Ravichandran: ನನ್ನ ಮನೆ ಮೇಲೆ ಕಲ್ಲು ಬಿಸಾಕಿದ್ರು, ಪ್ರಿಂಟ್ ಸುಟ್ಟಾಕಿದ್ರು.. ರವಿಚಂದ್ರನ್ ಹೀಗಂದಿದ್ದೇಕೆ?
ವರನಟ ಡಾ. ರಾಜ್ ಕುಮಾರ್ ಮತ್ತು ರವಿಚಂದ್ರನ್ ಕುಟುಂಬಗಳ ನಡುವೆ ಉತ್ತಮ ಒಡನಾಟ ಇದ್ದು ಕ್ರೇಜಿ ಸ್ಟಾರ್ ಅವರು ಅಣ್ಣಾವ್ರು ಮಾಡಿದ ಸಹಾಯವೊಂದನ್ನು ಸ್ಮರಿಸಿದ್ದಾರೆ. ಕೆಲವು ದಿನಗಳ ಹಿಂದೆ ರವಿಚಂದ್ರನ್ ಹಂಚಿಕೊಂಡಿದ್ದ ಈ ಒಂದು ಘಟನೆ, ಈ ಎರಡು ಕುಟುಂಬಗಳ ನಡುವೆ ಎಂತಹ ಬಾಂಧವ್ಯ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.


ಬೆಂಗಳೂರು: ಕನ್ನಡ ಚಿತ್ರರಂಗದ ಕನಸುಗಾರ, ಕ್ರೇಜಿಸ್ಟಾರ್, ರವಿಮಾಮ ಹೀಗೆ ಹಲವು ಬಿರುದು ಹೊಂದಿರುವ ನಟ ರವಿಚಂದ್ರನ್ (Ravichandran) ಅನೇಕ ಸೂಪರ್ ಹಿಟ್ ಸಿನಿಮಾ ನೀಡಿದ್ದಾರೆ. ನಟ ರವಿಚಂದ್ರನ್ 1971ರಲ್ಲಿ ಬಾಲ ನಟನಾಗಿ 'ಕುಲ ಗೌರವ' ಸಿನಿಮಾದಲ್ಲಿ ಕಾಣಿಸಿಕೊಂಡರು.ಆ ನಂತರ 'ಪ್ರೇಮಲೋಕ' ಚಿತ್ರದ ಮೂಲಕ ನಿರ್ದೇಶನ ಶುರು ಮಾಡಿ, ದೊಡ್ಡ ಮಟ್ಟದ ಹಿಟ್ ನೀಡಿದರು. ಅಲ್ಲಿಂದ ಶುರುವಾದ ರವಿಚಂದ್ರನ್ ಪ್ರಯಾಣ ಇಂದಿಗೂ ಸಾಗುತ್ತಲೇ ಇದೆ. ಇನ್ನು ವರನಟ' ಡಾ. ರಾಜ್ ಕುಮಾರ್ ಮತ್ತು ರವಿಚಂದ್ರನ್ ಕುಟುಂಬಗಳ ನಡುವೆ ಉತ್ತಮ ಒಡನಾಟ ಇದ್ದು ಕ್ರೇಜಿ ಸ್ಟಾರ್ ಅವರು ಅಣ್ಣಾವ್ರು ಮಾಡಿದ ಸಹಾಯವೊಂದನ್ನು ಸ್ಮರಿಸಿದ್ದಾರೆ. ಕೆಲವು ದಿನಗಳ ಹಿಂದೆ ರವಿಚಂದ್ರನ್ ಹಂಚಿಕೊಂಡಿದ್ದ ಈ ಒಂದು ಘಟನೆ, ಈ ಎರಡು ಕುಟುಂಬಗಳ ನಡುವೆ ಎಂತಹ ಬಾಂಧವ್ಯ ಇದೆ ಎಂಬುದಕ್ಕೆ ಸಾಕ್ಷಿಯಾಗಿದೆ.
1989ರ ಸಂದರ್ಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸ್ಟಾರ್ ಆಗಿ ಬೆಳೆದರು. ಈ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಕಿಂದರಿ ಜೋಗಿ, ಶಾಂತಿ ಕ್ರಾಂತಿ' ಸಿನಿಮಾಗಳು ಬಿಡುಗಡೆಯಾದ ಸಂದರ್ಭ ಅದು. ಆ ಸಮಯದಲ್ಲಿ ವೀರಾಸ್ವಾಮಿ ಮತ್ತು ರವಿಚಂದ್ರನ್ ವಿರುದ್ಧ ತೀವ್ರ ಪ್ರತಿಭಟನೆ ನಡೆಯುತ್ತದೆ.ಕನ್ನಡ ಭಾಷೆಗೆ ರವಿಚಂದ್ರನ್ ಅವಮಾನ ಮಾಡಿದ್ದಾರೆ ಎಂದು ಕನ್ನಡಪರ ಸಂಘಟನೆಗಳು, ಜನರು ಪ್ರತಿಭಟನೆ ಮಾಡ್ತಾರೆ. ರವಿಚಂದ್ರನ್ ಮನೆ ಬಳಿಯೂ ಸಾರ್ವಜನಿಕರು ಜಮಾಯಿಸಿ ಪ್ರತಿಭಟನೆ ಮಾಡುತ್ತಾರೆ. ಆ ಸಂದಿಗ್ಧ ಪರಸ್ಥಿತಿಯಲ್ಲಿ ಅಣ್ಣಾವ್ರು ಬರೆದ ಪತ್ರ ಇಡೀ ಪ್ರತಿಭಟನೆಯನ್ನು ನಿಲ್ಲಿಸಲು ಕಾರಣವಾಯಿತು ಎಂದು ನಟ ರವಿಚಂದ್ರನ್ ಹೇಳಿಕೊಂಡಿದ್ದಾರೆ.
ಒಮ್ಮೆ ನಾವು ಏನೂ ಮಾಡದೇ ಇದ್ದರೂ, ಜನರು ತಪ್ಪು ಕ್ರಿಯೆಟ್ ಮಾಡ್ಕೋತಾರೋ, ಒಟ್ಟಿನಲ್ಲಿ ಒಂದು ಕೆಟ್ಟ ಸಮಯ ಅಂತೂ ಬಂದೇ ಬರುತ್ತದೆ. ಆವಾಗ ನನ್ನ ಮನೆ ಮೇಲೆ ಕಲ್ಲು ಹೊಡಿಯುತ್ತಾರೆ.ನನ್ನ ಪ್ರಿಂಟ್ನೆಲ್ಲಾ ಸುಟ್ಟಾಕುತ್ತಾರೆ..ಆಗ ನನ್ನ ತಂದೆಗೆ ನನ್ನ ಮಗನಿಗೆ ಏನೋ ಮಾಡಿಬಿಡ್ತಾರೆ ಅನ್ನೋ ಆತಂಕ ಇತ್ತು. ಆಗ ನೆರವಿಗೆ ಬಂದಿರುವುದೆ ಅಣ್ಣಾವ್ರು.ಅವರು ನನ್ನ ಪರವಾಗಿ ಅಣ್ಣಾವ್ರು ಪತ್ರ ಬರೆಯುತ್ತಾರೆ.ಅದು ನನಗೆ ಸಿಕ್ಕ ಉತ್ತಮ ಘಳಿಗೆ..ತಾನು ಏನು ಮಾಡಿದ್ದೇನೆ ಎಂಬುದನ್ನು ತಿಳಿಯುವ ಮೊದಲೇ ನನ್ನ ಬೆಂಬಲಕ್ಕೆ ಅವರು ಅವತ್ತು ಬಂದಿದ್ದರು. ಇವತ್ತಿಗೂ ಅಂದು ಏನಾಯ್ತು ಅನ್ನೋದು ಯಾರಿಗೂ ಗೊತ್ತಿಲ್ಲ. ನನಗೂ ಕೂಡ ಗೊತ್ತಿಲ್ಲ. ಆ ವಿಚಾರ ನನಗೆ ಯಾವಾಗಲೂ ಕಾಡುತುತ್ತದೆ" ಎಂದು ರವಿಚಂದ್ರನ್ ಹೇಳಿದ್ದಾರೆ.
1982ರಲ್ಲಿ ಹೀರೋ ಆಗಿ ಸಿನಿಮಾ ರಂಗಕ್ಕೆ ಬಂದ ರವಿಚಂದ್ರನ್, ನಾಲ್ಕು ದಶಕಗಳಿಂದ ಹೆಚ್ಚು ಚಿತ್ರರಂಗ ಆಳಿದ್ದಾರೆ. ಸಾಲು ಸಾಲು ಸಿನಿಮಾಗಳ ಮೂಲಕ ಜನಮನ ಗೆದ್ದಿರುವ ನಟ ಸದ್ಯ ರಿಯಾಲಿಟಿ ಷೋ ಜಡ್ಜ್ ಆಗಿ ಕಾಣಿಸಿಕೊಳ್ಳು ತ್ತಿದ್ದಾರೆ. ನಟ ರವಿಚಂದ್ರನ್ ಅವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ʻಭರ್ಜರಿ ಬ್ಯಾಚುಲರ್ಸ್ʼ ಶೋನ ಜಡ್ಜ್ ಆಗಿದ್ದಾರೆ.