ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Pawan Kalyan Birthday Celebration: ಅನಾಥಾಶ್ರಮದ ಮಕ್ಕಳೊಂದಿಗೆ ಪವನ್ ಕಲ್ಯಾಣ್ ಜನ್ಮದಿನ ಆಚರಣೆ: ಬಲಿಜ ಸಂಘದಿಂದ ಕೇಕ್ ಕತ್ತರಿಸಿ ಸಂಭ್ರಮ; ಮಕ್ಕಳಿಗೆ ಊಟದ ವ್ಯವಸ್ಥೆ

ಅನಾಥಾಶ್ರಮದ ಮಕ್ಕಳೊಂದಿಗೆ ಪವನ್ ಕಲ್ಯಾಣ್ ಜನ್ಮದಿನ ಆಚರಣೆ

ಜನಸೇನಾ ಪಕ್ಷದ ಮುಖಂಡ ಹಾಗೂ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿಯಾಗಿರುವ ಪವನ್ ಕಲ್ಯಾಣ್ ಅವರು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿ ಹಲವು ಉತ್ತಮ ಕೆಲಸಗಳನ್ನು ಮಾಡುವ ಮೂಲಕ ದೇಶದ ಜನರ ಗಮನ ಸೆಳೆದಿದ್ದಾರೆ. ಮಾನವೀಯ ಅಂತಃಕರಣ ಹೊಂದಿರುವ ಅವರು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲಿ

Rashmika Mandanna: ವಿಜಯ್ - ನಾನು ಒಟ್ಟಿಗೆ ಕಳೆದ ಅತಿ ಹೆಚ್ಚು ಸಮಯ ಇದು; ರಶ್ಮಿಕಾ ಮುಕ್ತ ಮಾತು

ವಿಜಯ್ - ನಾನು ಒಟ್ಟಿಗೆ ಕಳೆದ ಅತಿ ಹೆಚ್ಚು ಸಮಯ ಇದು; ರಶ್ಮಿಕಾ ಮುಕ್ತ ಮಾತು

Rashmika Mandanna: ಜುಲೈನಲ್ಲಿ ತಮ್ಮ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಮೈಸಾ' (Mysa) ಸೆಟ್‌ನಲ್ಲಿ ಆದ ಸೊಂಟದ ಗಾಯದ ನಂತರ ಒಂದೂವರೆ ತಿಂಗಳ ವಿರಾಮ ತೆಗೆದುಕೊಂಡ ನಂತರ ನಟಿ ರಶ್ಮಿಕಾ ಮಂದಣ್ಣ ಇಂದು ಚಿತ್ರೀಕರಣವನ್ನು ಪುನರಾರಂಭಿಸಲಿದ್ದಾರೆ.ಒಂದು ವಾರದೊಳಗೆ ಕೆಲಸಕ್ಕೆ ಮರಳಲು ವೈದ್ಯರು ಅನುಮತಿ ನೀಡಿದ್ದರೂ, ರಶ್ಮಿಕಾ ಕೇವಲ ಒಂದು ದಿನದೊಳಗೆ ಮತ್ತೆ ನಟಿಸಲು ನಿರ್ಧರಿಸಿದರು. ಇದೇ ವೇಳೆ ಒಂದು ಸೀಕ್ರೆಟ್‌ ಒಂದನ್ನ ಶೇರ್‌ ಮಾಡಿದ್ದಾರೆ.

Senior Actor Dr Srinath: ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆ ಅತ್ಯಂತ ಅಗತ್ಯ: ನಟ ಶ್ರೀನಾಥ್

ಎಪಿಎಸ್ ಪಿಯು ಕಾಲೇಜು ನಲ್ಲಿ ಪ್ರತಿಭಾ ದಿನಾಚರಣೆ

ಎಪಿಎಸ್ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗೆ ಸದಾ ಬೆಂಬಲವಾಗಿ ನಿಂತಿತ್ತು. ಇದರ ಪರಿಣಾಮ ಸೂಪರ್ ಸ್ಟಾರ್ ರಜನಿಕಾಂತ್, ಉಪೇಂದ್ರ, ಕಲ್ಯಾಣ್ ಕುಮಾರ್, ಟೆನಿಸ್ ಕೃಷ್ಣ, ಸಿ. ಅಶ್ವತ್ಥ್ ಸೇರಿದಂತೆ ಇನ್ನೂ ಅನೇಕ ಪ್ರತಿಭೆಗಳು ಬೆಳಗಲು ಸಾಧ್ಯ ವಾಯಿತು. ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅತ್ಯಂತ ಅಗತ್ಯ ಎಂದರು.

'ಬಿಗ್‌ ಬಾಸ್‌' ಖ್ಯಾತಿಯ ರಾಶಿಕಾ ಶೆಟ್ಟಿಗೆ ತಂದೆಯಾದ ರವಿಚಂದ್ರನ್;‌ 'ಪ್ಯಾರ್‌' ಚಿತ್ರದಲ್ಲಿದೆ ಅಪ್ಪ-ಮಗಳ ಎಮೋಷನಲ್‌ ಕಥೆ

ʻಪ್ಯಾರ್‌ʼ ಚಿತ್ರದಲ್ಲಿ ʻಬಿಗ್‌ ಬಾಸ್‌ʼ ರಾಶಿಕಾಗೆ ತಂದೆಯಾದ ನಟ ರವಿಚಂದ್ರನ್

ʻಪ್ಯಾರ್‌ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಶಿಕಾ ಶೆಟ್ಟಿ ಅಪ್ಪ-ಮಗಳಾಗಿ ಕಾಣಿಸಿಕೊಂಡಿದ್ದಾರೆ. ಎಸ್. ಸುಪ್ರೀತ್ ನಿರ್ದೇಶನದ ಈ ಚಿತ್ರದಲ್ಲಿ ತಂದೆಗಾಗಿ ಜೀವವನ್ನೇ ಪಣಕ್ಕಿಡುವ ಮಗಳ ಎಮೋಷನಲ್‌ ಕಥೆಯಿದೆ.

Hanuman Ansh sequel: ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆಯುತ್ತಿರೋ ‘ಹನುಮಾನ್ ಅಂಶ್’! ಸೀಕ್ವೆಲ್ ಅನೌನ್ಸ್‌

ಬಾಕ್ಸ್ ಆಫೀಸ್​​ನಲ್ಲಿ ದಾಖಲೆ ಬರೆಯುತ್ತಿರೋ ‘ಹನುಮಾನ್ ಅಂಶ್’!

Hanuman Ansh sequel:ಕೇವಲ 1.8 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆಗಿರುವ ‘ಹನುಮಾನ್ ಅಂಶ್’ ಸಿನಿಮಾ 50 ಕೋಟಿಗೂ ಹೆಚ್ಚು ಮೊತ್ತ ಗಳಿಕೆ ಮಾಡಿದ್ದು, ಈ ಸಿನಿಮಾದ ಸೀಕ್ವೆಲ್ ಅನ್ನು ಸಹ ನಿರ್ದೇಶಕರು ಘೋಷಣೆ ಮಾಡಿದ್ದಾರೆ. ‘ನೀಮ್ ಕರೋಲಿ ಬಾಬ’ ಅವರ ಜೀವನ ಆಧರಿಸಿದ ಕತೆಯನ್ನು ಈ ಸಿನಿಮಾ ಒಳಗೊಂಡಿದ್ದು, ಭಕ್ತರನ್ನು ಬಹುವಾಗಿ ಸೆಳೆಯುತ್ತಿದೆ ಈ ಸಿನಿಮಾ. ಕೆಲವೇ ಕೆಲವು ಶೋಗಳ ಮೂಲಕ ಬಿಡುಗಡೆ ಆದ ಈ ಸಿನಿಮಾ ಈಗ ಬೆಂಗಳೂರಿನಲ್ಲೇ 50ಕ್ಕೂ ಹೆಚ್ಚು ಶೋಗಳನ್ನು ಪಡೆದುಕೊಂಡಿದೆ.

Jailer 2 release date: ‘ಜೈಲರ್ 2’ ಪೋಸ್ಟ್‌ಪೋನ್‌ ಇಲ್ಲ!  ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟ ತಂಡ

‘ಜೈಲರ್ 2’ ಪೋಸ್ಟ್‌ಪೋನ್‌ ಇಲ್ಲ! ವದಂತಿಗಳಿಗೆ ಫುಲ್‌ ಸ್ಟಾಪ್‌ ಇಟ್ಟ ತಂಡ

Jailer 2 release date: ರಜನಿಕಾಂತ್ ಅವರ ಮುಂಬರುವ ಚಿತ್ರ ಜೈಲರ್ 2 (Jailer 2) ಮುಂದೂಡಲ್ಪಡಬಹುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ವರದಿಗಳು ಹೊರಹೊಮ್ಮಿದವು. ಚಿತ್ರದ ಹಲವಾರು ಭಾಗಗಳ ಮರು ಚಿತ್ರೀಕರಣ ನಡೆಯುತ್ತಿದೆ ಎಂಬ ವದಂತಿಗಳು ಹಬ್ಬಿದ್ದವು. ಬುಧವಾರ, ಜೈಲರ್ 2 ನಿರ್ಮಾಪಕರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಡಿದ ಪೋಸ್ಟ್ ಮೂಲಕ ಈ ವರದಿಗಳನ್ನು ತಳ್ಳಿಹಾಕಿದ್ದಾರೆ.

ನಟ 'ದುನಿಯಾ' ವಿಜಯ್ ಪುತ್ರ ಸಾಮ್ರಾಟ್‌ ವಿರುದ್ಧ FIR! ಯಾವೆಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು?

'ದುನಿಯಾ' ವಿಜಯ್ ಪುತ್ರ ಸಾಮ್ರಾಟ್ ‌ಮೇಲೆ ದೂರು! ಎಫ್‌ಐಆರ್‌ನಲ್ಲಿ ಏನೇನಿದೆ?

ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ಅಪಹರಣ ಹಾಗೂ ಹಲ್ಲೆ ಆರೋಪ ಹೊರಿಸಲಾಗಿದೆ. ಓವರ್‌ಟೇಕ್ ಜಗಳಕ್ಕೆ ಸಂಬಂಧಿಸಿ ಮನೀಶ್ ಗೌಡ ಎಂಬ ವಿದ್ಯಾರ್ಥಿಯನ್ನು ಎಳೆದೊಯ್ದು, ತಲೆ, ಎದೆಗೆ ಹೊಡೆದು ಗಾಯಗೊಳಿಸಿದ ಆರೋಪದಡಿ ಕೆಂಗೇರಿ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಕೇಸ್ ದಾಖಲಾಗಿದೆ.

‘ನಂದಗೋಕುಲ’ ಧಾರಾವಾಹಿಗೆ ನಟ ಯಶವಂತ್‌ ಗುಡ್‌ಬೈ ಹೇಳೋದಕ್ಕೆ ʻಬಿಗ್‌ ಬಾಸ್‌ʼ ಶೋ ಕಾರಣವೇ? ದೊಡ್ಮನೆಯಿಂದ ಕೇಶವನಿಗೆ ಬಂದೈತಾ ಆಫರ್?

ʻಬಿಗ್‌ ಬಾಸ್‌ 13ʼ ಶೋಗಾಗಿ ‘ನಂದಗೋಕುಲ’ ಧಾರಾವಾಹಿ ಬಿಟ್ರಾ ನಟ ಯಶವಂತ್‌?

‘ನಂದಗೋಕುಲ’ ಧಾರಾವಾಹಿಯಿಂದ ನಟ ಯಶವಂತ್‌ ಹೊರಬಂದಿದ್ದು, ಬಿಗ್ ಬಾಸ್ ಮನೆಗೆ ಹೋಗುವ ವದಂತಿಗಳಿಗೆ ತೆರೆ ಎಳೆದಿದ್ದಾರೆ. ರಿಯಾಲಿಟಿ ಶೋ ಪ್ರವೇಶಿಸಿದರೆ ನಟನ ನೈಜ ಸ್ವಭಾವವೇ ಬಯಲಾಗಿ ಕಲಾ ಬದುಕು ಅಂತ್ಯಗೊಳ್ಳುತ್ತದೆ ಎಂದಿರುವ ಅವರು, ಯಾವುದೇ ಪ್ರಚಾರದ ಗೀಳಿಲ್ಲದೆ, ಬೆಳ್ಳಿತೆರೆಯಲ್ಲಿ ನೆಲೆ ಕಂಡುಕೊಳ್ಳುವ ಇರಾದೆಯನ್ನು ಹೊಂದಿದ್ದಾರೆ.

ʻಜೋಗಿʼ ಪ್ರೇಮ್ - `ಕಿಚ್ಚ' ಸುದೀಪ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ; ಅಕ್ಟೋಬರ್ 20ಕ್ಕೆ ಅದ್ಧೂರಿ ಮುಹೂರ್ತ!‌

ಸುದೀಪ್ -ʻಜೋಗಿʼ ಪ್ರೇಮ್ ಧಮಾಕಾ; ಕಿಚ್ಚನ ಬರ್ತ್‌ಡೇಗೆ ಸಿಕ್ತು ಸಖತ್ ಗಿಫ್ಟ್

ಕಿಚ್ಚ ಸುದೀಪ್‌ ಮತ್ತು ʻಜೋಗಿʼ ಪ್ರೇಮ್‌ ಜೋಡಿ ಮತ್ತೆ ಒಂದಾಗಿದೆ. ಪ್ರೇಮ್ ನಿರ್ದೇಶನದ 10ನೇ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ನಟ ಸುದೀಪ್ ಜನ್ಮದಿನದ ಪ್ರಯುಕ್ತ ಈ ಸರ್ಪ್ರೈಸ್ ಸಿಕ್ಕಿದೆ. ಅಕ್ಟೋಬರ್ 20ರಂದು ಅದ್ಧೂರಿ ಮುಹೂರ್ತ ನಿಗದಿಯಾಗಿದೆ. ಇಂದಿನ ತಲೆಮಾರಿನ ಕೌಟುಂಬಿಕ ಎಮೋಷನಲ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ ಪ್ರೇಮ್.

‘Mr. ಜಾಕ್’ ಆಗಿ ತೆರೆಮೇಲೆ ಮೋಡಿ ಮಾಡಲು ಬಂದ ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್‌!

‘Mr. ಜಾಕ್’ ಚಿತ್ರದ ಮೂಲಕ ನಿರ್ಮಾಪಕರಾದ ನಟ ಗುರುನಂದನ್‌

ನಟ ಗುರುನಂದನ್‌ ಅವರು ‘Mr. ಜಾಕ್’ ಚಿತ್ರದ ಮೂಲಕ ಮರಳಿದ್ದು, ಗೆಳೆಯರೊಡನೆ ‘ಮಂಡಿಮನೆ ಟಾಕೀಸ್’ ಸ್ಥಾಪಿಸಿ ಸ್ವತಃ ನಿರ್ಮಾಪಕರಾಗಿದ್ದಾರೆ. ಸುಮಂತ್ ಗೌಡ ನಿರ್ದೇಶನದ ಈ ಕೌಟುಂಬಿಕ ಹಾಸ್ಯ ಕಥೆಯಲ್ಲಿ ವೈವಾಹಿಕ ಬದುಕಿನ ಏರಿಳಿತ, ವಿಚ್ಛೇದನದ ಗಂಭೀರ ವಿಷಯ ಹಾಸ್ಯದ ಮೂಲಕ ಹೇಳಲಾಗಿದೆಯಂತೆ. ನಾಯಕಿಯಾಗಿ ತಪಸ್ವಿನಿ ಪೂಣಚ್ಛ ನಟಿಸಿದ್ದಾರೆ.

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ರಿಲೀಸ್; ಚಿತ್ರತಂಡಕ್ಕೆ ನಟ ಪ್ರಮೋದ್ ಶೆಟ್ಟಿ ಶುಭ ಹಾರೈಕೆ

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಪ್ರಮೋದ್ ಶೆಟ್ಟಿ

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ಲೋಕಾರ್ಪಣೆಗೊಂಡಿದ್ದು, ನಟ ಪ್ರಮೋದ್ ಶೆಟ್ಟಿ ಶುಭಕೋರಿದ್ದಾರೆ. ಚಿತ್ರಕ್ಕೆ 'ಎ' ಪ್ರಮಾಣಪತ್ರ ದೊರೆತಿದ್ದರೂ ಪ್ರತಿಯೊಬ್ಬರ ನೈಜ ಬದುಕಿನ ಎಚ್ಚರಿಕೆಯ ಪಾಠವಿದು ಎಂದಿದ್ದಾರೆ ನಿರ್ದೇಶಕ ಮನೋಜ್. ಪುನೀತ್ ರಾಜ್‌ಕುಮಾರ್ ಆಶೀರ್ವಾದ ನೆನೆದು ನಾಯಕ ಜಗ್ಗಿ ಭಾವುಕರಾಗಿದ್ದು, ಸಂಪ್ರತಿ ಆಳ್ವಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ದರ್ಶನ್‌ಗೆ ಸಣ್ಣ ರಿಲೀಫ್: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್; ಅಷ್ಟಕ್ಕೂ ಆಗಿದ್ದೇನು?

Darshan Case: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಎ-14 ಆರೋಪಿ ಪ್ರದೋಷ್ ಸಾಕ್ಷಿ ಹೇಳುವ ಪ್ರಕ್ರಿಯೆ ಸದ್ಯ ಮುಂದೂಡಿಕೆ ಆಗಿದೆ. ದರ್ಶನ್ ಪರ ವಕೀಲರ ತುರ್ತು ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದ ಹಿನ್ನೆಲೆಯಲ್ಲಿ, ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಬಂದಿದ್ದ ಪ್ರದೋಷ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ.

'ಅಲ್ಲು ಅರವಿಂದ್ ಮಾತನ್ನು ವಿವಾದ ಮಾಡುವವರು ಅಹಂ ಇರುವ ಜನರು ಮಾತ್ರ'; ಯಶ್‌ ತಾಯಿ ಹೇಳಿಕೆಗೆ ರಾಮ್‌ ಗೋಪಾಲ್‌ ವರ್ಮಾ ತಿರುಗೇಟು!

ನಟ ಯಶ್ ತಾಯಿ ಮಾತಿಗೆ ಆರ್‌ಜಿವಿ ತಿರುಗೇಟು; ಅಲ್ಲು ಅರವಿಂದ್‌ಗೆ ಸಪೋರ್ಟ್!

ʻಕೆಜಿಎಫ್ʼ ಚಿತ್ರಕ್ಕೂ ಮೊದಲು ಯಶ್ ಅಪರಿಚಿತರಾಗಿದ್ದರು ಎಂಬ ಅಲ್ಲು ಅರವಿಂದ್ ಹೇಳಿಕೆಗೆ ಯಶ್ ತಾಯಿ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರವಿಂದ್‌ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ವಿವಾದ ಸೃಷ್ಟಿಸುವವರಲ್ಲಿ ಅತಿಯಾದ ಅಹಂಕಾರವಿದೆ ಎಂದು ನೇರವಾಗಿ ತಿರುಗೇಟು ನೀಡಿದ್ದಾರೆ.

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು: ಕಾರಣವೇನು?

‘ಬಿಗ್ ಬಾಸ್‌’ ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು!

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ಪರಿಸರ ಮತ್ತು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ (NOC) ನೀಡದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

Devaraaya Movie: ‘ಕಿಚ್ಚ’ ಸುದೀಪ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್: 'ಶ್ರೀ ಕೃಷ್ಣದೇವರಾಯ'ನಾಗಿ ತೆರೆಮೇಲೆ ಮಿಂಚಲಿದ್ದಾರೆ ʻಅಭಿನಯ ಚಕ್ರವರ್ತಿʼ!

Devaraaya: ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಮಿಂಚಲಿದ್ದಾರೆ ನಟ ಸುದೀಪ್

ʻದೇವರಾಯʼ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಅವರು ವಿಜಯನಗರದ ಸಾರ್ವಭೌಮ ಶ್ರೀಕೃಷ್ಣದೇವರಾಯರಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸುದೀಪ್‌ ಜನ್ಮದಿನದಂದು ಈ ಐತಿಹಾಸಿಕ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

Kichcha Sudeep : ‘ಸ್ಕೂಲ್ ಬಸ್’ ಚಿತ್ರದಲ್ಲಿ ಕಿಚ್ಚ ಸುದೀಪ್; ಬಹುಭಾಷೆಗಳಲ್ಲಿ ರಿಲೀಸ್!

‘ಸ್ಕೂಲ್ ಬಸ್’ ಚಿತ್ರದಲ್ಲಿ ಕಿಚ್ಚ ಸುದೀಪ್; ಬಹುಭಾಷೆಗಳಲ್ಲಿ ರಿಲೀಸ್!

Kichcha Sudeep : ಸೆಪ್ಟೆಂಬರ್ 2ರಂದು ಸುದೀಪ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿತ್ರತಂಡ ಮಧ್ಯರಾತ್ರಿ ಅವರ ಫಸ್ಟ್ ಲುಕ್ ಪೋಸ್ಟರ್ First Look Poster) ಬಿಡುಗಡೆ ಮಾಡುವ ಮೂಲಕ ಈ ಮಹತ್ವದ ಪ್ರಾಜೆಕ್ಟ್‌ನಲ್ಲಿ ಅವರು ಇರುವುದನ್ನು ಅಧಿಕೃತವಾಗಿ ಪ್ರಕಟಿಸಿದೆ. ಖ್ಯಾತ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅರ್ಪಿಸುತ್ತಿರುವ ಈ ಚಿತ್ರವು ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿದೆ.

Billa Ranga Baasha: ‘ಬಿಲ್ಲ ರಂಗ ಬಾಷಾ’ ಚಿತ್ರದ ಹೊಸ ಪೋಸ್ಟರ್ ಔಟ್‌!

‘ಬಿಲ್ಲ ರಂಗ ಬಾಷಾ’ ಚಿತ್ರದ ಹೊಸ ಪೋಸ್ಟರ್ ಔಟ್‌!

Billa Ranga Baasha:ಚಿತ್ರದ ಸ್ಪೆಷಲ್ ಪೋಸ್ಟರ್ ರಿಲೀಸ್ ಆಗಿದೆ. ಬ್ಲಾಕ್‌ಬಸ್ಟರ್ 'ವಿಕ್ರಾಂತ್ ರೋಣ' ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಸುದೀಪ್ ಮತ್ತು ನಿರ್ದೇಶಕ ಅನೂಪ್ ಭಂಡಾರಿ ಮತ್ತೆ ಈ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ. ಬಿಡುಗಡೆಯಾಗಿರುವ ಹೊಸ ಪೋಸ್ಟರ್ ಅತ್ಯಂತ ರೋಮಾಂಚಕವಾಗಿದ್ದು, ಚಿತ್ರವು ವಿಶ್ವದರ್ಜೆಯ ಮೇಕಿಂಗ್ ಒಳಗೊಂಡಿದೆ ಎಂಬುದಕ್ಕೆ ಸ್ಪಷ್ಟ ಸಾಕ್ಷಿ ಒದಗಿಸಿದೆ.

Kichcha Sudeep Birthday: ಕಿಚ್ಚ ಸುದೀಪ್‌ ಜನ್ಮದಿನ; ಇರಲಿದೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್!

ಕಿಚ್ಚ ಸುದೀಪ್‌ ಜನ್ಮದಿನ; ಇರಲಿದೆ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್!

Kichcha Sudeep Birthday:ಅಭಿನಯ ಚಕ್ರವರ್ತಿ’ ಕಿಚ್ಚ ಸುದೀಪ್ (Kichcha Sudeep Birthday) ಇಂದು ತಮ್ಮ 53ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಪ್ರಪಂಚಾದ್ಯಂತ ಇರುವ ಕೋಟ್ಯಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಟನಿಗೆ ಶುಭ ಹಾರೈಸುತ್ತಿದ್ದಾರೆ. 4 ಹೊಸ ಸಿನಿಮಾಗಳ ಭರ್ಜರಿ ಅನೌನ್ಸ್‌ಮೆಂಟ್ ನೀಡಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ (Surprise) ನೀಡಲಿದ್ದಾರೆ ಎನ್ನಲಾಗುತ್ತಿದೆ.

Mahesh Babu: ‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ!

‘ಟಾಕ್ಸಿಕ್’ ಸಿನಿಮಾಗೆ 0.5 ರೇಟಿಂಗ್ ನೀಡಿದ ಮಹೇಶ್ ಬಾಬು ಪುತ್ರ!

Mahesh Babu: ತೆಲುಗು ಚಿತ್ರರಂಗದ ಸ್ಟಾರ್ ನಟ ಮಹೇಶ್ ಬಾಬು ಅವರ ಪುತ್ರ ಗೌತಮ್ ಘಟ್ಟಮನೇನಿ ‘ಟಾಕ್ಸಿಕ್’ ಚಿತ್ರಕ್ಕೆ ಅವರು ಅರ್ಧ ಸ್ಟಾರ್ ರೇಟಿಂಗ್ ನೀಡಿರುವುದು ಚರ್ಚೆಗೆ ಕಾರಣ ಆಗಿದೆ. ಆಗಸ್ಟ್ 26ರಂದು ಬಿಡುಗಡೆಯಾದ ಯಶ್ ಅವರ ‘ಟಾಕ್ಸಿಕ್’ ಸಿನಿಮಾಗೆ ಗೌತಮ್ ಕೇವಲ ಅರ್ಧ ಸ್ಟಾರ್ (0.5/5) ರೇಟಿಂಗ್ ನೀಡಿರುವುದು ಚರ್ಚೆಗೆ ಕಾರಣ ಆಗಿದೆ.

Mysaa Movie: ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ; ಮೈಸಾ ರಿಲೀಸ್‌ ಡೇಟ್‌ ಅನೌನ್ಸ್‌!

ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ಅಬ್ಬರ; ಮೈಸಾ ರಿಲೀಸ್‌ ಡೇಟ್‌ ಅನೌನ್ಸ್‌!

Mysaa Movie: ಈ ಚಿತ್ರ ಘೋಷಣೆಯಾದಾಗಿನಿಂದಲೂ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ವಾಸ್ತವವಾಗಿ, ಈ ವರ್ಷದ ಮೇ ತಿಂಗಳಲ್ಲಿ, ನಟಿ ರಶ್ಮಿಕಾ ಮಂದಣ್ಣ ಅವರು ಕೇರಳದಲ್ಲಿ ಚಿತ್ರತಂಡವು ದೀರ್ಘ ವೇಳಾಪಟ್ಟಿಯನ್ನು ಯಶಸ್ವಿಯಾಗಿ ಮುಗಿಸಿದೆ ಎಂದು ಬಹಿರಂಗಪಡಿಸಿದಾಗ ಚಿತ್ರ ಸುದ್ದಿಯಲ್ಲಿತ್ತು. ಈ ಚಿತ್ರಕ್ಕಾಗಿ ಸ್ಟಂಟ್ ಮಾಸ್ಟರ್ ಕೇಚಾ ಖಂಪಕ್ಡಿ ಕೆಲವು ಹೈ ವೋಲ್ಟೇಜ್ ಆಕ್ಷನ್ ಸನ್ನಿವೇಶಗಳನ್ನು ನೃತ್ಯ ಸಂಯೋಜನೆ ಮಾಡಿದ್ದಾರೆ.

ಕಾರು ಓವರ್‌ಟೇಕ್‌ ವಿಚಾರಕ್ಕೆ ಕಿರಿಕ್‌: ‘ದುನಿಯಾ’ ವಿಜಯ್ ಪುತ್ರನಿಂದ ವಿದ್ಯಾರ್ಥಿ ಅಪಹರಿಸಿ ಹಲ್ಲೆ ಆರೋಪ, ದೂರು ದಾಖಲು!

‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್‌ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ!

ನಟ ʻದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಲಿಸುವ ಕಾರಿನಲ್ಲಿ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ‌ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರಿನನ್ವಯ ಕೆಂಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಜಮೀರ್‌ ಪುತ್ರ, ನಟ ಝೈದ್‌ ಖಾನ್‌

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಜೈಲಿಗೆ ಬಂದ ಜಮೀರ್‌ ಪುತ್ರ ಝೈದ್‌ ಖಾನ್‌

ರೇಣುಕಾಸ್ವಾಮಿ ಕೇಸ್‌ನಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್‌ ತೂಗುದೀಪ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪತ್ನಿ ವಿಜಯಲಕ್ಷ್ಮಿ, ನಟ ಝೈದ್ ಖಾನ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

Vijay Deverakonda : "ನಾನು ಪ್ರೀತಿಸಿದೆ, ಬ್ರೇಕಪ್ ಆಯ್ತು, ಕುಡಿತ  ಬಿಟ್ಟೆʼʼ: ವಿಜಯ್ ದೇವರಕೊಂಡ ಓಪನ್‌ ಟಾಕ್‌

"ನಾನು ಪ್ರೀತಿಸಿದೆ, ಬ್ರೇಕಪ್ ಆಯ್ತು, ಕುಡಿತ ಬಿಟ್ಟೆʼʼ: ವಿಜಯ್ ದೇವರಕೊಂಡ

Vijay Deverakonda :'ರೋಮಾಂಚಕಂ' ಚಿತ್ರದ ಪ್ರಚಾರದ ವೇಳೆ ವಿಜಯ್ ದೇವರಕೊಂಡ (Vijay Deavarkonda) ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದೇ ಕಾರ್ಯಕ್ರಮದಲ್ಲಿ ವಿಜಯ್ ಆಡಿದ ಈ ಮಾತು ಚರ್ಚೆಗೆ ಕಾರಣವಾಗಿದೆ. ಬ್ರೇಕಪ್ ಬಗ್ಗೆ ಇಷ್ಟು ಓಪನ್ ಆಗಿ ಮಾತನಾಡಿದ್ದು ಕೇಳಿ ಫ್ಯಾನ್ಸ್ ಕಂಗಾಲಾಗಿದ್ದಾರೆ.

'ಗುಡ್ಡದ ಭೂತ' ಸಿನಿಮಾಕ್ಕಾಗಿ ಪೊಲೀಸ್ ಅಧಿಕಾರಿಯಾದ ಪಿ. ಲಂಕೇಶ್ ಮೊಮ್ಮಗ ಸಮರ್ಜಿತ್! ಸದ್ದಿಲ್ಲದೆ ಶೂಟಿಂಗ್‌ ಕಂಪ್ಲೀಟ್‌

'ಗುಡ್ಡದ ಭೂತ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾದ ಸಮರ್ಜಿತ್ ಲಂಕೇಶ್‌

ಸಮರ್ಜಿತ್‌ ಲಂಕೇಶ್‌ ಅವರು 'ಗುಡ್ಡದ ಭೂತ' ಎಂಬ ಸಸ್ಪೆನ್ಸ್ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಚಿತ್ರದಲ್ಲಿ 'ಎಸ್‌ಐ ಅಲೋಕ್' ಎಂಬ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರ್ಣಗೊಳಿಸಿದ್ದು, 1987ರ ಪುತ್ತೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ.

Loading...