Crime News: ಬಾರ್ನಲ್ಲಿ ವ್ಯಕ್ತಿಯ ಕೊಲೆ
ತಾಲೂಕಿನ ಕುಡುಮಲ ಕುಂಟೆಯ ಕರ್ನಾಟಕ ಗಡಿ ಭಾಗದಲ್ಲಿ ಕುಡಿದ ಮತ್ತಿನಲ್ಲಿ ಬಾರ್ನಲ್ಲಿ ಗಲಾಟೆ ಮಾಡಿಕೊಂಡು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಂದ್ರ ಗಡಿಯ ಕುಡುಮ ಲಕುಂಟೆ ಗ್ರಾಮದ ಗಂಗೋತ್ರಿ ಬಾರ್ನಲ್ಲಿ ಈ ಕೊಲೆ ನಡೆದಿದೆ. ಹಿಂದೂಪುರ ಮಂಡಲ ತೂಮಕುಂಟೆ ಗ್ರಾಮದ ರವಿಚಂದ್ರ (೪೫) ಕೊಲೆಯಾದ ವ್ಯಕ್ತಿಯಾಗಿದ್ದು, ಇದೇ ಹಿಂದೂಪುರ ಬಾಪೂಜಿ ನಗರದ ಅಶೋಕ್(೩೦) ಕೊಲೆ ಆರೋಪಿಯಾಗಿದ್ದಾನೆ.


ಗೌರಿಬಿದನೂರು : ತಾಲೂಕಿನ ಕುಡುಮಲ ಕುಂಟೆಯ ಕರ್ನಾಟಕ ಗಡಿ ಭಾಗದಲ್ಲಿ ಕುಡಿದ ಮತ್ತಿನಲ್ಲಿ ಬಾರ್ನಲ್ಲಿ ಗಲಾಟೆ ಮಾಡಿಕೊಂಡು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡ ಲಾಗಿದೆ. ಆಂದ್ರ ಗಡಿಯ ಕುಡುಮಲಕುಂಟೆ ಗ್ರಾಮದ ಗಂಗೋತ್ರಿ ಬಾರ್ನಲ್ಲಿ ಈ ಕೊಲೆ ನಡೆದಿದೆ.
ಹಿಂದೂಪುರ ಮಂಡಲ ತೂಮಕುಂಟೆ ಗ್ರಾಮದ ರವಿಚಂದ್ರ (೪೫) ಕೊಲೆಯಾದ ವ್ಯಕ್ತಿಯಾಗಿದ್ದು, ಇದೇ ಹಿಂದೂಪುರ ಬಾಪೂಜಿ ನಗರದ ಅಶೋಕ್(೩೦) ಕೊಲೆ ಆರೋಪಿಯಾಗಿದ್ದಾನೆ.
ಇದನ್ನೂ ಓದಿ: Crime News: ಮಲತಾಯಿಯಿಂದ ವೇಶ್ಯಾವಾಟಿಕೆಗೆ ಒತ್ತಾಯ; ಕಾಪಾಡಿ ಎಂದು ಕಣ್ಣೀರಿಡುತ್ತಾ ಸಹಾಯಕ್ಕೆ ಅಂಗಲಾಚಿದ 9 ವರ್ಷದ ಬಾಲಕಿ
ಚಿಕ್ಕಬಳ್ಳಾಪುರ ಜಿಲ್ಲೆ ಗೌರೀಬಿದನೂರು ತಾಲ್ಲೂಕಿನ ಕುಡುಮಲಕುಂಟೆ ಗ್ರಾಮದಲ್ಲಿ ಆರೋಪಿ ಅಶೋಕ್ ಎಂಬಾತನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ.
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಗೌರೀಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆಸಿದ್ದಾರೆ.