ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Ramayana Movie: 15 ವರ್ಷದ ಒಳಗಿನ ಮಕ್ಕಳು  ‘ರಾಮಾಯಣ’ ಸಿನಿಮಾ ನೋಡದಂತೆ ಶಿಫಾರಸ್ಸು! ಕಾರಣ ಇದು

15 ವರ್ಷದ ಒಳಗಿನ ಮಕ್ಕಳು ‘ರಾಮಾಯಣ’ ಸಿನಿಮಾ ನೋಡದಂತೆ ಶಿಫಾರಸ್ಸು!

Ramayana Movie: ಆಸ್ಟ್ರೇಲಿಯಾದ ಸೆನ್ಸಾರ್ ಮಂಡಳಿಯ ವೆಬ್‌ಸೈಟ್ ನೀಡಿರುವ ಮಾಹಿತಿ ಪ್ರಕಾರ, ಈ ಚಿತ್ರದಲ್ಲಿ ಮಧ್ಯಮ ಪ್ರಮಾಣದ ಹಿಂಸಾಚಾರ ಇರುವುದರಿಂದ ಇದಕ್ಕೆ ‘M’ ರೇಟಿಂಗ್ ನೀಡಲಾಗಿದೆ. ಆಸ್ಟ್ರೇಲಿಯಾದ ನಿಯಮಗಳ ಪ್ರಕಾರ, ‘M’ ರೇಟಿಂಗ್ (M Rating) ಹೊಂದಿರುವ ಸಿನಿಮಾಗಳನ್ನು 15 ವರ್ಷದೊಳಗಿನ ಮಕ್ಕಳು ವೀಕ್ಷಿಸುವುದನ್ನು ಶಿಫಾರಸು ಮಾಡುವುದಿಲ್ಲ. ‘ರಾಮಾಯಣ’ ಚಿತ್ರದ 34 ನಿಮಿಷಗಳ ವಿಶೇಷ ವಿಡಿಯೋ ಪ್ಯಾಕೇಜ್ ಪರಿಶೀಲಿಸಿದ್ದು, ಅದಕ್ಕೆ ‘ಮೆಚ್ಯೂರ್’ ರೇಟಿಂಗ್ ‘ಆಸ್ಟ್ರೇಲಿಯಾ ಕ್ಲಾಸಿಫಿಕೇಷನ್ ಬೋರ್ಡ್’ ಕೊಟ್ಟಿದೆ .

ʻಭೂರಮೆʼ ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದ ʻಬಘೀರʼ ಖ್ಯಾತಿಯ ಎ. ಜೆ. ಶೆಟ್ಟಿ; ಸಾಥ್‌ ನೀಡಿದ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಿರ್ದೇಶಕರು! ‌

ʻಭೂರಮೆʼ ವಿಡಿಯೋ ಸಾಂಗ್‌ ರಿಲೀಸ್‌ ಮಾಡಿದ ಕನ್ನಡದ ಸ್ಟಾರ್‌ ನಿರ್ದೇಶಕರು

'ಕಬ್ಜ' ಹಾಗೂ 'ಬಘೀರ' ಚಿತ್ರಗಳ ಪ್ರಸಿದ್ಧ ಛಾಯಾಗ್ರಾಹಕ ಎ. ಜೆ. ಶೆಟ್ಟಿ ನಿರ್ದೇಶಿಸಿರುವ ಚೊಚ್ಚಲ ಆಲ್ಬಂ ಸಾಂಗ್ 'ಭೂರಮೆ' ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸ್ಟಾರ್ ನಿರ್ದೇಶಕರುಗಳಾದ ಎ. ಪಿ. ಅರ್ಜುನ್, ಚೇತನ್ ಕುಮಾರ್ ಮತ್ತು ಪವನ್ ಒಡೆಯರ್ ಹೊಸಬರ ಈ ಪ್ರಯತ್ನಕ್ಕೆ ಸಾಥ್ ನೀಡಿದ್ದಾರೆ.

ಒಂದೇ ರಾತ್ರಿಗೆ ತಮಿಳು ಸಿನಿಮಾಗಳ ಲೆಕ್ಕಾಚಾರ ಬದಲಿಸಿದ ʻಜನ ನಾಯಗನ್‌ʼ; ಸಿಎಂ ʻದಳಪತಿʼ ವಿಜಯ್‌ ಅಬ್ಬರಕ್ಕೆ ಸೈಡ್‌ಗೆ ಹೋದ ಚಿತ್ರಗಳಿವು!

CM Vijay: ʻಜನ ನಾಯಗನ್‌ʼ ಆರ್ಭಟಕ್ಕೆ ಹೆದರಿದ ಕಾಲಿವುಡ್‌ ಸಿನಿಮಾಗಳು!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ವೃತ್ತಿಬದುಕಿನ ಕೊನೆಯ ಸಿನಿಮಾ ‘ಜನ ನಾಯಗನ್’ ಜುಲೈ 23 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಅಧಿಕೃತ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಸಾಲು ಸಾಲು ಚಿತ್ರಗಳು ತಮ್ಮ ಬಿಡುಗಡೆಯನ್ನು ಮುಂದೂಡಿಕೊಂಡಿದ್ದು, ಚಿತ್ರರಂಗದ ಕ್ಯಾಲೆಂಡರ್ ಸಂಪೂರ್ಣ ಬದಲಾಗಿದೆ.

Daali Dhananjaya: ಇದೇ ನನ್ನ ಕೊನೇ ಸಿನಿಮಾ ಆಗಬಹುದು! ಡಾಲಿ ಧನಂಜಯ್‌ ಬೇಸರ

ಇದೇ ನನ್ನ ಕೊನೇ ಸಿನಿಮಾ ಆಗಬಹುದು! ಡಾಲಿ ಧನಂಜಯ್‌ ಬೇಸರ

Daali Dhananjaya: ‘ಮದರ್ ಪ್ರಾಮಿಸ್’ ಸಿನಿಮಾ ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈಗಾಗಲೇ ಸಿನಿಮಾ ನೋಡಿರುವವರು ಇದೊಂದು ಒಳ್ಳೆಯ ಸದಭಿರುಚಿಯ ಹಾಸ್ಯ ಪ್ರಧಾನ ಸಿನಿಮಾ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಇವುಗಳ ಜೊತೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ನೆಗೆಟಿವ್ ಅಭಿಪ್ರಾಯ ಬಿತ್ತುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಥಿಯೇಟರ್‌ ಖಾಲಿ, ಜನರೇ ಇಲ್ಲ, ಕೆಟ್ಟ ಸಿನಿಮಾ ಎಂದೆಲ್ಲಾ ಕಮೆಂಟ್‌ ಹಾಕುವವರ ಬಗ್ಗೆ ನಟ ಡಾಲಿ ಧನಂಜಯ ಬೇಸರ ವ್ಯಕ್ತಪಡಿಸಿದ್ದಾರೆ.

ಮಗನಿಗೆ 'ರಾಮ್ ಖಾನ್' ಎಂದು ಹೆಸರಿಡಲು ಬಯಸಿದ್ದ ಸಲ್ಮಾನ್‌ ಖಾನ್‌ ಸಹೋದರ ಸೋಹೈಲ್!‌ ಆದರೆ, ಕೊನೇ ಕ್ಷಣದಲ್ಲಿ ಹೆಸರು ಬದಲಾಗಿದ್ದೇಕೆ?

ಮಗನಿಗೆ 'ರಾಮ್ ಖಾನ್' ಎಂದು ಹೆಸರಿಡಲು ಬಯಸಿದ್ದ ಸಲ್ಮಾನ್‌ ಸಹೋದರ ಸೋಹೈಲ್!

ಬಾಲಿವುಡ್ ನಟ ಸೋಹೈಲ್ ಖಾನ್ ತಮ್ಮ ಹಿರಿಯ ಮಗನಿಗೆ 'ರಾಮ್ ಖಾನ್' ಎಂದು ಹೆಸರಿಡಲು ಬಯಸಿದ್ದ ಕಥೆಯನ್ನು ರಿಯಾಲಿಟಿ ಶೋನಲ್ಲಿ ಬಿಚ್ಚಿಟ್ಟಿದ್ದಾರೆ. ಮಾಜಿ ಪತ್ನಿ ಸೀಮಾ ಸಜ್ದೇಹ್ ಗರ್ಭಿಣಿಯಾಗಿದ್ದಾಗ ಮಾಡಿಕೊಂಡಿದ್ದ ಒಪ್ಪಂದದಂತೆ ಗಂಡು ಮಗುವಿಗೆ ಈ ಹೆಸರಿಡಲು ಪ್ಲಾನ್ ಮಾಡಲಾಗಿತ್ತು. ಆದರೆ ಹೆರಿಗೆಯ ನಂತರ ಆಗಿದ್ದೇ ಬೇರೆ!

Addinath Urmila divorce: 'ರಾಮಾಯಣ' ಸಿನಿಮಾ ಖ್ಯಾತಿಯ ನಟನ ಬಾಳಲ್ಲಿ ಬಿರುಗಾಳಿ; 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಜೋಡಿ

'ರಾಮಾಯಣ' ಸಿನಿಮಾ ಖ್ಯಾತಿಯ ನಟನ ಬಾಳಲ್ಲಿ ಬಿರುಗಾಳಿ !

Addinath Kothare: ಆದಿನಾಥ್ ಮತ್ತು ಊರ್ಮಿಳಾ ವಿಚ್ಛೇದನದ ಸುದ್ದಿ ತಿಳಿದಾಗ ಅನೇಕರು ಆಘಾತಕ್ಕೊಳಗಾದರು. ಕಳೆದ ಕೆಲವು ದಿನಗಳಿಂದ, ದಂಪತಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದಿನಾಥ್ ಅವರ ಯಾವುದೇ ಚಿತ್ರಗಳ ಪ್ರಚಾರದಲ್ಲಿ ಕಾಣಿಸಿಕೊಳ್ಳಲು ಊರ್ಮಿಳಾ ಬರುತ್ತಿರಲಿಲ್ಲ. ಆದಿನಾಥ್ ಕೊಠಾರೆ ಅವರಂತೆಯೇ ಊರ್ಮಿಳಾ ಕಾನಿಟ್ಕರ್ ಕೂಡ ಮರಾಠಿ ಚಿತ್ರರಂಗದ ಖ್ಯಾತ ಹೆಸರು. ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಛಾಪು ಮೂಡಿಸಿದ್ದಾರೆ.

ಭರ್ಜರಿ ಫಸ್ಟ್‌ ಲುಕ್‌ ಜೊತೆಗೆ ರಿಲೀಸ್‌ ಡೇಟ್‌ ಘೋಷಿಸಿದ ʻಫೌಜಿʼ ಟೀಮ್‌ʼ; ʻಡಾರ್ಲಿಂಗ್ʼ ಪ್ರಭಾಸ್‌ ಫ್ಯಾನ್ಸ್‌ಗಂತೂ ಹಬ್ಬವೋ ಹಬ್ಬ!

ʻಫೌಜಿʼ ರಿಲೀಸ್ ಡೇಟ್ ಘೋಷಣೆ; ರಣಾಂಗಣದಲ್ಲಿ ಗನ್ ಹಿಡಿದು ಗರ್ಜಿಸಿದ ಪ್ರಭಾಸ್

ನಟ ಪ್ರಭಾಸ್ ಅಭಿನಯದ ಬಹುನಿರೀಕ್ಷಿತ 'ಫೌಜಿ' ಸಿನಿಮಾ ಇದೇ ವರ್ಷದ ಡಿಸೆಂಬರ್ 3 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ. ರಕ್ತಸಿಕ್ತ ಮಿಲಿಟರಿ ಉಡುಪಿನಲ್ಲಿ ಪ್ರಭಾಸ್ ಕಾಣಿಸಿಕೊಂಡಿರುವ ರಗಡ್ ಪೋಸ್ಟರ್ ಲಾಂಚ್ ಆಗಿದ್ದು, ಇದು ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯಲ್ಲೇ ಅತ್ಯಂತ ದುಬಾರಿ ವೆಚ್ಚದ ಚಿತ್ರವಾಗಿದೆ.

ಬೆಂಗಳೂರಿನಲ್ಲಿ 'ಸರಿಗಮಪ' ಆಡಿಷನ್; ರಾಷ್ಟ್ರಮಟ್ಟದಲ್ಲಿ ಮಿಂಚಲು ಕನ್ನಡದ ಗಾಯನ ಪ್ರತಿಭೆಗಳಿಗೆ ಇಲ್ಲಿದೆ ಸುವರ್ಣಾವಕಾಶ!

ಬೆಂಗಳೂರಿನಲ್ಲಿ ಜೀ ಟಿವಿ 'ಸರಿಗಮಪ' ಆಡಿಷನ್; ಕನ್ನಡಿಗರಿಗೆ ಸುವರ್ಣಾವಕಾಶ

ದೇಶದ ಅತ್ಯಂತ ಹೆಮ್ಮೆಯ ಸಂಗೀತ ರಿಯಾಲಿಟಿ ಶೋ ಜೀ ಟಿವಿಯ 'ಸರಿಗಮಪ' ತನ್ನ ಹೊಸ ಆವೃತ್ತಿಯ ಪ್ರತಿಭೆಗಳ ಹುಡುಕಾಟಕ್ಕಾಗಿ ಜುಲೈ 19 ರಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೆಗಾ ಆಡಿಷನ್ ಹಮ್ಮಿಕೊಂಡಿದೆ. ಭಾಷೆಯ ಗಡಿಗಳಿಲ್ಲದ ಈ ಸಾಂಸ್ಕೃತಿಕ ಹಬ್ಬದಲ್ಲಿ ರಾಜ್ಯದ ಉದಯೋನ್ಮುಖ ಗಾಯಕರು ರಾಷ್ಟ್ರಮಟ್ಟದಲ್ಲಿ ಮಿಂಚಲು ಸುವರ್ಣಾವಕಾಶವಿದೆ.

‘ರುಕ್ಮಿಣಿ ರಾಧಾಕೃಷ್ಣ’ ಚಿತ್ರಕ್ಕೆ ನಾಯಕಿಯಾದ ʻಪಾರುʼ ಖ್ಯಾತಿಯ ಮೋಕ್ಷಿತಾ ಪೈ; ಹೀರೋ ಆಗಿ ಬಂದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್‌ ಪುತ್ರ ಭರತ್

Mokshitha Pai: ‌‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಹಾಡುಗಳು ರಿಲೀಸ್

‘ಪಾರು’ ಧಾರಾವಾಹಿ ಖ್ಯಾತಿಯ ನಟಿ ಮೋಕ್ಷಿತಾ ಪೈ ಹಾಗೂ ಭರತ್ ಕುಮಾರ್ ಮುಖ್ಯ ಭೂಮಿಕೆಯ ‘ರುಕ್ಮಿಣಿ ರಾಧಾಕೃಷ್ಣ’ ಚಿತ್ರದ ಎರಡು ಹಾಡುಗಳು ಅದ್ಧೂರಿಯಾಗಿ ಬಿಡುಗಡೆಯಾಗಿವೆ. ಉಮೇಶ್ ಫಿಲಂಸ್ ಲಾಂಛನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಪ್ರಾಣ್ ಸುವರ್ಣ ನಿರ್ದೇಶನ ಮಾಡಿದ್ದು, ಲಹರಿ ಸಂಸ್ಥೆ ಇದರ ಆಡಿಯೋ ಹಕ್ಕನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.

Pallichattambi ott: ಟೊವಿನೋ ಥಾಮಸ್ ನಟನೆಯ 'ಪಳ್ಳಿ ಚಟ್ಟಂಬಿ' ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ಟೊವಿನೋ ಥಾಮಸ್ ನಟನೆಯ 'ಪಳ್ಳಿ ಚಟ್ಟಂಬಿ' ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

Pallichattambi ott: ಈ ಚಿತ್ರವನ್ನು ದೊಡ್ಡ ಬಜೆಟ್‌ನಲ್ಲಿ ಮತ್ತು ದೊಡ್ಡ ತಾರಾಬಳಗದೊಂದಿಗೆ ವಿಶಾಲವಾದ ಕ್ಯಾನ್ವಾಸ್‌ನಲ್ಲಿ ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಚಿತ್ರವು ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು. ಈ ಚಿತ್ರವು ಮಲಯಾಳಂ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಯಿತು. ಕನ್ನಡದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿತ್ತು.

Saathvika: ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂದ್ರೆ ಮಕ್ಕಳು ಮಾಡ್ಕೊಬೇಡಿ! ರೇಖಾ ದಾಸ್ ಮಗಳು ಭಾವುಕ

ಜೊತೆಗಿರಲು ಸಾಧ್ಯವಿಲ್ಲ ಅಂದ್ರೆ ಮಕ್ಕಳು ಮಾಡ್ಕೊಬೇಡಿ! ಸಾತ್ವಿಕಾ ಭಾವುಕ

Saathvika: ಓಂ ಪ್ರಕಾಶ್‌ ರಾವ್‌ (Om prakash) ಅವರು ದಶಕಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ತಂದೆ ಖ್ಯಾತ ಹ್ಯಾಸ್ಯಕಲಾವಿದ, ಬರಹಗಾರ ಮತ್ತು ರಂಗಭೂಮಿ ಕಲಾವಿದರಾಗಿದ್ದ ಹಿರಿಯ ನಟ ಎನ್ ಎಸ್‌ ರಾವ್‌ ಅವರು. ಮಗಳು ಶ್ರಾವ್ಯಾ ರಾವ್‌ (Shravya Rao) ಈಗ ಸಾತ್ವಿಕಾ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ. `ಪಾಸಿಬಲ್',`ಹುಚ್ಚ 2' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಮೋಡ ಕವಿದ ವಾತಾವರಣ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

Haiwaan first look out: KVN ನಿರ್ಮಾಣದ ಬಾಲಿವುಡ್​ ಸಿನಿಮಾ 'ಹೈವಾನ್'; ಪೋಸ್ಟರ್‌ ಔಟ್‌

KVN ನಿರ್ಮಾಣದ ಬಾಲಿವುಡ್​ ಸಿನಿಮಾ 'ಹೈವಾನ್'; ಪೋಸ್ಟರ್‌ ಔಟ್‌

Haiwaan first look out: ಅಕ್ಷಯ್ ಕುಮಾರ್, ಸೈಫ್ ಅಲಿ ಖಾನ್ ಅಭಿನಯದ 'ಹೈವಾನ್'​​ ನಿರ್ಮಾಣಕ್ಕೆ ಕನ್ನಡದ ಕೆವಿಎನ್​ ಕೈಜೋಡಿಸಿದ್ದು ಈಗ ಫಸ್ಟ್‌ ಲುಕ್‌ ಔಟ್‌ ಆಗಿದೆ. ಅಕ್ಷಯ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಫಸ್ಟ್ ಲುಕ್ ಪೋಸ್ಟರ್ ಗಳನ್ನು ಪೋಸ್ಟ್ ಮಾಡಿದ್ದಾರೆ. ಸೈಫ್ ಮತ್ತು ಅಕ್ಷಯ್ ಕೊನೆಯ ಬಾರಿಗೆ 2008ರಲ್ಲಿ ಬಿಡುಗಡೆಯಾದ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನದ 'ತಶಾನ್' ಚಿತ್ರದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.

Actor Jaggesh: ಕೆಟ್ಟ ಅಭ್ಯಾಸ ಬಿಟ್ಟುಬಿಡಿ!  ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್‌

ಕೆಟ್ಟ ಅಭ್ಯಾಸ ಬಿಟ್ಟುಬಿಡಿ! ಶ್ರೀಕೃಷ್ಣನ ಸಂದೇಶ ಹಂಚಿಕೊಂಡ ಜಗ್ಗೇಶ್‌

Jaggesh: ನಟ, ನಿರ್ದೇಶಕ, ನಿರ್ಮಾಪಕ ಹಾಗೂ ರಾಜಕಾರಣಿ ಜಗ್ಗೇಶ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಒಂದಲ್ಲ ಒಂದು ಪೋಸ್ಟ್‌ ಶೇರ್‌ ಮಾಡುತ್ತಲೇ ಇರುತ್ತಾರೆ. ಅವರ ಇನ್‌ಸ್ಟಾಗ್ರಾಮ್ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗುತ್ತಿದೆ.ಕನಸುಗಳನ್ನು ನನಸು ಮಾಡಿಕೊಳ್ಳಲು ಉತ್ತಮ ಗುಣ, ಉತ್ತಮ ಚಿಂತನೆ, ಉತ್ತಮ ಪರಿಸರ, ಉತ್ತಮ ಸ್ನೇಹ, ಉತ್ತಮ ಆಹಾರ, ಉತ್ತಮ ಆರೋಗ್ಯ, ಉತ್ತಮ ಮಾತು, ಉತ್ತಮ ಆಯ್ಕೆ ಹಾಗೂ ಉತ್ತಮ ಸಂಗಾತಿ ಅತ್ಯಂತ ಮುಖ್ಯ ಎಂದು ತಿಳಿಸಿದ್ದಾರೆ.

'ನನ್ನ ಹತ್ರ ಇಂಥ ನಾನ್‌ಸೆನ್ಸ್‌ ಎಲ್ಲಾ ಇಟ್ಕೋಬೇಡಿʼ; ಹದ್ದುಮೀರಿ ವರ್ತಿಸಿದ ಪಾಪರಾಜಿಗಳಿಗೆ ಚಳಿ ಬಿಡಿಸಿದ ನಟಿ ಜರೀನ್ ಖಾನ್

ʻನಿಮ್ ಮುಂದೇ ಬಟ್ಟೆ ಟ್ರಯಲ್ ಮಾಡ್ಬೇಕಾ?ʼ; ಪಾಪರಾಜಿಗೆ ಜರೀನ್ ಖಾನ್ ಆವಾಜ್!

ಮುಂಬೈನ ಶಾಪಿಂಗ್ ಮಾಲ್ ಉದ್ಘಾಟನಾ ಸಮಾರಂಭದಲ್ಲಿ ಬಟ್ಟೆಗಳನ್ನು ಪರಿಶೀಲಿಸುತ್ತಿದ್ದ ಬಾಲಿವುಡ್ ನಟಿ ಜರೀನ್ ಖಾನ್ ಅವರಿಗೆ ಪಾಪರಾಜಿ ಛಾಯಾಗ್ರಾಹಕನೊಬ್ಬ "ಒಮ್ಮೆ ಟ್ರಯಲ್ ಮಾಡಿ ನೋಡಿ" ಎಂದು ಅಸಭ್ಯವಾಗಿ ಕಾಮೆಂಟ್ ಮಾಡಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ನಟಿ, ಎಲ್ಲರ ಸಮ್ಮುಖದಲ್ಲೇ ಆತನಿಗೆ ಚಳಿ ಬಿಡಿಸಿದ್ದು, ಮಹಿಳೆಯರಿಗೆ ಗೌರವ ನೀಡುವುದನ್ನು ಕಲಿಯಿರಿ ಎಂದು ಎಚ್ಚರಿಸಿದ್ದಾರೆ.

Samantha Ruth Prabhu: ಪತಿ ರಾಜ್ ಜೊತೆಗಿನ ಕ್ಯೂಟ್ ಫೋಟೋಸ್ ಹಂಚಿಕೊಂಡ ನಟಿ; ಸಮಂತಾ  ಫುಲ್ ಖುಷ್‌!

ಪತಿ ರಾಜ್ ಜೊತೆಗಿನ ಕ್ಯೂಟ್ ಫೋಟೋಸ್ ಹಂಚಿಕೊಂಡ ನಟಿ ಸಮಂತಾ!

Samantha Ruth Prabhu: ಇತ್ತೀಚಿನ ಚಿತ್ರ 'ಮಾ ಇಂಟಿ ಬಂಗಾರಂ' (Maa Inti Bangaaram) ಯಶಸ್ಸಿನ ನಂತರ ಈ ದಂಪತಿ ಥೈಲ್ಯಾಂಡ್‌ನ ಬೀಚ್ ರೆಸಾರ್ಟ್‌ನಲ್ಲಿ ಬೇಬಿಮೂನ್‌ನಲ್ಲಿದ್ದಾರೆ. ಸಮಂತಾ ಅಲ್ಲಿ ತಮ್ಮ ನೆನಪುಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ.ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಕೇಷನ್‌ನ ಸುಂದರ ಮತ್ತು ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೋಗಳಲ್ಲಿ ಗಂಡ-ಹೆಂಡತಿ ಇಬ್ಬರೂ ಜೊತೆಯಾಗಿ ಸಮಯ ಕಳೆಯುತ್ತಿರುವುದನ್ನು ಕಾಣಬಹುದು.

ಅಟ್ಲೀ, ಲೋಕೇಶ್‌ ಕನಕರಾಜ್‌ ನಂತರ ಮಲಯಾಳಂನ ಬೇಸಿಲ್ ಜೋಸೆಫ್ ಜೊತೆ ಕೈಜೋಡಿಸಿದ ಅಲ್ಲು ಅರ್ಜುನ್;‌ ಆ ಒಂದು ಪೋಸ್ಟ್‌ನಿಂದ ಎಲ್ಲವೂ ಬಯಲು

ʻಮಿನ್ನಲ್ ಮುರಳಿʼ ನಿರ್ದೇಶಕನ ಜೊತೆ ಅಲ್ಲು ಅರ್ಜುನ್‌ ಹೊಸ ಸಿನಿಮಾ ಘೋಷಣೆ?

ಪ್ಯಾನ್ ಇಂಡಿಯಾ ಸ್ಟಾರ್ ಅಲ್ಲು ಅರ್ಜುನ್ ಹಾಗೂ ‘ಮಿನ್ನಲ್ ಮುರಳಿ’ ಖ್ಯಾತಿಯ ಮಲಯಾಳಂ ನಿರ್ದೇಶಕ ಬೇಸಿಲ್ ಜೋಸೆಫ್ ಕಾಂಬಿನೇಷನ್‌ನ ಹೊಸ ಸೂಪರ್ ಹೀರೋ ಸಿನಿಮಾ ಸೆಟ್ಟೇರುವ ಬಗ್ಗೆ ಬಲವಾದ ಸುಳಿವು ಸಿಕ್ಕಿದೆ. ಬೇಸಿಲ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ 'ICON' ಟೋಪಿಯ ಫೋಟೋ ಹಾಕಿರುವುದೇ ಇದಕ್ಕೆಲ್ಲಾ ಕಾರಣ.

Uma Shankari: ‘ಉಪ್ಪಿ ದಾದಾ MBBS’ ನಟಿ ಉಮಾಶಂಕರಿಗೆ ಕ್ಯಾನ್ಸರ್!  ಭಾವನಾತ್ಮಕ ಪೋಸ್ಟ್ ವೈರಲ್‌

‘ಉಪ್ಪಿ ದಾದಾ MBBS’ ನಟಿ ಉಮಾಶಂಕರಿಗೆ ಕ್ಯಾನ್ಸರ್!

Uma Shankari Cancer: ನಿರ್ದೇಶಕ ಡಿ ರಾಜೇಂದ್ರ ಬಾಬು - ಹಿರಿಯ ನಟಿ ಸುಮಿತ್ರಾ ಅವರ ಹಿರಿಯ ಮಗಳು ಉಮಾಶಂಕರಿ. ಮದುವೆ ಬಳಿಕ ನಟಿ ಉಮಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿರಲಿಲ್ಲ. ಮದುವೆ ನಂತರ ಎರಡ್ಮೂರು ಸಿನಿಮಾಗಳಲ್ಲಿ ಮಾತ್ರ ನಟಿಸಿದ್ದಾರೆ. ಇದೀಗ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ ನಟಿ. 2ನೇ ಹಂತದ ಕಿಮೊಥೆರಪಿ, ಮ್ಯುನೊಥೆರಪಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ಫೋಟೊ ಹಂಚಿಕೊಂಡಿದ್ದಾರೆ.

ʻನನ್ನ ಹೃದಯ ಒಡೆದುಹೋಗಿದ್ರೂ, ನನ್ನನ್ನ ನಾನೇ ನೋಡ್ಕೋಬೇಕುʼ; ಮನದಾಳದ ದುಃಖವನ್ನು ಹಂಚಿಕೊಂಡ ನಟಿ ಕೃಷಿ ತಾಪಂಡ

ʻಕೆಟ್ಟದಾಗಿ ಮಾತಾಡೋರು ನನ್ನ ಮನೆ ಬಾಡಿಗೆ ಕಟ್ಟಲ್ಲʼ; ಕೃಷಿ ತಾಪಂಡ ಭಾವುಕ

ನಟಿ ಕೃಷಿ ತಾಪಂಡ ತಮ್ಮ ವೈಯಕ್ತಿಕ ಬದುಕಿನ ದುಃಖ ಹಾಗೂ ಸಾಮಾಜಿಕ ಜಾಲತಾಣಗಳ ಟ್ರೋಲ್‌ಗಳ ವಿರುದ್ಧ ಯೂಟ್ಯೂಬ್ ವ್ಲಾಗ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ತಮ್ಮ ಸೌಮ್ಯ ಸ್ವಭಾವವನ್ನೇ ಬಂಡವಾಳ ಮಾಡಿಕೊಂಡು ತಮ್ಮ ಚಾರಿತ್ರ್ಯವಧೆ ಮಾಡುತ್ತಿರುವ ವಂಚಕರಿಗೆ ಕಟು ಪದಗಳಲ್ಲಿ ಉತ್ತರಿಸಿದ್ದಾರೆ.

‘ಕನ್ನಡದ ಆ ನಟ ಹಾಡುಗಳಲ್ಲಿ ನಾಯಕಿಯರ ಹೊಕ್ಕುಳ ಮೇಲೆ ಫ್ರೂಟ್‌ ಸಲಾಡ್ ಮಾಡುತ್ತಿದ್ದರು’; ಸ್ಯಾಂಡಲ್‌ವುಡ್‌ ಬಗ್ಗೆ ನಟಿ ಡೈಸಿ ಶಾ ಹೇಳಿಕೆ ವೈರಲ್‌

ನಟಿಯರ ಹೊಕ್ಕುಳ ಮೇಲೆ ಫ್ರೂಟ್‌ ಸಲಾಡ್ ಮಾಡ್ತಿದ್ರು; ಡೈಸಿ ಶಾ ಹೇಳಿಕೆ ವೈರಲ್

ಕನ್ನಡ ಹಾಗೂ ಬಾಲಿವುಡ್ ನಟಿ ಡೈಸಿ ಶಾ ಪ್ರಾದೇಶಿಕ ಚಿತ್ರರಂಗದಲ್ಲಿ ಮಹಿಳಾ ನಟಿಯರನ್ನು ಬಿಂಬಿಸುವ ಗ್ಲಾಮರ್ ಶೈಲಿ ಹಾಗೂ ಲಿಂಗ ತಾರತಮ್ಯದ ಕುರಿತು ಮಾತನಾಡಿದ್ದ ಹಳೆಯ ವಿಡಿಯೋವೊಂದು ಇಂಟರ್ನೆಟ್‌ನಲ್ಲಿ ತೀವ್ರ ವೈರಲ್ ಆಗಿದೆ. ಕನ್ನಡದ ಹಾಡುಗಳಲ್ಲಿ ನಾಯಕಿಯರ ಹೊಕ್ಕುಳ ಮೇಲೆ ಹಣ್ಣು ಮತ್ತು ಐಸ್ ಸುರಿಯುವ ಮೇಕಿಂಗ್ ಗೀಳನ್ನು ವ್ಯಂಗ್ಯ ಮಾಡಿದ್ದಾರೆ ಡೈಸಿ ಶಾ.

Jana Nayagan: ಸಿಎಂ ʻದಳಪತಿʼ ವಿಜಯ್ ಸಿನಿಮಾಕ್ಕಾಗಿ ಪೋಸ್ಟ್‌ಪೋನ್‌ ಆಗುತ್ತಾ ಪುತ್ರ ಜೇಸನ್ ಸಂಜಯ್ ಚೊಚ್ಚಲ ಚಿತ್ರ ʻಸಿಗ್ಮಾʼ?

ʻಜನ ನಾಯಗನ್‌ʼ ರಿಲೀಸ್‌ ಡೇಟ್‌ ಘೋಷಣೆ; ವಿಜಯ್‌ ಮಗನ ಸಿನಿಮಾ ಪೋಸ್ಟ್‌ಪೋನ್!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಜುಲೈ 23 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರಗಳ ಕೊರತೆಯಿಂದಾಗಿ ಅವರ ಪುತ್ರ ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ ‘ಸಿಗ್ಮಾ’ ಬಿಡುಗಡೆಯನ್ನು ಆಗಸ್ಟ್‌ ತಿಂಗಳಿಗೆ ಮುಂದೂಡಲಾಗಿದೆ.

ʻಅಜ್ಜಿಯ ಮೇಲಿನ ನನ್ನ ಪ್ರೀತಿಯನ್ನು ಕಣ್ಣೀರಿನಿಂದ ಅಳೆಯಬೇಡಿʼ: ಸೋಷಿಯಲ್ ಮೀಡಿಯಾ ಟ್ರೋಲ್‌ಗೆ ಬೇಸರ ಹೊರಹಾಕಿದ ಎಸ್.‌ ಜಾನಕಿ ಮೊಮ್ಮಗಳು ಅಪ್ಸರಾ

ʻಅಜ್ಜಿಯ ಮೇಲಿನ‌ ಪ್ರೀತಿಯನ್ನ ಕಣ್ಣೀರಿನಿಂದ ಅಳೆಯಬೇಡಿʼ- ಜಾನಕಿ ಮೊಮ್ಮಗಳು

ಗಾನಕೋಗಿಲೆ ಎಸ್. ಜಾನಕಿ ಅವರ ನಿಧನದ ನಂತರ ಅಂತಿಮ ವಿಧಿವಿಧಾನ ನೆರವೇರಿಸಿದ ಅವರ ಮೊಮ್ಮಗಳು ಅಪ್ಸರಾ, ತಾವು ಅಳಲಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಿದವರ ವಿರುದ್ಧ ಬೇಸರ ಹೊರಹಾಕಿದ್ದಾರೆ. ಅಜ್ಜಿಯ ಮೇಲಿನ ಪ್ರೀತಿಯನ್ನು ಕಣ್ಣೀರಿನಿಂದ ಅಳೆಯಬೇಡಿ ಎಂದಿರುವ ಅವರು, ಅಜ್ಜಿಯ ಅಗಲಿಕೆಯಿಂದ ಇಡೀ ಕುಟುಂಬ ನೋವಿನಲ್ಲಿದೆ ಎಂದು ಭಾವುಕರಾಗಿ ಸ್ಪಷ್ಟನೆ ನೀಡಿದ್ದಾರೆ.

ʻಅತಿಕಾಯʼ ಚಿತ್ರಕ್ಕಾಗಿ ನಿರೂಪ್‌ ಭಂಡಾರಿಗೆ ಜೋಡಿಯಾದ ಸ್ವಾದಿಷ್ಟ ಕೃಷ್ಣನ್; ರಗಡ್‌ ಲುಕ್‌ನಲ್ಲಿ ʻರಂಗಿತರಂಗʼ ಹೀರೋ

`ಅತಿಕಾಯ' ಚಿತ್ರಕ್ಕಾಗಿ ಒಂದಾದ ನಿರೂಪ್ ಭಂಡಾರಿ - ಸ್ವಾದಿಷ್ಟ ಕೃಷ್ಣನ್!

'ರಂಗಿತರಂಗ' ಖ್ಯಾತಿಯ ನಟ ನಿರೂಪ್ ಭಂಡಾರಿ 'ಅತಿಕಾಯ' ಚಿತ್ರದ ಮೂಲಕ ಪಕ್ಕಾ ರಗಡ್ ಶೈಲಿಯಲ್ಲಿ ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ನಾಗರಾಜ್ ಪೀಣ್ಯ ನಿರ್ದೇಶನದ ಈ ಹೈ-ವೋಲ್ಟೇಜ್ ಆಕ್ಷನ್ ಚಿತ್ರಕ್ಕೆ ಬಹುಭಾಷಾ ನಟಿ, ಧಾರವಾಡದ ಮೂಲದ ಸ್ವಾದಿಷ್ಟ ಕೃಷ್ಣನ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

Aamir Khan : ಲವ್ ಜಿಹಾದ್‌ನ ಬ್ಯ್ರಾಂಡ್ ಅಂದವರಿಗೆ ಆಮಿರ್ ಖಾನ್ ಖಡಕ್‌ ರಿಯಾಕ್ಷನ್‌

ಲವ್ ಜಿಹಾದ್‌ನ ಬ್ಯ್ರಾಂಡ್ ಅಂದವರಿಗೆ ಆಮಿರ್ ಖಾನ್ ಖಡಕ್‌ ರಿಯಾಕ್ಷನ್‌

Aamir Khan : ಆಮಿರ್ ಖಾನ್ , ಮೂರನೇ ಮದುವೆಯಾಗಿದ್ದಾರೆ. ಗೌರಿ ಜೊತೆ ವಿವಾಹ ಬಂಧನಕ್ಕೊಳಗಾದ ಬೆನ್ನಲ್ಲೇ ಕೆಲವರು ಆಮಿರ್ ಖಾನ್ ಅವರನ್ನು ಮದುವೆಯಾಗಲು ಗೌರಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ಧಾರೆ ಎಂಬ ಸುದ್ದಿಯನ್ನು ಹಬ್ಬಿಸಿದ್ದಾರೆ. ಮದುವೆಯ ಸುತ್ತ ಮುತ್ತ ನಡೆಯುತ್ತಿರುವ ಈ ಚರ್ಚೆಗಳಿಗೆ, ಟ್ರೋಲ್‌ಗಳಿಗೆ (Troll) ಆಮಿರ್ ಖಾನ್ ಉತ್ತರ ನೀಡಿದ್ದಾರೆ.

Samantha Ruth Prabhu : ತಾಯಿಯಾಗಬೇಕೆಂದು ಬಯಸಿದ್ದೆ! ಸಮಂತಾ ಮುಕ್ತ ಮಾತು

ತಾಯಿಯಾಗಬೇಕೆಂದು ಬಯಸಿದ್ದೆ! ಸಮಂತಾ ಮುಕ್ತ ಮಾತು

Samantha Ruth Prabhu : ಸಂದರ್ಶನದಲ್ಲಿ, ಸಮಂತಾ ತಮ್ಮ ಜೀವನದ ಈ ಹೊಸ ಹಂತವನ್ನು ರೋಮಾಂಚಕಾರಿ ಎಂದು ಕರೆದರು. ನಾನು ಜೀವನದಲ್ಲಿ ಎಲ್ಲದರ ಬಗ್ಗೆಯೂ ಯಾವಾಗಲೂ ಉತ್ಸುಕಳಾಗಿದ್ದೇನೆ. ಆದರೆ ಈಗ ನಾನು ನನ್ನಲ್ಲಿ ವಿಭಿನ್ನವಾದ, ಹೊಸ ರೀತಿಯ ಶಕ್ತಿ ಮತ್ತು ಉದ್ದೇಶವನ್ನು ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಕ್ಷಣಕ್ಕಾಗಿ ಸ್ವಲ್ಪ ಸಮಯದಿಂದ ಕಾಯುತ್ತಿದ್ದೇನೆ ಎಂದು ನೇರವಾಗಿ ಹೇಳಿಕೊಂಡಿದ್ದಾರೆ.

Loading...