ಆಂಧ್ರ ಡಿಸಿಎಂ, ನಟ ಪವನ್ ಕಲ್ಯಾಣ್ ಹೆಸರಿನ ಹಿಂದಿರುವ ಅಸಲಿ ರಹಸ್ಯ ಬಯಲು!
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ನಟ ಪವನ್ ಕಲ್ಯಾಣ್ ತಮ್ಮ ಅಸಲಿ ಹೆಸರು 'ಪವನ್ ಕಲ್ಯಾಣ್' ಅಲ್ಲ, ಪೋಷಕರು ತಮಗೆ 'ಶ್ರೀ ಕಲ್ಯಾಣ್ ಕುಮಾರ್' ಎಂದು ನಾಮಕರಣ ಮಾಡಿದ್ದರು ಎಂಬ ರೋಚಕ ಸತ್ಯವನ್ನು ಅವರು ಬಹಿರಂಗಪಡಿಸಿದ್ದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಬಂಧನವಾಗಿ ಇಂದಿಗೆ (ಜೂನ್ 11) ಸರಿಯಾಗಿ ಎರಡು ವರ್ಷ ಕಳೆದಿದೆ. ಸುಪ್ರೀಂಕೋರ್ಟ್ನಲ್ಲಿ ಜಾಮೀನು ವಜಾಗೊಂಡ ಬಳಿಕ ನಿರಾಶರಾಗಿರುವ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಸಂಪೂರ್ಣ ಮೌನಕ್ಕೆ ಶರಣಾಗಿ ಪುಸ್ತಕ ಓದುತ್ತಿದ್ದಾರೆ.
Dridam OTT: ದಿನೇಶ್ ಪ್ರಭಾಕರ್, ರಮೇಶ್ ಕೊಟ್ಟಾಯಂ, ಶೋಬಿ ತಿಲಕನ್, ನಂದನ್ ಉನ್ನಿ ಮತ್ತು ಮ್ಯಾಥ್ಯೂ ವರ್ಗೀಸ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ಜೋಮನ್ ಜಾನ್ ಮತ್ತು ಲಿಂಟೊ ದೇವಸ್ಯ ಬರೆದಿದ್ದಾರೆ. ಚಿತ್ರದ ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಿಗೆ ಡಬ್ ಮಾಡಲಾದ ಆವೃತ್ತಿಗಳು ಒಟಿಟಿಯಲ್ಲಿಯೂ ಲಭ್ಯವಿರುತ್ತವೆ.
Rukmini Vasanth: ಇತ್ತೀಚೆಗೆ ರುಕ್ಮಿಣಿ ಅವರು ಈಜುಡುಗೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಡೀಪ್ ಫೇಕ್ ವಿಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅವರು ದೂರು ನೀಡಿದ್ದರು. ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳಿಗೆ ಬೇಟೆ ಶುರು ಮಾಡಿದ್ದಾರೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಶ್ರುತಿ ಅಭಿನಯದ 175ನೇ ಚಿತ್ರ ‘ಮದರ್’ ಸಿನಿಮಾಗೆ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅದ್ಧೂರಿ ಚಾಲನೆ ಸಿಕ್ಕಿದೆ. ಮಂಡ್ಯದ ಹಿನ್ನೆಲೆಯ ಅನಕ್ಷರಸ್ಥ ಮಹಿಳೆಯ ರಗಡ್ ಹೋರಾಟದ ಕಥೆಯಿರುವ ಈ ಚಿತ್ರದ ಮುಹೂರ್ತಕ್ಕೆ ನಾಗತಿಹಳ್ಳಿ ಚಂದ್ರಶೇಖರ್ ಕ್ಲಾಪ್ ಮಾಡಿದರು.
ಟಗರು ಕಾಳಗದ ಇತಿಹಾಸದಲ್ಲಿ 'ಸೋಲಿಲ್ಲದ ಸರದಾರ' ಎಂದೇ ಖ್ಯಾತಿ ಗಳಿಸಿದ್ದ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ 'ಬೆಳ್ಳೂಡಿ ಕಾಳಿ' ಟಗರಿನ ರೋಚಕ ಯಶೋಗಾಥೆ ಈಗ 'ಕಾಳಿ-ದಿ ಗೋಟ್' ಹೆಸರಿನಲ್ಲಿ ಡಾಕ್ಯುಮೆಂಟರಿ ಆಗುತ್ತಿದೆ. ನಿರ್ದೇಶಕ ಗಿರೀಶ್ ಜಿ. ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಡಾಕ್ಯುಮೆಂಟರಿಯು ಸದ್ಯ ಪೋಸ್ಟ್ ಪ್ರೊಡಕ್ಷನ್ಸ್ ಹಂತದಲ್ಲಿದೆ.
ರಾಜ್ಕುಮಾರ್ ಪೆರಿಯಸಾಮಿ ನಿರ್ದೇಶನದ ಧನುಷ್ ಅವರ 55ನೇ ಚಿತ್ರವು ಭಾರಿ ಕುತೂಹಲ ಮೂಡಿಸಿದೆ. ಈ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ಸಾಯಿ ಪಲ್ಲವಿ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದರೆ ಎಂಬ ಮಾಹಿತಿ ಸಿಕ್ಕಿದೆ. ಧನುಷ್ ಜೊತೆಗೆ ಮಮ್ಮುಟ್ಟಿ, ಶ್ರೀಲೀಲಾ ಕೂಡ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ತಮಿಳು ಹಾಗೂ ತೆಲುಗಿನ ಪ್ರತಿಭಾವಂತ ನಟಿ ಐಶ್ವರ್ಯಾ ರಾಜೇಶ್ ಕೊನೆಗೂ ಅನಿವಾಸಿ ಭಾರತೀಯ ಅಮೋಘ್ ವಿಜಯ್ ನಿರ್ದೇಶಿಸಲಿರುವ ಹೊಸ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಅಧಿಕೃತವಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಯುಎಸ್ಎ ಮೂಲದ 'ಮ್ಯಾವ್ರಿಕ್ ಪ್ರೊಡಕ್ಷನ್ಸ್' ನಿರ್ಮಿಸಲಿರುವ ಈ ಮಹಿಳಾ ಪ್ರಧಾನ ಸಿನಿಮಾವು ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಮೂಡಿಬರಲಿದೆ.
Darshan Case:ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಒಟ್ಟು 17 ಮಂದಿ ಆರೋಪಿಗಳಿದ್ದರು. ಒಟ್ಟು 7 ಮಂದಿ ಆರೋಪಿಗಳ ಜಾಮೀನು ರದ್ದತಿಗೆ ಹೈಕೋರ್ಟ್ ಮೊರೆ ಹೋಗಿತ್ತು. ಈಗ ಐವರು ಆರೋಪಿಗಳಿಗೆ ಹೈಕೋರ್ಟ್ನಲ್ಲಿ ಜಯ ಸಿಕ್ಕಂತಾಗಿದ್ದು, ತನಿಖಾ ಸಂಸ್ಥೆಗೆ ಕಾನೂನಾತ್ಮಕವಾಗಿ ಹಿನ್ನಡೆಯಾದಂತಾಗಿದೆ.
Alia Bhatt: "ಫಸ್ಟ್ ಕಿಲ್" ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಆಲ್ಫಾದಲ್ಲಿ ಆಲಿಯಾ ಭಟ್ ನಟ ಬಾಬಿ ಡಿಯೋಲ್ ಅವರ ಮಗಳ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಟೀಸರ್ ಸ್ಪಷ್ಟವಾಗಿ ಬಹಿರಂಗಗೊಂಡಿದೆ. ಆಲಿಯಾ ಅವರ ಆಕ್ಷನ್-ಪ್ಯಾಕ್ಡ್ ಶೈಲಿಯು ಇಡೀ ಟೀಸರ್ನ ಕೇಂದ್ರಬಿಂದುವಾಗಿದ್ದು, ಅಭಿಮಾನಿಗಳಲ್ಲಿ ಉತ್ಸಾಹವನ್ನು ಹುಟ್ಟುಹಾಕಿದೆ. ಪ್ರಸ್ತುತ, ಆಲ್ಫಾ ಟೀಸರ್ನಲ್ಲಿ ಬಾಬಿ ಮತ್ತು ಆಲಿಯಾ ಮಾತ್ರ ಹೈಲೈಟ್ ಆಗಿದ್ದಾರೆ.
ಮಾಗಡಿ ತಾಲೂಕಿನ ಪ್ರಸಿದ್ಧ ಶ್ರೀ ಉಜ್ಜಿನಿ ಚೌಡೇಶ್ವರಿ ದೇವಿಯ ಜಾತ್ರೆಯ ನೈಜ ಘಟನೆಗಳ ಆಧಾರಿತ ‘ಊರಬ್ಬ’ ಚಿತ್ರದ ಟ್ರೇಲರ್ ಅನ್ನು ಶಾಸಕ ರಂಗನಾಥ್ ಬಿಡುಗಡೆ ಮಾಡಿದ್ದಾರೆ. ಲಕ್ಕಿ ಶಂಕರ್ ನಿರ್ದೇಶನದ ಈ ಚಿತ್ರವನ್ನು ಭಾರತದಲ್ಲೇ ಮೊದಲ ಬಾರಿಗೆ 8 ಕ್ಯಾಮೆರಾಗಳ ಮೂಲಕ ಲೈವ್ ಜಾತ್ರೆಯಲ್ಲೇ ಶೂಟ್ ಮಾಡಲಾಗಿದೆ.
ಕೆ.ಎಂ. ಚೈತನ್ಯ ನಿರ್ದೇಶನದ, ವಿನೋದ್ ಪ್ರಭಾಕರ್ ಮುಖ್ಯ ಭೂಮಿಕೆಯ ‘ಬಲರಾಮನ ದಿನಗಳು’ ಚಿತ್ರದ ರೇಟ್ರೋ ಶೈಲಿಯ ‘ಕ್ವಾಟರ್ರು..’ ಹಾಡನ್ನು ನಟಿ ತಾರಾ ಅನುರಾಧಾ ಬಿಡುಗಡೆ ಮಾಡಿದ್ದಾರೆ. ‘ಆ ದಿನಗಳು’ ಚಿತ್ರದ 19 ವರ್ಷಗಳ ಬಳಿಕ ಅಂಡರ್ವರ್ಲ್ಡ್ ಸಂಶೋಧನೆ ನಡೆಸಿ ಈ ಬೃಹತ್ ಬಜೆಟ್ ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ.
ಸ್ಯಾಂಡಲ್ವುಡ್ ನಟಿ ಶುಭಾ ಪೂಂಜಾ ಮತ್ತು ಉದ್ಯಮಿ ಸುಮಂತ್ ಮಹಾಬಲ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿದ್ದು, ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ ಎಂಬ ವರದಿ ಚಿತ್ರರಂಗದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವದಂತಿಗಳ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪತ್ರ ಬರೆದಿರುವ ಶುಭಾ, ತಮಗೆ ಸ್ವಲ್ಪ ಸಮಯಾವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
Salman Khan : ಮಂಗಳವಾರ ಮುಂಬೈನಲ್ಲಿ ಕುಮುದ್ ರಾಣೆ ಅಂತ್ಯಕ್ರಿಯೆ ನಡೆಸಲಾಯಿತು. ಕುಮುದ್ ರಾಣೆ ಅವರ ಮರಣದ ನಂತರ, ಸಲ್ಮಾನ್ ಖಾನ್ ಅಳುತ್ತಿರುವ ವಿಡಿಯೋವೊಂದು ಕಾಣಿಸಿಕೊಂಡಿದೆ. ಸಲ್ಮಾನ್ ಖಾನ್ ಕುಮುದ್ ರಾಣೆ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಕುಮುದ್ ರಾಣೆ ನಟನಿಗೆ ಮಾತ್ರವಲ್ಲದೆ ಅವರ ಕುಟುಂಬಕ್ಕೂ (Family) ತುಂಬಾ ಆಪ್ತರಾಗಿದ್ದರು.
Bharathiraja: ನಟ ಭಾರತಿರಾಜ (Bharathiraja) ಅವರು ಜೂನ್ 10 ಬುಧವಾರದಂದು ವಯೋಸಹಜ ಸಮಸ್ಯೆಗಳಿಂದಾಗಿ ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. "ನಮ್ಮ ಸಂಘದ ಹಿರಿಯ ಸದಸ್ಯರಲ್ಲಿ ಒಬ್ಬರೂ, ಮಾಜಿ ಅಧ್ಯಕ್ಷರೂ ಆಗಿದ್ದ ನಿರ್ದೇಶಕ ಶ್ರೀ ಭಾರತಿರಾಜ ಅವರು ಇಂದು ಮುಂಜಾನೆ ನಿಧನರಾದರು ಎಂದು ತಿಳಿಸಲು ವಿಷಾದಿಸುತ್ತೇವೆ" ಎಂದು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.
Allu Arjun: ಅಲ್ಲು ಅರ್ಜುನ್ ಅವರ ಈ ಟ್ವೀಟ್ನಿಂದ ಮೆಗಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ರಾಮ್ ಚರಣ್ ಮತ್ತು ಅಲ್ಲು ಅರ್ಜುನ್ ನಡುವೆ ಹಲವು ದಿನಗಳಿಂದ ಸ್ಪರ್ಧೆ ನಡೆಯುತ್ತಿದೆ ಎಂಬ ಮಾತುಗಳಿವೆ. ಇದರ ಜೊತೆಗೆ ಮೆಗಾ ಮತ್ತು ಅಲ್ಲು ಕುಟುಂಬಗಳ ನಡುವೆ ಸ್ವಲ್ಪ ಅಂತರವಿದೆ ಎಂಬ ವದಂತಿಗಳೂ ಹಬ್ಬಿದ್ದವು. ಇನ್ನು, 'ಪೆದ್ದಿ' ಸಿನಿಮಾ ವಿಶ್ವಾದ್ಯಂತ ಐದು ದಿನಗಳಲ್ಲಿ 249 ಕೋಟಿ ರೂ. ಗಳಿಸಿದೆ.
Karikaada Kannada movie: ಕರಿಕಾಡ ಚಿತ್ರದಲ್ಲಿ ಹಳ್ಳಿ ಯುವಕನಾಗಿ ನಟರಾಜ್ ಅದ್ಭುತ ನಟನೆ ನೀಡಿದ್ದರು. ಮೊದಲ ಚಿತ್ರದಲ್ಲೇ ನಟನೆಯೊಂದಿಗೆ ಸಾಹಸ ಸನ್ನಿವೇಶಗಳಲ್ಲಿ ಕೂಡ ಸ್ವತಃ ಭಾಗಿಯಾಗಿ ನೋಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಟರಾಜ್ ಇಂಥದೊಂದು ವಿಭಿನ್ನ ಲುಕ್ ನಲ್ಲಿ ಕಾಣಿಸಿಕೊಂಡಿರುವುದು ಸಹೋದ್ಯೋಗಿಗಳಿಂದ ಹಿಡಿದು ಪರಿಚಿತ ವಲಯದಲ್ಲಿ ಅಚ್ಚರಿ ಮೂಡಿಸಿತ್ತು.
ಪತ್ನಿ ಆರತಿ ಸಲ್ಲಿಸಿರುವ ಮಧ್ಯಂತರ ಜೀವನಾಂಶ ಅರ್ಜಿಯ ವಿಚಾರಣೆಗೆ ಹೆಚ್ಚಿನ ಕಾಲಾವಕಾಶ ಕೋರಿದ್ದ ನಟ ರವಿ ಮೋಹನ್ (ʻಜಯಂʼ ರವಿ) ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ನಟನಿಗೆ ಭಾರಿ ಹಿನ್ನಡೆಯಾಗಿದೆ. ಮಕ್ಕಳ ಶಾಲಾ ಶುಲ್ಕ ಹಾಗೂ ಜೀವನಾಂಶ ಪಾವತಿಸದ ಕಾರಣ ಆರತಿ ಹೈಕೋರ್ಟ್ ಮೆಟ್ಟಿಲೇರಿದ್ದರು.
Kangana Ranaut: ಒಂದು ಕಾಲದಲ್ಲಿ ‘ರಾಸ್ಕಲ್ಸ್’ ಮತ್ತು ‘ಡಬಲ್ ಧಮಾಲ್’ ರೀತಿಯ ಕಮರ್ಷಿಯಲ್ ಸಿನಿಮಾಗಳು ಮಾಡಿದ್ದಕ್ಕೆ ಹೆಸರುವಾಸಿಯಾಗಿದ್ದರು. ಆ ಪಾತ್ರಗಳು ಅವರ ಆರಂಭಿಕ ಪರದೆಯ ಇಮೇಜ್ ಅನ್ನು ವ್ಯಾಖ್ಯಾನಿಸಿದವು ಆದರೆ ಅವರ ವೃತ್ತಿಜೀವನದ ಹಾದಿಯನ್ನು ನಿರ್ಧರಿಸಲಿಲ್ಲ ಎಂದು ಹೇಳಿದ್ದಾರೆ. ಚಿತ್ರದ ಪ್ರಚಾರದ ವೇಳೆ ಅವರು ತಮ್ಮ ಹಳೆಯ ದಿನಗಳ ಹೋರಾಟವನ್ನು ಬಿಚ್ಚಿಟ್ಟಿದ್ದಾರೆ.
ಸಮಾಜದಲ್ಲಿ ಮಿತಿಮೀರುತ್ತಿರುವ ಭ್ರಷ್ಟಾಚಾರ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಲು ಸ್ಯಾಂಡಲ್ವುಡ್ನ ಯುವ ಪ್ರತಿಭೆಗಳು ಸಜ್ಜಾಗಿದ್ದು, ‘ನಮ್ಮೂರು ನಮ್ಮವರು’ ಕ್ರಾಂತಿಕಾರಿ ಮ್ಯೂಸಿಕ್ ಆಲ್ಬಂ ಅನ್ನು ಬಿಡುಗಡೆ ಮಾಡಿದ್ದಾರೆ. ಆರೋಹ ಫಿಲಂಸ್ ಲಾಂಛನದಲ್ಲಿ ವಕೀಲ ಸಂದೀಪ್ ಪಾಟೀಲ್ ಬೆಂಬಲದೊಂದಿಗೆ ಮೂಡಿಬಂದಿರುವ ಈ ಜಾಗೃತಿ ಗೀತೆಗೆ ಮಯೂರ್ ಅಂಬೇಕಲ್ಲು ಸಂಗೀತ ನೀಡಿದ್ದಾರೆ.
ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ 500 ಕೋಟಿ ರೂ. ಭಾರಿ ಬಜೆಟ್ನ 'ಟಾಕ್ಸಿಕ್' ಸಿನಿಮಾ 100 ದಿನಗಳ ಕಾಲ ರೀ-ಶೂಟಿಂಗ್ ಆಗುತ್ತಿದ್ದು, 40 ಕೋಟಿ ಹೆಚ್ಚುವರಿ ವೆಚ್ಚವಾಗಲಿದೆ ಎಂಬ ವದಂತಿಗಳನ್ನು ಚಿತ್ರತಂಡದ ಆಪ್ತ ಮೂಲಗಳು ತಳ್ಳಿಹಾಕಿವೆ. ಜಾಗತಿಕ ಮಾರುಕಟ್ಟೆ ಮತ್ತು ಇರಾನ್ ಯುದ್ಧದ ಕಾರಣಗಳಿಂದ ಬಿಡುಗಡೆ ದಿನಾಂಕ ವಿಳಂಬವಾಗಿದ್ದೇ ಈ ಊಹಾಪೋಹಗಳಿಗೆ ಮೂಲ ಕಾರಣ ಎನ್ನಲಾಗಿದೆ.