ವೈಎಸ್ ಎಸ್ / ಎಸ್ ಆರ್ ಎಫ್ ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥ ಸ್ವಾಮಿ ಶ್ರೀ ಶ್ರೀ ಚಿದಾನಂದ ಗಿರಿಯವರಿಂದ ಸ್ಪೂರ್ತಿದಾಯಕ ಪ್ರವಚನ

ನಾವು ಈಗ ಮಾನವನ ವಿಕಸನದ ಏರುಗತಿಯಲ್ಲಿದ್ದೇವೆ. ಯುವ ಪೀಳಿಗೆಯು ಈ ಪ್ರಪಂಚವನ್ನು ಉನ್ನತ ಮಟ್ಟದ ಪ್ರಜ್ಞೆಯ ಕಾಲದೆಡೆಗೆ ಕರೆದೊಯ್ಯುತ್ತದೆ. ಕ್ರಿಯಾ ಯೋಗದಂತಹ ಪುರಾತನ ವಿಜ್ಞಾ ನಗಳು ಈ ಪರಿವರ್ತನಾ ಯುಗದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುತ್ತವೆ" ಎಂದು ಸ್ವಾಮೀಜಿ ಹೇಳಿದರು

Adhayatma
Profile Ashok Nayak Feb 4, 2025 9:58 PM

ಅರಮನೆ ಮೈದಾನದಲ್ಲಿ 2000ಕ್ಕಿಂತಲೂ ಅಧಿಕ ಸಭಿಕರನ್ನುದ್ದೇಶಿಸಿ ಮಾತನಾಡುತ್ತಾ ವೈಎಸ್ ಎಸ್ / ಎಸ್ ಆರ್ ಎಫ್ ನ ಅಧ್ಯಕ್ಷರು ಹಾಗೂ ಆಧ್ಯಾತ್ಮಿಕ ಮುಖ್ಯಸ್ಥ ಶ್ರೀ ಶ್ರೀ ಚಿದಾನಂದ ಗಿರಿಯವರು ಕ್ರಿಯಾ ಯೋಗವು ಮಾನವನ ವಿಕಸನಕ್ಕೆ ಒಂದು ಪರಿಣಾಮಕಾರಿ ವೈಜ್ಞಾನಿಕ ವಿಜ್ಞಾನ ವಾಗಿದೆ ಎಂಬುದರ ಬಗ್ಗೆ ಒಂದು ಸ್ಪೂರ್ತಿದಾಯಕ ಪ್ರವಚನ ನೀಡಿದರು.

ಅತ್ಯಧಿಕವಾಗಿ ಮಾರಾಟವಾಗುತ್ತಿರುವ ಮೇರುಕೃತಿ 'ಯೋಗಿಯ ಆತ್ಮಕಥೆಯ' ಲೇಖಕರಾದ, ಜಗದ್ವಿಖ್ಯಾತ ಗುರುಗಳಾದ ಶ್ರೀ ಪರಮಹಂಸ ಯೋಗಾನಂದರ ಕಾರ್ಯಗಳ ಅಂತರ್ ದೃಷ್ಟಿಯನ್ನು ಸ್ವಾಮೀಜಿ ಸಭಿಕರೊಡನೆ ಹಂಚಿಕೊಂಡರು. ಪಶ್ಚಿಮದಲ್ಲಿ 'ಯೋಗ ಪಿತಾಮಹ' ಎಂದು ಪ್ರಖ್ಯಾತ ರಾದ ಯೋಗಾನಂದರು ತಮ್ಮ ಈ ಮೂಲ ಕಾರ್ಯದ ಮೂಲಕ ಲಕ್ಷಾಂತರ ಅನ್ವೇಷಕ ರನ್ನು ಭಾರತದ ಈ ಪುರಾತನ ವಿಜ್ಞಾನಕ್ಕೆ ಪರಿಚಯಿಸಿದರು.

ಇದನ್ನೂ ಓದಿ: Ganesh Bhatta Column: ರಥಸಪ್ತಮಿ: ಸೂರ್ಯನ ಮಹತ್ವವನ್ನು ಸಾರುವ ಪರ್ವ

"ನಾವು ಈಗ ಮಾನವನ ವಿಕಸನದ ಏರುಗತಿಯಲ್ಲಿದ್ದೇವೆ. ಯುವ ಪೀಳಿಗೆಯು ಈ ಪ್ರಪಂಚವನ್ನು ಉನ್ನತ ಮಟ್ಟದ ಪ್ರಜ್ಞೆಯ ಕಾಲದೆಡೆಗೆ ಕರೆದೊಯ್ಯುತ್ತದೆ. ಕ್ರಿಯಾ ಯೋಗದಂತಹ ಪುರಾತನ ವಿಜ್ಞಾನಗಳು ಈ ಪರಿವರ್ತನಾ ಯುಗದಲ್ಲಿ ಒಂದು ಮಹತ್ವದ ಪಾತ್ರವನ್ನು ವಹಿಸುತ್ತವೆ" ಎಂದು ಸ್ವಾಮೀಜಿ ಹೇಳಿದರು. ವಿಜ್ಞಾನ ಹಾಗೂ ತಂತ್ರಜ್ಞಾನದ ಯುಗಕ್ಕಾಗಿ ಹಿಮಾಲಯದ ಅಮರ ಗುರುಗಳಾದ ಮಹಾವತಾರ್ ಬಾಬಾಜಿ ಕ್ರಿಯಾ ಯೋಗವನ್ನು ಮತ್ತೆ ಹೇಗೆ ಬಳಕೆಗೆ ತಂದರು ಎಂಬುದನ್ನು ಸ್ವಾಮೀಜಿ ವಿವರಿಸಿದರು.

"'ಕ್ರಿಯಾ ಯೋಗ'ವು ಧರ್ಮ ಮತ್ತು ಜಾತಿಯ ಬೇಧಭಾವವಿಲ್ಲದೆ ಎಲ್ಲ ಮನುಷ್ಯರೂ ಅಭ್ಯಾಸ ಮಾಡಬಹುದಾದ ಖಚಿತ ವಿಜ್ಞಾನವಾಗಿದೆ. ಮನುಷ್ಯನಲ್ಲಿ ಅಂತರ್ನಿಹಿತವಾಗಿರುವ ದಿವ್ಯ ಆಂತ ರಿಕ ಮೂಲದೊಡನೆ ನೇರ ಸಂಪರ್ಕವನ್ನೇರ್ಪಡಿಸುತ್ತಾ, ಕ್ರಿಯಾ ಯೋಗವು ಮೇಲ್ ಸ್ತರದ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ ಮತ್ತು ಆಂತರಿಕ ಶಾಂತಿಯ ಮೂಲವಾಗುತ್ತದೆ ಮತ್ತು ಎಲ್ಲ ಮಾನವೀಯ ಕಷ್ಟಗಳಿಗೆ ವಿಷಹಾರಿಯಾಗುತ್ತದೆ" ಎಂದು ಸ್ವಾಮೀಜಿ ನುಡಿದರು.

ಶ್ರೀ ಶ್ರೀ ಪರಮಹಂಸ ಯೋಗಾನಂದರ ಬೋಧನೆಗಳು ಹಾಗೂ ಅವರ ಸಂಸ್ಥೆಯ ಬಗ್ಗೆ ಒತ್ತು ನೀಡುತ್ತಾ ಸ್ವಾಮೀಜಿ, "ಕ್ರಿಯಾ ಯೋಗವು ಎಲ್ಲ ರಾಷ್ಟ್ರಗಳಲ್ಲೂ ಪ್ರಸರಿಸುತ್ತದೆ ಮತ್ತು ಜಗತ್ತಿನ ಬದಲಾವಣೆಗೆ ಸಹಾಯ ಮಾಡುತ್ತದೆ" ಎಂದು ಹೇಳಿದರು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?