ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ram Navami 2026: ಇಂದು ನೀವು ಈ ಕೆಲಸ ಮಾಡಿದ್ರೆ ನಿಮ್ಮ ಅದೃಷ್ಟ ಖುಲಾಯಿಸುತ್ತದೆ!

ರಾಮನವಮಿಯಂದು ಶ್ರೀರಾಮನ ಪೂಜೆ, ಹನುಮಾನ್ ಚಾಲೀಸಾ ಪಠಣ, ರಾಮಚರಿತಮಾನಸ ಓದುವುದು ಹಾಗೂ ಸೀತಾಮಾತೆಗೆ ಪೂಜೆ ಮಾಡುವುದರಿಂದ ಜೀವನದಲ್ಲಿ ಸಂತೋಷ, ಶಾಂತಿ ಮತ್ತು ಸಮೃದ್ಧಿ ಹೆಚ್ಚುತ್ತದೆ. ಈ ಶುಭ ದಿನದಲ್ಲಿ ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ರಾಮನವಮಿ: ಈ ದಿನ ಏನು ಮಾಡಬೇಕು?

-

Profile
Sushmitha Jain Mar 26, 2026 8:08 AM

ಬೆಂಗಳೂರು: ಚೈತ್ರ ಮಾಸದ ಒಂಬತ್ತನೇ ದಿನ ಆಚರಿಸುವ ರಾಮನವಮಿ ಹಬ್ಬವು ಭಗವಾನ್ ಶ್ರೀರಾಮನ ಜನ್ಮೋತ್ಸವವೆಂದು (Rama Navami) ಭಕ್ತರು ನಂಬುತ್ತಾರೆ. ಈ ದಿನವನ್ನು ಅತ್ಯಂತ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಹಿಂದೂ ಧರ್ಮದ(Hindu Religion) ಪ್ರಮುಖ ಹಬ್ಬಗಳಲ್ಲಿ ಒಂದಾದ ರಾಮನವಮಿ, ಧರ್ಮದ ಸ್ಥಾಪನೆ ಮತ್ತು ದುಷ್ಟಶಕ್ತಿಗಳ ನಾಶದ ಸಂಕೇತವಾಗಿದೆ. ಈ ಶುಭ ದಿನದಲ್ಲಿ ಕೆಲವು ವಿಶೇಷ ಕಾರ್ಯಗಳನ್ನು ಮಾಡಿದರೆ ಜೀವನದಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಇಂದಿಗೂ ಭಕ್ತರು ರಾಮಜನ್ಮೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತಾರೆ. ಈ ಪವಿತ್ರ ದಿನದಲ್ಲಿ ಕೆಲವು ವಿಶೇಷ ಆಚರಣೆಗಳನ್ನು ಪಾಲಿಸಿದರೆ ಜೀವನದಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನುವ ನಂಬಿಕೆ ಇದೆ. ಹಾಗಾದರೆ, ರಾಮನವಮಿಯಂದು ಏನು ಮಾಡಬೇಕು ನೋಡಿ..

ಭಗವಾನ್ ಶ್ರೀರಾಮನು ವಿಷ್ಣುವಿನ ಏಳನೇ ಅವತಾರನೆಂದು ಪರಿಗಣಿಸಲಾಗುತ್ತದೆ. ವಿಷ್ಣುವಿಗೆ ಹೂವುಗಳು ಅತ್ಯಂತ ಪ್ರಿಯವಾಗಿರುವುದರಿಂದ, ರಾಮನವಮಿಯಂದು ಶ್ರೀರಾಮನಿಗೆ ಹಳದಿ ಹೂಗಳನ್ನು ಅರ್ಪಿಸುವುದು ಶುಭಕರ. ಜೊತೆಗೆ, ಹಳದಿ ಬಣ್ಣದ ವಸ್ತ್ರಗಳನ್ನು ಧರಿಸಿ ಪೂಜೆ ಮಾಡುವುದರಿಂದ ವಿಶೇಷ ಫಲಗಳು ದೊರೆಯುತ್ತವೆ.

ಈ ದಿನ ರಾಮ ದರ್ಬಾರ್‌ನ ಚಿತ್ರ ಅಥವಾ ವಿಗ್ರಹವನ್ನು ಪೂಜಿಸುವುದು ಅತ್ಯಂತ ಮಹತ್ವದ್ದಾಗಿದೆ. ಪೂಜೆಗೆ ಮೊದಲು ಹಳದಿ ಬಟ್ಟೆ ಹಾಸಿದ ಪೀಠದ ಮೇಲೆ ಚಿತ್ರವನ್ನು ಇಟ್ಟು, ಧೂಪ-ದೀಪ ಬೆಳಗಿ ನೈವೇದ್ಯ ಸಮರ್ಪಿಸಬೇಕು. ಇದರಿಂದ ಭಕ್ತರ ಮನೋಭಿಲಾಷೆಗಳು ಈಡೇರುತ್ತವೆ ಹಾಗೂ ಮನೆಯಲ್ಲಿ ಸದಾ ಸುಖ-ಶಾಂತಿ ನೆಲೆಸುತ್ತದೆ.

ರಾಮನವಮಿಯಂದು ಆಂಜನೇಯ ಸ್ವಾಮಿಯ ಪೂಜೆಯೂ ವಿಶೇಷವಾಗಿದೆ. ಹನುಮಂತನು ಶ್ರೀರಾಮನ ಅತ್ಯಂತ ಭಕ್ತನಾಗಿರುವುದರಿಂದ, ಅವನನ್ನು ಪೂಜಿಸುವುದರಿಂದ ಎಲ್ಲಾ ಸಂಕಷ್ಟಗಳು ನಿವಾರಣೆಯಾಗುತ್ತವೆ.

ರಾಮನವಮಿಯ ಪ್ರಯುಕ್ತ ರಾಮಭಕ್ತನ ಕುರಿತ ʻಮಹರ್ಷಿ ವಾಲ್ಮಿಕಿʼ ಕಿರುಚಿತ್ರ ರಿಲೀಸ್‌

ಹನುಮಾನ್ ಚಾಲೀಸಾ ಪಠಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಹಾಗೂ ಜೀವನದ ಕಷ್ಟಗಳು ದೂರವಾಗುತ್ತವೆ.

ಈ ದಿನ ರಾಮಚರಿತಮಾನಸ ಪಠಣಕ್ಕೂ ಹೆಚ್ಚಿನ ಮಹತ್ವವಿದೆ. ಸಂಪೂರ್ಣ ರಾಮಾಯಣವನ್ನು ಪಠಿಸಲು ಸಾಧ್ಯವಾಗದಿದ್ದರೆ, ಬಾಲಖಂಡ ಮತ್ತು ಸುಂದರಕಾಂಡ ಪಠಿಸುವುದರಿಂದಲೂ ಶುಭ ಫಲಗಳು ದೊರೆಯುತ್ತವೆ. ಕುಟುಂಬದೊಂದಿಗೆ ಈ ಪಠಣ ಮಾಡುವುದರಿಂದ ಮನೆಯಲ್ಲಿನ ಒಗ್ಗಟ್ಟು ಮತ್ತು ಸಂತೋಷ ಹೆಚ್ಚುತ್ತದೆ.

ಇನ್ನೂ, ರಾಮನಿಗೆ ಪ್ರಿಯವಾದ ಸೀತಾಮಾತೆಗೆ ಈ ದಿನ ಕೆಂಪು ಚುನರಿ ಅರ್ಪಿಸುವುದು ದಾಂಪತ್ಯ ಜೀವನಕ್ಕೆ ಶುಭಕರವೆಂದು ನಂಬಲಾಗುತ್ತದೆ. ವಿವಾಹದಲ್ಲಿ ವಿಳಂಬವಾಗುತ್ತಿದ್ದರೆ, ಸೀತಾಮಾತೆಯ ಪಾದಗಳಿಗೆ ಸಿಂಧೂರ ಅರ್ಪಿಸುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ ಹಾಗೂ ದಾಂಪತ್ಯ ಜೀವನದಲ್ಲಿ ಸೌಹಾರ್ದತೆ ಹೆಚ್ಚುತ್ತದೆ.

ಈ ರೀತಿಯಾಗಿ ರಾಮನವಮಿ ದಿನವನ್ನು ಆಚರಿಸುವುದರಿಂದ ಭಗವಾನ್ ಶ್ರೀರಾಮನ ಕೃಪೆ ಲಭಿಸಿ ಜೀವನದಲ್ಲಿ ಸದಾ ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ.