ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Mahakumbh: 27 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವ ಕುಂಭಮೇಳದಲ್ಲಿ ಬಾಬಾ ಆಗಿ ಪ್ರತ್ಯಕ್ಷ!

27 ವರ್ಷಗಳ ಹಿಂದೆ ಕಾಣೆಯಾಗಿದ್ದ ಜಾರ್ಖಂಡ್​ ವ್ಯಕ್ತಿ ಅಘೋರಿ ರೂಪದಲ್ಲಿ ಮಹಾಕುಂಭ ಮೇಳದಲ್ಲಿ ಪತ್ತೆಯಾಗಿದ್ದಾರೆ. ಗಂಗಾ ಸಾಗರ್ ಮೂಲತಃ ಜಾರ್ಖಂಡ್​ನವರು 65 ವರ್ಷ ವಯಸ್ಸಿನ ಅವರು ಈಗ ಬಾಬಾ ರಾಜ್​ಕುಮಾರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. ಇದೀಗ ಕುಟುಂಬಸ್ಥರು ಇವರೇ ಅವರೇ ಎಂದು ಪಟ್ಟು ಹಿಡಿದಿದ್ದು, ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ.

27 ವರ್ಷಗಳ ಹಿಂದೆ ಮನೆ ಬಿಟ್ಟು ಹೋದವ ಕುಂಭಮೇಳದಲ್ಲಿ ಪ್ರತ್ಯಕ್ಷ!

Mahakumbh Mela

Profile Vishakha Bhat Jan 30, 2025 2:20 PM

ಲಖನೌ : ಉತ್ತರ ಪ್ರದೇಶ್‌ನ (Uttar Pradesh) ಪ್ರಯಾಗ್‌ ರಾಜ್‌ನಲ್ಲಿ ಮಹಾಕುಂಭ ಮೇಳ (Mahakumbh) ನಡೆಯುತ್ತಿದ್ದು, ಕೋಟ್ಯಾಂತರ ಜನರು ಆಗಮಿಸುತ್ತಿದ್ದು, ಪುಣ್ಯ ಸ್ನಾನ ಕೈಗೊಳ್ಳುತ್ತಿದ್ದಾರೆ. ಇದೀಗ ಕುಂಭ ಮೇಳದಲ್ಲಿ ಒಂದು ಆಶ್ಚರ್ಯಕಾರಕ ಘಟನೆಯೊಂದು ನಡೆದಿದ್ದು, 27 ವರ್ಷಗಳ ಹಿಂದೆ ಕುಂಟುಂಬವನ್ನು ತೊರೆದಿದ್ದ ವ್ಯಕ್ತಿಯೊಬ್ಬರು ಅಘೋರಿಯಾಗಿ ಪ್ರತ್ಯಕ್ಷರಾಗಿದ್ದಾರೆ. ಅವರ ಕುಟುಂಬದವರು ಅವರನ್ನು ಈಗ ಕುಂಭಮೇಳದಲ್ಲಿ ಪತ್ತೆ ಹಚ್ಚಿದ್ದಾರೆ.

65 ವರ್ಷ ವಯಸ್ಸಿನ ಗಂಗಾ ಸಾಗರ್‌ ಎಂಬ ವ್ಯಕ್ತಿ ಮೂಲತಃ ಜಾರ್ಖಂಡ್​ನವರಾಗಿದ್ದು ,ಈಗ ಬಾಬಾ ರಾಜ್​ಕುಮಾರ್ ಎಂದೇ ಪ್ರಖ್ಯಾತಿ ಪಡೆದಿದ್ದಾರೆ. 1998ರಲ್ಲಿ ಪಾಟ್ನಾಗೆ ಹೋಗಿದ್ದ ನಂತರ ನಾಪತ್ತೆಯಾಗಿದ್ದರು. ಇದುವರೆಗೂ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಅವರ ಪತ್ನಿ ಧನ್ವಾ ದೇವಿ ಅವರು ತಮ್ಮ ಇಬ್ಬರು ಮಕ್ಕಳಾದ ಕಮಲೇಶ್ ಮತ್ತು ವಿಮಲೇಶ್ ಅವರನ್ನು ಒಬ್ಬಂಟಿಯಾಗಿ ಕಷ್ಟಪಟ್ಟು ಬೆಳೆಸಿದ್ದಾರೆ.

ಇದೀಗ ಕುಂಭಮೇಳದಲ್ಲಿ ಬಾಬಾ ಆಗಿ ಪ್ರತ್ಯಕ್ಷರಾಗಿದ್ದಾರೆ ಎಂದು ಕುಟುಂಬಸ್ಥರು ವಾದ ಮಾಡಿದ್ದಾರೆ. ಈ ಬಗ್ಗೆ ಗಂಗಾಸಾಗರ್ ಅವರ ಕಿರಿಯ ಸಹೋದರ ಮುರಳಿ ಯಾದವ್ ಮಾತನಾಡಿ, ಕುಂಭ ಮೇಳದಲ್ಲಿ ನಮ್ಮ ಸಂಬಂಧಿಕರು ಗಂಗಾಸಾಗರ್ ಅವರನ್ನು ಹೋಲುವ ವ್ಯಕ್ತಿಯನ್ನು ಗಮನಿಸಿ ಅವರು ಫೋಟೊ ತೆಗೆದು ಕಳುಹಿಸಿದ್ದರು. ಧನ್ವಾ ದೇವಿ ಹಾಗೂ ಇಬ್ಬರು ಪುತ್ರರು ಅವರನ್ನು ವಾಪಸ್ ಕರೆತರಲೆಂದು ಕುಂಭ ಮೇಳಕ್ಕೆ ಹೋಗಿದ್ದರು. ಅವರು ಮೇಳದಲ್ಲಿ ಬಾಬಾ ರಾಜ್‌ಕುಮಾರ್ ಅವರನ್ನು ಭೇಟಿಯಾದಾಗ, ಅವರು ತಮ್ಮ ಹಿಂದಿನ ಗುರುತನ್ನು ಒಪ್ಪಿಕೊಳ್ಳಲು ನಿರಾಕರಿಸಿದರು. ಆದರೆ ನಮಗೆ ಖಚಿತವಾಗಿ ತಿಳಿದಿದೆ.

ಅವರ ಉದ್ದವಾದ ಹಲ್ಲುಗಳು, ಹಣೆಯ ಮೇಲೆ ಗಾಯ ಮತ್ತು ಮೊಣಕಾಲಿನ ಮೇಲಿನ ಗಾಯದಂತಹ ವಿವರಗಳನ್ನು ಧನ್ವಾದೇವಿ ಗುರುತಿಸಿದ್ದಾರೆ ಹಾಗೂ ವ್ಯಕ್ತಿಯ ನಿಜವಾದ ಗುರುತನ್ನು ಖಚಿತಪಡಿಸಲು ಡಿಎನ್ಎ ಪರೀಕ್ಷೆಗೆ ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನೂ ಓದಿ : Mahakumbh 2025 : ಮಹಾಕುಂಭ ಮೇಳಕ್ಕೆ ಹೋಗುವವರಿಗೆ ಸಿಹಿ ಸುದ್ದಿ; ವಿಮಾನ ಟಿಕೆಟ್ ದರ ಅರ್ಧದಷ್ಟು ಇಳಿಕೆ!

ನಾವು ಕುಂಭಮೇಳ ಮುಗಿಯುವವರೆಗೂ ಕಾಯುತ್ತೇವೆ ಮತ್ತು ಅಗತ್ಯವಿದ್ದರೆ, ಡಿಎನ್‌ಎ ಪರೀಕ್ಷೆಗೆ ಒತ್ತಾಯಿಸುತ್ತೇವೆ. ಪರೀಕ್ಷೆಯು ಹೊಂದಾಣಿಕೆಯಾಗದಿದ್ದರೆ, ನಾವು ಬಾಬಾ ರಾಜ್‌ಕುಮಾರ್‌ಗೆ ಕ್ಷಮೆಯಾಚಿಸುತ್ತೇವೆ" ಎಂದು ಮುರಳಿ ಯಾದವ್ ಹೇಳಿದ್ದಾರೆ.ಗಂಗಾಸಾಗರ್ ನಾಪತ್ತೆಯಾಗಿದ್ದು ಅವರ ಕುಟುಂಬದ ಮೇಲೆ ಅದರಲ್ಲೂ ಪುಟ್ಟ ಮಕ್ಕಳ ಮೇಲೆ ಗಾಢ ಪರಿಣಾಮ ಬೀರಿತ್ತು. ಹಿರಿಯ ಮಗನಿಗೆ ಆಗ ಕೇವಲ ಎರಡು ವರ್ಷ, ಕಿರಿಯ ಮಗ ಇನ್ನೂ ಪತ್ನಿಯ ಹೊಟ್ಟೆಯೊಳಗಿದ್ದ ಎಂದು ಅವರು ತಿಳಿಸಿದ್ದಾರೆ.