ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sirsi News: ಸಂಚಾರ ದಟ್ಟಣೆ ತಡೆಯಲು ರಸ್ತೆಯ ಮಧ್ಯದಲ್ಲಿಯ ಹೊಂಡ ಮುಚ್ಚಿದ ಪೊಲೀಸ್ ಸಿಬ್ಬಂದಿ

ಶಿರಸಿಯ ನಗರದಲ್ಲಿ ಹಲವು ಕಡೆಗಳಲ್ಲಿಯ ಸರ್ಕಲ್ ಗಳು ಧುತ್ತನೆ ವಾಹನವನ್ನು ನಿಲ್ಲಿಸು ವಂತೆ ಮಾಡುತ್ತವೆ. ಈಗಲೇ ಹೊಸದಾಗಿ ಆರಂಭವಾಗಿರುವ ಟ್ರಾಪಿಕ್ ಸ್ಟೇಷನ್ ಇದೆ ಟ್ರಾಫಿಕ್ ಪೊಲೀಸ್ ತಡೆಯುತ್ತಾರೆಂದಲ್ಲ. ರಸ್ತೆಯ ಮಧ್ಯೆ ಇರುವ ದೊಡ್ಡ ಹೊಂಡಗಳಿಂದಾಗಿ. ಸರ್ಕಲ್ ಗಳ ರಸ್ತೆ ಮಧ್ಯೆ ಇರುವ ಹೊಂಡದಿಂದಾಗಿ ವಾಹನ ಸವಾರರಿಗೆ ಇದು ತೊಂದರೆಯಾಗುತ್ತಿತ್ತು

ಟ್ರಾಫಿಕ್ ತಡೆಯಲು ಹೊಂಡ ಮುಚ್ಚಿದ ಟ್ರಾಫಿಕ್ ಪೊಲೀಸ್ ಸಿಬ್ಬಂದಿ

Profile Ashok Nayak Jun 12, 2025 2:46 PM

ಶಿರಸಿ: ಶಿರಸಿಯ ನಗರದಲ್ಲಿ ಹಲವು ಕಡೆಗಳಲ್ಲಿಯ ಸರ್ಕಲ್ ಗಳು ಧುತ್ತನೆ ವಾಹನವನ್ನು ನಿಲ್ಲಿಸು ವಂತೆ ಮಾಡುತ್ತವೆ. ಈಗಲೇ ಹೊಸದಾಗಿ ಆರಂಭವಾಗಿರುವ ಟ್ರಾಫಿಕ್ ಸ್ಟೇಷನ್ ಇದೆ, ಟ್ರಾಫಿಕ್ ಪೊಲೀಸ್ ತಡೆಯುತ್ತಾರೆಂದಲ್ಲ. ಸರ್ಕಲ್ ಗಳ ರಸ್ತೆ ಮಧ್ಯೆ ಇರುವ ಹೊಂಡದಿಂದಾಗಿ ವಾಹನ ಸವಾರರಿಗೆ ಇದು ತೊಂದರೆಯಾಗುತ್ತಿತ್ತು.

ವೇಗವಾಗಿ ಬಂದ ವಾಹನಗಳು ಹೊಂಡ ಕಂಡು ಬ್ರೇಕ್ ಹಾಕುತ್ತಿದ್ದವು. ಇದರಿಂದ ಹಿಂಬದಿಯ ಸವಾರರು ಮುಗ್ಗರಿಸುವಂತಾಗುತ್ತಿತ್ತು. ಅಲ್ಲದೇ ಟ್ರಾಫಿಕ್ ಒತ್ತಡವಾಗುತ್ತಿತ್ತು.

ನಗರದ ಅಶ್ವಿನಿ ಸರ್ಕಲ್ ನ ರಸ್ತೆಯಲ್ಲಿಯ ಹೊಂಡದಿಂದ ಸವಾರರು ಪರದಾಡುವುದನ್ನು ಕಂಡ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ರಾಘವೇಂದ್ರ ನಾಯ್ಕ ತಾವೇ ಕಲ್ಲುಗಳನ್ನು ಹೆಕ್ಕಿ ತಂದು ಹೊಂಡ ಮುಚ್ಚುತ್ತಿರುವುದು ಕಂಡುಬಂತು. ಈ ಕುರಿತು ರಾಘವೇಂದ್ರ ಅವರನ್ನು ಕೇಳಿದರೆ, ಇಲ್ಲಿಯ ಸರ್ಕಲ್ ನಲ್ಲಿ ನಾನು ನಿಂತಿರುತ್ತೇನೆ. ವಾಹನ ಸವಾರರ ಪರದಾಟ ನೋಡೋದಿಕ್ಕಾಗಿಲ್ಲ. ಅದಕ್ಕೆ ಹೀಗೆ ಮಾಡಿದೆ.

ನನ್ನ ಹೆಸರು, ಹೇಳಿಕೆ ಎಲ್ಲ ಹಾಕುವುದು ಬೇಡ. ಸಣ್ಣ ಕೆಲಸ ಇದು ಎಂದು ಮಾಡಿದ ಕಾರ್ಯಕ್ಕೆ ಪ್ರಶಂಸೆ ಪಡೆಯಲೂ ಸಹ ಸಿದ್ದರಿರಲಿಲ್ಲ. ಏನೇ ಆಗಲಿ ಸುಗಮ ಸಂಚಾರ ವ್ಯವಸ್ಥೆಯ ಉದ್ದೇಶ ದಿಂದ ಕರ್ತವ್ಯ ನಿರತ ಸಿಬ್ಬಂದಿಯ ಈ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು.