Raj Thackeray : ವಾಟ್ಸಾಪ್ನಲ್ಲಿ ಇತಿಹಾಸ ಓದಿ ತಿಳಿದುಕೊಳ್ಳಬೇಡಿ; ಔರಂಗಜೇಬ್ ಸಮಾಧಿ ವಿವಾದದ ಬಗ್ಗೆ ರಾಜ್ ಠಾಕ್ರೆ ಹೇಳಿಕೆ
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಭಾನುವಾರ ಔರಂಗಜೇಬನ ಸಮಾಧಿಯ ಕುರಿತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಪ್ರಯತ್ನಗಳನ್ನು ಖಂಡಿಸಿದ್ದಾರೆ. ಇತಿಹಾಸದ ಮಾಹಿತಿಗಾಗಿ ಜನರು ವಾಟ್ಸಾಪ್ ಫಾರ್ವರ್ಡ್ಗಳನ್ನು ಅವಲಂಬಿಸಬಾರದು ಎಂದು ಅವರು ಹೇಳಿದ್ದಾರೆ.


ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಭಾನುವಾರ ಔರಂಗಜೇಬನ ಸಮಾಧಿಯ ಕುರಿತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಪ್ರಯತ್ನಗಳನ್ನು ಖಂಡಿಸಿದ್ದಾರೆ. ಇತಿಹಾಸದ ಮಾಹಿತಿಗಾಗಿ ಜನರು ವಾಟ್ಸಾಪ್ ಫಾರ್ವರ್ಡ್ಗಳನ್ನು ಅವಲಂಬಿಸಬಾರದು ಎಂದು ಅವರು ಹೇಳಿದ್ದಾರೆ. ಶಿವಾಜಿ ಪಾರ್ಕ್ನಲ್ಲಿ ತಮ್ಮ ವಾರ್ಷಿಕ ಗುಡಿ ಪಾಡ್ವಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಜ್ ಠಾಕ್ರೆ, ಮೊಘಲ್ ದೊರೆಯೊಬ್ಬ "ಶಿವಾಜಿ ಎಂಬ ಚಿಂತನೆಯನ್ನು ಕೊಲ್ಲಲು" ಬಯಸಿದ್ದ, ಆದರೆ ಅದರಲ್ಲಿ ವಿಫಲನಾಗಿ ಮಹಾರಾಷ್ಟ್ರದಲ್ಲಿಸಾವನ್ನಪ್ಪಿದ ಎಂದು ಹೇಳಿದರು.
Maharashtra: Maharashtra Navnirman Sena (MNS) Chief Raj Thackeray participated in the annual Gudi Padwa rally at Shivaji Park
— IANS (@ians_india) March 30, 2025
He says, "Despite being the ruler of a vast region, Aurangzeb remained in Maharashtra even after the death of Chhatrapati Shivaji Maharaj because he… pic.twitter.com/jVVMdwtIt9
ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ದಾರಿತಪ್ಪಿಸುವ ಐತಿಹಾಸಿಕ ನಿರೂಪಣೆಗಳು ಮತ್ತು ವಾಟ್ಸಾಪ್ ಫಾರ್ವರ್ಡ್ಗಳ ವಿರುದ್ಧ ಎಚ್ಚರಿಕೆ ನೀಡಿದರು. ಸಾಮಾಜಿಕ ಮಾಧ್ಯಮಗಳಿಗಿಂತ ಹೆಚ್ಚಾಗಿ ವಿಶ್ವಾಸಾರ್ಹ ಮೂಲಗಳಿಂದ ಇತಿಹಾಸವನ್ನು ಅಧ್ಯಯನ ಮಾಡಬೇಕು ಎಂದು ಪ್ರತಿಪಾದಿಸಿದರು. ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಔರಂಗಜೇಬನ ಸಮಾಧಿಯ ಕುರಿತು ವಿವಾದವನ್ನು ಹುಟ್ಟುಹಾಕಲು ನಡೆಯುತ್ತಿರುವ ರಾಜಕೀಯ ಪ್ರಯತ್ನಗಳನ್ನು ಅವರು ಟೀಕಿಸಿದ್ದಾರೆ.
ನಾವು ಜಲಮೂಲಗಳು ಮತ್ತು ಮರಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ, ಆದರೆ ಔರಂಗಜೇಬನ ಸಮಾಧಿಯ ಬಗ್ಗೆ ಚಿಂತಿತರಾಗಿದ್ದೇವೆ. ಬಿಜಾಪುರದ ಜನರಲ್ ಅಫ್ಜಲ್ ಖಾನ್ ಅವರನ್ನು ಪ್ರತಾಪಗಢ ಕೋಟೆಯ ಬಳಿ ಸಮಾಧಿ ಮಾಡಲಾಯಿತು ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಅನುಮತಿಯಿಲ್ಲದೆ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಔರಂಗಜೇಬನ ಸಮಾಧಿಯನ್ನು ತೆಗೆದುಹಾಕುವಂತೆ ಬಲಪಂಥೀಯ ಸಂಘಟನೆಗಳ ಬೇಡಿಕೆಗಳ ನಡುವೆ ರಾಜ್ ಠಾಕ್ರೆ ಹೇಳಿಕೆ ನೀಡಿದ್ದಾರೆ. ಇತಿಹಾಸದ ಹೆಸರಿನಲ್ಲಿ ಜನರನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ರಾಜಕೀಯಕ್ಕೆ ಬಲಿಯಾಗದಂತೆ ನಾನು ಜನರಿಗೆ ಎಚ್ಚರಿಕೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ : Nagpur Violence: ನಾಗ್ಪುರ ಹಿಂಸಾಚಾರ- ಆರೋಪಿ ಫಾಹೀಮ್ ಖಾನ್ ಅಕ್ರಮ ಆಸ್ತಿಯ ಮೇಲೆ ಬುಲ್ಡೋಜರ್ ಕಾರ್ಯಾಚರಣೆ
ಚಲನಚಿತ್ರಗಳಿಂದ ಐತಿಹಾಸಿಕ ಜ್ಞಾನವನ್ನು ಪಡೆಯುವವರನ್ನು ಟೀಕಿಸುತ್ತಾ, ಠಾಕ್ರೆ, "ಸಿನಿಮಾ ನೋಡಿದ ನಂತರ ಜಾಗೃತರಾಗುವ ಹಿಂದೂಗಳು ಯಾವುದೇ ಪ್ರಯೋಜನವಿಲ್ಲ. ವಿಕ್ಕಿ ಕೌಶಲ್ ಕಾರಣದಿಂದಾಗಿ ಸಂಭಾಜಿ ಮಹಾರಾಜರ ತ್ಯಾಗದ ಬಗ್ಗೆ ನೀವು ಕಲಿತಿದ್ದೀರಾ ಅಥವಾ ಅಕ್ಷಯ್ ಖನ್ನಾ ಕಾರಣದಿಂದಾಗಿ ಔರಂಗಜೇಬನ ಬಗ್ಗೆ ಕಲಿತಿದ್ದೀರಾ?" ಭಾರತದ ಪ್ರಗತಿ ಕೇವಲ ಧರ್ಮದ ಆಧಾರದ ಮೇಲೆ ಮಾತ್ರ ಸಾಧ್ಯವಿಲ್ಲ. ನೀವು ಇತಿಹಾಸವನ್ನು ಓದಬೇಕು , ತಿಳಿದುಕೊಳ್ಳೇಬೇಕು ಎಂದು ಹೇಳಿದ್ದಾರೆ.