ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸಿನಿಮಾ

Reels Ajji: ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಸೂರಜ್; ಮುತ್ತಜ್ಜಿ ಅಂತಿಮ ಆಸೆ ಏನಾಗಿತ್ತು?

ಅಜ್ಜಿಯ ಕೊನೇ ರೀಲ್ಸ್‌ ಹಂಚಿಕೊಂಡ ಸೂರಜ್!

Reels Ajji: ಯಲ್ಲಾಪುರ ತಾಲ್ಲೂಕಿನ ಕೆರೆಹೊಸಳ್ಳಿಯ ಲಕ್ಷ್ಮಿ ನಾಯ್ಕ (93) ವಯೋಸಹಜ ಅನಾರೋಗ್ಯದಿಂದ ನಿಧನರಾಗಿರೋದು ಗೊತ್ತೇ ಇದೆ. ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ಜನಪ್ರಿಯರಾಗಿದ್ದಾರೆ ಅಂದ್ರೆ ಸೂರಜ್ ಯಾವ ರೀಲ್ಸ್ ಹಾಕಿದರೂ ಅದರಲ್ಲಿ ಅಜ್ಜಿ ಯಾಕಿಲ್ಲ ಎಂದು ಜನರು ಪ್ರಶ್ನಿಸುತ್ತಾರೆ. ಅಷ್ಟರ ಮಟ್ಟಿಗೆ ಈ ಅಜ್ಜಿಯನ್ನು ಜನರು ಇಷ್ಟಪಡುತ್ತಿದ್ದರು. ಈಗ ಸೂರಜ್‌ ಅವರು ಅಜ್ಜಿಯ ಕೊನೇ ವಿಡಿಯೋ ಹಂಚಿಕೊಂಡಿದ್ದಾರೆ.

Drishyam 3: ಮೋಹನ್ ಲಾಲ್ ಚಿತ್ರದ ವಿರುದ್ಧ ಅಮೆಜಾನ್ ಪ್ರೈಂ ಬಹಿರಂಗ ಎಚ್ಚರಿಕೆ! ಏನಿದು ವಿವಾದ?

ಮೋಹನ್ ಲಾಲ್ ಚಿತ್ರದ ವಿರುದ್ಧ ಅಮೆಜಾನ್ ಪ್ರೈಂ ಬಹಿರಂಗ ಎಚ್ಚರಿಕೆ!

Mohanlal film: ಜೀತು ಜೋಸೆಫ್ ಅವರ ಮೋಹನ್ ಲಾಲ್ ಅಭಿನಯದ ದೃಶ್ಯಂ 3 ಚಿತ್ರ ಈ ಮೇ ತಿಂಗಳಲ್ಲಿ ತೆರೆಗೆ ಬರಲು ಸಿದ್ಧವಾಗುತ್ತಿದೆ. ಏಪ್ರಿಲ್ ನಿಂದ ಬಿಡುಗಡೆ ಮುಂದೂಡಲ್ಪಟ್ಟಿದ್ದರೂ, ಮಲಯಾಳಂ ಚಿತ್ರದ ಡಿಜಿಟಲ್ ಹಕ್ಕುಗಳ ಕುರಿತು ನಿರ್ಮಾಪಕರಾದ ಆಶೀರ್ವಾದ್ ಸಿನಿಮಾಸ್ ಮತ್ತು ಇತರ ಯಾವುದೇ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಮೆಜಾನ್ ನೋಟಿಸ್ ಪ್ರಕಟಿಸಿದೆ. ಮೂರನೇ ಚಿತ್ರದ ಎಲ್ಲಾ ಹಕ್ಕುಗಳನ್ನು ನಿರ್ಮಾಪಕರಿಗೆ ನೆನಪಿಸಿದೆ.

Aditya Dhar: ಕೃತಿಚೌರ್ಯದ ಆರೋಪ ; ಆದಿತ್ಯ ಧರ್‌ಗೆ ಲೀಗಲ್ ನೋಟಿಸ್?

ಕೃತಿಚೌರ್ಯದ ಆರೋಪ ; ಆದಿತ್ಯ ಧರ್‌ಗೆ ಲೀಗಲ್ ನೋಟಿಸ್?

Aditya Dhar: ಧುರಂಧರ್ ದಿ ರಿವೆಂಜ್ ಚಿತ್ರವನ್ನು ಕೃತಿಚೌರ್ಯ ಮಾಡಲಾಗಿದೆ ಎಂದು ಹೇಳಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ ಅವರು ಚಲನಚಿತ್ರ ನಿರ್ಮಾಪಕ ಸಂತೋಷ್ ಕುಮಾರ್ ಆರ್‌ಎಸ್ ಅವರಿಗೆ ಕಾನೂನು ನೋಟಿಸ್ ಜಾರಿ ಮಾಡಿದ್ದಾರೆ . ರಣವೀರ್ ಸಿಂಗ್ ಅಭಿನಯದ ಚಿತ್ರವನ್ನು 2023 ರಲ್ಲಿ ಅವರು ನೋಂದಾಯಿಸಿದ ಸ್ಕ್ರಿಪ್ಟ್‌ನಿಂದ ನಕಲು ಮಾಡಲಾಗಿದೆ ಎಂದು ಆರೋಪಿಸಿರುವ ಸಂತೋಷ್, "ಅವರು ನನ್ನ ಪ್ರಾಜೆಕ್ಟ್, ಸ್ಕ್ರಿಪ್ಟ್ ಅನ್ನು ಕುಶಲತೆಯಿಂದ ಬಳಸಿದ್ದಾರೆ ಮತ್ತು ನನ್ನನ್ನು ಶೋಷಿಸಿದ್ದಾರೆ. ಚಿತ್ರಕಥೆಗಾರರ ​​ಸಂಘದಿಂದ ನನ್ನ ಬಳಿ ಎಲ್ಲಾ ಪುರಾವೆಗಳಿವೆ" ಎಂದು ಹಂಚಿಕೊಂಡಿದ್ದಾರೆ.

Rashmika Mandanna: ರಶ್ಮಿಕಾರಿಗೆ ಕುಟುಂಬದ ಬಳೆ ನೀಡಿದ ವಿಜಯ್‌ ದೇವರಕೊಂಡ ತಾಯಿ; ಫೋಟೋ ಔಟ್‌

ರಶ್ಮಿಕಾರಿಗೆ ಕುಟುಂಬದ ಬಳೆ ನೀಡಿದ ವಿಜಯ್‌ ದೇವರಕೊಂಡ ತಾಯಿ; ಫೋಟೋ ಔಟ್‌

Rashmika Mandanna: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26 ರಂದು ಉದಯಪುರದಲ್ಲಿ ವಿವಾಹವಾದರು. ವಿವಾಹ ಪೂರ್ವ ಸಮಾರಂಭಗಳಾದ ಪೆಲ್ಲಿ ಕೊಡುಕು-ಕುಟುರು (ವರ ಮತ್ತು ವಧುವಿನ ಮದುವೆ) ಕಾರ್ಯಕ್ರಮ, ಸಂಗೀತ, ಹಲ್ದಿ ಮತ್ತು ಇನ್ನೂ ಹೆಚ್ಚಿನವುಗಳು ಅವರ ಕುಟುಂಬ ಮತ್ತು ಸ್ನೇಹಿತರು ಮಾತ್ರ ಭಾಗವಹಿಸಿದ್ದ ಆತ್ಮೀಯ ವಿವಾಹಕ್ಕೆ ಮುಂಚಿತವಾಗಿ ನಡೆದವು. ವಿಜಯ ತಾಯಿ ಮಾಧವಿ ದೇವರಕೊಂಡ ತಮ್ಮ ಕುಟುಂಬದ ಬಳೆ, ಆಭರಣಗಳನ್ನು ರಶ್ಮಿಕಾಗೆ ಸಂಪ್ರದಾಯದಂತೆ ನೀಡಿದ್ದರು ಎಂದು ವರದಿಯಾಗಿತ್ತು. ಇದೀಗ ಆ ಫೋಟೋಗಳು ವೈರಲ್‌ ಆಗಿವೆ.

Sonam Kapoor: ಎರಡನೇ ಮಗುವಿನ ಫೋಟೋ ಹಂಚಿಕೊಂಡ ಸೋನಂ ಕಪೂರ್

Sonam Kapoor: ಎರಡನೇ ಮಗುವಿನ ಫೋಟೋ ಹಂಚಿಕೊಂಡ ಸೋನಂ ಕಪೂರ್

Sonam Kapoor: ನಟಿ ಸೋನಮ್ ಕಪೂರ್ ಮತ್ತು ಪತಿ ಆನಂದ್ ಅಹುಜಾ ಮಾರ್ಚ್ 29 ರಂದು ತಮ್ಮ ಎರಡನೇ ಮಗುವನ್ನು ಸ್ವಾಗತಿಸಿದರು. ಈ ದಂಪತಿಗೆ ಗಂಡು ಮಗು ಜನಿಸಿದೆ. ಹೀಗಿರುವಾಗಲೇ ಅವರು ಮಗುವಿನ ಫೋಟೋ ಹಂಚಿಕೊಂಡಿದ್ದಾರೆ. ಹೃದಯಸ್ಪರ್ಶಿ ಕ್ಷಣದ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ʻಮೃತ್ಯುದೇವತೆ’ ಚಿತ್ರಕ್ಕೆ ಚಾಮರಾಜನಗರದ ಕಾಡಿನಲ್ಲಿ ಶೂಟಿಂಗ್:‌ ಅಣ್ಣಾವ್ರ ಹುಟ್ಟುಹಬ್ಬಕ್ಕೆ ರಿಲೀಸ್!‌

ಡಾ. ರಾಜ್‌ಕುಮಾರ್ ಹುಟ್ಟುಹಬ್ಬದಂದು 'ಮೃತ್ಯುದೇವತೆ' ಸಿನಿಮಾ ದರ್ಶನ

ʻಮೃತ್ಯುದೇವತೆ’ ಚಿತ್ರವು ಅಸಹಾಯಕ ಹೆಣ್ಣೊಬ್ಬಳು ಸಮಾಜದ ಕ್ರೌರ್ಯದ ವಿರುದ್ಧ ಮೃತ್ಯುದೇವತೆಯಾಗಿ ಹೇಗೆ ಸಿಡಿದೆದ್ದಳು ಎಂಬ ರೋಚಕ ಕಥೆಯನ್ನು ಹೊಂದಿದೆ. ನವೀನ್ ಮಹದೇವ್ ನಿರ್ದೇಶಿಸಿ, ನಟಿಸಿರುವ ಈ ಚಿತ್ರದಲ್ಲಿ ಸಾರಿಕಾ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಹಿರಿಯ ನಟಿ ವಿನಯಾ ಪ್ರಸಾದ್ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ʻಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆʼ ಎಂದ ರಣಬೀರ್;‌ ʻರಾವಣʼ ಯಶ್‌ ಬಗ್ಗೆ ಕಪೂರ್‌ ಕುಡಿ ಹೇಳಿದ್ದೇನು?

Ramayana: ಸಾಯಿ ಪಲ್ಲವಿ - ಯಶ್‌ರನ್ನು ಮನಸಾರೆ ಹೊಗಳಿದ ನಟ ರಣಬೀರ್ ಕಪೂರ್

ರಾಮಾಯಣ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ನಟ ರಣಬೀರ್ ಕಪೂರ್ ಅವರು ತಮ್ಮ ಸಹನಟರಾದ ಸಾಯಿ ಪಲ್ಲವಿ ಮತ್ತು ಯಶ್ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅತ್ಯುತ್ತಮ ಆಯ್ಕೆ ಎಂದು ಬಣ್ಣಿಸಿದ ಅವರು, ರಾವಣನ ಪಾತ್ರಕ್ಕೆ ಬೇಕಾದ ಪ್ರಭಾವಶಾಲಿ ವ್ಯಕ್ತಿತ್ವ ಯಶ್ ಅವರಲ್ಲಿದೆ ಎಂದು ಹೊಗಳಿದ್ದಾರೆ.

Mother Promise: ಗೆಳೆಯರ ಗ್ಯಾಂಗ್‌ ಜೊತೆಗೆ ಬಂದು ʻತಾಯಾಣೆʼ ಮನರಂಜನೆ ಮಿಸ್‌ ಆಗಲ್ಲ ಅಂತಿದ್ದಾರೆ ‌ʻಡಾಲಿʼ ಧನಂಜಯ್

36 ಕಲಾವಿದರ ಹೊಸ ಸಿನಿಮಾಗೆ 'ಮದರ್ ಪ್ರಾಮಿಸ್' ಟೈಟಲ್; ‌ಹಣ ಹಾಕಿದ 'ಡಾಲಿ'

‌ʻಮದರ್‌ ಪ್ರಾಮೀಸ್ʼ ಚಿತ್ರದ ಮೂಲಕ ನಟ ಡಾಲಿ ಧನಂಜಯ್ ಮತ್ತೊಂದು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ನಟ ಪೂರ್ಣ ಮೈಸೂರು ಈ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನದ ಚುಕ್ಕಾಣಿ ಹಿಡಿದಿದ್ದು, ಡಾಲಿ ಪಿಕ್ಚರ್ಸ್ ಸಹಯೋಗದೊಂದಿಗೆ ಹರ್ಷ ಮುರುಂಡಿ ಶಿವಲಿಂಗಪ್ಪ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Abhishek Bachchan: ನಮ್ಮ ಮನೆಯಲ್ಲಿ ಗಂಡು ಹೆಣ್ಣು ಎಂಬ ಸ್ಪರ್ಧೆಯೇ ಇಲ್ಲ! ಅಭಿಷೇಕ್ ಬಚ್ಚನ್ ನೇರ ಮಾತು

ನಮ್ಮ ಮನೆಯಲ್ಲಿ ಗಂಡು ಹೆಣ್ಣು ಎಂಬ ಸ್ಪರ್ಧೆಯೇ ಇಲ್ಲ! ಅಭಿಷೇಕ್ ಬಚ್ಚನ್

Aishwarya Rai: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ತಮ್ಮ ಸಂಬಂಧದ ಬಗ್ಗೆ ಆಗಾಗ ಚರ್ಚೆಯಲ್ಲಿ ಇದ್ದೇ ಇರ್ತಾರೆ. ವರ್ಷಗಳ ಕಾಲ, ಜೋಡಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರೂ, ಅವರ ಪ್ರತ್ಯೇಕತೆ ಹಾಗೇ ವಿಚ್ಛೇದನದ ಬಗ್ಗೆ ವದಂತಿಗಳು ಹರಡಿದ್ದವು. ಇತ್ತೀಚಿನ ಸಂದರ್ಶನದಲ್ಲಿ, ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈ ಅವರೊಂದಿಗಿನ ಸಂಬಂಧ, ಅವರ ಕುಟುಂಬ ಮತ್ತು ಪೋಷಕರ ಬಗ್ಗೆ ಮಾತನಾಡಿದರು. ಮಗಳು ಆರಾಧ್ಯ ಬಚ್ಚನ್ ಅವರನ್ನು ಹೇಗೆ ಬೆಳೆಸುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದರು.

Ranveer Singh: 15 ದಿನಗಳಲ್ಲಿ  1500 ಕೋಟಿ ರೂ. ಲೂಟಿ! ʻಧುರಂಧರ್‌ 2ʼ ಆರ್ಭಟಕ್ಕೆ ಬಾಕ್ಸ್‌ ಆಫೀಸ್‌ ಥಂಡಾ

1500 ಕೋಟಿ ಕ್ಲಬ್‌ಗೆ 'ಧುರಂಧರ್ 2'; ಬಾಕ್ಸ್ ಆಫೀಸ್ ಕಿಂಗ್‌ ಈಗ ರಣವೀರ್

ಧುರಂಧರ್‌ 2 ಸಿನಿಮಾ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ಮೈಲಿಗಲ್ಲು ಸ್ಥಾಪಿಸಿದೆ. ಕೇವಲ 15 ದಿನಗಳಲ್ಲಿ ವಿಶ್ವಾದ್ಯಂತ 1501 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ರಣವೀರ್ ಸಿಂಗ್ ಈಗ ಬಾಕ್ಸ್‌ ಆಫೀಸ್‌ಗೆ ಹೊಸ ಕಿಂಗ್‌ ಆಗಿದ್ದಾರೆ.

Pavithra Bandhana Serial: ʻದಿಢೀರ್‌ ಅಂತ ನನ್ನ ಪಾತ್ರ ಮುಗಿದಿದ್ದು ವೀಕ್ಷಕರಿಗೆ ಬೇಸರವಾಗಿದೆʼ; ತಿಲಕ್‌ ದೇಶಮುಖ್‌ ಪಾತ್ರಧಾರಿ ಯಶಸ್‌ ಕೃಷ್ಣ

Pavithra Bandhana: ʻನನ್ ಪಾತ್ರ ಅಂತ್ಯವಾಗೋದು ಗೊತ್ತಿತ್ತುʼ ಎಂದ ಯಶಸ್‌

ʻಪವಿತ್ರ ಬಂಧನʼ ಧಾರಾವಾಹಿಯ ತಿಲಕ್ ದೇಶಮುಖ್ ಪಾತ್ರದ ಹಠಾತ್ ಅಂತ್ಯ ಪ್ರೇಕ್ಷಕರಲ್ಲಿ ಭಾರಿ ಬೇಸರ ಮೂಡಿಸಿದೆ. ನಟ ಯಶಸ್‌ ಕೃಷ್ಣ ಅವರು ಈ ಪಾತ್ರದ ಮೂಲಕ ಅಲ್ಪ ಅವಧಿಯಲ್ಲೇ ದೊಡ್ಡ ಜನಪ್ರಿಯತೆ ಗಳಿಸಿದ್ದರು. ಕಥೆಯ ಓಟಕ್ಕಾಗಿ ಪಾತ್ರ ಮುಕ್ತಾಯವಾಗುವುದು ಅನಿವಾರ್ಯ ಎಂದು ಯಶಸ್‌ ಸ್ಪಷ್ಟಪಡಿಸಿದ್ದಾರೆ.

ರೋಡ್ ಥ್ರಿಲ್ಲರ್‌ ಸಿನಿಮಾಕ್ಕಾಗಿ ಜೊತೆಯಾದ ಪ್ರಮೋದ್‌ ಶೆಟ್ಟಿ - ಶ್ರುತಿ ಹರಿಹರನ್‌; ಸಾಥ್‌ ನೀಡಿದ ʻಬಿಗ್‌ ಬಾಸ್‌ʼ ಮಂಜು

NH 66: ಪ್ರಮೋದ್ ಶೆಟ್ಟಿ - ಶ್ರುತಿ ಹರಿಹರನ್ ಮಂಗಳೂರು ಟು ಗೋವಾ ಜರ್ನಿ!

ಎನ್‌ಎಚ್‌ 66 ಚಿತ್ರದ ಮೂಲಕ ನಟಿ ಶ್ರುತಿ ಹರಿಹರನ್ ಮತ್ತು ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಮಂಜುನಾಥ್ ಟಿ.ಆರ್. ನಿರ್ದೇಶನದ ಈ ಚಿತ್ರವು ಮಂಗಳೂರಿನಿಂದ ಗೋವಾಗೆ ಸಾಗುವ ಎರಡು ರಾತ್ರಿಗಳ ರೋಚಕ ರೋಡ್ ಜರ್ನಿ ಕಥೆಯನ್ನು ಹೊಂದಿದೆ.

92 ವರ್ಷಗಳ ಹಿಂದೆ ಮುತ್ತಜ್ಜ ಮಾಡಿದ್ದ ಪಾತ್ರಕ್ಕೆ ಈಗ ಬಣ್ಣ ಹಚ್ಚಿದ ರಣಬೀರ್‌; ಇದು ಕಪೂರ್ ಫ್ಯಾಮಿಲಿಯ ‌ʻರಾಮಾಯಣʼ ಕನೆಕ್ಷನ್

ಕಪೂರ್ ಫ್ಯಾಮಿಲಿಯ 'ರಾಮಾಯಣ' ಕನೆಕ್ಷನ್; ಅಂದು ಮುತ್ತಜ್ಜ, ಇಂದು ಮರಿಮೊಮ್ಮಗ!

ʻರಾಮಾಯಣʼ ಸಿನಿಮಾದಲ್ಲಿ ಶ್ರೀರಾಮನಾಗಿ ನಟಿಸುತ್ತಿರುವ ರಣಬೀರ್ ಕಪೂರ್ ಅವರಿಗೆ ತಮ್ಮ ಮುತ್ತಜ್ಜ ಪೃಥ್ವಿರಾಜ್ ಕಪೂರ್ ಅವರೊಂದಿಗೆ ಅಪರೂಪದ ಸಿನಿಮಾ ನಂಟಿದೆ. ಭಾರತದ ಮೊದಲ ರಾಮಾಯಣ ಕುರಿತ 'ಸೀತಾ' ಸಿನಿಮಾದಲ್ಲಿ ಪೃಥ್ವಿರಾಜ್ ಕಪೂರ್ ಶ್ರೀರಾಮನ ಪಾತ್ರ ನಿರ್ವಹಿಸಿದ್ದರು. ಬರೋಬ್ಬರಿ 92 ವರ್ಷಗಳ ನಂತರ ಅದೇ ಪಾತ್ರವನ್ನು ಅವರ ಮರಿಮೊಮ್ಮಗ ರಣಬೀರ್ ನಿರ್ವಹಿಸುತ್ತಿರುವುದು ಕಾಕತಾಳೀಯ.

ʻನನ್ನ ಕೊನೆಯ ಸಿನಿಮಾದ ವಿರುದ್ಧ ಪಿತೂರಿ ಮಾಡಿದ್ರುʼ; ಎಲೆಕ್ಷನ್‌ ಪ್ರಚಾರದಲ್ಲಿ ʻಜನ ನಾಯಗನ್‌ʼ ಬಗ್ಗೆ ʻದಳಪತಿʼ ವಿಜಯ್‌ ಮಾತು

'ನನ್ನ ಕೊನೆಯ ಸಿನಿಮಾ ವಿರುದ್ಧ ಪಿತೂರಿ ಮಾಡಿದ್ರು'; ಗುಡುಗಿದ ನಟ ವಿಜಯ್!

ʻಜನ ನಾಯಗನ್‌ʼ ಚಿತ್ರದ ಬಿಡುಗಡೆ ವಿಳಂಬದ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ನಟ, ಟಿವಿಕೆ ಅಧ್ಯಕ್ಷ ವಿಜಯ್ ಗಂಭೀರ ಆರೋಪ ಮಾಡಿದ್ದಾರೆ. ತಿರುಚಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಅವರು, ಜನರಿಗೂ ತಮಗೂ ಇರುವ ಬಾಂಧವ್ಯ ಕಂಡು ಎದುರಾಳಿಗಳು ಹೆದರಿದ್ದಾರೆ ಎಂದು ಗುಡುಗಿದ್ದಾರೆ.

Ramayana Movie: ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ

ರಾಮಾಯಣ ಬಗ್ಗೆ ತಮ್ಮ ಮನಸ್ಸನ್ನು ಬದಲಾಯಿಸಿದ ನಟಿ ದೀಪಿಕಾ ಚಿಖ್ಲಿಯಾ

Ramayana Movie: ನಿತೇಶ್ ತಿವಾರಿ ಅವರ ರಾಮಾಯಣದ ಟೀಸರ್ ಕೊನೆಗೂ ಬಿಡುಗಡೆಯಾಗಿದೆ, ಇದರಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ರಮಾನಂದ್ ಸಾಗರ್ ಅವರ ರಾಮಾಯಣ ಟಿವಿ ಕಾರ್ಯಕ್ರಮದೊಂದಿಗೆ ಹೋಲಿಕೆಗಳ ನಡುವೆ, ಈ ಕಾರ್ಯಕ್ರಮದಲ್ಲಿ ಸೀತೆಯ ಪಾತ್ರ ವಹಿಸಿದ್ದ ನಟಿ ದೀಪಿಕಾ ಚಿಖ್ಲಿಯಾ ಹೊಸದಾಗಿ ಬಿಡುಗಡೆಯಾದ ಟೀಸರ್‌ಗೆ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಡೆಯೋ ಥ್ರಿಲ್ಲರ್ ಕಥೆಗೆ ರಾಜೇಶ್‌ ಧ್ರುವ ಹೀರೋ; ಏಪ್ರಿಲ್‌ 10ಕ್ಕೆ ಬರ್ತಿದೆ ʻಪೀಟರ್ʼ

ಕರ್ನಾಟಕ-ಕೇರಳ ಗಡಿ ಭಾಗದ ರೋಚಕ ಕಥೆ 'ಪೀಟರ್'; ಏಪ್ರಿಲ್ 10ಕ್ಕೆ ರಿಲೀಸ್

ಪೀಟರ್‌ ಸಿನಿಮಾದ ಮೂಲಕ ನಟ ರಾಜೇಶ್ ಧ್ರುವ ಮತ್ತು ನಿರ್ದೇಶಕ ಸುಕೇಶ್ ಶೆಟ್ಟಿ ಕರ್ನಾಟಕ-ಕೇರಳ ಗಡಿ ಭಾಗದ ಕಥೆಯನ್ನು ಬೆಳ್ಳಿಪರದೆಗೆ ತರುತ್ತಿದ್ದಾರೆ. ಮಡಿಕೇರಿಯ ಭಾಗಮಂಡಲದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರವು ಏಪ್ರಿಲ್ 10ರಂದು ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

Ram Charan: ‘ಪೆದ್ದಿ’ ಹೊಸ ಪೋಸ್ಟರ್‌ ಔಟ್‌; ರಿಲೀಸ್ ದಿನಾಂಕವೇ ಇಲ್ಲ, ಫ್ಯಾನ್ಸ್‌ ಶಾಕ್‌

‘ಪೆದ್ದಿ’ ಹೊಸ ಪೋಸ್ಟರ್‌ ಔಟ್‌; ರಿಲೀಸ್ ದಿನಾಂಕವೇ ಇಲ್ಲ, ಫ್ಯಾನ್ಸ್‌ ಶಾಕ್‌

Ram Charan: ಟಾಲಿವುಡ್‌ನಲ್ಲಿ ಅತ್ಯಂತ ಕುತೂಹಲದಿಂದ ಕಾಯುತ್ತಿರುವ ಯೋಜನೆಗಳಲ್ಲಿ ಪೆದ್ದಿ ಕೂಡ ಒಂದು. ಈ ಸಿನಿಮಾ ರಿಲೀಸ್‌ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಬಿಡುಗಡೆ ದಿನಾಂಕ ಮುಂದೂಡಿಕೆ ಆಗಬಹುದು ಎಂಬ ಅಂತೆ-ಕಂತೆಗಳು ಕೂಡ ಕೇಳಿಬರುತ್ತಿವೆ. . ಇವುಗಳ ನಡುವೆ ಚಿತ್ರತಂಡ ಹನುಮ ಜಯಂತಿಯ ಅಂಗವಾಗಿ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಆದರೆ ಎಲ್ಲಿಯೂ ರಿಲೀಸ್‌ ಡೇಟ್‌ ಬಗ್ಗೆ ಬರೆದುಕೊಂಡಿಲ್ಲ.

ತಾಯಿ ಅಂತ್ಯಕ್ರಿಯೆ ವೇಳೆ ನಾಸ್ತಿಕರಾದ ಪ್ರಕಾಶ್‌ ರಾಜ್‌‌ ಚರ್ಚ್‌ನಲ್ಲಿ ಪ್ರಾರ್ಥಿಸಿದ್ದೇಕೆ? ಎಲ್ಲಾ ಪ್ರಶ್ನೆಗೂ ಒಂದೇ ಮಾತಿನಲ್ಲಿ ಫುಲ್‌ಸ್ಟಾಪ್!

ಚರ್ಚ್​​ನಲ್ಲಿ ಪ್ರಾರ್ಥನೆ ಮಾಡಿದ್ದಕ್ಕೆ ಟೀಕೆ; ಪ್ರಕಾಶ್ ರಾಜ್ ಹೇಳಿದ್ದೇನು?

ನಟ ಪ್ರಕಾಶ್‌ ರಾಜ್‌ ಅವರು ತಮ್ಮ ತಾಯಿ ಸ್ವರ್ಣಲತಾ ಅವರ ಅಂತ್ಯಕ್ರಿಯೆಯನ್ನು ಕ್ರಿಶ್ಚಿಯನ್ ಸಂಪ್ರದಾಯದಂತೆ ನೆರವೇರಿಸಿದ್ದಕ್ಕೆ ಕೇಳಿಬಂದ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ತಾವು ನಾಸ್ತಿಕರಾದರೂ, ತಾಯಿಯ ನಂಬಿಕೆಯನ್ನು ಗೌರವಿಸುವುದು ಮಗನಾಗಿ ತಮ್ಮ ಕರ್ತವ್ಯ ಎಂದು ಅವರು ಹೇಳಿದ್ದಾರೆ.

Aakhri Sawaal Teaser out:  ಆರ್​ಎಸ್​ಎಸ್​ ಕುರಿತಾದ ಸಂಜಯ್ ದತ್ ಆಖ್ರಿ ಸವಾಲ್ ಚಿತ್ರದ ಟೀಸರ್ ಔಟ್‌

ಆರ್​ಎಸ್​ಎಸ್​ ಕುರಿತಾದ ಸಂಜಯ್ ದತ್ ಆಖ್ರಿ ಸವಾಲ್ ಚಿತ್ರದ ಟೀಸರ್ ಔಟ್‌

Aakhri Sawaal Teaser out: ಸಂಜಯ್ ದತ್ ಪ್ರಸ್ತುತ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಚಿತ್ರದ ಯಶಸ್ಸಿನಲ್ಲಿ ತೇಲುತ್ತಿದ್ದಾರೆ. ಈ ಚಿತ್ರವು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿದೆ. ಈಗ, ಸಂಜು ಬಾಬಾ ಅವರ ಮುಂದಿನ ಚಿತ್ರ 'ಆಕ್ರಿ ಸವಾಲ್' ಗೆ ಸಜ್ಜಾಗಿದ್ದು, ಅದರ ಟೀಸರ್ ಅನ್ನು ತಯಾರಕರು ಬಿಡುಗಡೆ ಮಾಡಿದ್ದಾರೆ. ಆರ್​ಎಸ್​ಎಸ್​ ಬಗ್ಗೆ ಪರ-ವಿರೋಧದ ಅಭಿಪ್ರಾಯಗಳಿವೆ. ಅವುಗಳನ್ನೇ ಇಟ್ಟುಕೊಂಡು ‘ಆಖ್ರಿ ಸವಾಲ್’ ಸಿನಿಮಾ ಮಾಡಲಾಗಿದೆ. ಸಂಜಯ್ ದತ್ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ʻಪ್ರಿಯಾಂಕಾ ಚೋಪ್ರಾ ತಟ್ಟೆ ತೊಳೆದರೆ ದೊಡ್ಡ ಸುದ್ದಿ, ನಾನು ರಾಯರ ಮಠದಲ್ಲಿ ಕಸಗುಡಿಸಿದರೆ ಅಣಕʼ- ನಟ ಜಗ್ಗೇಶ್‌ ಬೇಸರ!

'ಪ್ರಿಯಾಂಕಾ ತಟ್ಟೆ ತೊಳೆದರೆ ಸುದ್ದಿ, ನಾನು ಕಸಗುಡಿಸಿದರೆ ಅಣಕ'- ಜಗ್ಗೇಶ್

ನಟ ಜಗ್ಗೇಶ್‌ ಅವರು ಮಂತ್ರಾಲಯದ ರಾಯರ ಮಠದಲ್ಲಿ ಕಸಗುಡಿಸುವ ಸೇವೆ ಮಾಡುವುದನ್ನು ಅಣಕಿಸುವವರಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಪ್ರಿಯಾಂಕಾ ಚೋಪ್ರಾ ಅಂತಹ ನಟಿಯರು ದೇವಸ್ಥಾನದಲ್ಲಿ ಸೇವೆ ಮಾಡಿದರೆ ದೊಡ್ಡ ಸುದ್ದಿಯಾಗುತ್ತದೆ, ಆದರೆ ತಾವು ಮಾಡಿದರೆ ಅಪಹಾಸ್ಯ ಮಾಡುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

21 ವರ್ಷಗಳ ನಂತರ ಒಂದೇ ಸಿನಿಮಾದಲ್ಲಿ ನಟಿಸಿದ ಆದಿತ್ಯ - ಶ್ರೀನಗರ ಕಿಟ್ಟಿ; ʻಟೆರರ್ʼ‌ ಚಿತ್ರದ ರಿಲೀಸ್‌ ಡೇಟ್‌ ಅನೌನ್ಸ್‌

21 ವರ್ಷಗಳ ನಂತರ ಒಂದಾದ ಆದಿತ್ಯ - ಕಿಟ್ಟಿ; 'ಟೆರರ್' ರಿಲೀಸ್ ಡೇಟ್ ಫಿಕ್ಸ್!

ʻಟೆರರ್ʼ‌ ಚಿತ್ರದ ಮೂಲಕ ಡೆಡ್ಲಿ ಸ್ಟಾರ್ ಆದಿತ್ಯ ಮತ್ತು ಶ್ರೀನಗರ ಕಿಟ್ಟಿ ಬರೋಬ್ಬರಿ 21 ವರ್ಷಗಳ ನಂತರ ಒಂದೇ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಂಜನ್ ಶಿವರಾಮ್ ಗೌಡ ನಿರ್ದೇಶನದ ಈ ಚಿತ್ರವು ಏಪ್ರಿಲ್ 10 ರಂದು ಬಿಡುಗಡೆಯಾಗಲಿದೆ. ಹಿರಿಯ ಕಲಾವಿದರಾದ ದೇವರಾಜ್, ಶಶಿಕುಮಾರ್ ಮತ್ತು ಕುಮಾರ್ ಬಂಗಾರಪ್ಪ ಅವರನ್ನೊಳಗೊಂಡ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ.

ʻಯಾಕೆ ಅನ್‌ಫಾಲೋ ಮಾಡಿದೆ ಅಂತ ರಿಷಬ್‌ನ ನಾನು ಕೇಳಿಲ್ಲʼ; ನಟ ಪ್ರಮೋದ್‌ ಶೆಟ್ಟಿ ಹೇಳಿದ್ರು ಅಸಲಿ ವಿಷ್ಯ!

ರಿಷಬ್ ಅನ್‌ಫಾಲೋ ಮಾಡಿದ್ದರ ಬಗ್ಗೆ ಅಸಲಿ ವಿಷಯ ಬಿಚ್ಚಿಟ್ಟ ಪ್ರಮೋದ್ ಶೆಟ್ಟಿ

ರಿಷಬ್‌ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಆಪ್ತ ಗೆಳೆಯರನ್ನೇ ಅನ್‌ಫಾಲೋ ಮಾಡಿರುವ ಕುರಿತು ನಟ ಪ್ರಮೋದ್ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ. ಇದು ಕೇವಲ ಸೋಶಿಯಲ್ ಮೀಡಿಯಾ ಏಜೆನ್ಸಿಯ ಸ್ಟ್ರಾಟೆಜಿ ಇರಬಹುದೇ ಹೊರತು, ಸ್ನೇಹದಲ್ಲಿ ಯಾವುದೇ ಬಿರುಕಿಲ್ಲ ಎಂದು ಅವರು ತಿಳಿಸಿದ್ದಾರೆ.

ʻಟಾಕ್ಸಿಕ್‌ʼ ಬಳಿಕ ಸದ್ದಿಲ್ಲದೇ ಕೆವಿಎನ್‌ ಪ್ರೊಡಕ್ಷನ್ಸ್‌ ಜೊತೆ ಮತ್ತೊಂದು ಸಿನಿಮಾಕ್ಕೆ ಕೈಜೋಡಿಸಿದ ನಟಿ ರುಕ್ಮಿಣಿ ವಸಂತ್

'ಟಾಕ್ಸಿಕ್' ಬೆನ್ನಲ್ಲೇ ಕೆವಿಎನ್ ಜೊತೆ ರುಕ್ಮಿಣಿ ವಸಂತ್ ಹೊಸ ಸಿನಿಮಾ

ನಟಿ ರುಕ್ಮಿಣಿ ವಸಂತ್‌ ಅವರು 'ಟಾಕ್ಸಿಕ್' ಚಿತ್ರದ ನಂತರ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಮತ್ತೊಂದು ಹೊಸ ಕನ್ನಡ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಆರಂಭವಾಗಿದ್ದು, ವಿಶೇಷ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ.

Youth Movie: ಅಂದು ಟೀ ಬಿಲ್‌ ಕೊಡಲು 50 ರೂ. ಇರಲಿಲ್ಲ, ಇಂದು ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್‌! ಮ್ಯಾಜಿಕ್‌ ಮಾಡಿದ 24 ವರ್ಷದ ಕೆನ್ ಕರುಣಾಸ್!‌

Youth Movie: ಬಾಕ್ಸ್‌ ಆಫೀಸ್‌ನಲ್ಲಿ ಸದ್ದಿಲ್ಲದೇ ಮ್ಯಾಜಿಕ್‌ ಮಾಡಿದ ಕೆನ್‌

ಯೂತ್ ಚಿತ್ರದ ಮೂಲಕ 24 ವರ್ಷದ ಕೆನ್ ಕರುಣಾಸ್ ಕಾಲಿವುಡ್‌ನಲ್ಲಿ ಅಚ್ಚರಿ ಮೂಡಿಸಿದ್ದಾರೆ. ಧುರಂಧರ್‌ 2 ಸಿನಿಮಾದ ಪೈಪೋಟಿಯ ನಡುವೆಯೂ ಮಾರ್ಚ್ 19ರಂದು ಬಿಡುಗಡೆಯಾದ ಈ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ನಟ ಧನುಷ್ ಅವರ ಬಳಿ ಸಹಾಯಕನಾಗಿ ಪಳಗಿದ್ದ ಕೆನ್, ಹಣಕಾಸಿನ ತೀವ್ರ ಮುಗ್ಗಟ್ಟಿನ ನಡುವೆಯೂ ನಿರ್ಮಾಪಕ ಕರುಪ್ಪಯ್ಯ ಅವರ ಬೆಂಬಲದೊಂದಿಗೆ ಈ ಚಿತ್ರ ಮಾಡಿ, ಯಶಸ್ವಿ ಆಗಿದ್ದಾರೆ.

Loading...