ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Actor Doddanna: ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ನಿಷ್ಠೆಯಿಂದ ಕಲಿತವರಿಗೆ ನಿರುದ್ಯೋಗದ ಭಯವಿಲ್ಲ: ಚಿತ್ರನಟ ದೊಡ್ಡಣ್ಣ ಅಭಿಮತ

2500 ವರ್ಷಗಳಿಗೂ ಮಿಗಿಲಾದ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪಂಪ, ರನ್ನ, ಜನ್ನ, ಕುವೆಂಪು, ಬೇಂದ್ರೆ, ಪುತಿನಾ, ಕೆ.ಎಸ್.ನ ಅವರಂತಹ ಮಹಾಮಹಿಮರ ಕೊಡುಗೆ ಅಪಾರ ವಾಗಿದೆ. ವಚನ, ದಾನ,ಕೀರ್ತನ, ತತ್ವಪದಗಳಲ್ಲಿನ ಅರ್ಥವನ್ನು ಗ್ರಹಿಸಿದರೆ ಜೀವನ ಪಾವನವಾಗಲಿದೆ. ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಎಂಬ ಕಗ್ಗದ ಸಾರ ವನ್ನು ಮನಕ್ಕಿಳಿಸಿಕೊಂಡರೆ ಅಹಂಕಾರ ತಾನಾಗೇ ಅಳಿದು ಮನುಷ್ಯತ್ವ ಹಂಚಿ ಉಣ್ಣುವ ಭಾವ ಜೀವ ತಳೆಯುತ್ತದೆ

ಚಿಕ್ಕಬಳ್ಳಾಪುರ : ಶುದ್ಧವಾಗಿ ಕನ್ನಡ ಭಾಷೆ ಮಾತನಾಡುವವರಿಗೆ, ಸಾಹಿತ್ಯ ಸಂಸ್ಕೃತಿಯನ್ನು ನಿಷ್ಠೆಯಿಂದ ಕಲಿತವರಿಗೆ ನಿರುದ್ಯೋಗದ ಭಯವಾಗಲಿ ಅನ್ನದ ಹಂಗಾಗಲಿ ಇರುವುದಿಲ್ಲ ಎಂದು ಹಿರಿಯ ಕನ್ನಡ ಚಲನಚಿತ್ರ ನಟ ದೊಡ್ಡಣ್ಣ(Film actor Doddanna) ಅಭಿಪ್ರಾಯಪಟ್ಟರು.

ನಗರಹೊರವಲಯ ಎಸ್‌ಜೆಸಿಐಟಿ ಕ್ಯಾಂಪಸ್ ಆವರಣದ ಬಾಲಗಂಗಾಧರನಾಥಸ್ವಾಮಿಜಿ ಸಭಾಂಗಣದಲ್ಲಿ ನಡೆದ ಸಂಭ್ರಮ-2026ಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಶ್ವದ ಸರ್ವಶ್ರೇಷ್ಟ ಭಾಷೆಯಾದ ಕನ್ನಡದ ವ್ಯಾಕರಣ, ಅಲ್ಪಪ್ರಾಣ, ಮಹಾಪ್ರಾಣ, ಧ್ವನ್ಯಂಗಗಳ ಉಗಮಸ್ಥಾನದ ಮಹತ್ವವನ್ನು ಅರಿತರೆ ಭಾಷಾಶುದ್ದಿ ಪರಂಪರೆಯ ಅರಿವಾಗಲಿದೆ.ಆಮೂಲಕ ನಾದಪರಂಪರೆಯನ್ನು ತಿಳಿಯಬೇಕು.ಇದಾಗಬೇಕಾದರೆ ಉತ್ತಮ ಗುರುಗಳ ಸಾನಿಧ್ಯ ಬೇಕು. ಅಂತಹ ಗುರು ಪರಂಪರೆಯನ್ನು ನಂಬಿ ಕೆಟ್ಟವರು ಇತಿಹಾಸದಲ್ಲಿ ಯಾರೂ ಇಲ್ಲ ಎಂದರು.

2500 ವರ್ಷಗಳಿಗೂ ಮಿಗಿಲಾದ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಪಂಪ, ರನ್ನ, ಜನ್ನ, ಕುವೆಂಪು, ಬೇಂದ್ರೆ, ಪುತಿನಾ, ಕೆ.ಎಸ್. ನ ಅವರಂತಹ ಮಹಾಮಹಿಮರ ಕೊಡುಗೆ ಅಪಾರವಾಗಿದೆ.ವಚನ, ದಾನ,ಕೀರ್ತನ, ತತ್ವಪದಗಳಲ್ಲಿನ ಅರ್ಥವನ್ನು ಗ್ರಹಿಸಿದರೆ ಜೀವನ ಪಾವನವಾಗಲಿದೆ.ಅಕ್ಕಿಯೊಳಗನ್ನವನು ಮೊದಲಾರು ಕಂಡವರು ಎಂಬ ಕಗ್ಗದ ಸಾರ ವನ್ನು ಮನಕ್ಕಿಳಿಸಿಕೊಂಡರೆ ಅಹಂಕಾರ ತಾನಾಗೇ ಅಳಿದು ಮನುಷ್ಯತ್ವ ಹಂಚಿ ಉಣ್ಣುವ ಭಾವ ಜೀವತಳೆಯುತ್ತದೆ ಎಂದರು.

ಇದನ್ನೂ ಓದಿ: Chikkaballapur News: ನಿಯಮ ಪಾಲನೆ ಮಾಡಿದರೆ ಸುರಕ್ಷಿತ ಪ್ರಯಾಣ, ನಿರ್ಲಕ್ಷ್ಯ ಮಾಡಿದರೆ ಅಪಾಯವೇ ಬಹುಮಾನ: ಡಿ.ಹೆಚ್. ಮುನಿಕೃಷ್ಣ ಕರೆ

ವಿದ್ಯಾರ್ಥಿಗಳಿರಲಿ ಕೃಷಿಕರೇ ಇರಲಿ ಕೂಲಿ ಕಾರ್ಮಿಕರೇ ಇರಲಿ ಕಷ್ಟಪಡದೆ, ದುಡಿಯದೆ ಏನೂ ದೊರೆಯುವುದಿಲ್ಲ.ವ್ಯಾಸಾಂಗದ ಅವಧಿಯಲ್ಲಿ ಸುಖಕ್ಕೆ ಮನಸ್ಸು ಕೊಡಬಾರದು.ಮೊಬೈಲ್ ಮೋಹದಿಂದ ದೂರವುಳಿದು ಪುಸ್ತಕದ ಓದಿಗೆ ಹೆಚ್ಚಿನ ಗಮನ ನೀಡಬೇಕು. ಗುರಿ ಸಾಧನೆಗೆ ತಪ್ಪದೆ ರಾಮಾಯಣ, ಮಹಾಭಾರತ ಓದಲೇಬೇಕು ಎಂದು ಕರೆ ನೀಡಿದರು.

doddanna

ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಯ ಸವ್ಯಸಾಚಿ ರಾಯಭಾರಿ ಡಾ.ರಾಜ್‌ಕುಮಾರ್ ಅವರಂತೆ ಸರಳವಾಗಿ ಬದುಕುವುದನ್ನು ಕಲಿಯಬೇಕು.ಇಲ್ಲಿರುವ ವಿದ್ಯಾರ್ಥಿಗಳು ತಪ್ಪದೆ ಯಯಾತಿ ಕಾದಂಬರಿ ಓದುವ ಮೂಲಕ ಸನ್ಮಾರ್ಗದಲ್ಲಿ ನಡೆಯಿರಿ ಎಂದು ಕರೆ ನೀಡಿದ ಅವರು ತಾವು ಅಭಿನಯಿಸಿದ ಚಲನಚಿತ್ರಗಳ ಹಾಸ್ಯ ಪ್ರಸಂಗಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳನ್ನು ರಂಜಿಸಿದರು.

9dollu

ಪ್ರಾಂಶುಪಾಲ ಡಾ.ಜಿ.ಟಿ,ರಾಜು ಮಾತನಾಡಿ, ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಅವರು ಈವರೆಗೆ 1016 ಚಲನಚಿತ್ರಗಳಲ್ಲಿ ಹಾಸ್ಯನಟ, ಖಳನಾಯಕ, ನಾಯಕನಾಟ, ತಂದೆಯ ಪಾತ್ರ, ಗೆಳೆಯನ ಪಾತ್ರ ಹೀಗೆ ನಾನಾ ಪಾತ್ರಗಳನ್ನು ಮಾಡಿ ಪ್ರೇಕ್ಷಕರ ಮನಸೂರೆಗೊಂಡಿರುವ ಅಪರೂಪದ ಕಲಾವಿದರು.ಇಂತಹ ಮೇರು ನಟರು ನಮ್ಮ ಕಾಲೇಜಿಗೆ ಬಂದು ಸಂಭ್ರಮ 2026ಕ್ಕೆ ಕಳೆ ತಂದಿ ದ್ದಾರೆ. ಇವರು ಕೇವಲ ನಟರಷ್ಟೇ ಅಲ್ಲ,ಉದ್ಯಮಿಯೂ ಹೌದು. ಇವರ ಅನುಭವ, ಸಾಧನೆ ಕಿರಿಯರಿಗೆ ಸದಾ ಮಾರ್ಗದರ್ಶನವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದ ಮಂಗಳನಾಥ ಸ್ವಾಮೀಜಿ ಮಾತನಾಡಿ ತಂದೆತಾಯಿಯ ಕನಸಿಗೆ ನೀರೆಯುವ ಮಕ್ಕಳು ನೀವಾಗಬೇಕು. ಸರಿಯಾದ ಜ್ಞಾನಾರ್ಜನೆಯಿಂದ ಮಾತ್ರವೇ ನಾಡಿನ ಸತ್ಪ್ರಜೆಗಳಾಗಲು ಸಾಧ್ಯ. ಎಲ್ಲರಿಗೂ ಒಳಿತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮಕ್ಕೂ ಮೊದಲು ಎಸ್‌ಜೆಸಿಐಟಿ ಮುಂಭಾಂಗದಿಂದ ಅತಿಥಿಗಳನ್ನು ಮೆರವಣಿಗೆಯಲ್ಲಿ ಕರೆತರುವ ವೇಳೆ ವೀರಗಾಸೆ ಕುಣಿತ, ಡೊಳ್ಳು ಕುಣಿತ,  ನೃತ್ಯ ವೇಷಭೂಷಣ ಪೂರ್ಣಕುಂಭಸ್ವಾಗತ ಜನಪದ ಸಮಾಗಮದೊಂದಿಗೆ ಸಭಾಂಗಣಕ್ಕೆ ಕರೆ ತರಲಾಯಿತು.

ಕಾರ್ಯಕ್ರಮದಲ್ಲಿ ವಿಟಿಯು ಸ್ಪರ್ಧೆ ಸೇರಿ ವಿವಿಧ ಪಠ್ಯೇತರ ಚಟವಟಿಕೆಗಳಲ್ಲಿ ಭಾಗಿಯಾಗಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.