ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Jr NTR: ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

ತೂಕ ಇಳಿಸಿಕೊಂಡ ಜೂನಿಯರ್ ಎನ್‌ಟಿಆರ್‌; ಫ್ಯಾನ್ಸ್‌ ಶಾಕ್‌

Jr NTR: ಜೂನಿಯರ್ ಎನ್‌ಟಿಆರ್‌ ಅವರು ಇತ್ತೀಚಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಇದೀಗ ಅವರ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ಅದು ಕೂಡ ಅವರ ತೂಕದ ಬಗ್ಗೆ. ಅನೇಕ ಅಭಿಮಾನಿಗಳು (Fans) ಕಳವಳ ವ್ಯಕ್ತಪಡಿಸಿದ್ದಾರೆ. ತಮ್ಮ ಫಿಟ್‌ನೆಸ್‌ ಬಗ್ಗೆ ವಿಶೇಷ ಗಮನ ಹರಿಸಿದ ಎನ್‌ಟಿಆರ್, 'ಟೆಂಪರ್' ಸಿನಿಮಾ ಸಮಯದಲ್ಲಿ ಪರ್ಫೆಕ್ಟ್ ಫಿಟ್ ಲುಕ್‌ನಲ್ಲಿ (Look) ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದರು. ಆ ಚಿತ್ರದ ನಂತರ ಎನ್‌ಟಿಆರ್ ಸತತ ಯಶಸ್ಸಿನ ಹಾದಿಯಲ್ಲಿದ್ದಾರೆ.

Naga Chaitanya: ಹೊಸ ಹೇರ್ ಸ್ಟೈಲ್, ರಗಡ್‌ ಲುಕ್‌; ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

ನಾಗ ಚೈತನ್ಯ ಸಿಕ್ಸ್ ಪ್ಯಾಕ್ ಫೋಟೋ ವೈರಲ್‌

Naga Chaitanya: ದಕ್ಷಿಣ ಭಾರತದ ಜನಪ್ರಿಯ ನಟ ನಾಗ ಚೈತನ್ಯ ಅವರ ಮುಂಬರುವ ಪೌರಾಣಿಕ ಥ್ರಿಲ್ಲರ್ ಚಿತ್ರ ವೃಷಕರ್ಮ. ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ಮಾಡಿಕೊಂಡು ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿನ ಲುಕ್‌ನ ಫೋಟೋಗಳನ್ನು (Look) ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ.

ʻಜನ ನಾಯಗನ್‌ʼ ಚಿತ್ರಕ್ಕೆ ಎದುರಾಯ್ತು ಮತ್ತೊಂದು ಸಂಕಷ್ಟ; 120 ಕೋಟಿ ರೂ. ಡೀಲ್‌ ಕ್ಯಾನ್ಸಲ್‌ ಆಯ್ತಾ? ಏನಿದು ಹೊಸ ಮ್ಯಾಟರ್?‌

Thalapathy Vijay: 'ಜನ ನಾಯಗನ್' 120 ಕೋಟಿ ರೂ. ಡೀಲ್ ಕ್ಯಾನ್ಸಲ್ ಆಗತ್ತಾ?

ದಳಪತಿ ವಿಜಯ್ ಅಭಿನಯದ ಕೊನೆಯ ಸಿನಿಮಾ 'ಜನ ನಾಯಗನ್'ಗೆ ಸಂಕಷ್ಟಗಳ ಸರಮಾಲೆಯೇ ಮುಂದುವರಿದಿದೆ. ಸೆನ್ಸಾರ್ ಮಂಡಳಿಯ ವಿಳಂಬದಿಂದಾಗಿ ಚಿತ್ರದ ಬಿಡುಗಡೆ ಪದೇ ಪದೇ ಮುಂದೂಡಲ್ಪಡುತ್ತಿದೆ. ಈ ವಿಳಂಬದಿಂದ ಬೇಸತ್ತಿರುವ ಅಮೆಜಾನ್ ಪ್ರೈಮ್ ವಿಡಿಯೋ, ಈ ಹಿಂದೆ ಮಾಡಿಕೊಂಡಿದ್ದ 120 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದವನ್ನು ರದ್ದುಗೊಳಿಸಿದೆ ಎಂಬ ವದಂತಿ ದಟ್ಟವಾಗಿ ಹರಡಿದೆ.

'ಧುರಂಧರ್ 2' ಚಿತ್ರದ ಮೊದಲ ಹಾಡು ರಿಲೀಸ್‌; ಮೋಡಿ ಮಾಡ್ತಿದೆ ಪಂಜಾಬಿ ಶೈಲಿಯ ʻಆರಿ ಆರಿʼ ಸಾಂಗ್, ಜಾದೂ ಮಾಡಿದ ಬಾಂಬೆ ರಾಕರ್ಸ್‌

'ಧುರಂಧರ್ 2' ಹವಾ ಶುರು; 'ಆರಿ ಆರಿ' ಹಾಡಿನಿಂದ ಮೋಡಿದ ʻಬಾಂಬೆ ರಾಕರ್ಸ್‌ʼ

ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೇಂಜ್' ಚಿತ್ರದ ಮೊದಲ ಹಾಡು 'ಆರಿ ಆರಿ' ಗುರುವಾರ (ಮಾ.12) ಬಿಡುಗಡೆಯಾಗಿದ್ದು, ಪಂಜಾಬಿ ಶೈಲಿಯ ಸಂಗೀತದಿಂದ ಎಲ್ಲರ ಗಮನ ಸೆಳೆಯುತ್ತಿದೆ. ಶಾಶ್ವತ್ ಸಚದೇವ್ ಸಂಗೀತ ನೀಡಿದ್ದು, ಜನಪ್ರಿಯ 'ಬಾಂಬೆ ರಾಕರ್ಸ್‌' ತಂಡವು ಈ ಹಾಡಿಗೆ ಕೆಲಸ ಮಾಡಿದೆ.

Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ  ಶವವಾಗಿ ಪತ್ತೆ

Hari Murali: ಬಾಲ ನಟನಾಗಿ ಮಿಂಚಿದ್ದ 27 ವರ್ಷದ ನಟ ಶವವಾಗಿ ಪತ್ತೆ

Hari Murali : ಬಾಲನಟನಾಗಿ ಖ್ಯಾತಿ ಗಳಿಸಿದ್ದ ಮಲಯಾಳಂ ನಟ ಹರಿ ಮುರಳಿ 27 ನೇ ವಯಸ್ಸಿನಲ್ಲಿ ನಿಧನರಾದರು. ಕೇರಳದ ಪಯ್ಯನ್ನೂರಿನ ಅಣ್ಣೂರಿನಲ್ಲಿರುವ ಅವರ ಮನೆಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ. ವರದಿಯ ಪ್ರಕಾರ, ಮುರಳಿಯವರ ಮೃತದೇಹವನ್ನು ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರ ಸಾವಿನ ಸಂದರ್ಭಗಳ ಕುರಿತು ಹೆಚ್ಚಿನ ವಿವರಗಳು ಇನ್ನೂ ಬಹಿರಂಗವಾಗಿಲ್ಲ.

ʻ8 ವರ್ಷಗಳಿಂದ ಮೌನವಾಗಿದ್ದೆ, ಇನ್ಮುಂದೆ ಸುಮ್ಮನಿರಲು ಸಾಧ್ಯವಿಲ್ಲʼ; 24 ಗಂಟೆಗಳ ಡೆಡ್‌ಲೈನ್ ಕೊಟ್ಟ ರಶ್ಮಿಕಾ ಮಂದಣ್ಣ

'8 ವರ್ಷದಿಂದ ಮೌನವಾಗಿದ್ದೆ, ಇನ್ಮುಂದೆ ಸಾಧ್ಯವಿಲ್ಲ'; ರಶ್ಮಿಕಾ ಮಂದಣ್ಣ ಗರಂ

Rashmika Mandanna: ಕಳೆದ ಎಂಟು ವರ್ಷಗಳಿಂದ ತಮ್ಮ ವಿರುದ್ಧ ನಡೆಯುತ್ತಿರುವ ಟ್ರೋಲ್ ಮತ್ತು ಕಿರುಕುಳದ ವಿರುದ್ಧ ನಟಿ ರಶ್ಮಿಕಾ ಮಂದಣ್ಣ ಅಂತಿಮ ಎಚ್ಚರಿಕೆ ನೀಡಿದ್ದಾರೆ. ಖಾಸಗಿ ಸಂಭಾಷಣೆಯನ್ನು ತಿರುಚಿ ವೈರಲ್ ಮಾಡಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಅವರು, ಸುಳ್ಳು ಸುದ್ದಿ ಹರಡುವ ಮಾಧ್ಯಮಗಳು ಮತ್ತು ಇನ್‌ಫ್ಲುಯೆನ್ಸರ್‌ಗಳಿಗೆ 24 ಗಂಟೆಗಳ ಕಾಲಾವಕಾಶ ನೀಡಿದ್ದಾರೆ.

ʻಅವಳು ಹಿಂದೂವಾಗಿಯೇ ಇರುತ್ತಾಳೆ, ನಾನು ಮುಸ್ಲಿಂ ಆಗಿರುತ್ತೇನೆ, ಇಲ್ಲಿ ಲವ್‌ ಜಿಹಾದ್‌ ಪ್ರಶ್ನೆಯೇ ಇಲ್ಲʼ; ಮೊನಾಲಿಸಾ ಪತಿ ಫರ್ಮಾನ್‌ ಖಾನ್ ಸ್ಪಷ್ಟನೆ

ʻಮತಾಂತರವಾಗಿಲ್ಲ, ಧರ್ಮ ಬದಲಿಸಿಲ್ಲʼ; ಮೊನಾಲಿಸಾ ಪತಿ ಫರ್ಮಾನ್‌ ಸ್ಪಷ್ಟನೆ

Monalisa Bhosle Marriage Controversy: ಮಹಾಕುಂಭಮೇಳದಲ್ಲಿ ಗಮನಸೆಳೆದಿದ್ದ ಮೊನಾಲಿಸಾ ಭೋಂಸ್ಲೆ ಮತ್ತು ನಟ ಫರ್ಮಾನ್ ಖಾನ್ ಕೇರಳದಲ್ಲಿ ಅಂತರ್ಧರ್ಮೀಯ ವಿವಾಹವಾಗಿದ್ದು, 'ಲವ್ ಜಿಹಾದ್' ಆರೋಪ ಕೇಳಿಬಂದಿವೆ. ಆದರೆ ಈ ಜೋಡಿ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ..

Darling Krishna: ʻಲವ್‌ ಮಾಕ್‌ಟೇಲ್‌ 3ʼ‌ ಚಿತ್ರದ ಪೇಯ್ಡ್‌ ಪ್ರೀಮಿಯರ್‌ ಶೋಗಳಿಗೆ ಟಿಕೆಟ್ ಬುಕಿಂಗ್‌ ಓಪನ್; ಬೆಂಗಳೂರಿನಲ್ಲಿ ಹೇಗಿದೆ ರೆಸ್ಪಾನ್ಸ್?‌

ʻಲವ್‌ ಮಾಕ್‌ಟೇಲ್‌ 3ʼ‌‌ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋ ಬುಕಿಂಗ್‌ ಓಪನ್

Love Mocktail 3 Paid Premiere Show: `ಡಾರ್ಲಿಂಗ್' ಕೃಷ್ಣ ನಿರ್ದೇಶಿಸಿ, ನಟಿಸಿರುವ ಬಹುನಿರೀಕ್ಷಿತ 'ಲವ್ ಮಾಕ್‌ಟೇಲ್ 3' ಸಿನಿಮಾ ಯುಗಾದಿ ಹಬ್ಬದ ಅಂಗವಾಗಿ ಮಾರ್ಚ್ 19ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ ಮಾರ್ಚ್ 18ರಂದು ಆಯೋಜಿಸಿರುವ ಪೇಯ್ಡ್ ಪ್ರೀಮಿಯರ್ ಶೋಗಳಿಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

MGR ಬಗ್ಗೆ ಕೀಳುಮಟ್ಟದ ಹೇಳಿಕೆ ನೀಡಿದ ತೆಲುಗು ನಟ ರಾಜೇಂದ್ರ ಪ್ರಸಾದ್‌; ಕ್ಲಾಸ್‌ ತೆಗೆದುಕೊಂಡ ತಮಿಳು ನಟ ವಿಶಾಲ್

ಎಂಜಿಆರ್‌ಗೆ ಅವಹೇಳನ: ತೆಲುಗು ನಟ ರಾಜೇಂದ್ರ ಪ್ರಸಾದ್ ವಿರುದ್ಧ ವಿಶಾಲ್ ಗರಂ

ತೆಲುಗಿನ ಹಿರಿಯ ನಟ ರಾಜೇಂದ್ರ ಪ್ರಸಾದ್ ಅವರು ದಿಗ್ಗಜ ನಟ, ತಮಿಳುನಾಡಿನ ಮಾಜಿ ಸಿಎಂ ಎಂ.ಜಿ. ರಾಮಚಂದ್ರನ್ (MGR) ಬಗ್ಗೆ ನೀಡಿದ ಕೀಳುಮಟ್ಟದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿದೆ. ತಮ್ಮ ಮಾತಿನ ಮೂಲಕ ಎಂಜಿಆರ್ ವ್ಯಕ್ತಿತ್ವಕ್ಕೆ ಧಕ್ಕೆ ತಂದಿರುವುದನ್ನು ತಮಿಳು ನಟ ವಿಶಾಲ್ ತೀವ್ರವಾಗಿ ಖಂಡಿಸಿದ್ದಾರೆ.

ʻಆತ್ಮೀಯ ಸ್ನೇಹಿತರು, ನನ್ನ ನಟನೆಯನ್ನು ಮೆಚ್ಚಿ ಪ್ರೋತ್ಸಾಹಿಸಿದವರುʼ; ಪತ್ರಕರ್ತ ಕೆ. ಜೆ. ಕುಮಾರ್‌ ನಿಧನಕ್ಕೆ ಕನ್ನಡದಲ್ಲಿಯೇ ರಜನಿಕಾಂತ್‌ ಸಂತಾಪ

ಪತ್ರಕರ್ತ ಕೆ ಜೆ ಕುಮಾರ್ ನಿಧನಕ್ಕೆ ರಜನಿಕಾಂತ್ ಕಂಬನಿ; ಕನ್ನಡದಲ್ಲಿ ಟ್ವೀಟ್

ಹಿರಿಯ ಪತ್ರಕರ್ತ ಕೆ. ಜೆ. ಕುಮಾರ್ (74) ಬುಧವಾರ ಸಂಜೆ ಮೈಸೂರಿನಲ್ಲಿ ನಿಧನರಾದರು. ಕಳೆದ 5 ದಶಕಗಳಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದ ಕುಮಾರ್, ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಪ್ತ ಗೆಳೆಯರಾಗಿದ್ದರು. ಕುಮಾರ್‌ ನಿಧನಕ್ಕೆ ರಜನಿಕಾಂತ್ ಅವರು ಕನ್ನಡದಲ್ಲಿಯೇ ಟ್ವೀಟ್ ಮಾಡಿ, "ನನ್ನ ಆರಂಭದ ಕಾಲದ ಪ್ರೋತ್ಸಾಹಕರು" ಎಂದು ಕಂಬನಿ ಮಿಡಿದಿದ್ದಾರೆ.

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಕಾಮೆಂಟ್ ಪ್ರಕರಣ: 6 ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆ, ಆರೋಪಿಗಳಲ್ಲಿ ಸುದೀಪ್‌ ಫ್ಯಾನ್ಸ್‌ ಕೂಡ ಇದ್ದಾರೆ!

ದರ್ಶನ್‌ ಪತ್ನಿ ಬಗ್ಗೆ ಅಶ್ಲೀಲ ಕಾಮೆಂಟ್; ಆರೋಪಿಗಳಲ್ಲಿ ಕಿಚ್ಚನ ಫ್ಯಾನ್ಸ್‌

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 45ನೇ ಎಸಿಎಂಎಂ ಕೋರ್ಟ್‌ಗೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರಾದ ಆರು ಮಂದಿಯಲ್ಲಿ ನಟ ಸುದೀಪ್ ಅವರ ಅಭಿಮಾನಿಗಳೂ ಸೇರಿದ್ದು, ನಕಲಿ ಐಡಿಗಳ ಮೂಲಕ ಇವರು ಕಿರುಕುಳ ನೀಡುತ್ತಿದ್ದರು ಎಂಬುದು ಸಾಬೀತಾಗಿದೆ.

ʻಆಪರೇಷನ್ ಡ್ರೀಮ್ ಥಿಯೇಟರ್ 666ʼ ಚಿತ್ರಕ್ಕೆ ಏಜೆಂಟ್ ಕಾವೇರಿಯಾಗಿ ಎಂಟ್ರಿ ಕೊಟ್ಟ ಖ್ಯಾತ ನಟಿ ಅದಿತಿ ಬಾಲನ್

'ಏಜೆಂಟ್ ಕಾವೇರಿ'ಯಾಗಿ ಕರುನಾಡಿಗೆ ಎಂಟ್ರಿ ಕೊಟ್ಟ ತಮಿಳು ನಟಿ ಅದಿತಿ ಬಾಲನ್

'ಆಪರೇಷನ್ ಡ್ರೀಮ್ ಥಿಯೇಟರ್ 666' ಚಿತ್ರದ ಮೂಲಕ ತಮಿಳಿನ ಪ್ರತಿಭಾನ್ವಿತ ನಟಿ ಅದಿತಿ ಬಾಲನ್ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿದ್ದಾರೆ. ಹೇಮಂತ್ ರಾವ್ ನಿರ್ದೇಶನದ ಈ ಸ್ಪೈ ಥ್ರಿಲ್ಲರ್‌ನಲ್ಲಿ ಅದಿತಿ 'ಏಜೆಂಟ್ ಕಾವೇರಿ' ಎಂಬ ಪ್ರಬಲ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಡಾಲಿ ಧನಂಜಯ್ ಅಭಿನಯದ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅದಿತಿ ಬಾಲನ್ ಸೇರ್ಪಡೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Anand Deverakonda: ರಶ್ಮಿಕಾ-ವಿಜಯ್‌ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ

ರಶ್ಮಿಕಾ-ವಿಜಯ್‌ ಜೊತೆ ಭರ್ಜರಿ ಡ್ಯಾನ್ಸ್ ಮಾಡಿದ ಆನಂದ್ ದೇವರಕೊಂಡ

Anand Deverakonda: ನಟ ಆನಂದ್ ದೇವರಕೊಂಡ ಬುಧವಾರ ತಮ್ಮ ಸಹೋದರ ವಿಜಯ್ ದೇವರಕೊಂಡ, ರಶ್ಮಿಕಾ ಮಂದಣ್ಣ ಮತ್ತು ಹಲವಾರು ಸ್ನೇಹಿತರ ಜೊತೆಗೂಡಿ ಡ್ಯಾನ್ಸ್‌ ಮಾಡಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ. ಮಾರ್ಚ್ 11 ರಂದು ಪೋಸ್ಟ್ ಮಾಡಲಾದ ಈ ವೀಡಿಯೊದಲ್ಲಿ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹ ಸಂಭ್ರಮದ ನಡುವೆ ನೃತ್ಯ ಮಾಡುವುದನ್ನು ಕಾಣಬಹುದು.

Rohit Shetty: ಹಾರ್ಪಿಕ್‌ನಿಂದ ಹೊಸ 'ಹಾರ್ಪಿಕ್ ಬಾತ್‌ರೂಮ್ ಅಲ್ಟ್ರಾ ಕ್ಲೀನರ್'ಗೆ ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ

ಬಾಲಿವುಡ್‌ ನಿರ್ದೇಶಕ ರೋಹಿತ್ ಶೆಟ್ಟಿ ಬ್ರ್ಯಾಂಡ್ ಅಂಬಾಸಿಡರ್

ಭಾರತದ ನಗರ ಪ್ರದೇಶದ ಮನೆಗಳಲ್ಲಿ ಹಳದಿ ಕಲೆಗಳು, ಉಪ್ಪುನೀರಿನ ಪಾಚಿಯಂತಹ ಪದರ (Limescale) ಮತ್ತು ತುಕ್ಕಿನಂತಹ ಕಠಿಣ ಕಲೆಗಳು ದೊಡ್ಡ ಸಮಸ್ಯೆಯಾಗಿವೆ. ಕಾಲಾನಂತರ ದಲ್ಲಿ, ಇಂತಹ ಕಲೆಗಳನ್ನು ತೆಗೆಯುವುದು ಅಸಾಧ್ಯವೆಂದು ಗ್ರಾಹಕರು ನಂಬತೊಡಗಿದ್ದಾರೆ ಮತ್ತು ಸೂಕ್ತ ಪರಿಹಾರವಿಲ್ಲದೆ ಡಿಟರ್ಜೆಂಟ್, ಬ್ಲೀಚ್ ಅಥವಾ ಫಿನೈಲ್‌ನಂತಹ ಸಾಮಾನ್ಯ ವಸ್ತುಗಳ ಮೇಲೆ ಅವಲಂಬಿತರಾಗಿದ್ದಾರೆ.

ಬಾಯ್‌ಫ್ರೆಂಡ್‌ ಫರ್ಮಾನ್‌ ಖಾನ್‌ ಜೊತೆ ಕೇರಳದಲ್ಲಿ ಮದುವೆಯಾದ ʻಕುಂಭಮೇಳ ಗರ್ಲ್‌ʼ ಮೊನಾಲಿಸಾ; ʻತಂದೆಯಿಂದ ರಕ್ಷಣೆ ಕೊಡಿʼ ಅಂತ ಪೊಲೀಸರಿಗೆ ಮನವಿ

ಕೇರಳದಲ್ಲಿ ಫರ್ಮಾನ್‌ ಖಾನ್‌ ಜೊತೆ ʻಕುಂಭಮೇಳ ಗರ್ಲ್‌ʼ ಮೊನಾಲಿಸಾ ಮದುವೆ

ʻಕುಂಭಮೇಳ ಗರ್ಲ್‌ʼ ಖ್ಯಾತಿಯ ಮೊನಾಲಿಸಾ ಭೋಂಸ್ಲೆ ಅವರು ಕೇರಳದ ಪೂವಾರ್‌ನಲ್ಲಿ ತಮ್ಮ ಪ್ರಿಯಕರ ಫರ್ಮಾನ್ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ತಂದೆ ವಿಜಯ್ ಸಿಂಗ್ ಅವರ ವಿರೋಧದ ನಡುವೆಯೂ ಪೊಲೀಸರ ರಕ್ಷಣೆ ಪಡೆದ ಮೊನಾಲಿಸಾ, ದೇವಸ್ಥಾನದಲ್ಲಿ ವಿವಾಹವಾದರು.

ʻಅಪ್ಪಟ ಅಪರಂಜಿಯೊಬ್ಬ ನಮ್ಮ ಜೀವನದಲ್ಲಿ ಬಂದಿದ್ದಾನೆʼ; ಗಂಡು ಮಗುವಿಗೆ ತಂದೆಯಾದ ಡೈರೆಕ್ಟರ್‌ ‌ʻಸಿಂಪಲ್ʼ ಸುನಿ

ಸಿಂಪಲ್ ಸುನಿ ಮನೆಗೆ ಬಂದ ಅಪ್ಪಟ ಅಪರಂಜಿ; ಗಂಡು ಮಗುವಿನ ತಂದೆಯಾದ ನಿರ್ದೇಶಕ

ಸ್ಯಾಂಡಲ್‌ವುಡ್‌ನ ಜನಪ್ರಿಯ ನಿರ್ದೇಶಕ 'ಸಿಂಪಲ್' ಸುನಿ ಅವರು ತಂದೆಯಾಗಿದ್ದಾರೆ. ಅವರ ಪತ್ನಿ ಸೌಂದರ್ಯ ಅವರು ಮಾರ್ಚ್ 11ರ ಬುಧವಾರ ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಈ ಸಿಹಿ ಸುದ್ದಿಯನ್ನು ಸುನಿ ಹಂಚಿಕೊಂಡಿದ್ದಾರೆ.

ನಾಲ್ಕೇ ವರ್ಷಕ್ಕೆ ಮುರಿದುಬಿತ್ತು ನಟಿ ಹನ್ಸಿಕಾ ಮೋಟ್ವಾನಿ ದಾಂಪತ್ಯ; ಪತಿಯಿಂದ ಸಿಕ್ಕ ಜೀವನಾಂಶ ಎಷ್ಟು?

ಹನ್ಸಿಕಾ ದಾಂಪತ್ಯಕ್ಕೆ ಅಂತ್ಯ; 4 ವರ್ಷಕ್ಕೆ ಮದುವೆ ಮುರಿದುಬಿದ್ದಿದ್ದು ಏಕೆ?

Hansika Motwani Divorce: ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೈಲ್ ಕಥುರಿಯಾ ಅವರ ಮದುವೆ ನಾಲ್ಕು ವರ್ಷಗಳಲ್ಲೇ ಅಂತ್ಯಗೊಂಡಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಬುಧವಾರ (ಮಾ. 11) ಇವರ ವಿಚ್ಛೇದನ ಅರ್ಜಿಯನ್ನು ಪುರಸ್ಕರಿಸಿದೆ.

'ನನಗೆ ಮದುವೆ, ಲವ್ ಅಂದ್ರೆ ಇಷ್ಟವಿಲ್ಲ...'; 'ಯಜಮಾನ' ಸೀರಿಯಲ್‌ ನಟಿ ಮಧುಶ್ರೀ ಭೈರಪ್ಪ ಹಿಂಗ್ಯಾಕೆ ಹೇಳಿದ್ರು?

'ನಮ್ಮಣ್ಣ ರೌಡಿ ಗೊತ್ತಾ'; ಪ್ರಪೋಸ್‌ ಮಾಡಿದವರಿಗೆ ಹೆದರಿಸುತ್ತಿದ್ದ ಮಧುಶ್ರೀ

Madhushree Byrappa: 'ಯಜಮಾನ' ಧಾರಾವಾಹಿಯ ನಟಿ ಮಧುಶ್ರೀ ಭೈರಪ್ಪ ಅವರು ಇತ್ತೀಚೆಗೆ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ತಮಗೆ ಮದುವೆ ಮತ್ತು ಪ್ರೀತಿಯ ಬಗ್ಗೆ ಆಸಕ್ತಿ ಇಲ್ಲವೆಂದು ಹೇಳಿದ್ದಾರೆ.

ʻಧುರಂಧರ್‌ 2 ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ 2 ಸಾವಿರ ಕೋಟಿ ರೂ. ಕೊಳ್ಳೆ ಹೊಡೆಯಲಿದೆʼ; ಭವಿಷ್ಯ ನುಡಿದ ರಾಮ್‌ ಗೋಪಾಲ್‌ ವರ್ಮಾ

ʻಧುರಂಧರ್‌ 2ʼ ಕಲೆಕ್ಷನ್‌ ಬಗ್ಗೆ ಹೇಳಿ ಸೌತ್ ಸಿನಿಮಾಗಳಿಗೆ ಆರ್‌ಜಿವಿ ಟಾಂಗ್

Dhurandhar 2 Movie: ನಟ ರಣವೀರ್ ಸಿಂಗ್ ಅಭಿನಯದ ʻಧುರಂಧರ್‌ 2ʼ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲಿದ್ದು, ಮಾರ್ಚ್ 18ರಂದೇ ದೇಶಾದ್ಯಂತ 4,000 ಪೇಯ್ಡ್ ಪ್ರೀಮಿಯರ್ ಶೋಗಳು ನಡೆಯಲಿವೆ. ಈ ಚಿತ್ರ 2,000 ಕೋಟಿ ರೂ. ಗಳಿಸಲಿದೆ ಎಂದು ರಾಮ್ ಗೋಪಾಲ್ ವರ್ಮಾ ಭವಿಷ್ಯ ನುಡಿದಿದ್ದಾರೆ.

ʻಕಾವ್ಯ ನನ್ನನ್ನು ಅಪ್ಪಾಜಿ ಅಂತ ಕರೀತಾಳೆ, ನನ್ನ ಮಗಳ ಸ್ಥಾನ ತುಂಬಿದಳು, ನನಗೀಗ ಮೂವರು ಹೆಣ್ಣು ಮಕ್ಕಳುʼ; ʻಕೆಂಡಸಂಪಿಗೆʼ ನಟ ನಾಗರಾಜ್‌ ಕೋಟೆ

ʻನನ್ನ ಮಗಳ ಸ್ಥಾನ ತುಂಬಿದಳುʼ; ಕಾವ್ಯ ಬಗ್ಗೆ ನಟ ನಾಗರಾಜ್ ಕೋಟೆ ಭಾವುಕ ಮಾತು

'ಕೆಂಡಸಂಪಿಗೆ' ಧಾರಾವಾಹಿಯಲ್ಲಿ ಕಾವ್ಯ ಶೈವಗೆ ತಂದೆಯಾಗಿ ನಟಿಸಿದ್ದವರು ನಾಗರಾಜ್ ಕೋಟೆ. ಹೆಣ್ಣು ಮಕ್ಕಳು ಇಲ್ಲದ ನನಗೆ ಕಾವ್ಯ ಮಗಳ ಸ್ಥಾನ ತುಂಬಿದ್ದಾಳೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ ನಾಗರಾಜ್‌ ಕೋಟೆ. "ಸಂಬಂಧಗಳು ಗಟ್ಟಿಯಾಗಲು ಹೊಟ್ಟೆಯಲ್ಲಿ ಹುಟ್ಟಬೇಕಿಲ್ಲ, ಹೃದಯದಲ್ಲಿ ಪ್ರೀತಿ ಇದ್ದರೆ ಸಾಕು" ಎಂದು ಅವರು ಪೋಸ್ಟ್‌ ಹಂಚಿಕೊಂಡಿದ್ದಾರೆ.

ದಿಢೀರ್ ಅಂತ ಮುಕ್ತಾಯಗೊಂಡ 'ಯಜಮಾನ' ಧಾರಾವಾಹಿ; ʻಝಾನ್ಸಿʼ ಪಾತ್ರಧಾರಿ ಮಧುಶ್ರೀ ಭೈರಪ್ಪ ಬೇಸರಕ್ಕೆ ಕಾರಣವೇನು?

ʻಯಜಮಾನ ಅಂತ್ಯವಾಗುವ 2 ದಿನ ಮುಂಚೆ ನಮಗೆ ಗೊತ್ತಾಯ್ತುʼ; ನಟಿ ಮಧುಶ್ರೀ ಬೇಸರ

Yajamana Kannada Serial: ಯಜಮಾನ ಧಾರಾವಾಹಿ ದಿಢೀರನೆ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ನಿರ್ಧಾರದಿಂದ ವೀಕ್ಷಕರು ಮಾತ್ರವಲ್ಲದೆ ಸೀರಿಯಲ್ ತಂಡ ಕೂಡ ಬೇಸರಗೊಂಡಿದೆ. ಧಾರಾವಾಹಿಯಲ್ಲಿ 'ಝಾನ್ಸಿ' ಪಾತ್ರದ ಮೂಲಕ ಮನೆಮಾತಾಗಿದ್ದ ಮಧುಶ್ರೀ ಭೈರಪ್ಪ ಅವರು ವಿಶ್ವವಾಣಿ ಟಿವಿ ಜೊತೆ ಧಾರಾವಾಹಿ ನಿಂತಿದ್ದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

Trisha Krishnan: ಉದ್ಯಮಿ ವರುಣ್ ಮಣಿಯನ್ ಜೊತೆಗಿನ ನಿಶ್ಚಿತಾರ್ಥ ರದ್ದಾಗಿದ್ದೇಕೆ? ತ್ರಿಶಾ ಕೊಟ್ಟ ಕಾರಣ ಏನಾಗಿತ್ತು?

ತ್ರಿಶಾ ನಿಶ್ಚಿತಾರ್ಥ ರದ್ದಾಗಿದ್ದೇಕೆ? ನಟಿ ಕೊಟ್ಟ ಕಾರಣ ಏನಾಗಿತ್ತು?

Trisha Krishnan: ತ್ರಿಶಾ ಕೃಷ್ಣನ್ ತಮಿಳು ಚಿತ್ರರಂಗದ ಅತ್ಯಂತ ಜನಪ್ರಿಯ ನಟಿಯರಲ್ಲಿ ಒಬ್ಬರು. ಯಶಸ್ವಿ ವೃತ್ತಿಜೀವನದ ಜೊತೆಗೆ, ಅವರ ವೈಯಕ್ತಿಕ ಜೀವನವು ಸಾರ್ವಜನಿಕರ ಗಮನವನ್ನು ಸೆಳೆದಿದೆ. ತ್ರಿಶಾ ಕಾರಣಕ್ಕೆ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂದು ಸುದ್ದಿ ಆಗ್ತಿದೆ. ಇತ್ತೀಚೆಗೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದರು. ಅಲ್ಲಿಂದ ಮತ್ತಷ್ಟು ಈ ಸುದ್ದಿ ವೈರಲ್‌ ಆಗಿದೆ.

Yash Toxic movie : ‘ಟಾಕ್ಸಿಕ್’ ಜೊತೆ ಕ್ಲ್ಯಾಶ್ ತಪ್ಪಿಸಲು ರಿಲೀಸ್ ದಿನಾಂಕ ಚೇಂಜ್‌; ಯಾವುದು ಆ ಬಾಲಿವುಡ್ ಸ್ಟಾರ್ ಸಿನಿಮಾ ?

‘ಟಾಕ್ಸಿಕ್’ ಜೊತೆ ಕ್ಲ್ಯಾಶ್ , ರಿಲೀಸ್ ದಿನಾಂಕ ಚೇಂಜ್‌; ಯಾವುದು ಸಿನಿಮಾ ?

Hai Jawani Toh Ishq Hona Hai : ಬಾಲಿವುಡ್ ನಟ ವರುಣ್ ಧವನ್ ಅಭಿನಯದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾದಲ್ಲಿ ವರುಣ್ ಧವನ್, ಮೃಣಾಲ್ ಠಾಕೂರ್ ಮತ್ತು ಪೂಜಾ ಹೆಗ್ಡೆ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ‘ಟಾಕ್ಸಿಕ್’ ಚಿತ್ರತಂಡವು ಏಕಾಏಕಿ ಬಿಡುಗಡೆ ದಿನಾಂಕ ಬದಲಾಯಿಸಿದ್ದರಿಂದ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಸಿನಿಮಾ ತಂಡಕ್ಕೆ ಬೇಸರ ಆಗಿತ್ತು. ಆ ಬಗ್ಗೆ ಮಾಧ್ಯಮಗಳಲ್ಲಿ ವರದಿ ಆಗಿತ್ತು. ಈಗ ಈ ಚಿತ್ರದ ರಿಲೀಸ್ ದಿನಾಂಕ ಬದಲಾಗಿದೆ.

ಅಶ್ಲೀಲ ಕಾಮೆಂಟ್ ಕೇಸ್, ಮುಚ್ಚಿದ ಕೊಠಡಿಯಲ್ಲಿ ವಿಚಾರಣೆ! ʻಈ ಹೋರಾಟ ನನಗಾಗಿ ಅಲ್ಲ, ಎಲ್ಲಾ ಹೆಣ್ಣುಮಕ್ಕಳಿಗಾಗಿ..ʼ ಎಂದ ನಟಿ ರಮ್ಯಾ

ಅಶ್ಲೀಲ ಕಾಮೆಂಟ್ ಕೇಸ್: ಕೋರ್ಟ್‌ಗೆ ಹಾಜರಾದ ನಟಿ ರಮ್ಯಾ ಹೇಳಿದ್ದೇನು?

ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಕಾಮೆಂಟ್ ಮಾಡಿದ್ದ 11 ಆರೋಪಿಗಳ ವಿರುದ್ಧ ನಟಿ ರಮ್ಯಾ ಸಾಕ್ಷ್ಯ ಒದಗಿಸಿದ್ದಾರೆ. ಬೆಂಗಳೂರಿನ 46ನೇ ಸಿಸಿಹೆಚ್ ಕೋರ್ಟ್‌ಗೆ ಹಾಜರಾದ ಅವರು, ಮುಚ್ಚಿದ ಕೊಠಡಿಯಲ್ಲಿ ನ್ಯಾಯಾಧೀಶರ ಮುಂದೆ ಮಾಹಿತಿ ನೀಡಿದರು. "ಈ ಹೋರಾಟವು ಕೇವಲ ತನಗಾಗಿ ಅಲ್ಲ, ಎಲ್ಲಾ ಹೆಣ್ಣುಮಕ್ಕಳ ಸುರಕ್ಷತೆಗಾಗಿ" ಎಂದು ರಮ್ಯಾ ಹೇಳಿದ್ದಾರೆ.

Loading...