ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

‘ಉಳಿದದ್ದನ್ನು ಕಾಲ, ಕರ್ಮಕ್ಕೆ ಬಿಡುತ್ತೇನೆ’; ನಟ ʻದುನಿಯಾʼ ವಿಜಯ್‌ಗೆ ಡಿವೋರ್ಸ್ ನೀಡಿದ ಬಳಿಕ ನಾಗರತ್ನ ಸುದೀರ್ಘ ಪತ್ರ!

ಡಿವೋರ್ಸ್ ಬಳಿಕ 'ದುನಿಯಾ' ವಿಜಯ್‌ ಮಾಜಿ ಪತ್ನಿ ನಾಗರತ್ನ ಶಾಕಿಂಗ್‌ ಪೋಸ್ಟ್‌

‌ʻದುನಿಯಾʼ ವಿಜಯ್ ಪ್ರಕರಣದಲ್ಲಿ 27 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಹೈಕೋರ್ಟ್ ಕಾನೂನಾತ್ಮಕ ಅಂತ್ಯ ಹಾಡಿದೆ. ತೀರ್ಪಿನ ಬೆನ್ನಲ್ಲೇ ಮಾಜಿ ಪತ್ನಿ ನಾಗರತ್ನ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅನೈತಿಕ ಸಂಬಂಧವನ್ನು ಅಧಿಕೃತಗೊಳಿಸಲು ವಿಚ್ಛೇದನ ಪಡೆಯಲಾಗಿದೆ ಎಂದು ಆಪಾದಿಸಿದ್ದಾರೆ.

‘ಯಶ್ ನಮ್ ಹುಡುಗ, ಅವ್ನು ಸಾಧನೆ ಮಾಡಿದ್ರೆ, ನನ್ನ ತಮ್ಮ ಸಾಧಿಸಿದಂತೆ..’: ‘ಟಾಕ್ಸಿಕ್‌’ ಚಿತ್ರಕ್ಕೆ ಶಿವರಾಜ್‌ಕುಮಾರ್ ಫುಲ್‌ಮಾರ್ಕ್ಸ್‌!

‘ಮೇಕಿಂಗ್ ಅದ್ಭುತ, ಯಶ್ ಸೂಪರ್'; `ಟಾಕ್ಸಿಕ್' ಚಿತ್ರಕ್ಕೆ ಶಿವಣ್ಣ ಬಹುಪರಾಕ್

ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾವನ್ನ ವೀಕ್ಷಿಸಿದ ʻಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಟಿಕೆಟ್ ಖರೀದಿಸಿ ಚಿತ್ರ ವೀಕ್ಷಿಸಿದ ಅವರು, ಯಶ್ ತಮ್ಮನಿದ್ದಂತೆ, ಆತನ ಸಾಧನೆ ತಮಗೆ ಹೆಮ್ಮೆ ತಂದಿದೆ ಎಂದಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳ ನಿರೂಪಣೆಯನ್ನು ಕೊಂಡಾಡಿದ ಶಿವಣ್ಣ, ಚಿತ್ರಮಂದಿರದಲ್ಲೇ ಸಿನಿಮಾ ನೋಡಲು ಕರೆ ನೀಡಿದ್ದಾರೆ.

ಯಶ್‌ ನಟನೆಯ ʻಟಾಕ್ಸಿಕ್‌ʼ ಇಂಗ್ಲಿಷ್‌ ವರ್ಷನ್‌ ರಿಲೀಸ್‌ಗೆ ಕೂಡಿಬಂತು ಮೂಹೂರ್ತ; ರನ್‌ಟೈಮ್‌ನಲ್ಲಿ 17 ನಿಮಿಷ ಕಟ್‌ ಮಾಡಿದ್ದೇಕೆ?

Yash: ʻಟಾಕ್ಸಿಕ್‌ʼ ಇಂಗ್ಲಿಷ್‌ ವರ್ಷನ್‌ ರಿಲೀಸ್‌ಗೆ ಕೂಡಿಬಂತು ಮೂಹೂರ್ತ!

Yash: ʻಟಾಕ್ಸಿಕ್‌ʼ ಸಿನಿಮಾದ ಇಂಗ್ಲಿಷ್‌ ವರ್ಷನ್‌ ಅನ್ನು ಭಾರತದ ಆಯ್ದ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 4 ರಂದು ರಿಲೀಸ್‌ ಮಾಡಲು ಚಿತ್ರತಂಡ ಸಜ್ಜಾಗಿದೆ. ಜಾಗತಿಕ ವೀಕ್ಷಕರ ಅಭಿರುಚಿಗೆ ತಕ್ಕಂತೆ ಭಾರತೀಯ ಆವೃತ್ತಿಗಿಂತ 17 ನಿಮಿಷಗಳನ್ನು ಕತ್ತರಿಸಿ 2 ಗಂಟೆ 57 ನಿಮಿಷಗಳಿಗೆ ಸಿನಿಮಾದ ಅವಧಿಯನ್ನು ಇಳಿಸಲಾಗಿದೆ.

Photos: ಸದ್ದಿಲ್ಲದೇ ಕರಾವಳಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಜೋಡಿ ಹಕ್ಕಿʼ ಸೀರಿಯಲ್‌ ಖ್ಯಾತಿಯ ಚೈತ್ರಾ ರಾವ್‌

Photos: ʻಜೋಡಿ ಹಕ್ಕಿʼ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರಾವ್‌ಗೆ ಮದುವೆ

ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರಾವ್ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರಾವಳಿ ಸಂಪ್ರದಾಯದಂತೆ ದೇವಾಲಯವೊಂದರಲ್ಲಿ ಅತ್ಯಂತ ಸರಳವಾಗಿ ಸಪ್ತಪದಿ ತುಳಿದಿದ್ದಾರೆ. 'ಜೋಡಿ ಹಕ್ಕಿ' ಧಾರಾವಾಹಿಯ 'ಜಾನಕಿ ಟೀಚರ್' ಎಂದೇ ಪ್ರಸಿದ್ಧಿ ಪಡೆದು ಕನ್ನಡಿಗರ ಮನಗೆದ್ದ ಪ್ರತಿಭಾವಂತ ನಟಿ ಚೈತ್ರಾ ರಾವ್. ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲೂ 'ಬೃಂದಾ' ಎಂಬ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈ ಧಾರಾವಾಹಿ ಅಂತ್ಯಗೊಂಡ ಬೆನ್ನಲ್ಲೇ, ಚೈತ್ರಾ ರಾವ್ ತಮ್ಮ ಬದುಕಿನ ಹೊಸ ಪಯಣವನ್ನು ಆರಂಭಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ಮದುವೆಯ ಸುಂದರ ಕ್ಷಣಗಳ ಫೋಟೋ ಆಲ್ಬಂ ಇಲ್ಲಿದೆ ನೋಡಿ...

ನಟ ನಿರಂಜನ್‌ ಸುಧೀಂದ್ರಗೆ ʻಸ್ಯಾಂಡಲ್‌ವುಡ್‌ ಹೃತಿಕ್‌ ರೋಷನ್‌ʼ ಅಂತ ಹೇಳಿದ್ಯಾರು? ʻಸ್ಪಾರ್ಕ್‌ʼ ಚಿತ್ರದ ಹೊಸ ಹಾಡು ರಿಲೀಸ್‌

ನಿರಂಜನ್‌ ಸುಧೀಂದ್ರ ನಟನೆಯ ʻಸ್ಪಾರ್ಕ್‌ʼ ಚಿತ್ರದ ಹೊಸ ಹಾಡು ರಿಲೀಸ್‌

ಕಾರ್ಯಕ್ರಮದಲ್ಲಿ ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ನಟನೆಯ ʻಸ್ಪಾರ್ಕ್‌ʼ ಚಿತ್ರದ 'ಮಧುರ ಮುಗುಳುನಗೆ' ಗೀತೆಯನ್ನು ಉಪೇಂದ್ರ ಅವರ ತಾಯಿ ಅನಸೂಯಮ್ಮ ಲೋಕಾರ್ಪಣೆಗೊಳಿಸಿದರು. ನಿರಂಜನ್ ಅವರ ನೃತ್ಯ ಹಾಗೂ ಸಾಹಸ ಮೆಚ್ಚಿದ ಡಾರ್ಲಿಂಗ್ ಕೃಷ್ಣ ಅವರನ್ನು ಕನ್ನಡದ ಹೃತಿಕ್ ರೋಷನ್ ಎಂದು ಕರೆದರೆ, ಪ್ರಿಯಾಂಕಾ ಉಪೇಂದ್ರ ತಮ್ಮ ಮಗನಿಗೂ ನಿರಂಜನ್ ಮಾದರಿ ಎಂದರು.

ಪ್ರಭಾಸ್‌ ನಟನೆಯ 'ಸ್ಪಿರಿಟ್‌' ಸಿನಿಮಾದಲ್ಲಿ ವಾಸುಕಿ ವೈಭವ್‌ ಹಾಡು; ಕನ್ನಡದ ಪ್ರತಿಭೆಗೆ ಟಾಲಿವುಡ್‌ನಲ್ಲಿ ಭಾರಿ ಮೆಚ್ಚುಗೆ

ಪ್ರಭಾಸ್‌ ನಟನೆಯ 'ಸ್ಪಿರಿಟ್‌' ಚಿತ್ರಕ್ಕೆ ಹಾಡು ಸಂಯೋಜಿಸಿದ ವಾಸುಕಿ ವೈಭವ್‌

ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ʻಸ್ಪಿರಿಟ್ʼ‌ ಸಿನಿಮಾಕ್ಕೆ ಕನ್ನಡದ ವಾಸು‌ಕಿ ವೈಭವ್ ಎಂಟ್ರಿ ಕೊಟ್ಟಿದ್ದಾರೆ. ʻಸ್ಪಿರಿಟ್ʼ‌ ಸಿನಿಮಾದಲ್ಲಿ ವಾಸುಕಿ ಸಂಯೋಜಿಸಿರುವ ಹಾಡೊಂದು ಇರಲಿದ್ದು, ಅದು ಚಿತ್ರಮಂದಿರಗಳಲ್ಲಿ ದೊಡ್ಡ ಸಂಚಲನ ಸೃಷ್ಟಿಸಲಿದೆ ಎಂದು ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಭರವಸೆ ವ್ಯಕ್ತಪಡಿಸಿದ್ದಾರೆ.

ʻಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ..ʼ; ವಿಚ್ಛೇದನ ತೀರ್ಪು ಬಂದ ಮೇಲೆ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ಪತ್ನಿಯಿಂದ ವಿಚ್ಛೇದನ ಸಿಕ್ಕ ಮೇಲೆ ನಟ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ʻದುನಿಯಾʼ ವಿಜಯ್‌ ಅವರ ವಿಚ್ಛೇದನ ಪ್ರಕರಣ ಕೊನೆಗೂ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇತ್ಯರ್ಥಗೊಂಡಿದ್ದು, ದಂಪತಿಗೆ ವಿಚ್ಛೇದನ ಮಂಜೂರಾಗಿದೆ. ಪತ್ನಿ ನಾಗರತ್ನ ಅವರಿಗೆ 2 ಕೋಟಿ ರೂ. ಖಾಯಂ ಜೀವನಾಂಶ ಪಾವತಿಸಲು ನ್ಯಾಯಾಲಯ ಸೂಚಿಸಿದೆ. ತೀರ್ಪಿಗೆ ತಲೆಬಾಗಿ ಗೌರವ ವ್ಯಕ್ತಪಡಿಸಿರುವ ನಟ ವಿಜಯ್, ತಮ್ಮ ಮೇಲಾದ ಮಾನಸಿಕ ಕ್ರೌರ್ಯವನ್ನು ಕೋರ್ಟ್ ಪರಿಗಣಿಸಿದೆ ಎಂದಿದ್ದಾರೆ.

ಯುಕೆ, ಕೆನಡಾ, ಸಿಂಗಾಪುರಕ್ಕೆ ಜಿಯೋಹಾಟ್‌ಸ್ಟಾರ್‌ ಲಗ್ಗೆ: ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸ್ಟ್ರೀಮಿಂಗ್‌ ಕ್ರಾಂತಿ

ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಯೋಹಾಟ್‌ಸ್ಟಾರ್‌

ಜಿಯೋಹಾಟ್‌ಸ್ಟಾರ್‌ ಸ್ಟ್ರೀಮಿಂಗ್ ವೇದಿಕೆ ಯುಕೆ, ಕೆನಡಾ ಮತ್ತು ಸಿಂಗಾಪುರ ದೇಶಗಳಿಗೆ ಅಧಿಕೃತವಾಗಿ ವಿಸ್ತರಣೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. 12ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 1.60 ಲಕ್ಷ ಗಂಟೆಗಳ ಭಾರತೀಯ ಕಾರ್ಯಕ್ರಮಗಳನ್ನು ಹೊತ್ತು ತಂದಿದೆ.

ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್' ಸಿನಿಮಾಗೆ ಸಾಥ್ ನೀಡಿದ ಹೊಂಬಾಳೆ ಫಿಲ್ಮ್ಸ್; ಕನ್ನಡ ಸಂಸ್ಥೆಯ ಮಡಿಲಿಗೆ ವಿದೇಶಿ ಹಕ್ಕುಗಳು!

ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್' ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಸಾಥ್!

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ‘ಹನುಮಾನ್ ಅಂಶ್’ ಚಿತ್ರದ ಅಂತಾರಾಷ್ಟ್ರೀಯ ಹಕ್ಕುಗಳನ್ನು ಪಡೆದುಕೊಂಡಿದೆ. ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 63.82 ಕೋಟಿ ರೂಪಾಯಿ ಗಳಿಸಿ ಸದ್ದು ಮಾಡಿರುವ ಈ ಭಕ್ತಿಪ್ರಧಾನ ಸಿನಿಮಾ, ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

ನಟ ‘ದುನಿಯಾ’ ವಿಜಯ್ - ನಾಗರತ್ನ ದಾಂಪತ್ಯ ಬದುಕಿಗೆ ಅಂತ್ಯ: ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್‌, 2 ಕೋಟಿ ಜೀವನಾಂಶಕ್ಕೆ ಆದೇಶ!

‘ದುನಿಯಾ’ ವಿಜಯ್ - ನಾಗರತ್ನ ದಂಪತಿಗೆ ಡಿವೋರ್ಸ್‌ ಮಂಜೂರು ಮಾಡಿದ ಹೈಕೋರ್ಟ್

ʻದುನಿಯಾʼ ವಿಜಯ್‌ ವಿಚ್ಚೇದನ ಪ್ರಕರಣಕ್ಕೆ ಹೈಕೋರ್ಟ್ ವಿಭಾಗೀಯ ಪೀಠವು ಅಧಿಕೃತವಾಗಿ ಮುಕ್ತಾಯ ಹಾಡಿದೆ. ದೀರ್ಘಾವಧಿಯ ಕೌಟುಂಬಿಕ ಬಿರುಕು ಹಾಗೂ ಕಾನೂನು ಪ್ರಕ್ರಿಯೆಯನ್ನು ಪರಿಶೀಲಿಸಿದ ನ್ಯಾಯಾಲಯ, ಪತ್ನಿ ನಾಗರತ್ನ ಅವರಿಗೆ ಎರಡು ಕೋಟಿ ರೂಪಾಯಿ ಪರಿಹಾರ ಧನ ನೀಡುವಂತೆ ನಟನಿಗೆ ವಿಧಿಸಿದೆ.

Pawan Kalyan Birthday Celebration: ಅನಾಥಾಶ್ರಮದ ಮಕ್ಕಳೊಂದಿಗೆ ಪವನ್ ಕಲ್ಯಾಣ್ ಜನ್ಮದಿನ ಆಚರಣೆ: ಬಲಿಜ ಸಂಘದಿಂದ ಕೇಕ್ ಕತ್ತರಿಸಿ ಸಂಭ್ರಮ; ಮಕ್ಕಳಿಗೆ ಊಟದ ವ್ಯವಸ್ಥೆ

ಅನಾಥಾಶ್ರಮದ ಮಕ್ಕಳೊಂದಿಗೆ ಪವನ್ ಕಲ್ಯಾಣ್ ಜನ್ಮದಿನ ಆಚರಣೆ

ಜನಸೇನಾ ಪಕ್ಷದ ಮುಖಂಡ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಅವರು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಹಲವು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ದೇಶದ ಜನರ ಗಮನ ಸೆಳೆದಿದ್ದಾರೆ. ಮಾನವೀಯ ಅಂತಃಕರಣ ಹೊಂದಿರುವ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲಿ

Rashmika Mandanna: ವಿಜಯ್ - ನಾನು ಒಟ್ಟಿಗೆ ಕಳೆದ ಅತಿ ಹೆಚ್ಚು ಸಮಯ ಇದು; ರಶ್ಮಿಕಾ ಮುಕ್ತ ಮಾತು

ವಿಜಯ್ - ನಾನು ಒಟ್ಟಿಗೆ ಕಳೆದ ಅತಿ ಹೆಚ್ಚು ಸಮಯ ಇದು; ರಶ್ಮಿಕಾ ಮುಕ್ತ ಮಾತು

Rashmika Mandanna: ಜುಲೈನಲ್ಲಿ ತಮ್ಮ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮೈಸಾ' (Mysa) ಸೆಟ್‌ನಲ್ಲಿ ಆದ ಸೊಂಟದ ಗಾಯದ ನಂತರ ಒಂದೂವರೆ ತಿಂಗಳ ವಿರಾಮ ತೆಗೆದುಕೊಂಡ ನಂತರ ನಟಿ ರಶ್ಮಿಕಾ ಮಂದಣ್ಣ ಇಂದು ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ.ಒಂದು ವಾರದೊಳಗೆ ಕೆಲಸಕ್ಕೆ ಮರಳಲು ವೈದ್ಯರು ಅನುಮತಿ ನೀಡಿದ್ದರೂ, ರಶ್ಮಿಕಾ ಕೇವಲ ಒಂದು ದಿನದೊಳಗೆ ಮತ್ತೆ ನಟಿಸಲು ನಿರ್ಧರಿಸಿದರು. ಇದೇ ವೇಳೆ ಒಂದು ಸೀಕ್ರೆಟ್‌ ಒಂದನ್ನ ಶೇರ್‌ ಮಾಡಿದ್ದಾರೆ.

Senior Actor Dr Srinath: ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಅತ್ಯಂತ ಅಗತ್ಯ: ನಟ ಶ್ರೀನಾಥ್

ಎಪಿಎಸ್ ಪಿಯು ಕಾಲೇಜು ನಲ್ಲಿ ಪ್ರತಿಭಾ ದಿನಾಚರಣೆ

ಎಪಿಎಸ್ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಸದಾ ಬೆಂಬಲವಾಗಿ ನಿಂತಿತ್ತು. ಇದರ ಪರಿಣಾಮ ಸೂಪರ್ ಸ್ಟಾರ್ ರಜನಿಕಾಂತ್, ಉಪೇಂದ್ರ, ಕಲ್ಯಾಣ್ ಕುಮಾರ್, ಟೆನಿಸ್ ಕೃಷ್ಣ, ಸಿ. ಅಶ್ವತ್ಥ್ ಸೇರಿದಂತೆ ಇನ್ನೂ ಅನೇಕ ಪ್ರತಿಭೆಗಳು ಬೆಳಗಲು ಸಾಧ್ಯ ವಾಯಿತು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅತ್ಯಂತ ಅಗತ್ಯ ಎಂದರು.

'ಬಿಗ್‌ ಬಾಸ್‌' ಖ್ಯಾತಿಯ ರಾಶಿಕಾ ಶೆಟ್ಟಿಗೆ ತಂದೆಯಾದ ರವಿಚಂದ್ರನ್;‌ 'ಪ್ಯಾರ್‌' ಚಿತ್ರದಲ್ಲಿದೆ ಅಪ್ಪ-ಮಗಳ ಎಮೋಷನಲ್‌ ಕಥೆ

ʻಪ್ಯಾರ್‌ʼ ಚಿತ್ರದಲ್ಲಿ ʻಬಿಗ್‌ ಬಾಸ್‌ʼ ರಾಶಿಕಾಗೆ ತಂದೆಯಾದ ನಟ ರವಿಚಂದ್ರನ್

ʻಪ್ಯಾರ್‌ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಶಿಕಾ ಶೆಟ್ಟಿ ಅಪ್ಪ-ಮಗಳಾಗಿ ಕಾಣಿಸಿಕೊಂಡಿದ್ದಾರೆ. ಎಸ್. ಸುಪ್ರೀತ್ ನಿರ್ದೇಶನದ ಈ ಚಿತ್ರದಲ್ಲಿ ತಂದೆಗಾಗಿ ಜೀವವನ್ನೇ ಪಣಕ್ಕಿಡುವ ಮಗಳ ಎಮೋಷನಲ್‌ ಕಥೆಯಿದೆ.

Hanuman Ansh sequel: ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆಯುತ್ತಿರೋ ‘ಹನುಮಾನ್ ಅಂಶ್’! ಸೀಕ್ವೆಲ್ ಅನೌನ್ಸ್‌

ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆಯುತ್ತಿರೋ ‘ಹನುಮಾನ್ ಅಂಶ್’!

Hanuman Ansh sequel:ಕೇವಲ 1.8 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆಗಿರುವ ‘ಹನುಮಾನ್ ಅಂಶ್’ ಸಿನಿಮಾ 50 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಈ ಸಿನಿಮಾದ ಸೀಕ್ವೆಲ್ ಅನ್ನು ಸಹ ನಿರ್ದೇಶಕರು ಘೋಷಣೆ ಮಾಡಿದ್ದಾರೆ. ‘ನೀಮ್ ಕರೋಲಿ ಬಾಬ’ ಅವರ ಜೀವನ ಆಧರಿಸಿದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಭಕ್ತರನ್ನು ಬಹುವಾಗಿ ಸೆಳೆಯುತ್ತಿದೆ ಈ ಸಿನಿಮಾ. ಕೆಲವೇ ಕೆಲವು ಶೋಗಳ ಮೂಲಕ ಬಿಡುಗಡೆ ಆದ ಈ ಸಿನಿಮಾ ಈಗ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಶೋಗಳನ್ನು ಪಡೆದುಕೊಂಡಿದೆ.

Jailer 2 release date: ‘ಜೈಲರ್ 2’ ಪೋಸ್ಟ್‌ಪೋನ್‌ ಇಲ್ಲ!  ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟ ತಂಡ

‘ಜೈಲರ್ 2’ ಪೋಸ್ಟ್‌ಪೋನ್‌ ಇಲ್ಲ! ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟ ತಂಡ

Jailer 2 release date: ರಜನಿಕಾಂತ್ ಅವರ ಮುಂಬರುವ ಚಿತ್ರ ಜೈಲರ್ 2 (Jailer 2) ಮುಂದೂಡಲ್ಪಡಬಹುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವರದಿಗಳು ಹೊರಹೊಮ್ಮಿದವು. ಚಿತ್ರದ ಹಲವಾರು ಭಾಗಗಳ ಮರು ಚಿತ್ರೀಕರಣ ನಡೆಯುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಬುಧವಾರ, ಜೈಲರ್ 2 ನಿರ್ಮಾಪಕರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್ ಮೂಲಕ ಈ ವರದಿಗಳನ್ನು ತಳ್ಳಿಹಾಕಿದ್ದಾರೆ.

ನಟ 'ದುನಿಯಾ' ವಿಜಯ್ ಪುತ್ರ ಸಾಮ್ರಾಟ್‌ ವಿರುದ್ಧ FIR! ಯಾವೆಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು?

'ದುನಿಯಾ' ವಿಜಯ್ ಪುತ್ರ ಸಾಮ್ರಾಟ್ ‌ಮೇಲೆ ದೂರು! ಎಫ್‌ಐಆರ್‌ನಲ್ಲಿ ಏನೇನಿದೆ?

ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ಅಪಹರಣ ಹಾಗೂ ಹಲ್ಲೆ ಆರೋಪ ಹೊರಿಸಲಾಗಿದೆ. ಓವರ್‌ಟೇಕ್ ಜಗಳಕ್ಕೆ ಸಂಬಂಧಿಸಿ ಮನೀಶ್ ಗೌಡ ಎಂಬ ವಿದ್ಯಾರ್ಥಿಯನ್ನು ಎಳೆದೊಯ್ದು, ತಲೆ, ಎದೆಗೆ ಹೊಡೆದು ಗಾಯಗೊಳಿಸಿದ ಆರೋಪದಡಿ ಕೆಂಗೇರಿ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಕೇಸ್ ದಾಖಲಾಗಿದೆ.

‘ನಂದಗೋಕುಲ’ ಧಾರಾವಾಹಿಗೆ ನಟ ಯಶವಂತ್‌ ಗುಡ್‌ಬೈ ಹೇಳೋದಕ್ಕೆ ʻಬಿಗ್‌ ಬಾಸ್‌ʼ ಶೋ ಕಾರಣವೇ? ದೊಡ್ಮನೆಯಿಂದ ಕೇಶವನಿಗೆ ಬಂದೈತಾ ಆಫರ್?

ʻಬಿಗ್‌ ಬಾಸ್‌ 13ʼ ಶೋಗಾಗಿ ‘ನಂದಗೋಕುಲ’ ಧಾರಾವಾಹಿ ಬಿಟ್ರಾ ನಟ ಯಶವಂತ್‌?

‘ನಂದಗೋಕುಲ’ ಧಾರಾವಾಹಿಯಿಂದ ನಟ ಯಶವಂತ್‌ ಹೊರಬಂದಿದ್ದು, ಬಿಗ್ ಬಾಸ್ ಮನೆಗೆ ಹೋಗುವ ವದಂತಿಗಳಿಗೆ ತೆರೆ ಎಳೆದಿದ್ದಾರೆ. ರಿಯಾಲಿಟಿ ಶೋ ಪ್ರವೇಶಿಸಿದರೆ ನಟನ ನೈಜ ಸ್ವಭಾವವೇ ಬಯಲಾಗಿ ಕಲಾ ಬದುಕು ಅಂತ್ಯಗೊಳ್ಳುತ್ತದೆ ಎಂದಿರುವ ಅವರು, ಯಾವುದೇ ಪ್ರಚಾರದ ಗೀಳಿಲ್ಲದೆ, ಬೆಳ್ಳಿತೆರೆಯಲ್ಲಿ ನೆಲೆ ಕಂಡುಕೊಳ್ಳುವ ಇರಾದೆಯನ್ನು ಹೊಂದಿದ್ದಾರೆ.

ʻಜೋಗಿʼ ಪ್ರೇಮ್ - `ಕಿಚ್ಚ' ಸುದೀಪ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ; ಅಕ್ಟೋಬರ್ 20ಕ್ಕೆ ಅದ್ಧೂರಿ ಮುಹೂರ್ತ!‌

ಸುದೀಪ್ -ʻಜೋಗಿʼ ಪ್ರೇಮ್ ಧಮಾಕಾ; ಕಿಚ್ಚನ ಬರ್ತ್‌ಡೇಗೆ ಸಿಕ್ತು ಸಖತ್ ಗಿಫ್ಟ್

ಕಿಚ್ಚ ಸುದೀಪ್‌ ಮತ್ತು ʻಜೋಗಿʼ ಪ್ರೇಮ್‌ ಜೋಡಿ ಮತ್ತೆ ಒಂದಾಗಿದೆ. ಪ್ರೇಮ್ ನಿರ್ದೇಶನದ 10ನೇ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ನಟ ಸುದೀಪ್ ಜನ್ಮದಿನದ ಪ್ರಯುಕ್ತ ಈ ಸರ್ಪ್ರೈಸ್ ಸಿಕ್ಕಿದೆ. ಅಕ್ಟೋಬರ್ 20ರಂದು ಅದ್ಧೂರಿ ಮುಹೂರ್ತ ನಿಗದಿಯಾಗಿದೆ. ಇಂದಿನ ತಲೆಮಾರಿನ ಕೌಟುಂಬಿಕ ಎಮೋಷನಲ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ ಪ್ರೇಮ್.

‘Mr. ಜಾಕ್’ ಆಗಿ ತೆರೆಮೇಲೆ ಮೋಡಿ ಮಾಡಲು ಬಂದ ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್‌!

‘Mr. ಜಾಕ್’ ಚಿತ್ರದ ಮೂಲಕ ನಿರ್ಮಾಪಕರಾದ ನಟ ಗುರುನಂದನ್‌

ನಟ ಗುರುನಂದನ್‌ ಅವರು ‘Mr. ಜಾಕ್’ ಚಿತ್ರದ ಮೂಲಕ ಮರಳಿದ್ದು, ಗೆಳೆಯರೊಡನೆ ‘ಮಂಡಿಮನೆ ಟಾಕೀಸ್’ ಸ್ಥಾಪಿಸಿ ಸ್ವತಃ ನಿರ್ಮಾಪಕರಾಗಿದ್ದಾರೆ. ಸುಮಂತ್ ಗೌಡ ನಿರ್ದೇಶನದ ಈ ಕೌಟುಂಬಿಕ ಹಾಸ್ಯ ಕಥೆಯಲ್ಲಿ ವೈವಾಹಿಕ ಬದುಕಿನ ಏರಿಳಿತ, ವಿಚ್ಛೇದನದ ಗಂಭೀರ ವಿಷಯ ಹಾಸ್ಯದ ಮೂಲಕ ಹೇಳಲಾಗಿದೆಯಂತೆ. ನಾಯಕಿಯಾಗಿ ತಪಸ್ವಿನಿ ಪೂಣಚ್ಛ ನಟಿಸಿದ್ದಾರೆ.

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ರಿಲೀಸ್; ಚಿತ್ರತಂಡಕ್ಕೆ ನಟ ಪ್ರಮೋದ್ ಶೆಟ್ಟಿ ಶುಭ ಹಾರೈಕೆ

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಪ್ರಮೋದ್ ಶೆಟ್ಟಿ

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ಲೋಕಾರ್ಪಣೆಗೊಂಡಿದ್ದು, ನಟ ಪ್ರಮೋದ್ ಶೆಟ್ಟಿ ಶುಭಕೋರಿದ್ದಾರೆ. ಚಿತ್ರಕ್ಕೆ 'ಎ' ಪ್ರಮಾಣಪತ್ರ ದೊರೆತಿದ್ದರೂ ಪ್ರತಿಯೊಬ್ಬರ ನೈಜ ಬದುಕಿನ ಎಚ್ಚರಿಕೆಯ ಪಾಠವಿದು ಎಂದಿದ್ದಾರೆ ನಿರ್ದೇಶಕ ಮನೋಜ್. ಪುನೀತ್ ರಾಜ್‌ಕುಮಾರ್ ಆಶೀರ್ವಾದ ನೆನೆದು ನಾಯಕ ಜಗ್ಗಿ ಭಾವುಕರಾಗಿದ್ದು, ಸಂಪ್ರತಿ ಆಳ್ವಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ದರ್ಶನ್‌ಗೆ ಸಣ್ಣ ರಿಲೀಫ್: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್; ಅಷ್ಟಕ್ಕೂ ಆಗಿದ್ದೇನು?

Darshan Case: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಎ-14 ಆರೋಪಿ ಪ್ರದೋಷ್ ಸಾಕ್ಷಿ ಹೇಳುವ ಪ್ರಕ್ರಿಯೆ ಸದ್ಯ ಮುಂದೂಡಿಕೆ ಆಗಿದೆ. ದರ್ಶನ್ ಪರ ವಕೀಲರ ತುರ್ತು ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದ ಹಿನ್ನೆಲೆಯಲ್ಲಿ, ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಬಂದಿದ್ದ ಪ್ರದೋಷ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ.

'ಅಲ್ಲು ಅರವಿಂದ್ ಮಾತನ್ನು ವಿವಾದ ಮಾಡುವವರು ಅಹಂ ಇರುವ ಜನರು ಮಾತ್ರ'; ಯಶ್‌ ತಾಯಿ ಹೇಳಿಕೆಗೆ ರಾಮ್‌ ಗೋಪಾಲ್‌ ವರ್ಮಾ ತಿರುಗೇಟು!

ನಟ ಯಶ್ ತಾಯಿ ಮಾತಿಗೆ ಆರ್‌ಜಿವಿ ತಿರುಗೇಟು; ಅಲ್ಲು ಅರವಿಂದ್‌ಗೆ ಸಪೋರ್ಟ್!

ʻಕೆಜಿಎಫ್ʼ ಚಿತ್ರಕ್ಕೂ ಮೊದಲು ಯಶ್ ಅಪರಿಚಿತರಾಗಿದ್ದರು ಎಂಬ ಅಲ್ಲು ಅರವಿಂದ್ ಹೇಳಿಕೆಗೆ ಯಶ್ ತಾಯಿ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರವಿಂದ್‌ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ವಿವಾದ ಸೃಷ್ಟಿಸುವವರಲ್ಲಿ ಅತಿಯಾದ ಅಹಂಕಾರವಿದೆ ಎಂದು ನೇರವಾಗಿ ತಿರುಗೇಟು ನೀಡಿದ್ದಾರೆ.

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು: ಕಾರಣವೇನು?

‘ಬಿಗ್ ಬಾಸ್‌’ ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು!

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ಪರಿಸರ ಮತ್ತು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ (NOC) ನೀಡದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

Loading...