ಎಂಜಿಆರ್ ಬಗ್ಗೆ ಕೀಳು ಮಾತು; ಕ್ಷಮೆ ಕೇಳಿದ ರಾಜೇಂದ್ರ ಪ್ರಸಾದ್
actor Rajendra Prasad : ತೆಲುಗು ಚಿತ್ರರಂಗಕ್ಕೆ ನೀಡಿದ ಕೊಡುಗೆಗಳಿಗೆ ಹೆಸರುವಾಸಿಯಾದ ನಟ ರಾಜೇಂದ್ರ ಪ್ರಸಾದ್, ಇತ್ತೀಚೆಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ತಮಿಳುನಾಡಿನ ಖ್ಯಾತ ನಟ-ರಾಜಕಾರಣಿ ಎಂಜಿ ರಾಮಚಂದ್ರನ್ ಅಲಿಯಾಸ್ ಎಂಜಿಆರ್ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜೇಂದ್ರ ಪ್ರಸಾದ್, ಕಾಂತಾರಾವ್ ಅವರ ನಟನೆಯನ್ನು ಕೊಂಡಾಡುತ್ತಾ ಕಾಂತಾರಾವ್ ಮಾಡುತ್ತಿದ್ದ ಸಿನಿಮಾ, ಅವರ ಜನಪದ ಶೈಲಿನ ನಟನೆಯನ್ನು ನೋಡಿ ಎಂಜಿಆರ್ ಅಂಥಹವರೇ ಪ್ಯಾಂಟಿನಲ್ಲಿ ಮೂತ್ರವಿಸರ್ಜನೆ ಮಾಡಿಕೊಳ್ಳುತ್ತಿದ್ದರು ಎಂಬ ಹೇಳಿಕೆ ವಿವಾದವಾಗಿತ್ತು.