ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

ʻಟ್ಯಾಟೂ ಹಾಕಿಸಿಕೊಳ್ಳಬೇಡಿ, ನಂಗೆ ಬೇಜಾರ್‌ ಆಗತ್ತೆʼ; ದಿಢೀರ್‌ ಅಂತ ʻಬಿಗ್ ಬಾಸ್ʼ ಖ್ಯಾತಿಯ ಕಾವ್ಯ ಶೈವ ಹೀಗೆ ಹೇಳಿದ್ದೇಕೆ?

ʻಟ್ಯಾಟೂ ಹಾಕಿಸಿಕೊಳ್ಳಬೇಡಿʼ; ʻಬಿಗ್ ಬಾಸ್ʼ ಕಾವ್ಯ ಶೈವ ಕಳಕಳಿಯ ಮನವಿ

Bigg Boss Kannada 12 Kavya Shaiva: ಬಿಗ್‌ ಬಾಸ್‌ ಕನ್ನಡ 12ರಲ್ಲಿ 3ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ ಕಾವ್ಯ ಇದೀಗ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದಾರೆ. ಅಭಿಮಾನಿಗಳು ತಮ್ಮ ಮೇಲಿರುವ ಪ್ರೀತಿಯಿಂದಾಗಿ ಮೈಮೇಲೆ ಕಾವ್ಯ ಹೆಸರಿನ ಟ್ಯಾಟೂ ಹಾಕಿಸಿಕೊಳ್ಳುತ್ತಿರುವುದನ್ನು ಕಂಡು ಬೇಸರ ವ್ಯಕ್ತಪಡಿಸಿದ್ದಾರೆ.

Duniya Vijay: ಸಾಮಾಜಿಕ ಕಳಕಳಿಯುಳ್ಳ ʻಲ್ಯಾಂಡ್‌ಲಾರ್ಡ್‌ʼ ಚಿತ್ರಕ್ಕೆ ತೆರಿಗೆ ವಿನಾಯಿತಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ʻಲ್ಯಾಂಡ್‌ಲಾರ್ಡ್ʼ ಚಿತ್ರಕ್ಕೆ ತೆರಿಗೆ ವಿನಾಯಿತಿ; CM ಸಿದ್ದರಾಮಯ್ಯ ಸೂಚನೆ

Landlord Kannada Movie: ಸಾಮಾಜಿಕ ನ್ಯಾಯ ಮತ್ತು ಶೋಷಣೆಯ ವಿರುದ್ಧದ ಹೋರಾಟದ ಕಥೆಯನ್ನು ಹೊಂದಿರುವ ಲ್ಯಾಂಡ್‌ಲಾರ್ಡ್ ಸಿನಿಮಾ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯಿತಿ ಪಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರತಂಡದ ಮನವಿಯನ್ನು ಪುರಸ್ಕರಿಸಿ, ಅಧಿಕಾರಿಗಳಿಗೆ ಈ ಸಂಬಂಧ ಸೂಚನೆ ನೀಡಿದ್ದಾರೆ.

Yash: ‌ʻಧುರಂಧರ್‌ 2ʼ ಅಬ್ಬರದ ನಡುವೆಯೂ ಅಗ್ರಸ್ಥಾನದಲ್ಲಿ ಸ್ಥಿರವಾಗಿ ನಿಂತ ʻಟಾಕ್ಸಿಕ್‌ʼ; ರಾಯನ ನೋಡಲು ಕಾಯ್ತಿದೆ ಇಂಡಿಯಾ!

Toxic: ʻಧುರಂಧರ್ 2ʼ ಅಬ್ಬರದ ನಡುವೆಯೂ ಅಗ್ರಸ್ಥಾನದಲ್ಲಿ `ರಾಕಿಂಗ್ ಸ್ಟಾರ್'

Yash's Toxic Movie: ಭಾರತೀಯ ಚಿತ್ರರಂಗದ ಮೋಸ್ಟ್ ಆಂಟಿಸಿಪೇಟೆಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಟಾಕ್ಸಿಕ್ ಪಾತ್ರವಾಗಿದೆ. ಐಎಂಡಿಬಿ (IMDb) ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಶೇ.28.6 ರಷ್ಟು ಮತಗಳನ್ನು ಪಡೆಯುವ ಮೂಲಕ 'ಟಾಕ್ಸಿಕ್' ಅಗ್ರಸ್ಥಾನದಲ್ಲಿದೆ. ರಣವೀರ್ ಸಿಂಗ್ ಅಭಿನಯದ 'ಧುರಂಧರ್ 2' ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, ಮಾರ್ಚ್ 19 ರಂದು ಈ ಎರಡೂ ಸಿಇಮಾಗಳು ಒಟ್ಟಿಗೆ ತೆರೆಗೆ ಬರಲಿವೆ.

Dhurandhar Part 2 : ʻಧುರಂಧರ್ 2ʼ ಹೊಸ ಪೋಸ್ಟರ್‌ ಔಟ್‌! ಇಂದೇ ಟೀಸರ್ ಬಿಡುಗಡೆ

ʻಧುರಂಧರ್ 2ʼ ಹೊಸ ಪೋಸ್ಟರ್‌ ಔಟ್‌! ಇಂದೇ ಟೀಸರ್ ಬಿಡುಗಡೆ

Dhurandhar Part 2: ಆದಿತ್ಯ ಧರ್ ಅವರ 'ಧುರಂಧರ್ ಭಾಗ 2' ಚಿತ್ರದ ಬಹುನಿರೀಕ್ಷಿತ ಟೀಸರ್‌ಗಾಗಿ ಕಾಯುವ ಸಮುಯ ಬಹುತೇಕ ಮುಗಿದಿದೆ. ಏಕೆಂದರೆ 'ಧುರಂಧರ್: ದಿ ರಿವೆಂಜ್' ಚಿತ್ರದ ಅಧಿಕೃತ ಟೀಸರ್ ಇಂದೇ (ಫೆಬ್ರವರಿ 3, 2026) ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ರಣವೀರ್ ಸಿಂಗ್ (Ranveer Singh) ಚಿತ್ರದ ಹೊಸ ಪೋಸ್ಟರ್ ಜೊತೆಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

Sitara Ghattamaneni : ವೇದಿಕೆ ಮೇಲೆ ಸಿತಾರಾ ರ‍್ಯಾಂಪ್ ವಾಕ್;  ಮಹೇಶ್ ಬಾಬು ಮಗಳ ಲುಕ್‌ಗೆ ಫ್ಯಾನ್ಸ್‌ ಫಿದಾ

ಸಿತಾರಾ ರ‍್ಯಾಂಪ್ ವಾಕ್; ಮಹೇಶ್ ಬಾಬು ಮಗಳ ಲುಕ್‌ಗೆ ಫ್ಯಾನ್ಸ್‌ ಫಿದಾ

Mahesh Babu daughter: ಮಹೇಶ್ ಬಾಬು ಅವರ ಪುತ್ರಿ ಸಿತಾರಾ ಘಟ್ಟಮನೇನಿ ಆಭರಣ ಬಿಡುಗಡೆ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ರ‍್ಯಾಂಪ್ ವಾಕ್ ಮಾಡಿದ್ದಾರೆ. ಪಿಎಂಜೆ ಜ್ಯುವೆಲ್ಸ್ ಹೈದರಾಬಾದ್‌ನ ತಾಜ್ ಕೃಷ್ಣಾದಲ್ಲಿ ವಿಶ್ವದ ಅತಿದೊಡ್ಡ ಆಭರಣ ಪ್ರದರ್ಶನವನ್ನು ಉದ್ಘಾಟಿಸಿತು. ಕಾರ್ಯಕ್ರಮಗಳಿಗಾಗಿ 10,000 ಕ್ಕೂ ಹೆಚ್ಚು ವಿಶಿಷ್ಟ ವಿನ್ಯಾಸಗಳನ್ನು ಆಯ್ಕೆ ಮಾಡಲಾಗಿದ್ದು, ಈ ಕಾರ್ಯಕ್ರಮವು ಭಾರತದ ಅತ್ಯುತ್ತಮ ಕರಕುಶಲ ಆಭರಣಗಳ ಗಮನಾರ್ಹ ಪ್ರದರ್ಶನವಾಗಿತ್ತು. ಸಿತಾರಾ ರಾಂಪ್ ಮೇಲೆ ಕೇವಲ ಅತಿಥಿಯಾಗಿ ಮಾತ್ರವಲ್ಲದೆ ಪಿಎಂಜೆ ಜ್ಯುವೆಲ್ಲರ್ಸ್‌ ಬ್ರ್ಯಾಂಡ್‌ ಅಂಬಾಸಿಡರ್ ಆಗಿಯೂ ನಡೆದರು.

Parvathy Thiruvothu: ʻಮಿಲನ’ ನಟಿ ಪಾರ್ವತಿಗೆ ಬಾಡಿ ಶೇಮಿಂಗ್‌; ವಿಡಿಯೋ ವೈರಲ್‌

ʻಮಿಲನ’ ನಟಿ ಪಾರ್ವತಿಗೆ ಬಾಡಿ ಶೇಮಿಂಗ್‌; ವಿಡಿಯೋ ವೈರಲ್‌

arvathy Thiruvothu Body Shamed : ಮಿಲನ ಖ್ಯಾತಿಯ ನಟಿ ಪಾರ್ವತಿ ತಿರುವೋತ್ ಮಲಯಾಳಂ ಚಲನಚಿತ್ರ ಪ್ರೇಕ್ಷಕರಿಗೆ ಅತ್ಯಂತ ಪ್ರಿಯವಾದ ನಟಿ. ಈಗ, ವೆರೈಟಿ ನಿಯತಕಾಲಿಕೆಯ ಭಾರತೀಯ ಬಿಡುಗಡೆ ಸಮಾರಂಭದಲ್ಲಿ ಪಾರ್ವತಿ ತಿರುವೋತ್ ಅವರ ಗ್ಲಾಮರಸ್ ಲುಕ್‌ನಲ್ಲಿರುವ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಪಾರ್ವತಿ ಅಲ್ಟ್ರಾ-ಗ್ಲಾಮರಸ್ ಲುಕ್‌ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡರು. ಆದರೆ ನಟಿಗೆ ಬಾಡಿ ಶೇಮಿಂಗ್ ಆಗಿದೆ. ಈ ವಿಡಿಯೋ ವೈರಲ್ ಆಗಿದೆ. ಇದಕ್ಕೆ ಅವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದಾರೆ. ಈ ವಿಷಯ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

Veteran actor Ramakrishna: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಾಹಿತಿ ಮತ್ತು ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ: ಹಿರಿಯ ನಟ ರಾಮಕೃಷ್ಣ ಬೇಸರ

ಚಿತ್ರರಂಗದಲ್ಲಿ ಸಾಹಿತಿ, ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ

ನಾನು ಸಾಹಿತ್ಯವನ್ನಾಗಲಿ ಪುಸ್ತಕಗಳನ್ನಾಗಲಿ ಅರೆದು ಕುಡಿದವನಲ್ಲ. 40 ವರ್ಷಗಳ ವೃತ್ತಿ ಜೀವನದಲ್ಲಿ ಸಿಕ್ಕಿರುವ ಅತ್ಯುತ್ತಮ ಬರಹಗಾರರಾದ ಕೆಲವರಿಂದ ಅದು ತರಾಸು ಅವರಿಂದ ತ್ರಿವೇಣಿ ಆಗಿರಬಹುದು ಅನಕೃ ಅವರಿಂದ ಬೀಚಿಯವರಾಗಿರಬಹುದು. ಇವರೆಲ್ಲರಿಂದ ಎರಕ ಹೊಯ್ದಂತಿದ್ದ ಪುಟ್ಟಣ್ಣ ಕಣಗಾಲ್ ಇರಬಹುದು.ಇವರ ಬಳಿ ಸಂಭಾಷಣೆಯನ್ನು ಒಪ್ಪಿಸಿ, ಒಪ್ಪಿಸಿ ಕೆನ್ನೆಗೆ ಏಟು ತಿಂದು ಇಷ್ಟರ ಮಟ್ಟಿಗಿನ ಭಾಷಾ ಶುದ್ಧತೆ ನಮಗೆ ಬಂದಿದೆ

Kamal Haasan: ದಲೈ ಲಾಮಾರಿಗೆ ಒಲಿಯಿತು ಗ್ರ್ಯಾಮಿ ಪ್ರಶಸ್ತಿ; ಶ್ಲಾಘಿಸಿದ ಕಮಲ್ ಹಾಸನ್

ದಲೈ ಲಾಮಾರಿಗೆ ಒಲಿಯಿತು ಗ್ರ್ಯಾಮಿ ಪ್ರಶಸ್ತಿ; ಶ್ಲಾಘಿಸಿದ ಕಮಲ್ ಹಾಸನ್

Kamal Haasan: ಲಾಸ್ ಏಂಜಲೀಸ್‌ನಲ್ಲಿ ನಡೆದ 68 ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 90 ವರ್ಷ ವಯಸ್ಸಿನ ದಲೈ ಲಾಮಾ ಅವರಿಗೆ ಗ್ರ್ಯಾಮಿ ಪ್ರಶಸ್ತಿ ನೀಡಲಾಗಿದೆ. ಫೆ. 1ರಂದು ಅಮೆರಿಕದ ಕ್ಯಾಲಿಫೋರ್ನಿಯಾ ರಾಜ್ಯದ ಲಾಸ್ ಏಂಜಲೀಸ್ ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಲೈ ಲಾಮಾ ಅವರ ಆಲ್ಬಂಗೆ ಬೆಸ್ಟ್ ಆಡಿಯೋ ಬುಕ್, ನರೇಷನ್, ಸ್ಟೋರಿ ಟೆಲ್ಲಿಂಗ್ ರೆಕಾರ್ಡಿಂಗ್ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಹಿರಿಯ ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಅವರನ್ನು ಅಭಿನಂದಿಸಿದರು.

Danta Purana Movie: ಫೆ.6ರಂದು ಮಕ್ಕಳ ಚಲನಚಿತ್ರ ʼದಂತಪುರಾಣʼ ಬಿಡುಗಡೆ

ಫೆ.6ರಂದು ಮಕ್ಕಳ ಚಲನಚಿತ್ರ ʼದಂತಪುರಾಣʼ ಬಿಡುಗಡೆ

Vijayanagara News: ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರ ಮಹೋತ್ಸವದಲ್ಲಿ ಮಾನ್ಯತೆ ಪಡೆದು, ಮೂರು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿರುವ ವಿಭಿನ್ನ ಕಥಾನವಸ್ತುವಿನ ಕನ್ನಡ ಸಿನಿಮಾ “ದಂತಪುರಾಣ” ಫೆ.6ರಂದು ಬಿಡುಗಡೆ ಆಗಲಿದೆ ಎಂದು ನಿರ್ಮಾಪಕ ನವೀನ್ ಶರ್ಮಾ ತಿಳಿಸಿದ್ದಾರೆ.

Dhurandhar 2: ರಣವೀರ್ ಸಿಂಗ್- ಸಾರಾ ಅರ್ಜುನ್ ಕ್ರಿಪ್ಟಿಕ್ ಪೋಸ್ಟ್‌! ಏನಿದು ಅಪ್‌ಡೇಟ್‌?

ರಣವೀರ್ ಸಿಂಗ್- ಸಾರಾ ಅರ್ಜುನ್ ಕ್ರಿಪ್ಟಿಕ್ ಪೋಸ್ಟ್‌!

Actor Ranveer Singh: ರಣವೀರ್ ಸಿಂಗ್ ಅವರ ಬಹು ನಿರೀಕ್ಷಿತ ಧುರಂಧರ್ 2 ಸಿನಿಮಾದಿಂದ ಗುಡ್‌ ನ್ಯೂಸ್‌ ಬರೋ ಸಮಯ ಹತ್ತಿರವಾದಂತಿದೆ. ಸೋಮವಾರ, ರಣವೀರ್ ಸಿಂಗ್ , ಸಹನಟ ಸಾರಾ ಅರ್ಜುನ್ ಮತ್ತು ನಿರ್ದೇಶಕ ಆದಿತ್ಯ ಧರ್ ಅವರೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲದಿಂದ ಕಾಯುತ್ತಿದ್ದ ಅಪ್‌ಡೇಟ್ ಸುಳಿವು ನೀಡಿದೆ. ರಣವೀರ್‌ ಇನ್‌ಸ್ಟಾ ಮೂಲಕ ಕೊಟ್ಟ ಹಿಂಟ್‌ ಏನು ಗೊತ್ತಾ? ‌

D55: ಶ್ರೀಲೀಲಾ ಬೆನ್ನಲ್ಲೇ ಧನುಷ್‌ ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ

ಶ್ರೀಲೀಲಾ ಬೆನ್ನಲ್ಲೇ ಧನುಷ್‌ ಸಿನಿಮಾಗೆ ಎಂಟ್ರಿ ಕೊಟ್ಟ ಸಾಯಿ ಪಲ್ಲವಿ

Dhanush: ಧನುಷ್ಅ ವರ ಮುಂಬರುವ ತಮಿಳು ಚಿತ್ರ ಡಿ55 ರ ತಾರಾಗಣಕ್ಕೆ ಸಾಯಿ ಪಲ್ಲವಿ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಇದು ಮಾರಿ 2 ರ ನಂತರ ಅವರೊಂದಿಗಿನ ಅವರ ಎರಡನೇ ಸಿನಿಮಾ ಇದಾಗಿದೆ . ಸೋಮವಾರ ಈ ಘೋಷಣೆ ಮಾಡಲಾಗಿದ್ದು, ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶನದ ಬಹು ನಿರೀಕ್ಷಿತ ಯೋಜನೆಯಲ್ಲಿ ಅವರ ಪಾಲ್ಗೊಳ್ಳುವಿಕೆಯ ಕುರಿತಾದ ಊಹಾಪೋಹಗಳಿಗೆ ಅಂತ್ಯ ಹಾಡಲಾಗಿದೆ. ಈ ಚಿತ್ರದಲ್ಲಿ ಶ್ರೀಲೀಲಾ ಕೂಡ ನಟಿಸಿದ್ದಾರೆ. ಆದರೆ ಶ್ರೀಲೀಲಾ ಧನುಷ್ಅ ವರೊಂದಿಗೆ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

Jai Movie OTT: ನಟ ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಸಿನಿಮಾ ಶೀಘ್ರದಲ್ಲೇ  ಈ ಒಟಿಟಿಗೆ ಎಂಟ್ರಿ!

ರೂಪೇಶ್ ಶೆಟ್ಟಿ ನಿರ್ದೇಶನದ ‘ಜೈ’ ಸಿನಿಮಾ ಶೀಘ್ರದಲ್ಲೇ ಈ ಒಟಿಟಿಗೆ ಎಂಟ್ರಿ!

Roopesh Shetty: ತುಳುನಾಡಿನ ಸಾಮಾಜಿಕ ಸಾಂಸ್ಕೃತಿಕ ಛಾಯೆಯನ್ನು ಹೊಂದಿರುವ "ಜೈ" ಚಿತ್ರವನ್ನು ರೂಪೇಶ್ ಶೆಟ್ಟಿ ನಿರ್ದೇಶನ ಮಾಡಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಇದೊಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದು ಸತ್ಯ ಎಂಬ ಸಿಂಹಬೆಟ್ಟು ಹಳ್ಳಿಯ ವ್ಯಕ್ತಿಯ ಕಥೆಯಾಗಿರುತ್ತದೆ. ತನ್ನ ಸಮುದಾಯದ ಸಮಸ್ಯೆಗಳನ್ನು ಎತ್ತಿ ಹಿಡಿಯವ ಅವನು,‌ಅವುಗಳನ್ನು ಬಗೆಹರಿಸಲು ಮಾಡುವ‌ ಹೋರಾಟ,‌ ಮುಂತಾದವುಗಳನ್ನು ಚಿತ್ರ ಬಿಚ್ಚಿ ಇಡಲಿದೆ.

ʻಕಲಾವಿದರಿಗೆ ಕಾಂಡೋಮ್ ಸಪ್ಲೈ ಮಾಡ್ತಾರೆʼ; ಚಕ್ರವರ್ತಿ ಚಂದ್ರಚೂಡ್‌ ಮಾತಿಗೆ ಕನ್ನಡ ನಿರ್ಮಾಪಕರು ಕೆಂಡ! ಪೊಲೀಸರಿಗೆ ಕೊಟ್ಟ ದೂರಿನಲ್ಲಿ ಏನಿದೆ?

ಚಕ್ರವರ್ತಿ ಚಂದ್ರಚೂಡ್ ವಿರುದ್ಧ ತಿರುಗಿಬಿದ್ದ ನಿರ್ಮಾಪಕರ ಸಂಘ!

Chakravarthy Chandrachud Controversy: "ನಿರ್ಮಾಪಕರು ಹೀರೋಗಳಿಗೆ ಕಾಂಡೋಮ್ ಸಪ್ಲೈ ಮಾಡುತ್ತಾರೆ" ಎಂದು ಚಕ್ರವರ್ತಿ ಚಂದ್ರಚೂಡ್‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ ದೂರು ನೀಡಿದೆ. ಚಂದ್ರಚೂಡ್ ವಿರುದ್ಧ ಐಟಿ ಕಾಯ್ದೆಯಡಿ ಕ್ರಮಕ್ಕೆ ಆಗ್ರಹಿಸಲಾಗಿದೆ.

ಮೋಹನ್‌ಲಾಲ್‌ ನಟಿಸಬೇಕಿದ್ದ 1 ಸಾವಿರ ಕೋಟಿ ಬಜೆಟ್‌ನ ಸಿನಿಮಾಕ್ಕೆ ರಿಷಬ್‌ ಶೆಟ್ಟಿ ಎಂಟ್ರಿ? 9 ವರ್ಷಗಳ ಹಿಂದೆ ಏನಾಗಿತ್ತು ಗೊತ್ತಾ?

1 ಸಾವಿರ ಕೋಟಿ ರೂ. ಬಜೆಟ್‌ನ ಚಿತ್ರಕ್ಕೆ ಕೈ ಹಾಕ್ತಾರಾ ರಿಷಬ್ ಶೆಟ್ಟಿ?

Rishab Shetty: ಎಂ. ಟಿ. ವಾಸುದೇವನ್ ನಾಯರ್ ಅವರ 'ರಂಡಾಮೂಳಂ' ಕಾದಂಬರಿ ಆಧರಿಸಿ ಉದ್ಯಮಿ ಬಿ.ಆರ್. ಶೆಟ್ಟಿ ಅವರು 9 ವರ್ಷಗಳ ಹಿಂದೆ 1000 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ಘೋಷಿಸಿದ್ದರು. ಆದರೆ ಅದು ನಿಂತುಹೋಗಿತ್ತು. ಈ ಬೃಹತ್ ಪ್ರಾಜೆಕ್ಟ್‌ಗೆ ಈಗ ರಿಷಬ್ ಶೆಟ್ಟಿ ಮರುಜೀವ ನೀಡಲಿದ್ದಾರೆ ಎನ್ನಲಾಗುತ್ತಿದೆ.

ರಿತ್ವಿಕ್ ಮಠದ್ - ಚೈತ್ರಾ ಆಚಾರ್ ಜೋಡಿಯ 'ಮಾರ್ನಮಿ' ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್; ಕರಾವಳಿಯ ಸಂಸ್ಕೃತಿಯ ಸಿನಿಮಾಕ್ಕೆ ʻಕಿಚ್ಚʼ ಸುದೀಪ್ ಸಾಥ್!

ʻಮಾರ್ನಮಿʼ ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ಫಿಕ್ಸ್!

Marnami Movie Release Date: ರಿತೀಶ್ ಶೆಟ್ಟಿ ನಿರ್ದೇಶನದ ಮಾರ್ನಮಿ ಚಿತ್ರವು ಕರಾವಳಿಯ ಆಚರಣೆಗಳು, ಹುಲಿವೇಷ ಮತ್ತು ಭಾವನಾತ್ಮಕ ಪ್ರೇಮಕಥೆಯನ್ನು ಒಳಗೊಂಡಿದ್ದು, ಫೆಬ್ರವರಿ 20ರಂದು ಈ ಸಿನಿಮಾ ತೆರೆಕಾಣುತ್ತಿದೆ. ಕಿರುತೆರೆ ನಟ ರಿತ್ವಿಕ್ ಮಠದ್ ಮತ್ತು ಪ್ರತಿಭಾವಂತ ನಟಿ ಚೈತ್ರಾ ಜೆ. ಆಚಾರ್ ಮುಖ್ಯ ಭೂಮಿಕೆಯಲ್ಲಿದ್ದು, ಕಿಚ್ಚ ಸುದೀಪ್ ಅವರ ಬೆಂಬಲ ಚಿತ್ರತಂಡಕ್ಕೆ ಆನೆಬಲ ನೀಡಿದೆ.

ಫೆ.2ರಂದು ರಶ್ಮಿಕಾ - ವಿಜಯ್‌ ದೇವರಕೊಂಡ ಮದುವೆ ನಡೆಯೋದಿಲ್ಲ! ಹಾಗಾದ್ರೆ, ವೆಡ್ಡಿಂಗ್‌ ಡೇಟ್‌ ಯಾವತ್ತು? ಇಲ್ಲಿದೆ ಹೊಸ ಅಪ್ಡೇಟ್‌!

ರಶ್ಮಿಕಾ -ವಿಜಯ್ ದೇವರಕೊಂಡ ಮದುವೆ ಫಿಕ್ಸ್? ಆದ್ರೆ, ಫೆಬ್ರವರಿ.2ರಂದು ಅಲ್ಲ!

Rashmika Mandanna Vijay Deverakonda Wedding: ವಿಜಯ್‌ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ರಾಜಸ್ಥಾನದ ಉದಯಪುರದಲ್ಲಿ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಈ ನಡುವೆ ಅವರ ಮದುವೆ ದಿನಾಂಕದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ.

Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್‌ ನಂಬರ್‌ 1!

ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ಧುರಂಧರ್‌ ನಂಬರ್‌ 1 ಟ್ರೆಂಡಿಂಗ್‌!

Pakistan on Netflix: ದೇಶೀಯವಾಗಿ ಮತ್ತು ವಿದೇಶಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಧುರಂಧರ್ ಅತ್ಯಂತ ಯಶಸ್ವಿ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ. ಪಾಕಿಸ್ತಾನದಲ್ಲಿ ಬಿಡುಗಡೆಯಾಗದಿದ್ದರೂ , ಈ ಚಿತ್ರವು ವಿದೇಶಗಳಲ್ಲಿ ಹೆಚ್ಚು ಗಳಿಸುವಲ್ಲಿ ಯಶಸ್ವಿಯಾಗಿದೆ ಈಗ, ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದ್ದು, ನಂಬರ್ 1 ಸ್ಥಾನದಲ್ಲಿದೆ. ಧುರಂಧರ್ ಅವರ OTT ಬಿಡುಗಡೆಯು ಪಾಕಿಸ್ತಾನದಲ್ಲಿ ಲಭ್ಯವಾಗುವಂತೆ ಮಾಡಿದೆ. ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಧುರಂಧರ್ ನಂಬರ್ 1 ಸ್ಥಾನದಲ್ಲಿದೆ, ಏಕೆಂದರೆ ಅಲ್ಲಿನ ವೀಕ್ಷಕರು ಚಿತ್ರವು ಏಕೆ 'ವಿವಾದಾತ್ಮಕ'ವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯಾಗಿದೆ.

Bollywood stars: ಇದೊಂದು ಕಾರಣಕ್ಕೆ ಒಂದಾದ ಸಲ್ಮಾನ್ , ಅಮಿರ್, ಅಕ್ಷಯ್ , ಅಜಯ್ ದೇವಗನ್! ಶಾರುಖ್‌ ಎಲ್ಲಿ?

ಇದೊಂದು ಕಾರಣಕ್ಕೆ ಒಂದಾದ ಸಲ್ಮಾನ್, ಅಮಿರ್, ಅಕ್ಷಯ್ , ಅಜಯ್ ದೇವಗನ್!

Sharukh: ಬಾಲಿವುಡ್ ತಾರೆಯರಾದ ಸಲ್ಮಾನ್ ಖಾನ್ , ಅಕ್ಷಯ್ ಕುಮಾರ್ , ಅಮೀರ್ ಖಾನ್ ಮತ್ತು ಅಜಯ್ ದೇವಗನ್ ಇತ್ತೀಚೆಗೆ ವೆರೈಟಿ ಇಂಡಿಯಾದ ಮ್ಯಾಗಜೀನ್ ಮುಖಪುಟ ಚಿತ್ರೀಕರಣಕ್ಕಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋ ವೈರಲ್‌ ಆಗುತ್ತಿದ್ದಂತೆ ಶಾರುಖ್ ಖಾನ್ ಅನುಪಸ್ಥಿತಿಯ ಬಗ್ಗೆ ಅನೇಕ ಅಭಿಮಾನಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ನಿರಾಶೆಯನ್ನು ವ್ಯಕ್ತಪಡಿಸಿದರು.

Ranbir Kapoor: ರಣಬೀರ್ ಕಪೂರ್  ʻರಾಮಾಯಣʼವನ್ನು ಆದಿಪುರುಷಕ್ಕೆ ಹೋಲಿಸಲು ಸಾಧ್ಯವಿಲ್ಲ; ಅರುಣ್ ಗೋವಿಲ್

ʻರಾಮಾಯಣʼವನ್ನು ಆದಿಪುರುಷಕ್ಕೆ ಹೋಲಿಸಲು ಸಾಧ್ಯವಿಲ್ಲ; ಅರುಣ್ ಗೋವಿಲ್

Ramayana: ರಾಮಾಯಣವನ್ನು ಲೆಕ್ಕವಿಲ್ಲದಷ್ಟು ಬಾರಿ ದೊಡ್ಡ ಪರದೆಯ ಸಿನಿಮಾವಾಗಿ ತರಲಾಗಿದೆ. ಅನೇಕ ನಟರು ಟಿವಿ ಮತ್ತು ಚಲನಚಿತ್ರಗಳಲ್ಲಿ ಶ್ರೀರಾಮನ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರಲ್ಲಿ, ಅರುಣ್ ಗೋವಿಲ್ ಹೆಸರು ಇಂದಿಗೂ ಜೀವಂತ. ನಟ ನಿತೇಶ್ ತಿವಾರಿ ಅವರ ಮುಂಬರುವ ಚಲನಚಿತ್ರ ರಾಜ ದಶರಥನ ಪಾತ್ರದೊಂದಿಗೆ ಮಹಾಕಾವ್ಯಕ್ಕೆ ಮರಳುತ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಮುಂಬರುವ ರಾಮಾಯಣ ಚಿತ್ರ ಎದುರಿಸಲಿರುವ ಹೋಲಿಕೆಗಳನ್ನು ಗೋವಿಲ್ ಉಲ್ಲೇಖಿಸಿದ್ದಾರೆ.

Gilli Nata:  ದುಡ್ಡು ಇರೋರನ್ನ ಮಾತ್ರ ಗಿಲ್ಲಿ ಮೀಟ್‌ ಆಗ್ತಾರೆ; ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ ಗಂಭೀರ ಆರೋಪ

ಟ್ಯಾಟೂ ಹಾಕಿಸಿಕೊಂಡ ಫ್ಯಾನ್​ ಗಿಲ್ಲಿ ಬಗ್ಗೆ ಗಂಭೀರ ಆರೋಪವಿದು!

Gilli Nata Fan: ಬಿಗ್ ಬಾಸ್ 12 ಟ್ರೋಫಿ ಗೆದ್ದ ಕ್ಷಣದಿಂದಲೇ ಗಿಲ್ಲಿ ನಟನ ಕ್ರೇಜ್ ಹೆಚ್ಚಾಗಿದೆ. ಸಿನಿಮಾತಾರೆಯರು, ರಾಜಕಾರಣಿಗಳು, ವಿವಿಧ ರಿಯಾಲಿಟಿ ಶೋಗಳು, ಸಮಾರಂಭಗಳು, ಕಾರ್ಯಕ್ರಮಗಳಿಗೆ ಗಿಲ್ಲಿ ನಟ ಅತಿಥಿಯಾಗಿದ್ದಾರೆ. ಗಿಲ್ಲಿ ಸದ್ಯ ಕೈಗೆ ಸಿಗೋದು ಕಷ್ಟವೇ ಆಗಿದೆ. ಆದರೀಗ ಗಿಲ್ಲಿಗೆ ಅಭಿಮಾನವೇ ಸಮಸ್ಯೆಯಾಗಿರುವಂತಿದೆ. ಗಿಲ್ಲಿ ಫೋಟೋ ಹಚ್ಚೆ ಹಾಕಿಸಿಕೊಂಡ ಅಭಿಮಾನಿ ಗಿಲ್ಲಿ ಅಭಿಮಾನಿಗಳನ್ನು ಗೌರವಿಸುವುದಿಲ್ಲ ಎಂದು ಹಲವು ಮಾಧ್ಯಮಗಳಲ್ಲಿ ಹೇಳಿಕೆ ನೀಡಿ ಆರೋಪಿಸಿದ್ದಾರೆ.

CCL 2026 Final: ಸೆಲೆಬ್ರಿಟಿ ಕ್ರಿಕೆಟ್ ಲೀಗ್; ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

ಸೆಲೆಬ್ರಿಟಿ ಕ್ರಿಕೆಟ್ ಲೀಗ್; ಚಾಂಪಿಯನ್ ಆದ ಕರ್ನಾಟಕ ಬುಲ್ಡೋಜರ್ಸ್

Sudeep: ಕೊಯಮತ್ತೂರಿನಲ್ಲಿ ನಡೆದ ಫೈನಲ್​​ನಲ್ಲಿ ಬಂಗಾಳ ತಂಡವನ್ನು ಎದುರಿಸಿದ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಆಲ್​​ರೌಂಡ್ ಪ್ರದರ್ಶನ ತೋರಿ ಫೈನಲ್ ಪಂದ್ಯದಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ. 12 ವರ್ಷಗಳ ಬಳಿಕ ಕರ್ನಾಟಕ ಬುಲ್ಡೋಜರ್ಸ್ ತಂಡ ಚಾಂಪಿಯನ್ ಎನಿಸಿಕೊಂಡಿದೆ. 16ನೇ ಓವರ್‌ನಲ್ಲಿ 7 ರನ್‌ಗಳನ್ನು ಬುಲ್ದೋಜರ್ಸ್ ಗಳಿಸಿತು. ಕೊನೆಯ 24 ಬಾಲ್‌ಗಳಲ್ಲಿ ಗೆಲುವಿಗೆ 10 ರನ್‌ಗಳು ಬೇಕಿದ್ದವು. ಅಂತಿಮವಾಗಿ ಮಂಜುನಾಥ್ಎ ರಡು ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿ ತಂಡಕ್ಕೆ ಗೆಲುವಿನ ದಡಕ್ಕೆ ತಲುಪಿಸಿದರು.

Ram Charan: ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್‌ ಚರಣ್‌; ವಿಡಿಯೋ ಕಂಡು ನೆಟ್ಟಿಗರು ಛೀಮಾರಿ

ಮಗಳೊಂದಿಗೆ ಆಸ್ಪತ್ರೆಗೆ ಹೋಗಲು ಹರಸಾಹಸ ಪಟ್ಟ ರಾಮ್‌ ಚರಣ್‌

Ramcharan: ಪ್ಯಾನ್ ಇಂಡಿಯಾ ಸ್ಟಾರ್ ರಾಮ್ ಚರಣ್ ಪತ್ನಿ ಉಪಾಸನಾ ಅವರಿಗೆ ನಿರೀಕ್ಷೆಯಂತೆಯೇ ಅವಳಿ ಮಕ್ಕಳು ಜನಿಸಿವೆ. ಚಿತ್ರೋದ್ಯಮದಿಂದ ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿತು. ಆದರೆ ರಾಮ್ ಚರಣ್ ಅವರ ಅಭಿಮಾನಿಗಳು ಅವರ ಪತ್ನಿ ದಾಖಲಾಗಿರುವ ಆಸ್ಪತ್ರೆಗೆ ನುಗ್ಗಿ ಅವರು ಹೋಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆಸಿದಾಗ ಪರಿಸ್ಥಿತಿ ಕೈ ಮೀರಿದೆ.

Sreeleela: ಧನುಷ್‌ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್

ಧನುಷ್‌ ʼಡಿ55ʼಗೆ ಜೋಡಿಯಾದ ಶ್ರೀಲೀಲಾ; ಕನ್ನಡತಿಗೆ ಬಂಪರ್ ಆಫರ್

Dhanush in Rajkumar Periasamy's D55: ಧನುಷ್ ಅವರ ಮುಂದಿನ ಯೋಜನೆಯಾದ 'ಡಿ55' (D 55) ನಲ್ಲಿ ನಟಿ ಶ್ರೀಲೀಲಾ ನಟಿಸಲಿದ್ದಾರೆ . ಈ ಚಿತ್ರವನ್ನು ನಿರ್ದೇಶಕ ರಾಜ್‌ಕುಮಾರ್ ಪೆರಿಯಸಾಮಿ ನಿರ್ದೇಶಿಸುತ್ತಿದ್ದಾರೆ. ಶನಿವಾರ ಎಕ್ಸ್‌ ಖಾತೆಯಲ್ಲಿ ವುಂಡರ್‌ಬಾರ್ ಫಿಲ್ಮ್ಸ್ ಈ ಘೋಷಣೆ ಮಾಡಿದೆ. D55 ಚಿತ್ರದ ನಿರ್ಮಾಣ ಕಾರ್ಯ ಪ್ರಸ್ತುತ ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರೀಕರಣ 2026 ರ ಅಂತ್ಯದವರೆಗೆ ಮುಂದುವರಿಯಲಿದೆ.

Karikaada Trailer: ಬಿಡುಗಡೆ ಆಯ್ತು ‘ಕರಿಕಾಡ’ ಟ್ರೈಲರ್‌; ತೆರೆಗೆ ಯಾವಾಗ?

ಬಿಡುಗಡೆ ಆಯ್ತು ‘ಕರಿಕಾಡ’ ಟ್ರೈಲರ್‌; ತೆರೆಗೆ ಯಾವಾಗ?

Kannada Movie: ರಿದ್ದಿ ಎಂಟರ್ಟೈನಮೆಂಟ್ ಅಡಿ ಕಾಡ ನಟರಾಜ್ ಕಥೆ ಬರೆದು ನಿರ್ಮಾಣ ಮಾಡಿರುವ ಚಿತ್ರ‌ 'ಕರಿಕಾಡ' . ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರೆವೇರಿತು. ತನ್ನ ಕಂಟೆಂಟ್, ಮೇಕಿಂಗ್ ಮೂಲಕವೇ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಚಿತ್ರಕ್ಕೆ ಕೆ.ವೆಂಕಟೇಶ್ ಚಿತ್ರಕಥೆ, ಸಂಭಾಷಣೆ ಬರೆದು ಆ್ಯಕ್ಷನ್ ಕಟ್ಹೇ ಳಿದ್ದಾರೆ.

Loading...