ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Invest Karnataka 2025: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಕುಶಲ ಉದ್ಯೋಗಿಗಳ ಕೊರತೆಯಿದೆ: ಅವಿನಾಶ್‌ ಅವುಲಾ

ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಕುಶಲ ಉದ್ಯೋಗಿಗಳ ಕೊರತೆ ಇದೆ. ಇದನ್ನು ಭಾರತ ಅವಕಾಶವಾಗಿ ಬಳಸಿಕೊಂಡು ಆ ಕೊರತೆ ನೀಗಿಸಬೇಕು. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುವುದು ಮಾತ್ರವಲ್ಲದೆ, ಅತ್ಯಂತ ನಿರ್ಣಾಯಕ ತಂತ್ರಜ್ಞಾನದಲ್ಲಿ ದೇಶ ಮೇಲುಗೈ ಸಾಧಿಸಲಿದೆ ಎಂದು ಸೆಮಿಕಂಡಕ್ಟರ್ ಪ್ರಾಡಕ್ಟ್ಸ್ ಗ್ರೂಪ್ (ಎಸ್‌ಪಿಜಿ), ಏಷ್ಯಾದ ಭಾರತ ಅಧ್ಯಕ್ಷ ಅವಿನಾಶ್‌ ಅವುಲಾ ತಿಳಿಸಿದ್ದಾರೆ.

ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಉದ್ಯೋಗಿಗಳ ಕೊರತೆ: ಅವಿನಾಶ್‌

Profile Siddalinga Swamy Feb 12, 2025 11:29 PM

ಬೆಂಗಳೂರು: ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಮುಂದಿನ 10 ವರ್ಷಗಳಲ್ಲಿ ಸುಮಾರು 10 ಲಕ್ಷ ಉದ್ಯೋಗಿಗಳ ಅಗತ್ಯವಿದ್ದು, ಇದನ್ನು ಭಾರತದ ಯುವಜನತೆ ಸದುಪಯೋಗಪಡಿಸಿಕೊಳ್ಳಬೇಕು ಎಂದು ಸೆಮಿಕಂಡಕ್ಟರ್ ಪ್ರಾಡಕ್ಟ್ಸ್ ಗ್ರೂಪ್ (ಎಸ್‌ಪಿಜಿ), ಏಷ್ಯಾದ ಭಾರತ ಅಧ್ಯಕ್ಷ ಅವಿನಾಶ್‌ ಅವುಲಾ ತಿಳಿಸಿದರು. ʼಜಾಗತಿಕ ಹೂಡಿಕೆದಾರರ ಸಮಾವೇಶʼ ದಲ್ಲಿ (Invest Karnataka 2025) ಬುಧವಾರ ನಡೆದ ‘ಭವಿಷ್ಯದ ಕೌಶಲ್ಯಗಳು: ಶೈಕ್ಷಣಿಕ ಸಂಸ್ಥೆಗಳು, ಉದ್ಯಮ ಮತ್ತು ಸರ್ಕಾರದ ಸಹಭಾಗಿತ್ವʼ ಗೋಷ್ಠಿಯಲ್ಲಿ ಅವರು ಮಾತನಾಡಿದರು.

ಎಐ ಸೇರಿದಂತೆ ಹಲವು ತಂತ್ರಜ್ಞಾನಗಳು ನಿರೀಕ್ಷೆಗೂ ಮಿರಿ ಬೆಳೆಯುತ್ತಿದ್ದು, ಬಹುತೇಕ ತಾಂತ್ರಿಕ ಉಪಕರಣಗಳ ಅಭಿವೃದ್ಧಿಯಲ್ಲಿ ಸೆಮಿಕಂಡಕ್ಟರ್‌ ಅತ್ಯಗತ್ಯವಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಈ ಕ್ಷೇತ್ರದಲ್ಲಿ ಕುಶಲ ಉದ್ಯೋಗಿಗಳ ಕೊರತೆ ಇದೆ. ಇದನ್ನು ಭಾರತ ಅವಕಾಶವಾಗಿ ಬಳಸಿಕೊಂಡು ಆ ಕೊರತೆ ನೀಗಿಸಬೇಕು. ಇದರಿಂದ ಲಕ್ಷಾಂತರ ಜನರಿಗೆ ಉದ್ಯೋಗ ದೊರೆಯುವುದು ಮಾತ್ರವಲ್ಲದೆ, ಅತ್ಯಂತ ನಿರ್ಣಾಯಕ ತಂತ್ರಜ್ಞಾನದಲ್ಲಿ ದೇಶ ಮೇಲುಗೈ ಸಾಧಿಸಲಿದೆ ಎಂದು ಹೇಳಿದರು.

31

ಯಾರ್ಕ್ ವಿಶ್ವವಿದ್ಯಾಲಯದ ಬಾಹ್ಯ ಸಂಬಂಧಗಳ ನಿರ್ದೇಶಕಿ ಜೋನ್‌ ಕಾನ್‌ಕ್ಯಾನನ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಓದಿನ ಹಂತದಲ್ಲಿ ಉದ್ಯಮದ ಅನುಭವ ನೀಡಬೇಕು. ಇದಕ್ಕಾಗಿ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಪಾಲುದಾರಿಕೆ ಏರ್ಪಡಬೇಕು. ಸರ್ಕಾರ ಇದಕ್ಕೆ ಅನುವಾಗುವಂತೆ ಸೂಕ್ತ ರೀತಿಯ ಕಾನೂನಾತ್ಮಕ ವಾತಾವರಣ ನಿರ್ಮಿಸಬೇಕು ಎಂದರು.

ಎಸ್2ಟೆಕ್ ಅಧ್ಯಕ್ಷ ಮತ್ತು ಸಿಇಒ ಡೇ ವೀರ್ಲಪತಿ ಮಾತನಾಡಿ, ಭಾರತ ಪ್ರಪಂಚದಲ್ಲಿದ ಅಧ್ಯಾತ್ಮದ ತವರಾಗಿದೆ. ಎಷ್ಟೇ ತಂತ್ರಜ್ಞಾನ ಬಂದರೂ ಇಲಾನ್‌ ಮಸ್ಕ್‌ ಅವರ ಆಪ್ಟಿಮಸ್‌ ರೋಬಾಟ್‌ ಎಲ್ಲೆಡೆ ಬಳಕೆಯಾಗುತ್ತಾ ಜನರ ಎಲ್ಲಾ ಕೆಲಸಗಳನ್ನು ರೋಬಾಟ್‌ ಮಾಡುವಂತಾದರೂ ಕೊನೆಗೆ ಜನರು ಬಯಸುವುದು ಸಂತೋಷವನ್ನು. ಅಂತಹ ಸಂತೋಷ ಭಾರತದ ಅಧ್ಯಾತ್ಮದಲ್ಲಿದೆ. ಹೀಗಾಗಿ ತಂತ್ರಜ್ಞಾನದ ಜತೆಗೆ ಭಾರತ ಇಡೀ ಜಗತ್ತಿಗೆ ಸಂತೋಷ ಹಂಚಬಲ್ಲದು ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿಯನ್ನೂ ಓದಿ | Invest Karnataka: 'ನಾವೀನ್ಯತೆಗಳ ಭವಿಷ್ಯ’ ಪ್ರದರ್ಶನಕ್ಕೆ ಡಿಸಿಎಂ ಡಿಕೆಶಿ ಚಾಲನೆ; 40ಕ್ಕೂ ಹೆಚ್ಚು ಕಂಪನಿ ಭಾಗಿ

ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಪಾಲುದಾರ ಜೋರ್ಗ್ ಹಿಲ್ಡೆಬ್ರ್ಯಾಂಡ್‌ ಗೋಷ್ಠಿ ನಿರ್ವಹಿಸಿದರು.