Indians rescued: ಇರಾನ್ನಲ್ಲಿ ಮೂವರು ಭಾರತೀಯರ ಕಿಡ್ನ್ಯಾಪ್- ಇವ್ರು ಬದುಕುಳಿದಿದ್ದೇ ರೋಚಕ!
ಕಳೆದ ತಿಂಗಳ ಮೇ 1ರಂದು ಆಸ್ಟ್ರೇಲಿಯಕ್ಕೆ ಹೋಗುವ ಮಾರ್ಗದಲ್ಲಿ ಇರಾನ್ ಗೆ ತೆರಳಿದ್ದ ಮೂವರು ಭಾರತೀಯರನ್ನು ಅಪಹರಿಸಲಾಗಿತ್ತು. ಅಪಹರಣಕ್ಕೆ ಒಳಗಾದ ಪಂಜಾಬ್ ನ ಹುಶನ್ಪ್ರೀತ್ ಸಿಂಗ್, ಜಸ್ಪಾಲ್ ಸಿಂಗ್ ಮತ್ತು ಅಮೃತ್ಪಾಲ್ ಸಿಂಗ್ ಅವರನ್ನು ರಕ್ಷಿಸಿ ಬಿಡುಗಡೆ (Indians rescued) ಮಾಡಲಾಗಿದೆ ಎಂದು ಇರಾನ್ನ ಅರೆ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ.


ಟೆಹ್ರಾನ್: ಇರಾನ್ನಲ್ಲಿ (Iran) ನಾಪತ್ತೆಯಾಗಿದ್ದ ಮೂವರು ಭಾರತೀಯ ಪ್ರಜೆಗಳನ್ನು ( Indian nationals) ರಕ್ಷಿಸಲಾಗಿದೆ. ಕಳೆದ ತಿಂಗಳ ಆರಂಭದಲ್ಲಿ ಮೂವರು ಭಾರತೀಯರನ್ನು ಆಸ್ಟ್ರೇಲಿಯಕ್ಕೆಹೋಗುವ ಮಾರ್ಗದಲ್ಲಿ ಇರಾನ್ ಗೆ ಆಗಮಿಸಿದಾಗ ಅವರನ್ನು ಅಪಹರಿಸಲಾಗಿತ್ತು. ಸಂಗ್ರೂರಿನ ಹುಶನ್ಪ್ರೀತ್ ಸಿಂಗ್, ಎಸ್ಬಿಎಸ್ ನಗರದ ಜಸ್ಪಾಲ್ ಸಿಂಗ್ ಮತ್ತು ಪಂಜಾಬ್ನ ಹೋಶಿಯಾರ್ಪುರದ ಅಮೃತ್ಪಾಲ್ ಸಿಂಗ್ ಅಪಹರಣಕ್ಕೆ ಒಳಗಾದವರು. ಇವರನ್ನು ದಕ್ಷಿಣ ಟೆಹ್ರಾನ್ನ ವರಮಿನ್ ಪಟ್ಟಣದಲ್ಲಿ ಟೆಹ್ರಾನ್ ಪೊಲೀಸರು(Tehran Police) ರಕ್ಷಿಸಿದ್ದಾರೆ (Indians rescued) ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮ ವರದಿ ಮಾಡಿದೆ.
ಕಳೆದ ತಿಂಗಳ ಮೇ 1ರಂದು ಆಸ್ಟ್ರೇಲಿಯಕ್ಕೆ ಹೋಗುವ ಮಾರ್ಗದಲ್ಲಿ ಇರಾನ್ ಗೆ ತೆರಳಿದ್ದ ಮೂವರು ಭಾರತೀಯರನ್ನು ಅಪಹರಿಸಲಾಗಿತ್ತು. ಅಪಹರಣಕ್ಕೆ ಒಳಗಾದ ಪಂಜಾಬ್ ನ ಹುಶನ್ಪ್ರೀತ್ ಸಿಂಗ್, ಜಸ್ಪಾಲ್ ಸಿಂಗ್ ಮತ್ತು ಅಮೃತ್ಪಾಲ್ ಸಿಂಗ್ ಅವರನ್ನು ರಕ್ಷಿಸಿ ಬಿಡುಗಡೆ ಮಾಡಲಾಗಿದೆ ಎಂದು ಇರಾನ್ನ ಅರೆ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ತಸ್ನಿಮ್ ಸುದ್ದಿ ಸಂಸ್ಥೆ ತಿಳಿಸಿದೆ.
ಈ ಕುರಿತು ಭಾರತದ ಇರಾನ್ ರಾಯಭಾರ ಕಚೇರಿಯೂ ಟ್ವೀಟ್ ಮಾಡಿದೆ. ದಕ್ಷಿಣ ಟೆಹ್ರಾನ್ನ ವರಮಿನ್ ಪಟ್ಟಣದಲ್ಲಿ ಅಪಹರಣಕಾರರಿಂದ ಈ ಮೂವರನ್ನು ರಕ್ಷಿಸಲಾಗಿದೆ. ಟೆಹ್ರಾನ್ ಪೊಲೀಸರು ರಕ್ಷಣೆ ಕಾರ್ಯವನ್ನು ಕೈಗೊಂಡಿದ್ದರು.
Three missing Indian citizens freed by Tehran police
— Iran in India (@Iran_in_India) June 3, 2025
Local media in Iran say police have found and released three Indian men who had gone missing in Iran.https://t.co/YAkirkKRHg
ಹುಶನ್ಪ್ರೀತ್ ಸಿಂಗ್, ಜಸ್ಪಾಲ್ ಸಿಂಗ್ ಮತ್ತು ಅಮೃತ್ಪಾಲ್ ಸಿಂಗ್ ಅವರು ಆಸ್ಟ್ರೇಲಿಯಕ್ಕೆ ಹೋಗುವ ಮಾರ್ಗದಲ್ಲಿ ಇರಾನ್ಗೆ ಆಗಮಿಸಿದಾಗ ಅಲ್ಲಿ ಅವರಿಗೆ ಸ್ಥಳೀಯ ಪ್ರಯಾಣ ಕಂಪೆನಿಯಿಂದ ಉದ್ಯೋಗದ ಭರವಸೆ ನೀಡಿ ಅಪಹರಣಕಾರರು ಕರೆದುಕೊಂಡು ಹೋಗಿದ್ದರು. ಅವರು ಬಂದಿಳಿದ ದಿನವೇ ಅಪಹರಣ ನಡೆದಿರುವ ಬಗ್ಗೆ ಟೆಹ್ರಾನ್ ಪೊಲೀಸರಿಗೆ ದೂರು ಸಲ್ಲಿಸಲಾಗಿತ್ತು.
ಇದನ್ನೂ ಓದಿ: Suhas Shetty murder case: ಸುಹಾಸ್ ಶೆಟ್ಟಿ ಕೊಲೆಯ ಮತ್ತೊಬ್ಬ ಆರೋಪಿ, ಅಬ್ದುಲ್ ರಹಿಮಾನ್ ಕೊಲೆಯ ಇಬ್ಬರು ಆರೋಪಿಗಳ ಬಂಧನ
ಈ ಕುರಿತು ಮೇ 29ರಂದು ನವದೆಹಲಿಯಲ್ಲಿರುವ ಇರಾನ್ ರಾಯಭಾರ ಕಚೇರಿಯು ತನಿಖೆ ನಡೆಸುತ್ತಿರುವುದಾಗಿ ದೃಢಪಡಿಸಿದೆ. ನ್ಯಾಯಾಂಗ ಅಧಿಕಾರಿಗಳ ಸಮನ್ವಯದೊಂದಿಗೆ ಪ್ರಕರಣವನ್ನು ಇರಾನ್ನ ವಿದೇಶಾಂಗ ಸಚಿವಾಲಯವು ಮೇಲ್ವಿಚಾರಣೆ ನಡೆಸುತ್ತಿತ್ತು.
ಕಾಣೆಯಾದವರಲ್ಲಿ ಸಂಗ್ರೂರಿನ ನಿವಾಸಿಯಾಗಿರುವ ಹುಸನ್ಪ್ರೀತ್ ಕುಟುಂಬಕ್ಕೆ ಅಪಹರಣಕಾರರು ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಅವರ ತಾಯಿ ನೀಡಿರುವ ಮಾಹಿತಿ ಪ್ರಕಾರ ಟ್ರಾವೆಲ್ ಏಜೆಂಟ್ಗಳು ಹಣ ಪಡೆದು ಹುಸೇನ್ ಪ್ರೀತ್ ರನ್ನು ಆಸ್ಟ್ರೇಲಿಯಕ್ಕೆ ಕಳುಹಿಸುವ ಬದಲು ಡಂಕಿ ಮಾರ್ಗದ ಮೂಲಕ ಇರಾನ್ಗೆ ಕಳುಹಿಸಿದ್ದಾರೆ. ಅಲ್ಲದೇ ಅಪಹರಣಕ್ಕೆ ಒಳಗಾದ ಯುವಕ ಗಾಯಗೊಂಡಿರುವ ಚಿತ್ರ, ವಿಡಿಯೊಗಳನ್ನು ಕೂಡ ಅಪಹರಣಕಾರರು ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.