ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Actor Rakshit shetty: ಕಾಪಿ ರೈಟ್‌ ಉಲ್ಲಂಘನೆ; ನಟ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್!

ನಟ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್!

'ನ್ಯಾಯ ಎಲ್ಲಿದೆ' ಚಿತ್ರದ 'ನ್ಯಾಯ ಎಲ್ಲಿದೆ...' ಹಾಡು ಮತ್ತು 'ಗಾಳಿ ಮಾತು' ಚಿತ್ರದ 'ಒಮ್ಮೆ ನಿನ್ನನ್ನು' ಹಾಡನ್ನು ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ಅನಧಿಕೃತವಾಗಿ ಬಳಕೆ ಮಾಡಲಾಗಿದೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕು ಅನ್ನು ಖರೀದಿ ಮಾಡದೇ ಹಾಡುಗಳ ಬಳಕೆಯಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾ‌ರ್ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್‌, ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಗೆ ಭಾರಿ ದಂಡ ವಿಧಿಸಿದೆ.

ʻ‌ವರನಟʼ ಡಾ. ರಾಜ್‌ಕುಮಾರ್ ಜನ್ಮದಿನದಂದು ಅಪ್ಪು ಅಭಿಮಾನಿಯ ʻಪುನೀತ್ ನಿವಾಸʼ ರಿಲೀಸ್‌

ಅಣ್ಣಾವ್ರ ಜನ್ಮದಿನದಂದು ಅಪ್ಪು ಅಭಿಮಾನಿಯ 'ಪುನೀತ್ ನಿವಾಸ' ರಿಲೀಸ್

Puneeth Nivasa Movie: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಎಸ್. ಮೋಹನ್ ಅವರ ನಿರ್ಮಾಣದಲ್ಲಿ ಪುನೀತ್‌ ನಿವಾಸ ಸಿನಿಮಾ ಸಿದ್ಧವಾಗಿದೆ. ಅನಾಥ ಕೂಲಿ ಕಾರ್ಮಿಕನೊಬ್ಬ ತನ್ನ ಕಷ್ಟದ ಹಣದಿಂದ ಕಟ್ಟುವ ಕನಸಿನ ಮನೆಯೇ ಈ ಚಿತ್ರದ ಕಥಾಹಂದರ. ಡಾ. ರಾಜ್‌ಕುಮಾರ್ ಅವರ ಜನ್ಮದಿನವಾದ ಏಪ್ರಿಲ್ 24ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ.

Alka Yagnik: ಶ್ರವಣ ದೋಷದಿಂದ ಬಳಲುತ್ತಿರುವ ಖ್ಯಾತ ಗಾಯಕಿ; ಅಭಿಮಾನಿಗಳಿಗೆ ಬೇಸರ

ಶ್ರವಣ ದೋಷದಿಂದ ಬಳಲುತ್ತಿರುವ ಖ್ಯಾತ ಗಾಯಕಿ!

Alka Yagnik: ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಅಪರೂಪದ ಶ್ರವಣ ದೋಷದಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. "ಇನ್ನೂ ಆ ಸ್ಥಿತಿಯಿಂದ ಬಳಲುತ್ತಿದ್ದೇನೆ" ಎಂದು ಒಪ್ಪಿಕೊಂಡಿದ್ದಾರೆ. ಅಲ್ಕಾ ಯಾಗ್ನಿಕ್ ಅವರು ಹಾಡುವುದು ನಿಲ್ಲಿಸಿ 2 ವರ್ಷ ಆಗಿದೆ.ಸತತವಾಗಿ ಹಿಟ್ ಹಾಡುಗಳನ್ನು ನೀಡುತ್ತಿದ್ದ ಅರಿಜಿತ್ ಅವರ ಈ ಹಠಾತ್ ನಿರ್ಧಾರ ಸಂಗೀತ ಪ್ರಿಯರಲ್ಲಿ ಬೇಸರ ತಂದಿದೆ. ಈಗ ಅಲ್ಕಾ ಯಾಗ್ನಿಕ್ ಕೂಡ ಹಾಡುವುದನ್ನು ನಿಲ್ಲಿಸಿರುವುದು ಇನ್ನಷ್ಟು ಬೇಸರ ಮೂಡಿಸಿದೆ.

ಮದುವೆಯಾಗದೇ ತಾಯಿ ಆಗ್ತಿದ್ದಾರಾ ನಟಿ ಪೂನಂ ಪಾಂಡೆ? ವೈರಲ್‌ ಫೋಟೋ ಬಗ್ಗೆ ಹುಟ್ಟಿಕೊಂಡಿವೆ ಹಲವು ಪ್ರಶ್ನೆ!

ಮದುವೆಯಾಗದೇ ತಾಯಿ ಆಗ್ತಿದ್ದಾರಾ‌ ಪೂನಂ ಪಾಂಡೆ? ಬೇಬಿ ಬಂಪ್ ಫೋಟೋ ವೈರಲ್!

Poonam Pandey Pregnancy: ನಟಿ ಪೂನಂ ಪಾಂಡೆ ಅವರ ಪ್ರೆಗ್ನೆನ್ಸಿ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ದಿಢೀರ್‌ ಅಂತ ಪೂನಂ ಪಾಂಡೆ ತಮ್ಮ ಬೇಬಿ ಬಂಪ್ ಪ್ರದರ್ಶಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಾರೆ. ಈ ಹಿಂದೆ ತಮ್ಮ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಟೀಕೆಗೆ ಗುರಿಯಾಗಿದ್ದ ನಟಿ, ಈಗ ಏಪ್ರಿಲ್ ಫೂಲ್ ಮಾಡಿದ್ರಾ?

ಪ್ರಶಾಂತ್‌ ನೀಲ್‌ - ಎನ್‌ಟಿಆರ್‌ ಸಿನಿಮಾ ಆಫರ್‌ನ ರಿಜೆಕ್ಟ್‌ ಮಾಡಿದ ನಟ ಟೊವಿನೋ ಥಾಮಸ್;‌ ಕಾರಣ ಕೇಳಿ ಭೇಷ್‌ ಎಂದ ನೆಟ್ಟಿಗರು!

ಎನ್‌ಟಿಆರ್-ನೀಲ್ ಚಿತ್ರದ ಆಫರ್ ರಿಜೆಕ್ಟ್ ಮಾಡಿದ ಟೊವಿನೋ ಥಾಮಸ್; ಕಾರಣವೇನು?

Tovino Thomas On NTR Neel Movie: ಜ್ಯೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಆಯ್ಕೆಯಾಗಿದ್ದ ಟೊವಿನೋ ಥಾಮಸ್,‌ ಆ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಡೇಟ್ಸ್ ಹೊಂದಾಣಿಕೆಯಾಗದ ಅವರು ಆ ಚಿತ್ರದಿಂದ ಕಾರಣ ಹೊರಬಂದಿದ್ದಾರೆ ಎನ್ನಲಾಗಿದೆ.

ಹೊಸ ಮನೆಗೆ ಕಾಲಿಟ್ಟ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ; ಗೃಹಪ್ರವೇಶದ ಫೋಟೋಗಳು ಇಲ್ಲಿವೆ ನೋಡಿ

ʻಬೆಂಗಳೂರಿನಲೊಂದು ಪುಟ್ಟ ಗೂಡು'; ಸಿಹಿಸುದ್ದಿ ತಿಳಿಸಿದ ಅಕ್ಷತಾ ಪಾಂಡವಪುರ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅದೇನಪ್ಪ ಅಂದರೆ, ಅವರು ಬೆಂಗಳೂರಿನಲ್ಲಿ ಒಂದು ಸ್ವಂತ ಗೂಡೊಂದನ್ನು ಕಟ್ಟಿಕೊಂಡಿದ್ದಾರೆ. ಅರ್ಥಾತ್‌ ಹೊಸ ಮನೆಯನ್ನು ಖರೀದಿ ಮಾಡಿದ್ದು, ಅದರ ಗೃಹಪ್ರವೇಶವನ್ನು ಈಚೆಗೆ ಮಾಡಿದ್ದಾರೆ. ರಂಗಭೂಮಿ ಮತ್ತು ಚಿತ್ರರಂಗ ಎರಡರಲ್ಲೂ ಸಕ್ರಿಯವಾಗಿರುವ ಅಕ್ಷತಾ, ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನವವರು. ಹೆಗ್ಗೋಡಿನ ನೀನಾಸಂನಲ್ಲಿ ತರಬೇತಿ ಪಡೆದು ನಂತರ, ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲೂ ಕಲಿತು ಬಂದಿರುವ ಅಕ್ಷತಾ, ಗಮನಾರ್ಹ ಸಿನಿಮಾಗಳಿಂದ ಗುರುತಿಸಿಕೊಂಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸ್ವಂತ ಸೂರು ಮಾಡಿಕೊಂಡ ಖುಷಿಯಲ್ಲಿದ್ದಾರೆ ಅಕ್ಷತಾ ಮತ್ತು ಪ್ರಸನ್ನ ದಂಪತಿ. ಇಲ್ಲಿವೆ ನೋಡಿ ಗೃಹಪ್ರವೇಶ ಸಮಾರಂಭದ ಫೋಟೋಗಳು.

'ಜೈ ಹನುಮಾನ್' ಚಿತ್ರಕ್ಕಾಗಿ ಮೈತ್ರಿ ಮೂವೀ ಮೇಕರ್ಸ್ ಜೊತೆ ಕೈಜೋಡಿಸಿದ ರಿಷಬ್ ಶೆಟ್ಟಿ ಫಿಲ್ಮ್ಸ್

ʻಜೈ ಹನುಮಾನ್ʼ ಚಿತ್ರಕ್ಕೆ ರಿಷಬ್ ಶೆಟ್ಟಿ ಫಿಲ್ಮ್ಸ್ ಸಾಥ್

Rishab Shetty Jai Hanuman Movie: ರಿಷಬ್‌ ಶೆಟ್ಟಿ ಅವರು ಜೈ ಹನುಮಾನ್ ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್‌ಗೆ 'ಮೈತ್ರಿ ಮೂವೀ ಮೇಕರ್ಸ್' ಜೊತೆ 'ರಿಷಬ್ ಶೆಟ್ಟಿ ಫಿಲ್ಮ್ಸ್' ಕೂಡ ಕೈಜೋಡಿಸಿದೆ. ಮೇ ತಿಂಗಳಿನಿಂದ ಈ ಸಿನಿಮಾದ ಚಿತ್ರೀಕರಣದಲ್ಲಿ ರಿಷಬ್‌ ಶೆಟ್ಟಿ ಭಾಗಿಯಾಗಲಿದ್ದಾರೆ.

ನಟಿಸಿದ ಸಿನಿಮಾಗಳೆಲ್ಲಾ ಫ್ಲಾಪ್, ಆದರೂ ನೂರಾರು ಕೋಟಿ ಸಂಭಾವನೆ ಜೇಬಿಗಿಳಿಸಿದ ಸಲ್ಮಾನ್‌ ಖಾನ್!‌ ತೆಲುಗು ನಿರ್ಮಾಪಕ ಇಷ್ಟೊಂದು ದುಡ್ಡು ಕೊಟ್ಟಿದ್ದೇಕೆ?

‌ಫ್ಲಾಪ್ ಸಿನಿಮಾಗಳ ನಡುವೆಯೂ ದುಬಾರಿ ಸಂಭಾವನೆ ಪಡೆದ ಸಲ್ಮಾನ್ ಖಾನ್!

Salman Khan Dil Raju Film: ಸಲ್ಮಾನ್‌ ಖಾನ್‌ ಅವರ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಸಲ್ಮಾನ್ ಅವರ ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದರೂ ಈ ಚಿತ್ರಕ್ಕಾಗಿ ನಿರ್ಮಾಪಕ ದಿಲ್ ರಾಜು ದುಬಾರಿ ಸಂಭಾವನೆ ನೀಡಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ದ್ವಿಭಾಷಾ ಆ್ಯಕ್ಷನ್ ಚಿತ್ರವು 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ.

ಹುಟ್ಟುಹಬ್ಬದಂದೇ ಭರ್ಜರಿ ಗಿಫ್ಟ್‌ ನೀಡಿದ ʻಕ್ರೇಜಿ ಕ್ವೀನ್‌ʼ ರಕ್ಷಿತಾ ಪ್ರೇಮ್;‌ ʻಇಡಿಯಟ್‌ʼ ಅಂತ ಕರೆದಿದ್ದು ಯಾರಿಗೆ?

ಹುಟ್ಟುಹಬ್ಬದಂದೇ ಹೊಸ ಬ್ಯಾನರ್ ಆರಂಭಿಸಿದ ನಟಿ ರಕ್ಷಿತಾ ಪ್ರೇಮ್

Rakshitha Prem Birthday: ನಟಿ ರಕ್ಷಿತಾ ಪ್ರೇಮ್ ತಮ್ಮ ಹೊಸ ನಿರ್ಮಾಣ ಸಂಸ್ಥೆ 'ಫಿನಿಕ್ಸ್ ಪ್ರೇಮ್ಸ್ ಸ್ಟುಡಿಯೋಸ್' ಅನ್ನು ಅಧಿಕೃತವಾಗಿ ಚಾಲನೆ ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಈ ಬ್ಯಾನರ್ ಹೊಂದಿದೆ. ಅಂದಹಾಗೆ, ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೇ ತಮ್ಮ ಸಹೋದರ ರಾಣಾ ನಟನೆಯ 3ನೇ ಚಿತ್ರಕ್ಕೆ 'ಇಡಿಯಟ್' ಎಂದು ಹೆಸರಿಟ್ಟು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಮಂಜುನಾಥ್ ಬಿ.ಎಸ್. ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್ 3 ತಿಂಗಳ ರಿಪೋರ್ಟ್:‌ ಬಿಡುಗಡೆಯಾದ ಕನ್ನಡ ಸಿನಿಮಾಗಳೆಷ್ಟು? ಗೆದ್ದವರು ಯಾರು? ನಿರೀಕ್ಷೆ ಹುಟ್ಟಿಸಿ ಮಕಾಡೆ ಮಲಗಿದ ಚಿತ್ರಗಳೆಷ್ಟು?

3 ತಿಂಗಳಲ್ಲಿ ದಾಖಲೆಯ ಕನ್ನಡ ಸಿನಿಮಾಗಳು ರಿಲೀಸ್; ಗೆಲುವು ಸಿಕ್ಕಿದ್ಯಾರಿಗೆ?

Sandalwood Box Office 2026: ಈ ವರ್ಷದ ಮೊದಲ ಮೂರು ತಿಂಗಳಲ್ಲಿ ಒಟ್ಟು 72 ಕನ್ನಡ ಸಿನಿಮಾಗಳು ತೆರೆಕಂಡಿದ್ದರೂ, ಗೆಲುವಿನ ಪ್ರಮಾಣ ತೀರಾ ಕಮ್ಮಿ ಇದೆ. ಡಾರ್ಲಿಂಗ್ ಕೃಷ್ಣ ನಟನೆಯ 'ಲವ್ ಮಾಕ್ಟೇಲ್ 3' ಮಾತ್ರ ದೊಡ್ಡ ಮಟ್ಟದ ಯಶಸ್ಸು ಕಂಡು ಈ ವರ್ಷದ ಮೊದಲ ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡಿದೆ. ಬಿಡುಗಡೆಯಾದ ಶೇ. 90ರಷ್ಟು ಸಿನಿಮಾಗಳು ಬಂಡವಾಳ ವಾಪಸ್ ಪಡೆಯಲಾಗದೆ ಬಾಕ್ಸ್ ಆಫೀಸ್‌ನಲ್ಲಿ ನೆಲಕಚ್ಚಿವೆ.

Dhurandhar 2: ‘ಬಾಹುಬಲಿ 2’ ದಾಖಲೆ ಮುರಿದ ‘ಧುರಂಧರ್ 2’ ; ಕಲೆಕ್ಷನ್‌ ಏನು?

‘ಬಾಹುಬಲಿ 2’ ದಾಖಲೆ ಮುರಿದ ‘ಧುರಂಧರ್ 2’ ; ಕಲೆಕ್ಷನ್‌ ಏನು?

Dhurandhar 2: ಧುರಂಧರ್ ದಿ ರಿವೆಂಜ್ ಕೇವಲ 12 ದಿನಗಳಲ್ಲಿ ಅಂತರರಾಷ್ಟ್ರೀಯವಾಗಿ ಸುಮಾರು ₹ 1400 ಕೋಟಿ ಗಳಿಸಿದೆ, ಸಾರ್ವಕಾಲಿಕ ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದೆ. ರ ಪುಷ್ಪಾ 2, ಬಾಹುಬಲಿ 2 ಮತ್ತು ಅಂತಿಮವಾಗಿ ದಂಗಲ್ ಸಿನಿಮಾಗಳನ್ನು ಹಿಂದಿಕ್ಕಿದೆ. ಈಗ ಪ್ರಭಾಸ್ ಅವರ ಬ್ಲಾಕ್‌ಬಸ್ಟರ್ ಚಿತ್ರ ‘ಬಾಹುಬಲಿ 2: ದಿ ಕನ್ಕ್ಲೂಷನ್’ ಚಿತ್ರ ಬರೆದ ದಾಖಲೆ ಮುರಿದಿದೆ. ‘ಧುರಂಧರ್ 2’ ವಿದೇಶದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಿತ್ರವಾಗಿದೆ.

Harshika Poonacha: 2ನೇ ಮಗುವಿನ ಆಗಮನ ಬಗ್ಗೆ ಸಿಹಿಸುದ್ದಿ ಕೊಟ್ರು ಹರ್ಷಿಕಾ ಪೂಣಚ್ಚ ದಂಪತಿ

2ನೇ ಮಗುವಿನ ಆಗಮನ ಬಗ್ಗೆ ಸಿಹಿಸುದ್ದಿ ಕೊಟ್ರು ಹರ್ಷಿಕಾ ಪೂಣಚ್ಚ ದಂಪತಿ

Harshika Poonacha: ಸ್ಯಾಂಡಲ್​ವುಡ್ ಸ್ಟಾರ್​ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಪೊನ್ನಣ್ಣ ಸಖತ್​ ಖುಷಿಯಲ್ಲಿದ್ದಾರೆ. ಇದೀಗ ಈ ದಂಪತಿ ಜೀವನದಲ್ಲಿ ಎರಡನೇ ಮಗುವಿನ ಆಗಮನವಾಗುತ್ತಿದೆ. ಪ್ಯಾರಿಸ್‌ನಲ್ಲಿ ಕುಟುಂಬದೊಂದಿಗೆ ನಟಿ ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರೋದ್ಯಮದ ಸಹೋದ್ಯೋಗಿಗಳು ದಂಪತಿಗೆ ಪ್ರೀತಿ ಮತ್ತು ಅಭಿನಂದನೆಗಳನ್ನು ಸುರಿಸುತ್ತಿದ್ದಾರೆ.

Ramayana Teaser: ಅಮೆರಿಕದಲ್ಲಿ 'ರಾಮಾಯಣ' ಚಿತ್ರದ ಟೀಸರ್ ಪ್ರದರ್ಶನ; ಯಶ್ ಅನುಪಸ್ಥಿತಿಯಲ್ಲಿ ತಂಡ ಹೇಳಿದ್ದೇನು?

Ramayana Teaser: ಅಮೆರಿಕದಲ್ಲಿ 'ರಾಮಾಯಣ' ಚಿತ್ರದ ಟೀಸರ್ ಪ್ರದರ್ಶನ

Ramayana Teaser: ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ 'ರಾಮಾಯಣ' ಚಿತ್ರದ ಟೀಸರ್ ಪ್ರದರ್ಶನ ಮಾಡಲಾಗಿದೆ. ಅಲ್ಲಿನ ಮಾಧ್ಯಮಗಳ ಜೊತೆಗೆ ಚಿತ್ರತಂಡ ಮಾತನಾಡಿದೆ. ಪ್ರದರ್ಶನದ ಆರಂಭಿಕ ಪ್ರತಿಕ್ರಿಯೆಗಳು ಈಗಾಗಲೇ ವೈರಲ್ ಆಗುತ್ತಿವೆ. ನಿತೇಶ್ ತಿವಾರಿ ನಿರ್ದೇಶನದ ಮತ್ತು ರಣಬೀರ್ ಕಪೂರ್ ನಟಿಸಿರುವ ಪೌರಾಣಿಕ ಮಹಾಕಾವ್ಯದ ಮೊದಲ ತುಣುಕನ್ನು ವಿಶೇಷ ಪ್ರದರ್ಶನದಲ್ಲಿ ಕಿಕ್ಕಿರಿದ ಪ್ರೇಕ್ಷಕರಿಗೆ ಪ್ರದರ್ಶಿಸಲಾಯಿತು. ಅದ್ಧೂರಿ ಬಿಡುಗಡೆಯ ಫೋಟೋಗಳು (Photos) ಮತ್ತು ವೀಡಿಯೊಗಳು ಆನ್‌ಲೈನ್‌ನಲ್ಲಿ ಹರಿದಾಡುತ್ತಿವೆ.

Rishab Shetty: ಹುಟ್ಟೂರು ಕೆರಾಡಿಯಲ್ಲಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ! ಡಿವೈನ್ ಸ್ಟಾರ್ ಕನಸು ನನಸು

ಹುಟ್ಟೂರು ಕೆರಾಡಿಯಲ್ಲಿ ಫಿಲ್ಮ್​​ಸಿಟಿ ನಿರ್ಮಿಸಿದ ರಿಷಬ್ ಶೆಟ್ಟಿ!

Rishab Shetty: ರಿಷಬ್ ಶೆಟ್ಟಿ ಅವರಿಗೆ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಬಂದಿವೆ. ಈ ವೇಳೆ 2025ನೇ ಸಾಲಿನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ನಟ ಪ್ರಶಸ್ತಿಯು 'ಕಾಂತಾರ ಅಧ್ಯಾಯ 1' ಸಿನಿಮಾದ ನಟನೆಗಾಗಿ ರಿಷಬ್ ಶೆಟ್ಟಿ ಪಾಲಾದರೆ, ಅತ್ಯುತ್ತಮ ನಟಿ ಪ್ರಶಸ್ತಿಯು ಗತ ವೈಭವ ಚಿತ್ರದ ನಟನೆಗಾಗಿ ಆಶಿಕಾ ರಂಗನಾಥ್ ಪಡೆದರು. ಮೂರು ಟ್ರೋಫಿಗಳಿಗೆ ಡಿವೈನ್ ಸ್ಟಾರ್ ರಿಷಬ್ ಮುತ್ತಿಟ್ಟಿದ್ದು ವಿಶೇಷವಾಗಿತ್ತು. ಈ ವೇಳೆ ಕೆರಾಡಿಯಲ್ಲಿ ತಾವು ಮಾಡಿದ ಸಾಧನೆ ಬಗ್ಗೆ ಹೇಳಿಕೊಂಡಿದ್ದಾರೆ.

Thalapathy Vijay Net Worth: 'ದಳಪತಿ' ವಿಜಯ್ ಹೆಸರಲ್ಲಿದೆ ಕೋಟಿ ಕೋಟಿ ಆಸ್ತಿ;  ಪತ್ನಿ ಬಳಿ ಎಷ್ಟಿದೆ?

'ದಳಪತಿ' ವಿಜಯ್ ಹೆಸರಲ್ಲಿದೆ ಕೋಟಿ ಕೋಟಿ ಆಸ್ತಿ; ಪತ್ನಿ ಬಳಿ ಎಷ್ಟಿದೆ?

Thalapathy Vijay Net Worth: ನಟ ವಿಜಯ್ ಹಲವು ವರ್ಷಗಳಿಂದ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ತಾರೆಗಳಲ್ಲಿ ಒಬ್ಬರಾಗಿದ್ದಾರೆ. ದಕ್ಷಿಣ ಭಾರತದ ಪ್ರಮುಖ ನಟ ವಿಜಯ್ ಅವರ ಸಿನಿಮಾಗಳಿಂದಾಗಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ, ಆದರೆ ಈಗ ಅವರು ಬೇರೆಯದೇ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಅದರಂತೆ, ಈ ಪರಿವರ್ತನೆಯ ಸಮಯದಲ್ಲಿ, ಅವರು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದರು. ಚುನಾವಣಾ ಮಾರ್ಗಸೂಚಿಗಳ ಪ್ರಕಾರ, ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಆಸ್ತಿ, ಇತರ ಆಸ್ತಿಗಳನ್ನು ವಿವರಿಸುವ ಅಫಿಡವಿಟ್ ಅನ್ನು ಸಲ್ಲಿಸಬೇಕು. ವಿಜಯ್ ತಮ್ಮ ನಾಮನಿರ್ದೇಶನದ ಸಮಯದಲ್ಲಿ ಈ ವಿವರಗಳನ್ನು ಉಲ್ಲೇಖಿಸಿದ್ದಾರೆ, ಇದು ಅವರ ಅಭಿಮಾನಿಗಳು ಮತ್ತು ಇತರರಲ್ಲಿ ಚರ್ಚೆಯಾಗಿದೆ.

ʻಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ʼ ಶೋನ ಪ್ರತಿ ಸ್ಪರ್ಧಿಗೂ 50 ಸಾವಿರ ರೂ. ನೀಡಿದ ಶಿವಣ್ಣ ದಂಪತಿ; ಇದೇ ನೋಡಿ ದೊಡ್ಮನೆಯ ದೊಡ್ಡ ಗುಣ!

ಡಿಕೆಡಿ ಸ್ಪರ್ಧಿಗಳಿಗೆ ತಲಾ 50 ಸಾವಿರ ರೂ. ನೆರವು ನೀಡಿದ ಶಿವಣ್ಣ ದಂಪತಿ!

Shivarajkumar Charity Work: ಜೀ ಕನ್ನಡದ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' ಶೋನ ತೀರ್ಪುಗಾರರಾಗಿರುವ ಡಾ. ಶಿವರಾಜ್‌ಕುಮಾರ್‌ ಅವರು ಕ್ವಾರ್ಟರ್ ಫಿನಾಲೆಯಲ್ಲಿ ನೀಡಿದ್ದ ಭರವಸೆಯಂತೆ ಪ್ರತಿಯೊಬ್ಬ ಸ್ಪರ್ಧಿ, ಕೋರಿಯೋಗ್ರಾಫರ್ ಮತ್ತು ಮೆಂಟರ್‌ಗೆ ತಲಾ 50 ಸಾವಿರ ರೂ.ಗಳ ಚೆಕ್ ವಿತರಿಸಿದ್ದಾರೆ.

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

ಆಧ್ಯಾತ್ಮಿಕ ವಿಜ್ಞಾನಿ ರಶ್ಮಿ ಅಯ್ಯಪ್ಪಗೆ ಜೀವಮಾನ ಸಾಧನೆ ಪ್ರಶಸ್ತಿ

ಉದ್ಯೋಗ್ ಯೋಗದಾನ್ ಪುರಸ್ಕಾರವು ಕೈಗಾರಿಕಾ ವಲಯದ ಅತ್ಯುನ್ನತ ಮನ್ನಣೆ ಯಾಗಿದ್ದು, ತಮ್ಮ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಗಳನ್ನು ನೀಡಿ ಶಾಶ್ವತ ಹೆಜ್ಜೆಗುರುತು ಮೂಡಿಸಿದ ವ್ಯಕ್ತಿಗಳನ್ನು ಗೌರವಿಸುವ ಪ್ರಶಸ್ತಿಯಾಗಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟಿ, ಉದ್ಯಮಿ ಮತ್ತು ಸ್ವಾಸ್ಥ್ಯ ಪ್ರತಿಪಾದಕಿಯಾದ ಶಿಲ್ಪಾ ಶೆಟ್ಟಿ ಕುಂದ್ರಾ(Shilpa Shetty Kundra) ಅವರು ಪ್ರಶಸ್ತಿ ಪ್ರದಾನ ಮಾಡಿದರು

ʻಗ್ಯಾಂಗ್ಸ್ ಆಫ್‍ ಯುಕೆ ಚಿತ್ರಕ್ಕೂ ಭೀಮಾತೀರದ ಹಂತಕರಿಗೂ ಸಂಬಂಧವಿಲ್ಲʼ- ನಿರ್ದೇಶಕ ರವಿ ಶ್ರೀವತ್ಸ ಸ್ಪಷ್ಟನೆ

ʻಗ್ಯಾಂಗ್ಸ್ ಆಫ್ ಯುಕೆʼ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ ರವಿ ಶ್ರೀವತ್ಸ

Gangs of UK Movie: ನಿರ್ದೇಶಕ ರವಿ ಶ್ರೀವತ್ಸ ಅವರು ʻಗ್ಯಾಂಗ್ಸ್ ಆಫ್ ಯುಕೆʼ ಏಪ್ರಿಲ್ 10ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಚಿತ್ರವು ಭೀಮಾತೀರದ ಹಂತಕರ ಕಥೆಯಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಇದು ವ್ಯವಸ್ಥೆಯ ವಿರುದ್ಧ ನೊಂದವರ ಮತ್ತು ತಾಯಿಯ ರಕ್ತಕಣ್ಣೀರಿನ ಕಥೆಯಾಗಿದೆ ಎಂದು ತಿಳಿಸಿದ್ದಾರೆ.

‘ಶ್ರೀಕೃಷ್ಣ’ ಚಿತ್ರದ ‘ಉಧೋ ಉಧೋ ಯಲ್ಲವ್ವ’ ಸಾಂಗ್‌ ರಿಲೀಸ್;‌ ಹೊಸ ಸಾಹಸಕ್ಕೆ ಮುಂದಾದ ಶಂಕರ್‍ ರಾಜ ವರ್ಮಾ

'ಶ್ರೀಕೃಷ್ಣ' ಚಿತ್ರದ 'ಉಧೋ ಉಧೋ ಯಲ್ಲವ್ವ' ಸಾಂಗ್ ರಿಲೀಸ್

Shreekrishna Kannada Movie: ನಿರ್ದೇಶಕ ಶಂಕರ್ ರಾಜ ವರ್ಮಾ ಅವರು ನಟ ಮತ್ತು ನಿರ್ಮಾಪಕರಾಗಿ ಹೊಸ ಸಾಹಸಕ್ಕೆ ಮುಂದಾಗಿದ್ದಾರೆ. ಅವರ ಶ್ರೀಕೃಷ್ಣ ಚಿತ್ರದ ಮೊದಲ ಹಾಡು ‘ಉಧೋ ಉಧೋ ಯಲ್ಲವ್ವ’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಮೇ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.

ಕರ್ನಾಟಕ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದ ʻಧುರಂಧರ್‌ 2ʼ; ರಣವೀರ್‌ ಸಿಂಗ್‌ ಅಬ್ಬರದ ಎದುರು ʻಬಾಹುಬಲಿ 2ʼ ರೆಕಾರ್ಡ್‌ ಪೀಸ್‌ ಪೀಸ್!‌

ಕರ್ನಾಟಕದಲ್ಲಿ ಧುರಂಧರ್ 2 ಅಬ್ಬರ: 11 ದಿನದಲ್ಲಿ ಹೊಸ ದಾಖಲೆ ಸೃಷ್ಟಿ

ಧುರಂಧರ್‌ 2 ಸಿನಿಮಾವು ಬಿಡುಗಡೆಯಾದ ಕೇವಲ 11 ದಿನಗಳಲ್ಲಿ ವಿಶ್ವದಾದ್ಯಂತ 1365 ಕೋಟಿ ರೂ. ಗಳಿಸಿದ್ದು, ಕರ್ನಾಟಕದಲ್ಲಿಯೂ ದಾಖಲೆ ಮೊತ್ತವನ್ನು ಬಾಚಿಕೊಂಡಿದೆ. ಜೊತೆಗೆ 'ಬಾಹುಬಲಿ 2' ದಾಖಲೆಯನ್ನು ಅತಿ ವೇಗವಾಗಿ ಮುರಿದಿದೆ. ಉತ್ತರ ಅಮೆರಿಕಾದಲ್ಲೂ 22 ಮಿಲಿಯನ್ ಡಾಲರ್ ಗಳಿಸಿ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

2025ರ ಅತ್ಯುತ್ತಮ ಸಿನಿಮಾ 'ಕಾಂತಾರ ಚಾಪ್ಟರ್ 1'; ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಪ್ರಶಸ್ತಿ ಪ್ರದಾನ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ

Photos: ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್: ಯಾರಿಗೆಲ್ಲಾ ಪ್ರಶಸ್ತಿ ಸಿಕ್ತು?

7ನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭವು ಅದ್ದೂರಿಯಾಗಿ ಬೆಂಗಳೂರಿನಲ್ಲಿ ನಡೆದಿದೆ. 'ಕಾಂತಾರ: ಚಾಪ್ಟರ್ 1' ಚಿತ್ರವು ಒಟ್ಟು 9 ಪ್ರಶಸ್ತಿಗಳನ್ನು ಗೆದ್ದಿದ್ದು ವಿಶೇಷವಾಗಿತ್ತು. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 'ಕಾಂತಾರ: ಚಾಪ್ಟರ್ 1' ಚಿತ್ರದ ಅಭಿನಯಕ್ಕಾಗಿ ರಿಷಬ್ ಶೆಟ್ಟಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದರೆ, 'ಗತ ವೈಭವ' ಚಿತ್ರಕ್ಕಾಗಿ ಆಶಿಕಾ ರಂಗನಾಥ್‌ ಅವರು ಅತ್ಯುತ್ತಮ ನಟಿ ಗೌರವಕ್ಕೆ ಪಾತ್ರವಾದರು. ಉಳಿದಂತೆ ಯಾರಿಗೆಲ್ಲಾ ಪ್ರಶಸ್ತಿ ಸಿಕ್ಕಿದೆ ಎಂಬುದರ ಮಾಹಿತಿ ಜೊತೆಗೆ ಸಮಾರಂಭದ ಕಲರ್‌ಫುಲ್‌ ಫೋಟೋಗಳು ಇಲ್ಲಿವೆ.

Chandanavana Film Critics Awards: ಅತ್ಯುತ್ತಮ ನಟ ರಿಷಬ್ ಶೆಟ್ಟಿ, ಅತ್ಯುತ್ತಮ ನಟಿ ಆಶಿಕಾ ರಂಗನಾಥ್; 9 ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡ ʻಕಾಂತಾರ 1ʼ

ಚಂದನವನ ಕ್ರಿಟಿಕ್ಸ್ ಅವಾರ್ಡ್ಸ್: ʻಕಾಂತಾರ 1ʼಗೆ 9 ವಿಭಾಗದಲ್ಲಿ ಪ್ರಶಸ್ತಿ

Chandanavana Film Critics Awards: 7ನೇ ವರ್ಷದ ಚಂದನವನ ಫಿಲ್ಮ್‌ ಕ್ರಿಟಿಕ್ಸ್ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 2025ನೇ ಸಾಲಿನ ಅತ್ಯುತ್ತಮ ಸಾಧಕರನ್ನು ಗೌರವಿಸಲಾಯಿತು. 'ಕಾಂತಾರ: ಚಾಪ್ಟರ್ 1' ಚಿತ್ರಕ್ಕಾಗಿ ರಿಷಬ್ ಶೆಟ್ಟಿ ಅತ್ಯುತ್ತಮ ನಟ ಹಾಗೂ ನಿರ್ದೇಶಕ ಪ್ರಶಸ್ತಿ ಪಡೆದರೆ, ಆಶಿಕಾ ರಂಗನಾಥ್ 'ಗತ ವೈಭವ' ಚಿತ್ರಕ್ಕಾಗಿ ಅತ್ಯುತ್ತಮ ನಟಿಯಾಗಿ ಹೊರಹೊಮ್ಮಿದರು.

ʻಓಡು ಗೆಲುವೆ ನೀ ಆದಷ್ಟು ದೂರ.. ಪಡೆದೆ ತೀರುವೆವು ನೀ ಹೋದಷ್ಟು ದೂರʼ; ಸದ್ದಿಲ್ಲದೇ ಹೊಸ ಸಿನಿಮಾ ಅನೌನ್ಸ್‌ ಮಾಡಿದ ‌ʻಡಾಲಿʼ ಧನಂಜಯ್

ಡಾಲಿ ಧನಂಜಯ್ ಸರ್ಪ್ರೈಸ್; 6 ತಿಂಗಳು ಟೇಬಲ್ ಮೇಲಿದ್ದ ಕಥೆ ಈಗ ಬೆಳ್ಳಿತೆರೆಗೆ

ಡಾಲಿ ಧನಂಜಯ್‌ ಅವರು ತಮ್ಮ ಮುಂದಿನ ಸಿನಿಮಾ ಕುರಿತು ಸದ್ದಿಲ್ಲದೆ ಅಪ್‌ಡೇಟ್ ನೀಡಿದ್ದಾರೆ. ಗೆಳೆಯ ಪೂರ್ಣಚಂದ್ರ ಬರೆದಿದ್ದ ಚಿತ್ರಕಥೆಯನ್ನು ಆರು ತಿಂಗಳ ನಂತರ ಓದಿದ ಧನಂಜಯ್, ಅದಕ್ಕೆ ಫಿದಾ ಆಗಿ ತಾವೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಶೀಘ್ರದಲ್ಲೇ ಚಿತ್ರದ ಶೀರ್ಷಿಕೆ ಘೋಷಣೆಯಾಗಲಿದೆ.

ಬಹುಭಾಷಾ ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ; ಬೆಂಗಳೂರಿನಲ್ಲಿ ಅಂತ್ಯಕ್ರಿಯೆ

ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ಇನ್ನಿಲ್ಲ

ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ (85) ಅವರು ಸೋಮವಾರ ಮುಂಜಾನೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ನರ್ಸ್ ಆಗಿ ಸೇವೆ ಸಲ್ಲಿಸಿದ್ದ ಅವರು, ಪ್ರಕಾಶ್ ರಾಜ್ ಅವರ ಸಾಧನೆಯ ಹಾದಿಯಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ತಾಯಿಯ ಅಗಲಿಕೆಯಿಂದ ನಟ ಪ್ರಕಾಶ್ ರಾಜ್ ತೀವ್ರ ದುಃಖದಲ್ಲಿದ್ದಾರೆ.

Loading...