ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Urvashi Rautela:   ವೈರಲ್ ಆದ ಎಐ ಇಮೇಜ್​ಗೆ ಊರ್ವಶಿ  ರೌಟೇಲಾ ಗರಂ!

Urvashi Rautela: ವೈರಲ್ ಆದ ಎಐ ಇಮೇಜ್​ಗೆ ಊರ್ವಶಿ ರೌಟೇಲಾ ಗರಂ!

Urvashi Rautela: ಅಭಿಮಾನಿಗಳಿಂದ ನಿರ್ಮಿತವಾದ, ಕೃತಕ ಬುದ್ಧಿಮತ್ತೆ ಆಧಾರಿತ ಚಿತ್ರವೊಂದು ನಟಿಯನ್ನು ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ , ಮಾಧುರಿ ದೀಕ್ಷಿತ್ ಮತ್ತು ದೀಪಿಕಾ ಪಡುಕೋಣೆ ಸೇರಿದಂತೆ ಹಲವಾರು ಪ್ರಮುಖ ಬಾಲಿವುಡ್ ನಟಿಯರೊಂದಿಗೆ ಹೋಲಿಸಿದ್ದಕ್ಕೆ ಅವರು ಈಗ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.

ಮೊದಲ ಬಾರಿಗೆ ಸಿನಿಮಾವೊಂದನ್ನ ನಿರ್ಮಿಸಿ, ನಿರ್ದೇಶಿಸಿದ ಹಿರಿಯ ಹಾಸ್ಯ ನಟ ಮೂಗು ಸುರೇಶ್; ಇದು ತಂದೆ-ಮಗನ ಬಾಂಧವ್ಯದ ಕಥೆ

ʻಕ್ಷಮೆಯಿರಲಿ ತಂದೆʼ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ ನಟ ಮೂಗು ಸುರೇಶ್

ಮೂರು ದಶಕಗಳ ಕಾಲ ಹಾಸ್ಯ ನಟನಾಗಿ ರಂಜಿಸಿದ ಎಂ.ಎನ್. ಸುರೇಶ್ (ಮೂಗು ಸುರೇಶ್), ಇದೀಗ ಚೊಚ್ಚಲ ಬಾರಿಗೆ 'ಕ್ಷಮೆಯಿರಲಿ ತಂದೆ' ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಈ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬೇರೆಯವರ ಹಣವನ್ನು ರಿಸ್ಕ್‌ಗೆ ಒಡ್ಡದೆ, ತಮ್ಮ ಜೀವನದ ಇಡೀ ಗಳಿಕೆಯನ್ನೇ ಹೂಡಿಕೆ ಮಾಡಿ ಈ ಸಿನಿಮಾವನ್ನು ಅವರು ಮಾಡಿದ್ದಾರೆ.

Lokesh Kanagaraj : ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಕರಾಜ್; ಫ್ಯಾನ್ಸ್‌ ಊಹಿಸಿದ್ದೇನು?

Lokesh Kanagaraj : ಸಿಎಂ ದಳಪತಿ ವಿಜಯ್ ಭೇಟಿಯಾದ ಲೋಕೇಶ್ ಕನಕರಾಜ್

Lokesh Kanagaraj : ತಮಿಳಿನ ಸ್ಟಾರ್ ನಿರ್ದೇಶಕ ಲೋಕೇಶ್ ಕನಗರಾಜ್ (Lokesh Kanagaraj) ಅವರು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿಯಾಗಿದ್ದು, ಈ ಕ್ಷಣದ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಲೋಕೇಶ್ ಅವರು ವಿಜಯ್ ಅವರ ಎರಡು ಚಿತ್ರಗಳಾದ ಮಾಸ್ಟರ್ (2021) ಮತ್ತು ಲಿಯೋ (2023) ಗಳನ್ನು ನಿರ್ದೇಶಿಸಿದ್ದಾರೆ. ಎರಡೂ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭಾರಿ ಹಿಟ್ ಆಗಿದ್ದವು.

ʻಮಹಾಲಕ್ಷ್ಮೀ ಮದುವೆʼ ಸೀರಿಯಲ್ ಪ್ರಸಾರಕ್ಕೆ ಮುಹೂರ್ತ ಫಿಕ್ಸ್; ಉದಯ ಟಿವಿಗೆ ನಟಿ ಅಮೂಲ್ಯ ಗೌಡ ಗ್ರ್ಯಾಂಡ್ ಎಂಟ್ರಿ

ʻಮಹಾಲಕ್ಷ್ಮೀ ಮದುವೆ‌ʼ ಧಾರಾವಾಹಿ ಮೂಲಕ ಕಿರುತೆರೆಗೆ ಮರಳಿದ ಅಮೂಲ್ಯ ಗೌಡ

ಮಧ್ಯಮ ವರ್ಗದ ವಿಭಿನ್ನ ಪ್ರೇಮಕಥೆಯುಳ್ಳ ‘ಮಹಾಲಕ್ಷ್ಮೀ ಮದುವೆ’ ಧಾರಾವಾಹಿಯು ಉದಯ ಟಿವಿಯಲ್ಲಿ ಜೂನ್ 1 ರಿಂದ ಸಂಜೆ 6.30ಕ್ಕೆ ಪ್ರಸಾರವಾಗಲಿದೆ. ನಟಿ ಅಮೂಲ್ಯ ಗೌಡ ‘ಮಹಾಲಕ್ಷ್ಮೀ’ ಪಾತ್ರದ ಮೂಲಕ ಕಿರುತೆರೆಗೆ ಭರ್ಜರಿ ಕಂಬ್ಯಾಕ್ ಮಾಡುತ್ತಿದ್ದಾರೆ.

Anik Dutta: ಮನೆಯ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕ ನಿಧನ

ಮನೆಯ ಮಹಡಿಯಿಂದ ಬಿದ್ದು ಖ್ಯಾತ ನಿರ್ದೇಶಕ ನಿಧನ

Anik Dutta: ಕೋಲ್ಕತ್ತಾದ ಹಿಂದುಸ್ತಾನ್ ಪಾರ್ಕ್‌ನಲ್ಲಿರುವ ಅನಿಕ್ ದತ್ತಾ ಅವರ ಬಹುಮಹಡಿ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಅನಿಕ್ ದತ್ತಾ ಅವರ ಸಾವು ಆಕಸ್ಮಿಕವಾಗಿ ಸಂಭವಿಸಿದ್ದೇ ಅಥವಾ ಇದರ ಹಿಂದೆ ಬೇರೆನಾದರೂ ಕಾರಣವಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗರಿಯಾಹತ್ ಪೊಲೀಸ್ ಠಾಣೆಯ ಪೊಲೀಸರು ತನಿಖೆ (Police Investigation) ಆರಂಭಿಸಿದ್ದಾರೆ.

‌BGMI ಗೇಮ್‌ ಜೊತೆ ಕೈಜೋಡಿಸಿದ ʻರಾಕಿಂಗ್‌ ಸ್ಟಾರ್‌ʼ ಯಶ್‌; ಬಿಡುಗಡೆಗೂ ಮುನ್ನವೇ ಗೇಮಿಂಗ್ ಲೋಕದಲ್ಲಿ ‘ಟಾಕ್ಸಿಕ್’ ಅಬ್ಬರ!

BGMI ಅಖಾಡಕ್ಕೆ ʻರಾಯʼ ಎಂಟ್ರಿ; ಯಶ್ ಖಡಕ್ ಧ್ವನಿಗೆ ಗೇಮಿಂಗ್ ಲೋಕ ಶೇಕ್!

ಭಾರತದ ಜನಪ್ರಿಯ ಮೊಬೈಲ್ ಗೇಮ್ ‘ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ’ (BGMI) ʻರಾಕಿಂಗ್ ಸ್ಟಾರ್ʼ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಜೊತೆ ಕೈಜೋಡಿಸಿ ಗೇಮಿಂಗ್ ಇತಿಹಾಸದಲ್ಲೇ ಬೃಹತ್ ಸಹಯೋಗ ಘೋಷಿಸಿದೆ. ಹೊಸ 4.4 ಅಪ್ಡೇಟ್‌ನಲ್ಲಿ 'ಯಶ್ x ಬಿಜಿಎಂಐ: ದಿ ಟಾಕ್ಸಿಕ್ ವಾಯ್ಸ್ ಪ್ಯಾಕ್' ಲಭ್ಯವಾಗಲಿದ್ದು, ಜೂನ್ 2 ರಿಂದ ಆಟಗಾರರು ಯಶ್ ಅವರ ಖಡಕ್ ಕನ್ನಡ ಮತ್ತು ಹಿಂದಿ ಧ್ವನಿಯನ್ನು ಬಳಸಬಹುದು.

3 ವರ್ಷಗಳ ನಂತರ ತೆರೆಮೇಲೆ ಮೋಡಿ ಮಾಡಲು ಬರ್ತಿದ್ದಾರೆ‌ ನಟಿ ಸಮಂತಾ; ಗೆಲುವಿನ ಚಿನ್ನ ತರಲಿದೆಯಾ ʻಮಾ ಇಂಟಿ ಬಂಗಾರಂʼ?

'ಮಾ ಇಂಟಿ ಬಂಗಾರಂ' ಟ್ರೇಲರ್‌ ರಿಲೀಸ್; ಖಳರನ್ನು ಚಚ್ಚಿ ಹಾಕಿದ ಸಮಂತಾ

ನಟಿ ಸಮಂತಾ ಮೂರು ವರ್ಷಗಳ ಸುದೀರ್ಘ ಬಿಡುವಿನ ನಂತರ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರದ ಹೈ-ವೋಲ್ಟೇಜ್ ಆಕ್ಷನ್ ಟ್ರೇಲರ್ ಬಿಡುಗಡೆಯಾಗಿದೆ. ನಂದಿನಿ ರೆಡ್ಡಿ ನಿರ್ದೇಶನದ ಈ ಮಾಸ್ ಫ್ಯಾಮಿಲಿ ಎಂಟರ್‌ಟೇನರ್‌ನಲ್ಲಿ ಸಮಂತಾ ಸೀರೆ ಧರಿಸಿ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ.

ಆರೇ ದಿನಕ್ಕೆ ʻಆಡುಜೀವಿತಂʼ ದಾಖಲೆ ಧೂಳೀಪಟ ಮಾಡಿದ ʻದೃಶ್ಯಂ 3ʼ; ಬಾಕ್ಸ್‌ ಆಫೀಸ್‌ನಲ್ಲಿ ಮೋಹನ್‌ಲಾಲ್ ಮ್ಯಾಜಿಕ್‌!

Mohanlal: 200 ಕೋಟಿ ಕ್ಲಬ್‌ನತ್ತ ಮುನ್ನುಗ್ಗುತ್ತಿದೆ ʻದೃಶ್ಯಂ 3ʼ

ಜೀತು ಜೋಸೆಫ್ ನಿರ್ದೇಶನದ ಹಾಗೂ ಮೋಹನ್‌ಲಾಲ್ ನಟನೆಯ ‘ದೃಶ್ಯಂ 3’ ಸಿನಿಮಾ ವಾರದ ದಿನಗಳಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್‌ ಮಾಡುತ್ತಾ ತನ್ನ ಗೆಲುವಿನ ನಾಗಾಲೋಟವನ್ನು ಮುಂದುವರಿಸಿದೆ. ಕೇವಲ 6 ದಿನಗಳಲ್ಲೇ ವಿಶ್ವಾದ್ಯಂತ 170.32 ಕೋಟಿ ರೂಪಾಯಿಗಳ ಗಡಿಯನ್ನು ದಾಟುವ ಮೂಲಕ ‘ಆಡುಜೀವಿತಂ’ ಚಿತ್ರದ ಲೈಫ್‌ಟೈಮ್ ದಾಖಲೆಯನ್ನು ಹಿಂದಿಕ್ಕಿದೆ.

ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್‌ ಆಗಿದ್ದ ರಜನಿಕಾಂತ್‌ಗೆ ಸಿಗ್ತಿದ್ದ ಸಂಬಳ ಎಷ್ಟು? ವೈರಲ್‌ ಆಯ್ತು 55 ವರ್ಷ ಹಿಂದಿನ ಬಿಟಿಎಸ್‌ ಐಡಿ ಕಾರ್ಡ್‌!

55 ವರ್ಷ ಹಿಂದಿನ ರಜನಿಕಾಂತ್ ಬಸ್‌ ಕಂಡಕ್ಟರ್‌ ಐಡಿ ಕಾರ್ಡ್ ವೈರಲ್!

ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರು 1971ರಲ್ಲಿ ಬೆಂಗಳೂರಿನ ಬಿಟಿಎಸ್ ರೂಟ್ ನಂಬರ್ 10A ಬಸ್‌ನಲ್ಲಿ ಶಿವಾಜಿ ರಾವ್ ಗಾಯಕ್ವಾಡ್ ಹೆಸರಿನಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಕಾಲದ ಐಡಿ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

'ಡಾನ್ 3' ವಿವಾದ: ʻನಟ ರಣವೀರ್ ಸಿಂಗ್‌ರನ್ನು ಬ್ಯಾನ್‌ ಮಾಡಿಲ್ಲ, ಆದ್ರೆ..ʼ; FWICE ಕೊಟ್ಟ ಸ್ಪಷ್ಟನೆ ಏನು?

ʻರಣವೀರ್ ಸಿಂಗ್ ಬ್ಯಾನ್ ಆಗಿಲ್ಲ, ಆದ್ರೆ..ʼ; ಡಾನ್‌ 3 ವಿವಾದಕ್ಕೆ ಟ್ವಿಸ್ಟ್

'ಡಾನ್ 3' ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದಿದ್ದಕ್ಕಾಗಿ ಅವರ ಮೇಲೆ ಚಿತ್ರರಂಗದಿಂದ ನಿಷೇಧ ಹೇರಲಾಗಿದೆ ಎಂಬ ವದಂತಿಗಳನ್ನು FWICE ತಳ್ಳಿಹಾಕಿದೆ. ಸಂಸ್ಥೆಯ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಸ್ಪಷ್ಟನೆ ನೀಡಿ, ತಮಗೆ ಬ್ಯಾನ್ ಮಾಡುವ ಅಧಿಕಾರವಿಲ್ಲದ ಕಾರಣ ಕೇವಲ 'ಅಸಹಕಾರ' ನಿರ್ದೇಶನ ಹೊರಡಿಸಿದ್ದೇವೆ ತಿಳಿಸಿದ್ದಾರೆ.

‘ಲೋ ನವೀನ’ ಸಿನಿಮಾಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚುಗೆ; ದೊಡ್ಮನೆಯಿಂದ ಸಿಕ್ಕ ಪ್ರಶಂಸೆಗೆ ಚಿತ್ರತಂಡ ಫುಲ್ ಖುಷ್!

ʻಲೋ ನವೀನʼ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪ್ರಶಂಸೆ

ವಿಶಿಷ್ಟ ಕಥಾಹಂದರದ ಮೂಲಕ ಗಮನಸೆಳೆಯುತ್ತಿರುವ 'ಲೋ ನವೀನ' ಸಿನಿಮಾಗೆ ಪಿಆರ್‌ಕೆ ಪ್ರೊಡಕ್ಷನ್ಸ್ ಸಂಸ್ಥೆಯ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ವೀಕ್ಷಿಸಿದ ಅವರು, ನೈಜ ಜಗತ್ತಿನ ಸರಳ ಕಥೆ ಹಾಗೂ ಮಂಡ್ಯ ಶೈಲಿಯ ಭಾಷಾ ಸೊಗಡಿಗೆ ಫಿದಾ ಆಗಿ ತಂಡದ ನಿರೂಪಣೆಯನ್ನು ಕೊಂಡಾಡಿದ್ದಾರೆ.

Krishi Thapanda: ನನ್ನ ಪಾಡಿಗೆ ಬದುಕಲು ಬಿಡಿ, ನಟನೆ ಬಿಡುತ್ತಿರುವೆ; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ

ಬದುಕಲು ಬಿಡಿ, ನಟನೆ ಬಿಡುತ್ತಿರುವೆ; ಕಣ್ಣೀರಿಟ್ಟ ನಟಿ ಕೃಷಿ ತಾಪಂಡ

Krishi Thapanda: ಕೃಷಿ ತಾಪಂಡ ತಮ್ಮ ವೈಯಕ್ತಿಕ ಜೀವನದ ವಿಚಾರಗಳಿಂದ ಹಲವು ಬಾರಿ ಸುದ್ದಿಯಾಗಿದ್ದರು. ಆ ನಂತರ ಅವರ ಖಾಸಗಿ ಫೋಟೋಗಳು ಲೀಕ್ ಆಗಿ ಭಾರೀ ಸುದ್ದಿಯಾಗಿದ್ದವು. ಆದರೆ ಕೆಲವರು ಇನ್ನೂ ದುಃಖ ಕೊಡೋ ರೀತಿಯಲ್ಲಿ, ಅರ್ಥವಿಲ್ಲದಂತೆ ಮಾತನಾಡುತ್ತಿದ್ದಾರೆ ಎಂದು ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್ ಜೊತೆ ಮುಕ್ತವಾಗಿ ಮಾತನಾಡಿದ್ದಾರೆ.

Krishi Thapanda: ಚುಚ್ಚು ಮಾತುಗಳಿಂದ ನೊಂದಿದ್ದ ನಟಿ; ಕೃಷಿ ತಾಪಂಡ  ಭಾವುಕ ಪೋಸ್ಟ್!

ಚುಚ್ಚು ಮಾತುಗಳಿಂದ ನೊಂದಿದ್ದ ನಟಿ; ಕೃಷಿ ತಾಪಂಡ ಭಾವುಕ ಪೋಸ್ಟ್!

Krishi Thapanda: ಕೆಲವು ತಿಂಗಳ ಹಿಂದೆ ನಟಿ ಕೃಷಿ ತಾಪಂಡ ಅವರು ಖಾಸಗಿ ಫೋಟೋಗಳು ವೈರಲ್ ಆಗಿದ್ದವು. ಉದ್ಯಮಿ ಜೊತೆಗಿನ ಲವ್, ರಿಲೇಷನ್​ಶಿಪ್, ಬ್ರೇಕಪ್ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ನೆನೆದು ಕಣ್ಣೀರಿಟ್ಟಿದ್ದಾರೆ.ಈ ಕುರಿತು ನಟಿ ಪೋಸ್ಟ್‌ ಹಂಚಿಕೊಂಡಿದ್ದು ಹೀಗೆ.

‘ದೇವಿ ಮಹಾತ್ಮೆ’ ಆಡಿಯೋ ಹಕ್ಕುಗಳನ್ನು ಖರೀದಿಸಿದ ʻಹೊಂಬಾಳೆ‌ ಫಿಲ್ಮ್ಸ್ʼ; ರಂಗಾಯಣ ರಘು ನಟನೆಯ ಚಿತ್ರಕ್ಕೆ ಸಿಕ್ತು ಆನೆಬಲ!

ʻದೇವಿ ಮಹಾತ್ಮೆʼ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಲ; ಆಡಿಯೋ ರೈಟ್ಸ್‌ ಸೇಲ್‌

‘ಕೆಜಿಎಫ್’, ‘ಕಾಂತಾರ’ ಮುಂತಾದ ಬಿಗ್‌ ಬಜೆಟ್‌ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ತನ್ನ ‘ಹೊಂಬಾಳೆ ಮ್ಯೂಸಿಕ್’ ಲೇಬಲ್ ಅಡಿಯಲ್ಲಿ ರಂಗಾಯಣ ರಘು ಮುಖ್ಯ ಭೂಮಿಕೆಯಲ್ಲಿರುವ ‘ದೇವಿ ಮಹಾತ್ಮೆ’ ಚಿತ್ರದ ಆಡಿಯೋ ಹಕ್ಕುಗಳನ್ನು ಭಾರಿ ಮೊತ್ತಕ್ಕೆ ಖರೀದಿಸಿದೆ.

ʻಲಂಬೋದರ 2.0ʼ ‌ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟ ಬಾಲಿವುಡ್‌ ನಟ ಕುನಾಲ್ ಕಪೂರ್; ಇದು ʻಸಿಂಪಲ್‌ʼ ಸುನಿ ಸಿನಿಮಾ

ʻಸಿಂಪಲ್ ಸುನಿʼ ಹೊಸ ಚಿತ್ರಕ್ಕೆ ಬಂದ ʻರಂಗ್ ದೇ ಬಸಂತಿʼ ನಟ ಕುನಾಲ್ ಕಪೂರ್

ನಿರ್ದೇಶಕ 'ಸಿಂಪಲ್' ಸುನಿ ಅವರ ಸೈ-ಫೈ ಸೋಶಿಯಲ್ ಥ್ರಿಲ್ಲರ್ 'ಲಂಬೋದರ 2.0' ಚಿತ್ರಕ್ಕೆ ಬಾಲಿವುಡ್ ನಟ ಕುನಾಲ್ ಕಪೂರ್ ಪ್ರಮುಖ ಪಾತ್ರದ ಮೂಲಕ ಅದ್ದೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅನಿಲ್ ಶೆಟ್ಟಿ ನಾಯಕನಾಗಿ ಹಾಗೂ ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರವು ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಸಿಎಂ ವಿಜಯ್‌ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ತಮಿಳು ಚಿತ್ರರಂಗ ಖುಷಿ; ನಟ ವಿಶಾಲ್‌ ಏನಂದ್ರು ನೋಡಿ!

ತಮಿಳು ಚಿತ್ರರಂಗದ ನೆರವಿಗೆ ನಿಂತ CM ವಿಜಯ್; ʻಡಾರ್ಲಿಂಗ್‌ʼ ಎಂದ ನಟ ವಿಶಾಲ್

ತಮಿಳುನಾಡಿನ ನೂತನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಹೊಸ ಸಿನಿಮಾಗಳ ಬಿಡುಗಡೆಯ ಮೊದಲ ವಾರದಲ್ಲಿ ದಿನಕ್ಕೆ 5 ಪ್ರದರ್ಶನಗಳನ್ನು ನಡೆಸಲು ಚಿತ್ರಮಂದಿರಗಳ ನಿಯಮಾವಳಿಗೆ ತಿದ್ದುಪಡಿ ಮಾಡಿದ್ದಾರೆ. ಮೇ 16ರಂದು ಚಿತ್ರರಂಗದ ನಿಯೋಗ ಸಲ್ಲಿಸಿದ್ದ ಮನವಿಗೆ ಸಿಎಂ ತಕ್ಷಣ ಸ್ಪಂದಿಸಿದ್ದು, ಈ ನಡೆಯನ್ನು ನಟ ವಿಶಾಲ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ʻಕಿಚ್ಚʼ ಸುದೀಪ್‌ ಸೋದರಳಿಯ ಸಂಚಿತ್‌ಗೆ ರಿಷಬ್‌ ಶೆಟ್ಟಿ ಮೆಚ್ಚುಗೆ; ʻಮ್ಯಾಂಗೋ ಪಚ್ಚʼ ಟ್ರೇಲರ್‌ ನೋಡಿ ಏನಂದ್ರು ʻಡಿವೈನ್‌ ಸ್ಟಾರ್‌ʼ?

ಸುದೀಪ್ ಸೋದರಳಿಯನ ʻಮ್ಯಾಂಗೋ ಪಚ್ಚʼ ‌ಟ್ರೇಲರ್‌ಗೆ ರಿಷಬ್ ಶೆಟ್ಟಿ ಫಿದಾ!

ಕಿಚ್ಚ ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ಹೀರೋ ಆಗಿ 'ಮ್ಯಾಂಗೋ ಪಚ್ಚ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಸಿನಿಮಾದ ಟ್ರೇಲರ್‌ಗೆ 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಭರ್ಜರಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸುಪ್ರಿಯಾನ್ವಿ ಹಾಗೂ ಕೆಆರ್‌ಜಿ ಸ್ಟುಡಿಯೋಸ್ ಜಂಟಿಯಾಗಿ ನಿರ್ಮಿಸಿರುವ, ವಿವೇಕ್ ನಿರ್ದೇಶನ ಮಾಡಿದ್ದಾರೆ.

ಕಿಚ್ಚನ ಅಭಿಮಾನಿಗಳಿಗೆ ಗುಡ್‌ ನ್ಯೂಸ್;‌ ಒಮ್ಮೆಲೇ 5 ಸಿನಿಮಾಗಳ ಭರ್ಜರಿ ಲೈನ್‌ಅಪ್, ನಿರ್ದೇಶನಕ್ಕೆ ಮರಳಿದ ಸುದೀಪ್!

12 ವರ್ಷಗಳ ಬಳಿಕ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡಲಿರೋ ʻಕಿಚ್ಚʼ ಸುದೀಪ್

ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ಕಡೆಯಿಂದ ಅಭಿಮಾನಿಗಳಿಗೆ ಒಂದು ಬಿಗ್‌ ಅಪ್ಡೇಟ್‌ ಸಿಕ್ಕಿದೆ. ಅವರೀಗ ಒಟ್ಟೊಟ್ಟಿಗೆ 5 ಸಿನಿಮಾಗಳ ಭರ್ಜರಿ ಲೈನ್‌ಅಪ್ ಸಿದ್ಧಪಡಿಸಿಕೊಂಡು, ಸಂಚಲನ ಮೂಡಿಸಿದ್ದಾರೆ. 'ಮಾರ್ಕ್' ಚಿತ್ರದ ಬಳಿಕ ಬ್ರೇಕ್‌ ತೆಗೆದುಕೊಂಡಿದ್ದ ಸುದೀಪ್‌, 'ಬಿಲ್ಲ ರಂಗ ಬಾಷಾ' ಚಿತ್ರದ ಶೂಟಿಂಗ್‌ ಜೊತೆಗೆ ಈ ವರ್ಷವೇ 4 ಹೊಸ ಚಿತ್ರಗಳನ್ನು ಘೋಷಿಸಲಿದ್ದಾರೆ.

ದೈವಕ್ಕೆ ಅಪಮಾನ; ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬಂದು ಭಕ್ತಿಯಿಂದ ಕ್ಷಮೆಯಾಚಿಸಿದ ನಟ ರಣವೀರ್ ಸಿಂಗ್

ಚಾಮುಂಡಿ ಬೆಟ್ಟದಲ್ಲಿ ರಣವೀರ್; ದೈವಕ್ಕೆ ಅಪಮಾನ ಮಾಡಿದ್ದಕ್ಕೆ ಕ್ಷಮೆಯಾಚನೆ

ಬಾಲಿವುಡ್ ನಟ ರಣವೀರ್ ಸಿಂಗ್ ಗೋವಾ ಚಲನಚಿತ್ರೋತ್ಸವದಲ್ಲಿ 'ಕಾಂತಾರ' ಚಿತ್ರದ ದೈವಕೋಲದ ದೃಶ್ಯವನ್ನು ಅಣಕಿಸಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಈ ಸಂಬಂಧ ಅವರೀಗ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯೊಂದಿಗೆ ಬೇಷರತ್ ಕ್ಷಮೆಯಾಚಿಸಿದ್ದಾರೆ.

ʻಪೆದ್ದಿ ಚಿತ್ರದ ನಟನೆಗಾಗಿ ರಾಮ್‌ ಚರಣ್‌ಗೆ ನ್ಯಾಷನಲ್‌ ಅವಾರ್ಡ್‌ ಸಿಗಬೇಕುʼ ಎಂದ ನಟ ಶಿವರಾಜ್‌ಕುಮಾರ್‌

ʻನನಗೆ ರಾಮ್ ಚರಣ್‌, ನನ್ನ ತಮ್ಮ ಅಪ್ಪು ಥರ..ʼ ಎಂದ ಶಿವರಾಜಕುಮಾರ್

ಬೆಂಗಳೂರಿನಲ್ಲಿ ಜರುಗಿದ ‘ಪೆದ್ದಿ’ ಚಿತ್ರದ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಅವರ ಕುಸ್ತಿ ಕೋಚ್ 'ಗೌರನಾಯ್ಡು' ಪಾತ್ರದಲ್ಲಿ ನಟಿಸಿರುವ ಶಿವಣ್ಣ, ರಾಮ್ ಚರಣ್ ತಮಗೆ ಅಪ್ಪು (ಪುನೀತ್) ತರಹದ ಸ್ವಂತ ಸಹೋದರನಿದ್ದಂತೆ ಎಂದು ಭಾವುಕರಾಗಿದ್ದಾರೆ.

ಬೆಂಗಳೂರಿಗೆ ಬಂದಿದ್ದ ರಾಮ್‌ ಚರಣ್‌ ಜೊತೆ ಹೈಲೈಟ್‌ ಆದ ಬಾಡಿಗಾರ್ಡ್;‌ ಯಾರೀತ? ʻಮೆಗಾ ಪವರ್‌ ಸ್ಟಾರ್‌ʼ ಕೊಡ್ತಿರುವ ಸಂಬಳ ಎಷ್ಟು?

ರಾಮ್ ಚರಣ್‌ಗೆ ರಕ್ಷಣಾ ಕವಚದಂತಿರುವ ಈ ಬಾಡಿಗಾರ್ಡ್‌ ಯಾರು? ಸ್ಯಾಲರಿ ಎಷ್ಟು?

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ 'ಪೆದ್ದಿ' ಚಿತ್ರದ ಪ್ರಚಾರಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಟನ ಜೊತೆಗಿದ್ದ ಅಂತರರಾಷ್ಟ್ರೀಯ ಬಾಡಿಗಾರ್ಡ್ ಕೆವಿನ್ ಕುಂಟ ಎಲ್ಲರ ಗಮನ ಸೆಳೆದಿದ್ದಾರೆ. ಆಫ್ರಿಕಾ ಮೂಲದ, ಇಟಲಿಯ ಪ್ರೊಫೆಷನಲ್ ಎಂಎಂಎ ಚಾಂಪಿಯನ್ ಆಗಿರುವ ಕೆವಿನ್‌ಗೆ ರಾಮ್ ಚರಣ್ ದುಬಾರಿ ಸಂಬಳ ಕೊಡುತ್ತಿದ್ದಾರೆ.

Photos: ಡಾಕ್ಟರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ನಟ ನಿರಂಜನ್‌ ಸುಧೀಂದ್ರ; ಉಪೇಂದ್ರ ಕುಟುಂಬದಲ್ಲಿ ಮದುವೆ ಸಂಭ್ರಮ

Photos: ಅದ್ದೂರಿಯಾಗಿ ನಡೆದ ಉಪೇಂದ್ರ ಅಣ್ಣನ ಮಗ ನಿರಂಜನ್ ನಿಶ್ಚಿತಾರ್ಥ

`ರಿಯಲ್ ಸ್ಟಾರ್' ಉಪೇಂದ್ರ ಅವರ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಮನೆಮಾಡಿದೆ. ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಪುತ್ರ, ನಟ ನಿರಂಜನ್ ಸುಧೀಂದ್ರ ಅವರು ಮೇ 25ರ ಸೋಮವಾರದ ಶುಭ ಮುಹೂರ್ತದಲ್ಲಿ ವೈವಾಹಿಕ ಜೀವನಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ವೃತ್ತಿಯಲ್ಲಿ ವೈದ್ಯೆಯಾಗಿರುವ ಡಾ. ಸಂಜನಾ ಬಿ. ರಾಜ್ ಅವರೊಂದಿಗೆ ನಿರಂಜನ್ ಸುಧೀಂದ್ರ ಅವರ ನಿಶ್ಚಿತಾರ್ಥ ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಕುಟುಂಬಸ್ಥರು ಹಾಗೂ ಅತ್ಯಾಪ್ತರ ಸಮ್ಮುಖದಲ್ಲಿ ನಡೆದ ಈ ಸುಂದರ ಸಮಾರಂಭದಲ್ಲಿ ನಿರಂಜನ್ ಮತ್ತು ಸಂಜನಾ ಪರಸ್ಪರ ಉಂಗುರ ಬದಲಿಸಿಕೊಂಡರು. ಸದ್ಯದಲ್ಲೇ ಈ ಜೋಡಿಯ ವಿವಾಹ ಮಹೋತ್ಸವ ಜರುಗಲಿದ್ದು, ನಿಶ್ಚಿತಾರ್ಥದ ಆಕರ್ಷಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ನಟ ವಿಜಯ ರಾಘವೇಂದ್ರ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌ ನೀಡಿದ `ಮಹಾನ್' ಟೀಮ್‌; ರೈತರ ಪರ ಧ್ವನಿ ಎತ್ತಿದ ʻಚಿನ್ನಾರಿ ಮುತ್ತʼ

ನಟ ವಿಜಯ ರಾಘವೇಂದ್ರಗೆ ಬರ್ತ್‌ಡೇ ಸರ್ಪ್ರೈಸ್ ನೀಡಿದ 'ಮಹಾನ್' ಟೀಮ್‌

ನಟ ವಿಜಯ ರಾಘವೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ 'ಮಹಾನ್' ಚಿತ್ರತಂಡ ವಿಶೇಷ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ. ಪಿ.ಸಿ. ಶೇಖರ್ ನಿರ್ದೇಶನದ 11ನೇ ಚಿತ್ರವಾದ ಇದರಲ್ಲಿ ವಿಜಯ್ ರಾಘವೇಂದ್ರ ರೈತರ ಪರ ಧ್ವನಿ ಎತ್ತುವ ಕಷ್ಟಜೀವಿ ಹಳ್ಳಿ ಹೈದನ ಪಾತ್ರದಲ್ಲಿ ನಟಿಸಿದ್ದಾರೆ.

ʻದಳಪತಿʼ ವಿಜಯ್‌, ಅಜಿತ್‌, ಸೂರ್ಯ ಪಾಲಿಗೆ ಲಕ್ಕಿಯಾದ ನಟಿ ತ್ರಿಶಾ ಕೃಷ್ಣನ್ ;‌ 25 ವರ್ಷಗಳಾದರೂ ಕುಂದದ ʻಕುಂದವೈʼ ಚಾರ್ಮ್‌!

ವಿಜಯ್, ಅಜಿತ್, ಸೂರ್ಯಗೆ ‌ನಟಿ ತ್ರಿಶಾ ಲಕ್ಕಿ ಚಾರ್ಮ್! ಹೇಗೆ ಗೊತ್ತಾ?

ದಕ್ಷಿಣ ಭಾರತದ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದರೂ ನಟಿ ತ್ರಿಷಾ ಕೃಷ್ಣನ್ ಅವರ ವರ್ಚಸ್ಸು ಕೊಂಚವೂ ಕುಂದಿಲ್ಲ. ದಳಪತಿ ವಿಜಯ್, ಅಜಿತ್ ಕುಮಾರ್ ಹಾಗೂ ಸೂರ್ಯ ಅವರ ಸಾರ್ವಕಾಲಿಕ ಗರಿಷ್ಠ ಗಳಿಕೆಯ ಚಿತ್ರಗಳಿಗೆ ಇವರೇ ನಾಯಕಿಯಾಗಿದ್ದು, ತ್ರಿಶಾ ಈಗ ಉದ್ಯಮದ 'ಲಕ್ಕಿ ಚಾರ್ಮ್' ಆಗಿ ಹೊರಹೊಮ್ಮಿದ್ದಾರೆ.

Loading...