ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Yash: ನೀವು 'ಟಾಕ್ಸಿಕ್‌' ಸಿನಿಮಾಗೆ ಟಿಕೆಟ್‌ ಬುಕ್‌ ಮಾಡ್ತಿದ್ದೀರಾ? ಅದಕ್ಕೂ ಮುನ್ನ ಈ ವಿಚಾರ ನಿಮ್ಮ ಗಮನದಲ್ಲಿರಲಿ!

Yash: 'ಟಾಕ್ಸಿಕ್' ಟಿಕೆಟ್ ಬುಕ್ ಮಾಡುವ ಮುನ್ನ ಪೋಷಕರೇ ಇರಲಿ ಎಚ್ಚರ!

ʻಟಾಕ್ಸಿಕ್‌ʼ ಸಿನಿಮಾದ ಟಿಕೆಟ್‌ ಬುಕಿಂಗ್ ವಿಚಾರದಲ್ಲಿ ಅಭಿಮಾನಿಗಳು ಒಂದು ನಿಯಮ ಗಮನಿಸಬೇಕು. ಯಶ್ ನಟನೆಯ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ‘ಎ’ ಪ್ರಮಾಣಪತ್ರ ನೀಡಿದ್ದು, 18 ವರ್ಷದೊಳಗಿನ ಮಕ್ಕಳಿಗೆ ಚಿತ್ರಮಂದಿರಗಳಿಗೆ ಪ್ರವೇಶವಿಲ್ಲ. ಹಾಗಾಗಿ, ಚಿತ್ರಮಂದಿರಗಳಲ್ಲಿ ಅನಗತ್ಯ ಗೊಂದಲ ತಡೆಯಲು ಪೋಷಕರು ಮಕ್ಕಳನ್ನು ಕರೆತರದಂತೆ ಮುನ್ನೆಚ್ಚರಿಕೆ ವಹಿಸಬೇಕು

ʻಪದ್ಮಶ್ರೀʼ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ನಿಧನ; ಕಂಬನಿ ಮಿಡಿದ ಚಿತ್ರರಂಗ

ಚೆನ್ನೈನಲ್ಲಿ ಸಾವನ್ನಪ್ಪಿದ ಹಿರಿಯ ನಟಿ ʻಸಾಹುಕಾರ್ʼ ಜಾನಕಿ; ಗಣ್ಯರ ಸಂತಾಪ

Sowcar Janaki Death: ಪದ್ಮಶ್ರೀ ಪುರಸ್ಕೃತ ಹಿರಿಯ ನಟಿ ʻಸಾಹುಕಾರ್ʼ ಜಾನಕಿ ಅವರು ವಯೋಸಹಜ ಅನಾರೋಗ್ಯದಿಂದ ಚೆನ್ನೈನಲ್ಲಿ ನಿಧನರಾಗಿದ್ದಾರೆ. 400 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಡಾ. ರಾಜ್‌ಕುಮಾರ್ ಮತ್ತು ಎನ್‌ಟಿಆರ್‌ರಂತಹ ಲೆಜೆಂಡ್‌ ನಟರೊಂದಿಗೆ ಕೆಲಸ ಮಾಡಿದ್ದಾರೆ.

ಡೈರೆಕ್ಟರ್‌ ಪಿ. ಎಸ್.‌ ಮಿತ್ರನ್‌ ಹೇಳಿದ ಕಥೆಯನ್ನು ಮೆಚ್ಚಿದ್ದ ʻರಾಕಿ ಭಾಯ್‌ʼ ಯಶ್‌! ಈ ಸಿನಿಮಾ ಸೆಟ್ಟೇರಲಿಲ್ಲ ಏಕೆ? ಯಾರೀ ತಮಿಳು ನಿರ್ದೇಶಕ?

ಯಶ್ ಮೆಚ್ಚಿದ ಕಥೆ ಡ್ರಾಪ್ ಆಗಿದ್ದೇಕೆ? ಸತ್ಯ ಬಿಚ್ಚಿಟ್ಟ ತಮಿಳು ಡೈರೆಕ್ಟರ್!

ʻರಾಕಿಂಗ್‌ ಸ್ಟಾರ್‌ʼ ಯಶ್‌ ಮತ್ತು ತಮಿಳು ನಿರ್ದೇಶಕ ಪಿ.ಎಸ್. ಮಿತ್ರನ್ ಅವರ ಕಾಂಬಿನೇಷನ್ ಸಿನಿಮಾವು ಕಾಲ್‌ಶೀಟ್ ಸಮಸ್ಯೆಯಿಂದ ಮುಂದೂಡಲ್ಪಟ್ಟಿದೆ. ಕೆವಿಎನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಯಶ್ ಅವರಿಗಾಗಿ ಸಿದ್ಧಪಡಿಸಿದ್ದ ಆ್ಯಕ್ಷನ್ ಕಥೆಯು ಮೆಚ್ಚುಗೆ ಪಡೆದಿದ್ದರೂ, ಕಾಲ್‌ಶೀಟಡ್‌ ಕಾರಣದಿಂದ ಸೆಟ್ಟೇರಲು ಸಾಧ್ಯವಾಗಿಲ್ಲ ಎಂದು ಮಿತ್ರನ್ ಬಹಿರಂಗಪಡಿಸಿದ್ದಾರೆ.

Bigg Boss 13: ʻನನ್ನ ಟ್ರೋಲ್‌ ಮಾಡಿದಷ್ಟು ನಂಗೇ ಲಾಭ, ಕೋಟಿ ಖರ್ಚು ಮಾಡಿದ್ರೂ ಇಷ್ಟೊಂದು ಪ್ರಚಾರ ಸಿಕ್ತಿರಲಿಲ್ಲʼ; ವಿನಯ್‌ ಗೌಡ ಖಡಕ್‌ ಮಾತು

ʻಟ್ರೋಲ್ ಮಾಡಿದಷ್ಟು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತಿದೆʼ ಎಂದ ವಿನಯ್ ಗೌಡ

ʻಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಅಗ್ನಿಪರೀಕ್ಷೆಯ ಜ್ಯೂರಿ ಸದಸ್ಯ ವಿನಯ್ ಗೌಡ ತಮ್ಮ ಮೇಲಿನ ಟ್ರೋಲ್‌ಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ವೃತ್ತಕ್ಕೆ ಎರಡು ಭಾಗಗಳಿರುತ್ತವೆ ಎಂಬ ಹೇಳಿಕೆಗೆ ಜೋರ್ಡಾನ್ ಕರ್ವ್ ಪ್ರಮೇಯದ ವಿವರಣೆ ನೀಡಿದ ಅವರು, ನಕಾರಾತ್ಮಕ ಪ್ರಚಾರದಿಂದಲೇ ತಮಗೆ ಸಾಲು ಸಾಲು ಬ್ರ್ಯಾಂಡ್ ಪ್ರಮೋಷನ್ ಆಫರ್ ಸಿಗುತ್ತಿವೆ ಎಂದು ವ್ಯಂಗ್ಯವಾಡಿದ್ದಾರೆ.

Toxic Movie: ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್

ಬುಕಿಂಗ್ ಓಪನ್ ಬೆನ್ನಲ್ಲೇ 'ಟಾಕ್ಸಿಕ್' ಟಿಕೆಟ್ ಸೋಲ್ಡ್ ಔಟ್

Toxic Movie: ಯಶ್ (Yash) ಮತ್ತೆ ಬೆಳ್ಳಿಪರದೆಗೆ ಮರಳುತ್ತಿದ್ದು, ಈ ಚಿತ್ರವು ಈಗಾಗಲೇ ದೇಶ, ವಿದೇಶಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಆಗಸ್ಟ್ 26 ರಂದು ಬಿಡುಗಡೆಯಾಗಲಿರುವ, ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರ ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಬೆಂಗಳೂರಿನಲ್ಲಿ ಬಹುತೇಕ ಕಡೆ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ. ಬೆಂಗಳೂರಿನಲ್ಲಿರುವ ಮಲ್ಟಿಪ್ಲೆಕ್ಸ್​​ಗಳ ಮೊದಲ ದಿನದ ಬಹುತೇಕ ಪ್ರದರ್ಶನಗಳ ಎಲ್ಲಾ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ ಖಾಲಿಯಾಗಿವೆ.

Bandar OTT release: ಅನುರಾಗ್‌ ಕಶ್ಯಪ್‌ ಸಿನಿಮಾ ʻಬಂದರ್‌ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

ಅನುರಾಗ್‌ ಕಶ್ಯಪ್‌ ಸಿನಿಮಾ ʻಬಂದರ್‌ʼ ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Bandar OTT release: ಬಾಬಿ ಡಿಯೋಲ್ ಅಭಿನಯದ ಬಂದರ್ ಚಿತ್ರವು ಡಿಜಿಟಲ್ ಪ್ರೀಮಿಯರ್‌ಗೆ ಸಿದ್ಧವಾಗಿದೆ. ಈ ತಿಂಗಳ ಕೊನೆಯಲ್ಲಿ ಈ ಚಿತ್ರವು ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ Zee5 ನಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದೆ. ಜೀ5 ಬಿಡುಗಡೆ ಮಾಡಿರುವ ಹೇಳಿಕೆಯ ಪ್ರಕಾರ, ಆಗಸ್ಟ್ 28 ರಿಂದ ಬಂದರ್ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿರುತ್ತದೆ. ಅನುರಾಗ್ ಕಶ್ಯಪ್ ನಿರ್ದೇಶನದ ಬಂದರ್ ಚಿತ್ರದಲ್ಲಿ ಬಾಬಿ ಡಿಯೋಲ್ ನಾಯಕನಾಗಿ ನಟಿಸಿದ್ದಾರೆ, ಜೊತೆಗೆ ಸನ್ಯಾ ಮಲ್ಹೋತ್ರಾ, ಸಪ್ನಾ ಪಬ್ಬಿ ಮತ್ತು ಸಬಾ ಆಜಾದ್ ಕೂಡ ನಟಿಸಿದ್ದಾರೆ

Yash: ‘ರಾಮಾಯಣ’ದಲ್ಲಿ ಯಶ್‌ ಅಬ್ಬರ;  ಫಿದಾ ಆದ ಹನಿ ಸಿಂಗ್

‘ರಾಮಾಯಣ’ದಲ್ಲಿ ಯಶ್‌ ಅಬ್ಬರ; ಫಿದಾ ಆದ ಹನಿ ಸಿಂಗ್

Yash: ಯಶ್ ಅವರ ರಾವಣನ ಚಿತ್ರಣವನ್ನು ಶ್ಲಾಘಿಸಿದ್ದಲ್ಲದೆ, ಚಿತ್ರದ ಟೀಸರ್ ವೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ. ತಾವು ರಾಮನ ದೊಡ್ಡ ಭಕ್ತ ಎಂದು ಅವರು ಹೇಳಿದರು, ಆದರೆ ಅವರ ಅಭಿಪ್ರಾಯದಲ್ಲಿ, ಯಶ್ ಅವರ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಬಲವಾಗಿ ಎದ್ದು ಕಾಣುತ್ತದೆ ಎಂದು ಹೇಳಿದರು. ತಮ್ಮ ಬಾಲ್ಯದಲ್ಲಿ ದೆಹಲಿ ಮತ್ತು ಕರಂಪುರದಲ್ಲಿ ವೀಕ್ಷಿಸಿದ ರಾಮಲೀಲಾ ಪ್ರದರ್ಶನಗಳನ್ನು ನೆನಪಿಸಿಕೊಳ್ಳುತ್ತಾ, ಈ ಚಿತ್ರವು ಯಾರ ಭಾವನೆಗಳಿಗೂ ನೋವುಂಟು ಮಾಡಬಾರದು ಮತ್ತು ಆ ಆರಂಭಿಕ ನೆನಪುಗಳಂತೆ ಶುದ್ಧವಾಗಿ ಉಳಿಯಬೇಕು ಎಂದು ಅವರು ಆಶಿಸಿದರು.

‘ಸಿಎಂ ವಿಜಯ್ ಪರ್ಸನಲ್ ವಿಷ್ಯ ಬಿಡಿ, ಧೈರ್ಯವಿದ್ದರೆ ಅವರ ಆಡಳಿತದ ಬಗ್ಗೆ ಮಾತಾಡಿ‌ʼ; ತ್ರಿಷಾ ಟಾರ್ಗೆಟ್‌ ಮಾಡಿದವರಿಗೆ ನಟಿ ಸಂಜನಾ ಗಲ್ರಾನಿ ಸವಾಲು!

‌ʻವಿಜಯ್ ಪರ್ಸನಲ್ ವಿಷ್ಯ ಬಿಡಿ, ಆಡಳಿತದ ಬಗ್ಗೆ ಮಾತಾಡಿʼ; ನಟಿ ಸಂಜನಾ ಗರಂ!

ತಮಿಳುನಾಡು ಸಿಎಂ ವಿಜಯ್ ಅವರ ಖಾಸಗಿ ಬದುಕನ್ನು ಗುರಿಯಾಗಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ವಿರೋಧ ಪಕ್ಷಗಳಿಗೆ ನಟಿ ಸಂಜನಾ ಗಲ್ರಾನಿ ಖಡಕ್ ಸವಾಲೆಸೆದಿದ್ದಾರೆ. ಆಡಳಿತದಲ್ಲಿ ಲೋಪ ಹುಡುಕಲಾಗದೆ ನಟಿ ತ್ರಿಷಾ ಹೆಸರನ್ನು ಎಳೆದು ತೇಜೋವಧೆ ಮಾಡುವುದು ಹೇಡಿತನ ಎಂದು ಅವರು ಹೇಳಿದ್ದಾರೆ.

Srinivasa Mangapuram OTT: 21 ದಿನಗಳಲ್ಲಿ ಒಟಿಟಿಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಅಣ್ಣನ ಪುತ್ರನ ಈ ಮೂವಿ

21 ದಿನಗಳಲ್ಲಿ ಒಟಿಟಿಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಅಣ್ಣನ ಪುತ್ರನ ಈ ಮೂವಿ

Srinivasa Mangapuram OTT: ಮಹೇಶ್ ಬಾಬು ಅವರ ಸೋದರಳಿಯ ಜಯ ಕೃಷ್ಣ (Jaya Krishna) ಅವರ ಚೊಚ್ಚಲ ಚಿತ್ರದಲ್ಲಿ ಮತ್ತು ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ನಟಿಸಿರುವ ಈ ಚಿತ್ರವು ಈಗ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ (Release) ಕೇವಲ 21 ದಿನಗಳ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ವಿಶ್ವಾದ್ಯಂತ ₹ 10 ಕೋಟಿಗಿಂತ ಕಡಿಮೆ ಗಳಿಸಿದೆ ಈ ಮೂವಿ.

ʻಟಾಕ್ಸಿಕ್‌ʼ ಬಗ್ಗೆ ಮಗಳು ರಿಷಿಕಾ ಸಿಂಗ್‌ ಟೀಕೆ, ತಂದೆಯಿಂದ ಭಾರಿ ಹೊಗಳಿಕೆ;  ʻಯಶ್‌ ಕೊಹಿನೂರ್‌ ವಜ್ರʼ ಎಂದ ನಿರ್ದೇಶಕ ಎಸ್‌. ವಿ.  ರಾಜೇಂದ್ರ ಸಿಂಗ್‌ ಬಾಬು

ʻಟಾಕ್ಸಿಕ್‌ʼ ಸಿನಿಮಾದ ಬಗ್ಗೆ ಮಗಳು ರಿಷಿಕಾ ಟೀಕೆ, ತಂದೆಯಿಂದ ಭಾರಿ ಹೊಗಳಿಕೆ

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ ‘ಟಾಕ್ಸಿಕ್’ ಚಿತ್ರದ ವಿರುದ್ಧ ನಟಿ ರಿಷಿಕಾ ಸಿಂಗ್ ಮಾಡಿದ್ದ ಗಂಭೀರ ಟೀಕೆಗಳಿಗೆ ಅವರ ತಂದೆ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ಮಾತನ್ನು ವೈಯಕ್ತಿಕ ಎಂದಿರುವ ಅವರು, ಯಶ್ ಅವರನ್ನು ಚಿತ್ರರಂಗದ ‘ಕೊಹಿನೂರ್ ವಜ್ರ’ ಎಂದು ಕೊಂಡಾಡಿದ್ದಾರೆ.

Vinay Gowda: ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ! ಟ್ರೋಲ್ ಮಾಡಿದವರಿಗೆ ವಿನಯ್‌ ಖಡಕ್‌ ಪೋಸ್ಟ್‌

ಟ್ರೋಲ್ ಮಾಡಿದವರಿಗೆ ವಿನಯ್‌ ಖಡಕ್‌ ಪೋಸ್ಟ್‌

Bigg Boss Kannada 13: ಸರ್ಕಲ್‌ಗೆ ಎಷ್ಟು ಸೈಡ್ಸ್‌ ಇವೆ?’ ಎಂಬ ಪ್ರಶ್ನೆಗೆ ವಿನಯ್‌ ಗೌಡ ನೀಡಿದ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಇದೀಗ ಖಡಕ್ ತಿರುಗೇಟು ನೀಡಿದ್ದು, ಇಂತಹ ಯಾವುದೇ ವಿಚಾರಗಳಿಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಹಾಲಿವುಡ್‌ ಸ್ಟೈಲ್‌ನಲ್ಲಿ ‘ಟಾಕ್ಸಿಕ್‌’ ಇಂಗ್ಲಿಷ್‌ ಟ್ರೇಲರ್; ಭಾರತೀಯ ಭಾಷೆಗಳಿಗಿಂತ ಇದು ಭಿನ್ನ, ಹೆಚ್ಚು ಎಫೆಕ್ಟೀವ್‌ ಆಗಿರುವುದು ಏಕೆ?

ಕನ್ನಡ ವರ್ಷನ್‌ಗಿಂತ ʻಟಾಕ್ಸಿಕ್‌ʼ ಇಂಗ್ಲಿಷ್‌ ಟ್ರೇಲರ್‌ನಲ್ಲಿ ಹೊಸತೇನಿದೆ?

ʻಟಾಕ್ಸಿಕ್‌ʼ ಸಿನಿಮಾದ ಇಂಗ್ಲಿಷ್‌ ಟ್ರೇಲರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಡಬ್ಬಿಂಗ್ ಬದಲಿಗೆ ನೇರವಾಗಿ ಇಂಗ್ಲಿಷ್‌ನಲ್ಲೇ ಚಿತ್ರೀಕರಣಗೊಂಡಿರುವ ಈ ಆವೃತ್ತಿಯಲ್ಲಿ ಯಶ್ ಅವರ ನೈಜ ಧ್ವನಿ ಹಾಗೂ ಗಾಂಭೀರ್ಯ ಎದ್ದು ಕಾಣುತ್ತಿದೆ. ಗೋವಾದ ಹಿನ್ನೆಲೆಯ ರಕ್ತಸಿಕ್ತ ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್: ʻನೂರಕ್ಕೆ ನೂರರಷ್ಟು ಸತ್ಯ ಹೇಳುವೆʼ ಎಂದ ಆರೋಪಿ ಪ್ರದೋಷ್; ನಟ ದರ್ಶನ್‌ಗೆ ಹೆಚ್ಚಿತು ಸಂಕಷ್ಟ

ʻನಾನು ಸತ್ಯ ಹೇಳುತ್ತೇನೆ’ ಎಂದ ಪ್ರದೋಷ್; ನಟ ದರ್ಶನ್‌ಗೆ ಸಂಕಷ್ಟ‌ ಶುರು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ನಟ ದರ್ಶನ್‌ಗೆ ಕಾನೂನು ಸಂಕಷ್ಟ ಹೆಚ್ಚಿಸಿದೆ. 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಯಾರ ಒತ್ತಡವೂ ಇಲ್ಲದೆ ಸತ್ಯಾಂಶ ಬಹಿರಂಗಪಡಿಸುವುದಾಗಿ ಪ್ರದೋಷ್ ಸ್ಪಷ್ಟಪಡಿಸಿದ್ದಾರೆ.

50 ಅಡಿ ಎತ್ತರದ ದರ್ಶನ್‌ ಕಟೌಟ್‌ ಎದುರು ಭರ್ಜರಿ ಫೈಟ್‌ ಮಾಡಿದ ʻದೇವಿʼ; ʻಶಾಸ್ತ್ರಿʼ ಮುಂದೆ ಯುವರೈತನ ಆಕ್ಷನ್‌ ಅಬ್ಬರ!

50 ಅಡಿ ಎತ್ತರದ ದರ್ಶನ್‌ ಕಟೌಟ್‌ ಎದುರು ಭರ್ಜರಿ ಫೈಟ್‌ ಮಾಡಿದ ʻದೇವಿʼ

ʻದೇವಿʼ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಬೆಂಗಳೂರಿನ ಚಿತ್ರಮಂದಿರವೊಂದರ ಬಳಿ ಭರದಿಂದ ಸಾಗಿದೆ. ನಟ ದರ್ಶನ್ ಅವರ 50 ಅಡಿ ಕಟೌಟ್ ಎದುರು ಮಂಡ್ಯದ ಯುವ ರೈತ ಚೇತನ್ ಗೌಡ ನಾಯಕನಾಗಿ ಅಬ್ಬರಿಸಿದ್ದಾರೆ. ಭವ್ಯ ಗೌಡ ನಾಯಕಿಯಾಗಿದ್ದು, ಹಳ್ಳಿಯಿಂದ ಬಂದ ಯುವಕ ರೌಡಿಸಂ ಸುಳಿಗೆ ಸಿಲುಕುವ ಕಥಾಹಂದರವನ್ನು ನಿರ್ದೇಶಕ ಪ್ರಕಾಶ್ ಕುಮಾರ್ ಕಟ್ಟಿಕೊಡುತ್ತಿದ್ದಾರೆ.

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ʻಅಮೃತಧಾರೆʼ ಖ್ಯಾತಿಯ ರಾಜೇಶ್ ನಟರಂಗ; ಯಾವುದು ಆ ನಾಟಕ?

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ರಾಜೇಶ್ ನಟರಂಗ; ಯಾವುದು ಆ ನಾಟಕ?

ನಟ ರಾಜೇಶ್‌ ನಟರಂಗ ಭರ್ತಿ ಎರಡು ದಶಕಗಳ ಬಳಿಕ ರಂಗಭೂಮಿಗೆ ಮರಳಿದ್ದು, ಕಲಾದ್ಯುತಿ ಪ್ರೊಡಕ್ಷನ್ಸ್ ಅರ್ಪಿಸುವ ‘ಮಳೆ ನಿಲ್ಲುವವರೆಗೆ’ ನಾಟಕದಲ್ಲಿ ನಟಿಸುತ್ತಿದ್ದಾರೆ. ದಿವಂಗತ ಕೆಎಎಸ್ ಅಧಿಕಾರಿ ಎಲ್.ಎಸ್. ಸುಧೀಂದ್ರ ರೂಪಾಂತರಿಸಿದ ಈ ಜರ್ಮನ್ ಥ್ರಿಲ್ಲರ್ ಕಥೆಯನ್ನು ಶರತ್ ಪರ್ವತವಾಣಿ ನಿರ್ದೇಶಿಸಿದ್ದಾರೆ.

ಹಿರಿಯ ನಟಿ ‘ಸಾಹುಕಾರ್‌’ ಜಾನಕಿ ತೀವ್ರ ಅಸ್ವಸ್ಥ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

ನಟಿ ʻಸಾಹುಕಾರ್‌ʼ ಜಾನಕಿ ಅಸ್ವಸ್ಥ; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ

ಹಿರಿಯ ನಟಿ ʻಸಾಹುಕಾರ್‌ʼ ಜಾನಕಿ ವಯೋಸಹಜ ಅನಾರೋಗ್ಯ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಚೆನ್ನೈನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಹಿರಿಯ ಕಲಾವಿದೆಯ ಆರೋಗ್ಯ ಸದ್ಯ ಸ್ಥಿರವಾಗಿದ್ದು, ದಕ್ಷಿಣ ಭಾರತದ ಚಿತ್ರರಂಗ ಹಾಗೂ ಅಭಿಮಾನಿಗಳು ಜಾನಕಿ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ʻನಾನು ಹೆಮ್ಮೆಯ ಅಂಧಭಕ್ತೆ..’ ಎಂದ ಇಶಾ ಕೊಪ್ಪಿಕರ್; ಹೇಳಿಕೆ ತಿರುಚಿದವರಿಗೆ ‘ಸೂರ್ಯವಂಶ’ ನಟಿಯ ಖಡಕ್ ತಿರುಗೇಟು!

ʻನಾನು ಹೆಮ್ಮೆಯ ಅಂಧಭಕ್ತೆ’; ಇಶಾ ಕೊಪ್ಪಿಕರ್ ಹೇಳಿಕೆ ತಿರುಚಲಾಗಿದೆಯಾ?

ನಟಿ ಇಶಾ ಕೊಪ್ಪಿಕರ್ ಅವರು ಇತ್ತೀಚೆಗೆ ತಮ್ಮನ್ನು 'ಹೆಮ್ಮೆಯ ಅಂಧಭಕ್ತೆ' ಎಂದು ಕರೆದುಕೊಂಡಿದ್ದ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ತಿರುಚಿದ ಟ್ರೋಲರ್ಸ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ನಿಷ್ಠೆ ಇರುವುದು ದೇಶಕ್ಕೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕಲ್ಲ ಎಂದಿದ್ದಾರೆ.

2ನೇ ಮದುವೆ ವಿಚಾರ ಬಹಿರಂಗಪಡಿಸಿದ 'ಬಿಗ್ ಬಾಸ್' ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಈ ವಿವಾಹ ನಡೆದಿದ್ದು ಯಾವಾಗ?

ಎರಡನೇ ಮದುವೆ ಸತ್ಯ ಬಿಚ್ಚಿಟ್ಟ ʻಬಿಗ್ ಬಾಸ್ʼ ಖ್ಯಾತಿಯ ವರ್ತೂರು ಸಂತೋಷ್!

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ತಮ್ಮ ಎರಡನೇ ಮದುವೆಯ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಶೋ ಮುಗಿದ ಬಳಿಕ ಪ್ರೀತಿಸಿ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಯಸ್ಸಾದ ತಾಯಿಗೆ ಆಸರೆ ಹಾಗೂ ಮನೆಯ ಜವಾಬ್ದಾರಿಗಾಗಿ ಮದುವೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Kannada New Movie: ʻಪ್ರೇಮದ ಊರಲಿ' ಚಿತ್ರದ ಸಾಂಗ್‌ ಔಟ್‌; ಕಣ್ಮನ ಸೆಳೆದ ತಪಸ್ವಿನಿ ಪೂಣಚ್ಚ–ಶ್ರೀರಾಮ್ !

ʻಪ್ರೇಮದ ಊರಲಿ' ಚಿತ್ರದ ಸಾಂಗ್‌ ಔಟ್‌

Kannada New Movie:ಪ್ರೀತಿಯಲ್ಲಿ ಬೀಳುವ ಸುಂದರ ಭಾವನೆಗಳನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿರುವ ಈ ಹಾಡಿಗೆ ಅಭಿಜಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದು, ಸುನಾದ ಗೌತಮ್ ಅವರ ಸಂಗೀತ ನಿರ್ದೇಶನದಲ್ಲಿ ನಿನಾದ ನಾಯಕ್ ಮತ್ತು ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ. ನಾಯಕ ಶ್ರೀರಾಮ್ (ಸಂತೋಷ್) ಹಾಗೂ ನಟಿ ತಪಸ್ವಿನಿ ಪೂಣಚ್ಚ (ರುಕ್ಮಿಣಿ) ಜೋಡಿಯಾಗಿ ಕಣ್ಮನ ಸೆಳೆದಿದ್ದು, ತಪಸ್ವಿನಿ ಅವರ ಮುದ್ದಾದ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Kurmaavatar Title: ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್

ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್

shivanna: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕೂರ್ಮಾವತಾರದ ಹಿನ್ನೆಲೆಯನ್ನು ಒಳಗೊಂಡ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಪ್ರೇಕ್ಷಕರಲ್ಲಿ ಮತ್ತು ಶಿವಣ್ಣನ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಲುಕ್ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Salman Khan: ‘ಕಾಲಾ ಹಿರಣ್’ ಸಿನಿಮಾ ವಿವಾದ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

‘ಕಾಲಾ ಹಿರಣ್’ ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

Salman Khan: ಸಲ್ಮಾನ್ ಖಾನ್ (Salman Khan) ಅವರ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸುವ ಟೀಸರ್ ಮತ್ತು ಇತರ ಪ್ರಚಾರದ ಇತರೆ ಕಂಟೆಂಟ್‌ ತೆಗೆದುಹಾಕುವಂತೆ ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ ಚಿತ್ರದ ನಿರ್ಮಾಪಕರಿಗೆ ಮಧ್ಯಂತರ ಆದೇಶ ನೀಡಿದೆ. ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್‌ನ ನಿರ್ಮಾಪಕ ಅಮಿತ್ ಜಾನಿ ಈಗ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಅವರ ಬಾಕಿ ಇರುವ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿದೆ ಎಂಬ ಆರೋಪದ ಮೇಲೆ ಚಿತ್ರದ ಪ್ರಚಾರಗಳು ವಿವಾದಕ್ಕೆ ಕಾರಣವಾಗಿವೆ.

Vishnuvardhan:  ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಯಾವಾಗ? ಲೋಗೋ ಅನಾವರಣ

ವಿಷ್ಣುವರ್ಧನ್ ಅಮೃತ ಮಹೋತ್ಸವ ಯಾವಾಗ? ಲೋಗೋ ಅನಾವರಣ

Vishnuvardhan: ಈ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ ಅವರು, ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಜೀವನ, ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಮೈದಾನದಲ್ಲಿ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗಮನಸೆಳೆದ ಸುಜನಿತ್ ಶೆಟ್ಟಿ ನಟನೆಯ ‘ಎ ಡೇಟ್‌’ ಚಿತ್ರದ ಟ್ರೇಲರ್‌; ರಿಲೀಸ್‌ ಡೇಟ್‌ ಘೋಷಿಸಿದ ಚಿತ್ರತಂಡ

ಸುಜನಿತ್ ಶೆಟ್ಟಿ ನಟನೆಯ ‘ಎ ಡೇಟ್‌’ ಚಿತ್ರದ ಟ್ರೇಲರ್‌ ರಿಲೀಸ್

‘ಎ ಡೇಟ್‌’ ಚಿತ್ರದ ಹೊಸತನದ ನಿರೂಪಣೆಯೊಂದಿಗೆ ಸೆಪ್ಟೆಂಬರ್ 4ರಂದು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ಅಂತರ್ಜಾಲದಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದ ಕಿರುಚಿತ್ರವೇ ಈಗ ಪೂರ್ಣ ಪ್ರಮಾಣದ ಸಿನಿಮಾಗೆ ಹೊರಹೊಮ್ಮಿದೆ. ಬೆಂಗಳೂರು ಮತ್ತು ದೆಹಲಿಯ ಜೋಡಿಯ ನಡುವೆ ಒಂದೇ ದಿನದಲ್ಲಿ ಸಾಗುವ ಕುತೂಹಲಕಾರಿ ಕಥಾಹಂದರವನ್ನು ಈ ಸಿನಿಮಾ ಹೊಂದಿದೆಯಂತೆ.

Pavithra Gowda: ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಬಗ್ಗೆ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!‌ ಸಂಜಯ್‌ ಸಿಂಗ್‌ಗೆ ಏನಾಯ್ತು?

ಪವಿತ್ರಾ ಗೌಡ ಮಾಜಿ ಪತಿ ಬಗ್ಗೆ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!‌

Pavithra Gowda: ಕಳೆದ 10 ವರ್ಷಗಳಿಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಹೊಂದಿದ್ದಾರೆ. ಹಾಗಂತ ಸ್ವತಃ ಪವಿತ್ರಾ ಗೌಡ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಸಮೇತ ರಿವೀಲ್ ಮಾಡಿದ್ದರು. ಅಸಲಿಗೆ, 2007ರಲ್ಲಿಯೇ ಪವಿತ್ರಾ ಗೌಡಗೆ ಮದುವೆ ಆಗಿತ್ತು. ಅದೂ ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಎಂಬುವರೊಂದಿಗೆ. ಸಂಜಯ್ ಸಿಂಗ್ (Sanjay Singh) ಎಂಬುವರನ್ನ ಪ್ರೀತಿಸಿ ಪವಿತ್ರಾ ಗೌಡ ವಿವಾಹವಾಗಿದ್ದರು.

Loading...