ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Anushree: ತಾಳಿ ಹಾಕಿಕೊಂಡೆ ನಿರೂಪಣೆಗೆ ಮರಳಿದ ಅನುಶ್ರೀ: ಅಭಿಮಾನಿಗಳು ಫಿದಾ

ಮದುವೆ ಬಳಿಕ ಅನುಶ್ರೀ ಹನಿಮೂನ್ ಎಂದು ಟೈಮ್ ವೇಸ್ಟ್ ಮಾಡದೆ ಮತ್ತೆ ತಮ್ಮ ನಿರೂಪಣೆ ಕೆಲಸಕ್ಕೆ ಹಾಜರಾಗಿದ್ದಾರೆ. ಅನುಶ್ರೀ ಅವರು ಪ್ರಮೋಷನ್ಸ್‌, ಬೇರೆ ಬೇರೆ ಈವೆಂಟ್ಸ್‌ ಸೇರಿದಂತೆ ಮಹಾನಟಿ ಸೀಸನ್‌ 2 ರಿಯಾಲಿಟಿ ಶೋಗೂ ಮರಳಿದ್ದಾರೆ. ಅನುಶ್ರೀ ಮತ್ತೆ ಕಿರುತೆರೆಗೆ ಮರಳುವಾಗ ಅವರು ಸಂಪ್ರದಾಯ ಮುರಿಯಲಿಲ್ಲ ಅನ್ನೋದು ವಿಶೇಷ.

Anushree

ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ (Anchor Anushree) ಅವರ ವಿವಾಹ ಆಗಸ್ಟ್‌ 28ರಂದು ಬೆಂಗಳೂರಿನ ಹೊರವಲಯದಲ್ಲಿ ನೆರವೇರಿತು. ರೋಷನ್ ಜೊತೆ ಅನುಶ್ರೀ ಸಪ್ತಪದಿ ತುಳಿದಿದ್ದು, ಈ ಅದ್ಧೂರಿ ಸಮಾರಂಭಕ್ಕೆ ಸ್ಯಾಂಡಲ್‌ವುಡ್‌ ತಾರೆಯರು ಆಗಮಿಸಿ ಶುಭ ಹಾರೈಸಿದರು. ಇವರಿಬ್ಬರದ್ದು ಲವ್ ಕಮ್‌ ಆರೆಂಜ್‌ ಮ್ಯಾರೇಜ್. ನಮ್ಮದು ಸರಳ ವಿವಾಹ ಎಂದು ಅನುಶ್ರೀ ಹೇಳಿಕೊಂಡಿದ್ದರೂ ಅದ್ಧೂರಿಯಂತೆ ಕಂಡುಬಂದಿತ್ತು. ಮದುವೆ ಬಳಿಕ ಅನುಶ್ರೀ ಹನಿಮೂನ್ ಎಂದು ಟೈಮ್ ವೇಸ್ಟ್ ಮಾಡದೆ ಮತ್ತೆ ತಮ್ಮ ನಿರೂಪಣೆ ಕೆಲಸಕ್ಕೆ ಹಾಜರಾಗಿದ್ದಾರೆ.

ಅನುಶ್ರೀ ಅವರು ಪ್ರಮೋಷನ್ಸ್‌, ಬೇರೆ ಬೇರೆ ಈವೆಂಟ್ಸ್‌ ಸೇರಿದಂತೆ ಮಹಾನಟಿ ಸೀಸನ್‌ 2 ರಿಯಾಲಿಟಿ ಶೋಗೂ ಮರಳಿದ್ದಾರೆ. ಅನುಶ್ರೀ ಮತ್ತೆ ಕಿರುತೆರೆಗೆ ಮರಳುವಾಗ ಅವರು ಸಂಪ್ರದಾಯ ಮುರಿಯಲಿಲ್ಲ ಅನ್ನೋದು ವಿಶೇಷ. ಝೀ ಕನ್ನಡದಲ್ಲಿ ಕೆಲವೇ ದಿನಗಳಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಕಾಮಿಡಿ ಕಿಲಾಡಿಗಳು ಶೋಗಳ ಹೊಸ ಸೀಸನ್ ಶುರುವಾಗಲಿದೆ, ಇದಕ್ಕಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಡಿಷನ್ ನಡೆಯುತ್ತಿದೆ.

ಅನುಶ್ರೀ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನ ನಿರೂಪಣೆ ಮಾಡಲಿದ್ದಾರೆ. ಸದ್ಯ ಆಡಿಷನ್ ಬಗ್ಗೆ ಅಪ್​ಡೇಟ್ ನೀಡಲು ಅನುಶ್ರೀ ಅವರು ಝೀ ವಾಹಿನಿಯಲ್ಲಿ ಆಗಮಿಸಿದ್ದರು. ಈ ವೇಳೆ ಅನುಶ್ರೀ ಅವರನ್ನು ಕಂಡು ಅಭಿಮಾನಿಗಳಿಗೆ ಅವರ ಮೇಲಿನ ಗೌರವ ದುಪ್ಪಟ್ಟಾಗಿದೆ. ಯಾಕೆಂದರೆ ಅನುಶ್ರೀ ಅವರು ತಮ್ಮ ಕತ್ತಿನಲ್ಲಿ ಮಾಂಗಲ್ಯ ಸರ ಹಾಕಿಕೊಂಡಿರುವುದು. ಅನೇಕರು ಇದನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸಂಪ್ರದಾಯ ಮರೆಯದ ಅನುಶ್ರೀಯನ್ನು ಹಾಡಿ ಹೊಗಳಿದ್ದಾರೆ.

ವಿವಾಹದ ಬಳಿಕ ಕೆಲ ಸೆಲೆಬ್ರಿಟಿಗಳು ಶೋಗಳಲ್ಲಿ ಕಾಣಿಸಿಕೊಳ್ಳುವಾಗ ಮಾಂಗಲ್ಯ ಧರಿಸಲು ಹೆಚ್ಚು ಆದ್ಯತೆ ನೀಡೋದಿಲ್ಲ. ಕೆಲವರು ವಿವಾಹ ಆಗಿದೆ ಎಂದು ಕೂಡ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಬೇಡಿಕೆ ಕಡಿಮೆ ಆಗಬಹುದು ಎಂಬ ಭಯ ಇದಕ್ಕೆ ಕಾರಣ. ಆದರೆ, ಅನುಶ್ರೀ ಮಾತ್ರ ಮಾಂಗಲ್ಯ ಸರ ಧರಿಸಿಯೇ ಕಾಣಿಸಿಕೊಂಡಿದ್ದಾರೆ. ಈ ವಿಚಾರ ಅನೇಕರಿಗೆ ಖುಷಿ ಕೊಟ್ಟಿದೆ.



ಅಂದಹಾಗೆ ಅನುಶ್ರೀ-ರೋಹನ್ ಅವರದ್ದು ಲವ್ ಮ್ಯಾರೇಜ್‌ ಅಂತೆ. ಐಟಿ ಉದ್ಯೋಗಿಯಾಗಿರುವ ರೋಶನ್‌ ಅವರು ಕೊಡಗು ಮೂಲದವರು. ಪುನೀತ ಪರ್ವ ಕಾರ್ಯಕ್ರಮದಲ್ಲಿ ಅನುಶ್ರೀ, ರೋಶನ್‌ ಭೇಟಿಯಾಗಿತ್ತು. ಮೂಲತಃ ಮಂಗಳೂರಿನವರಾಗಿರುವ ಅನುಶ್ರೀ ಆ್ಯಂಕರ್ ಆಗಿ, ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹಲವು ಕನ್ನಡ ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರೂ ನಟನೆಗಿಂತ ಆ್ಯಂಕರ್ ಆಗಿಯೇ ಅವರು ಹೆಚ್ಚು ಜನಪ್ರಿಯ. ಕನ್ನಡದ ಬಹುತೇಕ ರಿಯಾಲಿಟಿ ಶೋಗಳಿಗೆ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Bhagya Lakshmi Serial: ಕನ್ನಿಕಾಳ ಕುತಂತ್ರ ಬಯಲು ಮಾಡಲು ಚಾರಿಟಿ ಟ್ರಸ್ಟ್​ನ ಎಂಡಿ ಆದ ಭಾಗ್ಯ