ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿನಿಮಾ

ʻಟಾಕ್ಸಿಕ್‌ʼ ಬಳಿಕ ಸದ್ದಿಲ್ಲದೇ ಕೆವಿಎನ್‌ ಪ್ರೊಡಕ್ಷನ್ಸ್‌ ಜೊತೆ ಮತ್ತೊಂದು ಸಿನಿಮಾಕ್ಕೆ ಕೈಜೋಡಿಸಿದ ನಟಿ ರುಕ್ಮಿಣಿ ವಸಂತ್

'ಟಾಕ್ಸಿಕ್' ಬೆನ್ನಲ್ಲೇ ಕೆವಿಎನ್ ಜೊತೆ ರುಕ್ಮಿಣಿ ವಸಂತ್ ಹೊಸ ಸಿನಿಮಾ

ನಟಿ ರುಕ್ಮಿಣಿ ವಸಂತ್‌ ಅವರು 'ಟಾಕ್ಸಿಕ್' ಚಿತ್ರದ ನಂತರ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಮತ್ತೊಂದು ಹೊಸ ಕನ್ನಡ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಆರಂಭವಾಗಿದ್ದು, ವಿಶೇಷ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಮಾಲಾಶ್ರೀ ಕಾಣಿಸಿಕೊಳ್ಳುತ್ತಿದ್ದಾರೆ.

Youth Movie: ಅಂದು ಟೀ ಬಿಲ್‌ ಕೊಡಲು 50 ರೂ. ಇರಲಿಲ್ಲ, ಇಂದು ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ. ಕಲೆಕ್ಷನ್‌! ಮ್ಯಾಜಿಕ್‌ ಮಾಡಿದ 24 ವರ್ಷದ ಕೆನ್ ಕರುಣಾಸ್!‌

Youth Movie: ಬಾಕ್ಸ್‌ ಆಫೀಸ್‌ನಲ್ಲಿ ಸದ್ದಿಲ್ಲದೇ ಮ್ಯಾಜಿಕ್‌ ಮಾಡಿದ ಕೆನ್‌

ಯೂತ್ ಚಿತ್ರದ ಮೂಲಕ 24 ವರ್ಷದ ಕೆನ್ ಕರುಣಾಸ್ ಕಾಲಿವುಡ್‌ನಲ್ಲಿ ಅಚ್ಚರಿ ಮೂಡಿಸಿದ್ದಾರೆ. ಧುರಂಧರ್‌ 2 ಸಿನಿಮಾದ ಪೈಪೋಟಿಯ ನಡುವೆಯೂ ಮಾರ್ಚ್ 19ರಂದು ಬಿಡುಗಡೆಯಾದ ಈ ಸಿನಿಮಾ 50 ಕೋಟಿ ರೂ. ಕಲೆಕ್ಷನ್ ಮಾಡಿದೆ. ನಟ ಧನುಷ್ ಅವರ ಬಳಿ ಸಹಾಯಕನಾಗಿ ಪಳಗಿದ್ದ ಕೆನ್, ಹಣಕಾಸಿನ ತೀವ್ರ ಮುಗ್ಗಟ್ಟಿನ ನಡುವೆಯೂ ನಿರ್ಮಾಪಕ ಕರುಪ್ಪಯ್ಯ ಅವರ ಬೆಂಬಲದೊಂದಿಗೆ ಈ ಚಿತ್ರ ಮಾಡಿ, ಯಶಸ್ವಿ ಆಗಿದ್ದಾರೆ.

ಮಾಲಿವುಡ್‌ನಿಂದ ಬದಲಾಗಬಹುದೇ ನಟಿ ಅನುಷ್ಕಾ ಶೆಟ್ಟಿ ಅದೃಷ್ಟ? ಅಚ್ಚರಿ ಮೂಡಿಸಿದ ಸ್ವೀಟಿಯ ಹೊಸ ಸಿನಿಮಾ

ಅನುಷ್ಕಾ ಶೆಟ್ಟಿ ಅದೃಷ್ಟ ಬದಲಿಸುತ್ತಾ ಮಾಲಿವುಡ್? 15 ಭಾಷೆಗಳಲ್ಲಿ 'ಕಥನಾರ್'

ನಟಿ ಅನುಷ್ಕಾ ಶೆಟ್ಟಿ ಅವರು 'ಬಾಹುಬಲಿ 2' ನಂತರ ಎದುರಿಸುತ್ತಿರುವ ಸೋಲುಗಳಿಗೆ 'ಕಥನಾರ್' ಚಿತ್ರದ ಮೂಲಕ ಬ್ರೇಕ್ ಹಾಕಲು ಸಜ್ಜಾಗಿದ್ದಾರೆ. ಮಲಯಾಳಂನ ಜಯಸೂರ್ಯ ನಟನೆಯ ಈ ಅದ್ದೂರಿ ಚಿತ್ರದಲ್ಲಿ ಅನುಷ್ಕಾ ಪ್ರಮುಖ ಪಾತ್ರ ಮಾಡಿದ್ದು, ಸಿನಿಮಾ 15 ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.

Ramayana Teaser: ಮರ್ಯಾದಾ ಪುರುಷೋತ್ತಮ ʻರಾಮʼನ ಅವತಾರದಲ್ಲಿ ರಣಬೀರ್‌ ಕಪೂರ್; ಲುಕ್‌ ಕಂಡು ಫ್ಯಾನ್ಸ್‌ ಬಹುಪರಾಕ್

ʻರಾಮʼನ ಅವತಾರದಲ್ಲಿ ರಣಬೀರ್‌ ಕಪೂರ್; ಲುಕ್‌ ಕಂಡು ಫ್ಯಾನ್ಸ್‌ ಬಹುಪರಾಕ್

Ranbir Kapoor: ನಮಿತ್ ಮಲ್ಹೋತ್ರಾ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ಎರಡು ಭಾಗಗಳ ಸಿನಿಮೀಯ ಸರಣಿ 'ರಾಮಾಯಣ' ತನ್ನ ಮಹತ್ವದ ಅಧ್ಯಾಯವನ್ನು ತೆರೆದಿದೆ. ಈ ಮಹಾಕಾವ್ಯದ ಫಸ್ಟ್‌ ಲುಕ್‌ನಲ್ಲಿ ರಣಬೀರ್ ಕಪೂರ್ ಅವರು 'ರಾಮ'ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ಈ ಚಿತ್ರವನ್ನು ಪ್ರೈಮ್ ಫೋಕಸ್ ಸ್ಟುಡಿಯೋಸ್, ಎಂಟು ಬಾರಿ ಅಕಾಡೆಮಿ ಪ್ರಶಸ್ತಿ ವಿಜೇತ ಡಿಎನ್‌ಇಜಿ ಮತ್ತು ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ.

Ramayana Teaser: ರಾಮಾಯಣದ 'ರಾಮ' ಟೀಸರ್ ಔಟ್‌; ಭಗವಾನ್ ʻಶ್ರೀರಾಮʼನಾಗಿ ಮಿಂಚಿದ  ರಣಬೀರ್ ಕಪೂರ್

'ರಾಮ' ಟೀಸರ್ ಔಟ್‌; ಭಗವಾನ್ ʻಶ್ರೀರಾಮʼನಾಗಿ ಮಿಂಚಿದ ರಣಬೀರ್!

Ramayana Teaser: ನಿತೇಶ್ ತಿವಾರಿ ಅವರ ಬಹುನಿರೀಕ್ಷಿತ ಹಿಂದೂ ಪೌರಾಣಿಕ ಕಥೆ ರಾಮಾಯಣದಲ್ಲಿ ರಣಬೀರ್ ಕಪೂರ್ ಭಗವಾನ್ ರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಈ ಮಹಾಕಾವ್ಯದ ಫಸ್ಟ್‌ ಲುಕ್‌ನಲ್ಲಿ ರಣಬೀರ್ ಕಪೂರ್ ಅವರು 'ರಾಮ'ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಜಾಗತಿಕವಾಗಿ ಗಮನ ಸೆಳೆದಿದ್ದಾರೆ. ನಿತೇಶ್ ತಿವಾರಿ ಅವರ ರಾಮಾಯಾಣ ಸಿನಿಮಾದ ರಾಮ್ (Ram) ಎನ್ನುವಂತಹ ಟೀಸರ್ ರಿಲೀಸ್ ಆಗಿದ್ದು ಮುಖ್ಯವಾಗಿ ಇದು ರಣಬೀರ್ ಕಪೂರ್ ಮೇಲೆ ಫೋಕಸ್ ಮಾಡಿದೆ. ಈ ಚಿತ್ರದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ.

Shah Rukh Khan: ಜಾಹೀರಾತಿನಲ್ಲಿ ಅಭಿನಯಕ್ಕಾಗಿ ಪ್ರಶಂಸೆ ಪಡೆದ 4 ವರ್ಷದ ಬಾಲಕ; ಈ ನಟನೇ ಆತನಿಗೆ ಸ್ಫೂರ್ತಿ

ಜಾಹೀರಾತಿನಲ್ಲಿ ಅಭಿನಯಕ್ಕಾಗಿ ಪ್ರಶಂಸೆ ಪಡೆದ 4 ವರ್ಷದ ಬಾಲಕ!

Shah Rukh Khan: ದೆಹಲಿಯ 4 ವರ್ಷದ ಬಾಲನಟ ಅವ್ಯಾನ್ ಸಪ್ರಾ , ಹೊಸ ಡೆಟ್ಟಾಲ್ ಜಾಹೀರಾತಿನಲ್ಲಿನ ಅಭಿನಯಕ್ಕಾಗಿ ಪ್ರಶಂಸೆ ಪಡೆಯುತ್ತಿದ್ದಾರೆ. ಭಾವನಾತ್ಮಕ ಕ್ಷಣಗಳಲ್ಲಿ ತನ್ನ ಅಭಿನಯದಿಂದ ಅನೇಕರನ್ನು ರಂಜಿಸಿದ ಪುಟ್ಟ ಹುಡುಗ ಶಾರುಖ್ ಖಾನ್ ಅವರಿಂದ ನಟನೆಯನ್ನು ಕಲಿತಿದ್ದಾನೆ ಎಂದು ಅವನ ಪೋಷಕರು ಹೇಳುತ್ತಾರೆ. ಈ ಜಾಹೀರಾತು ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

Ramayana Rama glimpse : ‘ರಾಮಾಯಣ’ ಟೀಸರ್ ರಿಲೀಸ್‌ಗೂ ಮುನ್ನ ಆಲಿಯಾ ಭಟ್‌ ಹೇಳಿದ್ದೇನು? ವಿಡಿಯೋ ವೈರಲ್‌

‘ರಾಮಾಯಣ’ ಟೀಸರ್ ರಿಲೀಸ್‌ಗೂ ಮುನ್ನ ಆಲಿಯಾ ಭಟ್‌ ಹೇಳಿದ್ದೇನು?

Ramayana Rama glimpse : ಹನುಮ ಜಯಂತಿ ಹಿನ್ನೆಲೆಯಲ್ಲಿ ಶ್ರೀರಾಮನ ಟೀಸರ್ ರಿಲೀಸ್ ಮಾಡಲಾಗ್ತಿದೆ. ಮುಂಬೈನಲ್ಲಿ ಒಂದು ದಿನ ಮುನ್ನ ಮಾಧ್ಯಮದವರಿಗೆ ಟೀಸರ್ ಪ್ರದರ್ಶನ ಮಾಡಲಾಗಿದೆ. ನೋಡಿದವರು ಹುಬ್ಬೇರಿಸಿದ್ದಾರೆ. ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಶ್ರೀರಾಮನ ದರ್ಶನವಾಗಲಿದೆ. ರಣಬೀರ್ ಅವರ ಪತ್ನಿ ಮತ್ತು ನಟಿ ಆಲಿಯಾ ಭಟ್ ಬಹುನಿರೀಕ್ಷಿತ ಚಿತ್ರದ ಬಗ್ಗೆ ಮಾತನಾಡುತ್ತಾ, ತಮ್ಮ ಪತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ವೈರಲ್‌ ಆಗುತ್ತಿದೆ.

Raja Shivaji teaser: ‘ರಾಜಾ ಶಿವಾಜಿ’ ಪಾತ್ರದಲ್ಲಿ ರಿತೇಶ್ ದೇಶ್‌ಮುಖ್; ಸಲ್ಮಾನ್ ಖಾನ್ ಅತಿಥಿ ಪಾತ್ರ?

‘ರಾಜಾ ಶಿವಾಜಿ’ ಪಾತ್ರದಲ್ಲಿ ರಿತೇಶ್ ದೇಶ್‌ಮುಖ್!

Raja Shivaji teaser: ಮಂಗಳವಾರ ಸಂಜೆ ಜಿಯೋಸ್ಟುಡಿಯೋಸ್, ರಾಜಾ ಶಿವಾಜಿ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿತು . ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ನಟ ರಿತೇಶ್ ದೇಶ್​ಮುಖ್ ಅವರು ಕಾಣಿಸಿಕೊಂಡಿದ್ದಾರೆ. ಟೀಸರ್ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಅವರು ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ. ಎರಡು ನಿಮಿಷಗಳ ವೀಡಿಯೊವನ್ನು ಜಿಯೋಸ್ಟುಡಿಯೋಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ.

ಅಲ್ಲು ಅರ್ಜುನ್ ಅಭಿಮಾನಿಗಳಿಂದ ಮಹತ್ವದ ಕೆಲಸ; ಗರ್ಭಕಂಠದ ಕ್ಯಾನ್ಸರ್ ತಡೆಗೆ ʻಎಚ್‌ಪಿವಿ ಲಸಿಕೆʼ ಜಾಗೃತಿ ಅಭಿಯಾನ

ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕಾಗಿ ಮಹತ್ಕಾರ್ಯಕ್ಕೆ ಕೈಹಾಕಿದ ಫ್ಯಾನ್ಸ್‌

ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು 'ಎಚ್‌ಪಿವಿ ಲಸಿಕೆ' ಜಾಗೃತಿ ಅಭಿಯಾನ ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಏಪ್ರಿಲ್ 8ರಂದು ‌ಅಲ್ಲು ಅರ್ಜುನ್ ಜನ್ಮದಿನವಿದ್ದು, ವರ್ಷವಿಡೀ ಈ ಸಮಾಜಮುಖಿ ಕಾರ್ಯ ನಡೆಸಲು ಅಭಿಮಾನಿ ಸಂಘ ನಿರ್ಧರಿಸಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಮತ್ತೆ 'ರಾಣಿ'ಯಾಗಿ ಮಿಂಚಲು ಸಜ್ಜಾದ ಸಂಸದೆ ಕಂಗನಾ ರಣಾವತ್; 13 ವರ್ಷಗಳ ನಂತರ ಬರಲಿದೆ 'ಕ್ವೀನ್ 2'!

13 ವರ್ಷದ ನಂತರ ಬರ್ತಿದೆ 'ಕ್ವೀನ್' ಸೀಕ್ವೇಲ್; 'ರಾಣಿ' ಆಲಿದ್ದಾರೆ ಕಂಗನಾ

ʻಕ್ವೀನ್‌ 2ʼ ಚಿತ್ರದ ಮೂಲಕ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮತ್ತೆ ತೆರೆಯ ಮೇಲೆ ರಾಣಿ ಮೆಹ್ರಾ ಆಗಿ ಮಿಂಚಲು ಸಜ್ಜಾಗಿದ್ದಾರೆ. 13 ವರ್ಷಗಳ ಹಿಂದೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ಈ ಚಿತ್ರದ ಸೀಕ್ವೆಲ್ ಏಪ್ರಿಲ್ ಅಂತ್ಯಕ್ಕೆ ಸೆಟ್ಟೇರಲಿದೆ. ಮೊದಲ ಭಾಗದಲ್ಲಿ ವಿದೇಶಿ ಪ್ರವಾಸ ಮಾಡಿದ್ದ ರಾಣಿ, ಈ ಬಾರಿ ಭಾರತದ ವಿವಿಧ ನಗರಗಳಲ್ಲಿ ಪಯಣ ಮಾಡಲಿದ್ದಾರೆ.

ಮೂರ್ಖರ ದಿನದಂದು ದಿಢೀರ್‌ ಅಂತ ಪ್ರೆಸ್‌ಮೀಟ್‌ ಮಾಡಿದ್ದೇಕೆ ಉಪೇಂದ್ರ? ಜನರಿಗೆ ʻರಿಯಲ್‌ ಸ್ಟಾರ್‌ʼ ಕೊಟ್ಟ ಸಂದೇಶ ಏನ್‌ ಗೊತ್ತಾ?

ಇದು ಮೂರ್ಖರ ದಿನವಲ್ಲ, ಇದು ಬುದ್ಧಿವಂತರ ದಿನ! ನಟ ಉಪೇಂದ್ರ ಹೊಸ ಸಂದೇಶ

ನಟ ಉಪೇಂದ್ರ ಅವರು ಏಪ್ರಿಲ್ 1ರಂದು 'ದಿ ರಿಯಲ್ ಪ್ರಜಾಕೀಯ' ಎಂಬ ಮೊಬೈಲ್ ಅಪ್ಲಿಕೇಶನ್ ರಿಲೀಸ್‌ ಮಾಡಿದ್ದಾರೆ. ಜೊತೆಗೆ ಎಡ-ಬಲ ಸಿದ್ಧಾಂತಗಳ ನಡುವೆ ಸಿಲುಕದೆ, ಪ್ರಜೆಗಳು ಸ್ವತಂತ್ರವಾಗಿ ಯೋಚಿಸಿ ಸರ್ಕಾರದ ಮಾಲೀಕರೆಂದು ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಮತ್ತೆ ಬರ್ತಿದೆ ಜೀ ಕನ್ನಡದ ಜನಪ್ರಿಯ 'ಜೋಡಿ ನಂ.1' ಶೋ; ಜಡ್ಜ್‌ ಟೀಮ್‌ಗೆ ʻಅಮೃತಧಾರೆʼ ಭೂಮಿ - ಗೌತಮ್ ಎಂಟ್ರಿ

'ಜೋಡಿ ನಂ.1' ಶೋನಲ್ಲಿ ʻಅಮೃತಧಾರೆʼ ಸೀರಿಯಲ್‌ನ ಭೂಮಿ - ಗೌತಮ್ ಜಡ್ಜ್!

ಜೋಡಿ ನಂ.1 ರಿಯಾಲಿಟಿ ಶೋ ಏಪ್ರಿಲ್ 4ರಿಂದ ರಾತ್ರಿ 9ಕ್ಕೆ ಜೀ ಕನ್ನಡದಲ್ಲಿ ಸಂಚಲನ ಮೂಡಿಸಲಿದೆ. ಅಮೃತಧಾರೆ ಖ್ಯಾತಿಯ ಛಾಯಾ ಸಿಂಗ್, ರಾಜೇಶ್ ನಟರಂಗ, ಲವ್ಲೀ ಸ್ಟಾರ್ ಪ್ರೇಮ್ ಮತ್ತು ಮಾಳವಿಕಾ ಅವಿನಾಶ್ ತೀರ್ಪುಗಾರರಾಗಿ ಆಗಮಿಸುತ್ತಿದ್ದಾರೆ. ಹಿರಿಯ ಮತ್ತು ಕಿರಿಯ ದಂಪತಿಗಳ ನಡುವಿನ ಹೊಂದಾಣಿಕೆ, ಪ್ರೀತಿ ಮತ್ತು ಸವಾಲುಗಳ ಪರೀಕ್ಷೆಯೇ ಈ ಶೋನ ಜೀವಾಳ.

ತಮಿಳುನಾಡು ಎಲೆಕ್ಷನ್ ಮುಗಿದ್ಮೇಲೆ ʻದಳಪತಿʼ ವಿಜಯ್‌ ಫ್ಯಾನ್ಸ್‌ಗೆ ಬಿಗ್‌ ಗಿಫ್ಟ್!‌  ಇದು ʻಜನ ನಾಯಗನ್‌ʼ ಟೀಮ್‌ ಹೊಸ ಲೆಕ್ಕಾಚಾರ

Vijay: ತಮಿಳುನಾಡು ಎಲೆಕ್ಷನ್ ಮುಗಿದ ಮರುಕ್ಷಣವೇ ಜನ ನಾಯಗನ್ ಅಬ್ಬರ ಫಿಕ್ಸ್‌

Thalapathy Vijay: ಜನ ನಾಯಗನ್‌ ಸಿನಿಮಾ ಬಿಡುಗಡೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ತಮಿಳುನಾಡು ವಿಧಾನಸಭಾ ಚುನಾವಣೆ ಏಪ್ರಿಲ್ 23 ರಂದು ಮುಕ್ತಾಯವಾಗಲಿದ್ದು, ಮತದಾನ ಪ್ರಕ್ರಿಯೆ ಮುಗಿದ ಮರುದಿನವೇ ಅಂದರೆ ಏಪ್ರಿಲ್ 24 ಅಥವಾ ಏಪ್ರಿಲ್ 30 ರಂದು ಈ ಚಿತ್ರವನ್ನು ಬಿಡುಗಡೆ ಮಾಡಲು ಕೆವಿಎನ್ ಪ್ರೊಡಕ್ಷನ್ಸ್ ಸಿದ್ಧತೆ ನಡೆಸುತ್ತಿದೆಯಂತೆ.

ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ: ಚಂದನ್‌ ಶೆಟ್ಟಿಗೆ ಇದು ಸ್ಪೆಷಲ್‌ ಫಿಲ್ಮ್!‌ ಯಾಕೆ ಗೊತ್ತಾ?

Chandan Shetty: 'ಎಲ್ರ ಕಾಲೆಳಿಯತ್ತೆ ಕಾಲ' ರಿಲೀಸ್ ಡೇಟ್ ಫಿಕ್ಸ್

Elra Kaleliyatte Kala: ಚಂದನ್‌ ಶೆಟ್ಟಿ ನಟನೆಯ ʻಎಲ್ರ ಕಾಲೆಳಿಯತ್ತೆ ಕಾಲʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ ಆಗಿದೆ. ಇದು ಚಂದನ್ ಶೆಟ್ಟಿ ನಾಯಕನಾಗಿ ನಟಿಸಲು ಒಪ್ಪಿಕೊಂಡ ಮೊದಲ ಚಿತ್ರವಾಗಿದ್ದು, ನಟ ಸುಜಯ್ ಶಾಸ್ತ್ರಿ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

7.23 ಗಂಟೆಯ ʻಧುರಂಧರ್‌ʼ ಮಹಾ ಮ್ಯಾರಥಾನ್; ಎರಡು ಪಾರ್ಟ್‌ಗಳನ್ನು ಒಟ್ಟಿಗೆ ನೋಡುವ ಚಾನ್ಸ್‌! ಇದು ನಿಜವೇ?

ʻಧುರಂಧರ್ʼ ಮಹಾ ಮ್ಯಾರಾಥಾನ್: ಒಂದೇ ಶೋನಲ್ಲಿ ಎರಡು ಪಾರ್ಟ್!‌

Ranveer Singh Dhurandhar Marathon: ಹಾಂಕಾಂಗ್‌ನ ವಿತರಣಾ ಸಂಸ್ಥೆ 'ಎಎ ಟೆಕ್' ಏಪ್ರಿಲ್ 12 ರಂದು 'ಧುರಂಧರ್' ಮತ್ತು ಅದರ ಸೀಕ್ವೆಲ್ 'ಧುರಂಧರ್: ದಿ ರಿವೆಂಜ್' ಎರಡನ್ನೂ ಒಟ್ಟಿಗೆ ಪ್ರದರ್ಶಿಸಲು ಮುಂದಾಗಿದೆ. ಸುಮಾರು 7 ಗಂಟೆ 23 ನಿಮಿಷಗಳ ಸುದೀರ್ಘ ಅವಧಿಯ ಈ ಪ್ರದರ್ಶನವು ಮೂರು ವಿರಾಮಗಳೊಂದಿಗೆ ಒಟ್ಟು 9 ಗಂಟೆಗಳ ಕಾಲ ನಡೆಯಲಿದೆ.

ಶೂಟಿಂಗ್‌ ಸೆಟ್‌ನಲ್ಲಿ ಯುವ ನಟಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ನಿರ್ದೇಶಕ ರಂಜಿತ್ ಬಂಧನ!

ಸಿನಿಮಾ ಸೆಟ್‌ನಲ್ಲಿ ಲೈಂಗಿಕ ದೌರ್ಜನ್ಯ; ಮಲಯಾಳಂ ನಿರ್ದೇಶಕ ರಂಜಿತ್ ಅರೆಸ್ಟ್

Malayalam Director Ranjith Arrest: ಚಿತ್ರೀಕರಣ ಹಂತದಲ್ಲಿರುವ ಸಿನಿಮಾದ ಸೆಟ್‌ನಲ್ಲಿ ಯುವ ನಟಿಯೊಬ್ಬರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊಚ್ಚಿ ಪೊಲೀಸರು ನಿರ್ದೇಶಕ ರಂಜಿತ್ ಅವರನ್ನು ಬಂಧಿಸಿದ್ದಾರೆ. ರಂಜಿತ್ ವಿರುದ್ಧ ಈ ಹಿಂದೆಯೂ ಸಾಕಷ್ಟು ಆರೋಪಗಳು ಕೇಳಿಬಂದಿದ್ದವು.

Actor Rakshit shetty: ಕಾಪಿ ರೈಟ್‌ ಉಲ್ಲಂಘನೆ; ನಟ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್!

ನಟ ರಕ್ಷಿತ್ ಶೆಟ್ಟಿಗೆ 25 ಲಕ್ಷ ರೂ. ದಂಡ ವಿಧಿಸಿದ ದೆಹಲಿ ಹೈಕೋರ್ಟ್!

'ನ್ಯಾಯ ಎಲ್ಲಿದೆ' ಚಿತ್ರದ 'ನ್ಯಾಯ ಎಲ್ಲಿದೆ...' ಹಾಡು ಮತ್ತು 'ಗಾಳಿ ಮಾತು' ಚಿತ್ರದ 'ಒಮ್ಮೆ ನಿನ್ನನ್ನು' ಹಾಡನ್ನು ʼಬ್ಯಾಚುಲರ್ ಪಾರ್ಟಿʼ ಸಿನಿಮಾದಲ್ಲಿ ಅನಧಿಕೃತವಾಗಿ ಬಳಕೆ ಮಾಡಲಾಗಿದೆ. ಹಕ್ಕುಸ್ವಾಮ್ಯ ಹಾಗೂ ಪ್ರಸಾರದ ಹಕ್ಕು ಅನ್ನು ಖರೀದಿ ಮಾಡದೇ ಹಾಡುಗಳ ಬಳಕೆಯಾಗಿದೆ ಎಂದು ಎಂಆರ್‌ಟಿ ಮ್ಯೂಸಿಕ್ ಪಾಲುದಾರರಾಗಿರುವ ನವೀನ್ ಕುಮಾ‌ರ್ ದೂರು ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್‌, ರಕ್ಷಿತ್ ಶೆಟ್ಟಿ ಅವರ ನಿರ್ಮಾಣ ಸಂಸ್ಥೆಗೆ ಭಾರಿ ದಂಡ ವಿಧಿಸಿದೆ.

ʻ‌ವರನಟʼ ಡಾ. ರಾಜ್‌ಕುಮಾರ್ ಜನ್ಮದಿನದಂದು ಅಪ್ಪು ಅಭಿಮಾನಿಯ ʻಪುನೀತ್ ನಿವಾಸʼ ರಿಲೀಸ್‌

ಅಣ್ಣಾವ್ರ ಜನ್ಮದಿನದಂದು ಅಪ್ಪು ಅಭಿಮಾನಿಯ 'ಪುನೀತ್ ನಿವಾಸ' ರಿಲೀಸ್

Puneeth Nivasa Movie: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿ ಎಸ್. ಮೋಹನ್ ಅವರ ನಿರ್ಮಾಣದಲ್ಲಿ ಪುನೀತ್‌ ನಿವಾಸ ಸಿನಿಮಾ ಸಿದ್ಧವಾಗಿದೆ. ಅನಾಥ ಕೂಲಿ ಕಾರ್ಮಿಕನೊಬ್ಬ ತನ್ನ ಕಷ್ಟದ ಹಣದಿಂದ ಕಟ್ಟುವ ಕನಸಿನ ಮನೆಯೇ ಈ ಚಿತ್ರದ ಕಥಾಹಂದರ. ಡಾ. ರಾಜ್‌ಕುಮಾರ್ ಅವರ ಜನ್ಮದಿನವಾದ ಏಪ್ರಿಲ್ 24ರಂದು ರಾಜ್ಯಾದ್ಯಂತ ಈ ಸಿನಿಮಾ ಬಿಡುಗಡೆಯಾಗಲಿದೆ.

Alka Yagnik: ಶ್ರವಣ ದೋಷದಿಂದ ಬಳಲುತ್ತಿರುವ ಖ್ಯಾತ ಗಾಯಕಿ; ಅಭಿಮಾನಿಗಳಿಗೆ ಬೇಸರ

ಶ್ರವಣ ದೋಷದಿಂದ ಬಳಲುತ್ತಿರುವ ಖ್ಯಾತ ಗಾಯಕಿ!

Alka Yagnik: ಖ್ಯಾತ ಗಾಯಕಿ ಅಲ್ಕಾ ಯಾಗ್ನಿಕ್ ಅವರು ಅಪರೂಪದ ಶ್ರವಣ ದೋಷದಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. "ಇನ್ನೂ ಆ ಸ್ಥಿತಿಯಿಂದ ಬಳಲುತ್ತಿದ್ದೇನೆ" ಎಂದು ಒಪ್ಪಿಕೊಂಡಿದ್ದಾರೆ. ಅಲ್ಕಾ ಯಾಗ್ನಿಕ್ ಅವರು ಹಾಡುವುದು ನಿಲ್ಲಿಸಿ 2 ವರ್ಷ ಆಗಿದೆ.ಸತತವಾಗಿ ಹಿಟ್ ಹಾಡುಗಳನ್ನು ನೀಡುತ್ತಿದ್ದ ಅರಿಜಿತ್ ಅವರ ಈ ಹಠಾತ್ ನಿರ್ಧಾರ ಸಂಗೀತ ಪ್ರಿಯರಲ್ಲಿ ಬೇಸರ ತಂದಿದೆ. ಈಗ ಅಲ್ಕಾ ಯಾಗ್ನಿಕ್ ಕೂಡ ಹಾಡುವುದನ್ನು ನಿಲ್ಲಿಸಿರುವುದು ಇನ್ನಷ್ಟು ಬೇಸರ ಮೂಡಿಸಿದೆ.

ಮದುವೆಯಾಗದೇ ತಾಯಿ ಆಗ್ತಿದ್ದಾರಾ ನಟಿ ಪೂನಂ ಪಾಂಡೆ? ವೈರಲ್‌ ಫೋಟೋ ಬಗ್ಗೆ ಹುಟ್ಟಿಕೊಂಡಿವೆ ಹಲವು ಪ್ರಶ್ನೆ!

ಮದುವೆಯಾಗದೇ ತಾಯಿ ಆಗ್ತಿದ್ದಾರಾ‌ ಪೂನಂ ಪಾಂಡೆ? ಬೇಬಿ ಬಂಪ್ ಫೋಟೋ ವೈರಲ್!

Poonam Pandey Pregnancy: ನಟಿ ಪೂನಂ ಪಾಂಡೆ ಅವರ ಪ್ರೆಗ್ನೆನ್ಸಿ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ದಿಢೀರ್‌ ಅಂತ ಪೂನಂ ಪಾಂಡೆ ತಮ್ಮ ಬೇಬಿ ಬಂಪ್ ಪ್ರದರ್ಶಿಸಿರುವ ಫೋಟೋಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದ್ದಾರೆ. ಈ ಹಿಂದೆ ತಮ್ಮ ಸಾವಿನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಿ ಟೀಕೆಗೆ ಗುರಿಯಾಗಿದ್ದ ನಟಿ, ಈಗ ಏಪ್ರಿಲ್ ಫೂಲ್ ಮಾಡಿದ್ರಾ?

ಪ್ರಶಾಂತ್‌ ನೀಲ್‌ - ಎನ್‌ಟಿಆರ್‌ ಸಿನಿಮಾ ಆಫರ್‌ನ ರಿಜೆಕ್ಟ್‌ ಮಾಡಿದ ನಟ ಟೊವಿನೋ ಥಾಮಸ್;‌ ಕಾರಣ ಕೇಳಿ ಭೇಷ್‌ ಎಂದ ನೆಟ್ಟಿಗರು!

ಎನ್‌ಟಿಆರ್-ನೀಲ್ ಚಿತ್ರದ ಆಫರ್ ರಿಜೆಕ್ಟ್ ಮಾಡಿದ ಟೊವಿನೋ ಥಾಮಸ್; ಕಾರಣವೇನು?

Tovino Thomas On NTR Neel Movie: ಜ್ಯೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ ಪ್ಯಾನ್ ಇಂಡಿಯಾ ಚಿತ್ರದಲ್ಲಿ ವಿಲನ್ ಪಾತ್ರಕ್ಕೆ ಆಯ್ಕೆಯಾಗಿದ್ದ ಟೊವಿನೋ ಥಾಮಸ್,‌ ಆ ಆಫರ್ ಅನ್ನು ತಿರಸ್ಕರಿಸಿದ್ದಾರೆ. ಡೇಟ್ಸ್ ಹೊಂದಾಣಿಕೆಯಾಗದ ಅವರು ಆ ಚಿತ್ರದಿಂದ ಕಾರಣ ಹೊರಬಂದಿದ್ದಾರೆ ಎನ್ನಲಾಗಿದೆ.

ಹೊಸ ಮನೆಗೆ ಕಾಲಿಟ್ಟ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ; ಗೃಹಪ್ರವೇಶದ ಫೋಟೋಗಳು ಇಲ್ಲಿವೆ ನೋಡಿ

ʻಬೆಂಗಳೂರಿನಲೊಂದು ಪುಟ್ಟ ಗೂಡು'; ಸಿಹಿಸುದ್ದಿ ತಿಳಿಸಿದ ಅಕ್ಷತಾ ಪಾಂಡವಪುರ

ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟಿ ಅಕ್ಷತಾ ಪಾಂಡವಪುರ ಒಂದು ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಅದೇನಪ್ಪ ಅಂದರೆ, ಅವರು ಬೆಂಗಳೂರಿನಲ್ಲಿ ಒಂದು ಸ್ವಂತ ಗೂಡೊಂದನ್ನು ಕಟ್ಟಿಕೊಂಡಿದ್ದಾರೆ. ಅರ್ಥಾತ್‌ ಹೊಸ ಮನೆಯನ್ನು ಖರೀದಿ ಮಾಡಿದ್ದು, ಅದರ ಗೃಹಪ್ರವೇಶವನ್ನು ಈಚೆಗೆ ಮಾಡಿದ್ದಾರೆ. ರಂಗಭೂಮಿ ಮತ್ತು ಚಿತ್ರರಂಗ ಎರಡರಲ್ಲೂ ಸಕ್ರಿಯವಾಗಿರುವ ಅಕ್ಷತಾ, ಮೂಲತಃ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನವವರು. ಹೆಗ್ಗೋಡಿನ ನೀನಾಸಂನಲ್ಲಿ ತರಬೇತಿ ಪಡೆದು ನಂತರ, ದೆಹಲಿಯ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾದಲ್ಲೂ ಕಲಿತು ಬಂದಿರುವ ಅಕ್ಷತಾ, ಗಮನಾರ್ಹ ಸಿನಿಮಾಗಳಿಂದ ಗುರುತಿಸಿಕೊಂಡಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಸ್ವಂತ ಸೂರು ಮಾಡಿಕೊಂಡ ಖುಷಿಯಲ್ಲಿದ್ದಾರೆ ಅಕ್ಷತಾ ಮತ್ತು ಪ್ರಸನ್ನ ದಂಪತಿ. ಇಲ್ಲಿವೆ ನೋಡಿ ಗೃಹಪ್ರವೇಶ ಸಮಾರಂಭದ ಫೋಟೋಗಳು.

'ಜೈ ಹನುಮಾನ್' ಚಿತ್ರಕ್ಕಾಗಿ ಮೈತ್ರಿ ಮೂವೀ ಮೇಕರ್ಸ್ ಜೊತೆ ಕೈಜೋಡಿಸಿದ ರಿಷಬ್ ಶೆಟ್ಟಿ ಫಿಲ್ಮ್ಸ್

ʻಜೈ ಹನುಮಾನ್ʼ ಚಿತ್ರಕ್ಕೆ ರಿಷಬ್ ಶೆಟ್ಟಿ ಫಿಲ್ಮ್ಸ್ ಸಾಥ್

Rishab Shetty Jai Hanuman Movie: ರಿಷಬ್‌ ಶೆಟ್ಟಿ ಅವರು ಜೈ ಹನುಮಾನ್ ಚಿತ್ರಕ್ಕಾಗಿ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ನಿರ್ದೇಶಕ ಪ್ರಶಾಂತ್ ವರ್ಮಾ ಅವರ ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್‌ಗೆ 'ಮೈತ್ರಿ ಮೂವೀ ಮೇಕರ್ಸ್' ಜೊತೆ 'ರಿಷಬ್ ಶೆಟ್ಟಿ ಫಿಲ್ಮ್ಸ್' ಕೂಡ ಕೈಜೋಡಿಸಿದೆ. ಮೇ ತಿಂಗಳಿನಿಂದ ಈ ಸಿನಿಮಾದ ಚಿತ್ರೀಕರಣದಲ್ಲಿ ರಿಷಬ್‌ ಶೆಟ್ಟಿ ಭಾಗಿಯಾಗಲಿದ್ದಾರೆ.

ನಟಿಸಿದ ಸಿನಿಮಾಗಳೆಲ್ಲಾ ಫ್ಲಾಪ್, ಆದರೂ ನೂರಾರು ಕೋಟಿ ಸಂಭಾವನೆ ಜೇಬಿಗಿಳಿಸಿದ ಸಲ್ಮಾನ್‌ ಖಾನ್!‌ ತೆಲುಗು ನಿರ್ಮಾಪಕ ಇಷ್ಟೊಂದು ದುಡ್ಡು ಕೊಟ್ಟಿದ್ದೇಕೆ?

‌ಫ್ಲಾಪ್ ಸಿನಿಮಾಗಳ ನಡುವೆಯೂ ದುಬಾರಿ ಸಂಭಾವನೆ ಪಡೆದ ಸಲ್ಮಾನ್ ಖಾನ್!

Salman Khan Dil Raju Film: ಸಲ್ಮಾನ್‌ ಖಾನ್‌ ಅವರ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆಯಾಗಿದೆ. ಸಲ್ಮಾನ್ ಅವರ ಇತ್ತೀಚಿನ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೋತಿದ್ದರೂ ಈ ಚಿತ್ರಕ್ಕಾಗಿ ನಿರ್ಮಾಪಕ ದಿಲ್ ರಾಜು ದುಬಾರಿ ಸಂಭಾವನೆ ನೀಡಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ದ್ವಿಭಾಷಾ ಆ್ಯಕ್ಷನ್ ಚಿತ್ರವು 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ.

Loading...