I Love Muhammad Row: ‘ಐ ಲವ್ ಮುಹಮ್ಮದ್' ವಿವಾದದ ನಡುವೆಯೇ ಯೋಗಿ ಆದಿತ್ಯನಾಥ್, ಐ ಲವ್ ಬುಲ್ಡೋಜರ್ ಪೋಸ್ಟರ್ಗಳು ಪ್ರತ್ಯಕ್ಷ
ಉತ್ತರ ಪ್ರದೇಶದ ಕಾನ್ಪುರದಲ್ಲಿ 'ಐ ಲವ್ ಮುಹಮ್ಮದ್' ಪೋಸ್ಟರ್ ವಿವಾದದ ಕಿಡಿ ಕಾವೇರಿದ್ದು, ಇದೀಗ ಬಿಜೆಪಿ ಯುವಮೋರ್ಚಾ ಟಕ್ಕರ್ ಕೊಟ್ಟಿದೆ. `ಐ ಲವ್ ಯೋಗಿ ಆದಿತ್ಯನಾಥ್’ ಅಭಿಯಾನ ಪ್ರಾರಂಭಿಸಿರುವ ಬಿಜೆಪಿ, ಲಕ್ನೋದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್ ಅಳವಡಿಸಿದ್ದು, ಸಿಎಂ ಮತ್ತು ಬುಲ್ಡೋಜರ್ ಕ್ರಮವನ್ನು ಸಮರ್ಥಿಸಿಕೊಂಡು ಬಿಜೆಪಿ ಯುವ ಮೋರ್ಚಾ ನಾಯಕರು ಫ್ಲೆಕ್ಸ್ ಅಳವಡಿಸಿದ್ದಾರೆ.

ಐ ಲವ್ ಶ್ರೀ ಯೋಗಿ ಆದಿತ್ಯನಾಥ್ ಜೀ ಬ್ಯಾನರ್ -

ಲಖನೌ: ಉತ್ತರ ಪ್ರದೇಶದಲ್ಲಿ (Uttar Pradesh) “ಐ ಲವ್ ಮುಹಮ್ಮದ್” (I Love Muhammad) ವಿವಾದದ ನಡುವೆ, ಲಕ್ನೌದ ಕೆಲವು ಭಾಗಗಳಲ್ಲಿ “ಐ ಲವ್ ಶ್ರೀ ಯೋಗಿ ಆದಿತ್ಯನಾಥ್ ಜೀ” ಮತ್ತು “ಐ ಲವ್ ಬುಲ್ಡೋಜರ್” (I love bulldozer) ಎಂಬ ಪೋಸ್ಟರ್ಗಳು ಕಾಣಿಸಿಕೊಂಡಿವೆ. ಇವುಗಳನ್ನು ಉತ್ತರ ಪ್ರದೇಶ ಬಿಜೆಪಿ ಯುವ ಮೋರ್ಚಾದ ಲಕ್ನೌ ಕಾರ್ಯದರ್ಶಿ ಅಮಿತ್ ತ್ರಿಪಾಠಿ (Amit Tripathi) ಅಳವಡಿಸಿದ್ದಾರೆ ಎಂದು ವರದಿಯಾಗಿದೆ. ಈ ಘಟನೆ ರಾಜ್ಯದಲ್ಲಿ ಉದ್ವಿಗ್ನ ವಾತಾವರಣವನ್ನು ಮತ್ತಷ್ಟು ತೀವ್ರಗೊಳಿಸಿದೆ.
#WATCH | Uttar Pradesh: BJP Yuva Morcha Lucknow general secretary Amit Tripathi puts up flex boards reading 'I love Shri Yogi Adityanath ji' and 'I love bulldozer' in parts of the city. pic.twitter.com/quZR9qzUTV
— ANI (@ANI) September 27, 2025
ವಿವಾದದ ಹಿನ್ನೆಲೆ
ಕಾನ್ಪುರ, ವಾರಾಣಸಿ, ಬರೇಲಿ ಮತ್ತು ಮೊರಾದಾಬಾದ್ನಲ್ಲಿ ಇತ್ತೀಚಿನ ಹಿಂಸಾತ್ಮಕ ಘಟನೆಗಳ ಬಳಿಕ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಿದ್ದಾರೆ. ವಿಡಿಯೋ ದೃಶ್ಯಾವಳಿಗಳು ಮತ್ತು ಸಾಮಾಜಿಕ ಜಾಲತಾಣದ ಮೂಲಕ ದುಷ್ಕರ್ಮಿಗಳನ್ನು ಗುರುತಿಸಿ ಎಫ್ಐಆರ್ ದಾಖಲಿಸಿ, ಅವರ ಆಸ್ತಿಗಳ ತನಿಖೆಗೆ ಸೂಚನೆ ನೀಡಿದ್ದಾರೆ. ಜೊತೆಗೆ, ಕಸಾಯಿಖಾನೆಗಳ ಆಕಸ್ಮಿಕ ತಪಾಸಣೆಗೆ ಆದೇಶಿಸಿದ್ದಾರೆ. ದಸರಾ ದುಷ್ಟತನ ಮತ್ತು ಭಯೋತ್ಪಾದನೆಯ ದಹನವನ್ನು ಸಂಕೇತಿಸುತ್ತದೆ ಎಂದು ಹೇಳಿದ ಮುಖ್ಯಮಂತ್ರಿ, ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಲು ಇದು ಸರಿಯಾದ ಸಮಯ ಎಂದು ಹೇಳಿದರು.
Viral Video: ಟ್ರಕ್ ಓಡಿಸುತ್ತಲೇ 2 ನಿಮಿಷ ನಿದ್ದೆಗೆ ಜಾರಿದ ಚಾಲಕ! ಆಮೇಲೆ ನಡೆದಿದ್ದು ಘನಘೋರ ಘಟನೆ
ಬರೇಲಿಯಲ್ಲಿ ನಡೆದಿದ್ದೇನು?
ಶುಕ್ರವಾರ, “ಐ ಲವ್ ಮುಹಮ್ಮದ್” ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರತಿಭಟನೆಯನ್ನು ಮುಂದೂಡಿದ ಘೋಷಣೆಯಿಂದ ಬರೇಲಿಯ ಮಸೀದಿಯ ಹೊರಗೆ ಗುಂಪು ಸೇರಿಕೊಂಡಿತು. ಇತೇಹದ್-ಎ-ಮಿಲ್ಲತ್ ಕೌನ್ಸಿಲ್ನ ಮುಖ್ಯಸ್ಥ ತೌಕೀರ್ ರಜಾ ಖಾನ್ ಅವರ ನಿವಾಸದ ಬಳಿ ಮತ್ತು ಕೋತ್ವಾಲಿ ಪ್ರದೇಶದ ಮಸೀದಿಯಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರೊಂದಿಗೆ ಘರ್ಷಣೆಯಾದಾಗ 24ಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಜಿಲ್ಲಾಧಿಕಾರಿ ಅವಿನಾಶ್ ಸಿಂಗ್, ಪ್ರತಿಭಟನೆಗೆ ಲಿಖಿತ ಅನುಮತಿ ಬೇಕಿತ್ತು, ಆದರೆ ಕೆಲವರು ಶಾಂತಿಗೆ ಭಂಗ ತಂದರು ಎಂದು ಹೇಳಿದ್ದಾರೆ.
ಅಧಿಕಾರಿಗಳು, ಈ ಗಲಭೆಗಳು ಪಶ್ಚಿಮ ಉತ್ತರ ಪ್ರದೇಶದಲ್ಲಿ ಉದ್ಯಮ ಮತ್ತು ಪ್ರಗತಿಯ ವಿರುದ್ಧ ಷಡ್ಯಂತ್ರವಾಗಿದೆ ಎಂದು ಆರೋಪಿಸಿದ್ದಾರೆ. ನೊಯ್ಡಾದ ಅಂತಾರಾಷ್ಟ್ರೀಯ ವ್ಯಾಪಾರ ಮೇಳವನ್ನು ಕೆಡಿಸಲು ಮತ್ತು ರಾಜ್ಯವನ್ನು ಅಸುರಕ್ಷಿತವೆಂದು ಚಿತ್ರಿಸಲು ಯತ್ನ ನಡೆದಿದೆ” ಎಂದು ವರದಿಯಾಗಿದೆ. ಇದು ಯೋಗಿ ಸರ್ಕಾರದ ಹೈಟೆಕ್ ಉದ್ಯಮ ನಗರಿಗಳ ಯೋಜನೆಗೆ ಅಡ್ಡಿಯಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.
“ಐ ಲವ್ ಯೋಗಿ” ಪೋಸ್ಟರ್ಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿವೆ. ಕೆಲವರು ಇದು ಧ್ರುವೀಕರಣವನ್ನು ಉತ್ತೇಜಿಸುತ್ತದೆ ಎಂದಿದ್ದರೆ, ಬಿಜೆಪಿ ಬೆಂಬಲಿಗರು ಯೋಗಿಜಿಯ ಕಾನೂನು ಸುವ್ಯವಸ್ಥೆಗೆ ಬೆಂಬಲ ಎಂದಿದ್ದಾರೆ. ಈ ವಿವಾದ ರಾಜ್ಯದಲ್ಲಿ ಶಾಂತಿ ಕಾಪಾಡುವ ಸವಾಲನ್ನು ಎತ್ತಿಹಿಡಿದಿದೆ.