ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Tollywood star Venkatesh : ವಿದ್ಯಾರ್ಥಿ ಭವನ್ ದೋಸೆ ಸವಿದ ಟಾಲಿವುಡ್ ಸ್ಟಾರ್ ವೆಂಕಟೇಶ್

ವಿದ್ಯಾರ್ಥಿ ಭವನ್ ದೋಸೆ ಸವಿದ ಟಾಲಿವುಡ್ ಸ್ಟಾರ್ ವೆಂಕಟೇಶ್

Tollywood star Venkatesh : ಜನಪ್ರಿಯ ತೆಲುಗು ನಟ ದಗ್ಗುಬಾಟಿ ವೆಂಕಟೇಶ್ ಬೆಂಗಳೂರಿಗೆ ಭೇಟಿ ನೀಡಿದ್ದಾರೆ. ವೆಂಕಟೇಶ್ ಅವರು ಭೇಟಿ ನೀಡಿದ್ದು ಬೆಂಗಳೂರಿನ ಹೆಮ್ಮೆಯ ವಿದ್ಯಾರ್ಥಿ ಭವನ್ ಹೋಟೆಲಿಗೆ. ಗಾಂಧಿ ಬಜಾರಿನ ಈ ನೂರು ವರ್ಷಕ್ಕೂ ಹಳೆಯ ಹೋಟೆಲ್​​ಗೆ ಭೇಟಿ ನೀಡಿದ ವೆಂಕಟೇಶ್ ಅವರು ಹೋಟೆಲ್​​ನ ಹಲವು ಖಾದ್ಯಗಳನ್ನು ಸವಿದಿದ್ದಾರೆ. ಟಾಲಿವುಡ್ ತಾರೆ ಬೆಂಗಳೂರಿನ ಅತ್ಯಂತ ಪ್ರಸಿದ್ಧ ತಿನಿಸುಗಳಲ್ಲಿ ಒಂದಾದ, ಸಿಗ್ನೇಚರ್ ದೋಸೆಗಳು ಮತ್ತು ಸಾಂಪ್ರದಾಯಿಕ ಉಪಾಹಾರಕ್ಕೆ ಹೆಸರುವಾಸಿಯಾದ ಐಕಾನಿಕ್ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ್ದಾರೆ.

Rahul Arunodoy Banerjee : ಧಾರವಾಹಿ ಶೂಟಿಂಗ್ ನಡುವೆ ದುರಂತ; ಖ್ಯಾತ ನಟ  ರಾಹುಲ್ ನಿಧನ

ಧಾರವಾಹಿ ಶೂಟಿಂಗ್ ನಡುವೆ ದುರಂತ; ಖ್ಯಾತ ನಟ ರಾಹುಲ್ ನಿಧನ

Rahul Arunodoy Banerjee : ಜನಪ್ರಿಯ ಬಂಗಾಳಿ ನಟ ರಾಹುಲ್ ಬ್ಯಾನರ್ಜಿ ಒಡಿಶಾದಲ್ಲಿ ದೋಣಿ ಅಪಘಾತದಲ್ಲಿ ನಿಧನರಾಗಿದ್ದಾರೆ. ತಲ್ಸಾರಿ ಬೀಚ್‌ನಲ್ಲಿ ತಮ್ಮ ದೂರದರ್ಶನ ಕಾರ್ಯಕ್ರಮ ಭೋಲೆ ಬಾಬಾ ಪರ್ ಕರೇಗಾ ಚಿತ್ರೀಕರಣದಲ್ಲಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ಚಿತ್ರೀಕರಣದ ಸಮಯದಲ್ಲಿ ಅವರು ಸಮುದ್ರಕ್ಕೆ ಬಿದ್ದು, ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ʻಧುರಂಧರ್‌ 2 ಚಿತ್ರವನ್ನ ಗಂಭೀರವಾಗಿ ಪರಿಗಣಿಸಿ, ಇಲ್ಲವಾದರೆ...ʼ; ಚಿತ್ರರಂಗಕ್ಕೆ ಎಚ್ಚರಿಕೆ ನೀಡಿದ ರಾಮ್‌ ಗೋಪಾಲ್‌ ವರ್ಮಾ!

Dhurandhar 2: 'ಹೊಸ ಪಾಠವೆಂದು ಭಾವಿಸಿ..'- ಎಚ್ಚರಿಕೆ ನೀಡಿದ RGV

Ranveer Singh: ಧುರಂಧರ್‌ 2 ಚಿತ್ರವು 10 ದಿನಗಳಲ್ಲಿ 1200 ಕೋಟಿ ರೂ. ಗಳಿಕೆಯತ್ತ ಸಾಗುತ್ತಿದ್ದು, ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ಚಿತ್ರವನ್ನು 'ಪರಮಾಣು ಬಾಂಬ್'ಗೆ ಹೋಲಿಸಿದ್ದು, ಚಿತ್ರರಂಗದ ಮೌನವನ್ನು ಪ್ರಶ್ನಿಸಿದ್ದಾರೆ.

Dhurandhar 2: 'ಧುರಂಧರ್ 2' ಚಿತ್ರದ ಶೂಟಿಂಗ್‌ ವೇಳೆ ಗರ್ಭಿಣಿ ದೀಪಿಕಾರನ್ನ ಹೇಗೆ ಕೇರ್‌ ಮಾಡಿದ್ರು ಗೊತ್ತಾ ರಣವೀರ್‌?

ಶೂಟಿಂಗ್‌ ವೇಳೆ ಗರ್ಭಿಣಿ ದೀಪಿಕಾರನ್ನ ಹೇಗೆ ಕೇರ್‌ ಮಾಡಿದ್ರು ರಣವೀರ್‌?

Dhurandhar 2: ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ಇತ್ತೀಚಿನ ಬಿಡುಗಡೆಯಾದ 'ಧುರಂಧರ್: ದಿ ರಿವೆಂಜ್' ( ಚಿತ್ರದ ಯಶಸ್ಸಿನಲ್ಲಿ ಮುಳುಗಿದ್ದಾರೆ. ಈ ಚಿತ್ರದ ಚಿತ್ರೀಕರಣದಲ್ಲಿದ್ದಾಗ, ಅವರ ಪತ್ನಿ ಮತ್ತು ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದರು. ದಂಪತಿ 2024 ರಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಇತ್ತೀಚೆಗೆ ಮಿರ್ಚಿ ಪ್ಲಸ್‌ಗೆ ನೀಡಿದ ಸಂದರ್ಶನದಲ್ಲಿ, 'ಧುರಂಧರ್ 2' ನಟ ಅಭಯ್ ಅರೋರಾ, 'ರಣವೀರ್' ಚಿತ್ರದ ಚಿತ್ರೀಕರಣದ ಸಮಯದಲ್ಲಿ ತಮ್ಮ ಕುಟುಂಬವನ್ನು ಹೇಗೆ ನೋಡಿಕೊಂಡರು ಎಂಬುದನ್ನು ಹೇಳಿಕೊಂಡಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ ʻಬಿಗ್‌ ಬಾಸ್‌ 18ʼ ಖ್ಯಾತಿಯ ರಜತ್ ದಲಾಲ್; ಮದುವೆಯಾದ ಹುಡುಗಿ ಯಾರು?

ʻಬಿಗ್‌ ಬಾಸ್ 18ʼ ರಜತ್ ದಲಾಲ್ ಕೈ ಹಿಡಿದ ಹುಡುಗಿ ಯಾರು? ಫೋಟೋಗಳು ಇಲ್ಲಿವೆ

Bigg Boss 18 Rajat Dalal Wedding: ಬಿಗ್‌ ಬಾಸ್‌ 18 ಖ್ಯಾತಿಯ ಇನ್‌ಫ್ಲುಯೆನ್ಸರ್ ರಜತ್ ದಲಾಲ್ ಭಾನುವಾರ (ಮಾ. 29) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅತ್ಯಂತ ಖಾಸಗಿಯಾಗಿ ನಡೆದ ಈ ವಿವಾಹ ಸಮಾರಂಭದ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ನೀಡಿದ್ದಾರೆ.

Akhil Akkineni: ‘ಪೆದ್ದಿ’ ಸಿನಿಮಾಕ್ಕಾಗಿ ಅಖಿಲ್ ಅಕ್ಕಿನೇನಿ ಸಿನಿಮಾ ಪೋಸ್ಟ್‌ಪೋನ್‌! ಹೊಸ ದಿನಾಂಕ ರಿವೀಲ್‌

‘ಪೆದ್ದಿ’ ಸಿನಿಮಾಕ್ಕಾಗಿ ಅಖಿಲ್ ಅಕ್ಕಿನೇನಿ ಸಿನಿಮಾ ಪೋಸ್ಟ್‌ಪೋನ್‌!

Akhil Akkineni: ರಾಮ್ ಚರಣ್ ಮತ್ತು ಜಾಹ್ನವಿ ಕಪೂರ್ ಅವರ 'ಪೆದ್ದಿ' ಚಿತ್ರದೊಂದಿಗೆ ಬಾಕ್ಸ್ ಆಫೀಸ್ ಕ್ಲ್ಯಾಶ್‌ ತಡೆಗಟ್ಟಲು ನಾಗಾರ್ಜುನ ಅಕ್ಕಿನೇನಿ ಅವರ ಪುತ್ರ ಅಖಿಲ್ ಅಕ್ಕಿನೇನಿ ಅವರ ಮುಂಬರುವ ತೆಲುಗು ಚಿತ್ರ ಲೆನಿನ್ ಚಿತ್ರವನ್ನು ಮುಂದೂಡಲಾಗಿದೆ. ‘ಟಾಕ್ಸಿಕ್’ಸಿನಿಮಾ ಬಿಡುಗಡೆ ದಿನಾಂಕ ಮುಂದೆ ಹೋಗಿದ್ದು, ಆ ನಂತರದ ಹಲವು ಸಿನಿಮಾಗಳ ಬಿಡುಗಡೆ ಮೇಲೆ ಪರಿಣಾಮ ಬೀರಿದೆ. ಸುಮಾರು ಆಗಸ್ಟ್ ತಿಂಗಳ ವರೆಗೆ ಅದರ ನಂತರದ ಕೆಲವು ಸಿನಿಮಾಗಳ ಬಿಡುಗಡೆ ದಿನಾಂಕಗಳು ಸಹ ( Akhil Akkineni) ಬದಲಾಗಿವೆ. ಇದೀಗ ತೆಲುಗಿನ ‘ಲೆನಿನ್’ ಸಿನಿಮಾದ ಬಿಡುಗಡೆ ಸಹ ಮುಂದೂಡಲಾಗಿದೆ.

ಶಾಕಾಹಾರಿ ಆಹಾರ, ಬೆಳ್ಳಂಬೆಳಗ್ಗೆಯೇ ವರ್ಕ್‌ಔಟ್; ʻಪೆದ್ದಿʼ ಚಿತ್ರದ  ಪೈಲ್ವಾನ್ ಲುಕ್‌ಗಾಗಿ ರಾಮ್ ಚರಣ್ 8 ತಿಂಗಳ ಶ್ರಮ

Peddi Movie: ಅಯ್ಯಪ್ಪ ದೀಕ್ಷೆಯಲ್ಲೇ ಮೈಕಟ್ಟು ಹುರಿಗೊಳಿಸಿದ ನಟ ರಾಮ್ ಚರಣ್

Ram Charan Peddi Movie: ನಟ ರಾಮ್ ಚರಣ್ ಅವರು ಪೆದ್ದಿ ಚಿತ್ರದ ಪೈಲ್ವಾನ್‌ ಪಾತ್ರಕ್ಕಾಗಿ ಕಳೆದ 8 ತಿಂಗಳುಗಳಿಂದ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅಯ್ಯಪ್ಪ ದೀಕ್ಷೆಯ ಅವಧಿಯಲ್ಲೇ ಕಟ್ಟುನಿಟ್ಟಾದ ಶಾಖಾಹಾರಿ ಆಹಾರ ಸೇವಿಸಿ, ಪ್ರತಿದಿನ ಬೆಳಿಗ್ಗೆ 5:30ಕ್ಕೆ ವರ್ಕ್‌ಔಟ್ ಮಾಡುವ ಮೂಲಕ ಪೈಲ್ವಾನ್ ಮೈಕಟ್ಟು ಪಡೆದಿದ್ದಾರೆ.

Ulidavaru Kandante Movie: ʻರಸ್ತೆಯಲ್ಲೂ ಇರಲಿ ಸಹನೆʼ ಎಂದ ಹುಬ್ಬಳ್ಳಿ-ಧಾರಾವಾಡ ಪೊಲೀಸರ ಕ್ರಿಯೇಟಿವಿಟಿಗೆ ರಕ್ಷಿತ್ ಶೆಟ್ಟಿ ಫ್ಯಾನ್ಸ್ ಫಿದಾ

ರಕ್ಷಿತ್ ಶೆಟ್ಟಿ 'ಉಳಿದವರು ಕಂಡಂತೆ' ಟ್ವೀಟ್ ಬಳಸಿ ಪೊಲೀಸರ ಸಂಚಾರ ಜಾಗೃತಿ

ರಕ್ಷಿತ್‌ ಶೆಟ್ಟಿ ಅವರ ಟ್ವೀಟ್‌ ಬಳಸಿಕೊಂಡು ಹುಬ್ಬಳ್ಳಿ-ಧಾರವಾಡ ಪೊಲೀಸರು ವಿಶಿಷ್ಟವಾಗಿ ಸಂಚಾರ ಜಾಗೃತಿ ಮೂಡಿಸಿದ್ದಾರೆ. 'ಉಳಿದವರು ಕಂಡಂತೆ' ಸಿನಿಮಾ 12 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಕ್ಷಿತ್ ಮಾಡಿದ ಟ್ವೀಟ್ ಅನ್ನು ರೀ-ಪೋಸ್ಟ್ ಮಾಡಿರುವ ಪೊಲೀಸರು, ಚಿತ್ರದ ಡೈಲಾಗ್‌ ಅನ್ನು ಬಳಸಿ ರಸ್ತೆಯಲ್ಲಿ ಓವರ್‌ಟೇಕ್ ಮಾಡುವಾಗ ಜಾಗರೂಕರಾಗಿರಲು ತಿಳಿಸಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಲು ಡಾ. ವಿಷ್ಣುವರ್ಧನ್‌ ಮೊಮ್ಮಗ ಜ್ಯೇಷ್ಠ ರೆಡಿ; ಮೊದಲ ಸಿನಿಮಾಕ್ಕಾಗಿ ಭರ್ಜರಿ ತಯಾರಿ‌

ಸ್ಯಾಂಡಲ್‌ವುಡ್‌ಗೆ ವಿಷ್ಣು ಮೊಮ್ಮಗನ ಎಂಟ್ರಿ; ತಾತನ ಹಾದಿಯಲ್ಲಿ ಜ್ಯೇಷ್ಠ

Dr Vishnuvardhan Grandson Jyeshtavardhan: ʻಸಾಹಸ ಸಿಂಹʼ ಡಾ. ವಿಷ್ಣುವರ್ಧನ್‌ ಅವರ ಮೊಮ್ಮಗ ಜ್ಯೇಷ್ಠವರ್ಧನ್‌ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ನಟ ಅನಿರುದ್ಧ್ ಜತ್ಕರ್ ಪುತ್ರನಾದ ಜ್ಯೇಷ್ಠ, ನೇರವಾಗಿ ನಟನೆಗೆ ಇಳಿಯದೆ ಕಳೆದ ಹಲವು ವರ್ಷಗಳಿಂದ ನೃತ್ಯ ಮತ್ತು ನಟನೆಯಲ್ಲಿ ಕಠಿಣ ತರಬೇತಿ ಪಡೆದಿದ್ದಾರೆ.

ʻಧುರಂಧರ್‌ 2ʼ ಸಿನಿಮಾದ ಹಿಟ್‌ ಆಗಿದ್ದಕ್ಕೆ ರಣವೀರ್‌ ಸಿಂಗ್‌ಗೆ 5 ಕೋಟಿಯ ಹಮ್ಮರ್‌ ಕಾರ್‌ ಉಡುಗೊರೆಯಾಗಿ ಸಿಕ್ತಾ? ಈ ಸುದ್ದಿಯ ಅಸಲಿಯತ್ತೇನು?

ರಣವೀರ್ ಸಿಂಗ್‌ಗೆ 5 ಕೋಟಿಯ ಹಮ್ಮರ್ ಗಿಫ್ಟ್? ಅಸಲಿ ಸತ್ಯ ಇಲ್ಲಿದೆ!

Ranveer Singh: ʻಧುರಂಧರ್‌ 2ʼ ಚಿತ್ರವು ವಿಶ್ವದಾದ್ಯಂತ 1100 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಈ ಯಶಸ್ಸಿನ ಖುಷಿಯಲ್ಲಿ ನಿರ್ದೇಶಕ ಆದಿತ್ಯ ಧರ್ ಅವರು ರಣವೀರ್‌ಗೆ 5 ಕೋಟಿ ಮೌಲ್ಯದ ಹಮ್ಮರ್ ಕಾರನ್ನು ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದು ನಿಜವೇ?

ಈ ವರ್ಷದ ಮೊದಲ ಬ್ಲಾಕ್‌ ಬಸ್ಟರ್‌ ಹಿಟ್‌ ʻಲವ್‌ ಮಾಕ್ಟೇಲ್‌ 3ʼ; ವಿದೇಶದಲ್ಲೂ ರಿಲೀಸ್‌ ಆಯ್ತು ಕನ್ನಡ ಸಿನಿಮಾ

ಯುಎಸ್‌ಎ, ಆಸ್ಟ್ರೇಲಿಯಾದಲ್ಲಿ 'ಲವ್ ಮಾಕ್ಟೇಲ್ 3' ಕ್ರೇಜ್ ಶುರು

Love Mocktail 3: ಡಾರ್ಲಿಂಗ್ ಕೃಷ್ಣ ನಿರ್ದೇಶನದ 'ಲವ್ ಮಾಕ್ಟೇಲ್ 3' ಸಿನಿಮಾ 2026ರ ಮೊದಲ ಸೂಪರ್ ಹಿಟ್ ಚಿತ್ರವಾಗಿ ದಾಖಲಾಗಿದೆ. ಕೆವಿಎನ್ ಪ್ರೊಡಕ್ಷನ್ಸ್ ಹಂಚಿಕೆ ಮಾಡಿರುವ ಈ ಸಿನಿಮಾ ಈಗ ಅಮೆರಿಕ, ಆಸ್ಟ್ರೇಲಿಯಾ ಮತ್ತು ಜರ್ಮನಿಯಂತಹ ದೇಶಗಳಲ್ಲೂ ಬಿಡುಗಡೆಯಾಗಿದೆ.

Dhurandhar 2: 'ಧುರಂಧರ್ 2' 1000 ಕೋಟಿ ಗಳಿಸುತ್ತಿದ್ದಂತೆ 500 ಕೋಟಿ ರೂ. ಬೇಡಿಕೆ ಇಟ್ಟ ಪಾಕಿಸ್ತಾನಿ ಮಂದಿ! ಕಾರಣ ಇದು

'ಧುರಂಧರ್' 1000 ಕೋಟಿ ಗಳಿಸುತ್ತಿದ್ದಂತೆ ಪಾಕಿಸ್ತಾನಿ ಮಂದಿ ಹೊಸ ಬೇಡಿಕೆ!

Dhurandhar 2: ಆದಿತ್ಯ ಧರ್ ಅವರ ಧುರಂಧರ್: ದಿ ರಿವೆಂಜ್ ಭಾರತದಲ್ಲಿ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುತ್ತಿದೆ. ಮತ್ತು ವಿಶ್ವಾದ್ಯಂತ ಉತ್ತಮ ಪ್ರದರ್ಶನ ನೀಡುತ್ತಿದೆ. ಈ ಚಿತ್ರವು ಇಲ್ಲಿಯವರೆಗೆ ಜಾಗತಿಕವಾಗಿ ₹ 1,200 ಕೋಟಿ ದಾಟಿದೆ. ಈಗ, ಪಾಕಿಸ್ತಾನದ ಲಿಯಾರಿಯ ಜನರು ತಮ್ಮ ನಗರದ ಕಲ್ಯಾಣಕ್ಕಾಗಿ ಚಿತ್ರದ ಗಳಿಕೆಯಿಂದ ₹ 500 ಕೋಟಿ ಅಥವಾ ಶೇಕಡಾ 70–80 ರಷ್ಟು ಪಾಲನ್ನು ಕೇಳಿದ್ದಾರೆ.

Reels Ajji Lakshmi:  ಡ್ರಾಮಾ ಜೂನಿಯರ್ಸ್ ಸೂರಜ್ ಅಜ್ಜಿ ನಿಧನ:  'ರೀಲ್ಸ್ ಅಜ್ಜಿ' ಲಕ್ಷ್ಮಿ ಇನ್ನು ನೆನಪು ಮಾತ್ರ

ಡ್ರಾಮಾ ಜೂನಿಯರ್ಸ್ ಸೂರಜ್ ಅಜ್ಜಿ ನಿಧನ

Reels Ajji Lakshmi: ಸರಿಯಾಗಿ ಕಿವಿ ಕೇಳಿಸದಿದ್ದರೂ, ಕಣ್ಣು ಮಂಜಾಗಿದ್ದರೂ ತನ್ನ ಮರಿಮೊಮ್ಮಗ ಹೇಳಿಕೊಟ್ಟಂತೆ ನಟನೆ ಮಾಡುತ್ತಲೇ ಫೇಮಸ್‌ ಆದವರು ಲಕ್ಷ್ಮಿ ನಾಯ್ಕ . ಯಲ್ಲಾಪುರ ತಾಲ್ಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಅನಾರೋಗ್ಯದಿಂದ ಶನಿವಾರ ನಿಧನರಾಗಿದ್ದಾರೆ . ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಇವರು ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಸೂರಜ್ ಆಚಾರಿಯವರ ಮುತ್ತಜ್ಜಿ.

Dhurandhar 2: 1,200 ಕೋಟಿ ರೂ.ಗಳನ್ನು ದಾಟಿದ ಧುರಂಧರ್‌ 2 ಕಲೆಕ್ಷನ್‌!

1,200 ಕೋಟಿ ರೂ.ಗಳನ್ನು ದಾಟಿದ ಧುರಂಧರ್‌ 2 ಕಲೆಕ್ಷನ್‌!

Dhurandhar 2: ಧುರಂಧರ್ 2: ದಿ ರಿವೆಂಜ್ ತನ್ನ 10 ನೇ ದಿನದಂದು ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದೆ. ಶುಕ್ರವಾರದ ಕಲೆಕ್ಷನ್‌ ಹೋಲಿಸಿದರೆ ಈ ಚಿತ್ರ 50% ಹೆಚ್ಚಳ ಕಂಡಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ ಸಿನಿಮಾದ ಜಾಗತಿಕ ಗಳಿಕೆ ಈಗ 1,200 ಕೋಟಿ ರೂ.ಗಳನ್ನು ದಾಟಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ರಣವೀರ್ ಸಿಂಗ್ , ಸಂಜಯ್ ದತ್, ರಾಕೇಶ್ ಬೇಡಿ, ಅರ್ಜುನ್ ರಾಂಪಾಲ್, ಆರ್. ಮಾಧವನ್ ಮತ್ತು ಸಾರಾ ಅರ್ಜುನ್ ನಟಿಸಿದ್ದಾರೆ. ಇದು ಭಾರತದಲ್ಲಿ 1,000 ಕೋಟಿ ನಿವ್ವಳ ಗಡಿಯನ್ನು ತಲುಪಿದ ಅತ್ಯಂತ ವೇಗದ ಬಾಲಿವುಡ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಎರಡನೇ ವಾರಾಂತ್ಯದವರೆಗೂ ಬಾಕ್ಸ್ ಆಫೀಸ್‌ನಲ್ಲಿ ಬಲವಾದ ಗಳಿಕೆ ಮುಂದುವರಿಯುವ ನಿರೀಕ್ಷೆಯಿದೆ.

Toxic Movie: ʻಟಾಕ್ಸಿಕ್‌ʼ ಚಿತ್ರಕ್ಕೆ ಕಿಯಾರ ಆಯ್ಕೆ ಆಗಿದ್ದು ಏಕೆ? ನಿರ್ದೇಶಕಿ ಕೊಟ್ಟ ಕಾರಣ ಇದು

ʻಟಾಕ್ಸಿಕ್‌ʼ ಚಿತ್ರಕ್ಕೆ ಕಿಯಾರ ಆಯ್ಕೆ ಆಗಿದ್ದು ಏಕೆ?

Toxic Movie Yash: ಯಶ್ ಅವರ 'ಟಾಕ್ಸಿಕ್' ಚಿತ್ರದ ಬಿಡುಗಡೆ ದಿನಾಂಕವನ್ನು ಜೂನ್‌ಗೆ ಬದಲಾಯಿಸಿದಾಗ ಅಭಿಮಾನಿಗಳು ಸಾಕಷ್ಟು ಅಸಮಾಧಾನಗೊಂಡಿದ್ದರು. ಆದರೀಗ ಸಿನಿಮಾ ರಿಲೀಸ್‌ಗೆ ಫ್ಯಾನ್ಸ್‌ ಕೌಂಟ್‌ ಡೌನ್‌ ಶುರು ಮಾಡಿದ್ದಾರೆ. ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ ಯಶ್ ಜೊತೆಗೆ ನಟಿಸಿದ್ದಾರೆ ಮತ್ತು ಬಿಡುಗಡೆಗೆ ಮುನ್ನ, ನಿರ್ದೇಶಕಿ ಗೀತು ಮೋಹನ್ದಾಸ್ ಅವರು ಕಿಯಾರಾ ಅವರನ್ನು ಆಯ್ಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ, ನಾಡಿಯಾ ಪಾತ್ರಕ್ಕೆ ನಟಿ ಕಿಯಾರಾ ಅವರ ಮೊದಲ ಮತ್ತು ಏಕೈಕ ಆಯ್ಕೆ ಎಂದು ಬಹಿರಂಗಪಡಿಸಿದ್ದಾರೆ.

Chiranjeevi: ರಾಮ್ ಚರಣ್ ಹುಟ್ಟುಹಬ್ಬದಂದು 10 ಲಕ್ಷ ರೂ ಹಣವನ್ನು ಸಮಾಜ ಸೇವೆಗೆಂದು ಕೊಟ್ಟ ಚಿರಂಜೀವಿ

ಈ ಕಾರಣಕ್ಕೆ 10 ಲಕ್ಷ ರೂ ಹಣವನ್ನು ಸಮಾಜ ಸೇವೆಗೆಂದು ಕೊಟ್ಟ ಚಿರಂಜೀವಿ

Chiranjeevi: ಇತ್ತೀಚೆಗೆ ತೆಲಂಗಾಣ ಸರ್ಕಾರವು ಸೂಪರ್‌ಸ್ಟಾರ್ ಚಿರಂಜೀವಿ ಅವರಿಗೆ NTR ಪ್ರಶಸ್ತಿಯನ್ನು ನೀಡಿ ಗೌರವಿಸಿತು. ಜೊತೆಗೆ ₹ 10 ಲಕ್ಷ ನಗದು ಬಹುಮಾನವನ್ನೂ ನೀಡಿತು. ಆದಾಗ್ಯೂ, ಅವರ ಮಗ ರಾಮ್ ಚರಣ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ , ನಟ ಚಿರಂಜೀವಿ ತಮ್ಮ ಸಾಮಾಜಿಕ ಕಲ್ಯಾಣ ಧ್ಯೇಯಕ್ಕೆ ಸಂಪೂರ್ಣ ಮೊತ್ತವನ್ನು ದಾನ ಮಾಡಿದರು.

Rashika Shetty: ಕೋಪದಿಂದಲೇ ಆ ಪ್ರೀತಿ ಮುರಿದುಬಿತ್ತು!  ಲವ್‌ ಬ್ರೇಕಪ್‌ ಸ್ಟೋರಿ ನೆನೆದು ಬಿಗ್ ಬಾಸ್ ರಾಶಿಕಾ ಶೆಟ್ಟಿ ಭಾವುಕ

ಲವ್‌ ಬ್ರೇಕಪ್‌ ಸ್ಟೋರಿ ನೆನೆದು ಬಿಗ್ ಬಾಸ್ ರಾಶಿಕಾ ಶೆಟ್ಟಿ ಭಾವುಕ

Rashika Shetty: `ಬಿಗ್‌ ಬಾಸ್‌ ಕನ್ನಡ ಸೀಸನ್‌ 12’ರ ಸ್ಪರ್ಧಿ ಹಾಗೂ ʻಮನದ ಕಡಲುʼ (Manada Kadalu) ಸಿನಿಮಾ ನಟಿ ರಾಶಿಕಾ ಶೆಟ್ಟಿ ತಮ್ಮ ಜೀವನದ ಫಸ್ಟ್‌ ಲವ್‌ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಬಾಲ್ಯದಲ್ಲಿಯೇ ರಮ್ಯಾ ಮತ್ತು ರಕ್ಷಿತಾ ಅಭಿನಯದ ''ತನನಂ ತನನಂ'' ಚಿತ್ರದ ''ಕಂಡೆ ಕಂಡೆ ಗೋವಿಂದನಾ'' ಹಾಡಿನಲ್ಲಿ‌ಕಾಣಿಸಿಕೊಂಡಿದ್ದ ರಾಶಿಕಾ ಆ ನಂತರ ''ದೊರೆಸಾನಿ'' ಮೂಲಕ ಕಿರುತೆರೆಗೆ ಬಂದರು. ರಾಶಿಕಾ ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದು "ಬಿಗ್ ಬಾಸ್" ಮೂಲಕ. ಇದೀಗ ಲವ್‌ ಸ್ಟೋರಿ ಬಗ್ಗೆ ಮಾತನಾಡಿ ಅತ್ತಿದ್ದಾರೆ ನಟಿ.

Ustaad Bhagat Singh OTT : ಕೆಲವೇ ದಿನಗಳಲ್ಲಿ ಒಟಿಟಿಗೆ ಉಸ್ತಾದ್ ಭಗತ್ ಸಿಂಗ್? ಸ್ಟ್ರೀಮಿಂಗ್‌ ಎಲ್ಲಿ?

ಕೆಲವೇ ದಿನಗಳಲ್ಲಿ ಒಟಿಟಿಗೆ ಉಸ್ತಾದ್ ಭಗತ್ ಸಿಂಗ್? ಸ್ಟ್ರೀಮಿಂಗ್‌ ಎಲ್ಲಿ?

Ustaad Bhagat Singh: ಪವರ್ ಸ್ಟಾರ್ ಪವನ್ ಕಲ್ಯಾಣ್ ಮತ್ತು ನಿರ್ದೇಶಕ ಹರೀಶ್ ಶಂಕರ್ ಅವರ ಕಾಂಬೊ ಚಿತ್ರ ಉಸ್ತಾದ್ ಭಗತ್ ಸಿಂಗ್. 2012 ರಲ್ಲಿ 'ಗಬ್ಬರ್ ಸಿಂಗ್' ನಂತರ, ಈ ಮತ್ತೆ ಈ ಜೋಡಿ ಈ ಸಿನಿಮಾ ಮೂಲಕ ಒಟ್ಟಿಗೆ ಕೈ ಜೋಡಿಸಿದೆ. ಮಾರ್ಚ್ 19 ರಂದು ವಿಶ್ವಾದ್ಯಂತ ಬಿಡುಗಡೆಯಾದ ಈ ಚಿತ್ರವು ಅಭಿಮಾನಿಗಳಲ್ಲಿ ಉತ್ತಮ ಹೈಪ್ ಅನ್ನು ಸೃಷ್ಟಿಸಿತು. ಧುರಂಧರ್ ಚಿತ್ರದೊಂದಿಗೆ ಸ್ಪರ್ಧಿಸಲು ಸಾಧ್ಯವಾಗದ ಕಾರಣ ಓಟದಲ್ಲಿ ಹಿಂದೆ ಬಿದ್ದಿತು. ಡಿಜಿಟಲ್ ಹಕ್ಕುಗಳನ್ನು ಭಾರೀ ಬೆಲೆಗೆ ನೆಟ್‌ಫ್ಲಿಕ್ಸ್ (Netflix) ಖರೀದಿಸಿತ್ತು. ಈ ಚಿತ್ರ ರಿಲೀಸ್ ಆದ ಕೆಲವೇ ವಾರದಲ್ಲಿ ಒಟಿಟಿಗೆ ಬರುತ್ತಿದೆ. ಸ್ಟ್ರೀಮಿಂಗ್‌ ಎಲ್ಲಿ?

Jana Nayagan: 'ಜನ ನಾಯಗನ್' ರಿಲೀಸ್ ಬಗ್ಗೆ ಬಂತು ಬಿಗ್‌ ಅಪ್‌ಡೇಟ್‌!

'ಜನ ನಾಯಗನ್' ರಿಲೀಸ್ ಬಗ್ಗೆ ಬಂತು ಬಿಗ್‌ ಅಪ್‌ಡೇಟ್‌!

Thalapathy Vijay: ಜನ ನಾಯಗನ್ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಇದು. ಅಭಿಮಾನಿಗಳು ನಿರ್ಮಾಣ ಸೆಟ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಪ್ರತಿಯೊಂದು ಅಪ್‌ಡೇಟ್‌ ಫಾಲೋ ಮಾಡುತ್ತಿದ್ದಾರೆ. ಈ ಮೊದಲು ಸಿನಿಮಾ ಜನವರಿ 9, 2026 ರಂದು ಬಿಡುಗಡೆಯಾಗಲು ಯೋಜಿಸಲಾಗಿತ್ತು. ಆದರೀಗ ಸಿನಿಮಾ ಮತ್ತೆ ಪೋಸ್ಟ್‌ಪೋನ್‌ ಆಗಲಿದೆ ಎಂದು ವರದಿಯಾಗಿದೆ. ನಿರ್ಮಾಣ ಸಂಸ್ಥೆಯಾದ ಕೆವಿಎನ್, ‘ಜನ ನಾಯಗನ್’ ಮೇಲೆ ಆಸೆಯನ್ನೇ ಬಿಟ್ಟಿದೆಯಂತೆ.

Dhurandhar 2: ಧುರಂಧರ್ 2 ಸಿನಿಮಾ ಹಾಡಿ ಹೊಗಳಿದ ಕರಣ್ ಜೋಹರ್

ಧುರಂಧರ್ 2 ಸಿನಿಮಾ ಹಾಡಿ ಹೊಗಳಿದ ಕರಣ್ ಜೋಹರ್

Ranveer Singh: ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ಆದಿತ್ಯ ಧರ್ ಅವರ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ಧುರಂಧರ್‌ ಸಿನಿಮಾ ಬಗ್ಗೆ ಹಾಡಿ ಹೊಗಳಿದ್ದಾರೆ. ಈ ಚಿತ್ರವನ್ನು ರಣವೀರ್ ಅವರ ಇದುವರೆಗಿನ ಅತ್ಯುತ್ತಮ ಚಿತ್ರ ಎಂದು ಘೋಷಿಸಿದರು. ಶನಿವಾರ ಮುಂಜಾನೆ, ಕರಣ್ ಅವರು ಆದಿತ್ಯ ಧರ್ ನಿರ್ದೇಶನದ ಚಿತ್ರದ ಬಗ್ಗೆ ಇನ್ಸ್ಟಾಗ್ರಾಮ್ ನಲ್ಲಿ ಅದ್ಭುತ ವಿಮರ್ಶೆಯನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ತಮ್ಮ ಭಾವನಾತ್ಮಕ ಟಿಪ್ಪಣಿಯಲ್ಲಿ, ಆದಿತ್ಯ ಮತ್ತು ರಣವೀರ್ ಅವರನ್ನು ಅಭಿನಂದಿಸಿದ್ದಾರೆ.

Simple Suni: ಸಿಂಪಲ್ ಸುನಿಯ ಹೊಸ ಸಿನಿಮಾ ‘ಮೋಡ ಕವಿದ ವಾತಾವರಣ’ ; ರಿಲೀಸ್‌ ಡೇಟ್‌ ಅನೌನ್ಸ್‌

‘ಮೋಡ ಕವಿದ ವಾತಾವರಣ’ ರಿಲೀಸ್‌ ಡೇಟ್‌ ಅನೌನ್ಸ್‌

Simple Suni: ನಿರ್ದೇಶಕ ಸಿಂಪಲ್ ಸುನಿ ತಮ್ಮ ಶಿಷ್ಯನಿಗಾಗಿ ಮೋಡ ಕವಿದ ವಾತಾವರಣ ಸೃಷ್ಟಿಸಿದ್ದಾರೆ. ಅರ್ಥಾತ್ ಸುನಿ ಅವರ ಗರಡಿಯಲ್ಲಿ ಪಳಗಿರುವ ಯುವ ಪ್ರತಿಭೆ ಶೀಲಮ್ ಗಾಗಿ ಹೊಸ ಸಿನಿಮಾ ಮಾಡಿದ್ದಾರೆ. ಅದುವೇ ಮೋಡ ಕವಿದ ವಾತಾವರಣ. ಟೈಟಲ್ ನಿಂದ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜೂನ್ 26ರಂದು ಮೋಡ ಕವಿದ ವಾತಾವರಣ ಸಿನಿಮಾ ತೆರೆಗೆ ಬರ್ತಿದೆ.

Monalisa Bhosle: ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧರಾದ ನಿರ್ದೇಶಕ ಸನೋಜ್ ಮಿಶ್ರಾ

ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧರಾದ ಸನೋಜ್ ಮಿಶ್ರಾ

Monalisa Bhosle: ಮೊನಾಲಿಸಾ ಭೋಸ್ಲೆ ಇತ್ತೀಚೆಗೆ ನಿರ್ದೇಶಕ ಸನೋಜ್ ಮಿಶ್ರಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ಸನೋಜ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದರು. ವಿವಾದದ ನಂತರ, ನಿರ್ದೇಶಕರು ಕೊನೆಗೂ ಮೌನ ಮುರಿದು ಆರೋಪಗಳನ್ನು ನಿರಾಕರಿಸಿದ್ದಾರೆ. ವೈರಲ್ ಆಗಿರುವ ಕುಂಭ ಹುಡುಗಿ ಮತ್ತು ನಟಿ ಮೊನಾಲಿಸಾ ಸನೋಜ್ ನಿರ್ದೇಶನದ ಚಿತ್ರ ದಿ ಡೈರಿ ಆಫ್ ಮಣಿಪುರದಲ್ಲಿ ನಟಿಸಿದ್ದಾರೆ, ಇದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.

Varun Dhawan: ವರುಣ್ ಧವನ್ ಮಗಳಿಗೆ ಗಂಭೀರ ಕಾಯಿಲೆ! ನಟ ಹೇಳಿದ್ದೇನು?

ವರುಣ್ ಧವನ್ ಮಗಳಿಗೆ ಗಂಭೀರ ಕಾಯಿಲೆ! ನಟ ಹೇಳಿದ್ದೇನು?

Varun Dhawan: ಬಾಲಿವುಡ್ ನಟ ವರುಣ್ ಧವನ್ ಮತ್ತು ಅವರ ಪತ್ನಿ ನತಾಶಾ ದಲಾಲ್ 2024 ರಲ್ಲಿ ಮಗಳು ಲಾರಾಳನ್ನು ಸ್ವಾಗತಿಸಿದರು. ನಟ ವರುಣ್ ಧವನ್ ತಮ್ಮ ಮಗಳು ಲಾರಾ ಆರೋಗ್ಯದ ಬಗ್ಗೆ ಒಂದು ಶಾಕಿಂಗ್ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಮಗಳಿಗೆ DDH ಎಂಬ ಕಾಯಿಲೆ ಇದ್ದು, ಇದರಿಂದಾಗಿ ಅವಳಿಗೆ ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ. ಆದರೆ ಈಗ ಚಿಕಿತ್ಸೆ ಬಳಿಕ ಮಗಳು ಚೇತರಿಸಿಕೊಳ್ಳುತ್ತಿದ್ದಾಳೆ ಎಂದು ವರುಣ್ ಹೇಳಿದ್ದಾರೆ.

ʻಲವ್‌ ಮಾಕ್ಟೇಲ್‌ 3ʼ ಚಿತ್ರದ ಕೃತಿಚೌರ್ಯ ವಿವಾದಕ್ಕೆ‌ ಬಿತ್ತು ಬ್ರೇಕ್; ಫಿಲ್ಮ್‌ ಚೇಂಬರ್‌ನಲ್ಲಿ ನಡೆದಿದ್ದೇನು?

'ಲವ್ ಮಾಕ್ಟೇಲ್ 3' ಕಥೆ ವಿವಾದ ಅಂತ್ಯ; ಫಿಲ್ಮ್ ಚೇಂಬರ್ ಸಭೆಯಲ್ಲಿ ಇತ್ಯರ್ಥ

Love Mocktail 3 Story Dispute: ನಟ ಡಾರ್ಲಿಂಗ್ ಕೃಷ್ಣ ಅವರ 'ಲವ್ ಮಾಕ್ಟೇಲ್ 3' ಚಿತ್ರದ ಕಥೆಯ ಕುರಿತು ಕೇಳಿಬಂದಿದ್ದ ಕೃತಿಚೌರ್ಯದ ವಿವಾದವು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಅಂತ್ಯಗೊಂಡಿದೆ. ಡಾ. ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಎರಡೂ ಚಿತ್ರಗಳ ಕಥೆಗಳು ವಿಭಿನ್ನವಾಗಿವೆ ಎಂದು ನಿರ್ಧರಿಸಲಾಗಿದೆ.

Loading...