ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Asha Bhosle Health Update: ಆಶಾ ಭೋಂಸ್ಲೆ ಆರೋಗ್ಯದ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಮೊಮ್ಮಗಳು

ಆಶಾ ಭೋಂಸ್ಲೆ ಆರೋಗ್ಯದ ಬಗ್ಗೆ ಅಪ್‌ಡೇಟ್‌ ಹಂಚಿಕೊಂಡ ಮೊಮ್ಮಗಳು

Asha Bhosle Health Update: ಏಪ್ರಿಲ್ 11 ರಂದು ಆಶಾ ಭೋಸ್ಲೆ ಅವರ ಮೊಮ್ಮಗಳು ಝನೈ ಭೋಸ್ಲೆ ಅವರಿಗೆ ಹೃದಯಾಘಾತವಾಗಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿಗಳು ಬಂದ ನಂತರ, ಅವರ ಆರೋಗ್ಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಝನೈ ಅವರು ಭೋಸ್ಲೆ ಅವರೊಂದಿಗಿನ ಚಿತ್ರವನ್ನು ಪೋಸ್ಟ್ ಮಾಡಿ, "ನನ್ನ ಅಜ್ಜಿ ಆಶಾ ಭೋಸ್ಲೆ ಅವರನ್ನು ತೀವ್ರ ಬಳಲಿಕೆ ಮತ್ತು ಎದೆ ಸೋಂಕಿನಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ನಮ್ಮ ಪ್ರೈವೆಸಿ ಗೌರವಿಸುವಂತೆ ನಾವು ನಿಮ್ಮನ್ನು ವಿನಂತಿಸುತ್ತೇವೆ. ಚಿಕಿತ್ಸೆ ಮುಂದುವರೆದಿದೆ ಮತ್ತು ಎಲ್ಲವೂ ಚೆನ್ನಾಗಿರುತ್ತದೆ ಎಂದು ಆಶಿಸುತ್ತೇವೆ ಮತ್ತು ನಾವು ನಿಮಗೆ ಸಕಾರಾತ್ಮಕವಾಗಿ ಅಪ್‌ಡೇಟ್‌ ಮಾಡುತ್ತೇವೆ ಎಂದು ಬರೆದುಕೊಂಡಿದ್ದಾರೆ.

Sara Arjun: ಉಜ್ಜಯಿನಿ ಮಹಾಕಾಳನ ದರ್ಶನ ಪಡೆದ ನಟಿ ಸಾರಾ ಅರ್ಜುನ್

ಉಜ್ಜಯಿನಿ ಮಹಾಕಾಳನ ದರ್ಶನ ಪಡೆದ ನಟಿ ಸಾರಾ ಅರ್ಜುನ್

Sara Arjun: ಯಲಿನಾ ಜಮಾಲಿ ಪಾತ್ರವನ್ನು ನಿರ್ವಹಿಸುವ ಸಾರಾ ಅರ್ಜುನ್ , ಧುರಂಧರ್ ದಿ ರಿವೆಂಜ್ ಚಿತ್ರದ ಯಶಸ್ಸನ್ನು ಆಚರಿಸುತ್ತಿದ್ದಾರೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರವು ಏಪ್ರಿಲ್ 11 ರಂದು ಬಾಕ್ಸ್ ಆಫೀಸ್ ಇತಿಹಾಸವನ್ನು ಸೃಷ್ಟಿಸುತ್ತಲೇ ಇರುವುದರಿಂದ, ಸಾರಾ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ನಟಿ ಸಾರಾ ಅರ್ಜುನ್ ಶನಿವಾರ ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನದಲ್ಲಿ ನಡೆದ ಪವಿತ್ರ ಭಸ್ಮಾರತಿಯಲ್ಲಿ ಭಾಗಿಯಾಗಿದ್ದರು. ದೇವಸ್ಥಾನಕ್ಕೆ ಭೇಟಿ ನೀಡಿದ ನಂತರ, ಈ ಆಧ್ಯಾತ್ಮಿಕ ಅನುಭವದ ಬಗ್ಗೆ ಅವರು ಭಾವುಕರಾಗಿ ಮಾತನಾಡಿದ್ದಾರೆ. ಸುಂದರವಾದ ಗುಲಾಬಿ ಬಣ್ಣದ ಸೀರೆಯನ್ನುಟ್ಟುಕೊಂಡಿದ್ದರು.

ʻಜನ ನಾಯಗನ್‌ʼ ಸಿನಿಮಾ ಲೀಕ್‌ ಆಗಿದ್ದಕ್ಕೆ ಸೆನ್ಸಾರ್‌ ಮಂಡಳಿ ಕಾರಣವಲ್ಲ; ಸಿಬಿಎಫ್‌ಸಿ ನೀಡಿದ ಸ್ಪಷ್ಟನೆ ಇಲ್ಲಿದೆ!

Thalapathy Vijay: 'ಜನ ನಾಯಗನ್' ಲೀಕ್‌ಗೆ ಸೆನ್ಸಾರ್ ಮಂಡಳಿ ಕಾರಣವಲ್ಲ!

Jana Nayagan Movie Leak: ವಿಜಯ್‌ ಅವರ ಜನ ನಾಯಗನ್‌ ಸಿನಿಮಾದ ಲೀಕ್ ಕುರಿತು ಸೆನ್ಸಾರ್ ಮಂಡಳಿ (CBFC) ಅಧಿಕೃತ ಪ್ರಕಟಣೆ ಹೊರಡಿಸಿದೆ. ಸಿನಿಮಾ ಸೋರಿಕೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ. ಸುರಕ್ಷಿತ ಕೆಡಿಎಂ (KDM) ಮತ್ತು ಪಾಸ್‌ವರ್ಡ್ ವ್ಯವಸ್ಥೆಯಡಿ ಚಲನಚಿತ್ರಗಳು ರಕ್ಷಿಸಲ್ಪಟ್ಟಿರುತ್ತವೆ ಎಂದು ವದಂತಿಗಳಿಗೆ ಸಿಬಿಎಫ್‌ಸಿ ತೆರೆ ಎಳೆದಿದೆ.

Daali Dhananjay: ʻಜೆರಾಕ್ಸ್‌ʼ ವೆಬ್‌ ಸೀರಿಸ್‌ನಲ್ಲಿ ನಾಗಭೂಷಣ್‌ಗೆ ಜೋಡಿಯಾದ ನಟಿ ಪಾಯಲ್‌ ಚೆಂಗಪ್ಪ

'ಜೆರಾಕ್ಸ್' ವೆಬ್‌ ಸರಣಿಯಲ್ಲಿ ನಾಗಭೂಷಣ್‌ಗೆ ಪಾಯಲ್ ಚೆಂಗಪ್ಪ ಜೋಡಿ

Jerax Web Series: ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಧನಂಜಯ್‌ ನಿರ್ಮಾಣ ಮಾಡಿರುವ ʻಜೆರಾಕ್ಸ್‌ʼ ವೆಬ್‌ ಸರಣಿಯು ಡಾರ್ಕ್ ಥ್ರಿಲ್ಲರ್ ಜಾನರ್‌ನದ್ದಾಗಿದ್ದು, ಮಂಡ್ಯ-ಮೈಸೂರು ಹಿನ್ನೆಲೆಯ ಈ ಕಥೆ ಇದೆ. ಇದರಲ್ಲಿ ನಾಗಭೂಷಣ್‌ಗೆ ಜೋಡಿಯಾಗಿ ಪಾಯಲ್ ಚೆಂಗಪ್ಪ ನಟಿಸಿರುವುದು ವಿಶೇಷ.

Ustaad Bhagat Singh On OTT: ʻಉಸ್ತಾದ್ ಭಗತ್ ಸಿಂಗ್ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್!‌

ʻಉಸ್ತಾದ್ ಭಗತ್ ಸಿಂಗ್ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್!‌

Pawan Kalyan: ತೆಲುಗು ಸಿನಿರಂಗದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಉಸ್ತಾದ್ ಭಗತ್ ಸಿಂಗ್ ಮಾರ್ಚ್ 19 ರಂದು ಬಿಡುಗಡೆಯಾಗಿತ್ತು. ಈ ಚಿತ್ರವು ನಟನ ಬಹು ನಿರೀಕ್ಷಿತ ಬಿಡುಗಡೆಗಳಲ್ಲಿ ಒಂದಾಗಿತ್ತು. ಆದಾಗ್ಯೂ, ಇದು ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷೆಯಂತೆ ಪ್ರದರ್ಶನ ನೀಡಲಿಲ್ಲ. ಈ ಚಿತ್ರವು ನೀರಸ ಕಲೆಕ್ಷನ್‌ಗಳನ್ನು ಮತ್ತು ಸಿನಿಪ್ರೇಮಿಗಳಿಂದ ನೀರಸ ಪ್ರತಿಕ್ರಿಯೆಯನ್ನು ಗಳಿಸಿತು. ಇದೀಗ ಒಟಿಟಿ ದಿನಾಂಕ ಅನೌನ್ಸ್‌ ಆಗಿದೆ.

Chandan Shetty : ವಯಸ್ಸಾದ ಮೇಲೆ ಒಂಟಿತನ ಕಾಡುತ್ತೆ; ಎರಡನೇ ಮದುವೆ ಬಗ್ಗೆ ಚಂದನ್‌ ಶೆಟ್ಟಿ ಮಾತು

ಎರಡನೇ ಮದುವೆ ಬಗ್ಗೆ ಚಂದನ್‌ ಶೆಟ್ಟಿ ಮುಕ್ತ ಮಾತು

Chandan Shetty : ಗಾಯಕ, ನಟ ಚಂದನ್‌ ಶೆಟ್ಟಿ ಬಿಗ್‌ಬಾಸ್‌ ವೇದಿಕೆಯಲ್ಲಿ ಉತ್ತಮವಾಗಿ ಆಟವಾಡಿ ಅಲ್ಲಿಯೇ ಪ್ರತಿಸ್ಫರ್ಧಿಯಾಗಿದ್ದ ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. ಆದರೆ ಅವರದೇ ವೈಯಕ್ತಿಕ ಕಾರಣಗಳಿಂದ ಇಬ್ಬರು ಪರಸ್ಪರ ಒಪ್ಪಿಗೆ ಮೆರೆಗೆ ಡಿವೋರ್ಸ್‌ ಪಡೆದು ಬೇರ್ಪಟ್ಟಿದ್ದಾರೆ. ಚಂದನ್‌ ಶೆಟ್ಟಿ ಈ ಎಲ್ಲಾ ನೋವುಗಳಿಂದ ಹೊರಬಂದಿರೋದಾಗಿ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದು, ಈಗ ಸಿನಿಮಾಗಳ ತಮ್ಮನ್ನ ತೊಡಗಿಸಿಕೊಂಡಿರೊದಾಗಿ ಹೇಳಿದ್ದಾರೆ. ನಿವೇದಿತಾ ಗೌಡ ಅವರಿಂದ ಡಿವೋರ್ಸ್‌ ಪಡೆದ ನಂತರ, ಅವರ ಎರಡನೇ ಮದುವೆಯ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದವು. ಈ ಎಲ್ಲಾ ಪ್ರಶ್ನೆಗಳಿಗೂ ಚಂದನ್‌ ಶೆಟ್ಟಿ ಮತ್ತೆ ಮುಕ್ತವಾಗಿ ಮಾತನಾಡಿದ್ದಾರೆ.

ಅಲ್ಲು ಅರ್ಜುನ್‌ ನಟನೆಯ ʻರಾಕಾʼ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?

Allu Arjun: 'ರಾಕಾ' ಚಿತ್ರಕ್ಕೆ ದೀಪಿಕಾ ಪಡೆದ ಸಂಭಾವನೆ ಎಷ್ಟು?

Deepika Padukone Remuneration: ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್‌ನ 'ರಾಕಾ' ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ನಟಿಯೊಬ್ಬರಿಗೆ ನೀಡಲಾದ ಅತೀ ದೊಡ್ಡ ಮೊತ್ತವಾಗಿದೆಯಂತೆ.

Photos: ʻನೀವು ಬದ್ರರ್‌ ಇನ್‌ ಲಾ ಅಲ್ಲ, ನನ್ನ ನಿಜವಾದ ಬ್ರದರ್‌ʼ; ವಿಜಯ್‌ ದೇವರಕೊಂಡಗೆ ಅಣ್ಣನ ಸ್ಥಾನ ನೀಡಿದ ರಶ್ಮಿಕಾ ಸಹೋದರಿ ಶಿಮನ್‌

'ನಂಗೆ ನಿಜವಾದ ಅಣ್ಣ ನೀವು' ; ವಿಜಯ್‌ ದೇವರಕೊಂಡ ಬಗ್ಗೆ ರಶ್ಮಿಕಾ ತಂಗಿ ಮಾತು

ನಟಿ ರಶ್ಮಿಕಾ ಮಂದಣ್ಣ ಹಾಗೂ ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಹಸೆಮಣೆ ಏರುವ ಮೂಲಕ ತಮ್ಮ ದಾಂಪತ್ಯ ಜೀವನಕ್ಕೆ ಅದ್ಧೂರಿ ಮುನ್ನುಡಿ ಬರೆದಿದ್ದಾರೆ. ಫೆಬ್ರವರಿ 26 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಈ ತಾರಾ ಜೋಡಿಯ ವಿವಾಹ ಮಹೋತ್ಸವ ಅತ್ಯಂತ ವೈಭವದಿಂದ ಜರುಗಿತು. ಈ ಅದ್ಧೂರಿ ಮದುವೆಯು ರಾಜಸ್ಥಾನದ ಉದಯ್‌ಪುರದಲ್ಲಿ ನಡೆದಿದ್ದರೂ, ರಶ್ಮಿಕಾ ಅವರು ತಮ್ಮ ಮೂಲನೆಲೆಯಾದ ಕೊಡಗಿನ ಸಂಪ್ರದಾಯವನ್ನು ಮರೆತಿರಲಿಲ್ಲ. ಕೊಡವ ಸಂಪ್ರದಾಯದಂತೆ ಮದುವೆಯ ಶಾಸ್ತ್ರಗಳು ರಶ್ಮಿಕಾ ಅವರ ತವರಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ನೆರವೇರಿದ್ದವು. ಸಂಗೀತ, ಹಳದಿ ಶಾಸ್ತ್ರ ಸೇರಿದಂತೆ ಪ್ರತಿಯೊಂದು ಕಾರ್ಯಕ್ರಮದಲ್ಲೂ ಕುಟುಂಬಸ್ಥರು ಮತ್ತು ಆತ್ಮೀಯರು ಸಂಭ್ರಮದಿಂದ ಭಾಗಿಯಾಗಿದ್ದರು. ಇದೀಗ ಈ ಮದುವೆಯ ಅಪರೂಪದ ಫೋಟೋಗಳನ್ನು ರಶ್ಮಿಕಾ ತಂಗಿ ಶಿಮನ್ ಮಂದಣ್ಣ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಕ್ಕ ಹಾಗೂ ಬಾವನ ಬಗ್ಗೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಬಾಲಯ್ಯ, ಶಾರುಖ್‌ ಖಾನ್‌ ಬಳಿಕ ʻಜೈಲರ್‌ 2ʼ ಚಿತ್ರಕ್ಕೆ ಶಾಕ್‌ ನೀಡಿದ ಪವನ್‌ ಕಲ್ಯಾಣ್‌; ರಜನಿಕಾಂತ್‌ ಸಿನಿಮಾಕ್ಕೆ ಗೆಸ್ಟ್‌ ರೋಲ್‌ನದ್ದೇ ಸಮಸ್ಯೆ!

Rajinikanth: ʻಜೈಲರ್ 2ʼ ಚಿತ್ರಕ್ಕೆ ನೋ ಎಂದ ನಟ ಪವನ್ ಕಲ್ಯಾಣ್!

Jailer 2 Guest Role Problem: ಜೈಲರ್‌ 2 ಸಿನಿಮಾದ ಪ್ರಮುಖ ಅತಿಥಿ ಪಾತ್ರವೊಂದು ಈಗ ತಲೆನೋವಾಗಿ ಪರಿಣಮಿಸಿದೆ. ಮೊದಲು ನಂದಮೂರಿ ಬಾಲಕೃಷ್ಣ, ಶಾರುಖ್ ಖಾನ್ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಅವರು ಒಪ್ಪಿಕೊಳ್ಳಲಿಲ್ಲ. ಈಗ ನಟ ಪವನ್ ಕಲ್ಯಾಣ್ ಕೂಡ ರಾಜಕೀಯ ಒತ್ತಡದ ಕಾರಣ ಈ ಚಿತ್ರದಿಂದ ಹಿಂದೆ ಸರಿದಿದ್ದಾರೆ ಎಂದು ತಿಳಿದುಬಂದಿದೆ.

ʻಜನ ನಾಯಗನ್‌ʼ ಚಿತ್ರ ಲೀಕ್: ʻದಳಪತಿʼ ವಿಜಯ್‌ ಸಿನಿಮಾದ ಬೆಂಬಲಕ್ಕೆ ನಿಂತ ರಜನಿಕಾಂತ್‌ - ರಿಷಬ್‌ ಶೆಟ್ಟಿ

'ಜನ ನಾಯಗನ್' ಲೀಕ್: ‌ʻದಳಪತಿʼ ವಿಜಯ್ ಪರ ನಿಂತ ರಜನಿಕಾಂತ್, ರಿಷಬ್ ಶೆಟ್ಟಿ

Jana Nayagan Movie Leak: ದಳಪತಿ ವಿಜಯ್‌ ಅವರ ಜನ ನಾಯಗನ್ ಸಿನಿಮಾವನ್ನು ಬಿಡುಗಡೆಗೂ ಮುನ್ನವೇ ಕಿಡಿಗೇಡಿಗಳು ಅದರ ದೃಶ್ಯಗಳನ್ನು ಸೋರಿಕೆ ಮಾಡಿರುವುದು ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಈ ಕೃತ್ಯದ ವಿರುದ್ಧ ಸೂಪರ್‌ ಸ್ಟಾರ್‌ ರಜನಿಕಾಂತ್‌, ರಿಷಬ್‌ ಶೆಟ್ಟಿ ಮತ್ತು ಸೂರ್ಯ ಮುಂತಾದವರು ಧ್ವನಿ ಎತ್ತಿದ್ದು, ಚಿತ್ರತಂಡದ ವರ್ಷಗಳ ಪರಿಶ್ರಮಕ್ಕೆ ಧಕ್ಕೆ ತಂದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಸಿಂಗರ್ ಮಂಗ್ಲಿ ವಿರುದ್ಧ ಹೈದರಾಬಾದ್‌ನಲ್ಲಿ ಎಫ್‌ಐಆರ್; 10 ಕೋಟಿ ರೂ. ವಂಚನೆ - ಪ್ರಾಣ ಬೆದರಿಕೆ ಆರೋಪ!

ಮತ್ತೆ ವಿವಾದದ ಸುಳಿಯಲ್ಲಿ ಗಾಯಕಿ ಮಂಗ್ಲಿ; 10 ಕೋಟಿ ರೂ. ವಂಚನೆ ಆರೋಪ

Singer Mangli Fraud Case: ಗಾಯಕಿ ಮಂಗ್ಲಿ ಅವರು 10 ಕೋಟಿ ರೂಪಾಯಿ ವಂಚಿಸಿದ್ದಾರೆ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಹೈದರಾಬಾದ್‌ನ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿಂದೆ ಡ್ರಗ್ಸ್ ಪಾರ್ಟಿ ಮತ್ತು ಧಾರ್ಮಿಕ ವಿವಾದಗಳಿಂದ ಸುದ್ದಿಯಾಗಿದ್ದ ಮಂಗ್ಲಿ, ಈಗ ಮತ್ತೊಮ್ಮೆ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದಾರೆ.

Dacoit Opening Day: ಅಡಿವಿ ಶೇಷ್ 'ಡಕಾಯಿತ್' ಸಿನಿಮಾ; ಮೊದಲ ದಿನವೇ ಹೀನಾಯ ಕಲೆಕ್ಷನ್!

ಅಡಿವಿ ಶೇಷ್ 'ಡಕಾಯಿತ್' ಸಿನಿಮಾ; ಮೊದಲ ದಿನವೇ ಹೀನಾಯ ಕಲೆಕ್ಷನ್!

Dacoit Opening Day: `ಡಕಾಯತ್’ ಸಿನಿಮಾದಲ್ಲಿ ಟಾಲಿವುಡ್‌ನ ಯುವ ಮತ್ತು ಪ್ರತಿಭಾನ್ವಿತ ನಾಯಕ ಅಡಿವಿ ಶೇಷ್ ನಟಿಸಿದ್ದಾರೆ. ಶನಿಲ್ ಡಿಯೋ ನಿರ್ದೇಶನದ ಈ ಲವ್ ಮತ್ತು ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿ. ಅಡವಿ ಶೇಷ್ ಹಾಗೂ ಮೃಣಾಲ್ ಠಾಕೂರ್ ಅಭಿನಯದ ಡಕಾಯಿತ್’ ಚಿತ್ರವನ್ನು ಜನರು ಅಷ್ಟಾಗಿ ಇಷ್ಟಪಟ್ಟಿಲ್ಲ. ಈ ಸಿನಿಮಾ ಮೊದಲ ದಿನದ ಹೀನಾಯ ಕಲೆಕ್ಷನ್ ಮಾಡಿದೆ. ಹಿಂದಿಯಲ್ಲಿ ಕಡಿಮೆ ಕಲೆಕ್ಷನ್‌ ದಾಖಲಿಸಿದೆ.

Ranveer Singh: RSS ಸ್ಥಾಪಕ ಹೆಡ್ಗೇವಾರ್ ಸ್ಮೃತಿ ಮಂದಿರಕ್ಕೆ ರಣವೀರ್ ಸಿಂಗ್ ಭೇಟಿ!

RSS ಸ್ಥಾಪಕ ಹೆಡ್ಗೇವಾರ್ ಸ್ಮೃತಿ ಮಂದಿರಕ್ಕೆ ರಣವೀರ್ ಸಿಂಗ್ ಭೇಟಿ!

Ranveer Singh: ಬಾಲಿವುಡ್ ನಟ ರಣವೀರ್ ಸಿಂಗ್ ಶುಕ್ರವಾರ ನಾಗ್ಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡ್ಗೇವಾರ್ ಅವರ ಸ್ಮೃತಿ ಮಂದಿರ ಭೇಟಿ ನೀಡಿ, ಗೌರವ ಸಲ್ಲಿಸಿದರು. ಹಿರಿಯ ಆರ್‌ಎಸ್‌ಎಸ್ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ರಣವೀರ್ ಸಿಂಗ್ ಅವರ ಈ ಭೇಟಿಯು ರಾಜಕೀಯ ಮತ್ತು ಚಿತ್ರರಂಗದ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

Game Of Thrones Actor: ʻಗೇಮ್ ಆಫ್ ಥ್ರೋನ್ಸ್ʼ ನಟ ಮೈಕೆಲ್ ಪ್ಯಾಟ್ರಿಕ್ ನಿಧನ

ʻಗೇಮ್ ಆಫ್ ಥ್ರೋನ್ಸ್ʼ ನಟ ಮೈಕೆಲ್ ಪ್ಯಾಟ್ರಿಕ್ ನಿಧನ

Game Of Thrones Actor: ಗೇಮ್ ಆಫ್ ಥ್ರೋನ್ಸ್ ನಟ ಮೈಕೆಲ್ ಪ್ಯಾಟ್ರಿಕ್ 35ನೇ ವಯಸ್ಸಿಗೆ ನಿಧನರಾಗಿದ್ದಾರೆ. ನಟ ಮತ್ತು ಬರಹಗಾರ ಮೈಕೆಲ್ ಪ್ಯಾಟ್ರಿಕ್, ಮೋಟಾರ್ ನ್ಯೂರಾನ್ ಕಾಯಿಲೆ ಯೊಂದಿಗೆ ದೀರ್ಘಕಾಲದ ಹೋರಾಟದ ನಂತರ ನಿಧನರಾದರು. ಮೈಕೆಲ್ ಪ್ಯಾಟ್ರಿಕ್ ಅವರ ಪತ್ನಿ ನಟನ ನಿಧನದ ಬಗ್ಗೆ ದೃಢಪಡಿಸಿದ್ದಾರೆ.

Daali Dhananjaya: ಡಾಲಿ ಧನಂಜಯ ನಿರ್ಮಾಣದ 'ಜೆರಾಕ್ಸ್' ವೆಬ್ ಸರಣಿಯಲ್ಲಿ ನಾಗಭೂಷಣ್ ನಾಯಕ!

ಡಾಲಿ ಧನಂಜಯ ನಿರ್ಮಾಣದ 'ಜೆರಾಕ್ಸ್' ವೆಬ್ ಸರಣಿಯಲ್ಲಿ ನಾಗಭೂಷಣ್ ನಾಯಕ!

Daali Dhananjaya: ಕನ್ನಡ ಮಣ್ಣಿನ ಸೊಗಡನ್ನು ಪ್ರತಿಬಿಂಬಿಸುವ ಕಥೆಗಳಿಗೆ zee5 ವೇದಿಕೆ ಸೃಷ್ಟಿಸಿದೆ. ಈಗಾಗಲೇ ಹಲವು ವೆಬ್ ಸರಣಿಗಳನ್ನು ಪ್ರೇಕ್ಷಕರಿಗೆ ನೀಡಿರುವ zee5 ಈಗ 'ಜೆರಾಕ್ಸ್' ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ನಟನಾಗಿ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಡಾಲಿ ಧನಂಜಯ್ ತಮ್ಮ ಡಾಲಿ ಪಿಕ್ಚರ್ಸ್ ಬ್ಯಾನರ್ ನಡಿ 'ಜೆರಾಕ್ಸ್' ವೆಬ್ ಸರಣಿಯನ್ನು ನಿರ್ಮಿಸುತ್ತಿದ್ದಾರೆ. ಈ ಸಿರೀಸ್ ನ್ನು 'ಬ್ಲಿಂಕ್' ಚಿತ್ರದ ಖ್ಯಾತಿಯ ನಿರ್ದೇಶಕ ಶ್ರೀನಿಧಿ ಬೆಂಗಳೂರು ನಿರ್ದೇಶಿಸಲಿದ್ದಾರೆ. ಜೆರಾಕ್ಸ್ ವೆಬ್ ಸರಣಿಯ ಮುಖ್ಯಭೂಮಿಕೆಯಲ್ಲಿ ನಾಗಭೂಷಣ್ ನಟಿಸಲಿದ್ದಾರೆ.

Anil Kapoor: ಅನಿಲ್ ಕಪೂರ್ ನಟನೆಯ ಈ ಸಿರೀಸ್‌ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

ಅನಿಲ್ ಕಪೂರ್ ನಟನೆಯ ಈ ಸಿರೀಸ್‌ ಯಾವ ಒಟಿಟಿಯಲ್ಲಿ ಸ್ಟ್ರೀಮಿಂಗ್‌?

Anil Kapoor: ಅನಿಲ್ ಕಪೂರ್ ಅವರ ಆಕ್ಷನ್ ಥ್ರಿಲ್ಲರ್ ಸಿರೀಸ್‌ 24 ಮತ್ತೆ ಸ್ಟ್ರೀಮಿಂಗ್‌ಗೆ ಸಿದ್ಧವಾಗುತ್ತಿದೆ. ಎರಡೂ ಸೀಸನ್‌ಗಳು ಜಿಯೋ ಹಾಟ್‌ಸ್ಟಾರ್‌ನಲ್ಲಿ ಲಭ್ಯವಿರುತ್ತವೆ. ಮುಖ್ಯಸ್ಥ ಜೈ ಸಿಂಗ್ ರಾಥೋಡ್ ಆಗಿ ಸರಣಿಯನ್ನು ಮುನ್ನಡೆಸಿದ್ದ ಅನಿಲ್, ಈ ಕಾರ್ಯಕ್ರಮವು ಡಿಜಿಟಲ್ ಆಗಿ ಮರಳುತ್ತಿದ್ದಂತೆ ಮತ್ತೊಮ್ಮೆ ಮುಂಚೂಣಿಯಲ್ಲಿರಲಿದ್ದಾರೆ.

Jana Nayagan: 'ಜನ ನಾಯಗನ್' ದೃಶ್ಯ ಲೀಕ್‌; ಬೆಂಬಲಕ್ಕೆ ನಿಂತ ತಾರೆಯರು

'ಜನ ನಾಯಗನ್' ದೃಶ್ಯ ಲೀಕ್‌; ಬೆಂಬಲಕ್ಕೆ ನಿಂತ ತಾರೆಯರು

Jana Nayagan: ದಳಪತಿ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಲೀಕ್ ಆಗಿದ್ದು, ಕೆವಿಎನ್ ಪ್ರೊಡಕ್ಷನ್ಸ್ ತೀವ್ರ ತೊಂದರೆಯಲ್ಲಿದೆ. ನಟ ಚಿರಂಜೀವಿ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನಟ ವಿಜಯ್ ರಾಜಕೀಯಕ್ಕೆ ಸಂಪೂರ್ಣವಾಗಿ ಪ್ರವೇಶಿಸುವ ಮೊದಲು ಅವರ ಕೊನೆಯ ಚಿತ್ರ ' ಜನ ನಾಯಗನ್' ಅವರ ಮುಂಬರುವ ಚಿತ್ರವಾಗಿದ್ದು, ಆನ್‌ಲೈನ್‌ನಲ್ಲಿ ಚಿತ್ರದ ಸೋರಿಕೆಯ ನಂತರ ಮತ್ತಷ್ಟು ವಿಳಂಬವಾಗಿದೆ. ನಟ ಚಿರಂಜೀವಿ ಶಿವಕಾರ್ತಿಕೇಯನ್ ಮತ್ತು ಇತರ ಉದ್ಯಮದ ಗೆಳೆಯರು ಲೀಕ್‌ ಆಗಿರುವ ಬಗ್ಗೆ ಖಂಡಿಸಿದ್ದಾರೆ.

Ranveer Singh: ಪರಿಷ್ಕೃತ ಕ್ಷಮಾಪಣೆ ಸಲ್ಲಿಸಲು ಒಪ್ಪಿದ ರಣವೀರ್ ಸಿಂಗ್; ಪ್ರಕರಣವನ್ನು ಏಪ್ರಿಲ್ 23ಕ್ಕೆ ಮುಂದೂಡಿಕೆ

ಪರಿಷ್ಕೃತ ಕ್ಷಮಾಪಣೆ ಸಲ್ಲಿಸಲು ಒಪ್ಪಿದ ರಣವೀರ್ ಸಿಂಗ್

Ranveer Singh: ಚಾವುಂಡಿ ದೈವ ಅನುಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಣವೀರ್ ಸಿಂಗ್ ಅವರು ಕೇಸ್ ಎದುರಿಸುತ್ತಿದ್ದಾರೆ. ವರದಿಯ ಪ್ರಕಾರ, ಕಾಂತಾರದಲ್ಲಿ ಚಾಮುಂಡಿ ದೇವಿಯ ಚಿತ್ರಣಕ್ಕೆ ಸಂಬಂಧಿಸಿದ ಹೇಳಿಕೆಗಳಿಗೆ ಕ್ಷಮೆಯಾಚಿಸುವ ಪರಿಷ್ಕೃತ ಅಫಿಡವಿಟ್ ಸಲ್ಲಿಸಲು ಸಿದ್ಧರಿರುವುದಾಗಿ ರಣವೀರ್ ಸಿಂಗ್ ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದಾರೆ . ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಮುಂದೆ ಈ ಹೇಳಿಕೆಯನ್ನು ಸಲ್ಲಿಸಲಾಯಿತು.

Rashmika Mandanna: ಜೀವನದಲ್ಲಿ ಪ್ರತಿಯೊಂದೂ ಒಂದು ಒಳ್ಳೆಯ ಕಾರಣಕ್ಕಾಗಿ ನಡೆಯುತ್ತದೆ! ರಶ್ಮಿಕಾ ಭಾವುಕ ಪೋಸ್ಟ್‌

ತವರಿನಲ್ಲಿ ರಶ್ಮಿಕಾ! ನಟಿಯ ಭಾವುಕ ಪೋಸ್ಟ್‌ ವೈರಲ್‌

Rashmika Mandanna: ತೆಲುಗು ನಟಿ ರಶ್ಮಿಕಾ ಮಂದಣ್ಣ ತಮ್ಮ 30 ನೇ ಹುಟ್ಟುಹಬ್ಬವನ್ನು ಕೂರ್ಗ್‌ನಲ್ಲಿ ನಡೆದ ವಿಶೇಷ ಆಚರಣೆಯ ಸಂದರ್ಭದಲ್ಲಿ ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಹೃತ್ಪೂರ್ವಕವಾಗಿ ಆಚರಿಸಿಕೊಂಡರು. ಈ ಹುಟ್ಟುಹಬ್ಬವು ಮದುವೆಯ ನಂತರದ ಅವರ ಮೊದಲ ಹುಟ್ಟುಹಬ್ಬವಾಗಿದ್ದು, ಪತಿ ವಿಜಯ್ ದೇವರಕೊಂಡ ಅವರೊಂದಿಗೆ ಆಚರಿಸಲಾಯಿತು.

OTT releases This Week: ತಮಿಳಿನ ಸೂಪರ್ ಹಿಟ್ ಸಿನಿಮಾ ಜೊತೆ ಈ ಕನ್ನಡ ಸಿನಿಮಾ ಒಟಿಟಿಗೆ ಎಂಟ್ರಿ!

ತಮಿಳಿನ ಸೂಪರ್ ಹಿಟ್ ಸಿನಿಮಾ ಜೊತೆ ಈ ಕನ್ನಡ ಸಿನಿಮಾ ಒಟಿಟಿಗೆ ಎಂಟ್ರಿ!

OTT releases This Week: ಒಟಿಟಿಯಲ್ಲಿ (OTT) ಈ ವೀಕೆಂಡ್ ಇಂಟ್ರೆಸ್ಟಿಂಗ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ಸ್ಟ್ರೀಮಿಂಗ್ ಆರಂಭಿಸುತ್ತಿವೆ. ತಮಿಳಿನ ಸೂಪರ್ ಹಿಟ್ 'ಥಾಯ್ ಕಿಳವಿ' ಸಿನಿಮಾ ಕೂಡ ಈ ಲಿಸ್ಟ್‌ನಲ್ಲಿದೆ. ಕನ್ನಡದ ಒಂದು ಕಾಮಿಡಿ ಎಂಟರ್‌ಟೈನರ್‌ ಸಿನಿಮಾ ಕೂಡ ಒಟಿಟಿಗೆ ಬಂದಿದೆ. ಕೌಟುಂಬಿಕ ನಾಟಕಗಳು ಮತ್ತು ಜೈಲು ಹಾಸ್ಯಗಳಿಂದ ಹಿಡಿದು ಥ್ರಿಲ್ಲರ್‌ಗಳ ಮನರಂಜನೆಯ ಮಿಶ್ರಣ ಈ ವಾರ ವೀಕ್ಷಕರಿಗೆ ಸಿಗಲಿದೆ.

Thalapathy Vijay: ‘ಜನ ನಾಯಗನ್’ ದೃಶ್ಯ ಲೀಕ್: ಅಭಿಮಾನಿಗಳು ಗರಂ

Thalapathy Vijay: ‘ಜನ ನಾಯಗನ್’ ದೃಶ್ಯ ಲೀಕ್: ಅಭಿಮಾನಿಗಳು ಗರಂ

Thalapathy Vijay: ದಳಪತಿ ವಿಜಯ್ ಅವರ ಕೊನೆಯ ಚಿತ್ರ ' ಜನ ನಾಯಗನ್ 'ನ ಐದು ನಿಮಿಷಗಳ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದ. ಈ ಕ್ಲಿಪ್‌ನಲ್ಲಿ ಶೀರ್ಷಿಕೆ ಕ್ರೆಡಿಟ್‌ಗಳು ಮತ್ತು ವಿಜಯ್ ಅವರ ಪರಿಚಯಾತ್ಮಕ ದೃಶ್ಯವಿದೆ. ಸೋರಿಕೆಯಾದ ಕ್ಲಿಪ್ ಅನ್ನು ಹಲವು ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದ್ದು,. ಅಭಿಮಾನಿಗಳು ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಅನ್ನು ಟ್ಯಾಗ್ ಮಾಡಿ, ವೀಡಿಯೊವನ್ನು ಸೋರಿಕೆ ಮಾಡಿದವರು ಮತ್ತು ಅದನ್ನು ಹಂಚಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ವೀಡಿಯೊ ಬಹುಶಃ ಎಡಿಟ್ ಟೇಬಲ್‌ನಿಂದ ಸೋರಿಕೆಯಾಗಿರಬಹುದು.

Arjun Kapoor: ಅರ್ಜುನ್ ಕಪೂರ್ ಅದೊಂದು ಪೋಸ್ಟ್‌ನಿಂದ ಫ್ಯಾನ್ಸ್‌ ಕಳವಳ!

Arjun Kapoor: ಅರ್ಜುನ್ ಕಪೂರ್ ಅದೊಂದು ಪೋಸ್ಟ್‌ನಿಂದ ಫ್ಯಾನ್ಸ್‌ ಕಳವಳ!

Arjun Kapoor: ಬಾಲಿವುಡ್ ನಟ ಅರ್ಜುನ್ ಕಪೂರ್ ಇತ್ತೀಚೆಗೆ ತಮ್ಮ ತಾಯಿಯ ಜನ್ಮ ವಾರ್ಷಿಕೋತ್ಸವದಂದು ಭಾವನಾತ್ಮಕ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಜೀವನವು ತಮಗೆ ‘ಕ್ರೂರವಾಗಿ ವರ್ತಿಸುತ್ತಿದೆ' ಎಂದು ಬರೆದುಕೊಂಡಿದ್ದರು. ಇದೀಗ ಅರ್ಜುನ್ ಹಂಚಿಕೊಂಡಿರುವ ಮತ್ತೊಂದು ಗೂಢಾರ್ಥದ ಸಂದೇಶವು ಅಭಿಮಾನಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.

Peter Movie Review: ಚಂಡೆ ವಾದ್ಯದ ಸದ್ದಿನ ನಡುವೆ ಅಡಗಿದ ರೋಚಕ ರಹಸ್ಯ!

ರಾಜೇಶ್ ಧ್ರುವ ನಟನೆಯ 'ಪೀಟರ್' ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

ಧ್ರುವ ನಟನೆಯ ಪೀಟರ್‌ ಸಿನಿಮಾ ಕೊಡಗಿನ ಸೊಗಡಿನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಊರು ಬಿಟ್ಟಿದ್ದ ಪೀಟರ್ ಮತ್ತೆ ಮರಳಿದಾಗ ಅವನ ಜೀವನದ ಕರಾಳ ಸತ್ಯಗಳು ಬಿಚ್ಚಿಕೊಳ್ಳುತ್ತವೆ. ಚಂಡೆ ವಾದ್ಯದ ಹಿನ್ನೆಲೆಯಲ್ಲಿ ಸಾಗುವ ಈ ಕಥೆಯಲ್ಲಿ ಪ್ರೀತಿ, ತಾಯಿ ಮಮತೆ ಮತ್ತು ಸೇಡಿನ ಎಳೆಗಳಿವೆ.

Actress Meena: ತಮ್ಮ ಬಂಗಲೆಯನ್ನ 100 ಕೋಟಿ ರೂ.ಗೆ ಮಾರಾಟ ಮಾಡಿದ್ರಾ ನಟಿ ಮೀನಾ?

ತಮ್ಮ ಬಂಗಲೆಯನ್ನ 100 ಕೋಟಿ ರೂ.ಗೆ ಮಾರಾಟ ಮಾಡಿದ್ರಾ ನಟಿ ಮೀನಾ?

Actress Meena: ನಟಿ ಮೀನಾ 90 ರ ದಶಕದಲ್ಲಿ ತಮಿಳಿನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿದ್ದರು. ರಜನಿಕಾಂತ್, ಕಮಲ್ ಹಾಸನ್, ಅಜಿತ್ ಮತ್ತು ಇತರ ಅನೇಕ ನಟರೊಂದಿಗೆ ನಟಿಸಿದ್ದಾರೆ. ವಿದ್ಯಾಸಾಗರ್ ಅವರನ್ನು ವಿವಾಹವಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮೀನಾ ಅವರಂತೆಯೇ, ಅವರ ಮಗಳು ಸಹ ಚಲನಚಿತ್ರೋದ್ಯಮಕ್ಕೆ ಪದಾರ್ಪಣೆ ಮಾಡಿದರು. ಥೇರಿ ನಂತರ, ಅವರು ಬೇರೆ ಯಾವುದರಲ್ಲೂ ನಟಿಸಲಿಲ್ಲ. . ಇತ್ತೀಚೆಗೆ ಮೀನಾ ತಮಿಳುನಾಡಿನ ತಮ್ಮ ಬಂಗಲೆಯನ್ನು ಭಾರೀ ದರಕ್ಕೆ ಮಾರಾಟ ಮಾಡಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ತಮಿಳು ಮಾಧ್ಯಮಗಳಲ್ಲಿ ವರದಿಯಾಗಿದೆ.

Loading...