ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Bigg Boss 12: ʻನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ, ಊರಗೆಲ್ಲಾ ಗೊತ್ತೂ ಗಿಲ್ಲಿ ಗಮ್ಮತ್ತುʼ;  ಪಳಾರ್‌ ಗಿಲ್ಲಿ  ನಟನ ಬಗ್ಗೆ ʻಬಿಗ್‌ ಬಾಸ್‌ʼ ಪಂಚ್‌ ಲೈನ್

ಎದುರಾಳಿಗೆ ಚಮಕ್ ನೀಡೋ ಚಾಲಾಕಿ, ಮರುಭೂಮಿಯಲ್ಲೂ ಹೂ ಬೆಳೆಸೋ ಕಲೆಗಾರ ಗಿಲ್ಲಿ!

Bigg Boss Kannada Season 12 Finale: ಬಿಗ್ ಬಾಸ್ ಕನ್ನಡ 12ರ ಫಿನಾಲೆಯಲ್ಲಿ ಗಿಲ್ಲಿ ನಟ ಸಂಚಲನ ಮೂಡಿಸುತ್ತಿದ್ದು, ಅವರ ಬಗ್ಗೆ ಬಿಗ್ ಬಾಸ್ ತಂಡವು ವಿಶಿಷ್ಟವಾಗಿ ಪಂಚ್ ಲೈನ್‌ಗಳನ್ನು ಹಂಚಿಕೊಂಡಿದೆ. ಗಿಲ್ಲಿಯನ್ನು "ನಗ್ ನಗ್ತಾನೇ ಚುರುಕು ಮುಟ್ಟಿಸೋ ಚಾಲಾಕಿ" ಎಂದು ವರ್ಣಿಸಿರುವ ತಂಡ, ಅವರ ಐದು ಪ್ರಮುಖ ಗುಣಗಳನ್ನು ಪಟ್ಟಿ ಮಾಡಿದೆ.

ʻರೇಗಿಸಿದ್ರೆ ಸುಮ್ನಿರೋಲ್ಲ ಕಾವ್ಯ, ತನ್ನವರನ್ನ ಬಿಟ್ಕೋಡಲ್ಲ ರಕ್ಷಿತಾ, ಮಗುಮನಸ್ಸಿನ ಹೃದಯವಂತ ರಘುʼ; ಈ ಮೂವರ ಬಗ್ಗೆ ʻಬಿಗ್ ಬಾಸ್‌ʼ ಹೇಳಿದ್ದೇನು?

ರಘು, ಕಾವ್ಯ, ರಕ್ಷಿತಾ ಬಗ್ಗೆ 'ಪಂಚ್' ಲೈನ್‌ ಹೇಳಿದ ʻಬಿಗ್ ಬಾಸ್ʼ!

Bigg Boss Kannada 12: ಫಿನಾಲೆ ಅಂತಿಮ ಘಟ್ಟದಲ್ಲಿರುವ ರಘು, ಕಾವ್ಯ ಮತ್ತು ರಕ್ಷಿತಾ ಶೆಟ್ಟಿ ಅವರ ವ್ಯಕ್ತಿತ್ವದ ಬಗ್ಗೆ ಬಿಗ್ ಬಾಸ್ ತಂಡ ವಿಶ್ಲೇಷಣೆ ಮಾಡಿದೆ. ಮ್ಯೂಟೆಂಟ್ ರಘು ಅವರನ್ನು "ಮಗು ಮನಸ್ಸಿನ ಹೃದಯವಂತ" ಎಂದು ಕರೆದರೆ, ಕಾವ್ಯ ಅವರನ್ನು "ನಗೆ ಮಲ್ಲಿಗೆ" ಎಂದು ಬಣ್ಣಿಸಲಾಗಿದೆ. ಇನ್ನು ರಕ್ಷಿತಾ ಅವರನ್ನು "ಚೋಟ್ ಮೆಣಸಿನಕಾಯಿ" ಎಂದು ಬಿಗ್ ಬಾಸ್ ಕರೆದಿದ್ದಾರೆ.

ನಿಜ ಜೀವನದಲ್ಲಿ ಲಾ ಓದಿದ್ದರೂ ಲಾಯರ್‌ ಆಗಲಿಲ್ಲ ನಟ ಕೋಮಲ್‌; ಆದರೂ ಕರಿಕೋಟು ಧರಿಸುವ ಚಾನ್ಸ್‌ ಕೊಟ್ಟ ʻತೆನಾಲಿʼ!

ನಿಜ ಜೀವನದ ಕನಸು ತೆರೆಮೇಲೆ ನನಸು: ಕರಿಕೋಟು ಧರಿಸಿ ಲಾಯರ್ ಆದ ನಟ ಕೋಮಲ್

ನಟ ಕೋಮಲ್ ಕುಮಾರ್ ಅವರು ಇದೇ ಮೊದಲ ಬಾರಿಗೆ ತೆರೆಮೇಲೆ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ, ಕೋಮಲ್ ಅವರು ನಿಜ ಜೀವನದಲ್ಲೂ ಕಾನೂನು ಪದವಿ ಪಡೆದಿದ್ದಾರೆ. ಈ ಹಿಂದಿನ 'ಮರೀಚಿ' ಚಿತ್ರದ ನಿರ್ದೇಶಕ ಸಿದ್ದ್ರುವ್ ಸಿದ್ದು ಅವರು ಕೋಮಲ್ ಅವರಿಗಾಗಿ 'ತೆನಾಲಿ ಡಿಎ ಎಲ್‌ಎಲ್‌ಬಿ' ಎಂಬ ವಿಭಿನ್ನ ಕಥೆಯನ್ನು ರೆಡಿ ಮಾಡಿಕೊಂಡಿದ್ದಾರೆ.

AR Rahman: ವಿವಾದ ಹುಟ್ಟುಹಾಕಿದ್ದ ʻಧರ್ಮʼದ ಹೇಳಿಕೆ: ಟೀಕೆಯ ನಂತರ ಮೌನ ಮುರಿದ AR ರೆಹಮಾನ್‌!

ಟೀಕೆಯ ನಂತರ ಮೌನ ಮುರಿದ AR ರೆಹಮಾನ್‌!

Music composer AR Rahman: ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರು ಭಾನುವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಇತ್ತೀಚಿನ ಸಂದರ್ಶನವೊಂದರಲ್ಲಿ ಧರ್ಮದ ಕಾರಣದಿಂದ ತಮಗೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿದೆ ಎಂದು ಎ.ಆರ್. ರೆಹಮಾನ್ ಹೇಳಿದ್ದರು. ಅಲ್ಲದೇ ‘ಛಾವ’ ಸಿನಿಮಾದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ಎ.ಆರ್. ರೆಹಮಾನ್ ಹೇಳಿಕೆ ಭಾರಿ ಚರ್ಚೆಗಳನ್ನುಂಟು ಮಾಡಿತ್ತು.

Bigg Boss 12: ಕಾವ್ಯ ವಾರ್ನಿಂಗ್‌ಗೆ ಗಿಲ್ಲಿ ನಟ ಡೋಂಟ್‌ ಕೇರ್;‌ ʻಕಾವು ನಮ್ ಮಾವನ ಮಗಳುʼ ಎಂದು ಮತ್ತೆ ಕಾಲೆಳೆದ ಪಳಾರ್!‌

ಕಾವ್ಯ ವಾರ್ನಿಂಗ್‌ಗೆ ಡೋಂಟ್ ಕೇರ್; ಫಿನಾಲೆ ವೇದಿಕೆಯಲ್ಲಿ ಗಿಲ್ಲಿ ಕಾಮಿಡಿ

Bigg Boss Kannada 12 Pre Finale Episode: ಗಿಲ್ಲಿ ನಟ ಮತ್ತು ಕಾವ್ಯ ಶೈವ ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನದಿಂದಲೂ ತಮ್ಮ ವಿಭಿನ್ನ ಬಾಂಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ, ಇತ್ತೀಚೆಗೆ ಗಿಲ್ಲಿ ನೀಡುವ 'ಕಾವು' ಎಂಬ ಅಡ್ಡಹೆಸರು ಮತ್ತು ಪದೇ ಪದೇ ರೇಗಿಸುವುದು ಕಾವ್ಯ ಅವರಿಗೆ ಕಿರಿಕಿರಿ ಉಂಟುಮಾಡಿದೆ. ಆದರೂ ಗಿಲ್ಲಿ ರೇಗಿಸುವುದನ್ನ ನಿಲ್ಲಿಸಿಲ್ಲ.

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 12ʼ ಫಿನಾಲೆ ಪ್ರಸಾರಕ್ಕೂ ಮುನ್ನ ಸ್ಪೆಷಲ್‌ ಪೋಸ್ಟ್‌ ಶೇರ್‌ ಮಾಡಿದ ‌ʻಕಿಚ್ಚʼ ಸುದೀಪ್; ಏನಿದೆ ಅದರಲ್ಲಿ?

ಬಿಗ್‌ ಬಾಸ್‌ ಕನ್ನಡ 12 ಫಿನಾಲೆಗೂ ಮುನ್ನ ಕಿಚ್ಚ ಸುದೀಪ್ ಸ್ಪೆಷಲ್‌ ಪೋಸ್ಟ್

Kiccha Sudeep: ಸತತ 112 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಬಿಗ್ ಬಾಸ್ ಕನ್ನಡ 12ಕ್ಕೆ ಇಂದು ಅದ್ದೂರಿ ತೆರೆ ಬೀಳುತ್ತಿದೆ. ಈ ಹಿನ್ನೆಲೆಯಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು ಟ್ವಿಟರ್ ಮೂಲಕ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. "ಪ್ರತಿ ಸೀಸನ್ ಕಳೆದಂತೆ ಬಿಗ್ ಬಾಸ್ ಏಳಿಗೆಗೆ ಸಾಕ್ಷಿಯಾಗಿದೆ, ಈ ಪಯಣ ಅಸಾಧಾರಣವಾದುದು" ಎಂದು ಬಣ್ಣಿಸಿರುವ ಅವರು, ವೀಕ್ಷಕರಿಗೆ ಮತ್ತು ತಾಂತ್ರಿಕ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಧನುಷ್‌ - ಅಶ್ವಿನಿ ಗೌಡ ಯಾವ್ಯಾವ ವಿಷಯಗಳಲ್ಲಿ ಪಂಟ್ರು ಗೊತ್ತಾ? ಇವರಿಬ್ಬರಿಗೆ ಬಿಗ್ ಬಾಸ್ ಕೊಟ್ಟ 'ಪಂಚಿಂಗ್' ಬಿರುದುಗಳೇನು?

ಧನುಷ್ 'ಸೈಲೆಂಟ್', ಅಶ್ವಿನಿ 'ವೈಲೆಂಟ್'! ಇವರಲ್ಲಿ ಯಾರು ಪವರ್‌ಫುಲ್?

Bigg Boss Kannada 12 Finale: ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರ ಫಿನಾಲೆ ವೇದಿಕೆಯಲ್ಲಿ ನಿಂತಿರುವ ಧನುಷ್ ಗೌಡ ಮತ್ತು ಅಶ್ವಿನಿ ಗೌಡ ಅವರ 112 ದಿನಗಳ ಜರ್ನಿಯನ್ನು ಬಿಗ್ ಬಾಸ್ ತಂಡ ಅದ್ಭುತವಾಗಿ ವರ್ಣಿಸಿದೆ. ಧನುಷ್ ಅವರನ್ನು "ಟಾಸ್ಕ್ ಮಾಸ್ಟರ್" ಎಂದು ಕರೆದರೆ, ಅಶ್ವಿನಿ ಅವರನ್ನು "ಸವಾಲಿಗೇ ಸವಾಲು ಹಾಕುವ ಎದೆಗಾತಿ" ಎಂದು ಬಣ್ಣಿಸಲಾಗಿದೆ.

ʻಬಿಗ್‌ ಬಾಸ್‌ ಕನ್ನಡ ಸೀಸನ್ 12‌ʼ ಶೋ ಫಿನಾಲೆ ತಲುಪಿದರೂ ತಪ್ಪುತ್ತಿಲ್ಲ ಸಂಕಷ್ಟ; ಸುದೀಪ್‌ ಹೇಳಿದ ಆ ಒಂದು ಮಾತಿನ ಬಗ್ಗೆ ಸಿಗಲಿದೆಯಾ ಸ್ಪಷ್ಟೀಕರಣ?

ಫಿನಾಲೆಗೂ ಮುನ್ನ ಬಿಗ್ ಶಾಕ್; ʻಬಿಗ್ ಬಾಸ್ʼ ತಂಡಕ್ಕೆ ನೋಟಿಸ್ ನೀಡಿದ್ಯಾರು?

Bigg Boss Kannada 12 Finale: ಬಿಗ್‌ ಬಾಸ್‌ 12 ಫಿನಾಲೆಗೆ ಕ್ಷಣಗಣನೆ ಆರಂಭವಾಗಿರುವಾಗಲೇ ಕಾರ್ಯಕ್ರಮಕ್ಕೆ ಕಾನೂನು ಸಂಕಷ್ಟ ಎದುರಾಗಿದೆ. ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ರಣಹದ್ದುಗಳ ಬಗ್ಗೆ ಮಾತನಾಡಿದ್ದರ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಅರಣ್ಯ ಇಲಾಖೆ ಈಗ ತಂಡಕ್ಕೆ ನೋಟಿಸ್ ನೀಡಿದೆ.

Bigg Boss Kannada 12 Finale: ಮೂವರು ಫೈನಲಿಸ್ಟ್‌ಗಳಿಗೆ ತಲಾ 33 ವೋಟ್ ಹಾಕಿದ ಈ ಸೀಸನ್‌ನ ಮಾಜಿ ಸ್ಪರ್ಧಿ; ಯಾರವರು? ಕೊಟ್ಟ ಕಾರಣವೇನು?

99 ಮತಗಳನ್ನು ಮೂವರು ಸ್ಪರ್ಧಿಗಳಿಗೆ ಹಂಚಿದ ಈ ಸೀಸನ್‌ನ ಮಾಜಿ ಸ್ಪರ್ಧಿ!

ಬಿಗ್ ಬಾಸ್ ಕನ್ನಡ 12ರ ಮಹಾ ಫಿನಾಲೆಯ ಸಂಭ್ರಮದ ನಡುವೆ, ಮಾಜಿ ಸ್ಪರ್ಧಿ ಮಂಜು ಭಾಷಿಣಿ ಅವರು ತಮ್ಮ 99 ಮತಗಳನ್ನು ಮೂವರು ಸ್ಪರ್ಧಿಗಳಿಗೆ ಸಮಾನವಾಗಿ ಹಂಚಿದ್ದಾರೆ. ಗಿಲ್ಲಿ ನಟ, ಧನುಷ್ ಮತ್ತು ರಕ್ಷಿತಾ ಶೆಟ್ಟಿಗೆ ತಲಾ 33 ಮತಗಳನ್ನು ನೀಡಿರುವ ಅವರು, ಈ ಮೂವರು ತಮಗೆ ಅತ್ಯಂತ ಪ್ರೀತಿಪಾತ್ರರು ಎಂದು ತಿಳಿಸಿದ್ದಾರೆ.

Mark OTT:  ಒಟಿಟಿಗೆ ಬರುತ್ತಿದೆ ಕಿಚ್ಚನ ‘ಮಾರ್ಕ್‌’ ಸಿನಿಮಾ; ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿಗೆ ಬರುತ್ತಿದೆ ಕಿಚ್ಚನ ‘ಮಾರ್ಕ್‌’ ಸಿನಿಮಾ; ಸ್ಟ್ರೀಮಿಂಗ್‌ ಎಲ್ಲಿ?

Sudeep: ಕಿಚ್ಚ ಸುದೀಪ್ ಆಕ್ಷನ್ ಥ್ರಿಲ್ಲರ್ ಚಿತ್ರ ಮಾರ್ಕ್ ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಿದರು. 2025 ರ ಕ್ರಿಸ್‌ಮಸ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರವು ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ ನಟ ಮತ್ತು ಚಲನಚಿತ್ರ ನಿರ್ಮಾಪಕರ ಎರಡನೇ ಸಹಯೋಗವನ್ನು ಗುರುತಿಸಿತು. ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ಬರುತ್ತಿದೆ ‘ಮಾರ್ಕ್’ಸಿನಿಮಾ.

JC The University : ಡಾಲಿ ಪಿಕ್ಚರ್ಸ್ ನಿರ್ಮಾಣದ ಜೆಸಿ ದಿ ಯೂನಿವರ್ಸಿ ಮೂವಿ; ಟ್ರೈಲರ್‌ ಔಟ್‌, ಶಿವಣ್ಣ ಮೆಚ್ಚುಗೆ

ಜೆಸಿ ದಿ ಯೂನಿವರ್ಸಿ ಮೂವಿ ಟ್ರೈಲರ್‌ ಔಟ್‌, ಶಿವಣ್ಣ ಮೆಚ್ಚುಗೆ

JC the university: ಡಾಲಿ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣದಲ್ಲಿ ಮೂಡಿ ಬಂದಿರುವ ಬಹು ನಿರೀಕ್ಷೆಯ ಜೆಸಿ ದಿ ಯೂನಿವರ್ಸಿಟಿ ಸಿನಿಮಾ ಫೆಬ್ರವರಿ 6ಕ್ಕೆ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದೆ. ಸೂರ್ಯ ಪ್ರಖ್ಯಾತ್ ಮತ್ತು ಭಾವನಾ ರೆಡ್ಡಿ ನಟನೆಯ ಜೆಸಿ ಸಿನಿಮಾದ ಟ್ರೈಲರ್ (Trailer) ರಿಲೀಸ್ ಮಾಡುವ ಜೊತೆಗೆ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ.

10 ಕೋಟಿ ರುಪಾಯಿ ನೀಡುವಂತೆ ಪಂಜಾಬಿ- ಬಾಲಿವುಡ್ ಖ್ಯಾತ ಗಾಯಕನಿಗೆ ಬಿಷ್ಣೋಯ್ ಗ್ಯಾಂಗ್ ಕೊಲೆ ಬೆದರಿಕೆ

ಬಿಷ್ಣೋಯ್ ಗ್ಯಾಂಗ್ ನಿಂದ ಖ್ಯಾತ ಗಾಯಕನಿಗೆ ಬೆದರಿಕೆ

ಪಂಜಾಬಿ-ಬಾಲಿವುಡ್ ನ ಖ್ಯಾತ ಗಾಯಕ ಬಿ ಪ್ರಾಕ್ ಅವರಿಗೆ ಬಿಷ್ಣೋಯ್ ಗ್ಯಾಂಗ್ ನಿಂದ ಕೊಲೆ ಬೆದರಿಕೆ ಬಂದಿದೆ. ಆರೋಪಿಗಳು 10 ಕೋಟಿ ರೂ. ಗೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದರೆ ನೆಲದಲ್ಲಿ ಹೂತು ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಕುರಿತು ಮೊಹಾಲಿ ಪೊಲೀಸರಿಗೆ ದೂರು ನೀಡಲಾಗಿದೆ. ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Kattalan Teaser: ಆಂಥೋನಿ ವರ್ಗೀಸ್ ಆಕ್ಷನ್-ಪ್ಯಾಕ್ಡ್  ಮೂವಿ 'ಕಟ್ಟಾಲನ್' ಟೀಸರ್‌ ಔಟ್‌;  ಅಜನೀಶ್ ಲೋಕನಾಥ್ ಸಂಗೀತ

ಆಂಥೋನಿ ವರ್ಗೀಸ್ ಆಕ್ಷನ್-ಪ್ಯಾಕ್ಡ್ ಮೂವಿ 'ಕಟ್ಟಾಲನ್' ಟೀಸರ್‌ ಔಟ್‌!

Ajaneesh Loknath: ಆಂಥೋನಿ ವರ್ಗೀಸ್ ಅವರ 'ಕಟ್ಟಾಲನ್' ಚಿತ್ರದ ಟೀಸರ್‌ ಔಟ್‌ ಆಗಿದೆ. ಕೊಚ್ಚಿಯ ವನಿತಾ-ವಿನೀತಾ ಚಿತ್ರಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಮಾನಿಗಳು, ಮಾಧ್ಯಮಗಳು ಮತ್ತು ವಿಶೇಷ ಅತಿಥಿಗಳ ಸಮ್ಮುಖದಲ್ಲಿ ಈ ಹೈ-ಆಕ್ಟೇನ್ ಆಕ್ಷನ್ ಚಿತ್ರದ ಪ್ರೋಮೋವನ್ನು ಬಿಡುಗಡೆ ಮಾಡಲಾಯಿತು. ಮೇ 14 ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ 'ಕಟ್ಟಾಲನ್' ಮಲಯಾಳಂ ಚಿತ್ರರಂಗದ ಅತಿದೊಡ್ಡ ಬಿಡುಗಡೆಗಳಲ್ಲಿ ಒಂದಾಗುವ ನಿರೀಕ್ಷೆಯಿದೆ.

Kannada New Movie: ‘ಪ್ರೇಮ್ ಲವ್ ನಂದಿನಿ’ ಪೋಸ್ಟರ್ ಬಿಡುಗಡೆ! ನಿರ್ದೇಶಕಿಯಾದ ಸುಧಾ

‘ಪ್ರೇಮ್ ಲವ್ ನಂದಿನಿ’ ಪೋಸ್ಟರ್ ಬಿಡುಗಡೆ! ನಿರ್ದೇಶಕಿಯಾದ ಸುಧಾ

Prem Love Nandini: ಹೊಸ ವರ್ಷಕ್ಕೆ ಹೊಸ ಪ್ರತಿಭೆಗಳ ತಂಡವೊಂದು ಹೊಸ ಚಿತ್ರ “ಪ್ರೇಮ್ ಲವ್ ನಂದಿನಿ” ಚಿತ್ರ ಮಾಡುವ ಮೂಲಕ ಚಿತ್ರೀಕರಣ ಮುಗಿಸಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಬಸವರಾಜ ನಂದಿ ಅವರ ನಿರ್ಮಾಣದಲ್ಲಿ, ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ ಸುಧಾ ಅಣ್ಣಾಶೇಠ.

Vijay Sethupathi: ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಸಿನಿಮಾ ಟೈಟಲ್‌ ಅನೌನ್ಸ್‌!

ಪುರಿ ಜಗನ್ನಾಥ್ -ವಿಜಯ್ ಸೇತುಪತಿ ಸಿನಿಮಾ ಟೈಟಲ್‌ ಅನೌನ್ಸ್‌!

Puri Jagannadh: ಡ್ಯಾಷಿಂಗ್ ಡೈರೆಕ್ಟರ್ ಪುರಿ ಜಗನ್ನಾಥ್ ಹಾಗೂ ವಿಜಯ್ ಸೇತುಪತಿ ಕಾಂಬೋದ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ವಿಜಯ್ ಸೇತುಪತಿ ಬರ್ತಡೇ ವಿಶೇಷವಾಗಿ ಶೀರ್ಷಿಕೆ ಬಿಡುಗಡೆ ಮಾಡಲಾಗಿದೆ. ಪುರಿ-ವಿಜಯ್ ಬಹು ನಿರೀಕ್ಷಿತ ಸಿನಿಮಾಗೆ ಸ್ಲಂಡಾಗ್-33 ಟೆಂಪಲ್ ರೋಡ್ ಎಂಬ ಟೈಟಲ್ ಇಡಲಾಗಿದೆ. ಟೈಟಲ್ ಜೊತೆಗೆ ಚಿತ್ರತಂಡ ವಿಜಯ್ ಸೇತುಪತಿ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ.

OTT This Week: ಈ ವಾರಾಂತ್ಯ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಈ ಹೊಸ ಸಿನಿಮಾಗಳು

ಈ ವಾರಾಂತ್ಯ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ ಈ ಹೊಸ ಸಿನಿಮಾಗಳು

OTT: ಈ ವಾರಾಂತ್ಯವು ನೆಟ್‌ಫ್ಲಿಕ್ಸ್ , ಅಮೆಜಾನ್ ಪ್ರೈಮ್ , ಸೋನಿ ಲಿವ್‌ನಂತಹ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು ಮತ್ತು ಸರಣಿಗಳ ಹೊಸ ಶ್ರೇಣಿಯನ್ನು ತಂದಿದೆ. ಭಾವನಾತ್ಮಕ ವಿದಾಯಗಳಿಂದ ಹಿಡಿದು ಅಪರಾಧ ಥ್ರಿಲ್ಲರ್‌ಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ವೀಕ್ಷಕರಿಗೆ ಸಾಕಷ್ಟು ಆಯ್ಕೆಗಳನ್ನು ನೀಡುತ್ತದೆ.

Bigg Boss Kannada 12 Finale: ನಿಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್‌ ಮಾಡಿದ್ರಾ? ವೋಟಿಂಗ್‌ಗೆ ಡೆಡ್‌ಲೈನ್‌ ಯಾವಾಗ ಗೊತ್ತಾ?

ʻಬಿಗ್‌ ಬಾಸ್‌ʼ ಫಿನಾಲೆಗೆ ಕೌಂಟ್‌ಡೌನ್; ವೋಟಿಂಗ್‌ಗೆ ಡೆಡ್‌ಲೈನ್‌ ಯಾವಾಗ?

Bigg Boss Kannada 12: ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಜನವರಿ 18 ರಂದು ಅದ್ಧೂರಿ ಸಮಾರಂಭ ನಡೆಯಲಿದೆ. ಧ್ರುವಂತ್ ಎಲಿಮಿನೇಷನ್ ನಂತರ ಗಿಲ್ಲಿ ನಟ, ಅಶ್ವಿನಿ ಗೌಡ, ಧನುಷ್, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಟಾಪ್ 6 ಫೈನಲಿಸ್ಟ್‌ಗಳಾಗಿ ಹೊರಹೊಮ್ಮಿದ್ದಾರೆ. ವಿನ್ನರ್‌ ಯಾರಾಗಬೇಕು ಎಂಬುದಕ್ಕೆ ವೋಟಿಂಗ್ ಲೈನ್ಸ್ ಲೀಡ ತೆರೆದಿವೆ.

Bigg Boss 12: ʻಈ ಉತ್ಸಾಹವನ್ನ ಎಲೆಕ್ಷನ್‌ ಬಂದಾಗ ತೋರಿಸಿ, ದೇಶ ಉದ್ಧಾರ ಆಗತ್ತೆʼ; ಗಿಲ್ಲಿ ಫ್ಯಾನ್ಸ್‌ಗೆ ಪರೋಕ್ಷವಾಗಿ ಟಾಂಗ್‌ ಕೊಟ್ರಾ ಜಾಹ್ನವಿ?

ಅಶ್ವಿನಿ ಪರ ಜಾಹ್ನವಿ ಬ್ಯಾಟಿಂಗ್; ಗಿಲ್ಲಿ ಫ್ಯಾನ್ಸ್‌ಗೆ ಪರೋಕ್ಷ ಟಾಂಗ್?

Bigg Boss Kannada 12 Finale: ಬಿಗ್ ಬಾಸ್ ಕನ್ನಡ 12ರ ಫಿನಾಲೆ ಹಂತ ತಲುಪಿದ್ದು, ಗೆಳತಿ ಅಶ್ವಿನಿ ಗೌಡ ಪರವಾಗಿ ಮಾಜಿ ಸ್ಪರ್ಧಿ ಜಾಹ್ನವಿ ಅವರು ಮತ ಯಾಚಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೆಲ ಅಭಿಮಾನಿಗಳು ನೀಡುತ್ತಿರುವ ಬೆದರಿಕೆಗಳ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bigg Boss Kannada 12: ಗಿಲ್ಲಿಯೇ ಗೆಲ್ಲೋದು! ಭವಿಷ್ಯ ನುಡಿದ ಶಿವಣ್ಣ

ಗಿಲ್ಲಿಯೇ ಗೆಲ್ಲೋದು! ಭವಿಷ್ಯ ನುಡಿದ ಶಿವಣ್ಣ

Gilli Nata: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇವೆ. ಅದರಲ್ಲೂ ಗಿಲ್ಲಿ ಕ್ರೇಜ್‌ ಮಾತ್ರ ಸಖತ್‌ ಆಗಿ ಆಗ್ತಿದೆ. ವರ್ಷಗಳ ಹಿಂದೆ ನಟ ಜಗ್ಗೇಶ್ ಅವರ ಬೇರೊಂದು ರಿಯಾಲಿಟಿ ಶೋನಲ್ಲಿ ಗಿಲ್ಲಿ ನಟನನ್ನು ಹೊಗಳಿದ್ದರು. "ಮುಂದಿನ ವರ್ಷ ಗಿಲ್ಲಿ ಛತ್ರಿ ಹಿಡಿಯೋಕೆ ಒಬ್ಬರನ್ನ ಇಟ್ಕೊಂಡು, ಜೊತೆಗೆ ನಾಲ್ಕು ಜನ ಬಾಡಿಗಾರ್ಡ್ ಹಾಕೊಂಡು ಓಡಾಡೋ ಸ್ಟೇಜ್‌ಗೆ ಬರ್ತಾನೆ" ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇದೀಗ ಗಿಲ್ಲಿಯೇ ಬಿಗ್ ಬಾಸ್ ಗೆಲ್ಲೋದು ಎಂದು ಶಿವರಾಜ್​​ಕುಮಾರ್‌ ಭವಿಷ್ಯ ನುಡಿದಿದ್ದಾರೆ.

Dhanush:  ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ಠಾಕೂರ್?

ಪ್ರೇಮಿಗಳ ದಿನದಂದೇ ಹಸೆಮಣೆ ಏರಲು ರೆಡಿಯಾದ್ರಾ ಧನುಷ್-ಮೃಣಾಲ್ ?

Mrunal: 2022 ರಲ್ಲಿ ರಜನಿಕಾಂತ್ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ನಟ ಧನುಷ್‌ ಅವರ ಜೊತೆ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಆದರೆ ಧನುಷ್ ಅವರ ವೈಯಕ್ತಿಕ ಜೀವನವು ಇನ್ನೂ ಸುದ್ದಿಯಲ್ಲಿದೆ. 2024 ರಲ್ಲಿ ವಿಚ್ಛೇದನದ ನಂತರ, ನಟಿ ಮೃಣಾಲ್ ಠಾಕೂರ್ ಅವರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಾರೆ ಎಂಬ ಗಾಸಿಪ್‌ ವೈರಲ್‌ ಆಗಿತ್ತು. ಧನುಷ್ ಮತ್ತು ಮೃಣಾಲ್ ಠಾಕೂರ್ ಇಬ್ಬರೂ ಪ್ರೀತಿಸುತ್ತಿದ್ದಾರೆ ಮತ್ತು ಡೇಟಿಂಗ್ ಪ್ರಾರಂಭಿಸಿದ್ದಾರೆ ಎಂದು ವರದಿ ಆಗಿತ್ತು.

Seetha Payanam Movie: 7 ವರ್ಷಗಳ ಬಳಿಕ ಸ್ಯಾಂಡಲ್‌ವುಡ್‌ಗೆ ಮರಳಿದ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್

'ಸೀತಾ ಪಯಣ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅನೂಪ್ ರೂಬೆನ್ಸ್ ಕಮ್‌ಬ್ಯಾಕ್

Anoop Rubens: ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್ ಅವರು 7 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ್ದಾರೆ. 'ಆಕ್ಷನ್ ಕಿಂಗ್' ಅರ್ಜುನ್ ಸರ್ಜಾ ನಿರ್ದೇಶನದ 'ಸೀತಾ ಪಯಣ' ಚಿತ್ರಕ್ಕೆ ಅವರು ಸಂಗೀತ ಸಂಯೋಜಿಸುತ್ತಿದ್ದು, ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸೋಷಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿವೆ.

ಫಿನಾಲೆಗೆ ಎರಡೇ ದಿನ ಬಾಕಿ; ದಿಢೀರ್‌ ಅಂತ ಶಾಕ್‌ ನೀಡಿದ ʻಬಿಗ್‌ ಬಾಸ್‌ʼ, ಬೇಕು ಅಂದಾಗೆಲ್ಲಾ ಇನ್ನೇಲೆ ಸ್ಪರ್ಧಿಗಳನ್ನ ನೋಡೋಕಾಗಲ್ಲ!

ಸಂಕ್ರಾಂತಿ ಸಂಭ್ರಮದ ಬೆನ್ನಲ್ಲೇ ಬಿಗ್ ಬಾಸ್ ʻಬಿಗ್ʼ ಟ್ವಿಸ್ಟ್!

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಕೇವಲ ಎರಡು ದಿನಗಳು ಬಾಕಿ ಇರುವಾಗ, ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದ್ದ 24 ಗಂಟೆಗಳ ಲೈವ್ ಫೀಡ್ ಅನ್ನು ಅಧಿಕೃತವಾಗಿ ಸ್ಥಗಿತಗೊಳಿಸಲಾಗಿದೆ. ಸತತ 108 ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಈ ಲೈವ್ ಪ್ರಸಾರಕ್ಕೆ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ಬಿಗ್ ಬಾಸ್ ವಿದಾಯ ಹೇಳಿದ್ದಾರೆ.

Bigg Boss 12: ಅಯ್ಯೋ, ʻಗಿಚ್ಚಿ ಗಿಲಿ ಗಿಲಿʼ ಟೀಮ್‌ ಬಂದರೂ ರಕ್ಷಿತಾಗೆ ಗಿಲ್ಲಿದೇ ಚಿಂತೆ! ಬಿದ್ದು ಬಿದ್ದು ನಕ್ಕ ಸ್ಪರ್ಧಿಗಳು

BBK 12: ಗಿಚ್ಚಿ ಗಿಲಿ ಗಿಲಿ ಟೀಮ್ ಬಂದರೂ ರಕ್ಷಿತಾಗೆ ಗಿಲ್ಲಿದೇ ಧ್ಯಾನ!

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇರುವಾಗ, ಕಲರ್ಸ್ ಕನ್ನಡದ ನೂತನ ಶೋ 'ಗಿಚ್ಚಿ ಗಿಲಿ ಗಿಲಿ' ಜೂನಿಯರ್ಸ್ ತಂಡದ ಕಲಾವಿದರು ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ಅವರು "ನನಗೆ ಗಿಲ್ಲಿ ಇಷ್ಟ" ಎಂದು ಹೇಳಿದ್ದು ಮನೆಯಲ್ಲಿ ನಗು ಉಕ್ಕಿಸಿದೆ.

ʻಗಿಲ್ಲಿ ನಟ ಬಂದಾಗ 6 ಬಾಡಿಗಾರ್ಡ್ಸ್‌ ಇದ್ರು, ಗಿಲ್ಲಿ ಕ್ರೇಜ್‌ ಬಿಗ್‌ ಬಾಸ್‌ಗೂ ಗೊತ್ತಿದೆʼ; ದೊಡ್ಮನೆಯೊಳಗೆ ನಡೆದ  ಫ್ಯಾನ್ಸ್ ಮೀಟ್‌ನ ಅಸಲಿ ಸತ್ಯ!

ಬಿಗ್‌ ಬಾಸ್‌ ಫ್ಯಾನ್ಸ್ ಮೀಟ್‌ನಲ್ಲಿ ಗಿಲ್ಲಿ ಬಂದಾಗ 6 ಬಾಡಿಗಾರ್ಡ್ಸ್‌ ನೇಮಕ

Bigg Boss 12 Gilli Nata: ಬಿಗ್ ಬಾಸ್ ಕನ್ನಡ 12ರ ಫಿನಾಲೆ ವಾರದಲ್ಲಿ ನಡೆದ ಫ್ಯಾನ್ಸ್ ಮೀಟ್, ಗಿಲ್ಲಿ ನಟನ ಬೃಹತ್ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ಇತರೆ ಸ್ಪರ್ಧಿಗಳಿಗೆ ಇಬ್ಬರು ಬಾಡಿಗಾರ್ಡ್‌ಗಳಿದ್ದರೆ, ಗಿಲ್ಲಿ ಬಂದಾಗ ಭದ್ರತೆಗಾಗಿ ಆರು ಮಂದಿ ಬೌನ್ಸರ್‌ಗಳನ್ನು ನೇಮಿಸಲಾಗಿತ್ತು ಎಂದು ಅಭಿಮಾನಿಯೊಬ್ಬರು ಬಹಿರಂಗಪಡಿಸಿದ್ದಾರೆ.

Loading...