ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Badshah Controversy: ಖ್ಯಾತ ಗಾಯಕ ಬಾದ್‌ಶಾ ವಿರುದ್ಧ ದೂರು ದಾಖಲು; ಏನಿದು ವಿವಾದ?

ಖ್ಯಾತ ಗಾಯಕ ಬಾದ್‌ಶಾ ವಿರುದ್ಧ ದೂರು ದಾಖಲು; ಏನಿದು ವಿವಾದ?

Badshah Controversy: ಬಾದ್​ಶಾ ಅಲಿಯಾಸ್ ಆದಿತ್ಯ ಪ್ರತೀಕ್ ಸಿಂಗ್ ಸಿಸೋಡಿಯಾ ಹೊಸ ಹಾಡು ‘ಟಟೀರಿ’ ಇತ್ತೀಚೆಗೆ ಬಿಡುಗಡೆ ಆಯಿತು. ಆಕ್ಷೇಪಾರ್ಹ ಸಾಹಿತ್ಯವಿದೆ ಎಂದು ಆರೋಪಿಸಿ ಹರಿಯಾಣ ರಾಜ್ಯ ಮಹಿಳಾ ಆಯೋಗ ಔಪಚಾರಿಕ ಸಮನ್ಸ್ ಜಾರಿ ಮಾಡಿದ ನಂತರ ರ‍್ಯಾಪರ್-ಗಾಯಕ ಬಾದ್‌ಶಾ ಹೊಸ ವಿವಾದವನ್ನು ಎದುರಿಸುತ್ತಿದ್ದಾರೆ. ಕೆಲವು ಪದಗಳು ಅಸಭ್ಯತೆಯಿಂದ ಕೂಡಿವೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಕೆಡಿಸುವಂತಿವೆ ಎಂದು ಸಾರ್ವಜನಿಕರು ದೂರು ನೀಡಿದ್ದರು.

Janhvi Kapoor: ತಿರುಪತಿಯಲ್ಲಿ ಬರಿಗಾಲಲ್ಲಿ 3550 ಮೆಟ್ಟಿಲು ಹತ್ತಿದ ಜಾನ್ವಿ ಕಪೂರ್; ಭಕ್ತಿಗೆ ಮೆಚ್ಚಿದ ಅಭಿಮಾನಿಗಳು

ತಿರುಪತಿಯಲ್ಲಿ ಬರಿಗಾಲಲ್ಲಿ 3550 ಮೆಟ್ಟಿಲು ಹತ್ತಿದ ಜಾನ್ವಿ ಕಪೂರ್!

Tirumala Temple: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹುಟ್ಟುಹಬ್ಬದ ಪ್ರಯುಕ್ತ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ್ದರು. 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟಿ. ಬರೋಬ್ಬರಿ 3,550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಭಕ್ತಿಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

ಜಾನ್ವಿ ಕಪೂರ್‌ ಹುಟ್ಟುಹಬ್ಬಕ್ಕಾಗಿ ಸ್ಪೆಷಲ್ ವಿಡಿಯೋ ಹಂಚಿಕೊಂಡ ʻಪೆದ್ದಿʼ ಟೀಮ್;‌ ಈ ಚಿತ್ರಕ್ಕಾಗಿ ʻಕಪೂರ್‌ ಕುಡಿʼ ಪಡೆದ ಸಂಭಾವನೆ ಎಷ್ಟು?

Ram Charan: 'ಪೆದ್ದಿ' ಸುಂದರಿ ಜಾನ್ವಿ ಕಪೂರ್‌ಗೆ ಬರ್ತ್‌ಡೇ ಸಂಭ್ರಮ

Janhvi Kapoor: ಪೆದ್ದಿ ಚಿತ್ರದ ನಾಯಕಿ ಜಾನ್ವಿ ಕಪೂರ್ ಅವರ ಹುಟ್ಟುಹಬ್ಬದ ಅಂಗವಾಗಿ ಚಿತ್ರತಂಡ ವಿಶೇಷ ವಿಡಿಯೋ ಬಿಡುಗಡೆ ಮಾಡಿದೆ. ರಾಮ್ ಚರಣ್ ನಟನೆಯ ಈ ಸಿನಿಮಾದಲ್ಲಿ 'ಅಚ್ಚಿಯಮ್ಮ' ಎಂಬ ವಿಭಿನ್ನ ಪಾತ್ರದಲ್ಲಿ ಜಾನ್ವಿ ಕಾಣಿಸಿಕೊಳ್ಳುತ್ತಿದ್ದಾರೆ.

ʻಟಾಕ್ಸಿಕ್‌ʼ ಪೋಸ್ಟ್‌ಪೋನ್‌ ಆದರೂ ʻಧುರಂಧರ್‌  2ʼ ಚಿತ್ರಕ್ಕೆ ದಕ್ಷಿಣ ಭಾರತದಲ್ಲಿ ಎದುರಾಗಲಿದೆ ಫೈಟ್;‌ ಭರ್ಜರಿ ಕಲೆಕ್ಷನ್‌ ಮಾಡುವುದು ಸುಲಭವಿಲ್ಲ!

ಸೌತ್ ಇಂಡಿಯಾದಲ್ಲಿ ರಣವೀರ್‌ಗೆ 'ಉಸ್ತಾದ್ ಭಗತ್ ಸಿಂಗ್' ಭರ್ಜರಿ ಪೈಪೋಟಿ!

Dhurandhar 2: ರಣವೀರ್‌ ಸಿಂಗ್ ಅಭಿನಯದ ಬಹುನಿರೀಕ್ಷಿತ ʻಧುರಂಧರ್‌ 2ʼ ಸಿನಿಮಾ ಮಾರ್ಚ್ 19 ರಂದು ತೆರೆಗೆ ಬರುತ್ತಿದ್ದು, ಯಶ್ ಅವರ 'ಟಾಕ್ಸಿಕ್' ಮುಂದೂಡಲ್ಪಟ್ಟಿರುವುದು ಚಿತ್ರಕ್ಕೆ ವರದಾನವಾಗಲಿದೆ ಎನ್ನಲಾಗಿತ್ತು. ಆದರೆ, ಪವನ್ ಕಲ್ಯಾಣ್ ಅವರ 'ಉಸ್ತಾದ್ ಭಗತ್ ಸಿಂಗ್' ಪ್ರೀ-ಪೋನ್ ಆಗಿರುವುದು ಮತ್ತು ಕನ್ನಡದ 'ಲವ್ ಮಾಕ್ಟೇಲ್ 3' ಬಿಡುಗಡೆಯಾಗುತ್ತಿರುವುದು ರಣವೀರ್ ಸಿಂಗ್‌ಗೆ ದಕ್ಷಿಣ ಭಾರತದಲ್ಲಿ ಕೊಂಚ ಸವಾಲಾಗಿದೆ.

Ranveer Singh: ʻಧುರಂಧರ್‌ 2ʼ ಚಿತ್ರಕ್ಕಾಗಿ ಹೊಸ ಪ್ಲ್ಯಾನ್‌ ಮಾಡಿದ ನಿರ್ದೇಶಕ ಆದಿತ್ಯ ಧರ್;‌ ಮಾ.7ಕ್ಕೆ ಬರ್ತಿದೆ ಟ್ರೇಲರ್‌!

ʻಧುರಂಧರ್‌ 2ʼ ಚಿತ್ರಕ್ಕಾಗಿ ಹೊಸ ಪ್ಲ್ಯಾನ್‌ ಮಾಡಿದ ನಿರ್ದೇಶಕ!

Dhurandhar: The Revenge: 2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು. ಹಲವು ಬಾಕ್ಸ್ ಆಫೀಸ್​​ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ನಿರ್ಮಿಸಿತ್ತು. ಇದೀಗ ಟ್ರೇಲರ್ ಬಿಡುಗಡೆ ದಿನಾಂಕ ಮತ್ತು ಸಮಯವನ್ನು ಘೋಷಿಸುವ ಪೋಸ್ಟರ್‌ಗಳನ್ನು ರಣವೀರ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಹು ಭಾಷೆಗಳಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ.

ಮೆಚ್ಚಿದ ಹುಡುಗಿ ರಶ್ಮಿಕಾ ಜೊತೆ ಮದುವೆ ಆಯ್ತು, ಈಗ ಸಿನಿಮಾಗಳ ಮೇಲೆ ವಿಜಯ್‌ ದೇವರಕೊಂಡ ಫೋಕಸ್‌! ಇಲ್ಲಿದೆ ಹೊಸ ಚಿತ್ರಗಳ ಅಪ್ಡೇಟ್!‌

ಮದುವೆ ಬೆನ್ನಲ್ಲೇ ಕೆಲಸಕ್ಕೆ ಹಾಜರ್; ಬಿಗ್ ಪ್ಲಾನ್ ಮಾಡಿದ ವಿಜಯ್ ದೇವರಕೊಂಡ

Vijay Deverakonda: ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ಮದುವೆಯ ಸಂಭ್ರಮ ಮುಗಿಸಿ ಈಗ ತಮ್ಮ ಸಿನಿಮಾಗಳತ್ತ ಸಂಪೂರ್ಣವಾಗಿ ಗಮನ ಹರಿಸುತ್ತಿದ್ದಾರೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಮದುವೆಯಾದ ಈ ಜೋಡಿ ಸದ್ಯ ಸಣ್ಣ ಬ್ರೇಕ್‌ನಲ್ಲಿದೆ. ವಿಜಯ್ ದೇವರಕೊಂಡ ಅವರು ಮಾರ್ಚ್ 12 ರಿಂದ 'ರಣಬಾಲಿ' ಚಿತ್ರದ ಶೂಟಿಂಗ್ ಆರಂಭಿಸಲಿದ್ದು, ಸೆಪ್ಟೆಂಬರ್‌ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

ʻ20ನೇ ವಯಸ್ಸಿನಲ್ಲಿ ನಾಯಕಿಯಾಗುವುದು ಸುಲಭ, ಆದರೆ 20 ವರ್ಷಗಳ ಕಾಲ ನಾಯಕಿಯಾಗಿಯೇ ಉಳಿಯುವುದು ಸಾಧನೆʼ; ಎಲ್ಲರೆದುರೇ ತ್ರಿಷಾರನ್ನು ಕೊಂಡಾಡಿದ್ದ ವಿಜಯ್!‌

ʻ20 ವರ್ಷ ನಾಯಕಿಯಾಗಿ ಉಳಿಯುವುದು ಸಾಧನೆʼ; ತ್ರಿಷಾರನ್ನು ಹೊಗಳಿದ್ದ ವಿಜಯ್!

Vijay Trisha Relationship: ನಟ ವಿಜಯ್‌ ಮತ್ತು ತ್ರಿಷಾ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಜೋರಾಗಿರುವ ಬೆನ್ನಲ್ಲೇ, ಲಿಯೋ ಆಡಿಯೋ ಲಾಂಚ್‌ನಲ್ಲಿ ವಿಜಯ್ ಹೇಳಿದ್ದ ಮಾತುಗಳು ಪುನಃ ವೈರಲ್‌ ಆಗುತ್ತಿವೆ. ವಿಜಯ್ ಪತ್ನಿ ಸಂಗೀತಾ ವಿಚ್ಛೇದನ ಅರ್ಜಿ ‌ಸಲ್ಲಿಸಿರುವ ಈ ಸಂದರ್ಭದಲ್ಲಿ ಈ ಹೇಳಿಕೆಗಳು ಮತ್ತೆ ಮತ್ತೆ ಚರ್ಚೆಗೆ ಬರುತ್ತಿವೆ.

ʻದಳಪತಿʼ ವಿಜಯ್‌ - ತ್ರಿಷಾ ಒಟ್ಟಿಗೆ ಯಾವ್ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ? ಇವರಿಬ್ಬರ ಫ್ರೆಂಡ್‌ಶಿಪ್‌ಗೆ ಎಷ್ಟು ವರ್ಷ?

ವಿಜಯ್‌-ತ್ರಿಷಾ ಸ್ನೇಹ; ʻಗಿಲ್ಲಿʼಯಿಂದ ಗಲ್ಲಿ ಗಲ್ಲಿಯಲ್ಲಿ ಸುದ್ದಿಯಾಗೋ ತನಕ

Thalapathy Vijay: ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್‌ ಮತ್ತು ನಟಿ ತ್ರಿಷಾ ಮದುವೆ ಸಮಾರಂಭವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 2003ರ 'ಗಿಲ್ಲಿ' ಚಿತ್ರದಿಂದ ಆರಂಭವಾದ ವಿಜಯ್‌ - ತ್ರಿಷಾ ಅವರ 23 ವರ್ಷಗಳ ಸ್ನೇಹ ಈಗ ವದಂತಿಗಳಿಗೆ ಕಾರಣವಾಗಿದೆ.‌

ರಜನಿಕಾಂತ್‌ ವಾಸ ಮಾಡ್ತಿರುವ ಏರಿಯಾದಲ್ಲೇ ಐಷಾರಾಮಿ ಮನೆ ಖರೀದಿಸಿದ ನಟಿ ನಯನತಾರಾ; ಇದರ ಬೆಲೆ ಎಷ್ಟು ಗೊತ್ತಾ?

ಚೆನ್ನೈನ ಅತ್ಯಂತ ದುಬಾರಿ ಏರಿಯಾದಲ್ಲಿ ಐಷಾರಾಮಿ ಮನೆ ಖರೀಸಿದಿ ನಟಿ ನಯನತಾರಾ

Nayanthara's New Luxury Home: ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ ಚೆನ್ನೈನ ಅತ್ಯಂತ ಹೈ-ಪ್ರೊಫೈಲ್ ಏರಿಯಾವಾದ ಪೊಯೆಸ್‌ ಗಾರ್ಡನ್‌ನಲ್ಲಿ ಐಷಾರಾಮಿ ಡ್ಯೂಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಅನ್ನು ಖರೀದಿ ಮಾಡಿದ್ದಾರೆ. 'ಲೆಗಸಿ' ವಸತಿ ಸಂಕೀರ್ಣದ 4 ಮತ್ತು 5ನೇ ಮಹಡಿಯಲ್ಲಿ ಈ ಮನೆ ಇದೆ.

ರಶ್ಮಿಕಾ ಮಂದಣ್ಣ ಶೇರ್‌ ಮಾಡಿದ ರಿಸೆಪ್ಷನ್‌ ವಿಡಿಯೋದಲ್ಲಿ ‌ʻಕನ್ನಡʼ ಹಾಡು; ಕೊಡವ ಸಂಪ್ರದಾಯ ಮರೆಯದ ನ್ಯಾಷನಲ್‌ ಕ್ರಶ್‌ಗೆ ಫ್ಯಾನ್ಸ್‌ ಮೆಚ್ಚುಗೆ

ರಶ್ಮಿಕಾ ಮಂದಣ್ಣ ಮದುವೆ ರಿಸೆಪ್ಷನ್ ವಿಡಿಯೋಗೆ ಕನ್ನಡ ಹಾಡಿನ ಸ್ಪರ್ಶ

Rashmika Mandanna Vijay Deverakonda Wedding Reception: ನಟಿ ರಶ್ಮಿಕಾ ಮಂದಣ್ಣ ತಮ್ಮ ಮದುವೆಯ ಅದ್ದೂರಿ ಆರತಕ್ಷತೆಯ ವಿಡಿಯೋಗೆ ಇತ್ತೀಚೆಗೆ ವೈರಲ್ ಆಗಿರುವ ಪುರಂದರ ದಾಸರ 'ತುಳಸಿ' ದಾಸಪದವನ್ನು ಹಿನ್ನೆಲೆ ಸಂಗೀತವಾಗಿ ಬಳಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅವರು ಧರಿಸಿದ್ದ ಮೈಸೂರು ಸಿಲ್ಕ್ ಸೀರೆಯ ಬ್ಲೌಸ್ ಮೇಲೆ ಕೊಡವರ ಸಾಂಪ್ರದಾಯಿಕ 'ಕತ್ತಿ'ಯ ವಿನ್ಯಾಸವಿದ್ದು, ತಮ್ಮ ಮೂಲ ಸಂಸ್ಕೃತಿಯನ್ನು ಮರೆಯದ ಅವರಿಗೆ ಕನ್ನಡಿಗರು ಭೇಷ್ ಎಂದಿದ್ದಾರೆ.

Dog Satish: ಶ್ವಾನಗಳ ಬಗ್ಗೆ ಡಾಗ್ ಸತೀಶ್ ಕೆಟ್ಟ ಮಾತು; ದಾಖಲಾಯ್ತು ದೂರು

ಶ್ವಾನಗಳ ಬಗ್ಗೆ ಡಾಗ್ ಸತೀಶ್ ಕೆಟ್ಟ ಮಾತು; ದಾಖಲಾಯ್ತು ದೂರು

Satish Cadaboms : ಬಿಗ್‌ ಬಾಸ್‌ ಸ್ಪರ್ಧಿಯಾಗಿದ್ದ ಡಾಗ್‌ ಸತೀಶ್‌ ವಿರುದ್ಧ ದೂರು ದಾಖಲಾಗಿದೆ. ಶ್ವಾನ ಬಗ್ಗೆ ಅಸಭ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಅನಿಮಲ್​ ವೆಲ್​​ಫೇರ್ ಸಪೋರ್ಟ್​ ಲಕ್ಷ್ಮೀ ಅವರು ದೂರು ದಾಖಲು ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ಇನ್​​ಫ್ಲುಯೆನ್ಸರ್ ನಕ್ಕನ್​ಲೇ ಸುಭಾಷ್ ಕೇಳಿದ ಪ್ರಶ್ನೆಗೆ ಅಸಭ್ಯ ಉತ್ತರವನ್ನು ಸತೀಶ್‌ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಡಾಗ್ ಸತೀಶ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Rakshit Shetty: ಏಕಾಏಕಿ ಬೇಸರದ ಫೋಟೋ ಪೋಸ್ಟ್‌ ಮಾಡಿದ ರಕ್ಷಿತ್ ಶೆಟ್ಟಿ!

ಏಕಾಏಕಿ ಬೇಸರದ ಫೋಟೋ ಪೋಸ್ಟ್‌ ಮಾಡಿದ ರಕ್ಷಿತ್ ಶೆಟ್ಟಿ!

Rakshit Shetty: ಸ್ಯಾಂಡಲ್‌ವುಡ್‌ ನಟ ರಕ್ಷಿತ್‌ ಶೆಟ್ಟಿ ಅವರು ಸಿನಿಮಾ ಅಪ್‌ಡೇಟ್‌ ಇಲ್ಲದಿದ್ದರೂ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರ್ತಾರೆ. ಆಗಾಗ ಕುಟುಂಬದ ಜೊತೆ ಕಾಣಿಸಿಕೊಂಡಿದ್ದು ಬಿಟ್ಟರೆ, ಪೋಸ್ಟ್‌ ಆಗಲಿ, ಸಿನಿಮಾ ಅಪ್‌ಡೇಟ್‌ ಆಗಲಿ ಏನನ್ನು ಶೇರ್‌ ಮಾಡುತ್ತಿಲ್ಲ. ಆದರೀಗ ನಟ ಏಕಾಏಕಿ ಬೇಸರದ ಫೋಟೋವನ್ನು ಶೇರ್‌ ಮಾಡಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾದ ಫೋಟೋನ ಪೋಸ್ಟ್ ಮಾಡಿದ್ದಾರೆ.

Naga Chaitanya: ವೇದಿಕೆಯಲ್ಲೇ ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ !

ವೇದಿಕೆಯಲ್ಲೇ ಕುರ್ಚಿಯಿಂದ ಜಾರಿ ಬಿದ್ದ ನಾಗ ಚೈತನ್ಯ !

Naga Chaitanya: `ವಿರೂಪಾಕ್ಷ' ಸಿನಿಮಾ ಖ್ಯಾತಿಯ ಕಾರ್ತಿಕ್ ದಂಡು ನಿರ್ದೇಶನದ ʻವೃಷಕರ್ಮʼ ಚಿತ್ರದ ನಾಯಕ ನಾಗ ಚೈತನ್ಯ . ಈ ಚಿತ್ರದ ಗ್ಲಿಂಪ್ಸ್‌ಗಳನ್ನು ಗುರುವಾರ ಬಿಡುಗಡೆ ಮಾಡಲಾಯಿತು. ಹೈದರಾಬಾದ್‌ನ ಪ್ರಸಾದ್ ಐ ಮ್ಯಾಕ್ಸ್ ಥಿಯೇಟರ್‌ನಲ್ಲಿ ಸಮಾರಂಭ ನಡೆಯಿತು. ವೇದಿಕೆ ಮೇಲೆ ತಮಗಾಗಿ ಹಾಕಿದ್ದ ಕುರ್ಚಿಯ ಮೇಲೆ ಕೂರಲು ಹೋದಾಗ ಅವರು ಹಿಂದಕ್ಕೆ ಬಿದ್ದಿದ್ದಾರೆ. ಸುತ್ತಮುತ್ತ ಇದ್ದವರು ಗಾಬರಿಯಾದರೆ, ನಾಗ ಚೈತನ್ಯ ಮಾತ್ರ ನಗುಮುಖದಲ್ಲೇ ಎದ್ದು ನಿಂತಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

Thalapathy Vijay: ಪತ್ನಿ ವಿಚ್ಛೇದನ ಅರ್ಜಿ ಮಧ್ಯೆ ದಳಪತಿ ವಿಜಯ್ ಹಾಗೂ ತ್ರಿಷಾ ಒಂದೇ ಕಾರಿನಲ್ಲಿ ಸುತ್ತಾಟ!

ಪತ್ನಿ ವಿಚ್ಛೇದನ ಅರ್ಜಿ ಮಧ್ಯೆ ವಿಜಯ್ -ತ್ರಿಷಾ ಒಂದೇ ಕಾರಿನಲ್ಲಿ ಸುತ್ತಾಟ!

Thalapathy Vijay : ವಿಚ್ಛೇದನದ ವದಂತಿಗಳು ಮತ್ತು ಟೀಕೆಗಳು ಜೋರಾಗಿರುವ ಈ ಸಮಯದಲ್ಲಿ, ವಿಜಯ್ ಮತ್ತು ತ್ರಿಷಾ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ತಮಿಳು ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮಗನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗ್ತಿದೆ.

Sonu Sood: ಭಾರತೀಯರ ಜೊತೆಗೆ ಬೇರೆ ದೇಶದ ಜನರಿಗೂ ನೆರವು ನೀಡಲು ಮುಂದಾದ ಸೋನು ಸೂದ್

ದುಬೈನಲ್ಲಿ ಸಂಕಷ್ಟ; ನೆರವು ನೀಡಲು ಮುಂದಾದ ಸೋನು ಸೂದ್

Sonu Sood: ಅಮೆರಿಕ-ಇರಾನ್ ಸಂಘರ್ಷದ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾದಂತೆ, ಹಲವಾರು ವಿಮಾನಗಳನ್ನು ರದ್ದುಗೊಳಿಸಲಾಯಿತು, ಇದರಿಂದಾಗಿ ಅನೇಕ ಪ್ರಯಾಣಿಕರು ದುಬೈನಲ್ಲಿ ಸಿಲುಕಿಕೊಂಡು ಮನೆಗೆ ಮರಳಲು ಸಾಧ್ಯವಾಗಲಿಲ್ಲ. ನಟ ಸೋನು ಸೂದ್ ಬಿಕ್ಕಟ್ಟಿನ ಮಧ್ಯೆ ಸಿಲುಕಿರುವವರಿಗೆ ಉಚಿತ ವಸತಿ ಸೌಲಭ್ಯವನ್ನು ಘೋಷಿಸಿದ್ದಾರೆ ಮತ್ತು ಪ್ರಯಾಣಿಕರು ತಂಗಲು ಸ್ಥಳ ಬೇಕಾದರೆ ತಮ್ಮನ್ನು ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ.

ತೆಲುಗು ನಿರ್ದೇಶಕನಿಗೆ ಗ್ರೀನ್‌ ಸಿಗ್ನಲ್‌ ಕೊಡ್ತಾರಾ ಹೃತಿಕ್‌ ರೋಷನ್?‌ ‌ʻಹೊಂಬಾಳೆ ಫಿಲ್ಮ್ಸ್‌ʼ ಜೊತೆ ಸಿನಿಮಾ ಮಾಡೋದ್ಯಾವಾಗ?

ತೆಲುಗು ನಿರ್ದೇಶಕನ ಜತೆ ಹೃತಿಕ್ ಹೈ-ವೋಲ್ಟೇಜ್ ಆಕ್ಷನ್ ಚಿತ್ರ! ಯಾವಾಗ ಶುರು?

Hrithik Roshan Upcoming Movies: ನಟ ಹೃತಿಕ್ ರೋಷನ್ ಅವರು ತೆಲುಗಿನ ಖ್ಯಾತ ನಿರ್ದೇಶಕ ಬಾಬಿ ಕೊಲ್ಲಿ ಅವರ ಹೊಸ ಕಥೆಗೆ ಮಾರುಹೋಗಿದ್ದಾರೆ ಎಂದು ವರದಿಗಳು ತಿಳಿಸಿವೆ. ಹೃತಿಕ್ ಅವರಿಗೆ ಸ್ಕ್ರಿಪ್ಟ್ ವಿವರಿಸಿದ್ದು, ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ಸ್ಕ್ರಿಪ್ಟ್‌ ರೈಟರ್‌ ಕೋನಾ ವೆಂಕಟ್ ತಿಳಿಸಿದ್ದಾರೆ.

South Movies on OTT: ಈ ವಾರ ಒಟಿಟಿ ವೀಕ್ಷಕರಿಗೆ ಹಬ್ಬ; ಈ ಎಲ್ಲ ಸೌತ್‌ ಸಿನಿಮಾಗಳು ಸ್ಟ್ರೀಮಿಂಗ್‌ ಎಲ್ಲಿ?

ಒಟಿಟಿ ವೀಕ್ಷಕರಿಗೆ ಹಬ್ಬ; ಈ ಎಲ್ಲ ಸೌತ್‌ ಸಿನಿಮಾಗಳು ಸ್ಟ್ರೀಮಿಂಗ್‌ ಎಲ್ಲಿ?

South Movies to Watch on OTT: ಒಟಿಟಿ ಪ್ರಿಯರಿಗೆ ವೀಕೆಂಡ್‌ ಬಂತು ಅಂದರೆ ಯಾವೆಲ್ಲ ಸಿನಿಮಾಗಳು ಬಂದಿವೆ ಅನ್ನೋದು ಕುತೂಹಲ. ಈ ವಾರ ಸಾಲು ಸಾಲು ಸೌತ್‌ ಸಿನಿಮಾಗಳು ಒಟಿಟಿಗೆ ಲಗ್ಗೆ ಇಡುತ್ತಿವೆ. ವಿಜಯ್ ಸೇತುಪತಿ ಅಭಿನಯದ 'ಗಾಂಧಿ ಟಾಕ್ಸ್' ಎಂಬ ಮೂಕ ಭಾರತೀಯ ಚಿತ್ರ ಅಧಿಕೃತವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಇದರ ಜೊತೆಗೆ ಯಾವೆಲ್ಲ ಸಿನಿಮಾಗಳು ಬಂದಿವೆ? ತಿಳಿಯಲು ಮುಂದೆ ಓದಿ.

ಒಂದೇ ಸಾಂಗ್‌ನಲ್ಲಿ ಸಾವಿರ ನೃತ್ಯಗಾರರ ಡ್ಯಾನ್ಸ್‌; 'ನಾಗಬಂಧಂ' ಚಿತ್ರದ 'ನಮೋ ರೇ' ಹಾಡಿನ ಮೂಲಕ ಸೃಷ್ಟಿಯಾಯ್ತು ಹೊಸ ದಾಖಲೆ

ಹಾಡಿನ ಮೂಲಕವೇ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ 'ನಾಗಬಂಧಂ' ಸಿನಿಮಾ

Nagabandham Song Record: ಅಭಿಷೇಕ್ ನಾಮಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ 'ನಾಗಬಂಧಂ' ಈಗ ತನ್ನ 'ನಮೋ ರೇ' ಹಾಡಿನ ಮೂಲಕ ಗಮನ ಸೆಳೆಯುತ್ತಿದೆ. ಈ ಒಂದು ಹಾಡಿನಲ್ಲಿ ಬರೋಬ್ಬರಿ 1 ಸಾವಿರ ನೃತ್ಯಗಾರರನ್ನು ಬಳಸಿಕೊಳ್ಳುವ ಮೂಲಕ ಚಿತ್ರತಂಡ ಹೊಸ ದಾಖಲೆ ಬರೆದಿದೆ.

Shah Rukh Khan: ಈ ಸಿನಿಮಾದಲ್ಲಿ ಶಾರುಖ್ ಖಾನ್, ಶಿವಣ್ಣ, ರಜನಿಕಾಂತ್ ಒಟ್ಟಿಗೆ ನಟನೆ: ಫ್ಯಾನ್ಸ್‌ ಖುಷ್‌

ಈ ಸಿನಿಮಾದಲ್ಲಿ ಶಾರುಖ್, ಶಿವಣ್ಣ, ರಜನಿಕಾಂತ್ ಒಟ್ಟಿಗೆ ನಟನೆ!

Rajinikanth: ರಜನಿಕಾಂತ್ ಮತ್ತು ಶಾರುಖ್ ಖಾನ್ ಈ ಹಿಂದೆ 'ರಾ ಒನ್' ಚಿತ್ರದ ಅತಿಥಿ ಪಾತ್ರ ಮತ್ತು 'ಚೆನ್ನೈ ಎಕ್ಸ್‌ಪ್ರೆಸ್' ಹಾಡಿನ ಮೂಲಕ ಪರಸ್ಪರ ಗೌರವ ಸಲ್ಲಿಸಿದ್ದರಾದರೂ, ಪೂರ್ಣ ಪ್ರಮಾಣದಲ್ಲಿ ಒಂದೇ ದೃಶ್ಯದಲ್ಲಿ ನಟಿಸಿರಲಿಲ್ಲ. ನೆಲ್ಸನ್ ದಿಲೀಪ್‌ಕುಮಾರ್ ಅವರ ಜೈಲರ್ 2 ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಮತ್ತು ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಮೊದಲ ಬಾರಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಈ ಬಗ್ಗೆ ಚಿತ್ರತಂಡ ಇನ್ನೂ ಯಾವುದೇ ಘೋಷಣೆ ಮಾಡದಿದ್ದರೂ, ಶಾರುಖ್ ಸೀಕ್ವೆಲ್‌ನಲ್ಲಿದ್ದಾರೆ ಎಂಬ ವದಂತಿಗಳು ಇತ್ತು. ಈ ಕುರಿತು ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅವರ ವೈಯಕ್ತಿಕ ಸ್ಟೈಲಿಸ್ಟ್ ಜಿಶಾದ್ ಶಂಸುದ್ದೀನ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಅಬ್ಬಬ್ಬಾ! ಅದ್ಧೂರಿಯಾಗಿ ನಡೆದ ವಿಜಯ್‌ ದೇವರಕೊಂಡ - ರಶ್ಮಿಕಾ ಮಂದಣ್ಣ ಮದುವೆಗೆ ಖರ್ಚಾದ ಹಣ ಇಷ್ಟೊಂದಾ?

ರಶ್ಮಿಕಾ-ವಿಜಯ್ ಮದುವೆಗೆ ಖರ್ಚಾಗಿದ್ದು ಎಷ್ಟು ಕೋಟಿ? ಇದು ದುಬಾರಿ ಕಲ್ಯಾಣ!

Virosh Wedding Expenses: ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ವಿವಾಹ ಮಹೋತ್ಸವವು ಫೆಬ್ರವರಿ 24 ರಿಂದ ಮಾರ್ಚ್ 4 ರವರೆಗೆ ಅತ್ಯಂತ ವೈಭವೋಪೇತವಾಗಿ ನಡೆದಿದೆ. ಉದಯಪುರದ ಐಷಾರಾಮಿ ಹೋಟೆಲ್‌ನಲ್ಲಿ ನಡೆದ ಈ ಮದುವೆಗೆ ಮತ್ತು ದೇಶಾದ್ಯಂತ ಹಮ್ಮಿಕೊಂಡಿದ್ದ ಕಾರ್ಯಕ್ರಮಗಳಿಗೆ ದುಬಾರಿ ಮೊತ್ತವೇ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ.

Rani Serial: ಜೈಲಿನ ಗೋಡೆಗಳ ನಡುವೆ ಅರಳುವ ಅಮ್ಮ-ಮಗಳ ಬಾಂಧವ್ಯದ ಕಥೆ; ಕಿರುತೆರೆ ಪ್ರೇಕ್ಷಕರ ಕಣ್ಣಂಚು ಒದ್ದೆ ಮಾಡಲು ಬರ್ತಿದ್ದಾಳೆ 'ರಾಣಿ'

ಕಲರ್ಸ್‌ ಕನ್ನಡದಲ್ಲಿ ಮಾ.9 ರಿಂದ ಶುರುವಾಗಲಿದೆ ಹೊಸ ಧಾರಾವಾಹಿ 'ರಾಣಿ'

Rani Serial Launch: ಕಲರ್ಸ್‌ ಕನ್ನಡ ವಾಹಿನಿಯು ಮಾರ್ಚ್ 9 ರಿಂದ ಸಂಜೆ 6 ಗಂಟೆಗೆ 'ರಾಣಿ' ಎಂಬ ಹೊಸ ಮೆಗಾ ಧಾರಾವಾಹಿಯನ್ನು ಪ್ರಸಾರ ಮಾಡಲಿದೆ. ಇದು ವಿಧಿಯಾಟದಿಂದ ಜೈಲಿನಲ್ಲಿ ಹುಟ್ಟಿದ ಮಗು ಮತ್ತು ಆಕೆಯ ತಾಯಿಯ ನಡುವಿನ ನಿಷ್ಕಲ್ಮಶ ಪ್ರೀತಿಯ ಕಥೆಯನ್ನ ಒಳಗೊಂಡಿದೆ.

Photos: ರಶ್ಮಿಕಾ-ವಿಜಯ್ ದೇವರಕೊಂಡ ವೆಡ್ಡಿಂಗ್ ರಿಸೆಪ್ಷನ್; ಹೈದರಾಬಾದ್‌ನಲ್ಲಿ ನಡೆದ ಈ ಕಲರ್‌ಫುಲ್‌ ಸಮಾರಂಭಕ್ಕೆ ಯಾರೆಲ್ಲಾ ಬಂದಿದ್ರು?

Photos: ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದ ʻವಿರೋಶ್‌ʼ ಮದುವೆ ಆರತಕ್ಷತೆ

ರಶ್ಮಿಕಾ ಮಂದಣ್ಣ (Rashmika Mandanna) ಮತ್ತು ವಿಜಯ್ ದೇವರಕೊಂಡ ( Vijay Deverakonda) ದಂಪತಿಯ ವಿವಾಹ ಆರತಕ್ಷತೆ (wedding reception ) ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ದೂರಿಯಾಗಿ ನಡೆದಿದೆ. ತೆಲುಗು ಚಿತ್ರರಂಗದ ತಾರೆಯರಾದ ಚಿರಂಜೀವಿ, ನಾಗಾರ್ಜುನ, ಅಲ್ಲು ಅರ್ಜುನ್, ರಾಮ್ ಚರಣ್, ಶ್ರೀಲೀಲಾ, ಕರಣ್ ಜೋಹರ್, ಮೃಣಾಲ್ ಠಾಕೂರ್ ಸೇರಿದಂತೆ ಅನೇಕರ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಕೂಡ ಈ ಆರತಕ್ಷತೆಗೆ ಆಗಮಿಸಿ, ನವಜೋಡಿಗೆ ಹಾರೈಸಿದ್ದಾರೆ. ಸ್ಯಾಂಡಲ್‌ವುಡ್‌ ನಟಿಯರಾದ ಆಶಿಕಾ ರಂಗನಾಥ್‌, ಶ್ರೀಲೀಲಾ, ಅನುಷಾ ರೈ ಕೂಡ ಆರತಕ್ಷತೆಯಲ್ಲಿ ಭಾಗಿಯಾಗಿದ್ದರು. ಈ ಕಲರ್‌ಫುಲ್‌ ಸಮಾರಂಭದ ಸುಂದರ ಕ್ಷಣಗಳ ಫೋಟೋಗಳು ಇಲ್ಲಿವೆ.

'ಕೃಷ್ಣ ರುಕ್ಕು' ಸೀರಿಯಲ್‌ಗೆ ನಾಯಕಿಯಾದ ಮೌನ ಗುಡ್ಡೆಮನೆ; ಮತ್ತೆ ಕಿರುತೆರೆಗೆ ಮರಳಿದ ಎಸ್. ನಾರಾಯಣ್

ʻರುಕ್ಕುʼ ಪಾತ್ರದಲ್ಲಿ ಮೌನ ಗುಡ್ಡೆಮನೆ ಮಿಂಚಿಂಗ್; ಬರ್ತಿದೆ ಹೊಸ ಧಾರಾವಾಹಿ

Krishna Rukku New Serial: ಕಿರುತೆರೆಯ ನಂ.1 ವಾಹಿನಿ ಜೀ ಕನ್ನಡವು ಮಾರ್ಚ್ 9 ರಿಂದ ಸಂಜೆ 6:30ಕ್ಕೆ 'ಕೃಷ್ಣ ರುಕ್ಕು' ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲಿದೆ. ಅಣ್ಣನ ಅಗಲಿಕೆಯ ನಂತರ ಕುಟುಂಬದ ಜವಾಬ್ದಾರಿ ಹೊತ್ತ ರುಕ್ಕು ಎಂಬ ಧೈರ್ಯವಂತ ಹುಡುಗಿಯ ಕಥೆ ಇದಾಗಿದೆ.

Toxic: ಯಶ್‌ ತೆಗೆದುಕೊಂಡ ಒಂದು ನಿರ್ಧಾರದಿಂದ ಚಿತ್ರರಂಗದ ಲೆಕ್ಕಾಚಾರಗಳೇ ಬುಡಮೇಲು! ಪವನ್‌ ಕಲ್ಯಾಣ್‌ ಸಿನಿಮಾ ರಿಲೀಸ್‌ ಡೇಟ್‌ ಕೂಡ ಚೇಂಜ್!‌

ಯಶ್ ನಿರ್ಧಾರದಿಂದ ಸಂಚಲನ; ‌ʻಟಾಕ್ಸಿಕ್ʼ ಜಾಗಕ್ಕೆ ʻಉಸ್ತಾದ್‌ ಭಗತ್‌ ಸಿಂಗ್ʼ

Toxic Effect on Film Releases: ರಾಕಿಂಗ್ ಸ್ಟಾರ್ ಯಶ್ ಅವರ 'ಟಾಕ್ಸಿಕ್' ಸಿನಿಮಾ ಜೂನ್ 4ಕ್ಕೆ ಮುಂದೂಡಲ್ಪಟ್ಟಿದ್ದು, ಮಾರ್ಚ್ 19ರಂದು ಸಿಕ್ಕಿರುವ ಖಾಲಿ ಜಾಗವನ್ನು ಬಳಸಿಕೊಳ್ಳಲು ಟಾಲಿವುಡ್‌ನ 'ಪವರ್ ಸ್ಟಾರ್' ಪವನ್ ಕಲ್ಯಾಣ್ ಸಜ್ಜಾಗಿದ್ದಾರೆ.

Loading...