ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hanuman Jayanti: ಸಡಗರ-ಸಂಭ್ರಮ, ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ

ಪಟ್ಟಣದ ಹೊರವಲಯದ ವಾಪಸಂದ್ರ ಆಂಜನೇಯ ಸ್ವಾಮಿ ದೇವಾಲಯ, ಪಟ್ಟಣದ ಮಾರುತಿ ವೃತ್ತದ ಬಾಲಾಂಜನೇಯ ಸ್ವಾಮಿ, ಆಸ್ಪತ್ರೆ ಬಳಿಯ ಆಂಜನೇಯ ಸ್ವಾಮಿ, ಉಲ್ಲೋಡು ಬಯಲಾಂಜ ನೇಯ ಸ್ವಾಮಿ ಹಾಗೂ ಮೇಡಿಮಾಕಲಹಳ್ಳಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು

ಸಡಗರ-ಸಂಭ್ರಮ, ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಣೆ

ಪಟ್ಟಣದ ಹೊರವಲಯದ ವಾಪಸಂದ್ರ ಆಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಅಂಗವಾಗಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. -

Ashok Nayak
Ashok Nayak Dec 3, 2025 3:49 PM

ಗುಡಿಬಂಡೆ: ಪಟ್ಟಣ ಹಾಗೂ ತಾಲ್ಲೂಕಿನಾದ್ಯಂತ ಇರುವ ವಿವಿಧ ಹನುಮ ಮತ್ತು ರಾಮ ಮಂದಿರಗಳಲ್ಲಿ ಹನುಮ ಜಯಂತಿಯನ್ನು ಸಡಗರ-ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.

ಹನುಮ ಜಯಂತಿಯ ಪ್ರಯುಕ್ತ ರಾಮ ಮತ್ತು ಹನುಮನ ದೇವಸ್ಥಾನಗಳನ್ನು ತಳಿರು ತೋರಣ ಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯಗಳಲ್ಲಿ ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಅಭಿಷೇಕಗಳನ್ನು ನೆರವೇರಿಸಲಾಯಿತು.

ಇದನ್ನೂ ಓದಿ: Gudibande News: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ರೈತ ವಿರೋಧಿಗಳು : ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ  ಸೂರ್ಯನಾರಾಯಣ

ಪಟ್ಟಣದ ಹೊರವಲಯದ ವಾಪಸಂದ್ರ ಆಂಜನೇಯ ಸ್ವಾಮಿ ದೇವಾಲಯ, ಪಟ್ಟಣದ ಮಾರುತಿ ವೃತ್ತದ ಬಾಲಾಂಜನೇಯ ಸ್ವಾಮಿ, ಆಸ್ಪತ್ರೆ ಬಳಿಯ ಆಂಜನೇಯ ಸ್ವಾಮಿ, ಉಲ್ಲೋಡು ಬಯಲಾಂಜನೇಯ ಸ್ವಾಮಿ ಹಾಗೂ ಮೇಡಿಮಾಕಲಹಳ್ಳಿ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ಸೇರಿದಂತೆ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.

ಎಲ್ಲಾ ದೇವಾಲಯಗಳಲ್ಲಿ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಹರಕೆ ಹೊತ್ತ ನೂರಾರು ಭಕ್ತರು ದೇವಾಲಯಗಳಿಗೆ ತೆರಳಿ ಹನುಮನ ಕೃಪೆಗೆ ಪಾತ್ರರಾದರು.