ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

BBK 13: ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’; ‘ಬಿಗ್‌ ಬಾಸ್’‌ನಲ್ಲಿದ್ದಾರೆ ಆ ಒಬ್ಬ ನತದೃಷ್ಟ ಸ್ಪರ್ಧಿ, ಭಾನುವಾರ ಸೀಕ್ರೆಟ್ ರಿವೀಲ್!

ಬಿಗ್ ಬಾಸ್ ಮನೆಯ ಹೊಸ್ತಿಲು ತುಳಿಯುವ ಮುನ್ನವೇ ಹೊರಬೀಳಲಿದ್ದಾರಾ ಆ ಸ್ಪರ್ಧಿ?

Bigg Boss Kannada Season 13: ಬಿಗ್‌ ಬಾಸ್‌ 13 ಶೋ ಆರಂಭದಲ್ಲೇ ಅಚ್ಚರಿಯ ತಿರುವು ಪಡೆದುಕೊಂಡಿದೆ. ಮೇನ್‌ ಮನೆ ಪ್ರವೇಶಿಸಲು ವಿಫಲರಾಗಿ ವಿಮಾನದ ಕಿರಿದಾದ ಸೀಟುಗಳಲ್ಲೇ ರಾತ್ರಿ ಕಳೆಯುತ್ತಿರುವ ಸ್ಪರ್ಧಿಗಳಲ್ಲಿ ಒಬ್ಬರು ಮನೆಯ ಒಳಾಂಗಣವನ್ನೂ ನೋಡದೆ ನೇರವಾಗಿ ಹೊರಹೋಗಲಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

KBC 18: IIT ವೃತ್ತಿಯ ಜತೆ ಪತ್ನಿಯನ್ನೂ ನೀಡಿದೆ; ಅಮಿತಾಬ್ ಮುಂದೆ ಕೆಬಿಸಿ  ಸ್ಪರ್ಧಿ ಹೇಳಿದ್ದೇನು?

IIT ವೃತ್ತಿಯ ಜತೆ ಪತ್ನಿಯನ್ನೂ ನೀಡಿದೆ; ಕೆಬಿಸಿ ಸ್ಪರ್ಧಿ ಹೇಳಿದ್ದೇನು?

KBC 18: ಅಮಿತಾಬ್ ಬಚ್ಚನ್ ಪ್ರಸ್ತುತ ಕೌನ್ ಬನೇಗಾ ಕರೋಡ್ ಪತಿ 18 ಅನ್ನು ಆಯೋಜಿಸುವಲ್ಲಿ ನಿರತರಾಗಿದ್ದಾರೆ . ಸವಾಲಿನ ಪ್ರಶ್ನೆಗಳೊಂದಿಗೆ ಸ್ಪರ್ಧಿಗಳನ್ನು ಕಠಿಣ ಸ್ಥಾನದಲ್ಲಿ ಇಡುವುದರ ಜೊತೆಗೆ, ಬಿಗ್ ಬಿ ಅವರ ಕಥೆಗಳನ್ನು ಕೇಳುತ್ತಾರೆ ಮತ್ತು ಕೆಲವೊಮ್ಮೆ ಅವರೊಂದಿಗೆ ತಮಾಷೆಯ ಮಾತುಗಳಲ್ಲಿ ತೊಡಗುತ್ತಾರೆ. ಇತ್ತೀಚಿನ ಸಂಚಿಕೆ ಒಂದರಲ್ಲಿ, ವೃತ್ತಿಜೀವನದ ಜೊತೆಗೆ, ಐಐಟಿ (IIT) ಹೆಂಡತಿಯನ್ನು ಸಹ ನೀಡಿದೆ ಎಂದು ಬಹಿರಂಗಪಡಿಸಿದ ಸ್ಪರ್ಧಿಯ ಕುರಿತು ಅಮಿತಾಭ್‌ ಮಾತನಾಡಿದ್ದಾರೆ .

‘ಕೊನೆಪಕ್ಷ ನಟಿ ವಾಮಿಕಾಗೆ ಒಂದು ಸ್ಕೂಟಿಯನ್ನಾದ್ರೂ ಕೊಡಿ..’: ‘ಡಿಸಿ’ ಸಿನಿಮಾ ನಿರ್ಮಾಪಕರ ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು, ಅಷ್ಟಕ್ಕೂ ಆಗಿದ್ದೇನು?

ʻನಟಿ ವಾಮಿಕಾಗೆ ಸ್ಕೂಟಿಯಾದ್ರೂ ಕೊಡಿʼ; DC ನಿರ್ಮಾಪಕರ ಮೇಲೆ ಫ್ಯಾನ್ಸ್‌ ಗರಂ

DC Movie Success: ʻಡಿಸಿʼ ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಹಿಟ್‌ ಎನಿಸಿಕೊಂಡ ಹಿನ್ನೆಲೆಯಲ್ಲಿ ನಿರ್ಮಾಪಕ ಕಲಾನಿಧಿ ಮಾರನ್ ಚಿತ್ರತಂಡಕ್ಕೆ ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಚಿತ್ರದ ನಾಯಕಿ ವಾಮಿಕಾ ಗಬ್ಬಿ ಅವರನ್ನು ಸಂಪೂರ್ಣ ಕಡೆಗಣಿಸಲಾಗಿದ್ದು, ನಟಿಯರಿಗೂ ಗೌರವ ನೀಡಿ ಎಂದು ನಿರ್ಮಾಪಕರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಗರಂ ಆಗಿದ್ದಾರೆ.

BBK 13: ನಟಿ ಆಸಿಯಾ ಫಿರ್ದೋಸ್ ಹಿಂದೆ ಬಿದ್ರಾ ಧನುಷ್?‌ ʻಬಿಗ್‌ ಬಾಸ್‌ʼ ಮನೆಯಲ್ಲಿ ಇವರದ್ದೇ ಮೊದಲ ಲವ್‌ ಸ್ಟೋರಿ!

ʻಪ್ರೀತಿಗೆ ಬೆಲೆ ಸಿಗ್ತಿಲ್ಲ ಮಂಜʼ; ʻಬಿಗ್ ಬಾಸ್‌ʼ ಮನೇಲಿ ಹೊಸ ಲವ್ ಸ್ಟೋರಿ

ಬಿಗ್‌ ಬಾಸ್‌ ಕನ್ನಡ ಸೀಸನ್‌ 13 ಆರಂಭದಲ್ಲೇ ಕನ್ನಡಿಗರ ಗಮನ ಸೆಳೆದಿದೆ. ಸ್ಪರ್ಧಿಗಳಾದ ಧನುಷ್ ಹಾಗೂ ನಟಿ ಆಸಿಯಾ ಫಿರ್ದೋಸ್ ನಡುವಿನ ತುಂಟಾಟ, ಸರಸದ ಮಾತುಗಳು ಮನೆಯೊಳಗೆ ಹೊಸ ಪ್ರೇಮ ಚಿಗುರೊಡೆದಿರುವ ಸೂಚನೆ ನೀಡಿವೆ. "ಪ್ರೀತಿಗೆ ಬೆಲೆ ಸಿಗ್ತಿಲ್ಲ" ಎಂಬ ಧನುಷ್ ಮಾತುಗಳು ಜಾಲತಾಣಗಳಲ್ಲಿ ಸಂಚಲನ ಮೂಡಿಸಿವೆ.

Search Movie: ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ನಟನೆಯ ಹೊಸ ಸಿನಿಮಾಗೆ ಕ್ಲ್ಯಾಪ್‌ ಮಾಡಿದ ಶ್ರೀನಗರ ಕಿಟ್ಟಿ

ಎಸ್‌. ನಾರಾಯಣ್ ಮಗ ಪಂಕಜ್ ನಟನೆಯ ‘ಸರ್ಚ್’ ಶುರು: ಶ್ರೀನಗರ ಕಿಟ್ಟಿ ಸಾಥ್

Search Kannada Movie: ಎಸ್.‌ ನಾರಾಯಣ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ʻಸರ್ಚ್‌ʼ ಸಿನಿಮಾವು ನಾಗರಭಾವಿಯ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮುಹೂರ್ತ ಆಚರಿಸಿಕೊಂಡಿದೆ. ನಟ ಶ್ರೀನಗರ ಕಿಟ್ಟಿ ಕ್ಯಾಮೆರಾ ಚಾಲನೆ ಮಾಡಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್ ಕ್ಲ್ಯಾಪ್ ಮಾಡಿದ್ದಾರೆ. ಒಂದು ರಾತ್ರಿಯ ರೋಚಕ ಘಟನೆಯನ್ನು ಆಧರಿಸಿದ ಈ ಚಿತ್ರದ ಚಿತ್ರೀಕರಣ ಸೆಪ್ಟೆಂಬರ್ 15 ರಿಂದ ಶುರುವಾಗಲಿದೆ.

ಡ್ಯಾನ್ಸ್ ಫ್ಲೋರ್‌ನಲ್ಲಿ ತಾಯಂದಿರ ಮ್ಯಾಜಿಕ್; ಜೀ ಕನ್ನಡದಲ್ಲಿ ಶುರುವಾಗ್ತಿದೆ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ – ಸೂಪರ್ ಮಾಮ್' ಶೋ!

ಡ್ಯಾನ್ಸ್ ಫ್ಲೋರ್‌ನಲ್ಲಿ ಅಮ್ಮಂದಿರು; ಶುರುವಾಗ್ತಿದೆ DKD ಸೂಪರ್ ಮಾಮ್ ಶೋ!

Dance Karnataka Dance: ಜೀ ಕನ್ನಡದಲ್ಲಿ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ –ಸೂಪರ್ ಮಾಮ್ʼ ಶೋ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಳ್ಳುತ್ತಿದೆ. ಈ ಶೋ ಮೂಲಕ ಕರುನಾಡಿನ ತ್ಯಾಗಮಯಿ ತಾಯಂದಿರು ತಮ್ಮ ಹಳೆಯ ಕನಸುಗಳನ್ನು ನನಸು ಮಾಡಿಕೊಳ್ಳಲು ವೇದಿಕೆಗೆ ಮರಳುತ್ತಿದ್ದಾರೆ. ದೈನಂದಿನ ಮನೆ ಕೆಲಸಗಳು, ಕುಟುಂಬದ ಜವಾಬ್ದಾರಿಗಳ ಆಚೆಗೂ ಅವರಲ್ಲಿರುವ ನೃತ್ಯ ಕೌಶಲವನ್ನು ಜಗತ್ತಿಗೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

America America 2 Review: ಭಾವನೆಗಳ ಸಾಗರದಲ್ಲಿ ನೀಲ್‌, ನೀನಾದ್‌, ನುಡಿಯ ಹೊಯ್ದಾಟ!

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರ ಹೇಗಿದೆ?

America America 2 Movie Review: 'ಅಮೆರಿಕಾ! ಅಮೆರಿಕಾ!!' ಸಿನಿಮಾ 1997ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿತ್ತು. ಇದಾದ ಸುಮಾರು 3 ದಶಕಗಳ ನಂತರ ‘ಅಮೆರಿಕಾ ಅಮೆರಿಕಾ 2’ ಸಿನಿಮಾ ಬಂದಿದೆ. ಮೊದಲ ಭಾಗಕ್ಕೂ ಎರಡನೇ ಭಾಗಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾದರೆ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಈ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದಾರೆ. ಈ ಸಿನಿಮಾ ವಿಮರ್ಶೆ ಓದಿ.

Samantha: ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

ಮಗು ಬೇಡ ಅಂದುಕೊಂಡಿದ್ದ ಸಮಂತಾ! ಪ್ರೆಗ್ನೆನ್ಸಿ ಬಗ್ಗೆ ನಟಿ ಹೇಳಿದ್ದೇನು?

Samantha: ಕಳೆದ ವರ್ಷ ಡಿಸೆಂಬರ್‌ನಲ್ಲಿ ಈ ವಿಷಯವನ್ನು ಅಧಿಕೃತಗೊಳಿಸಿದ ದಂಪತಿ ಈ ವರ್ಷದ ಜೂನ್‌ನಲ್ಲಿ ತಾವು ಪೋಷಕರಾಗಲಿದ್ದೇವೆ ಎಂದು ಘೋಷಿಸಿದರು. ಮಗು ಇಲ್ಲದಿದ್ದರೂ ಪರವಾಗಿಲ್ಲ ಎಂದುಕೊಂಡಿದ್ದ ತಮಗೆ ಈ ಗರ್ಭಧಾರಣೆ (Pregnancy) ದೊಡ್ಡ ಸರ್ಪ್ರೈಸ್ ನೀಡಿದೆ ಎಂದು ಹೇಳಿಕೊಂಡಿದ್ದಾರೆ.

DC producer gifts BMW: ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ ಕೊಟ್ಟ ಕಲಾನಿಧಿ ಮಾರನ್

ʻDC' ಸಿನಿಮಾದ ಭರ್ಜರಿ ಯಶಸ್ಸು; ಬಿಎಂಡಬ್ಲ್ಯು ಕಾರು ಉಡುಗೊರೆ

DC producer gifts BMW: ಚಿತ್ರದ ಯಶಸ್ವಿ ಪ್ರದರ್ಶನದ ನಂತರ ಚಿತ್ರದ ಪ್ರಮುಖ ತಂಡಕ್ಕೆ ಹೊಚ್ಚ ಹೊಸ ಬಿಎಂಡಬ್ಲ್ಯು ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ನಿರ್ದೇಶಕ ಅರುಣ್ ಮಾಥೇಶ್ವರನ್, ನಟ ಲೋಕೇಶ್ ಕನಕರಾಜ್ ಮತ್ತು ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ (Anirudh Ravichandar) ಅವರಿಗೆ ಬಿಎಂಡಬ್ಲ್ಯು ಕಾರುಗಳನ್ನು ನೀಡಲಾಯಿತು.

Irumudi OTT: ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್‌ ಯಾವಾಗ?

ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್‌ ಯಾವಾಗ?

Irumudi OTT: ಇತ್ತೀಚಿನ ಬಿಡುಗಡೆಯಾದ 'ಇರುಮುಡಿ' ಚಿತ್ರವು ಆಗಸ್ಟ್ 21 ರಂದು ಥಿಯೇಟ್ರಿಕಲ್ ಬಿಡುಗಡೆಯಾದಾಗ ತೆಲುಗು ಚಿತ್ರರಂಗದಿಂದ ಬಂದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಯಿತು. ದೊಡ್ಡ ಪರದೆಯ ಮೇಲೆ ಚಿತ್ರದ ಅಸಾಧಾರಣ ಪ್ರದರ್ಶನದ ನಂತರ, ಚಿತ್ರವು ಶೀಘ್ರದಲ್ಲೇ OTT ಜಗತ್ತಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು ಇನ್ನೂ ಸಹ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಈಗಾಗಲೇ 250 ಕೋಟಿ ರೂಪಾಯಿ ಗಳಿಕೆ ದಾಟಿದೆ.

ʻಬಹುಪರಾಕ್‌ʼ ನಂತರ ʻಅಮರ್ಥʼ ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ನಟಿಸಿದ ಮೇಘನಾ ರಾಜ್‌ ಸರ್ಜಾ - ಶ್ರೀನಗರ ಕಿಟ್ಟಿ

ಮೇಘನಾ ರಾಜ್ - ಶ್ರೀನಗರ ಕಿಟ್ಟಿ ನಟನೆಯ ‘ಅಮರ್ಥ’ ಸಿನಿಮಾ ಟ್ರೇಲರ್ ರಿಲೀಸ್‌

Amartha Movie Trailer: ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ ನಟನೆಯ ‘ಅಮರ್ಥ’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಸಾರಥ್ಯದ ಪಂಚರಂಗಿ ಫಿಲಂಸ್ ನಿರ್ಮಿಸಿರುವ ಈ ಕೌಟುಂಬಿಕ ಚಿತ್ರವು ಸೆಪ್ಟೆಂಬರ್ 18 ರಂದು ತೆರೆಕಾಣಲಿದೆ.

Ranabaali Teaser: ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!

ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!

Ranabaali Teaser: ಪ್ಯಾನ್-ಇಂಡಿಯಾ ಆ್ಯಕ್ಷನ್ ಎಪಿಕ್ ‘ರಣಬಾಲಿ’ ಚಿತ್ರದ ಬಹುನಿರೀಕ್ಷಿತ ಟೀಸರ್ ಬುಧವಾರ ಸಂಜೆ ಬಿಡುಗಡೆಯಾಗಿದೆ. ಹಾಲಿವುಡ್ ನಟರುಗಳು ಭಾರತದ ಸಿನಿಮಾಗಳಲ್ಲಿ ನಟಿಸುವುದು ವಿರಳ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದು ಇನ್ನೂ ಕಡಿಮೆ. ‘ರಣಬಾಲಿ’ ಸಿನಿಮಾನಲ್ಲಿ ಮತ್ತೊಬ್ಬ ಖ್ಯಾತ ಹಾಲಿವುಡ್ ನಟ ವಿಲನ್ ಆಗಿ ನಟಿಸುತ್ತಿದ್ದಾರೆ.

‘ಮೌನ ನನ್ನ ದೌರ್ಬಲ್ಯವಲ್ಲ, ಕುಟುಂಬದ ನೆಮ್ಮದಿಗಾಗಿ ಈ ನಿರ್ಧಾರ’; ಕಿಡಿಗೇಡಿಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ‘ಬಿಗ್‌ ಬಾಸ್‌’ ಅಶ್ವಿನಿ ಗೌಡ

ʻನನ್ನ ಮೌನ ದೌರ್ಬಲ್ಯವಲ್ಲʼ; Bigg Boss ಅಶ್ವಿನಿ ಗೌಡ ಈ ಮಾತು ಹೇಳಿದ್ದೇಕೆ?

Ashwini Gowda: ನಟಿ ಅಶ್ವಿನಿ ಗೌಡ ಅವರು ಕೆಲ ಕಿಡಿಗೇಡಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರೆ. ತಮ್ಮ ವೈಯಕ್ತಿಕ ಬದುಕು, ಮಗ ಮತ್ತು ತಾಯಿಯ ಘನತೆಗೆ ಕಳಂಕ ತರುತ್ತಿರುವ ಸುಳ್ಳು ವಿಡಿಯೋ, ಟ್ರೋಲ್‌ಗಳ ವಿರುದ್ಧ ಸಿಡಿದೆದ್ದಿರುವ ಅವರು, ಎಚ್ಚರಿಕೆ ನೀಡಿದ್ದಾರೆ. ಕುಟುಂಬದ ಭವಿಷ್ಯ ಮತ್ತು ಸ್ವಾಭಿಮಾನ ರಕ್ಷಿಸಿಕೊಳ್ಳಲು ಕಾನೂನಾತ್ಮಕ ಹೋರಾಟಕ್ಕೆ ಇಳಿದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

BBK 13: ʻನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತೀರಾ..ʼ; ʻಬಿಗ್‌ ಬಾಸ್‌ʼ ಮನೆಯಲ್ಲಿ ಜೋರಾಯ್ತು ಮಾಡರ್ನ್‌ ಮಹಾಕವಿ ಮಂಜನ ಸೌಂಡು!‌

ಬಿಗ್‌ ಬಾಸ್‌ನಲ್ಲಿ ಮಾಡರ್ನ್ ಮಹಾಕವಿ ಮಂಜನ ರೌದ್ರಾವತಾರ; ಸ್ಪರ್ಧಿಗಳು ಶಾಕ್!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್ ಕಿಡಿ ಹೊತ್ತಿಕೊಂಡ ಬೆನ್ನಲ್ಲೇ ಸ್ಪರ್ಧಿ ಮಾಡರ್ನ್‌ ಮಹಾಕವಿ ಮಂಜ ಸಿಡಿದೆದ್ದಿದ್ದಾರೆ. ಸಹ-ಸ್ಪರ್ಧಿಗಳ ಪಕ್ಷಪಾತ ಮತ್ತು ಪಿತೂರಿಗಳನ್ನು ನೇರವಾಗಿ ಖಂಡಿಸಿದ ಅವರು, ಎದುರಾಳಿಗಳು ಚಪ್ಪಾಳೆ ತಟ್ಟಲಷ್ಟೇ ಲಾಯಕ್ಕು ಎಂದಿದ್ದಾರೆ. ಎಲ್ಲರನ್ನೂ ಹೊರದಬ್ಬಿ ಟ್ರೋಫಿ ಗೆಲ್ಲುವುದಾಗಿ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.

Renukaswamy Case: ಖುದ್ದು ಹಾಜರಿಗೆ ಮನವಿ ಮಾಡಿದ್ದ ನಟ ದರ್ಶನ್‌ಗೆ ನಿರಾಸೆ; ಹೈಕೋರ್ಟ್ ಕೊಟ್ಟ ಪರ್ಯಾಯ  ಆಯ್ಕೆಗಳೇನು?

ನಟ ದರ್ಶನ್‌ಗೆ ಹೈಕೋರ್ಟ್ ಶಾಕ್; ಖುದ್ದು ಹಾಜರಿ ಮನವಿಗೆ ಹೇಳಿದ್ದೇನು?

Actor Darshan Thoogudeepa: ನಟ ದರ್ಶನ್‌ ಸಲ್ಲಿಸಿದ್ದ ಖುದ್ದು ಹಾಜರಾತಿ ಅರ್ಜಿಯನ್ನು ಹೈಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಭದ್ರತೆ ಹಾಗೂ ಜನದಟ್ಟಣೆಯ ಸವಾಲುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪ್ರತ್ಯೇಕ ಸಮಾಲೋಚನೆ ನಡೆಸಲು ಹಲವು ಪರ್ಯಾಯ ಪರಿಹಾರಗಳನ್ನು ವಕೀಲರ ಮುಂದಿಟ್ಟಿದೆ.

ʻಬೀರ್‌ಬಲ್‌ʼ ಶ್ರೀನಿ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಶಿವರಾಜ್‌ಕುಮಾರ್;‌ ಕೆವಿಎನ್‌ ಪ್ರೊಡಕ್ಷನ್ಸ್‌ನಂದ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್!‌

ʻಬೀರ್‌ಬಲ್ 2ʼ ಸಿನಿಮಾಗೆ ಬಂದ್ರು ಶಿವಣ್ಣ; KVN ಪ್ರೊಡಕ್ಷನ್ಸ್‌ ಹೊಸ ಸಿನಿಮಾ

Birbal Case 2: ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಬೀರ್‌ಬಲ್ ಟ್ರೈಲಜಿ ಕೇಸ್ 2’ ಚಿತ್ರ ಅಧಿಕೃತವಾಗಿ ಅನೌನ್ಸ್ ಆಗಿದೆ. ಎಂ.ಜಿ. ಶ್ರೀನಿ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಅಬ್ಬರಿಸಲಿದ್ದು, ಈ ಚಿತ್ರದ ಮೂಲಕ ಖುಷ್ಬೂ ಸುಂದರ್ ಹಾಗೂ ಡೈಸಿ ಬೋಪಣ್ಣ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ.

ತಮಿಳು ನಟ ಸೂರ್ಯಗೆ ಸಾಧ್ಯವಾಗಿದ್ದು ಬೇರೆ 'ಸ್ಟಾರ್' ಹೀರೋಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ? ಅಭಿಮಾನಿಗಳಿಗೆ ಬೇಕಿರುವುದು ಇದೇ ಸ್ಪೀಡ್!

6 ತಿಂಗಳಲ್ಲಿ 3 ಸಿನಿಮಾ; ಸೂರ್ಯ ಸ್ಪೀಡ್ ನೋಡಿ ಕಲಿಬೇಕು ಎಂದ್ರು ಫ್ಯಾನ್ಸ್!‌

Actor Suriya: ನಟ ಸೂರ್ಯ ಅವರ ಸ್ಪೀಡ್ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಕೇವಲ ಆರು ತಿಂಗಳ ಅಂತರದಲ್ಲಿ ‘ಕರುಪ್ಪು’, ‘ವಿಶ್ವನಾಥ್ & ಸನ್ಸ್’ ಮತ್ತು ನವೆಂಬರ್‌ನಲ್ಲಿ ಬರಲಿರುವ ‘ಸೀನ್’ ಮೂಲಕ ಮೂರು ಚಿತ್ರಗಳನ್ನು ನೀಡುತ್ತಿದ್ದಾರೆ. ಸಾಲು ಸಾಲು ಹಿಟ್ ನೀಡುತ್ತಿರುವ ಸೂರ್ಯ, ಇತರ ಸ್ಟಾರ್ ನಟರಿಗೆ ಮಾದರಿಯಾಗಿದೆ.

ರವಿಚಂದ್ರನ್ ಪುತ್ರ ಮನೋರಂಜನ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಪರ್ಣ ದಾಸ್: ‘ಸರ್ವೇ ಜನಾಃ ಸುಖಿನೋ ಭವಂತು’ ಶೂಟಿಂಗ್ ಕಂಪ್ಲೀಟ್!

ರವಿಚಂದ್ರನ್‌ ಮಗನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಅಪರ್ಣ ದಾಸ್‌ ಎಂಟ್ರಿ

Aparna Das: ಮನೋರಂಜನ್ ರವಿಚಂದ್ರನ್ ಅಭಿನಯದ ‘ಸರ್ವೇ ಜನಾಃ ಸುಖಿನೋ ಭವಂತು’ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈ ಸಿನಿಮಾದ ಮೂಲಕ ತಮಿಳಿನ ಖ್ಯಾತ ನಟಿ ಅಪರ್ಣ ದಾಸ್‌ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದಂದೇ ಈ ಸುದ್ದಿಯನ್ನು ಚಿತ್ರತಂಡ ಬಹಿರಂಗಪಡಿಸಿದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಮೈಸೂರು ದಸರಾಗೆ ಈ ಬಾರಿ ಮೆರುಗು ತುಂಬಲಿದ್ದಾರೆ 30ಕ್ಕೂ ಹೆಚ್ಚು ಸ್ಯಾಂಡಲ್‌ವುಡ್‌ ತಾರೆಯರು; ಏನಿದು ಬಿಗ್‌ ಪ್ಲ್ಯಾನ್?‌

ಮೈಸೂರು ದಸರಾ ಜಂಬೂಸವಾರಿಗೆ ತಾರಾ ಮೆರುಗು; ಸ್ಯಾಂಡಲ್‌ವುಡ್ ಕಲಾವಿದರ ಸಾಥ್‌

Mysuru Dasara: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಜಂಬೂಸವಾರಿ ಮೆರವಣಿಗೆಗೆ ಈ ಬಾರಿ ಬೆಳ್ಳಿತೆರೆಯ ವೈಭವ ಜತೆಯಾಗಲಿದೆ. ಕನ್ನಡ ಚಿತ್ರರಂಗದ 30ಕ್ಕೂ ಅಧಿಕ ಮುಂಚೂಣಿ ತಾರೆಯರು ತೆರೆದ ಅಂಬಾರಿ ವಾಹನದಲ್ಲಿ ಸಾಗಲಿದ್ದಾರೆ. 93 ವರ್ಷಗಳ ಸಿನಿರಂಗದ ಇತಿಹಾಸ ಸಾರುವ ಅಪರೂಪದ ಸ್ತಬ್ಧಚಿತ್ರವೂ ಇವರೊಂದಿಗೆ ಸಾಗಲಿದೆ.

Zee 5: ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ; AI ಆಧಾರಿತ ತಂತ್ರಜ್ಞಾನ

ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ; AI ಆಧಾರಿತ ತಂತ್ರಜ್ಞಾನ

Zee 5: ಮೊಬೈಲ್ ಹಾಗೂ ಕನೆಕ್ಟೆಡ್ ಟಿವಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಜೀ5, ಸ್ಮಾರ್ಟ್ ಪೆರ್ಸನಲೈಸಷನ್, ಕೃತಕ ಬುದ್ಧಿಮತ್ತೆ (AI) ಆಧಾರಿತ ಸರ್ಚಿಂಗ್ ವ್ಯವಸ್ಥೆ, ಆಕರ್ಷಕ ದೃಶ್ಯ ನ್ಯಾವಿಗೇಷನ್ ಮತ್ತು ಯಾವುದೇ ಸ್ಕ್ರೀನ್‌ನಲ್ಲೂ ಸರಾಗವಾಗಿ ವೀಕ್ಷಿಸಬಹುದಾದ ತಂತ್ರಜ್ಞಾನದೊಂದಿಗೆ ಸಜ್ಜಾಗಿದೆ. ಪ್ರೇಕ್ಷಕರ ಬದಲಾಗುತ್ತಿರುವ ವೀಕ್ಷಣಾ ಶೈಲಿಗೆ ತಕ್ಕಂತೆ ನೂತನ ಜೀ5 ವೇದಿಕೆಯನ್ನು ಪ್ರೀಮಿಯಂ ಎಂಟರ್‌ಟೈನ್‌ಮೆಂಟ್, ಫ್ರೀ 5, ಕಿಡ್‌ಝ್ (KidZ), ಟಿವಿ ಮತ್ತು ಸ್ಪೋರ್ಟ್ಸ್ ಎಂಬ ಐದು ವಿಶಿಷ್ಟ ವಿಭಾಗಗಳನ್ನಾಗಿ ವಿನ್ಯಾಸಗೊಳಿಸಲಾಗಿದೆ.

BBK 13: ತಾರಕಕ್ಕೇರಿದ ಪ್ರಥಮಾ ಪ್ರಸಾದ್‌ - ಕಿರಣ್‌ ಶಾಸ್ತ್ರಿ ಕಿತ್ತಾಟ! ‘ನಾನು ಕೆಟ್ಟ ಸೈಕ್ ನನ್ಮಗ ಆಗ್ಬಿಡ್ತೀನಿ’ ಎಂದ ಅವಿನಾಶ್‌!

Bigg Boss 13: ‘ನಾನು ಸೈಕ್ ನನ್ಮಗ’; ಕಿರಣ್‌ಗೆ ಅವಿನಾಶ್ ಖಡಕ್ ವಾರ್ನಿಂಗ್!

BBK 13: ಬಿಗ್‌ ಬಾಸ್‌ ಸ್ಪರ್ಧಿಗಳ ಮಧ್ಯೆ ದಿನದಿಂದ ದಿನಕ್ಕೆ ಜಗಳ ತಾರಕಕ್ಕೇರುತ್ತಿದೆ. ಆಸನ ಹಂಚಿಕೆಯ ವಿಚಾರವಾಗಿ ಶುರುವಾದ ಮಾತಿನ ಚಕಮಕಿಯು ಕಿರಣ್ ಶಾಸ್ತ್ರಿ ಹಾಗೂ ಪ್ರಥಮಾ ಪ್ರಸಾದ್ ನಡುವೆ ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ. ಕಿರಣ್ ಅವರ ವಾದ ಕಂಡು ರೊಚ್ಚಿಗೆದ್ದ ಅವಿನಾಶ್ ಶಠಮರ್ಷಣ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ʻಸ್ಪಾರ್ಕ್ʼ ಸಿನಿಮಾದಲ್ಲಿ ವಕೀಲೆಯಾಗಿ ಸ್ಯಾಂಡಲ್‌ವುಡ್‌ಗೆ ಮರಳಿದ 'ಜಾಕಿ' ಭಾವನಾ; ಸೆ.25ಕ್ಕೆ ಬೆಳ್ಳಿತೆರೆ‌ಗೆ ಎಂಟ್ರಿ!

‘ಸ್ಪಾರ್ಕ್’ ಚಿತ್ರದ ಮೂಲಕ ವಕೀಲೆಯಾಗಿ ಭಾವನಾ ಮೆನನ್ ಕಮ್‌ಬ್ಯಾಕ್

Spark Kannada movie: ಬಹುಭಾಷಾ ನಟಿ ಭಾವನಾ ಮೆನನ್ ಮತ್ತೆ ಸ್ಯಾಂಡಲ್‌ವುಡ್ ಅಂಗಳಕ್ಕೆ ಪ್ರವೇಶಿಸಿದ್ದಾರೆ. ʻಸ್ಪಾರ್ಕ್‌ʼ ಸಿನಿಮಾದಲ್ಲಿ ಪತ್ರಕರ್ತನ ಪರ ಹೋರಾಡುವ ಧೀಮಂತ ವಕೀಲೆ ವೈದೇಹಿ ಪಾತ್ರದಲ್ಲಿ ಅವರು ನಟಿಸಿದ್ದಾರೆ. ನಿರಂಜನ್ ಸುಧೀಂದ್ರ ನಾಯಕನಾಗಿ, ನೆನಪಿರಲಿ ಪ್ರೇಮ್ ಖಳನಾಯಕನಾಗಿ ನಟಿಸಿರುವ ಈ ಚಿತ್ರವು ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ.

ಆರಂಭವಾದ ಮೊದಲ ವಾರದಲ್ಲೇ ಜಿಯೋಹಾಟ್‌ಸ್ಟಾರ್‌ನಲ್ಲಿ ನಂ.1 ಪಟ್ಟಕ್ಕೇರಿದ 'ಬಿಗ್ ಬಾಸ್ ಕನ್ನಡ 13' : ಒಟಿಟಿಯಲ್ಲೂ ʻಕಿಚ್ಚʼ ಸುದೀಪ್ ಗತ್ತು!

ಜಿಯೋಹಾಟ್‌ಸ್ಟಾರ್‌ನಲ್ಲಿ ನಂ.1 ಪಟ್ಟಕ್ಕೇರಿದ ‘ಬಿಗ್ ಬಾಸ್ ಕನ್ನಡ 13’

Bigg Boss Kannada 13: ಬಿಗ್‌ ಬಾಸ್‌ ಮೊದಲ ವಾರದಲ್ಲೇ ಜಿಯೋಹಾಟ್‌ಸ್ಟಾರ್‌ನ ಕನ್ನಡ ವಿಭಾಗದಲ್ಲಿ ಅಗ್ರಸ್ಥಾನ ಪಡೆದು ಭರ್ಜರಿ ಡಿಜಿಟಲ್ ಕ್ರಾಂತಿ ಸೃಷ್ಟಿಸಿದೆ. ಕಿಚ್ಚ ಸುದೀಪ್ ಸಾರಥ್ಯದ ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಾಣದ ಈ ರಿಯಾಲಿಟಿ ಶೋ, ದಕ್ಷಿಣ ಭಾರತದ ನಾಲ್ಕು ಭಾಷೆಗಳ ಪೈಪೋಟಿಯ ನಡುವೆಯೂ ಕನ್ನಡಿಗರನ್ನು ಮೋಡಿ ಮಾಡಿ ದಾಖಲೆಯ ವೀಕ್ಷಣೆ ಗಳಿಸಿದೆ.

Toxic Movie: ಚಿಂತೆಯಲ್ಲಿ ಕೂರಬೇಡಿ! ʼಟಾಕ್ಸಿಕ್ʼ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್‌ ಹೇಳಿದ್ದೇನು?

ಟಾಕ್ಸಿಕ್ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್‌ ಹೇಳಿದ್ದೇನು?

Toxic Movie: ಟಾಕ್ಸಿಕ್ ಸಿನಿಮಾದ ಡಬ್ಬಿಂಗ್ ಸೂಪರ್ ವೈಸರ್ ಹಾಗೂ ನಟ ಜೈದೇವ್ ಮೋಹನ್ ಅವರು ಖಾಸಗಿ ಮಾಧ್ಯ,ವೊಂದರ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಬಾಕ್ಸ್‌ಆಫೀಸ್‌ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಆದರೂ ನಟ ಯಶ್ ಅವರು ಸಿನಿಮಾದ ಸೋಲನ್ನು ಧೈರ್ಯದಿಂದ ಸ್ವೀಕರಿಸಿದ್ದಾರೆ.

Loading...