ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Irumudi OTT: ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್‌ ಯಾವಾಗ?

ರವಿತೇಜ ನಟನೆಯ ತೆಲುಗು ಸಿನಿಮಾ ‘ಇರುಮುಡಿ’ ಒಟಿಟಿ ರಿಲೀಸ್‌ ಯಾವಾಗ?

Irumudi OTT: ಇತ್ತೀಚಿನ ಬಿಡುಗಡೆಯಾದ 'ಇರುಮುಡಿ' ಚಿತ್ರವು ಆಗಸ್ಟ್ 21 ರಂದು ಥಿಯೇಟ್ರಿಕಲ್ ಬಿಡುಗಡೆಯಾದಾಗ ತೆಲುಗು ಚಿತ್ರರಂಗದಿಂದ ಬಂದ ಅತಿದೊಡ್ಡ ಚಿತ್ರಗಳಲ್ಲಿ ಒಂದಾಯಿತು. ದೊಡ್ಡ ಪರದೆಯ ಮೇಲೆ ಚಿತ್ರದ ಅಸಾಧಾರಣ ಪ್ರದರ್ಶನದ ನಂತರ, ಚಿತ್ರವು ಶೀಘ್ರದಲ್ಲೇ OTT ಜಗತ್ತಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಸಿನಿಮಾ ಬಿಡುಗಡೆ ಆಗಿ ಮೂರು ವಾರಗಳಾಗಿದ್ದು ಇನ್ನೂ ಸಹ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆ ಈಗಾಗಲೇ 250 ಕೋಟಿ ರೂಪಾಯಿ ಗಳಿಕೆ ದಾಟಿದೆ.

ʻಬಹುಪರಾಕ್‌ʼ ನಂತರ ʻಅಮರ್ಥʼ ಚಿತ್ರಕ್ಕಾಗಿ ಮತ್ತೆ ಒಟ್ಟಿಗೆ ನಟಿಸಿದ ಮೇಘನಾ ರಾಜ್‌ ಸರ್ಜಾ - ಶ್ರೀನಗರ ಕಿಟ್ಟಿ

ಮೇಘನಾ ರಾಜ್ - ಶ್ರೀನಗರ ಕಿಟ್ಟಿ ನಟನೆಯ ‘ಅಮರ್ಥ’ ಸಿನಿಮಾ ಟ್ರೇಲರ್ ರಿಲೀಸ್‌

Amartha Movie Trailer: ಶ್ರೀನಗರ ಕಿಟ್ಟಿ ಹಾಗೂ ಮೇಘನಾ ರಾಜ್ ಸರ್ಜಾ ನಟನೆಯ ‘ಅಮರ್ಥ’ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. ಗುರು ಹೆಗ್ಡೆ ಮತ್ತು ವಿನಯ್ ಪ್ರೀತಮ್ ಸಾರಥ್ಯದ ಪಂಚರಂಗಿ ಫಿಲಂಸ್ ನಿರ್ಮಿಸಿರುವ ಈ ಕೌಟುಂಬಿಕ ಚಿತ್ರವು ಸೆಪ್ಟೆಂಬರ್ 18 ರಂದು ತೆರೆಕಾಣಲಿದೆ.

Ranabaali Teaser: ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!

ವಿಜಯ್ ದೇವರಕೊಂಡ ಸಿನಿಮಾದಲ್ಲಿ ಈ ಖ್ಯಾತ ಹಾಲಿವುಡ್ ನಟ!

Ranabaali Teaser: ಪ್ಯಾನ್-ಇಂಡಿಯಾ ಆ್ಯಕ್ಷನ್ ಎಪಿಕ್ ‘ರಣಬಾಲಿ’ ಚಿತ್ರದ ಬಹುನಿರೀಕ್ಷಿತ ಟೀಸರ್ ಬುಧವಾರ ಸಂಜೆ ಬಿಡುಗಡೆಯಾಗಿದೆ. ಹಾಲಿವುಡ್ ನಟರುಗಳು ಭಾರತದ ಸಿನಿಮಾಗಳಲ್ಲಿ ನಟಿಸುವುದು ವಿರಳ. ಅದರಲ್ಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸುವುದು ಇನ್ನೂ ಕಡಿಮೆ. ‘ರಣಬಾಲಿ’ ಸಿನಿಮಾನಲ್ಲಿ ಮತ್ತೊಬ್ಬ ಖ್ಯಾತ ಹಾಲಿವುಡ್ ನಟ ವಿಲನ್ ಆಗಿ ನಟಿಸುತ್ತಿದ್ದಾರೆ.

‘ಮೌನ ನನ್ನ ದೌರ್ಬಲ್ಯವಲ್ಲ, ಕುಟುಂಬದ ನೆಮ್ಮದಿಗಾಗಿ ಈ ನಿರ್ಧಾರ’; ಕಿಡಿಗೇಡಿಗಳ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ ‘ಬಿಗ್‌ ಬಾಸ್‌’ ಅಶ್ವಿನಿ ಗೌಡ

ʻನನ್ನ ಮೌನ ದೌರ್ಬಲ್ಯವಲ್ಲʼ; Bigg Boss ಅಶ್ವಿನಿ ಗೌಡ ಈ ಮಾತು ಹೇಳಿದ್ದೇಕೆ?

Ashwini Gowda: ನಟಿ ಅಶ್ವಿನಿ ಗೌಡ ಅವರು ಕೆಲ ಕಿಡಿಗೇಡಿಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತಡೆಯಾಜ್ಞೆ ಪಡೆದಿದ್ದಾರೆ. ತಮ್ಮ ವೈಯಕ್ತಿಕ ಬದುಕು, ಮಗ ಮತ್ತು ತಾಯಿಯ ಘನತೆಗೆ ಕಳಂಕ ತರುತ್ತಿರುವ ಸುಳ್ಳು ವಿಡಿಯೋ, ಟ್ರೋಲ್‌ಗಳ ವಿರುದ್ಧ ಸಿಡಿದೆದ್ದಿರುವ ಅವರು, ಎಚ್ಚರಿಕೆ ನೀಡಿದ್ದಾರೆ. ಕುಟುಂಬದ ಭವಿಷ್ಯ ಮತ್ತು ಸ್ವಾಭಿಮಾನ ರಕ್ಷಿಸಿಕೊಳ್ಳಲು ಕಾನೂನಾತ್ಮಕ ಹೋರಾಟಕ್ಕೆ ಇಳಿದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

BBK 13: ʻನನ್ನನ್ನೇ ಯಾಕೆ ಟಾರ್ಗೆಟ್ ಮಾಡ್ತೀರಾ..ʼ; ʻಬಿಗ್‌ ಬಾಸ್‌ʼ ಮನೆಯಲ್ಲಿ ಜೋರಾಯ್ತು ಮಾಡರ್ನ್‌ ಮಹಾಕವಿ ಮಂಜನ ಸೌಂಡು!‌

ಬಿಗ್‌ ಬಾಸ್‌ನಲ್ಲಿ ಮಾಡರ್ನ್ ಮಹಾಕವಿ ಮಂಜನ ರೌದ್ರಾವತಾರ; ಸ್ಪರ್ಧಿಗಳು ಶಾಕ್!

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ ನಾಮಿನೇಷನ್ ಕಿಡಿ ಹೊತ್ತಿಕೊಂಡ ಬೆನ್ನಲ್ಲೇ ಸ್ಪರ್ಧಿ ಮಾಡರ್ನ್‌ ಮಹಾಕವಿ ಮಂಜ ಸಿಡಿದೆದ್ದಿದ್ದಾರೆ. ಸಹ-ಸ್ಪರ್ಧಿಗಳ ಪಕ್ಷಪಾತ ಮತ್ತು ಪಿತೂರಿಗಳನ್ನು ನೇರವಾಗಿ ಖಂಡಿಸಿದ ಅವರು, ಎದುರಾಳಿಗಳು ಚಪ್ಪಾಳೆ ತಟ್ಟಲಷ್ಟೇ ಲಾಯಕ್ಕು ಎಂದಿದ್ದಾರೆ. ಎಲ್ಲರನ್ನೂ ಹೊರದಬ್ಬಿ ಟ್ರೋಫಿ ಗೆಲ್ಲುವುದಾಗಿ ತೊಡೆ ತಟ್ಟಿ ಸವಾಲು ಹಾಕಿದ್ದಾರೆ.

Renukaswamy Case: ಖುದ್ದು ಹಾಜರಿಗೆ ಮನವಿ ಮಾಡಿದ್ದ ನಟ ದರ್ಶನ್‌ಗೆ ನಿರಾಸೆ; ಹೈಕೋರ್ಟ್ ಕೊಟ್ಟ ಪರ್ಯಾಯ  ಆಯ್ಕೆಗಳೇನು?

ನಟ ದರ್ಶನ್‌ಗೆ ಹೈಕೋರ್ಟ್ ಶಾಕ್; ಖುದ್ದು ಹಾಜರಿ ಮನವಿಗೆ ಹೇಳಿದ್ದೇನು?

Actor Darshan Thoogudeepa: ನಟ ದರ್ಶನ್‌ ಸಲ್ಲಿಸಿದ್ದ ಖುದ್ದು ಹಾಜರಾತಿ ಅರ್ಜಿಯನ್ನು ಹೈಕೋರ್ಟ್ ಸಂಪೂರ್ಣವಾಗಿ ತಳ್ಳಿಹಾಕಿದೆ. ಭದ್ರತೆ ಹಾಗೂ ಜನದಟ್ಟಣೆಯ ಸವಾಲುಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕವೇ ಪ್ರತ್ಯೇಕ ಸಮಾಲೋಚನೆ ನಡೆಸಲು ಹಲವು ಪರ್ಯಾಯ ಪರಿಹಾರಗಳನ್ನು ವಕೀಲರ ಮುಂದಿಟ್ಟಿದೆ.

ʻಬೀರ್‌ಬಲ್‌ʼ ಶ್ರೀನಿ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಶಿವರಾಜ್‌ಕುಮಾರ್;‌ ಕೆವಿಎನ್‌ ಪ್ರೊಡಕ್ಷನ್ಸ್‌ನಂದ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್!‌

ʻಬೀರ್‌ಬಲ್ 2ʼ ಸಿನಿಮಾಗೆ ಬಂದ್ರು ಶಿವಣ್ಣ; KVN ಪ್ರೊಡಕ್ಷನ್ಸ್‌ ಹೊಸ ಸಿನಿಮಾ

Birbal Case 2: ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ‘ಬೀರ್‌ಬಲ್ ಟ್ರೈಲಜಿ ಕೇಸ್ 2’ ಚಿತ್ರ ಅಧಿಕೃತವಾಗಿ ಅನೌನ್ಸ್ ಆಗಿದೆ. ಎಂ.ಜಿ. ಶ್ರೀನಿ ನಿರ್ದೇಶನದ ಈ ಥ್ರಿಲ್ಲರ್ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅತಿಥಿ ಪಾತ್ರದಲ್ಲಿ ಅಬ್ಬರಿಸಲಿದ್ದು, ಈ ಚಿತ್ರದ ಮೂಲಕ ಖುಷ್ಬೂ ಸುಂದರ್ ಹಾಗೂ ಡೈಸಿ ಬೋಪಣ್ಣ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ.

ತಮಿಳು ನಟ ಸೂರ್ಯಗೆ ಸಾಧ್ಯವಾಗಿದ್ದು ಬೇರೆ 'ಸ್ಟಾರ್' ಹೀರೋಗಳಿಗೆ ಏಕೆ ಸಾಧ್ಯವಾಗುತ್ತಿಲ್ಲ? ಅಭಿಮಾನಿಗಳಿಗೆ ಬೇಕಿರುವುದು ಇದೇ ಸ್ಪೀಡ್!

6 ತಿಂಗಳಲ್ಲಿ 3 ಸಿನಿಮಾ; ಸೂರ್ಯ ಸ್ಪೀಡ್ ನೋಡಿ ಕಲಿಬೇಕು ಎಂದ್ರು ಫ್ಯಾನ್ಸ್!‌

Actor Suriya: ನಟ ಸೂರ್ಯ ಅವರ ಸ್ಪೀಡ್ ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಕೇವಲ ಆರು ತಿಂಗಳ ಅಂತರದಲ್ಲಿ ‘ಕರುಪ್ಪು’, ‘ವಿಶ್ವನಾಥ್ & ಸನ್ಸ್’ ಮತ್ತು ನವೆಂಬರ್‌ನಲ್ಲಿ ಬರಲಿರುವ ‘ಸೀನ್’ ಮೂಲಕ ಮೂರು ಚಿತ್ರಗಳನ್ನು ನೀಡುತ್ತಿದ್ದಾರೆ. ಸಾಲು ಸಾಲು ಹಿಟ್ ನೀಡುತ್ತಿರುವ ಸೂರ್ಯ, ಇತರ ಸ್ಟಾರ್ ನಟರಿಗೆ ಮಾದರಿಯಾಗಿದೆ.

ರವಿಚಂದ್ರನ್ ಪುತ್ರ ಮನೋರಂಜನ್ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಅಪರ್ಣ ದಾಸ್: ‘ಸರ್ವೇ ಜನಾಃ ಸುಖಿನೋ ಭವಂತು’ ಶೂಟಿಂಗ್ ಕಂಪ್ಲೀಟ್!

ರವಿಚಂದ್ರನ್‌ ಮಗನ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಅಪರ್ಣ ದಾಸ್‌ ಎಂಟ್ರಿ

Aparna Das: ಮನೋರಂಜನ್ ರವಿಚಂದ್ರನ್ ಅಭಿನಯದ ‘ಸರ್ವೇ ಜನಾಃ ಸುಖಿನೋ ಭವಂತು’ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಈ ಸಿನಿಮಾದ ಮೂಲಕ ತಮಿಳಿನ ಖ್ಯಾತ ನಟಿ ಅಪರ್ಣ ದಾಸ್‌ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಅವರ ಹುಟ್ಟುಹಬ್ಬದಂದೇ ಈ ಸುದ್ದಿಯನ್ನು ಚಿತ್ರತಂಡ ಬಹಿರಂಗಪಡಿಸಿದೆ. ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಮೈಸೂರು ದಸರಾಗೆ ಈ ಬಾರಿ ಮೆರುಗು ತುಂಬಲಿದ್ದಾರೆ 30ಕ್ಕೂ ಹೆಚ್ಚು ಸ್ಯಾಂಡಲ್‌ವುಡ್‌ ತಾರೆಯರು; ಏನಿದು ಬಿಗ್‌ ಪ್ಲ್ಯಾನ್?‌

ಮೈಸೂರು ದಸರಾ ಜಂಬೂಸವಾರಿಗೆ ತಾರಾ ಮೆರುಗು; ಸ್ಯಾಂಡಲ್‌ವುಡ್ ಕಲಾವಿದರ ಸಾಥ್‌

Mysuru Dasara: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಜಂಬೂಸವಾರಿ ಮೆರವಣಿಗೆಗೆ ಈ ಬಾರಿ ಬೆಳ್ಳಿತೆರೆಯ ವೈಭವ ಜತೆಯಾಗಲಿದೆ. ಕನ್ನಡ ಚಿತ್ರರಂಗದ 30ಕ್ಕೂ ಅಧಿಕ ಮುಂಚೂಣಿ ತಾರೆಯರು ತೆರೆದ ಅಂಬಾರಿ ವಾಹನದಲ್ಲಿ ಸಾಗಲಿದ್ದಾರೆ. 93 ವರ್ಷಗಳ ಸಿನಿರಂಗದ ಇತಿಹಾಸ ಸಾರುವ ಅಪರೂಪದ ಸ್ತಬ್ಧಚಿತ್ರವೂ ಇವರೊಂದಿಗೆ ಸಾಗಲಿದೆ.

Zee 5: ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ; AI ಆಧಾರಿತ ತಂತ್ರಜ್ಞಾನ

ಹೊಸ ರೂಪದಲ್ಲಿ ‘Zee5’ ಒಟಿಟಿ ಅನಾವರಣ; AI ಆಧಾರಿತ ತಂತ್ರಜ್ಞಾನ

Zee 5: ಮೊಬೈಲ್ ಹಾಗೂ ಕನೆಕ್ಟೆಡ್ ಟಿವಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಜೀ5, ಸ್ಮಾರ್ಟ್ ಪೆರ್ಸನಲೈಸಷನ್, ಕೃತಕ ಬುದ್ಧಿಮತ್ತೆ (AI) ಆಧಾರಿತ ಸರ್ಚಿಂಗ್ ವ್ಯವಸ್ಥೆ, ಆಕರ್ಷಕ ದೃಶ್ಯ ನ್ಯಾವಿಗೇಷನ್ ಮತ್ತು ಯಾವುದೇ ಸ್ಕ್ರೀನ್‌ನಲ್ಲೂ ಸರಾಗವಾಗಿ ವೀಕ್ಷಿಸಬಹುದಾದ ತಂತ್ರಜ್ಞಾನದೊಂದಿಗೆ ಸಜ್ಜಾಗಿದೆ. ಪ್ರೇಕ್ಷಕರ ಬದಲಾಗುತ್ತಿರುವ ವೀಕ್ಷಣಾ ಶೈಲಿಗೆ ತಕ್ಕಂತೆ ನೂತನ ಜೀ5 ವೇದಿಕೆಯನ್ನು ಪ್ರೀಮಿಯಂ ಎಂಟರ್‌ಟೈನ್‌ಮೆಂಟ್, ಫ್ರೀ 5, ಕಿಡ್‌ಝ್ (KidZ), ಟಿವಿ ಮತ್ತು ಸ್ಪೋರ್ಟ್ಸ್ ಎಂಬ ಐದು ವಿಶಿಷ್ಟ ವಿಭಾಗಗಳನ್ನಾಗಿ ವಿನ್ಯಾಸಗೊಳಿಸಲಾಗಿದೆ.

BBK 13: ತಾರಕಕ್ಕೇರಿದ ಪ್ರಥಮಾ ಪ್ರಸಾದ್‌ - ಕಿರಣ್‌ ಶಾಸ್ತ್ರಿ ಕಿತ್ತಾಟ! ‘ನಾನು ಕೆಟ್ಟ ಸೈಕ್ ನನ್ಮಗ ಆಗ್ಬಿಡ್ತೀನಿ’ ಎಂದ ಅವಿನಾಶ್‌!

Bigg Boss 13: ‘ನಾನು ಸೈಕ್ ನನ್ಮಗ’; ಕಿರಣ್‌ಗೆ ಅವಿನಾಶ್ ಖಡಕ್ ವಾರ್ನಿಂಗ್!

BBK 13: ಬಿಗ್‌ ಬಾಸ್‌ ಸ್ಪರ್ಧಿಗಳ ಮಧ್ಯೆ ದಿನದಿಂದ ದಿನಕ್ಕೆ ಜಗಳ ತಾರಕಕ್ಕೇರುತ್ತಿದೆ. ಆಸನ ಹಂಚಿಕೆಯ ವಿಚಾರವಾಗಿ ಶುರುವಾದ ಮಾತಿನ ಚಕಮಕಿಯು ಕಿರಣ್ ಶಾಸ್ತ್ರಿ ಹಾಗೂ ಪ್ರಥಮಾ ಪ್ರಸಾದ್ ನಡುವೆ ತೀವ್ರ ವಾಗ್ವಾದಕ್ಕೆ ಎಡೆಮಾಡಿಕೊಟ್ಟಿದೆ. ಕಿರಣ್ ಅವರ ವಾದ ಕಂಡು ರೊಚ್ಚಿಗೆದ್ದ ಅವಿನಾಶ್ ಶಠಮರ್ಷಣ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.

ʻಸ್ಪಾರ್ಕ್ʼ ಸಿನಿಮಾದಲ್ಲಿ ವಕೀಲೆಯಾಗಿ ಸ್ಯಾಂಡಲ್‌ವುಡ್‌ಗೆ ಮರಳಿದ 'ಜಾಕಿ' ಭಾವನಾ; ಸೆ.25ಕ್ಕೆ ಬೆಳ್ಳಿತೆರೆ‌ಗೆ ಎಂಟ್ರಿ!

‘ಸ್ಪಾರ್ಕ್’ ಚಿತ್ರದ ಮೂಲಕ ವಕೀಲೆಯಾಗಿ ಭಾವನಾ ಮೆನನ್ ಕಮ್‌ಬ್ಯಾಕ್

Spark Kannada movie: ಬಹುಭಾಷಾ ನಟಿ ಭಾವನಾ ಮೆನನ್ ಮತ್ತೆ ಸ್ಯಾಂಡಲ್‌ವುಡ್ ಅಂಗಳಕ್ಕೆ ಪ್ರವೇಶಿಸಿದ್ದಾರೆ. ʻಸ್ಪಾರ್ಕ್‌ʼ ಸಿನಿಮಾದಲ್ಲಿ ಪತ್ರಕರ್ತನ ಪರ ಹೋರಾಡುವ ಧೀಮಂತ ವಕೀಲೆ ವೈದೇಹಿ ಪಾತ್ರದಲ್ಲಿ ಅವರು ನಟಿಸಿದ್ದಾರೆ. ನಿರಂಜನ್ ಸುಧೀಂದ್ರ ನಾಯಕನಾಗಿ, ನೆನಪಿರಲಿ ಪ್ರೇಮ್ ಖಳನಾಯಕನಾಗಿ ನಟಿಸಿರುವ ಈ ಚಿತ್ರವು ಸೆಪ್ಟೆಂಬರ್ 25ರಂದು ಬಿಡುಗಡೆಯಾಗಲಿದೆ.

ಆರಂಭವಾದ ಮೊದಲ ವಾರದಲ್ಲೇ ಜಿಯೋಹಾಟ್‌ಸ್ಟಾರ್‌ನಲ್ಲಿ ನಂ.1 ಪಟ್ಟಕ್ಕೇರಿದ 'ಬಿಗ್ ಬಾಸ್ ಕನ್ನಡ 13' : ಒಟಿಟಿಯಲ್ಲೂ ʻಕಿಚ್ಚʼ ಸುದೀಪ್ ಗತ್ತು!

ಜಿಯೋಹಾಟ್‌ಸ್ಟಾರ್‌ನಲ್ಲಿ ನಂ.1 ಪಟ್ಟಕ್ಕೇರಿದ ‘ಬಿಗ್ ಬಾಸ್ ಕನ್ನಡ 13’

Bigg Boss Kannada 13: ಬಿಗ್‌ ಬಾಸ್‌ ಮೊದಲ ವಾರದಲ್ಲೇ ಜಿಯೋಹಾಟ್‌ಸ್ಟಾರ್‌ನ ಕನ್ನಡ ವಿಭಾಗದಲ್ಲಿ ಅಗ್ರಸ್ಥಾನ ಪಡೆದು ಭರ್ಜರಿ ಡಿಜಿಟಲ್ ಕ್ರಾಂತಿ ಸೃಷ್ಟಿಸಿದೆ. ಕಿಚ್ಚ ಸುದೀಪ್ ಸಾರಥ್ಯದ ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಾಣದ ಈ ರಿಯಾಲಿಟಿ ಶೋ, ದಕ್ಷಿಣ ಭಾರತದ ನಾಲ್ಕು ಭಾಷೆಗಳ ಪೈಪೋಟಿಯ ನಡುವೆಯೂ ಕನ್ನಡಿಗರನ್ನು ಮೋಡಿ ಮಾಡಿ ದಾಖಲೆಯ ವೀಕ್ಷಣೆ ಗಳಿಸಿದೆ.

Toxic Movie: ಚಿಂತೆಯಲ್ಲಿ ಕೂರಬೇಡಿ! ʼಟಾಕ್ಸಿಕ್ʼ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್‌ ಹೇಳಿದ್ದೇನು?

ಟಾಕ್ಸಿಕ್ ಸಿನಿಮಾ ಬಗ್ಗೆ ಆಪ್ತ ಸ್ನೇಹಿತನ ಬಳಿ ಯಶ್‌ ಹೇಳಿದ್ದೇನು?

Toxic Movie: ಟಾಕ್ಸಿಕ್ ಸಿನಿಮಾದ ಡಬ್ಬಿಂಗ್ ಸೂಪರ್ ವೈಸರ್ ಹಾಗೂ ನಟ ಜೈದೇವ್ ಮೋಹನ್ ಅವರು ಖಾಸಗಿ ಮಾಧ್ಯ,ವೊಂದರ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಟಾಕ್ಸಿಕ್ ಬಾಕ್ಸ್‌ಆಫೀಸ್‌ ನಲ್ಲಿ ಅಂದುಕೊಂಡ ರೀತಿಯಲ್ಲಿ ಕಲೆಕ್ಷನ್ ಮಾಡಿಲ್ಲ. ಆದರೂ ನಟ ಯಶ್ ಅವರು ಸಿನಿಮಾದ ಸೋಲನ್ನು ಧೈರ್ಯದಿಂದ ಸ್ವೀಕರಿಸಿದ್ದಾರೆ.

'ಈ ಸಲ ಬಿಗ್‌ ಬಾಸ್‌ಗೆ ಹೋಗ್ತೀರಾ?' ಅಂತ ಕೇಳಿದ್ದಕ್ಕೆ 'ನೋ..' ಎಂದಿದ್ದ ನಿರ್ದೇಶಕ ಓಂ ಪ್ರಕಾಶ್ ರಾವ್ ಏನೆಲ್ಲಾ ಹೇಳಿದ್ರು ಗೊತ್ತಾ?

ಅಂದು ʻಬಿಗ್‌ ಬಾಸ್‌ʼ ಬಗ್ಗೆ ಅಚ್ಚರಿಯ ಉತ್ತರ ನೀಡಿದ್ದ ಓಂ ಪ್ರಕಾಶ್ ರಾವ್‌!

ನಿರ್ದೇಶಕ ಓಂ ಪ್ರಕಾಶ್‌ ರಾವ್‌ ಬಿಗ್ ಬಾಸ್ ಕನ್ನಡ ಸೀಸನ್ 13ಕ್ಕೆ ಪ್ರವೇಶಿಸಿ ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದಾರೆ. ಕಾರ್ಯಕ್ರಮಕ್ಕೆ ಹೋಗುವ ಮುನ್ನ ಕಮಿಟ್‌ಮೆಂಟ್ ನೆಪವೊಡ್ಡಿ ದೊಡ್ಮನೆಗೆ ಹೋಗುವ ವದಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದರು. ಈ ಹಿಂದೆ ನಾಲ್ಕನೇ ಆವೃತ್ತಿಯಲ್ಲೂ ಭಾಗವಹಿಸಿದ್ದ ಇವರು, ಆರೋಗ್ಯ ಸಮಸ್ಯೆಯಿಂದ ಅರ್ಧದಲ್ಲೇ ನಿರ್ಗಮಿಸಿದ್ದರು.

BBK 13: ಆಟ ಶುರುವಾಗುತ್ತಿದ್ದಂತೆಯೇ 'ಗಿಲ್ಲಿ' ನಟನ ಹೆಸರನ್ನು ಜಪಿಸಿದ ಸ್ಪರ್ಧಿಗಳು; ಮಾತಿನ ಮಲ್ಲನ ಸ್ಟೈಲ್‌ ಕಾಪಿ ಮಾಡುತ್ತಿರೋದು ಯಾರು?

ʻ‌ಬಿಗ್‌ ಬಾಸ್‌ʼ ಮನೆಯಲ್ಲಿ ಗಿಲ್ಲಿ ಥರ ಆಡೋಕೆ ಕಸರತ್ತು ಮಾಡ್ತಿರೋದು ಯಾರು?

Bigg Boss Kannada 13: ಬಿಗ್‌ ಬಾಸ್ ಮನೆಯಲ್ಲಿ ಆಟ ಶುರುವಾದ ಮೂರೇ ದಿನಕ್ಕೆ ಕಳೆದ ಬಾರಿಯ ವಿನ್ನರ್ ಗಿಲ್ಲಿ ನಟನ ಹೆಸರು ಸದ್ದುಮಾಡಿದೆ. ಸ್ಪರ್ಧಿ ಮಂಜ ಅವರು ಗಿಲ್ಲಿ ಶೈಲಿಯನ್ನು ನಕಲು ಮಾಡುತ್ತಿದ್ದಾರೆ ಎಂದು ಸಹ-ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಮತ್ತು ತಾಂಡವ್ ಲೇವಡಿ ಮಾಡಿದ್ದಾರೆ.

Bigg Boss 13: ಆರಂಭದಲ್ಲೇ ದೊಡ್ಡ ತಪ್ಪು ಮಾಡಲು ಮುಂದಾದ್ರಾ ಗಗನ್‌ ಚಿನ್ನಪ್ಪ - ತಾಂಡವ್‌ ರಾಮ್?‌ ವೀಕೆಂಡ್‌ನಲ್ಲಿ ಕಿಚ್ಚನಿಂದ ಕ್ಲಾಸ್‌ ಫಿಕ್ಸ್!‌

BBK 13: ವೀಕೆಂಡ್‌ನಲ್ಲಿ ಕಿಚ್ಚನಿಂದ ಗಗನ್‌ - ತಾಂಡವ್‌ಗೆ ಕ್ಲಾಸ್‌ ಫಿಕ್ಸ್!

Bigg Boss Kannada 13: ಬಿಗ್‌ ಬಾಸ್‌ 13 ಶೋ ಆರಂಭದ ದಿನಗಳಲ್ಲೇ ನಿಯಮ ಉಲ್ಲಂಘನೆಯ ವಿವಾದಕ್ಕೆ ಸಿಲುಕಿದೆ. ಸ್ಪರ್ಧಿಗಳಾದ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಜತೆಯಾಗಿ ಕುಳಿತು ಮಂಜು ಅವರನ್ನು ನಾಮಿನೇಟ್ ಮಾಡಲು ಸಂಚು ಹೂಡಿದ್ದಾರೆ. ಯಶಸ್ ಕೃಷ್ಣ ಅವರನ್ನು ಬಲವಂತವಾಗಿ ಒಪ್ಪಿಸುವ ಹುಂಬತನವನ್ನು ತೋರಿದ್ದಾರೆ.

Vishwanath and Sons: ಸೂರ್ಯ ನಟನೆಯ ಹಿಟ್‌ ಮೂವಿ 'ವಿಶ್ವನಾಥ್ & ಸನ್ಸ್' OTTಗೆ ಎಂಟ್ರಿ!

ಸೂರ್ಯ ನಟನೆಯ ಹಿಟ್‌ ಮೂವಿ 'ವಿಶ್ವನಾಥ್ & ಸನ್ಸ್' OTTಗೆ ಎಂಟ್ರಿ!

Vishwanath and Sons:ವಿಶ್ವನಾಥ್ ಅಂಡ್ ಸನ್ಸ್ ಚಿತ್ರವು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನದ ನಂತರ ಒಟಿಟಿಯಲ್ಲಿ ಬಿಡುಗಡೆಯಾಗಲು ಸಿದ್ಧವಾಗಿದೆ. ಆಗಸ್ಟ್ 14, 2026 ರಂದು ಬಿಡುಗಡೆಯಾದ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅವರಪನ್ 2 ಮತ್ತು ಬಟ್ವಾರಾ 1947 ರೊಂದಿಗೆ ಘರ್ಷಣೆಗೆ ಒಳಗಾಯಿತು. ಆದರೂ ಭರ್ಜರಿ ಕಲೆಕ್ಷನ್‌ ಮಾಡಿತ್ತು. ವೆಂಕಿ ಅಟ್ಲೂರಿ ನಿರ್ದೇಶನದ ಈ ತಮಿಳು ಮೂವಿಯಲ್ಲಿ ಮಮಿತಾ ಬೈಜು, ರಾಧಿಕಾ ಶರತ್‌ಕುಮಾರ್ ಮತ್ತು ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Deepika Padukone: ಮಗಳ 2ನೇ ಬರ್ತ್‌ಡೇಗೆ  ಬೇಬಿ ಬಂಪ್‌ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ

ಮಗಳ 2ನೇ ಬರ್ತ್‌ಡೇಗೆ ಬೇಬಿ ಬಂಪ್‌ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ

Deepika Padukone: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮುದ್ದಾದ ಫೋಟೋ ಶೂಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಬೇಬಿ ದುವಾ ಕಾಣಿಸಿಕೊಂಡಿದ್ದರು. ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಪತಿ ರಣವೀರ್ ಸಿಂಗ್ ಹಾಗೂ ಮಗಳು ದುವಾ (Dua)a ಜೊತೆಗಿರುವ ವಿಶೇಷ ಫೋಟೋ ಗಮನ ಸೆಳೆದಿದೆ.

Hanuman Ansh: ‘ಹನುಮಾನ್ ಅಂಶ್’ ಸಿನಿಮಾ ನೋಡಿ ಪ್ರೀತಿ ಜಿಂಟಾ ಮೆಚ್ಚುಗೆ

‘ಹನುಮಾನ್ ಅಂಶ್’ ಸಿನಿಮಾ ನೋಡಿ ಪ್ರೀತಿ ಜಿಂಟಾ ಮೆಚ್ಚುಗೆ

Hanuman Ansh: ಹನುಮಾನ್ ಅಂಶ್ (Hanuman ansh) ಬಾಲಿವುಡ್ ಸೆಲೆಬ್ರಿಟಿಗಳಿಂದ ಬೆಂಬಲ ಪಡೆಯುತ್ತಿದ್ದಾರೆ, ಪ್ರೀತಿ ಜಿಂಟಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದರು. ಅವರು ಚಿತ್ರದ ಬಗ್ಗೆ ತಮ್ಮ ಪ್ರತಿಕ್ರಿಯೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡರು. ಪ್ರೀತಿ ಜಿಂಟಾ ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದರು ಮತ್ತು ತಮ್ಮ ಅನುಭವದ ಒಂದು ನೋಟವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಹಂಚಿಕೊಂಡಿದ್ದಾರೆ.

ಸಾಮಾನ್ಯ ಪ್ರಜೆ ಮುಖ್ಯಮಂತ್ರಿಯಾದರೆ ಏನಾಗುತ್ತೆ? ಓಂ ಸಾಯಿಪ್ರಕಾಶ್ ನಿರ್ದೇಶನದ ‘ಕಾಮನ್ ಮ್ಯಾನ್’ ಚಿತ್ರಕ್ಕೆ ಸಿಕ್ತು ಕನ್ನಡದ ಘಟಾನುಘಟಿ ಕಲಾವಿದರ ಸಾಥ್

‘ಕಾಮನ್ ಮ್ಯಾನ್’ ಚಿತ್ರಕ್ಕೆ ಸಿಕ್ತು ಕನ್ನಡದ ಘಟಾನುಘಟಿ ಕಲಾವಿದರ ಸಾಥ್ ‌

Common Man Movie: ಗೌರಿಶಂಕರ್‌ ನಟನೆಯ ʻಕಾಮನ್‌ ಮ್ಯಾನ್ʼ‌ ಸಿನಿಮಾವು ಇದೇ 25ರಂದು ಬಿಡುಗಡೆಯಾಗಲಿದೆ. ಸಾಮಾನ್ಯ ಪ್ರಜೆಯೊಬ್ಬ ಮುಖ್ಯಮಂತ್ರಿಯಾದಾಗ ಎದುರಾಗುವ ಸವಾಲುಗಳನ್ನು ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರು ತಮ್ಮ 106ನೇ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ.

Amrita Mahotsav: ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

Amrita Mahotsav: ಡಾ. ವಿಷ್ಣುವರ್ಧನ್ ಅವರ ಅಮೃತ ಮಹೋತ್ಸವವನ್ನು ಐತಿಹಾಸಿಕವಾಗಿ ಆಚರಿಸಲು ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಚಿತ್ರರಂಗದ ಹಲವು ಗಣ್ಯರು ಹಾಗೂ ವಿಷ್ಣುವರ್ಧನ್ ಅವರೊಂದಿಗೆ ಒಡನಾಟ ಹೊಂದಿದ್ದ ಕಲಾವಿದರು ಈ ಮಹೋತ್ಸವಕ್ಕೆ ಸಾಕ್ಷಿಯಾಗಲಿದ್ದಾರೆ. ಸೆಪ್ಟೆಂಬರ್ 27ರಂದು ಬೆಳಗ್ಗೆ 6 ಗಂಟೆಗೆ ಬೆಂಗಳೂರಿನ ಟೌನ್ ಹಾಲ್‌ನಿಂದ ಆರಂಭವಾಗುವ ಮೆರವಣಿಗೆ ನಾಯಂಡಹಳ್ಳಿಯವರೆಗೆ ಸಾಗಲಿದೆ. ಅರ್ಧ ಕಿಲೋಮೀಟರ್ ಉದ್ದದ ಬೃಹತ್ ಧ್ವಜವನ್ನು ಸಾವಿರಾರು ವಿಷ್ಣುವರ್ಧನ್ ಅಭಿಮಾನಿಗಳು ಹೆಮ್ಮೆಯಿಂದ ಹೊತ್ತು ಸಾಗಲಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪ್ರದೋಷ್ ಮಾಫಿ ಸಾಕ್ಷಿ ವಿಚಾರ: ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್!

ಪ್ರದೋಷ್ ಮಾಫಿ ಸಾಕ್ಷಿಗೆ ಬ್ರೇಕ್? ದರ್ಶನ್‌ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್

Renukaswamy Murder Case: ರೇಣುಕಾಸ್ವಾಮಿ ಪ್ರಕರಣದಲ್ಲಿ 14ನೇ ಆರೋಪಿ ಪ್ರದೋಷ್‌ ಮಾಫಿ ಸಾಕ್ಷಿಯಾಗಲು ಕೆಳ ನ್ಯಾಯಾಲಯ ನೀಡಿದ್ದ ಅನುಮತಿಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿರುವ ನ್ಯಾಯಪೀಠ, ಒಂದು ವಾರದೊಳಗೆ ನಿಯಮಾನುಸಾರ ಮರು ಆದೇಶ ಹೊರಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.

Loading...