ಆಪರೇಷನ್​ ಸಿಂಧೂರ ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indore Couple Missing: ಪತಿ ಹತ್ಯೆ ಬಳಿಕ ಎಸ್ಕೇಪ್‌ ಆಗಲು ಹಂತಕರು ಮಾಡಿದ್ದ ಪ್ಲಾನ್‌ ಏನು? ರಘುವಂಶಿ ಕೊಲೆ ಕೇಸ್‌ನಲ್ಲಿ ಸಿಕ್ತು ಬಿಗ್‌ ಅಪ್‌ಡೇಟ್‌

ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದ ದಂಪತಿಯ ಮಿಸ್ಸಿಂಗ್‌ ಕೇಸ್‌ ರಹಸ್ಯ ಇದೀಗ ಬಯಲಾಗಿದೆ. ಪತ್ನಿಯೇ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ವಿಚಾರಣೆ ವೇಳೆ ಸುಪಾರಿ ಕಿಲ್ಲರ್‌ಗಳು ಆರೋಪಿ ಸೋನಂ ತನ್ನ ಪತಿ ರಾಜಾ ರಘುವಂಶಿ ಹತ್ಯೆಗೆ ಸುಪಾರಿ ಕೊಟ್ಟಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಪತಿ ಹತ್ಯೆ ಬಳಿಕ ಎಸ್ಕೇಪ್‌ ಆಗಲು ಹಂತಕರು ಮಾಡಿದ್ದ ಪ್ಲಾನ್‌ ಏನು?

Profile Vishakha Bhat Jun 11, 2025 10:01 AM

ನವದೆಹಲಿ: ಮೇಘಾಲಯಕ್ಕೆ ಹನಿಮೂನ್‌ಗೆಂದು (Indore Couple Missing) ತೆರಳಿದ್ದ ದಂಪತಿಯ ಮಿಸ್ಸಿಂಗ್‌ ಕೇಸ್‌ ರಹಸ್ಯ ಇದೀಗ ಬಯಲಾಗಿದೆ. ಪತ್ನಿಯೇ ಸುಪಾರಿ ನೀಡಿ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ವಿಚಾರಣೆ ವೇಳೆ ಸುಪಾರಿ ಕಿಲ್ಲರ್‌ಗಳು ಆರೋಪಿ ಸೋನಂ ತನ್ನ ಪತಿ ರಾಜಾ ರಘುವಂಶಿ ಹತ್ಯೆಗೆ ಸುಪಾರಿ ಕೊಟ್ಟಿದ್ದಳು ಎಂಬುದನ್ನು ಒಪ್ಪಿಕೊಂಡಿದ್ದಾರೆ. ಉತ್ತರಪ್ರದೇಶದ ಗಾಜಿಪುರರದಲ್ಲಿ ಎಲ್ಲಾ ಆರೋಪಿಗಳನ್ನು ಪೊಲೀಸರು ಅರೆಸ್ಟ್‌ ಮಾಡಿದ್ದಾರೆ. 24 ವರ್ಷದ ಸೋನಮ್ ರಘುವಂಶಿ, ಮೇ 11 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ 29 ವರ್ಷದ ರಾಜಾ ರಘುವಂಶಿ ಅವರನ್ನು ವಿವಾಹವಾಗಿದ್ದಳು.

ಮೇಘಾಲಯಕ್ಕೆ ಹನಿಮೂನ್‌ಗೆಂದು ತೆರಳಿದ್ದ ನವದಂಪತಿ ರಾಜಾ ಮತ್ತು ಸೋನಂ, ಮೇ 23 ರಂದು ನೊಂಗ್ರಿಯಾಟ್ ಗ್ರಾಮದ ಹೋಮ್‌ಸ್ಟೇಯಿಂದ ಚೆಕ್‌ಔಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಕಾಣೆಯಾಗಿದ್ದರು. ಒಂಬತ್ತು ದಿನಗಳ ಬಳಿಕ, ಪತಿ 30 ವರ್ಷದ ರಾಜಾ ರಘುವಂಶಿ (Raja Raghuvanshi) ಮೃತದೇಹ ಜೂನ್ 2 ರಂದು ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ಸೊಹ್ರಾ ಪ್ರದೇಶದ ಜಲಪಾತದ ಬಳಿಯ ಕಂದಕದಲ್ಲಿ ಪತ್ತೆಯಾಗಿತ್ತು. ಕೊಲೆ ಮಾಡಿದ ಬಳಿಕ ಹಂತಕರು ಉತ್ತರ ಪ್ರದೇಶಕ್ಕೆ ಎಸ್ಕೇಪ್‌ ಆಗಿದ್ದರು.

ಈ ಸುದ್ದಿಯನ್ನೂ ಓದಿ: Viral Video:ರಾಜಾ ರಘುವಂಶಿ ಕೊಲೆ ಪ್ರಕರಣ; ಮದ್ವೆ ವಿಡಿಯೊದಲ್ಲಿ ಸಿಕ್ತು ಕೊಲೆಗೆ ಬಿಗ್‌ ಟ್ವಿಸ್ಟ್‌!

ಕೊಲೆಯ ನಂತರ, ಸೋನಂ ಮಾವ್ಕಡೋಕ್‌ನಿಂದ ಶಿಲ್ಲಾಂಗ್‌ಗೆ ತೆರಳಿದ್ದಳು. ನಂತರ ಗುಹವಟಿಗೆ ತೆರಳಿ ಅಲ್ಲಿಂದ ಉತ್ತರ ಪ್ರದೇಶಕ್ಕೆ ಹೋಗಿದ್ದಾಳೆ. ಕುಶ್ವಾಹನ ಸ್ನೇಹಿತರಾದ ಮೂವರು ಹಂತಕರು ಸೊಹ್ರಾದಿಂದ ಗುವಾಹಟಿಗೆ ಟ್ಯಾಕ್ಸಿ ಮೂಲಕ ಪಲಾಯನ ಮಾಡಿ ನಂತರ ಇಂದೋರ್‌ಗೆ ರೈಲು ಹತ್ತಿದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಸದ್ಯ ಸೋನಂ ಬಂಧನವಾಗಿದ್ದು ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರು ಆಕೆಯ ಪ್ರಿಯತಮನನ್ನೂ ಕೂಡ ಬಂಧಿಸಿದ್ದಾರೆ. ಆಕೆಯ ಗೆಳೆಯ ರಾಜ್ ಕುಶ್ವಾಹನನ್ನು ಸಹ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಮೇಘಾಲಯ ಉಪಮುಖ್ಯಮಂತ್ರಿ ಪ್ರೆಸ್ಟೋನ್ ಟಿನ್ಸಾಂಗ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಪೊಲೀಸರು, ಕೊಲೆ ನಡೆದ ಸಮಯದಲ್ಲಿ ಕುಶ್ವಾಹ ರಾಜ್ಯದಲ್ಲಿ ಇರಲಿಲ್ಲ ಆತ ಹೊರಗಿದ್ದುಕೊಂಡೇ ಕೊಲೆಗೆ ಪ್ಲಾನ್‌ ಮಾಡಿದ್ದ ಎಂದು ಊಹಿಸಲಾಗಿದೆ.