ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೊಳ್ಳೆ ಕಾಟ; ʻಏನಾದ್ರೂ ಪರಿಹಾರ ಮಾಡಿʼ ಎಂಬ ಮನವಿಗೆ ಅಲೋಕ್​ಕುಮಾರ್ ಏನಂದ್ರು?

ಜೈಲಿನಲ್ಲಿ ದರ್ಶನ್‌ಗೆ ಸೊಳ್ಳೆ ಕಾಟ; ಪರಿಹಾರ ಕೇಳಿದ್ದಕ್ಕೆ ADGP ಏನಂದ್ರು?

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಸೊಳ್ಳೆ ಸಮಸ್ಯೆಗೆ ಪರಿಹಾರ ನೀಡುವಂತೆ ಎಡಿಜಿಪಿ ಅಲೋಕ್ ಕುಮಾರ್ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಮ್ಯಾನ್ಯುಯಲ್ ನಿಯಮದಲ್ಲಿರುವುದಷ್ಟೇ ಒದಗಿಸಲು ಸಾಧ್ಯ ಎಂದು ಖಡಕ್ ಆಗಿ ತಿಳಿಸಿದ್ದಾರೆ.

36ನೇ ವಯಸ್ಸಿಗೆ ಪ್ರಾಣಬಿಟ್ಟ ಹಾಲಿವುಡ್‌ ನಟಿ ಹೇಡನ್ ಪ್ಯಾನೆಟಿಯರ್; ಈ ಸಾವಿಗೆ ಕಾರಣವೇನು?

36ನೇ ವಯಸ್ಸಿಗೆ ಕಣ್ಮುಚ್ಚಿದ ಹಾಲಿವುಡ್ ನಟಿ ಹೇಡನ್ ಪ್ಯಾನೆಟಿಯರ್!

ಹಾಲಿವುಡ್‌ನ ಜನಪ್ರಿಯ ನಟಿ ಹೇಡನ್ ಪ್ಯಾನೆಟಿಯರ್ (36) ಅಕಾಲಿಕವಾಗಿ ನಿಧನರಾಗಿದ್ದಾರೆ. 'ಹೀರೋಸ್', 'ನ್ಯಾಶ್‌ವಿಲ್' ಸರಣಿಗಳಿಂದ ಜಾಗತಿಕ ಖ್ಯಾತಿ ಗಳಿಸಿದ್ದ ಅವರು ವೈಯಕ್ತಿಕ ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದರು. ಸಹೋದರನ ಅಕಾಲಿಕ ಸಾವಿನ ನೋವಿನ ನಡುವೆಯೂ ಚೇತರಿಸಿಕೊಳ್ಳುತ್ತಿದ್ದ ತಾರೆಯ ಹಠಾತ್ ನಿಧನಕ್ಕೆ ಅಧಿಕೃತ ಕಾರಣ ಇನ್ನಷ್ಟೇ ಬಹಿರಂಗವಾಗಬೇಕಿದೆ.

Toxic Movie: 'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ 'ರಾಕಿ ಭಾಯ್‌' ಯಶ್ ಖಡಕ್ ಉತ್ತರ!

'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ ಯಶ್ ಖಡಕ್ ಉತ್ತರ!

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 'ತಬಾಹಿ' ಹಾಡಿನ ಟೀಕೆಗಳಿಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ್ದಾರೆ. ಈ ಹಾಡು ಕಾಂಡೋಮ್ ಜಾಹೀರಾತಿನಂತಿದೆ ಎಂದವರಿಗೆ ಚಾಟಿ ಬೀಸಿದ ಯಶ್, ದೃಶ್ಯಗಳಲ್ಲಿ ಎಲ್ಲಿಯೂ ಅಶ್ಲೀಲತೆಯ ಗೆರೆ ದಾಟಿಲ್ಲ ಎಂದಿದ್ದಾರೆ.

ʻಬಿಗ್ ಬಾಸ್ ಕನ್ನಡ ಸೀಸನ್ 13ʼ: ಸಾಮಾನ್ಯರ 'ಅಗ್ನಿಪರೀಕ್ಷೆ' ಮೊದಲ ಸುತ್ತಿನಲ್ಲಿ ನಾಲ್ವರು ಪಾಸ್; 'ಸ್ಟಾರ್ ಕಂಟೆಸ್ಟೆಂಟ್' ಎನಿಸಿಕೊಂಡ ಪೂರ್ಣಿಮಾ

‌ʻಬಿಗ್ ಬಾಸ್ ಕನ್ನಡ 13ʼ ಅಗ್ನಿಪರೀಕ್ಷೆ ಸುತ್ತಿನ ಅಸಲಿ ತೀರ್ಪುಗಾರರು ಯಾರು?

Bigg Boss Kannada Season 13: ಬಿಗ್‌ ಬಾಸ್‌ ಕನ್ನಡ 'ಅಗ್ನಿಪರೀಕ್ಷೆ' ಮೊದಲ ಸುತ್ತಿನಲ್ಲಿ ನಾಲ್ವರು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಮಂಡ್ಯದ ಮೆಕ್ಯಾನಿಕ್ ಜಿ.ಕೆ. ಪೂರ್ಣಿಮಾ ಅವರು 'ಸ್ಟಾರ್ ಕಂಟೆಸ್ಟೆಂಟ್' ಆಗಿ ಹೊರಹೊಮ್ಮಿದ್ದಾರೆ. ಇನ್ನುಳಿದ ಆ ಮೂವರು ಸ್ಪರ್ಧಿಗಳು ಯಾರು?

Ananya Raj : ಟಾಲಿವುಡ್‌ ನಟಿ ಅನನ್ಯಾ ರಾಜ್‌ ನಿಧನ;  27ರ ನಟಿಗೆ ಏನಾಯಿತು?

ಟಾಲಿವುಡ್‌ ನಟಿ ಅನನ್ಯಾ ರಾಜ್‌ ನಿಧನ; 27ರ ನಟಿಗೆ ಏನಾಯಿತು?

Ananya Raj : ಅನನ್ಯಾ ರಾಜ್ (Ananya Raj) 27 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಕುಟುಂಬ ದೃಢಪಡಿಸಿದೆ. ನಟಿ ಒಂದು ವರ್ಷಕ್ಕೂ ಹೆಚ್ಚು ಕಾಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಜುಲೈ 15 ರಂದು ನಿಧನರಾದರು ಎಂದು ಬಹಿರಂಗಪಡಿಸಿದ್ದಾರೆ. ಅನನ್ಯಾ ಅವರ ಕುಟುಂಬವು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದ್ದಿಯನ್ನು ಹಂಚಿಕೊಂಡಿದೆ.

Yash: ಜೀವನದಲ್ಲಿ ಭಯ ಎಂದರೇನು ಎಂಬುದೇ ಗೊತ್ತಿಲ್ಲ! ರಣವೀರ್ ಸಿಂಗ್ ಸಿನಿಮಾ ಕ್ಲ್ಯಾಶ್‌ ಬಗ್ಗೆ ಯಶ್‌ ಖಡಕ್‌ ರಿಪ್ಲೈ

ರಣವೀರ್ ಸಿಂಗ್ ಸಿನಿಮಾ ಕ್ಲ್ಯಾಶ್‌ ಬಗ್ಗೆ ಯಶ್‌ ಖಡಕ್‌ ರಿಪ್ಲೈ

Yash: ಯಶ್ ಪ್ರಕಾರ, ಒಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ ನಂತರ, ಅದೇ ಸಮಯದಲ್ಲಿ ಮತ್ತೊಂದು ಚಿತ್ರ ಬರುತ್ತಿದೆ ಎಂದರೆ ನಿರ್ಮಾಪಕರು ಉದ್ದೇಶಪೂರ್ವಕವಾಗಿ ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ ಎಂದರ್ಥವಲ್ಲ. ಕೆಜಿಎಫ್ 2 ಚಿತ್ರಮಂದಿರಗಳಿಗೆ ಬಂದಾಗ ಅಮೀರ್ ಖಾನ್ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದರು ಮತ್ತು ಜನರು ಕೆಜಿಎಫ್‌ಗೆ ಭಯಪಡಬೇಕಾಗುತ್ತದೆ ಎಂದು ಹೇಳಿದ್ದರು ಎಂದು ರಜತ್ ಶರ್ಮಾ ನೆನಪಿಸಿಕೊಂಡಾಗ ಯಶ್ ಒಪ್ಪಲಿಲ್ಲ.

Antara Banerjee: ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ; ನಟಿ ಅಂತರ ಬ್ಯಾನರ್ಜಿ ಅರೆಸ್ಟ್‌: ಬಾಂದ್ರಾ-ಗಂಗಾನಗರ್‌ ಅರಾವಳಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗಿದ್ದೇನು?

ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ; ನಟಿ ಅಂತರ ಬ್ಯಾನರ್ಜಿ ಅರೆಸ್ಟ್‌!

Antara Banerjee: ಹಿಂದಿ ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಹೆಸರುವಾಸಿಯಾದ ರೂಪದರ್ಶಿ ಮತ್ತು ನಟಿ ಅಂತರಾ ಬ್ಯಾನರ್ಜಿ (Antara Banerjee) ಈಗ ಸುದ್ದಿಗಳಲ್ಲಿದ್ದಾರೆ. ಸ್ಲೀಪರ್ ಟಿಕೆಟ್ ಬುಕ್ ಮಾಡಿದ ನಟಿ ಕಮ್ ಮಾಡೆಲ್ ಅಂತರಾ ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ನಟಿ ಅರೆಸ್ಟ್ಆ ಗುತ್ತಿರಲಿಲ್ಲ. ನಕಲಿ ನಾಟಕ ಮಾಡಿ ಕೋಲಾಹಲ ಎಬ್ಬಿಸಲು ಯತ್ನಿಸಿದ ನಟಿಯನ್ನು ರೈಲ್ವೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬ್ಲಾಕ್‌ ಬಸ್ಟರ್‌ ʻಧುರಂಧರ್‌ʼ ಬಳಿಕ ಹೊಸ ಸಿನಿಮಾ ಆರಂಭಿಸಿದ ರಣವೀರ್‌ ಸಿಂಗ್;‌ ಈ ಚಿತ್ರಕ್ಕೆ ಮಲಯಾಳಂನ ಸ್ಟಾರ್‌ ಡೈರೆಕ್ಟರ್‌ ಪುತ್ರಿ ನಾಯಕಿ!

'ಧುರಂಧರ್' ಹಿಟ್‌ ಆದ ಬಳಿಕ ಹೊಸ ಸಿನಿಮಾ ಶುರುಮಾಡಿದ ರಣವೀರ್‌ ಸಿಂಗ್

ಬ್ಲಾಕ್‌ಬಸ್ಟರ್ 'ಧುರಂಧರ್' ಸರಣಿಯ ಭರ್ಜರಿ ಯಶಸ್ಸಿನ ಬಳಿಕ ನಟ ರಣ್‌ವೀರ್ ಸಿಂಗ್ ಅಭಿನಯದ 'ಪ್ರಳಯ್' ಆ್ಯಕ್ಷನ್-ಸರ್ವೈವಲ್ ಥ್ರಿಲ್ಲರ್ ಚಿತ್ರೀಕರಣ ಮುಂಬೈನಲ್ಲಿ ಆರಂಭವಾಗಿದೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಪುತ್ರಿ ಕಲ್ಯಾಣಿ ಪ್ರಿಯದರ್ಶನ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

Ramayana trailer: ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ ಬೆಸ್ಟ್;  ಟ್ರೇಲರ್‌ಗೆ ಪ್ರೇಕ್ಷಕರು ಫಿದಾ

ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ ಬೆಸ್ಟ್; ಟ್ರೇಲರ್‌ಗೆ ಪ್ರೇಕ್ಷಕರು ಫಿದಾ

Ramayana trailer : ‘ಕಳೆದ ಎರಡು ವರ್ಷಗಳಲ್ಲಿ ಬಂದ ನಮ್ಮ ದೇಶದ ಸಿನಿಮಾಗಳಿಗಿಂತ ಇದು ಹೇಗೆ ಇಷ್ಟೊಂದು ಅದ್ಭುತವಾಗಿ ಮೂಡಿಬಂದಿದೆ’ ಎಂದು ಪ್ರಶ್ನಿಸಿದ್ದಾರೆ. ‘ನಮ್ಮ ನಿರ್ದೇಶಕರಿಗೆ ಸ್ವದೇಶಿ ಪುರಾಣಗಳ ಮೇಲೆ ಗೌರವವಿಲ್ಲ, ಆದ್ದರಿಂದಲೇ ನಮಗೆ ಇಂತಹ ದೃಶ್ಯ ವೈಭವದ ಕಾವ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.ಈ ಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಚೀನಾದಲ್ಲೂ (Cheena) ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಶಶಿಕುಮಾರ್‌ ಪುತ್ರ ಆದಿತ್ಯ ಅಭಿನಯದ ‘ರಾಶಿ’ ಚಿತ್ರದ ಹಾಡಿಗೆ ಬಾಲಿವುಡ್‌ ಗಾಯಕ ಅರ್ಮಾನ್‌ ಮಲಿಕ್‌ ಧ್ವನಿ; ‘ಮೊದಲ ಪ್ರೀತಿ’ ಸಾಂಗ್‌ಗೆ ಉತ್ತಮ ರೆಸ್ಪಾನ್ಸ್‌

ಶಶಿಕುಮಾರ್ ಪುತ್ರನ 'ರಾಶಿ' ಚಿತ್ರದ ಹಾಡಿಗೆ ಅರ್ಮಾನ್ ಮಲಿಕ್ ಧ್ವನಿ

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಟನೆಯ 'ರಾಶಿ' ಚಿತ್ರದ 'ಮೊದಲ ಪ್ರೀತಿ' ಮೆಲೋಡಿ ಹಾಡು ಬಿಡುಗಡೆಯಾಗಿದೆ. ಬಾಲಿವುಡ್ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಧ್ವನಿ ನೀಡಿರುವ ಈ ಹಾಡಿಗೆ ಭೂಷಣ್ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ.

Yash:'ಕೆಜಿಎಫ್‌ಗೂ ಮುಂಚೆ ಯಶ್ ಯಾರು?ʼ; ವಿವಾದ ಸೃಷ್ಟಿಸಿದ್ದ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಹೇಳಿಕೆಗೆ ʻರಾಕಿಂಗ್‌ ಸ್ಟಾರ್‌ʼ ಖಡಕ್‌ ರಿಪ್ಲೈ!

ವಿವಾದ ಸೃಷ್ಟಿಸಿದ್ದ ಅಲ್ಲು ಅರವಿಂದ್ ಹೇಳಿಕೆಗೆ ಯಶ್‌ ಖಡಕ್‌ ರಿಪ್ಲೈ!

Yash:ಯಶ್ ಅವರ ಕುರಿತು ತೆಲುಗು ಚಿತ್ರರಂಗದ 'ಸ್ಟಾರ್' ನಿರ್ಮಾಪಕ ಅಲ್ಲು ಅರವಿಂದ್ (Allu arvanid) ಅವರು ಹೇಳಿದ ಮಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕೆಜಿಎಫ್ ಬರುವ ಮೊದಲು ಯಶ್ ಯಾರು? ಆತ ಎಷ್ಟು ದೊಡ್ಡ ಹೀರೋ? ಕಂಟೆಂಟ್‌ ಮತ್ತು ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಅದು ಹಿಟ್ ಆಯಿತು. ಇದೊಂದು ಉದಾಹರಣೆ ಅಷ್ಟೇ ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಇದೀಗ ಈ ಹಳೆಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ ಯಶ್‌.

Toxic intimate scenes: 'ಟಾಕ್ಸಿಕ್‌' ಹಸಿಬಿಸಿ ದೃಶ್ಯ ಕಂಡು ರಾಧಿಕಾ ಅನ್‌ಕಂಫರ್ಟ್‌ ಆಗಿರ್ತಾಳೆ; ಪತ್ನಿ ಬಗ್ಗೆ ಯಶ್‌ ಮುಕ್ತ ಮಾತು

ಟಾಕ್ಸಿಕ್‌ ಹಸಿಬಿಸಿ ದೃಶ್ಯ ಕಂಡು ರಾಧಿಕಾ ಅನ್‌ಕಂಫರ್ಟ್‌ ಆಗಿರ್ತಾಳೆ; ಯಶ್‌

Toxic intimate scenes: ಟಾಕ್ಸಿಕ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಫ್ಯಾನ್ಸ್‌ . ಆದಾಗ್ಯೂ, ಚಿತ್ರದ ಟ್ರೇಲರ್ ವಿವಾದಕ್ಕೆ ಕಾರಣವಾಯಿತು, ಹಲವಾರು ವೀಕ್ಷಕರು ಯಶ್ ಮತ್ತು ಇತರ ನಟರನ್ನು ಒಳಗೊಂಡ ಕಾಮಪ್ರಚೋದಕ ದೃಶ್ಯಗಳನ್ನು ಟೀಕಿಸಿದರು. ಇತ್ತೀಚಿನ ಸಂವಾದವೊಂದರಲ್ಲಿ, ಯಶ್ ತಮ್ಮ ಪತ್ನಿ ಮತ್ತು ಮಾಜಿ ನಟಿ ರಾಧಿಕಾ ಪಂಡಿತ್ ಈ ಇಂಟಿಮೇಟ್‌ ದೃಶ್ಯಗಳ ಬಗ್ಗೆ ಅವರ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದರು. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಜೊತೆ ಮಾತನಾಡಿದ ಯಶ್, ಇತರ ಯಾವುದೇ ಸಂಗಾತಿಯಂತೆ ತನ್ನ ಪತ್ನಿಯೂ ಸಹ ಅನ್‌ಕಫರ್ಟ್‌ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ.

ಎಷ್ಟೇ ದುಡ್ಡು ಕೊಟ್ಟರೂ ಪಾನ್‌ ಮಸಾಲ ಜಾಹೀರಾತುಗಳನ್ನು ನಟ ಸನ್ನಿ ಡಿಯೋಲ್‌ ಒಪ್ಪಿಕೊಳ್ಳೋದಿಲ್ಲ! ಇದರ ಹಿಂದಿದೆ ಬಲವಾದ ಕಾರಣ

ನಟ ಸನ್ನಿ ಡಿಯೋಲ್‌ ಪಾನ್‌ ಮಸಾಲ ಜಾಹೀರಾತುಗಳನ್ನು ಒಪ್ಪದಿರಲು ಕಾರಣವೇನು?

ಬಾಲಿವುಡ್ ನಟ ಸನ್ನಿ ಡಿಯೋಲ್‌ ಅವರು ತಂಬಾಕು ಮತ್ತು ಪಾನ್ ಮಸಾಲ ಉತ್ಪನ್ನಗಳ ಜಾಹೀರಾತುಗಳಲ್ಲಿ ಎಂದಿಗೂ ನಟಿಸುವುದಿಲ್ಲವೆಂದು ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದ್ದಾರೆ. ಸಮಾಜಕ್ಕೆ ಮಾರಕವಾದ ವಸ್ತುಗಳ ಪ್ರಚಾರಕ್ಕೆ ತಮ್ಮ ಮನಸ್ಸಾಕ್ಷಿ ಒಪ್ಪುವುದಿಲ್ಲವೆಂದು ಹಲವು ಆಫರ್‌ಗಳನ್ನು ತಿರಸ್ಕರಿಸಿದ್ದಾರೆ.

ʻಕರುಪ್ಪುʼ ಬೆನ್ನಲ್ಲೇ ನಟ ಸೂರ್ಯಗೆ ಮತ್ತೊಂದು ಜಾಕ್‌ಪಾಟ್;‌ ಬಾಕ್ಸ್‌ ಆಫೀಸ್‌ನಲ್ಲಿ ಶುರುವಾಯ್ತು ʻವಿಶ್ವನಾಥ್‌ & ಸನ್ಸ್‌ʼ ಜಾದೂ

Vishwanath & Sons: ʻಕರುಪ್ಪುʼ ನಂತರ ಸೂರ್ಯಗೆ ಮತ್ತೊಂದು ಗೆಲುವು ಫಿಕ್ಸ್

ನಟ ಸೂರ್ಯ ಹಾಗೂ ಮಮಿತಾ ಬೈಜು ಅಭಿನಯದ, ವೆಂಕಿ ಅಟ್ಲೂರಿ ನಿರ್ದೇಶನದ ‘ವಿಶ್ವನಾಥ್ ಅಂಡ್ ಸನ್ಸ್’ ಸಿನಿಮಾ ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಜಾಗತಿಕವಾಗಿ 75 ಕೋಟಿ ರೂಪಾಯಿ ಗಳಿಸಿ ಭರ್ಜರಿ ಯಶಸ್ಸು ಕಾಣುತ್ತಾ ದಾಪುಗಾಲಿಟ್ಟಿದೆ.

ʻರಾಮಾಯಣʼ ಚಿತ್ರದ ಬಜೆಟ್‌ 4 ಸಾವಿರ ಕೋಟಿನಾ? ಕೊನೆಗೂ ʻರಾವಣʼ ಯಶ್‌ ಕಡೆಯಿಂದಲೇ ಸಿಕ್ತು ಫುಲ್‌ ಕ್ಲಾರಿಟಿ!

ʻರಾಮಾಯಣʼ ಬಜೆಟ್ 4 ಸಾವಿರ ಕೋಟಿನಾ?; ʻರಾವಣʼ ಯಶ್ ಕೊಟ್ರು ಖಡಕ್ ಕ್ಲಾರಿಟಿ!

'ಆಪ್ ಕೀ ಅದಾಲತ್' ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ನಟ ಯಶ್, 'ರಾಮಾಯಣ' ಚಿತ್ರದ 4,000 ಕೋಟಿ ರೂಪಾಯಿ ಮೊತ್ತವು ಕೇವಲ ನಿರ್ಮಾಣ ವೆಚ್ಚವಲ್ಲ, ಅದರಲ್ಲಿ ಹಾಲಿವುಡ್ ಮಟ್ಟದ ಜಾಗತಿಕ ಪ್ರಚಾರ ವೆಚ್ಚವೂ ಸೇರಿದೆ ಎಂದಿದ್ದಾರೆ.

ರಶ್ಮಿಕಾ ಮಂದಣ್ಣ ನೀಡಿದ್ದ 'ಶೋ-ಆಫ್' ಕಾಮೆಂಟ್‌ಗೆ ಪ್ರಬುದ್ಧವಾಗಿ ಉತ್ತರಿಸಿದ ʻರಾಕಿ ಭಾಯ್‌ʼ ಯಶ್; ಆದ್ರೆ ಟಾಂಗ್‌ ಕೊಟ್ಟಿದ್ದು ಯಾರಿಗೆ?

ಅಂದು ರಶ್ಮಿಕಾ ನೀಡಿದ 'ಶೋ-ಆಫ್' ಹೇಳಿಕೆಗೆ ನಟ ಯಶ್ ಕೊಟ್ಟ ಉತ್ತರವೇನು?

ಖ್ಯಾತ ಪತ್ರಕರ್ತ ರಜತ್ ಶರ್ಮಾ ಅವರ ‘ಆಪ್ ಕೀ ಅದಾಲತ್’ ಶೋನಲ್ಲಿ ಭಾಗವಹಿಸಿದ್ದ ರಾಕಿಂಗ್ ಸ್ಟಾರ್ ಯಶ್, ಈ ಹಿಂದೆ ರಶ್ಮಿಕಾ ಮಂದಣ್ಣ ತಮ್ಮ ಬಗ್ಗೆ ನೀಡಿದ್ದ ‘ಶೋ-ಆಫ್’ ಹೇಳಿಕೆಗೆ ಅತ್ಯಂತ ಪ್ರಬುದ್ಧವಾಗಿ ಉತ್ತರಿಸಿದ್ದಾರೆ. ಇನ್ನೊಬ್ಬರ ಅಭಿಪ್ರಾಯ ತಮ್ಮ ವ್ಯಕ್ತಿತ್ವವನ್ನು ನಿರ್ಧರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಕ್ವಾಟ್ಲೆ ಕಿಚನ್ ಸೀಸನ್ 2’ ವಿನ್ನರ್ ಆಗಿ ಹೊರಹೊಮ್ಮಿದ ಸೂರಜ್ ಸಿಂಗ್; ರನ್ನರ್ ಅಪ್ ಪಟ್ಟ ಪಡೆದ ನಟ ಭವಿಶ್, ಗೆದ್ದವರಿಗೆ ಸಿಕ್ಕ ಬಹುಮಾನವೇನು?

ʻಕ್ವಾಟ್ಲೆ ಕಿಚನ್ 2ʼ ಚಾಂಪಿಯನ್ ಸೂರಜ್ ಸಿಂಗ್; ಭವಿಶ್‌ಗೆ ರನ್ನರ್ ಅಪ್ ಪಟ್ಟ

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಕುಕ್ಕಿಂಗ್ ರಿಯಾಲಿಟಿ ಶೋ 'ಕ್ವಾಟ್ಲೆ ಕಿಚನ್ ಸೀಸನ್ 2' ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್ ಬಾಸ್ ಖ್ಯಾತಿಯ ಸೂರಜ್ ಸಿಂಗ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ನಟ ಭವಿಶ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ.

ವಯಸ್ಸಿನಲ್ಲಿ ತಮಗಿಂತ 23 ವರ್ಷ ಚಿಕ್ಕ ಹುಡುಗಿ ಜೊತೆ ಪ್ರೀತಿ; ‌ಹೊಸ ಗರ್ಲ್‌ಫ್ರೆಂಡ್‌ ಶುಭ್ರಾ ಶೆಟ್ಟಿ ಜತೆಗಿನ ಲವ್ ಸೀಕ್ರೆಟ್ ಬಿಚ್ಚಿಟ್ಟ ಅನುರಾಗ್ ಕಶ್ಯಪ್

ʻ‌ಮದುವೆ ಮೇಲೆ ನಂಬಿಕೆ ಇಲ್ಲʼ; ಹೊಸ ಗರ್ಲ್‌ಫ್ರೆಂಡ್‌ ಬಗ್ಗೆ ಅನುರಾಗ್ ಮಾತು!

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ಶುಭ್ರಾ ಶೆಟ್ಟಿ ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದು, ಇತ್ತೀಚೆಗೆ ತಮ್ಮ ಸುದೀರ್ಘ ಬಾಂಧವ್ಯದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಇಬ್ಬರ ನಡುವೆ ಇಪ್ಪತ್ಮೂರು ವರ್ಷಗಳ ವಯಸ್ಸಿನ ಅಂತರವಿದ್ದರೂ ಪರಸ್ಪರ ಗೌರವದಿಂದ ಬದುಕುತ್ತಿದ್ದಾರೆ.

Chennai Love Story:  OTTಗೆ ಬರಲಿದೆ `ಚೆನ್ನೈ ಲವ್ ಸ್ಟೋರಿ'; ಸ್ಟ್ರೀಮಿಂಗ್‌ ಎಲ್ಲಿ?

OTTಗೆ ಬರಲಿದೆ `ಚೆನ್ನೈ ಲವ್ ಸ್ಟೋರಿ'; ಸ್ಟ್ರೀಮಿಂಗ್‌ ಎಲ್ಲಿ?

Chennai Love Story: ಭಾರಿ ನಿರೀಕ್ಷೆಗಳ ನಡುವೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚೆನ್ನೈ ಲವ್ ಸ್ಟೋರಿ ಚಿತ್ರವು ಆ ನಿರೀಕ್ಷೆಗಳನ್ನು ಪೂರೈಸಿತು ಮತ್ತು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್ ಯಶಸ್ಸನ್ನು ಕಂಡಿತು. ಸುಮಾರು ರೂ. 16 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವಾದ್ಯಂತ ರೂ. 60 ಕೋಟಿಯವರೆಗೆ ಸಂಗ್ರಹಿಸಿತು. ಕಿರಣ್ ಅಬ್ಬಾವರಾಮ್ ಅವರ ವ್ಯಾಪ್ತಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದ ಚಿತ್ರ ಇದು.

ಹಿಂದೂ ಹಬ್ಬದಲ್ಲಿ ಭಾಗಿಯಾಗಿದ್ದಕ್ಕೆ ʻಕಾಫೀರ್‌ʼ ಎಂದು ಟೀಕೆ! ಗಳಗಳನೆ ಅತ್ತ ತೆಲುಗು ನಟಿ ಫಾರಿಯಾ ಅಬ್ದುಲ್ಲಾ

ಬೋನಾಲು ವೇಳೆ ಕಳಶ ಹೊತ್ತಿದ್ದಕ್ಕೆ ಕಾಫಿರ್ ಪಟ್ಟ; ಕಣ್ಣೀರಿಟ್ಟ ನಟಿ ಫಾರಿಯಾ!

ತೆಲುಗು ಚಿತ್ರರಂಗದ ಖ್ಯಾತ ನಟಿ ಫಾರಿಯಾ ಅಬ್ದುಲ್ಲಾ ತೆಲಂಗಾಣದ ಸಾಂಪ್ರದಾಯಿಕ ‘ಬೋನಾಲು’ ಉತ್ಸವದಲ್ಲಿ ಕಳಶ ಹೊತ್ತು ನೃತ್ಯ ಮಾಡಿದ್ದಕ್ಕೆ ಕೆಲ ಮುಸ್ಲಿಮರಿಂದ ‘ಕಾಫಿರ್’ ಎಂದು ತೀವ್ರ ನಿಂದನೆಗೆ ಗುರಿಯಾಗಿದ್ದಾರೆ. ಈ ಧಾರ್ಮಿಕ ದ್ವೇಷದ ವಿರುದ್ಧ ಕಣ್ಣೀರಿಡುತ್ತಲೇ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದಾರೆ ನಟಿ ಫಾರಿಯಾ.

ʻನಾಚಿಕೆ ಇಲ್ಲದವರು, ಮಗಳ ವಯಸ್ಸಿನ ಹುಡುಗಿ ಜೊತೆ ಓಡಾಡ್ತಿದ್ದಾರೆʼ; ಪತ್ನಿಯ ಕೀಳುಮಟ್ಟದ ಲೇವಡಿಗೆ ನಟ ಗೋವಿಂದಾ ಖಡಕ್‌ ತಿರುಗೇಟು!

ಪತ್ನಿ ಸುನೀತಾ ನೀಡಿದ ಕೀಳುಮಟ್ಟದ ಟೀಕೆಗೆ ನಟ ಗೋವಿಂದಾ ಖಡಕ್ ತಿರುಗೇಟು!

ಬಾಲಿವುಡ್ ನಟ ಗೋವಿಂದಾ ಮತ್ತು ಪತ್ನಿ ಸುನೀತಾ ಅಹುಜಾ ನಡುವಿನ ಜಟಾಪಟಿ ತೀವ್ರಗೊಂಡಿದೆ. ನಟಿ ಕೋಮಲ್ ರಾಣಿ ಜೊತೆ ಕಾಣಿಸಿಕೊಂಡಿದ್ದಕ್ಕೆ ಪತ್ನಿ ಲೇವಡಿ ಮಾಡಿದ್ದಕ್ಕೆ ಗೋವಿಂದಾ ತಿರುಗೇಟು ನೀಡಿದ್ದಾರೆ. ತಮ್ಮ ವೃತ್ತಿಪರ ಕೆಲಸಗಳಿಗೆ ಅಡ್ಡಿಪಡಿಸದೆ ಮಿತಿಯಲ್ಲಿದ್ದರೆ ಒಳಿತು ಎಂದು ಎಚ್ಚರಿಸಿದ್ದಾರೆ.

'ಎ ಡೇಟ್‌' ಚಿತ್ರದ ರ‍್ಯಾಪ್ ಶೈಲಿಯ 'ಬ್ಯಾಡ್ ಗೈ' ಆಂಥಮ್ ಸಾಂಗ್ ಬಿಡುಗಡೆ; ತೆರೆಗೆ ಬರಲು ಸಜ್ಜಾದ ಹೊಸಬರ ಪ್ರಯೋಗಾತ್ಮಕ ಸಿನಿಮಾ

ಹೊಸಬರ 'ಎ ಡೇಟ್‌' ಚಿತ್ರದ 'ಬ್ಯಾಡ್ ಗೈ' ಆಂಥಮ್ ಸಾಂಗ್ ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಪ್ರಯೋಗಶೀಲ ಕಥಾಹಂದರ ಹೊಂದಿರುವ ‘ಎ ಡೇಟ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಬೆಂಗಳೂರಿನ ಹಿನ್ನೆಲೆಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಇಬ್ಬರು ಅಪರಿಚಿತರ ಒಂದು ದಿನದ ಪಯಣವನ್ನು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯಂದು ಯೋಧರ ಜೊತೆ ಕಾಲ ಕಳೆದ ಸೈಫ್ ಅಲಿ ಖಾನ್; ʻಭಾರತೀಯ ಸೇನೆ ಸದಾ ನಮ್ಮನ್ನು ಕಾಪಾಡುತ್ತದೆ ಅಂತ ನನ್ ಮಕ್ಕಳಿಗೆ ಹೇಳ್ತಿರ್ತಿನಿʼ ಎಂದ ನಟ

80ನೇ ಸ್ವಾತಂತ್ರ್ಯ ದಿನಾಚರಣೆಯಂದು ಯೋಧರೊಂದಿಗೆ ಕಾಲ ಕಳೆದ ಸೈಫ್ ಅಲಿ ಖಾನ್

80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ಜಮ್ಮು-ಕಾಶ್ಮೀರದ ಉರಿ ಗಡಿ ನಿಯಂತ್ರಣ ರೇಖೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಮಯ ಕಳೆದಿದ್ದಾರೆ. ಯೋಧರೊಂದಿಗೆ ಭೋಜನ ಸವಿದು ಕ್ರಿಕೆಟ್ ಆಡಿದ ಅವರು, ಜಾಗತಿಕ ಸಂಘರ್ಷಗಳಿಂದ ಭಯಪಡುವ ತಮ್ಮ ಮಕ್ಕಳಿಗೆ ಭಾರತೀಯ ಸೇನೆಯೇ ರಕ್ಷಾಕವಚ ಎಂದು ಧೈರ್ಯ ತುಂಬುವುದಾಗಿ ತಿಳಿಸಿದರು.

ಸ್ಯಾಂಡಲ್‌ವುಡ್‌ಗೆ ಮರಳಿದ ʻಕೆಜಿಎಫ್‌ʼ ಚೆಲುವೆ ಶ್ರೀನಿಧಿ ಶೆಟ್ಟಿ; ಸದ್ದಿಲ್ಲದೇ ಹೊಸ ಸಿನಿಮಾ ಆರಂಭಿಸಿದ ಅನೂಪ್‌ ಭಂಡಾರಿ!

ಸ್ಯಾಂಡಲ್‌ವುಡ್‌ಗೆ ಮರಳಿದ ಶ್ರೀನಿಧಿ ಶೆಟ್ಟಿ; ಯಾವುದು ಆ ಸಿನಿಮಾ?

ಪರಭಾಷಾ ಪ್ರಾಜೆಕ್ಟ್‌ಗಳಲ್ಲಿ ಸಕ್ರಿಯವಾಗಿದ್ದ ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ಇದೀಗ ಭಂಡಾರಿ ಸಹೋದರರ ನೂತನ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರ್ಜರಿ ಮರುಪ್ರವೇಶ ಮಾಡಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ‌ ನಿರೂಪ್ ಭಂಡಾರಿ ನಾಯಕನಾಗಿ ನಟಿಸುತ್ತಿದ್ದಾರೆ.

Loading...