತೀಶ್ (28) ಮಂಗಳವಾರ ಮಧ್ಯಾಹ್ನ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕೋಳಿಕೆರೆ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರಸ್ತೆ ಬದಿ ನಿಂತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಬೈಕ್ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲೇ ಬಾವತೀಶ್ ಕೊನೆಯುಸಿರೆಳೆದಿದ್ದಾರೆ.

ರಾಮನವಮಿಯ ಪ್ರಯುಕ್ತ ರಾಮಭಕ್ತನ ಕುರಿತ ʻಮಹರ್ಷಿ ವಾಲ್ಮಿಕಿʼ ಕಿರುಚಿತ್ರ ರಿಲೀಸ್‌

ಬೇಡನಿಂದ ಮಹರ್ಷಿಯಾದ ಕಥೆ; ʻವಾಲ್ಮಿಕಿʼ ಕಿರುಚಿತ್ರ ಬಿಡುಗಡೆ

Maharshi Valmiki Short Film: ರಾಮನವಮಿಯ ಪ್ರಯುಕ್ತ ನಿರ್ದೇಶಕ ಪ್ರವೀಣ್ ಶಿವಣ್ಣ ಅವರು "ಮಹರ್ಷಿ ವಾಲ್ಮೀಕಿ" ಎಂಬ 21 ನಿಮಿಷಗಳ ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ರತ್ನ ದಾಸ್ ನಿರ್ಮಾಣದ ಈ ಚಿತ್ರವು ಬೇಡ ರತ್ನಾಕರ ಮಹರ್ಷಿ ವಾಲ್ಮೀಕಿಯಾಗಿ ಬದಲಾದ ಮತ್ತು ರಾಮಾಯಣ ರಚಿಸಿದ ಸ್ಫೂರ್ತಿದಾಯಕ ಕಥೆಯನ್ನು ಒಳಗೊಂಡಿದೆ.

ʻಪೆದ್ದಿʼ ಸಿನಿಮಾ ಶೂಟಿಂಗ್‌ ವೇಳೆ ರಾಮ್‌ ಚರಣ್‌ ಪೆಟ್ಟು;  4 ಹೊಲಿಗೆ ಹಾಕಿಸಿಕೊಂಡು ಪುನಃ ಸೆಟ್‌ಗೆ ಮರಳಿದ ನಟ!

'ಪೆದ್ದಿ' ಶೂಟಿಂಗ್ ವೇಳೆ ರಾಮ್ ಚರಣ್‌ಗೆ ಗಾಯ; ಪೆಟ್ಟಾದರೂ ವಿಶ್ರಾಂತಿ ಇಲ್ಲ!

Ram Charan Injury: ಹೈದರಾಬಾದ್‌ನಲ್ಲಿ 'ಪೆದ್ದಿ' ಸಿನಿಮಾದ ಆಕ್ಷನ್ ದೃಶ್ಯವೊಂದರ ಚಿತ್ರೀಕರಣದ ವೇಳೆ ನಟ ರಾಮ್ ಚರಣ್ ಅವರ ಕಣ್ಣಿನ ಹುಬ್ಬಿನ ಬಳಿ ಗಾಯವಾಗಿದೆ. ಕೂಡಲೇ ಅವರಿಗೆ 4 ಹೊಲಿಗೆಗಳನ್ನು ಹಾಕಲಾಗಿದ್ದು, ಚಿಕಿತ್ಸೆ ಪಡೆದ ಕೆಲವೇ ಗಂಟೆಗಳಲ್ಲಿ ಅವರು ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದಾರೆ.

ʻಆತ ಲೈಂಗಿಕ ದೌರ್ಜನ್ಯ ಎಸಗಿದರೂ ಕುಟುಂಬದವರು ನನ್ನ ಸಹಾಯಕ್ಕೆ ಬರಲಿಲ್ಲʼ; ಡೈರೆಕ್ಟರ್‌ ಮೇಲೆ ʻಕುಂಭಮೇಳ ಗರ್ಲ್ʼ ಮೊನಾಲಿಸಾ ಆರೋಪ!

ನಿರ್ದೇಶಕನಿಂದ ಲೈಂಗಿಕ ದೌರ್ಜನ್ಯ; ಅಳುತ್ತಲೇ ಸತ್ಯ ಬಿಚ್ಚಿಟ್ಟ ಮೊನಾಲಿಸಾ!

Monalisa Bhonsle Allegations: 'ಕುಂಭಮೇಳ ಗರ್ಲ್' ಖ್ಯಾತಿಯ ಮೊನಾಲಿಸಾ ಭೋಂಸ್ಲೆ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ತಾವು ಅಪ್ರಾಪ್ತೆಯಾಗಿದ್ದಾಗ ನಿರ್ದೇಶಕರು ಹತ್ತಕ್ಕೂ ಹೆಚ್ಚು ಬಾರಿ ಅನುಚಿತವಾಗಿ ಸ್ಪರ್ಶಿಸಿದ್ದರು ಎಂದು ಅವರು ಕೊಚ್ಚಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟಿದ್ದಾರೆ.

6‌ ದಿನಗಳಿಗೆ 900 ಕೋಟಿ ರೂ. ದಾಟಿದ ʻಧುರಂಧರ್‌ 2ʼ ಸಿನಿಮಾ ಕಲೆಕ್ಷನ್;‌ ʻಬಾಹುಬಲಿʼ ದಾಖಲೆ ಮುರಿಯಲು ರಣವೀರ್‌ ಸಿಂಗ್‌ ರೆಡಿ!

ʻಧುರಂಧರ್ 2ʼ ಸುನಾಮಿ: 6 ದಿನಕ್ಕೆ 900 ಕೋಟಿ ರೂ. ಬಾಚಿಕೊಂಡ ರಣವೀರ್‌ ಸಿಂಗ್

ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೆಂಜ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಬಿಡುಗಡೆಯಾದ ಕೇವಲ 6 ದಿನಗಳಲ್ಲಿ ವಿಶ್ವದಾದ್ಯಂತ 919 ಕೋಟಿ ರೂಪಾಯಿ ಗಳಿಸುವ ಮೂಲಕ ಸಾವಿರ ಕೋಟಿ ಕ್ಲಬ್ ಸೇರಲು ಸಜ್ಜಾಗಿದೆ.

Love Mocktail 3: ಕಥೆ ಕದ್ದ ಆರೋಪಕ್ಕೆ ಖಡಕ್‌ ತಿರುಗೇಟು ನೀಡಿದ ನಟ ʻಡಾರ್ಲಿಂಗ್‌ʼ ಕೃಷ್ಣ - ಮಿಲನಾ ನಾಗರಾಜ್

Love Mocktail 3: ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಗರಂ; ಏನಂದ್ರು?

'ಲವ್ ಮಾಕ್ಟೇಲ್ 3' ಚಿತ್ರದ ಕಥೆ ಕೃತಿಚೌರ್ಯ ಎಂಬ ನಿರ್ದೇಶಕ ರಾಘವೇಂದ್ರ ನಾಯ್ಕ್ ಅವರ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಪ್ರತಿಕ್ರಿಯಿಸಿದ್ದಾರೆ. ತಮಗೆ ಸ್ವಂತವಾಗಿ ಬರೆಯುವ ಸಾಮರ್ಥ್ಯವಿದ್ದು, ಬೇರೆಯವರ ಕಥೆ ಕದ್ದು ಸಿನಿಮಾ ಮಾಡುವ ಸ್ಥಿತಿ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೃಷ್ಣ.

Badshah : ಎರಡನೇ ಮದುವೆಯಾದ ರ‍್ಯಾಪರ್ ಬಾದ್‌ಶಾ; ಯಾರು ಆ ನಟಿ?

ಎರಡನೇ ಮದುವೆಯಾದ ರ‍್ಯಾಪರ್ ಬಾದ್‌ಶಾ; ಯಾರು ಆ ನಟಿ?

Badshah : ರ‍್ಯಾಪರ್-ಗಾಯಕ ಬಾದ್‌ಶಾ ಮತ್ತು ಪಂಜಾಬಿ ನಟಿ ಇಶಾ ರಿಖಿ ಅವರ ವಿವಾಹದ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದು, ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿವೆ. ರ‍್ಯಾಪರ್ ಬಾದ್‌ಶಾ ಎರಡನೇ ಬಾರಿಗೆ ರಹಸ್ಯವಾಗಿ ವಿವಾಹವಾಗಿದ್ದಾರೆ. ಅವರ ವಿವಾಹದ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಆರು ವರ್ಷಗಳ ಹಿಂದೆ, ಬಾದ್‌ಶಾ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡಿದರು. ಇದರ ನಂತರ, ಇಶಾ ರಿಖಿಯೊಂದಿಗಿನ ಅವರ ಸಂಬಂಧದ ಸುದ್ದಿ ಹೊರಬಿತ್ತು, ಮತ್ತು ಈಗ ವಧುವಿನ ತಾಯಿ ಪೂನಮ್ ರಿಖಿ ಅವರ ವಿವಾಹದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ರಶ್ಮಿಕಾ - ವಿಜಯ್ ದೇವರಕೊಂಡ ಮದುವೆ ಪ್ಲ್ಯಾನಿಂಗ್‌ ಹೇಗಿತ್ತು? ತಯಾರಿಗಳು ಹೇಗಿದ್ದವು? ಮನಬಿಚ್ಚಿ ಮಾತಾಡಿದ ವೆಡ್ಡಿಂಗ್ ಪ್ಲಾನರ್!

ವಿರೋಶ್ ವೆಡ್ಡಿಂಗ್ ಸೀಕ್ರೆಟ್ಸ್ ಔಟ್: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ಲಾನರ್

Rashmika Vijay Wedding: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹದ ಸುಂದರ ಕ್ಷಣಗಳನ್ನು ವೆಡ್ಡಿಂಗ್ ಪ್ಲಾನರ್ ಪ್ರಿಯಾ ಮಗಂತಿ ವಿವರಿಸಿದ್ದಾರೆ. ಇದು ಕೇವಲ ಸೆಲೆಬ್ರಿಟಿ ವಿವಾಹವಾಗಿರದೆ, ಅತ್ಯಂತ ಭಾವನಾತ್ಮಕ ಮತ್ತು ಆಪ್ತ ಸಮಾರಂಭವಾಗಿತ್ತು ಎಂದು ಅವರು ಹೇಳಿದ್ದಾರೆ.

ʻಆಹನʼ‌ ಮ್ಯೂಸಿಕ್ ಆಲ್ಬಂ ರಿಲೀಸ್‌ ಮಾಡಿದ ‘ಸರಿಗಮಪʼ ಖ್ಯಾತಿಯ ರಜತ್‌ ಹೆಗಡೆ; ಹಾಡಿನಲ್ಲಿ ಮಿಂಚಿದ ನಟ ರೋಶಿನಿ ಪ್ರಕಾಶ್‌

'ಆಹನ' ಆಲ್ಬಂ ಮೂಲಕ ಹೊಸ ಪಯಣ ಆರಂಭಿಸಿದ ಗಾಯಕ ರಜತ್ ಹೆಗಡೆ; ರೋಶಿನಿ ಸಾಥ್!

'ಸರಿಗಮಪ' ಖ್ಯಾತಿಯ ಪ್ರತಿಭಾವಂತ ಗಾಯಕ ರಜತ್ ಹೆಗಡೆ ಇದೀಗ 'ಆಹನ' ಎಂಬ ಸ್ವತಂತ್ರ ಆಲ್ಬಂ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ವೈಷ್ಣವಿ ಫಿಲಂಸ್ ನಿರ್ಮಾಣದ ಈ ಆಲ್ಬಂಗೆ ರಜತ್ ಅವರೇ ಸಂಗೀತ ನೀಡಿ, ನಟನೆಯನ್ನೂ ಮಾಡಿದ್ದಾರೆ. 'ಸೂರ್ಯನ ಮೊದಲ ಕಿರಣ' ಎಂಬ ಅರ್ಥವಿರುವ ಈ ಹಾಡು ಕಲಾವಿದ ಮತ್ತು ಸಂಗೀತದ ನಡುವಿನ ಭಾವನಾತ್ಮಕ ಸಂಬಂಧವನ್ನು ಸಾರುತ್ತದೆ.

Loading...