ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

ದರ್ಶನ್‌ಗೆ ಪರಪ್ಪನ ಅಗ್ರಹಾರದಲ್ಲಿ ಸಹ ಕೈದಿಗಳಿಂದ ನಿಂದನೆ, ಬೆದರಿಕೆ! ಜಾಮೀನು ಅರ್ಜಿಯಲ್ಲಿ ನೋವು ತೋಡಿಕೊಂಡ ದಾಸ

ದರ್ಶನ್‌ಗೆ ಸಹ ಕೈದಿಗಳಿಂದ ನಿಂದನೆ; ಜಾಮೀನು ಅರ್ಜಿಯಲ್ಲಿ ದಾಸನ ಅಳಲು

ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ತಮಗೆ ಸಹ ಕೈದಿಗಳಿಂದ ನಿಂದನೆ ಮತ್ತು ಜೀವ ಬೆದರಿಕೆ ಉಂಟಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ನೋವು ತೋಡಿಕೊಂಡಿದ್ದಾರೆ. ಮೂಲಭೂತ ಸೌಕರ್ಯಗಳಲ್ಲಿ ತಾರತಮ್ಯ ಹಾಗೂ ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಅವರು ಜಾಮೀನು ಕೋರಿದ್ದಾರೆ.

Shah Rukh Khan: ʼಕಿಂಗ್ʼ ಮೂವಿಯ ಈ ದೃಶ್ಯ ಲೀಕ್‌! ಶಾರುಖ್‌ರನ್ನು ಹೊಗಳಿದ್ದೇಕೆ ಫ್ಯಾನ್ಸ್‌?

ʼಕಿಂಗ್ʼ ಮೂವಿಯ ಈ ದೃಶ್ಯ ಲೀಕ್‌! ಶಾರುಖ್‌ರನ್ನು ಹೊಗಳಿದ್ದೇಕೆ ಫ್ಯಾನ್ಸ್‌?

Shah Rukh Khan: ಸೆಟ್‌ಗಳಿಂದ ಕಾಣಿಸಿಕೊಂಡ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದೀಗ ತಂಡ ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣದಲ್ಲಿದೆ. ಈ ಕ್ಲಿಪ್ ಶಾರುಖ್‌ ಹಾಗೂ ದೀಪಿಕಾ ಅವರ ನಡುವಿನ ಮಧುರ ಕ್ಷಣವನ್ನು ತೋರಿಸುವಂತಿದೆ. ಇತ್ತೀಚೆಗೆ ಪ್ರೆಗ್ನೆಂಟ್‌ ಆಗಿರುವ ವಿಚಾರ ಘೋಷಿಸಿದ ದೀಪಿಕಾಗೆ ಶಾರುಖ್ ಸಹಾಯ ಮಾಡುತ್ತಿರುವುದು ಅಭಿಮಾನಿಗಳನ್ನು ಭಾವುಕರನ್ನಾಗಿಸಿದೆ.

ಕಾನ್ಸ್ ಸಿನಿಮೋತ್ಸವದಲ್ಲಿ ಕೆವಿಎನ್ ಪ್ರೊಡಕ್ಷನ್ ನಿರ್ಮಾಣದ ʻಬಾಲನ್ ದಿ ಬಾಯ್ಸ್ʼ ಪ್ರದರ್ಶನ; ಇದು 'ಮಂಜುಮ್ಮೆಲ್ ಬಾಯ್ಸ್'  ನಿರ್ದೇಶಕರ ಸಿನಿಮಾ

Balan The Boy: ಕಾನ್ಸ್ ಚಿತ್ರೋತ್ಸವದಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಸದ್ದು

'ಕೆವಿಎನ್ ಪ್ರೊಡಕ್ಷನ್ಸ್' ಸಂಸ್ಥೆಯು 79ನೇ ಕಾನ್ಸ್ ಚಲನಚಿತ್ರೋತ್ಸವದಲ್ಲಿ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಈ ನಿರ್ಮಾಣ ಸಂಸ್ಥೆಯ ಮಲಯಾಳಂ ಚಿತ್ರ 'ಬಾಲನ್ ದಿ ಬಾಯ್' ಪ್ರತಿಷ್ಠಿತ ಕಾನ್ಸ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ. ಯಶ್ ಅವರ 'ಟಾಕ್ಸಿಕ್' ಸೇರಿದಂತೆ ಸಾಲು ಸಾಲು ಪ್ಯಾನ್-ಇಂಡಿಯಾ ಚಿತ್ರಗಳ ಮೂಲಕ ಕೆವಿಎನ್ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Thalapathy Vijay: ʻಜನ ನಾಯಗನ್‌ʼ-ಅಮೇಜಾನ್‌ ಪ್ರೈಮ್‌ OTT ಡೀಲ್‌ ಕ್ಯಾನ್ಸಲ್;‌ ನಿರ್ಮಾಪಕರಿಗೆ ಹೊಸ ಆಫರ್ ಕೊಟ್ಟ ಜೀ ಸ್ಟುಡಿಯೋಸ್‌

ʻಜನ ನಾಯಗನ್‌ʼ ಸಿನಿಮಾ ನಿರ್ಮಾಪಕರಿಗೆ ಬಂತು ಹೊಸ ಓಟಿಟಿ ಆಫರ್!

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರದ 120 ಕೋಟಿ ರೂ.ಗಳ ಅಮೇಜಾನ್ ಪ್ರೈಮ್ ಓಟಿಟಿ ಒಪ್ಪಂದ ರದ್ದಾಗಿದ್ದ ವಿಚಾರ ಕೆಲ ದಿನಗಳ ಹಿಂದೆ ಕೇಳಿಬಂದಿತ್ತು. ಸೆನ್ಸಾರ್ ವಿಳಂಬದಿಂದ ಸಿನಿಮಾ ಬಿಡುಗಡೆ ತಡವಾಗಿದ್ದೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿತ್ತು. ಇದೀಗ ಮತ್ತೊಂದು ಒಟಿಟಿ ಸಂಸ್ಥೆಯಿಂದ ಹೊಸ ಆಫರ್ ಬಂದಿದೆಯಂತೆ.

Meghana Raj: ಪತಿ ಚಿರಂಜೀವಿ ಸರ್ಜಾ ಕನಸು ಈಡೇರಿಸಿದ ನಟಿ ಮೇಘನಾ ರಾಜ್‌ ! ರಜನಿ ಜೊತೆಗಿನ ಫೋಟೋ ಶೇರ್ ಮಾಡಿದ್ಯಾಕೆ?

ಪತಿ ಚಿರಂಜೀವಿ ಸರ್ಜಾ ಕನಸು ಈಡೇರಿಸಿದ ನಟಿ ಮೇಘನಾ ರಾಜ್‌ !

Meghana Raj: ಚಿರಂಜೀವಿ ಹಾಗೂ ಮೇಘನಾ ರಾಜ್ ಅವರ ವಿವಾಹ ವಾರ್ಷಿಕೋತ್ಸವ ಮೇ 2. ಈ ದಿನದಂದು ಮೇಘನಾ ರಾಜ್ ಪತಿ ಚಿರಂಜೀವಿ ಸರ್ಜಾರನ್ನು ಯಾವುದಾದರೂ ಒಂದು ವಿಷಯವನ್ನಿಟ್ಟುಕೊಂಡು ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. ಮೇಘನಾ ಅವರು ರಜನಿಕಾಂತ್ ಅವರನ್ನು ಭೇಟಿಯಾದ ಚಿತ್ರಗಳು ಮತ್ತು ವೀಡಿಯೊಗಳೊಂದಿಗೆ ಒಟ್ಟಿಗೆ ಇರುವ ಹಳೆಯ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಒಂದೇ ವಾರದಲ್ಲಿ ಸಂಜಯ್‌ ದತ್‌ ನಟನೆಯ 3 ಸಿನಿಮಾ ರಿಲೀಸ್‌; 67ನೇ ವಯಸ್ಸಿನಲ್ಲೂ ಹೊಸ ದಾಖಲೆ ಬರೆಯುತ್ತಿರುವ ʻಖಳ್‌ ನಾಯಕ್‌ʼ

ಒಂದೇ ವಾರದಲ್ಲಿ ಮೂರು ಸಿನಿಮಾ ರಿಲೀಸ್; 67ರ ಹರೆಯದಲ್ಲೂ ಸಂಜಯ್ ದತ್ ಹವಾ

ನಟ ಸಂಜಯ್ ದತ್ 67ನೇ ವಯಸ್ಸಿನಲ್ಲೂ ಒಂದೇ ವಾರದಲ್ಲಿ ಮೂರು ಸಿನಿಮಾಗಳನ್ನು ಬಿಡುಗಡೆ ಮಾಡುವ ಮೂಲಕ ಹೊಸ ದಾಖಲೆ ಬರೆಯುತ್ತಿದ್ದಾರೆ. ಏಪ್ರಿಲ್ 30ಕ್ಕೆ ಕನ್ನಡದ 'ಕೆಡಿ', ಮೇ 1ಕ್ಕೆ ಮರಾಠಿಯ 'ರಾಜಾ ಶಿವಾಜಿ' ಮತ್ತು ಮೇ 8ಕ್ಕೆ ಹಿಂದಿಯ 'ಆಖ್ರಿ ಸವಾಲ್' ಚಿತ್ರಗಳು ತೆರೆಕಾಣುತ್ತಿವೆ.

ʻರಾಜಾ ಶಿವಾಜಿʼ ಅಬ್ಬರದ ಎದುರು ಡಲ್‌ ಹೊಡೆದ ಸಾಯಿ ಪಲ್ಲವಿಯ ʻಏಕ್‌ ದಿನ್‌ʼ; ಸೋಲಿನ ಸುಳಿಯಲ್ಲಿ ಆಮಿರ್‌ ಖಾನ್‌ ಮಗ

ʻರಾಜಾ ಶಿವಾಜಿʼ ಅಬ್ಬರಕ್ಕೆ ಆಮಿರ್ ಪುತ್ರನ ʻಏಕ್‌ ದಿನ್ʼ ಸಿನಿಮಾ ಸೈಲೆಂಟ್

ರಿತೇಶ್ ದೇಶ್‌ಮುಖ್ ನಟಿಸಿ ನಿರ್ದೇಶಿಸಿದ ಐತಿಹಾಸಿಕ 'ರಾಜಾ ಶಿವಾಜಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆಯುತ್ತಿದ್ದು, ಎರಡೇ ದಿನಕ್ಕೆ 21.90 ಕೋಟಿ ರೂ. ಗಳಿಸಿದೆ. ಅತ್ತ ಆಮಿರ್ ಖಾನ್ ಪುತ್ರ ಜುನೈದ್ ಖಾನ್ ಮತ್ತು ಸಾಯಿ ಪಲ್ಲವಿ ಅಭಿನಯದ 'ಏಕ್ ದಿನ್' ಸಿನಿಮಾ ಕೇವಲ 2.15 ಕೋಟಿ ಗಳಿಸಿ ಹೀನಾಯ ಕುಸಿತ ಕಂಡಿದೆ.

Yash: ʻದಯವಿಟ್ಟು ನನ್ನ ಆ ಬೋಲ್ಡ್ ಸೀನ್‌ಗಳಿಗೆ ಕತ್ತರಿ ಹಾಕಿ...ʼ; 'ಟಾಕ್ಸಿಕ್' ತಂಡಕ್ಕೆ ಮನವಿ ಮಾಡಿಕೊಂಡ್ರಾ ನಟಿ ಕಿಯಾರಾ ಅಡ್ವಾಣಿ?

ʻಟಾಕ್ಸಿಕ್ʼ ಬೋಲ್ಡ್ ಸೀನ್‌ಗಳಿಗೆ ಕತ್ತರಿ? ಕಿಯಾರಾ ಅಡ್ವಾಣಿ ಮನವಿ ಏನು?

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದಲ್ಲಿನ ಕೆಲವು ಬೋಲ್ಡ್ ಮತ್ತು ಇಂಟಿಮೇಟ್ ದೃಶ್ಯಗಳನ್ನು ತೆಗೆದುಹಾಕುವಂತೆ ನಟಿ ಕಿಯಾರಾ ಅಡ್ವಾಣಿ ನಿರ್ದೇಶಕಿ ಗೀತು ಮೋಹನ್ ದಾಸ್‌ಗೆ ಮನವಿ ಮಾಡಿದ್ದಾರಂತೆ. ಇದು ತಮ್ಮ ಇಮೇಜ್‌ಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಅವರು ಈ ರೀತಿ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆದಿತ್ಯ ರಾಯ್‌ ಕಪೂರ್‌ ಜೊತೆ ಡೇಟಿಂಗ್‌ ಆರಂಭಿಸಿದ ʻಟಾಕ್ಸಿಕ್‌ʼ ಸುಂದರಿ ತಾರಾ ಸುತಾರಿಯಾ; ಹಳೇ ಬಾಯ್‌ಫ್ರೆಂಡ್‌ ಕಥೆ ಏನು?

ಆದಿತ್ಯ ರಾಯ್ ಕಪೂರ್ ಜೊತೆ ʻಟಾಕ್ಸಿಕ್‌ʼ ನಟಿ ತಾರಾ ಸುತಾರಿಯಾ ಹೊಸ ಪ್ರೇಮಾಯಣ

ಬಾಲಿವುಡ್ ಬೆಡಗಿ ತಾರಾ ಸುತಾರಿಯಾ ಮತ್ತು ನಟ ಆದಿತ್ಯ ರಾಯ್ ಕಪೂರ್ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಈಗ ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಈ ಹಿಂದೆ ವೀರ್ ಪಹಾರಿಯಾ ಜೊತೆ ಡೇಟಿಂಗ್ ಮಾಡುತ್ತಿದ್ದ ತಾರಾ, ಅವರೊಂದಿಗೆ ಬ್ರೇಕಪ್ ಮಾಡಿಕೊಂಡು ಈಗ ಆದಿತ್ಯ ರಾಯ್ ಜೊತೆ ಹತ್ತಿರವಾಗಿದ್ದಾರೆ ಎನ್ನಲಾಗಿದೆ.

Vaazha 2 OTT release date: ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಈ ಮೂವಿ ಒಟಿಟಿಗೆ ಎಂಟ್ರಿ; ಸ್ಟ್ರೀಮಿಂಗ್‌ ಎಲ್ಲಿ?

ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಸಂಚಲನ ಮೂಡಿಸಿದ್ದ ಈ ಮೂವಿ ಒಟಿಟಿಗೆ ಎಂಟ್ರಿ!

Vaazha 2 OTT release date: 'ವಾಝಾ 2' ಚಿತ್ರವು ಮೊದಲ ವಾರದಲ್ಲೇ ಭಾರಿ ಸಂಚಲನ ಮೂಡಿಸಿತು, ಸಕಾರಾತ್ಮಕ ವಿಮರ್ಶೆಗಳು ಮತ್ತು ಯುವ ಪ್ರೇಕ್ಷಕರಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸವಿನ್ ಎಸ್ಎ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರವು ಎರಡು ವಾರಗಳಿಗೂ ಹೆಚ್ಚು ಕಾಲ ಬಾಕ್ಸ್ ಆಫೀಸ್‌ನಲ್ಲಿ ಅಜೇಯವಾಗಿ ಗಳಿಕೆ ಮಾಡಿತ್ತು.ಇದೀಗ ಸಿನಿಮಾ ಒಟಿಟಿಗೆ ಎಂಟ್ರಿ ಕೊಡುತ್ತಿದೆ. ಡೇಟ್‌ ಕೂಡ ಅನೌನ್ಸ್‌ ಆಗಿದೆ.

Samantha: ರಾಜ್ ಜೊತೆ ಸಮಂತಾ, ಶೋಭಿತಾ ಜೊತೆ ನಾಗ ಚೈತನ್ಯ; ಒಂದೇ ಇವೆಂಟ್‌ನಲ್ಲಿ ಭಾಗಿ!

ರಾಜ್ ಜೊತೆ ಸಮಂತಾ, ಶೋಭಿತಾ ಜೊತೆ ನಾಗ ಚೈತನ್ಯ; ಒಂದೇ ಇವೆಂಟ್‌ನಲ್ಲಿ ಭಾಗಿ!

Samantha: ಶನಿವಾರ ಹೈದರಾಬಾದ್‌ನಲ್ಲಿ ನಡೆದ ಆರತಕ್ಷತೆಯಲ್ಲಿ ಚಿರಂಜೀವಿ ಮತ್ತು ನಾಗಾರ್ಜುನ ಸೇರಿದಂತೆ ಹಲವಾರು ಟಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಮಾಜಿ ನಟ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಕೂಡ ತಮ್ಮ ಸಂಗಾತಿಗಳಾದ ಶೋಭಿತಾ ಧುಲಿಪಾಲ ಮತ್ತು ರಾಜ್ ನಿಧಿಮೋರು ಅವರೊಂದಿಗೆ ವಿವಾಹದಲ್ಲಿ ಭಾಗವಹಿಸಿದ್ದರು.

Shilpa Shetty : ಶಿಲ್ಪಾ ಶೆಟ್ಟಿಗೆ ಗಂಭೀರ ಗಾಯ: ಕಾಲು ಮೂಳೆ ಮುರಿತ

Shilpa Shetty : ಶಿಲ್ಪಾ ಶೆಟ್ಟಿಗೆ ಗಂಭೀರ ಗಾಯ: ಕಾಲು ಮೂಳೆ ಮುರಿತ

Shilpa Shetty : ರೋಹಿತ್ ಶೆಟ್ಟಿ ಅವರ "ಕಾಪ್ ಯೂನಿವರ್ಸ್" ನಲ್ಲಿ ತಾರಾ ಶೆಟ್ಟಿ ಪಾತ್ರ ನಿರ್ವಹಿಸುವುದು ಶಿಲ್ಪಾಗೆ ಒಂದು ದೊಡ್ಡ ಕನಸಾಗಿತ್ತು. "ಇಂಡಿಯನ್ ಪೊಲೀಸ್ ಫೋರ್ಸ್" ಚಿತ್ರೀಕರಣದ ಸಮಯದಲ್ಲಿ ಅವರಿಗೆ ದೊಡ್ಡ ಅಪಘಾತ ಸಂಭವಿಸಿದೆ. ಚಿತ್ರೀಕರಣದ ವೇಳೆ ನಟಿ ಶಿಲ್ಪಾ ಶೆಟ್ಟಿ ಅವರ ಕಾಲು ಮುರಿದಿತ್ತು. ಮೂರು ತಿಂಗಳು ವೀಲ್‌ಚೇರ್‌ನಲ್ಲಿದ್ದರೂ, ಡ್ಯೂಪ್ ಇಲ್ಲದೆ ಆ್ಯಕ್ಷನ್ ದೃಶ್ಯಗಳನ್ನು ಪೂರ್ಣಗೊಳಿಸುತ್ತಿದ್ದಾರೆ.

Rishab Shetty: ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ; ಉದ್ದೇಶ ಏನು?

Rishab Shetty: ಅಮಿತ್ ಶಾ ಭೇಟಿಯಾದ ರಿಷಬ್ ಶೆಟ್ಟಿ; ಉದ್ದೇಶ ಏನು?

Rishab Shetty: 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದರು.ಶನಿವಾರ, ರಿಷಬ್ ಇನ್ಸ್ಟಾಗ್ರಾಮ್ ನಲ್ಲಿ ಅಮಿತ್ ಶಾ ಅವರೊಂದಿಗಿನ ಭೇಟಿಯ ಚಿತ್ರಗಳನ್ನು ಹಂಚಿಕೊಂಡರು. ರಿಷಬ್ ಶೆಟ್ಟಿ ಅವರು, ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

Vijay Raghavendra: ವಿಜಯ ರಾಘವೇಂದ್ರ `ಶ್ರೀಮತಿ ಸಿಂಧೂರ' ಮೂವಿ; ಟೀಸರ್ ಮತ್ತು ಹಾಡುಗಳು ಬಿಡುಗಡೆ

`ಶ್ರೀಮತಿ ಸಿಂಧೂರ' ಮೂವಿ; ಟೀಸರ್ ಮತ್ತು ಹಾಡುಗಳು ಬಿಡುಗಡೆ

Vijay Raghavendra: ವಿಜಯ ರಾಘವೇಂದ್ರಅಭಿನಯಿಸಿರುವ ’ಶ್ರೀಮತಿ ಸಿಂಧೂರ’ ಚಿತ್ರದ ಟೀಸರ್ ಮತ್ತು ನಾಲ್ಕು ಹಾಡುಗಳ ಬಿಡುಗಡೆ ಕಾರ್ಯಕ್ರಮವು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಕವಿರಾಜ್, ಕೆ.ಕಲ್ಯಾಣ್ ಮತ್ತು ನಿರ್ದೇಶಕರ ಸಾಹಿತ್ಯಕ್ಕೆ ರಾಜೇಶ್‌ರಾಮನಾಥ್ ಗ್ಯಾಪ್ ನಂತರ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಪಿ.ಕೆ.ಹೆಚ್.ದಾಸ್, ಕಾರ್ಯಕಾರಿ ನಿರ್ಮಾಪಕ ಆರ್.ಗಂಗಾಧರ್ ಅವರದಾಗಿದೆ.

Siddharth Anand: ‘ಕಿಂಗ್’ ಚಿತ್ರದ ಫೋಟೋ ಲೀಕ್; ನಿರ್ದೇಶಕ ಗರಂ!

Siddharth Anand: ‘ಕಿಂಗ್’ ಚಿತ್ರದ ಫೋಟೋ ಲೀಕ್; ನಿರ್ದೇಶಕ ಗರಂ!

Siddharth Anand: ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದ ಕಿಂಗ್, ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಅವರೊಂದಿಗೆ ತೆರೆಯ ಮೇಲೆ ಮೊದಲ ಬಾರಿಗೆ ಸಹಯೋಗ ಮಾಡುತ್ತಿದೆ . ‘ಕಿಂಗ್’ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಂದೆ-ಮಗಳು ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ಒಂದಾಗುತ್ತಿರುವುದು ಈ ಚಿತ್ರದ ವಿಶೇಷತೆ.

Nandamuri Balakrishna: ಕೊರಟಾಲ ಶಿವ ಜೊತೆ ನಂದಮೂರಿ ಬಾಲಕೃಷ್ಣ ಹೊಸ ಮೂವಿ ಅನೌನ್ಸ್‌!

ಕೊರಟಾಲ ಶಿವ ಜೊತೆ ನಂದಮೂರಿ ಬಾಲಕೃಷ್ಣ ಹೊಸ ಮೂವಿ ಅನೌನ್ಸ್‌!

Nandamuri Balakrishna: ಜೂನಿಯರ್ ಎನ್ ಟಿ ಆರ್ , ಸೈಫ್ ಅಲಿ ಖಾನ್ ಮತ್ತು ಜಾನ್ವಿ ಕಪೂರ್ ನಟಿಸಿರುವ ದೇವರ: ಭಾಗ 1 , 2024 ರಲ್ಲಿ ಬಿಡುಗಡೆಯಾದಾಗ ನೀರಸ ವಿಮರ್ಶೆಗಳನ್ನು ಪಡೆಯಿತು. ಈ ಚಿತ್ರವು ವಿಶ್ವಾದ್ಯಂತ 428 ಕೋಟಿ ರೂ.ಗಳನ್ನು ಗಳಿಸಿದೆ ಎಂದು ವರದಿಯಾಗಿದೆ. ಜೂನಿಯರ್ ಎನ್ ಟಿ ಆರ್ ಮತ್ತು ನಿರ್ಮಾಪಕ ಸುಧಾಕರ್ ಮಿಕ್ಕಿಲಿನೇನಿ ಅವರ ಇತ್ತೀಚಿನ ಹೇಳಿಕೆಗಳು ಶಿವ ಅವರ ಬಾಲಕೃಷ್ಣ ಅವರ ಹೊಸ ಚಿತ್ರದತ್ತ ಗಮನ ಹರಿಸಿದ್ದರೂ ಸಹ, ಈ ಯೋಜನೆಯನ್ನು ಚರ್ಚೆಯಲ್ಲಿ ಇರಿಸಿಕೊಂಡಿವೆ.

Love Insurance Kompany OTT: ‘ಲವ್ ಇನ್ಶೂರೆನ್ಸ್ ಕಂಪನಿ’ ಈ ಒಟಿಟಿಗೆ ಎಂಟ್ರಿ; ಸ್ಟ್ರೀಮಿಂಗ್‌ ಎಲ್ಲಿ?

‘ಲವ್ ಇನ್ಶೂರೆನ್ಸ್ ಕಂಪನಿ’ ಈ ಒಟಿಟಿಗೆ ಎಂಟ್ರಿ; ಸ್ಟ್ರೀಮಿಂಗ್‌ ಎಲ್ಲಿ?

Love Insurance Kompany OTT: ಈ ಚಿತ್ರವು ಈ ವರ್ಷ ಏಪ್ರಿಲ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಇದು ಈಗ OTT ಮೂಲಕ ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ಸಜ್ಜಾಗಿದೆ. ವಿಘ್ನೇಶ್ ಶಿವನ್ ನಿರ್ದೇಶನದ ಈ ವೈಜ್ಞಾನಿಕ ಕಾಲ್ಪನಿಕ ರೊಮ್ಯಾಂಟಿಕ್‌ ಹಾಸ್ಯ ಚಿತ್ರದಲ್ಲಿ ಪ್ರದೀಪ್ ರಂಗನಾಥನ್ ಮತ್ತು ಕೃತಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Daali Dhananjaya: ಗಂಡು ಮಗುವಿನ ತಂದೆಯಾದ ನಟ ಡಾಲಿ ಧನಂಜಯ್‌; ಮಗುವಿನ ಕ್ಯೂಟ್‌ ಫೋಟೋ ಕಂಡು ಫ್ಯಾನ್ಸ್‌ ಸಂತಸ

Daali Dhananjaya: ಗಂಡು ಮಗುವಿನ ತಂದೆಯಾದ ನಟ ಡಾಲಿ ಧನಂಜಯ್‌

Daali Dhananjaya: ಕೆಲವು ದಿನಗಳ ಹಿಂದೆ ಧನ್ಯತಾ ಅವರು ಬೇಬಿ ಬಂಪ್ ಫೋಟೊಶೂಟ್ ಮಾಡಿಸಿದ್ದು, ಪತಿ ಡಾಲಿ ಸಹ ಪತ್ನಿಯ ಫೋಟೋಶೂಟ್​ನಲ್ಲಿ ಜೊತೆಯಾಗಿದ್ದರು. ಡಾಲಿ ಹಾಗೂ ಧನ್ಯತಾ ಅವರು ಪ್ರಕೃತಿಯ ನಡುವೆ ಫೋಟೊಶೂಟ್ ಮಾಡಿಸಿದ್ದು, ಡಾಲಿ, ಗರ್ಭಿಣಿ ಪತ್ನಿಯ ಕೈ ಹಿಡಿದು ನಡೆಸುತ್ತಿರುವ ಚಿತ್ರ ಸುಂದರವಾಗಿತ್ತು.

Niveditha Gowda: ನಾನು ಮತ್ತು ಚಂದನ್ ದೂರ ಆಗಿರೋ ಕಾರಣ ಇದೇ! ನಿವೇದಿತಾ ಗೌಡ ಹೇಳಿದ್ದೇನು?

ನಾನು ಮತ್ತು ಚಂದನ್ ದೂರ ಆಗಿರೋ ಕಾರಣ ಇದೇ! ನಿವೇದಿತಾ ಗೌಡ ಹೇಳಿದ್ದೇನು?

Chandan Shetty: ಮಾಜಿ ʻಬಿಗ್ ಬಾಸ್‌ʼ ಸ್ಪರ್ಧಿಗಳಾದ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ 2024ರಲ್ಲಿ ಡಿವೋರ್ಸ್‌ ಪಡೆದರು. ಡಿವೋರ್ಸ್‌ ನಂತರ ನಿವೇದಿತಾ ಗೌಡ ಅವರನ್ನೇ ಗುರಿಯಾಗಿಸಿಕೊಂಡು ಹೆಚ್ಚು ಟೀಕೆಗಳು ಕೇಳಿಬರುತ್ತಿವೆ. ಯಾರು ಡಿವೋರ್ಸ್ ಪಡೆಯಬೇಕು ಎನ್ನುವ ಉದ್ದೇಶದಿಂದ ಮದುವೆಯಾಗಲ್ಲ ಎಂದು ಸಂದರ್ಶನವೊಂದರಲ್ಲಿ ನೇರವಾಗಿ ಹೇಳಿದ್ದಾರೆ.

ವರ್ಲ್ಡ್ ವುಮನ್ ಕಾನ್ ಅಜೆಂಡಾ 2026ರಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿರುವ ‘ಸೆಪ್ಟೆಂಬರ್ 21’ ಸಿನಿಮಾ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ

ವರ್ಲ್ಡ್ ವುಮನ್ ಕಾನ್ ಅಜೆಂಡಾ 2026: ಸೆಪ್ಟೆಂಬರ್ 21 ನಿರ್ದೇಶಕಿಗೆ ಆಹ್ವಾನ

ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ 79ನೇ ಕಾನ್ ಚಿತ್ರೋತ್ಸವದ ‘ವರ್ಲ್ಡ್ ವುಮನ್ ಕಾನ್ ಅಜೆಂಡಾ 2026’ ಸಮ್ಮೇಳನಕ್ಕೆ ಆಹ್ವಾನ ಪಡೆಯುವ ಮೂಲಕ ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ. ಈ ವೇದಿಕೆಯಲ್ಲಿ ಅಧಿಕೃತವಾಗಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಮೊದಲ ಮಹಿಳಾ ಸಿನಿಮಾ ನಿರ್ದೇಶಕಿ ಇವರಾಗಿದ್ದಾರೆ.

Salman Khan: ‘ರಾಜಾ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್; ಜೀವಾ ಮಹಾಲಾ ಪಾತ್ರದ ಹಿನ್ನೆಲೆ ಏನು?

‘ರಾಜಾ ಶಿವಾಜಿ’ ಸಿನಿಮಾದಲ್ಲಿ ಸಲ್ಮಾನ್ ಖಾನ್; ಪಾತ್ರದ ಹಿನ್ನೆಲೆ ಏನು?

Salman Khan: ಸಲ್ಮಾನ್ ಖಾನ್ ಅವರ ಸರ್ಪ್ರೈಸ್ ಎಂಟ್ರಿ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ರಾಜಾ ಶಿವಾಜಿಯಲ್ಲಿ ರಿತೇಶ್ ದೇಶಮುಖ್ ಮತ್ತು ಸಲ್ಮಾನ್ ಖಾನ್ ಹೊರತುಪಡಿಸಿ ಹಲವಾರು ಬಾಲಿವುಡ್ ನಟರು ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಪಾತ್ರವರ್ಗದಲ್ಲಿ ಜೆನಿಲಿಯಾ ಡಿಸೋಜಾ, ಸಂಜಯ್ ದತ್, ಅಭಿಷೇಕ್ ಬಚ್ಚನ್ , ಮಹೇಶ್ ಮಂಜ್ರೇಕರ್, ಸಚಿನ್ ಖೇಡೇಕರ್, ಭಾಗ್ಯಶ್ರೀ, ಫರ್ದೀನ್ ಖಾನ್, ಅಮೋಲ್ ಗುಪ್ತೆ, ವಿದ್ಯಾ ಬಾಲನ್ ಮತ್ತು ಬೋಮನ್ ಇರಾನಿ ಮುಂತಾದ ನಟರು ಇದ್ದಾರೆ.

ಮಗಳಿಗೆ ಎಂಥ ಅರ್ಥಪೂರ್ಣ ಹೆಸರನ್ನಿಟ್ಟಿದ್ದಾರೆ ನೋಡಿ ʻನಿನಗಾಗಿʼ ಧಾರಾವಾಹಿ ರಿತ್ವಿಕ್‌ ಮಠದ್;‌ ಇಲ್ಲಿವೆ ಮಗುವಿನ ಮುದ್ದಾದ ಫೊಟೋಗಳು

ʻನಿನಗಾಗಿʼ ನಟ ರಿತ್ವಿಕ್ ಮಠದ್ ಪುತ್ರಿ ಫೋಟೋ ರಿವೀಲ್; ಮಗಳಿಗಿಟ್ಟ ಹೆಸರೇನು?

'ಅನುರೂಪ', 'ಗಿಣಿರಾಮ', ʻನಿನಗಾಗಿʼ ಧಾರಾವಾಹಿಗಳಲ್ಲಿ ನಟಿಸಿ ಫೇಮಸ್‌ ಆಗಿರುವ ರಿತ್ವಿಕ್‌ ಮಠದ್‌ ಅವರು ಈಚೆಗೆ ಮುದ್ದಾದ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಇದೀಗ ತಮ್ಮ ಮಗಳಿಗೆ ಅರ್ಥಪೂರ್ಣ ಹೆಸರನ್ನು ಇಟ್ಟು, ಅದನ್ನು ರಿವೀಲ್‌ ಮಾಡಿದ್ದಾರೆ. ಮಗಳಿಗೆ ಲಿಪಿ ಎಂದು ರಿತ್ವಿಕ್‌ ಹೆಸರನ್ನು ಇಟ್ಟಿದ್ದಾರೆ. "ಲಿಪಿ ಅಂದರೆ ಬರಹ, ನಮ್ಮ ಜೀವನದ ಅತ್ಯಂತ ಸುಂದರ ಕಥೆ.." ಎಂದು ಬರೆದುಕೊಂಡಿದ್ದಾರೆ. ರಿತ್ವಿಕ್‌ ಅವರು 2020ರಲ್ಲಿ ಸುಮನ್‌ ಎಂಬುವವರನ್ನು ಮದುವೆ ಆಗಿದ್ದರು. ರಿತ್ವಿಕ್‌ ಅವರು ಮಗಳ ಮುದ್ದಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Yash: ʻಟಾಕ್ಸಿಕ್‌ʼ ಕೈಬಿಟ್ಟ ರಿಲೀಸ್‌ ಡೇಟ್‌ ಮೇಲೆ ಕಣ್ಣಿಟ್ಟ ರಾಮ್‌‌ ಚರಣ್; ಕೊನೆಗೂ ಘೋಷಣೆ ಆಯ್ತು ʻಪೆದ್ದಿʼ ಬಿಡುಗಡೆ ಡೇಟ್‌

Yash: ʻಟಾಕ್ಸಿಕ್ʼ ಬಿಟ್ಟ ಜಾಗಕ್ಕೆ ರಾಮ್ ಚರಣ್ ʻಪೆದ್ದಿʼ ಎಂಟ್ರಿ

ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಜೂನ್ 4ರಂದು ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಮುಂದೂಡಿಕೆಯಾದ ಕಾರಣ, ಆ ಜಾಗವನ್ನು ರಾಮ್ ಚರಣ್ ಅವರ 'ಪೆದ್ದಿ' ಚಿತ್ರ ಪಡೆದುಕೊಂಡಿದೆ. ನಿರ್ದೇಶಕ ಬುಚ್ಚಿ ಬಾಬು ಸನಾ ಮೊದಲು ಜೂನ್ 25ಕ್ಕೆ ಸಿನಿಮಾ ಬರುತ್ತದೆ ಎಂದು ಹೇಳಿ ಗೊಂದಲ ಸೃಷ್ಟಿಸಿದ್ದರು. ಆದರೆ ಈಗ ಜೂನ್ 4ಕ್ಕೇ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ʻವಸುದೇವ ಕುಟುಂಬʼ ಸೀರಿಯಲ್‌ ನಿರ್ಮಾಪಕರ ವಿರುದ್ಧ ರೊಚ್ಚಿಗೆದ್ದ ʻಬಿಗ್‌ ಬಾಸ್‌ʼ ಖ್ಯಾತಿಯ ನಟಿ ಹಂಸ; ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ʻವಸುದೇವ ಕುಟುಂಬʼ ಧಾರಾವಾಹಿ ನಿರ್ಮಾಪಕರ ವಿರುದ್ಧ ʻಬಿಗ್‌ ಬಾಸ್‌ʼ ಹಂಸ ಗರಂ

‘ವಸುದೇವ ಕುಟುಂಬ’ ಧಾರಾವಾಹಿಯ ನಿರ್ಮಾಪಕ ಕೊರಮಂಗಲ ಅನಿಲ್ ಕಲಾವಿದರಿಗೆ ಸಂಭಾವನೆ ನೀಡದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಬಿಗ್ ಬಾಸ್ ಖ್ಯಾತಿಯ ನಟಿ ಹಂಸ ಈ ಬಗ್ಗೆ ಧ್ವನಿ ಎತ್ತಿದ್ದು, ಶೂಟಿಂಗ್ ವೇಳೆ ಮೂಲಭೂತ ಸೌಕರ್ಯಗಳ ಕೊರತೆ ಮತ್ತು ನಿರ್ಮಾಪಕರ ಉಡಾಫೆ ವರ್ತನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Loading...