Bagepally News: ರಸ್ತೆ ಸರಿಪಡಿಸುವಂತೆ ಒತ್ತಾಯಿಸಿ ಕರವೆಯಿಂದ ರಸ್ತೆಯಲ್ಲಿ ಪೈರು ನಾಟಿ ಮಾಡಿ ವಿನೂತನ ಪ್ರತಿಭಟನೆ
ಬಾಗೇಪಲ್ಲಿ ಪಟ್ಟಣದ ಕೇಂದ್ರದಲ್ಲಿ 6 ಮತ್ತು 7 ನೇ ವಾರ್ಡಿನ ಮೂಲಕ ಕೊತ್ತಪಲ್ಲಿ ಗ್ರಾಮಕ್ಕೆ ಸಂಚರಿ ಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಈ ರಸ್ತೆಯಲ್ಲಿ ಒಂದು ಎರಡು ಅಡಿಗಳ ಅಳದ ಗುಣಿ ಗಳಿವೆ, ಇಲ್ಲಿ ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ.

-

ಬಾಗೇಪಲ್ಲಿ: ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡಿಗರ ಸಾರಥ್ಯದಲ್ಲಿ ಚಳುವಳಿ ಡಾ.ಚಲಪತಿ ಗೌಡರ ಬಣದ ತಾಲ್ಲೂಕು ಅಧ್ಯಕ್ಷ ಬಿ.ಎ.ಬಾಬಾಜಾನ್ ನೇತೃತ್ವದಲ್ಲಿ ಬಾಗೇಪಲ್ಲಿ ಪಟ್ಟಣದ 6 ಮತ್ತು 7ನೇ ವಾರ್ಡಿನ ಮೂಲಕ ಕೊತ್ತಪಲ್ಲಿ ಗ್ರಾಮಕ್ಕೆ ಸಂಚರಿಸುವ ರಸ್ತೆಯನ್ನು ಸರಿಪಡಿಸಲು ಒತ್ತಾಯಿಸಿ, ಗುಂಡಿಗಳಲ್ಲಿ ಪೈರು ನಾಟಿ ಮಾಡುವ ಮೂಲಕ ವಿನೂತನವಾಗಿ ಪ್ರತಿಭಟಿಸಲಾಯಿತು.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಈ ವೇಳೆ ಕರವೇ ಕಾರ್ಯಕರ್ತರು ಪಿಡಬ್ಲ್ಯೂಡಿ ಇಲಾಖೆ, ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆಗೆ ಸ್ಥಳೀಯ ನಿವಾಸಿಗಳು ಕೂಡ ಕೈ ಜೋಡಿಸಿ ಬೆಂಬಲ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: Bagepally News: ಶಾಸಕರ ಕರೆ ಸ್ವೀಕರಿಸದ ಅಧಿಕಾರಿ ಅಮಾನತು
ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಬಿ.ಎ.ಬಾಬಾಜಾನ್ ಮಾತನಾಡಿ, ಬಾಗೇಪಲ್ಲಿ ಪಟ್ಟಣದ ಕೇಂದ್ರದಲ್ಲಿ 6 ಮತ್ತು 7 ನೇ ವಾರ್ಡಿನ ಮೂಲಕ ಕೊತ್ತಪಲ್ಲಿ ಗ್ರಾಮಕ್ಕೆ ಸಂಚರಿಸುವ ರಸ್ತೆಯು ಸಂಪೂರ್ಣವಾಗಿ ಹಾಳಾಗಿದೆ. ಈ ರಸ್ತೆಯಲ್ಲಿ ಒಂದು ಎರಡು ಅಡಿಗಳ ಅಳದ ಗುಣಿಗಳಿವೆ, ಇಲ್ಲಿ ಪಾದಚಾರಿಗಳು, ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ.ಮುಖ್ಯವಾಗಿ ಈ ರಸ್ತೆಯಲ್ಲಿ ಎರಡು ಶಾಲೆಗಳು, ಎರಡು ಕುಡಿಯುವ ನೀರಿನ ಮಾರಾಟ ಕೇಂದ್ರಗಳು, ಕೊತ್ತಪಲ್ಲಿ ಗ್ರಾಮ, ಕೊತ್ತಪಲ್ಲಿ ಸರ್ಕಾರಿ ಶಾಲೆ, ಮಸೀದಿ ಜೊತೆಗೆ ರಸ್ತೆ ಅಕ್ಕಪಕ್ಕ ನೂರಾರು ಕುಟಂಬಗಳು ಪ್ರತಿನಿತ್ಯವೂ ಈ ರಸ್ತೆಯಲ್ಲಿ ಸಾವಿರಾರು ಜನರು ಸಂಚರಿಸಬೇಕಾಗಿದೆ.
ಈ ರಸ್ತೆ ಹಾಳಾಗಿ 10 ವರ್ಷಗಳು ಕಳೆದರೂ ಸಹ ಸಂಬಂಧಪಟ್ಟ ಇಲಾಖೆಯವರೂ ಆಗಲೀ, ಅಧಿಕಾರಿಗಳಾಗಲೀ ಸುಗಮ ಸಂಚಾರಕ್ಕೆ ಉತ್ತಮ ರಸ್ತೆಯನ್ನು ನಿರ್ಮಿಸುತ್ತಿಲ್ಲ. ಇದ್ದರಿಂದ ಪ್ರತಿನಿತ್ಯವೂ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಕೆಟ್ಡ ಹೋದ ರಸ್ತೆಯಲ್ಲಿ ಇದುವರೆಗೂ ಹಲವಾರು ಅಪಘಾತಗಳಾಗಿವೆ, ಮಳೆ ಬಂತ್ತು ಎಂದರೇ ಈ ರಸ್ತೆಯಲ್ಲಿ ಒಡಾಡಲು ಸಾಧ್ಯವಿಲ್ಲದಂತಾಗಿದೆ. ಜೊತೆಗೆ ಅವೈಜ್ಞಾನಿಕ ಚರಂಡಿ ವ್ಯವಸ್ಥೆಯಿಂದ ಚರಡಿ ನೀರು ರಸ್ತೆಗೆ ಬರುತ್ತಿದೆ.
ಇದರಿಂದ ಈ ರಸ್ತೆಯಲ್ಲಿರುವ ಶಾಲೆಗೆ ಹೋಗುವ ಪುಟ್ಡ ಪುಟ್ಟ ಮಕ್ಕಳು ಚರಂಡಿ ನೀರಿನ ಮೇಲೆ ಸಂಚರಿಸಿ ಹಲವಾರು ರೋಗಗಳು ಬರುತ್ತಿವೆ ಇದ್ದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಬೀರ ಪರಿಣಾಮ ಬೀಳುತ್ತಿದೆ. ಇಷ್ಟೇಲ್ಲ ಸಮಸ್ಯೆಗಳನ್ನು ಸಾರ್ವಜನಿಕರು ಅನುಭವಿಸುತ್ತಿದ್ದರು.
ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಗಾಡ ನಿದ್ರೆಯಲ್ಲಿದ್ದಾರೆ. ಅದ್ದರಿಂದ ಇಂದು ಸಾಂಕೇತಿಕ ವಾಗಿ ಪ್ರತಿಭಟನೆ ಮಾಡುತ್ತಿದ್ದು, ಬಾಗೇಪಲ್ಲಿ ಪಟ್ಟಣದಿಂದ ಕೊತ್ತಪಲ್ಲಿ ಗ್ರಾಮಕ್ಕೆ ಸಂಪರ್ಕದ ರಸ್ತೆಯು ಕೆಟ್ಟು ಹೋಗಿದು ಒಂದು ತಿಂಗಳ ಕಾಲಾವಧಿಯಲ್ಲಿ ಉತ್ತಮ ರಸ್ತೆಯನ್ನು ನಿರ್ಮಿಸಬೇಕು ಇಲ್ಲವಾದಲ್ಲಿ ಕರವೇಯಿಂದ ಸಂಬಂಧಪಟ್ಟ ಇಲಾಖೆಯ ಕಛೇರಿಗಳ ಮುಂದೆ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ರವೀಂದ್ರ, ಕರವೇ ಮುಖಂಡರಾದ ಷೇಕ್ ಹಿದಾಯಿತ್ರುಲ್ಲಾ, .ವೆಂಕಟಶಿವಪ್ಪ, ರಿಯಾಜ್ ಅಹಮದ್ ಸಲಿಂ, ಮಂಜು ನಾಥ, ಇದ್ರೀಸ್ ವುಲ್ಲಾ, ಸುಹೇಲ್, ವಿಷ್ಣು, ಮುಬಾರಕ್, ,ಪಕೃದ್ದಿನ್, ಮದುಸುದನ್, ಚರಣ್, ಸಾದಿಕ್ ಮತ್ತಿತರರು ಹಾಜರಿದ್ದರು.