ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SS Mallikarjun: ಸರ್ಕಾರಿ ಕಾಮಗಾರಿಗಳಿಗೆ ಬಳಸುವ ಉಪ ಖನಿಜಕ್ಕೆ ಶುಲ್ಕ ಪಾವತಿ ಕಡ್ಡಾಯ: ಎಸ್.ಎಸ್.ಮಲ್ಲಿಕಾರ್ಜುನ್

SS Mallikarjun: ಕೆಎಸ್‌ಆರ್‌ಎಸ್‌ಎಸಿ (KSRSAC) ಸಂಸ್ಥೆಯವರಿಂದ ತ್ರೈಮಾಸಿಕವಾಗಿ ಆಯ್ಕೆ ಕ್ಲಸ್ಟರ್ ಕಲ್ಲುಗಣಿ ಗುತ್ತಿಗೆ ಪ್ರದೇಶಗಳನ್ನು ಡ್ರೋನ್‌ ಉಪಕರಣದ ಮೂಲಕ ಸಮೀಕ್ಷೆ ನಡೆಸಿ ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ಗುತ್ತಿಗೆದಾರರು ಉತ್ಪಾದಿಸಿ ಸಾಗಾಣಿಕೆ ಮಾಡಿದ ಉಪ ಖನಿಜದ ಪ್ರಮಾಣಕ್ಕೆ ಅನುಗುಣವಾಗಿ ರಾಜಧನ ಮತ್ತು ಇತರೆ ಅನ್ವಯಿಕ ಶುಲ್ಕಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಸರ್ಕಾರಿ ಕಾಮಗಾರಿಗಳಿಗೆ ಬಳಸುವ ಉಪ ಖನಿಜಕ್ಕೆ ಶುಲ್ಕ ಕಡ್ಡಾಯ

Profile Siddalinga Swamy Jun 7, 2025 9:12 PM

ಬೆಂಗಳೂರು: ಉಪ ಖನಿಜಗಳನ್ನು ಸಾಗಿಸಲು ಸರಕು ಮತ್ತು ಸೇವಾ ತೆರಿಗೆ (GST) ಪೋರ್ಟಲ್ ಮೂಲಕ ಸೃಜಿಸಲಾಗುವ ಇ-ವೇ ಬಿಲ್‌ ಅನ್ನು ಖನಿಜ ಸಾಗಾಣಿಕೆ ಪರವಾನಗಿಯೊಂದಿಗೆ (MDP) ಏಕೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕಾ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ (SS Mallikarjun)‌ ತಿಳಿಸಿದರು. ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಚೇರಿಯಲ್ಲಿ ಸಚಿವರ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ನಿರ್ದಿಷ್ಟವಲ್ಲದ ಕಲ್ಲುಗಣಿ ಗುತ್ತಿಗೆ ಪ್ರದೇಶಗಳನ್ನು M/s. Karnataka State Remote Sensing Application Centre (KSRSAC) ಅವರಿಂದ Drone/DGPS ಸಮೀಕ್ಷೆ ಕೈಗೊಂಡು ಪ್ರಸ್ತುತ ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ಮತ್ತು ಗುತ್ತಿಗೆ ಪ್ರದೇಶದ ಹೊರಭಾಗದಲ್ಲಿ ತೆಗೆದಿರುವ ಖನಿಜ ಪ್ರಮಾಣವನ್ನು (Reduced Level) ಘನೀಕರಿಸುವ ಸಂಬಂಧ ಕಾರ್ಯಾದೇಶ ನೀಡಲಾಗಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸರ್ವೆ ಕಾರ್ಯ ಮುಕ್ತಾಯಗೊಳಿಸಿ ಗುತ್ತಿಗೆ ಪ್ರದೇಶಗಳ ಪ್ರಸ್ತುತ ಅಳತೆಗಳನ್ನು ಘನೀಕರಿಸಿದೆ. ಕಲ್ಲುಗಣಿ ಗುತ್ತಿಗೆ ಪ್ರದೇಶದಲ್ಲಿ ತೆಗೆದು ಸಾಗಾಣಿಕೆ ಮಾಡಿರುವ ಉಪ ಖನಿಜದ ಪ್ರಮಾಣವನ್ನು ನಿರ್ಧರಣೆ ಮಾಡುವ ಕಾರ್ಯವು ಪ್ರಗತಿಯಲ್ಲಿದೆ ಎಂದರು.

KSRSAC ಸಂಸ್ಥೆಯವರಿಂದ ತ್ರೈಮಾಸಿಕವಾಗಿ ಆಯ್ಕೆ ಕ್ಲಸ್ಟರ್ ಕಲ್ಲುಗಣಿ ಗುತ್ತಿಗೆ ಪ್ರದೇಶಗಳನ್ನು ಡ್ರೋನ್‌ ಉಪಕರಣದ ಮೂಲಕ ಸಮೀಕ್ಷೆ ನಡೆಸಿ ಕಲ್ಲುಗಣಿ ಗುತ್ತಿಗೆ ಪ್ರದೇಶಗಳಲ್ಲಿ ಗುತ್ತಿಗೆದಾರರು ಉತ್ಪಾದಿಸಿ ಸಾಗಾಣಿಕೆ ಮಾಡಿದ ಉಪ ಖನಿಜದ ಪ್ರಮಾಣಕ್ಕೆ ಅನುಗುಣವಾಗಿ ರಾಜಧನ ಮತ್ತು ಇತರೆ ಅನ್ವಯಿಕ ಶುಲ್ಕಗಳನ್ನು ಸಂಗ್ರಹಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ ಸಚಿವರು, ಸಂಪುಟ ಉಪ ಸಮಿತಿ ಶಿಫಾರಸಿನನ್ವಯ 2024ರ ಡಿಸೆಂಬರ್‌ 4ರಂದು (04.12.2024) ನಡೆದ ಸಚಿವ ಸಂಪುಟದ ಸಭೆಯಲ್ಲಿ ಒನ್‌ ಟೈಮ್‌ ಸೆಟ್ಲ್‌ಮೆಂಟ್‌ (OTS) ಪದ್ಧತಿಯನ್ನು ಅನುಷ್ಠಾನಗೊಳಿಸಲು ಕೆಲವು ಶಿಫಾರಸಿನೊಂದಿಗೆ ಅನುಮೋದನೆಗೊಂಡಿರುತ್ತದೆ. OTS ಪದ್ಧತಿಯನ್ನು ಜಾರಿಗೊಳಿಸಿ ಕಲ್ಲುಗಣಿ ಗುತ್ತಿಗೆದಾರರಿಂದ ಸರ್ಕಾರಕ್ಕೆ ಬರಬೇಕಾದ ರಾಜಧನ ಸೋರಿಕೆಯನ್ನು ಸಂಗ್ರಹಿಸಲು ಕ್ರಮ ವಹಿಸುವ ನಿಟ್ಟಿನಲ್ಲಿ ನಿಯಮ ಹಾಗೂ ಮಾರ್ಗಸೂಚಿಗಳನ್ನು ಅಂತಿಮಗೊಳಿಸಿದೆ ಎಂದರು.

ಪ್ರಸ್ತುತ One State One GPS ಕೇಂದ್ರೀಕೃತ ವ್ಯವಸ್ಥೆಯಡಿಯಲ್ಲಿ GPS ಅಳವಡಿಸಿದ ಖನಿಜ ಸಾಗಾಣಿಕಾ ವಾಹನಗಳ ಮೇಲೆ ನಿಗವಹಿಸಲಾಗುತ್ತಿದೆ. GPS ಅಳವಡಿಸದೇ ಅನಧಿಕೃತವಾಗಿ ಖನಿಜ ಸಾಗಾಣಿಕಾ ವಾಹನಗಳ ಮೇಲೆ ನಿಗವಹಿಸಲು ANPR ಕ್ಯಾಮೆರಾಗಳನ್ನು ಪ್ರಮುಖ ತನಿಖಾ ಠಾಣೆಗಳಲ್ಲಿ ಮತ್ತು ಕಲ್ಲುಗಣಿ ಗುತ್ತಿಗೆ/ಕ್ರಷರ್‌ಗಳ ಕ್ಲಸ್ಟರ್ ಪ್ರದೇಶಗಳಲ್ಲಿ ಅಳವಡಿಸಲು ಕ್ರಮ ವಹಿಸಲಾಗುತ್ತಿದೆ ಎಂದು ಹೇಳಿದರು.

ಸರ್ಕಾರಿ ಕಾಮಗಾರಿಗಳಲ್ಲಿ ಬಳಕೆ ಮಾಡುವ ಉಪ ಖನಿಜಕ್ಕೆ ಕಡ್ಡಾಯವಾಗಿ Royalty Deferred Mineral Dispatch Permit (RDMDP) ಅನ್ನು ಪಡೆದು ಬಳಕೆ ಮಾಡಲಾದ ಉಪ ಖನಿಜದ ಪ್ರಮಾಣಕ್ಕೆ ಅನುಗುಣವಾಗಿ ರಾಜಧನ, ಹೆಚ್ಚುವರಿ ಪಾವತಿ, ಡಿಎಂಎಫ್ ಮತ್ತು ಇತರೆ ಅನ್ವಯಿಕ ಶುಲ್ಕಗಳನ್ನು ಪಾವತಿಸಿಕೊಳ್ಳಲು ಇಲಾಖೆಯ ತಂತ್ರಾಂಶದಲ್ಲಿ ಸೂಕ್ತ ಬದಲಾವಣೆ ಮಾಡಲಾಗುತ್ತಿದ್ದು, ಇದರಿಂದ ಸರ್ಕಾರಕ್ಕೆ ರಾಜಧನ ಸೋರಿಕೆ ಮತ್ತು ಇತರೆ ಅನ್ವಯಿಸುವ ತೆರಿಗೆಗಳನ್ನು ಕಡ್ಡಾಯವಾಗಿ ಕಾಮಗಾರಿ ಗುತ್ತಿಗೆದಾರರ ಬಿಲ್ಲುಗಳಿಂದ ಕಟ್ಟಿಸಿಕೊಳ್ಳಲು ಕ್ರಮ ವಹಿಸಲಾಗುತ್ತಿದೆ ಎಂದರು.

ಈ ಸುದ್ದಿಯನ್ನೂ ಓದಿ | Karnataka Rains: ರಾಜ್ಯದಲ್ಲಿ ಮುಂದಿನ 4 ದಿನ ಅಬ್ಬರಿಸಲಿದೆ ಮಳೆ; ಯೆಲ್ಲೋ ಅಲರ್ಟ್‌ ಘೋಷಣೆ

ಸಭೆಯಲ್ಲಿ ಸರ್ಕಾರಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯವಾದ ಕೋರಿಕೆಗಳನ್ನು ಸಲ್ಲಿಸಲಾಯಿತು. ಮುಖ್ಯ ಮತ್ತು ಉಪ ಖನಿಜಗಳ ಗಣಿಗಾರಿಕೆ/ ಸಾಗಾಣಿಕೆ ಮೇಲೆ ನಿಗವಹಿಸಲು ಆಯ್ದ ಸ್ಥಳಗಳಲ್ಲಿ ಖನಿಜ ತನಿಖಾ ಠಾಣೆಗಳ ಸ್ಥಾಪನೆ ನಿರ್ವಹಣೆ ಮತ್ತು ಸಿಬ್ಬಂದಿ ನಿಯೋಜನೆ ಹಾಗೂ ಅನಧಿಕೃತ ಗಣಿಗಾರಿಕೆ/ ದಾಸ್ತಾನನ್ನು ಜಪ್ತಿ ಮಾಡಿ ವಿಲೇ ಪಡಿಸಲು ತಗಲುವ ವೆಚ್ಚವನ್ನು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿಗೆ ಕಾರ್ಪಸ್ ಫಂಡ್ ಮೂಲಕ ಭರಿಸಲು ಅನುದಾನ ನೀಡುವುದು. ಅನಧಿಕೃತ ಗಣಿಗಾರಿಕೆ/ಸಾಗಾಣಿಕೆ/ದಾಸ್ತಾನನ್ನು ನಿಯಂತ್ರಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿಗಳನ್ನು ನಿಯೋಜಿಸುವುದು. ಇಲಾಖೆಯಲ್ಲಿ ಖಾಲಿಯಿರುವ ಭೂವಿಜ್ಞಾನಿ ಹುದ್ದೆಗಳನ್ನು ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಅಧಿಕಾರಿಗಳು ಸಚಿವರ ಮೂಲಕ ಸರ್ಕಾರಕ್ಕೆ ಕೋರಿದರು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.