ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terrorist Arrest : ಸೇನೆಯಿಂದ ಭರ್ಜರಿ ಬೇಟೆ; 16 ಉಗ್ರರ ಬಂಧನ, ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ

ಜನಾಂಗೀಯ ಗಲಭೆಪೀಡಿತ ನಂತರ ಮಣಿಪುರದಲ್ಲಿ ಪರಿಸ್ಥಿತಿ ತಕ್ಕ ಮಟ್ಟಿಗೆ ಸುಧಾರಿಸಿದ್ದರು, ಅಲ್ಲಿನ ಭಯತ್ಪೋದಾಕ ಚಟುವಟಿಕೆಗಳು ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಅಲ್ಲಿ ನಿರಂತರ ಸೇನೆ ಕಾರ್ಯಾಚರಣೆ ನಡೆಯುತ್ತಲ್ಲೇ ಇದ್ದು, ಇಲ್ಲಿಯವರೆಗೂ ಸುಮಾರು 21 ಉಗ್ರರನ್ನು ಬಂಧಿಸಲಾಗಿದೆ. ಮಣಿಪುರ ಪೊಲೀಸರು ಮತ್ತು ಇತರ ಭದ್ರತಾ ಪಡೆ ಹಾಗೂ ಸೇನೆ ಮತ್ತು ಅಸ್ಸಾಂ ರೈಫಲ್ಸ್( ಘಟಕಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಬಂಧನವಾಗಿದ್ದು, ನಾನಾ ಸ್ಫೋಟಕ ಸಾಧನಗಳು (ಐಇಡಿಗಳು) ಮತ್ತು ವಿವಿಧ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸೇನೆಯಿಂದ  ಭರ್ಜರಿ ಬೇಟೆ; 16 ಉಗ್ರರ ಬಂಧನ

ಸಾಂಧರ್ಬಿಕ ಚಿತ್ರ -

Profile Sushmitha Jain Oct 6, 2025 1:46 PM

ಇಂಫಾಲ್‌: ಮಣಿಪುರ ಪೊಲೀಸರು(Manipur Police) ಮತ್ತು ಇತರ ಭದ್ರತಾ ಪಡೆ(Security Force) ಹಾಗೂ ಸೇನೆ ಮತ್ತು ಅಸ್ಸಾಂ ರೈಫಲ್ಸ್(Assam Rifles) ಘಟಕಗಳು ನಡೆಸಿದ ಜಂಟಿ ಕಾರ್ಯಾಚಾರಣೆಯಲ್ಲಿ16 ಉಗ್ರರನ್ನು ಬಂಧಿಸಲಾಗಿದೆ. ನಿಷೇಧಿತ ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್(ಪಂಬೈ)ನ ಇಬ್ಬರು ಸಕ್ರಿಯ ಕಾರ್ಯಕರ್ತರ ಹೆಡೆಮುಡಿ ಕಟ್ಟಿರುವ ಸೇನೆ ಶಸ್ತ್ರಾಸ್ತ್ರಗಳು, ಸುಧಾರಿತ ಸ್ಫೋಟಕ ಸಾಧನಗಳು (ಐಇಡಿಗಳು) ಮತ್ತು ವಿವಿಧ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಸೆಪ್ಟೆಂಬರ್ 19 ರಂದು ಬಿಷ್ಣುಪುರ ಜಿಲ್ಲೆಯ ನಂಬೋಲ್ ಸಬಲ್ ಲೈಕೈನಲ್ಲಿ 33 ಅಸ್ಸಾಂ ರೈಫಲ್ಸ್ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಪ್ರಮುಖ ಉಗ್ರರನ್ನು ಪೀಪಲ್ಸ್ ಲಿಬರೇಶನ್ ಆರ್ಮಿಯ ಇಬ್ಬರು ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಹೇಳಿಕೆ ತಿಳಿಸಿದೆ. ಇಬ್ಬರು ಉಗ್ರಗಾಮಿಗಳಲ್ಲಿ ಒಬ್ಬನನ್ನು ಅಸ್ಸಾಂನ ಗುವಾಹಟಿಯಿಂದ ಬಂಧಿಸಲಾಗಿದ್ದು, ಮತ್ತೊಬ್ಬನನ್ನು ಎಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಗೊಳಿಸಿಲ್ಲ.

ಸೆಪ್ಟೆಂಬರ್ 19 ರಂದು ಶಸ್ತ್ರಸಜ್ಜಿತ ಪುರುಷರ ಗುಂಪೊಂದು ಅರೆಸೈನಿಕ ಪಡೆಯ ವಾಹನದ ಮೇಲೆ ಹೊಂಚು ಹಾಕಿ ದಾಳಿ ನಡೆಸಿದಾಗ ಅಸ್ಸಾಂ ರೈಫಲ್ಸ್‌ನ ಇಬ್ಬರು ಜವಾನರು ಮೃತಪಟ್ಟಿದ್ದರು ಮತ್ತು ಐದು ಮಂದಿ ಗಾಯಗೊಂಡರು. ಬಂಧಿತ ವ್ಯಕ್ತಿಗಳನ್ನು ‘ಪುರಕ್ಪಾ (18) ರ ನ್ಗಾಚಿಕ್ ಅವರ ಥೋಂಗ್ರಾಮ್ ಸದಾನಂದ ಸಿಂಗ್ ಮತ್ತು ಮೊಮೊ (51) ರ ಅಮೋ ಸಿಂಗ್ ಅವರ ಸ್ವಯಂ ಘೋಷಿತ ಲೆಫ್ಟಿನೆಂಟ್ ಕಾರ್ಪ್ಲ್ ಚೋಂಗ್ಥಮ್ ಮಹೇಶ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಕುರ್ಕುರೆ ಕೊಡದ ತಾಯಿ-ಸಹೋದರಿ; ಪೊಲೀಸರಿಗೆ ದೂರು ನೀಡಿದ ಬಾಲಕ

ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಯುನೈಟೆಡ್ ಕುಕಿ ನ್ಯಾಶನಲ್ ಆರ್ಮಿ (UKNA) ಸದಸ್ಯರ ಬಂಧನದ ಜೊತೆ ಇತರೆ ಕಾರ್ಯಾಚರಣೆಗಳಲ್ಲಿ ಭದ್ರತಾ ಪಡೆಗಳು ಹಲವು ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿದ್ದು, ಒಂದು AK-47 ರೈಫಲ್, ಎರಡು 9 ಮಿಮೀ ಪಿಸ್ತೂಲುಗಳು, ಒಂದು M79 ಗ್ರೆನೇಡ್ ಲಾಂಚರ್, ಬುಲೆಟ್‌ಪ್ರೂಫ್ ಜಾಕೆಟ್‌ಗಳು, ಬಾಓಫೆಂಗ್ ರೇಡಿಯೋಗಳು, ಗೋಳಿಬಾರ್‌ದು ಮತ್ತು ತಲೆಮರೆಸಿದ ರೀತಿಯಲ್ಲಿ ಕೃಷಿಗೆ ಬಳಸುವ ಶಂಕೆ ಇರುವ ಅಫೀಂ ಬೀಜಗಳು ಸೇರಿವೆ ಎನ್ನಲಾಗಿದೆ. ವಶಪಡಿಸಿದ ಈ ವಸ್ತುಗಳ ಬಗ್ಗೆ ತನಿಖೆ ಮುಂದುವರೆದಿದ್ದು, ಇವುಗಳ ಹಿನ್ನೆಲೆ ಮತ್ತು ಬಳಕೆಯ ಉದ್ದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಇನ್ನು 2023ರಲ್ಲಿ ಮಣಿಪುರದಲ್ಲಿ ಭುಗಿಲೆದ್ದ ಜನಾಂಗೀಯ ಹಿಂಸಾಚಾರ ಅತ್ಯಂತ ಭೀಕರ ಘಟನೆಯೆಂದೆ ಗುರುತಿಸಿಕೊಂಡಿದ್ದು. 2023ರ ಮೇ ತಿಂಗಳಿಂದ ಆರಂಭವಾದ ಭೀಕರ ಹಿಂಸಾಚಾರದಲ್ಲಿ ಇದುವರೆಗೆ ಕನಿಷ್ಟ 260ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 50ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಮೊದಲು ಜನಾಂಗೀಯ ಹಿಂಸಾಚಾರ ಭುಗಿಲೆದ್ದ 2023ರ ಮೇ 3, ಮಣಿಪುರದ ಇತಿಹಾಸದಲ್ಲಿ ಕರಾಳ ದಿನವಾಗಿಯೇ ಅಚ್ಚಾಗಿ ಉಳಿದಿದೆ. ಈ ಎಲ್ಲಾ ಅಹಿತಕರ ಘಟನೆಗಳಿಂದ ಎಚ್ಚೆತ್ತ ಭಾರತೀಯ ಉಗ್ರ ಚಟುವಟಿಕೆಗಳ ಮೇಲೆ ಕಣ್ಣಿಟ್ಟಿದ್ದು, ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಮಣಿಪುರದ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ರಾಜೀನಾಮೆ ನೀಡಿದ ನಂತರ ಕೇಂದ್ರವು ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿ ಮಾಡಿದ್ದು, 2027 ರವರೆಗೆ ಮುಂದುವರಿಯಲಿದೆ.