ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

Maatrubhumi Movie: ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ? ಇಲ್ಲಿದೆ ಕಾರಣ

ಸಲ್ಮಾನ್ ಖಾನ್ `ಮಾತೃಭೂಮಿ' ಬಿಡುಗಡೆ ವಿಳಂಬ ಆಗ್ತಾ ಇರೋದು ಏಕೆ?

Maatrubhumi Movie: ಗಲ್ವಾನ್ ಕದನ ಎಂದು ಕರೆಯಲ್ಪಡುತ್ತಿದ್ದ ಸಲ್ಮಾನ್ ಖಾನ್ ಅವರ 'ಮಾತೃಭೂಮಿ' ಚಿತ್ರದ ನಿರ್ಮಾಪಕರು ಅನಿರೀಕ್ಷಿತ ಹಿನ್ನಡೆಯನ್ನು ಎದುರಿಸುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಟ-ಗಾಯಕ ಪ್ರಶಾಂತ್ ತಮಾಂಗ್ ಅವರ ನಿಧನದ ನಂತರ ಚಿತ್ರದ ಬಿಡುಗಡೆ ವಿಳಂಬವಾಗಿದೆ ಎಂದು ವರದಿಯಾಗಿದೆ . ಈ ಚಿತ್ರವು ಏಪ್ರಿಲ್ ಆರಂಭದಲ್ಲಿ ಚಿತ್ರಮಂದಿರಗಳಿಗೆ ಆಗಮಿಸುವ ನಿರೀಕ್ಷೆಯಿತ್ತು. ಆದಾಗ್ಯೂ, ಬಾಕಿ ಇರುವ ಚಿತ್ರೀಕರಣದ ಅವಶ್ಯಕತೆಗಳು ಮತ್ತು ಅಗತ್ಯ ಸ್ಕ್ರಿಪ್ಟ್ ಹೊಂದಾಣಿಕೆಗಳಿಂದಾಗಿ ಸಿನಿಮಾ ರಿಲೀಸ್‌ ಮುಂದೂಡಲಾಗಿದೆ ಎಂದು ವರದಿಯಾಗಿದೆ.

Dhurandhar 2: ಬೇರೆ ಹೀರೋಗಳೆಲ್ಲ ಜೋಕರ್​ಗಳು! ರಣವೀರ್ ಸಿಂಗ್‌ ಹೊಗಳಿ ಆರ್​ಜಿವಿ ಹೇಳಿದ್ದೇನು?

ಬೇರೆ ಹೀರೋಗಳೆಲ್ಲ ಜೋಕರ್​ಗಳು! ರಣವೀರ್ ಹೊಗಳಿ RGV ಹೇಳಿದ್ದೇನು?

Dhurandhar 2: ಧುರಂಧರ್ 2 ಚಿತ್ರ ಬಿಡುಗಡೆಯಾದ ಒಂದು ದಿನದ ನಂತರ , ಚಲನಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಸಾಮಾಜಿಕ ಮಾಧ್ಯಮದಲ್ಲಿ ದೀರ್ಘ ಟಿಪ್ಪಣಿಯನ್ನು ಹಂಚಿಕೊಂಡರು. ಸಿನಿಮಾವನ್ನು ಶ್ಲಾಘಿಸಿದರು. ಇದು ಭಾರತೀಯ ಚಿತ್ರರಂಗಕ್ಕೆ ಒಂದು ಮಹತ್ವದ ತಿರುವು ಎಂದು ಕರೆದರು. ಈ ಸಿನಿಮಾ ಮೂಲಕ ರಣವೀರ್ ಸಿಂಗ್ ಅವರು ಎಂದಿಗೂ ಕಷ್ಟಪಡದ ಹೀರೋಗಳನ್ನು ಕೊಂದು ಹಾಕಿದ್ದಾರೆ. ಅಂತಹ ಹಳೇ ಮಾದರಿಯ ಹೀರೋಗಳ ಹೆಣದ ಮೇಲೆ, ಅವರು ಒಬ್ಬ ನೈಜ ಹೀರೋಗೆ ಜನ್ಮ ನೀಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ʻನಂಗ್ಯಾಕೆ ಮದುವೆಗೆ ಕರೀಲಿಲ್ಲʼ ಅಂತ ಕೋಪಗೊಂಡಿದ್ದ ಪುಟಾಣಿ ಅಭಿಮಾನಿಯನ್ನು ಮನೆಗೆ ಆಹ್ವಾನಿಸಿ ಸತ್ಕರಿಸಿದ ರಶ್ಮಿಕಾ - ವಿಜಯ್‌ ದೇವರಕೊಂಡ

ಮುನಿಸಿಕೊಂಡಿದ್ದ ಪುಟಾಣಿ ಅಭಿಮಾನಿಗೆ ವಿಜಯ್-ರಶ್ಮಿಕಾ ನಿವಾಸದಲ್ಲಿ ಔತಣ

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ತಮ್ಮನ್ನು ಕರೆಯಲಿಲ್ಲ ಎಂದು ಮುನಿಸಿಕೊಂಡಿದ್ದ ಪುಟಾಣಿ ಅಭಿಮಾನಿ 'ಲಕ್ಕಿ ತಲ್ಲಿ'ಯನ್ನು ಈ ಜೋಡಿ ಮನೆಗೆ ಆಹ್ವಾನಿಸಿದೆ. ತಮ್ಮ ನಿವಾಸಕ್ಕೆ ಲಕ್ಕಿ ತಲ್ಲಿ ಕುಟುಂಬವನ್ನು ಬರಮಾಡಿಕೊಂಡ ದಂಪತಿ, ಅವರಿಗೆ ಪ್ರೀತಿಯಿಂದ ಊಟ ಬಡಿಸಿ ಸತ್ಕರಿಸಿದ್ದಾರೆ. ಈ ಭೇಟಿಯ ಭಾವುಕ ಕ್ಷಣಗಳನ್ನು ಲಕ್ಕಿ ತಲ್ಲಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾಳೆ.

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ? ಸಲ್ಮಾನ್ ಖಾನ್, ಇಮ್ರಾನ್ ಹಶ್ಮಿ ಅಲ್ವೇ ಅಲ್ಲ

Dhurandhar 2: 'ಧುರಂಧರ್'ನ ಬಡೇ ಸಾಬ್ ಯಾರು ?

Dhurandhar 2: ಕಥೆ, ಸಾಹಸ ಸನ್ನಿವೇಶಗಳು ಮತ್ತು ಹಾಡುಗಳ ಜೊತೆಗೆ, ಸ್ಪೈ ಥ್ರಿಲ್ಲರ್ ಧುರಂಧರ್ ತನ್ನ ತಾರಾಬಳಗಕ್ಕಾಗಿ ಪ್ರಶಂಸೆಯನ್ನು ಪಡೆಯಿತು. ಹಮ್ಜಾ ಪಾತ್ರದಲ್ಲಿ ರಣವೀರ್ ಸಿಂಗ್ ಆಗಿರಲಿ ಅಥವಾ ಮೇಜರ್ ಇಕ್ಬಾಲ್ ಪಾತ್ರದಲ್ಲಿ ಅರ್ಜುನ್ ರಾಂಪಾಲ್ ಆಗಿರಲಿ ಆದಿತ್ಯ ಧರ್ ಅವರ ಚಿತ್ರಕ್ಕೆ ಇಡೀ ತಾರಾಬಳಗವೇ ಸಿನಿಮಾಗೆ ಜೀವ ತುಂಬಿದೆ. ಕೆಲವರು ಸಲ್ಮಾನ್ ಖಾನ್ ಹೆಸರನ್ನು ತೇಲಿ ಬಿಟ್ಟರೆ, ಇನ್ನೂ ಕೆಲವರು ''ಧುರಂಧರ್ 2'' ನಲ್ಲಿ ಬಡೇ ಸಾಬ್ ಪಾತ್ರವನ್ನು ಇಮ್ರಾನ್ ಹಶ್ಮಿ ನಿರ್ವಹಿಸಿದ್ದಾರೆ ಎಂದು ಕಮೆಂಟ್‌ ಮಾಡಿದ್ದರು. ಹಾಗಾದ್ರೆ ಈ ಪಾತ್ರ ನಿರ್ವಹಿಸಿರೋದು ಯಾರು?

ʻಲೆಜೆಂಡರಿʼ ಮಣಿರತ್ನಂ ಜೊತೆ ಕೈಜೋಡಿಸಿದ ನಟ ವಿಜಯ್‌ ಸೇತುಪತಿ; ಈ ಚಿತ್ರಕ್ಕೆ ಸಾಯಿ ಪಲ್ಲವಿ ನಾಯಕಿ

ಮಣಿರತ್ನಂ ಚಿತ್ರಕ್ಕಾಗಿ ಒಂದಾದ ವಿಜಯ್ ಸೇತುಪತಿ - ಸಾಯಿ ಪಲ್ಲವಿ

ದಿಗ್ಗಜ ನಿರ್ದೇಶಕ ಮಣಿರತ್ನಂ ತಮ್ಮ ಮುಂದಿನ ಚಿತ್ರಕ್ಕೆ ವಿಜಯ್ ಸೇತುಪತಿ ಮತ್ತು ಸಾಯಿ ಪಲ್ಲವಿ ಅವರನ್ನು ನಾಯಕ-ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ. ಈ ಹಿಂದೆ 'ಚೆಕ್ಕ ಚಿವಂತ ವಾನಂ' ಚಿತ್ರದಲ್ಲಿ ವಿಜಯ್ ಜೊತೆ ಕೆಲಸ ಮಾಡಿದ್ದ ಮಣಿರತ್ನಂ, ಈಗ ಪೂರ್ಣ ಪ್ರಮಾಣದ ರೊಮ್ಯಾಂಟಿಕ್ ಡ್ರಾಮಾವನ್ನು ಸಿದ್ಧಪಡಿಸುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಮತ್ತು ಮದ್ರಾಸ್ ಟಾಕೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ.

Photos: ಯುಗಾದಿ ಹಬ್ಬದಂದು ರಶ್ಮಿಕಾ ಮಂದಣ್ಣಗೆ ಡಬಲ್‌ ಸಂಭ್ರಮ; ಅತ್ತೆಯೊಂದಿಗೆ ಖುಷಿಯನ್ನು ಹಂಚಿಕೊಂಡಿದ್ದು ಹೀಗೆ!

ಯುಗಾದಿ ಹಬ್ಬಕ್ಕೆ ರಶ್ಮಿಕಾ ಮಂದಣ್ಣಗೆ ಡಬಲ್ ಧಮಾಕ; ಅತ್ತೆಯೊಂದಿಗೆ ಸಂಭ್ರಮ

ನಟಿ ರಶ್ಮಿಕಾ ಮಂದಣ್ಣ ಅವರಿಗೆ ಯುಗಾದಿ ಹಬ್ಬದ ದಿನವೇ ಎರಡು ಡಬಲ್‌ ಸಂಭ್ರಮಗಳು ಸಿಕ್ಕಿವೆ. ಅದೇನಪ್ಪ ಅಂದರೆ, ಅವರು ಕಳೆದ ವರ್ಷ ನಟಿಸಿದ್ದ ʻದಿ ಗರ್ಲ್‌ಫ್ರೆಂಡ್‌ʼ ಸಿನಿಮಾಕ್ಕೆ ಎರಡು ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿವೆ. ಆ ಪ್ರಶಸ್ತಿಗಳು ಸಿಕ್ಕ ಖುಷಿಯಲ್ಲಿ ಅವರು ತಮ್ಮ ಅತ್ತೆ ಮಾಧವಿ ಜೊತೆಗೆ ಸಂಭ್ರಮಿಸಿದ್ದಾರೆ. ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಶ್ಮಿಕಾ, "ನಾನು ಚಿಕ್ಕವಳಿದ್ದಾಗ ಯಾರಾದರೂ ರಾಜ್ಯ ಮಟ್ಟದ ಪ್ರಶಸ್ತಿ ಗೆದ್ದರೆ, ಅವರನ್ನು ಒಬ್ಬ ಸೂಪರ್‌ ಸ್ಟಾರ್‌ ತರಹ ನೋಡುತ್ತಿದ್ದೆ. ಅವರು ಇದನ್ನು ಹೇಗೆ ಸಾಧಿಸಿದರು? ಅವರ ದಿನಚರಿ ಹೇಗಿರುತ್ತದೆ? ಅಂತೆಲ್ಲಾ ಆಶ್ಚರ್ಯಪಡುತ್ತಿದ್ದೆ. ನಿನ್ನೆ ಸಂಜೆ ಅಂತಹದ್ದೇ ಒಂದು ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದು ನನಗೆ ತುಂಬಾ ವಿಶೇಷ ಅನಿಸುತ್ತಿದೆ" ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.

ಹೆಸರು ಬದಲಾಯಿಸಿಕೊಂಡ ಉದಯ ಟಿವಿಯಲ್ಲಿ ಬರ್ತಿದೆ ಹೊಸ ಧಾರಾವಾಹಿ ʻಮೂಗುತಿ ಮಲ್ಲಿʼ; ನಾಯಕ-ನಾಯಕಿ ಯಾರು?

ಹೆಸರು ಬದಲಾಯಿಸಿಕೊಂಡ ಉದಯ ಟಿವಿ; ಯುಗಾದಿ ಕೊಡುಗೆಯಾಗಿ ಮೂಗುತಿ ಮಲ್ಲಿ

ಮೂರು ದಶಕಗಳ ಇತಿಹಾಸವಿರುವ ಉದಯ ಟಿವಿ ಈಗ 'ಸನ್ ಉದಯ' ಎಂಬ ಹೊಸ ಹೆಸರಿನೊಂದಿಗೆ ಮರುನಾಮಕರಣಗೊಂಡಿದೆ. ಈ ಹೊಸ ಪಯಣದ ಮೊದಲ ಹೆಜ್ಜೆಯಾಗಿ 'ಮೂಗುತಿ ಮಲ್ಲಿ' ಎಂಬ ವಿಭಿನ್ನ ಪ್ರೇಮಕಥೆಯ ಧಾರಾವಾಹಿ ಮಾರ್ಚ್ 23ರ ಸೋಮವಾರದಿಂದ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

ʻಕೆಡಿʼ ಚಿತ್ರದ ಹಾಡಿನಲ್ಲಿ ಬಿಂದಾಸ್‌ ಆಗಿ ಸ್ಪೆಪ್‌ ಹಾಕಿದ್ದ ನಟಿ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ

'ಕೆಡಿ' ಹಾಡಿನ ವಿವಾದ: ನಟಿ ನೋರಾ ಫತೇಹಿ ವಿರುದ್ಧ 'ಫತ್ವಾ' ಜಾರಿ!

'ಕೆಡಿ' ಚಿತ್ರದ "ಸರ್ಸೆ ಸರ್ಸೆ ನಿನ್ನ ಸೆರಗ ಸರ್ಸೆ" ಹಾಡಿನಲ್ಲಿನ ಅಸಭ್ಯ ನೃತ್ಯ ಮತ್ತು ಸಾಹಿತ್ಯವನ್ನು ಖಂಡಿಸಿ ಉತ್ತರ ಪ್ರದೇಶದ ಅಲಿಗಢ ಮೂಲದ ಧಾರ್ಮಿಕ ಸಂಸ್ಥೆಯು ನಟಿ ನೋರಾ ಫತೇಹಿ ವಿರುದ್ಧ 'ಫತ್ವಾ' ಹೊರಡಿಸಿದೆ. ಇತ್ತ ಸಂಸತ್ತಿನಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹಾಡಿನ ಅಧಿಕೃತ ನಿಷೇಧವನ್ನು ಘೋಷಿಸಿದ್ದರೆ, ರಾಷ್ಟ್ರೀಯ ಮಹಿಳಾ ಆಯೋಗವು ಚಿತ್ರತಂಡಕ್ಕೆ ಸಮನ್ಸ್ ಜಾರಿ ಮಾಡಿದೆ.

ಸೊಸೆ ರಶ್ಮಿಕಾ ಮಂದಣ್ಣ ಮಾತಿಗೆ ಆನಂದಭಾಷ್ಪ ಸುರಿಸಿದ ಅತ್ತೆ ಮಾಧವಿ; ದೇವರಕೊಂಡ ಫ್ಯಾಮಿಲಿಗೆ ಇದು ಸಂತಸದ ಕ್ಷಣ

ʻಮಗಳಾಗಿದ್ದೆ, ಈಗ ಅಧಿಕೃತ ಸೊಸೆʼ; ಅತ್ತೆ ಮಾಧವಿ ಎದುರು ಭಾವುಕರಾದ ರಶ್ಮಿಕಾ

ತೆಲಂಗಾಣ ಸರ್ಕಾರದ 2025ರ ಸಾಲಿನ 'ಗದ್ದರ್' ಅತ್ಯುತ್ತಮ ನಟಿ ಪ್ರಶಸ್ತಿಯನ್ನು ರಶ್ಮಿಕಾ ಮಂದಣ್ಣ ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಅತ್ತೆ ಮಾಧವಿ ದೇವರಕೊಂಡ ಅವರನ್ನು ಉದ್ದೇಶಿಸಿ ರಶ್ಮಿಕಾ ಆಡಿದ ಭಾವುಕ ಮಾತುಗಳು ಎಲ್ಲರ ಗಮನಸೆಳೆದಿವೆ. ಈ ಸುಂದರ ಕ್ಷಣದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ranveer Singh: ʻಧುರಂಧರ್ 2 ಭಾರಿ ನಿರಾಶೆ ಮೂಡಿಸಿದೆ..ʼ ಎಂದ ನಟಿ ರಮ್ಯಾ; ಅದಕ್ಕೆ ನೀಡಿದ ಕಾರಣಗಳು ಇಲ್ಲಿವೆ!

ಧುರಂಧರ್‌ 2 ಚಿತ್ರ ನೋಡಿ ʻಹಣ, ಸಮಯ ಹಾಳು ಮಾಡ್ಕೋಬೇಡಿʼ ಎಂದಿದ್ದೇಕೆ ರಮ್ಯಾ?

ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಚಿತ್ರವನ್ನು ವೀಕ್ಷಿಸಿದ ರಮ್ಯಾ, ಇದೊಂದು "ಸಹನಾ ಶಕ್ತಿಯ ಪರೀಕ್ಷೆ" ಎಂದು ಕರೆದಿದ್ದಾರೆ. ಚಿತ್ರದಲ್ಲಿನ ಮಿತಿಮೀರಿದ ಹಿಂಸಾಚಾರ ಮತ್ತು ಸಾಧಾರಣ ಮೇಕಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಚಿತ್ರಮಂದಿರಕ್ಕೆ ಹೋಗಿ ಹಣ ವ್ಯಯಿಸುವ ಬದಲು ಒಟಿಟಿಯಲ್ಲಿ ನೋಡಲು ಇದು ಸೂಕ್ತ ಎಂದು ವ್ಯಂಗ್ಯವಾಡಿದ್ದಾರೆ.

Rishab Shetty: ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್? ತಮ್ಮ ಬ್ಯಾನರ್‌ನಲ್ಲೇ ಈ ಹೊಸ ಸಿನಿಮಾ!

ಹೊಂಬಾಳೆ ಅನ್​​ಫಾಲೋ ಮಾಡಿದ್ರಾ ರಿಷಬ್?

Hombale Films: ನಟ, ನಿರ್ದೇಶಕ ರಿಷಬ್‌ ಶೆಟ್ಟಿ ತಮ್ಮದೇ ಬ್ಯಾನರ್ ಅಲ್ಲಿ ‘ಚಾಪ್ಟರ್ 2’ ಎಂದು ಘೋಷಣೆ ಮಾಡಿದ್ದಾರೆ. ಯುಗಾದಿ ಹಬ್ಬವನ್ನು ಪತ್ನಿಯೊಂದಿಗೆ ಆಚರಿಸಿದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆದ ಬೆನ್ನಲ್ಲೇ ಈ ಪೋಸ್ಟ್‌ ಬಂದಿದೆ. ರಿಷಬ್ ಶೆಟ್ಟಿ ಯುಗಾದಿ ಹಬ್ಬದ ಶುಭಾಶಯವನ್ನು ಕೋರುತ್ತಾ "ಅಧ್ಯಾಯ ಎರಡು ಇಲ್ಲಿಂದ ಶುರು" ಎಂದು ಬರೆದು ಪೋಸ್ಟ್ ಮಾಡಿದ್ದರು. ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಅನ್ನು ಇನ್‌ಸ್ಟಾದಲ್ಲಿ ಅನ್‌ಫಾಲೋ ಮಾಡಿ, ತಮ್ಮದೇ ಬ್ಯಾನರ್ ಅಡಿಯಲ್ಲಿ "ಚಾಪ್ಟರ್ 2" ಘೋಷಿಸಿದ್ದಾರೆ. ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಆಗುತ್ತಿವೆ.

Dhurandhar 2: ಮೊದಲ ದಿನವೇ ಅದ್ಭುತ ಯಶಸ್ಸು ಕಂಡ ‘ಧುರಂಧರ್ 2’ ಸಿನಿಮಾ; ಫಸ್ಟ್‌ ಡೇ ಕಲೆಕ್ಷನ್‌ ಎಷ್ಟು?

ಮೊದಲ ದಿನವೇ ಅದ್ಭುತ ಯಶಸ್ಸು ಕಂಡ ‘ಧುರಂಧರ್ 2’ ಸಿನಿಮಾ

Ranveer Singh: 'ಧುರಂಧರ್‌: ದಿ ರಿವೆಂಜ್' ಘೋಷಣೆಯಾದ ದಿನವೇ ನಿರೀಕ್ಷೆಗಳು ಹೆಚ್ಚಾಗಿದ್ದವು. ರಣವೀರ್ ಸಿಂಗ್ ನಾಯಕನಾಗಿ ನಟಿಸಿದ ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಆ ನಿರೀಕ್ಷೆಗಳನ್ನು ಪೂರೈಸುವುದಲ್ಲದೆ, ಇನ್ನೂ ಹೆಚ್ಚಿನದನ್ನು, ನೀಡಿತು. ಬಾಕ್ಸ್ ಆಫೀಸ್ ಅಂಕಿಅಂಶಗಳು ಅದಕ್ಕೆ ಪುರಾವೆಯಾಗಿ ನಿಂತಿವೆ. ಭಾರತದಾದ್ಯಂತ ಬಹು ಭಾಷೆಗಳಲ್ಲಿ ಬಿಡುಗಡೆಯಾದ ' ಧುರಂಧರ್‌: ದಿ ರಿವೆಂಜ್' ಮಾರ್ಚ್ 19, 2026 ರಂದು ಶುಕ್ರವಾರ 100 ಕೋಟಿ ರೂ.ಗಳಿಗೂ ಹೆಚ್ಚು ಗಳಿಸಿದೆ ಎಂದು ವರದಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಅದರ ಒಟ್ಟು ಗಳಿಕೆ 150 ಕೋಟಿ ರೂ.ಗಳಿಗೆ ಹತ್ತಿರವಾಗಿದೆ ಎಂದು ವರದಿಯಾಗಿದೆ.

Rashmika Mandanna: ಆಗ ಮಗಳಾಗಿ,ಈಗ ಸೊಸೆಯಾಗಿ ಪ್ರೀತಿ ನೀಡುತ್ತಿದ್ದಾರೆ! ರಶ್ಮಿಕಾ ಭಾವುಕ

ಆಗ ಮಗಳಾಗಿ,ಈಗ ಸೊಸೆಯಾಗಿ ಪ್ರೀತಿ ನೀಡುತ್ತಿದ್ದಾರೆ! ರಶ್ಮಿಕಾ ಭಾವುಕ

Rashmika: ತೆಲಂಗಾಣ ಗದ್ದರ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವು ಮಾರ್ಚ್ 19 ರಂದು ಹೈದರಾಬಾದ್ ಹೈಟೆಕ್ಸ್‌ನಲ್ಲಿ ಯುಗಾದಿಯ ಸಂದರ್ಭದಲ್ಲಿ ಅದ್ಧೂರಿಯಾಗಿ ನಡೆಯಿತು. 2025 ರ ವರ್ಷದ ಗದ್ದರ್ ಪ್ರಶಸ್ತಿಗಳನ್ನು ಇತ್ತೀಚೆಗೆ ಘೋಷಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು, ಚಲನಚಿತ್ರ ಮತ್ತು ರಾಜಕೀಯ ವ್ಯಕ್ತಿಗಳು ಭಾಗವಹಿಸಿದ್ದರು. ರಶ್ಮಿಕಾ ಮಂದಣ್ಣ ಅವರು ನಟನೆಗೆ ಮೊಟ್ಟ ಮೊದಲ ಬಾರಿಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ರಶ್ಮಿಕಾ ಅವರಿಗೆ ತೆಲಂಗಾಣ ಸರ್ಕಾರ ನೀಡುವ ಗದರ್ ಪ್ರಶಸ್ತಿ ಲಭಿಸಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಿ ಭಾವುಕರಾಗಿ ಮಾತನಾಡಿದ್ದಾರೆ.

Ranveer Singh: 'ಧುರಂಧರ್ ಪಾರ್ಟ್‌ 3ʼ ಬರೋದು ನಿಜವೇ? ವೈರಲ್‌ ಆಗುತ್ತಿರುವ ಫೋಟೋ ಹಿಂದಿನ ಅಸಲಿಯತ್ತೇನು?

'ಧುರಂಧರ್ ಪಾರ್ಟ್‌ 3' ಬರಲಿದೆಯಾ? ಹರಿದಾಡ್ತಿರುವ ಸುದ್ದಿ ಅನ್ನೋದು ನಿಜವೇ?

'ಧುರಂಧರ್ ಪಾರ್ಟ್‌ 3ʼ ಸಿನಿಮಾದ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. 'ಧುರಂಧರ್ 2' ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಬೆನ್ನಲ್ಲೇ, ಜೂನ್ 14ರಂದು 'ಧುರಂಧರ್: ದಿ ಫೈನಲ್ ಚಾಪ್ಟರ್' ಬಿಡುಗಡೆಯಾಗಲಿದೆ ಎಂಬ ಪೋಸ್ಟ್ ವೈರಲ್ ಆಗುತ್ತಿದೆ. ಈ ಸಿನಿಮಾ ಬರೋದು ನಿಜವೇ?

ʻಕೆಡಿʼ ಸಿನಿಮಾ ಹಾಡಿನ ವಿವಾದ; ʻಜೋಗಿʼ ಪ್ರೇಮ್​​- ನೋರಾ ಫತೇಹಿಗೆ ನೊಟೀಸ್ ನೀಡಿದ ರಾಷ್ಟ್ರೀಯ ಮಹಿಳಾ ಆಯೋಗ

'ಕೆಡಿ' ಚಿತ್ರತಂಡಕ್ಕೆ ರಾಷ್ಟ್ರೀಯ ಮಹಿಳಾ ಆಯೋಗದ ಶಾಕ್; ಪ್ರೇಮ್‌ಗೆ ನೋಟಿಸ್!

'ಕೆಡಿ' ಚಿತ್ರದ "ಸರ್ಕೆ ಚುನರ್ ತೇರಿ ಸರ್ಕೆ" ಹಿಂದಿ ವರ್ಷನ್‌ ಹಾಡಿನಲ್ಲಿ ಅಶ್ಲೀಲತೆ ಮತ್ತು ಪೋಕ್ಸೋ ಕಾಯ್ದೆಯ ಉಲ್ಲಂಘನೆಯಾಗಿದೆ ಎಂಬ ದೂರಿನಡಿ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ನಿರ್ದೇಶಕ ಪ್ರೇಮ್, ನಟಿ ನೋರಾ ಫತೇಹಿ, ಸಂಜಯ್ ದತ್ ಹಾಗೂ ಇನ್ನಿತರರಿಗೆ ಮಾ. 24ರಂದು ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ.

ಕನ್ನಡ ಸಿನಿಪ್ರಿಯರಿಗೆ ʻಧುರಂದರ್‌ 2ʼ ನಿರ್ದೇಶಕ ಆದಿತ್ಯ ಧರ್‌ ಕ್ಷಮೆ ಕೇಳಿದ್ದೇಕೆ? ಕೊನೇ ಕ್ಷಣದಲ್ಲಿ ಹಿಂಗ್ಯಾಕಾಯ್ತು?

ಕನ್ನಡಿಗರಿಗೆ ಕ್ಷಮೆ ಕೇಳಿದ 'ಧುರಂಧರ್ 2' ನಿರ್ದೇಶಕ ಆದಿತ್ಯ ಧರ್

ಧುರಂಧರ್‌ 2 ಸಿನಿಮಾದ ಕನ್ನಡ ವರ್ಷನ್‌ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದ್ದು, ನಿರ್ದೇಶಕ ಆದಿತ್ಯ ಧರ್ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದಾರೆ. ಮಾರ್ಚ್ 19ರಂದು ಬಿಡುಗಡೆಯಾಗಬೇಕಿದ್ದ ಕನ್ನಡ ಮತ್ತು ಮಲಯಾಳಂ ಆವೃತ್ತಿಯ ಪ್ರದರ್ಶನಗಳು ಅನಿರೀಕ್ಷಿತ ಅಡಚಣೆಯಿಂದಾಗಿ ಮಾರ್ಚ್ 20ಕ್ಕೆ ಮುಂದೂಡಲ್ಪಟ್ಟಿವೆ.

ಬರೀ ಪೇಯ್ಡ್‌ ಪ್ರೀಮಿಯರ್‌ ಶೋಗಳಿಂದಲೇ 50+ ಕೋಟಿ ರೂ. ಬಾಚಿದ ʻಧುರಂಧರ್‌ 2ʼ ಸಿನಿಮಾ; ಎಲ್ಲರಿಗೂ ಈಗ ಮೊದಲ ದಿನದ ಗಳಿಕೆ ಮೇಲೆ ಕಣ್ಣು

ಪ್ರೀಮಿಯರ್‌ ಶೋನಲ್ಲೇ 'ಧುರಂಧರ್ 2' ಸುನಾಮಿ; ಬಾಕ್ಸ್‌ ಆಫೀಸ್‌ ಉಡೀಸ್‌

ಧುರಂಧರ್‌ 2 ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ಇತಿಹಾಸ ಸೃಷ್ಟಿಸಿದೆ. ಮಾರ್ಚ್ 19ರಂದು ಅಧಿಕೃತವಾಗಿ ರಿಲೀಸ್‌ ಆಗೋದಕ್ಕೂ ಮುನ್ನ ನಡೆದ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳಿಂದಲೇ ಈ ಚಿತ್ರಔು 52 ಕೋಟಿ ರೂ. ಬಾಚಿಕೊಂಡಿದೆ. ಕೆಲವು ತಾಂತ್ರಿಕ ಕಾರಣಗಳಿಂದ ದಕ್ಷಿಣ ಭಾರತದ ಭಾಷೆಗಳ ಶೋಗಳು ರದ್ದಾಗಿದ್ದರೂ, ಉತ್ತಮ ಗಳಿಕೆ ಮಾಡುವಲ್ಲಿ ಈ ಸಿನಿಮಾ ಹಿಂದೆ ಬಿದ್ದಿಲ್ಲ!

'ಧುರಂಧರ್ 2' ನೋಡಿ ಅಲ್ಲು ಅರ್ಜುನ್ ಫಿದಾ: ʻರಣವೀರ್ ಸಿಂಗ್ ನಮ್ಮ ದೇಶದ ಹೆಮ್ಮೆʼ ಎಂದ ಐಕಾನ್ ಸ್ಟಾರ್!

ʻಧುರಂಧರ್‌ 2ʼ ನೋಡಿ ಮನಸಾರೆ ಹೊಗಳಿದ ಅಲ್ಲು ಅರ್ಜುನ್‌ - ವಿಜಯ್‌ ದೇವರಕೊಂಡ

'ಧುರಂಧರ್ 2' ಚಿತ್ರವು ಸಿನಿವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ರಣವೀರ್ ಸಿಂಗ್ ಅಭಿನಯದ ಈ ಚಿತ್ರವನ್ನು ವೀಕ್ಷಿಸಿದ ಐಕಾನ್ ಸ್ಟಾರ್ ಅಲ್ಲು ಅರ್ಜುನ್, "ಭಾರತೀಯ ಕಥೆಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೋರಿಸಲಾಗಿದೆ" ಎಂದು ಶ್ಲಾಘಿಸಿದ್ದಾರೆ. ನಟ ವಿಜಯ್ ದೇವರಕೊಂಡ ಕೂಡ ʻರಣವೀರ್ ನಟನೆಯನ್ನು ಸ್ಫೋಟಕʼ ಎಂದು ಬಣ್ಣಿಸಿದ್ದಾರೆ.

Dhurandhar 2 Review: ಆದಿತ್ಯ ಧರ್‌ ಸೃಷ್ಟಿಸಿದ ಧುರಂಧರ್‌ನ ರಿವೆಂಜ್ ಹಾದಿಯಲ್ಲಿ ಬೆಂಕಿಯ ಬೇಲಿಗಳು!

Ranveer Singh: ʻಧುರಂಧರ್‌ 2ʼ ಸಿನಿಮಾ ಹೇಗಿದೆ? ರೇಟಿಂಗ್‌ ಎಷ್ಟು?

Dhurandhar The Revenge Review: ʻಧುರಂಧರ್‌ 2ʼ ಸಿನಿಮಾ ಮೂಲಕ ನಿರ್ದೇಶಕ ಆದಿತ್ಯ ಧರ್ ಮತ್ತೊಂದು ಮಾಸ್ಟರ್‌ಪೀಸ್ ಚಿತ್ರವನ್ನು ನೀಡಿದ್ದಾರೆ. ಭಾರತೀಯ ಸೈನಿಕನಾಗಬೇಕಿದ್ದ ಜಸ್ಕೀರತ್ ಸಿಂಗ್, ಹಮ್ಝಾ ಅಲಿ ಮಝಾರಿಯಾಗಿ ಪಾಕಿಸ್ತಾನದೊಳಗೆ ನುಗ್ಗಿ ಆತಂಕವಾದಿಗಳನ್ನು ಮಟ್ಟಹಾಕುವ ರೋಚಕ ಕಥೆಯೇ ಈ ಸಿನಿಮಾ.

ಅನುಷ್ಕಾ ಶೆಟ್ಟಿ ಮದುವೆ ವದಂತಿಗೆ ಬ್ರೇಕ್: ಸುಳ್ಳು ಸುದ್ದಿ ಹರಡುವವರ ವಿರುದ್ಧ 'ಸ್ವೀಟಿ' ತಂಡ ಗರಂ!

ಮದುವೆ ಸುದ್ದಿಗೆ ನಟಿ ಅನುಷ್ಕಾ ಶೆಟ್ಟಿ ತೀವ್ರ ಅಸಮಾಧಾನ

ನಟಿ ಅನುಷ್ಕಾ ಶೆಟ್ಟಿ ಮದುವೆ ಕುರಿತ ವದಂತಿಗಳ ಬಗ್ಗೆ ಅವರ ತಂಡ ಬೇಸರ ವ್ಯಕ್ತಪಡಿಸಿದೆ. ಬೆಂಗಳೂರು ಉದ್ಯಮಿಯೊಂದಿಗೆ ವಿವಾಹವಾಗಲಿದ್ದಾರೆ ಎಂಬ ಸುದ್ದಿಯನ್ನು ಸಾರಾಸಗಟಾಗಿ ತಿರಸ್ಕರಿಸಿರುವ ಅವರ ತಂಡ, ಮದುವೆ ಎಂಬುದು ಅತ್ಯಂತ ವೈಯಕ್ತಿಕ ವಿಷಯ ಎಂದು ಹೇಳಿದೆ. ಪದೇಪದೇ ವದಂತಿ ಹರಡುವುದು ಖಾಸಗಿತನದ ಮೇಲಿನ ಅತಿಕ್ರಮಣ ಎಂದು ತಂಡವು ಖಂಡಿಸಿದೆ.

Love Mocktail 3 Review: ತಂದೆ - ಮಗಳ ಬಾಂಧವ್ಯದ ಕಥೆಯಲ್ಲಿ ಭಾವನಾತ್ಮಕ ಏರಿಳಿತಗಳು

Darling Krishna: ʻಲವ್‌ ಮಾಕ್ಟೇಲ್‌ 3ʼ ಚಿತ್ರ ಹೇಗಿದೆ? ರೇಟಿಂಗ್‌ ಎಷ್ಟು?

Love Mocktail 3 Kannada Review: ʻಡಾರ್ಲಿಂಗ್ʼ ಕೃಷ್ಣ ಈ ಬಾರಿ ಕೇವಲ ಪ್ರೇಮಕಥೆಗೆ ಸೀಮಿತವಾಗದೆ ತಂದೆ-ಮಗಳ ಭಾವನಾತ್ಮಕ ಸಂಬಂಧವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಪಾರ್ಟ್ 2ರಲ್ಲಿ ಪರಿಚಯವಾದ ಪುಟ್ಟ ಮಗಳ ಸುತ್ತ ಕಥೆ ಸಾಗಲಿದ್ದು, ಈ ಬಾರಿ ಬಾಲನಟಿ ಸಂವೃತಾ ಮತ್ತು ಕೃಷ್ಣ ಅವರ ಜುಗಲ್‌ಬಂದಿ ಇರಲಿದೆ.

Dhurandhar 2: 'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ! ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆ

'ಧುರಂಧರ್‌ 2 ಚಿತ್ರದಲ್ಲಿ ಮೋದಿ ವಿಜಯೋತ್ಸವ ಭಾಷಣ ದೃಶ್ಯ!

PM Narendra Modi: ಆದಿತ್ಯ ಧರ್ ಅವರ ಧುರಂಧರ್ 2 ಚಿತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 2014 ರ ವಿಜಯೋತ್ಸವ ಭಾಷಣವನ್ನು ಪ್ರಮುಖ ದೃಶ್ಯದಲ್ಲಿ ತೋರಿಸಲಾಗಿದೆ. ಇದು ಚರ್ಚೆಗೆ ಗ್ರಾಸವಾಗಿದೆ. ಚಿತ್ರದೊಳಗಿನ ದೂರದರ್ಶನದಲ್ಲಿ ತೋರಿಸಲಾದ ಈ ಕ್ಷಣವು, ವೀಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆಗಳನ್ನು ಪಡೆಯುತ್ತಿದೆ. ಅಧಿಕೃತ ಬಿಡುಗಡೆಗೆ ಮುಂಚಿತವಾಗಿ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರಿ ರಿಲೀಸ್‌ ಪ್ರಾರಂಭಿಸುತ್ತಿದ್ದಂತೆ, ಪ್ರೇಕ್ಷಕರು ಈ ಬಗ್ಗೆ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Dhurandhar 2 Twitter Review: ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ಸಿನಿಮಾ ನೋಡಿದವರು ಏನಂದ್ರು?

ಮಾಸ್ಟರ್ ಪೀಸ್​​ ಪಕ್ಕಾ! ಯಶಸ್ಸು ಖಚಿತ; ಧುರಂಧರ್‌ 2 ನೋಡಿದವರು ಏನಂದ್ರು?

Dhurandhar 2 : ಧುರಂಧರ್ ದಿ ರಿವೆಂಜ್ ಬಾಲಿವುಡ್ ಚಿತ್ರವಾಗಿದ್ದು, ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ನಟಿಸಿದ್ದಾರೆ. ಆದಿತ್ಯ ಧರ್ ಈ ಚಿತ್ರವನ್ನು ಬರೆದು, ನಿರ್ಮಿಸಿ, ನಿರ್ದೇಶಿಸಿದ್ದಾರೆ. ಆಕ್ಷನ್, ಸ್ಪೈ ಥ್ರಿಲ್ಲರ್ ಆಗಿರುವ ಈ ಚಿತ್ರವನ್ನು ಜೀ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ಬ್ಯಾನರ್‌ಗಳ ಅಡಿಯಲ್ಲಿ ಆದಿತ್ಯ ಧರ್, ಲೋಕೇಶ್ ಧರ್ ಮತ್ತು ಜ್ಯೋತಿ ದೇಶಪಾಂಡೆ ನಿರ್ಮಿಸಿದ್ದಾರೆ. ಸಿನಿಮಾ ನೋಡಿದವರು ಧುರಂಧರ್ ದಿ ರಿವೆಂಜ್ ಗೆ ಪಾಸಿಟಿವ್ ರೇಟಿಂಗ್ಕೂ ಡ ನೀಡಿದ್ದಾರೆ. ಹಾಗಾದರೆ ಧುರಂಧರ್ ಭಾಗ 2 ಹೇಗಿದೆ ಮತ್ತು ಅದರ ರೇಟಿಂಗ್ ಏನು ಎಂದು ತಿಳಿದುಕೊಳ್ಳೋಣ.

Jogi Prem: ನನ್ನ ಉದ್ದೇಶ ಅದಾಗಿರಲಿಲ್ಲ, ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್

ನೋರಾ ಮಾತಾಡಿದ್ದು ಸರಿಯಲ್ಲ; ಜೋಗಿ ಪ್ರೇಮ್

KD movie: ಜೋಗಿ ಪ್ರೇಮ್‌ ಅವರ ʻಕೆಡಿʼ ಚಿತ್ರದ ಐಟಂ ಸಾಂಗ್‌ ವಿವಾದ ಸದ್ಯಕ್ಕಂತೂ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಹಾಡಿನಲ್ಲಿ ಅಶ್ಲೀಲ ಸಾಹಿತ್ಯ ಇದೆ ಎಂದು ಹಿಂದಿ ವರ್ಷನ್‌ ಅನ್ನು ತೆಗೆದು ಹಾಕಲಾಗಿದೆ. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಹಾಡಿನ ಕುರಿತ ಚರ್ಚೆಗೆ ಬ್ರೇಕ್‌ ಬಿದ್ದಿಲ್ಲ. ಅತ್ತ ಹಾಡಿನಲ್ಲಿ ಡ್ಯಾನ್ಸ್‌ ಮಾಡಿರುವ ನೋರಾ ಫತೇಹಿ ಕೂಡ ಪ್ರೇಮ್‌ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಾಡನ್ನು ನಿಷೇಧ ಮಾಡಿರುವುದಾಗಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಲೋಕಸಭೆಯಲ್ಲಿ ಹೇಳಿದ್ದಾರೆ. ಇದೀಗ ಹಾಡು ಬರೆದ ಪ್ರೇಮ್ ಸಾಮಾಜಿಕ ಜಾಲತಾಣದ ಮೂಲಕ ಹಾಡಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Loading...