Physical Assault: ಬರ್ತ್ ಡೇ ಪಾರ್ಟಿ ಮುಗಿಸಿ ವಾಪಸಾಗ್ತಿದ್ದ ಹುಡುಗಿಯರ ಮೇಲೆ ಡೆಡ್ಲಿ ಅಟ್ಯಾಕ್! ರಸ್ತೆಯಲ್ಲಿ ಎಳೆದಾಡಿ, ಬೆರಳನ್ನು ಕಚ್ಚಿ ಹಲ್ಲೆ
ಬರ್ತ್ ಡೇ ಪಾರ್ಟಿ ಮುಗಿಸಿ ವಾಪಸಾಗುತ್ತಿದ್ದ 4 ಜನ ಹುಡುಗಿಯರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಶಾಕಿಂಗ್ ಘಟನೆ ವರದಿಯಾಗಿದೆ. ಯುವತಿರನ್ನು ರಸ್ತೆಯಲ್ಲಿ ಎಳೆದಾಡಿ, ಬೆರಳನ್ನು ಕಚ್ಚಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿರುವ ಘಟನೆ ಛತ್ತೀಸ್ಗಢದಲ್ಲಿ ನಡೆದಿದೆ.


ಛತ್ತೀಸ್ಗಢ: ಇತ್ತೀಚಿನ ದಿನಗಳಲ್ಲಿ ನಡುರಾತ್ರಿ, ನಡುರಸ್ತೆಯಲ್ಲಿ ಯುವಕರ ಹುಚ್ಚಾಟ, ಸಾರ್ವಜನಿಕರಿಗೆ ಕಿರುಕುಳ ಇಂತಹ ಪ್ರಕರಣಗಳು(Physical Assault) ಆಗಾಗ ವರದಿಯಾಗುತ್ತಲೇ ಇರುತ್ತವೆ. ಇದೀಗ ಅಂತಹದ್ದೇ ಒಂದು ಪ್ರಕರಣ ಛತ್ತೀಸ್ಗಢದಲ್ಲಿ ಬೆಳಕಿಗೆ ಬಂದಿದೆ. ಬರ್ತ್ ಡೇ ಪಾರ್ಟಿ ಮುಗಿಸಿ ತಮ್ಮ ತಮ್ಮ ಮನೆಗಳಿಗೆ ವಾಪಸ್ ತೆರಳುತ್ತಿದ್ದ ಹುಡುಗಿಯರನ್ನು ಅಡ್ಡಗಟ್ಟಿದ ಪುಂಡರು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ. ಗುರುವಾರ ರಾತ್ರಿ ಇಲ್ಲಿನ ರಾಯ್ಪುರದ ಮಹಾದೇವ್ ಘಾಟ್ ಬಳಿ ಕೆಲ ಹುಡುಗರು ಯುವತಿಯರ ಮೇಲೆ ಸಾಮೂಹಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬಿಲಾಸ್ಪುರ ಹಾಗೂ ಕೊರ್ಬಾ ಜಿಲ್ಲೆ ಮೂಲದ ಹುಡುಗಿಯರು ಬರ್ತ್ ಡೇ ಪಾರ್ಟಿ ಮುಗಿಸಿ ಹಿಂದಿರುಗುತ್ತಿರುವ ವೇಳೆ ಈ ಘಟನೆ ನಡೆದಿದೆ. ಕಿಡಿಗೇಡಿಗಳು ಯುವತಿಯೊಬ್ಬ ಬೆರಳನ್ನು ಕಚ್ಚಿ ಗಾಯಗೊಳಿಸಿದ್ದಾರೆ.
ವೈರಲ್ ಆಗಿರುವ ವಿಡಿಯೊ ಇಲ್ಲಿದೆ
राजधानी में देर रात बदमाशों के गुट ने मचाया आतंक: बर्थडे पार्टी से लौट रही लड़कियों से की छेड़खानी, विरोध करने पर पीट-पीटकर किया लहूलुहान, घटना का VIDEO वायरल#raipur #CrimeNews #CGNews #volleyballgirls #viralvideo #Chhattisgarh #Bilaspur #lalluramnews @ChhattisgarhCMO… pic.twitter.com/E1WNuUrrOb
— Lallu Ram (@lalluram_news) June 5, 2025
ಇನ್ನು ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊದಲ್ಲಿ ಪುಂಡರು ಯುವತಿಯರನ್ನು ರಸ್ತೆಯಲ್ಲಿ ಅಡ್ಡಗಾಡಿ, ಎಳೆದಾಡಿ ಕಿರುಕುಳ ಕೊಡುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿ ಸೆರೆಯಾಗಿರುವ ದೃಶ್ಯದಲ್ಲಿ ಹುಡುಗನೊಬ್ಬ ಹುಡುಗಿಯರಿಗೆ ಕಿರುಕುಳ ಕೊಡುತ್ತಿದ್ದರೆ, ಇನ್ನಿಬ್ಬರು ಇತರ ಹುಡುಗಿಯರ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನೊಬ್ಬ ಹುಡುಗ ಹುಡುಗಿಯೊಬ್ಬಳ ಕೂದಲು ಹಿಡಿದು ಎಳೆದಾಡುತ್ತಿರುವುದನ್ನು ಕಾಣಬಹುದಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೇಸ್ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ಮಗಳ ಮೇಲೆ ತನ್ನ ಪ್ರಿಯಕರ, ಆತನ ಸ್ನೇಹಿತ ಅತ್ಯಾಚಾರ ಎಸಗೋಕೆ ಹೆತ್ತ ತಾಯಿಯೇ ಸಪೋರ್ಟ್- ಬಿಜೆಪಿ ಮಾಜಿ ನಾಯಕಿ ಅರೆಸ್ಟ್
ಈ ಕುರಿತು ಪ್ರತಿಕ್ರಿಯಿಸಿರುವ ರಾಯ್ಪುರದ ಪೊಲೀಸ್ ಅಧೀಕ್ಷಕ ಉಮೇದ್ ಸಿಂಗ್, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವೈರಲ್ ವಿಡಿಯೊವನ್ನು ಪರಿಶೀಲನೆ ನಡೆಸಿದ್ದೇವೆ. ಆದರೆ ಆರೋಪಿಗಳ ಗುರುತು ಪತ್ತೆಯಾಗಿಲ್ಲ. ತನಿಖೆ ಮುಂದುವರಿದಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.