ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಿನಿಮಾ
Actor Darshan: ದರ್ಶನ್‌ ಜೈಲಿಗೆ, ಪತ್ನಿ ವಿಜಯಲಕ್ಷ್ಮಿಯಿಂದ ಒಡೆದ ಹೃದಯದ ಪೋಸ್ಟ್‌

ದರ್ಶನ್‌ ಜೈಲಿಗೆ, ಪತ್ನಿ ವಿಜಯಲಕ್ಷ್ಮಿಯಿಂದ ಒಡೆದ ಹೃದಯದ ಪೋಸ್ಟ್‌

Social Media: ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಪ್ರಾಣಿಗಳನ್ನು ನೋಡುತ್ತ ನಿಂತ ದರ್ಶನ್‌ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯಲಕ್ಷ್ಮೀ ಅವರು, ಹೃದಯ ಒಡೆದಿದೆ ಎಂದು ಅರ್ಥ ಕೊಡುವ ಇಮೋಜಿಯನ್ನು ಜೊತೆಗೆ ಹಂಚಿಕೊಂಡಿದ್ದಾರೆ. ಫ್ಯಾನ್‌ಗಳು ಧೈರ್ಯ ತುಂಬಿಂದ್ದಾರೆ.

Sholay Movie: ʼಶೋಲೆʼ ಸಿನಿಮಾಕ್ಕೆ 50ರ ಸಂಭ್ರಮ: ಹಿರಿಯ ನಟ ಸಚಿನ್ ಪಿಲ್ಗಾಂವ್ಕರ್ ಹೇಳಿದ್ದೇನು?

ʼಶೋಲೆʼ ಸಿನಿಮಾದ ಬಗ್ಗೆ ಹಿರಿಯ ನಟ ಸಚಿನ್ ಪಿಲ್ಗಾಂವ್ಕರ್ ಹೇಳಿದ್ದೇನು?

ʼಶೋಲೆʼ ಚಿತ್ರದಲ್ಲಿ ಅಹ್ಮದ್ ಪಾತ್ರವನ್ನು ಸಚಿನ್ ನಿರ್ವಹಿಸಿದ್ದು ಅವರು ಈ ಸಿನಿಮಾದ ಕೆಲವು ಅವಿಸ್ಮರಣೀಯ ಘಟನೆಯ ನೆನಪುಗಲನ್ನು ಹಂಚಿಕೊಂಡಿದ್ದಾರೆ. ʼʼಶೋಲೆʼ ಸಿನಿಮಾ 50 ವರ್ಷ ಪೂರೈಸುತ್ತಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. 50 ವರ್ಷಗಳ ನಂತರವೂ ಒಂದು ಚಿತ್ರಕ್ಕೆ ಅಭಿಮಾನಿ ಬಳಗ ಇದೆ ಎಂದರೆ ನಿಜಕ್ಕೂ ಹೆಮ್ಮೆ ಅನಿಸುತ್ತದೆʼʼ ಎಂದಿದ್ದಾರೆ.

Disha Patani: ಬಾಲಿವುಡ್ ಬೆಡಗಿ ದಿಶಾ ಪಟಾನಿ ಸೆಕ್ಸಿ ಲುಕ್‌ಗೆ ಪಡ್ಡೆಹುಡುಗರು ಫುಲ್ ಫಿದಾ!

ದಿಶಾ ಪಟಾನಿ ಬೋಲ್ಡ್ ಫೋಟೋಶೂಟ್‌ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್!

ಬಾಲಿವುಡ್ ಬೆಡಗಿ ದಿಶಾ ಪಟಾನಿ ಸಿನಿಮಾ ಜೊತೆಗೆ ಬೋಲ್ಡ್ ಫೋಟೋಶೂಟ್ ಮೂಲಕವು ಹೆಚ್ಚು ಸುದ್ದಿಯಲ್ಲಿರುತ್ತಾರೆ.‌ ಇದೀಗ ಬ್ಲಾಕ್ ಬ್ರಾಲೆಟ್ ಹಾಗೂ ಫಿಟ್ ಫಿಗರ್ ಸ್ಕರ್ಟ್ ಧರಿಸಿದ ದಿಶಾ, ಸೆಕ್ಸಿ ಲುಕ್‌ ನೊಂದಿಗೆ ಕ್ಯಾಮೆರಾಕ್ಕೆ ಪೋಸ್‌ ನೀಡಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಫ್ಯಾನ್ಸ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Independence Day 2025: ಸ್ವಾತಂತ್ರ್ಯ ದಿನಾಚರಣೆಗೆ ನೀವು ನೋಡಲೇಬೇಕಾದ ಸಿನಿಮಾಗಳಿವು!

ಸ್ವಾತಂತ್ರ್ಯ ದಿನಾಚರಣೆಗೆ ಈ ಸಿನೆಮಾ ನೋಡಲು ಮಿಸ್ ಮಾಡ್ಬೇಡಿ!

ಇಂದು ಭಾರತಕ್ಕೆ ಸ್ವಾತಂತ್ರ್ಯ ಬಂದ ಸವಿ ದಿನವಾಗಿದ್ದು ದೇಶವೇ 79ನೇ ಸ್ವಾತಂತ್ರ್ಯ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ‌. ಅಂತೆಯೇ ಈ ದಿನ ದೇಶದೆಲ್ಲೆಡೆ ಧ್ವಜಾರೋಹಣ, ಪಥ ಸಂಚಲನ, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿದೆ. ಈ ದಿನ ನೀವು ಕೂಡ ನಿಮ್ಮ ಕುಟುಂಬದ ಸಮ್ಮುಖದಲ್ಲಿ ವಿಭಿನ್ನವಾಗಿ ಕಳೆಯ ಬೇಕಾದರೆ ದೇಶಭಕ್ತಿ ಇರುವ ಸಿನಿಮಾಗಳನ್ನು ಫ್ಯಾಮಿಲಿ ಜೊತೆಗೆ ನೋಡಿ ಸಂಭ್ರಮಿಸಬಹುದು. ನೀವು ಮಿಸ್ ಮಾಡದೇ ನೋಡಬೇಕಾದ ದೇಶಭಕ್ತಿ ಕಥೆಯಾಧಾರಿತ ಸಿನಿಮಾ ಪಟ್ಟಿ ಇಲ್ಲಿದೆ.

ಲ್ಯಾಂಡ್‌ ಲಾರ್ಡ್‌ ದುನಿಯಾ ವಿಜಯ್‌ ಜತೆಯಾದ ʼಡೇರ್‌ ಡೆವಿಲ್‌ ಹೀರೋʼ

ಲ್ಯಾಂಡ್‌ ಲಾರ್ಡ್‌ ದುನಿಯಾ ವಿಜಯ್‌ ಜತೆಯಾದ ʼಡೇರ್‌ ಡೆವಿಲ್‌ ಹೀರೋʼ

ಡೇರ್‌ ಡೆವಿಲ್‌ ಮುಸ್ತಾಫ ಸಿನಿಮಾದ ಅಭಿನಯ ಕಂಡು ಶಿಶಿರ್‌ ಅವರಿಗೆ ಇಂಡಸ್ಟ್ರಿ ಕಡೆಯಿಂದ ಒಳ್ಳೆ ಅವಕಾಶಗಳೇ ಅರಸಿ ಬಂದಿದೆ. ಡೇರ್‌ ಡೆವಿಲ್‌ ಚಿತ್ರದ ನಂತರ ದುನಿಯಾ ವಿಜಯ್‌ ಅಭಿನಯದ ‘ಲ್ಯಾಂಡ್‌ ಲಾರ್ಡ್‌ʼ ಸಿನಿಮಾದಲ್ಲಿ ಶಿಶಿರ್‌ ಉತ್ತಮ ಪಾತ್ರ ಗಿಟ್ಟಿಸಿಕೊಂಡಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

Nagarjuna: ಕೂಲಿಯಲ್ಲಿ ನಾಗಾರ್ಜುನ್‌ ಟೆರರ್‌ ಲುಕ್‌ಗೆ ಫ್ಯಾನ್ಸ್‌ ಫುಲ್‌ ಫಿದಾ! ಹಾಲಿವುಡ್‌ನ ʻಜೋಕರ್‌ʼ ಸ್ಫೂರ್ತಿಯಂತೆ!

ಕೂಲಿ ಸಿನಿಮಾದಲ್ಲಿ ನಾಗಾರ್ಜುನ ಲುಕ್‌ನ ಹಿಂದಿನ ಅಸಲಿ ಕಥೆ ಏನ್‌ ಗೊತ್ತಾ?

ಸೂಪರ್ ಸ್ಟಾರ್ ರಜನೀಕಾಂತ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನ ಯಿಸಿದ್ದಾರೆ. ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದ ಕೂಲಿ ಸಿನಿಮಾಕ್ಕೆ ಅನೇಕ ಟ್ವಿಸ್ಟ್ ಹೊಂದಿರುವ ಕಥೆ ಇದೆ. ಅದೇ ರೀತಿ ಪಾತ್ರವರ್ಗವು ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಹುದೊಡ್ಡ ತಾರಾಗಣದ ಸಂಗಮವಿರುವ ಈ ಸಿನಿಮಾದ ಕೆಲವು ದೃಶ್ಯಗಳು ಗಮನಾರ್ಹವಾಗಿದೆ. ಅಂತಹ ದೃಶ್ಯದಲ್ಲಿ ಖ್ಯಾತ ನಟ ನಾಗಾರ್ಜುನ ಅವರ ಖಳನಾಯಕನ ಪಾತ್ರ ಕೂಡ ಹೆಚ್ಚು ಹೈಲೈಟ್ ಆಗಿದೆ. ನಟ ನಾಗಾರ್ಜುನ ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ಸ್ಟೈಲಿಶ್‌ ಹಾಗೂ ವೈಲೆಂಟ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

Independence Day: ಸ್ವಾತಂತ್ರ್ಯ ದಿನಾಚರಣೆಯ ಸ್ಪೆಷಲ್‌- ಪಿವಿಆರ್ ಐನಾಕ್ಸ್ ಲೋಗೋದಲ್ಲಿ ʼಕಾಂತಾರʼ ಚಿತ್ರದ ಮಾಯೆ

ಪಿವಿಆರ್ ಐನಾಕ್ಸ್ ಲೋಗೋದಲ್ಲಿ ʼಕಾಂತಾರʼ ಚಿತ್ರದ ಮಾಯೆ

PVR Inox: ಭಾರತದ ಅತಿದೊಡ್ಡ ಮತ್ತು ಅತ್ಯಂತ ಪ್ರೀಮಿಯಂ ಸಿನಿಮಾ ಪ್ರದರ್ಶಕ ಸಂಸ್ಥೆಯಾದ ಪಿವಿಆರ್ ಐನಾಕ್ಸ್, ಹೊಂಬಾಳೆ ಫಿಲ್ಮ್ಸ್ ಜತೆಗೂಡಿ ಹೊಸತನ ಮತ್ತು ವೈಶಿಷ್ಟ್ಯಪೂರ್ಣ ಪ್ರೇಕ್ಷಕ ಅನುಭವಗಳನ್ನು ನೀಡುತ್ತಿದೆ. ಈ ಸ್ವಾತಂತ್ರ್ಯ ದಿನಾಚರಣೆಯ ವಾರಾಂತ್ಯದಲ್ಲಿ, ಪಿವಿಆರ್ ಐನಾಕ್ಸ್ ತನ್ನ ಲೋಗೋಗೆ ಕಾಂತಾರ ಚಿತ್ರದ ಅಗ್ನಿ ಅಂಶಗಳನ್ನು ಸೇರಿಸಿರುವುದು ವಿಶೇಷ.

Actor Darshan: ಕರ್ನಾಟಕದಲ್ಲೇ ಇದ್ದಾರಾ ದರ್ಶನ್‌? ಸುಂಟಿಕೊಪ್ಪದ ಫಾರ್ಮ್‌ಹೌಸ್‌ನಲ್ಲಿ ದಾಸ?

ಕರ್ನಾಟಕದಲ್ಲೇ ಇದ್ದಾರಾ ದರ್ಶನ್‌? ಸುಂಟಿಕೊಪ್ಪದ ಫಾರ್ಮ್‌ಹೌಸ್‌ನಲ್ಲಿ ದಾಸ?

Renuka swamy murder case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಇನ್ನು ಬೇಲ್‌ ರದ್ದಾಗಿರುವ ಹಿನ್ನೆಲೆ ದರ್ಶನ್‌ ಹಾಗೂ ಇತರ ಆರೋಪಿಗಳನ್ನು ಇಂದೇ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗುತ್ತದೆ.

Actor Darshan: ದರ್ಶನ್‌ ಜಾಮೀನು ರದ್ದು ಬೆನ್ನಲ್ಲೇ ಗಮನ ಸೆಳೆದ ರಮ್ಯಾ ಪೋಸ್ಟ್‌

ದರ್ಶನ್‌ ಜಾಮೀನು ರದ್ದು ಬೆನ್ನಲ್ಲೇ ಗಮನ ಸೆಳೆದ ರಮ್ಯಾ ಪೋಸ್ಟ್‌

‌Renuka swamy murder case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಭಾರೀ ಗಮನ ಸೆಳೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ರಮ್ಯಾ ಹಾಗೂ ಡಿಬಾಸ್‌ ಫ್ಯಾನ್ಸ್‌ ವಾರ್‌ ಬಹಳ ಸದ್ದು ಮಾಡಿತ್ತು.

Actor Darshan: ದರ್ಶನ್‌ ಜಾಮೀನು ಹಣೆಬರಹ ಇಂದು ಸುಪ್ರೀಂನಿಂದ ನಿರ್ಧಾರ

ದರ್ಶನ್‌ ಜಾಮೀನು ಹಣೆಬರಹ ಇಂದು ಸುಪ್ರೀಂನಿಂದ ನಿರ್ಧಾರ

Supreme court: ಜಾಮೀನು ರದ್ದತಿ ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಜಾಮೀನಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಪೀಠ, ಜಾಮೀನು ರದ್ದತಿಯಾಗಲಿದೆ ಎಂದು ಚಿಂತಿಸುವಂತೆ ಮಾಡಿದೆ. ಇದರಿಂದ ಡಿ ಗ್ಯಾಂಗ್‌ಗೆ ನಡುಕ ಶುರುವಾಗಿದೆ.

Khushboo Patani: ನಟಿ ದಿಶಾ ಪಟಾನಿ ಸಹೋದರಿ ಖುಷ್ಭೂ ಹೇಳಿಕೆಗೆ ನೆಟ್ಟಿಗರಿಂದ ಆಕ್ರೋಶ; ಕಾರಣ ಏನು?

ದಿಶಾ ಪಟಾನಿ ಸಹೋದರಿ ಖುಷ್ಭೂ ಹೇಳಿಕೆಗೆ ನೆಟ್ಟಿಗರು ಗರಂ

ದಿಶಾ ಪಟಾನಿ ಸದ್ಯ ಬಾಲಿವುಡ್‌ನ ಟಾಪ್‌ ನಟಿ ಎನಿಸಿಕೊಂಡಿದ್ದಾರೆ. ಇವರ ಸಹೋದರಿ ಖುಷ್ಬೂ ಪಟಾನಿ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸಿದ್ದಾರೆ. ಈಗ ಖುಷ್ಬೂ ಪಟಾನಿ ಫಿಟ್‌ನೆಸ್‌ ಮತ್ತು ಸೈಕಾಲಜಿಯಲ್ಲಿ ತರಬೇತಿ ನೀಡುತ್ತಿದ್ದಾರೆ. ಇತ್ತೀಚೆಗಷ್ಟೆ ಪಾಳು ಬಿದ್ದ ಮನೆಯಲ್ಲಿ ಹೆಣ್ಣು ಮಗುವನ್ನು ರಕ್ಷಿಸಿದ್ದ ಹಿನ್ನೆಲೆಯಲ್ಲಿ ದೇಶಾದ್ಯಂತ ಜನಪ್ರಿಯರಾಗಿದ್ದಾರೆ. ಇದೀಗ ಅವರು ಪ್ರೀತಿ, ಮದುವೆ ಮತ್ತು ಲಿವ್-ಇನ್ ಸಂಬಂಧಗಳ ಕುರಿತಾಗಿ ನೀಡಿರುವ ಹೇಳಿಕೆ ವಿವಾದ ಹುಟ್ಟು ಹಾಕಿದೆ.

Director Murali Mohan: ಆಸ್ಪತ್ರೆಯಲ್ಲಿ ಮುರಳಿ ಮೋಹನ್‌ ಅಂತಿಮ ದರ್ಶನ ಪಡೆದು ಉಪೇಂದ್ರ ಭಾವುಕ

ಮುರಳಿ ಮೋಹನ್‌ ಅಂತಿಮ ದರ್ಶನ ಪಡೆದು ಉಪೇಂದ್ರ ಭಾವುಕ

Director Murali Mohan: ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕ್ರೇಜಿ ಸ್ಟಾರ್ ರವಿಚಂದ್ರನ್, ರಿಯಲ್ ಸ್ಟಾರ್ ಉಪೇಂದ್ರ ಮುಂತಾದ ಘಟಾನುಘಟಿ ನಟರಿಗೆ ಮುರಳಿ ಮೋಹನ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು. 36 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಬೆಂಗಳೂರಿನ ಜೆಸಿ ರೋಡ್ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.

Actor Kiccha Sudeep: ಬೀದಿ ನಾಯಿಗಳ ಕುರಿತು ಸುಪ್ರೀಂ ಆದೇಶ; ದತ್ತು ಪಡೆಯಲು ನಟ ಸುದೀಪ್‌ ಮನವಿ

ಬೀದಿ ನಾಯಿಗಳನ್ನು ದತ್ತು ಪಡೆಯೋಣ: ನಟ ಸುದೀಪ್‌ ಮನವಿ

Actor Kiccha Sudeep: ಶ್ವಾನಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಅವುಗಳ ಸ್ವಾತಂತ್ರ್ಯ ಹರಣ ಮಾಡಿದ ಹಾಗಾಗುತ್ತದೆ ಎಂದು ಸೂಚ್ಯವಾಗಿ ಹೇಳಿರುವ ನಟ ಸುದೀಪ್‌ ಅವರು, ಮೂಕ ಜೀವಿಗಳಿಗೆ ನಾವು ಧ್ವನಿ ಆಗೋಣ, ಬೀದಿ ನಾಯಿಗಳನ್ನು ದತ್ತು ಪಡೆಯೋಣ ಎಂದು ಕರೆ ನೀಡಿದ್ದಾರೆ.

Nodiddu Sullagabahudu Movie: ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಹಾಡು ರಿಲೀಸ್‌

ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಹಾಡು ರಿಲೀಸ್‌

Nodiddu Sullagabahudu Movie: ಅನಿಲ್ ಕುಮಾರ್ ಕೆ.ಆರ್. ನಿರ್ಮಾಣ ಮಾಡುವುದರೊಂದಿಗೆ ನಾಯಕನಾಗೂ ನಟಿಸಿರುವ, ವಿಜಯ್ ಚಲಪತಿ ನಿರ್ದೇಶನದ ಹಾಗೂ ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ʼನೋಡಿದ್ದು ಸುಳ್ಳಾಗಬಹುದುʼ ಚಿತ್ರದ ʼಕನಸುಗಳ ಮೆರವಣಿಗೆʼ ಎಂಬ ಹಾಡಿನ ಲಿರಿಕಲ್ ವಿಡಿಯೋ ಇತ್ತೀಚೆಗೆ ಬಿಡುಗಡೆಯಾಗಿದೆ.

Sridevi Birth Anniversary: ಪತ್ನಿ ಶ್ರೀದೇವಿಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೊ ಶೇರ್ ಮಾಡಿದ್ದ ನಿರ್ಮಾಪಕ ಬೋನಿ ಕಪೂರ್!

ಇಂದು ಶ್ರೀದೇವಿಯ ಜನ್ಮದಿನ-ವಿಶೇಷ ಫೋಟೊ ಹಂಚಿಕೊಂಡ ಬೋನಿ ಕಪೂರ್!

ಭಾರತೀಯ ಚಿತ್ರರಂಗದ ಪ್ರಸಿದ್ದ ನಟಿಯರಲ್ಲಿ ಅನೇಕ ಹಿಟ್ ಸಿನಿಮಾ ನೀಡಿದ್ದ ನಟಿ ಶ್ರೀದೇವಿ ಅವರು ತಮ್ಮ ಅಭಿನಯದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದರು. ಹಿಂದಿ , ತಮಿಳು, ತೆಲುಗು, ಕನ್ನಡ ಚಿತ್ರದಲ್ಲಿ ಅಭಿನಯಿಸುವ ಮೂಲಕ 80ರ ದಶಕದಲ್ಲಿಯೇ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ಎಂದು ಖ್ಯಾತಿ ಪಡೆದಿದ್ದರು. ಇವರ ಅದ್ಭುತ ಅಭಿನಯಕ್ಕೆ ಇವರನ್ನು ಲೇಡಿ ಸೂಪರ್ ಸ್ಟಾರ್ ಎಂದೇ ಕರೆಯಲಾಗಿತ್ತು. ಇಂದು ನಟಿ ಶ್ರೀದೇವಿ ಅವರ ಜನ್ಮದಿನವಾಗಿದ್ದು,ಪತಿ ಬೋನಿ ಕಪೂರ್ ಅವರು ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು ಸದ್ಯ ಅವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Rapper Chandan Shetty: ಯೂನಿವರ್ಸಲ್‌ ಬಾಸ್‌ ಕ್ರಿಸ್‌ ಗೇಲ್‌ ಜತೆ ಚಂದನ್‌ ಶೆಟ್ಟಿ ಹೊಸ ಹಾಡು; ಫ್ಯಾನ್ಸ್‌ಗೆ ಥ್ರಿಲ್‌!

ಕ್ರಿಸ್‌ ಗೇಲ್‌ ಜತೆ ಕನ್ನಡದ ರ‍್ಯಾಪರ್‌ ಚಂದನ್‌ ಶೆಟ್ಟಿ ಹೊಸ ಸಾಂಗ್‌!

chris gayle rap song: ಯೂನಿವರ್ಸಲ್‌ ಬಾಸ್‌ ಜತೆಗೆ ʻಲೈಫ್‌ ಈಸ್‌ ಕಸಿನೋʼ ಎಂಬ ಹಾಡನ್ನು ಮಾಡುತ್ತಿದ್ದೇವೆ. ನಾನಂತೂ ಸಿಕ್ಕಾಪಟ್ಟೆ ಎಕ್ಸೈಟೈಡ್‌ ಆಗಿದ್ದೇನೆ. ರ‍್ಯಾಪ್‌ ಭಾಗವನ್ನು ಬಾಸ್‌ ಅದ್ಭುತವಾಗಿ ಮಾಡಿದ್ದಾರೆ ಎಂದು ರ‍್ಯಾಪರ್‌ ಚಂದನ್‌ ಶೆಟ್ಟಿ ಸಂತಸ ವ್ಯಕ್ತಪಡಿಸಿದ್ದಾರೆ.

Mrunal Thakur: ನಟ ಧನುಷ್ ಜತೆಗಿನ ಡೇಟಿಂಗ್‌ ಗಾಸಿಪ್: ಕೊನೆಗೂ ಮೌನ ಮುರಿದ ನಟಿ ಮೃಣಾಲ್ ಠಾಕೂರ್

ಧನುಷ್ ಜತೆಗಿನ ಸಂಬಂಧದ ಬಗ್ಗೆ ಮೃಣಾಲ್ ಠಾಕೂರ್ ಹೇಳಿದ್ದೇನು?

ಸಿನಿಮಾ ರಂಗದಲ್ಲಿ ಡೇಟಿಂಗ್‌ ಕುರಿತಾದ ಗಾಸಿಪ್‌ಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಇದೀಗ ದಕ್ಷಿಣ ಭಾರತದ ಖ್ಯಾತ ನಟ ಧನುಷ್ ಜತೆಗಿನ ತಮ್ಮ ಸಂಬಂಧದ ಬಗ್ಗೆ ಹರಿದಾಡುತ್ತಿದ್ದ ವದಂತಿ ಬಗ್ಗೆ ಮೃಣಾಲ್ ಠಾಕೂರ್ ಕೊನೆಗೂ ಮೌನ ಮುರಿದಿದ್ದಾರೆ.

Kataka 2: ಮತ್ತೊಂದು ಸಾಹಸಕ್ಕೆ ಕೈ ಹಾಕಿದ ರವಿ ಬಸ್ರೂರು; 'ಕಟಕ 2' ಚಿತ್ರದ ತಂದೆ-ಮಗಳ ಎಮೋಷನಲ್ ಹಾಡು ರಿಲೀಸ್‌

ʼಕಟಕ 2ʼ ಚಿತ್ರದ ಹೊಸ ಹಾಡು ಬಿಡುಗಡೆ

ರವಿ ಬಸ್ರೂರು ನಿರ್ದೇಶಿಸಿದ ಮೊದಲ ಹಾರರ್ ಸಿನಿಮಾ ʼಕಟಕʼ. 2017ರಲ್ಲಿ ಈ ಚಿತ್ರ ತೆರೆ ಕಂಡಿದ್ದು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿತ್ತು. ಇದೀಗ ʼಕಟಕʼ ಸಿನಿಮಾದ ಮುಂದುವರಿದ ಭಾಗ ರಿಲೀಸ್‌ಗೆ ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ರವಿ ಬಸ್ರೂರು ತಂಡ ʼಕಟಕ 2ʼ ಸಿನಿಮಾದ ಹಾಡೊಂದನ್ನ ರಿಲೀಸ್ ಮಾಡಿದೆ. ಇದೊಂದು ತಂದೆ ಮಗಳ ಎಮೋಷನಲ್ ಸಾಂಗ್ ಆಗಿದ್ದು, ಗಾಯಕಿ ಐರಾ ಉಡುಪಿ ಹಾಡಿದ್ದಾರೆ.

Kantara Movie: ಕಾಂತಾರ ಚಾಪ್ಟರ್ 1 ಶೂಟಿಂಗ್‌ ವೇಳೆ ಸರಣಿ ಅವಘಡ- ನಿರ್ಮಾಪಕ ಹೇಳಿದೇನು?

ಕಾಂತಾರ ಶೂಟಿಂಗ್‌ ವೇಳೆ ಸರಣಿ ಅವಘಡ-ನಿರ್ಮಾಪಕ ಹೇಳಿದೇನು?

ರಿಷಭ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯಲ್ಲಿ ಕಾಂತಾರ ಚಾಪ್ಟರ್ 1 ಸಿದ್ಧವಾಗುತ್ತಿದೆ. ಚಿತ್ರೀಕರಣ ಮಾಡಲು ಬರೋಬ್ಬರಿ 2ವರ್ಷವನ್ನು ಚಿತ್ರತಂಡ ತೆಗೆದು ಕೊಂಡಿತ್ತು. ಈ ಮಧ್ಯೆ ಚಿತ್ರತಂಡದಲ್ಲಿ ಅನೇಕ ಅವಘಡ, ಆಘಾತಕಾರಿ ಸನ್ನಿವೇಶ , ಸಾವು ನೋವು ಕೂಡ ಉಂಟಾಗಿದ್ದು ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು.ಈ ಮೂಲಕ ಕಾಂತಾರ ಸೆಟ್ ಗೆ ಏನೊ ಶಾಪವಿದೆ ಎಂಬ ವದಂತಿಗಳು ಕೂಡ ಸೋಶಿ ಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಕಾಂತಾರ ಸಿನಿಮಾ ನಿರ್ಮಾಪಕ ಚಲುವೇಗೌಡ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

Nora Fatehi: ಹೊಸ ಆಲ್ಬಂ ಸಾಂಗ್ ಮೂಲಕ ಸೆಕ್ಸಿ ಲುಕ್‌ನಲ್ಲಿ ಪಡ್ಡೆ ಹುಡುಗರ ನಿದ್ದೆ ಕದ್ದ ನಟಿ ನೋರಾ ಫತೇಹಿ

ನೋರಾ ಫತೇಹಿ ಹೊಸ ಆಲ್ಬಂ ಸಾಂಗ್ ರಿಲೀಸ್

ನಟಿ ನೋರಾ ಫತೇಹಿ ಉತ್ತಮ ಡ್ಯಾನ್ಸರ್‌ ಕೂಡ ಹೌದು. ಅನೇಕ ಸಿನಿಮಾಗಳ ಐಟಂ ಸಾಂಗ್‌ ಸೊಂಟ ಕುಣಿಸಿದ್ದಾರೆ. ನೋರಾ ಫತೇಹಿ ವಿಂಟರ್ ಒಕೆಶನ್ ಸೆಟ್‌ನಲ್ಲಿ 'ಓ ಮಾಮಾ ಟೆಟೆಮಾದ' ಹಾಡಿಗೆ ನೃತ್ಯ ಮಾಡಿದ್ದು, ಈಗಾಗಲೇ ಈ ಡ್ಯಾನ್ಸ್ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ನೋರಾ ಅವರ ಈ ಆಲ್ಬಂ ಸಾಂಗ್ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಈ ವಿಡಿಯೊದಲ್ಲಿ ನೋರಾ ಫತೇಹಿ ತಮ್ಮ ಸೆಕ್ಸಿ ಲುಕ್‌ನಿಂದ ಪಡ್ಡೆ ಹುಡುಗರ ನಿದ್ದೆ ಕದಿಯುತ್ತಿದ್ದಾರೆ.

Vishnuvardhan Samadhi: 'ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ' ಎಂದು ಪೋಸ್ಟ್ ಹಾಕಿದ್ದ ಉಪೇಂದ್ರಗೆ ವೀರಕಪುತ್ರ ಶ್ರೀನಿವಾಸ್ ಟಾಂಗ್‌!

ನಟ ಉಪೇಂದ್ರ ಪೋಸ್ಟ್ ಗೆ ವೀರಕಪುತ್ರ ಶ್ರೀನಿವಾಸ್ ಕೌಂಟರ್!

ನಟ ವಿಷ್ಣುವರ್ಧನ್ ಸಮಾಧಿ ದ್ವಂಸ ವಿಚಾರ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಕನ್ನಡ ಸಿನಿಮಾದ ಅನೇಕ ನಟ ನಟಿಯರು ಒಬ್ಬೊಬ್ಬರಾಗಿ ಪ್ರತಿಕ್ರಿಯಿಸಿ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್, ವಿಜಯರಾಘವೇಂದ್ರ, ವಸಿಷ್ಠ ಸಿಂಹ ಸೇರಿದಂತೆ ಕನ್ನಡದ ನಟರು ಹಾಗೂ ನಟಿ ಯರಾದ ಸುಧಾರಾಣಿ, ಶ್ರುತಿ ಬೇಸರ ವ್ಯಕ್ತಪಡಿಸಿದ್ದರು. ಇನ್ನು ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಕೂಡ ಟ್ವೀಟ್ ಮಾಡಿದ್ದು ಘಟನೆ ಸಂಬಂಧ "ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ" ಎಂದು ಬರೆದುಕೊಂಡಿದ್ದರು. ಇದೀಗ ನಟ ಉಪೇಂದ್ರ ಪೋಸ್ಟ್ ಗೆ ವೀರಕಪುತ್ರ ಶ್ರೀನಿವಾಸ್ ಕೌಂಟರ್ ನೀಡಿದ್ದಾರೆ.

Juhi Chawla: ಮದುವೆಯಾದ ವಿಚಾರವನ್ನೇ ಹಲವು ವರ್ಷ ಗೌಪ್ಯವಾಗಿಟ್ಟಿದ್ರಂತೆ ಈ ಖ್ಯಾತ ನಟಿ! ಕಾರಣ ಏನ್‌ ಗೊತ್ತಾ?

ಈ ನಟಿಯ ಮದ್ವೆ ವಿಚಾರ ಅದೆಷ್ಟೋ ವರ್ಷ ಸೀಕ್ರೆಟ್‌ ಆಗಿಯೇ ಇತ್ತಂತೆ!

ಒಂದು ಕಾಲದ ಟಾಪ್ ಹೀರೋಯಿನ್ ಜೂಹಿ ಚಾವ್ಲಾ ಇವರು ಪ್ರೇಮಲೋಕ, ಶಾಂತಿ-ಕ್ರಾಂತಿ, ಕಿಂದರಜೋಗಿ ಸೇರಿದಂತೆ ಇತರ ಹಿಟ್ ಸಿನಿಮಾ ಮೂಲಕ ಬಹಳ ಜನಪ್ರಿಯರಾಗಿದ್ದಾರೆ. ನಟಿ ಜೂಹಿ ಚಾವ್ಲಾ ಅವರು ವೃತ್ತಿ ಜೀವನಕ್ಕಿಂತಲೂ ವೈಯಕ್ತಿಕ ಜೀವನದಿಂದ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿದ್ದಾರೆ‌. ತಮ್ಮ ವೃತ್ತಿ ಜೀವನಕ್ಕಾಗಿ ಮದುವೆ ವಿಚಾರವನ್ನೇ ನಟಿ ಜೂಹಿ ಚಾವ್ಲಾ ಅವರು ಮುಚ್ಚಿಟ್ಟಿದ್ದರು ಎಂಬ ಸತ್ಯ ಇದೀಗ ತಿಳಿದು ಬಂದಿದೆ. ಈ ಸುದ್ದಿ ಸದ್ಯ ವೈರಲ್ ಆಗಿದೆ.

Ahaan Panday: ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸೂಪರ್‌ ಹಿಟ್‌ ಸೈಯಾರ ಜೋಡಿ- ಫೋಟೋ ವೈರಲ್

ಮತ್ತೆ ಜೊತೆಯಾಗಿ ಕಾಣಿಸಿಕೊಂಡ ಸೂಪರ್‌ ಹಿಟ್‌ ಸೈಯಾರ ಜೋಡಿ

ಬಾಲಿವುಡ್ ನ ಸೈಯಾರ ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡಾ ಬಾಲಿವುಡ್‌ನಲ್ಲಿ ತಮ್ಮ ಅದ್ಭುತ ಅಭಿನಯದಿಂದ ಜನಪ್ರಿಯರಾಗಿದ್ದಾರೆ. ಇತ್ತೀಚೆಗಷ್ಟೆ ಸೈಯಾರ ಸಿನಿಮಾ ಬಹುದೊಡ್ಡ ಯಶಸ್ಸು ಕಂಡಿದ್ದು ಅಭಿಮಾನಿಗಳ ಈ ಸಿನಿಮಾವನ್ನು ನೆಚ್ಚಿ ಕೊಂಡಿದ್ದಾರೆ. ಸಿನಿಮಾ ಸಕ್ಸಸ್ ಆಗುತ್ತಿದ್ದಂತೆ ನಟ ಅಹಾನ್ ಮತ್ತು ನಟಿ ಅನೀತ್ ಅವರು ಸಾರ್ವಜನಿಕ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು ಇವರಿಬ್ಬರ ಬಗ್ಗೆ ಬಾಲಿವುಡ್‌ನಲ್ಲಿ ಹೊಸ ಗಾಸಿಪ್ ಒಂದು ಹರಿದಾಡುವಂತೆ ಮಾಡಿದೆ.

Vishnuvardhan Memorial: ವಿಷ್ಣು ಸ್ಮಾರಕಕ್ಕಾಗಿ ಅಭಿಮಾನ್ ಸ್ಟುಡಿಯೊ ಭೂಸ್ವಾಧೀನ ಮಾಡಿಕೊಳ್ಳಿ; ಸಿಎಂಗೆ ಶೋಭಾ ಕರಂದ್ಲಾಜೆ ಪತ್ರ

ವಿಷ್ಣು ಸ್ಮಾರಕಕ್ಕಾಗಿ ಅಭಿಮಾನ್ ಸ್ಟುಡಿಯೊ ಭೂಸ್ವಾಧೀನಕ್ಕೆ ಮನವಿ

Vishnuvardhan Memorial: ಬೆಂಗಳೂರಿನ ಅಭಿಮಾನ್ ಸ್ಟುಡಿಯೋ ಆವರಣದಲ್ಲಿದ್ದ ಡಾ. ವಿಷ್ಣುವರ್ಧನ್ ಅವರ ಸ್ಮಾರಕ, ಕನ್ನಡಾಭಿಮಾನಿಗಳ ಹೃದಯದಲ್ಲಿ ಭಾವನಾತ್ಮಕ ಪ್ರೇರಣೆಯ ಕೇಂದ್ರವಾಗಿದೆ. ಆ ಭೂಮಿಯನ್ನು ತಕ್ಷಣವೇ ಸ್ವಾಧೀನಪಡಿಸಿಕೊಳ್ಳಬೇಕು ಹಾಗೂ ಭೂ ಮಾಲೀಕರಿಗೆ ಸರ್ಕಾರದ ನಿಯಮಾನುಸಾರ ನ್ಯಾಯಸಮ್ಮತ ಪರಿಹಾರಿ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮನವಿ ಮಾಡಿದ್ದಾರೆ.

Loading...