ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kiccha Sudeep: ಡಿಕೆ ಶಿವಕುಮಾರ್ ನಟ್ಟು-ಬೋಲ್ಟ್ ಹೇಳಿಕೆಗೆ ಖಡಕ್ ತಿರುಗೇಟು ಕೊಟ್ಟ ಕಿಚ್ಚ ಸುದೀಪ್

ನಾವು ಓಡಾಡೊ ಕಾರುಗಳ ನಟ್ಟು-ಬೋಲ್ಟ್ ಕೂಡ ಕೈಟ್ ಇರಬೇಕು.. ಅದಕ್ಕೆ ಮೆಕಾನಿಕ್ ಹತ್ರ ಹೋಗಬೇಕು ಆ ಮೆಕಾನಿಕ್ಗೆ ಮಾತ್ರ ಕಾರಿನ ನಟ್ಟು-ಬೋಲ್ಟ್ ವಿಚಾರ ಗೊತ್ತಿರುತ್ತೆ.. ಹೀಗಾಗಿ ಚಿತ್ರರಂಗದ ವಿಚಾರ ಚಿತ್ರರಂಗದಲ್ಲಿ ಇರುವವರಿಗೆ ಮಾತ್ರ ಗೊತ್ತು ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಡಿಕೆಶಿ ನಟ್ಟು-ಬೋಲ್ಟ್ ಹೇಳಿಕೆಗೆ ಕಿಚ್ಚ ಸುದೀಪ್ ಖಡಕ್ ತಿರುಗೇಟು

Kiccha Sudeep

Profile Vinay Bhat Jun 20, 2025 8:10 AM

16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivkumar) ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಯಿತು. ‘ಯಾರಿಗೆ ಹೇಗೆ ನಟ್ಟು ಬೋಲ್ಟ್‌ ಟೈಟ್‌ ಮಾಡಬೇಕು ಎನ್ನುವುದು ಗೊತ್ತಿದೆ’ ಎಂದು ಹೇಳಿದ್ದರು. ಚಲನಚಿತ್ರೋತ್ಸವ ಉದ್ಘಾಟನಾ ಕಾರ್ಯಕ್ರಮಕ್ಕೆ ಸ್ಟಾರ್ ನಟ-ನಟಿಯರು ಗೈರಾದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್​ ಬೇಸರ ವ್ಯಕ್ತಪಡಿಸಿದ್ದರು. ನಿಮ್ಮ ನಟ್ಟು ಬೋಲ್ಟ್ ಟೈಟ್ ಮಾಡೋದು ಗೊತ್ತು. ಇದನ್ನು ವಾರ್ನ್​ ಅಂತಾ ಆದ್ರೂ ಅಂದ್ಕೊಳಿ, ಮನವಿ ಅಂತಾ ಆದ್ರೂ ಅನ್ಕೊಳಿ ಅಂತ ಎಚ್ಚರಿಸಿದ್ದರು. ನನಗೆ ಚಲನಚಿತ್ರ ವಾಣಿಜ್ಯ ಮಂಡಳಿ, ಈ ಸಿನಿಮಾ ನಟರ ಬಗ್ಗೆ ನನಗೆ ಬಹಳ ಸಿಟ್ಟು ಬಂದುಬಿಟ್ಟಿದೆ ಎಂದಿದ್ದರು.

ಅಷ್ಟೇ ಅಲ್ಲದೆ ವಿವಾದದ ನಂತರವೂ ಈ ನಟ್ಟು, ಬೋಲ್ಟ್‌ ಹೇಳಿಕೆಯನ್ನು ಬಲವಾಗಿ ಸಮರ್ಥಿಸಿಕೊಂಡ ಡಿ.ಕೆ.ಶಿವಕುಮಾರ್‌, ಸಿನಿಮಾ ಇಲ್ಲದೇ ಬದುಕುವ ಶಕ್ತಿ ನನಗಿದೆ. ಆದರೆ, ಅವರು ಸರಕಾರ ಮತ್ತು ಜನ ಬೇಕು. ಅಷ್ಟಕ್ಕೂ ಕನ್ನಡ ಚಿತ್ರರಂಗದ ಒಳಿತಿಗಾಗಿಯೇ ಮಾತನಾಡಿದ್ದೇನೆ. ಬಂದಿರುವ ಯೋಗವನ್ನು ಚಿತ್ರರಂಗ ಉಳಿಸಿಕೊಳ್ಳಲಿ ಎಂದು ಹೇಳಿದರು. ಇದೀಗ ಡಿಕೆಶಿ ಹೇಳಿಕೆ ಬಗ್ಗೆ ಕಿಚ್ಚ ಸುದೀಪ್ ಮಾತನಾಡಿದ್ದು, ನಮಗೆಲ್ಲ ತುಂಬಾ ಬೇಸರವಾಗಿದೆ ಎಂದು ಹೇಳಿದ್ದಾರೆ.

ರಿಪಬ್ಲಿಕ್ ಕನ್ನಡದ ಸಂಗಮ 2025 ಕಾರ್ಯಕ್ರಮದಲ್ಲಿ ಮಾತನಾಡಿದ ಸುದೀಪ್, ನಾವು ಓಡಾಡೊ ಕಾರುಗಳ ನಟ್ಟು-ಬೋಲ್ಟ್ ಕೂಡ ಕೈಟ್ ಇರಬೇಕು.. ಅದಕ್ಕೆ ಮೆಕಾನಿಕ್ ಹತ್ರ ಹೋಗಬೇಕು ಆ ಮೆಕಾನಿಕ್​ಗೆ ಮಾತ್ರ ಕಾರಿನ ನಟ್ಟು-ಬೋಲ್ಟ್ ವಿಚಾರ ಗೊತ್ತಿರುತ್ತೆ.. ಹೀಗಾಗಿ ಚಿತ್ರರಂಗದ ವಿಚಾರ ಚಿತ್ರರಂಗದಲ್ಲಿ ಇರುವವರಿಗೆ ಮಾತ್ರ ಗೊತ್ತು. ನನಗೆ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬುದು ಗೊತ್ತಿಲ್ಲ. ಆದ್ರೆ ಅವರು ಕೆಲಸ ಸತ್ಯಗಳನ್ನು ತಿಳಿದುಕೊಂಡು ಮಾತನಾಡಿದ್ರೆ ನಮ್ಗೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತಿತ್ತು. ಅವರ ಈ ಹೇಳಿಕೆ ಚಿತ್ರರಂಗದಲ್ಲಿ ಅನೇಕ ಮಂದಿಯ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ.

Shivanna-Daali Movie: ಮತ್ತೆ ಅಬ್ಬರಿಸೋಕೆ ರೆಡಿ ಆಗ್ತಿದೆ ʼಟಗರುʼ ಜೋಡಿ; ಈ ಬಾರಿ ಶಿವಣ್ಣ-ಡಾಲಿ ಕಾಂಬಿನೇಶನ್‌ ಹವಾ ಹೇಗಿರುತ್ತೆ?

ಚಿತ್ರರಂಗದಲ್ಲಿ ತುಂಬಾ ಗೌರವಸ್ತರಿದ್ದಾರೆ. ನಾವು ಯಾರೂ ಮೈ ಮಾರ್ಕೊಂಡು ಬಾಳ್ತಾ ಇರೊ ವ್ಯಕ್ತಿಗಳಲ್ಲ.. ಚಿತ್ರರಂಗದಲ್ಲಿ ನಾವೆಲ್ಲ ಇರೋದು ಮನರಂಜನೆ ನೀಡೋಕೆ.. ನಮ್ಮ ಮನೆಯಲ್ಲಿ ಸಾವಾಗುತ್ತಿದೆಯಾ ಅಥವಾ ಬದುಕಿದ್ದಾರ ಅಂತ ನೋಡದೆ ನಿಮ್ಮನ್ನ ನಗಿಸೊ ಪ್ರಯತ್ನ ನಾವು ಮಾಡ್ತಾ ಇರಬೇಕಾದ್ರೆ ಕೆಲವು ಸತ್ಯಗಳನ್ನು ತಿಳಿದುಕೊಂಡು ಮಾತನಾಡುವುದು ಒಳ್ಳೆಯದು. ಅವರಿಗೆ ಏನೋ ತಪ್ಪು ಮಾಹಿತಿ ಹೋಗಿದೆ.. ಹೀಗಾಗಿ ಆ ಮಾತು ಬಂದಿದೆ.. ಚಿತ್ರರಂಗದಲ್ಲಿ ಎಲ್ಲರ ನಟ್ಟು-ಬೋಲ್ಟ್ ಟೈಟ್ ಇದೆ.. ನಾವೆಲ್ಲ ಯಾಕೆ ರಿಯಾಕ್ಟ್ ಮಾಡಿಲ್ಲ ಅಂದ್ರೆ ಅದು ನಾವು ಅವರ ಮೇಲೆ ಇಟ್ಟಿರುವ ಗೌರವ ಎಂಬುದು ಕಿಚ್ಚನ ಮಾತು.