ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Ramayana: ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ರಾಮಾಯಣ ರಿಲೀಸ್‌!

ಸ್ಕ್ರೀನ್‌ಎಕ್ಸ್ ಫಾರ್ಮ್ಯಾಟ್‌ನಲ್ಲಿ ರಾಮಾಯಣ ರಿಲೀಸ್‌!

Ramayana:ವಿಶ್ವದಾದ್ಯಂತ ಸುಮಾರು 1,300 ಸ್ಕ್ರೀನ್‌ಎಕ್ಸ್ ಮತ್ತು 4ಡಿಎಕ್ಸ್ ಥಿಯೇಟರ್‌ಗಳಲ್ಲಿ ‘ರಾಮಾಯಣ’ ಪ್ರದರ್ಶನಗೊಳ್ಳಲಿದೆ. ಸ್ಕ್ರೀನ್‌ಎಕ್ಸ್ ಪರದೆಗಳು ಪ್ರೇಕ್ಷಕರಿಗೆ 270-ಡಿಗ್ರಿ ವಿಶಾಲ ದೃಶ್ಯದ ಅನುಭವ ನೀಡಲು ಮುಖ್ಯ ಪರದೆಯ ಜೊತೆಗೆ ಥಿಯೇಟರ್‌ನ ಅಕ್ಕಪಕ್ಕದ ಗೋಡೆಗಳ ಮೇಲೆಯೂ ದೃಶ್ಯಗಳು ವಿಸ್ತರಿಸಲ್ಪಡುತ್ತವೆ.

ʻಟಾಕ್ಸಿಕ್ ಕಲೆಕ್ಷನ್ 2 ಸಾವಿರ ಕೋಟಿ ರೂ. ದಾಟಿದ್ರೂ ಆಶ್ಚರ್ಯವಿಲ್ಲʼ; ನಟ ಯಶ್ ರೇಂಜ್‌ ಎಂಥದ್ದು ಅಂತ ತಿಳಿಸಿದ ನಿರ್ದೇಶಕ ಮಂಜು ಮಾಂಡವ್ಯ!

ʻಮಾಸ್ಟರ್‌ ಪೀಸ್‌ʼ ಯಶ್ ಬಗ್ಗೆ ಅಚ್ಚರಿಯ ವಿಚಾರ ತಿಳಿಸಿದ ಮಂಜು ಮಾಂಡವ್ಯ!

ರಾಕಿಂಗ್ ಸ್ಟಾರ್ ಯಶ್ ಅವರ ಸಿನಿಮಾ ಬದ್ಧತೆ ಹಾಗೂ ಜಾಗತಿಕ ಚಿಂತನೆಗಳ ಕುರಿತು ನಿರ್ದೇಶಕ ಮಂಜು ಮಾಂಡವ್ಯ ವಿಶ್ವವಾಣಿ ಟಿವಿ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ. ಯಶ್ ಅಭಿನಯದ ‘ಟಾಕ್ಸಿಕ್’ ಕಂಟೆಂಟ್ ಜನರಿಗೆ ತಲುಪಿದರೆ ವಿಶ್ವಾದ್ಯಂತ ₹2000 ಕೋಟಿ ಗಳಿಸಿದರೂ ಅಚ್ಚರಿಯಿಲ್ಲ ಎಂದು ಅವರು ಹೇಳಿದ್ದಾರೆ.

ಕಿರುತೆರೆ ವೀಕ್ಷಕರಿಗೆ ಗುಡ್‌ ನ್ಯೂಸ್!‌ 2 ಹೊಸ ಸೀರಿಯಲ್‌ ಘೋಷಿಸಿದ ಟಿ. ಎನ್‌. ಸೀತಾರಾಮ್;‌ ಈ ಸೀರಿಯಲ್‌ಗಳು ಪ್ರಸಾರವಾಗುವುದು ಎಲ್ಲಿ?

2 ಹೊಸ ಧಾರಾವಾಹಿಗಳನ್ನು ಘೋಷಿಸಿದ ಟಿ. ಎನ್‌. ಸೀತಾರಾಮ್; ಯಾವಾಗ ಶುರು?

ಖ್ಯಾತ ನಿರ್ದೇಶಕ ಟಿ. ಎನ್. ಸೀತಾರಾಮ್ ಎರಡು ಹೊಸ ಧಾರಾವಾಹಿಗಳನ್ನು ಘೋಷಿಸಿದ್ದು, ಅವುಗಳಲ್ಲಿ ಒಂದಕ್ಕೆ ‘ಮುಂದಿನ ಅಧ್ಯಾಯ’ ಎಂದು ಹೆಸರಿಡಲಾಗಿದೆ. ಮೂರು ದಶಕಗಳ ತಮ್ಮ ಹಿಂದಿನ ಯಶಸ್ವಿ ಧಾರಾವಾಹಿಗಳ ಪಾತ್ರಗಳನ್ನು ಒಗ್ಗೂಡಿಸಿ ಈ ಕಥೆ ಹೆಣೆಯಲಾಗಿದೆ.

Amitabh Bachchan: ಇದೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದ ಅಮಿತಾಭ್‌! KBC ವೇದಿಕೆಯಲ್ಲಿ ಮುಕ್ತ ಮಾತು

ಇದೊಂದು ಕಾರಣಕ್ಕೆ ಟೀಕೆಗೆ ಗುರಿಯಾಗುತ್ತಿದ್ದ ಅಮಿತಾಭ್‌!

Amitabh Bachchan: ಈ ನಟ ತಮ್ಮ ಅದ್ಭುತ ಸಿನಿಮಾಗಳಿಗಾಗಿ, ನಟನೆಗಾಗಿ ಹೆಸರುವಾಸಿಯಾಗಿದ್ದಾರೆ, ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ದಶಕಗಳ ಹಿಂದೆ ಅವರು ಚಿತ್ರರಂಗಕ್ಕೆ ಕಾಲಿಟ್ಟಾಗ ಅದು ಇಷ್ಟೊಂದು ಸುಲಭವಾಗಿರಲಿಲ್ಲ. ಪ್ರಸ್ತುತ ಕೌನ್ ಬನೇಗಾ ಕರೋಡ್ ಪತಿ 18 ಅನ್ನು ಆಯೋಜಿಸುತ್ತಿರುವ ಹಿರಿಯ ನಟ, ಮುಂಚೆ ಯುವ ನಟನಾಗಿ ತಾವು ಹೇಗೆ ತಿರಸ್ಕಾರವನ್ನು ಎದುರಿಸಿದರು ಮತ್ತು ಹೋರಾಟವನ್ನು ಮುಂದುವರೆಸಿದರು ಎಂಬುದನ್ನು ಹಂಚಿಕೊಂಡರು.

ದರ್ಶನ್‌ ಕೇಸ್‌ ಅಪ್ಡೇಟ್ಸ್:‌ ಮಾಫಿ ಸಾಕ್ಷಿಯಾಗಲು ಬಂದ ಪ್ರದೋಷ್‌ಗೆ ಜಡ್ಜ್‌ ಕೇಳಿದ್ದೇನು? ದಿಢೀರ್‌ ಅಂತ ವಿಜಯಲಕ್ಷ್ಮೀ - ಧನ್ವೀರ್‌ ಪರಪ್ಪನ ಅಗ್ರಹಾರ ಜೈಲಿಗೆ ಬಂದಿದ್ದೇಕೆ?

ದರ್ಶನ್‌ ಭೇಟಿಗಾಗಿ ಜೈಲಿಗೆ ಬಂದ ಸ್ನೇಹಿತ ಧ‌ನ್ವೀರ್‌, ಪತ್ನಿ ವಿಜಯಲಕ್ಷ್ಮಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಆರೋಪಿ ಪ್ರದೋಷ್ ಸಲ್ಲಿಸಿದ್ದ ಮಾಫಿ ಸಾಕ್ಷಿ ಅರ್ಜಿಯ ಆದೇಶವನ್ನು 59ನೇ ಸಿಸಿಹೆಚ್ ಕೋರ್ಟ್ ಕಾಯ್ದಿರಿಸಿದೆ. ನ್ಯಾಯಾಧೀಶರಾದ ಸುಜಾತಾ ಅವರು ಪರಿಣಾಮಗಳ ಕುರಿತು ಪ್ರದೋಷ್‌ಗೆ ಎಚ್ಚರಿಕೆ ನೀಡಿದರೆ, ದರ್ಶನ್ ಪರ ವಕೀಲ ಹಷ್ಮತ್ ಪಾಷಾ ಆಕ್ಷೇಪ ವ್ಯಕ್ತಪಡಿಸಿದರು.

ಶಾರುಖ್‌ ಖಾನ್‌ ಒಡೆತನದ ‌ʻಮನ್ನತ್‌ʼ ಅರಮನೆಗೆ ಬಂದ್ವು 8 ಅಡಿ ಉದ್ದದ ಎರಡು ಹಾವುಗಳು; ಒಂದು ರಕ್ಷಣೆ, ಮತ್ತೊಂದು ಏನಾಯ್ತು?

ಶಾರುಖ್‌ ಮನೇಲಿ ಹಾವುಗಳು ಪ್ರತ್ಯಕ್ಷ: ಒಂದು ರಕ್ಷಣೆ, ಮತ್ತೊಂದು ಮಿಸ್ಸಿಂಗ್!

ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬೈನ ಬಾಂದ್ರಾ ನಿವಾಸ 'ಮನ್ನತ್' ಆವರಣದಲ್ಲಿ ಆಗಸ್ಟ್ 17ರ ರಾತ್ರಿ 8 ಅಡಿ ಉದ್ದದ ಎರಡು ಕೇರೆಹಾವುಗಳು ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು. ಉರಗ ತಜ್ಞ ವಿಕ್ಕಿ ದುಬೆ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೆಟ್ಟಿಲ ಕೆಳಗಿದ್ದ ಒಂದು ಹಾವನ್ನು ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.

'ಲೇಡಿ ಸೂಪರ್‌ಸ್ಟಾರ್‌' ಶ್ರೀದೇವಿ ಜೀವನಾಧಾರಿತ 'ಎಂಪ್ರೆಸ್' ಪುಸ್ತಕದ ಮುಖಪುಟ ರಿವೀಲ್‌ ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ!

ನಟಿ ಶ್ರೀದೇವಿ ಜೀವನಾಧಾರಿತ 'ಎಂಪ್ರೆಸ್' ಪುಸ್ತಕದ ‌ಮುಖಪುಟ ರಿಲೀಸ್!

ಲೇಡಿ ಸೂಪರ್‌ಸ್ಟಾರ್ ಶ್ರೀದೇವಿ ಅವರ ಹುಟ್ಟುಹಬ್ಬದ ಪ್ರಯುಕ್ತ ಧೀರಜ್ ಕುಮಾರ್ ರಚಿತ ಅಧಿಕೃತ ಜೀವನಚರಿತ್ರೆ ‘ಎಂಪ್ರೆಸ್’ ಪುಸ್ತಕದ ಮುಖಪುಟವನ್ನು ನಟಿ ಪ್ರಿಯಾಂಕಾ ಚೋಪ್ರಾ ಅನಾವರಣಗೊಳಿಸಿದ್ದಾರೆ. ವೆಸ್ಟ್‌ಲ್ಯಾಂಡ್ ಬುಕ್ಸ್ ಪ್ರಕಟಿಸುತ್ತಿರುವ ಈ ಕೃತಿಯು 10 ವರ್ಷಗಳ ಸಂಶೋಧನೆ, 150 ಅಪರೂಪದ ಫೋಟೋಗಳು ಮತ್ತು ಗಣ್ಯರ ಮುನ್ನುಡಿಗಳನ್ನು ಒಳಗೊಂಡಿದೆ.

ʻಟಾಕ್ಸಿಕ್‌ʼ ರಿಲೀಸ್‌ ಹಿನ್ನೆಲೆಯಲ್ಲಿ ತಿರುಪತಿಗೆ ಮುಡಿ ಅರ್ಪಿಸಿದ್ರಾ ನಟಿ ನಯನತಾರಾ? ವೈರಲ್‌ ಫೋಟೋ ಹಿಂದಿನ ಅಸಲಿ ಸತ್ಯವೇನು?

ʻಟಾಕ್ಸಿಕ್ʼ ರಿಲೀಸ್‌ಗೂ ಮುನ್ನ ತಿರುಪತಿಗೆ ಮುಡಿ ಕೊಟ್ರಾ ನಟಿ ನಯನತಾರಾ?

ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದಲ್ಲಿ ‘ಗಂಗಾ’ ಪಾತ್ರ ನಿರ್ವಹಿಸಿರುವ ನಟಿ ನಯನತಾರಾ, ಸಿನಿಮಾದ ಯಶಸ್ಸಿಗಾಗಿ ತಿರುಪತಿಯಲ್ಲಿ ಮುಡಿ ಅರ್ಪಿಸಿದ್ದಾರೆ ಎಂಬಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹರಿಬಿಡಲಾಗಿದೆ. ಆದರೆ ಈ ಬೋಳು ತಲೆಯ ಫೋಟೋಗಳು ಕೃತಕ ಬುದ್ಧಿಮತ್ತೆ (AI) ಮೂಲಕ ಸೃಷ್ಟಿಸಲಾದ ನಕಲಿ ಚಿತ್ರಗಳೆಂದು ಸಾಬೀತಾಗಿದೆ.

ಮಲಯಾಳಂ ʻಬಿಗ್‌ ಬಾಸ್‌ʼ ವಿನ್ನರ್‌ ಅನುಮೊಲ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಮಿಳು ನಟ ಭುವನೇಶ್‌

ʻಬಿಗ್‌ ಬಾಸ್‌ʼ ವಿನ್ನರ್‌ ಅನುಮೊಲ್‌ ಜೊತೆ ನೆರವೇರಿದ ನಟ ಭುವನೇಶ್‌ ಮದುವೆ

Bigg Boss Malayalam winner Anumol Marriage: ಮಲಯಾಳಂ ಕಿರುತೆರೆಯ ಖ್ಯಾತ ನಟಿ ಹಾಗೂ 'ಬಿಗ್ ಬಾಸ್ ಮಲಯಾಳಂ ಸೀಸನ್ 7' ವಿಜೇತೆ ಅನುಮೋಲ್ ಅವರು ತಮಿಳು ನಟ ಭುವನೇಶ್ ರಾಜೇಂದ್ರನ್ ಅವರೊಂದಿಗೆ ಕೇರಳದ ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತುಳುನಾಡಿನ ‘ಟಾಸ್’ ಚಿತ್ರಕ್ಕೆ ಗೋಲ್ಡನ್ ಟಚ್!‌ ನಟ ಅರ್ಜುನ್ ದೇವ್  ಹೊಸ ಸಿನಿಮಾಗೆ ಸಾಥ್‌ ನೀಡಿದ ಶಿಲ್ಪಾ ಗಣೇಶ್

'ಟಾಸ್' ತುಳು ಚಿತ್ರಕ್ಕೆ ʻಗೋಲ್ಡನ್‌ ಸ್ಟಾರ್‌ʼ ಗಣೇಶ್ ಪತ್ನಿ ಶಿಲ್ಪಾ ಸಾಥ್‌

ತುಳುನಾಡಿನ ನಟ ಅರ್ಜುನ್ ದೇವ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಕನ್ನಡ ಮತ್ತು ತುಳು ದ್ವಿಭಾಷಾ ಚಿತ್ರ ‘ಟಾಸ್’ ಬಿಡುಗಡೆಗೆ ಸಜ್ಜಾಗಿದೆ. ‘ಗೋಲ್ಡನ್ ಮೂವೀಸ್’ ಬ್ಯಾನರ್ ಮೂಲಕ ಗಣೇಶ್-ಶಿಲ್ಪಾ ದಂಪತಿ ಸಾಥ್ ನೀಡಿದ್ದಾರೆ. ಯೋಗರಾಜ್ ಭಟ್ ಸಾಹಿತ್ಯದ ‘ಹಲೋ ಹಲೋ ನೀಲಾಂಬರಿ’ ಹಾಡು ಅರ್ಮಾನ್ ಮಲಿಕ್ ಕಂಠದಲ್ಲಿ ಮೂಡಿಬಂದಿದೆ.

ʻನಾನೆಂದಿಗೂ ಪಾನ್‌ ಮಸಾಲಾ ಜಾಹೀರಾತಿನಲ್ಲಿ ನಟಿಸಲ್ಲʼ ಎಂದಿದ್ದ ನಟ ಸನ್ನಿ ಡಿಯೋಲ್‌ಗೆ ಮುಜುಗರ; ಹಳೆಯ ವಿಡಿಯೋ ವೈರಲ್‌ ಮಾಡಿ ನೆಟ್ಟಿಗರ ಟ್ರೋಲ್‌

ಹಳೇ ವಿಡಿಯೋ ವೈರಲ್ ಮಾಡಿ ಸನ್ನಿ ಡಿಯೋಲ್‌ಗೆ ಟ್ರೋಲ್ ಮಾಡಿದ ನೆಟ್ಟಿಗರು!

ಪಾನ್ ಮಸಾಲಾ ಜಾಹೀರಾತುಗಳಲ್ಲಿ ನಟಿಸಿಲ್ಲ ಮತ್ತು ಮುಂದೆಯೂ ನಟಿಸುವುದಿಲ್ಲ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದ ಬಾಲಿವುಡ್ ಹಿರಿಯ ನಟ ಸನ್ನಿ ಡಿಯೋಲ್ ಅವರಿಗೆ ಈಗ ಮುಜುಗರ ಎದುರಾಗಿದೆ. ಅವರು ಈ ಹಿಂದೆ ರವಿ ಕಿಶನ್ ಜೊತೆ ನಟಿಸಿದ್ದ ಹಳೆಯ ಪಾನ್ ಮಸಾಲಾ ಜಾಹೀರಾತನ್ನು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

Alia Bhatt: ಮಗಳ ಜೊತೆ  ಆಲಿಯಾ- ರಣಬೀರ್ ಜಾಲಿ ಜಾಲಿ!

ಮಗಳ ಜೊತೆ ಆಲಿಯಾ- ರಣಬೀರ್ ಜಾಲಿ ಜಾಲಿ!

Alia Bhatt: ಬಾಲಿವುಡ್‌ನ ಹಾಟೆಸ್ಟ್ ಜೋಡಿಗಳಲ್ಲಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಕೂಡ ಒಬ್ಬರು. ಅವರಿಬ್ಬರ ಕೆಮಿಸ್ಟ್ರಿ, ಪ್ರೀತಿ ನೋಡಿದ್ರೆ ಲಕ್ಷಾಂತರ ಹೃದಯಗಳು ಫಿದಾ ಆಗೋದು ಗ್ಯಾರಂಟಿ. ಮದುವೆಯಾಗಿ ಸುಮಾರು ನಾಲ್ಕು ವರ್ಷಗಳಾಗಿದ್ದು, ಈ ಜೋಡಿಗೆ ರಾಹಾ ಎಂಬ ಮುದ್ದಾದ ಮಗಳಿದ್ದಾಳೆ. ಆಲಿಯಾ ಭಟ್ತ ಮ್ಮ ಪತಿ ರಣಬೀರ್ ಕಪೂರ್ ಮತ್ತು ಮಗಳು ರಾಹಾ ಜೊತೆಗಿನ ವಕೇಶನ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Anirudh Kavya: ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ಮದುವೆ?  ಮದುವೆ ಸುಳಿವು ಕೊಟ್ಟೇ ಬಿಟ್ರಾ ಹಿರಿಯ ನಟ?

ಅನಿರುದ್ಧ್ - ಕಾವ್ಯ ಮಾರನ್ ಅದ್ಧೂರಿ ಮದುವೆ?

Anirudh Kavya: ಅನಿರುದ್ಧ್ ರವಿಚಂದರ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಸಿಇಒ ಕಾವ್ಯಾ ಮಾರನ್ ಅವರ ವಿವಾಹ ವದಂತಿಗಳು ಮತ್ತೊಮ್ಮೆ ಗಮನ ಸೆಳೆಯುತ್ತಿವೆ. ಈ ವರ್ಷದ ಕೊನೆಯಲ್ಲಿ ಇಬ್ಬರೂ ಡೆಸ್ಟಿನೇಶನ್ ವೆಡ್ಡಿಂಗ್ ಯೋಜಿಸುತ್ತಿದ್ದಾರೆ ಎಂಬ ಹೊಸ ವದಂತಿ ಶುರುವಾಗಿದೆ. ಆದರೆ ಅವರ ಸಂಬಂಧ, ನಿಶ್ಚಿತಾರ್ಥ ಅಥವಾ ವಿವಾಹ (Marriage) ಯೋಜನೆಗಳ ಬಗ್ಗೆ ಅನಿರುದ್ಧ್ ಅಥವಾ ಕಾವ್ಯಾ ಅವರಿಂದ ಯಾವುದೇ ಅಧಿಕೃತ ಮಾಹಿತಿ ಇಲ್ಲ .

Anupama Gowda: ಆ್ಯಂಕರಿಂಗ್​ಗೆ ವಿದಾಯ ಹೇಳಿದ ಅನುಪಮಾ ಗೌಡ!

ಆ್ಯಂಕರಿಂಗ್​ಗೆ ವಿದಾಯ ಹೇಳಿದ ಅನುಪಮಾ ಗೌಡ!

Anupama Gowda: ಸತತವಾಗಿ 8 ವರ್ಷಗಳ ಕಾಲ ತಪ್ಪು ಮಾಡಿದಾಗ ತಿದ್ದಿ, ಬೆನ್ನೆಲುಬಾಗಿ ನಿಂತು ಇಂದು ನಿರೂಪಣೆಯೆಂದರೆ ಅನುಪಮಾ ಎಂದು ಇಷ್ಟಪಡುವ ಜನರಿರುವಾಗ ಇದೀಗ ನಿರೂಪಣಾ (Anchoring) ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ ಅನುಪಮಾ ಗೌಡ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅನೌನ್ಸ್‌ ಮಾಡಿದ್ದಾರೆ.

Bigg Boss Telugu 10: ಬಿಗ್ ಬಾಸ್ ತೆಲುಗು ಹೊಸ ಪ್ರೋಮೋ ಔಟ್‌; ಇವರಿಗೆ ಭಾರೀ ಬೇಡಿಕೆ ಇಟ್ಟ ನೆಟ್ಟಿಗರು

ಬಿಗ್ ಬಾಸ್ ಹೊಸ ಪ್ರೋಮೋ ಔಟ್‌; ಇವರಿಗೆ ಭಾರೀ ಬೇಡಿಕೆ ಇಟ್ಟ ನೆಟ್ಟಿಗರು

Bigg Boss Telugu 10: ಹೊಸ ಪ್ರೋಮೋದಲ್ಲಿ (Promo), ನಿರೂಪಕರು ರಿಯಾಲಿಟಿ ಟಿವಿ (Reality Show) ಶೋನಲ್ಲಿ ಹತ್ತು ಪಟ್ಟು ಸವಾಲುಗಳನ್ನು ಭರವಸೆ ನೀಡುತ್ತಾರೆ. ಬಹಳ ನಿರೀಕ್ಷಿತ ಬಿಗ್ ಬಾಸ್ ಸೀಸನ್ 10 ತೆಲುಗು ಶೀಘ್ರದಲ್ಲೇ ಬರಲಿದೆ! 10X ಅಚ್ಚರಿಗಳು. 10X ನಾಟಕ. 10X ಸವಾಲುಗಳು. ಈ ಸಾರಿ ಸವಾಲು (ಈ ಬಾರಿ ಆಟವು ಪ್ರಶ್ನೆಗಳನ್ನು ಹೊಂದಿರುವುದಿಲ್ಲ) ಎಂದು ಬರೆದುಕೊಂಡಿದೆ.

Anupama Parameswaran: ಅನುಪಮಾ ಪರಮೇಶ್ವರನ್ ಹೇಳಿಕೆಗೆ  ಧ್ರುವ ವಿಕ್ರಮ್ ಖಡಕ್‌ ರಿಪ್ಲೈ

ಅನುಪಮಾ ಪರಮೇಶ್ವರನ್ ಹೇಳಿಕೆಗೆ ಧ್ರುವ ವಿಕ್ರಮ್ ಖಡಕ್‌ ರಿಪ್ಲೈ

Anupama Parameswaran: ಹೆಸರಿಸದ ಮಾಜಿ ಗೆಳೆಯನೊಂದಿಗಿನ 2 ವರ್ಷಗಳ ಸಂಬಂಧದಲ್ಲಿ ಅನುಪಮಾ ಪರಮೇಶ್ವರನ್ ಅವರು ಬ್ರೇಕಪ್ ಬಗ್ಗೆ, ಮಾಜಿ ಪ್ರೇಮಿಯ ಬಗ್ಗೆ ಸಾಕಷ್ಟು ವಿಷಯ ಹಂಚಿಕೊಂಡಿದ್ದಾರೆ. ಇವುಗಳಿಗೆ ಸಂಬಂಧಿಸಿದಂತೆ ಧ್ರುವ್ (dhruva) ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಅವರು ಕೂಡ ಅನುಪಮಾ ಹೆಸರನ್ನು ಪ್ರಸ್ತಾಪಿಸಿಲ್ಲ.

Jana Nayagan OTT: ಒಟಿಟಿಗೆ ಬರ್ತಿದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್'! ಸ್ಟ್ರೀಮಿಂಗ್‌ ಯಾವಾಗಿನಿಂದ?

ಒಟಿಟಿಗೆ ಬರ್ತಿದೆ ವಿಜಯ್ ಕೊನೆಯ ಸಿನಿಮಾ 'ಜನ ನಾಯಗನ್'!

Jana Nayagan OTT: ಜನ ನಾಯಗನ್ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿತ್ತು. ಆದಾಗ್ಯೂ, ಸೆನ್ಸಾರ್ ಸಮಸ್ಯೆಗಳಿಂದಾಗಿ, ಚಿತ್ರವು ಹಲವಾರು ತಿಂಗಳುಗಳ ಕಾಲ ಬಿಡುಗಡೆಯಾಗದೆ ಉಳಿಯಿತು. ಇದರಿಂದಾಗಿ, ಚಿತ್ರದ OTT ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿದ್ದ Amazon Prime, OTT ಒಪ್ಪಂದವನ್ನು ರದ್ದುಗೊಳಿಸಿತು. ಆ ಬಳಿಕ ಸಿನಿಮಾ ತೆರೆ ಕಂಡಿತು.

Actor Darshan: ದರ್ಶನ್‌ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ; ವಿಡಿಯೊ ಕಾನ್ಫರೆನ್ಸ್ ಮೂಲಕ  ಹಾಜರಿಗೆ ಸೂಚನೆ

ದರ್ಶನ್‌ ಖುದ್ದು ಹಾಜರಿ ಕೋರಿದ್ದ ಅರ್ಜಿ ವಜಾ!

Actor Darshan: ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇಂದು ವಜಾಗೊಳಿಸಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗುವಂತೆ ಆರೋಪಿಗಳ ಸೂಚನೆ ನೀಡಿದೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಅವರು ವಾದ ಮಂಡಿಸಿದ್ದರು. ವಿಡಿಯೋ ಕಾನ್ಫರೆನ್ಸ್​ನಲ್ಲಿ ಮಾತನಾಡಲು ಹೆಡ್ ಫೋನ್ ವ್ಯವಸ್ಥೆ ಇಲ್ಲ. ಹೀಗಾಗಿ ಖುದ್ದು ಹಾಜರಿಗೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದರು.

Prithviraj Sukumaran: ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಥ್ರಿಲ್ಲರ್ ಮೂವಿ ಈ ಒಟಿಟಿಗೆ ಎಂಟ್ರಿ!

ಪೃಥ್ವಿರಾಜ್ ಸುಕುಮಾರನ್ ಆಕ್ಷನ್ ಥ್ರಿಲ್ಲರ್ ಮೂವಿ ಈ ಒಟಿಟಿಗೆ ಎಂಟ್ರಿ!

Prithviraj Sukumaran: ಪೃಥ್ವಿರಾಜ್ ಸುಕುಮಾರನ್ ಮತ್ತು ಪಾರ್ವತಿ ತಿರುವೋತ್ತು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಐ, ನೋಬಡಿ, ಜುಲೈ 9, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಒಂದು ತಿಂಗಳಿಗೂ ಹೆಚ್ಚು ಸಮಯದ ನಂತರ, ಆಕ್ಷನ್ ಥ್ರಿಲ್ಲರ್ ಒಟಿಟಿಗೆ ಬರಲು ರೆಡಿಯಾಗಿದೆ.

‘ಡಿಯರ್ ಹಸ್ಬೆಂಡ್’ ಚಿತ್ರಕ್ಕಾಗಿ ಉತ್ತರ ಕರ್ನಾಟಕ ಭಾಗದ ಖಡಕ್ ಪೊಲೀಸ್ ಅಧಿಕಾರಿ ರೋಲ್‌ನಲ್ಲಿ ನಟಿ ಪಾವನಾ ಗೌಡ

'ಡಿಯರ್ ಹಸ್ಬೆಂಡ್' ಚಿತ್ರದಲ್ಲಿ ಖಡಕ್ ಪೊಲೀಸ್ ಅವತಾರದಲ್ಲಿ ನಟಿ ಪಾವನಾ ಗೌಡ

ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪಾವನಾ ಗೌಡ ಮೊದಲ ಬಾರಿಗೆ 'ಡಿಯರ್ ಹಸ್ಬೆಂಡ್' ಚಿತ್ರದಲ್ಲಿ ಉತ್ತರ ಕರ್ನಾಟಕ ಭಾಗದ ಖಡಕ್ ತನಿಖಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗುರುರಾಜ ಕುಲಕರ್ಣಿ ನಿರ್ದೇಶನದ ಈ ಸಸ್ಪೆನ್ಸ್ ಕ್ರೈಂ-ಥ್ರಿಲ್ಲರ್ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಹಾಗೂ ಸಂಭಾಷಣೆಗಳಿದ್ದು, ಸೂರಜ್ ಗೌಡ ಮತ್ತು ಕುಮಾರ ಬಂಗಾರಪ್ಪ ಪ್ರಮುಖ ತಾರಾಗಣದಲ್ಲಿದ್ದಾರೆ.

Actor Nagabhushana: ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ

Actor Nagabhushana: ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ ಎಸ್. ಕೆ. ಸಂತೋಷ್ ಅವರು ನಿರ್ಮಿಸುತ್ತಿರುವ, 'ಪ್ರೊಡಕ್ಷನ್ ನಂ. 2' ಎಂದು ತಾತ್ಕಾಲಿಕವಾಗಿ ಹೆಸರಿಡಲಾಗಿರುವ ಈ ಚಿತ್ರವನ್ನು ಜಗದೀಶ್ ಎನ್. ಕೋಲಾರ ನಿರ್ದೇಶಿಸುತ್ತಿದ್ದಾರೆ. ಇಂದು (ಆಗಸ್ಟ್ 17) ನಟ ನಾಗಭೂಷಣ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದೇ ಚಿತ್ರತಂಡ ಹೊಸ ಸಿನಿಮಾದ ವಿವರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ.

Allu Arjun: ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಕಾಣೆ; ಭಾರಿ ಟೀಕೆಯ ಬಳಿಕ ಸ್ವಾತಂತ್ರ್ಯ ದಿನಾಚರಣೆಯ ಪೋಸ್ಟ್  ಡಿಲೀಟ್‌ ಮಾಡಿದ ಅಲ್ಲು ಅರ್ಜುನ್

ತ್ರಿವರ್ಣ ಧ್ವಜದಲ್ಲಿ ಅಶೋಕ ಚಕ್ರ ಕಾಣೆ; ಅಲ್ಲು ವಿರುದ್ಧ ಭಾರಿ ಟೀಕೆ

Allu Arjun: ಅಲ್ಲು ಅರ್ಜುನ್ ಹಂಚಿಕೊಂಡ ಫೋಟೋದಲ್ಲಿ ಕೆಂಪು ಕೋಟೆಯಲ್ಲಿ ಹಾರುತ್ತಿರುವ ತ್ರಿವರ್ಣ ಧ್ವಜದ ಚಿತ್ರವಿತ್ತು. ಹಿನ್ನೆಲೆಯಲ್ಲಿ ಅಶೋಕ ಚಕ್ರವಿದ್ದರೂ, ಅದು ಧ್ವಜದಲ್ಲಿ ಕಾಣೆಯಾಗಿತ್ತು. ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಲೋಗೋ ಕೂಡ ಇತ್ತು. ಆ ಪೋಸ್ಟ್‌ನಲ್ಲಿ "ಹ್ಯಾಪಿ ಇಂಡಿಪೆಂಡೆನ್ಸ್ ಡೇ" ಎಂಬ ಪದಗಳಿದ್ದವು. ಇದು ಭಾರಿ ಟ್ರೋಲ್‌ಗೆ ಗುರಿಯಾಗಿದೆ.

ಪ್ರಭಾಸ್‌ ಕಾರಣಕ್ಕೆ ಶಾಹಿದ್‌ ಕಪೂರ್‌ ನಟನೆಯ ʻಅಶ್ವತ್ಥಾಮʼ ಸಿನಿಮಾ ಸ್ಥಗಿತ! ಕನ್ನಡದ ಆ ನಿರ್ದೇಶಕನಿಗೆ ನಿರಾಸೆ?

ʻಕಲ್ಕಿ' ಅಬ್ಬರಕ್ಕೆ ಶಾಹಿದ್ ಕಪೂರ್‌ ನಟನೆಯ 'ಅಶ್ವತ್ಥಾಮ' ಸಿನಿಮಾ ಸ್ಥಗಿತ!

ಬಾಲಿವುಡ್ ನಟ ಶಾಹಿದ್ ಕಪೂರ್ ಹಾಗೂ ಕನ್ನಡದ 'ಅವನೇ ಶ್ರೀಮನ್ನಾರಾಯಣ' ಖ್ಯಾತಿಯ ನಿರ್ದೇಶಕ ಸಚಿನ್ ರವಿ ಅವರ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ 'ಅಶ್ವತ್ಥಾಮ' ಸದ್ಯಕ್ಕೆ ಸ್ಥಗಿತಗೊಂಡಿದೆ. 'ಕಲ್ಕಿ 2898 ಎಡಿ' ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಅವರ ಅಶ್ವತ್ಥಾಮ ಪಾತ್ರ ಸೃಷ್ಟಿಸಿದ ಪ್ರಭಾವದಿಂದಾಗಿ ನಿರ್ಮಾಪಕ ಜಾಕಿ ಭಗ್ನಾನಿ ಈ ಕಠಿಣ ನಿರ್ಧಾರ ಕೈಗೊಂಡಿದ್ದಾರಂತೆ.

ಬಾಕ್ಸ್‌ ಆಫೀಸ್‌ನಲ್ಲಿ ಏದುಸಿರು ಬಿಡುತ್ತಿರುವ ಸನ್ನಿ ಡಿಯೋಲ್‌ ನಟನೆಯ ʻಬಟ್ವಾರಾ 1947ʼ ಸಿನಿಮಾ; ನಟ ಆಮಿರ್‌ ಖಾನ್‌ಗೆ ಲಾಸ್‌ ಆಗಲಿದೆಯಾ?

Sunny Deol: ಮೂರು ದಿನಗಳಲ್ಲಿ ʻಬಟ್ವಾರಾ 1947ʼ‌ ಚಿತ್ರ ಗಳಸಿದ್ದೆಷ್ಟು?

ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಹಾಗೂ ಸನ್ನಿ ಡಿಯೋಲ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಬಟ್ವಾರಾ 1947' ಚಿತ್ರ ಮೊದಲ ವಾರಾಂತ್ಯದಲ್ಲಿ ಜಾಗತಿಕವಾಗಿ ₹37.11 ಕೋಟಿ ಗಳಿಸಿ ಹಿನ್ನಡೆ ಅನುಭವಿಸಿದೆ. ₹70 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ನಿರ್ಮಾಪಕ ಆಮಿರ್ ಖಾನ್ ಅವರಿಗೆ ನಷ್ಟದ ಆತಂಕ ಎದುರಾಗಿದೆ.

Loading...