ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

‘ನನ್ನ ತಂದೆ ಸಾಯುವುದಕ್ಕೆ ನಾನೇ ಸಹಾಯ ಮಾಡಿದೆ’; ಹೃದಯವಿದ್ರಾವಕ ಸತ್ಯ ಬಿಚ್ಚಿಟ್ಟ ನಟ ರಾಮ್ ಕಪೂರ್! ಅಷ್ಟಕ್ಕೂ ಆಗಿದ್ದೇನು?

‘ನನ್ನ ತಂದೆ ಸಾಯುವುದಕ್ಕೆ ನಾನೇ ಸಹಾಯ ಮಾಡಿದೆ’- ಬಾಲಿವುಡ್‌ ನಟ ರಾಮ್ ಕಪೂರ್

'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಟ ರಾಮ್ ಕಪೂರ್ ತಮ್ಮ ತಂದೆಯ ಸಾವಿನ ಅತ್ಯಂತ ಹೃದಯವಿದ್ರಾವಕ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತಂದೆಯ ಅಂತಿಮ ಇಚ್ಛೆಯಂತೆ, ಅವರು ಗೌರವಯುತವಾಗಿ ಕೊನೆಯುಸಿರೆಳೆಯಲು ತಾವೇ ನೆರವಾಗಿದ್ದಾಗಿ ಹೇಳಿದ್ದಾರೆ.

ನೆಚ್ಚಿನ ಅಭಿಮಾನಿಗಳಿಗೆ 5 ಲಕ್ಷ ರೂ. ಅಪಘಾತ ವಿಮೆ ಮಾಡಿಸಿದ ಅಲ್ಲು ಅರ್ಜುನ್‌; ರಿಯಲ್‌ ಲೈಫ್‌ನಲ್ಲೂ ಹೀರೋ ಎನಿಸಿಕೊಂಡ ಪುಷ್ಪರಾಜ್

ವಾವ್! ಅಭಿಮಾನಿಗಳಿಗೆ ಅಪಘಾತ ವಿಮೆ ಮಾಡಿಸಿದ ನಟ ಅಲ್ಲು ಅರ್ಜುನ್‌

ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್ 'ಐಕಾನ್ ಸ್ಟಾರ್' ಅಲ್ಲು ಅರ್ಜುನ್ ಹೈದರಾಬಾದ್‌ನಲ್ಲಿ ನಡೆದ 'AAFA Annual Summit 2026' ಫ್ಯಾನ್ಸ್ ಮೀಟ್‌ನಲ್ಲಿ ಭಾಗವಹಿಸಿ, ಆಗಮಿಸಿದ್ದ 1,000ಕ್ಕೂ ಹೆಚ್ಚು ಅಭಿಮಾನಿಗಳಿಗೆ ಭಾರಿ ಕೊಡುಗೆ ನೀಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿಗೂ 3 ರಿಂದ 5 ಲಕ್ಷ ರೂಪಾಯಿ ಮೌಲ್ಯದ ಉಚಿತ 'ಅಪಘಾತ ವಿಮೆ' ಕಾರ್ಡ್ ವಿತರಿಸಿ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.

Ramayana: ಭಾರೀ ಮೊತ್ತಕ್ಕೆ ಮಾರಾಟವಾಯ್ತು ಮ್ಯೂಸಿಕ್ ಹಕ್ಕು! ‘ರಾಮಾಯಣ’ ಬಿಗ್‌ ಅಪ್‌ಡೇಟ್‌

Ramayana: ಭಾರೀ ಮೊತ್ತಕ್ಕೆ ಮಾರಾಟವಾಯ್ತು ಮ್ಯೂಸಿಕ್ ಹಕ್ಕು!

Ramayana: ಟಿ-ಸೀರೀಸ್ ಸಂಸ್ಥೆಯು 75 ಕೋಟಿ ರೂಪಾಯಿಗೆ ಈ ಚಿತ್ರದ ಆಡಿಯೋ (Audio Rights) ಹಕ್ಕುಗಳನ್ನು ಖರೀದಿಸಿದೆ. ಟಿ-ಸೀರೀಸ್ ಚಿತ್ರದ ಎರಡೂ ಭಾಗಗಳ ಆಡಿಯೋ ಹಕ್ಕುಗಳನ್ನು ಖರೀದಿಸಿದೆ. ಈ ಒಪ್ಪಂದವು ಯಾವುದೇ ಭಾರತೀಯ ಸಂಗೀತ ಕಂಪನಿಯಿಂದ ನಡೆದ ಅತಿದೊಡ್ಡ ಸಂಗೀತ ಹಕ್ಕುಗಳ ಒಪ್ಪಂದಗಳಲ್ಲಿ ಒಂದಾಗಿದೆ. ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕರಾದ ಎ.ಆರ್. ರೆಹಮಾನ್ ಮತ್ತು ಹ್ಯಾನ್ಸ್ ಜಿಮ್ಮರ್ ಮೊದಲ ಬಾರಿಗೆ ಭಾರತೀಯ ಚಲನಚಿತ್ರವೊಂದರಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

Allu Arjun: ಹುಡುಗಿ ಮನೆ ಮುಂದೆ ಕಾಯಿರಿ, ಆದ್ರೆ ಟ್ರೋಲ್ ಮಾಡ್ಬೇಡಿ; ಅಲ್ಲು ಅರ್ಜುನ್‌

ಹುಡುಗಿ ಮನೆ ಮುಂದೆ ಕಾಯಿರಿ, ಆದ್ರೆ ಟ್ರೋಲ್ ಮಾಡ್ಬೇಡಿ; ಅಲ್ಲು ಅರ್ಜುನ್‌

Allu Arjun: ಹೈದರಾಬಾದ್‌ನಲ್ಲಿ ನಡೆದ ‘ಅಲ್ಲು ಅರ್ಜುನ್‌ ಫ್ಯಾನ್ಸ್‌ ಅಸೋಸಿಯೇಷನ್ ಸಭೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲು ಅರ್ಜುನ್ ಸಾವಿರಾರು ಅಭಿಮಾನಿಗಳನ್ನು ಭೇಟಿಯಾದರು. ತಮ್ಮ ಟ್ರೇಡ್‌ಮಾರ್ಕ್ ಕಪ್ಪು ಉಡುಪನ್ನು ಧರಿಸಿ, ಸಂವಹನ ನಡೆಸಿ, ವರ್ಷಕ್ಕೆ ಕನಿಷ್ಠ ಒಂದು ಒಳ್ಳೆಯ ಕಾರ್ಯವನ್ನು ಮಾಡುವಂತೆ ಎಲ್ಲರಿಗೂ ಪ್ರೋತ್ಸಾಹಿಸಿದರು.

Ramayana Movie: ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಘೋಷಣೆ

ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಗೆ ದಿನಾಂಕ ಘೋಷಣೆ

Ramayana Movie:ಟ್ರೇಲರ್ ಅನ್ನು ಮೂಲತಃ ಜುಲೈ 24 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು, ಆದರೆ ನಂತರ ಮುಂದೂಡಲಾಯಿತು .ನಿರ್ಮಾಪಕ ನಮಿತ್ ಮಲ್ಹೋತ್ರ ಅವರು ದಿನಾಂಕ ನಿಗದಿ ಮಾಡಿದ್ದಾರೆ. ಜುಲೈ 30ರಂದು ಈ ಸಿನಿಮಾದ ಟ್ರೇಲರ್ ಅನಾವರಣ ಆಗಲಿದೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಅಭಿಮಾನಿಗಳ ಕಾತರ ಹೆಚ್ಚಾಗಿದೆ.

Batwara 1947 Trailer:  ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದ ಕಥೆ; ʼಬಟ್ವಾರಾʼ ಟ್ರೈಲರ್‌ ಔಟ್‌

ಭಾರತ-ಪಾಕಿಸ್ತಾನ ವಿಭಜನೆಯ ಸಂದರ್ಭದ ಕಥೆ; ʼಬಟ್ವಾರಾʼ ಟ್ರೈಲರ್‌ ಔಟ್‌

Batwara: ಆಕ್ಷನ್‌ ಪ್ಯಾಕ್ಡ್‌ನಿಂದ ಕೂಡಿದೆ. ಟ್ರೇಲರ್‌ಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಬಟ್ವಾರಾ 1947 ರ ಟ್ರೇಲರ್ ಹೃದಯಸ್ಪರ್ಶಿಯಾಗಿದೆ. ಭಾರತ-ಪಾಕಿಸ್ತಾನ ವಿಭಜನೆಯ ನಂತರದ ಕುರಿತಾಗಿ ಇದೆ. ಟ್ರೇಲರ್‌ನ ಆರಂಭದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಶುಭ ಸುದ್ದಿ ಕೇಳಿಬರುತ್ತದೆ ಒಟ್ಟಿಗೆ ಬಾಳುತ್ತಿದ್ದ ಜನರಲ್ಲಿ ಹಿಂಸೆ, ಭಯ ಮತ್ತು ಬಲವಂತದ ವಲಸೆ ಹೇಗೆ ಬಿರುಕು ಮೂಡಿಸುತ್ತದೆ ಎಂಬುದನ್ನು ಸನ್ನಿ ಡಿಯೋಲ್ ಆಘಾತದಿಂದ ನೋಡುವ ದೃಶ್ಯಗಳಿವೆ.

‘ಪ್ಲೀಸ್.. ಇನ್ಮುಂದೆ ಎಲ್ಲರೂ ನನ್ನನ್ನು ಅನ್ನಾ ಕೊಣಿದೇಲ ಅಂತಲೇ ಕರೆಯಿರಿ’; ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಪತ್ನಿಯ ಮನವಿ!

ಎಲ್ಲರಿಗೂ ತಮ್ಮ ಹೆಸರಿನ ಬಗ್ಗೆ ಕ್ಲಾರಿಟಿ ಕೊಟ್ಟ DCM ಪವನ್ ಕಲ್ಯಾಣ್ ಪತ್ನಿ

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಕೊಣಿದೇಲ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಹೆಸರು ಮತ್ತು ಮನೆತನದ ಸರ್‌ನೇಮ್ ಕುರಿತು ಖಡಕ್ ಸ್ಪಷ್ಟನೆ ನೀಡಿದ್ದಾರೆ. ತಮ್ಮನ್ನು 'ಅನ್ನಾ ಲೆಜ್ನೆವಾ' ಬದಲು 'ಅನ್ನಾ ಕೊಣಿದೇಲ' ಎಂದೇ ಕರೆಯಬೇಕೆಂದು ವಿನಂತಿಸಿದ್ದಾರೆ.

OTT Movie Releases This Week: ಒಟಿಟಿಯಲ್ಲಿ ಈ ವಾರ ಸೌತ್‌ ಸಿನಿಮಾಗಳ ಅಬ್ಬರ!

ಒಟಿಟಿಯಲ್ಲಿ ಈ ವಾರ ಸೌತ್‌ ಸಿನಿಮಾಗಳ ಅಬ್ಬರ!

OTT Movie Releases This Week: ಸಿನಿ ಪ್ರಿಯರಿಗೆ ಸಿಹಿ ಉಣ ಬಡಿಸಲು ಹಲವು ವಿಭಿನ್ನ ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪ್ರಸಾರವಾಗುತ್ತಿವೆ. ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಯ ಅಪರಾಧ ಥ್ರಿಲ್ಲರ್‌ ಸಿನಿಮಾದಿಂದ ಹಿಡಿದು ಸೈಕಲಾಜಿಕಲ್ ಥ್ರಿಲ್ಲರ್‌ವರೆಗೆ ಎಲ್ಲಾ ಜಾನರ್‌ಗಳು ಸಿನಿಮಾಗಳು (Cinema OTT) ಒಟಿಟಿಗೆ ಬಂದಿವೆ?

‘ಚರಂಡಿ ತಲೆಮಾರು’ ಹೇಳಿಕೆಗೆ ಆಕ್ರೋಶ: ಬಿಜೆಪಿ ಸಂಸದೆ, ನಟಿ ಕಂಗನಾ ರಣಾವತ್‌ಗೆ ತಿರುಗೇಟು ನೀಡಿದ ಸಿಜೆಪಿ!

ಕಂಗನಾ ರಣಾವತ್‌ 'ಚರಂಡಿ ತಲೆಮಾರು' ಹೇಳಿಕೆಗೆ ಸಿಜೆಪಿ ಖಡಕ್ ತಿರುಗೇಟು!‌

ಬಿಜೆಪಿ ಸಂಸದೆ ಕಂಗನಾ ರಣಾವತ್ ದೇಶದ ಯುವತಿಯರನ್ನು ‘ಚರಂಡಿ ತಲೆಮಾರು’ ಎಂದು ಕರೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ), ಕಂಗನಾ ಮಾತುಗಳನ್ನು ಅವರ ಸ್ವಂತ ಬಿಜೆಪಿ ಪಕ್ಷವೇ ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ವ್ಯಂಗ್ಯವಾಡಿದೆ.

ಪ್ರತಿ ತಿಂಗಳು 40 ಲಕ್ಷ ರೂ. ಜೀವನಾಂಶ ಕೇಳಿದ್ದ ಪತ್ನಿ ಆರತಿ; ನಟ 'ಜಯಂ' ರವಿಗೆ ಕೌಟುಂಬಿಕ ನ್ಯಾಯಾಲಯ ಹೇಳಿದ್ದೇನು?

ಪತ್ನಿ ಆರತಿಗೆ ತಿಂಗಳಿಗೆ 40 ಲಕ್ಷ ಕೊಡ್ಬೇಕಿಲ್ಲ; ನಟ 'ಜಯಂ' ರವಿಗೆ ರಿಲೀಫ್

ತಮಿಳು ನಟ 'ಜಯಂ' ರವಿ ಮತ್ತು ಅವರ ಪತ್ನಿ ಆರತಿ ವಿಚ್ಛೇದನ ಪ್ರಕರಣದಲ್ಲಿ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ನಟನಿಗೆ ಬಿಗ್ ರಿಲೀಫ್ ನೀಡಿದೆ. ತಿಂಗಳಿಗೆ 40 ಲಕ್ಷ ರೂಪಾಯಿ (ವರ್ಷಕ್ಕೆ 4.80 ಕೋಟಿ ರೂ.) ಜೀವನಾಂಶ ಕೇಳಿದ್ದ ಪತ್ನಿ ಆರತಿ ಅವರ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.

ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್‌ಗೆ ‌ʻಬಿಗ್ ಬಾಸ್‌ʼ ಕನ್ನಡದಿಂದ ಆಫರ್; ಆದರೆ ಈ ಶೋಗೆ ʻನಾನು ಹೋಗಲ್ಲʼ ಎಂದಿದ್ದೇಕೆ?

ʻಬಿಗ್ ಬಾಸ್‌ ಕನ್ನಡʼ ಶೋನಿಂದ ಅಬ್ದುಲ್ ರಜಾಕ್‌ಗೆ ಆಫರ್‌; ಮುಂದೇನಾಯ್ತು?

ಕನ್ನಡ ಕಿರುತೆರೆಯ ಬಹುನಿರೀಕ್ಷಿತ 'ಬಿಗ್ ಬಾಸ್ ಕನ್ನಡ ಸೀಸನ್ 13' ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಚ್ ಆಗಲಿದ್ದು, ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಅವರಿಗೆ ಬಿಗ್ ಬಾಸ್ ಕಾಸ್ಟಿಂಗ್ ತಂಡದಿಂದ ಬಂದಿದ್ದ ಆಹ್ವಾನವನ್ನು ಅವರು ನಿರಾಕರಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಶೋ ಪ್ರತಿನಿಧಿ ಜೊತೆಗಿನ ಸಂಭಾಷಣೆಯ ಆಡಿಯೋ ಕ್ಲಿಪ್ ಅನ್ನು ಅವರು ಹಂಚಿಕೊಂಡಿದ್ದಾರೆ.

‌ʻಕೃಷ್ಣʼ ಅಜಯ್‌ ರಾವ್ ನಟನೆಯ ‘ಪಾರ್ಟ್ನರ್’ ಚಿತ್ರದ ಹೊಸ ಸಾಂಗ್‌ ರಿಲೀಸ್;‌ ಸ್ಯಾಂಡಲ್‌ವುಡ್‌ಗೆ ಮರಳಿದ ಗಾಯಕ ಕುನಾಲ್‌ ಗಾಂಜವಾಲಾ

ಸ್ಯಾಂಡಲ್‌ವುಡ್‌ಗೆ ಮರಳಿದ ಬಾಲಿವುಡ್‌ನ ಖ್ಯಾತ ಗಾಯಕ ಕುನಾಲ್‌ ಗಾಂಜವಾಲಾ

'ಕೃಷ್ಣ' ಅಜಯ್ ರಾವ್ ಹಾಗೂ ಬೃಂದಾ ಆಚಾರ್ಯ ನಟನೆಯ ಶಿವತೇಜಸ್ ನಿರ್ದೇಶನದ 'ಪಾರ್ಟ್ನರ್' ಚಿತ್ರದ 'ಅಮೋರಾ' ಹಾಡು ಬಿಡುಗಡೆಯಾಗಿದೆ. ಬಾಲಿವುಡ್‌ನ ಪ್ರಸಿದ್ಧ ಗಾಯಕ ಕುನಾಲ್ ಗಂಜಾವಾಲಾ ಈ ಗೀತೆಯ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳಿದ್ದಾರೆ. ಈ ಹಾಡಿಗೆ ನಕುಲ್ ಅಭಯಂಕರ್ ಸಂಗೀತವಿದೆ.

‘ನನ್ನ ತಾಯಿ 6 ತಿಂಗಳು ನನ್ನೊಂದಿಗೆ ಮಾತುಬಿಟ್ಟರು, ವಾಟ್ಸಾಪ್‌ನಲ್ಲಿ ಬ್ಲಾಕ್‌ ಮಾಡಿದ್ದರು’; ನಟಿ ಭಾಗ್ಯಶ್ರೀ ಬೋರ್ಸೆಗೆ ಇಂತಹ ಪರಿಸ್ಥಿತಿ ಬಂದಿದ್ದೇಕೆ?

ನಟಿ ಭಾಗ್ಯಶ್ರೀ ಬೋರ್ಸೆ ನೋವಿನ ಕಥೆ; ಅವ್ರ ಕುಟುಂಬದವರು ಹೀಗೇಕೆ ಮಾಡಿದ್ರು?

'ಲೇನಿನ್' ಚಿತ್ರದ ಯಶಸ್ಸಿನ ಅಲೆಯಲ್ಲಿರುವ ನಟಿ ಭಾಗ್ಯಶ್ರೀ ಬೋರ್ಸೆ, ತಮ್ಮ ಸಿನಿಮಾ ರಂಗದ ಪ್ರವೇಶಕ್ಕೆ ಕುಟುಂಬದಿಂದ ಎದುರಾಗಿದ್ದ ತೀವ್ರ ವಿರೋಧವನ್ನು ನೆನಪಿಸಿಕೊಂಡಿದ್ದಾರೆ. ನಟಿಯಾಗುವ ನಿರ್ಧಾರದಿಂದಾಗಿ ತಾಯಿ ಆರು ತಿಂಗಳು ಮಾತನ್ನೇ ಬಂದ್ ಮಾಡಿ ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಾಗಿ ಅವರು ತಿಳಿಸಿದ್ದಾರೆ.

ಅಯ್ಯಯ್ಯೋ, ತೆಲುಗು ಹೀರೋಗಳ ಮೇಲೆ ಯಾರ ಕಣ್ಣು ಬಿತ್ತೋ? ಒಬ್ಬರಾದ ಮೇಲೊಬ್ಬರಿಗೆ ಶಸ್ತ್ರಚಿಕಿತ್ಸೆ, ಟಾಲಿವುಡ್ ನಟರ ಅಭಿಮಾನಿಗಳಲ್ಲಿ ಆತಂಕ!

ಟಾಲಿವುಡ್ ನಟರ ಮೇಲೆ ಯಾರ ಕಣ್ಣು ಬಿತ್ತೋ? ಒಬ್ಬರಾದ ಮೇಲೊಬ್ಬರಿಗೆ ಸರ್ಜರಿ!

ತೆಲುಗು ಚಿತ್ರರಂಗದ ಪ್ರಮುಖ ನಟರು ಸಾಲಾಗಿ ಗಾಯಗೊಳ್ಳುತ್ತಿರುವುದು ಅಭಿಮಾನಿಗಳನ್ನು ತೀವ್ರ ಆತಂಕಕ್ಕೆ ತಳ್ಳಿದೆ. ಇತ್ತೀಚೆಗೆ ನಂದಮೂರಿ ಬಾಲಕೃಷ್ಣ, ರಾಮ್ ಚರಣ್, ಜೂನಿಯರ್ ಎನ್‌ಟಿಆರ್ ಸೇರಿದಂತೆ ಮುಂತಾದವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಗ್ಗೆ ಇಲ್ಲಿದೆ ಒಂದು ಸ್ಪೆಷಲ್‌ ಸ್ಟೋರಿ.

Pavala Shyamala: ತೆಲುಗಿನ ಖ್ಯಾತ ಹಿರಿಯ ನಟಿ ಪಾವಲ ಶ್ಯಾಮಲ ಇನ್ನಿಲ್ಲ

ತೆಲುಗಿನ ಖ್ಯಾತ ಹಿರಿಯ ನಟಿ ಪಾವಲ ಶ್ಯಾಮಲ ಇನ್ನಿಲ್ಲ

Pavala Shyamala: ಹಾಸ್ಯ ಪಾತ್ರಗಳಲ್ಲಿ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ ಹಿರಿಯ ನಟಿ ಪಾವಲಾ ಶ್ಯಾಮಲಾ (75) (pavala shyamala) ನಿಧನರಾಗಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ, ಹಾಸ್ಯ ನಟಿಯಾಗಿ ನಟಿಸಿದ್ದ ಪಾವಲ ಶಾಮಲ ಕಳೆದ ಕೆಲ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. (ಜುಲೈ 28) ಬೆಳಿಗ್ಗೆ ಹೈದರಾಬಾದ್​​ನ ಒಸ್ಮಾನಿಯಾ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.

Ramayana Movie: ʻರಾಮಾಯಣʼ ಸೆಟ್‌ನಲ್ಲಿ ಶಿವನ ಭಕ್ತಿಗೀತೆ! ನಟ ಯಶ್‌ ಹೇಳಿದ್ದೇನು?

ʻರಾಮಾಯಣʼ ಸೆಟ್‌ನಲ್ಲಿ ಶಿವನ ಭಕ್ತಿಗೀತೆ! ನಟ ಯಶ್‌ ಹೇಳಿದ್ದೇನು?

Ramayana Movie:. ರಾಮಾಯಣ ಸಿನಿಮಾದಲ್ಲಿ ರಾವಣನ (Ravana) ಪಾತ್ರಕ್ಕಾಗಿ ನಟ ಯಶ್ ಸೆಟ್‌ನಲ್ಲಿ ದೊಡ್ಡ ಸ್ಪೀಕರ್ ಇಟ್ಟು ಶಿವನ ಹಾಡುಗಳನ್ನು ಗಟ್ಟಿಯಾಗಿ ಹಾಕುತ್ತಿದ್ದರಂತೆ. ಸಂಗೀತದ ಸೌಂಡ್ ಎಷ್ಟು ಹೆಚ್ಚಾಗಿರುತ್ತಿತ್ತೆಂದರೆ ಸೆಟ್‌ನಲ್ಲಿದ್ದ ಉಳಿದವರು ಮಾತನಾಡಲು ಕಷ್ಟಪಡುತ್ತಿದ್ದರು. ಯಶ್ ಈ ತಮಾಷೆಯ ನೆನಪನ್ನು ನಗುತ್ತಲೇ ನೆನಪಿಸಿಕೊಂಡಿದ್ದಾರೆ.

Jr NTR : ಜ್ಯೂ ಎನ್​ಟಿಆರ್​ ಭುಜಕ್ಕೆ ಗಾಯ; ಬಿಗ್‌ ಅಪ್‌ಡೇಟ್‌ ಕೊಟ್ಟ ಟೀಮ್‌!

ಜ್ಯೂ ಎನ್​ಟಿಆರ್​ ಭುಜಕ್ಕೆ ಗಾಯ; ಬಿಗ್‌ ಅಪ್‌ಡೇಟ್‌ ಕೊಟ್ಟ ಟೀಮ್‌!

Jr NTR: ವೈದ್ಯರು ಮುಂದಿನ 6-8 ವಾರಗಳ ಕಾಲ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಜೂ. ಎನ್​ಟಿಆರ್ ಅವರಿಗೆ ಗಾಯ ಆಗಿದೆ ಎಂಬ ವಿಷಯ ತಿಳಿದು ಅಭಿಮಾನಿಗಳಿಗೆ ಗಾಬರಿ ಆಗಿತ್ತು. ಆದರೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ನಟನ ತಂಡ ಹೇಳಿದೆ.ನಟನ ತಂಡವು ಅಭಿಮಾನಿಗಳಿಗೆ ಹೆಚ್ಚಿನ ನವೀಕರಣಗಳನ್ನು ಅಧಿಕೃತ ಚಾನೆಲ್‌ಗಳ ಮೂಲಕ ತಿಳಿಸಲಾಗುವುದು ಎಂದು ಭರವಸೆ ನೀಡಿದೆ, ಆದರೆ ಸದ್ಯಕ್ಕೆ, ನಟನ ಚೇತರಿಕೆಯತ್ತ ಗಮನ ಹರಿಸಲಾಗಿದೆ.

Kangana Ranaut: ಅಸಹ್ಯ, ವಾಂತಿ ಬರುವಂತಹದ್ದು! Gen Z ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ

Gen Z ಪ್ರತಿಭಟನೆ ವಿರುದ್ಧ ಕಂಗನಾ ರಣಾವತ್ ಗರಂ!

Kangana Ranaut: ನಟಿ ಕಂಗನಾ ರಣಾವತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ವೀಡಿಯೊಗಳನ್ನು ಟೀಕಿಸಿದರು. ಪ್ರತಿಭಟನಾಕಾರರ ನಡವಳಿಕೆ ವಾಂತಿ ಬರುವಂತಹದ್ದು ಎಂದು ಬರೆದು ಪೋಸ್ಟ್‌ ಮಾಡಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ.

ಕ್ರಿಕೆಟರ್ ಯಶಸ್ವಿ ಜೈಸ್ವಾಲ್ ಜೊತೆ ನಟಿ ಮೃಣಾಲ್ ಠಾಕೂರ್ ಡೇಟಿಂಗ್? ಸೋಶಿಯಲ್ ಮೀಡಿಯಾದಲ್ಲಿ ಇಬ್ಬರ ವಯಸ್ಸಿನ ಅಂತರದ್ದೇ ಚರ್ಚೆ!

ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?‌

ಸೌತ್ ಹಾಗೂ ಬಾಲಿವುಡ್ ನಟಿ ಮೃಣಾಲ್ ಠಾಕೂರ್ ಹಾಗೂ ಭಾರತೀಯ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ಮುಂಬೈನ ಕೆಫೆಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬೆನ್ನಲ್ಲೇ ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ವದಂತಿ ವೈರಲ್ ಆಗಿದೆ. 33 ವರ್ಷದ ಮೃಣಾಲ್ ಹಾಗೂ 24 ವರ್ಷದ ಜೈಸ್ವಾಲ್ ನಡುವಿನ 9 ವರ್ಷಗಳ ವಯಸ್ಸಿನ ಅಂತರದ ಬಗ್ಗೆ ನೆಟ್ಟಿಗರು ಚರ್ಚಿಸುತ್ತಿದ್ದಾರೆ.

Anurag Dobhal: ಪತ್ನಿ ಮೋಸ ಮಾಡಿದಳು ಎಂದು ಸಾಕ್ಷಿ ಸಮೇತ ಆರೋಪ ಮಾಡಿದ ಬಿಗ್ ಬಾಸ್ ಸ್ಪರ್ಧಿ

ಪತ್ನಿ ಮೋಸ ಮಾಡಿದಳು ಎಂದು ಸಾಕ್ಷಿ ಸಮೇತ ಆರೋಪ ಮಾಡಿದ ಬಿಗ್ ಬಾಸ್ ಸ್ಪರ್ಧಿ

Anurag Dobhal: ಬಿಗ್ ಬಾಸ್ ಸ್ಪರ್ಧಿ (Bigg Boss) ಅನುರಾಗ್ ದೊಬಾಲ್ (Anurag Dobhal) ಪ್ರೀತಿಸಿ ಮದುವೆ ಆದ ಪತ್ನಿಯಿಂದಲೇ ತಮಗೆ ಆಗಿರುವ ಮೋಸವನ್ನು ಅವರು ಈಗ ಬಯಲು ಮಾಡಿದ್ದಾರೆ. ತಮ್ಮ ಕುಟುಂಬದವರು ತಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಈ ಹಿಂದೆ ಅನುರಾಗ್ ಆರೋಪಿಸಿದ್ದರು. ತಮ್ಮದೇ ಕುಟುಂಬದವರ ವಿರುದ್ಧವೇ ಅನುರಾಗ್ ದೊಬಾಲ್ ಅವರು ಅನೇಕ ಆರೋಪಗಳನ್ನು ಮಾಡಿದ್ದಾರೆ.

ಪತ್ನಿಯ ಅಪೋಲೋ ಆಸ್ಪತ್ರೆ ಇದ್ದರೂ ಶಸ್ತ್ರ ಚಿಕಿತ್ಸೆಗಾಗಿ ನಟ ರಾಮ್‌ ಚರಣ್ ಕೊಯಮತ್ತೂರಿಗೆ ಹೋಗಿದ್ದೇಕೆ? ಚಿರು ಪುತ್ರನಿಗೆ ಏನು ಸಮಸ್ಯೆ?

ರಾಮ್‌ ಚರಣ್‌ ಶಸ್ತ್ರಚಿಕಿತ್ಸೆಗಾಗಿ ಕೊಯಮತ್ತೂರಿನ ಆಸ್ಪತ್ರೆಗೆ ಹೋಗಿದ್ದೇಕೆ?

ನಟ ರಾಮ್ ಚರಣ್ ಅವರಿಗೆ ಸೋಮವಾರ (ಜುಲೈ 27) ಕೊಯಮತ್ತೂರಿನ ಪ್ರಸಿದ್ಧ ಗಂಗಾ ಆಸ್ಪತ್ರೆಯಲ್ಲಿ ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಆದರೆ, ಪತ್ನಿ ಉಪಾಸನಾ ಅವರ 'ಅಪೋಲೋ' ಆಸ್ಪತ್ರೆಯಿದ್ದರೂ, ಶಸ್ತ್ರಚಿಕಿತ್ಸೆಗೆ ಕೊಯಮತ್ತೂರನ್ನು ರಾಮ್‌ ಚರಣ್ ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆ ಕೇಳಿಬಂದಿದೆ.

Batwara : ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಥಾವಸ್ತು ಹೊಂದಿರುವ ʼಬಟ್ವಾರಾʼಕ್ಕೆ  ʻಎʼ ಸೆರ್ಟಿಫಿಕೇಟ್

ಭಾರತ ಮತ್ತು ಪಾಕಿಸ್ತಾನ ವಿಭಜನೆಯ ಕಥೆ; ʼಬಟ್ವಾರಾʼಕ್ಕೆ ʻಎʼ ಸೆರ್ಟಿಫಿಕೇಟ್

Sunny Deol: ಭಾರತ ಮತ್ತು ಪಾಕ್ ವಿಭಜನೆಯ ನಂತರ ನಡೆದ ಗಲಭೆಗಳು ಮತ್ತು ಅಶಾಂತಿಯ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಸನ್ನಿ ಡಿಯೋಲ್ ( Sunny Deol) ಮತ್ತು ಶಬನಾ ಅಜ್ಮಿ (Shabana Azmi) ನಟಿಸಿದ್ದಾರೆ. ಅದೇ ರೀತಿಯಲ್ಲಿ ಈ ಚಿತ್ರದಲ್ಲಿ ಪ್ರೀತಿ ಜಿಂಟಾ, ಕರಣ್ ಡಿಯೋಲ್ ಮ್ತುತ ಅಭಿಮನ್ಯು ಸಿಂಗ್ ನಟಿಸಿದ್ದಾರೆ.

Thalapathy Vijay: ಚೆನ್ನೈನ ಮಾಲ್‌ನಲ್ಲಿ ʻಜನ ನಾಯಗನ್‌ʼ ಸಿನಿಮಾ ಪ್ರದರ್ಶನ ಅರ್ಧಕ್ಕೆ ಸ್ಥಗಿತ; ಪೊಲೀಸರ ಎಂಟ್ರಿ! ಅಷ್ಟಕ್ಕೂ ಅಲ್ಲಿ ನಡೆದಿದ್ದೇನು?

ಚೆನ್ನೈ ಮಾಲ್‌ನಲ್ಲಿ 'ಜನ ನಾಯಗನ್' ಅರ್ಧಕ್ಕೆ ಸ್ಥಗಿತ; ಪೊಲೀಸರ ಎಂಟ್ರಿ!

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರದ ಬೆಳಗಿನ ಶೋ ಚೆನ್ನೈನ ಅಂಪಾ ಮಾಲ್‌ನ ಪಿವಿಆರ್‌ನಲ್ಲಿ ಗಂಟೆಗಟ್ಟಲೆ ಸ್ಥಗಿತಗೊಂಡಿತು. 'ಎ' (ವಯಸ್ಕರಿಗೆ ಮಾತ್ರ) ಪ್ರಮಾಣಪತ್ರ ಪಡೆದಿರುವ ಈ ಚಿತ್ರಕ್ಕೆ ಪೋಷಕರು ಮಕ್ಕಳನ್ನು ಕರೆತಂದಿದ್ದರಿಂದ ಪೊಲೀಸರು ಮಧ್ಯಪ್ರವೇಶಿಸಿ, ಸಿನಿಮಾವನ್ನು ಸ್ಥಗಿತಗೊಳಿಸಿದ್ದರು ಎನ್ನಲಾಗಿದೆ.

‘ರಾಯನ್‌’ ಚಿತ್ರಕ್ಕೆ ನ್ಯಾಷನಲ್‌ ಅವಾರ್ಡ್‌ ಸಿಕ್ಕಿದ್ದಕ್ಕೆ ಟೀಕೆ; ವಿರೋಧಿಗಳಿಗೆ ಸಖತ್‌ ಆಗಿಯೇ ಟಾಂಗ್‌ ಕೊಟ್ಟ ನಟ ಧನುಷ್‌

ʻರಾಯನ್‌ʼ ಚಿತ್ರಕ್ಕೆ ʻರಾಷ್ಟ್ರ ಪ್ರಶಸ್ತಿʼ; ಟೀಕಿಸಿದವ್ರಿಗೆ ಧನುಷ್‌ ಟಾಂಗ್

'ರಾಯನ್' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬಂದಾಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾದ ಕುಹಕಗಳಿಗೆ ನಟ ಧನುಷ್ ಖಡಕ್ ಉತ್ತರ ನೀಡಿದ್ದಾರೆ. ಆ ವರ್ಷ 'ಮೆಯ್ಯಳಗನ್' ಹಾಗೂ 'ಮಹಾರಾಜ'ಗಳಂತಹ ಉತ್ತಮ ಸಿನಿಮಾಗಳಿದ್ದರೂ, 'ರಾಯನ್' ಚಿತ್ರಕ್ಕಾಗಿ ತಾವು ಪಟ್ಟ ಪ್ರಾಮಾಣಿಕ ಶ್ರಮವನ್ನು ಯಾರೂ ಕಡೆಗಣಿಸಬಾರದು ಎಂದಿದ್ದಾರೆ.

Loading...