ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿನಿಮಾ

Bigg Boss 12: ಅಯ್ಯೋ, ʻಗಿಚ್ಚಿ ಗಿಲಿ ಗಿಲಿʼ ಟೀಮ್‌ ಬಂದರೂ ರಕ್ಷಿತಾಗೆ ಗಿಲ್ಲಿದೇ ಚಿಂತೆ! ಬಿದ್ದು ಬಿದ್ದು ನಕ್ಕ ಸ್ಪರ್ಧಿಗಳು

BBK 12: ಗಿಚ್ಚಿ ಗಿಲಿ ಗಿಲಿ ಟೀಮ್ ಬಂದರೂ ರಕ್ಷಿತಾಗೆ ಗಿಲ್ಲಿದೇ ಧ್ಯಾನ!

Bigg Boss Kannada 12 Finale: ಬಿಗ್‌ ಬಾಸ್‌ ಫಿನಾಲೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಇರುವಾಗ, ಕಲರ್ಸ್ ಕನ್ನಡದ ನೂತನ ಶೋ 'ಗಿಚ್ಚಿ ಗಿಲಿ ಗಿಲಿ' ಜೂನಿಯರ್ಸ್ ತಂಡದ ಕಲಾವಿದರು ದೊಡ್ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ರಕ್ಷಿತಾ ಶೆಟ್ಟಿ ಅವರು "ನನಗೆ ಗಿಲ್ಲಿ ಇಷ್ಟ" ಎಂದು ಹೇಳಿದ್ದು ಮನೆಯಲ್ಲಿ ನಗು ಉಕ್ಕಿಸಿದೆ.

ʻಗಿಲ್ಲಿ ನಟ ಬಂದಾಗ 6 ಬಾಡಿಗಾರ್ಡ್ಸ್‌ ಇದ್ರು, ಗಿಲ್ಲಿ ಕ್ರೇಜ್‌ ಬಿಗ್‌ ಬಾಸ್‌ಗೂ ಗೊತ್ತಿದೆʼ; ದೊಡ್ಮನೆಯೊಳಗೆ ನಡೆದ  ಫ್ಯಾನ್ಸ್ ಮೀಟ್‌ನ ಅಸಲಿ ಸತ್ಯ!

ಬಿಗ್‌ ಬಾಸ್‌ ಫ್ಯಾನ್ಸ್ ಮೀಟ್‌ನಲ್ಲಿ ಗಿಲ್ಲಿ ಬಂದಾಗ 6 ಬಾಡಿಗಾರ್ಡ್ಸ್‌ ನೇಮಕ

Bigg Boss 12 Gilli Nata: ಬಿಗ್ ಬಾಸ್ ಕನ್ನಡ 12ರ ಫಿನಾಲೆ ವಾರದಲ್ಲಿ ನಡೆದ ಫ್ಯಾನ್ಸ್ ಮೀಟ್, ಗಿಲ್ಲಿ ನಟನ ಬೃಹತ್ ಜನಪ್ರಿಯತೆಯನ್ನು ಸಾಬೀತುಪಡಿಸಿದೆ. ಇತರೆ ಸ್ಪರ್ಧಿಗಳಿಗೆ ಇಬ್ಬರು ಬಾಡಿಗಾರ್ಡ್‌ಗಳಿದ್ದರೆ, ಗಿಲ್ಲಿ ಬಂದಾಗ ಭದ್ರತೆಗಾಗಿ ಆರು ಮಂದಿ ಬೌನ್ಸರ್‌ಗಳನ್ನು ನೇಮಿಸಲಾಗಿತ್ತು ಎಂದು ಅಭಿಮಾನಿಯೊಬ್ಬರು ಬಹಿರಂಗಪಡಿಸಿದ್ದಾರೆ.

Bigg Boss 12: ʻಇಲ್ಲಿಂದ ಹೋದ್ಮೇಲೆ ನಿನ್ನ ಬ್ಲಾಕ್‌ ಮಾಡ್ತಿನಿʼ ಎಂದ ಕಾವ್ಯ; ʻI Am Waiting..ʼ ಅಂತ ಕೌಂಟರ್‌ ಕೊಟ್ಟ ಗಿಲ್ಲಿ ನಟ!

ಸೀರಿಯಸ್ ಆಗಿ ಕ್ಷಮೆ ಕೇಳಿದ ಕಾವ್ಯ; ಮತ್ತೆ ಕಾಲೆಳೆದ ಗಿಲ್ಲಿ ನಟ!

Bigg Boss Kannada 12: ದೊಡ್ಮನೆಯಲ್ಲಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ 'ಕ್ಷಮೆ ಕೇಳುವ' ವಿಶಿಷ್ಟ ಚಟುವಟಿಕೆ ನೀಡಿದ್ದರು. ಇದರಲ್ಲಿ ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ತಾನು ಈ ಹಿಂದೆ ಹರ್ಟ್ ಮಾಡಿದ್ದಕ್ಕಾಗಿ ಮತ್ತು ಜನರ ಮುಂದೆ ಕೂಗಾಡಿದ್ದಕ್ಕಾಗಿ ಮನಸಾರೆ ಕ್ಷಮೆ ಕೇಳಿದ್ದಾರೆ.

Kara First Glimpse: ಸಂಕ್ರಾಂತಿಗೆ ಗುಡ್‌ ನ್ಯೂಸ್‌ ಕೊಟ್ಟ ಧನುಷ್‌! ಹೊಸ ಸಿನಿಮಾ ಲುಕ್‌ಗೆ ಫ್ಯಾನ್ಸ್‌ ಫಿದಾ

ಸಂಕ್ರಾಂತಿಗೆ ಗುಡ್‌ ನ್ಯೂಸ್‌ ಕೊಟ್ಟ ಧನುಷ್‌! ಲುಕ್‌ಗೆ ಫ್ಯಾನ್ಸ್‌ ಫಿದಾ

Kara first glimpse: ಧನುಷ್ ಅವರು ವಿಘ್ನೇಶ್ ರಾಜಾ ಅವರ ಮುಂಬರುವ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸುವ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಲ್ಲದೆ, ಪೊಂಗಲ್ ಸಂದರ್ಭದಲ್ಲಿ ಮೊದಲ ಲುಕ್‌ ಮೂಲಕ ಅಚ್ಚರಿಗೊಳಿಸಿದರು. ದಿ ನೇಮ್ ಈಸ್ ಕಾರಾ ಎಂಬ ಶೀರ್ಷಿಕೆಯ, ಆಕ್ಷನ್-ಪ್ಯಾಕ್ಡ್ ಗ್ಲಿಂಪ್ಸ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಮತ್ತು ವೀಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆಗಳನ್ನು ಗಳಿಸಿದೆ.

ಅಣ್ಣಾವ್ರ ಮೊಮ್ಮಗಳು ಧನ್ಯಾ ರಾಮ್‌ಕುಮಾರ್‌ಗೆ ಜೋಡಿಯಾದ ನಟ ಪೃಥ್ವಿ ಅಂಬಾರ್‌; ʻಚೌಕಿದಾರ್‌ ʼ ಸಿನಿಮಾ ಟ್ರೇಲರ್‌ ಹೇಗಿದೆ?

ಪೃಥ್ವಿ ಅಂಬಾರ್-ಧನ್ಯಾ ರಾಮ್‌ಕುಮಾರ್ ನಟನೆಯ ‌ʻಚೌಕಿದಾರ್ʼ ಟ್ರೇಲರ್ ರಿಲೀಸ್

Chowkidar Trailer: ಪೃಥ್ವಿ ಅಂಬಾರ್‌ ಮತ್ತು ಧನ್ಯಾ ರಾಮ್‌ಕುಮಾರ್ ನಟನೆಯ ಚೌಕಿದಾರ್‌ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಅಪ್ಪ - ಮಗನ ಬಾಂಧವ್ಯದ ಎಮೋಷನಲ್ ಕಥೆಯನ್ನು ತೆರೆಯ ಮೇಲೆ ತರಲು ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಸಜ್ಜಾಗಿದ್ದಾರೆ.

45 movie OTT: ಕರುನಾಡಲ್ಲಿ ಅಬ್ಬರಿಸಿದ್ದ `45’ ಮೂವಿಯಿಂದ ಗುಡ್‌ ನ್ಯೂಸ್‌; ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

`45’ ಮೂವಿಯಿಂದ ಗುಡ್‌ ನ್ಯೂಸ್‌; ಒಟಿಟಿ ರಿಲೀಸ್‌ ಡೇಟ್‌ ಅನೌನ್ಸ್‌

Shiva Rajkumar: ರಾಜ್​ ಬಿ. ಶೆಟ್ಟಿ, ಉಪೇಂದ್ರ, ಶಿವರಾಜ್​​ಕುಮಾರ್ ಅಭಿನಯದ ‘45’ ಸಿನಿಮಾ ಮೊದಲ ದಿನ ಭರ್ಜರಿ ಓಪನಿಂಗ್ ಪಡೆದುಕೊಂಡು ಭರವಸೆಯನ್ನು ಮೂಡಿಸಿತ್ತು. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಕನ್ನಡ ಚಿತ್ರರಂಗದ ಈ ಮೂವರು ದಿಗ್ಗಜರು ನಟಿಸಿರುವ ಸಿನಿಮಾ '45' ಕ್ರಿಸ್‌ಮಸ್‌ಗೆ ರಿಲೀಸ್ ಆಗಿತ್ತು. ಕನ್ನಡದ ಹೆಸರಾಂತ ನಿರ್ಮಾಪಕ ರಮೇಶ್ ರೆಡ್ಡಿ ದುಬಾರಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಸಿನಿಮಾ ಇದೀಗ ಸಂಕ್ರಾಂತಿಯಂದೇ ಸಿನಿಪ್ರಿಯರಿಗೆ ಭರ್ಜರಿ ಗಿಫ್ಟ್‌(Gift) ಕೊಟ್ಟಿದೆ.

Photos: ಬೆಜ್ಜವಳ್ಳಿಯಲ್ಲಿ ಸಂಭ್ರಮದ ಸಂಕ್ರಾಂತಿ; ಇರುಮುಡಿ ಹೊತ್ತು ಸಾಗಿದ ನಟ ಶಿವರಾಜ್‌ಕುಮಾರ್

ಬೆಜ್ಜವಳ್ಳಿಯಲ್ಲಿ ಸಂಕ್ರಾಂತಿ ಸಂಭ್ರಮ; ಅಯ್ಯಪ್ಪನ ದರ್ಶನ ಪಡೆದ ಶಿವಣ್ಣ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬೆಜ್ಜವಳ್ಳಿಯಲ್ಲಿ ಮಕರ ಸಂಕ್ರಾಂತಿ ಉತ್ಸವವು ಸಡಗರದಿಂದ ನಡೆಯುತ್ತಿದೆ. ಈ ಧಾರ್ಮಿಕ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಗೀತಾ ಶಿವರಾಜ್‌ಕುಮಾರ್ ದಂಪತಿ ಹಾಗೂ ಆಧ್ಯಾತ್ಮಿಕ ಗುರುಗಳಾದ ಅವಧೂತ ವಿನಯ್ ಗುರೂಜಿ ಭಾಗವಹಿಸಿದ್ದರು.‌ ಪ್ರತಿ ವರ್ಷದಂತೆ ಈ ಬಾರಿಯೂ ಉತ್ಸವದ ವೇಳೆ ಆಕಾಶದಲ್ಲಿ ಗರುಡ ದರ್ಶನವಾಗಿದ್ದು, ನೂರಾರು ಭಕ್ತರು ದರ್ಶನವನ್ನು ಪಡೆದರು. ಇನ್ನೂ, ಕ್ಷೇತ್ರದ ಸಂಪ್ರದಾಯದಂತೆ ನಟ ಶಿವರಾಜ್‌ಕುಮಾರ್ ಅವರು ಇರುಮುಡಿ ಹೊತ್ತು, ಅಯ್ಯಪ್ಪ ಸ್ವಾಮಿಗೆ ಪವಿತ್ರ ಅಭಿಷೇಕವನ್ನು ನೆರವೇರಿಸಿದರು. ಇಲ್ಲಿವೆ ನೋಡಿ ಫೋಟೋಗಳು.

ನಟಿ ಅಮೂಲ್ಯ ಕಮ್‌ಬ್ಯಾಕ್ ಸಿನಿಮಾಕ್ಕೆ ಹೀರೋ ಸಿಕ್ಕೇಬಿಟ್ರು! ʻಪೀಕಬೂʼ ಚಿತ್ರಕ್ಕೆ ಹೀರೋ ಆದ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್ ನಟ ಶ್ರೀರಾಮ್‌

ʻಪೀಕಬೂʼ ಹೀರೋ ಫಿಕ್ಸ್: 'ಗೋಲ್ಡನ್ ಕ್ವೀನ್' ಅಮೂಲ್ಯಗೆ ನಟ ಶ್ರೀರಾಮ್ ಜೋಡಿ

Peekaboo Kannada Movie: ನಟಿ ಅಮೂಲ್ಯ ಅವರು ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ 8 ವರ್ಷಗಳ ಬಳಿಕ ಕಮ್‌ಬ್ಯಾಕ್ ಮಾಡುತ್ತಿದ್ದು, ಅವರ ಹೊಸ ಚಿತ್ರದ ನಾಯಕನಾಗಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಖ್ಯಾತಿಯ ಶ್ರೀರಾಮ್ ಆಯ್ಕೆಯಾಗಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಈ ಸಿನಿಮಾದ ಹೀರೋ ರಿವಿಲ್ ಟೀಸರ್ ಬಿಡುಗಡೆಯಾಗಿದ್ದು, ಶ್ರೀರಾಮ್ ಎರಡು ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Actor Jaggesh: ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದ ಜಗ್ಗೇಶ್‌! ಚಿತ್ರರಂಗದ ಬೆಂಬಲ ಇಲ್ಲ ಎಂದು ಪೋಸ್ಟ್‌

ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದ ಜಗ್ಗೇಶ್‌!

Piracy Post : ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರು ಪೈರಸಿ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಆಧುನಿಕ ತಂತ್ರಜ್ಞಾನ ಬಳಸಿ ಅಂತಹ ಸಿನಿಮಾ ಕಳ್ಳರನ್ನು ಕಂಡುಹಿಡಿದು ದಂಡ, ಜೈಲು ಕ್ರಮ ತೆಗೆದುಕೊಳ್ಳುವ ಹಾಗು ಸಿನಿಮಾ ಪೈರಸಿ app ಬಂದ್ ಮಾಡುವ ನಿರ್ಧಾರ ಮಾಡಿದ್ದು, ವೈಯಕ್ತಿಕವಾಗಿ ಹಾಗೂ ಭಾರತೀಯ ಚಿತ್ರರಂಗದ ಪರ ಹರ್ಷ ವ್ಯಕ್ತಪಡಿಸುವೆ ಎಂದು ಬರೆದುಕೊಂಡಿದ್ದಾರೆ. ಜಗ್ಗೇಶ್‌ ಪೋಸ್ಟ್ ಈ ರೀತಿ ಇದೆ.

ಬೆಂಗಳೂರಿನ ಕಪಾಲಿ ಟಾಕೀಸ್‌ ಜಾಗದಲ್ಲಿ ತಲೆ ಎತ್ತಿದ ಮಹೇಶ್‌ ಬಾಬು ಒಡೆತನದ AMB ಸಿನಿಮಾಸ್;‌ ಮೊದಲ ದಿನ ಯಾವ ಭಾಷೆಯ ಸಿನಿಮಾಗಳಿಗೆ ಜಾಸ್ತಿ ಶೋ?

ಮೆಜೆಸ್ಟಿಕ್‌ನಲ್ಲಿ ಮಹೇಶ್ ಬಾಬು ಒಡೆತನದ‌ AMB ಸಿನಿಮಾಸ್ ಹೇಗಿದೆ ನೋಡಿ

AMB Cinemas Bengaluru:‌ ದಕ್ಷಿಣ ಭಾರತದ ಅತ್ಯಂತ ಪ್ರತಿಷ್ಠಿತ ಮಲ್ಟಿಪ್ಲೆಕ್ಸ್ ಸರಪಳಿಯಾದ ಎಎಂಬಿ ಸಿನಿಮಾಸ್ (AMB Cinemas), ತನ್ನ ನೂತನ ಶಾಖೆಯನ್ನು ಜನವರಿ 16 ರಂದು ಬೆಂಗಳೂರಿನಲ್ಲಿ ಉದ್ಘಾಟಿಸಲು ಸಜ್ಜಾಗಿದೆ. ಹೈದರಾಬಾದ್‌ನಲ್ಲಿ ಈಗಾಗಲೇ ಅತ್ಯುತ್ತಮ ಸಿನೆಮಾ ಅನುಭವಕ್ಕೆ ಹೆಸರಾಗಿರುವ ಮಹೇಶ್‌ ಬಾಬು ಒಡೆತನದ ಎಎಂಬಿ ಸಿನಿಮಾಸ್, ಈಗ ಅದೇ ವೈಭವವನ್ನು ಉದ್ಯಾನ ನಗರಿ ಬೆಂಗಳೂರಿಗೂ ತರುತ್ತಿದೆ. ಈ ಮಲ್ಟಿಪ್ಲೆಕ್ಸ್‌ನ ಒಳಾಂಗಣದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದರ ವೈಶಿಷ್ಠ್ಯಗಳ ಬಗ್ಗೆ ಇಲ್ಲಿದೆ ಮಾಹಿತಿ.

Bigg Boss 12: ʻವಯಸ್ಸಲ್ಲಿ ನೀವು ದೊಡ್ಡವರು, ನಿಮ್‌ ಮನಸ್ಸಿಗೆ ತುಂಬಾ ನೋವು ಮಾಡಿಬಿಟ್ಟಿದ್ದೀನಿʼ; ಅಶ್ವಿನಿಗೆ ಕ್ಷಮೆ ಕೇಳಿದ ಗಿಲ್ಲಿ ನಟ!

ʻಕ್ಷಮೆʼ ಕೇಳಿದ ಗಿಲ್ಲಿಗೆ ʻಥ್ಯಾಂಕ್ಸ್‌ʼ ಹೇಳಿದ ಅಶ್ವಿನಿ ಗೌಡ; ಯಾಕೆ?

Bigg Boss Kannada 12 Finale: ಬಿಗ್‌ ಬಾಸ್‌ ಕನ್ನಡ 12ರ ಮಹಾ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಮನೆಯಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ನಟ ನಡುವಿನ ದೀರ್ಘಕಾಲದ ವೈಷಮ್ಯಕ್ಕೆ ಸುಖಾಂತ್ಯ ಸಿಕ್ಕಿದೆ. ಆರಂಭದಿಂದಲೂ ಪರಸ್ಪರ ಏಕವಚನದಲ್ಲಿ ಬೈದಾಡಿಕೊಂಡು ಸಖತ್ ಜಗಳ ಆಡುತ್ತಿದ್ದ ಇಬ್ಬರೂ ಈಗ ಭಾವುಕರಾಗಿ ಒಂದಾಗಿದ್ದಾರೆ.

IMDb: 2026ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ರಿವೀಲ್; ಮೊದಲ ಸ್ಥಾನ ಯಾರಿಗೆ? ಈ ಲಿಸ್ಟ್‌ನಲ್ಲಿ ಕನ್ನಡದ ಯಾವ ಚಿತ್ರವಿದೆ?

2026ರ IMDb ಭಾರತದ ‌ಬಹುನಿರೀಕ್ಷಿತ ಸಿನಿಮಾಗಳ ಲಿಸ್ಟ್‌ ರಿಲೀಸ್!

ವಿಶ್ವಾದ್ಯಂತ 250 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಕರು IMDb ವೆಬ್‌ ಸೈಟ್‌ಗೆ ಭೇಟಿ ನೀಡಿದ ಆಧಾರದ ಮೇಲೆ 2026ರ ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಸಾಲಿನಲ್ಲಿ ಶಾರುಖ್‌ ಖಾನ್‌ ಅವರ ಕಿಂಗ್‌ ಸಿನಿಮಾವು ಮೊದಲ ಸ್ಥಾನದಲ್ಲಿದ್ದರೆ, ಯಶ್‌ ನಟಿಸಿ, ನಿರ್ಮಾಣ ಮಾಡುತ್ತಿರುವ ರಾಮಾಯಣ: ಭಾಗ 1 ಮತ್ತು ಟಾಕ್ಸಿಕ್‌ ಸಿನಿಮಾಗಳು ಕ್ರಮವಾಗಿ ಎರಡನೇ ಮತ್ತು ಐದನೇ ಸ್ಥಾನ ಪಡೆದುಕೊಂಡಿದೆ. ಮಿಕ್ಕಂತೆ ಯಾವೆಲ್ಲಾ ಸಿನಿಮಾಗಳಿವೆ? ಇಲ್ಲಿದೆ ನೋಡಿ ಫುಲ್‌ ಲಿಸ್ಟ್‌.

Bigg Boss 12: ʻಕಿಚ್ಚʼ ಸುದೀಪ್‌ಗೆ ತಂದೆಯ ಸ್ಥಾನ ನೀಡಿದ ರಕ್ಷಿತಾ ಶೆಟ್ಟಿ; ʻಬಿಗ್‌ ಬಾಸ್‌ʼ ಮನೆಯಲ್ಲಿ ತುಳುನಾಡ ಹುಡುಗಿಯ ಭರ್ಜರಿ ಜರ್ನಿ

Bigg Boss 12: ʻಕಿಚ್ಚʼ ಸುದೀಪ್‌ಗೆ ತಂದೆಯ ಸ್ಥಾನ ನೀಡಿದೆ ರಕ್ಷಿತಾ ಶೆಟ್ಟಿ

Rakshitha Shetty: ಬಿಗ್ ಬಾಸ್ ಕನ್ನಡ 12ರ ಫಿನಾಲೆ ತಲುಪಿರುವ ಸಂಭ್ರಮದಲ್ಲಿರುವ ರಕ್ಷಿತಾ ಶೆಟ್ಟಿ, ನಿರೂಪಕ ಕಿಚ್ಚ ಸುದೀಪ್ ಅವರಿಗೆ ತಮ್ಮ ಜೀವನದಲ್ಲಿ 'ಎರಡನೇ ಅಪ್ಪ'ನ ಸ್ಥಾನ ನೀಡಿದ್ದಾರೆ. ಮೊದಲ ದಿನವೇ ಮನೆಯವರಿಂದ ಹೊರದಬ್ಬಲ್ಪಟ್ಟು, ಪುನಃ ವಾಪಸ್‌ ಬಂದು ಇದೀಗ ಫಿನಾಲೆ ತಲುಪಿರುವ ರಕ್ಷಿತಾ, ಸುದೀಪ್ ಅವರ ಗುಣವನ್ನು ಅಭಿಮಾನಿಗಳ ಮುಂದೆ ಕೊಂಡಾಡಿದ್ದಾರೆ.

Mango Pachcha: ಸಂಕ್ರಾಂತಿ ಸಂಭ್ರಮಕ್ಕೆ ʻಅರಗಿಣಿಯೇʼ ಎನ್ನುತ್ತಾ ಬಂದ ಸಂಚಿತ್‌ ಸಂಜೀವ್‌; ʻಕಿಚ್ಚʼ ಸುದೀಪ್‌ ಪುತ್ರಿ ಹಾಡಿದ 2ನೇ ಸಾಂಗ್‌ ರಿಲೀಸ್‌

ಸಂಚಿತ್ ಸಂಜೀವ್ `ʻಮ್ಯಾಂಗೋ ಪಚ್ಚʼ ಚಿತ್ರಕ್ಕೆ ಸಾನ್ವಿ ಸುದೀಪ್ ಸಾಥ್

Mango Pachcha Movie: ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಗಾಯಕಿಯಾಗಿ ತಮ್ಮ ಎರಡನೇ ಹಾಡಿನ ಮೂಲಕ ಸದ್ದು ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಸಂಚಿತ್ ಸಂಜೀವ್ ಅಭಿನಯದ 'ಮ್ಯಾಂಗೋ ಪಚ್ಚ' ಚಿತ್ರದ 'ಅರಗಿಣಿಯೇ' ಎಂಬ ರೊಮ್ಯಾಂಟಿಕ್ ವಿಡಿಯೋ ಹಾಡು ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ನೀಡಿರುವ ಈ ಹಾಡನ್ನು ಸಾನ್ವಿ ಸುದೀಪ್ ಮತ್ತು ಕಪಿಲ್ ಕಪಿಲನ್ ಹಾಡಿದ್ದಾರೆ.

Karunya Ram: ಬೆಟ್ಟಿಂಗ್‌ ಆಡಿ ವಂಚನೆ: ತಂಗಿಯ ವಿರುದ್ಧವೇ ನಟಿ ಕಾರುಣ್ಯ ರಾಮ್‌ ದೂರು

ಬೆಟ್ಟಿಂಗ್‌ ಆಡಿ ವಂಚನೆ: ತಂಗಿಯ ವಿರುದ್ಧವೇ ನಟಿ ಕಾರುಣ್ಯ ರಾಮ್‌ ದೂರು

ಮೇಕಪ್ ಆರ್ಟಿಸ್ಟ್‌ ಆಗಿರುವ ಸಹೋದರಿ ಸಮೃದ್ಧಿ ರಾಮ್ ಅವರು ಬೆಟ್ಟಿಂಗ್ ಆಡಿ ಸುಮಾರು 25 ಲಕ್ಷ ರೂ. ಸಾಲ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ವ್ಯವಹಾರದಲ್ಲೂ ಅಪಾರ ನಷ್ಟ ಅನುಭವಿಸಿದ್ದಾರೆ. ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದಾರೆ. ಹೀಗಾಗಿ ಮನೆಯಲ್ಲಿದ್ದ ಚಿನ್ನ ಹಾಗೂ ಹಣವನ್ನು ಸಾಲ ತೀರಿಸಲು ಬಳಸಿಕೊಂಡು ವಂಚಿಸಿದ್ದಾರೆ ಎಂದು ನಟಿ ದೂರು ನೀಡಿದ್ದಾರೆ.

Bigg Boss Kannada 12 Finale: ಮಿಡ್‌ ವೀಕ್‌ನಲ್ಲಿ ಶಾಕ್ ಕೊಟ್ಟ ʻಬಿಗ್‌ ಬಾಸ್‌ʼ; ʻಕಿಚ್ಚನ ಚಪ್ಪಾಳೆʼ ಪಡೆದ ನಾಲ್ಕೇ ದಿನಕ್ಕೆ ದೊಡ್ಮನೆಗೆ ಧ್ರುವಂತ್ ವಿದಾಯ!

BBK 12 Mid Week Elimination: ಧ್ರುವಂತ್‌ - ಕಾವ್ಯ ನಡುವೆ ʻಬಿಗ್ʼ ಫೈಟ್!

BBK 12 Mid Week Elimination: ಬಿಗ್‌ ಬಾಸ್‌ ಕನ್ನಡ 12ರ ಫಿನಾಲೆಗೆ ದಿನಗಣನೆ ಆರಂಭವಾಗಿದ್ದು, ಮಿಡ್‌-ವೀಕ್ ಎಲಿಮಿನೇಷನ್ ಮೂಲಕ ದೊಡ್ಡ ಟ್ವಿಸ್ಟ್ ನೀಡಲಾಗಿದೆ. ಮನೆಯಲ್ಲಿದ್ದ ಏಳು ಮಂದಿಯಲ್ಲಿ ಧನುಷ್ ಈಗಾಗಲೇ ಫಿನಾಲೆ ತಲುಪಿದ್ದು, ಉಳಿದ ಆರು ನಾಮಿನೇಟೆಡ್ ಸದಸ್ಯರಲ್ಲಿ ಧ್ರುವಂತ್ ಮನೆಯಿಂದ ಹೊರಬಿದ್ದಿದ್ದಾರೆ.

Bigg Boss 12 Finale: ʻಕಿಚ್ಚʼ ಸುದೀಪ್‌ರನ್ನು ಕರವೇ ನಾರಾಯಣ ಗೌಡ ಮೀಟ್‌ ಮಾಡಿದ್ದೇಕೆ? ವೈರಲ್‌ ಆಗ್ತಿರುವ ಫೋಟೋಗಳ ಹಿಂದಿದೆ ಬೇರೆಯದೇ ಕಾರಣ!

ʻಕಿಚ್ಚʼ ಸುದೀಪ್‌ರನ್ನು ಕರವೇ ನಾರಾಯಣ ಗೌಡ ಭೇಟಿಯಾಗಿದ್ದೇಕೆ? ಸತ್ಯ ಇಲ್ಲಿದೆ

Bigg Boss Kannada 12‌ Ashwini Gowda: ಬಿಗ್‌ ಬಾಸ್ ಫಿನಾಲೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್‌ರನ್ನು ಕರವೇ ಅಧ್ಯಕ್ಷ ನಾರಾಯಣ ಗೌಡ ಭೇಟಿ ಮಾಡಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಕರವೇಯಲ್ಲಿ ಗುರುತಿಸಿಕೊಂಡಿರುವುದರಿಂದ, ಅವರ ಪರ ಪ್ರಚಾರಕ್ಕೆ ಈ ಭೇಟಿ ನಡೆದಿದೆ ಎಂಬ ವದಂತಿ ಹಬ್ಬಿತ್ತು. ಆದರೆ ಅಸಲಿ ವಿಚಾರವೇ ಬೇರೆ!

Mohanlal: ʻಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲʼ; ಭಾರತದ ಬಹುನಿರೀಕ್ಷಿತ ಸಿಕ್ವೇಲ್‌ ʻದೃಶ್ಯಂ 3ʼ ರಿಲೀಸ್‌ ಡೇಟ್‌ ಘೋಷಣೆ!

ʻದೃಶ್ಯಂ 3ʼ ರಿಲೀಸ್ ಡೇಟ್ ಫಿಕ್ಸ್, ಮತ್ತೆ ಬರ್ತಾನೆ ಜಾರ್ಜ್‌ ಕುಟ್ಟಿ!

Drishyam 3 Update: ಮೋಹನ್‌ಲಾಲ್ ಅಭಿನಯದ ಬಹುನಿರೀಕ್ಷಿತ ಸಸ್ಪೆನ್ಸ್ ಥ್ರಿಲ್ಲರ್ 'ದೃಶ್ಯಂ 3' ಚಿತ್ರದ ಬಿಡುಗಡೆ ದಿನಾಂಕ ಅಧಿಕೃತವಾಗಿ ಪ್ರಕಟವಾಗಿದೆ. ಈ ಸರಣಿಯ ಮೂರನೇ ಭಾಗವು ವಿಶ್ವಾದ್ಯಂತ ಏಪ್ರಿಲ್ 2ರಂದು ತೆರೆಗೆ ಬರಲಿದೆ. "ಭೂತಕಾಲ ಎಂದಿಗೂ ಮೌನವಾಗಿರುವುದಿಲ್ಲ" ಎಂಬ ಟ್ಯಾಗ್‌ಲೈನ್‌ನೊಂದಿಗೆ ಜಾರ್ಜ್‌ಕುಟ್ಟಿ ಮತ್ತು ಆತನ ಕುಟುಂಬದ ರಹಸ್ಯ ಬಯಲಾಗಲಿದೆಯೇ ಎಂಬ ಕುತೂಹಲ ಮೂಡಿಸಿದೆ.

ʻಕೂಲಿʼ ಡೈರೆಕ್ಟರ್‌ ಲೋಕೇಶ್‌ ಜೊತೆ ಕೈಜೋಡಿಸಿದ ಅಲ್ಲು ಅರ್ಜುನ್‌; ಅಭಿಮಾನಿಗಳಿಗೆ ಸದ್ದಿಲ್ಲದೇ ಸಂಕ್ರಾಂತಿ ಬೆಲ್ಲ ತಿನ್ನಿಸಿದ ʻಐಕಾನ್‌ ಸ್ಟಾರ್‌ʼ!

ತಮಿಳು ನಿರ್ದೇಶಕರಿಗೆ ಅಲ್ಲು ಅರ್ಜುನ್ ಫಿದಾ! ಲೋಕೇಶ್ ಜೊತೆ ಹೊಸ ಸಿನಿಮಾ

AA23 Announcement: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ತಮಿಳು ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ #AA23 ಅಧಿಕೃತವಾಗಿ ಘೋಷಣೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯೋಗವಾಗಿ ಬಿಡುಗಡೆಯಾದ ಅನಿಮೇಷನ್ ಮೋಷನ್ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

Chiranjeevi: ಎರಡೇ ದಿನಕ್ಕೆ ಶತಕೋಟಿ ಕ್ಲಬ್‌ಗೆ ಸೇರಿಕೊಂಡ ʻಮನ ಶಂಕರ ವರ ಪ್ರಸಾದ್‌ ಗಾರುʼ; ಬಾಕ್ಸ್‌ ಆಫೀಸ್‌ನಲ್ಲಿ ಎಷ್ಟಾಯ್ತು ಕಲೆಕ್ಷನ್?

'ಮನ ಶಂಕರ ವರ ಪ್ರಸಾದ್‌ ಗಾರು' ಅಬ್ಬರ; ಎರಡೇ ದಿನಕ್ಕೆ 120 ಕೋಟಿ ಕಲೆಕ್ಷನ್!

Mana Shankara Vara Prasada Garu Collection: 'ಮೆಗಾ ಸ್ಟಾರ್' ಚಿರಂಜೀವಿ ಮತ್ತು ನಯನತಾರಾ ಅಭಿನಯದ 'ಮನ ಶಂಕರ ವರ ಪ್ರಸಾದ್‌ ಗಾರು' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಬಿಡುಗಡೆಯಾದ ಎರಡೇ ದಿನಕ್ಕೆ ಈ ಚಿತ್ರವು ವಿಶ್ವಾದ್ಯಂತ ₹120 ಕೋಟಿ ಗಳಿಸಿ ಶತಕೋಟಿ ಕ್ಲಬ್ ಸೇರಿದೆ.

Mana Shankara Vara Prasad Garu: ʻಕಿಚ್ಚʼ ಸುದೀಪ್ ರೀತಿಯಲ್ಲೇ ತಂತ್ರ ಮಾಡಿ ಗೆದ್ದುಬಿಟ್ಟ ʻಮೆಗಾ ಸ್ಟಾರ್‌ʼ ಚಿರಂಜೀವಿ! ಅದು ಹೇಗೆ?

'ಕಿಚ್ಚ' ಸುದೀಪ್ ರೀತಿಯಲ್ಲೇ ರಿಸ್ಕ್ ತೆಗೆದುಕೊಂಡು ಗೆದ್ದ ಚಿರಂಜೀವಿ!

Mana Shankara Vara Prasad Garu: ನಟ ಚಿರಂಜೀವಿ ಅವರು ಈ ಬಾರಿ ಸಂಕ್ರಾಂತಿಗೆ ಕಿಚ್ಚ ಸುದೀಪ್ ಅವರ ತಂತ್ರವನ್ನೇ ಬಳಸಿ ಗೆದ್ದಿದ್ದಾರೆ. ಸುದೀಪ್ ಹೇಗೆ 'ಬಿಲ್ಲಾ ರಂಗ ಬಾಷಾ' ತಡವಾಗಿದ್ದಕ್ಕೆ 'ಮಾರ್ಕ್' ಚಿತ್ರವನ್ನು ವೇಗವಾಗಿ ಮುಗಿಸಿ ಗೆದ್ದರೋ, ಅದೇ ರೀತಿ ಚಿರಂಜೀವಿ ಕೂಡ 'ವಿಶ್ವಂಭರ' ತಡವಾಗಿದ್ದಕ್ಕೆ 'ಮನ ಶಂಕರ ವರಪ್ರಸಾದ್ ಗಾರು' ಚಿತ್ರವನ್ನು ಕೈಗೆತ್ತಿಕೊಂಡು ಬ್ಲಾಕ್‌ಬಸ್ಟರ್ ನೀಡಿದ್ದಾರೆ.

ʻಟಾಕ್ಸಿಕ್ʼ ಟೀಸರ್‌: ಯಶ್ ಜೊತೆ ರೊಮ್ಯಾನ್ಸ್ ಮಾಡಿದ ಬ್ರೆಜಿಲ್ ಬೆಡಗಿ ಇನ್‌ಸ್ಟಾಗ್ರಾಮ್ ಡಿಲೀಟ್! ಅಸಲಿ ಕಾರಣವೇನು?

Toxic: ಯಶ್ ಜೊತೆ ರೊಮ್ಯಾನ್ಸ್ ಮಾಡಿದ್ದ ನಟಿ ಇನ್‌ಸ್ಟಾಗ್ರಾಮ್‌ದಿಂದ ಔಟ್!

Toxic Movie Actress: ಬ್ರೆಜಿಲ್ ಮಾಡೆಲ್ ಬೀಟ್ರಿಜ್ ಟೌಫೆನ್‌ಬಾಚ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಯಶ್ ಜೊತೆಗಿನ ಬೋಲ್ಡ್ ದೃಶ್ಯದ ಮೂಲಕ ಸುದ್ದಿಯಾಗಿದ್ದ ಇವರು, ದಿಢೀರ್ ಪ್ರಚಾರ ಅಥವಾ ಟೀಸರ್ ವಿವಾದದಿಂದ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಊಹಿಸಲಾಗಿದೆ. ನಿರ್ದೇಶಕಿ ಗೀತು ಮೋಹನ್‌ದಾಸ್ ಇವರ ಹೆಸರನ್ನು ರಿವೀಲ್ ಮಾಡಿದ್ದರು.

Bigg Boss Kannada 12: ಮನಿ ಮತ್ತು ಅಭಿಮಾನಿಗೂ ಇರೋ ವ್ಯತ್ಯಾಸ ಏನ್‌ ಗೊತ್ತಾ? ಗಿಲ್ಲಿ ನಟನ ಮಾತಿಗೆ ವೀಕ್ಷಕರು ಫಿದಾ!

ʻಮೀಟರ್ ಇದ್ರೆ ಲಡಾಯಿಸುʼ; ಫ್ಯಾನ್ಸ್ ಎದುರು ಗಿಲ್ಲಿ ನಟನ ಖಡಕ್ ಡೈಲಾಗ್!

Bigg Boss 12 Gilli Nata: ಬಿಗ್‌ ಬಾಸ್‌ ಫಿನಾಲೆ ವಾರದಲ್ಲಿ ಅಭಿಮಾನಿಗಳನ್ನು ಗಿಲ್ಲಿ ನಟ ಭೇಟಿಯಾಗಿದ್ದಾರೆ. ಅವರಿಗೆ 'ಜೋಕರ್' ಎಂದು ಬಿಗ್ ಬಾಸ್ ಬಿಲ್ಡಪ್ ಕೊಟ್ಟಿದ್ದು, ಅಭಿಮಾನಿಯೊಬ್ಬರು ಟ್ಯಾಟೂ ಹಾಕಿಸಿಕೊಂಡು ಬಂದಿರುವುದನ್ನು ಕಂಡು ಗಿಲ್ಲಿ ಭಾವುಕರಾಗಿದ್ದಾರೆ. ಇಂದಿನ ಸಂಚಿಕೆಯಲ್ಲಿ ಈ ರೋಚಕ ಕ್ಷಣಗಳು ಪ್ರಸಾರವಾಗಲಿವೆ.

Photos: 'ಸುವರ್ಣ ಸಂಕ್ರಾಂತಿ' ಸಂಭ್ರಮದಲ್ಲಿ ಸ್ಟಾರ್‌ ಸುವರ್ಣ ತಾರೆಯರ ಸಮಾಗಮ; ಯಾರೆಲ್ಲಾ ಇದ್ದಾರೆ ನೋಡಿ

Photos: ಸುವರ್ಣ ಸಂಕ್ರಾಂತಿ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೀರಿಯಲ್ ತಾರೆಯರು

ಸ್ಟಾರ್ ಸುವರ್ಣ ವಾಹಿನಿಯು ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಅದ್ದೂರಿಯಿಂದ ಆಚರಿಸಲು ಸಜ್ಜಾಗಿದೆ. ಸಾಮಾನ್ಯವಾಗಿ ಸಂಕ್ರಾಂತಿ ಹಬ್ಬದ ದಿನದಂದು ಎಳ್ಳು ಬೆಲ್ಲ, ನೆಲಗಡಲೆ, ಹುರಿಗಡಲೆ, ಸಕ್ಕರೆ ಅಚ್ಚು, ಕೊಬ್ಬರಿ, ಬೆರೆಸಿದ ವಿಶೇಷ ಸಿಹಿಯನ್ನು ದೇವರಿಗೆ ನೈವೇದ್ಯ ಮಾಡಿ ನಂತರ ತಮ್ಮ ಆತ್ಮೀಯರೊಂದಿಗೆ ಹಂಚಿ ಸಂತೋಷವನ್ನು ಪಡುತ್ತಾರೆ. ಹೀಗಾಗಿ ಸ್ಟಾರ್ ಸುವರ್ಣ ವಾಹಿನಿಯು "ಸುವರ್ಣ ಸಂಕ್ರಾಂತಿ ಸಂಭ್ರಮ" ಎಂಬ ಕಾರ್ಯಕ್ರಮವನ್ನು ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ಸ್ಟಾರ್ ಸುವರ್ಣ ಪರಿವಾರದ ಎಲ್ಲಾ ತಾರೆಗಳು ಭಾಗಿಯಾಗಲಿದ್ದಾರೆ. ಇದೇ ಶುಕ್ರವಾರ (ಜ.16) ಸಂಜೆ 6.30 ರಿಂದ 9.30 ರವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

Loading...