ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Ravichandran: ಇದ್ದಕ್ಕಿದ್ದಂತೆ ಸೋಶಿಯಲ್‌ ಮೀಡಿಯಾದಲ್ಲಿ ‌ʻಶಾಂತಿ ಕ್ರಾಂತಿʼ ಟ್ರೆಂಡಿಂಗ್; ಫ್ಲಾಪ್‌ ಆಗಿದ್ದ ಸಿನಿಮಾವನ್ನು ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಆಗ್ರಹ!

'ಶಾಂತಿ ಕ್ರಾಂತಿ' ಚಿತ್ರ ರೀ-ರಿಲೀಸ್‌ ಮಾಡುವಂತೆ ಫ್ಯಾನ್ಸ್‌ ಡಿಮ್ಯಾಂಡ್!

'ಕ್ರೇಜಿ ಸ್ಟಾರ್' ರವಿಚಂದ್ರನ್ ನಿರ್ದೇಶನದ, 35 ವರ್ಷಗಳ ಹಿಂದೆ 10 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದ 'ಶಾಂತಿ ಕ್ರಾಂತಿ' ಸಿನಿಮಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದೆ. 4 ಭಾಷೆಗಳಲ್ಲಿ ಮೂಡಿಬಂದಿದ್ದ ಈ ಚಿತ್ರವೇ ನೈಜ 'ಪ್ಯಾನ್ ಇಂಡಿಯಾ' ಸಿನಿಮಾ ಎಂದು ಬಣ್ಣಿಸುತ್ತಿರುವ ಅಭಿಮಾನಿಗಳು, ಚಿತ್ರವನ್ನು ಮತ್ತೆ ಚಿತ್ರಮಂದಿರಗಳಲ್ಲಿ ರೀ-ರಿಲೀಸ್ ಮಾಡಿ ಎಂದು ಆಗ್ರಹಪಡಿಸುತ್ತಿದ್ದಾರೆ.

'ರಾಮಾಯಣ' ಚಿತ್ರದ ಸಾಯಿ ಪಲ್ಲವಿ, ಲಾರಾ ದತ್ತಾ ಕಾಸ್ಟ್ಯೂಮ್‌ ಬಗ್ಗೆ ಟ್ರೋಲ್; ಖಡಕ್‌ ತಿರುಗೇಟು ನೀಡಿದ ವಸ್ತ್ರ ವಿನ್ಯಾಸಕರು!

ಸೀತೆ, ಕೈಕೇಯಿ ಕಾಸ್ಟ್ಯೂಮ್‌ ಬಗ್ಗೆ ಟ್ರೋಲ್‌; ತಿರುಗೇಟು ನೀಡಿದ ಡಿಸೈನರ್ಸ್!

ರಣಬೀರ್ ಕಪೂರ್ ಹಾಗೂ ಯಶ್ ನಟನೆಯ ‘ರಾಮಾಯಣ’ ಸಿನಿಮಾದಲ್ಲಿ ಸಾಯಿ ಪಲ್ಲವಿ ಮತ್ತು ಲಾರಾ ದತ್ತಾ ಅವರ ಉಡುಪುಗಳ ವಿನ್ಯಾಸಕ್ಕೆ ವ್ಯಕ್ತವಾದ ಟ್ರೋಲಿಂಗ್‌ಗೆ ವಸ್ತ್ರ ವಿನ್ಯಾಸಕರಾದ ರಿಂಪಲ್ ಮತ್ತು ಹರ್‌ಪ್ರೀತ್ ನರುಲಾ ಖಡಕ್ ಉತ್ತರ ನೀಡಿದ್ದಾರೆ. ಪ್ರತಿಯೊಂದು ಬಣ್ಣಕ್ಕೂ ಸಾಂಕೇತಿಕ ಅರ್ಥ ನೀಡಿ ಅತ್ಯಂತ ಭಕ್ತಿಯಿಂದ ಈ ಉಡುಪುಗಳನ್ನು ಡಿಸೈನ್ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Tumbadchi Manjula OTT : ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

ಮರಾಠಿಗೆ ರೀಮೇಕ್ ಆದ ಈ ಕನ್ನಡದ ಸೂಪರ್ ಹಿಟ್ ಮೂವಿ ಒಟಿಟಿಗೆ ಎಂಟ್ರಿ!

Tumbadchi Manjula OTT : 'ಸು ಫ್ರಮ್ ಸೋ' ಮರಾಠಿಯಲ್ಲಿಯೂ (Maratahi Movie) ನಿರ್ಮಾಣಗೊಂಡಿತ್ತು. ಈ ಸಿನಿಮಾ . ಈಗ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರೇಕ್ಷಕರ ಪ್ರೀತಿ ಎರಡನ್ನೂ ಗೆದ್ದ ನಂತರ ಈಗ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಮರಾಠಿ ಭಾಷೆಯಲ್ಲಿ 'ತುಂಬಾಡ್ಚಿ ಮಂಜುಳಾ' ಶೀರ್ಷಿಕೆಯಡಿ ಸಿನಿಮಾ ಮೂಡಿಬಂದಿದ್ದು, ಜೂನ್​​ 5ಕ್ಕೆ ಈ ಸಿನಿಮಾ ಬಿಡುಗಡೆ ಆಗಿತ್ತು.

Jason Sanjay :  ಸಿಎಂ ವಿಜಯ್‌ ಪುತ್ರನಿಗೆ ಈ ಕನ್ನಡ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

ಸಿಎಂ ವಿಜಯ್‌ ಪುತ್ರನಿಗೆ ಈ ಕನ್ನಡ ಸಿನಿಮಾ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ!

Jason Sanjay: ವಿಜಯ್ ಪುತ್ರ (Vijay) ಜೇಸನ್ ಅವರಿಗೆ ಕನ್ನಡದ ಒಂದು ಸಿನಿಮಾ ಬಹಳ ಇಷ್ಟವಂತೆ, ಆ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಅವರು ಮಾತನಾಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಮತ್ತು ನಟ-ರಾಜಕಾರಣಿ ವಿಜಯ್ ಅವರ ಪುತ್ರ ಯಶ್ ಅವರ ಕೆಜಿಎಫ್ ತಮ್ಮ ನೆಚ್ಚಿನ ಚಿತ್ರವಾಗಿ ಉಳಿದಿದೆ ಎಂದು ಹೇಳಿದ್ದಾರೆ. ಸಿಗ್ಮಾ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಜೇಸನ್ , ಕಾಲ್ಪನಿಕ ನಿರೂಪಣೆಯನ್ನು ಐತಿಹಾಸಿಕ ಹಿನ್ನೆಲೆಯೊಂದಿಗೆ ಬೆರೆಸಿ, ಮಾಸ್ ಚಿತ್ರವನ್ನು ನೀಡಿದ್ದಕ್ಕಾಗಿ ನಿರ್ದೇಶಕ ಪ್ರಶಾಂತ್ ನೀಲ್ ಅವರನ್ನು ಶ್ಲಾಘಿಸಿದರು.

Ramayana: ಆದಿಪುರುಷ್‌ ರಾಮಾಯಣದ ಜೊತೆ ಹೋಲಿಕೆ ಬೇಡ! ಖ್ಯಾತ ಬರಹಗಾರ ಗರಂ

ಆದಿಪುರುಷ್‌ ರಾಮಾಯಣದ ಜೊತೆ ಹೋಲಿಕೆ ಬೇಡ! ಖ್ಯಾತ ಬರಹಗಾರ ಗರಂ

Ramayana: ರಾಮಾಯಣ ಟ್ರೈಲರ್‌ ಔಟ್‌ ಆಗಿದೆ. ಅಷ್ಟೇ ಅಲ್ಲ ಮೆಚ್ಚುಗೆಯನ್ನು ಗಳಿಸಿ ಪ್ರೇಕ್ಷಕರ ಮನಗೆದ್ದಿವೆ. ಆದರೆ ಕೆಲವು ದೃಶ್ಯಗಳ ಬಗ್ಗೆ ಅಸಾಮಾಧಾನ ವ್ಯಕ್ತವಾಗಿದೆ. 2024 ರ ಆದಿಪುರುಷ ಚಿತ್ರಕ್ಕೆ ಒಂದು ವರ್ಗ ಹೋಲಿಕೆ ಮಾಡುತ್ತಿದೆ. ಈಗ, ನಿತೇಶ್ ತಿವಾರಿ ಅವರ ರಾಮಾಯಣ ಬಿಡುಗಡೆಯಾಗಲು ಸಜ್ಜಾಗುತ್ತಿದ್ದಂತೆ, ಅನೇಕ ಅಭಿಮಾನಿಗಳು ಎರಡು ಚಿತ್ರಗಳನ್ನು ಹೋಲಿಸುತ್ತಿದ್ದಾರೆ, ಆದಿಪುರುಷದ ಸಂಭಾಷಣೆಕಾರ ಮನೋಜ್ ಮುಂತಶಿರ್ ಇದರ ವಿರುದ್ಧ ಎಚ್ಚರಿಸಿದ್ದಾರೆ.

ʻಕರಾವಳಿʼ ನಂತರ ʻಮಹಾನ್‌ʼ ಚಿತ್ರದಲ್ಲಿ ಮಿಂಚಲು ರೆಡಿಯಾದ ನಟ ಮಿತ್ರ; ವಿಜಯ ರಾಘವೇಂದ್ರಗೆ ಜೋಡಿಯಾದ ರಾಧಿಕಾ ನಾರಾಯಣ್

ʻಮಹಾನ್ʼ ಚಿತ್ರದಲ್ಲಿ ಹಳ್ಳಿ ಹುಡುಗಿಯಾದ ರಾಧಿಕಾ; ನಟ ಮಿತ್ರಗೆ ಏನು ಪಾತ್ರ?

ನಿರ್ದೇಶಕ ಪಿ. ಸಿ. ಶೇಖರ್ ನಿರ್ದೇಶನದ ‘ಮಹಾನ್’ ಚಿತ್ರದ ಪ್ರಮುಖ ಪಾತ್ರಧಾರಿಗಳಾದ ರಾಧಿಕಾ ನಾರಾಯಣ್ ಹಾಗೂ ನಟ ಮಿತ್ರ ಅವರ ಫಸ್ಟ್ ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಆಕಾಶ ಪಿಕ್ಚರ್ಸ್ ಬ್ಯಾನರ್‌ನಡಿ ಪ್ರಕಾಶ್ ಬೂದೂರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ವಿಜಯ ರಾಘವೇಂದ್ರ ಸಾಮಾಜಿಕ ಕಾಳಜಿಯುಳ್ಳ ರೈತನಾಗಿ ನಟಿಸಿದ್ದಾರೆ.

ಖ್ಯಾತ ನಟ ಪ್ರದೀಪ್‌ ರಾವತ್‌ ನಿಧನ; ಬ್ಲಡ್‌ ಕ್ಯಾನ್ಸರ್‌ನಿಂದ ಮೃತಪಟ್ಟರೇ ʻಗಜʼ, ʻಗಜಿನಿʼ ಸಿನಿಮಾಗಳ ವಿಲನ್?

ʻಗಜʼ, ʻಗಜಿನಿʼ ಸಿನಿಮಾಗಳ ವಿಲನ್ ಪ್ರದೀಪ್‌ ರಾವತ್‌ ನಿಧನ!

'ಮಹಾಭಾರತ'ದ ಅಶ್ವತ್ಥಾಮ, 'ಗಜನಿ' ಹಾಗೂ ದರ್ಶನ್ ಅವರ 'ಗಜ' ಚಿತ್ರದ ಖ್ಯಾತ ಖಳನಟ ಪ್ರದೀಪ್ ರಾವತ್ (74) ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜಮೌಳಿ ಅವರ 'ಸೈ' ಚಿತ್ರದ ಮೂಲಕ ದಕ್ಷಿಣ ಭಾರತಕ್ಕೆ ಎಂಟ್ರಿ ಕೊಟ್ಟಿದ್ದ ಈ ಹಿರಿಯ ನಟನ ನಿಧನಕ್ಕೆ ಭಾರತೀಯ ಚಿತ್ರರಂಗ ಶ್ರದ್ಧಾಂಜಲಿ ಸಲ್ಲಿಸಿದೆ.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

Sudeep: ʻಬಿಗ್‌ ಬಾಸ್‌ ಕನ್ನಡ 13ʼ ಶೋ ಯಾವಾಗ ಆರಂಭ? ಕೊನೆಗೂ ದಿನಾಂಕ ಘೋಷಣೆ

ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ರ ಪ್ರೋಮೋ ಬಿಡುಗಡೆಯಾಗಿದೆ. ಈ ಬಾರಿ ಜನಸಾಮಾನ್ಯರಿಗಾಗಿ 'ಅಗ್ನಿಪರೀಕ್ಷೆ' ಎಂಬ ಹೊಸ ಟಾಸ್ಕ್‌ ಪರಿಚಯಿಸಲಾಗಿದ್ದು, ಆಗಸ್ಟ್ 16 ರಂದು ರಾತ್ರಿ 9 ಗಂಟೆಗೆ ಲಾಂಚ್ ಆಗಲಿದೆ. ಈ ಹಂತದಲ್ಲಿ ಗೆಲ್ಲುವವರು ನೇರವಾಗಿ ಬಿಗ್‌ ಬಾಸ್‌ ಶೋ ಪ್ರವೇಶಿಸಲಿದ್ದಾರೆ.

'ನಾನು ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆದಿದ್ದೇನೆ': ಚಿತ್ರರಂಗದ ಆರಂಭದ ದಿನಗಳನ್ನು ನೆನೆದ ನಟಿ ಜ್ಯೋತಿಕಾ!

ʻಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೀತಿದ್ದೆʼ ಎಂದ ನಟಿ ಜ್ಯೋತಿಕಾ

ದಕ್ಷಿಣ ಭಾರತದ ಖ್ಯಾತ ನಟಿ ಜ್ಯೋತಿಕಾ ತಮ್ಮ ವೃತ್ತಿಜೀವನದ ಆರಂಭದ ದಿನಗಳಲ್ಲಿ ಪತಿ ಸೂರ್ಯಗಿಂತ 3 ಪಟ್ಟು ಹೆಚ್ಚು ಸಂಭಾವನೆ ಪಡೆಯುತ್ತಿದ್ದಾಗಿ ಬಹಿರಂಗಪಡಿಸಿದ್ದಾರೆ. 'ಕಾಖ ಕಾಖ' ಚಿತ್ರಕ್ಕೆ ಸೂರ್ಯ ಅವರನ್ನು ಶಿಫಾರಸು ಮಾಡಿದ್ದನ್ನು ನೆನೆದ ಅವರು, ಪತಿಯನ್ನು ನಿಜವಾದ 'ಗ್ರೀನ್ ಫ್ಲ್ಯಾಗ್' ಎಂದು ಬಣ್ಣಿಸಿದ್ದಾರೆ.

ಕೇವಲ 4 ದಿನಗಳಲ್ಲಿ 80 ಕೋಟಿಗೂ ಅಧಿಕ ವೀಕ್ಷಣೆ ಪಡೆದ 'ರಾಮಾಯಣ' ಟ್ರೇಲರ್‌; ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ದಾಖಲೆ

4 ದಿನಗಳಲ್ಲಿ 800 ಮಿಲಿಯನ್‌ ವೀಕ್ಷಣೆ ಪಡೆದ 'ರಾಮಾಯಣ' ಟ್ರೇಲರ್!‌

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೇಲರ್ ಬಿಡುಗಡೆಯಾದ ಕೇವಲ 4 ದಿನಗಳಲ್ಲಿ 80 ಕೋಟಿಗೂ ಅಧಿಕ ವೀಕ್ಷಣೆಗಳನ್ನು ಪಡೆದು ಹಾಲಿವುಡ್‌ ಸಿನಿಮಾಗಳ ಸಾಲಿನಲ್ಲಿ ಜಾಗತಿಕ ದಾಖಲೆ ಬರೆದಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ನಟಿಸುತ್ತಿರುವ ಈ ಸಿನಿಮಾವು 2026ರ ದೀಪಾವಳಿ ಹಬ್ಬದಂದು ಅದ್ಧೂರಿಯಾಗಿ ತೆರೆಕಾಣಲಿದೆ.

'ಗಣಪ' ಖ್ಯಾತಿಯ ಸಂತೋಷ್ ಬಾಲರಾಜ್ ನಟನೆಯ ಕೊನೆಯ ಸಿನಿಮಾ ಬಿಡುಗಡೆಗೆ ಸಜ್ಜು; ಪುಣ್ಯತಿಥಿಯಂದು ಫಸ್ಟ್‌ಲುಕ್‌ ರಿಲೀಸ್!‌

Ratnagarbha Movie: ಅಗಲಿದ ನಟ ಸಂತೋಷ್ ಕೊನೆಯ ಸಿನಿಮಾ ರಿಲೀಸ್‌ಗೆ ರೆಡಿ

'ಗಣಪ' ಹಾಗೂ 'ಕರಿಯ-2' ಚಿತ್ರಗಳ ಮೂಲಕ ಜನಪ್ರಿಯರಾಗಿದ್ದ ನಟ ಸಂತೋಷ್ ಬಾಲರಾಜ್ ಅಭಿನಯದ ಕೊನೆಯ ಚಿತ್ರ 'ರತ್ನಗರ್ಭ' ಬಿಡುಗಡೆಗೆ ಸಿದ್ಧವಾಗಿದೆ. ಅವರ ಪ್ರಥಮ ವರ್ಷದ ಪುಣ್ಯಸ್ಮರಣೆಯ ದಿನವಾದ ಆಗಸ್ಟ್ 5 ರಂದು ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್‌ ಆಗಲಿದೆ.

ತನುಷ್‌ ಶಿವಣ್ಣ ನಟನೆಯ ʻಬಾಸ್‌ʼ ಸಿನಿಮಾ ರಿಲೀಸ್‌ಗೆ ದಾಸನ ಒಪ್ಪಿಗೆ! ಚಿತ್ರತಂಡಕ್ಕೆ ವಿಜಯಲಕ್ಷ್ಮಿ - ದರ್ಶನ್‌ ಹೇಳಿದ್ದೇನು?

ʻಬಾಸ್ʼ ಸಿನಿಮಾ ರಿಲೀಸ್‌ಗೆ ಗ್ರೀನ್ ಸಿಗ್ನಲ್; ನಟ ದರ್ಶನ್‌ ಹೇಳಿದ್ದೇನು?

ತನುಷ್ ಶಿವಣ್ಣ ನಟಿಸಿ, ನಿರ್ಮಿಸಿರುವ 'ಬಾಸ್‌' ಚಿತ್ರದ ಬಿಡುಗಡೆಗೆ ಎದುರಾಗಿದ್ದ ತಡೆಯಾಜ್ಞೆ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ನಟ ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರು ಹೊಸಬರ ಶ್ರಮವನ್ನು ಗೌರವಿಸಿ, ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದೆ ಸಿನಿಮಾ ಬಿಡುಗಡೆಗೆ ಶುಭ ಹಾರೈಸಿದ್ದಾರೆ.

Kiccha Sudeep: ಸೆ.6ರಿಂದ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ಆರಂಭವಾಗುತ್ತಾ? ಏನಿದು ಗುಸುಗುಸು?

ಸೆ.6ರಿಂದ ‘ಬಿಗ್‌ ಬಾಸ್‌ ಕನ್ನಡ 13’ ಆರಂಭವಾಗುತ್ತಾ? ಏನಿದು ಗುಸುಗುಸು?

ʻಕಿಚ್ಚʼ ಸುದೀಪ್ ಸಾರಥ್ಯದ ‘ಬಿಗ್‌ ಬಾಸ್‌ ಕನ್ನಡ ಸೀಸನ್‌ 13’ ಪ್ರಸಾರ ದಿನಾಂಕದ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದು, ಸೆಪ್ಟೆಂಬರ್‌ 6 ರಿಂದ ಈ ಅತಿ ದೊಡ್ಡ ರಿಯಾಲಿಟಿ ಶೋ ಶುರುವಾಗುವ ಸಾಧ್ಯತೆ ದಟ್ಟವಾಗಿದೆ. ಹಿಂದಿ ಸೇರಿದಂತೆ ಆರು ಭಾಷೆಗಳ ಬಿಗ್ ಬಾಸ್ ಆವೃತ್ತಿಗಳು ಜಿಯೋಸ್ಟಾರ್ ನೆಟ್‌ವರ್ಕ್‌ನಲ್ಲಿ ಏಕಕಾಲದಲ್ಲಿ ಜಾರಿಗೆ ಬರಲಿವೆ.

Priyanka Chopra: ಮಗಳಿಗೆ 'ಸರ್ವ ಮಂಗಲ ಮಾಂಗಲ್ಯೇʼ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ; ನೆಟ್ಟಿಗರಿಂದ ಮೆಚ್ಚುಗೆ

ಮಗಳಿಗೆ 'ಸರ್ವ ಮಂಗಲ ಮಾಂಗಲ್ಯೇʼ ಶ್ಲೋಕ ಹೇಳಿಕೊಟ್ಟ ಪ್ರಿಯಾಂಕಾ ಚೋಪ್ರಾ

Priyanka Chopra: ಪ್ರಿಯಾಂಕಾ ಜಾಗತಿಕ ತಾರೆಯಾಗಿದ್ದರೂ, ಭಾರತದ ಮೇಲಿನ ಅವರ ಪ್ರೀತಿ ಹಾಗೆಯೇ ಉಳಿದಿದೆ ಮತ್ತು ಇದರ ಝಲಕ್‌ಗಳು ಹೆಚ್ಚಾಗಿ ಕಂಡುಬರುತ್ತವೆ. ಪ್ರಿಯಾಂಕಾ ತಮ್ಮ ಮಗಳು ಮಾಲತಿ ಮೇರಿಯನ್ನು ಆಗಾಗ್ಗೆ ದೇವಾಲಯಗಳಿಗೆ ಕರೆದೊಯ್ಯುತ್ತಾರೆ ಮತ್ತು ಬಾಲ್ಯದಿಂದಲೂ ಅವರಿಗೆ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪರಿಚಯಿಸುತ್ತಿದ್ದಾರೆ. ಈಗ, ಅವರ ವೀಡಿಯೊವೊಂದು ಸಖತ್‌ ಸುದ್ದಿಯಾಗಿದೆ. ಮಾಲತಿ ಹಿಂದೂ ಶ್ಲೋಕ ಹೇಳುವ ಹಳೆಯ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಪ್ರಿಯಾಂಕಾ ಅವರ ಈ ನಡೆಯನ್ನು ಶ್ಲಾಘಿಸುತ್ತಿದ್ದಾರೆ.

'ಆದಿಪುರುಷ್‌ ಸಿನಿಮಾ ಟೀಮ್‌ ಮಾಡಿದ ತಪ್ಪುಗಳನ್ನು ನೀವು ಮಾಡಬೇಡಿ..ʼ; 'ರಾಮಾಯಣ' ಚಿತ್ರತಂಡಕ್ಕೆ ಶ್ರೀ ರಾಮ್‌ಲೀಲಾ ಮಹಾಸಂಘ ವಾರ್ನಿಂಗ್

'ರಾಮಾಯಣ' ಟೀಮ್‌ಗೆ ಶ್ರೀ ರಾಮ್‌ಲೀಲಾ ಮಹಾಸಂಘ ವಾರ್ನಿಂಗ್ ಕೊಟ್ಟಿದ್ದೇಕೆ?

ನಿತೀಶ್ ತಿವಾರಿ ನಿರ್ದೇಶನದ 4 ಸಾವಿರ ಕೋಟಿ ರೂ. ಬಜೆಟ್‌ನ 'ರಾಮಾಯಣ' ಚಿತ್ರತಂಡಕ್ಕೆ ದೆಹಲಿ ಮೂಲದ ಶ್ರೀ ರಾಮ್‌ಲೀಲಾ ಮಹಾಸಂಘ ಪತ್ರ ಬರೆದು ವಾರ್ನಿಂಗ್ ನೀಡಿದೆ. ಸಿನಿಮಾ ಬಿಡುಗಡೆಗೂ ಮುನ್ನ ಧಾರ್ಮಿಕ ಪಂಡಿತರಿಗೆ ವಿಶೇಷ ಪ್ರದರ್ಶನ ಏರ್ಪಡಿಸಬೇಕೆಂದು ಆಗ್ರಹಿಸಿದೆ.

Bigg Boss 20 teaser: ಬಿಗ್‌ ಬಾಸ್‌​ ಪ್ರಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಕೊನೆಗೂ ಡೇಟ್​ ಫಿಕ್ಸ್

ಬಿಗ್‌ ಬಾಸ್‌​ ಪ್ರಿಯರಿಗೆ ಭರ್ಜರಿ ಗುಡ್​ ನ್ಯೂಸ್​: ಕೊನೆಗೂ ಡೇಟ್​ ಫಿಕ್ಸ್

Bigg Boss 20 teaser: ಬಿಗ್ ಬಾಸ್ 20ಕ್ಕೆ ಸಜ್ಜಾಗುವ ಸಮಯ ಬಂದಿದೆ , ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ತಿಂಗಳುಗಳ ಊಹಾಪೋಹಗಳ ನಂತರ, ರಿಯಾಲಿಟಿ ಶೋ ಎರಡು ದಶಕಗಳನ್ನು ಆಚರಿಸುವ ಹೊಸ ಸೀಸನ್‌ನೊಂದಿಗೆ ಮತ್ತೆ ಬರಲಿದೆ. ಸಲ್ಮಾನ್ ಖಾನ್ ನಿರೂಪಣೆ ಮಾಡಿರುವ ಈ ರಿಯಾಲಿಟಿ ಶೋನ ಮೊದಲ ಟೀಸರ್ ಆಗಸ್ಟ್ 4 ರಂದು ರಿಯಾಲಿಟಿ ಶೋನ (Reality Show)ಪ್ರೀಮಿಯರ್ ದಿನಾಂಕದ ಘೋಷಣೆಯೊಂದಿಗೆ ಅನಾವರಣಗೊಳಿಸಲಾಯಿತು.

Khushbu Sundar: ಉದಯನಿಧಿ ಸ್ಟಾಲಿನ್ ಅರೆಸ್ಟ್‌; ತ್ರಿಷಾಗೆ ಕ್ಷಮೆ ಕೇಳಿ ಎಂದು ಖುಷ್ಬು ಸುಂದರ್ ಪೋಸ್ಟ್‌

ಉದಯನಿಧಿ ಅರೆಸ್ಟ್‌; ತ್ರಿಷಾಗೆ ಕ್ಷಮೆ ಕೇಳಿ ಎಂದು ಖುಷ್ಬು ಸುಂದರ್ ಪೋಸ್ಟ್‌

Khushbu Sundar: ಕಾವೇರಿ ಜಲ ವಿವಾದದ ಕುರಿತು ಭಾಷಣ ಮಾಡುವ ವೇಳೆ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಕಾವೇರಿ ನೀರಿನ ವಿಚಾರದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸರ್ಕಾರವನ್ನು ಟೀಕಿಸುತ್ತಿದ್ದ ವೇಳೆ ಉದಯನಿಧಿ ನೀಡಿದ ಹೇಳಿಕೆಯನ್ನು ಹಲವರು ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ಮಾಡಿದ ದ್ವಂದ್ವಾರ್ಥದ ಮಾತು ಎಂದು ಆರೋಪಿಸಿದ್ದರು. ಈ ಕುರಿತು ಟಿವಿಕೆ ಸೇರಿದಂತೆ ಹಲವು ರಾಜಕೀಯ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದ್ದವು.

Mrunal Thakur: ಎಐ ತಂತ್ರಜ್ಞಾನದ ಹಾವಳಿ; ಎಚ್ಚರಿಕೆ ನೀಡಿದ ಮೃಣಾಲ್ ಠಾಕೂರ್

ಎಐ ತಂತ್ರಜ್ಞಾನದ ಹಾವಳಿ; ಎಚ್ಚರಿಕೆ ನೀಡಿದ ಮೃಣಾಲ್ ಠಾಕೂರ್

Mrunal Thakur: ಇತ್ತೀಚಿನ ಸೇರ್ಪಡೆ ಮೃಣಾಲ್ ಠಾಕೂರ್. ಅನುಮತಿಯಿಲ್ಲದೆ ಎಐ ಮೂಲಕ ಸೃಷ್ಟಿಸಿದ ಈ ಫೋಟೊಗಳನ್ನು ತಕ್ಷಣವೇ ತೆಗೆಯದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ನಟಿ ಎಚ್ಚರಿಸಿದ್ದಾರೆ. ಸೈಬರ್ ಕಿಡಿಗೇಡಿಗಳ ವಿರುದ್ಧ ಸೂಕ್ತ ತನಿಖೆಯಾಗಬೇಕೆಂದು ಅಭಿಮಾನಿಗಳು ಒತ್ತಾಯಿಸಿದ್ದಾರೆ. ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಮೃಣಾಲ್ ಠಾಕೂರ್ ಅವರು ಡೀಪ್‌ಫೇಕ್ ವಿಷಯವನ್ನು ರಚಿಸುವ ಅಥವಾ ಪ್ರಸಾರ ಮಾಡುವ ವಿರುದ್ಧ ಕಠಿಣ ಎಚ್ಚರಿಕೆಯನ್ನು ಹಂಚಿಕೊಂಡಿದ್ದಾರೆ.

Rakul Preet Singh: ಶೂರ್ಪನಖಿ ಪಾತ್ರ ಆಯ್ಕೆ ಹಿಂದಿನ  ಕಾರಣ ಏನು? ರಕುಲ್ ಹೇಳಿದ್ದೇನು?

ಶೂರ್ಪನಖಿ ಪಾತ್ರ ಆಯ್ಕೆ ಹಿಂದಿನ ಕಾರಣ ಏನು? ರಕುಲ್ ಹೇಳಿದ್ದೇನು?

Rakul Preet Singh: ಚಿತ್ರದಲ್ಲಿ ಅವರ ಲುಕ್ ಮತ್ತು ಅವರ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಶೂರ್ಪನಖಿಯ ಕಥೆ ಕೇವಲ ಅವಳ ರೂಪಕ್ಕೆ ಸೀಮಿತವಾಗಿಲ್ಲ. ಅದರಲ್ಲಿ ಭಾವನೆ, ತಿರಸ್ಕಾರ, ಅವಮಾನ ಎಲ್ಲವೂ ಸೇರಿದೆ ಹಲವು ಕಥೆಗಳಲ್ಲಿ ಆಕೆಯನ್ನು ಭಾರತೀಯ ಪುರಾಣದ ಅತ್ಯಂತ ಸುಂದರ ಮಹಿಳೆಯರಲ್ಲಿ ಒಬ್ಬಳು ಎಂದು ಪರಿಗಣಿಸಲಾಗಿತ್ತು. ರಾಮಾಯಣ ಭಾಗ ಒಂದು ದೀಪಾವಳಿಯಂದು ನವೆಂಬರ್ 8 ರಂದು ಜಾಗತಿಕವಾಗಿ ಬಿಡುಗಡೆಯಾಗಲಿದೆ.

Salman Khan: 'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ':  ಸಲ್ಮಾನ್ ಖಾನ್ ವಿಡಿಯೋ ವೈರಲ್‌

'ನಾನು 16 ಕೆಜಿ ತೂಕ ಇಳಿಸಿಕೊಂಡಿದ್ದೇನೆ': ಸಲ್ಮಾನ್ ಖಾನ್ ವಿಡಿಯೋ ವೈರಲ್‌

Salman: ಸಲ್ಮಾನ್ ಖಾನ್ (Salman Khan) ತುಂಬಾ ಸಣ್ಣಗಾಗಿದ್ದಾರೆ ಎಂಬ ಚರ್ಚೆ ಬಹುದಿನಗಳಿಂದ ನಡೆಯುತ್ತಲೇ ಇತ್ತು. ಇದು ಅವರ ಆರೋಗ್ಯದ ಬಗ್ಗೆ ಅನೇಕರಿಗೆ ಕಳವಳವನ್ನುಂಟುಮಾಡಿತು. ಅಂತಿಮವಾಗಿ, ಸಲ್ಮಾನ್ ಖಾನ್ ತಮ್ಮ ಹಠಾತ್ ತೂಕ ಇಳಿಕೆಯ ಬಗ್ಗೆ ವದಂತಿಗಳಿಗೆ ಸ್ಪಷ್ಟನೆ ನೀಡಲು ಮುಂದೆ ಬಂದಿದ್ದಾರೆ. ನಟ ಉದ್ದೇಶಪೂರ್ವಕವಾಗಿ ತಮ್ಮ ಲುಕ್ ಬದಲಾಯಿಸಿಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.

Dhyan Yogeshwar: 'ಕರ್ಣಾಟ ಬಲಂ ಅಜೇಯಂ' ಸಿನಿಮಾದಲ್ಲಿದೆ ಚಾಲುಕ್ಯರ ಕಥೆ; ಬಾದಾಮಿಯಲ್ಲಿ ಭರ್ಜರಿಯಾಗಿ ನಡೆದ ಶೂಟಿಂಗ್‌

ಬಾದಾಮಿಯಲ್ಲಿ ಯೋಗೇಶ್ವರ್ ಮಗನ ‘ಕರ್ಣಾಟ ಬಲಂ ಅಜೇಯಂ’ ಚಿತ್ರಕ್ಕೆ ಶೂಟಿಂಗ್‌

ಶಾಸಕ ಹಾಗೂ ನಟ ಸಿ. ಪಿ. ಯೋಗೇಶ್ವರ್ ಪುತ್ರ ಧ್ಯಾನ್ ನಾಯಕರಾಗಿ ನಟಿಸುತ್ತಿರುವ 'ಕರ್ಣಾಟ ಬಲಂ ಅಜೇಯಂ' ಚಿತ್ರದ ಮೊದಲ ಹಂತದ ಶೂಟಿಂಗ್ ಬಾದಾಮಿಯಲ್ಲಿ ನಡೆಯುತ್ತಿದೆ. ನಿರ್ದೇಶಕ ನಾಗಣ್ಣ ಸಾರಥ್ಯದ ಈ ಚಿತ್ರವು 6ನೇ ಶತಮಾನದ ಚಾಲುಕ್ಯರ ಇತಿಹಾಸ ಹಾಗೂ ಇಂದಿನ ರೈತರ ಮಹಾದಾಯಿ ಹೋರಾಟದ ಕಥೆಯನ್ನು ಒಳಗೊಂಡಿದೆಯಂತೆ.

ʻನನಗೆ ಬಲವಂತದ ರಜೆ ಸಿಕ್ಕಿದೆ, ದೇವರೇ ಹೀಗೆ ಮಾಡಿರಬೇಕುʼ; ಶೂಟಿಂಗ್‌ ಅವಘಡದ ಬಗ್ಗೆ ಎಲ್ಲವನ್ನೂ ಹೇಳಿದ ರಶ್ಮಿಕಾ ಮಂದಣ್ಣ!

ʻನನಗೆ ಬಲವಂತದ ರಜೆ ಸಿಕ್ಕಿದೆʼ; ಗಾಯದ ಬಗ್ಗೆ ರಶ್ಮಿಕಾ ಮಂದಣ್ಣ ಪೋಸ್ಟ್!

ನಟಿ ರಶ್ಮಿಕಾ ಮಂದಣ್ಣ 'ಮೈಸಾ' ಸಿನಿಮಾದ ಡ್ಯಾನ್ಸ್ ಶೂಟಿಂಗ್ ವೇಳೆ ತಮ್ಮ ಬಲ ಸೊಂಟದ ಸ್ನಾಯುರಜ್ಜು (Tendon) ಗಾಯಗೊಳಿಸಿಕೊಂಡಿದ್ದು, ಸದ್ಯ ವೈದ್ಯರ ಸೂಚನೆಯಂತೆ ಬೆಡ್ ರೆಸ್ಟ್‌ನಲ್ಲಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಶ್ಮಿಕಾ, ಇದು ಸತತ ಮೂರನೇ ಗಾಯ ಎಂದು ಹೇಳಿದ್ದಾರೆ.

ನಾಲ್ಕೇ ದಿನಕ್ಕೆ ಭಾರತದಲ್ಲಿ ದಾಖಲೆ ಬರೆದ ʻಸ್ಪೈಡರ್‌ ಮ್ಯಾನ್‌ʼ ಸಿನಿಮಾ; ಕರ್ನಾಟಕದಲ್ಲಿ ಅಬ್ಬರದ ಗಳಿಕೆ!

ಕರುನಾಡಿನಲ್ಲಿ ದಾಖಲೆ ಬರೆದ ʻಸ್ಪೈಡರ್‌ ಮ್ಯಾನ್‌ʼ; ಬಾಕ್ಸ್‌ ಆಫೀಸ್‌ ಉಡೀಸ್

Spider-Man Brand New Day Box Office Collection Day 4: ಟಾಮ್ ಹಾಲ್ಯಾಂಡ್ ಅಭಿನಯದ 'ಸ್ಪೈಡರ್-ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಸಿನಿಮಾ ಭಾರತದ ಬಾಕ್ಸ್ ಆಫೀಸ್‌ನಲ್ಲಿ ನಾಲ್ಕೇ ದಿನಗಳಲ್ಲಿ 300 ಕೋಟಿ ರೂ. ಗಳಿಸಿ ಸಾರ್ವಕಾಲಿಕ ದಾಖಲೆ ಬರೆದಿದೆ. ಡೆಸ್ಟಿನ್ ಡೇನಿಯಲ್ ಕ್ರೆಟನ್ ನಿರ್ದೇಶನದ ಈ ಚಿತ್ರವು ಜಾಗತಿಕವಾಗಿ 8,843 ಕೋಟಿ ರೂ. ಬಾಚಿಕೊಂಡಿದೆ.

ʻ60-70 ಜನರಿಗೆ ಒಂದೇ ಟಾಯ್ಲೆಟ್‌, ಕಮೋಡ್‌ನಲ್ಲಿ ಹಲ್ಲಿಗಳುʼ; ಜೈಲುವಾಸದ ಕರಾಳ ದಿನಗಳನ್ನು ನೆನೆದ ನಟ ಸಲ್ಮಾನ್‌ ಖಾನ್‌

‌ʻ60-70 ಜನರಿಗೆ ಒಂದೇ ಟಾಯ್ಲೆಟ್‌ʼ; ಜೈಲುವಾಸದ ಬಗ್ಗೆ ಸಲ್ಮಾನ್‌ ಖಾನ್ ಮಾತು

ಬಾಲಿವುಡ್ ನಟ ಸಲ್ಮಾನ್ ಖಾನ್ 'ಅಲೈಯನ್ಸ್' ಶೋನಲ್ಲಿ ಭಾಗವಹಿಸಿ ತಮ್ಮ ಜೈಲುವಾಸದ ಕರಾಳ ಅನುಭವಗಳನ್ನು ಬಹಿರಂಗಪಡಿಸಿದ್ದಾರೆ. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಹಲವು ಬಾರಿ ಜೈಲು ಪಾಲಾಗಿದ್ದ ವೇಳೆ, 60-70 ಜನರಿಗೆ ಒಂದೇ ಸಣ್ಣ ಶೌಚಾಲಯವಿದ್ದು, ಕಮೋಡ್‌ನಲ್ಲಿ ಹಲ್ಲಿಗಳಿರುತ್ತಿದ್ದವು ಎಂದು ಅವರು ವಿವರಿಸಿದ್ದಾರೆ.

Loading...