Indian Railways: ರೈಲ್ವೆ ಪ್ರಯಾಣಿಕರಿಗೆ ಗುಡ್ನ್ಯೂಸ್; 8 ಗಂಟೆ ಮೊದಲೇ ಕನ್ಫರ್ಮ್ ಆಗಲಿದೆ ರಿಸರ್ವೇಶನ್ ಸೀಟ್
ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಮತ್ತಷ್ಟು ಸಹಾಯ ಆಗುವ ಉದ್ದೇಶದಿಂದ ರೈಲು ಹೊರಡುವ 8 ಗಂಟೆಗಳ ಮುನ್ನ ಫೈನಲ್ ಚಾರ್ಟ್ ಬಿಡುಗಡೆ ಮಾಡಲು ಭಾರತೀಯ ರೈಲ್ವೆ ಮಂಡಳಿ ನಿರ್ಧರಿಸಿದೆ. ಈ ಮೊದಲು ರೈಲು ಹೊರಡುವ 4 ಗಂಟೆಗಳ ಮೊದಲು ಫೈನಲ್ ಚಾರ್ಟ್ ಬಿಡುಗಡೆ ಮಾಡಲಾಗುತ್ತಿತ್ತು. ಇದರಿಂದ ಕೊನೆಯ ಕ್ಷಣದಲ್ಲಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಹೀಗಾಗಿ ಬದಲಾವಣೆ ತರಲು ನಿರ್ಧರಿಸಿದ್ದು, ರೈಲ್ವೆ ಮಂಡಳಿ ಭಾರತೀಯ ರೈಲ್ವೆ ಮಂಡಳಿಯು ರೈಲು ಹೊರಡುವ 8 ಗಂಟೆಗಳ ಮೊದಲೇ ಸೀಟು ರಿಸರ್ವೇಶನ್ ಚಾರ್ಟ್ ಸಿದ್ಧಪಡಿಸಲು ಪ್ರಸ್ತಾಪಿಸಿದೆ.


ನವದೆಹಲಿ: ಭಾರತೀಯ ರೈಲ್ವೆ ಮಂಡಳಿಯು (Indian Railway Board) ರೈಲು ಹೊರಡುವ 8 ಗಂಟೆಗಳ ಮೊದಲೇ ಸೀಟು ರಿಸರ್ವೇಶನ್ ಚಾರ್ಟ್ (Seat Reservation Chart) ಸಿದ್ಧಪಡಿಸಲು ಪ್ರಸ್ತಾಪಿಸಿದೆ. ಪ್ರಸ್ತುತ, ರೈಲು ನಿರ್ಗಮನಕ್ಕೆ 4 ಗಂಟೆಗಳ ಮೊದಲು ಚಾರ್ಟ್ ತಯಾರಾಗುತ್ತದೆ. ಮಧ್ಯಾಹ್ನ 2 ಗಂಟೆಗೆ ಮೊದಲು ಹೊರಡುವ ರೈಲುಗಳಿಗೆ (Trains), ಹಿಂದಿನ ದಿನ ರಾತ್ರಿ 9 ಗಂಟೆಗೆ ಚಾರ್ಟ್ ಸಿದ್ಧವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು, "ಪ್ರಸ್ತುತ ವ್ಯವಸ್ಥೆಯಲ್ಲಿ, ದೂರದ ಪ್ರದೇಶಗಳಿಂದ ರೈಲ್ವೆ ನಿಲ್ದಾಣಕ್ಕೆ ಬರುವ ಪ್ರಯಾಣಿಕರು, ತಮ್ಮ ವೇಟಿಂಗ್ ಲಿಸ್ಟ್ ಟಿಕೆಟ್ನ ಸ್ಥಿತಿಯ ಬಗ್ಗೆ ಕಡಿಮೆ ಸ್ಪಷ್ಟತೆ ಹೊಂದಿರುತ್ತಾರೆ. ಚಾರ್ಟ್ ತಯಾರಿಕೆಯ ಸಮಯದ ಬಗ್ಗೆ ಹಲವು ದೂರುಗಳು ಬಂದಿವೆ. ದೂರದ ರೈಲುಗಳಿಗೆ ಉಪನಗರಗಳಿಂದ ಅಥವಾ ದೂರದ ಪ್ರದೇಶಗಳಿಂದ ಬರುವವರು, ಟಿಕೆಟ್ ದೃಢೀಕರಣವಾಗದಿದ್ದರೆ ಹಿಂದಿರುಗಬೇಕಾಗುತ್ತದೆ. ಈಗ, 8 ಗಂಟೆ ಮೊದಲೇ ಚಾರ್ಟ್ ಸಿದ್ಧವಾದರೆ, ಪರ್ಯಾಯ ವ್ಯವಸ್ಥೆಗೆ ಸಮಯ ಸಿಗಲಿದೆ" ಎಂದು ಹೇಳಿದರು.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಈ ಕ್ರಮವನ್ನು ಹಂತಹಂತವಾಗಿ ಜಾರಿಗೊಳಿಸಲು ಮಂಡಳಿಗೆ ಸೂಚಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಉಂಟಾಗುವ ಅಡೆತಡೆಗಳನ್ನು ತಪ್ಪಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ, ಕಾಯ್ದಿರಿಸುವಿಕೆ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸುವ ಕುರಿತು ವೈಷ್ಣವ್ ಚರ್ಚಿಸಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಪ್ರೇಯಸಿಯನ್ನು ನಿಂದಿಸಿದ ಮಹಿಳೆ ಮೇಲೆ ಪ್ರಿಯಕರನಿಂದ ಹಲ್ಲೆ; ಬಳಿಕ ಆಗಿದ್ದೇನು?
ಈ ಹೊಸ ವ್ಯವಸ್ಥೆಯಿಂದ ಪ್ರಯಾಣಿಕರು ತಮ್ಮ ಟಿಕೆಟ್ ಸ್ಥಿತಿಯ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆಯಬಹುದು. ದೂರದ ಪ್ರಯಾಣಿಕರಿಗೆ ವೇಟಿಂಗ್ ಲಿಸ್ಟ್ ದೃಢೀಕರಣದ ಅನಿಶ್ಚಿತತೆಯಿಂದ ಉಂಟಾಗುವ ತೊಂದರೆ ಕಡಿಮೆಯಾಗಲಿದೆ. ಈ ಕ್ರಮವು ರೈಲ್ವೆಯ ಸೇವೆಯನ್ನು ಇನ್ನಷ್ಟು ಪ್ರಯಾಣಿಕ-ಸ್ನೇಹಿಯಾಗಿಸಲಿದೆ ಎಂದು ರೈಲ್ವೆ ಇಲಾಖೆ ಭಾವಿಸಿದೆ.
ಈ ಬದಲಾವಣೆಯಿಂದ, ವಿಶೇಷವಾಗಿ ದೂರದ ಪ್ರದೇಶಗಳಿಂದ ಪ್ರಯಾಣಿಸುವವರಿಗೆ ತಮ್ಮ ಉತ್ತಮವಾಗಿ ಪ್ಲ್ಯಾನ್ ಮಾಡಲು ಅನುಕೂಲವಾಗಲಿದೆ. ರೈಲ್ವೆ ಸಚಿವಾಲಯವು ಈ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸಲು ಕ್ರಮ ಕೈಗೊಳ್ಳುತ್ತಿದೆ.