ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Pakistan: ಭಾರತ-ಪಾಕ್ ಕದನ ವಿರಾಮದಲ್ಲಿ ಮೂರನೇ ದೇಶದ ಮಧ್ಯಸ್ಥಿಕೆ ಇರಲಿಲ್ಲ: ಪಾಕಿಸ್ತಾನ ಸಚಿವನಿಂದ ಅಚ್ಚರಿಯ ಹೇಳಿಕೆ

ಭಾರತ-ಪಾಕಿಸ್ತಾನ ಕದನ ವಿರಾಮದ ಬಗ್ಗೆ ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ದಾರ್ ಮೊಟ್ಟಮೊದಲ ಬಾರಿಗೆ ಹೇಳಿಕೆ ನೀಡಿದ್ದು, ಭಾರತದೊಂದಿಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೇ ಭಾರತ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ನಿರಾಕರಿಸಿದ್ದು, ಎಂದಿಗೂ ಭಾರತದೊಂದಿಗೆ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಗ್ಗೆ ಪಾಕಿಸ್ತಾನ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರನ್ನು ಕೇಳಿದ್ದಕ್ಕೆ ಅವರು ಭಾರತ ಅದನ್ನು ತಿರಸ್ಕರಿಸಿದೆ ಎಂದು ಹೇಳಿದ್ದಾರೆ.

ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಯನ್ನು ತಿರಿಸ್ಕರಿಸಿದ ಭಾರತ

ಪಾಕ್ ವಿದೇಶಾಂಗ ಸಚಿವ ಇಶಾಕ್‌ ದಾರ್‌ -

Profile Sushmitha Jain Sep 17, 2025 3:30 PM

ನವದೆಹಲಿ: ಆಪರೇಷನ್ ಸಿಂಧೂರ್ (Operation Sindoor) ಸಂದರ್ಭದಲ್ಲಿ ಭಾರತವು ಯಾವುದೇ ಮೂರನೇ ದೇಶದ ಮಧ್ಯಸ್ಥಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿತು ಎಂದು ಪಾಕಿಸ್ತಾನದ (Pakistan) ವಿದೇಶಾಂಗ ಸಚಿವ ಇಶಾಕ್ ದಾರ್ (Ishaq Dar) ಹೇಳಿದ್ದಾರೆ. ಇದು ಭಾರತ-ಪಾಕಿಸ್ತಾನ ಸಂಘರ್ಷವನ್ನು ತಾನೇ ಮಧ್ಯಸ್ಥಿಕೆ ಮಾಡಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಹೇಳಿಕೆಯನ್ನು ತಿರಸ್ಕರಿಸಿದೆ.

ಈ ಬಗ್ಗೆ ಮುಂದುವರಿದು ಸ್ಪಷ್ಟನೆ ನೀಡಿದ ದಾರ್, ಇದೇ ವರ್ಷ ಜುಲೈ 25ರಂದು ವಾಷಿಂಗ್ಟನ್‌ನಲ್ಲಿ ಅಮೆರಿಕಾದ ಸಚಿವ ಮಾರ್ಕೊ ರುಬಿಯೊ ಜೊತೆಗಿನ ಸಭೆಯಲ್ಲಿ ಭಾರತವು “ಇದು ಎರಡು ದೇಶಗಳ ವಿಷಯ” ಎಂದು ಒತ್ತಿಹೇಳಿದೆ ಎಂದರು. ಅಲ್ಲದೇ “ರುಬಿಯೊ ಅವರನ್ನು ಭೇಟಿಯಾದಾಗಲೂ, ಭಾರತ-ಅಮೆರಿಕ ಮಾತುಕತೆ ಬಗ್ಗೆ ಕೇಳಿದೆ. ಭಾರತವು ಇದು ದ್ವಿಪಕ್ಷೀಯ ವಿಷಯ ಎಂದು ಸ್ಪಷ್ಟಪಡಿಸಿತು” ಎಂದು ದಾರ್ ಹೇಳಿದರು.

ಪಾಕಿಸ್ತಾನಕ್ಕೆ ಮಧ್ಯಸ್ಥಿಕೆ ಬಗ್ಗೆ ಆಕ್ಷೇಪವಿಲ್ಲ. ಆದರೆ, ಭಯೋತ್ಪಾದನೆ, ವ್ಯಾಪಾರ, ಆರ್ಥಿಕತೆ, ಜಮ್ಮು-ಕಾಶ್ಮೀರದಂತಹ ವಿಷಯಗಳಲ್ಲಿ ಸಂಪೂರ್ಣ ಚರ್ಚೆಯಾಗಬೇಕು ಎಂದು ಅವರು ಒತ್ತಾಯಿಸಿದರು. ಈ ತಿಂಗಳ ಆರಂಭದಲ್ಲಿ, ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ದಾಳಿಯಿಂದ ನಷ್ಟವಾದ ನಂತರ ಪಾಕಿಸ್ತಾನವೇ ಕದನವಿರಾಮ ಕೇಳಿತ್ತು ಎಂದು ದಾರ್ ಒಪ್ಪಿಕೊಂಡಿದ್ದಾರೆ.

ಮೇ.10ರಂದು ಭಾರತ-ಪಾಕ್ ಕದನ ವಿರಾಮಕ್ಕೆ ನಾನು ಮಧ್ಯಸ್ಥಿಕೆ ಮಾಡಿದ್ದೆ ಎಂದು ಟ್ರಂಪ್ ಟ್ರೂತ್ ಸೋಷಿಯಲ್‌ನಲ್ಲಿ ಬರೆದಿದ್ದರು. ಇದನ್ನು 40ಕ್ಕೂ ಹೆಚ್ಚು ಬಾರಿ ಯುರೋಪ್ ಮತ್ತು ನ್ಯಾಟೋ ಅಧಿಕಾರಿಗಳಿಗೆ ಪುನರಾವರ್ತಿಸಿದ್ದಾರೆ. ಆದರೆ, ಭಾರತವು ಅಮೆರಿಕ ಮಧ್ಯಸ್ಥಿಕೆ ಇರಲಿಲ್ಲ, ದ್ವಿಪಕ್ಷೀಯ ಮಾತುಕತೆಯಿಂದ ಕದನ ವಿರಾಮ ಆಯಿತು ಎಂದು ಸ್ಪಷ್ಟಪಡಿಸಿದೆ.

ಈ ಸುದ್ದಿಯನ್ನು ಓದಿ: Physical Assault: 14 ಪುರುಷರಿಂದ ಬಾಲಕನ ಮೇಲೆ ನಿರಂತರ ಲೈಂಗಿಕ ದೌರ್ಜನ್ಯ; ರಾಜಕಾರಣಿ ಸೇರಿ ಒಂಬತ್ತು ಮಂದಿ ಮೇಲೆ ಕೇಸ್‌

ದಾರ್‌ ಹೇಳಿಕೆಯಿಂದ ಬಿಜೆಪಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಟೀಕಿಸಿದೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ‘X’ನಲ್ಲಿ, “ಯಾವುದೇ ಮಧ್ಯಸ್ಥಿಕೆ ಇಲ್ಲ. ಭಾರತವು ತೃತೀಯ ಪಕ್ಷದ ಮಧ್ಯಸ್ಥಿಕೆ ತಿರಸ್ಕರಿಸಿತ್ತು. ರಾಹುಲ್ ಗಾಂಧಿ, ಪಾಕ್ ಸಚಿವ ಇಶಾಕ್ ದಾರ್‌ ಮಾತು ಕೇಳಿ. ಪಾಕ್ ಪ್ರಚಾರವನ್ನು ಬಿಡಿ” ಎಂದಿದ್ದಾರೆ.

ಏಪ್ರಿಲ್ 22ರ ಪಹಲ್ಗಾಂ ದಾಳಿಯ ನಂತರ, ಭಾರತವು ಪಾಕಿಸ್ತಾನ ಮತ್ತು PoKನಲ್ಲಿ ಭಯೋತ್ಪಾದಕ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿತು. ಮೇ.10ರಂದು ದ್ವಿಪಕ್ಷೀಯ ಮಾತುಕತೆಯಿಂದ ಕದನ ವಿರಾಮ ಘೋಷಿಸಲಾಯಿತು. ಭಾರತದ ವಿದೇಶಾಂಗ ಸಚಿವಾಲಯವು ಟ್ರಂಪ್‌ ಹೆಳಿಕೆಯನ್ನು ತಿರಸ್ಕರಿಸಿತು. ಈ ಘಟನೆಯು ಭಾರತ-ಪಾಕ್ ಸಂಬಂಧಗಳ ಬಗ್ಗೆ ಚರ್ಚೆಯನ್ನು ತೀವ್ರಗೊಳಿಸಿದೆ. ಭಾರತವು ದ್ವಿಪಕ್ಷೀಯ ಮಾತುಕತೆಗೆ ಒತ್ತು ನೀಡಿದೆ, ಇದು ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಗಮನ ಸೆಳೆದಿದೆ.