ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Ravi Mohan: ನಟ ರವಿ ಮೋಹನ್‌ ಗೆಳತಿ ಕೆನಿಶಾ ಗರ್ಭಿಣಿ? ಪತ್ನಿ ಜೊತೆ ಡಿವೋರ್ಸ್‌ ವಾರ್‌ ನಡೀತಿರೋವಾಗ ಏನಿದು ರೂಮರ್ಸ್‌?

ನಟ ರವಿ ಮೋಹನ್‌ (ಜಯಂ ರವಿ) ಮತ್ತು ಆರತಿ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು. ಇದರ ಬೆನ್ನಲ್ಲೆ ಗಾಯಕಿ ಕೆನಿಶಾ ಜೊತೆ ನಟ ರವಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗಿತ್ತು‌. ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕುಂದ್ರ ತೂರ್ ಮುರುಗನ್ ದೇವಸ್ಥಾನಕ್ಕೆ ಇವರಿಬ್ಬರು ಭೇಟಿ ನೀಡಿ ಹೂ ಮಾಲೆ ಧರಿಸಿಕೊಂಡ ಫೋಟೊ ಇತ್ತೀಚೆಗಷ್ಟೆ ವೈರಲ್ ಆಗಿತ್ತು‌. ಇದರ ಜೊತೆಗೆ ಕೆನಿಶಾ ಗರ್ಭಿಣಿ ಎಂಬ ವದಂತಿ ಹಬ್ಬಿದ್ದು, ಈ ಬಗ್ಗೆ ಗಾಯಕಿ ಕೆನಿಶಾ ಪ್ರತಿಕ್ರಿಯೆ ನೀಡಿದ್ದಾರೆ.

ನಟ ರವಿ ಮೋಹನ್‌ ಗೆಳತಿ ಕೆನಿಶಾ ಗರ್ಭಿಣಿಯೇ? ಏನಿದು ರೂಮರ್ಸ್‌?

Profile Pushpa Kumari Jun 10, 2025 3:47 PM

ನವದೆಹಲಿ: ಕಾಲಿವುಡ್ ಸ್ಟಾರ್ ರವಿ ಮೋಹನ್‌ (ಜಯಂ ರವಿ) (Jayam Ravi) ಸಿನಿಮಾ ಹೊರತಾಗಿ ಇತ್ತೀಚೆಗೆ ವೈಯಕ್ತಿಕ ವಿಚಾರಕ್ಕೂ ಬಹಳಷ್ಟು ಸುದ್ದಿಯಲ್ಲಿದ್ದಾರೆ. ನಟ ಜಯಂ ರವಿ ಮತ್ತು ಆರತಿ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿತ್ತು. ಇದರ ಬೆನ್ನಲ್ಲೇ ಗಾಯಕಿ ಕೆನಿಶಾ (Kenishaa) ಜೊತೆ ನಟ ರವಿ ಸಾರ್ವಜನಿಕ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತಿದ್ದು ಇವರಿಬ್ಬರು ಡೇಟಿಂಗ್‌ನಲ್ಲಿದ್ದಾರೆ ಎನ್ನಲಾಗಿತ್ತು‌. ತಮಿಳುನಾಡಿನ ಕಾಂಚಿಪುರಂನಲ್ಲಿರುವ ಕುಂದ್ರ ತೂರ್ ಮುರುಗನ್ ದೇವಸ್ಥಾನಕ್ಕೆ ಇವರಿಬ್ಬರು ಭೇಟಿ ನೀಡಿ ಹೂ ಮಾಲೆ ಧರಿಸಿಕೊಂಡ ಫೋಟೊ ಇತ್ತೀಚೆಗಷ್ಟೆ ವೈರಲ್ ಆಗಿತ್ತು‌. ಇದರ ಜೊತೆಗೆ, ಕೆನೀಶಾ ಗರ್ಬಿಣಿ ಎಂಬ ವದಂತಿ ಹಬ್ಬಿದ್ದು ಈ ಬಗ್ಗೆ ಗಾಯಕಿ ಕೆನಿಶಾ ಪ್ರತಿಕ್ರಿಯೆ ನೀಡಿದ್ದಾರೆ.

ಗಾಯಕಿ, ವೈದ್ಯೆ ಕೆನಿಶಾ ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಭಾಗಿಯಾಗಿದ್ದು ಕೆಲವು ವೈಯಕ್ತಿಕ ವಿಚಾರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಸೋಶಿಯಲ್ ಮಿಡಿಯಾದಲ್ಲಿ ಕೂಡ ಆ್ಯಕ್ಟಿವ್ ಆಗಿರುವ ಕೆನಿಶಾ ಅವರು ಇತ್ತೀಚೆಗಷ್ಟೆ ತಮ್ಮ ಫೋಟೋ ಒಂದನ್ನು ಹಂಚಿಕೊಂಡು ಅದರ ಕೆಳಗೆ ಹೋಪ್ ಎಂದು ಕೆಲವು ಸಾಲು ಬರೆದುಕೊಂಡಿದ್ದರು. ಅದನ್ನು ಕಂಡ ನೆಟ್ಟಿಗರು ಕೆನಿಶಾ ಗರ್ಭಿಣಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಉಂಟಾಗಿತ್ತು. ಇದೀಗ ಗರ್ಭಿಣಿ ಎಂದು ತಪ್ಪಾಗಿ ಭಾವಿಸಿದ್ದರ ಬಗ್ಗೆ ಸ್ವತಃ ಕೆನಿಶಾ ಪ್ರತಿಕ್ರಿಯೆ ನೀಡಿದ್ದಾರೆ.

ಕೆನಿಶಾ ವೈದ್ಯ ವೃತ್ತಿಯ ಜೊತೆಗೆ ಗಾಯಕಿಯಾಗಿ ಕೂಡ ಸಾಕಷ್ಟು ಪ್ರಸಿದ್ಧಿ ಪಡೆದಿದ್ದಾರೆ. ನಾನೇ ಹಾಡಿದ್ದ ಹಾಡಿನ ಒಂದು ಪದ ಅಷ್ಟೇ ಬಳಸಿ ಪೋಸ್ಟ್ ಹಾಕಿದ್ದೆ ಆದರೆ ಅದನ್ನು ಜನರು ತಪ್ಪಾಗಿ ಭಾವಿಸಿದ್ದಾರೆ. ನಾನು ಗರ್ಭಿಣಿ ಎಂದು ಅನೇಕ ಜನರು ಹೇಳುತ್ತಿದ್ದಾರೆ. ಆದರೆ ನಾನು ಗರ್ಭಿಣಿಯಲ್ಲ ಎಂದು ಅವರು ಖಾಸಗಿ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ.ಗಾಸಿಪ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಯಾರೂ ಏನು ಹೇಳಿದರೂ ಅದು ಅಂತಿಮವಾಗಿ ಅವರಿಗೆ ಹಿಂತಿರುಗುತ್ತದೆ. ಕರ್ಮ ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ. ಒಂದು ದಿನ, ಸತ್ಯ ಎಲ್ಲರಿಗೂ ಸ್ಪಷ್ಟವಾಗುತ್ತದೆ ಎಂದರು.

ಇದನ್ನು ಓದಿ:Kannada New Movie: ಸಿನಿಮಾ ರೂಪದಲ್ಲಿ ಬರಲಿದೆ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರ ಜೀವನ ಚರಿತ್ರೆ

ನಟ ಜಯಂ ರವಿ ಹಾಗೂ ಆರತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಈಗ ಅವರಿಬ್ಬರ ನಡುವೆ ಅನೇಕ ಕಾರಣ ಗಳಿಂದ ವೈಮನಸ್ಸು ಮೂಡಿದೆ‌‌. ಮೇ 21ರಂದು ವಿಚ್ಛೇದನಕ್ಕಾಗಿ ಚೆನ್ನೈನಲ್ಲಿರುವ ಕೌಟುಂಬಿಕ ನ್ಯಾಯಾಲಯಕ್ಕೆ ತೆರಳಿದ್ದು ಮತ್ತೆ ವಿವಾಹ ಸಂಬಂಧವನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ, ಪರಸ್ಪರ ವಿಚ್ಛೇದನ ಕೊಡಲು ಇಬ್ಬರೂ ಒಪ್ಪಿದ್ದಾರೆ ಎಂಬುದು ಖಾತರಿಯಾಗಿದೆ.

ಇನ್ನು ಕೆನಿಶಾ ಕೂಡ ಈ ಹಿಂದೆಯೇ ಒಂದು ಮದುವೆಯಾಗಿ ಆ ವಿವಾಹ ಸಂಬಂಧದಿಂದ ದೂರ ಉಳಿದಿದ್ದ ಸುದ್ದಿ ಕೂಡ ಹಬ್ಬಿತ್ತು. ಜಯಂ ರವಿ ಹಾಗೂ ಆರತಿ ಬೇರೆಯಾಗುವುದಕ್ಕೆ ಗಾಯಕಿ ಕೆನಿಶಾ ಕಾರಣ ಎಂದೇ ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಕೆನಿಶಾ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನು ವಿಚ್ಛೇದನ ಪಡೆಯುವ ಕಾರಣ ಆರತಿ ಅವರು ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದಾರೆ. ಪ್ರತಿ ತಿಂಗಳು 40 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಆರತಿ ಆಗ್ರಹಿಸಿದ್ದಾರೆ.