ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Bigg Boss Telugu 10: ಬಿಗ್ ಬಾಸ್ ತೆಲುಗು ಹೊಸ ಪ್ರೋಮೋ ಔಟ್‌; ಇವರಿಗೆ ಭಾರೀ ಬೇಡಿಕೆ ಇಟ್ಟ ನೆಟ್ಟಿಗರು

ಬಿಗ್ ಬಾಸ್ ಹೊಸ ಪ್ರೋಮೋ ಔಟ್‌; ಇವರಿಗೆ ಭಾರೀ ಬೇಡಿಕೆ ಇಟ್ಟ ನೆಟ್ಟಿಗರು

Bigg Boss Telugu 10: ಹೊಸ ಪ್ರೋಮೋದಲ್ಲಿ (Promo), ನಿರೂಪಕರು ರಿಯಾಲಿಟಿ ಟಿವಿ (Reality Show) ಶೋನಲ್ಲಿ ಹತ್ತು ಪಟ್ಟು ಸವಾಲುಗಳನ್ನು ಭರವಸೆ ನೀಡುತ್ತಾರೆ. ಬಹಳ ನಿರೀಕ್ಷಿತ ಬಿಗ್ ಬಾಸ್ ಸೀಸನ್ 10 ತೆಲುಗು ಶೀಘ್ರದಲ್ಲೇ ಬರಲಿದೆ! 10X ಅಚ್ಚರಿಗಳು. 10X ನಾಟಕ. 10X ಸವಾಲುಗಳು. ಈ ಸಾರಿ ಸವಾಲು (ಈ ಬಾರಿ ಆಟವು ಪ್ರಶ್ನೆಗಳನ್ನು ಹೊಂದಿರುವುದಿಲ್ಲ) ಎಂದು ಬರೆದುಕೊಂಡಿದೆ.

Anupama Parameswaran: ಅನುಪಮಾ ಪರಮೇಶ್ವರನ್ ಹೇಳಿಕೆಗೆ  ಧ್ರುವ ವಿಕ್ರಮ್ ಖಡಕ್‌ ರಿಪ್ಲೈ

ಅನುಪಮಾ ಪರಮೇಶ್ವರನ್ ಹೇಳಿಕೆಗೆ ಧ್ರುವ ವಿಕ್ರಮ್ ಖಡಕ್‌ ರಿಪ್ಲೈ

Anupama Parameswaran: ಹೆಸರಿಸದ ಮಾಜಿ ಗೆಳೆಯನೊಂದಿಗಿನ 2 ವರ್ಷಗಳ ಸಂಬಂಧದಲ್ಲಿ ಅನುಪಮಾ ಪರಮೇಶ್ವರನ್ ಅವರು ಬ್ರೇಕಪ್ ಬಗ್ಗೆ, ಮಾಜಿ ಪ್ರೇಮಿಯ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಇವುಗಳಿಗೆ ಸಂಬಂಧಿಸಿದಂತೆ ಧ್ರುವ್ (dhruva) ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಕೂಡ ಅನುಪಮಾ ಹೆಸರನ್ನು ಪ್ರಸ್ತಾಪಿಸಿಲ್ಲ.

Jana Nayagan OTT: ಒಟಿಟಿಗೆ ಬರ್ತಿದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್'! ಸ್ಟ್ರೀಮಿಂಗ್‌ ಯಾವಾಗಿನಿಂದ?

ಒಟಿಟಿಗೆ ಬರ್ತಿದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್'!

Jana Nayagan OTT: ಜನ ನಾಯಗನ್ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಆದಾಗ್ಯೂ, ಸೆನ್ಸಾರ್ ಸಮಸ್ಯೆಗಳಿಂದಾಗಿ, ಚಿತ್ರವು ಹಲವಾರು ತಿಂಗಳುಗಳ ಕಾಲ ಬಿಡುಗಡೆಯಾಗದೆ ಉಳಿಯಿತು. ಇದರಿಂದಾಗಿ, ಚಿತ್ರದ OTT ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದ Amazon Prime, OTT ಒಪ್ಪಂದವನ್ನು ರದ್ದುಗೊಳಿಸಿತು. ಆ ಬಳಿಕ ಸಿನಿಮಾ ತೆರೆ ಕಂಡಿತು.

Actor Darshan: ದರ್ಶನ್‌ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೊ ಕಾನ್ಫರೆನ್ಸ್ ಮೂಲಕ  ಹಾಜರಿಗೆ ಸೂಚನೆ

ದರ್ಶನ್‌ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ!

Actor Darshan: ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇಂದು ವಜಾಗೊಳಿಸಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಆರೋಪಿಗಳ ಸೂಚನೆ ನೀಡಿದೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದರು. ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು.

Prithviraj Sukumaran: ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಥ್ರಿಲ್ಲರ್ ಮೂವಿ ಈ ಒಟಿಟಿಗೆ ಎಂಟ್ರಿ!

ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಥ್ರಿಲ್ಲರ್ ಮೂವಿ ಈ ಒಟಿಟಿಗೆ ಎಂಟ್ರಿ!

Prithviraj Sukumaran: ಪೃಥ್ವಿರಾಜ್ ಸುಕುಮಾರನ್ ಮತ್ತು ಪಾರ್ವತಿ ತಿರುವೋತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಐ, ನೋಬಡಿ, ಜುಲೈ 9, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳಿಗೂ ಹೆಚ್ಚು ಸಮಯದ ನಂತರ, ಆಕ್ಷನ್ ಥ್ರಿಲ್ಲರ್ ಒಟಿಟಿಗೆ ಬರಲು ರೆಡಿಯಾಗಿದೆ.

‘ಡಿಯರ್ ಹಸ್ಬೆಂಡ್’ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಗದ ಖಡಕ್ ಪೊಲೀಸ್ ಅಧಿಕಾರಿ ರೋಲ್‌ನಲ್ಲಿ ನಟಿ ಪಾವನಾ ಗೌಡ

'ಡಿಯರ್ ಹಸ್ಬೆಂಡ್' ಚಿತ್ರದಲ್ಲಿ ಖಡಕ್ ಪೊಲೀಸ್ ಅವತಾರದಲ್ಲಿ ನಟಿ ಪಾವನಾ ಗೌಡ

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪಾವನಾ ಗೌಡ ಮೊದಲ ಬಾರಿಗೆ 'ಡಿಯರ್ ಹಸ್ಬೆಂಡ್' ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಖಡಕ್ ತನಿಖಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗುರುರಾಜ ಕುಲಕರ್ಣಿ ನಿರ್ದೇಶನದ ಈ ಸಸ್ಪೆನ್ಸ್ ಕ್ರೈಂ-ಥ್ರಿಲ್ಲರ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ಸಂಭಾಷಣೆಗಳಿದ್ದು, ಸೂರಜ್ ಗೌಡ ಮತ್ತು ಕುಮಾರ ಬಂಗಾರಪ್ಪ ಪ್ರಮುಖ ತಾರಾಗಣದಲ್ಲಿದ್ದಾರೆ.

Actor Nagabhushana: ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

Actor Nagabhushana: ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ ಎಸ್. ಕೆ. ಸಂತೋಷ್ ಅವರು ನಿರ್ಮಿಸುತ್ತಿರುವ, 'ಪ್ರೊಡಕ್ಷನ್ ನಂ. 2' ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿರುವ ಈ ಚಿತ್ರವನ್ನು ಜಗದೀಶ್ ಎನ್. ಕೋಲಾರ ನಿರ್ದೇಶಿಸುತ್ತಿದ್ದಾರೆ. ಇಂದು (ಆಗಸ್ಟ್ 17) ನಟ ನಾಗಭೂಷಣ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದೇ ಚಿತ್ರತಂಡ ಹೊಸ ಸಿನಿಮಾದ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

Allu Arjun: ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಕಾಣೆ; ಭಾರಿ ಟೀಕೆಯ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪೋಸ್ಟ್  ಡಿಲೀಟ್‌ ಮಾಡಿದ ಅಲ್ಲು ಅರ್ಜುನ್

ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಕಾಣೆ; ಅಲ್ಲು ವಿರುದ್ಧ ಭಾರಿ ಟೀಕೆ

Allu Arjun: ಅಲ್ಲು ಅರ್ಜುನ್ ಹಂಚಿಕೊಂಡ ಫೋಟೋದಲ್ಲಿ ಕೆಂಪು ಕೋಟೆಯಲ್ಲಿ ಹಾರುತ್ತಿರುವ ತ್ರಿವರ್ಣ ಧ್ವಜದ ಚಿತ್ರವಿತ್ತು. ಹಿನ್ನೆಲೆಯಲ್ಲಿ ಅಶೋಕ ಚಕ್ರವಿದ್ದರೂ, ಅದು ಧ್ವಜದಲ್ಲಿ ಕಾಣೆಯಾಗಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಲೋಗೋ ಕೂಡ ಇತ್ತು. ಆ ಪೋಸ್ಟ್‌ನಲ್ಲಿ "ಹ್ಯಾಪಿ ಇಂಡಿಪೆಂಡೆನ್ಸ್ ಡೇ" ಎಂಬ ಪದಗಳಿದ್ದವು. ಇದು ಭಾರಿ ಟ್ರೋಲ್‌ಗೆ ಗುರಿಯಾಗಿದೆ.

ಪ್ರಭಾಸ್‌ ಕಾರಣಕ್ಕೆ ಶಾಹಿದ್‌ ಕಪೂರ್‌ ನಟನೆಯ ʻಅಶ್ವತ್ಥಾಮʼ ಸಿನಿಮಾ ಸ್ಥಗಿತ! ಕನ್ನಡದ ಆ ನಿರ್ದೇಶಕನಿಗೆ ನಿರಾಸೆ?

ʻಕಲ್ಕಿ' ಅಬ್ಬರಕ್ಕೆ ಶಾಹಿದ್ ಕಪೂರ್‌ ನಟನೆಯ 'ಅಶ್ವತ್ಥಾಮ' ಸಿನಿಮಾ ಸ್ಥಗಿತ!

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಕನ್ನಡದ 'ಅವನೇ ಶ್ರೀಮನ್ನಾರಾಯಣ' ಖ್ಯಾತಿಯ ನಿರ್ದೇಶಕ ಸಚಿನ್ ರವಿ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಅಶ್ವತ್ಥಾಮ' ಸದ್ಯಕ್ಕೆ ಸ್ಥಗಿತಗೊಂಡಿದೆ. 'ಕಲ್ಕಿ 2898 ಎಡಿ' ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಅಶ್ವತ್ಥಾಮ ಪಾತ್ರ ಸೃಷ್ಟಿಸಿದ ಪ್ರಭಾವದಿಂದಾಗಿ ನಿರ್ಮಾಪಕ ಜಾಕಿ ಭಗ್ನಾನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರಂತೆ.

ಬಾಕ್ಸ್‌ ಆಫೀಸ್‌ನಲ್ಲಿ ಏದುಸಿರು ಬಿಡುತ್ತಿರುವ ಸನ್ನಿ ಡಿಯೋಲ್‌ ನಟನೆಯ ʻಬಟ್ವಾರಾ 1947ʼ ಸಿನಿಮಾ; ನಟ ಆಮಿರ್‌ ಖಾನ್‌ಗೆ ಲಾಸ್‌ ಆಗಲಿದೆಯಾ?

Sunny Deol: ಮೂರು ದಿನಗಳಲ್ಲಿ ʻಬಟ್ವಾರಾ 1947ʼ‌ ಚಿತ್ರ ಗಳಸಿದ್ದೆಷ್ಟು?

ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಹಾಗೂ ಸನ್ನಿ ಡಿಯೋಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಬಟ್ವಾರಾ 1947' ಚಿತ್ರ ಮೊದಲ ವಾರಾಂತ್ಯದಲ್ಲಿ ಜಾಗತಿಕವಾಗಿ ₹37.11 ಕೋಟಿ ಗಳಿಸಿ ಹಿನ್ನಡೆ ಅನುಭವಿಸಿದೆ. ₹70 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ನಿರ್ಮಾಪಕ ಆಮಿರ್ ಖಾನ್ ಅವರಿಗೆ ನಷ್ಟದ ಆತಂಕ ಎದುರಾಗಿದೆ.

ಅಂದು ʻಆಟೋಗ್ರಾಫ್‌ ಪ್ಲೀಸ್‌ʼ ಎಂದಿದ್ದ ಯಶ್‌ಗೆ ಅವಮಾನ ಮಾಡಿದ್ದ ಆ‌ ಸ್ಟಾರ್ ನಟ! ʻರಾಕಿ ಭಾಯ್‌ʼ ಬದಲಾಗಲು ಕಾರಣವಾಯ್ತು ಆ ಘಟನೆ

ನೆಚ್ಚಿನ ನಟನಿಂದಲೇ ಅವಮಾನ; ಇದು ನಟ ಯಶ್ ಬಾಲ್ಯದಲ್ಲಿ ನಡೆದ ಕಹಿ ಘಟನೆ

ʻರಾಕಿಂಗ್ ಸ್ಟಾರ್ʼ ಯಶ್ ಬಾಲ್ಯದಲ್ಲಿ ತಮ್ಮ ನೆಚ್ಚಿನ ನಟನ ಬಳಿ ಆಟೋಗ್ರಾಫ್ ಕೇಳಿದಾಗ ತೀವ್ರ ಅವಮಾನ ಮತ್ತು ತಿರಸ್ಕಾರ ಎದುರಿಸಿದ್ದ ಕಹಿ ಸತ್ಯವನ್ನು 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ. ಆ ಕಹಿ ಘಟನೆಯಿಂದ ಆ ನಟನ ಸಿನಿಮಾ ನೋಡುವುದನ್ನೇ ನಿಲ್ಲಿಸಿದ್ದರಂತೆ ಯಶ್!

ನಟ ದರ್ಶನ್‌ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೊಳ್ಳೆ ಕಾಟ; ʻಏನಾದ್ರೂ ಪರಿಹಾರ ಮಾಡಿʼ ಎಂಬ ಮನವಿಗೆ ಅಲೋಕ್​ಕುಮಾರ್ ಏನಂದ್ರು?

ಜೈಲಿನಲ್ಲಿ ದರ್ಶನ್‌ಗೆ ಸೊಳ್ಳೆ ಕಾಟ; ಪರಿಹಾರ ಕೇಳಿದ್ದಕ್ಕೆ ADGP ಏನಂದ್ರು?

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್, ಸೊಳ್ಳೆ ಸಮಸ್ಯೆಗೆ ಪರಿಹಾರ ನೀಡುವಂತೆ ಎಡಿಜಿಪಿ ಅಲೋಕ್ ಕುಮಾರ್ ಬಳಿ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ಮ್ಯಾನ್ಯುಯಲ್ ನಿಯಮದಲ್ಲಿರುವುದಷ್ಟೇ ಒದಗಿಸಲು ಸಾಧ್ಯ ಎಂದು ಖಡಕ್ ಆಗಿ ತಿಳಿಸಿದ್ದಾರೆ.

36ನೇ ವಯಸ್ಸಿಗೆ ಪ್ರಾಣಬಿಟ್ಟ ಹಾಲಿವುಡ್‌ ನಟಿ ಹೇಡನ್ ಪ್ಯಾನೆಟಿಯರ್; ಈ ಸಾವಿಗೆ ಕಾರಣವೇನು?

36ನೇ ವಯಸ್ಸಿಗೆ ಕಣ್ಮುಚ್ಚಿದ ಹಾಲಿವುಡ್ ನಟಿ ಹೇಡನ್ ಪ್ಯಾನೆಟಿಯರ್!

ಹಾಲಿವುಡ್‌ನ ಜನಪ್ರಿಯ ನಟಿ ಹೇಡನ್ ಪ್ಯಾನೆಟಿಯರ್ (36) ಅಕಾಲಿಕವಾಗಿ ನಿಧನರಾಗಿದ್ದಾರೆ. 'ಹೀರೋಸ್', 'ನ್ಯಾಶ್‌ವಿಲ್' ಸರಣಿಗಳಿಂದ ಜಾಗತಿಕ ಖ್ಯಾತಿ ಗಳಿಸಿದ್ದ ಅವರು ವೈಯಕ್ತಿಕ ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿದ್ದರು. ಸಹೋದರನ ಅಕಾಲಿಕ ಸಾವಿನ ನೋವಿನ ನಡುವೆಯೂ ಚೇತರಿಸಿಕೊಳ್ಳುತ್ತಿದ್ದ ತಾರೆಯ ಹಠಾತ್ ನಿಧನಕ್ಕೆ ಅಧಿಕೃತ ಕಾರಣ ಇನ್ನಷ್ಟೇ ಬಹಿರಂಗವಾಗಬೇಕಿದೆ.

Toxic Movie: 'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ 'ರಾಕಿ ಭಾಯ್‌' ಯಶ್ ಖಡಕ್ ಉತ್ತರ!

'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ ಯಶ್ ಖಡಕ್ ಉತ್ತರ!

ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ 'ತಬಾಹಿ' ಹಾಡಿನ ಟೀಕೆಗಳಿಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ್ದಾರೆ. ಈ ಹಾಡು ಕಾಂಡೋಮ್ ಜಾಹೀರಾತಿನಂತಿದೆ ಎಂದವರಿಗೆ ಚಾಟಿ ಬೀಸಿದ ಯಶ್, ದೃಶ್ಯಗಳಲ್ಲಿ ಎಲ್ಲಿಯೂ ಅಶ್ಲೀಲತೆಯ ಗೆರೆ ದಾಟಿಲ್ಲ ಎಂದಿದ್ದಾರೆ.

ʻಬಿಗ್ ಬಾಸ್ ಕನ್ನಡ ಸೀಸನ್ 13ʼ: ಸಾಮಾನ್ಯರ 'ಅಗ್ನಿಪರೀಕ್ಷೆ' ಮೊದಲ ಸುತ್ತಿನಲ್ಲಿ ನಾಲ್ವರು ಪಾಸ್; 'ಸ್ಟಾರ್ ಕಂಟೆಸ್ಟೆಂಟ್' ಎನಿಸಿಕೊಂಡ ಪೂರ್ಣಿಮಾ

‌ʻಬಿಗ್ ಬಾಸ್ ಕನ್ನಡ 13ʼ ಅಗ್ನಿಪರೀಕ್ಷೆ ಸುತ್ತಿನ ಅಸಲಿ ತೀರ್ಪುಗಾರರು ಯಾರು?

Bigg Boss Kannada Season 13: ಬಿಗ್‌ ಬಾಸ್‌ ಕನ್ನಡ 'ಅಗ್ನಿಪರೀಕ್ಷೆ' ಮೊದಲ ಸುತ್ತಿನಲ್ಲಿ ನಾಲ್ವರು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ. ಮಂಡ್ಯದ ಮೆಕ್ಯಾನಿಕ್ ಜಿ.ಕೆ. ಪೂರ್ಣಿಮಾ ಅವರು 'ಸ್ಟಾರ್ ಕಂಟೆಸ್ಟೆಂಟ್' ಆಗಿ ಹೊರಹೊಮ್ಮಿದ್ದಾರೆ. ಇನ್ನುಳಿದ ಆ ಮೂವರು ಸ್ಪರ್ಧಿಗಳು ಯಾರು?

Ananya Raj : ಟಾಲಿವುಡ್‌ ನಟಿ ಅನನ್ಯಾ ರಾಜ್‌ ನಿಧನ;  27ರ ನಟಿಗೆ ಏನಾಯಿತು?

ಟಾಲಿವುಡ್‌ ನಟಿ ಅನನ್ಯಾ ರಾಜ್‌ ನಿಧನ; 27ರ ನಟಿಗೆ ಏನಾಯಿತು?

Ananya Raj : ಅನನ್ಯಾ ರಾಜ್ (Ananya Raj) 27 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಈ ಸುದ್ದಿಯನ್ನು ಕುಟುಂಬ ದೃಢಪಡಿಸಿದೆ. ನಟಿ ಒಂದು ವರ್ಷಕ್ಕೂ ಹೆಚ್ಚು ಕಾಲ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಮತ್ತು ಜುಲೈ 15 ರಂದು ನಿಧನರಾದರು ಎಂದು ಬಹಿರಂಗಪಡಿಸಿದ್ದಾರೆ. ಅನನ್ಯಾ ಅವರ ಕುಟುಂಬವು ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದ್ದಿಯನ್ನು ಹಂಚಿಕೊಂಡಿದೆ.

Yash: ಜೀವನದಲ್ಲಿ ಭಯ ಎಂದರೇನು ಎಂಬುದೇ ಗೊತ್ತಿಲ್ಲ! ರಣವೀರ್ ಸಿಂಗ್ ಸಿನಿಮಾ ಕ್ಲ್ಯಾಶ್‌ ಬಗ್ಗೆ ಯಶ್‌ ಖಡಕ್‌ ರಿಪ್ಲೈ

ರಣವೀರ್ ಸಿಂಗ್ ಸಿನಿಮಾ ಕ್ಲ್ಯಾಶ್‌ ಬಗ್ಗೆ ಯಶ್‌ ಖಡಕ್‌ ರಿಪ್ಲೈ

Yash: ಯಶ್ ಪ್ರಕಾರ, ಒಂದು ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಿದ ನಂತರ, ಅದೇ ಸಮಯದಲ್ಲಿ ಮತ್ತೊಂದು ಚಿತ್ರ ಬರುತ್ತಿದೆ ಎಂದರೆ ನಿರ್ಮಾಪಕರು ಉದ್ದೇಶಪೂರ್ವಕವಾಗಿ ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ ಎಂದರ್ಥವಲ್ಲ. ಕೆಜಿಎಫ್ 2 ಚಿತ್ರಮಂದಿರಗಳಿಗೆ ಬಂದಾಗ ಅಮೀರ್ ಖಾನ್ ತಮ್ಮ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದರು ಮತ್ತು ಜನರು ಕೆಜಿಎಫ್‌ಗೆ ಭಯಪಡಬೇಕಾಗುತ್ತದೆ ಎಂದು ಹೇಳಿದ್ದರು ಎಂದು ರಜತ್ ಶರ್ಮಾ ನೆನಪಿಸಿಕೊಂಡಾಗ ಯಶ್ ಒಪ್ಪಲಿಲ್ಲ.

Antara Banerjee: ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ; ನಟಿ ಅಂತರ ಬ್ಯಾನರ್ಜಿ ಅರೆಸ್ಟ್‌: ಬಾಂದ್ರಾ-ಗಂಗಾನಗರ್‌ ಅರಾವಳಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗಿದ್ದೇನು?

ಆರ್‌ಪಿಎಫ್‌ ಸಿಬ್ಬಂದಿ ಮೇಲೆ ಹಲ್ಲೆ; ನಟಿ ಅಂತರ ಬ್ಯಾನರ್ಜಿ ಅರೆಸ್ಟ್‌!

Antara Banerjee: ಹಿಂದಿ ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಹೆಸರುವಾಸಿಯಾದ ರೂಪದರ್ಶಿ ಮತ್ತು ನಟಿ ಅಂತರಾ ಬ್ಯಾನರ್ಜಿ (Antara Banerjee) ಈಗ ಸುದ್ದಿಗಳಲ್ಲಿದ್ದಾರೆ. ಸ್ಲೀಪರ್ ಟಿಕೆಟ್ ಬುಕ್ ಮಾಡಿದ ನಟಿ ಕಮ್ ಮಾಡೆಲ್ ಅಂತರಾ ಎಸಿ ಕೋಚ್‌ನಲ್ಲಿ ಪ್ರಯಾಣಿಸುವ ಪ್ರಯತ್ನ ಮಾಡಿದ್ದಾರೆ. ಇಷ್ಟೇ ಆಗಿದ್ದರೆ ನಟಿ ಅರೆಸ್ಟ್ಆ ಗುತ್ತಿರಲಿಲ್ಲ. ನಕಲಿ ನಾಟಕ ಮಾಡಿ ಕೋಲಾಹಲ ಎಬ್ಬಿಸಲು ಯತ್ನಿಸಿದ ನಟಿಯನ್ನು ರೈಲ್ವೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬ್ಲಾಕ್‌ ಬಸ್ಟರ್‌ ʻಧುರಂಧರ್‌ʼ ಬಳಿಕ ಹೊಸ ಸಿನಿಮಾ ಆರಂಭಿಸಿದ ರಣವೀರ್‌ ಸಿಂಗ್;‌ ಈ ಚಿತ್ರಕ್ಕೆ ಮಲಯಾಳಂನ ಸ್ಟಾರ್‌ ಡೈರೆಕ್ಟರ್‌ ಪುತ್ರಿ ನಾಯಕಿ!

'ಧುರಂಧರ್' ಹಿಟ್‌ ಆದ ಬಳಿಕ ಹೊಸ ಸಿನಿಮಾ ಶುರುಮಾಡಿದ ರಣವೀರ್‌ ಸಿಂಗ್

ಬ್ಲಾಕ್‌ಬಸ್ಟರ್ 'ಧುರಂಧರ್' ಸರಣಿಯ ಭರ್ಜರಿ ಯಶಸ್ಸಿನ ಬಳಿಕ ನಟ ರಣ್‌ವೀರ್ ಸಿಂಗ್ ಅಭಿನಯದ 'ಪ್ರಳಯ್' ಆ್ಯಕ್ಷನ್-ಸರ್ವೈವಲ್ ಥ್ರಿಲ್ಲರ್ ಚಿತ್ರೀಕರಣ ಮುಂಬೈನಲ್ಲಿ ಆರಂಭವಾಗಿದೆ. ಖ್ಯಾತ ನಿರ್ದೇಶಕ ಪ್ರಿಯದರ್ಶನ್ ಪುತ್ರಿ ಕಲ್ಯಾಣಿ ಪ್ರಿಯದರ್ಶನ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

Ramayana trailer: ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ ಬೆಸ್ಟ್;  ಟ್ರೇಲರ್‌ಗೆ ಪ್ರೇಕ್ಷಕರು ಫಿದಾ

ಚೀನಿ ಸಿನಿಮಾಗಳಿಗಿಂತಲೂ ‘ರಾಮಾಯಣ’ ಬೆಸ್ಟ್; ಟ್ರೇಲರ್‌ಗೆ ಪ್ರೇಕ್ಷಕರು ಫಿದಾ

Ramayana trailer : ‘ಕಳೆದ ಎರಡು ವರ್ಷಗಳಲ್ಲಿ ಬಂದ ನಮ್ಮ ದೇಶದ ಸಿನಿಮಾಗಳಿಗಿಂತ ಇದು ಹೇಗೆ ಇಷ್ಟೊಂದು ಅದ್ಭುತವಾಗಿ ಮೂಡಿಬಂದಿದೆ’ ಎಂದು ಪ್ರಶ್ನಿಸಿದ್ದಾರೆ. ‘ನಮ್ಮ ನಿರ್ದೇಶಕರಿಗೆ ಸ್ವದೇಶಿ ಪುರಾಣಗಳ ಮೇಲೆ ಗೌರವವಿಲ್ಲ, ಆದ್ದರಿಂದಲೇ ನಮಗೆ ಇಂತಹ ದೃಶ್ಯ ವೈಭವದ ಕಾವ್ಯಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿಲ್ಲ’ ಎಂದು ಕಮೆಂಟ್ ಮಾಡಿದ್ದಾರೆ.ಈ ಚಿತ್ರವು ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದು ಮಾಡುತ್ತಿದ್ದು, ಚೀನಾದಲ್ಲೂ (Cheena) ಬೃಹತ್ ಪ್ರಮಾಣದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಶಶಿಕುಮಾರ್‌ ಪುತ್ರ ಆದಿತ್ಯ ಅಭಿನಯದ ‘ರಾಶಿ’ ಚಿತ್ರದ ಹಾಡಿಗೆ ಬಾಲಿವುಡ್‌ ಗಾಯಕ ಅರ್ಮಾನ್‌ ಮಲಿಕ್‌ ಧ್ವನಿ; ‘ಮೊದಲ ಪ್ರೀತಿ’ ಸಾಂಗ್‌ಗೆ ಉತ್ತಮ ರೆಸ್ಪಾನ್ಸ್‌

ಶಶಿಕುಮಾರ್ ಪುತ್ರನ 'ರಾಶಿ' ಚಿತ್ರದ ಹಾಡಿಗೆ ಅರ್ಮಾನ್ ಮಲಿಕ್ ಧ್ವನಿ

ಸುಪ್ರೀಂ ಹೀರೋ ಶಶಿಕುಮಾರ್ ಪುತ್ರ ಆದಿತ್ಯ ಶಶಿಕುಮಾರ್ ನಟನೆಯ 'ರಾಶಿ' ಚಿತ್ರದ 'ಮೊದಲ ಪ್ರೀತಿ' ಮೆಲೋಡಿ ಹಾಡು ಬಿಡುಗಡೆಯಾಗಿದೆ. ಬಾಲಿವುಡ್ ಖ್ಯಾತ ಗಾಯಕ ಅರ್ಮಾನ್ ಮಲಿಕ್ ಧ್ವನಿ ನೀಡಿರುವ ಈ ಹಾಡಿಗೆ ಭೂಷಣ್ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ.

Yash:'ಕೆಜಿಎಫ್‌ಗೂ ಮುಂಚೆ ಯಶ್ ಯಾರು?ʼ; ವಿವಾದ ಸೃಷ್ಟಿಸಿದ್ದ ತೆಲುಗು ನಿರ್ಮಾಪಕ ಅಲ್ಲು ಅರವಿಂದ್ ಹೇಳಿಕೆಗೆ ʻರಾಕಿಂಗ್‌ ಸ್ಟಾರ್‌ʼ ಖಡಕ್‌ ರಿಪ್ಲೈ!

ವಿವಾದ ಸೃಷ್ಟಿಸಿದ್ದ ಅಲ್ಲು ಅರವಿಂದ್ ಹೇಳಿಕೆಗೆ ಯಶ್‌ ಖಡಕ್‌ ರಿಪ್ಲೈ!

Yash:ಯಶ್ ಅವರ ಕುರಿತು ತೆಲುಗು ಚಿತ್ರರಂಗದ 'ಸ್ಟಾರ್' ನಿರ್ಮಾಪಕ ಅಲ್ಲು ಅರವಿಂದ್ (Allu arvanid) ಅವರು ಹೇಳಿದ ಮಾತು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕೆಜಿಎಫ್ ಬರುವ ಮೊದಲು ಯಶ್ ಯಾರು? ಆತ ಎಷ್ಟು ದೊಡ್ಡ ಹೀರೋ? ಕಂಟೆಂಟ್‌ ಮತ್ತು ಸಿನಿಮಾವನ್ನು ಅದ್ಧೂರಿಯಾಗಿ ತೋರಿಸಿದ್ದರಿಂದ ಅದು ಹಿಟ್ ಆಯಿತು. ಇದೊಂದು ಉದಾಹರಣೆ ಅಷ್ಟೇ ಎಂದು ಹೇಳಿದ್ದರು. ಇದು ಭಾರಿ ವಿವಾದಕ್ಕೂ ಕಾರಣವಾಗಿತ್ತು. ಇದೀಗ ಈ ಹಳೆಯ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ ಯಶ್‌.

Toxic intimate scenes: 'ಟಾಕ್ಸಿಕ್‌' ಹಸಿಬಿಸಿ ದೃಶ್ಯ ಕಂಡು ರಾಧಿಕಾ ಅನ್‌ಕಂಫರ್ಟ್‌ ಆಗಿರ್ತಾಳೆ; ಪತ್ನಿ ಬಗ್ಗೆ ಯಶ್‌ ಮುಕ್ತ ಮಾತು

ಟಾಕ್ಸಿಕ್‌ ಹಸಿಬಿಸಿ ದೃಶ್ಯ ಕಂಡು ರಾಧಿಕಾ ಅನ್‌ಕಂಫರ್ಟ್‌ ಆಗಿರ್ತಾಳೆ; ಯಶ್‌

Toxic intimate scenes: ಟಾಕ್ಸಿಕ್ ಬಿಡುಗಡೆಗಾಗಿ ಕಾತುರದಿಂದ ಕಾಯುತ್ತಿದ್ದಾರೆ ಫ್ಯಾನ್ಸ್‌ . ಆದಾಗ್ಯೂ, ಚಿತ್ರದ ಟ್ರೇಲರ್ ವಿವಾದಕ್ಕೆ ಕಾರಣವಾಯಿತು, ಹಲವಾರು ವೀಕ್ಷಕರು ಯಶ್ ಮತ್ತು ಇತರ ನಟರನ್ನು ಒಳಗೊಂಡ ಕಾಮಪ್ರಚೋದಕ ದೃಶ್ಯಗಳನ್ನು ಟೀಕಿಸಿದರು. ಇತ್ತೀಚಿನ ಸಂವಾದವೊಂದರಲ್ಲಿ, ಯಶ್ ತಮ್ಮ ಪತ್ನಿ ಮತ್ತು ಮಾಜಿ ನಟಿ ರಾಧಿಕಾ ಪಂಡಿತ್ ಈ ಇಂಟಿಮೇಟ್‌ ದೃಶ್ಯಗಳ ಬಗ್ಗೆ ಅವರ ಪ್ರತಿಕ್ರಿಯೆಯ ಬಗ್ಗೆ ಮಾತನಾಡಿದರು. ಆಪ್ ಕಿ ಅದಾಲತ್ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಜೊತೆ ಮಾತನಾಡಿದ ಯಶ್, ಇತರ ಯಾವುದೇ ಸಂಗಾತಿಯಂತೆ ತನ್ನ ಪತ್ನಿಯೂ ಸಹ ಅನ್‌ಕಫರ್ಟ್‌ ಆಗಿದ್ದಳು ಎಂದು ಹೇಳಿಕೊಂಡಿದ್ದಾರೆ.

ಎಷ್ಟೇ ದುಡ್ಡು ಕೊಟ್ಟರೂ ಪಾನ್‌ ಮಸಾಲ ಜಾಹೀರಾತುಗಳನ್ನು ನಟ ಸನ್ನಿ ಡಿಯೋಲ್‌ ಒಪ್ಪಿಕೊಳ್ಳೋದಿಲ್ಲ! ಇದರ ಹಿಂದಿದೆ ಬಲವಾದ ಕಾರಣ

ನಟ ಸನ್ನಿ ಡಿಯೋಲ್‌ ಪಾನ್‌ ಮಸಾಲ ಜಾಹೀರಾತುಗಳನ್ನು ಒಪ್ಪದಿರಲು ಕಾರಣವೇನು?

ಬಾಲಿವುಡ್ ನಟ ಸನ್ನಿ ಡಿಯೋಲ್‌ ಅವರು ತಂಬಾಕು ಮತ್ತು ಪಾನ್ ಮಸಾಲ ಉತ್ಪನ್ನಗಳ ಜಾಹೀರಾತುಗಳಲ್ಲಿ ಎಂದಿಗೂ ನಟಿಸುವುದಿಲ್ಲವೆಂದು ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದ್ದಾರೆ. ಸಮಾಜಕ್ಕೆ ಮಾರಕವಾದ ವಸ್ತುಗಳ ಪ್ರಚಾರಕ್ಕೆ ತಮ್ಮ ಮನಸ್ಸಾಕ್ಷಿ ಒಪ್ಪುವುದಿಲ್ಲವೆಂದು ಹಲವು ಆಫರ್‌ಗಳನ್ನು ತಿರಸ್ಕರಿಸಿದ್ದಾರೆ.

Loading...