ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Mahesh Babu: ಟಾಲಿವುಡ್ ಮಂದಿ ಖುಷಿ ಪಡೋ ಸುದ್ದಿ ನೀಡಿದ್ರು ಮಹೇಶ್‌ ಬಾಬು! ಏನದು?

ಟಾಲಿವುಡ್ ಮಂದಿ ಖುಷಿ ಪಡೋ ಸುದ್ದಿ ನೀಡಿದ್ರು ಮಹೇಶ್‌ ಬಾಬು! ಏನದು?

Mahesh Babu: ಇತ್ತೀಚಿನ ಅಧಿಕೃತ ಪ್ರಕಟಣೆಯ ಪ್ರಕಾರ, ಐಮ್ಯಾಕ್ಸ್ ಸಂಸ್ಥೆಯು ಮಹೇಶ್ ಬಾಬು ಒಡೆತನದ ಎಎಂಬಿ ಸಿನಿಮಾಸ್ ಮತ್ತು ಏಷ್ಯನ್ ಸಿನಿಮಾಸ್ ಜೊತೆ ಕೈಜೋಡಿಸುವ ಮೂಲಕ ಹೈದರಾಬಾದ್‌ಗೆ ಭರ್ಜರಿ ಕೊಡುಗೆ ನೀಡುತ್ತಿದೆ. ರಾಜಮೌಳಿ ಬಯಸಿದಂತೆ ನಗರದಲ್ಲಿ ಐಮ್ಯಾಕ್ಸ್ ಸ್ಕ್ರೀನ್ ಆರಂಭ ಆಗುತ್ತಿದೆ.

ವೃತ್ತಿ ಜೀವನದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದ ನಟಿ ರಶ್ಮಿಕಾ ಮಂದಣ್ಣ; ಇಷ್ಟೊಂದು ದುಡ್ಡು ಕೊಟ್ಟ ಆ ಚಿತ್ರತಂಡ ಯಾವುದು?

ದುಬಾರಿ ಸಂಭಾವನೆ ಪಡೆದು ಅಚ್ಚರಿ ಮೂಡಿಸಿದ ನಟಿ ರಶ್ಮಿಕಾ ಮಂದಣ್ಣ

ಸ್ಯಾಂಡಲ್‌ವುಡ್‌ನ 'ಕಿರಿಕ್ ಪಾರ್ಟಿ' ಮೂಲಕ ಚಿತ್ರರಂಗಕ್ಕೆ ಬಂದ ರಶ್ಮಿಕಾ ಮಂದಣ್ಣ, ಇದೀಗ ತಮ್ಮ ವೃತ್ತಿಜೀವನದ ಸರ್ವಕಾಲಿಕ ಗರಿಷ್ಠ 15 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುವ ಮಟ್ಟಕ್ಕೆ ಬೆಳೆದಿದ್ದಾರೆ. ಅಷ್ಟಕ್ಕೂ ರಶ್ಮಿಕಾ ಇಷ್ಟೊಂದು ದೊಡ್ಡಮೊತ್ತದ ಸಂಭಾವನೆ ನೀಡಿದವರು ಯಾರು? ಮುಂದೆ ಓದಿ.

CM Vijay : MGR ಕೂಡ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಪಡೆಯಲಿಲ್ಲ! ಸಿಎಂ ವಿಜಯ್ ನೇರ ಹೇಳಿಕೆ

MGR ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಪಡೆಯಲಿಲ್ಲ; ಸಿಎಂ ವಿಜಯ್

CM Vijay :ಮಿಳುನಾಡು ಮುಖ್ಯಮಂತ್ರಿ ವಿಜಯ್ ಸೋಮವಾರ ತಿರುಚಿರಾಪಳ್ಳಿಯಲ್ಲಿ ಮುಖ್ಯಮಂತ್ರಿಯಾಗಿ ತಮ್ಮ ಮೊದಲ ಸಾರ್ವಜನಿಕ ರ್ಯಾಲಿಯನ್ನು ನಡೆಸಿದರು, ಅಲ್ಲಿ ಅವರು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನ್ನು ಆಯ್ಕೆ ಮಾಡಿದ್ದಕ್ಕಾಗಿ ಮತ್ತು ಡಿಎಂಕೆ-ಎಐಎಡಿಎಂಕೆ ದ್ವಿಪಕ್ಷೀಯತೆಯಿಂದ ದೂರ ಸರಿದಿದ್ದಕ್ಕಾಗಿ ಜನರಿಗೆ ಧನ್ಯವಾದ ಅರ್ಪಿಸಿದರು. ಈ ವೇಳೆ "ದಿವಂಗತ ಸಿಎಂ ಎಂಜಿಆರ್ ಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತಗಳನ್ನು ಗಳಿಸಲಿಲ್ಲ ಎಂದು ಅವರು ಹೇಳಿದರು. ನಾನು ನನ್ನನ್ನು ಎಂಜಿಆರ್‌ಎಂಜಿಆರ್‌ಗೆ ಹೋಲಿಸಿಕೊಳ್ಳುತ್ತಿಲ್ಲ, ಆದರೆ ನಾನು ನಿಮ್ಮ ವಿಜಯ್, ಎಂಜಿಆರ್, ಅಣ್ಣಾ ಮತ್ತು ಪೆರಿಯಾರ್ ತೋರಿಸಿದ ಹಾದಿಯಲ್ಲಿ ಕೆಲಸ ಮಾಡಲು ಬಂದಿದ್ದೇನೆ" ಎಂದು ಹೇಳಿದರು.

‘ಕಿರುನಗೆ’ ಚಿತ್ರದ ಟೈಟಲ್‌ ರಿಲೀಸ್‌ ಮಾಡಿದ ಡಾ. ರಾಜ್‌ಕುಮಾರ್ ಪುತ್ರಿ ಲಕ್ಷ್ಮಿ ಗೋವಿಂದರಾಜು; ಚಿತ್ರತಂಡಕ್ಕೆ ಸಿಕ್ತು ಮಾಜಿ ಪ್ರಧಾನಿ ದೇವೇಗೌಡರ ಆಶೀರ್ವಾದ

'ಕಿರುನಗೆ' ಟೈಟಲ್ ರಿಲೀಸ್; ತಂದೆ-ತಾಯಿಗಾಗಿ ಪ್ರೀತಿ ತ್ಯಾಗ ಮಾಡೋ ಹೊಸ ಕಥೆ

ಅಶೋಕ್ ಕಡಬ ನಿರ್ದೇಶನದ ನೂತನ ಚಿತ್ರ ‘ಕಿರುನಗೆ’ ಶೀರ್ಷಿಕೆಯನ್ನು ವರನಟ ಡಾ. ರಾಜ್‌ಕುಮಾರ್ ಅವರ ಪುತ್ರಿ ಲಕ್ಷ್ಮಿ ಗೋವಿಂದರಾಜು ಅವರು ಅದ್ಧೂರಿಯಾಗಿ ಅನಾವರಣಗೊಳಿಸಿದ್ದಾರೆ. ವಿಜಯ್ ರಾಜ್ ಮತ್ತು ಖುಷ್ಬು ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರವು ಹೆತ್ತವರ ಸಂತೋಷಕ್ಕಾಗಿ ಮಕ್ಕಳು ಮಾಡುವ ಪ್ರೇಮ ತ್ಯಾಗದ ಕಥೆ ಹೊಂದಿದೆಯಂತೆ.

Taapsee Pannu : ಮಹಿಳೆಯರೇ ಈ ತಪ್ಪು ಮಾಡಬೇಡಿ! ನಟಿ ತಾಪ್ಸಿ ಪನ್ನು ಮನವಿ ಏನು?

ಮಹಿಳೆಯರೇ ಈ ತಪ್ಪು ಮಾಡಬೇಡಿ! ನಟಿ ತಾಪ್ಸಿ ಪನ್ನು ಮನವಿ ಏನು?

Taapsee Pannu : ತಾಪ್ಸಿ ಪನ್ನು ಈ ಮೊದಲು ತಾವು ಕೂಡ ಹೊಟ್ಟೆಯ ಬೊಚ್ಚು ಕರಗಿಸಲು ಹೋಗಿ ತೊಂದರೆಗೆ ಸಿಲುಕಿರುವುದಾಗಿ ಹೇಳಿದ್ದಾರೆ. ಸ್ಲಿಮ್ ಮತ್ತು ಫಿಟ್ (Fit) ಆಗಿ ಕಾಣಿಸಿಕೊಳ್ಳಲು ತಾವು ತುಂಬಾ ಶ್ರಮಿಸಿರುವುದಾಗಿ ಮತ್ತು ಈ ಪ್ರಕ್ರಿಯೆಯಲ್ಲಿ ತಮ್ಮನ್ನು ತಾವು ಹಿಂಸಿಸಿಕೊಂಡಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ. ಯಾರೂ ಕೂಡ ಅತಿಯಾಗಿ ಜಿಮ್‌ನಲ್ಲಿ ಕಸರತ್ತು ಮಾಡಬಾರದು’ ಎಂದು ಅವರು ಸಲಹೆ ನೀಡಿದ್ದಾರೆ.

ರಿಲೀಸ್‌ಗೂ ಮುನ್ನವೇ ʻಕೊರಗಜ್ಜʼ ಸಿನಿಮಾ ಡೈರೆಕ್ಟರ್‌ ಸುಧೀರ್ ಅತ್ತಾವರ್‌ಗೆ ಸಿಕ್ತು ಐಷಾರಾಮಿ ಫ್ಲಾಟ್; ಕೊಟ್ಟಿದ್ದು ಯಾರು?

ʻಕೊರಗಜ್ಜʼ‌ ರಿಲೀಸ್‌ಗೂ ಮುನ್ನವೇ ಡೈರೆಕ್ಟರ್‌ಗೆ ಐಷಾರಾಮಿ ಫ್ಲಾಟ್ ಗಿಫ್ಟ್!

ಬಿಡುಗಡೆಗೂ ಮುನ್ನವೇ ಭಾರಿ ಕುತೂಹಲ ಮೂಡಿಸಿರುವ ‘ಕೊರಗಜ್ಜ’ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಅವರಿಗೆ ನಿರ್ಮಾಪಕ ತ್ರಿವಿಕ್ರಮ ಸಪಲ್ಯ 1.75 ಕೋಟಿ ರೂ. ಮೌಲ್ಯದ ಐಷಾರಾಮಿ ಫ್ಲಾಟ್ ಉಡುಗೊರೆಯಾಗಿ ನೀಡಿದ್ದಾರೆ. ಕನ್ನಡದಲ್ಲೇ ಮೊದಲ ಬಾರಿಗೆ 2Dಯಿಂದ 3Dಗೆ ಬದಲಾಗುತ್ತಿರುವ ಈ 40 ಕೋಟಿ ಬಜೆಟ್‌ನ ಸಿನಿಮಾ, ಚೈನೀಸ್ ಭಾಷೆಗೂ ಡಬ್ ಆಗುತ್ತಿದೆ.

ʻಜೈಲರ್ 2ʼ ಬೆನ್ನಲ್ಲೇ ಮತ್ತೊಂದು ತಮಿಳು ಚಿತ್ರ ಒಪ್ಪಿಕೊಂಡ ಶಿವಣ್ಣ; ʻಟೂರಿಸ್ಟ್‌ ಫ್ಯಾಮಿಲಿʼ ಡೈರೆಕ್ಟರ್‌ ಜೊತೆ ʻಹ್ಯಾಟ್ರಿಕ್‌ ಹೀರೋʼ ಹೊಸ ಸಿನಿಮಾ

ಶಿವರಾಜ್‌ಕುಮಾರ್ ನಟನೆಯ 4ನೇ ತಮಿಳು ಚಿತ್ರಕ್ಕೆ ಅದ್ದೂರಿ ಮುಹೂರ್ತ

ʻಹ್ಯಾಟ್ರಿಕ್‌ ಹೀರೋʼ ಶಿವರಾಜ್‌ಕುಮಾರ್ ಅವರು ಜೈಲರ್, ಕ್ಯಾಪ್ಟನ್ ಮಿಲ್ಲರ್ ಹಾಗೂ ಜೈಲರ್ 2 ಚಿತ್ರಗಳ ಭರ್ಜರಿ ಯಶಸ್ಸಿನ ನಂತರ ತಮ್ಮ 4ನೇ ತಮಿಳು ಚಿತ್ರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಟೂರಿಸ್ಟ್‌ ಫ್ಯಾಮಿಲಿ ಖ್ಯಾತಿಯ ನಿರ್ದೇಶಕ ಅಭಿಷನ್ ಜೀವೀಂತ್, ಯೋಗಲಕ್ಷ್ಮೀ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮಣಿಪಾಲ್ ಆಸ್ಪತ್ರೆ ಯಶವಂತಪುರದಲ್ಲಿ ನಟ ಉಪೇಂದ್ರ ಅವರ ತಾಯಿಗೆ ಯಶಸ್ವಿ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

ನಟ ಉಪೇಂದ್ರ ತಾಯಿಗೆ ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ

81 ವರ್ಷದ ಅನಸೂಯ ಅವರು ಹಲವು ವರ್ಷಗಳಿಂದ ತೀವ್ರವಾದ ಅಸ್ಥಿಸಂಧಿವಾತ (Osteoarthritis) ಸಮಸ್ಯೆಯಿಂದ ಎರಡೂ ಮೊಣಕಾಲುಗಳಲ್ಲಿ ತೀವ್ರ ನೋವು ಹಾಗೂ ಚಲನ ಶೀಲತೆಯಲ್ಲಿ ಮಿತಿಯನ್ನು ಅನುಭವಿಸುತ್ತಿದ್ದರು. ಕ್ರಮೇಣ ಹೆಚ್ಚುತ್ತಿದ್ದ ಈ ಸಮಸ್ಯೆ ಅವರ ದೈನಂದಿನ ಚಟುವಟಿಕೆಗಳು ಹಾಗೂ ಜೀವನದ ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿತ್ತು.

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ಗೆ ಮೊದಲ ಬಾರಿಗೆ ಜೋಡಿಯಾದ ಸಲಗ ಸುಂದರಿ ಸಂಜನಾ ಆನಂದ್‌; ಯಾವುದು ಆ ಸಿನಿಮಾ?

ʻಗೋಲ್ಡನ್‌ ಸ್ಟಾರ್‌ʼ ಗಣೇಶ್‌ ಹೊಸ ಚಿತ್ರಕ್ಕೆ ಎಂಟ್ರಿ ಕೊಟ್ಟ ಸಂಜನಾ ಆನಂದ್

‘ಸಲಗ’ ಚಿತ್ರದ ಖ್ಯಾತಿಯ ನಟಿ ಸಂಜನಾ ಆನಂದ್ ಈಗ ‘ಗೋಲ್ಡನ್ ಸ್ಟಾರ್’ ಗಣೇಶ್ ಅಭಿನಯದ ಹೊಸ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಹಲವು ಬಿಗ್ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿರುವ ಸಂಜನಾ, ಇದೇ ಮೊದಲ ಬಾರಿಗೆ ಗಣೇಶ್‌ಗೆ ಜೋಡಿಯಾಗಿರುವುದು ವಿಶೇಷ.

ʻಕ್ವಾಟ್ಲೆ ಕಿಚನ್‌ʼ ಸೀಸನ್ 2ರಲ್ಲಿ ಮೇಘನಾ ರಾಜ್ ಜಡ್ಜ್;‌ ಅನುಪಮಾ ಗೌಡ ಜಾಗಕ್ಕೆ ಸುಷ್ಮಾ ರಾವ್‌ ಎಂಟ್ರಿ, ವೇದಿಕೆ ಮೇಲೆ ʻ‌ಬಿಗ್‌ ಬಾಸ್‌ʼ ಹನುಮಂತ ಮಿಂಚಿಂಗ್!

Kwatle Kitchen 2: ಜಡ್ಜ್ ಸೀಟಿನಲ್ಲಿ ಮೇಘನಾ ರಾಜ್, ನಿರೂಪಕಿಯಾಗಿ ಸುಷ್ಮಾ

ಕಲರ್ಸ್ ಕನ್ನಡ ವಾಹಿನಿಯ ವಿಭಿನ್ನ ರಿಯಾಲಿಟಿ ಶೋ ‘ಕ್ವಾಟ್ಲೆ ಕಿಚನ್ ಸೀಸನ್ 2’ ಜೂನ್ 6 ಮತ್ತು 7 ರ ರಾತ್ರಿ 9 ಗಂಟೆಗೆ ಗ್ರ್ಯಾಂಡ್ ಲಾಂಚ್ ಆಗಲು ಸಜ್ಜಾಗಿದೆ. ಈ ಬಾರಿ ಹಿರಿಯ ನಟಿ ಶ್ರುತಿ ಜಾಗಕ್ಕೆ ನಟಿ ಮೇಘನಾ ರಾಜ್ ಸರ್ಜಾ ಹೊಸ ತೀರ್ಪುಗಾರರಾಗಿ ಎಂಟ್ರಿ ಕೊಟ್ಟಿರುವುದು ವಿಶೇಷ.

‘ಲವ್ ಇನ್ಶೂರೆನ್ಸ್ ಕಂಪೆನಿ’ ಸಿನಿಮಾ ಸೋತಿದ್ದಕ್ಕೆ ರೊಚ್ಚಿಗೆದ್ದ ನಟಿ ನಯನತಾರಾ ಪತಿ; ಯಾರ ಮೇಲೆ ವಿಘ್ನೇಶ್‌ ಶಿವನ್‌ಗೆ ಕೋಪ?

ʻನನ್ನ ಕನಸು ನುಚ್ಚುನೂರಾಯ್ತುʼ; LIK ಸಿನಿಮಾ ಸೋಲಿಗೆ ನಯನತಾರಾ ಪತಿ ಬೇಸರ

ಪ್ರದೀಪ್ ರಂಗನಾಥನ್ ಹಾಗೂ ಕೃತಿ ಶೆಟ್ಟಿ ನಟನೆಯ, ವಿಘ್ನೇಶ್ ಶಿವನ್ ನಿರ್ದೇಶನದ 'ಲವ್ ಇನ್ಶೂರೆನ್ಸ್ ಕಂಪೆನಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ದೊಡ್ಡ ಯಶಸ್ಸು ಕಂಡಿಲ್ಲ. ಈ ಕುರಿತು ಭಾವುಕ ಪೋಸ್ಟ್ ಹಂಚಿಕೊಂಡಿರುವ ನಿರ್ದೇಶಕರು, ಉದ್ದೇಶಪೂರ್ವಕ ನೆಗೆಟಿವಿಟಿಯಿಂದಾಗಿ ತಮ್ಮ ಕನಸು ನುಚ್ಚುನೂರಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Brown OTT : ಜೀ5ನಲ್ಲಿ ಕರಿಷ್ಮಾ ಕಪೂರ್ ನಟನೆಯ ಕ್ರೈಂ ಥ್ರಿಲ್ಲರ್ ವೆಬ್ ಸಿರೀಸ್‌; ಸ್ಟ್ರೀಮಿಂಗ್‌ ಯಾವಾಗಿನಿಂದ?

ಜೀ5ನಲ್ಲಿ ಕರಿಷ್ಮಾ ಕಪೂರ್ ನಟನೆಯ ಕ್ರೈಂ ಥ್ರಿಲ್ಲರ್ ವೆಬ್ ಸಿರೀಸ್‌

Brown OTT : ಕರಿಷ್ಮಾ ಕಪೂರ್ ಜೊತೆಗೆ, "ಬ್ರೌನ್" ವೆಬ್ ಸರಣಿಯಲ್ಲಿ ಹೆಲೆನ್, ಸೋನಿ ರಜ್ದಾನ್, ಸೂರ್ಯ ಶರ್ಮಾ ಮತ್ತು ಜಿಶು ಸೇನ್‌ಗುಪ್ತಾ ಮುಂತಾದ ನಟರು ನಟಿಸಿದ್ದಾರೆ. ಪರೇಶ್ ಪಹುಜಾ, ಅಜಿಂಕ್ಯ ದೇವ್ ಮತ್ತು ಆರ್ಯನ್ ಭೌಮಿಕ್ ಕೂಡ ಈ ಸರಣಿಯ ಭಾಗವಾಗಿದ್ದಾರೆ. ಇದು ವರ್ಷದ ಅತ್ಯಂತ ನಿರೀಕ್ಷಿತ ವೆಬ್ ಸರಣಿ ಬಿಡುಗಡೆಗಳಲ್ಲಿ ಒಂದಾಗಿದೆ.

Suman Kalyanpur: ಗಾಯಕಿ, ಕನ್ನಡತಿ ಸುಮನ್ ಕಲ್ಯಾಣಪುರ ಇನ್ನಿಲ್ಲ

Suman Kalyanpur: ಗಾಯಕಿ, ಕನ್ನಡತಿ ಸುಮನ್ ಕಲ್ಯಾಣಪುರ ಇನ್ನಿಲ್ಲ

Suman Kalyanpur: ಹಿರಿಯ ಹಿನ್ನೆಲೆ ಗಾಯಕಿ ಸುಮನ್ ಕಲ್ಯಾಣ್‌ಪುರ್ (Suman Kalyanpur ) ಅವರು ವಯೋಸಹಜ ಕಾಯಿಲೆಗಳಿಂದ ಭಾನುವಾರ ಸಂಜೆ ಮುಂಬೈನ ತಮ್ಮ ನಿವಾಸದಲ್ಲಿ ನಿಧನರಾದರು (Passes away). ಅವರಿಗೆ 89 ವರ್ಷ ವಯಸ್ಸಾಗಿತ್ತು.ಲೇಖಕಿ ಮತ್ತು ನಿಕಟವರ್ತಿ ಮಂಗಳಾ ಖಾಡಿಲ್ಕರ್ ಅವರ ಪ್ರಕಾರ, ಕಲ್ಯಾಣ್‌ಪುರ್ ಅವರು ರಾತ್ರಿ 8 ಗಂಟೆ ಸುಮಾರಿಗೆ ಲೋಖಂಡ್ವಾಲಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

Aishwarya Rai: ಐಶ್ವರ್ಯಾ ರೈ ಮಗಳಿಗೆ ಈ ಕಾರಣಕ್ಕೆ ಸ್ಮಾರ್ಟ್‌ಫೋನ್ ಕೊಟ್ಟಿಲ್ವಂತೆ!

ಐಶ್ವರ್ಯಾ ರೈ ಮಗಳಿಗೆ ಈ ಕಾರಣಕ್ಕೆ ಸ್ಮಾರ್ಟ್‌ಫೋನ್ ಕೊಟ್ಟಿಲ್ವಂತೆ!

Aishwarya Rai: ಸಂವಾದ ಕಾರ್ಯಕ್ರಮದಲ್ಲಿ ಐಶ್ವರ್ಯಾ ಅವರು, ಆರಾಧ್ಯ (Aradhya) ಅವರದ್ದು ಎಂದು ಹೇಳಿಕೊಳ್ಳುವ ಹಲವಾರು ನಕಲಿ ಸಾಮಾಜಿಕ ಮಾಧ್ಯಮ ಪ್ರೊಫೈಲ್‌ಗಳ ವಿರುದ್ಧ ಮಾತನಾಡಿದರು. "ಅದು ಅವಳಲ್ಲ; ಅವಳು ಸಾಮಾಜಿಕ ಮಾಧ್ಯಮದಲ್ಲಿಲ್ಲ" ಎಂದು ಹೇಳಿದ ನಟಿ, ದೇಶದ ಅತ್ಯಂತ ಗುರುತಿಸಲ್ಪಟ್ಟ ಸೆಲೆಬ್ರಿಟಿ ಮಕ್ಕಳಲ್ಲಿ ಒಬ್ಬಳಾಗಿದ್ದರೂ ತನ್ನ ಮಗಳು ಯಾವುದೇ ಸೋಷಿಯಲ್‌ ಮೀಡಿಯಾ ಬಳಕೆ ಮಾಡುವುದಿಲ್ಲ ಎಂದಿದ್ದಾರೆ.

'ದೇವದಾಸ್' ಚಿತ್ರದ 'ಡೋಲಾ ರೇ ಡೋಲಾ' ಹಾಡಿನ ಶೂಟಿಂಗ್ ವೇಳೆ ನಟಿ ಮಾಧುರಿ ದೀಕ್ಷಿತ್ ಗರ್ಭಿಣಿ ಆಗಿದ್ರಾ? ಕೊನೆಗೂ ಸತ್ಯ ಬಹಿರಂಗ!

ʻಡೋಲಾ ರೇ ಡೋಲಾʼ ಸಾಂಗ್‌ ಶೂಟಿಂಗ್ ವೇಳೆ ನಟಿ ಮಾಧುರಿ ಗರ್ಭಿಣಿ ಆಗಿದ್ರಾ?

‘ದೇವದಾಸ್’ ಚಿತ್ರದ ‘ಡೋಲಾ ರೇ ಡೋಲಾ’ ಹಾಡಿನ ಚಿತ್ರೀಕರಣದ ವೇಳೆ ನಟಿ ಮಾಧುರಿ ದೀಕ್ಷಿತ್ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು ಎಂಬ ಸಹ ನೃತ್ಯ ನಿರ್ದೇಶಕಿ ರುಬೀನಾ ಖಾನ್ ಅವರ ಹೇಳಿಕೆ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸ್ವತಃ ಮಾಧುರಿ ಆ ಹೇಳಿಕೆಯನ್ನ ತಳ್ಳಿಹಾಕಿದ್ದಾರೆ.

Sobhita Dhulipala: ಪತ್ನಿ ಶೋಭಿತಾಗೆ ಇದೊಂದು ಮಾತು ಹೇಳಿ ಕ್ಯೂಟ್‌ ವಿಶ್‌ ಮಾಡಿದ ನಾಗ ಚೈತನ್ಯ!

ಪತ್ನಿ ಶೋಭಿತಾಗೆ ಇದೊಂದು ಮಾತು ಹೇಳಿ ಕ್ಯೂಟ್‌ ವಿಶ್‌ ಮಾಡಿದ ನಾಗ ಚೈತನ್ಯ!

Sobhita Dhulipala: ನಟಿ ಶೋಭಿತಾ ಧುಲಿಪಾಲಾ 34 ನೇ ವರ್ಷಕ್ಕೆ ಕಾಲಿಟ್ಟರು. ಪತಿ, ನಟ ನಾಗ ಚೈತನ್ಯ ಅತ್ಯಂತ ಪ್ರೀತಿಯಿಂದ ಶುಭಾಷಯ ತಿಳಿಸಿದ್ದಾರೆ. ಫ್ಯಾನ್ಸ್‌ ನೋಡಿರದ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ಶೋಭಿತಾ ಅವರನ್ನು ಮದುವೆಯಾಗಿದ್ದಕ್ಕೆ ತಮಗೆ ಎಷ್ಟು ಪ್ರೀತಿ ಇದೆ ಎಂದು ಬರೆದಿದ್ದಾರೆ, ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಬಾಕ್ಸ್‌ ಆಫೀಸ್‌ನಲ್ಲಿ ʻಕರುಪ್ಪುʼ ರುದ್ರತಾಂಡವ; ಭರ್ಜರಿ ಸಕ್ಸಸ್‌ ಸಿಕ್ಕ ಖುಷಿಯಲ್ಲಿ ದುಬಾರಿ ಕಾರುಗಳನ್ನು ಗಿಫ್ಟ್‌ ಕೊಟ್ಟ ನಟ ಸೂರ್ಯ! ಯಾರಿಗೆಲ್ಲಾ ಸಿಕ್ತು?

ʻಕರುಪ್ಪುʼ ಸೂಪರ್ ಹಿಟ್‌: ಖುಷಿಗೆ ದುಬಾರಿ ಕಾರುಗಳನ್ನ ಗಿಫ್ಟ್ ಕೊಟ್ಟ ಸೂರ್ಯ

ನಟ ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಅಭಿನಯದ, ಆರ್‌ಜೆ ಬಾಲಾಜಿ ನಿರ್ದೇಶನದ ‘ಕರುಪ್ಪು’ ಸಿನಿಮಾ ವಿಶ್ವಾದ್ಯಂತ 300 ಕೋಟಿ ರೂಪಾಯಿ ಗಳಿಸುವ ಮೂಲಕ ಸೂರ್ಯ ವೃತ್ತಿಜೀವನದಲ್ಲೇ ಬೃಹತ್ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ಯಶಸ್ಸಿನ ಖುಷಿಯಲ್ಲಿ ಸೂರ್ಯ ಅವರು ಚಿತ್ರದಲ್ಲಿ ಕೆಲಸ ಮಾಡಿದ ಕೆಲವರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿ ಸಂಭ್ರಮಿಸಿದ್ದಾರೆ.

Gicchi Giligili Juniors: ಗೆಲುವಿನ ಪಟ್ಟ ಅಲಂಕರಿಸಿದ ಮಾನಸಾ ಗುರುಸ್ವಾಮಿ! ‘ಗಿಚ್ಚಿಗಿಲಿಗಿಲಿ ಜ್ಯೂನಿಯರ್ಸ್‌’ ಗ್ರ್ಯಾಂಡ್‌ ಫಿನಾಲೆ

Gicchi Giligili: ಗೆಲುವಿನ ಪಟ್ಟ ಅಲಂಕರಿಸಿದ ಮಾನಸಾ ಗುರುಸ್ವಾಮಿ!

Gicchi Giligili Juniors:ಗಿಚ್ಚಿ-ಗಿಲಿಗಿಲಿ ವಿನ್ನರ್‌’ ಬೆಲ್ಟ್‌ ನೋಡುತ್ತಿದ್ದಂತೆ ಕಣ್ಣೀರಿಟ್ಟಿದ್ದಾರೆ. ಎಮೋಷನಲ್‌ ಕ್ಷಣವನ್ನ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ನಟಿ. ಗಿಚ್ಚಿ-ಗಿಲಿಗಿಲಿ ಜ್ಯೂನಿಯರ್ಸ್‌' ಅದ್ದೂರಿ ಕಾರ್ಯಕ್ರಮವನ್ನ ಹೋಸ್ಟ್‌ ಮಾಡಿದ್ದು ನಟಿ, ನಿರೂಪಕಿ ಅನುಪಮಾ ಗೌಡ ಅವರು. ಇಷ್ಟು ವಾರಗಳ ಕಾಲ ಕಾರ್ಯಕ್ರಮ ನಿರೂಪಿಸಿದ ನಟಿ ಗ್ರ್ಯಾಂಡ್‌ ಫಿನಾಲೆಯಲ್ಲಿ ಕಾಣಿಸಿಕೊಂಡಿಲ್ಲ

ʻಭಾವಾಂತರʼ ಚಿತ್ರದ ಮೂಲಕ ಹೊಸ ಸಾಹಸಕ್ಕೆ ಮುಂದಾದ ಸಂಗೀತ ನಿರ್ದೇಶಕ ಕಾರ್ತಿಕ್‌ ಶರ್ಮಾ; ಸಾಥ್‌ ನೀಡಿದ ʻಹೊಂಬಾಳೆ ಫಿಲ್ಮ್ಸ್‌ʼ

ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ಈಗ ಡೈರೆಕ್ಟರ್; ಸಾಥ್‌ ನೀಡಿದ ʻಹೊಂಬಾಳೆʼ

ಸಾಲು ಸಾಲು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು, ತನ್ನ ‘ಹೊಂಬಾಳೆ ಮ್ಯೂಸಿಕ್’ ಲೇಬಲ್ ಮೂಲಕ ಸಂಗೀತ ನಿರ್ದೇಶಕ ಕಾರ್ತಿಕ್ ಶರ್ಮಾ ನಿರ್ದೇಶನದ ಚೊಚ್ಚಲ ಚಿತ್ರ ‘ಭಾವಾಂತರ’ದ ಆಡಿಯೋ ಹಕ್ಕುಗಳನ್ನು ಖರೀದಿಸಿ ಬೆನ್ನೆಲುಬಾಗಿ ನಿಂತಿದೆ.

CM vijay: 'ಜನ ನಾಯಗನ್' ಸಿನಿಮಾ ಬಿಡುಗಡೆ ಯಾವಾಗ? ʻಸತ್ಯ ಹೇಳೋಕೆ ನಂಗೂ ಧೈರ್ಯ ಇಲ್ಲʼ ಎಂದ ನಿರ್ದೇಶಕ ಎಚ್. ವಿನೋದ್

ʻಜನ ನಾಯಗನ್ʼ ರಿಲೀಸ್: ʻಸತ್ಯ ಹೇಳೋ ಧೈರ್ಯವಿಲ್ಲʼ ಎಂದಿದ್ದೇಕೆ ನಿರ್ದೇಶಕ?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನನಾಯಗನ್' ಬಿಡುಗಡೆ ವಿಳಂಬದ ಕುರಿತು ನಿರ್ದೇಶಕ ಎಚ್. ವಿನೋದ್, "ನನಗೆ ನಿಜ ಹೇಳುವ ಧೈರ್ಯ ನನಗಿಲ್ಲ" ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ಸೆನ್ಸಾರ್ ಮಂಡಳಿಯ ಕಾನೂನು ಹೋರಾಟ, ಆನ್‌ಲೈನ್ ಲೀಕ್ ಹಾಗೂ ಸೈಬರ್ ಕ್ರೈಮ್ ಬಂಧನಗಳ ನಡುವೆಯೂ ಚಿತ್ರದ ಮೇಲಿನ ಕ್ರೇಜ್ ಕುಗ್ಗಿಲ್ಲ.

Obsession: ಬಜೆಟ್‌ 7 ಕೋಟಿ, ಕಲೆಕ್ಷನ್‌ 1 ಸಾವಿರ ಕೋಟಿ! ಚಿತ್ರ ನಿರ್ಮಾಣಕ್ಕೆ ಸುಖಾಸುಮ್ಮನೆ ಹಣ ವ್ಯಯ ಮಾಡೋರಿಗೆ ಈ ಹಾರರ್‌ ಸಿನಿಮಾ ಒಂದೊಳ್ಳೆ ಪಾಠ!

ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ Obsession; 1000 ಕೋಟಿ ಗಳಿಸಿದ ಸಿನಿಮಾ

26 ವರ್ಷದ ಯೂಟ್ಯೂಬರ್ ಕರ್ರಿ ಬೇಕರ್ ನಿರ್ದೇಶನದ 'ಒಬ್ಸೆಷನ್' ಹಾರರ್ ಸಿನಿಮಾ ಕೇವಲ 7+ ಕೋಟಿ ರೂ. ಬಜೆಟ್‌ನಲ್ಲಿ ಸಿದ್ಧವಾಗಿ ಮೂರೇ ವಾರಗಳಲ್ಲಿ ಜಾಗತಿಕವಾಗಿ 1030+ ಕೋಟಿ ರೂ. ಗಳಿಸಿ ಇತಿಹಾಸ ಸೃಷ್ಟಿಸಿದೆ. ಅಮೆರಿಕ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಬಿಗ್ ಬಜೆಟ್ ಚಿತ್ರಗಳ ಪೈಪೋಟಿ ನಡುವೆಯೂ ಈ ಚಿತ್ರ ಧೂಳೆಬ್ಬಿಸಿದೆ.

ಕ್ಯಾನ್ಸರ್‌ ಕಾರಣದಿಂದ ʻಪೆದ್ದಿʼ ಸಿನಿಮಾವನ್ನು ಕೈಬಿಟ್ಟಿದ್ದ ಶಿವರಾಜ್‌ಕುಮಾರ್;‌ ಅಂದು ನಿರ್ದೇಶಕರು ಹೇಳಿದ್ದೇನು ಗೊತ್ತಾ?

Ram Charan: ʻಪೆದ್ದಿʼ ಚಿತ್ರದಿಂದ ಹೊರನಡೆಯಲು ನಿರ್ಧರಿಸಿದ್ದ ಶಿವಣ್ಣ

ʻಕರುನಾಡ ಚಕ್ರವರ್ತಿʼ ಶಿವರಾಜ್‌ಕುಮಾರ್ ಅವರು ತಮಗೆ ಕ್ಯಾನ್ಸರ್ ಇರುವುದು ಪತ್ತೆಯಾದಾಗ ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾದಿಂದ ಹೊರನಡೆಯಲು ನಿರ್ಧರಿಸಿದ್ದ ಅಸಲಿ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಆದರೆ, ನಿರ್ದೇಶಕ ಬುಚ್ಚಿ ಬಾಬು ಹಾಗೂ ಚಿತ್ರತಂಡ ಶಿವಣ್ಣ ಅವರಿಗಾಗಿಯೇ ಸುದೀರ್ಘ ಕಾಲ ಕಾದಿದ್ದರು.

ʻಪೆದ್ದಿʼ ಚಿತ್ರಕ್ಕಾಗಿ ರಾಮ್‌ ಚರಣ್, ಶಿವರಾಜ್‌ಕುಮಾರ್‌ ಪಡೆದ ಸಂಭಾವನೆ ಎಷ್ಟು? ನಟಿ ಜಾನ್ವಿ ಕಪೂರ್‌ ಎಷ್ಟು ಚಾರ್ಜ್‌ ಮಾಡಿದ್ರು?

‌ʻಪೆದ್ದಿʼ ಚಿತ್ರಕ್ಕಾಗಿ ರಾಮ್ ಚರಣ್‌, ಶಿವಣ್ಣನಿಗೆ ಸಿಕ್ಕ ಸಂಭಾವನೆ ಎಷ್ಟು?

ಗ್ಲೋಬಲ್ ಸ್ಟಾರ್ ರಾಮ್ ಚರಣ್ ನಟನೆಯ ಬಿಗ್ ಬಜೆಟ್ ಪ್ಯಾನ್-ಇಂಡಿಯಾ ಸಿನಿಮಾ 'ಪೆದ್ದಿ' ಚಿತ್ರದ ತಾರಾಗಣದ ಸಂಭಾವನೆ ವಿವರಗಳು ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿವೆ. ರಾಮ್ ಚರಣ್ 100 ಕೋಟಿಗೂ ಅಧಿಕ ಸಂಭಾವನೆ ಪಡೆದಿದ್ದರೆ, ನಿರ್ದೇಶಕ ಬುಚ್ಚಿಬಾಬು ಸನಾ 30 ಕೋಟಿ ರೂ. ಪಡೆದಿದ್ದಾರೆ.

Rashmika Mandanna: ರಶ್ಮಿಕಾಗೆ ತಿರುಗೇಟು ಕೊಟ್ಟ ಶಾಹಿದ್ ಕಪೂರ್; ವಿಡಿಯೋ ವೈರಲ್‌

ರಶ್ಮಿಕಾಗೆ ತಿರುಗೇಟು ಕೊಟ್ಟ ಶಾಹಿದ್ ಕಪೂರ್; ವಿಡಿಯೋ ವೈರಲ್‌

Rashmika Mandanna: ರಶ್ಮಿಕಾ ಪ್ರಸ್ತುತ ಬಾಲಿವುಡ್ ಚಿತ್ರ ಕಾಕ್ಟೇಲ್ 2 (Cocktail 2) ನಲ್ಲಿ ನಟಿಸುತ್ತಿದ್ದಾರೆ. ಶಾಹಿದ್ ಕಪೂರ್ ನಟಿಸಿರುವ ಈ ಚಿತ್ರದಲ್ಲಿ ಕೃತಿ ಸನೋನ್ ಮತ್ತೊಬ್ಬ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಿಂದ ಬಿಡುಗಡೆಯಾದ ಪೋಸ್ಟರ್‌ಗಳು ಮತ್ತು ಹಾಡುಗಳು ಈಗಾಗಲೇ ಪ್ರೇಕ್ಷಕರನ್ನು ಮೆಚ್ಚಿಕೊಂಡಿವೆ. ಇತ್ತೀಚೆಗೆ, ಕಾಕ್‌ಟೇಲ್ 2 ರ ಪ್ರಚಾರದ ಸಮಯದಲ್ಲಿ, ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಾಧ್ಯಮಗಳೊಂದಿಗೆ ಫೋಟೋಗಳಿಗೆ ಪೋಸ್ ನೀಡುತ್ತಿದ್ದರು. ಶಾಹಿದ್ ತಮಾಷೆಯಾಗಿ ರಶ್ಮಿಕಾ ಅವರ ಭುಜದ ಮೇಲೆ ಕೈ ಹಾಕಿದರು. ಆದರೆ, ಆ ಸಮಯದಲ್ಲಿ ರಶ್ಮಿಕಾ ಸ್ವಲ್ಪ ಮುಜುಗರಕ್ಕೊಳಗಾದಂತೆ ನಟಿಸಿ, ತಕ್ಷಣ ಹಿಂದೆ ಸರಿದು ಅವರ ಕೈಯನ್ನು ತಳ್ಳಿದರು.

Loading...