ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Dhyan Yogeshwar: 'ಕರ್ಣಾಟ ಬಲಂ ಅಜೇಯಂ' ಸಿನಿಮಾದಲ್ಲಿದೆ ಚಾಲುಕ್ಯರ ಕಥೆ; ಬಾದಾಮಿಯಲ್ಲಿ ಭರ್ಜರಿಯಾಗಿ ನಡೆದ ಶೂಟಿಂಗ್‌

ಬಾದಾಮಿಯಲ್ಲಿ ಯೋಗೇಶ್ವರ್ ಮಗನ ‘ಕರ್ಣಾಟ ಬಲಂ ಅಜೇಯಂ’ ಚಿತ್ರಕ್ಕೆ ಶೂಟಿಂಗ್‌

ಶಾಸಕ ಹಾಗೂ ನಟ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್ ನಾಯಕರಾಗಿ ನಟಿಸುತ್ತಿರುವ 'ಕರ್ಣಾಟ ಬಲಂ ಅಜೇಯಂ' ಚಿತ್ರದ ಮೊದಲ ಹಂತದ ಶೂಟಿಂಗ್ ಬಾದಾಮಿಯಲ್ಲಿ ನಡೆಯುತ್ತಿದೆ. ನಿರ್ದೇಶಕ ನಾಗಣ್ಣ ಸಾರಥ್ಯದ ಈ ಚಿತ್ರವು 6ನೇ ಶತಮಾನದ ಚಾಲುಕ್ಯರ ಇತಿಹಾಸ ಹಾಗೂ ಇಂದಿನ ರೈತರ ಮಹಾದಾಯಿ ಹೋರಾಟದ ಕಥೆಯನ್ನು ಒಳಗೊಂಡಿದೆಯಂತೆ.

ʻನನಗೆ ಬಲವಂತದ ರಜೆ ಸಿಕ್ಕಿದೆ, ದೇವರೇ ಹೀಗೆ ಮಾಡಿರಬೇಕುʼ; ಶೂಟಿಂಗ್‌ ಅವಘಡದ ಬಗ್ಗೆ ಎಲ್ಲವನ್ನೂ ಹೇಳಿದ ರಶ್ಮಿಕಾ ಮಂದಣ್ಣ!

ʻನನಗೆ ಬಲವಂತದ ರಜೆ ಸಿಕ್ಕಿದೆʼ; ಗಾಯದ ಬಗ್ಗೆ ರಶ್ಮಿಕಾ ಮಂದಣ್ಣ ಪೋಸ್ಟ್!

ನಟಿ ರಶ್ಮಿಕಾ ಮಂದಣ್ಣ 'ಮೈಸಾ' ಸಿನಿಮಾದ ಡ್ಯಾನ್ಸ್ ಶೂಟಿಂಗ್ ವೇಳೆ ತಮ್ಮ ಬಲ ಸೊಂಟದ ಸ್ನಾಯುರಜ್ಜು (Tendon) ಗಾಯಗೊಳಿಸಿಕೊಂಡಿದ್ದು, ಸದ್ಯ ವೈದ್ಯರ ಸೂಚನೆಯಂತೆ ಬೆಡ್ ರೆಸ್ಟ್‌ನಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಶ್ಮಿಕಾ, ಇದು ಸತತ ಮೂರನೇ ಗಾಯ ಎಂದು ಹೇಳಿದ್ದಾರೆ.

ನಾಲ್ಕೇ ದಿನಕ್ಕೆ ಭಾರತದಲ್ಲಿ ದಾಖಲೆ ಬರೆದ ʻಸ್ಪೈಡರ್‌ ಮ್ಯಾನ್‌ʼ ಸಿನಿಮಾ; ಕರ್ನಾಟಕದಲ್ಲಿ ಅಬ್ಬರದ ಗಳಿಕೆ!

ಕರುನಾಡಿನಲ್ಲಿ ದಾಖಲೆ ಬರೆದ ʻಸ್ಪೈಡರ್‌ ಮ್ಯಾನ್‌ʼ; ಬಾಕ್ಸ್‌ ಆಫೀಸ್‌ ಉಡೀಸ್

Spider-Man Brand New Day Box Office Collection Day 4: ಟಾಮ್ ಹಾಲ್ಯಾಂಡ್ ಅಭಿನಯದ 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ನಾಲ್ಕೇ ದಿನಗಳಲ್ಲಿ 300 ಕೋಟಿ ರೂ. ಗಳಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ಚಿತ್ರವು ಜಾಗತಿಕವಾಗಿ 8,843 ಕೋಟಿ ರೂ. ಬಾಚಿಕೊಂಡಿದೆ.

ʻ60-70 ಜನರಿಗೆ ಒಂದೇ ಟಾಯ್ಲೆಟ್‌, ಕಮೋಡ್‌ನಲ್ಲಿ ಹಲ್ಲಿಗಳುʼ; ಜೈಲುವಾಸದ ಕರಾಳ ದಿನಗಳನ್ನು ನೆನೆದ ನಟ ಸಲ್ಮಾನ್‌ ಖಾನ್‌

‌ʻ60-70 ಜನರಿಗೆ ಒಂದೇ ಟಾಯ್ಲೆಟ್‌ʼ; ಜೈಲುವಾಸದ ಬಗ್ಗೆ ಸಲ್ಮಾನ್‌ ಖಾನ್ ಮಾತು

ಬಾಲಿವುಡ್ ನಟ ಸಲ್ಮಾನ್ ಖಾನ್ 'ಅಲೈಯನ್ಸ್' ಶೋನಲ್ಲಿ ಭಾಗವಹಿಸಿ ತಮ್ಮ ಜೈಲುವಾಸದ ಕರಾಳ ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಹಲವು ಬಾರಿ ಜೈಲು ಪಾಲಾಗಿದ್ದ ವೇಳೆ, 60-70 ಜನರಿಗೆ ಒಂದೇ ಸಣ್ಣ ಶೌಚಾಲಯವಿದ್ದು, ಕಮೋಡ್‌ನಲ್ಲಿ ಹಲ್ಲಿಗಳಿರುತ್ತಿದ್ದವು ಎಂದು ಅವರು ವಿವರಿಸಿದ್ದಾರೆ.

Kangana Ranaut : ಸೋನಾಕ್ಷಿ ಸಿನ್ಹಾ ವಿರುದ್ಧ ಕಂಗನಾ ಗರಂ? ಅಷ್ಟಕ್ಕೂ ಆಗಿದ್ದೇನು?

ಸೋನಾಕ್ಷಿ ಸಿನ್ಹಾ ವಿರುದ್ಧ ಕಂಗನಾ ಗರಂ? ಅಷ್ಟಕ್ಕೂ ಆಗಿದ್ದೇನು?

Kangana Ranaut : ಕಾಕ್ರೋಚ್ ಜನತಾ ಪಕ್ಷದ ನೀಟ್ ಪ್ರತಿಭಟನೆಗಳು ಕೊನೆಗೊಂಡಾಗಿನಿಂದ ಕಂಗನಾ ರನೌತ್ ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹೇಳಿಕೆಗಳು ನಿರಂತರವಾಗಿ ಅವರನ್ನು ವಿವಾದಗಳಿಂದ ಸುತ್ತುವರೆದಿವೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ನೀಡಿದ ನಟಿಯೊಬ್ಬರ ವಿರುದ್ಧ ಕಂಗನಾ ರಣಾವತ್ ಗರಂ ಆಗಿದ್ದಾರೆ. ಸೋನಾಕ್ಷಿ ಸಿನ್ಹಾ ಅವರನ್ನು ಗುರಿಯಾಗಿಸಿಕೊಂಡೇ ಕಂಗನಾ ರಣಾವತ್ ಈ ರೀತಿ ಹೇಳಿದ್ದಾರೆ ಎಂದು ನೆಟ್ಟಿಗರು ಅಂದಾಜಿಸುತ್ತಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್​​ನಲ್ಲಿ ಏನಿದೆ?

120 ಕೋಟಿಯಿಂದ 70 ಕೋಟಿಗೆ ಸಂಭಾವನೆಯನ್ನು ಇಳಿಸಿಕೊಂಡ ಸಲ್ಮಾನ್‌ ಖಾನ್!‌ ʻಭಾಯಿಜಾನ್‌ʼ ಇಷ್ಟೊಂದು ಡಿಸ್ಕೌಂಟ್‌ ಕೊಟ್ಟಿದ್ದು ಯಾರಿಗೆ?

ಸಂಭಾವನೆಯಲ್ಲಿ 50 ಕೋಟಿ ಕಡಿತಗೊಳಿಸಿದ ಸಲ್ಮಾನ್‌ ಖಾನ್‌? ಏಕೆ ಈ ನಿರ್ಧಾರ?

ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ 120 ಕೋಟಿಯ ತಮ್ಮ ಸಂಭಾವನೆಯನ್ನು ಬರೋಬ್ಬರಿ 50 ಕೋಟಿ ರೂ. ಕಡಿತಗೊಳಿಸಿ, 70 ಕೋಟಿಗೆ ಒಪ್ಪಿಕೊಂಡಿದ್ದಾರೆ. ಸಾಲು ಸಾಲು ಸೋಲುಗಳ ನಂತರ 2027ರ ಈದ್‌ಗೆ ಬಿಗ್ ಕಂಬ್ಯಾಕ್ ಮಾಡಲು ಸಲ್ಮಾನ್ ಸಜ್ಜಾಗುತ್ತಿದ್ದಾರೆ. ಅಷ್ಟಕ್ಕೂ ಸಲ್ಮಾನ್ ಇಷ್ಟೊಂದು ಡಿಸ್ಕೌಂಟ್‌ ಕೊಟ್ಟಿದ್ದು ಯಾರಿಗೆ?

Suriya: ಜ್ಯೋತಿಕಾ-ಸೂರ್ಯ ಜೋಡಿಯ ಪ್ರೀತಿಯ ರಹಸ್ಯ ಇದು!

Suriya: ಜ್ಯೋತಿಕಾ-ಸೂರ್ಯ ಜೋಡಿಯ ಪ್ರೀತಿಯ ರಹಸ್ಯ ಇದು!

Suriya: ಚೆನ್ನೈನಲ್ಲಿ ನಡೆದ ತಮ್ಮ ಮುಂಬರುವ ಚಿತ್ರ 'ವಿಶ್ವನಾಥ್ & ಸನ್ಸ್' ಪ್ರಚಾರ ಕಾರ್ಯಕ್ರಮದಲ್ಲಿ, ಸೂರ್ಯ ಅವರು ತಮ್ಮ ಲವ್‌ ಸೀಕ್ರೆಟ್‌ ಬಗ್ಗೆ ಬಹಿರಂಗಪಡಿಸಿದರು. ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ನಟ, ಸಂಗಾತಿಯ ಮೇಲಿನ ಪ್ರೀತಿಯನ್ನು ಗೌರವದಿಂದ ಹೇಗೆ ಸಹಾಯ ಮಾಡಬೇಕು ಎಂದು ಹೇಳಿದರು.ಸೂರ್ಯ ಮತ್ತು ಜ್ಯೋತಿಕಾ 1999 ರ ತಮಿಳು ಚಿತ್ರ ಪೂವೆಲ್ಲಾಮ್ ಕೆಟ್ಟುಪ್ಪರ್ ನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಭೇಟಿಯಾಗಿ, ಆ ಬಳಿಕ ಡೇಟಿಂಗ್ ಪ್ರಾರಂಭಿಸಿದರು. ಸೆಪ್ಟೆಂಬರ್ 11, 2006 ರಂದು ಚೆನ್ನೈನಲ್ಲಿ ವಿವಾಹವಾದರು.

ಸೆನ್ಸಾರ್‌ನಲ್ಲಿ ಪಾಸಾದ ಕೋಮಲ್- ಸೋನಲ್ ಅಭಿನಯದ 'ರೋಲೆಕ್ಸ್'‌; ಈ ಕಾಮಿಡಿ-ಥ್ರಿಲ್ಲರ್ ಸಿನಿಮಾ ರಿಲೀಸ್‌ ಆಗೋದ್ಯಾವಾಗ?

ಸೆನ್ಸಾರ್‌ನಲ್ಲಿ ಪಾಸಾದ ಕೋಮಲ್- ಸೋನಲ್ ಅಭಿನಯದ 'ರೋಲೆಕ್ಸ್'‌ ಸಿನಿಮಾ

ನಟ ಕೋಮಲ್ ಕುಮಾರ್ ಹಾಗೂ ಸೋನಲ್ ಮೊಂಥೆರೋ ಅಭಿನಯದ 'ರೋಲೆಕ್ಸ್' ಸಿನಿಮಾ ಸೆನ್ಸಾರ್ ಮಂಡಳಿಯಿಂದ 'U/A' ಪ್ರಮಾಣಪತ್ರ ಪಡೆದುಕೊಂಡು ಬಿಡುಗಡೆಗೆ ಸಿದ್ಧವಾಗಿದೆ. ಶ್ರೀನಿವಾಸ್ ಮಂಡ್ಯ ನಿರ್ದೇಶನದ ಈ ಕಾಮಿಡಿ-ಥ್ರಿಲ್ಲರ್ ಚಿತ್ರದಲ್ಲಿ ವಿನೋದ್ ಪ್ರಭಾಕರ್ ವಿಶೇಷ ಪಾತ್ರದಲ್ಲಿದ್ದಾರೆ.

Ramayana Movie: ರಣಬೀರ್ ʻರಾಮʼನ ಪಾತ್ರದಲ್ಲಿ ಅತ್ಯಂತ ವೀಕ್‌! ರಾಮಲೀಲಾ ಸಂಘದಿಂದ ಬಂತು ಈ ಎಚ್ಚರಿಕೆ

ರಾಮಾಯಣ ವಿವಾದ; ರಾಮಲೀಲಾ ಸಂಘದಿಂದ ಬಂತು ಈ ಎಚ್ಚರಿಕೆ!

Ramayana Movie: ಸಿನಿಮಾ ಬಿಡುಗಡೆಗೂ ಮುನ್ನ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಯಾವುದೇ ದೃಶ್ಯಗಳು ಅಥವಾ ಸಂಭಾಷಣೆಗಳಿಲ್ಲ ಎಂಬುದರ ಖಚಿತತೆಗಾಗಿ ತಮ್ಮ ಸಂಘಟನೆಯ ಪ್ರತಿನಿಧಿಗಳಿಗಾಗಿ ವಿಶೇಷ ಪ್ರದರ್ಶನವೊಂದನ್ನು ಏರ್ಪಡಿಸುವಂತೆ 'ಶ್ರೀ ರಾಮಲೀಲಾ ಮಹಾಸಂಘ'ವು ಚಿತ್ರತಂಡವನ್ನು ಒತ್ತಾಯಿಸಿದೆ. ತಮ್ಮ ಮನವಿಯನ್ನು ಪರಿಗಣಿಸದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಕೆ ನೀಡಿದೆ.

Ayogya 2: ‘ಮಿಲ್ಕಿ ಬ್ಯೂಟಿ’ ಸಾಂಗ್‌ನಲ್ಲಿ ಹೆಜ್ಜೆ ಹಾಕುತ್ತಾ ಸ್ಯಾಂಡಲ್‌ವುಡ್‌ಗೆ ಮರಳಿದ ನಟಿ ಪ್ರಜ್ಞಾ

‘ಮಿಲ್ಕಿ ಬ್ಯೂಟಿ’ ಸಾಂಗ್‌ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ ನಟಿ ಪ್ರಜ್ಞಾ

ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ 'ಅಯೋಗ್ಯ 2' ಚಿತ್ರದ ‘ಮಿಲ್ಕಿ ಬ್ಯೂಟಿ’ ಸಾಂಗ್ ಬಿಡುಗಡೆಯಾಗಿದೆ. ಈ ಹಾಡಿನ ಮೂಲಕ ನಟಿ ಪ್ರಜ್ಞಾ ಸ್ಯಾಂಡಲ್‌ವುಡ್‌ಗೆ ರೀ-ಎಂಟ್ರಿ ನೀಡಿದ್ದಾರೆ. ಮಹೇಶ್ ಕುಮಾರ್ ನಿರ್ದೇಶnd ಈ ಸಿನಿಮಾ ಆಗಸ್ಟ್ 7 ರಂದು ತೆರೆಕಾಣಲಿದೆ.

Bigg Boss Kannada 13: ಹೊಸ ಸೀಸನ್‌ಗೆ ಜಡ್ಜ್‌ಗಳಾಗಿ ಬರಲಿದ್ದಾರಾ  ಗಿಲ್ಲಿ, ಸಂಗೀತಾ? ಏನಿದು ಹೊಸ ಟ್ವಿಸ್ಟ್‌?

Bigg Boss: ಹೊಸ ಸೀಸನ್‌ಗೆ ಜಡ್ಜ್‌ಗಳಾಗಿ ಬರಲಿದ್ದಾರಾ ಗಿಲ್ಲಿ, ಸಂಗೀತಾ?

Bigg Boss Kannada 13: ಈ ಮೊದಲು ಬಿಗ್ ಬಾಸ್ ಟೀಂ ಆಯ್ಕೆ ಮಾಡಿದವರಿಗೆ ನೇರವಾಗಿ ಎಂಟ್ರಿ ಸಿಗುತ್ತಿತ್ತು. ಆದರೆ, ಇತ್ತೀಚೆಗೆ ಇದನ್ನು ಬದಲಿಸಲಾಗಿತ್ತು. ಈ ಬಾರಿ ಈ ಶೈಲಿಯನ್ನು ಮತ್ತಷ್ಟು ಬದಲಿಸೋ ಸಾಧ್ಯತೆ ಇದೆ. ಈಗಾಗಲೇ ಕಾಮನ್ ಮ್ಯಾನ್ ಆಡಿಷನ್ ಪ್ರಕ್ರಿಯೆ ಮುಗಿಸಿದ್ದಾರೆ. ಆಡಿಷನ್‌ ರೌಂಡ್‌ನಲ್ಲಿ ಸೆಲೆಕ್ಟ್ ಆದವರನ್ನ ಮುಂದಿನ ಹಂತಕ್ಕೆ ಕರೆತರಲಾಗಿದೆ. ಆಡಿಷನ್ಸ್ ಮೂಲಕ ಆಯ್ಕೆ ಆಗಿರುವ ಜನಸಾಮಾನ್ಯರು ‘ಬಿಗ್ ಬಾಸ್ - ಅಗ್ನಿಪರೀಕ್ಷೆ’ ಎದುರಿಸಬೇಕು. ಅಗ್ನಿಪರೀಕ್ಷೆಯಲ್ಲಿ ಪಾಸ್ ಆದವರು ‘ಬಿಗ್ ಬಾಸ್ ಕನ್ನಡ 13’ ಅಧಿಕೃತ ಟಿವಿ ಸೀಸನ್‌ಗೆ ಆಯ್ಕೆ ಆಗಲಿದ್ದಾರೆ.

SIIMA Awards 2026: ಸೈಮಾ ಅವಾರ್ಡ್ 14ನೇ ಸೀಸನ್; ಪ್ರತಿನಿಧಿಸುವ ನಟ ಶ್ರೀಮುರುಳಿ

ಸೈಮಾ ಅವಾರ್ಡ್ 14ನೇ ಸೀಸನ್; ಪ್ರತಿನಿಧಿಸುವ ನಟ ಶ್ರೀಮುರುಳಿ

SIIMA Awards 2026: ಈ ಬಾರಿಯ 14ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ಸೆಪ್ಟೆಂಬರ್ 11 ಮತ್ತು 12 ರಂದು ವೈಭವಯುತವಾಗಿ ನಡೆಯಲಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಪತ್ರಿಕಾಗೋಷ್ಠಿಯಲ್ಲಿ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ನಟ ಶ್ರೀಮುರಳಿ, ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಉಪಸ್ಥಿತರಿದ್ದು ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಂಡರು.

Sonu Nigam: ಸ್ಟಾರ್ ಗಾಯಕನಿಗೆ ಬಹಿಷ್ಕಾರ ಹಾಕಿದ್ದವು ಈ ಮ್ಯೂಸಿಕ್ ಕಂಪನಿಗಳು!

ಸ್ಟಾರ್ ಗಾಯಕನಿಗೆ ಬಹಿಷ್ಕಾರ ಹಾಕಿದ್ದವು ಈ ಮ್ಯೂಸಿಕ್ ಕಂಪನಿಗಳು!

Sonu Nigam: ಗಾಯಕ ಸೋನು ನಿಗಮ್ (Sonu Nigam೦ ತಮ್ಮ ವೃತ್ತಿಜೀವನದ ಏಳುಬೀಳುಗಳನ್ನು ನೆನಪಿಸಿಕೊಂಡಿದ್ದಾರೆ. ಗಾಯಕರ ರಾಯಲ್ಟಿ ಮತ್ತು ಕೃತಿಸ್ವಾಮ್ಯದ ಹಕ್ಕುಗಳಿಗಾಗಿ ( copyright battle) ಧ್ವನಿ ಎತ್ತಿದ್ದಕ್ಕೆ ಮ್ಯೂಸಿಕ್ ಕಂಪನಿಗಳು ತಮಗೆ ಬಹಿಷ್ಕಾರ ಹಾಕಿದ್ದವು ಎಂದು ಖ್ಯಾತ ಗಾಯಕ ಸೋನು ನಿಗಮ್ ಹೇಳಿದ್ದಾರೆ.

Aditi Sharma: ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ದೂರು ದಾಖಲಿಸಿದ ಖ್ಯಾತ ಕಿರುತೆರೆ ನಟಿ

ಪತಿ, ಅತ್ತೆ ಮತ್ತು ನಾದಿನಿ ವಿರುದ್ಧ ದೂರು ದಾಖಲಿಸಿದ ಖ್ಯಾತ ಕಿರುತೆರೆ ನಟಿ

Aditi Sharma: ತಮ್ಮ ದೂರಿನಲ್ಲಿ, ಅದಿತಿ ಅವರು ಆ ಮೂವರು ವ್ಯಕ್ತಿಗಳ ವಿರುದ್ಧ ದೈಹಿಕ ಹಾಗೂ ಮಾನಸಿಕ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಹಲ್ಲೆ, ನಿಂದನೆ, ತಮ್ಮ ಚಾರಿತ್ರ್ಯ ವಧೆ ಮತ್ತು ತಮ್ಮ 'ಮದುವೆಯ ಒಡವೆಗಳನ್ನು' ದುರುಪಯೋಗಪಡಿಸಿಕೊಳ್ಳುವುದು ಮುಂತಾದ ಆರೋಪಗಳನ್ನು ಮಾಡಿದ್ದಾರೆ. ಈ ವರ್ಷದ ಆರಂಭದಲ್ಲಿಯೂ ಈ ಜೋಡಿಯ ಸಂಬಂಧ ಹಳಸಿತ್ತು. ಮಾರ್ಚ್ 2025 ರಲ್ಲಿ, ಅಭಿನೀತ್ ಅವರು ಅಪೋಲೆನಾ ಸಹನಟಿ ಸಮರ್ಥ್ಯ ಗುಪ್ತಾ ಅವರೊಂದಿಗೆ ಅದಿತಿ ವಿವಾಹೇತರ ಸಂಬಂಧ ಹೊಂದಿದ್ದಾರೆಂದು ಆರೋಪ ಮಾಡಿದ್ದರು.

Idhayam Murali OTT:  ಅತ್ಯಂತ ಭಾವನಾತ್ಮಕ ಕಥೆ; ಈ ಸೌತ್‌ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

ಅತ್ಯಂತ ಭಾವನಾತ್ಮಕ ಕಥೆ; ಈ ಸೌತ್‌ ಮೂವಿ ಸ್ಟ್ರೀಮಿಂಗ್‌ ಎಲ್ಲಿ?

Idhayam Murali OTT: ಅಥರ್ವ ಅಭಿನಯದ 'ಇಧಯಂ ಮುರಳಿ' ಚಿತ್ರವು OTT ಗೆ (OTT) ಪದಾರ್ಪಣೆ ಮಾಡಲು ಸಜ್ಜಾಗಿದೆ. ತನ್ನ ಯೌವ್ವನದ ಕಥೆ ಮತ್ತು ಭಾವನಾತ್ಮಕ ಕ್ಷಣಗಳಿಂದ ಚಿತ್ರಮಂದಿರಗಳಲ್ಲಿ ಗಮನ ಸೆಳೆದ ಈ ಸಿನಿಮಾ ಶೀಘ್ರದಲ್ಲೇ ಸ್ಟ್ರೀಮಿಂಗ್‌ಗೆ ಲಭ್ಯವಿರುತ್ತದೆ. ದೊಡ್ಡ ಪರದೆಯ ಮೇಲೆ ಚಿತ್ರವನ್ನು ವೀಕ್ಷಿಸಲು ಸಾಧ್ಯವಾಗದ ಮತ್ತು ಅದರ ಡಿಜಿಟಲ್ ಬಿಡುಗಡೆಗಾಗಿ ಕಾಯುತ್ತಿರುವ ವೀಕ್ಷಕರಿಗೆ ಇದು ಒಳ್ಳೆಯ ಸುದ್ದಿಯಾಗಿದೆ.

Rajinikanth:  ರಜನೀಕಾಂತ್‌ಗಾಗಿ ಈ ನಿಯಮ ಮುರಿದ ನಟ ವಿಜಯ್ ಸೇತುಪತಿ

ರಜನೀಕಾಂತ್‌ಗಾಗಿ ಈ ನಿಯಮ ಮುರಿದ ನಟ ವಿಜಯ್ ಸೇತುಪತಿ

Rajinikanth: 2023ರ ಬ್ಲಾಕ್‌ಬಸ್ಟರ್ ಚಿತ್ರದ ಮುಂಬರುವ ಮುಂದುವರಿದ ಭಾಗ ಜೈಲರ್ 2 ಆಗಿದ್ದು, ಇದರಲ್ಲಿ ರಜನಿಕಾಂತ್ ಮುತ್ತುವೇಲ್ ಪಾಂಡಿಯನ್ ಪಾತ್ರವನ್ನು ಮತ್ತೆ ನಿರ್ವಹಿಸುತ್ತಿದ್ದಾರೆ. ಮೊದಲ ಕಂತಿನ ಘಟನೆಗಳ ನಂತರ ಈ ಚಿತ್ರವು ಕಥೆಯನ್ನು ಮುಂದುವರಿಸುವ ನಿರೀಕ್ಷೆಯಿದೆ. ರಜನಿಕಾಂತ್ ಅವರಲ್ಲದೆ , ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್‌ಜೆ ಸೂರ್ಯ ಮತ್ತು ಸೂರಜ್ ವೆಂಜರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದಲ್ಲದೆ, ಮೋಹನ್ ಲಾಲ್, ವಿಜಯ್ ಸೇತುಪತಿ, ಹೃತಿಕ್ ರೋಷನ್ ಮತ್ತು ಶಿವ ರಾಜ್‌ಕುಮಾರ್ ತಮ್ಮ ಪಾತ್ರಗಳನ್ನು ಪುನರಾವರ್ತಿಸುವ ನಿರೀಕ್ಷೆಯಿದೆ.

Lenin Movie OTT : ಅಖಿಲ್ ಅಕ್ಕಿನೇನಿ ಹಿಟ್‌ ಮೂವಿ 'ಲೆನಿನ್' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

ಅಖಿಲ್ ಅಕ್ಕಿನೇನಿ ಹಿಟ್‌ ಮೂವಿ 'ಲೆನಿನ್' ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌!

Lenin Movie OTT : ಅಖಿಲ್ ಅಕ್ಕಿನೇನಿ (akhil akkineni) ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಮತ್ತು 'ಲೆನಿನ್' ಚಿತ್ರದ ಮೂಲಕ ತಮ್ಮ ವೃತ್ತಿಜೀವನದ ಅತಿದೊಡ್ಡ ಬ್ಲಾಕ್‌ಬಸ್ಟರ್ ಹಿಟ್ ಗಳಿಸಿದ್ದಾರೆ. ಮುರಳಿ ಕಿಶೋರ್ ಅಬ್ಬೂರ್ ನಿರ್ದೇಶನದ ಈ ಮಾಸ್ ಆಕ್ಷನ್ ಎಂಟರ್‌ಟೈನರ್ ಈಗ ಒಟಿಟಿಯಲ್ಲಿ ರಂಜಿಸಲು ಸಿದ್ಧವಾಗಿದೆ. ಅಖಿಲ್ ತಮ್ಮ ಹೊಸ ಗೆಟಪ್ ಮತ್ತು ಆಕ್ಷನ್ ಅಭಿನಯದಿಂದ ಮಾಸ್ ಪ್ರೇಕ್ಷಕರನ್ನು ಮೆಚ್ಚಿಸಿದ್ದಾರೆ. ಭಾಮಾ ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ಅಖಿಲ್ ಅವರನ್ನು ರಂಜಿಸಿದರೆ, ಎಸ್. ಥಮನ್ ಅವರ ಮಾಸ್ ಬೀಟ್ಸ್ ಮತ್ತು ಹಿನ್ನೆಲೆ ಸಂಗೀತ ಚಿತ್ರದ ಪ್ರಮುಖ ಆಕರ್ಷಣೆಯಾಗಿತ್ತು.

Ramayana Movie: ಬರ್ತಿದೆ ರಾಮಾಯಣ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ!  ವಿಶೇಷತೆ ಏನು?

ಬರ್ತಿದೆ ರಾಮಾಯಣ ಧಾರಾವಾಹಿ ಕುರಿತು ಸಾಕ್ಷ್ಯಚಿತ್ರ! ವಿಶೇಷತೆ ಏನು?

Ramayana Movie: ರಾಮಾನಂದ ಸಾಗರ್ ಅವರ ಟಿವಿ ಸರಣಿ ರಾಮಾಯಣವು ಇದುವರೆಗೆ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಭಾರತೀಯ ಧಾರಾವಾಹಿಯಾಗಿ ಉಳಿದಿದೆ. 1987-88ರ ಅವಧಿಯಲ್ಲಿ ಪ್ರಸಾರವಾದ ಈ ಸರಣಿಯು ಇನ್ನೂ ಯಾವುದೇ ಭಾರತೀಯ ಧಾರಾವಾಹಿಯ ಅತ್ಯಧಿಕ ಟಿಆರ್‌ಪಿಯನ್ನು ಹೊಂದಿದೆ. 2020 ರಲ್ಲಿ ಕೊರೋನಾ ಸಮಯದಲ್ಲಿ ಮರುಪ್ರಸಾರವಾದಾಗ ಅದು ಮತ್ತೆ ಟಿವಿ ರೇಟಿಂಗ್‌ನಲ್ಲಿ ಅಗ್ರಸ್ಥಾನ ಪಡೆದಿರುವುದು ಇದರ ಜನಪ್ರಿಯತೆಗೆ ಸಾಕ್ಷಿಯಾಗಿದೆ.

Anupama Parameswaran:  ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್!

ಬ್ರೇಕಪ್ ಬಗ್ಗೆ ಮೌನ ಮುರಿದ ಅನುಪಮಾ ಪರಮೇಶ್ವರನ್!

Anupama Parameswaran: ಇತ್ತೀಚೆಗೆ, ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ. ತಮಿಳು ನಟ ಧ್ರುವ ವಿಕ್ರಮ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ವದಂತಿ ಕೆಲವು ಸಮಯದಿಂದ ನಡೆಯುತ್ತಿದ್ದರೆ, ಈಗ ಇಬ್ಬರೂ ಬೇರ್ಪಟ್ಟಿದ್ದಾರೆ ಎಂಬ ಸುದ್ದಿ ಚಲನಚಿತ್ರ ವಲಯಗಳಲ್ಲಿ ಬಿಸಿ ವಿಷಯವಾಗಿದೆ. ಬ್ರೇಕಪ್ (Breakup) ವದಂತಿಗಳ ಕುರಿತು ನಟಿ ಅನುಪಮಾ ಪರಮೇಶ್ವರನ್ ಕೊನೆಗೂ ಪ್ರತಿಕ್ರಿಯಿಸಿದ್ದಾರೆ.

Ramayana:  ಕನ್ನಡದ ನಟಿಯೊಬ್ಬರಿಗೂ ಸೀತೆಯ ಪಾತ್ರದ ಅವಕಾಶ ಬಂದಿತ್ತು! ಯಾರದು?

ಕನ್ನಡದ ನಟಿಯೊಬ್ಬರಿಗೂ ಸೀತೆಯ ಪಾತ್ರದ ಅವಕಾಶ ಬಂದಿತ್ತು! ಯಾರದು?

Ramayana: ಸೀತೆಯ (Sita Role) ಪಾತ್ರ ನಿರ್ವಹಿಸಿರುವ ಸಾಯಿ ಪಲ್ಲವಿ ಬಗ್ಗೆ ಭಿನ್ನ-ಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಕೆಲವರು ಸಾಯಿ ಪಲ್ಲವಿ ಸೂಕ್ತ ಆಯ್ಕೆ ಎಂದರೆ, ಇನ್ನು ಕೆಲವರು ಅಲ್ಲ ಎನ್ನುತ್ತಿದ್ದಾರೆ. ಅಂದಹಾಗೆ ‘ರಾಮಾಯಣ’ದಲ್ಲಿ ಸೀತೆ ಪಾತ್ರ ಮಾಡುವ ಅವಕಾಶ ಕನ್ನಡದ ನಟಿಗೆ ಬಂದಿತ್ತು. ಈ ಹಿಂದೆಯೇ ಈ ಬಗ್ಗೆ ಚರ್ಚೆಗಳೂ ಆಗಿದ್ದವು.

Kannada New Movie: ವಿವೇಕ್‌ ಸಿಂಹ ಅಭಿನಯದ ‘ಅನಿರೀಕ್ಷಿತ ಅತಿಥಿಗಳು’ ಸೆಪ್ಟೆಂಬರ್‌ನಲ್ಲಿ ತೆರೆಗೆ

ವಿವೇಕ್‌ ಸಿಂಹ ಅಭಿನಯದ ‘ಅನಿರೀಕ್ಷಿತ ಅತಿಥಿಗಳು’ ಸೆಪ್ಟೆಂಬರ್‌ನಲ್ಲಿ ತೆರೆಗೆ

Kannada New Movie: ಮನೋಜ್ ಅಣ್ಣಯ್ಯ (Manoj Annayya) ನಿರ್ದೇಶನದಲ್ಲಿ ಹಾಗೂ ಬಿ. ವಿನೋದ್ ಕುಮಾರ್ ನಿರ್ಮಿಸಿರುವ ತೇಜ್ವಿನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಮೂಡಿಬಂದಿರುವ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ 'ಎ' vivek simha starrer anireekshita atithigalu gets a certificate from cbfc ಪ್ರಮಾಣಪತ್ರ ನೀಡಿದೆ. ಹಿಂಸಾತ್ಮಕ ದೃಶ್ಯಗಳಿಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ಸೂಚಿಸಿದ್ದ ಸೆನ್ಸಾರ್ ಸಮಿತಿಯ ನಿರ್ದೇಶನಗಳನ್ನು ಪಾಲಿಸಿದ ಬಳಿಕ ಚಿತ್ರಕ್ಕೆ ಅಂತಿಮ ಪ್ರಮಾಣಪತ್ರ ಲಭಿಸಿದೆ.

Kannada New Movie: ಸಿದ್ದು ಪೂರ್ಣಚಂದ್ರ ನಿರ್ದೇಶನದ `ಬ್ರಹ್ಮ ಕಮಲ' ಟ್ರೈಲರ್ ಔಟ್‌!

ಸಿದ್ದು ಪೂರ್ಣಚಂದ್ರ ನಿರ್ದೇಶನದ `ಬ್ರಹ್ಮ ಕಮಲ' ಟ್ರೈಲರ್ ಔಟ್‌!

Kannada New Movie: ಸಿದ್ದು ಪೂರ್ಣಚಂದ್ರ ಈ ಮೂಲಕ ನಿರ್ದೇಶಕನಾಗಿ ತನ್ನದು ಭಿನ್ನಪಥ ಎಂಬ ಸಂದೇಶ ರವಾನಿಸಿದ್ದ ಅವರು, ಮತ್ತೊಂದು ಸೂಕ್ಷ್ಮ ಕಥನಕ್ಕೆ ದೃಶ್ಯರೂಪ ನೀಡಿದ್ದಾರೆ. ನಮ್ಮ ನಡುವಿನ ಕೌಟುಂಬಿಕ ವ್ಯವಸ್ಥೆಯೊಳಗಿನ ಹೆಣ್ಣೊಬ್ಬಳ ಒಳತೋಟಿಗೆ ಕಣ್ಣಾದ ಆ ಕಥನವೀಗ ಬ್ರಹ್ಮಕಮಲ ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆಗೆ ಅಣಿಗೊಂಡಿದೆ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆಗೊಂಡು, ಪ್ರೇಕ್ಷಕರ ವಲಯದಲ್ಲಿ ಚರ್ಚೆಗೆ ಅನುವು ಮಾಡಿಕೊಟ್ಟಿದೆ.

Salman Khan: ರಿಯಾಲಿಟಿ ಶೋಗೆ ಎಂಟ್ರಿ  ಕೊಟ್ಟ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ಶಾಕ್

ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟ ಸಲ್ಮಾನ್ ಖಾನ್; ಅಭಿಮಾನಿಗಳಿಗೆ ಶಾಕ್

Salman Khan: ನಟ ಸೊಹೈಲ್ ಖಾನ್ ಪ್ರಸ್ತುತ ರಿಯಾಲಿಟಿ ಶೋ ಅಲೈಯನ್ಸ್‌ನಲ್ಲಿ ಸ್ಪರ್ಧಿಯಾಗಿದ್ದಾರೆ. ಅವರ ಮಾಜಿ ಪತ್ನಿ ಸೀಮಾ ಸಜ್ದೇಹ್ ವೈಲ್ಡ್‌ಕಾರ್ಡ್ ಸ್ಪರ್ಧಿಯಾಗಿ ಈ ಕಾರ್ಯಕ್ರಮಕ್ಕೆ ಪ್ರವೇಶಿಸಿದ್ದರು, ಆದರೆ ಈಗ ಅವರನ್ನು ಹೊರಹಾಕಲಾಗಿದೆ ಸೊಹೈಲ್ ಅವರಿಗೆ ಶೋನಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ವಾರವಂತೂ ಅವರಿಗೆ ಬಹಳ ಕಷ್ಟಕರವಾಗಿತ್ತು. ಈಗ ಮನೆಯಲ್ಲಿ ಸೊಹೈಲ್ ಅವರಿಗೆ ಬೆಂಬಲ ಸೂಚಿಸಲು ಅವರ ಸಹೋದರ, ಸ್ಟಾರ್ ನಟ ಸಲ್ಮಾನ್ ಖಾನ್ ಶೋಗೆ ಪ್ರವೇಶಿಸಿದ್ದಾರೆ.

Bhavantara Movie: ಬಾಲನಟ ಕಾರ್ತಿಕ್‌ ಶರ್ಮ ಈಗ ನಿರ್ದೇಶಕ: ಮೆಲೋಡಿ ಸಾಂಗ್ ರಿಲೀಸ್

ಬಾಲನಟ ಕಾರ್ತಿಕ್‌ ಶರ್ಮ ಈಗ ನಿರ್ದೇಶಕ: ಮೆಲೋಡಿ ಸಾಂಗ್ ರಿಲೀಸ್

Bhavantara Movie: ಈ ಸಿನಿಮಾದ ‘ಮೊದಮೊದಲಿದು’ ಎಂಬ ಮೆಲೋಡಿ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆಯಾದ ‘ಹೊಂಬಾಳೆ ಫಿಲ್ಮ್ಸ್’ ತನ್ನದೇ ಆದ ‘ಹೊಂಬಾಳೆ ಮ್ಯೂಸಿಕ್’ ಆಡಿಯೋ ಲೇಬಲ್ ಮೂಲಕ ಈ ಚಿತ್ರದ ಆಡಿಯೋ ಹಕ್ಕುಗಳನ್ನು ಪಡೆದುಕೊಂಡಿದ್ದು, ಹೊಸಬರ ಈ ವಿಭಿನ್ನ ಪ್ರಯತ್ನಕ್ಕೆ ಸಾಥ್ ನೀಡಿದೆ.

Loading...