ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Raghavendra Swamy Aradhana: ಮಂತ್ರಾಲಯದ ರಾಯರ ಬೃಂದಾವನಕ್ಕೆ ತಿರುಮಲ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ

Mantralaya Mutt: ಮಂತ್ರಾಲಯ ಶ್ರೀ ಗುರುರಾಯರ 354ನೇ ಆರಾಧನೆಯ ಪ್ರಯುಕ್ತ ರಾಯರ ಮಠಕ್ಕೆ ಟಿಟಿಡಿ ಎಇಒ ರಾಮಕೃಷ್ಣ ಅವರು ಭೇಟಿ ನೀಡಿ, ತಿರುಮಲ ತಿರುಪತಿ ದೇವಸ್ಥಾನದ ಪವಿತ್ರ ಶ್ರೀವಾರಿ ಶೇಷವಸ್ತ್ರವನ್ನು ಸಮರ್ಪಿಸಿದರು. ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು, ಶ್ರೀವಾರಿ ಶೇಷವಸ್ತ್ರವನ್ನು ಸ್ವೀಕರಿಸಿ, ಶ್ರೀ ರಾಯರ ಮೂಲ ಬೃಂದಾವನಕ್ಕೆ ವಸ್ತ್ರವನ್ನು ಅರ್ಪಿಸಿದ್ದಾರೆ.

ಮಂತ್ರಾಲಯದ ರಾಯರ ಬೃಂದಾವನಕ್ಕೆ ತಿರುಮಲ ಶ್ರೀವಾರಿ ಶೇಷವಸ್ತ್ರ ಸಮರ್ಪಣೆ

Prabhakara R Prabhakara R Aug 9, 2025 4:42 PM

ರಾಯಚೂರು: ಮಂತ್ರಾಲಯ ಶ್ರೀ ಗುರುರಾಯರ 354ನೇ ಆರಾಧನೆಯ ಪ್ರಯುಕ್ತ ಇಂದು, ರಾಯರ ಮಠಕ್ಕೆ (Raghavendra Swamy Aradhana) ಟಿಟಿಡಿ ಎಇಒ ರಾಮಕೃಷ್ಣ ಅವರು ತಿರುಮಲ ತಿರುಪತಿ ದೇವಸ್ಥಾನದ ಪವಿತ್ರ ಶ್ರೀವಾರಿ ಶೇಷವಸ್ತ್ರವನ್ನು ಸಮರ್ಪಿಸಿದರು. ಟಿಟಿಡಿ ತಂಡವನ್ನು ಶ್ರೀ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು, ಮಠದ ಅಧಿಕಾರಿಗಳು ಮತ್ತು ಪಂಡಿತರು ಮಹಾದ್ವಾರದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು.

ಶ್ರೀ ಮಂಚಲಮ್ಮನಿಗೆ ಸೀರೆ ಅರ್ಪಿಸಿದ ನಂತರ, ರಾಮಕೃಷ್ಣ ಅವರು ಗೌರವಯುತವಾಗಿ ಶ್ರೀವಾರಿ ಶೇಷ ವಸ್ತ್ರ ಹಾಗೂ ಪ್ರಸಾದವನ್ನು ಸ್ವಾಮೀಜಿಗೆ ಹಸ್ತಾಂತರಿಸಿದರು. ನಂತರ ಸ್ವಾಮೀಜಿಯವರು ಭಕ್ತಿಯಿಂದ ಶ್ರೀ ರಾಯರ ಮೂಲ ಬೃಂದಾವನಕ್ಕೆ ವಸ್ತ್ರವನ್ನು ಅರ್ಪಿಸಿದರು. ಇದೇ ವೇಳೆ ಸ್ವಾಮೀಜಿಗಳು, ಟಿಟಿಡಿ ಎಇಒ ರಾಮಕೃಷ್ಣ ಮತ್ತು ಅವರ ಕುಟುಂಬವನ್ನು ಶೇಷವಸ್ತ್ರ, ಸ್ಮರಣಿಕೆ ಮತ್ತು ಫಲಮಂತ್ರಾಕ್ಷತೆಯೊಂದಿಗೆ ಆಶೀರ್ವದಿಸಿದರು.

_Mantralaya Mutt

ರಾಯರ 354ನೇ ಆರಾಧನಾ ಮಹೋತ್ಸವದ ಸಪ್ತರಾತ್ರೋತ್ಸವಕ್ಕೆ ಚಾಲನೆ

ರಾಯಚೂರು: ಕಲಿಯುಗದ ಕಾಮಧೇನು ಕಲ್ಪವೃಕ್ಷ ಶ್ರೀ ರಾಘವೇಂದ್ರ ತೀರ್ಥ ಗುರುಸಾರ್ವಭೌಮರ 354ನೇ ವರ್ಷದ ಆರಾಧನಾ ಸಪ್ತರಾತ್ರೋತ್ಸವಕ್ಕೆ (Raghavendra Swamy Aradhana) ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಶುಕ್ರವಾರ ಭಗವಾ ಧ್ವಜಾರೋಹಣ ನೆರವೇರಿಸುವ ಮೂಲಕ‌ ವಿಧ್ಯುಕ್ತ ಚಾಲನೆ ನೀಡಿದರು.

ಈ ವೇಳೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಇಂದಿನಿಂದ ಆ.14ರವರೆಗೆ ಏಳು ದಿನಗಳ ಕಾಲ ಅದ್ಧೂರಿಯಾಗಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವದ ನಡೆಯಲಿದೆ. ಮಠದ ವಿದ್ವಾಂಸರ ಮಂತ್ರ ಘೋಷ, ಮಂಗಲ ವಾದ್ಯಗಳೊಂದಿಗೆ ಗೋಪೂಜೆ, ಅಶ್ವಪೂಜೆ, ಧ್ವಜವಂದನೆ, ಧ್ವಜಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮಗಳು ಸಂಪನ್ನಗೊಂಡಿದ್ದು, ದೇಶ ಮತ್ತು ವಿದೇಶಗಳಲ್ಲಿರುವ ರಾಘವೇಂದ್ರ ಸ್ವಾಮಿಗಳ ಮಠಗಳು, ಸನ್ನಿಧಾನಗಳಲ್ಲಿ ವೈಭವದಿಂದ ಆರಾಧನಾ ಮಹೋತ್ಸವ ಜರುಗಲಿದೆ ಎಂದು ತಿಳಿಸಿದರು.

ಶ್ರೀಮಠದಲ್ಲಿ ಆರಾಧನೆ ಮಹೋತ್ಸವ ನಿಮಿತ್ತ ಭಕ್ತರು ತನು, ಮನ,ಧನವನ್ನು ಸ್ವ ಇಚ್ಛೆಯಿಂದ ಅನೇಕ ಬಗೆಯ ರಜತ, ಕನಕ, ಕಟ್ಟಡಗಳ ನಿರ್ಮಾಣ ಸೇರಿ ಅನ್ನದಾನಕ್ಕೆ ಬೇಕಾದ ಧಾನ್ಯಗಳನ್ನು ಕಾಣಿಕೆ ರೂಪದಲ್ಲಿ ನೀಡುತ್ತಿದ್ದಾರೆ. ಕೆನರಾ ಬ್ಯಾಂಕ್‌ನಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ 10 ಲಕ್ಷ ರೂಪಾಯಿ ಕಾಣಿಕೆ ನೀಡಿದ್ದಾರೆ. ಶ್ರೀಮಠಕ್ಕೆ ಒಂದು ರೂಪಾಯಿಯಿಂದ ಲಕ್ಷ ರೂಪಾಯಿ ನೀಡಿದರೂ ಇದನ್ನು ಕಾಣಿಕೆಯಾಗಿ ತೆಗೆದುಕೊಳ್ಳಲಾಗುವುದು ಹೊರತು ದುಡ್ಡು ಎಂದು ಭಾವಿಸುವುದಿಲ್ಲ. ಶ್ರೀಮಠಕ್ಕೆ ಬರುವ ಎಲ್ಲ ಭಕ್ತರನ್ನು ಒಂದೇ ರೀತಿಯಲ್ಲಿ ನೋಡಲಾಗುವುದು. ಎಲ್ಲ ಕಡೆಗಳಲ್ಲಿ ನಡೆಯುವ ರಾಯರ ಆರಾಧನೆಗೆ ಗುರುರಾಯರ ಪೂರ್ಣ ಅನುಗ್ರಹವಿರಲಿದೆ ಎಂದು ಶ್ರೀಗಳು ಆಶೀರ್ವಚನ ನೀಡಿದರು.

ಈ ಸುದ್ದಿಯನ್ನೂ ಓದಿ | SBI Recruitment 2025: ಪದವಿ ಹೊಂದಿದವರಿಗೆ ಗುಡ್‌ನ್ಯೂಸ್‌; ಬರೋಬ್ಬರಿ 5,180 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ