ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ಕೊನೆಗೂ 'ಕಾಗೆ ಬಂಗಾರ' ಸಿನಿಮಾಗೆ ಮುಹೂರ್ತ ನೆರವೇರಿಸಿದ 'ದುನಿಯಾ' ಸೂರಿ; ಅಚ್ಚರಿ ಮೂಡಿಸಿದ ಕಲಾವಿದರ ಆಯ್ಕೆ!

ಕೊನೆಗೂ 'ಕಾಗೆ ಬಂಗಾರ' ಆರಂಭಿಸಿದ 'ದುನಿಯಾ' ಸೂರಿ; ನಾಯಕಿಯಾಗಿ ರಿತನ್ಯಾ!

Kaage Bangara movie: ನಿರ್ದೇಶಕ ದುನಿಯಾ ಸೂರಿ ಕೊನೆಗೂ ʻಕಾಗೆ ಬಂಗಾರʼ ಸಿನಿಮಾದ ಚಿತ್ರೀಕರಣವನ್ನು ಆರಂಭಿಸಿದ್ದಾರೆ. ‘ಬ್ಯಾಡ್ ಮ್ಯಾನರ್ಸ್‌’ ಬಳಿಕ ಅವರ ಯಾವ ಸಿನಿಮಾವು ಸೆಟ್ಟೇರಿರಲಿಲ್ಲ. ಹಾಗಾಗಿ, ಸೂರಿ ಅವರ ಹೊಸ ಸಿನಿಮಾಕ್ಕಾಗಿ ಕಾದುಕುಳಿತಿದ್ದರು.

10 ತಿಂಗಳ ಹಸುಗೂಸನ್ನು ಗಂಡನ ಮಡಿಲಿನಲ್ಲಿಟ್ಟು ತೆಲುಗು ‘ಬಿಗ್ ಬಾಸ್‌ 10’ ಶೋಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟ ಕನ್ನಡತಿ ಚೈತ್ರಾ ರೈ!

10 ತಿಂಗಳ ಮಗುವನ್ನು ಬಿಟ್ಟು ಬಿಗ್ ಬಾಸ್‌ಗೆ ಹೋದ ಕನ್ನಡ ನಟಿ ಚೈತ್ರಾ ರೈ

ಕನ್ನಡ ನಟಿ ಚೈತ್ರಾ ರೈ ಅವರು ತೆಲುಗು ಬಿಗ್ ಬಾಸ್ 10ನೇ ಆವೃತ್ತಿಗೆ 6ನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಕೇವಲ 10 ತಿಂಗಳ ಹಸುಗೂಸನ್ನು ಪತಿಗೆ ಸುಪರ್ದಿಗೆ ನೀಡಿ, ರಿಯಾಲಿಟಿ ಶೋ ಪ್ರವೇಶಿಸಿದ ಅವರ ನಡೆ ಪ್ರೇಕ್ಷಕರ ಗಮನಸೆಳೆಯುತ್ತಿದೆ. 2ನೇ ಹೆರಿಗೆಯ ನಂತರ ಮೂರು ತಿಂಗಳಲ್ಲಿ 22 ಕೆಜಿ ತೂಕ ಇಳಿಸಿಕೊಂಡಿದ್ದ ಚೈತ್ರಾ ಎಲ್ಲರ ಗಮನಸೆಳೆದಿದ್ದರು.

AI ಕ್ರಾಂತಿಯ ನಡುವೆ ನಟನೆಯ ಶಿಸ್ತು ಹುಡುಕಿಕೊಂಡು ರಂಗಭೂಮಿಗೆ ಮರಳಿದ ʻಅಮೃತಧಾರೆʼ ನಟ ರಾಜೇಶ್‌ ನಟರಂಗ

ʻಮಳೆ ನಿಲ್ಲುವವರೆಗೆ’ ನಾಟಕದ ಮೂಲಕ ರಂಗಭೂಮಿಗೆ ಮರಳಿದ ರಾಜೇಶ್‌ ನಟರಂಗ

'ಮಳೆ ನಿಲ್ಲುವವರೆಗೆ' ನಾಟಕದ ಮೂಲಕ ಖ್ಯಾತ ನಟ ರಾಜೇಶ್‌ ನಟರಂಗ ಅವರು ರಂಗಭೂಮಿಗೆ ಮರಳುತ್ತಿದ್ದು, ಕಳೆದುಹೋದ ನಟನಾ ಶಿಸ್ತನ್ನು ಮರಳಿ ಪಡೆಯಲು ಸಜ್ಜಾಗಿದ್ದಾರೆ. ಕೃತಕ ಬುದ್ಧಿಮತ್ತೆಯ ಆತಂಕ ಹಾಗೂ ಓಟಿಟಿ ಗೊಂದಲಗಳ ನಡುವೆ ನೈಜ ಕಲೆಯನ್ನು ಹುಡುಕುವ ಆಶಯ ವ್ಯಕ್ತಪಡಿಸಿದ್ದಾರೆ. ಶರತ್ ಪರ್ವತವಾಣಿ ನಿರ್ದೇಶನದ ಈ ನಾಟಕವು ಸೆಪ್ಟೆಂಬರ್ 17ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ.

Bigg Boss Kannada 13: ವಿಮಾನದಲ್ಲೇ ಶುರುವಾಯ್ತು ಜಟಾಪಟಿ; ಮಾಡರ್ನ್ ಮಹಾಕವಿಗೆ ಟಕ್ಕರ್ ಕೊಟ್ಟ ಗಗನ್ ಚಿನ್ನಪ್ಪ!

BBK 13: ವಿಮಾನದಲ್ಲೇ ಮಹಾಕವಿ ಮಂಜನಿಗೆ ಗಗನ್ ಚಿನ್ನಪ್ಪ ಖಡಕ್ ವಾರ್ನಿಂಗ್!

ಬಿಗ್‌ ಬಾಸ್‌ ಕನ್ನಡ 13ರ ಸ್ಪರ್ಧಿಗಳು ವಿಮಾನದಲ್ಲೇ ತೀವ್ರ ವಾಕ್ಸಮರಕ್ಕೆ ಆರಂಭಿಸಿದ್ದಾರೆ. ಮನೆ ಪ್ರವೇಶಿಸುವ ಮುನ್ನವೇ ನೀಡಲಾದ ಸೂಟ್‌ಕೇಸ್ ಟಾಸ್ಕ್ ಹದಿನಾರು ಸ್ಪರ್ಧಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾಡರ್ನ್ ಮಹಾಕವಿ ಮಂಜನ ಅತಿಯಾದ ಮಾತಿಗೆ ಗಗನ್ ಚಿನ್ನಪ್ಪ, ಜಗ್ಗಾ ಮಮ್ಮಿ ಹಾಗೂ ತಾಂಡವ್ ರಾಮ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ತೆಲುಗು 'ಬಿಗ್‌ ಬಾಸ್‌' ಶೋಗೆ ಕಾಲಿಟ್ಟ ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾ ನಟ ನಿಹಾರ್‌ ಮುಕೇಶ್; ನಿರೂಪಕ ನಾಗಾರ್ಜುನ ಕೇಳಿದ್ದೇನು?

ತೆಲುಗು ಬಿಗ್‌ ಬಾಸ್‌ನಲ್ಲಿ 'ತೀರ್ಥರೂಪ ತಂದೆಯವರಿಗೆ' ಹೀರೋ ನಿಹಾರ್‌ ಮುಕೇಶ್

ತೆಲುಗು ಬಿಗ್ ಬಾಸ್ 10ನೇ ಆವೃತ್ತಿಗೆ ಅಧಿಕೃತ ಸ್ಪರ್ಧಿಯಾಗಿ ಪಾದಾರ್ಪಣೆ ಕನ್ನಡ ನಟ ನಿಹಾರ್ ಮುಕೇಶ್‌ ಮಾಡಿದ್ದಾರೆ. ತೆಲುಗು ಧಾರಾವಾಹಿಗಳಲ್ಲಿ ಮಿಂಚಿ, ಕನ್ನಡದ 'ತೀರ್ಥರೂಪ ತಂದೆಯವರಿಗೆ' ಸಿನಿಮಾದಲ್ಲಿ ನಾಯಕನಾಗಿ ನಟಿಸಿರುವ ನಿಹಾರ್ ಮುಕೇಶ್‌, ಇದೀಗ ಬಿಗ್‌ ಬಾಸ್‌ ಮನೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ.

BBK 13: ಮನೆಯೊಳಗಿರುವ ಸ್ಪರ್ಧಿಗಳಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್‌ ಯಾರು? ಇನ್‌ಸ್ಟಾಗ್ರಾಮ್‌ನಲ್ಲಿ ಯಾರಿಗೆ ಜಾಸ್ತಿ ಫಾಲೋವರ್ಸ್?

BBK 13ರ ಸ್ಪರ್ಧಿಗಳಲ್ಲಿ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್ ಯಾರಿಗೆ ಜಾಸ್ತಿ?

`ಕಿಚ್ಚ' ಸುದೀಪ್‌ ಅವರ ಸಾರಥ್ಯದಲ್ಲಿ 'ಬಿಗ್‌ ಬಾಸ್‌ ಕನ್ನಡ ಸೀಸನ್‌ 13' ಆರಂಭವಾಗಿದೆ. ಒಟ್ಟು 16 ಮಂದಿ ಸ್ಪರ್ಧಿಗಳು ಮನೆಯೊಳಗೆ ಪ್ರವೇಶಿಸಿದ್ದಾರೆ. ಇವರಲ್ಲಿ 12 ಮಂದಿ ಸೆಲೆಬ್ರಿಟಿಗಳಾಗಿದ್ದರೆ, 4 ಮಂದಿ 'ಅಗ್ನಿಪರೀಕ್ಷೆ'ಯನ್ನು ದಾಟಿ ಬಿಗ್‌ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅಂದಹಾಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಇವರಿಗೆ ಎಷ್ಟು ಫಾಲೋವರ್ಸ್‌ ಇದ್ದಾರೆ? ಯಾರಿಗೆ ಹೆಚ್ಚು ಮತ್ತು ಯಾರಿಗೆ ಕಡಿಮೆ ಫಾಲೋವರ್ಸ್‌ ಇದ್ದಾರೆ? ಸದ್ಯದ ಮಟ್ಟಿಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಪೈಕಿ ಅತಿ ಹೆಚ್ಚು ಫಾಲೋವರ್ಸ್‌ ಹೊಂದಿರುವುದು ಸೌಂದರ್ಯ ಶೆಟ್ಟಿ. ಉಳಿದ ಸ್ಪರ್ಧಿಗಳ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ವಿವರ ಇಲ್ಲಿದೆ.

Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್‌ ಅಪ್‌ಡೇಟ್

Panchayat Season 5: ಈ ಸರಣಿ ಮತ್ತು ಅದರ ನಾಲ್ಕು ಸೀಸನ್‌ಗಳನ್ನು ಅಭಿಮಾನಿಗಳ ನೆಚ್ಚಿನವು ಎಂದು ಪರಿಗಣಿಸಲಾಗಿದೆ ಮತ್ತು ವೀಕ್ಷಕರು ಪಂಚಾಯತ್ 5 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ . ಫುಲೇರಾ ಗ್ರಾಮ ಪಂಚಾಯತ್‌ನ ರೋಮಾಂಚಕ ಮತ್ತು ಹಾಸ್ಯಮಯ ಕಥೆಯನ್ನು ಹೇಳುವ ಪಂಚಾಯತ್ 5 (Panchayat) ರ OTT ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಲಾಗಿದ್ದು, ಇದು OTT ಯಲ್ಲಿ ಯಾವಾಗ ಮತ್ತು ಎಲ್ಲಿ ಸ್ಟ್ರೀಮ್ ಆಗುತ್ತದೆ ಎಂಬುದನ್ನು ಬಹಿರಂಗಪಡಿಸಲಾಗಿದೆ.

Bigg Boss Tamil 10: ಟಾಕ್ಸಿಕ್ ತಂಡದಿಂದ ಕಾನೂನು ನೋಟಿಸ್ ಪಡೆದಿದ್ದ ಯೂಟ್ಯೂಬರ್ ಬಿಗ್‌ ಬಾಸ್‌ ಇಂದ ಔಟ್‌!

ಟಾಕ್ಸಿಕ್‌ನಿಂದ ನೋಟಿಸ್ ಪಡೆದಿದ್ದ ಯೂಟ್ಯೂಬರ್ ಬಿಗ್‌ ಬಾಸ್‌ ಇಂದ ಔಟ್‌

Bigg Boss Tamil 10: ಯೂಟ್ಯೂಬರ್ ಪ್ರಶಾಂತ್ ರಂಗಸ್ವಾಮಿ (Prashanth ranagaswamy) ಅವರಿಗೆ ನೋಟಿಸ್‌ ನೀಡಿತ್ತು. ಬೆಂಗಳೂರಿನ ನ್ಯಾಯಾಲಯವು ಚಿತ್ರದ ಬಗ್ಗೆ ಸುಳ್ಳು ಅಥವಾ ಮಾನಹಾನಿಕರ ವಿಷಯಗಳ ಪ್ರಕಟಣೆ ಅಥವಾ ಪ್ರಸಾರವನ್ನು ನಿರ್ಬಂಧಿಸುವ ಮಧ್ಯಂತರ ಆದೇಶವನ್ನು ನೀಡಿದ ನಂತರ ಈ ನೋಟಿಸ್ (Notice) ಕಳುಹಿಸಲಾಗಿತ್ತು. ಆದರೀಗ ಒಂದು ಹೊಸ ಸುದ್ದಿ ಔಟ್‌ ಆಗಿದೆ. ಬಿಗ್ ಬಾಸ್ ತಮಿಳು 10 ರ ಸ್ಪರ್ಧಿ ಪ್ರಶಾಂತ್ ರಂಗಸ್ವಾಮಿ ಅವರನ್ನು ಮನೆಗೆ ಪ್ರವೇಶಿಸುವ ಮೊದಲೇ ಹೊರಹಾಕಲಾಗಿದೆ ಎಂದು ವರದಿಯಾಗಿದೆ.

ʻಬಿಗ್ ಬಾಸ್ʼ ಮನೆಗೆ ‘ಮಾಡರ್ನ್ ಮಹಾಕವಿ ಮಂಜ’ ಎಂಟ್ರಿ; ಅಗ್ನಿಪರೀಕ್ಷೆಯ ಜ್ಯೂರಿಗಳಿಂದ ಸಿಕ್ತು ಬಂಪರ್‌ ಆಫರ್!‌

ಬಿಗ್ ಬಾಸ್ ಮನೆಗೆ ಮಾಡರ್ನ್ ಮಹಾಕವಿ ಮಂಜ ಎಂಟ್ರಿ; ಈ ಆಫರ್‌ ಕೊಟ್ಟಿದ್ಯಾರು?

ಬಿಗ್‌ ಬಾಸ್‌ ಕನ್ನಡ ಸೀಸನ್ 13ಕ್ಕೆ 16ನೇ ಸ್ಪರ್ಧಿಯಾಗಿ ಮಾಡರ್ನ್ ಮಹಾಕವಿ ಮಂಜ ಪ್ರವೇಶಿಸಿದ್ದಾರೆ. ಅಗ್ನಿಪರೀಕ್ಷೆಯ ತೀರ್ಪುಗಾರರಾಗಿದ್ದ ನಟಿ ಶ್ರುತಿ ನೇತೃತ್ವದ ತಂಡ ಇವರಿಗೆ ಈ ಮಹತ್ವದ ಅವಕಾಶ ನೀಡಿದೆ. ಮಾತೆತ್ತಿದರೆ ಪ್ರಾಸಬದ್ಧವಾಗಿ ಮಾತನಾಡುವ, ಅರ್ಧ ತಲೆ ಬೋಳಿಸಿಕೊಂಡು ಗಮನ ಸೆಳೆದ ಈ ಪ್ರತಿಭೆ, ಜನಸಾಮಾನ್ಯರ ಕೋಟಾದಡಿ ನಾಲ್ಕನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ.

Bigg Boss Kannada 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ನೇರವಾಗಿ ದೊಡ್ಮನೆಗೆ ಬಂದ ಗಿನ್ನೆಸ್ ದಾಖಲೆ ವೀರ ಧನುಷ್!

ಅಗ್ನಿಪರೀಕ್ಷೆಯಲ್ಲಿ ಗೆದ್ದು ʻಬಿಗ್‌ ಬಾಸ್‌ʼ ಮನೆಗೆ ಬಲಗಾಲಿಟ್ಟು ಬಂದ ಧನುಷ್

Bigg Boss Kannada 13: ಬಿಗ್‌ ಬಾಸ್‌ ಅಂಗಳಕ್ಕೆ ಅಗ್ನಿಪರೀಕ್ಷೆಯ ಕಠಿಣ ಸವಾಲುಗಳನ್ನು ಗೆದ್ದು ಗಿನ್ನೆಸ್ ದಾಖಲೆ ವೀರ ಧನುಷ್ ಮಂಜುನಾಥ್ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಸಮಾಜದಿಂದ ಎದುರಿಸಿದ ಅವಮಾನ, ಬಡತನ ಮತ್ತು ತಿರಸ್ಕಾರಗಳ ನಡುವೆಯೂ ಛಲ ಬಿಡದೆ ಹೋರಾಡಿದ ಧನುಷ್, ಈ ಬಾರಿ ಗೆಲ್ಲುವ ಹಠ ತೊಟ್ಟಿದ್ದಾರೆ.

ʻಬಿಗ್ ಬಾಸ್ʼ ಮನೆಗೆ ಎಂಟ್ರಿ ಕೊಟ್ಟ ನಟ ತಾಂಡವ್ ರಾಮ್: ʻಆಕ್ಷನ್‌ಗೆ ರಿಯಾಕ್ಷನ್ ಗ್ಯಾರಂಟಿʼ ಎಂದ ʻಜೋಡಿ ಹಕ್ಕಿʼ ಹೀರೋ!

ʻಸಾಧಿಸುವವರೆಗೆ ಮದುವೆ ಆಗಲ್ಲʼ ಎನ್ನುತ್ತ ಬಿಗ್‌ಬಾಸ್‌ಗೆ ಬಂದ ತಾಂಡವ್ ರಾಮ್‌

ʻಬಿಗ್ ಬಾಸ್ʼ ಮನೆಗೆ ನಟ ತಾಂಡವ್‌ ರಾಮ್‌ ಅವರು ಎಂಟ್ರಿ ಕೊಟ್ಟಿದ್ದಾರೆ. ಹಾಸನದಿಂದ ಬಂದು ಕಿರುತೆರೆ, ಹಿರಿತೆರೆ ಹಾಗೂ ನಿರ್ಮಾಣ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಇವರು, ವೈಯಕ್ತಿಕ ಬದುಕಿನ ಕಷ್ಟಗಳು ಮತ್ತು ಜೈಲುವಾಸದ ವಿವಾದಗಳನ್ನು ಎದುರಿಸಿ ಬಂದಿದ್ದಾರೆ.

ಕಿರುತೆರೆಯಿಂದ ʻಬಿಗ್‌ ಬಾಸ್‌ʼ ಅಂಗಳಕ್ಕೆ ನಟಿ ಆಸಿಯಾ ಫಿರ್ದೋಸ್‌ ಎಂಟ್ರಿ: ನೆಗೆಟಿವ್ ರೋಲ್‌ಗೆ ಆಡಿಷನ್ ಕೊಟ್ಟು ನಾಯಕಿಯಾದ ಛಲಗಾತಿಯ ರೋಚಕ ಪಯಣ!

BBK 13: ʻಬಿಗ್‌ ಬಾಸ್‌' ಮನೆಗೆ ಬಂದ ದಾವಣಗೆರೆ ಬೆಡಗಿ ಆಸಿಯಾ ಫಿರ್ದೋಸ್

BBK 13: ಬಿಗ್‌ ಬಾಸ್ ಕನ್ನಡದ ಅಂಗಳಕ್ಕೆ ನಟಿ ಆಸಿಯಾ ಫಿರ್ದೋಸ್‌ ಅಧಿಕೃತವಾಗಿ ಎಂಟ್ರಿ ಕೊಟ್ಟಿದ್ದಾರೆ. ಆರ್ಥೊಡಾಕ್ಸ್ ಕುಟುಂಬದ ವಿರೋಧದ ನಡುವೆಯೂ ತಾಯಿಯ ಬೆಂಬಲದಿಂದ ನಟನಾ ರಂಗಕ್ಕೆ ಕಾಲಿಟ್ಟ ದಾವಣಗೆರೆಯ ಈ ಪ್ರತಿಭೆ, ನೂರಾರು ತಿರಸ್ಕಾರಗಳನ್ನು ಎದುರಿಸಿದ್ದರು.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ʻಬಿಗ್‌ ಬಾಸ್‌ʼ ವಿಮಾನ ಏರಿದ ಕಿರಣ್‌ ಶಾಸ್ತ್ರಿ; ʻಕಾಮನ್‌ ಮ್ಯಾನ್‌ʼ ಕ್ಯಾಂಪ್‌ನಿಂದ ದೊಡ್ಮನೆಗೆ ಬಂದ ಮೊದಲ ಸ್ಪರ್ಧಿ!

ಅಗ್ನಿಪರೀಕ್ಷೆ ಗೆದ್ದು ಬಿಗ್‌ ಬಾಸ್‌ಗೆ ಬಂದ ಕಾಮನ್ ಮ್ಯಾನ್ ಕಿರಣ್ ಶಾಸ್ತ್ರಿ

ಬಿಗ್‌ ಬಾಸ್‌ ಕನ್ನಡ ಸೀಸನ್ 13ರ ಅಖಾಡಕ್ಕೆ ಸಾಮಾನ್ಯ ವರ್ಗದ ಪ್ರತಿನಿಧಿಯಾಗಿ ಕಿರಣ್ ಶಾಸ್ತ್ರಿ ಒಂಬತ್ತನೇ ಸ್ಪರ್ಧಿಯಾಗಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ‘ಅಗ್ನಿಪರೀಕ್ಷೆ’ ವೇದಿಕೆಯಲ್ಲಿ ಲಕ್ಷಾಂತರ ಆಕಾಂಕ್ಷಿಗಳನ್ನು ಹಿಂದಿಕ್ಕಿ, ಎದುರಾಳಿಗಳ ಕುತಂತ್ರಗಳ ನಡುವೆಯೂ ಜನತೆಯ ಅತೀವ ಪ್ರೀತಿ ಮತ್ತು ಮತಗಳಿಂದ ಮುಖ್ಯ ಮನೆಗೆ ಆಯ್ಕೆಯಾಗಿದ್ದಾರೆ.

BBK 13: ʻಬಿಗ್ ಬಾಸ್ʼ ಮನೆಗೆ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ ಎಂಟ್ರಿ: ‘ಸಿಂಪತಿ ಬೇಡವೇ ಬೇಡ’ ಎಂದ ನಟ!

Bigg Boss ಮನೆಗೆ 3ನೇ ಸ್ಪರ್ಧಿಯಾಗಿ ನಟ ಅವಿನಾಶ್ ಷಠಮರ್ಶನ್ ಎಂಟ್ರಿ

ಬಿಗ್‌ ಬಾಸ್‌ ಮನೆಗೆ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ ಪ್ರವೇಶಿಸುವ ಮೂಲಕ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ನಟರಾಗಿ ಗುರುತಿಸಿಕೊಂಡಿರುವ ಇವರು ಮೂರನೇ ಸ್ಪರ್ಧಿಯಾಗಿ ಆಗಮಿಸಿ, ಜನರ ಅನಗತ್ಯ ಅನುಕಂಪ ತಮಗೆ ಬೇಡವೆಂದು ಎಂದು ಖಡಕ್ಕಾಗಿ ಹೇಳಿದ್ದಾರೆ.

BBK 13: ʻಬಿಗ್‌ ಬಾಸ್‌ʼ ಕನ್ನಡ 13ಕ್ಕೆ ‘ಲವ್‌ ಮಾಕ್‌ಟೇಲ್‌ 3’ ಖ್ಯಾತಿಯ ‘ಜಗ್ಗಾ ಮಮ್ಮಿ’ ಎಂಟ್ರಿ; ಮೊದಲ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟ ಜಗದೀಶ್!

ʻಬಿಗ್ ಬಾಸ್ʼ ಕನ್ನಡ 13 ಶೋಗೆ 'ಜಗ್ಗಾ ಮಮ್ಮಿ' ಅಚ್ಚರಿಯ ಎಂಟ್ರಿ!

ಮಂಡ್ಯ ಮೂಲದ ಜಗದೀಶ್ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಅಕ್ಕನ ಮನೆ ಅಡುಗೆಯವನಾಗಿದ್ದ ಇವರು 'ಲವ್ ಮಾಕ್‌ಟೇಲ್ 3' ಮೂಲಕ ಮನೆಮಾತಾಗಿದ್ದರು. ಸಾಲ ತೀರಿಸಲು ಬಂದಿರುವುದಾಗಿ ಹೇಳಿದ ಜಗದೀಶ್, ಟಾಸ್ಕ್ ಆಡಿ ಟ್ರೋಫಿ ಗೆಲ್ಲುವ ಪಣತೊಟ್ಟಿದ್ದಾರೆ. ಕಿಚ್ಚ ಸುದೀಪ್ ಎದುರು ತಮ್ಮ ಕಷ್ಟದ ಬದುಕು ತೆರೆದಿಟ್ಟಿದ್ದಾರೆ.

ʻಕಿಚ್ಚʼ ಸುದೀಪ್‌ ಸಾರಥ್ಯದಲ್ಲಿ ‘ಬಿಗ್‌ ಬಾಸ್ ಕನ್ನಡ 13’ ಆರಂಭ; ಈ ಸಲದ ದೊಡ್ಮನೆಯ ವಿನ್ಯಾಸ ಹೇಗಿದೆ? ಏನೇನ್‌ ಸ್ಪೆಷಾಲಿಟಿ ಇದೆ?

ʻಬಿಗ್ ಬಾಸ್ 13ʼಕ್ಕೆ ಗ್ರ್ಯಾಂಡ್ ಓಪನಿಂಗ್‌; ಈ ಸಲದ ದೊಡ್ಮನೆ ಹೇಗಿದೆ?

Bigg Boss Kannada 13: ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್‌ ಬಾಸ್‌ 13 ಅದ್ಧೂರಿಯಾಗಿ ಚಾಲನೆ ಪಡೆದಿದೆ. ಈ ಬಾರಿ ಇಡೀ ಮನೆಯನ್ನು ಜಾಗತಿಕ ಪ್ರವಾಸಿ ತಾಣಗಳು ಮತ್ತು ಏವಿಯೇಷನ್ ಶೈಲಿಯಲ್ಲಿ ವಿನೂತನವಾಗಿ ಸಿಂಗರಿಸಲಾಗಿದೆ. ವಿಮಾನದ ಕಾಕ್‌ಪಿಟ್ ಪ್ರವೇಶದ್ವಾರ, ಕನ್ನಡದ ಸೊಗಡಿನ ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮಾದರಿಯ ಜೈಲು ಇನ್ನಿತರ ಸ್ಪೆಷಾಲಿಟಿಗಳು ಮನೆಯೊಳಗೆ ಇವೆ.

‌ʻಬಿಗ್‌ ಬಾಸ್‌ʼ ಕನ್ನಡ 13ರ ಮನೆಯೊಳಗೆ ಕಾಲಿಡುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಕಾಮನ್‌ ಮ್ಯಾನ್‌ ಕೆಟಗರಿಗೆ ಬಂಪರ್ ಚಾನ್ಸ್!

ʻಬಿಗ್ ಬಾಸ್ʼ ಕನ್ನಡ 13 ಶುರು; ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವ್ರೇ ನೋಡಿ!

ಕಿಚ್ಚ ಸುದೀಪ್ ಸಾರಥ್ಯದಲ್ಲಿ ‌ʻಬಿಗ್‌ ಬಾಸ್‌ʼ ಕನ್ನಡ 13 ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ. ಈ ಬಾರಿಯ ವಿಶೇಷವೆಂದರೆ ಸೀಸನ್ 5ರ ಮಾದರಿಯಲ್ಲಿ ಕಾಮನ್ ಮ್ಯಾನ್ ಕೋಟಾದಡಿ ನಾಲ್ವರು ಸಾಮಾನ್ಯ ಪ್ರತಿಭೆಗಳು ಅಗ್ನಿಪರೀಕ್ಷೆ ದಾಟಿ ನೇರವಾಗಿ ದೊಡ್ಮನೆಗೆ ಲಗ್ಗೆ ಇಡಲಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಪ್ರಮುಖ ನಟ-ನಟಿಯರು ಸೇರಿ ಒಟ್ಟು 18 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆ ಒಳಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

‌BBK 13: ಗಂಭೀರ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ‌ʻಬಿಗ್‌ ಬಾಸ್‌ʼ ವೇದಿಕೆಗೆ ಎಂಟ್ರಿ: 2ನೇ ಇನ್ನಿಂಗ್ಸ್‌ ಆರಂಭಿಸಿದ ನಟಿ ಸಂಗೀತಾ ಭಟ್‌!

BBK 13: ʻಬಿಗ್ ಬಾಸ್‌ʼ ಕನ್ನಡ 13ರ ಮೂಲಕ ಸಂಗೀತಾ ಭಟ್ 2ನೇ ಇನ್ನಿಂಗ್ಸ್‌!

ಬಿಗ್‌ ಬಾಸ್‌ ಕನ್ನಡ ಸೀಸನ್ 13ರ ಅಖಾಡಕ್ಕೆ ಆರನೇ ಸ್ಪರ್ಧಿಯಾಗಿ ನಟಿ ಸಂಗೀತಾ ಭಟ್ ಪಾದಾರ್ಪಣೆ ಮಾಡಿದ್ದಾರೆ. ಗರ್ಭಕೋಶದಲ್ಲಿದ್ದ ಗಂಭೀರ ಟ್ಯೂಮರ್ ಸಮಸ್ಯೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದಿದ್ದ ನಟಿ ಸಂಗೀತಾ, ಪತಿಯ ಬೆಂಬಲದಿಂದ ಚೇತರಿಸಿಕೊಂಡಿದ್ದಾರೆ. ದೈಹಿಕ ಹಾಗೂ ಮಾನಸಿಕ ನೋವುಗಳನ್ನು ಧೈರ್ಯದಿಂದ ಹಿಮ್ಮೆಟ್ಟಿಸಿ, ತಮ್ಮ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಲು ಹೆಜ್ಜೆಯಿಟ್ಟಿದ್ದಾರೆ.

BBK 13: 'ಓಸಿಡಿಯಲ್ಲಿ ಪಿಎಚ್‌ಡಿ ಮಾಡಿಬಿಟ್ಟಿದ್ದಾಳೆ..'; 'ಬಿಗ್‌ ಬಾಸ್‌ʼ ಮನೆಗೆ ಬಂದ ಸಂಗೀತಾ ಭಟ್‌ ಬಗ್ಗೆ ಪತಿ ಸುದರ್ಶನ್‌ ಹೀಗಾ ಹೇಳೋದು?

BBK 13: ʻಬಿಗ್‌ ಬಾಸ್‌ 13' ಶೋಗೆ ಸಂಗೀತಾ ಭಟ್‌ - ಕಾವ್ಯಾ ಗೌಡ ಎಂಟ್ರಿ

‘ಬಿಗ್ ಬಾಸ್ ಕನ್ನಡ’ ಸೀಸನ್ 13 ಅದ್ದೂರಿಯಾಗಿ ಆರಂಭವಾಗುವ ಮುನ್ನವೇ ಪ್ರೋಮೋಗಳು ಸಂಚಲನ ಮೂಡಿಸಿವೆ. ನಟಿ ಸಂಗೀತಾ ಭಟ್ ಹಾಗೂ ಕಾವ್ಯಾ ಗೌಡ ಸ್ಪರ್ಧಿಗಳಾಗಿ ಪ್ರವೇಶ ಪಡೆದಿದ್ದಾರೆ. ಪತ್ನಿಯ ಓಸಿಡಿ ಗೀಳನ್ನು ತಮಾಷೆಯಾಗಿ ಪ್ರಸ್ತಾಪಿಸಿದ ಸುದರ್ಶನ್ ರಂಗಪ್ರಸಾದ್, ರೀಲ್ ಹಾಗೂ ರಿಯಲ್ ಪತ್ನಿಯರನ್ನು ಒಟ್ಟಿಗೆ ಕಂಡು ದಂಗಾಗಿದ್ದಾರೆ.

Actress Ramya: ಕೇಸ್‌ ಹಿಂಪಡೆಯಿರಿ ಎಂದು ರಮ್ಯಾ ಕಾಲಿಗೆ ಬಿದ್ದ ದರ್ಶನ್‌ ಫ್ಯಾನ್ಸ್‌! ನಟಿಯ ಖಡಕ್‌ ರಿಪ್ಲೈ ಇದು

ಕೇಸ್‌ ಹಿಂಪಡೆಯಿರಿ ಎಂದು ರಮ್ಯಾ ಕಾಲಿಗೆ ಬಿದ್ದ ದರ್ಶನ್‌ ಫ್ಯಾನ್ಸ್‌!

Actress Ramya: ತಮ್ಮನ್ನು ಕ್ಷಮಿಸುವಂತೆ ಆರೋಪಿಗಳು ಹಾಗೂ ಅವರ ಕುಟುಂಬದವರು ಪರಿಪರಿಯಾಗಿ ಬೇಡಿಕೊಂಡರೂ ಕೂಡ ರಮ್ಯಾ ಅವರು ಮನಸ್ಸು ಬದಲಾಯಿಸಿಲ್ಲ. ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ (Social Media) ಅತ್ಯಂತ ಕೆಟ್ಟ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂದೇಶಗಳನ್ನು ರವಾನಿಸಲಾಗಿತ್ತು.

Kannada New Movie: ಅಂಜನ್ ನಟನೆಯ "ಹುಲಿಬೀರ" ಹಾಡುಗಳು ಬಿಡುಗಡೆ

Kannada New Movie: ಅಂಜನ್ ನಟನೆಯ "ಹುಲಿಬೀರ" ಹಾಡುಗಳು ಬಿಡುಗಡೆ

Kannada New Movie: ಮದರಂಗಿ ಮಲ್ಲಿಕಾರ್ಜುನ ಅವರ ನಿರ್ದೇಶನದ ಮತ್ತೊಂದು ಚಿತ್ರ ಹುಲಿಬೀರ (Hulibeera). ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ಮಾಡಿರುವ ಅದೇ ಸೊಗಡಿನ ಚಿತ್ರವಿದು. ಯರ‍್ರಾಬಿರ‍್ರಿ ಖ್ಯಾತಿಯ ನಟ ಅಂಜನ್ ಚಿತ್ರದ ನಾಯಕನಾಗಿದ್ದು, ಚೈತ್ರ ತೋಟದ, ವನು ಪಾಟೀಲ್ (Vnu patil) ಹಾಗೂ ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ.

Shine Shetty: ಶೈನ್ ಶೆಟ್ಟಿ ನಟನೆಯ'ಶಂಕರಾಭರಣ' ಸಿನಿಮಾದ ಟೀಸರ್ ರಿಲೀಸ್

ಶೈನ್ ಶೆಟ್ಟಿ ನಟನೆಯ'ಶಂಕರಾಭರಣ' ಸಿನಿಮಾದ ಟೀಸರ್ ರಿಲೀಸ್

Shine Shetty: ಶೈನ್ ಶೆಟ್ಟಿ ಈ ಸಿನಿಮಾದಲ್ಲಿ ಬಸ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಡಿದ್ದು, ಶಂಕರಾಭರಣ ಬಸ್‌ನ ಚಾಲಕನಾಗಿ ಜೀವನ ಸಾಗಿರುವ ಒಬ್ಬ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಶೈನ್ ಮಿಂಚಿದ್ದಾರೆ. ಶೈನ್ ಶಂಕರಾಭರಣ ಬಸ್ ಚಾಲಕನಾದ್ರೆ ಸಿನಿಮಾದ ಸಾರಥ್ಯವನ್ನು ಸುಮಂತ್ ಭಟ್ ವಹಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸುಮಂತ್ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವುದು ವಿಶೇಷ.

Epic Trailer: ರಶ್ಮಿಕಾ  ಮೈದುನನ 'ಎಪಿಕ್' ಸಿನಿಮಾ ಟ್ರೈಲರ್‌ ಔಟ್‌

ರಶ್ಮಿಕಾ ಮೈದುನನ 'ಎಪಿಕ್' ಸಿನಿಮಾ ಟ್ರೈಲರ್‌ ಔಟ್‌

Epic Trailer: ಇತ್ತೀಚಿನ ಪ್ರೇಮಕಥೆ 'ಎಪಿಕ್: ಫಸ್ಟ್ ಸೆಮಿಸ್ಟರ್' (Epic Firt semister) ಚಿತ್ರದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. '90 ರ ದಶಕದ ಮಿಡಲ್ ಕ್ಲಾಸ್ ಬಯೋಪಿಕ್' ಸರಣಿಯಿಂದ ಪ್ರಭಾವಿತರಾದ ನಿರ್ದೇಶಕ ಆದಿತ್ಯ ಹಾಸನ್ ನಿರ್ದೇಶಿಸಿದ ಈ ಚಿತ್ರದ ಟ್ರೇಲರ್ ಯುವ ಭಾವನೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ‘ಎಪಿಕ್- ಫಸ್ಟ್ ಸೆಮಿಸ್ಟರ್’ ಸಿನಿಮಾದ ಟ್ರೇಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದರು.

ಜೂ. ಎನ್‌ಟಿಆರ್‌–ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಡ್ರ್ಯಾಗನ್’ ಚಿತ್ರಕ್ಕೆ ಬಾಲಿವುಡ್‌ನ ಇಬ್ಬರು ಘಟಾನುಘಟಿ ಕಲಾವಿದರು ಎಂಟ್ರಿ!

Jr. NTR: ‘ಡ್ರ್ಯಾಗನ್’ ಅಖಾಡಕ್ಕೆ ಬಾಲಿವುಡ್ ಘಟಾನುಘಟಿ ಕಲಾವಿದರು ಎಂಟ್ರಿ

ಜೂ. ಎನ್‌ಟಿಆರ್‌–ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಡ್ರ್ಯಾಗನ್’ ಚಿತ್ರಕ್ಕೆ ಬಾಲಿವುಡ್ ತಾರೆಯರಾದ ಶಾಹಿದ್ ಕಪೂರ್ ಹಾಗೂ ಆಲಿಯಾ ಭಟ್ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರದಲ್ಲಿ ಈಗಾಗಲೇ ಅನಿಲ್ ಕಪೂರ್ ಕೂಡ ಇದ್ದಾರೆ. 1960ರ ದಶಕದ ಅಫೀಮು ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ಎನ್‌ಟಿಆರ್‌ ‘ಲೂಗರ್’ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Loading...