ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಸಿನಿಮಾ
Ilaiyaraaja: ಕೃತಿಚೌರ್ಯ ಆರೋಪ; 'ಗುಡ್ ಬ್ಯಾಡ್ ಅಗ್ಲಿ' ಚಿತ್ರತಂಡಕ್ಕೆ 5 ಕೋಟಿ ರೂ. ಡಿಮ್ಯಾಂಡ್ ಇಟ್ಟ ಸಂಗೀತ ನಿರ್ದೇಶಕ ಇಳಯರಾಜ

ʼಗುಡ್ ಬ್ಯಾಡ್ ಅಗ್ಲಿʼ ಚಿತ್ರತಂಡಕ್ಕೆ 5 ಕೋಟಿ ರೂ. ಪರಿಹಾರ ಕೇಳಿದ ಇಳಯರಾಜ

ಗುಡ್ ಬ್ಯಾಡ್ ಅಗ್ಲಿ’ ನಿರ್ಮಾಪಕರಿಗೆ ಸಂಗೀತ ದಿಗ್ಗಜ ಇಳಯರಾಜ ಲೀಗಲ್‌ ನೊಟೀಸ್‌ ಕಳುಹಿಸಿದ್ದಾರೆ. ಚಿತ್ರದಲ್ಲಿ ಒತ್ತಾ ರುಪಾಯುಮ್ ಥಾರೆನ್ ,ಇಲಮೈ ಇಧೊ ಇಧೋ.. ವಿಕ್ರಮ್’ ಚಿತ್ರದ ‘ಎನ್ ಜೋಡಿ ಮಂಜ ಕುರುವಿ ಹಾಡುಗಳನ್ನು ಅನುಮತಿ ಪಡೆಯದೆ ಹಾಡುಗಳನ್ನು ಮಾರ್ಪಡಿಸಿ ಬಳಸಲಾಗಿದೆ. ಈ ಎಲ್ಲಾ ಹಾಡುಗಳು ಸಂಗೀತ ಸಂಯೋಜಕ ಇಳಯರಾಜಾ ಅವರದಾಗಿದ್ದು ಚಿತ್ರತಂಡ ಈ ಬಗ್ಗೆ ಅನುಮತಿ ಪಡೆದಿಲ್ಲ ಎಂದು ದೂರಿದ್ದಾರೆ.

Kesari Chapter 2: ʼಕೇಸರಿ 2ʼ ಚಿತ್ರತಂಡದಿಂದ ಜಲಿಯನ್‌ವಾಲಾ ಭಾಗ್ ಸಂತ್ರಸ್ತರಿಗೆ ಗೌರವಪೂರ್ಣ ನಮನ

ಜಲಿಯನ್‌ವಾಲಾ ಭಾಗ್‌ನಲ್ಲಿ ಮಡಿದವರಿಗೆ ʼಕೇಸರಿ 2ʼ ಚಿತ್ರತಂಡದ ನಮನ

ಜಲಿಯನ್‌ವಾಲ್ ಭಾಗ್ ಹತ್ಯಾಕಾಂಡದ ಹಿಂದಿನ ನೈಜ ಘಟನೆಗಳನ್ನುಆಧರಿಸಿದ್ದ ಕಥೆಯೇ ʼಕೇಸರಿ 2ʼ ಸಿನಿಮಾದ ಮುಖ್ಯ ಎಳೆ. ಕರಣ್ ಸಿಂಗ್ ತ್ಯಾಗಿ ನಿರ್ದೇಶನದ 'ಕೇಸರಿ 2' ಸಿನಿಮಾದಲ್ಲಿ ಅಕ್ಷಯ್ ಕುಮಾರ್, ಆರ್. ಮಾಧವನ್ ಮತ್ತು ಅನನ್ಯಾ ಪಾಂಡೆ ನಟಿಸಿದ್ದಾರೆ. ಇದೀಗ ಚಿತ್ರತಂಡವು ಜಲಿಯನ್‌ವಾಲಾ ಭಾಗ್ ಹತ್ಯಾಕಂಡದಲ್ಲಿ ಮಡಿದವರನ್ನು ಸ್ಮರಿಸಿದೆ.

Priyanka Chopra: ಹಾಲಿವುಡ್‌ನಲ್ಲಿ ಮತ್ತೊಂದು ಚಾನ್ಸ್‌ ಗಿಟ್ಟಿಸಿಕೊಂಡ ಪ್ರಿಯಾಂಕಾ ಚೋಪ್ರಾ

ಹಾಲಿವುಡ್ ಸಿನಿಮಾಕ್ಕೆ ನಟಿ ಪ್ರಿಯಾಂಕ ಚೋಪ್ರಾ ಎಂಟ್ರಿ

ನಿಕೋಲಸ್ ಸ್ಟೋಲರ್ ಅವರ ʼಜಡ್ಜ್‌ಮೆಂಟ್ ಡೇʼ ಎನ್ನುವ ಹಾಲಿವುಡ್‌ ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ. ಇದೊಂದು ಕಾಮಿಡಿ ಚಿತ್ರವಾಗಿದ್ದುʼ ಬೇವಾಚ್ʼ ಸಿನಿಮಾದ  ಸಹನಟ ಝಾಕ್ ಎಫ್ರಾನ್ ಅವರೊಂದಿಗೆ ಪ್ರಿಯಾಂಕಾ ತೆರೆ ಹಂಚಿಕೊಳ್ಳಲಿದ್ದಾರೆ. ಇದರ ಜತೆಗೆ ಬಾಲಿವುಡ್‌, ಟಾಲಿವುಡ್‌ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

45 Movie: '45' ಚಿತ್ರದ ಪ್ರಚಾರ ಶುರು; ಖಾಸಗಿ ವಿಮಾನ ಏರಿ ಪಕ್ಕದ ರಾಜ್ಯಕ್ಕೆ ಹೊರಟ ಸ್ಟಾರ್ಸ್

'45’ ಚಿತ್ರದ ಪ್ರಚಾರಕ್ಕಾಗಿ ಖಾಸಗಿ ವಿಮಾನ ಏರಿ ಹೊರಟ ಸ್ಟಾರ್ಸ್

ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ʼ45ʼ ಚಿತ್ರದ ಪ್ರಚಾರ ಕಾರ್ಯ ಭರದಿಂದ ಸಾಗುತ್ತಿದೆ. ಚಿತ್ರತಂಡವು‌ ಪ್ರಚಾರಕ್ಕಾಗಿ ಬೇರೆ ರಾಜ್ಯ ಗಳಿಗೂ ತೆರಳಲು ಸಜ್ಜಾಗಿದೆ. ಇದೀಗ ಚಿತ್ರತಂಡ ಬೆಂಗಳೂರು ಎಚ್​ಎಎಲ್ ವಿಮಾನ ನಿಲ್ದಾಣದಿಂದ ಖಾಸಗಿ ಜೆಟ್​ನಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿದಿದೆ.

Yuddhakaanda Movie: ಅಜಯ್ ರಾವ್ ನಟನೆಯ ʼಯುದ್ಧಕಾಂಡʼ ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ರವಿಚಂದ್ರನ್

ʼಯುದ್ಧಕಾಂಡʼ ಚಿತ್ರದ ಟ್ರೇಲರ್ ರಿಲೀಸ್‌ ಮಾಡಿದ ರವಿಚಂದ್ರನ್

Yuddhakaanda Movie: ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ ʼಯುದ್ಧಕಾಂಡʼ ಚಿತ್ರದ ಟ್ರೇಲರ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಬಿಡುಗಡೆ ಮಾಡಿದರು. ಪಾಂಚಜನ್ಯ ಮೊಳಗಿಸಿ ಚಾಲನೆ‌ ನೀಡಿದರು. ಈ ಕುರಿತ ವಿವರ ಇಲ್ಲಿದೆ.

Anupama Parameswaran: ನಟಿ ಅನುಪಮಾ ಸ್ಟಾರ್ ಹೀರೋ ಪುತ್ರನ ಜೊತೆ ಡೇಟಿಂಗ್! ಲೀಕ್ ಆಯ್ತು ಕಿಸ್ಸಿಂಗ್ ಫೋಟೋ..!

ಸ್ಟಾರ್ ಹೀರೋ ಪುತ್ರನ ಜೊತೆ ಅನುಪಮಾ ಪರಮೇಶ್ವರನ್ ಡೇಟಿಂಗ್‌

ನಟಿ ಅನುಪಮಾ ಪರಮೇಶ್ವರನ್ ಹಾಗೂ ಧ್ರುವ ವಿಕ್ರಮ್ ಮಾರಿ ಸೆಲ್ವರಾಜ್ ನಿರ್ದೇಶನದ ಬೈಸನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಈ ಜೋಡಿಯ ಬಗ್ಗೆ ಗಾಸಿಪ್ ಕೂಡ ಹರಿದಾಡಿತ್ತು. ಇದೀಗ ನಟಿ ಅನುಪಮ ಪರಮೇಶ್ವರನ್ ನಟ ಧ್ರುವ ಜೊತೆಗೆ ಲಿಪ್‌ಲಾಕ್ ಮಾಡಿರುವ ಫೋಟೋ ವೊಂದು ವೈರಲ್ ಆಗಿದೆ. ಅನುಪಮಾಗೆ 29 ವರ್ಷ ವಯಸ್ಸು. ಧ್ರುವ​ಗೆ 27 ವರ್ಷ ವಯಸ್ಸು ಆಗಿದ್ದು ಕಿಸ್ಸಿಂಗ್ ಫೋಟೋ ಆನ್​​ಲೈನ್​ನಲ್ಲಿ ಲೀಕ್ ಆಗುತ್ತಿದ್ದಂತೆ ಅಭಿಮಾನಿಗಳೇ ಶಾಕ್ ಆಗಿದ್ದಾರೆ.

Sunil Shetty: ಮೊಮ್ಮಗಳ ಬಗ್ಗೆ ಸುನೀಲ್‌ ಶೆಟ್ಟಿ ಪೋಸ್ಟ್‌ ಫುಲ್‌ ವೈರಲ್‌; ಅಂತಹದ್ದೇನಿದೆ?

ಮೊಮ್ಮಗಳ ಬಗ್ಗೆ ಸುನೀಲ್‌ ಶೆಟ್ಟಿ ಪೋಸ್ಟ್‌ ಫುಲ್‌ ವೈರಲ್‌

Sunil Shetty Post on Grand Daughter: ಸುನೀಲ್ ಶೆಟ್ಟಿ ತಾನು ತಾತನಾಗಿದ್ದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ತಂದೆಯಿಂದ ತಾತನ ಸ್ಥಾನಕ್ಕೆ ಭಡ್ತಿಯಾಗಿದ್ದರ ಬಗ್ಗೆ ಮನದಾಳದ ಭಾವುಕತೆಯನ್ನು ಹಂಚಿಕೊಂಡಿದ್ದು ಇದಕ್ಕೆ ವಿಶೇಷವಾಗಿ ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗುತ್ತಿದೆ.

Narendra Modi: ಮೋದಿ ಅದ್ದೂರಿ ಸ್ವಾಗತಕ್ಕೆ ಇಂಡಿಯನ್‌ ಟಚ್‌! NTR ಚಿತ್ರದ ಮ್ಯೂಸಿಕ್ ಬಳಸಿದ ಶ್ರೀಲಂಕಾ ಅಧ್ಯಕ್ಷ

ಶ್ರೀಲಂಕಾದಲ್ಲಿ ಮೋದಿ ಸ್ವಾಗತ ವಿಡಿಯೊಗೆ ದೇವರ ಚಿತ್ರದ ಮ್ಯೂಸಿಕ್

Devara Movie Song: ಶ್ರೀಲಂಕಾ ಅಧ್ಯಕ್ಷ ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಸ್ವಾಗತಿಸುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು ಈ ವಿಡಿಯೊಗೆ ಜ್ಯೂ. ಎನ್‌ಟಿಆರ್ ಅಭಿನಯದ ದೇವರ ಚಿತ್ರದ “ರೆಡ್ ಸೀ”ಎಂಬ ಹಿನ್ನೆಲೆ ಮ್ಯೂಸಿಕ್ ಬಳಸಿದ್ದಾರೆ. ಈ ವಿಡಿಯೊ ನೋಡಿದ ಎನ್‌ಟಿಆರ್ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

Bank Janardhan: ಬರೋಬ್ಬರಿ 800 ಚಿತ್ರಗಳ ಸರದಾರ... ಬ್ಯಾಂಕ್‌ ಬ್ಯಾಲೆನ್ಸೇ ಇಲ್ಲದ ಜನಾರ್ದನ್‌!

ಒಂದಲ್ಲ... ಎರಡಲ್ಲ ಬರೋಬ್ಬರಿ 800 ಚಿತ್ರಗಳ ಸರದಾರ ಬ್ಯಾಂಕ್‌ ಜನಾರ್ದನ್‌

Bank Janardhan passed away: 800ಕ್ಕೂ ಅಧಿಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಬ್ಯಾಂಕ್ ಜನಾರ್ಧನ್ ನಾಟಕಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಕೂಡ ನಟಿಸಿ ಗೆದ್ದಿದ್ದರು. ಅಷ್ಟು ಸಿನಿಮಾಗಳಲ್ಲಿ ನಟಿಸಿದ್ದ ಅವರ ಬಳಿ ಕೊನೆಗಾಲದಲ್ಲಿ ಬ್ಯಾಂಕ್‌ ಬ್ಯಾಲೆನ್ಸೇ ಇರಲಿಲ್ಲವಂತೆ. ಈ ಬಗ್ಗೆ ಒಮ್ಮೆ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದರು

Actor Bank Janardhan: ʻಶ್‌ʼ ಸಿನಿಮಾ ನೋಡಿ ಅಣ್ಣಾವ್ರೇ ಬ್ಯಾಂಕ್‌ ಜನಾರ್ದನ್‌ ಅಭಿಮಾನಿ ಆಗಿದ್ರಂತೆ!

ಅಣ್ಣಾವ್ರೇ ಬ್ಯಾಂಕ್‌ ಜನಾರ್ದನ್‌ ಅಭಿಮಾನಿ ಆಗಿದ್ರಂತೆ!

Actor Bank Janardhan Passed away: 'ಓಂ' ಚಿತ್ರವನ್ನು ನಿರ್ಮಾಣ ಮಾಡುವ ಮುನ್ನ ಉಪೇಂದ್ರ ನಿರ್ದೇಶನದ ಸಿನಿಮಾ ನೋಡಬೇಕು ಎಂದು ಅಣ್ಣಾವ್ರ ಹೇಳಿದಾಗ 'ಶ್' ಸಿನಿಮಾ ತೋರಿಸಲಾಗಿತ್ತು. ಮೂರು ಬಾರಿ ಸಿನಿಮಾ ನೋಡಿ ಅಣ್ಣಾವ್ರ ಮೆಚ್ಚಿಕೊಂಡಿದ್ದರು. ಅದರಲ್ಲೂ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬ್ಯಾಂಕ್‌ ಜನಾರ್ಧನ್ ಬೈಯ್ಯುವ ಸನ್ನಿವೇಶವನ್ನು ಡಾ. ರಾಜ್ ಬಹಳ ಎಂಜಾಯ್ ಮಾಡಿದ್ದರು. ಈ ವಿಚಾರವನ್ನು ಸಾಕಷ್ಟು ಸಂದರ್ಭಗಳಲ್ಲಿ ಬ್ಯಾಂಕ್ ಜನಾರ್ಧನ್ ಅವರಿಗೆ ಅಣ್ಣಾವ್ರು ಹೇಳಿದ್ದರು.

Firefly Movie: ಮಗಳ ಸಿನಿಮಾದಲ್ಲಿ ಪಿಜ್ಜಾ ಡೆಲಿವರಿ ಬಾಯ್‌ ಆದ ಶಿವಣ್ಣ

ಮಗಳ ಚಿತ್ರದಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆದ ಶಿವ ರಾಜ್‌ಕುಮಾರ್

ಶಿವ ರಾಜ್‌ಜ್‌ಕುಮಾರ್ ಅವರ ಪುತ್ರಿ ನಿವೇದಿತಾ ನಿರ್ಮಾಣದ ಮೊದಲ ಚಿತ್ರ ʼಫೈರ್‌ ಫ್ಲೈ' ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದೆ. ಶಿವಣ್ಣನ ನಿವಾಸದಲ್ಲಿ ಟ್ರೈಲರ್ ಲಾಂಚ್ ಆಗಿದ್ದು, ಶಿವಣ್ಣನ ಅಭಿಮಾನಿಗಳಿಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಟ್ರೈಲರ್ ಕೊನೆಯಲ್ಲಿ ಸೆಂಚುರಿ ಸ್ಟಾರ್ ಶಿವ ರಾಜ್‌ಕುಮಾರ್ ಫಿಜ್ಜಾ ಡೆಲಿವರಿ ಬಾಯ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

Anna Konidela: ಬೆಂಕಿ ದುರಂತದಿಂದ ಮಗ ಪಾರು; ತಿಮ್ಮಪ್ಪನಿಗೆ ಮುಡಿ ಕೊಟ್ಟ ನಟ ಪವನ್ ಕಲ್ಯಾಣ್ ಪತ್ನಿ

ಮಗನ ಆರೋಗ್ಯ ಚೇತರಿಕೆಗಾಗಿ ಮುಡಿ ಕೊಟ್ಟ ಪವನ್ ಕಲ್ಯಾಣ್ ಪತ್ನಿ

ನಟ ಪವನ್ ಕಲ್ಯಾಣ್ - ಅನ್ನಾ ಕೊನಿಡೆಲಾ ದಂಪತಿಯ 8 ವರ್ಷದ ಪುತ್ರ ಮಾರ್ಕ್ ಶಂಕರ್ ಏ. ಸಿಂಗಾಪುರದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದ. ಸದ್ಯ ಚೇತರಿಸಿಕೊಳ್ಳುತ್ತಿದ್ದಾನೆ. ಹೀಗಾಗಿ ಮಗನ ಆರೋಗ್ಯ ಸುಧಾರಣೆಗಾಗಿ ಹರಕೆ ಹೊತ್ತಿದ್ದ ಅನ್ನಾ ಕೊನಿಡೆಲಾ ತಿರುಪತಿ ದೇಗುಲಕ್ಕೆ ಭೇಟಿ ಮುಡಿ ಕೊಟ್ಟಿದ್ದಾರೆ.

Bank Janardhan Passes Away: ಹಾಸ್ಯನಟ ಜನಾರ್ದನ್‌ ಹೆಸರಿನ ಹಿಂದೆ ಬ್ಯಾಂಕ್‌ ಸೇರಿಕೊಂಡದ್ದು ಹೇಗೆ?

ಹಾಸ್ಯನಟ ಜನಾರ್ದನ್‌ ಹೆಸರಿನ ಹಿಂದೆ ಬ್ಯಾಂಕ್‌ ಸೇರಿಕೊಂಡದ್ದು ಹೇಗೆ?

ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಜನಾರ್ದನ್ ‘ಗೌಡರ ಗದ್ದಲ’ ನಾಟಕ ಮಾಡಿದರು. ಇದರಲ್ಲಿ ಅವರ ನಟನೆ ನೋಡಿ ಅನೇಕರು ಮೆಚ್ಚಿಕೊಂಡರು. ಒಂದು ದಿನ ಇವರ ನಾಟಕವನ್ನು ಹಿರಿಯ ನಟ ಧೀರೇಂದ್ರ ಗೋಪಾಲ್ ಅವರು ನೋಡಿದರು. ಚಿತ್ರರಂಗಕ್ಕೆ ನೀವು ಬರಬೇಕು ಎಂದು ಆಹ್ವಾನ ಕೊಟ್ಟರು.

Bank Janardhan passes away: ಹಿರಿಯ ಹಾಸ್ಯನಟ ಬ್ಯಾಂಕ್‌ ಜನಾರ್ದನ ಇನ್ನಿಲ್ಲ

ಹಿರಿಯ ಹಾಸ್ಯನಟ ಬ್ಯಾಂಕ್‌ ಜನಾರ್ದನ ಇನ್ನಿಲ್ಲ

ಕೆಲ ತಿಂಗಳ ಹಿಂದಷ್ಟೇ ಬ್ಯಾಂಕ್ ಜನಾರ್ದನ್‌ ಅವರಿಗೆ ಹೃದಯಾಘಾತ ಸಂಭವಿಸಿತ್ತು. ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಅವರು ಸಕ್ರಿಯವಾಗಿದ್ದಾರೆ. ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಸ್ಯ ನಟರಾಗಿ ಸಾಕಷ್ಟು ಪಾತ್ರಗಳನ್ನು ನಿರ್ವಹಿಸಿ ಕನ್ನಡಿಗರನ್ನು ನಕ್ಕು ನಗಿಸಿದ್ದಾರೆ.

Alia Bhatt: ಪೆಟ್ ಡೇ ಆಚರಿಸಿದ ಆಲಿಯಾ; ಫೋಟೊ ಕ್ರೆಡಿಟ್ ಯಾರದ್ದು ಗೊತ್ತ?

ಆಲಿಯಾ ಭಟ್ ಮನೆಯಲ್ಲಿರುವ ಪುಟ್ಟ ಫೋಟೊಗ್ರಾಫರ್ ಯಾರು?

ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಇರುವ ಆಲಿಯಾ ಭಟ್ ಅವರಿಗೆ ವಿಶೇಷ ಫ್ಯಾನ್ ಬೇಸ್ ಇದೆ. ಉತ್ತರದಿಂದ ದಕ್ಷಿಣದ ತನಕ ಸಿಕ್ಕಾಪಟ್ಟೆ ಅಭಿಮಾನಿಗಳಿದ್ದಾರೆ. ಇದೀಗ ನಟಿ ಆಲಿಯಾ ಭಟ್ ಸಾಕುಪ್ರಾಣಿಗಳ ದಿನ ಆಚರಿಸಿಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿದೆ. ವಿಶೇಷ ಎಂದು ಈ ಫೋಟೊ ಕ್ಲಿಕ್‌ ಮಅಡಿದ್ದು ಅವರ ಮಗಳು 3 ವರ್ಷದ ರಾಹಾ ಅಂತೆ.

Aamir Khan: ಗೆಳತಿ ಗೌರಿ ಕೈ ಹಿಡಿದು ಫೋಟೊಗೆ ಪೋಸ್ ಕೊಟ್ಟ ನಟ ಆಮೀರ್ ಖಾನ್!

ಗೆಳತಿ ಗೌರಿ ಜೊತೆ ಕಾಣಿಸಿಕೊಂಡ ನಟ ಆಮೀರ್ ಖಾನ್!

ಆಮೀರ್ ಖಾನ್ ಮತ್ತು ಗೌರಿ ಸ್ಪ್ರಾಟ್ ಚೀನಾದಲ್ಲಿ ನಡೆದ ಅಂತರರಾಷ್ಟ್ರೀಯ ಹಾಸ್ಯ ಉತ್ಸವದಲ್ಲಿ ಭಾಗವಹಿಸಿದ್ದರು. ಈ ವೇಳೆ ಈ ಜೋಡಿ ಕೈ ಹಿಡಿದುಕೊಂಡೇ ಫೋಟೋ ಗೆ ಫೋಸ್ ಕೊಟ್ಟಿದ್ದಾರೆ‌. ಚೀನಾದ ಪಾಪರಾಜಿಗಳು ಈ ಜೋಡಿಯ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಆಮೀರ್‌ ಖಾನ್‌ ಕಪ್ಪು ಕುರ್ತಾ, ಬಿಳಿ ಪೈಜಾಮಾದಲ್ಲಿ ಕಾಣಿಸಿಕೊಂಡರೆ ಗೌರಿ ಫ್ಲವರ್ ಪ್ರಿಂಟೆಡ್‌ ಸೀರೆಯನ್ನು ಧರಿಸಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ

Krishna Ajay Rao: ಯುದ್ಧಕಾಂಡ ಸಿನಿಮಾಕ್ಕಾಗಿ ನಟ ಅಜಯ್‌ ರಾವ್‌ ಮಾಡಿ ಸಾಲ ಎಷ್ಟು ಗೊತ್ತಾ?

ಕೋಟಿ ಸಾಲ ಮಾಡಿದ ಬಗ್ಗೆ ನಟ ಅಜಯ್ ಹೇಳಿದ್ದೇನು?

Krishna Ajay Rao Interview: ಅಜಯ್ ನಟನೆಯ ಯುದ್ಧಕಾಂಡ ಚಿತ್ರದ ಟೀಸರ್‌ ಈಗಾಗಲೇ ರಿಲೀಸ್‌ ಆಗಿದ್ದು ಇವರ ನಟನೆ, ನಿರ್ಮಾಣದ ಬಹುನಿರೀಕ್ಷಿತ ‘ಯುದ್ಧಕಾಂಡ ಸಿನಿಮಾ ಏಪ್ರಿಲ್ 18ಕ್ಕೆ ಬಿಡುಗಡೆ ಯಾಗಲಿದೆ. ಈ ನಡುವೆ  ಯುದ್ದಕಾಂಡ ಚಿತ್ರಕ್ಕಾಗಿ ನಟ ಅಜಯ್  ಕೋಟಿ ಕೋಟಿ ಸಾಲ ಮಾಡಿ ತಮ್ಮ BWD ಕಾರನ್ನು ಮಾರಾಟ ಮಾಡಿರುವ ದೃಶ್ಯ ಸೋಷಿಯಲ್ ‌ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿತ್ತು. ಇದೀಗ ನಟ ಅಜಯ್  ರಾವ್ ಅವರೇ  ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಲವು ಕುತೂಹಲಕರ ವಿಚಾರಗಳನ್ನು ಹೇಳಿಕೊಂಡಿದ್ದಾರೆ.

Kantara Movie: ಕಾಂತಾರ-1 ಬೆನ್ನಲ್ಲೇ ಚಾಪ್ಟರ್ 3 ಸೆಟ್ಟೇರುತ್ತಾ? ಒಟ್ಟೊಟ್ಟಿಗೆ ಎರಡು ಚಿತ್ರಗಳ ಶೂಟಿಂಗ್?

ಕಾಂತಾರ ಚಾಪ್ಟರ್-3 ಶೂಟಿಂಗ್ ಶುರು! ಈ ಸುದ್ದಿ ನಿಜವೇ?

Kantara Movie: ರಿಷಬ್ ಶೆಟ್ಟಿ ನಿರ್ದೇಶಿಸಿ, ಅಭಿನಯಿಸಿದ ಕಾಂತಾರ ಸಿನಿಮಾ ಥಿಯೇಟರ್​​ನಲ್ಲಿ ಸೂಪರ್ ಹಿಟ್ ಆಗಿ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ, ಪರಭಾಷಿಕರನ್ನೂಸೆಳೆದಿತ್ತು. ಇದೀಗ ರಿಷಬ್‌ ಶೆಟ್ಟಿ ನಿರ್ದೇಶಿಸಿ ನಾಯಕರಾಗಿ ನಟಿಸುತ್ತಿರುವ ಕಾಂತಾರ ಚಾಪ್ಟರ್‌ 1' ಪ್ರೀಕ್ವೆಲ್‌ ಬಗ್ಗೆ ಕುತೂಹಲ ಹೆಚ್ಚಿದೆ. ಈಗಾಗಲೇ ಚಾಪ್ಟರ್-1 ಚಿತ್ರದ  ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಇನ್ನೇನು ರಿಲೀಸ್ ತಯಾರಿ ಹಂತದಲ್ಲಿರುವಾಗಲೇ ಈ ಮಧ್ಯೆ ಕಾಂತಾರ ಪಾರ್ಟ್ 3 ಬಗ್ಗೆಯು ಹೊಸ ಅಪ್ಡೇಟ್ ಸಿಕ್ಕಿದೆ‌.

Pawan Kalyan: ಬೆಂಕಿ ಅವಘಡದ ನಂತರ ಮಗನನ್ನು ಹೈದರಾಬಾದ್‌ಗೆ ಕರೆದುಕೊಂಡು ಬಂದ ಪವನ್ ಕಲ್ಯಾಣ್

ಸಿಂಗಾಪುರದಲ್ಲಿ ಬೆಂಕಿ ಅವಘಡ- ಪುತ್ರನೊಂದಿಗೆ ಮರಳಿದ ಪವನ್ ಕಲ್ಯಾಣ್

Pawan Kalyan: ಸಿಂಗಾಪುರ ಶಾಲೆಯೊಂದರಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಗಾಯಗೊಂಡ ಪುತ್ರನನ್ನು ಕರೆದುಕೊಂಡು ನಟ ಮತ್ತು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಹೈದರಾಬಾದ್ ಗೆ ಆಗಮಿಸಿದ್ದಾರೆ. ಸಿಂಗಾಪುರದಿಂದ ಹಿಂದಿರುಗುವಾಗ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅವರು ತಮ್ಮ ಮಗ ಮಾರ್ಕ್ ನನ್ನು ತೋಳುಗಳಲ್ಲಿ ಎತ್ತಿಕೊಂಡು ಬರುತ್ತಿರುವುದು ಕಂಡುಬಂದಿದೆ.

Green Movie: ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಚಿತ್ರ ಸದ್ಯದಲ್ಲೇ ತೆರೆಗೆ

ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ "ಗ್ರೀನ್" ಶೀಘ್ರವೇ ರಿಲೀಸ್‌

Green Movie:ಗ್ರೀನ್ ಒಂದು ಮನೋವೈಜ್ಞಾನಿಕ ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವಾಗಿದ್ದು, ಇದು ವೀಕ್ಷಕರನ್ನು ಮಾನವ ಮನಸ್ಸಿನ ಆಳಕ್ಕೆ ಕರೆದೊಯ್ಯುತ್ತದೆ, ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೊರಡುವ ನಾಯಕನ ಕಥೆಯೇ ಗ್ರೀನ್. ರಾಜ್ ವಿಜಯ್ ಹಾಗೂ ಬಿ.ಎನ್ ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ನಿರ್ದೇಶನದ ವಿಭಿನ್ನ ಕಥಾಹಂದರ ಹೊಂದಿರುವ "ಗ್ರೀನ್" ಚಿತ್ರ ತೆರೆಗೆ ಬರಲು ಅಣಿಯಾಗಿದೆ.

Titanic Tragedy: ಟೈಟಾನಿಕ್ ದುರಂತ: ಹೊಸ ವಿಚಾರ ಬಹಿರಂಗ ಪಡಿಸಿದ ಸಾಕ್ಷ್ಯಚಿತ್ರ

ಟೈಟಾನಿಕ್ ದುರಂತದ ಹೊಸ ಕಥೆ; ಅಪಘಾತದ ಬಳಿಕ ಏನಾಯಿತು?

ವಿಶ್ವದ ಅತಿದೊಡ್ಡ ದುರಂತಗಳಲ್ಲಿ ಒಂದು ಎಂದೇ ಪರಿಗಣಿಸಲಾಗಿರುವ ಟೈಟಾನಿಕ್ ದುರಂತ ನಡೆದು ನೂರಾರು ವರ್ಷಗಳು ಕಳೆದರೂ ಇಂದಿಗೂ ಅದರ ಕುರಿತಾದ ಹೊಸ ಹೊಸ ಕಥೆಗಳು ಕೇಳಿ ಬರುತ್ತಲೇ ಇವೆ. ಇದಕ್ಕೆ ಕಾರಣ ಈ ಬಗ್ಗೆ ಇನ್ನೂ ಅಧ್ಯಯನ ಪರಿಪೂರ್ಣಗೊಂಡಿಲ್ಲ. ಹೀಗಾಗಿ ಸಂಶೋಧಕರು ಟೈಟಾನಿಕ್ ಅಪಘಾತದ ಕುರಿತಾದ ನಿಗೂಢವಾದ ಸಂಗತಿಗಳನ್ನು ಬೆಳಕಿಗೆ ತರುತ್ತಲೇ ಇದ್ದಾರೆ. ಈ ಬಾರಿ 113ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಟೈಟಾನಿಕ್ ದುರಂತದ ವಿಶೇಷ ಸಾಕ್ಷ್ಯಚಿತ್ರವನ್ನು ನ್ಯಾಷನಲ್ ಜಿಯಾಗ್ರಫಿಕ್ ಬಿಡುಗಡೆ ಮಾಡಲು ಸಜ್ಜಾಗಿದೆ.

45 Movie: ಬಹು ನಿರೀಕ್ಷಿತ ಮಲ್ಟಿಸ್ಟಾರರ್ ʼ45ʼ ಚಿತ್ರದ ಟೀಸರ್‌ಗೆ ಮೆಚ್ಚುಗೆಯ ಮಹಾಪೂರ; ಆ.15ಕ್ಕೆ ಸಿನಿಮಾ ರಿಲೀಸ್‌

ಮಲ್ಟಿಸ್ಟಾರರ್ ʼ45ʼ ಚಿತ್ರ ಆ.15ಕ್ಕೆ ರಿಲೀಸ್‌; ಟೀಸರ್‌ಗೆ ಭಾರಿ ಮೆಚ್ಚುಗೆ

45 Movie: ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ ಪ್ಯಾನ್ ಇಂಡಿಯಾ ʼ45ʼ ಚಿತ್ರದ ಟೀಸರ್‌ಗೆ ಕನ್ನಡಿಗರು ಮಾತ್ರವಲ್ಲದೆ ಎಲ್ಲಾ ಭಾಷೆಗಳ ಕಲಾಭಿಮಾನಿಗಳು ಫಿದಾ ಆಗಿದ್ದಾರೆ. ಮೆಚ್ಚುಗೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ. ಟೀಸರ್‌ನಲ್ಲೇ ಮೋಡಿ ಮಾಡಿರುವ ಈ ಚಿತ್ರ ಆಗಸ್ಟ್ 15 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

Raj Kumar Death anniversary: ಇಂದು ಡಾ.ರಾಜ್‌ ಪುಣ್ಯತಿಥಿ; ಅಣ್ಣಾವ್ರ ಸಮಾಧಿಗೆ ಕುಟುಂಬಸ್ಥರಿಂದ ವಿಶೇಷ ಪೂಜೆ

ಇಂದು ಡಾ.ರಾಜ್‌ ಕುಮಾರ್‌ 19ನೇ ಪುಣ್ಯತಿಥಿ

Raj Kumar Death anniversary:ನಟ ಡಾ.ರಾಜ್ ಕುಮಾರ್ ಅವರು 2006ರ ಏಪ್ರಿಲ್​​ 12ರಂದು ಬೆಂಗಳೂರಿನಲ್ಲಿ ಕೊನೆಯುಸಿರೆಳೆದರು. ಅಂದು ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಆದ್ರೆ ಅವರ ನೆನಪು ಪ್ರತೀ ಕನ್ನಡಿಗರೆದೆಯಲ್ಲಿ ಅಚ್ಚಳಿಯದೇ ಉಳಿದಿದೆ. ಇಂದಿಗೂ ಕನ್ನಡ ಚಿತ್ರರಂಗದ ಕೀರ್ತಿಯಾಗಿ ಅವರ ನಟಸಾರ್ವಭೌಮನ ಸ್ಮರಣೆಯಾಗುತ್ತಿದೆ. ನಟ ರಾಜ್ ಕುಮಾರ್ ಅವರ ಸಮಾಧಿಗೆ ಕುಟುಂಬಸ್ಥರು ಪೂಜೆ ಸಲ್ಲಿಕೆ ಮಾಡಿದ್ದಾರೆ.

Rashmika Mandanna: ಒಮನ್‌ ಟ್ರಿಪ್‌ನಲ್ಲಿರೋ ರಶ್ಮಿಕಾ ಮತ್ತಷ್ಟು ಫೋಟೋಗಳು ವೈರಲ್‌- ದೇವರಕೊಂಡ ಕ್ಲಿಕ್ಕಿಸಿದ ಫೋಟೋ ಎಂದ ಫ್ಯಾನ್ಸ್‌

ವಿಜಯ್‌ ದೇವರಕೊಂಡ ಕ್ಲಿಕ್ಕಿಸಿದ ಶೇರ್‌ ಮಾಡಿದ ರಶ್ಮಿಕಾ

Rashmika Mandanna: ಬೀಚ್‌, ಸನ್‌ಸೆಟ್‌, ನೇಚರ್‌ ಅನ್ನು ಅತಿ ಹೆಚ್ಚು ಇಷ್ಟ ಪಡುವ ರಶ್ಮಿಕಾ ಮಂದಣ್ಣ ಅವರ ಈಗ ವೈರಲಾಗುತ್ತಿರೋ ಈ ಫೋಟೋಗಳನ್ನು ನೋಡಿ ಫ್ಯಾನ್ಸ್‌ ದಿಲ್‌ ಖುಷ್‌ ಆಗಿದ್ದಾರೆ. ಇನ್ನು ಈ ಫೋಟೋಗಳನ್ನು ವಿಜಯ್ ದೇವರಕೊಂಡ ಅವರೇ ಕ್ಲಿಕ್ ಮಾಡಿದ್ದಾರೆ ಎಂದು ಇವರಿಬ್ಬರ ಫ್ಯಾನ್ಸ್ ಊಹಿಸಿದ್ದಾರೆ. ಈ ಫೊಟೋದಲ್ಲಿ ರಶ್ಮಿಕಾ, ಎತ್ತರದ ಪ್ರದೇಶದಲ್ಲಿ ಕುಳಿತು ಒಮನ್‌ನ ಸನ್‌ಸೆಟ್‌ ಎಂಜಾಯ್‌ ಮಾಡುತ್ತಿರುವುದನ್ನು ಕಾಣಬಹುದಾಗಿದೆ.