ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

BBK 13: ʻಬಿಗ್ ಬಾಸ್ʼ ಮನೆಗೆ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ ಎಂಟ್ರಿ: ‘ಸಿಂಪತಿ ಬೇಡವೇ ಬೇಡ’ ಎಂದ ನಟ!

Bigg Boss ಮನೆಗೆ 3ನೇ ಸ್ಪರ್ಧಿಯಾಗಿ ನಟ ಅವಿನಾಶ್ ಷಠಮರ್ಶನ್ ಎಂಟ್ರಿ

ಬಿಗ್‌ ಬಾಸ್‌ ಮನೆಗೆ ರಂಗಭೂಮಿ ಕಲಾವಿದ ಅವಿನಾಶ್ ಷಠಮರ್ಶನ್ ಪ್ರವೇಶಿಸುವ ಮೂಲಕ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ರಂಗಭೂಮಿ ಮತ್ತು ಸಿನಿಮಾರಂಗದಲ್ಲಿ ನಟರಾಗಿ ಗುರುತಿಸಿಕೊಂಡಿರುವ ಇವರು ಮೂರನೇ ಸ್ಪರ್ಧಿಯಾಗಿ ಆಗಮಿಸಿ, ಜನರ ಅನಗತ್ಯ ಅನುಕಂಪ ತಮಗೆ ಬೇಡವೆಂದು ಎಂದು ಖಡಕ್ಕಾಗಿ ಹೇಳಿದ್ದಾರೆ.

BBK 13: ʻಬಿಗ್‌ ಬಾಸ್‌ʼ ಕನ್ನಡ 13ಕ್ಕೆ ‘ಲವ್‌ ಮಾಕ್‌ಟೇಲ್‌ 3’ ಖ್ಯಾತಿಯ ‘ಜಗ್ಗಾ ಮಮ್ಮಿ’ ಎಂಟ್ರಿ; ಮೊದಲ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟ ಜಗದೀಶ್!

ʻಬಿಗ್ ಬಾಸ್ʼ ಕನ್ನಡ 13 ಶೋಗೆ 'ಜಗ್ಗಾ ಮಮ್ಮಿ' ಅಚ್ಚರಿಯ ಎಂಟ್ರಿ!

ಮಂಡ್ಯ ಮೂಲದ ಜಗದೀಶ್ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಡಾರ್ಲಿಂಗ್ ಕೃಷ್ಣ ಅಕ್ಕನ ಮನೆ ಅಡುಗೆಯವನಾಗಿದ್ದ ಇವರು 'ಲವ್ ಮಾಕ್‌ಟೇಲ್ 3' ಮೂಲಕ ಮನೆಮಾತಾಗಿದ್ದರು. ಸಾಲ ತೀರಿಸಲು ಬಂದಿರುವುದಾಗಿ ಹೇಳಿದ ಜಗದೀಶ್, ಟಾಸ್ಕ್ ಆಡಿ ಟ್ರೋಫಿ ಗೆಲ್ಲುವ ಪಣತೊಟ್ಟಿದ್ದಾರೆ. ಕಿಚ್ಚ ಸುದೀಪ್ ಎದುರು ತಮ್ಮ ಕಷ್ಟದ ಬದುಕು ತೆರೆದಿಟ್ಟಿದ್ದಾರೆ.

ʻಕಿಚ್ಚʼ ಸುದೀಪ್‌ ಸಾರಥ್ಯದಲ್ಲಿ ‘ಬಿಗ್‌ ಬಾಸ್ ಕನ್ನಡ 13’ ಆರಂಭ; ಈ ಸಲದ ದೊಡ್ಮನೆಯ ವಿನ್ಯಾಸ ಹೇಗಿದೆ? ಏನೇನ್‌ ಸ್ಪೆಷಾಲಿಟಿ ಇದೆ?

ʻಬಿಗ್ ಬಾಸ್ 13ʼಕ್ಕೆ ಗ್ರ್ಯಾಂಡ್ ಓಪನಿಂಗ್‌; ಈ ಸಲದ ದೊಡ್ಮನೆ ಹೇಗಿದೆ?

Bigg Boss Kannada 13: ಕಿಚ್ಚ ಸುದೀಪ್ ಸಾರಥ್ಯದಲ್ಲಿ ಬಿಗ್‌ ಬಾಸ್‌ 13 ಅದ್ಧೂರಿಯಾಗಿ ಚಾಲನೆ ಪಡೆದಿದೆ. ಈ ಬಾರಿ ಇಡೀ ಮನೆಯನ್ನು ಜಾಗತಿಕ ಪ್ರವಾಸಿ ತಾಣಗಳು ಮತ್ತು ಏವಿಯೇಷನ್ ಶೈಲಿಯಲ್ಲಿ ವಿನೂತನವಾಗಿ ಸಿಂಗರಿಸಲಾಗಿದೆ. ವಿಮಾನದ ಕಾಕ್‌ಪಿಟ್ ಪ್ರವೇಶದ್ವಾರ, ಕನ್ನಡದ ಸೊಗಡಿನ ಲಿಬರ್ಟಿ ಪ್ರತಿಮೆ, ಐಫೆಲ್ ಟವರ್ ಮಾದರಿಯ ಜೈಲು ಇನ್ನಿತರ ಸ್ಪೆಷಾಲಿಟಿಗಳು ಮನೆಯೊಳಗೆ ಇವೆ.

‌ʻಬಿಗ್‌ ಬಾಸ್‌ʼ ಕನ್ನಡ 13ರ ಮನೆಯೊಳಗೆ ಕಾಲಿಡುವ ಸ್ಪರ್ಧಿಗಳ ಪಟ್ಟಿ ಇಲ್ಲಿದೆ; ಕಾಮನ್‌ ಮ್ಯಾನ್‌ ಕೆಟಗರಿಗೆ ಬಂಪರ್ ಚಾನ್ಸ್!

ʻಬಿಗ್ ಬಾಸ್ʼ ಕನ್ನಡ 13 ಶುರು; ಮನೆಯೊಳಗೆ ಹೋಗುವ ಸ್ಪರ್ಧಿಗಳು ಇವ್ರೇ ನೋಡಿ!

ಕಿಚ್ಚ ಸುದೀಪ್ ಸಾರಥ್ಯದಲ್ಲಿ ‌ʻಬಿಗ್‌ ಬಾಸ್‌ʼ ಕನ್ನಡ 13 ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ. ಈ ಬಾರಿಯ ವಿಶೇಷವೆಂದರೆ ಸೀಸನ್ 5ರ ಮಾದರಿಯಲ್ಲಿ ಕಾಮನ್ ಮ್ಯಾನ್ ಕೋಟಾದಡಿ ನಾಲ್ವರು ಸಾಮಾನ್ಯ ಪ್ರತಿಭೆಗಳು ಅಗ್ನಿಪರೀಕ್ಷೆ ದಾಟಿ ನೇರವಾಗಿ ದೊಡ್ಮನೆಗೆ ಲಗ್ಗೆ ಇಡಲಿದ್ದಾರೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಹಾಗೂ ಪ್ರಮುಖ ನಟ-ನಟಿಯರು ಸೇರಿ ಒಟ್ಟು 18 ಸ್ಪರ್ಧಿಗಳು ಬಿಗ್‌ ಬಾಸ್‌ ಮನೆ ಒಳಗೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

‌BBK 13: ಗಂಭೀರ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು ‌ʻಬಿಗ್‌ ಬಾಸ್‌ʼ ವೇದಿಕೆಗೆ ಎಂಟ್ರಿ: 2ನೇ ಇನ್ನಿಂಗ್ಸ್‌ ಆರಂಭಿಸಿದ ನಟಿ ಸಂಗೀತಾ ಭಟ್‌!

BBK 13: ʻಬಿಗ್ ಬಾಸ್‌ʼ ಕನ್ನಡ 13ರ ಮೂಲಕ ಸಂಗೀತಾ ಭಟ್ 2ನೇ ಇನ್ನಿಂಗ್ಸ್‌!

ಬಿಗ್‌ ಬಾಸ್‌ ಕನ್ನಡ ಸೀಸನ್ 13ರ ಅಖಾಡಕ್ಕೆ ಆರನೇ ಸ್ಪರ್ಧಿಯಾಗಿ ನಟಿ ಸಂಗೀತಾ ಭಟ್ ಪಾದಾರ್ಪಣೆ ಮಾಡಿದ್ದಾರೆ. ಗರ್ಭಕೋಶದಲ್ಲಿದ್ದ ಗಂಭೀರ ಟ್ಯೂಮರ್ ಸಮಸ್ಯೆಗೆ ಯಶಸ್ವಿ ಶಸ್ತ್ರಚಿಕಿತ್ಸೆ ಪಡೆದಿದ್ದ ನಟಿ ಸಂಗೀತಾ, ಪತಿಯ ಬೆಂಬಲದಿಂದ ಚೇತರಿಸಿಕೊಂಡಿದ್ದಾರೆ. ದೈಹಿಕ ಹಾಗೂ ಮಾನಸಿಕ ನೋವುಗಳನ್ನು ಧೈರ್ಯದಿಂದ ಹಿಮ್ಮೆಟ್ಟಿಸಿ, ತಮ್ಮ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಲು ಹೆಜ್ಜೆಯಿಟ್ಟಿದ್ದಾರೆ.

BBK 13: 'ಓಸಿಡಿಯಲ್ಲಿ ಪಿಎಚ್‌ಡಿ ಮಾಡಿಬಿಟ್ಟಿದ್ದಾಳೆ..'; 'ಬಿಗ್‌ ಬಾಸ್‌ʼ ಮನೆಗೆ ಬಂದ ಸಂಗೀತಾ ಭಟ್‌ ಬಗ್ಗೆ ಪತಿ ಸುದರ್ಶನ್‌ ಹೀಗಾ ಹೇಳೋದು?

BBK 13: ʻಬಿಗ್‌ ಬಾಸ್‌ 13' ಶೋಗೆ ಸಂಗೀತಾ ಭಟ್‌ - ಕಾವ್ಯಾ ಗೌಡ ಎಂಟ್ರಿ

‘ಬಿಗ್ ಬಾಸ್ ಕನ್ನಡ’ ಸೀಸನ್ 13 ಅದ್ದೂರಿಯಾಗಿ ಆರಂಭವಾಗುವ ಮುನ್ನವೇ ಪ್ರೋಮೋಗಳು ಸಂಚಲನ ಮೂಡಿಸಿವೆ. ನಟಿ ಸಂಗೀತಾ ಭಟ್ ಹಾಗೂ ಕಾವ್ಯಾ ಗೌಡ ಸ್ಪರ್ಧಿಗಳಾಗಿ ಪ್ರವೇಶ ಪಡೆದಿದ್ದಾರೆ. ಪತ್ನಿಯ ಓಸಿಡಿ ಗೀಳನ್ನು ತಮಾಷೆಯಾಗಿ ಪ್ರಸ್ತಾಪಿಸಿದ ಸುದರ್ಶನ್ ರಂಗಪ್ರಸಾದ್, ರೀಲ್ ಹಾಗೂ ರಿಯಲ್ ಪತ್ನಿಯರನ್ನು ಒಟ್ಟಿಗೆ ಕಂಡು ದಂಗಾಗಿದ್ದಾರೆ.

Actress Ramya: ಕೇಸ್‌ ಹಿಂಪಡೆಯಿರಿ ಎಂದು ರಮ್ಯಾ ಕಾಲಿಗೆ ಬಿದ್ದ ದರ್ಶನ್‌ ಫ್ಯಾನ್ಸ್‌! ನಟಿಯ ಖಡಕ್‌ ರಿಪ್ಲೈ ಇದು

ಕೇಸ್‌ ಹಿಂಪಡೆಯಿರಿ ಎಂದು ರಮ್ಯಾ ಕಾಲಿಗೆ ಬಿದ್ದ ದರ್ಶನ್‌ ಫ್ಯಾನ್ಸ್‌!

Actress Ramya: ತಮ್ಮನ್ನು ಕ್ಷಮಿಸುವಂತೆ ಆರೋಪಿಗಳು ಹಾಗೂ ಅವರ ಕುಟುಂಬದವರು ಪರಿಪರಿಯಾಗಿ ಬೇಡಿಕೊಂಡರೂ ಕೂಡ ರಮ್ಯಾ ಅವರು ಮನಸ್ಸು ಬದಲಾಯಿಸಿಲ್ಲ. ರಮ್ಯಾ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ (Social Media) ಅತ್ಯಂತ ಕೆಟ್ಟ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂದೇಶಗಳನ್ನು ರವಾನಿಸಲಾಗಿತ್ತು.

Kannada New Movie: ಅಂಜನ್ ನಟನೆಯ "ಹುಲಿಬೀರ" ಹಾಡುಗಳು ಬಿಡುಗಡೆ

Kannada New Movie: ಅಂಜನ್ ನಟನೆಯ "ಹುಲಿಬೀರ" ಹಾಡುಗಳು ಬಿಡುಗಡೆ

Kannada New Movie: ಮದರಂಗಿ ಮಲ್ಲಿಕಾರ್ಜುನ ಅವರ ನಿರ್ದೇಶನದ ಮತ್ತೊಂದು ಚಿತ್ರ ಹುಲಿಬೀರ (Hulibeera). ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ಮಾಡಿರುವ ಅದೇ ಸೊಗಡಿನ ಚಿತ್ರವಿದು. ಯರ‍್ರಾಬಿರ‍್ರಿ ಖ್ಯಾತಿಯ ನಟ ಅಂಜನ್ ಚಿತ್ರದ ನಾಯಕನಾಗಿದ್ದು, ಚೈತ್ರ ತೋಟದ, ವನು ಪಾಟೀಲ್ (Vnu patil) ಹಾಗೂ ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ.

Shine Shetty: ಶೈನ್ ಶೆಟ್ಟಿ ನಟನೆಯ'ಶಂಕರಾಭರಣ' ಸಿನಿಮಾದ ಟೀಸರ್ ರಿಲೀಸ್

ಶೈನ್ ಶೆಟ್ಟಿ ನಟನೆಯ'ಶಂಕರಾಭರಣ' ಸಿನಿಮಾದ ಟೀಸರ್ ರಿಲೀಸ್

Shine Shetty: ಶೈನ್ ಶೆಟ್ಟಿ ಈ ಸಿನಿಮಾದಲ್ಲಿ ಬಸ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಡಿದ್ದು, ಶಂಕರಾಭರಣ ಬಸ್‌ನ ಚಾಲಕನಾಗಿ ಜೀವನ ಸಾಗಿರುವ ಒಬ್ಬ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಶೈನ್ ಮಿಂಚಿದ್ದಾರೆ. ಶೈನ್ ಶಂಕರಾಭರಣ ಬಸ್ ಚಾಲಕನಾದ್ರೆ ಸಿನಿಮಾದ ಸಾರಥ್ಯವನ್ನು ಸುಮಂತ್ ಭಟ್ ವಹಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸುಮಂತ್ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವುದು ವಿಶೇಷ.

Epic Trailer: ರಶ್ಮಿಕಾ  ಮೈದುನನ 'ಎಪಿಕ್' ಸಿನಿಮಾ ಟ್ರೈಲರ್‌ ಔಟ್‌

ರಶ್ಮಿಕಾ ಮೈದುನನ 'ಎಪಿಕ್' ಸಿನಿಮಾ ಟ್ರೈಲರ್‌ ಔಟ್‌

Epic Trailer: ಇತ್ತೀಚಿನ ಪ್ರೇಮಕಥೆ 'ಎಪಿಕ್: ಫಸ್ಟ್ ಸೆಮಿಸ್ಟರ್' (Epic Firt semister) ಚಿತ್ರದ ಟ್ರೇಲರ್ ಅದ್ದೂರಿಯಾಗಿ ಬಿಡುಗಡೆಯಾಗಿದೆ. '90 ರ ದಶಕದ ಮಿಡಲ್ ಕ್ಲಾಸ್ ಬಯೋಪಿಕ್' ಸರಣಿಯಿಂದ ಪ್ರಭಾವಿತರಾದ ನಿರ್ದೇಶಕ ಆದಿತ್ಯ ಹಾಸನ್ ನಿರ್ದೇಶಿಸಿದ ಈ ಚಿತ್ರದ ಟ್ರೇಲರ್ ಯುವ ಭಾವನೆಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ. ‘ಎಪಿಕ್- ಫಸ್ಟ್ ಸೆಮಿಸ್ಟರ್’ ಸಿನಿಮಾದ ಟ್ರೇಲರ್‌ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಶ್ಮಿಕಾ ಮಂದಣ್ಣ ಭಾಗಿಯಾಗಿದ್ದರು.

ಜೂ. ಎನ್‌ಟಿಆರ್‌–ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಡ್ರ್ಯಾಗನ್’ ಚಿತ್ರಕ್ಕೆ ಬಾಲಿವುಡ್‌ನ ಇಬ್ಬರು ಘಟಾನುಘಟಿ ಕಲಾವಿದರು ಎಂಟ್ರಿ!

Jr. NTR: ‘ಡ್ರ್ಯಾಗನ್’ ಅಖಾಡಕ್ಕೆ ಬಾಲಿವುಡ್ ಘಟಾನುಘಟಿ ಕಲಾವಿದರು ಎಂಟ್ರಿ

ಜೂ. ಎನ್‌ಟಿಆರ್‌–ಪ್ರಶಾಂತ್ ನೀಲ್ ಕಾಂಬಿನೇಷನ್‌ನ ‘ಡ್ರ್ಯಾಗನ್’ ಚಿತ್ರಕ್ಕೆ ಬಾಲಿವುಡ್ ತಾರೆಯರಾದ ಶಾಹಿದ್ ಕಪೂರ್ ಹಾಗೂ ಆಲಿಯಾ ಭಟ್ ಎಂಟ್ರಿ ಕೊಡುವ ಸಾಧ್ಯತೆ ದಟ್ಟವಾಗಿದೆ. ಈ ಚಿತ್ರದಲ್ಲಿ ಈಗಾಗಲೇ ಅನಿಲ್ ಕಪೂರ್ ಕೂಡ ಇದ್ದಾರೆ. 1960ರ ದಶಕದ ಅಫೀಮು ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಸಿನಿಮಾದಲ್ಲಿ ಎನ್‌ಟಿಆರ್‌ ‘ಲೂಗರ್’ ಪಾತ್ರದಲ್ಲಿ ನಟಿಸುತ್ತಿದ್ದಾರೆ.

A Date Review: ಒಲವಿನ ಹಲವು ಮಜಲುಗಳನ್ನು ಪರಿಚಯಿಸುವ ಒಂದು ದಿನದ ಕಥೆ!

ಹೊಸ ಪ್ರತಿಭೆಗಳ ʻಎ ಡೇಟ್‌ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

A Date Review: ಆಧುನಿಕ ಕಾಲದ ಕಾರ್ಪೊರೇಟ್ ಪ್ರೇಮ ಸಂಬಂಧಗಳ ಸಂಕೀರ್ಣತೆಯನ್ನು ಕಟ್ಟಿಕೊಡುವ ಪ್ರಯತ್ನವೇ ʻಎ ಡೇಟ್‌ʼಸಿನಿಮಾ. ಕನ್ನಡಿಗ ಟೆಕ್ಕಿ ಹಾಗೂ ದೆಹಲಿ ಮೂಲದ ಯುವತಿಯ ನಡುವೆ ಬೆಂಗಳೂರಿನಲ್ಲಿ ಒಂದೇ ದಿನ ನಡೆಯುವ ಸಂವಾದಾತ್ಮಕ ಪಯಣವೇ ಚಿತ್ರದ ಜೀವಾಳ.

ಒಟಿಟಿಯಲ್ಲಿ ಈ ವಾರ ಮನರಂಜನೆಯ ಮಹಾಪೂರ; ‘DC’ ಸೇರಿ ಬಿಡುಗಡೆಯಾಗಲಿವೆ 5 ಭರ್ಜರಿ ಹಿಟ್ ಸಿನಿಮಾಗಳು!

ವೀಕೆಂಡ್ OTT ಧಮಾಕ: ತಮಿಳಿನ ‘ಡಿಸಿ’ ಸೇರಿದಂತೆ 5 ಹಿಟ್‌ ಸಿನಿಮಾಗಳು ರಿಲೀಸ್

OTT Movie Releases: ಸೆಪ್ಟೆಂಬರ್ ಮೊದಲ ವಾರದಲ್ಲಿ ಭಿನ್ನ ಜಾನರ್‌ನ ಐದು ಜನಪ್ರಿಯ ಸಿನಿಮಾಗಳು ಮನೆಮನೆಗೆ ತಲುಪಲು ಸಜ್ಜಾಗಿವೆ. ಗಲ್ಲಾಪೆಟ್ಟಿಗೆ ದಾಖಲೆ ಬರೆದ ಲೋಕೇಶ್ ಕನಕರಾಜ್ ಅವರ ‘ಡಿಸಿ’ ಸನ್‌ನೆಕ್ಸ್ಟ್‌ನಲ್ಲಿ ಹಾಗೂ ವರುಣ್ ತೇಜ್ ಅಭಿನಯದ ‘ಕೊರಿಯನ್ ಕನಕರಾಜು’ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗುತ್ತಿವೆ.

6 ಭಾಷೆ, 95ಕ್ಕೂ ಹೆಚ್ಚು ಪ್ರಮುಖ ಬ್ರ್ಯಾಂಡ್‌ಗಳ ಸಾಥ್; ದಾಖಲೆಯ ಪ್ರಾಯೋಜಕತ್ವದೊಂದಿಗೆ 'ಬಿಗ್ ಬಾಸ್ 2026' ಹಬ್ಬದ ಸೀಸನ್ ಆರಂಭ

ʻಬಿಗ್ ಬಾಸ್ 2026ʼ ಮಹಾ ಧಮಾಕ; 6 ಭಾಷೆ, 95 ಬ್ರ್ಯಾಂಡ್‌ಗಳ ಸಾಥ್!‌

ʻಬಿಗ್‌ ಬಾಸ್‌ 2026ʼ ರಿಯಾಲಿಟಿ ಶೋ 6 ಪ್ರಾದೇಶಿಕ ಭಾಷೆಗಳಲ್ಲಿ 95ಕ್ಕೂ ಅಧಿಕ ಕಾರ್ಪೊರೇಟ್ ಪ್ರಾಯೋಜಕರ ಭಾರಿ ಬೆಂಬಲದೊಂದಿಗೆ ಅಖಾಡಕ್ಕಿಳಿದಿದೆ. ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಸೇರಿದಂತೆ ಪ್ರಮುಖ ತಾರೆಯರು ಮುನ್ನಡೆಸುವ ಈ ಕಾರ್ಯಕ್ರಮ ಸೆಪ್ಟೆಂಬರ್ 6ರಂದು ಅದ್ಧೂರಿಯಾಗಿ ಆರಂಭವಾಗಲಿದೆ.

ʻ‌ನನ್ನ ಮಗನ ತಪ್ಪನ್ನು ನಾನು ಸಹಿಸಲಾರೆ, ಕ್ಷಮಿಸಲಾರೆʼ; ಪುತ್ರ ಸಾಮ್ರಾಟ್‌ ಕೇಸ್‌ ಬಗ್ಗೆ ನಟ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ಪುತ್ರ ಸಾಮ್ರಾಟ್‌ ಕೇಸ್‌ ಬಗ್ಗೆ ನಟ ʻದುನಿಯಾʼ ವಿಜಯ್‌ ಫಸ್ಟ್‌ ರಿಯಾಕ್ಷನ್!‌

ʻದುನಿಯಾʼ ವಿಜಯ್‌ ಅವರ ಪುತ್ರ ಸಾಮ್ರಾಟ್ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂದೆಯಾಗಿ ಮಗನ ತಪ್ಪುಗಳನ್ನು ನಾನು ಎಂದಿಗೂ ಸಹಿಸುವುದಿಲ್ಲ ಮತ್ತು ಕ್ಷಮಿಸುವುದೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Harshika Poonacha:  ಕೃಷ್ಣ ಜನ್ಮಾಷ್ಟಮಿಯಂದೇ ಗಂಡು ಮಗುವಿಗೆ ಜನ್ಮ ನೀಡಿದ ನಟಿ ಹರ್ಷಿಕಾ  ಪೂಣಚ್ಚ

ಕೃಷ್ಣ ಜನ್ಮಾಷ್ಟಮಿಯಂದೇ ಗಂಡು ಮಗುವಿಗೆ ಜನ್ಮ ನೀಡಿದ ನಟಿ ಹರ್ಷಿಕಾ ಪೂಣಚ್ಚ

Harshika Poonacha: 'ನಮ್ಮ ಚೋಟು ಕೃಷ್ಣ' (Chotu Krishna) ಅಂತಲೂ ಈ ಜೋಡಿ ಹೇಳಿದೆ. ಮಗುವಿನ ಮುಂಗೈ ಫೋಟೋ ಕೂಡ ಹಂಚಿಕೊಂಡಿದೆ. ಭುವನ್-ಹರ್ಷಿಕಾ ಬಾಳಿಗೆ ಪುಟ್ಟ ಕನ್ಹನ ಆಗಮನವಾಗಿದ್ದು, ಇಡೀ ಕುಟುಂಬದಲ್ಲಿ ಸಡಗರ ಮನೆಮಾಡಿದೆ. ಹರ್ಷಿಕಾ ಪೂಣ್ಣಚ್ಚ ಮತ್ತು ಭುವನ ಒಂದು ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಮಗುವಿನ ಮುಂಗೈ ಮಾತ್ರ ಕಾಣಿಸುತ್ತಿದೆ.

Bigg Boss Kannada 13: ಬಿಗ್ ಬಾಸ್ ಮನೆ ಒಳಗೆ Survive ಆಗೋದು ಹೇಗೆ? ಚಂದನ್‌ ಶೆಟ್ಟಿ ಟಿಪ್ಸ್‌ ಇದು

ಬಿಗ್ ಬಾಸ್ ಮನೆ ಒಳಗೆ Survive ಆಗೋದು ಹೇಗೆ? ಚಂದನ್‌ ಶೆಟ್ಟಿ ಟಿಪ್ಸ್‌ ಇದು

Bigg Boss Kannada 13: ಬಿಗ್ ಬಾಸ್ ಕನ್ನಡ’ 13ನೇ ಆವೃತ್ತಿಗೆ ಸಜ್ಜಾಗಿದೆ. ‘ಫ್ಲೈಟ್’ ಎಂಬ ವಿಭಿನ್ನ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ಈ ಬಾರಿಯ ಕಾರ್ಯಕ್ರಮದ ಅದ್ಧೂರಿ ಆರಂಭ ಸೆಪ್ಟೆಂಬರ್ 6ರಂದು ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ನಡೆಯಲಿದೆ. ಈ ಬಾರಿ ಸೆಲೆಬ್ರಿಟಿಗಳ ಜೊತೆ ಜನಸಾಮಾನ್ಯರೂ ಸ್ಪರ್ಧಿಸಲಿದ್ದು, 'ಅಗ್ನಿ ಪರೀಕ್ಷೆ' ಮೂಲಕ ಮೂವರು ಆಯ್ಕೆಯಾಗಲಿದ್ದಾರೆ. , ಮಾಜಿ ವಿನ್ನರ್ ಚಂದನ್ ಶೆಟ್ಟಿ ಅವರು ಸ್ಪರ್ಧಿಗಳಿಗೆ ಮನೆಯಲ್ಲಿ 100 ದಿನ ಉಳಿದುಕೊಳ್ಳಲು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ.

Allu Arjun: ಅಲ್ಲು ಅರ್ಜುನ್‌ ‘ರಾಕಾ’ ಈ ಡೇಟ್‌ಗೆ ರಿಲೀಸ್‌!

ಅಲ್ಲು ಅರ್ಜುನ್‌ ‘ರಾಕಾ’ ಈ ಡೇಟ್‌ಗೆ ರಿಲೀಸ್‌!

Allu Arjun: ಇತ್ತೀಚೆಗೆ, ಈ ಚಿತ್ರದ ಬಿಡುಗಡೆ ದಿನಾಂಕಕ್ಕೆ ಸಂಬಂಧಿಸಿದ ಸುದ್ದಿ ಈಗ ಚಲನಚಿತ್ರ ವಲಯಗಳಲ್ಲಿ ಬಿಸಿ ವಿಷಯವಾಗಿದೆ. ಇತ್ತೀಚಿನ ಸಾಮಾಜಿಕ ಮಾಧ್ಯಮ ಬಝ್ ಪ್ರಕಾರ, ತಯಾರಕರು 'ರಾಕಾ' ಚಿತ್ರವನ್ನು ಡಿಸೆಂಬರ್ 31, 2027 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆ ಮಾಡಲು ಯೋಜಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ದಿನಾಂಕ ದೃಢಪಟ್ಟರೆ, ಹೊಸ ವರ್ಷದ ಸಂದರ್ಭದಲ್ಲಿ 'ರಾಕಾ' ದೊಡ್ಡ ಬಾಕ್ಸ್ ಆಫೀಸ್ ಯುದ್ಧಕ್ಕೆ ಸಿದ್ಧವಾಗಿದೆ.

Ananthan Kaadu OTT: ನಟ ಆರ್ಯ ನಟನೆಯ 'ಅನಂತನ್ ಕಾಡು' ಈ ಒಟಿಟಿಗೆ ಎಂಟ್ರಿ!

ನಟ ಆರ್ಯ ನಟನೆಯ 'ಅನಂತನ್ ಕಾಡು' ಈ ಒಟಿಟಿಗೆ ಎಂಟ್ರಿ!

Ananthan Kaadu OTT: ಆರ್ಯ ಅಭಿನಯದ ಅನಂತನ್ ಕಾಡು (Ananthan Kaadu) ಈಗ ಡಿಜಿಟಲ್ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಮಲಯಾಳಂ-ತಮಿಳು ದ್ವಿಭಾಷಾ ಆಕ್ಷನ್ ಥ್ರಿಲ್ಲರ್ ಚಿತ್ರವು ಒಟಿಟಿಯಲ್ಲಿ (Action thriller OTT) ಪ್ರಥಮ ಪ್ರದರ್ಶನಗೊಳ್ಳಲಿದ್ದು, ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗದ ಪ್ರೇಕ್ಷಕರಿಗೆ ಮತ್ತೊಂದು ಅವಕಾಶವನ್ನು ನೀಡುತ್ತಿದೆ.

Kannada New Movie: ರಂಗಾಯಣ ರಘು ನಟನೆಯ 'ಹೊಸ ಜೀವನ' ಚಿತ್ರದ ಸಾಂಗ್‌ ಔಟ್‌!

ರಂಗಾಯಣ ರಘು ನಟನೆಯ 'ಹೊಸ ಜೀವನ' ಚಿತ್ರದ ಸಾಂಗ್‌ ಔಟ್‌!

Kannada New Movie: ರಂಗಾಯಣ ರಘು, ಪ್ರಭು ಮುಂಡ್ಕೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ 'ಹೊಸ ಜೀವನ' ಚಿತ್ರದ ಮೊದಲ ಸುಮಧುರ ಗೀತೆ "ಏನೇನೋ ಹಂಬಲ " ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಸ್ಯಾಂಡಲ್‌ವುಡ್‌ನ ನೆಚ್ಚಿನ ನಟ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

Hanuman Ansh : ಬಾಲಿವುಡ್‌ನಿಂದ ಸಹಾಯ ಕೋರಿದೆ ಆದರೆ ಬೆಂಬಲ ಸಿಗಲಿಲ್ಲ; ಹನುಮಾನ್ ಅಂಶ್ ನಿರ್ದೇಶಕ

ಬಾಲಿವುಡ್‌ನಿಂದ ಯಾವುದೇ ಬೆಂಬಲ ಸಿಗಲಿಲ್ಲ; ಹನುಮಾನ್ ಅಂಶ್ ನಿರ್ದೇಶಕ

Hanuman Ansh : ಹನುಮಾನ್ ಅಂಶ್' (Hanuman Ansh) ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಚಿತ್ರ ನಿಧಾನವಾಗಿ ಆರಂಭವಾದರೂ ಈಗ ನಾಲ್ಕನೇ ವಾರದಲ್ಲಿ ಕನ್ನಡ ತಾರೆ ಯಶ್ ಅವರ 'ಟಾಕ್ಸಿಕ್' ಚಿತ್ರಕ್ಕಿಂತ ಮುಂದಿದೆ. ರೌನಾಕ್ ಜೊತೆಗಿನ ಇತ್ತೀಚಿನ ಪಾಡ್‌ಕ್ಯಾಸ್ಟ್‌ನಲ್ಲಿ, ಚಿತ್ರದ ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಬಾಲಿವುಡ್ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವ ಮೊದಲು ಬೆಂಬಲಿಸಲಿಲ್ಲ ಎಂದು ಬಹಿರಂಗಪಡಿಸಿದರು. ಆದಾಗ್ಯೂ, ಚಿತ್ರವು ಉತ್ತಮವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸಿದಾಗ, ಉದ್ಯಮದ ಹಲವಾರು ಜನರು ಅವರನ್ನು ಅಭಿನಂದಿಸಲು ಕರೆ ಮಾಡಿದರು.

Bigg Boss: ಬ್ರೇಕಪ್‌ನಿಂದ ತೀವ್ರವಾಗಿ ಕುಸಿದು ಹೋದೆ! ಬಿಗ್ ಬಾಸ್ ನಟಿ ಮುಕ್ತ ಮಾತು

ಬ್ರೇಕಪ್‌ನಿಂದ ತೀವ್ರವಾಗಿ ಕುಸಿದು ಹೋದೆ! ಬಿಗ್ ಬಾಸ್ ನಟಿ ಮುಕ್ತ ಮಾತು

Bigg Boss: ಬಿಗ್ ಬಾಸ್ ಬಳಿಕ ತಮ್ಮ ವೈಯಕ್ತಿಕ ಜೀವನದಲ್ಲಿ ಎದುರಿಸಿದ ಪ್ರೇಮ ವೈಫಲ್ಯದ ಬಗ್ಗೆ ನಟಿ ಹಾಗೂ ನಿರೂಪಕಿ ಆರ್ಯ ಬಡಾಯಿ ಮತ್ತೊಮ್ಮೆ ಮನಬಿಚ್ಚಿ ಮಾತನಾಡಿದ್ದಾರೆ. ಆ ಪ್ರೀತಿಯ ವೈಫಲ್ಯ ತನ್ನ ಮೇಲೆ ಎಷ್ಟು ಪರಿಣಾಮ ಬೀರಿತು ಎಂಬುದನ್ನು ನಟಿ ಅಶ್ವತಿ ಅಶೋಕ್ ವಿಶಾಲ್ ಅವರ ಪಾಡ್‌ಕಾಸ್ಟ್‌ನಲ್ಲಿ ಆರ್ಯ ವಿವರಿಸಿದ್ದಾರೆ.

‘ಉಳಿದದ್ದನ್ನು ಕಾಲ, ಕರ್ಮಕ್ಕೆ ಬಿಡುತ್ತೇನೆ’; ನಟ ʻದುನಿಯಾʼ ವಿಜಯ್‌ಗೆ ಡಿವೋರ್ಸ್ ನೀಡಿದ ಬಳಿಕ ನಾಗರತ್ನ ಸುದೀರ್ಘ ಪತ್ರ!

ಡಿವೋರ್ಸ್ ಬಳಿಕ 'ದುನಿಯಾ' ವಿಜಯ್‌ ಮಾಜಿ ಪತ್ನಿ ನಾಗರತ್ನ ಶಾಕಿಂಗ್‌ ಪೋಸ್ಟ್‌

‌ʻದುನಿಯಾʼ ವಿಜಯ್ ಪ್ರಕರಣದಲ್ಲಿ 27 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಹೈಕೋರ್ಟ್ ಕಾನೂನಾತ್ಮಕ ಅಂತ್ಯ ಹಾಡಿದೆ. ತೀರ್ಪಿನ ಬೆನ್ನಲ್ಲೇ ಮಾಜಿ ಪತ್ನಿ ನಾಗರತ್ನ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅನೈತಿಕ ಸಂಬಂಧವನ್ನು ಅಧಿಕೃತಗೊಳಿಸಲು ವಿಚ್ಛೇದನ ಪಡೆಯಲಾಗಿದೆ ಎಂದು ಆಪಾದಿಸಿದ್ದಾರೆ.

‘ಯಶ್ ನಮ್ ಹುಡುಗ, ಅವ್ನು ಸಾಧನೆ ಮಾಡಿದ್ರೆ, ನನ್ನ ತಮ್ಮ ಸಾಧಿಸಿದಂತೆ..’: ‘ಟಾಕ್ಸಿಕ್‌’ ಚಿತ್ರಕ್ಕೆ ಶಿವರಾಜ್‌ಕುಮಾರ್ ಫುಲ್‌ಮಾರ್ಕ್ಸ್‌!

‘ಮೇಕಿಂಗ್ ಅದ್ಭುತ, ಯಶ್ ಸೂಪರ್'; `ಟಾಕ್ಸಿಕ್' ಚಿತ್ರಕ್ಕೆ ಶಿವಣ್ಣ ಬಹುಪರಾಕ್

ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾವನ್ನ ವೀಕ್ಷಿಸಿದ ʻಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಟಿಕೆಟ್ ಖರೀದಿಸಿ ಚಿತ್ರ ವೀಕ್ಷಿಸಿದ ಅವರು, ಯಶ್ ತಮ್ಮನಿದ್ದಂತೆ, ಆತನ ಸಾಧನೆ ತಮಗೆ ಹೆಮ್ಮೆ ತಂದಿದೆ ಎಂದಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳ ನಿರೂಪಣೆಯನ್ನು ಕೊಂಡಾಡಿದ ಶಿವಣ್ಣ, ಚಿತ್ರಮಂದಿರದಲ್ಲೇ ಸಿನಿಮಾ ನೋಡಲು ಕರೆ ನೀಡಿದ್ದಾರೆ.

Loading...