ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Rahul Arunodoy Banerjee : ಧಾರವಾಹಿ ಶೂಟಿಂಗ್ ನಡುವೆ ದುರಂತ; ಖ್ಯಾತ ನಟ ರಾಹುಲ್ ನಿಧನ

Rahul Arunodoy Banerjee : ಜನಪ್ರಿಯ ಬಂಗಾಳಿ ನಟ ರಾಹುಲ್ ಬ್ಯಾನರ್ಜಿ ಒಡಿಶಾದಲ್ಲಿ ದೋಣಿ ಅಪಘಾತದಲ್ಲಿ ನಿಧನರಾಗಿದ್ದಾರೆ. ತಲ್ಸಾರಿ ಬೀಚ್‌ನಲ್ಲಿ ತಮ್ಮ ದೂರದರ್ಶನ ಕಾರ್ಯಕ್ರಮ ಭೋಲೆ ಬಾಬಾ ಪರ್ ಕರೇಗಾ ಚಿತ್ರೀಕರಣದಲ್ಲಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ಚಿತ್ರೀಕರಣದ ಸಮಯದಲ್ಲಿ ಅವರು ಸಮುದ್ರಕ್ಕೆ ಬಿದ್ದು, ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಧಾರವಾಹಿ ಶೂಟಿಂಗ್ ನಡುವೆ ದುರಂತ; ಖ್ಯಾತ ನಟ ರಾಹುಲ್ ನಿಧನ

ರಾಹುಲ್ ಬ್ಯಾನರ್ಜಿ -

Yashaswi Devadiga
Yashaswi Devadiga Mar 29, 2026 8:51 PM

ಜನಪ್ರಿಯ ಬಂಗಾಳಿ ನಟ (Bangali Actor) ರಾಹುಲ್ ಬ್ಯಾನರ್ಜಿ (rahul banerjee) ಒಡಿಶಾದಲ್ಲಿ ದೋಣಿ ಅಪಘಾತದಲ್ಲಿ ನಿಧನರಾಗಿದ್ದಾರೆ (Passes Away). ತಲ್ಸಾರಿ ಬೀಚ್‌ನಲ್ಲಿ ತಮ್ಮ ದೂರದರ್ಶನ ಕಾರ್ಯಕ್ರಮ ಭೋಲೆ ಬಾಬಾ ಪರ್ ಕರೇಗಾ ಚಿತ್ರೀಕರಣದಲ್ಲಿದ್ದಾಗ ಈ ದುರಂತ ಘಟನೆ ಸಂಭವಿಸಿದೆ. ಚಿತ್ರೀಕರಣದ ಸಮಯದಲ್ಲಿ ಅವರು ಸಮುದ್ರಕ್ಕೆ (Beach) ಬಿದ್ದು, ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಆಘಾತಕಾರಿ ಸುದ್ದಿ

ಆದಾಗ್ಯೂ, ಅವರನ್ನು ಬೇಗನೆ ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ದುರದೃಷ್ಟವಶಾತ್, ರಕ್ಷಣಾ ತಂಡ ರಾಹುಲ್ ಬ್ಯಾನರ್ಜಿ ರಕ್ಷಿಸಿ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.

ಇದನ್ನೂ ಓದಿ: Akhil Akkineni: ‘ಪೆದ್ದಿ’ ಸಿನಿಮಾಕ್ಕಾಗಿ ಅಖಿಲ್ ಅಕ್ಕಿನೇನಿ ಸಿನಿಮಾ ಪೋಸ್ಟ್‌ಪೋನ್‌! ಹೊಸ ದಿನಾಂಕ ರಿವೀಲ್‌

ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಅಭಿಮಾನಿಗಳು ನಟ ರಾಹುಲ್ ಬ್ಯಾನರ್ಜಿ ಅವರ ಹಠಾತ್ ನಿಧನದ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. "ಇದು ಆಘಾತಕಾರಿ ಅನಿಸುತ್ತಿದೆ. ನಂಬಲು ಸಾಧ್ಯವಾಗುತ್ತಿಲ್ಲ. ಬಂಗಾಳಿ ಚಲನಚಿತ್ರೋದ್ಯಮದಲ್ಲಿ ಜನರಿಂದ ಆರಾಧಿಸಲ್ಪಟ್ಟ ಕೆಲವೇ ಜನರಲ್ಲಿ ಒಬ್ಬರು. ರಾಹುಲ್ ಬ್ಯಾನರ್ಜಿ, ಶಾಂತಿ ಪಡೆಯಲಿ." ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು, "ರಾಹುಲ್ ಅರುಣೋದಯ ಬ್ಯಾನರ್ಜಿ ಅವರಿಗೆ ಶಾಂತಿ ಸಿಗಲಿ. ನಿಜಕ್ಕೂ ಆಘಾತಕಾರಿ ಸುದ್ದಿ" ಎಂದು ಬರೆದಿದ್ದಾರೆ.

ಅವರು 2000 ರಲ್ಲಿ 'ಚಕ' ಚಿತ್ರದೊಂದಿಗೆ ಬಂಗಾಳಿ ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು 'ಚಿರ್ದಿನ್ಯಿ ತುಮಿ ಜೆ ಅಮರ್' ಚಿತ್ರದೊಂದಿಗೆ ಜನಪ್ರಿಯತೆಯ ಉತ್ತುಂಗಕ್ಕೇರಿದರು. 2008 ರಲ್ಲಿ, 'ಅಬರ್ ಅಸಾಬ್ ಫಿರೆ' ಮತ್ತು 'ಜಾಕ್‌ಪಾಟ್' ಚಿತ್ರಗಳಲ್ಲಿ ಅವರ ಅಭಿನಯವು ಗಮನ ಸೆಳೆಯಿತು. 'ಜುಲ್ಫಿಕರ್' ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

ಒಡಿಶಾದ ತಲ್ಸರಿ ಬೀಚ್‌ನಲ್ಲಿ ಧಾರವಾಹಿ ಶೂಟಿಂಗ್‌ನ ಕೆಲ ಸೀನ್ ತೆಗೆಯುತ್ತಿದ್ದ ಈ ವೇಳೆ ಘಟನೆ ನಡೆದಿದೆ. ಸತತ ಸೀನ್‌ಗಳ ಚಿತ್ರೀಕರಣದ ನಡುವೆ ಸಣ್ಣ ಬ್ರೇಕ್ ನೀಡಲಾಗಿತ್ತು. ಡೈಲಾಗ್ ಡೆಲಿವರಿಗಾಗಿ ಈ ಬ್ರೇಕ್ ನೀಡಲಾಗಿತ್ತು. ಸಿಬ್ಬಂದಿಗಳು, ಕ್ಯಾಮೆರಾಮ್ಯಾನ್, ನಿರ್ದೇಶಕರು ಮುಂದಿನ ಸೀನ್ ಚಿತ್ರೀಕರಣದ ತಯಾರಿಯಲ್ಲಿದ್ದರು.

ಇದನ್ನೂ ಓದಿ: Dhurandhar 2: 'ಧುರಂಧರ್ 2' ಚಿತ್ರದ ಶೂಟಿಂಗ್‌ ವೇಳೆ ಗರ್ಭಿಣಿ ದೀಪಿಕಾರನ್ನ ಹೇಗೆ ಕೇರ್‌ ಮಾಡಿದ್ರು ಗೊತ್ತಾ ರಣವೀರ್‌?

ಸದ್ಯ ರಾಹುಲ್ ಬ್ಯಾನರ್ಜಿ ಮೃದೇಹ ದಿಗಾ ಆಸ್ಪತ್ರೆಯಲ್ಲಿದೆ. ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ರಾಹುಲ್ ಬ್ಯಾನರ್ಜಿ ಕುಟುಂಬಸ್ಥರು ಒಡಿಶಾದತ್ತ ತೆರಳಿದ್ದಾರೆ .