Air Ambulance: ರಾಂಚಿ ಏರ್ ಆಂಬ್ಯುಲೆನ್ಸ್ ಅಪಘಾತದಲ್ಲಿ ಎಲ್ಲ 7 ಪ್ರಯಾಣಿಕರು ಸಾವು, ಅಪಘಾತ ಸಂಭವಿಸಿದ್ದು ಹೇಗೆ?
ಡಿಜಿಸಿಎ ಪ್ರಕಾರ, ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ದೆಹಲಿಯಿಂದ ಸಂಜೆ 7:11 ಕ್ಕೆ ಹೊರಟಿತು. ಹಾರಾಟದ ಸಮಯದಲ್ಲಿ, ಅದು ಇದ್ದಕ್ಕಿದ್ದಂತೆ ಸಂಜೆ 7:34 ಕ್ಕೆ ವಾಯು ಸಂಚಾರ ನಿಯಂತ್ರಣ (ATC) ಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ. ವಿಮಾನಯಾನ ಅಧಿಕಾರಿಗಳು ತಕ್ಷಣವೇ ಹೈ ಅಲರ್ಟ್ ಘೋಷಿಸಿದರು.
ಪತನಕ್ಕೀಡಾದ ಏರ್ ಆಂಬ್ಯುಲೆನ್ಸ್ -
ರಾಂಚಿ, ಫೆ.24: ನಿನ್ನೆ ರಾತ್ರಿ ರಾಂಚಿಯಿಂದ (Ranchi) ದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಆಂಬ್ಯುಲೆನ್ಸ್ (Air Ambulance) ಅಪಘಾತಕ್ಕೀಡಾಗಿದ್ದು, ಏರ್ ಆಂಬ್ಯುಲೆನ್ಸ್ನಲ್ಲಿದ್ದ ಏಳು ಜನರೂ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿ ಆಗಿದೆ. ರಾಂಚಿಯಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ರೆಡ್ ಬರ್ಡ್ ಏವಿಯೇಷನ್ ಏರ್ ಆಂಬ್ಯುಲೆನ್ಸ್ ಸೋಮವಾರ ತಡರಾತ್ರಿ ಚತ್ರಾ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿತ್ತು.
ದುರಂತದ ಬಗ್ಗೆ AAIB ತಂಡ ತನಿಖೆ ಆರಂಭಿಸಿದ್ದು, ಸಾವನ್ನಪ್ಪಿದವರ ಪಟ್ಟಿ ಬಿಡುಗಡೆಯಾಗಿದೆ. ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ದೆಹಲಿಗೆ ಏಕೆ ಪ್ರಯಾಣಿಸುತ್ತಿತ್ತು? ವಿಮಾನ ಎಲ್ಲಿ ಮತ್ತು ಹೇಗೆ ಅಪಘಾತಕ್ಕೀಡಾಯಿತು? ವಿಮಾನದಲ್ಲಿ ಯಾರು ಇದ್ದರು? ವಿಮಾನವನ್ನು ಯಾವ ಕಂಪನಿ ಹೊಂದಿತ್ತು? ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.
ಆಂಬ್ಯುಲೆನ್ಸ್ ರಾಂಚಿಯ 41 ವರ್ಷದ ಸಂಜಯ್ ಕುಮಾರ್ ಅವರನ್ನು ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಸಾಗಿಸುತ್ತಿತ್ತು. ಬೆಂಕಿಯಲ್ಲಿ ಅವರು ತೀವ್ರ ಸುಟ್ಟಗಾಯಗಳಿಗೆ ಒಳಗಾಗಿ ದೇವ್ಕಮಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಡಿಜಿಸಿಎ ಪ್ರಕಾರ, ಏರ್ ಆಂಬ್ಯುಲೆನ್ಸ್ ರಾಂಚಿಯಿಂದ ದೆಹಲಿಯಿಂದ ಸಂಜೆ 7:11 ಕ್ಕೆ ಹೊರಟಿತು. ಹಾರಾಟದ ಸಮಯದಲ್ಲಿ, ಅದು ಇದ್ದಕ್ಕಿದ್ದಂತೆ ಸಂಜೆ 7:34 ಕ್ಕೆ ವಾಯು ಸಂಚಾರ ನಿಯಂತ್ರಣ (ATC) ಯೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ. ವಿಮಾನಯಾನ ಅಧಿಕಾರಿಗಳು ತಕ್ಷಣವೇ ಹೈ ಅಲರ್ಟ್ ಘೋಷಿಸಿದರು. ವಿಮಾನವು ಚತ್ರಾ ಜಿಲ್ಲೆಯ ಸಿಮಾರಿಯಾ ಪೊಲೀಸ್ ಠಾಣೆ ಪ್ರದೇಶದ ಕರ್ಮಟಂಡ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ ಎಂದು ವರದಿಯಾಗಿದೆ.
AIR MISHAP ⚠️
— Abhijit Majumder (@abhijitmajumder) February 23, 2026
Air ambulance traveling from Ranchi, Jharkhand, to Delhi crashed in Simaria, Chatra district.
Seven people including two pilots and a patient were on board.
No clarity yet on survivors.pic.twitter.com/1AIxPpxJyu
ವಿಮಾನ ಅಪಘಾತಕ್ಕೆ ಕಾರಣವೇನು?
ರಾಂಚಿಯಿಂದ ದೆಹಲಿ ಏರ್ ಆಂಬ್ಯುಲೆನ್ಸ್ ಅಪಘಾತಕ್ಕೆ ಕಾರಣ ಇನ್ನೂ ಪತ್ತೆಯಾಗಿಲ್ಲ. ಪ್ರಸ್ತುತ ತನಿಖೆ ಮುಂದುವರೆದಿದೆ. ವಿವರವಾದ ತನಿಖೆಯ ನಂತರವೇ ಕಾರಣದ ಬಗ್ಗೆ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಲಾಗುತ್ತದೆ. ಕೆಲವು ವರದಿಗಳು ಹವಾಮಾನವನ್ನು ದೂಷಿಸುತ್ತಿವೆ.
7 ಜನರನ್ನು ಹೊತ್ತು ದೆಹಲಿಗೆ ಹೊರಟಿದ್ದ ಏರ್ ಆಂಬ್ಯುಲೆನ್ಸ್ ರಾಂಚಿಯಲ್ಲಿ ಪತನ
ಏರ್ ಆಂಬ್ಯುಲೆನ್ಸ್ ರೆಡ್ಬರ್ಡ್ ಏರ್ವೇಸ್ ಪ್ರೈವೇಟ್ ಲಿಮಿಟೆಡ್ಗೆ ಸೇರಿತ್ತು. ವಿಮಾನದ ನೋಂದಣಿ ಸಂಖ್ಯೆ VT-AJV. ಅದು ಬೀಚ್ಕ್ರಾಫ್ಟ್ C90 ವಿಮಾನವಾಗಿತ್ತು.
- ಕ್ಯಾಪ್ಟನ್ ವಿವೇಕ್ ವಿಕಾಸ್ ಬಿಲಾಗತ್
- ಕ್ಯಾಪ್ಟನ್ ಸವರ್ದೀಪ್ ಸಿಂಗ್
- ಸಂಜಯ್ ಕುಮಾರ್ - ರೋಗಿ
- ಅರ್ಚನಾ ದೇವಿ - ಸರ್ವೆಂಟ್
- ಧುರು ಕುಮಾರ್ - ಸರ್ವೆಂಟ್
- ಡಾ. ವಿಕಾಸ್ ಕುಮಾರ್ ಗುಪ್ತಾ - ವೈದ್ಯ
- ಸಚಿನ್ ಕುಮಾರ್ ಮಿಶ್ರಾ -ಪ್ಯಾರಾಮೆಡಿಕ್