ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

ನಂದಗೋಕುಲಕ್ಕೆ ಹಿರಿ ಸೊಸೆಯಾಗಿ ಎಂಟ್ರಿ ಕೊಟ್ಟ ಪ್ರಿಯಾ; ನಂದಕುಮಾರ್ ಮನೆಯಲ್ಲಿ ಶುರುವಾಗುತ್ತಾ ವಾರಗಿತ್ತಿಯರ ವಾರ್?

ನಂದಗೋಕುಲದಲ್ಲಿ ವಾರಗಿತ್ತಿಯರ ಜಟಾಪಟಿ; ಧಾರಾವಾಹಿಯಲ್ಲಿ ರೋಚಕ ತಿರುವು!

Nandagokula Serial Updates: ಕಲರ್ಸ್ ಕನ್ನಡದ 'ನಂದಗೋಕುಲ' ಧಾರಾವಾಹಿಯಲ್ಲಿ ಈಗ ಹಿರಿ ಸೊಸೆ ಪ್ರಿಯಾಳ ಹವಾ ಶುರುವಾಗಿದೆ. ತಂದೆಯ ಮಾತಿಗೆ ಬೆಲೆ ನೀಡಿ ಮಾಧವ ಮದುವೆಯಾಗಿರುವ ಪ್ರಿಯಾ, ನಂದಕುಮಾರ್ ಅವರ ಅತೀವ ಪ್ರೀತಿಗೆ ಪಾತ್ರಳಾಗಿದ್ದಾಳೆ. ಆದರೆ ತನ್ನ ಅಧಿಕಾರ ಚಲಾಯಿಸಲು ಹೋಗಿ ಇತರ ಸೊಸೆಯಂದಿರಾದ ಮೀನಾ ಮತ್ತು ಅಮೂಲ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಸದ್ಯ ನಂದಗೋಕುಲ ಸೀರಿಯಲ್‌ ಸಖತ್‌ ರೋಚಕತೆಯಿಂದ ಕೂಡಿದೆ.

8 ವರ್ಷಗಳ ಹಿಂದೆಯೇ ತೆರೆಮೇಲೆ ಶಾಸ್ತ್ರೋಕ್ತವಾಗಿ ನಡೆದಿತ್ತು ವಿಜಯ್‌ ದೇವರಕೊಂಡ - ರಶ್ಮಿಕಾ ಮದುವೆ; ವೈರಲ್‌ ಆಯ್ತು ವಿಡಿಯೋ

8 ವರ್ಷದ ಹಿಂದೆಯೇ ನಡೆದಿತ್ತು ವಿಜಯ್-ರಶ್ಮಿಕಾ ಮದುವೆ! ಆಗ ರೀಲ್, ಈಗ ರಿಯಲ್!

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಇಂದು (ಫೆ.26) ಉದಯಪುರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ಫೋಟೋಗಳಿಗಾಗಿ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಈ ಮಧ್ಯೆ 2018ರ 'ಗೀತಾ ಗೋವಿಂದಂ' ಚಿತ್ರದ ಮದುವೆಯ ದೃಶ್ಯವೊಂದು ವೈರಲ್ ಆಗುತ್ತಿದೆ. ಆ ಕುರಿತ ಮಾಹಿತಿ ಇಲ್ಲಿದೆ.

Photos: ಅರಮನೆ ಮೈದಾನದಲ್ಲಿ ʻಗತ ವೈಭವʼ ಹೀರೋ ದುಷ್ಯಂತ್ - ರಚನಾ ಕಲ್ಯಾಣ: ರಾಜಕೀಯ-ಸಿನಿ ಗಣ್ಯರ ಸಮ್ಮುಖದಲ್ಲಿ ಅದ್ದೂರಿ ಮದುವೆ

ಅದ್ದೂರಿಯಾಗಿ ನೆರವೇರಿದ ನಟ ದುಷ್ಯಂತ್‌ ಕಲ್ಯಾಣ; ಯಾರೆಲ್ಲಾ ಬಂದಿದ್ರು ನೋಡಿ

ʻಗತ ವೈಭವʼ ಸಿನಿಮಾದ ನಟ ದುಷ್ಯಂತ್‌ ಅವರು ಇಂದು (ಫೆ.26) ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಮಾಜಿ ಸಂಸದ ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಅವರೊಂದಿಗೆ ದುಷ್ಯಂತ್ ಸಪ್ತಪದಿ ತುಳಿದಿದ್ದಾರೆ. ಗುಬ್ಬಿ ಶಾಸಕ ಎಸ್‌ ಆರ್‌ ಶ್ರೀನಿವಾಸ್‌ ಅವರ ಪುತ್ರನಾಗಿರುವ ದುಷ್ಯಂತ್‌ ಅವರು ಕಳೆದ ವರ್ಷ ತೆರೆಕಂಡ ಗತವೈಭವ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಟರಾಗಿ ಕಾಲಿಟ್ಟಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಮದುವೆಯಲ್ಲಿ ರಾಜಕೀಯ ಮತ್ತು ಸಿನಿಮಾರಂಗದ ಅನೇಕರು ಆಗಮಿಸಿ, ನೂತನ ವಧು - ವರರಿಗೆ ಶುಭ ಹಾರೈಸಿದ್ದಾರೆ. ಈ ಮದುವೆಯ ಫೋಟೋಗಳು ಇಲ್ಲಿವೆ ನೋಡಿ.

Kannada New Movie: ಕಮಲಶಿಲೆಯಲ್ಲಿ ಸೆಟ್ಟೇರಿತು‌ ನಾಗರಾಜ್ ಸೋಮಯಾಜಿ ನಿರ್ದೇಶನದ‌ 'ದೇವಿ‌ ಮಹಾತ್ಮೆ'

ಕಮಲಶಿಲೆಯಲ್ಲಿ ಸೆಟ್ಟೇರಿತು‌ `ದೇವಿ‌ ಮಹಾತ್ಮೆ'!

Kannada New Movie: ಮರ್ಯಾದೆ ಪ್ರಶ್ನೆ ಸಿನಿಮಾ ಸಾರಥಿ ನಾಗರಾಜ್ ಸೋಮಯಾಜಿ ಹೊಸ ಪ್ರಯತ್ನ‌ ದೇವಿ‌ ಮಹಾತ್ಮೆ.‌ ಫಸ್ಟ್ ಲುಕ್ ಮೂಲಕ ಕುತೂಹಲ ಹೆಚ್ಚಿಸಿರುವ ಈ ಚಿತ್ರ ಇಂದು‌ ಸೆಟ್ಟೇರಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿನ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ.‌

Kidnap case: ಕನ್ನಡದ ನಿರ್ದೇಶಕನ ಕಿಡ್ನಾಪ್, ಹಲ್ಲೆ; ನಟಿ ಐಶ್ವರ್ಯಾ ಸೇರಿ 11 ಮಂದಿ ಆರೆಸ್ಟ್

ಕನ್ನಡದ ನಿರ್ದೇಶಕನ ಕಿಡ್ನಾಪ್, ಹಲ್ಲೆ; ನಟಿ ಸೇರಿ 11 ಮಂದಿ ಆರೆಸ್ಟ್

ಕಿಡ್ನ್ಯಾಪ್‌ಗೆ ಒಳಗಾದವರು ಅನೀಶ್ ಎಂಬ ಯುವ ನಿರ್ದೇಶಕ. ಈ ಹಿಂದೆ ‘ಭರವಸೆಯೇ ಜೀವನ’ ಸೇರಿದಂತೆ ಕೆಲ ಕಿರುಚಿತ್ರಗಳನ್ನು ನಿರ್ದೇಶಿಸಿದ್ದರು. ಆರೋಪಿಗಳು ಅನೀಶ್ ಅವರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ಬಳಿಕ ಅವರನ್ನು ಬ್ಯಾಡರಹಳ್ಳಿಯಲ್ಲಿರುವ ಮನೆಯೊಂದರಲ್ಲಿ ಇರಿಸಿ, ಕ್ರಿಕೆಟ್ ಸ್ಟಂಪ್ ಹಾಗೂ ಹಾಕಿ ಸ್ಟಿಕ್ ಬಳಸಿ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ನಟಿ ಸೇರಿದಂತೆ ಒಟ್ಟು 11 ಮಂದಿಯನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.

Holi 2026: ಬೆಂಗಳೂರಿನ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ! ಏನಿದರ ವಿಶೇಷತೆ?

ಬೆಂಗಳೂರಿನ ಹೋಳಿ ಸಂಭ್ರಮದ ಟಿಕೆಟ್‌ಗಳು ಈಗ ಬುಕ್‌ಮೈಶೋನಲ್ಲಿ!

Holi 2026: ಬೆಂಗಳೂರು ಹೋಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದು, ನಗರದಲ್ಲಿ ಹೋಳಿ ಆಚರಣೆಗಳು ವೈವಿಧ್ಯಮಯವಾಗಿ ಮೂಡಿ ಬರುತ್ತಿವೆ. ಬೃಹತ್ ಸಂಗೀತ ಉತ್ಸವಗಳಿಂದ ಹಿಡಿದು ಆಕರ್ಷಕ ಪಾರ್ಟಿಗಳವರೆಗೆ ಈ ಹಬ್ಬವು ರೂಪುಗೊಂಡಿದೆ. 'ಟಿಕೆಟ್ ಟು ಹಾಲಿವುಡ್' ಮೂಲಕ, ಭಾರತದ ಪ್ರಮುಖ ಮನರಂಜನಾ ವೇದಿಕೆಯಾದ BookMyShow ನಗರದ ಅತ್ಯಂತ ರೋಚಕ ಹೋಳಿ ಕಾರ್ಯಕ್ರಮಗಳನ್ನು ಒಂದೇ ವೇದಿಕೆಯಡಿ ಒಂದಿಗಟ್ಟುಗೂಡಿಸಿ, ಪ್ರತಿಯೊಂದು ಪಾರ್ಟಿಯನ್ನೂ ಒಂದು ಬ್ಲಾಕ್‌ಬಸ್ಟರ್ ಕ್ಷಣವಾಗಿ ರೂಪಾಂತರಿಸಲಿದೆ.

Vijay - Rashmika Wedding: ಸತಿ ಪತಿಯಾದ ಅಭಿಮಾನಿಗಳ 'ವಿರೋಷ್'! ತೆಲುಗು ಸಂಪ್ರದಾಯದಂತೆ ಮದುವೆ

Rashmika Wedding: ಸತಿ ಪತಿಯಾದ ಅಭಿಮಾನಿಗಳ 'ವಿರೋಷ್'!

Rashmika Vijay Tie The Knot: ತಾರಾ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮತ್ತು ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ಅದ್ಧೂರಿಯಾಗಿ ನೆರವೇರಿದೆ. ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಸಮಾರಂಭ ಜರುಗಿದೆ. ಇದೀಗ ಮೆಚ್ಚಿನ ಜೋಡಿಗೆ ಫ್ಯಾನ್ಸ್‌ ವಿಶ್‌ ಮಾಡುತ್ತಿದ್ದಾರೆ. ತೆಲುಗು ಸಂಪ್ರದಾಯದಂತೆ ಮದುವೆ ಆಗಿದ್ದಾರೆ. ಪುರೋಹಿತರುಗಳು ತೆಲುಗು ಸಂಪ್ರದಾಯದಂತೆ ಈ ಜೋಡಿಯ ಮದುವೆ ಮಾಡಿಸಿದ್ದಾರೆ.ಇದೇ ದಿನ ಸಂಜೆ ವೇಳೆಗೆ ಕೊಡವ ಸಂಪ್ರದಾಯದಂತೆ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ಮದುವೆ ಮತ್ತೊಮ್ಮೆ ನಡೆಯಲಿದೆ.

Actor Darshan: ಧನ್ವೀರ್‌ಗೆ ಸಾಥ್‌ ಕೊಟ್ಟ ದರ್ಶನ್‌; `ಡಿ ಬಾಸ್‌' ಪೋಸ್ಟ್‌ನಲ್ಲಿ ಏನಿದೆ?

ಧನ್ವೀರ್‌ಗೆ ಸಾಥ್‌ ಕೊಟ್ಟ ದರ್ಶನ್‌; `ಡಿ ಬಾಸ್‌' ಪೋಸ್ಟ್‌ನಲ್ಲಿ ಏನಿದೆ?

Darshan Dhaneerh: ಕೆವಿಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಶ್ರೀಮತಿ ಪದ್ಮ ಸಮೃದ್ಧಿ ಮಂಜುನಾಥ್ ನಿರ್ಮಿಸಿರುವ, ರಘು ಕುಮಾರ್ ಓಆರ್ ನಿರ್ದೇಶನದ, ಧನ್ವೀರ್ ನಾಯಕರಾಗಿ ನಟಿಸಿರುವ ʻಹಯಗ್ರೀವʼ. ಇದೇ ಫೆ.27ರಂದು ʻಹಯಗ್ರೀವʼ ಸಿನಿಮಾ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ‌. ಇತ್ತೀಚೆಗೆ ಮಂಡ್ಯದಲ್ಲಿ ಚಿತ್ರದ ಟ್ರೈಲರ್ ರಿಲೀಸ್ ಆಗಿತ್ತು. ದರ್ಶನ್ ಅಭಿಮಾನಿಗಳು ಈ ಚಿತ್ರದ ಬೆಂಬಲಕ್ಕೆ ನಿಂತಿದ್ದಾರೆ.

Rashmika Mandanna : ರಶ್ಮಿಕಾಗೆ ಸ್ಪೆಷಲ್‌ ಉಡುಗೊರೆ ಕೊಟ್ಟ ವಿಜಯ್ ದೇವರಕೊಂಡ ತಾಯಿ!

ರಶ್ಮಿಕಾಗೆ ಸ್ಪೆಷಲ್‌ ಉಡುಗೊರೆ ಕೊಟ್ಟ ವಿಜಯ್ ದೇವರಕೊಂಡ ತಾಯಿ!

Rashmika Vijay: ಕಳೆದ 8 ವರ್ಷಗಳಿಂದ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ವಿಜೃಂಭಣೆಯಿಂದ ನೆರವೇರುತ್ತಿದೆ. ವಿವಾಹಪೂರ್ವ ಸಂಭ್ರಮವೂ ಅತ್ಯಂತ ಅದ್ಧೂರಿಯಾಗಿಯೇ ನೆರವೇರಿದೆ. ತಾರೆಯರು ವಿರೋಶ್ ಪ್ರೀಮಿಯರ್ ಲೀಗ್ ಎಂಬ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದರು. ರಶ್ಮಿಕಾಗೆ ವಿಜಯ್ ತಾಯಿ ಅತ್ಯಂತ ಅಮೂಲ್ಯವಾದ ಉಡುಗೊರೆಯೊಂದನ್ನು ನೀಡಿದ್ದಾರೆ.

Akhila Pajimannu: ಅಖಿಲಾ ಪಜಿಮಣ್ಣು ಡಿವೋರ್ಸ್‌ಗೆ ಕಾರಣ ಏನು? ಸತ್ಯ ಬಿಚ್ಚಿಟ್ಟ ಗಾಯಕಿ

ಅಖಿಲಾ ಪಜಿಮಣ್ಣು ಡಿವೋರ್ಸ್‌ಗೆ ಕಾರಣ ಏನು? ಸತ್ಯ ಬಿಚ್ಚಿಟ್ಟ ಗಾಯಕಿ

Akhila Pajimannu divorce: ಅಖಿಲಾ ಪಜಿಮಣ್ಣು 2022ರಲ್ಲಿ ಧನಂಜಯ್ ಶರ್ಮಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಅಮೆರಿಕದಲ್ಲಿ ವಾಸವಿದ್ದ ಧನಂಜಯ್‌ ಶರ್ಮ ಅವರನ್ನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ಸಂಬಂಧ ಮೂರೇ ವರ್ಷಕ್ಕೆ ಮುರಿದುಬಿದ್ದಿತ್ತು. ಕಳೆದ ವರ್ಷ ಪುತ್ತೂರು ನ್ಯಾಯಾಲಯದಲ್ಲಿ ಅಖಿಲಾ ಮತ್ತು ಧನಂಜಯ್ ಶರ್ಮಾ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದರು. ವಿಚ್ಚೇದನ ಪಡೆದರು.

Rashmika Mandanna: ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಫೋಟೋಗಳಿವು!

ರಶ್ಮಿಕಾ-ವಿಜಯ್ ದೇವರಕೊಂಡ ಅರಿಶಿಣ ಶಾಸ್ತ್ರದ ಫೋಟೋಗಳಿವು!

Rashmika: ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಉದಯಪುರದ ಐಶಾರಾಮಿ ರೆಸಾರ್ಟ್​​ನಲ್ಲಿ ಅದ್ಧೂರಿಯಾಗಿ ವಿವಾಹ ಆಗುತ್ತಿದೆ. ತಮ್ಮ ಮದುವೆಗೆ ಒಂದು ದಿನ ಮೊದಲು, ಜೋಡಿ ತಮ್ಮ ಹಲ್ದಿ ಸಮಾರಂಭದ ಫೋಟೋವನ್ನು ಹಂಚಿಕೊಂಡಿದೆ. ಹಳದಿ ಶಾಸ್ತ್ರಕ್ಕಾಗಿ ವಿಶೇಷ ಥೀಮ್​​ಗಳೊಂದಿಗೆ ವೇದಿಕೆ ಸಿದ್ಧಪಡಿಸಲಾಗಿತ್ತು.

Rashmika-Vijay Wedding: ಇಂದು ರಶ್ಮಿಕಾ-ವಿಜಯ್‌ ಅದ್ಧೂರಿ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ

ಇಂದು ರಶ್ಮಿಕಾ-ವಿಜಯ್‌ ಅದ್ಧೂರಿ ವಿವಾಹ : ಬೆಳಗ್ಗೆ 8ಕ್ಕೆ ಮುಹೂರ್ತ

Rashmika: ವಿಜಯ್(Vijay) ಮತ್ತು ರಶ್ಮಿಕಾ (Rashmika) ಅಭಿಮಾನಿಗಳು ಕಾಯುತ್ತಿದ್ದ ದಿನ ಇದು. ಇಂದು (ಫೆ.26) ತೆಲುಗು ಸಂಪ್ರದಾಯದಂತೆ ಬೆಳಗ್ಗೆ 8 ಗಂಟೆಯ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಫೋಟೋಗೆ ಫ್ಯಾನ್ಸ್‌ ತುದಿಗಾಲಲ್ಲಿ ಕಾಯುತ್ತಿದ್ದಾರೆ. ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ಸಮಾರಂಭ ಜರುಗಲಿದ್ದು, ಬುಧವಾರವಷ್ಟೇ ಜೋಡಿ ತಮ್ಮ ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಹಳದಿ ಶಾಸ್ತ್ರ ಆಚರಿಸಿದರು.

Gilli Nata: ʻಇನ್‌ಸ್ಟಾಗ್ರಾಮ್‌ನಲ್ಲಿ ರಘು ಅಣ್ಣ ಅನ್‌ಫಾಲೋ ಮಾಡಿದ್ದು ಗೊತ್ತೇ ಇರಲಿಲ್ಲʼ; ಅಚ್ಚರಿಯ ವಿಚಾರ ತಿಳಿಸಿದ ಗಿಲ್ಲಿ ನಟ!

ʻಬಿಗ್ ಬಾಸ್ʼ ಗೆಳೆಯರ ಮಧ್ಯೆ ಬಿರುಕು? ಕೊನೆಗೂ ಮೌನ ಮುರಿದ ʻಗಿಲ್ಲಿʼ ನಟ!

ಬಿಗ್ ಬಾಸ್ ಕನ್ನಡ 12ರ ಸ್ಪರ್ಧಿಗಳಾದ ಮ್ಯೂಟೆಂಟ್ ರಘು ಅವರು ಗಿಲ್ಲಿ ನಟ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿರುವ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, "ರಘು ಅಣ್ಣ ಮಗುವಿನಂತಹ ವ್ಯಕ್ತಿ, ನಮ್ಮ ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ.

ViRosh Wedding: ಉದಯಪುರ, ಹೈದರಾಬಾದ್‌ ಮಾತ್ರವಲ್ಲ, ಕರ್ನಾಟಕದಲ್ಲೂ ಇರಲಿದೆ ವಿಜಯ್‌ ದೇವರಕೊಂಡ - ರಶ್ಮಿಕಾ ಮದುವೆ ಸಂಭ್ರಮ; ಎಲ್ಲಿ? ಯಾವಾಗ?

ಕೊಡಗಿನಲ್ಲೂ ನಡೆಯಲಿದೆ ರಶ್ಮಿಕಾ-ವಿಜಯ್ ಮದುವೆ ಸಂಭ್ರಮ?

Rashmika Mandanna Wedding Updates: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹವು ಫೆಬ್ರವರಿ 26ರಂದು ಉದಯಪುರದಲ್ಲಿ ನೆರವೇರಲಿದೆ. ತದನಂತರ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಚಿತ್ರರಂಗದ ಗಣ್ಯರಿಗಾಗಿ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಆದರೆ, ರಶ್ಮಿಕಾ ಅವರ ತವರು ಜಿಲ್ಲೆ ಕೊಡಗಿನಲ್ಲೂ ಮದುವೆಯ ಸಂಭ್ರಮ ಮುಂದುವರಿಯಲಿದೆಯಾ? ಇಲ್ಲಿದೆ ಮಾಹಿತಿ.

ʻಟಾಕ್ಸಿಕ್ʼ ಸಿನಿಮಾದಿಂದ ಯಶ್‌ಗೆ ಸಿಗುವ ಹಣವೆಷ್ಟು? ರಾಕಿ ಭಾಯ್‌ಗೆ ಸಿಕ್ತಿರುವ ಪಾಲು ಎಷ್ಟು ಎಂಬುದು ಗೊತ್ತಾದ್ರೆ ಅಚ್ಚರಿಯಾಗೋದು ಖಚಿತ!

'ಟಾಕ್ಸಿಕ್' ಸಿನಿಮಾದಿಂದ ಯಶ್‌ಗೆ ಸಿಗಲಿರುವ ಲಾಭ ಎಷ್ಟು?

Yash Toxic Movie: ನಾಲ್ಕು ವರ್ಷಗಳ ನಂತರ ತೆರೆಗೆ ಬರುತ್ತಿರುವ ನಟ ಯಶ್ ಅವರ 'ಟಾಕ್ಸಿಕ್' ಸಿನಿಮಾ ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಚಿತ್ರದ ನಾಯಕನಷ್ಟೇ ಅಲ್ಲದೆ, ಸಹ-ನಿರ್ಮಾಪಕರೂ ಆಗಿರುವ ಯಶ್ ಅವರಿಗೆ 50 ಕೋಟಿ ರೂ.ಗಳ ಸಂಭಾವನೆ ನಿಗದಿಯಾಗಿದೆಯಂತೆ. ಹಾಗಾದ್ರೆ, ಲಾಭದಲ್ಲಿ ಸಿಗುವ ಪಾಲೆಷ್ಟು? ಇಲ್ಲಿದೆ ಮಾಹಿತಿ.

ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿಗೆ ಹೃದಯಾಘಾತವಾಗಿದ್ದು ನಿಜವೇ? ಕುಟುಂಬದವರು ಹೇಳಿದ ಸತ್ಯವೇನು?

ಸಂಜಯ್ ಲೀಲಾ ಬನ್ಸಾಲಿಗೆ ಹೃದಯಾಘಾತ ಆಯ್ತಾ? ವೈರಲ್ ಸುದ್ದಿಯ ಅಸಲಿಯತ್ತೇನು?

ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಸಾಕಷ್ಟು ವೈರಲ್‌ ಆಗಿದೆ. ಫೆಬ್ರವರಿ 24ರಂದು ತಮ್ಮ 63ನೇ ಜನ್ಮದಿನ ಆಚರಿಸಿಕೊಂಡ ಬನ್ಸಾಲಿ, ಇದ್ದಕ್ಕಿದ್ದಂತೆಯೇ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಈ ಕುರಿತು ಅವರ ತಂಡ ಮತ್ತು ಕುಟುಂಬದವರು ಅಧಿಕೃತ ಸ್ಪಷ್ಟನೆ ನೀಡಿದೆ.

Rashmika Vijay Wedding: ‘ದಿ ವೆಡ್ಡಿಂಗ್ ಆಫ್ ವಿರೋಷ್’: ಲೀಕ್‌ ಆಯ್ತು ಹಳದಿ, ಸಂಗೀತ ಸಂಭ್ರಮದ ವಿಡಿಯೋ

Rashmika: ಲೀಕ್‌ ಆಯ್ತು ಹಳದಿ , ಸಂಗೀತ ಸಂಭ್ರಮದ ವಿಡಿಯೋ

Vijay: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಫೆಬ್ರವರಿ 26 ರಂದು ಉದಯಪುರದಲ್ಲಿ ಪ್ರೀತಿಪಾತ್ರರ ಸಮ್ಮುಖದಲ್ಲಿ ವಿವಾಹವಾಗಲಿದ್ದಾರೆ. ಸಂಗೀತ ಕಾರ್ಯಕ್ರಮ ಮಂಗಳವಾರ ಸಂಜೆ ನಡೆದಿದ್ದು, ಇದರ ವಿಡಿಯೋ, ಫೋಟೋಗಳು ಲೀಕ್‌ ಆಗಿವೆ. ಜೋಡಿ ರೊಮ್ಯಾಂಟಿಕ್‌ ಪೋಸ್‌ನಲ್ಲಿರುವ ಕೆಲವು ಪೋಸ್ಟರ್‌ ಕೂಡ ವೈರಲ್‌ ಆಗುತ್ತಿದೆ. ವಿಜಯ್ ಮತ್ತು ರಶ್ಮಿಕಾ ಅವರ ಸಂಗೀತ ಕಾರ್ಯಕ್ರಮದ ಚಿತ್ರಗಳು ಮತ್ತು ವೀಡಿಯೊಗಳು ಸೋರಿಕೆಯಾಗಿವೆ.

Rishab Shetty: ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?

ರಶ್ಮಿಕಾ ಮದುವೆ ಕುರಿತ ಪ್ರಶ್ನೆಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ ಏನು?

Rashmika Vijay Devarkonda: ಮಂತ್ರಾಲಯ ರಾಘವೇಂದ್ರ ಸ್ವಾಮೀಜಿ ಗುರುವೈಭವೋತ್ಸವ ಕಾರ್ಯಕ್ರಮಗಳು ಪೂರ್ಣಗೊಂಡಿವೆ. ಸಮಾರೋಪ ಸಮಾರಂಭದಲ್ಲಿ, ಕಾಂತಾರ ಖ್ಯಾತಿಯ ಡಿವೈನ್​ ಸ್ಟಾರ್ ರಿಷಬ್​ ಶೆಟ್ಟಿ ಭಾಗಿಯಾಗಿದ್ದರು. ನವರಸನಾಯಕ ಜಗ್ಗೇಶ್​​​, ಮಾಜಿ ಡಿಸಿಎಂ ಅಶ್ವತ್ಥ್​ ನಾರಾಯಣ್ ಸೇರಿ ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಉಪಸ್ಥಿತರಿದ್ದರು.

ವಿರೋಶ್‌ ಮದುವೆಯನ್ನು ʻದೈವಿಕ ಸ್ಕ್ರಿಪ್ಟ್‌ʼ ಎಂದು ಕರೆದ ಪ್ರಧಾನಿ; ರಶ್ಮಿಕಾ  -ವಿಜಯ್‌ ದೇವರಕೊಂಡ ಕಲ್ಯಾಣಕ್ಕೆ ನರೇಂದ್ರ ಮೋದಿ ಶುಭ ಹಾರೈಕೆ

ʻಸಖಾ ಸಪ್ತಪದಾ ಭವʼ; ರಶ್ಮಿಕಾ -ವಿಜಯ್ ಮದುವೆಗೆ ಪ್ರಧಾನಿ ಮೋದಿ ಶುಭ ಹಾರೈಕೆ

ViRosh Wedding: ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಪತ್ರದ ಮೂಲಕ ಶುಭಕೋರಿದ್ದಾರೆ. ಫೆಬ್ರವರಿ 26ರಂದು ಉದಯಪುರದಲ್ಲಿ ನಡೆಯಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ವಿವಾಹವನ್ನು ಪ್ರಧಾನಿ 'ದೈವಿಕ ಸ್ಕ್ರಿಪ್ಟ್' ಎಂದು ಬಣ್ಣಿಸಿದ್ದಾರೆ.

ViRosh Wedding: ರಶ್ಮಿಕಾ ಮದುವೆಗೆ ಬಂದ್ರು ಕ್ಲೋಸ್‌ ಫ್ರೆಂಡ್ಸ್‌, ಸಕ್ಸಸ್‌ ಕೊಟ್ಟ ನಿರ್ದೇಶಕರನ್ನ ಮರೆಯದ ವಿಜಯ್‌ ದೇವರಕೊಂಡ; ಇಲ್ಲಿದೆ ಅತಿಥಿಗಳ ಪಟ್ಟಿ!

ʻವಿರೋಶ್ʼ ಕಲ್ಯಾಣ: ಗೆಳತಿ ರಶ್ಮಿಕಾ ಮದುವೆಗೆ ಸಾಥ್ ಕೊಟ್ಟ ಆಶಿಕಾ ರಂಗನಾಥ್!

ViRosh Wedding: ಉದಯಪುರದಲ್ಲಿ ನಡೆಯಲಿರುವ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ವಿವಾಹಕ್ಕೆ ಆಪ್ತ ಅತಿಥಿಗಳು ಆಗಮಿಸಿದ್ದಾರೆ. ರಶ್ಮಿಕಾ ಗೆಳತಿ ಆಶಿಕಾ ರಂಗನಾಥ್, ಸ್ಟೈಲಿಸ್ಟ್ ಶ್ರಾವ್ಯ ವರ್ಮಾ, ನಿರ್ದೇಶಕರಾದ ತರುಣ್ ಭಾಸ್ಕರ್ ಮುಂತಾದವರು ಆಗಲೇ ಮದುವೆಗೆ ಆಗಮಿಸಿದ್ದು, ತೆಲುಗು ಮತ್ತು ಕೊಡವ ಸಂಪ್ರದಾಯಗಳಂತೆ ವಿವಾಹ ನೆರವೇರಲಿದೆ.

Vijay Rashmika Wedding: ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ!

ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್‌ ದೇವರಕೊಂಡ ಜೋಡಿ!

Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಕಾರ್ಯಕ್ರಮ ಶುರುವಾಗಿದೆ. ಇಂದು(ಫೆಬ್ರವರಿ 25) ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ನಡೆಯಲಿದೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಹತ್ತಿರದ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಿದ್ದಾರೆ ಎಂದು ವರದಿಯಾಗಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಎರಡು ಬಾರಿ ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ.

Ram Charan: ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋಗಿದ್ರಾ ರಾಮ್‌ಚರಣ್‌? ಅಲ್ಲು ಸಿರೀಶ್ ಹೇಳೋದೇನು?

ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋಗಿದ್ರಾ ರಾಮ್‌ಚರಣ್‌?

Ayyappa Deeksha: ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಅಲ್ಲು ಕುಟುಂಬ ಹಾಗೂ ಮೆಗಾಸ್ಟಾರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಅಲ್ಲು ಅರ್ಜುನ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ತಮ್ಮ ಸಹೋದರ ಅಲ್ಲು ಸಿರೀಶ್ ಮತ್ತು ನಯನಿಕಾ ರೆಡ್ಡಿ ಅವರಿಗೆ ಕಾಕ್‌ಟೈಲ್ ಪಾರ್ಟಿಯನ್ನು ಆಯೋಜಿಸಿದ್ದರು. ಆ ಪಾರ್ಟಿಗೆ ರಾಮ್ ಚರಣ್ (Ram Charan) ಕೂಡ ಹೋಗಿದ್ದರು. ಈ ಪಾರ್ಟಿಗೆ ಹೋಗಿದ್ದಕ್ಕೆ ರಾಮ್ ಚರಣ್ ವಿರುದ್ಧ ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಅಷ್ಟಕ್ಕೂ ಈ ಅಸಮಾಧಾನಕ್ಕೆ ಕಾರಣ ಏನು?

Toxic Movie:  ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು ‘ಬೀರ’?

ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್‌ ಪಾತ್ರ: ಯಾರಿದು ‘ಬೀರ’?

Yash: ರಾಕಿಂಗ್ ಸ್ಟಾರ್ ಯಶ್ ನಾಯಕನಾಗಿ ನಟಿಸಿರುವ ನಿರ್ದೇಶಕಿ ಗೀತು ಮೋಹನ್‍ದಾಸ್ ಅವರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್' ಚಿತ್ರದ ನಿರ್ಮಾಪಕರು ಮಂಗಳವಾರ ಅಧಿಕೃತವಾಗಿ ಹೊಸ ಪಾತ್ರವನ್ನು ಪರಿಚಯಿಸಿದ್ದಾರೆ. ಚಿತ್ರದಲ್ಲಿ ಭೀರಾ ಪಾತ್ರದಲ್ಲಿರುವ ನಟ ಬಾಲಾಜಿ ಮನೋಹರ್ ಅಭಿನಯಿಸುತ್ತಿದ್ದಾರೆ. ನಟನ ಫಸ್ಟ್ ಲುಕ್ ಅನ್ನು ಅನಾವರಣಗೊಳಿಸಿದೆ ತಂಡ.

Centre blocks five OTT platforms: ಅಶ್ಲೀಲ ಕಾರ್ಯಕ್ರಮ: ಈ 5 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಸರ್ಕಾರ

ಅಶ್ಲೀಲ ಕಾರ್ಯಕ್ರಮ: ಈ 5 OTT ಪ್ಲಾಟ್‌ಫಾರ್ಮ್‌ ನಿಷೇಧಿಸಿದ ಸರ್ಕಾರ

Centre blocks five OTT platforms: ಕೇಂದ್ರ ಸರ್ಕಾರ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ಗಳಿಗೆ ಮತ್ತೆ ಆಘಾತ ನೀಡಿದೆ. ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದ್ದರೂ ಅಶ್ಲೀಲ ಹಾಗೂ ಪೋರ್ನೋಗ್ರಾಫಿಕ್ ('obscene' content) ದೃಶ್ಯಗಳ ಪ್ರಸಾರವನ್ನು ಮುಂದುವರಿಸಿರುವ 5 ಒಟಿಟಿ ಪ್ಲ್ಯಾಟ್‌ಫಾರ್ಮ್‌ವನ್ನು ಸರ್ಕಾರ ನಿಷೇಧಿಸಿದೆ. ನಿರ್ಬಂಧಿಸಲಾದ ಡಿಜಿಟಲ್ ಸೇವೆಗಳೆಂದರೆ MoodXVIP, Koyal Playpro, Digi Movieplex, Feel ಮತ್ತು Jugnu.ಅಧಿಕಾರಿಗಳ ಪ್ರಕಾರ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ (MIB) ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿ OTT ವೇದಿಕೆಗಳನ್ನು ನಿರ್ಬಂಧಿಸಿದೆ.

Loading...