Chikkaballapur News: ಶಾಂತಿ, ಸೌಹಾರ್ಧತೆಯಿಂದ ಎಲ್ಲಾ ಸಮುದಾಯಗಳ ಸಹಯೋಗದೊಂದಿಗೆ ಬಕ್ರೀದ್ ಹಬ್ಬ ಆಚರಿಸಿ.
ಮೆರವಣಿಗೆ ಹೋಗುವಾಗ ಮತ್ತು ವಾಪಸ್ ಬರುವಾಗ ವಾಹನಗಳ ಅಪಘಾತಗಳ ಸಂದರ್ಭವಿರು ತ್ತದೆ. ವಾಹನ ಟಚ್ ಆಗಿದೆ ಎಂದು ಅನ್ಯ ಕೋಮಿನವರೊಂದಿಗೆ ಗಲಾಟೆಯಾಗುವ ಸಂಭವವಿದೆ. ದ್ವಿಚಕ್ರವಾಹನಗಳ ವೀಲಿಂಗ್, ತ್ರಿಬಲ್ ರೈಡಿಂಗ್, ವೇಗವಾಗಿ ಚಲಾಯಿಸುವುದನ್ನು ಮಾಡಬಾ ರದು. ಮಸೀದಿಗಳಲ್ಲಿ ಹುಡುಗರಿಗೆ ಮತ್ತು ಯುವಕರಿಗೆ ಈ ರೀತಿ ಮಾಡಬಾರದು ಎಂದು ಬುದ್ದಿ ಹೇಳಬೇಕು.


ನಗರದ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಬಕ್ರೀದ್ ಶಾಂತಿ ಸಮಿತಿ ಸಭೆಯಲ್ಲಿ ಅಡಿಷನಲ್ ಎಸ್ಪಿ ಜಗನ್ನಾಥರೈ ಮನವಿ
ಚಿಂತಾಮಣಿ: ಶಾಂತಿ, ಸೌಹಾರ್ಧತೆಯಿಂದ ಎಲ್ಲಾ ಸಮುದಾಯಗಳ ಸಹಯೋಗದೊಂದಿಗೆ ಬಕ್ರೀದ್ ಹಬ್ಬವನ್ನು ಆಚರಿಸಬೇಕು.ಯಾವುದೇ ಅಶಾಂತಿ, ಅಹಿತಕರ ಘಟನೆಗಳು, ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಅಡಿಷನಲ್ ಎಸ್ಪಿ ಜಗನ್ನಾಥರೈ ಮನವಿ ಮಾಡಿದರು.
ನಗರದ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ಬಕ್ರೀದ್ ಶಾಂತಿ ಸಮಿತಿ ಸಭೆಯಲ್ಲಿ ಮಾತನಾಡಿದರು ನಗರ ಹಾಗೂ ತಾಲ್ಲೂಕಿನಲ್ಲಿ ವಿವಿಧ ಸಮುದಾಯಗಳ ನಡುವೆ ಉತ್ತಮ ಬಾಂಧವ್ಯವಿದೆ. ಯಾವುದೇ ಕಾರಣಕ್ಕೂ ಅದನ್ನು ಮುರಿಯುವಂತಹ ಪ್ರಕರಣಗಳಿಗೆ ಅವಕಾಶ ನೀಡಬಾರದು. ಹಬ್ಬದ ಅಂಗವಾಗಿ ಹೆಚ್ಚಾಗಿ ಮಾಂಸಾಹಾರಕ್ಕಾಗಿ ಬಳಸುವ ಪ್ರಾಣಿಗಳ ಕಸವನ್ನು ಎಲ್ಲೆಂದರಲ್ಲಿ ಬಿಸಾಡಬಾರದು.ಈ ರೀತಿ ಬಿಸಾಡುವುದರಿಂದಲೇ ಗಲಾಟೆಗಳಿಗೆ ಕಾರಣವಾಗುವ ಅನೇಕ ಪ್ರಕರಣ ಗಳು ನಡೆದಿವೆ. ನಗರಸಭೆಯ ವಾಹನ ಬರುತ್ತದೆ.ಕಡ್ಡಾಯವಾಗಿ ವೇಸ್ಟ್ ನ್ನು ಲಾರಿಗಳಿಗೆ ನೀಡಬೇಕು ಎಂದು ಸಲಹೆ ನೀಡಿದರು.
ಡಿವೈಎಸ್ಪಿ ಪಿ ಮುರಳೀಧರ್ ಮಾತನಾಡಿ ಪ್ಲೆಕ್ಸ್ ಮತ್ತು ಬ್ಯಾನರ್ ಗಳನ್ನು ಸಾಧ್ಯವಾದಷ್ಟು ಕಟ್ಟಬಾರದು. ಕಟ್ಟಬೇಕಾದರೆ ನಗರಸಭೆ ಅನುಮತಿಯನ್ನು ಪಡೆದು ಎತ್ತರವಾದ ಮತ್ತು ಸಿಸಿ ಕ್ಯಾಮರಾಗಳು ಇರುವ ಕಡೆ ಕಟ್ಟಬೇಕು. ಹರಿದು ಹಾಕಿದರು, ಕಿತ್ತು ಹಾಕಿದರು ಎಂದು ಸಣ್ಣ ಪುಟ್ಟ ಗಲಾಟೆಗಳಿಗೆ ಅವಕಾಶ ನೀಡಬಾರದು.ಪೊಲೀಸರು ಸಹ ಪೆಟ್ರೋಲಿಂಗ್ ಮಾಡುತ್ತಾರೆ ಎಂದರು.
ಮೆರವಣಿಗೆ ಹೋಗುವಾಗ ಮತ್ತು ವಾಪಸ್ ಬರುವಾಗ ವಾಹನಗಳ ಅಪಘಾತಗಳ ಸಂದರ್ಭವಿರು ತ್ತದೆ. ವಾಹನ ಟಚ್ ಆಗಿದೆ ಎಂದು ಅನ್ಯ ಕೋಮಿನವರೊಂದಿಗೆ ಗಲಾಟೆಯಾಗುವ ಸಂಭವವಿದೆ. ದ್ವಿಚಕ್ರವಾಹನಗಳ ವೀಲಿಂಗ್, ತ್ರಿಬಲ್ ರೈಡಿಂಗ್, ವೇಗವಾಗಿ ಚಲಾಯಿಸುವುದನ್ನು ಮಾಡಬಾ ರದು. ಮಸೀದಿಗಳಲ್ಲಿ ಹುಡುಗರಿಗೆ ಮತ್ತು ಯುವಕರಿಗೆ ಈ ರೀತಿ ಮಾಡಬಾರದು ಎಂದು ಬುದ್ದಿ ಹೇಳಬೇಕು. ನಗರದಲ್ಲೂ ಹೆಜ್ಜೆ ಹೆಜ್ಜೆಗೂ ಸಿಸಿ ಕ್ಯಾಮರಾಗಳಿವೆ.ಪ್ರಕರಣಗಳು ಕಂಡುಬಂದರೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
ಅಪಘಾತಗಳು ನಡೆದಾಗ ಅನಗತ್ಯವಾಗಿ ಜನ ಗುಂಪು ಸೇರುವುದು ಸರಿಯಲ್ಲ. ಇತ್ತೀಚೆಗೆ ಆಸ್ಪತ್ರೆ ಮುಂದೆ ನೂರಾರು ಜನರು ಸೇರಿದ್ದರು.ಶಿಡ್ಲಘಟ್ಟ ರಸ್ತೆ,ಕೋಲಾರ ಕ್ರಾಸ್ ನಲ್ಲೂ ಇದೇ ರೀತಿ ಯಾಗಿತ್ತು. ಅಪಘಾತವಾದರೆ ದೂರು ನೀಡುತ್ತಾರೆ,ಪೊಲೀಸರು ಕ್ರಮಕೈಗೊಳ್ಳುತ್ತಾರೆ. ಅನಗತ್ಯವಾಗಿ ಗುಂಪು ಸೇರುವುದು ತುಂಬಾ ಅಪಾಯಕಾರಿ.ಪೊಲೀಸರು ಶಕ್ತಿಯನ್ನು ಬಳಸಿ ಚದುರಿಸ ಬೇಕಾಗುತ್ತದೆ. ಅಂತಹ ಘಟನೆಗಳಿಗೆ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ನಂತರ ಚಿಂತಾಮಣಿ ಜಾಮಿಯಾ ಮಸೀದಿ ಅಧ್ಯಕ್ಷರಾದ ಮೂನ್ ಸ್ಟಾರ್ ಗೌಸ್ ಪಾಷಾ ರವರು ಮಾತನಾಡಿ ಪ್ರತಿ ವರ್ಷ ತರ ಈ ವರ್ಷವೂ ಶನಿವಾರದಂದು ಆಚರಿಸುವ ಬಕ್ರಿದ್ ಹಬ್ಬವನ್ನು ಬೆಳಗ್ಗೆ ಒಂಬತ್ತು ಗಂಟೆಯಿಂದ ದೊಡ್ಡಪೇಟೆಯಲ್ಲಿರುವ ಜಾಮಿಯ ಮಸೀದಿಯಿಂದ ಹೊರಡು ನಂತರ ಒಂಬತ್ತು ವರೆಗೆ ಘಂಟೆಗೆ ಶಿಡ್ಲಘಟ್ಟ ರಸ್ತೆಯಲ್ಲಿರುವ ಈದ್ಗಾ ಮೈದಾನಕ್ಕೆ ಸೇರಿ ಸಾಮೂ ಹಿಕ ಪ್ರಾರ್ಥನೆ ಸಲ್ಲಿಸಲಾಗುವುದು ಇದಕ್ಕೆ ಎಲ್ಲಾ ಮುಸ್ಲಿಂ ಬಾಂಧವರು ನಮಾಜ್ ಅಲ್ಲಿ ಪಾಲ್ಗೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಸ್ಪೆಕ್ಟರ್ ಗಳಾದ ವಿಜಿಕುಮಾರ್,ಶಿವರಾಜ್ ,ಸಬ್ ಇನ್ಸ್ಪೆಕ್ಟರ್ ರಮೇಶ್ , ನಗರ ಸಭೆ ಪೌರಾಯುಕ್ತ ಜಿ ಏನ್ ಚಲಪತಿ ಹಾಗೂ ಎಲ್ಲಾ ಮಸೀದಿಯ ಅಧ್ಯಕ್ಷರು ಮುಖಂಡರು ಸಾರ್ವಜನಿಕರು ಭಾಗವಹಿಸಿದ್ದರು.