ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Yash: ‘ರಾಮಾಯಣ’ದಲ್ಲಿ ಯಶ್‌ ಅಬ್ಬರ;  ಫಿದಾ ಆದ ಹನಿ ಸಿಂಗ್

‘ರಾಮಾಯಣ’ದಲ್ಲಿ ಯಶ್‌ ಅಬ್ಬರ; ಫಿದಾ ಆದ ಹನಿ ಸಿಂಗ್

Yash: ಯಶ್ ಅವರ ರಾವಣನ ಚಿತ್ರಣವನ್ನು ಶ್ಲಾಘಿಸಿದ್ದಲ್ಲದೆ, ಚಿತ್ರದ ಟೀಸರ್ ವೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ. ತಾವು ರಾಮನ ದೊಡ್ಡ ಭಕ್ತ ಎಂದು ಅವರು ಹೇಳಿದರು, ಆದರೆ ಅವರ ಅಭಿಪ್ರಾಯದಲ್ಲಿ, ಯಶ್ ಅವರ ಲುಕ್ ಮತ್ತು ಸ್ಕ್ರೀನ್ ಪ್ರೆಸೆನ್ಸ್ ಬಲವಾಗಿ ಎದ್ದು ಕಾಣುತ್ತದೆ ಎಂದು ಹೇಳಿದರು. ತಮ್ಮ ಬಾಲ್ಯದಲ್ಲಿ ದೆಹಲಿ ಮತ್ತು ಕರಂಪುರದಲ್ಲಿ ವೀಕ್ಷಿಸಿದ ರಾಮಲೀಲಾ ಪ್ರದರ್ಶನಗಳನ್ನು ನೆನಪಿಸಿಕೊಳ್ಳುತ್ತಾ, ಈ ಚಿತ್ರವು ಯಾರ ಭಾವನೆಗಳಿಗೂ ನೋವುಂಟು ಮಾಡಬಾರದು ಮತ್ತು ಆ ಆರಂಭಿಕ ನೆನಪುಗಳಂತೆ ಶುದ್ಧವಾಗಿ ಉಳಿಯಬೇಕು ಎಂದು ಅವರು ಆಶಿಸಿದರು.

‘ಸಿಎಂ ವಿಜಯ್ ಪರ್ಸನಲ್ ವಿಷ್ಯ ಬಿಡಿ, ಧೈರ್ಯವಿದ್ದರೆ ಅವರ ಆಡಳಿತದ ಬಗ್ಗೆ ಮಾತಾಡಿ‌ʼ; ತ್ರಿಷಾ ಟಾರ್ಗೆಟ್‌ ಮಾಡಿದವರಿಗೆ ನಟಿ ಸಂಜನಾ ಗಲ್ರಾನಿ ಸವಾಲು!

‌ʻವಿಜಯ್ ಪರ್ಸನಲ್ ವಿಷ್ಯ ಬಿಡಿ, ಆಡಳಿತದ ಬಗ್ಗೆ ಮಾತಾಡಿʼ; ನಟಿ ಸಂಜನಾ ಗರಂ!

ತಮಿಳುನಾಡು ಸಿಎಂ ವಿಜಯ್ ಅವರ ಖಾಸಗಿ ಬದುಕನ್ನು ಗುರಿಯಾಗಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿರುವ ವಿರೋಧ ಪಕ್ಷಗಳಿಗೆ ನಟಿ ಸಂಜನಾ ಗಲ್ರಾನಿ ಖಡಕ್ ಸವಾಲೆಸೆದಿದ್ದಾರೆ. ಆಡಳಿತದಲ್ಲಿ ಲೋಪ ಹುಡುಕಲಾಗದೆ ನಟಿ ತ್ರಿಷಾ ಹೆಸರನ್ನು ಎಳೆದು ತೇಜೋವಧೆ ಮಾಡುವುದು ಹೇಡಿತನ ಎಂದು ಅವರು ಹೇಳಿದ್ದಾರೆ.

Srinivasa Mangapuram OTT: 21 ದಿನಗಳಲ್ಲಿ ಒಟಿಟಿಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಅಣ್ಣನ ಪುತ್ರನ ಈ ಮೂವಿ

21 ದಿನಗಳಲ್ಲಿ ಒಟಿಟಿಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಅಣ್ಣನ ಪುತ್ರನ ಈ ಮೂವಿ

Srinivasa Mangapuram OTT: ಮಹೇಶ್ ಬಾಬು ಅವರ ಸೋದರಳಿಯ ಜಯ ಕೃಷ್ಣ (Jaya Krishna) ಅವರ ಚೊಚ್ಚಲ ಚಿತ್ರದಲ್ಲಿ ಮತ್ತು ರವೀನಾ ಟಂಡನ್ ಅವರ ಪುತ್ರಿ ರಾಶಾ ಥಡಾನಿ ನಟಿಸಿರುವ ಈ ಚಿತ್ರವು ಈಗ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ (Release) ಕೇವಲ 21 ದಿನಗಳ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ವಿಶ್ವಾದ್ಯಂತ ₹ 10 ಕೋಟಿಗಿಂತ ಕಡಿಮೆ ಗಳಿಸಿದೆ ಈ ಮೂವಿ.

ʻಟಾಕ್ಸಿಕ್‌ʼ ಬಗ್ಗೆ ಮಗಳು ರಿಷಿಕಾ ಸಿಂಗ್‌ ಟೀಕೆ, ತಂದೆಯಿಂದ ಭಾರಿ ಹೊಗಳಿಕೆ;  ʻಯಶ್‌ ಕೊಹಿನೂರ್‌ ವಜ್ರʼ ಎಂದ ನಿರ್ದೇಶಕ ಎಸ್‌. ವಿ.  ರಾಜೇಂದ್ರ ಸಿಂಗ್‌ ಬಾಬು

ʻಟಾಕ್ಸಿಕ್‌ʼ ಸಿನಿಮಾದ ಬಗ್ಗೆ ಮಗಳು ರಿಷಿಕಾ ಟೀಕೆ, ತಂದೆಯಿಂದ ಭಾರಿ ಹೊಗಳಿಕೆ

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ ‘ಟಾಕ್ಸಿಕ್’ ಚಿತ್ರದ ವಿರುದ್ಧ ನಟಿ ರಿಷಿಕಾ ಸಿಂಗ್ ಮಾಡಿದ್ದ ಗಂಭೀರ ಟೀಕೆಗಳಿಗೆ ಅವರ ತಂದೆ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ಮಾತನ್ನು ವೈಯಕ್ತಿಕ ಎಂದಿರುವ ಅವರು, ಯಶ್ ಅವರನ್ನು ಚಿತ್ರರಂಗದ ‘ಕೊಹಿನೂರ್ ವಜ್ರ’ ಎಂದು ಕೊಂಡಾಡಿದ್ದಾರೆ.

Vinay Gowda: ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ! ಟ್ರೋಲ್ ಮಾಡಿದವರಿಗೆ ವಿನಯ್‌ ಖಡಕ್‌ ಪೋಸ್ಟ್‌

ಟ್ರೋಲ್ ಮಾಡಿದವರಿಗೆ ವಿನಯ್‌ ಖಡಕ್‌ ಪೋಸ್ಟ್‌

Bigg Boss Kannada 13: ಸರ್ಕಲ್‌ಗೆ ಎಷ್ಟು ಸೈಡ್ಸ್‌ ಇವೆ?’ ಎಂಬ ಪ್ರಶ್ನೆಗೆ ವಿನಯ್‌ ಗೌಡ ನೀಡಿದ ಉತ್ತರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರು ಅವರನ್ನು ಟ್ರೋಲ್‌ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ಇದೀಗ ಖಡಕ್ ತಿರುಗೇಟು ನೀಡಿದ್ದು, ಇಂತಹ ಯಾವುದೇ ವಿಚಾರಗಳಿಗೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ.

ಹಾಲಿವುಡ್‌ ಸ್ಟೈಲ್‌ನಲ್ಲಿ ‘ಟಾಕ್ಸಿಕ್‌’ ಇಂಗ್ಲಿಷ್‌ ಟ್ರೇಲರ್; ಭಾರತೀಯ ಭಾಷೆಗಳಿಗಿಂತ ಇದು ಭಿನ್ನ, ಹೆಚ್ಚು ಎಫೆಕ್ಟೀವ್‌ ಆಗಿರುವುದು ಏಕೆ?

ಕನ್ನಡ ವರ್ಷನ್‌ಗಿಂತ ʻಟಾಕ್ಸಿಕ್‌ʼ ಇಂಗ್ಲಿಷ್‌ ಟ್ರೇಲರ್‌ನಲ್ಲಿ ಹೊಸತೇನಿದೆ?

ʻಟಾಕ್ಸಿಕ್‌ʼ ಸಿನಿಮಾದ ಇಂಗ್ಲಿಷ್‌ ಟ್ರೇಲರ್‌ ಬಿಡುಗಡೆಯಾಗಿ ಭಾರಿ ಸದ್ದು ಮಾಡುತ್ತಿದೆ. ಡಬ್ಬಿಂಗ್ ಬದಲಿಗೆ ನೇರವಾಗಿ ಇಂಗ್ಲಿಷ್‌ನಲ್ಲೇ ಚಿತ್ರೀಕರಣಗೊಂಡಿರುವ ಈ ಆವೃತ್ತಿಯಲ್ಲಿ ಯಶ್ ಅವರ ನೈಜ ಧ್ವನಿ ಹಾಗೂ ಗಾಂಭೀರ್ಯ ಎದ್ದು ಕಾಣುತ್ತಿದೆ. ಗೋವಾದ ಹಿನ್ನೆಲೆಯ ರಕ್ತಸಿಕ್ತ ಗ್ಯಾಂಗ್‌ಸ್ಟರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್: ʻನೂರಕ್ಕೆ ನೂರರಷ್ಟು ಸತ್ಯ ಹೇಳುವೆʼ ಎಂದ ಆರೋಪಿ ಪ್ರದೋಷ್; ನಟ ದರ್ಶನ್‌ಗೆ ಹೆಚ್ಚಿತು ಸಂಕಷ್ಟ

ʻನಾನು ಸತ್ಯ ಹೇಳುತ್ತೇನೆ’ ಎಂದ ಪ್ರದೋಷ್; ನಟ ದರ್ಶನ್‌ಗೆ ಸಂಕಷ್ಟ‌ ಶುರು!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದು, ನಟ ದರ್ಶನ್‌ಗೆ ಕಾನೂನು ಸಂಕಷ್ಟ ಹೆಚ್ಚಿಸಿದೆ. 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಯಾರ ಒತ್ತಡವೂ ಇಲ್ಲದೆ ಸತ್ಯಾಂಶ ಬಹಿರಂಗಪಡಿಸುವುದಾಗಿ ಪ್ರದೋಷ್ ಸ್ಪಷ್ಟಪಡಿಸಿದ್ದಾರೆ.

50 ಅಡಿ ಎತ್ತರದ ದರ್ಶನ್‌ ಕಟೌಟ್‌ ಎದುರು ಭರ್ಜರಿ ಫೈಟ್‌ ಮಾಡಿದ ʻದೇವಿʼ; ʻಶಾಸ್ತ್ರಿʼ ಮುಂದೆ ಯುವರೈತನ ಆಕ್ಷನ್‌ ಅಬ್ಬರ!

50 ಅಡಿ ಎತ್ತರದ ದರ್ಶನ್‌ ಕಟೌಟ್‌ ಎದುರು ಭರ್ಜರಿ ಫೈಟ್‌ ಮಾಡಿದ ʻದೇವಿʼ

ʻದೇವಿʼ ಚಿತ್ರದ ಸಾಹಸ ದೃಶ್ಯಗಳ ಚಿತ್ರೀಕರಣ ಬೆಂಗಳೂರಿನ ಚಿತ್ರಮಂದಿರವೊಂದರ ಬಳಿ ಭರದಿಂದ ಸಾಗಿದೆ. ನಟ ದರ್ಶನ್ ಅವರ 50 ಅಡಿ ಕಟೌಟ್ ಎದುರು ಮಂಡ್ಯದ ಯುವ ರೈತ ಚೇತನ್ ಗೌಡ ನಾಯಕನಾಗಿ ಅಬ್ಬರಿಸಿದ್ದಾರೆ. ಭವ್ಯ ಗೌಡ ನಾಯಕಿಯಾಗಿದ್ದು, ಹಳ್ಳಿಯಿಂದ ಬಂದ ಯುವಕ ರೌಡಿಸಂ ಸುಳಿಗೆ ಸಿಲುಕುವ ಕಥಾಹಂದರವನ್ನು ನಿರ್ದೇಶಕ ಪ್ರಕಾಶ್ ಕುಮಾರ್ ಕಟ್ಟಿಕೊಡುತ್ತಿದ್ದಾರೆ.

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ʻಅಮೃತಧಾರೆʼ ಖ್ಯಾತಿಯ ರಾಜೇಶ್ ನಟರಂಗ; ಯಾವುದು ಆ ನಾಟಕ?

20 ವರ್ಷಗಳ ನಂತರ ರಂಗಭೂಮಿಗೆ ಮರಳಿದ ರಾಜೇಶ್ ನಟರಂಗ; ಯಾವುದು ಆ ನಾಟಕ?

ನಟ ರಾಜೇಶ್‌ ನಟರಂಗ ಭರ್ತಿ ಎರಡು ದಶಕಗಳ ಬಳಿಕ ರಂಗಭೂಮಿಗೆ ಮರಳಿದ್ದು, ಕಲಾದ್ಯುತಿ ಪ್ರೊಡಕ್ಷನ್ಸ್ ಅರ್ಪಿಸುವ ‘ಮಳೆ ನಿಲ್ಲುವವರೆಗೆ’ ನಾಟಕದಲ್ಲಿ ನಟಿಸುತ್ತಿದ್ದಾರೆ. ದಿವಂಗತ ಕೆಎಎಸ್ ಅಧಿಕಾರಿ ಎಲ್.ಎಸ್. ಸುಧೀಂದ್ರ ರೂಪಾಂತರಿಸಿದ ಈ ಜರ್ಮನ್ ಥ್ರಿಲ್ಲರ್ ಕಥೆಯನ್ನು ಶರತ್ ಪರ್ವತವಾಣಿ ನಿರ್ದೇಶಿಸಿದ್ದಾರೆ.

ಹಿರಿಯ ನಟಿ ‘ಸಾಹುಕಾರ್‌’ ಜಾನಕಿ ತೀವ್ರ ಅಸ್ವಸ್ಥ: ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಕೆ

ನಟಿ ʻಸಾಹುಕಾರ್‌ʼ ಜಾನಕಿ ಅಸ್ವಸ್ಥ; ಐಸಿಯುನಲ್ಲಿ ಮುಂದುವರಿದ ಚಿಕಿತ್ಸೆ

ಹಿರಿಯ ನಟಿ ʻಸಾಹುಕಾರ್‌ʼ ಜಾನಕಿ ವಯೋಸಹಜ ಅನಾರೋಗ್ಯ ಹಾಗೂ ಉಸಿರಾಟದ ಸಮಸ್ಯೆಯಿಂದಾಗಿ ಚೆನ್ನೈನ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಾಗಿದ್ದಾರೆ. 400ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಈ ಹಿರಿಯ ಕಲಾವಿದೆಯ ಆರೋಗ್ಯ ಸದ್ಯ ಸ್ಥಿರವಾಗಿದ್ದು, ದಕ್ಷಿಣ ಭಾರತದ ಚಿತ್ರರಂಗ ಹಾಗೂ ಅಭಿಮಾನಿಗಳು ಜಾನಕಿ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ.

ʻನಾನು ಹೆಮ್ಮೆಯ ಅಂಧಭಕ್ತೆ..’ ಎಂದ ಇಶಾ ಕೊಪ್ಪಿಕರ್; ಹೇಳಿಕೆ ತಿರುಚಿದವರಿಗೆ ‘ಸೂರ್ಯವಂಶ’ ನಟಿಯ ಖಡಕ್ ತಿರುಗೇಟು!

ʻನಾನು ಹೆಮ್ಮೆಯ ಅಂಧಭಕ್ತೆ’; ಇಶಾ ಕೊಪ್ಪಿಕರ್ ಹೇಳಿಕೆ ತಿರುಚಲಾಗಿದೆಯಾ?

ನಟಿ ಇಶಾ ಕೊಪ್ಪಿಕರ್ ಅವರು ಇತ್ತೀಚೆಗೆ ತಮ್ಮನ್ನು 'ಹೆಮ್ಮೆಯ ಅಂಧಭಕ್ತೆ' ಎಂದು ಕರೆದುಕೊಂಡಿದ್ದ ವಿಡಿಯೋ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ತಮ್ಮ ಹೇಳಿಕೆಯನ್ನು ರಾಜಕೀಯವಾಗಿ ತಿರುಚಿದ ಟ್ರೋಲರ್ಸ್‌ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ನಿಷ್ಠೆ ಇರುವುದು ದೇಶಕ್ಕೇ ಹೊರತು ಯಾವುದೇ ರಾಜಕೀಯ ಪಕ್ಷಕ್ಕಲ್ಲ ಎಂದಿದ್ದಾರೆ.

2ನೇ ಮದುವೆ ವಿಚಾರ ಬಹಿರಂಗಪಡಿಸಿದ 'ಬಿಗ್ ಬಾಸ್' ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಈ ವಿವಾಹ ನಡೆದಿದ್ದು ಯಾವಾಗ?

ಎರಡನೇ ಮದುವೆ ಸತ್ಯ ಬಿಚ್ಚಿಟ್ಟ ʻಬಿಗ್ ಬಾಸ್ʼ ಖ್ಯಾತಿಯ ವರ್ತೂರು ಸಂತೋಷ್!

ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ತಮ್ಮ ಎರಡನೇ ಮದುವೆಯ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ. ಶೋ ಮುಗಿದ ಬಳಿಕ ಪ್ರೀತಿಸಿ ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ವಯಸ್ಸಾದ ತಾಯಿಗೆ ಆಸರೆ ಹಾಗೂ ಮನೆಯ ಜವಾಬ್ದಾರಿಗಾಗಿ ಮದುವೆಯಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

Kannada New Movie: ʻಪ್ರೇಮದ ಊರಲಿ' ಚಿತ್ರದ ಸಾಂಗ್‌ ಔಟ್‌; ಕಣ್ಮನ ಸೆಳೆದ ತಪಸ್ವಿನಿ ಪೂಣಚ್ಚ–ಶ್ರೀರಾಮ್ !

ʻಪ್ರೇಮದ ಊರಲಿ' ಚಿತ್ರದ ಸಾಂಗ್‌ ಔಟ್‌

Kannada New Movie:ಪ್ರೀತಿಯಲ್ಲಿ ಬೀಳುವ ಸುಂದರ ಭಾವನೆಗಳನ್ನು ಕಾವ್ಯಾತ್ಮಕವಾಗಿ ಕಟ್ಟಿಕೊಟ್ಟಿರುವ ಈ ಹಾಡಿಗೆ ಅಭಿಜಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದು, ಸುನಾದ ಗೌತಮ್ ಅವರ ಸಂಗೀತ ನಿರ್ದೇಶನದಲ್ಲಿ ನಿನಾದ ನಾಯಕ್ ಮತ್ತು ರಜತ್ ಹೆಗ್ಡೆ ಧ್ವನಿಯಾಗಿದ್ದಾರೆ. ನಾಯಕ ಶ್ರೀರಾಮ್ (ಸಂತೋಷ್) ಹಾಗೂ ನಟಿ ತಪಸ್ವಿನಿ ಪೂಣಚ್ಚ (ರುಕ್ಮಿಣಿ) ಜೋಡಿಯಾಗಿ ಕಣ್ಮನ ಸೆಳೆದಿದ್ದು, ತಪಸ್ವಿನಿ ಅವರ ಮುದ್ದಾದ ಅಭಿನಯಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

Kurmaavatar Title: ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್

ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್

shivanna: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಕೂರ್ಮಾವತಾರದ ಹಿನ್ನೆಲೆಯನ್ನು ಒಳಗೊಂಡ ಕಥೆಯನ್ನು ಪ್ರಧಾನವಾಗಿಟ್ಟುಕೊಂಡು ನಿರ್ಮಾಣವಾಗುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಪ್ರೇಕ್ಷಕರಲ್ಲಿ ಮತ್ತು ಶಿವಣ್ಣನ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಲುಕ್ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Salman Khan: ‘ಕಾಲಾ ಹಿರಣ್’ ಸಿನಿಮಾ ವಿವಾದ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

‘ಕಾಲಾ ಹಿರಣ್’ ; ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಿರ್ಮಾಪಕ

Salman Khan: ಸಲ್ಮಾನ್ ಖಾನ್ (Salman Khan) ಅವರ ವ್ಯಕ್ತಿತ್ವ ಹಕ್ಕುಗಳನ್ನು ಉಲ್ಲಂಘಿಸುವ ಟೀಸರ್ ಮತ್ತು ಇತರ ಪ್ರಚಾರದ ಇತರೆ ಕಂಟೆಂಟ್‌ ತೆಗೆದುಹಾಕುವಂತೆ ಕಾಲಾ ಹಿರಣ್: ದಿ ಬ್ಯಾಟಲ್ ಫಾರ್ ಲೆಗಸಿ ಚಿತ್ರದ ನಿರ್ಮಾಪಕರಿಗೆ ಮಧ್ಯಂತರ ಆದೇಶ ನೀಡಿದೆ. ಜಾನಿ ಫೈರ್‌ಫಾಕ್ಸ್ ಫಿಲ್ಮ್ಸ್‌ನ ನಿರ್ಮಾಪಕ ಅಮಿತ್ ಜಾನಿ ಈಗ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಸಲ್ಮಾನ್ ಖಾನ್ ಅವರ ಬಾಕಿ ಇರುವ ಕೃಷ್ಣಮೃಗ ಬೇಟೆ ಪ್ರಕರಣವನ್ನು ಆಧರಿಸಿದೆ ಎಂಬ ಆರೋಪದ ಮೇಲೆ ಚಿತ್ರದ ಪ್ರಚಾರಗಳು ವಿವಾದಕ್ಕೆ ಕಾರಣವಾಗಿವೆ.

Vishnuvardhan:  ಡಾ ವಿಷ್ಣುವರ್ಧನ್ ಅಮೃತ ಮಹೋತ್ಸವ ಯಾವಾಗ? ಲೋಗೋ ಅನಾವರಣ

ವಿಷ್ಣುವರ್ಧನ್ ಅಮೃತ ಮಹೋತ್ಸವ ಯಾವಾಗ? ಲೋಗೋ ಅನಾವರಣ

Vishnuvardhan: ಈ ಸಂದರ್ಭದಲ್ಲಿ ಮಾತನಾಡಿದ ವೀರಕಪುತ್ರ ಶ್ರೀನಿವಾಸ ಅವರು, ಕನ್ನಡ ಚಿತ್ರರಂಗದ ಮೇರು ನಟ ಡಾ. ವಿಷ್ಣುವರ್ಧನ್ ಅವರ ಜೀವನ, ಸಾಧನೆ ಮತ್ತು ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸುವ ಉದ್ದೇಶದಿಂದ ಸೆಪ್ಟೆಂಬರ್ 27ರಂದು ಬೆಂಗಳೂರಿನ ನಾಯಂಡಹಳ್ಳಿಯ ನಂದಿ ಲಿಂಕ್ ಗ್ರೌಂಡ್ ಮೈದಾನದಲ್ಲಿ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಗಮನಸೆಳೆದ ಸುಜನಿತ್ ಶೆಟ್ಟಿ ನಟನೆಯ ‘ಎ ಡೇಟ್‌’ ಚಿತ್ರದ ಟ್ರೇಲರ್‌; ರಿಲೀಸ್‌ ಡೇಟ್‌ ಘೋಷಿಸಿದ ಚಿತ್ರತಂಡ

ಸುಜನಿತ್ ಶೆಟ್ಟಿ ನಟನೆಯ ‘ಎ ಡೇಟ್‌’ ಚಿತ್ರದ ಟ್ರೇಲರ್‌ ರಿಲೀಸ್

‘ಎ ಡೇಟ್‌’ ಚಿತ್ರದ ಹೊಸತನದ ನಿರೂಪಣೆಯೊಂದಿಗೆ ಸೆಪ್ಟೆಂಬರ್ 4ರಂದು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ಅಂತರ್ಜಾಲದಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದ ಕಿರುಚಿತ್ರವೇ ಈಗ ಪೂರ್ಣ ಪ್ರಮಾಣದ ಸಿನಿಮಾಗೆ ಹೊರಹೊಮ್ಮಿದೆ. ಬೆಂಗಳೂರು ಮತ್ತು ದೆಹಲಿಯ ಜೋಡಿಯ ನಡುವೆ ಒಂದೇ ದಿನದಲ್ಲಿ ಸಾಗುವ ಕುತೂಹಲಕಾರಿ ಕಥಾಹಂದರವನ್ನು ಈ ಸಿನಿಮಾ ಹೊಂದಿದೆಯಂತೆ.

Pavithra Gowda: ರೇಣುಕಾ ಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡ ಮಾಜಿ ಪತಿ ಬಗ್ಗೆ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!‌ ಸಂಜಯ್‌ ಸಿಂಗ್‌ಗೆ ಏನಾಯ್ತು?

ಪವಿತ್ರಾ ಗೌಡ ಮಾಜಿ ಪತಿ ಬಗ್ಗೆ ಕೇಳಿಬಂತು ಬ್ರೇಕಿಂಗ್‌ ನ್ಯೂಸ್!‌

Pavithra Gowda: ಕಳೆದ 10 ವರ್ಷಗಳಿಂದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಹೊಂದಿದ್ದಾರೆ. ಹಾಗಂತ ಸ್ವತಃ ಪವಿತ್ರಾ ಗೌಡ ಅವರೇ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳ ಸಮೇತ ರಿವೀಲ್ ಮಾಡಿದ್ದರು. ಅಸಲಿಗೆ, 2007ರಲ್ಲಿಯೇ ಪವಿತ್ರಾ ಗೌಡಗೆ ಮದುವೆ ಆಗಿತ್ತು. ಅದೂ ಉತ್ತರ ಪ್ರದೇಶ ಮೂಲದ ಸಂಜಯ್ ಸಿಂಗ್ ಎಂಬುವರೊಂದಿಗೆ. ಸಂಜಯ್ ಸಿಂಗ್ (Sanjay Singh) ಎಂಬುವರನ್ನ ಪ್ರೀತಿಸಿ ಪವಿತ್ರಾ ಗೌಡ ವಿವಾಹವಾಗಿದ್ದರು.

ಬಿಗ್‌ ಬಾಸ್ ಕನ್ನಡ 13 ‘ಅಗ್ನಿಪರೀಕ್ಷೆ’; ʻಒಂದು ವೃತ್ತಕ್ಕೆ ಎಷ್ಟು ಸೈಡ್ಸ್‌ ಇರುತ್ತವೆ?ʼ, ವಿನಯ್ ಗೌಡ ಕೇಳಿದ ಪ್ರಶ್ನೆಗೆ ನೆಟ್ಟಿಗರ ಭಾರಿ ಟ್ರೋಲ್!

BBK 13: ವಿನಯ್ ಗೌಡ ಕೇಳಿದ ವೃತ್ತದ ಪ್ರಶ್ನೆಗೆ ನೆಟ್ಟಿಗರಿಂದ ಟ್ರೋಲ್!

ಬಿಗ್‌ ಬಾಸ್ ಕನ್ನಡ 13 ಅಗ್ನಿಪರೀಕ್ಷೆ ವೇದಿಕೆಯಲ್ಲಿ ತೀರ್ಪುಗಾರ ವಿನಯ್ ಗೌಡ ಕೇಳಿದ ವಿಚಿತ್ರ ಪ್ರಶ್ನೆ ಜಾಲತಾಣಗಳಲ್ಲಿ ನಗೆಪಾಟಲಿಗೀಡಾಗಿದೆ. ಸ್ಪರ್ಧಿಯೊಬ್ಬರಿಗೆ ವೃತ್ತದ ಬದಿಗಳ ಬಗ್ಗೆ ಪ್ರಶ್ನಿಸಿದಾಗ, ಆತ ಶೂನ್ಯ ಎಂದಿದ್ದಾನೆ. ಆದರೆ ವಿನಯ್ ಇನ್‌ಸೈಡ್-ಔಟ್‌ಸೈಡ್ ಎಂದು ಕೌಂಟರ್ ಕೊಡಲು ಹೋಗಿ ತಪ್ಪು ಲಾಜಿಕ್ ಬಳಸಿದ್ದಾರೆ.

Samantha Ruth Prabhu: ಬೇಬಿಮೂನ್ ಟ್ರಿಪ್‌ನಲ್ಲಿ ಸಮಂತಾ ದಂಪತಿ; ಫೋಟೊ ಭಾರಿ ವೈರಲ್

ಬೇಬಿಮೂನ್ ಟ್ರಿಪ್‌ನಲ್ಲಿ ಸಮಂತಾ ದಂಪತಿ; ಫೋಟೊ ಭಾರಿ ವೈರಲ್

Samantha: ಇತ್ತೀಚೆಗೆ ಈ ಜೋಡಿ ಬೇಬಿಮೂನ್ ಪ್ರವಾಸ ಕೈಗೊಂಡಿದ್ದು, ಅದರ ಮುದ್ದಾದ ಫೋಟೋಗಳನ್ನು ಸಮಂತಾ ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಈ ದಂಪತಿ, ಸದ್ಯ ವಿಶೇಷ ಕ್ಷಣಗಳನ್ನು ಕಳೆಯುತ್ತಿದ್ದಾರೆ. ತಮ್ಮ ಮೊದಲ ಮಗುವಿನ ಆಗಮನಕ್ಕೂ ಮುನ್ನ ಫಾಲೋವರ್ಸ್‌ಗಳಿಗೆ ತಮ್ಮ ಪ್ರವಾಸದ ಬಗ್ಗೆ ಒಂದು ಸಣ್ಣ ಝಲಕ್‌ ಹಂಚಿಕೊಂಡಿದ್ದಾರೆ.

ಬಾಲಿವುಡ್‌ ನಟ ಗೋವಿಂದ - ಸುನೀತಾ ಅಹುಜಾ ದಾಂಪತ್ಯ ಕಲಹಕ್ಕೆ ಬಿಗ್ ಟ್ವಿಸ್ಟ್: ವಿಚ್ಛೇದನ ಅರ್ಜಿ ವಾಪಸ್!

ನಟ ಗೋವಿಂದ - ಸುನೀತಾ ದಂಪತಿ ಬೇರೆಯಾಗಲ್ಲ; ಡಿವೋರ್ಸ್ ಅರ್ಜಿ‌ ವಾಪಸ್‌!

ನಟ ಗೋವಿಂದ - ಸುನೀತಾ ಅಹುಜಾ ದಾಂಪತ್ಯದ ಬಿರುಕು ಸುಖಾಂತ್ಯ ಕಂಡಿದ್ದು, ಬಾಂದ್ರಾ ಕೌಟುಂಬಿಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಸುನೀತಾ ಅಧಿಕೃತವಾಗಿ ಹಿಂಪಡೆದಿದ್ದಾರೆ. ಪುತ್ರ ಯಶವರ್ಧನ್ ಜೊತೆ ಕೋರ್ಟ್‌ಗೆ ಹಾಜರಾಗಿ ಕೇಸ್ ವಾಪಸ್ ಪಡೆದುಕೊಂಡಿದ್ದಾರೆ.

‘ಧರ್ಮನ್’ ಚಿತ್ರದಲ್ಲಿ ರಜನಿಕಾಂತ್ ಎದುರು ವಿಲನ್ ಆದ ತೆಲುಗಿನ ‘ಸ್ಟಾರ್’ ಹೀರೋ; ‌ʻತಲೈವಾʼ ಫ್ಯಾನ್ಸ್ ಸಖತ್ ಥ್ರಿಲ್!

‘ಧರ್ಮನ್’ ಚಿತ್ರದಲ್ಲಿ ರಜನಿಕಾಂತ್ ಎದುರು ತೆಲುಗಿನ ‘ಸ್ಟಾರ್’ ಹೀರೋ ವಿಲನ್!

Rajinikanth: ‘ಧರ್ಮನ್’ ಚಿತ್ರದಲ್ಲಿ `ಸೂಪರ್ ಸ್ಟಾರ್' ರಜನಿಕಾಂತ್ ಖಡಕ್ ವೈದ್ಯನಾಗಿ ಕಾಣಿಸಿಕೊಳ್ಳಲಿದ್ದಾರೆ. ಕಮಲ್ ಹಾಸನ್ ನಿರ್ಮಾಣದ ಈ ಆ್ಯಕ್ಷನ್ ಚಿತ್ರದಲ್ಲಿ ರಜನಿಗೆ ವಿಲನ್ ಆಗಿ ತೆಲುಗು ನಾಯಕ ರಾಮ್ ಪೋತಿನೇನಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಾಲಿವುಡ್ ಅಂಗಳದಲ್ಲಿ ಸಂಚಲನ ಮೂಡಿಸಿದೆ.

ʻಪವಿತ್ರಾ ಗೌಡ ನನಗೆ ಮಗಳಿದ್ದಂತೆ, ಅಲ್ಲಿರುವ ಎಲ್ಲರಿಗೂ ಸಾಂತ್ವನ ಹೇಳಿದೆʼ; ಜೈಲಿಗೆ ಭೇಟಿ ನೀಡಿದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಿಷ್ಟು!

ʻಪವಿತ್ರಾ ಗೌಡ ಮಾನಸಿಕವಾಗಿ ನೊಂದಿದ್ದಾರೆ' ಎಂದ ಮಹಿಳಾ ಆಯೋಗದ ಅಧ್ಯಕ್ಷೆ

ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಹತ್ವದ ಹೇಳಿಕೆ ನೀಡಿದ್ದಾರೆ. ವಿಚಾರಣಾಧೀನ ಕೈದಿ ಪವಿತ್ರಾ ಗೌಡ ತಮಗೆ ಮಗಳಿದ್ದಂತೆ ಎಂದಿರುವ ಅವರು, ಜೈಲಿನಲ್ಲಿರುವ ಎಲ್ಲಾ ಮಹಿಳೆಯರಿಗೂ ಕಾನೂನು ನೆರವು ಹಾಗೂ ಸಾಂತ್ವನ ಅಗತ್ಯ ಎಂದಿದ್ದಾರೆ.

‘ಧುರಂಧರ್‌’ ಖ್ಯಾತಿಯ ನಟಿ ಸಾರಾ ಅರ್ಜುನ್‌ಗೆ ಜಾಕ್‌ಪಾಟ್‌; ಟಾಲಿವುಡ್‌ ಸ್ಟಾರ್‌ ನಟನ ಸಿನಿಮಾದಿಂದ ಬಂತು ಬಂಪರ್‌ ಆಫರ್!‌

‘ಧುರಂಧರ್‌’ ನಟಿ ಸಾರಾ ಅರ್ಜುನ್‌ಗೆ ಟಾಲಿವುಡ್‌ನಲ್ಲಿ ಭರ್ಜರಿ ಜಾಕ್‌ಪಾಟ್‌!

ನಟಿ ಸಾರಾ ಅರ್ಜುನ್‌ ಅವರು ರಣವೀರ್‌ ಸಿಂಗ್‌ ಜೊತೆಗಿನ ‘ಧುರಂಧರ್’ ಸರಣಿಯ ಯಶಸ್ಸಿನ ಬೆನ್ನಲ್ಲೇ ಟಾಲಿವುಡ್‌ನ ಬಹುನಿರೀಕ್ಷಿತ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ರಾಮ್ ಚರಣ್ ಹಾಗೂ ಸುಕುಮಾರ್ ಜೋಡಿಯ ಮೆಗಾ ಪ್ರಾಜೆಕ್ಟ್‌ನಲ್ಲಿ ಸಾರಾ ಅರ್ಜುನ್ ನಟಿಸುವುದು ಬಹುತೇಕ ಫಿಕ್ಸ್‌ ಎನ್ನಲಾಗಿದೆ.

Loading...