ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Kiccha Sudeep: ʻಬಿಗ್ ಬಾಸ್ ಕನ್ನಡ 13ʼ ಶೋ ಟೇಕಾಫ್ ಆಗೋದೇ ಡೌಟಾ?  ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಕೊಟ್ಟ ಶಾಕಿಂಗ್‌ ನ್ಯೂಸ್‌ ಏನು?

'ಬಿಗ್ ಬಾಸ್ ಕನ್ನಡ 13' ಆರಂಭಕ್ಕೂ ಮುನ್ನವೇ ಸಂಕಷ್ಟ! ಏನಾಯ್ತು?

ಬಿಗ್‌ ಬಾಸ್‌ ಕನ್ನಡ 13 ಶೋ ಸೆಪ್ಟೆಂಬರ್ 6ರಂದು ಆರಂಭವಾಗುವುದು ಅನುಮಾನಕ್ಕೆ ಕಾರಣವಾಗಿದೆ. ಬಿಗ್‌ ಬಾಸ್‌ ನಡೆಯುವ ಬಿಡದಿಯ ಜಾಲಿವುಡ್ ಸ್ಟುಡಿಯೋ ಸಂಸ್ಥೆಯು ಹಳೆಯ ಪರಿಸರ ಉಲ್ಲಂಘನೆ ದಂಡ ಪಾವತಿಸಿಲ್ಲ. ಜೊತೆಗೆ ಎಸ್‌ಟಿಪಿ ನಿಯಮಗಳನ್ನು ಪಾಲಿಸದೆ ಕಾರ್ಯಕ್ರಮಕ್ಕೆ ಅಧಿಕೃತ ಅನುಮತಿ ಕೋರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ!

Toxic Movie: ನಿಮ್ಮ ಬೆಳವಣಿಗೆಯನ್ನು ಕಂಡು ಅರಗಿಸಿಕೊಳ್ಳಲಾಗದವರು ತಪ್ಪಾಗಿ ಅರ್ಥೈಸಿಕೊಂಡಿರಬಹುದು! ಯಶ್‌ ಬಗ್ಗೆ ಸುಮಲತಾ ಪೋಸ್ಟ್‌

'ಟಾಕ್ಸಿಕ್' ಬಗ್ಗೆ ಯಶ್‌ಗೆ ಪತ್ರ ಬರೆದ ಸುಮಲತಾ ಅಂಬರೀಷ್

Actor yash: ಸಿನಿಮಾರಂಗದ ತಾರೆಯರು ಈಗ ಒಬ್ಬೊಬ್ಬರಾಗಿ ಈ ಸಿನಿಮಾ ನೋಡಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ , ಕಿಚ್ಚ ಸುದೀಪ್, ಮಾಸ್ಟರ್ ಆನಂದ್, ರಕ್ಷಿತಾ ಪ್ರೇಮ್ ಬಳಿಕ ಇದೀಗ ಮಾಜಿ ಸಚಿವೆ ಸುಮಲತಾ ಅಂಬರೀಷ್ ಅವರು 'ಟಾಕ್ಸಿಕ್' ಸಿನಿಮಾ (Toxic Movie) ನೋಡಿ, ಯಶ್ ಅಭಿನಯ ಹಾಗೂ ಸಿನಿಮಾವನ್ನು ಮೆಚ್ಚಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

Toxic Movie: 'ನೀವು ನೀವಾಗಿಯೇ ಇರಿ, ಏಕೆಂದರೆ..'; ಸಂಚಲನ ಮೂಡಿಸಿದ ನಟ ಯಶ್‌ ಇನ್‌ಸ್ಟಾಗ್ರಾಮ್‌ ಬಯೋ!

'ನೀವು ನೀವಾಗಿಯೇ ಇರಿ'; ಸಂಚಲನ ಮೂಡಿಸಿದ ನಟ ಯಶ್‌ ಇನ್‌ಸ್ಟಾಗ್ರಾಮ್‌ ಬಯೋ!

ಯಶ್‌ ಅಭಿನಯದ ಬಹುನಿರೀಕ್ಷಿತ ʻಟಾಕ್ಸಿಕ್‌ʼ ಚಿತ್ರವು ಮಿಶ್ರ ಪ್ರತಿಕ್ರಿಯೆ ಮತ್ತು ಭಾರಿ ಚರ್ಚೆಗಳ ನಡುವೆಯೂ ಕೇವಲ ಐದು ದಿನಗಳಲ್ಲಿ ಬರೋಬ್ಬರಿ 285 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಈ ಮಧ್ಯೆ ನಟ ಯಶ್, 'ನಕಲಿಗಿಂತ ಅಸಲಿಗೆ ಬೆಲೆ ಜಾಸ್ತಿ' ಎಂದು ಪ್ರೊಫೈಲ್ ಬಯೋ ಬದಲಿಸಿ ಟ್ರೋಲಿಗರಿಗೆ ಪ್ರತ್ಯುತ್ತರ ನೀಡಿದ್ದಾರೆ.

ಸುದೀಪ್‌ ನಟನೆಯ ಸಿನಿಮಾಗಳು ತಡವಾಗುತ್ತಿರುವುದಕ್ಕೆ ಕಾರಣಗಳೇನು? ತಮ್ಮ ಪ್ಲಾನಿಂಗ್‌ ಬಗ್ಗೆ ಖಡಕ್‌ ರಿಪ್ಲೈ ನೀಡಿದ ʻಕಿಚ್ಚʼ!

ಸಿನಿಮಾ ರಿಲೀಸ್ ಆಗದಿದ್ರೆ ನನಗೇ ಹೆಚ್ಚು ನೋವು: ಮೌನ ಮುರಿದ ʻಕಿಚ್ಚʼ ಸುದೀಪ್

ಸಿನಿಮಾಗಳ ಬಿಡುಗಡೆ ತಡವಾಗುತ್ತಿರುವ ಕುರಿತ ಪ್ರಶ್ನೆಗೆ ನಟ ಸುದೀಪ್ ಭಾವುಕ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾ ತಡವಾದರೆ ತಮಗೇ ಹೆಚ್ಚು ನೋವಾಗುತ್ತದೆ ಎಂದಿರುವ ಅವರು, ಯಾವುದೇ ನಿರ್ಲಕ್ಷ್ಯ ವಹಿಸದೆ ಹಗಲಿರುಳು ಶ್ರಮಿಸುತ್ತಿರುವುದಾಗಿ ತಿಳಿಸಿದ ಸುದೀಪ್, ಹುಟ್ಟುಹಬ್ಬದಂದು ‘ಬಿಲ್ಲ ರಂಗ ಭಾಷಾ’ ಚಿತ್ರದ ಫಸ್ಟ್ ಕಟ್ ಬಿಡುಗಡೆಯಾಗಲಿದೆ ಎಂದು ಹಂಚಿಕೊಂಡಿದ್ದಾರೆ.

ಒಂದೇ ಪರದೆಯ ಮೇಲೆ ದಕ್ಷಿಣ ಭಾರತದ ನಾಲ್ವರು ʻಸೂಪರ್‌ ಸ್ಟಾರ್ಸ್ʼ; ಸೆಪ್ಟೆಂಬರ್ 6ರಿಂದ ʻಬಿಗ್ ಬಾಸ್ʼ ಮಹಾಸಂಗಮ!

ದಕ್ಷಿಣ ಭಾರತದ ʻಬಿಗ್ ಬಾಸ್ʼ ಮಹಾಸಂಗಮ! ಸೆಪ್ಟೆಂಬರ್ 6ರಿಂದ ಧಮಾಕಾ!

ದಕ್ಷಿಣ ಭಾರತದ ʻಬಿಗ್‌ ಬಾಸ್‌ʼ ಇತಿಹಾಸದಲ್ಲೇ ಪ್ರಥಮ ಬಾರಿಗೆ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸೆಪ್ಟೆಂಬರ್ 6ರಿಂದ ಏಕಕಾಲಕ್ಕೆ ಆರಂಭವಾಗುತ್ತಿದೆ. ʻಕಿಚ್ಚʼ ಸುದೀಪ್, ವಿಜಯ್ ಸೇತುಪತಿ, ನಾಗಾರ್ಜುನ ಹಾಗೂ ಮೋಹನ್‌ಲಾಲ್ ಒಂದೇ ಪ್ರೊಮೋದಲ್ಲಿ ಕಾಣಿಸಿಕೊಂಡು ಸೌತ್ ಇಂಡಿಯನ್ ಸಂಸ್ಕೃತಿ ಮತ್ತು ಆಹಾರ ಪದ್ಧತಿಯ ಸೊಗಸನ್ನು ಅನಾವರಣಗೊಳಿಸಿದ್ದಾರೆ.

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ 'ಡಾಲಿ' ಧನಂಜಯ

'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ನಟ 'ಡಾಲಿ' ಧನಂಜಯ

ಮೈಸೂರಿನಲ್ಲಿ ನಟ ಧನಂಜಯ ಸಮ್ಮುಖದಲ್ಲಿ 'ಅಮೆರಿಕಾ ಅಮೆರಿಕಾ 2' ಚಿತ್ರದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸಾರಥ್ಯದ ಈ ಚಿತ್ರದಲ್ಲಿ ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ಶ್ರೀವಾಸ್ತವ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

Toxic Movie: 'ಅವತ್ತೇ ಹೆದರಿಲ್ಲ, ಇವತ್ತು ಹೆದರ್ತೀವಾ?'; ತೆಲುಗು ನಿರ್ಮಾಪಕ ಅಲ್ಲು ಅರವಿಂದ್‌ಗೆ ತಿರುಗೇಟು ನೀಡಿದ ನಟ ಯಶ್ ತಾಯಿ 'ಫೈರ್‌' ಪುಷ್ಪಮ್ಮ!

Toxic: ಅಲ್ಲು ಅರ್ಜುನ್‌ ತಂದೆಗೆ ತಿರುಗೇಟು ನೀಡಿದ ನಟ ಯಶ್ ತಾಯಿ ಪುಷ್ಪಮ್ಮ

ನಟ ಯಶ್‌ ಅವರ ತಾಯಿ ಪುಷ್ಪಾ ಅರುಣ್‌ ಕುಮಾರ್ ಅವರು ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ನೀಡಿದ್ದ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ತಮ್ಮ ಮಗ ಶೂನ್ಯದಿಂದ ಬೆಳೆದು ಬಂದವನು ಎಂದಿರುವ ಅವರು, ಕೆಜಿಎಫ್‌ಗೂ ಮುನ್ನವೇ ಯಶ್ ಸತತ ಹಿಟ್‌ಗಳನ್ನು ನೀಡಿದ್ದರು ಎಂದು ನೆನಪಿಸಿದ್ದಾರೆ.

Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ

Rashmika Mandanna: ಶೂಟಿಂಗ್‌ಗೆ ಮರಳುವ ಸಂತಸ ಹಂಚಿಕೊಂಡ ರಶ್ಮಿಕಾ

Rashmika Mandanna: ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಮುಂಬರುವ ಚಿತ್ರ 'ಮೈಸಾ' (Mysa Movie) ಚಿತ್ರೀಕರಣದ ಸಮಯದಲ್ಲಿ ಸೊಂಟದ ಗಾಯಕ್ಕೆ ಒಳಗಾದ ನಂತರ ನಟನೆಯಿಂದ ಸ್ವಲ್ಪ ವಿರಾಮ ತೆಗೆದುಕೊಂಡರು . ತಮ್ಮ ಗಾಯದ ಬಗ್ಗೆ ಮಾತನಾಡಿದ ಸುಮಾರು ಒಂದು ತಿಂಗಳ ನಂತರ, ರಶ್ಮಿಕಾ ಶೀಘ್ರದಲ್ಲೇ ಮತ್ತೆ ಕೆಲಸ ಮಾಡುವುದಾಗಿ ಘೋಷಿಸಿದ್ದಾರೆ.

Korean Kanakaraju OTT: ಒಟಿಟಿಗೆ ಎಂಟ್ರಿ ಕೊಡ್ತಿದೆ ವರುಣ್ ತೇಜ್ ಸಿನಿಮಾ!

ಒಟಿಟಿಗೆ ಎಂಟ್ರಿ ಕೊಡ್ತಿದೆ ವರುಣ್ ತೇಜ್ ಸಿನಿಮಾ!

Korean Kanakaraju OTT: ಹಾರರ್ (Horror) ಮತ್ತು ಹಾಸ್ಯ ಅಂಶಗಳನ್ನು ಸಂಯೋಜಿಸಿರುವ ಈ ಚಿತ್ರವು ಪ್ರೇಕ್ಷಕರಿಂದ ಭಾರಿ ಪ್ರತಿಕ್ರಿಯೆಯನ್ನು ಪಡೆಯಿತು. ಥಿಯೇಟ್ರಿಕಲ್ ರನ್ ಪೂರ್ಣಗೊಂಡ ನಂತರ, ಇದು ಈಗ ಡಿಜಿಟಲ್ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗುತ್ತಿದೆ. ಹಾಗಾದರೆ, ವರುಣ್ ತೇಜ್ ಅವರ ಚಿತ್ರ ಯಾವಾಗ ಮತ್ತು ಎಲ್ಲಿ ಸ್ಟ್ರೀಮಿಂಗ್ ಆಗಲಿದೆ ?

kiccha sudeep: ತಾಯಿಯ ಸ್ಮರಣಾರ್ಥ ಸಂಕಷ್ಟದಲ್ಲಿದ್ದ 4 ಕುಟುಂಬಗಳಿಗೆ  ಬೆಳಕಾದ ಕಿಚ್ಚ ಸುದೀಪ್

ತಾಯಿಯ ಸ್ಮರಣಾರ್ಥ ಸಂಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಬೆಳಕಾದ ಕಿಚ್ಚ ಸುದೀಪ್

kiccha sudeep: ಕಿಚ್ಚ ಸುದೀಪ್ (Sudeep) ಅವರು ಬೆಳ್ಳಿಪರದೆಯ ಮೇಲಷ್ಟೇ ಅಲ್ಲದೆ, ನಿಜ ಜೀವನದಲ್ಲೂ ಸಮಾಜಮುಖಿ ಕಾರ್ಯಗಳ ಮೂಲಕ ಸದಾ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತಮ್ಮ ಪ್ರೀತಿಯ ತಾಯಿ ಸರೋಜಾ ಸಂಜೀವ್ (Saroja Sanjeeva) ಅವರ ಸ್ಮರಣಾರ್ಥವಾಗಿ ಸುದೀಪ್ ಇದೀಗ ಅತ್ಯಂತ ಶ್ಲಾಘನೀಯ ಕಾರ್ಯವೊಂದನ್ನು ಕೈಗೆತ್ತಿಕೊಂಡಿದ್ದು, ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ವಿತರಿಸುವ ಮೂಲಕ ಅವರ ಸ್ವಾವಲಂಬಿ ಬದುಕಿಗೆ ಶಾಶ್ವತ ಆಸರೆಯಾಗಿದ್ದಾರೆ.

Toxic box office collection:  ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್ ಏನು?

Toxic box office collection: ‘ಟಾಕ್ಸಿಕ್’ ಸಿನಿಮಾದ ಕಲೆಕ್ಷನ್ ಏನು?

Toxic box office collection: 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರವು ತನ್ನ ಮೊದಲ ಶನಿವಾರದಂದು ಗಣನೀಯ ಬಾಕ್ಸ್ ಆಫೀಸ್ ಗಳಿಕೆಯೊಂದಿಗೆ ಪ್ರವೇಶಿಸಿದೆ. ಭಾರತದಲ್ಲಿ 101.10 ಕೋಟಿ ರೂ. ನಿವ್ವಳ ಗಳಿಸಿದ ನಂತರ, ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು 2 ನೇ ದಿನದಂದು 37.65 ಕೋಟಿ ರೂ. ಮತ್ತು 3 ನೇ ದಿನದಂದು 27.20 ಕೋಟಿ ರೂ. ಗಳಿಸಿ, ಭಾರತದ ನಿವ್ವಳ ಸಂಗ್ರಹವನ್ನು 165.95 ಕೋಟಿ ರೂ.ಗೆ ಹೆಚ್ಚಿಸಿದೆ.

DC OTT release date out: ಥಿಯೇಟರ್‌ನಲ್ಲಿ 100 ಕೋಟಿ ಗಳಿಸಿದ 'DC' ಈ ಒಟಿಟಿಗೆ ಎಂಟ್ರಿ!

ಥಿಯೇಟರ್‌ನಲ್ಲಿ 100 ಕೋಟಿ ಗಳಿಸಿದ 'DC' ಈ ಒಟಿಟಿಗೆ ಎಂಟ್ರಿ!

DC OTT release date out: ಡಿಸಿ ಸಿನಿಮಾ ಆಗಸ್ಟ್ 7ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆರಂಭದಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಇರದಿದ್ದರೂ, ಸಿನಿಮಾ ಬಿಡುಗಡೆಯಾದ ನಂತರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯಿತು. ವಾಮಿಕಾ ಗಬ್ಬಿ ಮತ್ತು ಲೋಕೇಶ್ ಕನಕರಾಜ್ ಅವರ ಆಕ್ಷನ್ ಥ್ರಿಲ್ಲರ್ ಚಿತ್ರ ಡಿಸಿ (DC) ಶೀಘ್ರದಲ್ಲೇ ಒಟಿಟಿಯಲ್ಲಿ (OTT) ಬಿಡುಗಡೆಯಾಗಲಿದೆ.

Batwara 1947: ಸನ್ನಿ ಡಿಯೋಲ್ ಮುಸ್ಲಿಂ ಎಂಬುದನ್ನು ಒಪ್ಪಿಕೊಳ್ಳಲು ಆಗಲಿಲ್ಲ : ನಟಿ ಶಬಾನಾ

ಸನ್ನಿ ಡಿಯೋಲ್ ಮುಸ್ಲಿಂ ಎಂಬುದನ್ನು ಒಪ್ಪಿಕೊಳ್ಳಲು ಆಗಲಿಲ್ಲ : ನಟಿ ಶಬಾನಾ

Batwara 1947: ಸನ್ನಿ ಡಿಯೋಲ್ ಅಭಿನಯದ ಬಟ್ವಾರಾ (Batwara 1947) 1947 ಆ ವರ್ಷದ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿತ್ತು, ಆದರೆ ಆ ಚಿತ್ರವನ್ನು ಪ್ರೇಕ್ಷಕರು ಪೂರ್ಣ ಹೃದಯದಿಂದ ಸ್ವೀಕರಿಸಲಿಲ್ಲ, ಅದರ ಬಾಕ್ಸ್ ಆಫೀಸ್ ಪ್ರದರ್ಶನವು ಇದಕ್ಕೆ ಸಾಕ್ಷಿಯಾಗಿದೆ. ಇತ್ತೀಚೆಗೆ, ಶಬಾನಾ ಅಜ್ಮಿ ( Shabana Azmi ) ಚಿತ್ರದ ಕಳಪೆ ಪ್ರದರ್ಶನದ ಬಗ್ಗೆ ಮಾತನಾಡುತ್ತಾ, ಪ್ರೇಕ್ಷಕರು ಸನ್ನಿ ಡಿಯೋಲ್ (Sunny Deol) ಅವರನ್ನು ಮುಸ್ಲಿಂ ಪಾತ್ರದಲ್ಲಿ ಸ್ವೀಕರಿಸಲು ಸಾಧ್ಯವಾಗದಿರುವುದೇ ಚಿತ್ರದ ಸೋಲಿಗೆ ಪ್ರಮುಖ ಕಾರಣವಿರಬಹುದು ಎಂದು ಶಬಾನಾ ಹೇಳಿದ್ದಾರೆ.

Emraan Hashmi : ಬಾಲಿವುಡ್​​ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ; ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಪೋಸ್ಟ್‌ಪೋನ್‌

ಬಾಲಿವುಡ್​​ ನಟ ಇಮ್ರಾನ್ ಹಶ್ಮಿಗೆ ಹಂದಿ ಜ್ವರ

Emraan Hashmi: 'ಅವರಪನ್ 2' ಚಿತ್ರದ ಯಶಸ್ಸನ್ನು ಆನಂದಿಸುತ್ತಿರುವ ನಟ, ಹಲವಾರು ದಿನಗಳಿಂದ ಅಸ್ವಸ್ಥರಾಗಿದ್ದ ನಂತರ ಪರೀಕ್ಷೆಗೆ ಒಳಗಾಗಿದ್ದರು ಎಂದು ವರದಿಯಾಗಿದೆ, ಅವರ ಫಲಿತಾಂಶಗಳು ಪಾಸಿಟಿವ್ (Positive) ಆಗಿವೆ. ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಮತ್ತು ಮೂಲಭೂತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದಾರೆ. ನಟ ಇತ್ತೀಚೆಗೆ ತಮ್ಮ ಆರೋಗ್ಯದ ಕಾರಣದಿಂದಾಗಿ ಬೆಂಗಳೂರಿನಲ್ಲಿ ನಿಗದಿಯಾಗಿದ್ದ ಪ್ರದರ್ಶನಕ್ಕೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಘೋಷಿಸಿದರು, ಆದರೆ ಕಾರ್ಯಕ್ರಮವನ್ನು ಮರು ನಿಗದಿಪಡಿಸಲಾಗುವುದು ಎಂದು ಅಭಿಮಾನಿಗಳಿಗೆ ಭರವಸೆ ನೀಡಿದರು.

ನಟ ರವಿಚಂದ್ರನ್‌ಗೆ ವಿಧಾನ ಪರಿಷತ್ ಸ್ಥಾನ? ಸಿಎಂ ಡಿ.ಕೆ. ಶಿವಕುಮಾರ್‌ ಶಿಫಾರಸು?

ರವಿಚಂದ್ರನ್ ರಾಜಕೀಯಕ್ಕೆ ಎಂಟ್ರಿ?

V. Ravichandran: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ನಿರ್ದೇಶಕ ರವಿಚಂದ್ರನ್ ಅವರನ್ನು ಕಲಾ ಕ್ಷೇತ್ರದ ಕೋಟಾದಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ವತಃ ರವಿಚಂದ್ರನ್ ಹೆಸರನ್ನು ಶಿಫಾರಸು ಮಾಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕಾಂಗ್ರೆಸ್ ಅಥವಾ ಸಿಎಂ ಕಚೇರಿಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ. ರವಿಚಂದ್ರನ್ ಹಾಗೂ ಡಿ.ಕೆ. ಶಿವಕುಮಾರ್ ಅವರ ಆತ್ಮೀಯ ಸ್ನೇಹ ಈ ಚರ್ಚೆಗೆ ಮತ್ತಷ್ಟು ಬಲ ನೀಡಿದೆ.

Rishab Shetty: ನಾನು ನಿಮ್ಮ ಜತೆಗಿದ್ದೇನೆ ಯಶ್‌ ಸರ್; ʼಟಾಕ್ಸಿಕ್‌ʼ ಬಗ್ಗೆ ರಿಷಬ್‌ ಶೆಟ್ಟಿ ಮೆಚ್ಚುಗೆಯ ಪೋಸ್ಟ್‌

ನಾನು ನಿಮ್ಮ ಜತೆಗಿದ್ದೇನೆ ಯಶ್‌ ಸರ್; ರಿಷಬ್‌ ಶೆಟ್ಟಿ

Rishab Shetty:`ಟಾಕ್ಸಿಕ್’ (Toxic Movie) ಚಿತ್ರ ವೀಕ್ಷಿಸಿ ಉತ್ತಮ ವಿಮರ್ಶೆ ಮಾಡಿರುವ ಸುದೀಪ್ ತಮ್ಮ ಮನದ ಮಾತನ್ನು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು ಉಪೇಂದ್ರ (Upendra) ಕೂಡ ಟ್ವೀಟ್‌ ಮಾಡಿದ್ದರು. ಇದೀಗ ರಿಷಬ್‌ ಕೂಡ ಯಶ್‌ಗೆ ಸಾಥ್‌ ಕೊಟ್ಟಿದ್ದಾರೆ. .ಕನ್ನಡ ಸಿನಿಮಾವನ್ನು ಜಗತ್ತಿನ ವೇದಿಕೆಗೆ ಕೊಂಡೊಯ್ಯುವ ನಿಮ್ಮ ಪ್ರೀತಿಗಾಗಿ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಎಂದಿದ್ದಾರೆ.

Actor Yash: ಯಶ್ ಅದ್ಭುತ ಕಲಾವಿದ; 'ಟಾಕ್ಸಿಕ್' ಆ್ಯಕ್ಷನ್ ಕೊರಿಯೋಗ್ರಾಫರ್ ಜೆ.ಜೆ. ಪೆರ್ರಿ ಮೆಚ್ಚುಗೆ

ಯಶ್ ಅದ್ಭುತ ಕಲಾವಿದ; ಆ್ಯಕ್ಷನ್ ಕೊರಿಯೋಗ್ರಾಫರ್ ಜೆಜೆ ಪೆರ್ರಿ ಮೆಚ್ಚುಗೆ

Actor Yash: ಆಕ್ಷನ್‌ ದೃಶ್ಯಗಳು (Action Sequance) ವಿಶೇಷ ಪ್ರಶಂಸೆಯನ್ನು ಗಳಿಸಿದೆ. ಸಾಹಸ ನೃತ್ಯ ಸಂಯೋಜಕ ಜೆಜೆ ಪೆರ್ರಿ (JJ Perry) ಈಗ ಈ ಸನ್ನಿವೇಶವು ಹೇಗೆ ಇದ್ದಿತ್ತು? ಜೊತೆಗೆ ಯಶ್ ಮತ್ತು ನಿರ್ದೇಶಕಿ ಗೀತು ಮೋಹನ್ದಾಸ್ (Geetu Mohandas) ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಮಾಧ್ಯಮವೊಂದರಲ್ಲಿ ಹಂಚಿಕೊಂಡಿದ್ದಾರೆ .

Actor Vinayakan: ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ 'ಜೈಲರ್‌ʼ ನಟ ವಿನಾಯಕನ್; ಡಿವೋರ್ಸ್​ಗೆ ನಾನೇ ಕಾರಣ ಎಂದಿದ್ದೇಕೆ?

ಪತ್ನಿಯಿಂದ ಬೇರ್ಪಟ್ಟ ನೋವಿನಲ್ಲಿ 'ಜೈಲರ್‌ʼ ನಟ ವಿನಾಯಕನ್!

Actor Vinayakan: ಖ್ಯಾತ ನಟ ವಿನಾಯಕನ್ ತಮ್ಮ 40 ವರ್ಷಗಳ ದೀರ್ಘ ವೈವಾಹಿಕ ಜೀವನ ಅಂತ್ಯಗೊಂಡಿದೆ. ಮಹಾರಾಜ ಕಾಲೇಜಿನಲ್ಲಿ 19 ನೇ ವಯಸ್ಸಿನಲ್ಲಿ ಪ್ರಾರಂಭವಾದ ಪ್ರೀತಿ ಮತ್ತು 40 ವರ್ಷಗಳ ಸುದೀರ್ಘ ದಾಂಪತ್ಯದ ಮುರಿದುಬಿದ್ದ ನಂತರ ವಿನಾಯಕನ್ ತೀವ್ರ ಖಿನ್ನತೆಗೆ ಒಳಗಾಗಿದ್ದಾರೆ. ನೀಡಿದ ಸಂದರ್ಶನದಲ್ಲಿ, ಅವರು ತಮ್ಮ ಪತ್ನಿ ಬಬಿತಾ ಅವರಿಂದ ಬೇರ್ಪಡಲು ಸಂಪೂರ್ಣ ಕಾರಣವನ್ನು ವಿವರಿಸಿದರು. ವಿನಾಯಕನ್ ಪ್ರಕಾರ, ಈ ವಿಚ್ಛೇದನದಲ್ಲಿ (Divorce) ಅವರ ಪತ್ನಿಯ ತಪ್ಪಿಲ್ಲ, ಆದರೆ ಅವರ ಸ್ವಭಾವ ಮಾತ್ರ ಕಾರಣವಾಗಿತ್ತು ಎಂದಿದ್ದರು.

Sahaa Movie: ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ  ರಸ್ತೆಯಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ;  ನಟಿಯ ನೇರ ಸವಾಲು!

ಸಿನಿಮಾ ಇಷ್ಟವಾಗಲಿಲ್ಲ ಅಂದ್ರೆ ತಲೆ ಬೋಳಿಸಿಕೊಳ್ಳುತ್ತೇನೆ; ನಟಿಯ ನೇರ ಸವಾಲು

swetha lakshman: ಸಹಾ ತಂಡವು ಚಿತ್ರದ ಬಗ್ಗೆ ಬಲವಾದ ಮತ್ತು ಅತಿರೇಕದ ಹೇಳಿಕೆಗಳನ್ನು ನೀಡುತ್ತಿದೆ, ಮತ್ತು ಈಗ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ನಾಯಕಿ ಶ್ವೇತಾ ಲಕ್ಷ್ಮಣ್ (swetha lakshman) ಸಿನಿಮಾ ನಿರಾಸೆ ಮೂಡಿಸಿದರೆ ಅಮೀರ್‌ಪೇಟೆ ರಸ್ತೆಯಲ್ಲಿ ತಲೆಬೋಳಿಸಿಕೊಳ್ಳುವುದಾಗಿ ಸವಾಲು ಹಾಕಿದ್ದಾರೆ.

Karavali Movie OTT: ಒಟಿಟಿಗೆ 'ಕರಾವಳಿ' ; ಕಂಬಳ ಕಥಾಹಂದರದ ಮೂವಿ!

ಒಟಿಟಿಗೆ 'ಕರಾವಳಿ' ; ಕಂಬಳ ಕಥಾಹಂದರದ ಮೂವಿ!

karavali Movie OTT: ​ಗುರುದತ್ತ ಗಾಣಿಗ ನಿರ್ದೇಶಿಸಿ, ನಿರ್ಮಿಸಿರುವ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಅರ್ಪಿಸಿದೆ.ಗುರುದತ್ತ ಗಾಣಿಗ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ವಿಕೆ ಫಿಲ್ಮ್ಸ್ ಹಾಗೂ ಸುರಮ್ ಮೂವೀಸ್ ಈ ಚಿತ್ರಕ್ಕೆ ಸಹ-ನಿರ್ಮಾಣದ ಸಾಥ್ ನೀಡಿವೆ. ಪ್ರಜ್ವಲ್ ದೇವರಾಜ್, ರಾಜ್ ಬಿ. ಶೆಟ್ಟಿ ಹಾಗೂ ಸಂಪದಾ ಹುಲಿವಾನ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಮಿತ್ರ, ರಮೇಶ್ ಇಂದಿರಾ, ಗೋವಿಂದೇ ಗೌಡ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.

Shiva Rajkumar:  ಶಿವಣ್ಣ ನಟನೆಯ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್!

ಶಿವಣ್ಣ ನಟನೆಯ ‘ಬೇಲ್’ ಚಿತ್ರದ ಪವರ್‌ಫುಲ್ ಟೀಸರ್ ಔಟ್!

Shiva Rajkumar: ಡಾ. ಶಿವರಾಜ್‌ಕುಮಾರ್ (Shivarajkumar) ನಟನೆಯ ಬಹುನಿರೀಕ್ಷಿತ ‘ಬೇಲ್’ ಚಿತ್ರದ (Bail Movie) ಅಧಿಕೃತ ಟೀಸರ್ ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಚಿತ್ರರಂಗದ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಶಿವಣ್ಣ ಎಂದಿನ ತಮ್ಮ ಖಡಕ್ ಶೈಲಿಯ ಪವರ್‌ಫುಲ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದಾರೆ.

Toxic Movie: `ರಾಯ'ನ ಹೊಸ ಅವತಾರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ಕಿಚ್ಚ ಸುದೀಪ್

`ರಾಯ'ನ ಹೊಸ ಅವತಾರಕ್ಕೆ ಪ್ರೀತಿಯಿಂದ ವಿಶ್ ಮಾಡಿದ ಕಿಚ್ಚ ಸುದೀಪ್

Toxic Movie: ‘ಟಾಕ್ಸಿಕ್’ ಸಿನಿಮಾಗೆ (Toxic Movie) ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇಂಥ ಸಂದರ್ಭದಲ್ಲಿ ಉಪೇಂದ್ರ (Upendra) ಅವರು ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಕಿಚ್ಚ ಸುದೀಪ್‌ (Sudeep) ಕೂಡ ಮನಸಾರೆ ವಿಶ್‌ ಮಾಡಿದ್ದಾರೆ.

Toxic movie : ‘ಟಾಕ್ಸಿಕ್’ ನೋಡಿ ಉಪೇಂದ್ರ ಹೇಳಿದ್ದೇನು?

Toxic movie : ‘ಟಾಕ್ಸಿಕ್’ ನೋಡಿ ಉಪೇಂದ್ರ ಹೇಳಿದ್ದೇನು?

Toxic movie : ‘ಟಾಕ್ಸಿಕ್ ಒಂದು ಕಾಲ್ಪನಿಕ ಕಥೆ. ಆದರೆ ದೊಡ್ಡವರಿಗಾಗಿ? ಟಾಕ್ಸಿಕ್ ಸಿನಿಮಾ ನೋಡಿದೆ. ವಾವ್! ಎಂತಹ ಸಿನಿಮಾ! ಒಂದು ಹೊಸ ಲೋಕ. ಒಂದು ಸಂಪೂರ್ಣ ಹೊಸ ಅನುಭವ! ಪ್ರತಿಯೊಬ್ಬ ಕಲಾವಿದ ಮತ್ತು ತಂತ್ರಜ್ಞರ ಶ್ರಮ, ಶ್ರದ್ಧೆ ಹಾಗೂ ಕಲೆಯ ಮೇಲಿನ ಪ್ರೀತಿ ನಿಜಕ್ಕೂ ಅಭಿನಂದನೀಯ! ಯಶ್ ಮತ್ತು ಇಡೀ ತಂಡಕ್ಕೆ ಹ್ಯಾಟ್ಸ್ ಆಫ್!’ ಎಂದು ಉಪೇಂದ್ರ ಅವರು ಟ್ವೀಟ್ ಮಾಡಿದ್ದಾರೆ.

Rishab Shetty: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್‌ ಶೆಟ್ಟಿ!

ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸ್ಥಾನ ಪಡೆದ ರಿಷಬ್‌ ಶೆಟ್ಟಿ!

Rishab Shetty: ಸ್ಯಾಂಡಲ್‌ವುಡ್‌ನ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಸ್ಥಾನ ಪಡೆಯುವ ಮೂಲಕ ಕನ್ನಡ ಚಿತ್ರರಂಗದ ಹಿರಿಮೆಯನ್ನು ಮತ್ತೊಮ್ಮೆ ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಪ್ಯಾನ್-ಇಂಡಿಯಾ ಮಟ್ಟದಲ್ಲಿ ಸೃಷ್ಟಿಯಾದ ಅಭೂತಪೂರ್ವ ಯಶಸ್ಸು ಮತ್ತು ಅವರ ಸಿನಿಮಾಗಳ ಪ್ರಭಾವವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಸಿನಿಮಾ ವಿಭಾಗದಲ್ಲಿ ರಿಷಬ್ ಶೆಟ್ಟಿ ಸ್ಥಾನ ಪಡೆದರೆ, ಬರಹಗಾರರ ವಿಭಾಗದಲ್ಲಿ ಕನ್ನಡದ ಖ್ಯಾತ ಬರಹಗಾರ್ತಿ ಭಾನು ಮುಷ್ತಾಕ್ ಸ್ಥಾನ ಪಡೆದಿದ್ದಾರೆ.

Loading...