ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Diljit Dosanjh: ಕಾಂತಾರ ಖ್ಯಾತಿಯ ಗಾಯಕನಿಗೆ ಮತ್ತೆ ಜೀವ ಬೆದರಿಕೆ; ಮತ್ತೆ ಮತ್ತೆ ಯಾಕ್‌ ಹೀಗಾಗ್ತಿದೆ?

Life Threats: ಪರ್ತ್‌ ನಂತರ ಇದೀಗ ಜನಪ್ರಿಯ ಗಾಯಕ ದಿಲ್‌ಜಿತ್ ದೋಸಾಂಜ್ ಅವರ ಆಕ್ಲೆಂಡ್ ಶೋಗೂ ಖಲಿಸ್ತಾನಿ ಉಗ್ರಗಾಮಿಗಳಿಂದ ಬೆದರಿಕೆಗಳು ಬಂದಿವೆ. ಅಮೆರಿಕ ಮೂಲದ ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನುನ್ ನೇತೃತ್ವದ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ (SFJ) ನಿಂದ ಈ ಬೆದರಿಕೆಗಳು ಬರುತ್ತಿವೆ.

ಕಾಂತಾರ ಖ್ಯಾತಿಯ ಗಾಯಕನಿಗೆ ಮತ್ತೆ ಜೀವ ಬೆದರಿಕೆ

ಗಾಯಕ ದಿಲ್ಜಿತ್ ದೋಸಾಂಜ್‍ (ಸಂಗ್ರಹ ಚಿತ್ರ) -

Priyanka P
Priyanka P Nov 10, 2025 3:04 PM

ಆಕ್ಲೆಂಡ್‌: ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ (Diljit Dosanjh) ಮತ್ತೊಮ್ಮೆ ಖಲಿಸ್ತಾನಿ ಉಗ್ರಗಾಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ನ್ಯೂಜಿಲೆಂಡ್‌ನ ಆಕ್ಲೆಂಡ್‌ನಲ್ಲಿ ಅವರ ಮುಂಬರುವ ಸಂಗೀತ ಕಚೇರಿಗೆ ಖಲಿಸ್ತಾನ್ ಪರ ಗುಂಪುಗಳಿಂದ ಬೆದರಿಕೆ (Khalistani Threats) ಇದೆ ಎಂದು ವರದಿಯಾಗಿದೆ. ಹೌದು, ಪರ್ತ್‌ನಲ್ಲಿ ನಡೆದ ತಮ್ಮ ಸಂಗೀತ ಕಚೇರಿಯಲ್ಲಿ ಇದೇ ರೀತಿಯ ಅಡಚಣೆಗಳು ವರದಿಯಾದ ಕೆಲವೇ ದಿನಗಳಲ್ಲಿ ಗಾಯಕ-ನಟ ದಿಲ್ಜಿತ್ ದೋಸಾಂಜ್ ಅವರಿಗೆ ಖಲಿಸ್ತಾನಿ ಬೆಂಬಲಿಗರಿಂದ ಹೊಸ ಬೆದರಿಕೆಗಳು ಎದುರಾಗಿವೆ. ಅವರ ಸಂಗೀತ ಪ್ರದರ್ಶನದ ಸಮಯದಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಮೊಳಗಿಸಲಾಯಿತು. ಇದೀಗ ಆಕ್ಲೆಂಡ್‌ನಲ್ಲಿ ಅವರ ಮುಂದಿನ ಪ್ರದರ್ಶನಕ್ಕೆ ಈಗ ಎಚ್ಚರಿಕೆ ನೀಡಲಾಗಿದೆ.

ಅಮೆರಿಕ ಮೂಲದ ಉಗ್ರಗಾಮಿ ಗುರುಪತ್ವಂತ್ ಸಿಂಗ್ ಪನ್ನುನ್ ನೇತೃತ್ವದ ನಿಷೇಧಿತ ಖಲಿಸ್ತಾನಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟೀಸ್ (SFJ) ನಿಂದ ಈ ಬೆದರಿಕೆಗಳು ಬರುತ್ತಿವೆ. ಈ ಸಂಘಟನೆಯು ಈ ಹಿಂದೆಯೂ ಗಾಯಕನನ್ನು ಗುರಿಯಾಗಿಸಿಕೊಂಡಿತ್ತು. ಹೆಚ್ಚುತ್ತಿರುವ ಒತ್ತಡದ ಹೊರತಾಗಿಯೂ, ದೋಸಾಂಜ್ ಇದರ ತಲೆಕೆಡಿಸಿಕೊಳ್ಳುತ್ತಿಲ್ಲ. ಅವರು ತಮ್ಮ ಸಂಗೀತ ಕಚೇರಿಯ ಹರ್ಷಚಿತ್ತದಿಂದ ಕೂಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.

ಇದನ್ನೂ ಓದಿ: Diljit Dosanjh: 'ಕಾಂತಾರ' ಚಿತ್ರ ವೀಕ್ಷಿಸಲು ಕಾನ್ಸರ್ಟ್ ರದ್ದುಗೊಳಿಸಿದ್ದ ದಿಲ್ಜಿತ್ ದೋಸಾಂಜ್; ಅಪರೂಪದ ವಿಚಾರ ಬಹಿರಂಗಪಡಿಸಿದ ರಿಷಬ್‌ ಶೆಟ್ಟಿ

ಅಮಿತಾಬ್ ಬಚ್ಚನ್ ಅವರ ಕೌನ್ ಬನೇಗಾ ಕರೋಡ್‍ಪತಿ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ಗಾಯಕ ಖಲಿಸ್ತಾನಿ ಉಗ್ರಗಾಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗೌರವದ ಸೂಚಕವಾಗಿ ದೋಸಾಂಜ್ ಅವರು ಬಿಗ್‍ಬಿ ಅಮಿತಾಬ್ ಬಚ್ಚನ್ ಅವರ ಪಾದಗಳನ್ನು ಮುಟ್ಟುವುದರ ಪ್ರೋಮೋ ವೈರಲ್ ಆದ ನಂತರ ಈ ಸಮಸ್ಯೆ ಪ್ರಾರಂಭವಾಯಿತು. ಅಕ್ಟೋಬರ್ 29 ರಂದು SFJ ಅವರ ವಿರುದ್ಧ ಬೆದರಿಕೆ ಹಾಕಿತು. ಬಚ್ಚನ್ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಗಾಯಕ, 1984ರ ಸಿಖ್ ನರಮೇಧದ ಪ್ರತಿಯೊಬ್ಬ ಬಲಿಪಶು, ಪ್ರತಿಯೊಬ್ಬ ವಿಧವೆ ಮತ್ತು ಪ್ರತಿಯೊಬ್ಬ ಅನಾಥರನ್ನು ಅವಮಾನಿಸಿದ್ದಾರೆ ಎಂದು ಹೇಳಿಕೊಂಡಿತು.

ಬೆದರಿಕೆಗಳಿಗೆ ದಿಲ್ಜಿತ್ ಪ್ರತಿಕ್ರಿಯೆ

ಹೆಚ್ಚುತ್ತಿರುವ ಬೆದರಿಕೆಗಳ ನಡುವೆಯೂ, ದೋಸಾಂಜ್ ಅವರು ಪರಿಸ್ಥಿತಿಯನ್ನು ಶಾಂತಿಯುತ ರೀತಿಯಲ್ಲಿ ನಿಭಾಯಿಸಿದರು. ಇತ್ತೀಚಿನ ಬ್ರಿಸ್ಬೇನ್ ಸಂಗೀತ ಕಚೇರಿಯಲ್ಲಿ, ಅವರು ಅಭಿಮಾನಿಗಳನ್ನು ಏಕತೆ ಮತ್ತು ಪ್ರೀತಿಯ ಮೇಲೆ ಕೇಂದ್ರೀಕರಿಸುವಂತೆ ಒತ್ತಾಯಿಸಿದರು. ನನ್ನ ಕಡೆಯಿಂದ ಎಲ್ಲರಿಗೂ ಪ್ರೀತಿ ಮಾತ್ರ ಇರುತ್ತದೆ. ಯಾರಾದರೂ ನನ್ನ ಬಗ್ಗೆ ಅಸೂಯೆ ಪಟ್ಟರೂ ಅಥವಾ ನನ್ನನ್ನು ಟ್ರೋಲ್ ಮಾಡಿದರೂ ಸಹ ನಾನು ಯಾವಾಗಲೂ ಪ್ರೀತಿಯ ಸಂದೇಶವನ್ನು ಹರಡುತ್ತೇನೆ ಎಂದು ಕಾರ್ಯಕ್ರಮದ ಸಮಯದಲ್ಲಿ ದಿಲ್ಜಿತ್ ಹೇಳಿದರು.

ದೇವರು ನಮಗೆ ಇಂಥದ್ದು ಕೊಟ್ಟಿದ್ದಾನೆ ಎಂದು ಬಹುತೇಕರು ಹೇಳುತ್ತಾರೆ. ನೀವು ಏನಾದರೂ ಪಡೆದಿದ್ದೀರಿ ಎಂದರೆ ಅದನ್ನು ಯಾಕೆ ಹೇಳಬೇಕು? ಒಬ್ಬ ವ್ಯಕ್ತಿಯು ತನ್ನ ಹೃದಯದಲ್ಲಿ ಏನು ಮಾಡಬೇಕು ಎಂದು ಮಾತ್ರ ಯೋಚಿಸಬೇಕು ಎಂದು ಗಾಯಕ ಹೇಳಿದರು.