Health Tips: ತೂಕ ಇಳಿಸ್ಬೇಕಾ? ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಗೆ ಖರ್ಜೂರ ಸೇವಿಸಿ!

ನಿತ್ಯ ಪ್ರೊಟೀನ್‌ಯುಕ್ತ, ಕಡಿಮೆ ಕ್ಯಾಲೊರಿ ಇರುವ ಆಹಾರ ಸೇವಿಸುವುದು ಕಷ್ಟ ಎನ್ನುವವರು ನಿತ್ಯ ಖರ್ಜೂರ ಸೇವನೆ ಮಾಡುವುದರಿಂದ ಸುಲಭವಾಗಿ ತೂಕ ಇಳಿಸಬಹುದು.ಖರ್ಜೂರದಲ್ಲಿ ಇರುವ ಕೊಬ್ಬಿನ ಆಮ್ಲದಿಂದ ಉರಿಯೂತ ಕಡಿಮೆ ಮಾಡಬಹುದು. ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹ ,ಬೊಜ್ಜು ಇತರ ಸಮಸ್ಯೆ ತಡೆಯುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿದ್ದು ಅತಿಯಾಗಿ ಹಸಿವಾದಾಗ ಎರಡು ಖರ್ಜೂರ ಸೇವನೆ ಮಾಡಿದರೂ ಹಸಿವು ನೀಗಲಿದೆ

Dates
Profile Pushpa Kumari Feb 7, 2025 6:00 AM

ನವದೆಹಲಿ: ದೇಹದ ತೂಕ ಇಳಿಸಲು ಜಿಮ್ ವರ್ಕ್ ಔಟ್ ಮಾಡುವ ಜೊತೆಗೆ ಆಹಾರದಲ್ಲಿ ಕೂಡ ಕೆಲವು ಬದಲಾವಣೆ ಮಾಡುವುದು ಬಹಳ ಮುಖ್ಯ‌(Health tips). ನಿತ್ಯ ಪ್ರೋಟಿನ್ ಯುಕ್ತ ,ಕಡಿಮೆ ಕ್ಯಾಲೋರಿ ಇರುವ ಆಹಾರ ಸೇವಿಸುವುದು ಕಷ್ಟ ಎನ್ನುವವರು ನಿತ್ಯ ಖರ್ಜೂರ (Dates) ಸೇವನೆ ಮಾಡುವುದರಿಂದ ಸುಲಭವಾಗಿ ತೂಕ ಇಳಿಸಬಹುದು. ಖರ್ಜೂರ ತಿನ್ನಲು ರುಚಿ ಇರುವ ಜೊತೆಗೆ ದೇಹದ ಆರೋಗ್ಯ ಸಮಸ್ಥಿತಿ ಇಡಲು ಬೇಕಾದ ಪೋಷಕಾಂಶಗಳನ್ನು ನೀಡಲಿದೆ. ಸಣ್ಣ ಆಗಬೇಕು ಎಂದು ಡಯಟ್ ಮಾಡುವವರು ನಿತ್ಯ 2-3 ಖರ್ಜೂರ ಸೇವನೆ ಮಾಡಿದರೆ ಅನೇಕ ಆರೋಗ್ಯ ಪ್ರಯೋಜನ ಕೂಡ ಸಿಗಲಿದೆ.

ಈ ಎಲ್ಲ ಆರೋಗ್ಯ ಪ್ರಯೋಜನ ಸಿಗಲಿದೆ!

ಅಧಿಕ ಫೈಬರ್ ನಿಂದ ಆರೋಗ್ಯ ವೃದ್ಧಿ: ದೇಹದ ತೂಕ ಇಳಿಸುವವರು ಅಧಿಕ ಪ್ರೋಟಿನ್ ಆಹಾರ ತಿನ್ನಬೇಕು. ಈ ನಿಟ್ಟಿನಲ್ಲಿ ಖರ್ಜೂರದ ಸೇವನೆಯಿಂದ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟಿನ್ ಲಭ್ಯ ವಾಗಲಿದೆ. ಖರ್ಜೂರದಲ್ಲಿ ನಾರಿನ ಅಂಶ ಹೇರಳ ವಾಗಿದೆ. ಇದರಿಂದಾಗಿ ಜೀರ್ಣಕ್ರಿಯೆ ಪ್ರಕ್ರಿಯೆ ಸರಾಗವಾಗಲಿದೆ. ಚಯಾಪಚಯ ಪ್ರಕ್ರಿಯೆ ಉತ್ತಮವಾಗಿ ಇರುವ ಕಾರಣಕ್ಕೆ ದೇಹದ ಆರೋಗ್ಯ ಸುಸ್ಥಿತಿಯಲ್ಲಿ ಇಡಲಿದ್ದು ಮಲಬದ್ಧತೆ, ಅಸಿಡಿಟಿ ಸಮಸ್ಯೆ ನಿವಾರಣೆ ಯಲ್ಲಿಯೂ ಖರ್ಜೂರ ಸೇವನೆ ಪ್ರಧಾನ ಪಾತ್ರ ವಹಿಸಲಿದೆ.

ಬೊಜ್ಜು ಕರಗಿ ದೇಹದ ತೂಕ ಇಳಿಯಲಿದೆ: ಖರ್ಜೂರದಲ್ಲಿ ಇರುವ ಕೊಬ್ಬಿನ ಆಮ್ಲದಿಂದ ಉರಿಯೂತ ಕಡಿಮೆ ಮಾಡಬಹುದು. ಇದರ ಸೇವನೆಯಿಂದ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟು ಮಧುಮೇಹ , ಬೊಜ್ಜು ಇತರ ಸಮಸ್ಯೆ ತಡೆಯುತ್ತದೆ. ಖರ್ಜೂರದಲ್ಲಿ ಕ್ಯಾಲ್ಸಿಯಂ, ಮೆಗ್ನೀಸಿಯಂ ಸೇರಿದಂತೆ ವಿವಿಧ ಖನಿಜಗಳು ಹೇರಳವಾಗಿದ್ದು ಅತೀಯಾಗಿ ಹಸಿವಾದಾಗ ಎರಡು ಖರ್ಜೂರ ಸೇವನೆ ಮಾಡಿದರೂ ಹಸಿವು ನೀಗಲಿದೆ. ಹಾಗಾಗಿ ದೇಹದ ತೂಕ ಹೆಚ್ಚಾಗುವುದು ತಡೆಹಿಡಿದಂತಾಗಲಿದೆ.

ನೋವಿನ ಶಮನ: ಅತಿಯಾದ ದೇಹ ತೂಕದಿಂದ ಮೂಳೆ ನೋವು, ಸಂಧಿವಾತ, ಕೀಲು ನೋವಿನ ಸಮಸ್ಯೆ ಹೊಂದಿದ್ದರೆ ಕ್ಯಾಲ್ಸಿಯಂ ಪ್ರಮಾಣ ಹೊಂದಿರುವ ಖರ್ಜೂರ ಸೇವನೆಮಾಡಬೇಕು ಅದು ಇಂತಹ ನೋವಿನ ಶಮನ ಮಾಡುವ ನೆಲೆಯಲ್ಲಿ ಕೂಡ ಸಹಕಾರಿಯಾಗಲಿದೆ.

ರಕ್ತ ಹೀನತೆ ಸಮಸ್ಯೆ ನಿವಾರಣೆ: ಖರ್ಜೂರ ಸೇವನೆಯು ದೇಹದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುವ ಮೂಲಕ ಬೊಜ್ಜು ನಿವಾರಕವಾಗಲಿದೆ. ಇದರ ಜೊತೆಗೆ ಹೃದಯ ಸಂಬಂಧಿತ ಸಮಸ್ಯೆಗಳ ಉಪಶಮನಕ್ಕೂ ಕೂಡ ಖರ್ಜೂರ ಬಹಳ ಉತ್ತಮ ಎನ್ನಬಹುದು. ಖರ್ಜೂರದಲ್ಲಿ ವಿಟಮಿನ್ ಸಿ ಪ್ರಮಾಣವಿದ್ದು ಇದರಿಂದ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಇದ್ದರೆ ಅದು ನಿವಾರಣೆ ಮಾಡಲಿದೆ.

ಇದನ್ನು ಓದಿ: Health Tips: ನೀರು ಕುಡಿದ ಕೂಡಲೇ ಈ ತೊಂದರೆ ಕಾಣಿಸ್ತಿದ್ಯಾ? ಕಿಡ್ನಿ ಸಮಸ್ಯೆ ಇವೆ ಎನ್ನುವ ಲಕ್ಷಣಗಳಿವು!

ಈ ತಪ್ಪು ಮಾಡದಿರಿ! ಖರ್ಜೂರ ಸೇವನೆ ಮಾಡಿದರೆ ದೇಹದ ತೂಕ ಇಳಿಯುವುದು ನಿಜವೇ ಆಗಿದ್ದರೂ ಕೂಡ ನೀವು ಅದನ್ನು ಯಾವ ಪ್ರಮಾಣದಲ್ಲಿ ಸೇವನೆ ಮಾಡುತ್ತಿದ್ದೀರಿ ಎಂಬುದು ಬಹಳ ಮುಖ್ಯ. ನೀವು ದಿನಕ್ಕೆ ಹೆಚ್ಚೆಂದರೆ 4 ಖರ್ಜೂರ ಸೇವನೆ ಮಾಡುವುದು ದೇಹದ ತೂಕ ಇಳಿಸುವ ನೆಲೆಯಲ್ಲಿ ಸಹಕಾರಿ. ಆದರೆ ಬಾಯಿಗೆ ರುಚಿಯೆಂದು ಬಹಳ ಸೇವಿಸಿ ಬಿಟ್ಟರೆ ಇದು ದೇಹದ ತೂಕ ಹೆಚ್ಚಾಗುವಂತೆ ಮಾಡಲಿದೆ. ಹಾಗಾಗಿ ತೂಕ ಇಳಿಸುವವರು ಈ ತಪ್ಪು ಮಾಡದಿರಿ.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?