Murder Case: ಬುರ್ಖಾ ಧರಿಸಿ ಮನೆಯೊಳಗೆ ನುಗ್ಗಿ ಯುವತಿಯನ್ನು ಕೊಲೆ ಮಾಡಿದ ವ್ಯಕ್ತಿ; ತನಿಖೆಯಲ್ಲಿ ಅಸಲಿ ಸತ್ಯ ಬಯಲು
ಈಶಾನ್ಯ ದೆಹಲಿಯ ಅಶೋಕ್ ನಗರದಲ್ಲಿ 19 ವರ್ಷದ ಯುವತಿಯನ್ನು ವ್ಯಕ್ತಿಯೋರ್ವ ಕೊಲೆ (Murder Case) ಮಾಡಿದ್ದಾನೆ. ಯುವತಿಯ ಮನೆಯ ಐದನೇ ಮಹಡಿಯಿಂದ ತಳ್ಳಿ ಕೊಂದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಉತ್ತರ ಪ್ರದೇಶದ ರಾಂಪುರ ನಿವಾಸಿ ತೌಫೀಕ್ ಎಂದು ಗುರುತಿಸಲಾಗಿದೆ.


ದೆಹಲಿ: ಈಶಾನ್ಯ ದೆಹಲಿಯ ಅಶೋಕ್ ನಗರದಲ್ಲಿ 19 ವರ್ಷದ ಯುವತಿಯನ್ನು ವ್ಯಕ್ತಿಯೋರ್ವ ಕೊಲೆ (Murder Case) ಮಾಡಿದ್ದಾನೆ. ಯುವತಿಯ ಮನೆಯ ಐದನೇ ಮಹಡಿಯಿಂದ ತಳ್ಳಿ ಕೊಂದ ಆರೋಪದ ಮೇಲೆ 26 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಂಧಿತನನ್ನು ಉತ್ತರ ಪ್ರದೇಶದ ರಾಂಪುರ ನಿವಾಸಿ ತೌಫೀಕ್ ಎಂದು ಗುರುತಿಸಲಾಗಿದೆ. ಕೊಲೆ ಮಾಡಿ ನಂತರ ಆರೋಪಿ ಸ್ವಲ್ಪ ಸಮಯದವರೆಗೆ ತಲೆ ಮರಿಸಿಕೊಂಡಿದ್ದ. ಮಂಗಳವಾರ ತಡರಾತ್ರಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಮೃತ ಯುವತಿಯನ್ನು ನೇಹಾ ಎಂದು ಗುರುತಿಸಲಾಗಿದೆ.
ತನ್ನ ಗುರುತನ್ನು ಮರೆಮಾಚಲು ತೌಫೀಕ್ ಬುರ್ಖಾ ಧರಿಸಿ ವಸತಿ ಕಟ್ಟಡಕ್ಕೆ ಪ್ರವೇಶಿಸಿ ಈ ಕೃತ್ಯ ಎಸಗಿದ್ದಾನೆ. ಮಹಡಿ ಮೇಲಿಂದ ಕೆಳಗೆ ಬಿದ್ದಿರುವುದನ್ನು ನೇಹಾ ಕುಟುಂಬಸ್ಥರು ನೋಡಿದ್ದಾರೆ. ನಂತರ ಕೂಡಲೇ ಅವರನ್ನು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಕೆ ಮೃತಪಟ್ಟಿದ್ದಾಳೆ. ಬಂಧನದ ನಂತರ ವಿಚಾರಣೆಯ ಸಮಯದಲ್ಲಿ, ನೇಹಾಳನ್ನು ನೇರವಾಗಿ ಸಂಪರ್ಕಿಸಲು ತಾನು ವೇಷ ಧರಿಸಿದ್ದಾಗಿ ತೌಫೀಕ್ ಒಪ್ಪಿಕೊಂಡಿದ್ದಾನೆ.
ಸಿಸಿಟಿವಿ ದೃಶ್ಯಾವಳಿಗಳಲ್ಲಿ ಬುರ್ಖಾ ಧರಿಸಿದ ವ್ಯಕ್ತಿಯೊಬ್ಬರು ಕಟ್ಟಡದೊಳಗೆ ಪ್ರವೇಶಿಸಿ ನಂತರ ಅನುಮಾನಾಸ್ಪದ ಸಂದರ್ಭಗಳಲ್ಲಿ ಪರಾರಿಯಾಗುತ್ತಿರುವುದು ಕಂಡುಬಂದಿದೆ. ಸಂಕೀರ್ಣದ ಸುತ್ತಲೂ ಇರಿಸಲಾಗಿರುವ ಬಹು ಕ್ಯಾಮೆರಾಗಳ ದೃಶ್ಯಗಳನ್ನು ಬಳಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ದೆಹಲಿ ಪೊಲೀಸ್ ಮೂಲಗಳ ಪ್ರಕಾರ, ತೌಫೀಕ್ ಮತ್ತು ನೇಹಾ ಹಲವಾರು ತಿಂಗಳುಗಳಿಂದ ಸಂಬಂಧದಲ್ಲಿದ್ದರು. ತೌಫೀಕ್ ತನ್ನ ಕುಟುಂಬದಿಂದ ಏರ್ಪಡಿಸಲ್ಪಟ್ಟ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ಯೋಜಿಸುತ್ತಿದ್ದಾನೆಂದು ನೇಹಾಗೆ ತಿಳಿದಾಗ ಉದ್ವಿಗ್ನತೆ ಉಂಟಾಯಿತು.
ಈ ಸುದ್ದಿಯನ್ನೂ ಓದಿ: Triple Murder Case: ಕಲಬುರಗಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ, ಅಮಾನುಷವಾಗಿ ಕೊಚ್ಚಿ ಮೂವರ ಕೊಲೆ
ನಂತರ ನೇಹಾ ಹಾಗೂ ಆರೋಪಿ ಇಬ್ಬರೂ ಜಗಳವಾಡಿಕೊಂಡಿದ್ದರು. ಆರೋಪಿ ಆಕೆಯ ಮನೆಗೆ ನುಗ್ಗಿದ್ದಾನೆ. ಇಬ್ಬರೂ ಆಕೆಯ ಮನೆ ಮೇಲೆ ನಿಂತು ಮಾತನಾಡುವಾಗ ಜಗಳವಾಡಿಕೊಂಡಿದ್ದಾರೆ. ನಂತರ ಈ ಘಟನೆ ನಡೆದಿದೆ. ನೇಹಾಳ ಕುಟುಂಬ ಈ ಹೇಳಿಕೆಯನ್ನು ವಿರೋಧಿಸುತ್ತದೆ. ನೇಹಾಳಿಗೆ ತೌಫೀಕ್ ಜೊತೆ ಎಂದಿಗೂ ಪ್ರಣಯ ಸಂಬಂಧವಿರಲಿಲ್ಲ ಮತ್ತು ಅವಳು ಅವನಿಗೆ ರಾಖಿ ಕಟ್ಟುತ್ತಿದ್ದಳು ಎಂದು ಆಕೆಯ ತಂದೆ ಹೇಳಿದ್ದಾರೆ. ತೌಫೀಕ್ ಸುಮಾರು ಮೂರು ವರ್ಷಗಳಿಂದ ಪರಿಚಿತನಾಗಿದ್ದು, ಅವನು ಆಗಾಗ್ಗೆ ತಮ್ಮ ಮನೆಗೆ ಭೇಟಿ ನೀಡುತ್ತಿದ್ದ ಎಂದು ಕುಟುಂಬದವರು ಹೇಳಿಕೊಂಡಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.