ಚಿಕ್ಕಬಳ್ಳಾಪುರ: ಗೌರಿಬಿದನೂರು ತಾಲೂಕಿನಲ್ಲಿ 12 ಕಾಮಗಾರಿಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಅನುದಾನ ನೀಡಲಾಗಿರುತ್ತದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸದಸ್ಯ ರಾದ ಡಾ.ಕೆ.ಸುಧಾಕರ್ ತಿಳಿಸಿದರು.
ಗೌರಿಬಿದನೂರು ನಗರದ ನಗರಸಭೆ ಆವರಣದಲ್ಲಿ ಅವರು ಶುಕ್ರವಾರ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಐ ಮ್ಯಾಕ್ಸ್ ದೀಪಗಳನ್ನು ಅಳವಡಿಸುವಿಕೆ ಸೇರಿದಂತೆ ಒಟ್ಟು 12 ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಗೌರಿಬಿದನೂರು ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಹೈ ಮಾಸ್ ದೀಪಗಳನ್ನು ಅಳವಡಿಸುವ ಒಟ್ಟು 12 ಕಾಮಗಾರಿಗಳನ್ನು ಕೈಗೊಳ್ಳಲು ರೂ ೫೨.೦ ಲಕ್ಷಗಳ ಅನುದಾನ ನೀಡ ಲಾಗಿರುತ್ತದೆ ಎಂದ ಅವರು ಕೇಂದ್ರ ರಸ್ತೆ ನಿಧಿ ಸಿಆರ್ಎಫ್ ರಾಷ್ಟ್ರೀಯ ಹೆದ್ದಾರಿ -೯೪ ರಿಂದ ನಕ್ಕಲಹಳ್ಳಿ ಕಾತನಕಲ್ಲು ಜಿಲಾಕುಂಟೆ ಮಾರ್ಗವಾಗಿ ನಗರಗೆರೆ ಸೇರುವ ೮.೦ ಕಿ.ಮೀ ರಸ್ತೆ ಅಭಿವೃದ್ಧಿಗಾಗಿ ರೂ ೬.೦ ಅನುದಾನ ನೀಡಲಾಗಿರುತ್ತದೆ ಎಂದರು.
ಇದನ್ನೂ ಓದಿ: Chikkaballapur (Chinthamani) News: ಕಲಿತ ವಿದ್ಯೆ ಮಾತ್ರ ಕೊನೆಯವರೆಗೂ ಜತೆಗಿರುತ್ತದೆ
ಜಲ ಜೀವನ್ ಮಿಷನ್ ಯೋಜನೆಯಡಿ, ತಾಲ್ಲೂಕಿನಾದ್ಯಂತ ೨೯೬ ಗ್ರಾಮಗಳಲ್ಲಿ ಮನೆ ಮನೆಗೆ ಕುಡಿಯುವ ನೀರು ಸರಬರಾಜು ಕಾಮಗಾರಿಯು ಪ್ರಗತಿಯಲ್ಲಿದ್ದು ಇದಕ್ಕಾಗಿ ಕೇಂದ್ರ ಸರ್ಕಾರದ ವತಿಯಿಂದ ೧೦೨.೫೦ ಕೋಟಿ ಅನುದಾನ ನೀಡಲಾಗಿರುತ್ತದೆ ಎಂದು ತಿಳಿಸಿದರು.
೨೦೨೪-೨೫ ನೇ ಸಾಲಿನ, ಅಮೃತ್ ೨.೦ ಯೋಜನೆಯಡಿ ಗೌರಿಬಿದನೂರು ನಗರ ನೀರು ಸರಬರಾಜು ಕಾಮಗಾರಿಗೆ ರೂ ೬೬.೬೦ ಕೋಟಿ ಅನುದಾನ ಬಿಡುಗಡೆಯಾಗಿರುತ್ತದೆ.
ರಾಷ್ಟ್ರೀಯ ಹೆದ್ದಾರಿ-೬೯ ಮಧುಗಿರಿ - ಮುಳಬಾಗಿಲು ರಸ್ತೆ ವಯಾ ಗೌರಿಬಿದನೂರು ಚಿಕ್ಕಬಳ್ಳಾಪುರ ಕಾಮಗಾರಿಯು ಪ್ರಗತಿಯಲ್ಲಿದ್ದು ಇದಕ್ಕಾಗಿ ಕೇಂದ್ರ ಸರ್ಕಾರವು ೩೯೮.೪೮ ಕೋಟಿ ಅನುದಾನ ಒದಗಿಸಿರುತ್ತದೆ.ಗೌರಿಬಿದನೂರು ಬೈಪಾಸ್ ರಸ್ತೆ (ಗುಂಡಾಪುರ ಮಾರ್ಗವಾಗಿ ) ಅಭಿವೃದ್ಧಿಗೆ ರೂ ೪೦.೬೮ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಪಿ.ಎಂ ಸ್ಥಾನಿಧಿ ಯೋಜನೆಯಡಿ ಗೌರಿಬಿದ ನೂರು ನಗರದಾದ್ಯಂತ ೫೫೮ ಜನ ಫಲಾನುಭವಿಗಳಿಗೆ ಸಹಾಯಧನ ವಿತರಿಸಿದ್ದು ಇದಕ್ಕಾಗಿ ರೂ ೫೬.೦ ಲಕ್ಷ ಅನುದಾನ ನೀಡಲಾಗಿರುತ್ತದೆ ಎಂದರು.
ಕನಿಷ್ಠ, ಬೆಂಬಲ ಬೆಲೆ ಯೋಜನೆಯಡಿ ಗೌರಿಬಿದನೂರು ತಾಲ್ಲೂಕಿನಲ್ಲಿ ೫೭೧ ಜನ ರೈತರಿಗೆ ರಾಗಿ ಬೆಳೆಗಾಗಿ ರೂ ೩ ಕೋಟಿ ಅನುದಾನ ಒದಗಿಸಿ ೮೪೯೭.೫೦ ಕ್ವೀoಟಲ್ ರಾಗಿಯನ್ನು ಖರೀದಿಸಲಾಗಿದೆ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಆದಿ ಆದರ್ಶ ಗ್ರಾಮ ಯೋಜನೆಯಡಿ ಗೌರಿಬಿದ ನೂರು ತಾಲ್ಲೂಕಿನಲ್ಲಿ ಮಾಚೇನಹಳ್ಳಿ ಲಕ್ಕಸಂದ್ರ ಹಾಗೂ ದೊಡ್ಡ ಮಲೆಕೆರೆ ಗ್ರಾಮಗಳನ್ನು ಆಯ್ಕೆ ಮಾಡಿದ್ದು ೨೦೨೪-೨೫ನೇ ಸಾಲಿನಲ್ಲಿ ತಲಾ ಒಟ್ಟು ೬೧.೧೪ ಲಕ್ಷ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿನಗರ ಸಭೆ ಅಧ್ಯಕ್ಷ ಲಕ್ಷ್ಮೀನಾರಾಯಣ ,ನಗರಸಭೆ ಆಯುಕ್ತೆ ಗೀತಾ ಡಿ. ಎಂ, ಡಾ. ಶಶಿಧರ್, ರವಿನಾರಾಯರೆಡ್ಡಿ, ಜೆಡ್.ಪಿ. ಮೂರ್ತಿ, ನಗರಸಭೆಯ ಸದಸ್ಯರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.