ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಪದೇ ಪದೆ ಮನೆ ಬಿಟ್ಟು ಹೋಗುವ ಪತ್ನಿ, ನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

7 ವರ್ಷಗಳ ಹಿಂದೆ ವಿವಾಹವಾಗಿದ್ದ ಗೋವರ್ಧನ್ ಮತ್ತು ಪ್ರಿಯಾ ದಂಪತಿಗೆ ಎರಡು ಮಕ್ಕಳಿವೆ. ಪ್ರಿಯಾ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು ಎನ್ನುವ ಆರೋಪ ಕೇಳಿಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಖಿನ್ನತೆಗೊಳಗಾಗಿ ಗೋವರ್ಧನ್ ಮನೆಯಲ್ಲಿ ಫ್ಯಾನ್​ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ (Self Harming) ಶರಣಾಗಿದ್ದಾರೆ.

ಪದೇ ಪದೆ ಮನೆ ಬಿಟ್ಟು ಹೋಗುವ ಪತ್ನಿ, ನೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಮೃತ ಗೋವರ್ಧನ್

ಹರೀಶ್‌ ಕೇರ ಹರೀಶ್‌ ಕೇರ Jun 10, 2025 7:53 AM

ಬೆಂಗಳೂರು: ಪದೇ ಪದೆ ಮನೆ ಬಿಟ್ಟು ಹೋಗುವ ಪತ್ನಿಯ (Wife) ವರ್ತನೆಯಿಂದ ಬೇಸತ್ತು ಮಾನಸಿಕ ಖಿನ್ನತೆಗೆ (depression) ಒಳಗಾಗಿದ್ದ ಪತಿ (Husband) ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಬೆಂಗಳೂರಿನ (bengaluru Crime News) ಕೆ.ಪಿ.ಅಗ್ರಹಾರದ 12ನೇ ಮುಖ್ಯರಸ್ತೆಯ ಮನೆಯಲ್ಲಿ ನಡೆದಿದೆ. ಗೋವರ್ಧನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ಹೇಳದೇ ಕೇಳದೇ ಪದೇ ಪದೆ ಮನೆ ಬಿಟ್ಟು ಹೋಗುತ್ತಿದ್ದರಿಂದ ಬೇಸತ್ತು ಗೋವರ್ಧನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪೋಷಕರು ಆರೋಪಿಸಿದ್ದಾರೆ.

7 ವರ್ಷಗಳ ಹಿಂದೆ ವಿವಾಹವಾಗಿದ್ದ ಗೋವರ್ಧನ್ ಮತ್ತು ಪ್ರಿಯಾ ದಂಪತಿಗೆ ಎರಡು ಮಕ್ಕಳಿವೆ. ಪ್ರಿಯಾ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು ಎನ್ನುವ ಆರೋಪ ಕೇಳಿಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಖಿನ್ನತೆಗೊಳಗಾಗಿ ಗೋವರ್ಧನ್ ಮನೆಯಲ್ಲಿ ಫ್ಯಾನ್​ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಗೋವರ್ಧನ್ ಕುಟುಂಬ ಮೂರಂತಸ್ತಿನ ಕಟ್ಟಡದಲ್ಲಿ ವಾಸವಿದೆ. ಗೋವರ್ಧನ್ ತಾಯಿ ಕೆಳ ಮಹಡಿಯಲ್ಲಿ ವಾಸವಿದ್ದರೆ, ಮೇಲ್ಮಹಡಿಯಲ್ಲಿ ಗೋವರ್ದನ್ ಮತ್ತು ಪತ್ನಿ ಪ್ರಿಯಾ ವಾಸವಾಗಿದ್ದರು. ಪತ್ನಿ ಬಿಟ್ಟು ಹೋದ ಮೇಲೆ ಗೋವರ್ಧನ್ ಒಬ್ಬನೇ ವಾಸವಿದ್ದರು. ಜೂನ್ 08ರಂದು ರಾತ್ರಿ‌ ತಾಯಿಯೇ ಊಟ ನೀಡಿ ಬಂದಿದ್ದಳು. ಅಮ್ಮ ಕೊಟ್ಟ ಊಟ ಕೂಡ ಮಾಡದೆ ಹಾಗೇ ಬಿಟ್ಟು ಗೋವರ್ಧನ್ ನೇಣಿಗೆ ಶರಣಾಗಿದ್ದಾರೆ. ಜೂನ್ 09 ಸಂಜೆಯಾದರೂ ಮನೆಯಿಂದ ಗೋವರ್ಧನ್ ಹೊರಬಂದಿರಲಿಲ್ಲ. ಇದರಿಂದ ಸಂಜೆ ಮನೆಗೆ ಹೋಗಿ ನೋಡಿದಾಗ ಆತ್ಮಹತ್ಯೆ ಬೆಳಕಿಗೆ ಬಂದಿದೆ. ಸದ್ಯ ಗೋವರ್ಧನ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿಗೆ ಪತ್ನಿ ಪ್ರಿಯಾ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: Tumkur News: ಕಾಲ್ತುಳಿತದಲ್ಲಿ ಮೃತಪಟ್ಟ ಮನೋಜ್‌ ಕುಟುಂಬಕ್ಕೆ ಮತ್ತೊಂದು ಆಘಾತ; ಮೊಮ್ಮಗನ ಅಗಲಿಕೆ ನೋವಲ್ಲಿ ಅಜ್ಜಿಯೂ ಸಾವು!