ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Raghava Lawrence:  ರಾಘವ್ ಲಾರೆನ್ಸ್ ರಾಜಕೀಯಕ್ಕೆ ಪ್ರವೇಶ; ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

ರಾಘವ್ ಲಾರೆನ್ಸ್ ರಾಜಕೀಯಕ್ಕೆ ಪ್ರವೇಶ; ಅಭಿಮಾನಿಗಳಲ್ಲಿ ಮನವಿ ಮಾಡಿದ್ದೇನು?

Raghava Lawrence: ವಿಜಯ್ ಅವರಿಂದ ತೆರವಾದ ತಿರುಚ್ಚಿ ಪೂರ್ವ ವಿಧಾನಸಭಾ ಕ್ಷೇತ್ರದಿಂದ ರಾಘವ ಲಾರೆನ್ಸ್ ಸ್ಪರ್ಧಿಸಬಹುದೆಂಬ ಊಹಾಪೋಹಗಳು ಹೆಚ್ಚುತ್ತಿರುವ ನಡುವೆ, ನಟ-ಚಲನಚಿತ್ರ ನಿರ್ಮಾಪಕ ರಾಘವ ಲಾರೆನ್ಸ್ ಶುಕ್ರವಾರ ರಾಜಕೀಯ ಪ್ರವೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ. ಏಪ್ರಿಲ್‌ನಲ್ಲಿ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಗೆದ್ದಿದ್ದ ಸ್ಥಾನಕ್ಕೆ ಲಾರೆನ್ಸ್ ಅವರನ್ನು ಲಿಂಕ್ ಮಾಡಲಾಗಿದೆ ಎಂಬ ವರದಿಗಳ ನಂತರ ಈ ಘೋಷಣೆ ಬಂದಿದೆ.

Actor Suriya:  ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

Actor Suriya: ನಿರ್ದೇಶಕನಿಗೆ ನಟ ಸೂರ್ಯ ಭರ್ಜರಿ ಗಿಫ್ಟ್

Actor Suriya: ಛಾಯಾಗ್ರಾಹಕ ಜಿಕೆ ವಿಷ್ಣು, ಸಂಪಾದಕ ಆರ್ ಕಲೈವಾಣನ್ ಮತ್ತು ಸಂಗೀತ ಸಂಯೋಜಕ ಸಾಯಿ ಅಭ್ಯಂಕರ್ ಅವರಿಗೆ ಮಹೀಂದ್ರಾ ಬಿಇ6 ಬ್ಯಾಟ್‌ಮ್ಯಾನ್ ಆವೃತ್ತಿಯ ಕಾರುಗಳನ್ನು ಉ ಡುಗೊರೆಯಾಗಿ ನೀಡಿದ ನಂತರ, ಅವರು ಆರ್‌ಜೆ ಬಾಲಾಜಿಗೆ ಹೊಚ್ಚ ಹೊಸ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದರು. ಈ ವಾರ ಸಿನಿಮಾ ಓಟಿಟಿಗೆಗೂ ಬಂದಿದೆ. ಬಾಕ್ಸಾಫೀಸ್‌ನಲ್ಲಿ 300 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ದಾಖಲೆ ಬರೆದಿದೆ.

ವರ್ಷಾನುಗಟ್ಟಲೇ ಸಿನಿಮಾ ಶೂಟಿಂಗ್‌ ಮಾಡೋರಿಗೆ 94 ವರ್ಷದ ಸಿಂಗೀತಂ ಶ್ರೀನಿವಾಸ ರಾವ್ ಟಾಂಗ್‌;‌ 77 ದಿನಗಳಲ್ಲಿ ʻಸಿಂಗ್‌ ಗೀತಂʼ ಚಿತ್ರೀಕರಣ ಫಿನೀಶ್‌

ಕೇವಲ 77 ದಿನದಲ್ಲಿ ʻಸಿಂಗ್ ಗೀತಂʼ ಚಿತ್ರದ ಶೂಟಿಂಗ್‌ ಮುಗಿಸಿದ್ದ ಸಿಂಗೀತಂ!

94 ವರ್ಷದ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ ರಾವ್ ಅವರು ವರ್ಷಗಟ್ಟಲೆ ಶೂಟಿಂಗ್ ಎಳೆಯುವ ಇಂದಿನ ತಲೆಮಾರಿಗೆ ಮಾದರಿಯಾಗಿ ತಮ್ಮ ‘ಸಿಂಗ್ ಗೀತಂ’ ಸಿನಿಮಾವನ್ನು ಕೇವಲ 77 ದಿನಗಳಲ್ಲಿ ಪೂರ್ಣಗೊಳಿಸಿ ಜೂನ್ 12 ರಂದು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದಾರೆ.

8 Kannada Movie: ಬಾಲಿವುಡ್‌ನ ಅನುರಾಗ್‌ ಕಶ್ಯಪ್‌ ನಟನೆಯ ಮೊದಲ ಕನ್ನಡ ಸಿನಿಮಾದ ಟೀಸರ್‌ ರಿಲೀಸ್

‌8 Movie: ಅನುರಾಗ್ ಕಶ್ಯಪ್ ನಟನೆಯ ಮೊದಲ ಕನ್ನಡದ ಸಿನಿಮಾದ ಟೀಸರ್‌ ರಿಲೀಸ್

ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಚೊಚ್ಚಲ ಬಾರಿಗೆ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟಿರುವ ‘8’ (ಎಂಟು) ಚಿತ್ರದ ಸಸ್ಪೆನ್ಸ್ ಹಾಗೂ ಎಮೋಷನಲ್ ಟೀಸರ್ ಬಿಡುಗಡೆಯಾಗಿ ಭಾರಿ ಸಂಚಲನ ಮೂಡಿಸಿದೆ. ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಖ್ಯಾತಿಯ ಸುಜಯ್ ಶಾಸ್ತ್ರಿ ನಿರ್ದೇಶನದ ಈ ಚಿತ್ರವು ಮನುಷ್ಯನ ಜೀವನದಲ್ಲಿ ಸಿಗುವ ಎರಡನೇ ಅವಕಾಶದ ಕಥಾಹಂದರವನ್ನು ಹೊಂದಿದೆ.

ಭಾರತೀಯ OTT ರಂಗದಲ್ಲಿ ಹೊಸ ಕ್ರಾಂತಿ; 100 ಮಿಲಿಯನ್ ದಾಟಿದ ಜಿಯೋಹಾಟ್‌ಸ್ಟಾರ್ ಬಳಕೆದಾರರ ಸಂಖ್ಯೆ!

OTT ಲೋಕದಲ್ಲಿ ಜಿಯೋಹಾಟ್‌ಸ್ಟಾರ್ ಧಮಾಕಾ; 10 ಕೋಟಿ ದಾಟಿದ ಬಳಕೆದಾರರ ಸಂಖ್ಯೆ

ಜಿಯೋಹಾಟ್‌ಸ್ಟಾರ್ ಒಟಿಟಿ ವೇದಿಕೆಯ ಪ್ರೀಮಿಯಂ ಮೈಕ್ರೋ-ಕಂಟೆಂಟ್ ವಿಭಾಗವಾದ ‘TADKA’ 100 ಮಿಲಿಯನ್ ಸಕ್ರಿಯ ಬಳಕೆದಾರರನ್ನು ತಲುಪುವ ಮೂಲಕ ಭಾರತೀಯ ಡಿಜಿಟಲ್ ರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಇಂದಿನ ಅವಸರದ ಬದುಕಿಗೆ ಸೂಕ್ತವಾದ 30 ರಿಂದ 60 ಸೆಕೆಂಡುಗಳ ವರ್ಟಿಕಲ್ ಶೈಲಿಯ ಕಥೆಗಳು ಯುವ ಸಮೂಹವನ್ನು ಸೆಳೆದಿದೆ.

ಪ್ರಿಯಾ ಜೊತೆ ಮದುವೆ ಆಗೋದಾಗಿ ಮೊದಲು ಸಂಚಿತ್‌‌ ಸಂಜೀವ್‌ಗೆ ಹೇಳಿದ್ದ ನಟ ಸುದೀಪ್; ಅಂದು ಜೂನಿಯರ್‌ ಕಿಚ್ಚ ಏನ್‌ ಹೇಳಿದ್ರು ಗೊತ್ತಾ?

ಪ್ರಿಯಾ - ಸುದೀಪ್ ಮದುವೆಗೆ ನೋ ಎಂದಿದ್ದ ಸಂಚಿತ್! ಇಲ್ಲಿದೆ ಆ ಕ್ಯೂಟ್‌ ಕಾರಣ

ನಟ ಕಿಚ್ಚ ಸುದೀಪ್ ಅವರು ಪ್ರಿಯಾ ಅವರನ್ನು ಮದುವೆಯಾಗುವ ನಿರ್ಧಾರವನ್ನು ಮೊದಲು ಸೋದರಳಿಯ ಸಂಚಿತ್ ಸಂಜೀವ್‌ಗೆ ತಿಳಿಸಿದ್ದರಂತೆ. ಆದರೆ ಆಗ ಸಂಚಿತ್ ಮಾತ್ರ ಈ ಮದುವೆ ಬೇಡ ಎಂದು ಹೇಳಿದ್ದರಂತೆ! ಈ ತಮಾಷೆಯ ಪ್ರಸಂಗವನ್ನು ಸಂಚಿತ್‌ ಅವರೇ ಹೇಳಿಕೊಂಡಿದ್ದಾರೆ.

ʻಮಹಾನ್ ಕಿಲಾಡಿʼ ರಿಯಾಲಿಟಿ ಶೋ ಮೂಲಕ ಎಂಟ್ರಿ ಕೊಟ್ಟ ‌ʻಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಿಂಚು; ಜಡ್ಜ್‌ ಸ್ಥಾನದಲ್ಲಿ ಗಣೇಶ್‌ ಸಹೋದರ ಮಹೇಶ್‌ ಕೃಷ್ಣ

ಮಿಂಚು ಸಾರಥ್ಯದ ʻಮಹಾನ್ ಕಿಲಾಡಿʼ ಶೋಗೆ ನಟ ಗಣೇಶ್ ಸೋದರ ಮಹೇಶ್ ಕೃಷ್ಣ ಜಡ್ಜ್

'ಕಾಮಿಡಿ ಕಿಲಾಡಿಗಳು' ಖ್ಯಾತಿಯ ಮಿಂಚು ಸಾರಥ್ಯದಲ್ಲಿ 'ಮಹಾನ್ ಕಿಲಾಡಿ' ಎಂಬ ಹೊಸ ರಿಯಾಲಿಟಿ ಶೋ ಅಧಿಕೃತವಾಗಿ ಸಜ್ಜಾಗಿದ್ದು, ಇದರ ಪೋಸ್ಟರ್ ಹಾಗೂ ಟ್ರೇಲರ್ ಲೋಕಾರ್ಪಣೆಗೊಂಡಿದೆ. ಚಿತ್ರರಂಗದಲ್ಲಿ ಅವಕಾಶ ವಂಚಿತರಾದಾಗ ಧೃತಿಗೆಡದೆ ಮಿಂಚು ಈ ವೇದಿಕೆ ಸೃಷ್ಟಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಸಹೋದರ ಮಹೇಶ್ ಕೃಷ್ಣ ಜಡ್ಜ್ ಆಗಿರುವ ಈ ಶೋ ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ.

ರಾಯರ ಸನ್ಯಾಸ ದೀಕ್ಷೆಯ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ ‘ಶ್ರೀ ರಾಘವೇಂದ್ರ ಮಹಾತ್ಮೆ’ ಧಾರಾವಾಹಿ

ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಸೀರಿಯಲ್‌ನಲ್ಲಿ ರಾಯರ ಪಟ್ಟಾಭಿಷೇಕ

ಜೀ ಕನ್ನಡ ವಾಹಿನಿಯ ಯಶಸ್ವಿ ಭಕ್ತಿ ಪ್ರಧಾನ ಧಾರಾವಾಹಿ ‘ಶ್ರೀ ರಾಘವೇಂದ್ರ ಮಹಾತ್ಮೆ’ ಅತ್ಯಂತ ನಿರ್ಣಾಯಕ ಘಟ್ಟ ತಲುಪಿದೆ. ವೆಂಕಟನಾಥರು ಸಂಸಾರ ತ್ಯಜಿಸಿ ಸನ್ಯಾಸತ್ವ ಸ್ವೀಕರಿಸುವಾಗ ಪತ್ನಿ ಸರಸ್ವತಿಯ ಮಾನಸಿಕ ತೊಳಲಾಟ ಪ್ರೇಕ್ಷಕರನ್ನು ಭಾವುಕರನ್ನಾಗಿಸಿದೆ.

Ram Charan: ʻಪೆದ್ದಿʼ ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್‌ ಪಡೆದ ಹಣವೆಷ್ಟು? ವಿವಾದದ ನಂತರ ಸದ್ದು ಮಾಡಿದ ಸಂಭಾವನೆ ಮ್ಯಾಟರ್!‌

Ram Charan: ʻಪೆದ್ದಿʼ ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಜಾನ್ವಿ ಕಪೂರ್

ತೆಲುಗು ನಟ ರಾಮ್ ಚರಣ್ ಅಭಿನಯದ 'ಪೆದ್ದಿ' ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದರೂ, ನಾಯಕಿ ಜಾನ್ವಿ ಕಪೂರ್ ಅವರ 'ಅಚ್ಚೀಯಮ್ಮ' ಪಾತ್ರ ತೀವ್ರ ವಿವಾದಕ್ಕೆ ಈಡಾಗಿದ್ದು ಗೊತ್ತೇ ಇದೆ. ಈ ಮಧ್ಯೆ ಈ ಚಿತ್ರಕ್ಕಾಗಿ ಜಾನ್ವಿ ತಮ್ಮ ವೃತ್ತಿಜೀವನದಲ್ಲೇ ಗರಿಷ್ಠ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ʻಆ ಕಿಡಿಗೇಡಿಗಳನ್ನು ಸುಮ್ನೆ ಬಿಡಲ್ಲʼ; ಸಾವಿನ ವದಂತಿ ಹಬ್ಬಿಸಿದವರಿಗೆ ಹಿರಿಯ ನಟ ದೊಡ್ಡಣ್ಣ ಖಡಕ್‌ ವಾರ್ನಿಂಗ್!‌

ಸಾವಿನ ವದಂತಿ ಹಬ್ಬಿಸಿದವರಿಗೆ ಹಿರಿಯ ನಟ ದೊಡ್ಡಣ್ಣ ಖಡಕ್‌ ವಾರ್ನಿಂಗ್!‌

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಆಘಾತಕಾರಿ ಸುಳ್ಳು ಸುದ್ದಿ ಮತ್ತು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರಿ ಆತಂಕ ಮೂಡಿಸಿತ್ತು. ಈ ಕುರಿತು ಸ್ವತಃ ದೊಡ್ಡಣ್ಣ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದು, ತಾವು ಸಂಪೂರ್ಣ ಆರೋಗ್ಯವಾಗಿ ಮತ್ತು ನೆಮ್ಮದಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Prakash Raj: ಧರ್ಮಸ್ಥಳ ಬುರುಡೆ ಪ್ರಕರಣ;  ಖಡಕ್ ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್

ಧರ್ಮಸ್ಥಳ ಬುರುಡೆ ಪ್ರಕರಣ; ಖಡಕ್ ಸ್ಪಷ್ಟನೆ ನೀಡಿದ ಪ್ರಕಾಶ್ ರಾಜ್

Prakash Raj: ಮೊದಲು ಬುರುಡೆ ಗ್ಯಾಂಗ್ ಜೊತೆಗಿದ್ದ ಚಿನ್ನಯ್ಯ ಇದೀಗ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯಲ್ಲಿ ಹಲವು ಸ್ಫೋಟಕ ಸಂಗತಿ ಹೊರಬಿದ್ದಿದೆ. ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ಹೆಸರು ಕೇಳಿಬಂದಿದೆ ಈ ಕುರಿತು ಮಾಧ್ಯಮಗಳಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ, ಪ್ರಕಾಶ್ ರಾಜ್ ಈ ಆರೋಪಗಳನ್ನು ಸುಳ್ಳು ಎಂದು ಖಂಡಿಸಿ, ಶೀಘ್ರದಲ್ಲೇ ಸ್ಪಷ್ಟನೆ ನೀಡುವುದಾಗಿ ತಿಳಿಸಿದ್ದಾರೆ.

OTT This Week: ಈ ವಾರ OTTಯಲ್ಲಿ ಈ ಐದು ತೆಲುಗು ಸಿನಿಮಾಗಳನ್ನು ನೋಡಿ!

ಈ ವಾರ OTTಯಲ್ಲಿ ಈ ಐದು ತೆಲುಗು ಸಿನಿಮಾಗಳನ್ನು ನೋಡಿ!

OTT This Week: ನೆಟ್‌ಫ್ಲಿಕ್ಸ್‌, ಸನ್‌ನೆಕ್ಸ್ಟ್‌, ಅಮೆಜಾನ್‌ ಪ್ರೈಮ್‌ ಸೇರಿದಂತೆ ಪ್ರಮುಖ ಒಟಿಟಿ ವೇದಿಕೆಗಳಲ್ಲಿ ಈ ವಾರ ಹಲವು ಸಿನಿಮಾಗಳು ಬಿಡುಗಡೆಯಾಗುತ್ತಿವೆ.ಹೊಸ ತೆಲುಗು ಚಲನಚಿತ್ರಗಳು ಮತ್ತು ಸಿರೀಸ್‌ಗಳು ಶೀಘ್ರದಲ್ಲೇ ಸ್ಟ್ರೀಮಿಂಗ್ (Series) ಪ್ಲಾಟ್‌ಫಾರ್ಮ್‌ಗಳಲ್ಲಿ ಬರಲಿವೆ. ಪ್ರೇಕ್ಷಕರು ಹೊಸ ಬಿಡುಗಡೆಗಳನ್ನು ಆನಂದಿಸಲು ಇದು ಸೂಕ್ತ ಸಮಯ. ಯಾವೆಲ್ಲ ಸಿನಿಮಾಗಳು (Cinema) ರಿಲೀಸ್‌?

Akshay Kumar: ಸಿನಿ ಇಂಡಸ್ಟ್ರಿಗೆ ಗುಡ್‌ಬೈ?  ಅಕ್ಷಯ್ ಕುಮಾರ್ ಏಕಾಏಕಿ ಹೀಗೇಕೆ ಅಂದ್ರು?

ಸಿನಿ ಇಂಡಸ್ಟ್ರಿಗೆ ಗುಡ್‌ಬೈ? ಅಕ್ಷಯ್ ಕುಮಾರ್ ಏಕಾಏಕಿ ಹೀಗೇಕೆ ಅಂದ್ರು?

Akshay Kumar: ಅಕ್ಷಯ್ ಕುಮಾರ್ ಇದುವರೆಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ಆಕ್ಷನ್, ಹಾಸ್ಯ, ಪ್ರಣಯ ಮತ್ತು ಸಾಮಾಜಿಕ ವಿಷಯ ಚಿತ್ರಗಳಲ್ಲಿ ಗಮನ ಸೆಳೆಯುವ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶೀಘ್ರದಲ್ಲೇ, ಅವರ 'ವೆಲ್‌ಕಮ್' ಚಿತ್ರದ ಮುಂದುವರಿದ ಭಾಗ 'ವೆಲ್‌ಕಮ್ ಟು ದಿ ಜಂಗಲ್' ಬಿಡುಗಡೆಯಾಗಲಿದೆ. 'ವೆಲ್‌ಕಮ್ ಟು ದಿ ಜಂಗಲ್' ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ, ಅವರು ಪ್ರತಿದಿನ ನಿವೃತ್ತಿಯ ಬಗ್ಗೆ ಯೋಚಿಸುವುದಾಗಿ ಹೇಳಿದರು.

Pranit More: ಬಿರಿಯಾನಿ ವಿವಾದ: ಪ್ರಣಿತ್ ಮೋರೆ, ಹಿಮಾಂಶು ಜಂಗ್ರಾ, ಸೇಜಲ್ ಪವಾರ್‌ಗೆ ಮಹಿಳಾ ಆಯೋಗ ನೋಟಿಸ್

ಬಿರಿಯಾನಿ ವಿವಾದ: ಪ್ರಣಿತ್ ಮೋರೆಗೆ ಮಹಿಳಾ ಆಯೋಗ ನೋಟಿಸ್

Pranit More: ಪ್ರಣಿತ್ ಮೋರೆ ಅವರ ಸ್ಟ್ಯಾಂಡ್-ಅಪ್ ಕಾಮಿಡಿ ಕಾರ್ಯಕ್ರಮದ ಸಂದರ್ಭದಲ್ಲಿ ಹಿಮಾಂಶು ಜಂಗ್ರಾ ಮಾಡಿದ ಹೇಳಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗ (NCW) ಸ್ವಯಂಪ್ರೇರಿತವಾಗಿ ಪರಿಗಣಿಸಿದೆ . ₹ 375 ಬಿರಿಯಾನಿ ಜೋಕ್‌ಗೆ ಸಂಬಂಧಿಸಿದಂತೆ ಪ್ರಣಿತ್, ಹಿಮಾಂಶು ಮತ್ತು ಸೇಜಲ್ ಪವಾರ್ ವಿರುದ್ಧ ಮುಂಬೈ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ .

Katrina Kaif :  ಮತ್ತೆ ತೆರೆಗೆ ಬರ್ತಾರಾ ಕತ್ರಿನಾ ಕೈಫ್? OTT ಎಂಟ್ರಿ ಬಗ್ಗೆ  ಚರ್ಚೆ

ಮತ್ತೆ ತೆರೆಗೆ ಬರ್ತಾರಾ ಕತ್ರಿನಾ ಕೈಫ್? OTT ಎಂಟ್ರಿ ಬಗ್ಗೆ ಚರ್ಚೆ

Katrina Kaif : ಪತಿ ವಿಕ್ಕಿ ಕೌಶಲ್ ಜೊತೆ 2025ರ ಕೊನೆಯಲ್ಲಿ ಮೊದಲ ಮಗುವನ್ನು ಬರಮಾಡಿಕೊಂಡ ನಟಿ ಕತ್ರಿನಾ ಕೈಫ್, ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಇದೇ ಕಾರಣಕ್ಕೆ ಅವರು ನಟನೆಯಿಂದ ದೂರ ಉಳಿದು, ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದರು. ಆದರೆ, ಈಗ ಮತ್ತೆ ಕತ್ರಿನಾ ಆಕ್ಟಿಂಗ್‌ಗೆ ಮರಳಲು ಸಿದ್ಧರಾಗುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ.

ʻಪೊಲೀಸ್ ಕಂಪ್ಲೈಂಟ್ʼ ಚಿತ್ರಕ್ಕಾಗಿ ಒಂದಾದ ವರಲಕ್ಷ್ಮೀ ಶರತ್‌ ಕುಮಾರ್ -‌ ರಾಗಿಣಿ ದ್ವಿವೇದಿ; ಕನ್ನಡ - ತೆಲುಗಿನಲ್ಲಿ ಏಕಕಾಲಕ್ಕೆ ರಿಲೀಸ್

Police Complaint ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಮದರ್ ಸೆಂಟಿಮೆಂಟ್

ಸ್ಯಾಂಡಲ್‌ವುಡ್‌‌ ನಟಿ ರಾಗಿಣಿ ದ್ವಿವೇದಿ ಹಾಗೂ ಬಹುಭಾಷಾ ನಟಿ ವರಲಕ್ಷ್ಮೀ ಶರತ್‌ಕುಮಾರ್ ಮುಖ್ಯ ಭೂಮಿಕೆಯಲ್ಲಿರುವ, ಮಹಿಳಾ ಪ್ರಧಾನ ಆ್ಯಕ್ಷನ್ ಥ್ರಿಲ್ಲರ್ ‘ಪೊಲೀಸ್ ಕಂಪ್ಲೈಂಟ್’ ಸಿನಿಮಾ ಜೂನ್ 12 ರಂದು ಕರ್ನಾಟಕದ 70 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ.

Michael On OTT: ಒಟಿಟಿಗೆ ಎಂಟ್ರಿ ಕೊಟ್ಟ 'ಮೈಕಲ್'! ಸ್ಟ್ರೀಮಿಂಗ್‌ ಎಲ್ಲಿ?

Michael On OTT: ಒಟಿಟಿಗೆ ಎಂಟ್ರಿ ಕೊಟ್ಟ 'ಮೈಕಲ್'! ಸ್ಟ್ರೀಮಿಂಗ್‌ ಎಲ್ಲಿ?

Michael On OTT: ಜಾಫರ್ ಜಾಕ್ಸನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮೈಕೆಲ್ (Michael On OTT) ಚಿತ್ರವು ಏಪ್ರಿಲ್ 24, 2026 ರಂದು ಚಿತ್ರಮಂದಿರಗಳಲ್ಲಿ (Threatre) ಬಿಡುಗಡೆಯಾಯಿತು. ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡ ನಂತರ, ಈ ಚಿತ್ರವು ಈಗ ಭಾರತದಲ್ಲಿ ಆನ್‌ಲೈನ್‌ನಲ್ಲಿ ಸ್ಟ್ರೀಮಿಂಗ್‌ಗೆ ಲಭ್ಯವಿದೆ.

ಕಮಲ್‌ ಹಾಸನ್‌ ನಿರ್ಮಾಣದ ಹೊಸ ಸಿನಿಮಾದಲ್ಲಿ 5 ರೂಪಾಯಿ ಡಾಕ್ಟರ್ ಪಾತ್ರ ಮಾಡ್ತಾರಾ ʻಸೂಪರ್‌ ಸ್ಟಾರ್‌ʼ ರಜನಿಕಾಂತ್‌?

5 ರೂಪಾಯಿ ಡಾಕ್ಟರ್ ಪಾತ್ರದಲ್ಲಿ‌ ʻಸೂಪರ್‌ ಸ್ಟಾರ್‌ʼ ರಜನಿಕಾಂತ್

ʻಸೂಪರ್‌ಸ್ಟಾರ್ʼ ರಜನಿಕಾಂತ್ ನಟನೆಯ ‘ತಲೈವರ್ 173’ ಚಿತ್ರವನ್ನು ಕಮಲ್‌ ಹಾಸನ್ ನಿರ್ಮಿಸುತ್ತಿದ್ದು, ಚಿತ್ರಕ್ಕೆ ‘ಡ್ರ್ಯಾಗನ್’ ಖ್ಯಾತಿಯ ಅಶ್ವತ್ ಮಾರಿಮುತ್ತು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಚಿತ್ರದಲ್ಲಿ ರಜನಿ ಅವರು ‘5 ರೂಪಾಯಿ ಡಾಕ್ಟರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

Rikhi Badshah:  ರ‍್ಯಾಪರ್ ಬಾದ್‌ಶಾ ಜೊತೆಗಿನ ಮದುವೆ ಖಚಿತಪಡಿಸಿದ ಇಶಾ ರಿಖಿ!

ರ‍್ಯಾಪರ್ ಬಾದ್‌ಶಾ ಜೊತೆಗಿನ ಮದುವೆ ಖಚಿತಪಡಿಸಿದ ಇಶಾ ರಿಖಿ!

Rikhi Badshah: ಇಶಾ ರಿಖಿ ರ‍್ಯಾಪರ್ ಮತ್ತು ಗಾಯಕ ಬಾದ್‌ಶಾ ಅವರೊಂದಿಗಿನ ತಮ್ಮ ವಿವಾಹವನ್ನು ಕೊನೆಗೂ ದೃಢಪಡಿಸಿದ್ದಾರೆ. ಅವರ ಸಂಬಂಧದ ಬಗ್ಗೆ ತಿಂಗಳುಗಳ ಕಾಲ ಇದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಈ ವರ್ಷದ ಆರಂಭದಲ್ಲಿ ದಂಪತಿ ವಿವಾಹದ ಚಿತ್ರಗಳು ಮತ್ತು ವೀಡಿಯೊಗಳು ವೈರಲ್ ಆದ ನಂತರ ಅಭಿಮಾನಿಗಳು ಅವರ ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು.

'ಬಾಯ್ಸ್ ನೆವರ್ ಕಾಂಪ್ರಮೈಸ್' ಸಿನಿಮಾಗೆ ಸಾಥ್‌ ನೀಡಲಿದ್ದಾರೆ ‌ʻಕಿಚ್ಚʼ ಸುದೀಪ್; ಜುಲೈ ಮೊದಲ ವಾರ ಟ್ರೇಲರ್‌ ರಿಲೀಸ್

`ಬಾಯ್ಸ್ ನೆವರ್ ಕಾಂಪ್ರಮೈಸ್ ಹವಾ' ಚಿತ್ರಕ್ಕೆ ಕಿಚ್ಚ ಸುದೀಪ್ ಸಾಥ್

ನಿರ್ಮಾಪಕ ಹರೀಶ್ ಜಲಗೆರೆ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ‘ಬಾಯ್ಸ್ ನೆವರ್ ಕಾಂಪ್ರಮೈಸ್’ ಹಾರರ್ ಕಾಮಿಡಿ ಚಿತ್ರದ ಟ್ರೇಲರ್ ಅನ್ನು ಜುಲೈ ಮೊದಲ ವಾರದಲ್ಲಿ ನಟ ‘ಕಿಚ್ಚ’ ಸುದೀಪ್ ಬಿಡುಗಡೆ ಮಾಡಲಿದ್ದಾರೆ. ಮಾರಿಗೋಲ್ಡ್ ಸ್ಟುಡಿಯೋಸ್ ಬ್ಯಾನರ್ ಅಡಿ ಮೂಡಿಬಂದಿರುವ ಈ ಚಿತ್ರವು ಜುಲೈ 10ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.

ರಜನಿಕಾಂತ್‌ ನಟನೆಯ ʻಜೈಲರ್‌ 2ʼ ಸಿನಿಮಾಕ್ಕೆ ಶಾರುಖ್ ಖಾನ್‌ ಬದಲು ಹೃತಿಕ್‌ ರೋಷನ್‌ ಎಂಟ್ರಿ; 40 ವರ್ಷಗಳ ಬಳಿಕ ತಲೈವಾ ಜೊತೆ ನಟನೆ

Rajinikanth: 'ಜೈಲರ್ 2' ಚಿತ್ರಕ್ಕೆ ಶಾರುಖ್‌ ಬದಲು ಹೃತಿಕ್ ರೋಷನ್ ಎಂಟ್ರಿ

`ಸೂಪರ್‌ಸ್ಟಾರ್' ರಜನಿಕಾಂತ್ ಅವರ ಬಹುನಿರೀಕ್ಷಿತ 'ಜೈಲರ್ 2' ಚಿತ್ರದಲ್ಲಿ ಶಾರುಖ್ ಖಾನ್ ಬದಲಿಗೆ ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ನಟಿಸುವುದು ಅಧಿಕೃತಗೊಂಡಿದೆ. 40 ವರ್ಷಗಳ ಹಿಂದೆ 'ಭಗವಾನ್ ದಾದಾ' ಚಿತ್ರದಲ್ಲಿ ಬಾಲನಟನಾಗಿ ರಜನಿ ಜೊತೆ ನಟಿಸಿದ್ದ ಹೃತಿಕ್, ಈಗ ಮತ್ತೆ ತೆರೆಹಂಚಿಕೊಳ್ಳಲಿದ್ದಾರೆ. ನೆಲ್ಸನ್ ನಿರ್ದೇಶನದ ಈ ಸಿನಿಮಾವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ.

‘ಭಾರ್ಗವಿ ಎಲ್‌ಎಲ್‌ಬಿ’ ಸೀರಿಯಲ್‌ನಿಂದ ನಟಿ ಸುಜಾತಾ ಅಕ್ಷಯ್ ಏಕಾಏಕಿ ಹೊರಕ್ಕೆ: ಅಸಲಿ ಕಾರಣ ಬಿಚ್ಚಿಟ್ಟ ನಿರ್ಮಲಾ ಪಾಟೀಲ್ ಪಾತ್ರಧಾರಿ!

ʻಭಾರ್ಗವಿ LLB' ಧಾರಾವಾಹಿಯಿಂದ ಸುಜಾತಾ ಹೊರಬಂದಿದ್ದೇಕೆ? ಇಲ್ಲಿದೆ ಸತ್ಯ!

ಕಲರ್ಸ್ ಕನ್ನಡದ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯ ಪ್ರಮುಖ ನಟಿ ಸುಜಾತಾ ಅಕ್ಷಯ್ (ನಿರ್ಮಲಾ ಪಾಟೀಲ್ ಪಾತ್ರಧಾರಿ) ಅವರನ್ನು ಏಕಾಏಕಿ ಬದಲಾಯಿಸಲಾಗಿದ್ದು, ಅವರ ಜಾಗಕ್ಕೆ ಸ್ವಾತಿ ಎಂಟ್ರಿ ಕೊಟ್ಟಿದ್ದಾರೆ. ಪ್ರೊಡಕ್ಷನ್ ಹೌಸ್ ತಮಗೆ ತಿಳಿಸದೆ ಈ ನಿರ್ಧಾರ ಕೈಗೊಂಡಿದೆ ಎಂದು ಬ್ಯಾಂಕಾಕ್ ಪ್ರವಾಸದಲ್ಲಿರುವ ಸುಜಾತಾ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಬೇಸರ ಹೊರಹಾಕಿದ್ದಾರೆ.

ಸೋಶಿಯಲ್ ಮೀಡಿಯಾ ಸ್ಟಾರ್ ಕಾರ್ತಿಕ್ ರುವಾರಿ ಈಗ ಹೀರೋ; ಭರವಸೆ ಮೂಡಿಸಿದ 'ಗೋಲ್‌ಮಾಲ್ ಗ್ಯಾಂಗ್' ಟೀಸರ್!

ʻನನಗೆ ನಾಯಕಿಯಾಗಲು ಯಾವ ನಟಿಯೂ ಮುಂದೆ ಬರುತ್ತಿರಲಿಲ್ಲʼ- ಕಾರ್ತಿಕ್ ರುವಾರಿ

ಸೋಶಿಯಲ್ ಮೀಡಿಯಾ ತಾರೆ ಕಾರ್ತಿಕ್ ರುವಾರಿ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ‘ಗೋಲ್‌ಮಾಲ್ ಗ್ಯಾಂಗ್’ ಚಿತ್ರದ ಕಾಮಿಡಿ ಟೀಸರ್ ಬಿಡುಗಡೆಯಾಗಿದೆ. ಈ ಸಿನಿಮಾಗೆ ಆರಾಧನಾ ಭಟ್ ನಾಯಕಿಯಾಗಿದ್ದು, ಈ ಸಿನಿಮಾವು ಶೀಘ್ರದಲ್ಲೇ ತೆರೆಗೆ ಬರಲಿದೆ.

ನಟ ಪವನ್‌ ಕಲ್ಯಾಣ್‌ ನಿಜವಾದ ಹೆಸರು ಏನ್‌ ಗೊತ್ತಾ? ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಆಂಧ್ರ ಪ್ರದೇಶ ಡಿಸಿಎಂ

ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಹೆಸರಿನ ಹಿಂದಿರುವ ಅಸಲಿ ರಹಸ್ಯ ಬಯಲು!

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ಅಸಲಿ ಹೆಸರು 'ಪವನ್ ಕಲ್ಯಾಣ್' ಅಲ್ಲ, ಪೋಷಕರು ತಮಗೆ 'ಶ್ರೀ ಕಲ್ಯಾಣ್ ಕುಮಾರ್' ಎಂದು ನಾಮಕರಣ ಮಾಡಿದ್ದರು ಎಂಬ ರೋಚಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.

Loading...