ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ನ.೫ಕ್ಕೆ ಕನ್ನಡ ಭವನದಲ್ಲಿ ವಿ.ಕೃಷ್ಣರಾವ್ ಶತಮಾನೋತ್ಸವ ಕಾರ್ಯಕ್ರಮ : ಲಾಯರ್ ನಾರಾಯಣಸ್ವಾಮಿ

ವಂಗತ ವಿ.ಕೃಷ್ಣರಾವ್ ಅವರು ಸತತವಾಗಿ ಮೂರು ಅವಧಿಗಳ ಕಾಲ ಲೋಕಸಭಾ ಸದಸ್ಯರಾಗಿ ಪ್ರತಿನಿಧಿಸಿದರು. ಜನರ ನಾಡಿ ಅರಿತಿದ್ದ ಅವರು ಜನ ಸೇವಕರಾಗಿ ಸದಾ ಕೆಲಸ ಮಾಡಿದರು. ಅವರ ನೇತೃತ್ವದಲ್ಲಿ ಅನೇಕ ಯುವ ಮುಖಂಡರು ರಾಜಕೀಯ ವಾಗಿ ಬೆಳೆದಿದ್ದಾರೆ. ಪಕ್ಷದ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು

ಚಿಕ್ಕಬಳ್ಳಾಪುರ : ನಗರದ ಕನ್ನಡ ಭವನದಲ್ಲಿ ನ.೫ ರ ಮಾಜಿ ಸಂಸದ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಕೃಷ್ಣರಾವ್‌ರ ೧೦೦ನೇ ಜಯಂತಿಯನ್ನು ಅವರ ಅಭಿಮಾನಿಗಳ ಬಳಗದಿಂದ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಲಾಯರ್ ನಾರಾಯಣ ಸ್ವಾಮಿ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ದಿವಂಗತ ವಿ.ಕೃಷ್ಣರಾವ್ ಅವರು ಸತತವಾಗಿ ಮೂರು ಅವಧಿಗಳ ಕಾಲ ಲೋಕಸಭಾ ಸದಸ್ಯರಾಗಿ ಪ್ರತಿನಿಧಿಸಿದರು. ಜನರ ನಾಡಿ ಅರಿತಿದ್ದ ಅವರು ಜನ ಸೇವಕರಾಗಿ ಸದಾ ಕೆಲಸ ಮಾಡಿದರು. ಅವರ ನೇತೃತ್ವದಲ್ಲಿ ಅನೇಕ ಯುವ ಮುಖಂಡರು ರಾಜಕೀಯ ವಾಗಿ ಬೆಳೆದಿದ್ದಾರೆ. ಪಕ್ಷದ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು ಹೇಳಿದರು.

ನ.೫ರಂದು ನಡೆಯಲಿರುವ ಕಾರ್ಯಕ್ರಮವು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಉದ್ಘಾಟನೆ ನೆರವೇರಿಸ ಲಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ: Chikkaballapur News: ಖಾಲಿ ಹುದ್ದೆಗಳ ಶೀಘ್ರ ಭರ್ತಿಗೆ ಕ್ರಮವಹಿಸ ಬೇಕು : ಮುಖ್ಯಮಂತ್ರಿ ಬದಲಾದಲ್ಲಿ ದಲಿತರನ್ನು ಸಿ.ಎಂ.ಮಾಡಿ : ಶಿವಶಂಕರ್ ಒತ್ತಾಯ

ರಾಜ್ಯ ಬೀಜ ನಿಗಮದ ಅಧ್ಯಕ್ಷ ಆಂಜನಪ್ಪ ಮಾತನಾಡಿ, ಕೃಷ್ಣರಾಯರ ದೀರ್ಘ ರಾಜಕೀಯ ಜೀವನ, ಅವರ ಆಚಾರ-ವಿಚಾರ, ಸರಳತೆ ಹಾಗೂ ಸಾರ್ವಜನಿಕ ಜೀವನದಲ್ಲಿ ತೋರಿದ ಶಿಸ್ತಿನ ಬಗ್ಗೆ ಇಂದಿನ ಯುವ ಪೀಳಿಗೆ ತಿಳಿದುಕೊಳ್ಳಬೇಕು. ಅವರ ಸ್ಮರಣೆಗಾಗಿ ಈ ಶತಮಾನೋತ್ಸವವನ್ನು ಆಯೋಜಿಸಲಾಗಿದೆ ಎಂದರು.

ಮಾಜಿ ಶಾಸಕ ಎಸ್.ಎಂ.ಮುನಿಯಪ್ಪ ಮಾತನಾಡಿ, ಕೃಷ್ಣರಾವ್ ಅವರು ನಡೆದು ಬಂದ ಮಾರ್ಗ ಎಲ್ಲರಿಗೂ ಮಾದರಿ. ನಮ್ಮಂತಹ ಅನೇಕ ಜನರಿಗೆ ರಾಜಕೀಯದಲ್ಲಿ ಅವಕಾಶ ನೀಡಿ ಬೆಳೆಸಿದವರು ದೊಡ್ಡ ಹುದ್ದೆಗಳಲ್ಲಿ ಇದ್ದರೂ ಸರಳತೆ, ಜನಪರ ನಡವಳಿಕೆ ಅವರ ವಿಶೇಷತೆ ಆಗಿತ್ತು. ಅವರ ಸವಿನೆನಪಿನ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಆವಲರೆಡ್ಡಿ, ಮೋಹನ್, ಭರಣಿ ವೆಂಕಟೇಶ್, ಅಜಿತ್ ಪ್ರಸಾದ್, ಮಂಚೇನಹಳ್ಳಿಯ ಪ್ರಕಾಶ್, ಜಗದೀಶ್, ಅಂಬರೀಷ್ ಇದ್ದರು.