ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ನೃತ್ಯಕ್ಕೆಂದು ಕರೆದು ವೇಶ್ಯಾವಾಟಿಕೆಗೆ ಬಳಕೆ; ಹೊಟೆಲ್‌ನಲ್ಲಿ ಬಂಧಿಯಾಗಿದ್ದ 15 ಯುವತಿಯರ ರಕ್ಷಣೆ

Bihar sex racket: ಬಿಹಾರದ ನಲಂದಾ ಜಿಲ್ಲೆಯ ರಾಜ್‌ಗಿರ್‌ನಲ್ಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿ, ಹೋಟೆಲ್‌ನಲ್ಲಿ ನಡೆಯುತ್ತಿದ್ದ ಅಕ್ರಮ ಲೈಂಗಿಕ ಚಟುವಟಿಕೆಗಳ ರಾಕೆಟ್ ಅನ್ನು ಭೇದಿಸಿದ್ದಾರೆ. ಈ ದಾಳಿಯ ವೇಳೆ ಮೂವರು ಯುವಕರನ್ನು ಬಂಧಿಸಲಾಗಿದ್ದು, ಬಲವಂತವಾಗಿ ಇರಿಸಲಾಗಿದ್ದ 15 ಯುವತಿಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

ಹೋಟೆಲ್‍ನಲ್ಲಿ 15 ಯುವತಿಯರೊಂದಿಗಿದ್ದ ಮೂವರು ಯುವಕರು

ಸಾಂದರ್ಭಿಕ ಎಐ ರಚಿತ ಚಿತ್ರ -

Priyanka P
Priyanka P Dec 31, 2025 11:15 AM

ಪಟನಾ: ಬಿಹಾರದ ಪ್ರಸಿದ್ಧ ಪ್ರವಾಸಿ ತಾಣವಾದ ರಾಜ್‌ಗೀರ್‌ನಲ್ಲಿ ಪೊಲೀಸರು ಸೆಕ್ಸ್ ರಾಕೆಟ್ (Bihar) ಅನ್ನು ಭೇದಿಸಿದ್ದಾರೆ. ಸ್ಥಳೀಯ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು (Police), ಮೂವರು ಯುವಕರನ್ನು ಬಂಧಿಸಿದ್ದಾರೆ. ಹಾಗೆಯೇ 15 ಮಂದಿ ಯುವತಿಯರನ್ನು ರಕ್ಷಿಸಿದ್ದಾರೆ. ಶನಿವಾರ ಸಂಜೆ ಧುರ್ವಾ ಮಾಡ್‌ನಲ್ಲಿರುವ ರೆಸಿಡೆನ್ಸಿ ಹೋಟೆಲ್‌ನಲ್ಲಿ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿಯರೆಲ್ಲರೂ ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದೆ. ನೃತ್ಯ ಮತ್ತು ಸಂಗೀತ ಪ್ರದರ್ಶನಗಳ ನೆಪದಲ್ಲಿ ಕರೆದು ವೇಶ್ಯಾವಾಟಿಕೆಗೆ ಒತ್ತಾಯಿಸಲಾಗಿತ್ತು ಎಂದು ಯುವತಿಯರು ಆರೋಪಿಸಿದ್ದಾರೆ. ನವಾಡಾ ಜಿಲ್ಲೆಯ ರೆಪುರ ಗ್ರಾಮದ ಗೌರವ್ ಕುಮಾರ್, ಹಿಸುವಾದ ಸೋನ್ಸಾ ಗ್ರಾಮದ ಸುಮನ್ ಕುಮಾರ್ ಮತ್ತು ಇಸ್ಲಾಂಪುರದ ಅಕ್ಬರ್‌ಪುರ ಗ್ರಾಮದ ಮನೋರಂಜನ್ ಕುಮಾರ್ ಅವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಕುಮಾರ್ ಸಿಂಗ್ ದೃಢಪಡಿಸಿದ್ದಾರೆ. ಮೂವರ ವಿರುದ್ಧವೂ ಎಫ್‌ಐಆರ್ ದಾಖಲಿಸಲಾಗಿದ್ದು, ಕಾನೂನು ಕ್ರಮಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

‌ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ; ಇಬ್ಬರು ಅರೆಸ್ಟ್, ಮೊದಲ ಬಾರಿ ಋತುಮತಿಯಾದ ಬಾಲಕಿಯರೇ ಟಾರ್ಗೆಟ್‌!

ಈ ಕಾರ್ಯಾಚರಣೆಯಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ಲಾಲ್ಮುನಿ ದುಬೆ, ಸ್ಟೇಷನ್ ಹೌಸ್ ಆಫೀಸರ್ ರಮಣ್ ಕುಮಾರ್, ನೇಹಾ ಕುಮಾರಿ ಮತ್ತು ರಾಮನಾಥ್ ಚೌಹಾಣ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು. ದಾಳಿಯ ಉದ್ದೇಶ ಅಪರಾಧಿಗಳನ್ನು ಬಂಧಿಸುವುದು ಮಾತ್ರವಲ್ಲದೆ ಭವಿಷ್ಯದಲ್ಲಿ ಇದೇ ರೀತಿಯ ಶೋಷಣೆಯನ್ನು ತಡೆಯುವುದಾಗಿದೆ ಎಂದು ಸಿಂಗ್ ಹೇಳಿದರು.

ಇಂತಹ ಅಪರಾಧ ಜಾಲಗಳಿಂದ ಯುವತಿಯರು ಮತ್ತು ಮಕ್ಕಳನ್ನು ರಕ್ಷಿಸಲು ಸಾಮಾಜಿಕ ಜಾಗೃತಿಯ ಮಹತ್ವವನ್ನು ಅಧಿಕಾರಿಗಳು ಒತ್ತಿ ಹೇಳಿದರು. ಇನ್ನು ಈ ಸಂಬಂಧ, ಸ್ಥಳೀಯ ಆಡಳಿತವು ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ. ಪ್ರಮುಖ ಪ್ರವಾಸಿ ತಾಣವಾದ ರಾಜಗೀರ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಸುರಕ್ಷಿತವನ್ನಾಗಿ ಮಾಡುವುದು ತಮ್ಮ ಜವಾಬ್ದಾರಿಯಾಗಿದೆ ಎಂದು ಪುನರುಚ್ಛರಿಸಿದೆ.

ರಾಜ್ಯದಲ್ಲಿ ಮಾನವ ಕಳ್ಳಸಾಗಣೆ ಮತ್ತು ಅಕ್ರಮ ಲೈಂಗಿಕ ದಂಧೆಗಳ ವಿರುದ್ಧ ಕಾರ್ಯಾಚರಣೆ ನಡೆಸಲಾಗುವುದು. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ, ಅದನ್ನು ವರದಿ ಮಾಡುವಂತೆ ಸಾರ್ವಜನಿಕರಲ್ಲಿ ಪೊಲೀಸರು ಮನವಿ ಮಾಡಿದ್ದಾರೆ.

Crime News: ವೇಶ್ಯಾವಾಟಿಕೆ ನಿರಾಕರಿಸಿದ್ದಕ್ಕೆ 22 ವರ್ಷದ ಲಿವ್-ಇನ್ ಪಾರ್ಟ್‌ನರ್‌ನ ಕೊಂದ ಪಾಪಿ

ಪತಿಯನ್ನು ಕೊಂದು ಅಪಘಾತ ಎಂದು ಬಿಂಬಿಸಿದ ಪತ್ನಿ

ಹಣ, ಪ್ರೀತಿ ಮತ್ತು ಕಾಮಕ್ಕಾಗಿ ಮಹಿಳೆಯೊಬ್ಬಳು ತನ್ನ ಪತಿಯನ್ನೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಕುರ್ಖೇಡಾ ಪಟ್ಟಣದಲ್ಲಿ ನಡೆದಿದೆ. ಪತ್ನಿ, ತನ್ನ ಪ್ರಿಯಕರನೊಂದಿಗೆ ಸೇರಿ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ. ನಂತರ ಆ ಘಟನೆಯನ್ನು ರಸ್ತೆ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾಳೆ ಎಂದು ಆರೋಪಿಸಲಾಗಿದೆ. ಆದರೆ, ಪೊಲೀಸ್ ತನಿಖೆಯಲ್ಲಿ ಅವರ ಕೃತ್ಯಗಳು ಬಯಲಾಗಿವೆ. ಇಬ್ಬರೂ ಪೊಲೀಸರಿಗೆ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಈ ಘಟನೆ ಡಿಸೆಂಬರ್ 30, 2025 ರಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ನಡೆದಿದೆ ಎಂದು ಹೇಳಲಾಗಿದೆ. ಮೃತರನ್ನು ಘೇವರ್ಧಾ ಗ್ರಾಮದ ನಿವಾಸಿ ದಿನೇಶ್ ಸೂರ್ಯಭನ್ ಡೊಂಗರ್ವಾರ್ (33 ವರ್ಷ) ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಮೃತರ ಪತ್ನಿ ರೇಖಾ ಡೊಂಗರ್ವಾರ್ (28 ವರ್ಷ) ಮತ್ತು ಆಕೆಯ ಪ್ರೇಮಿ ವಿಶ್ವ ಸಂಗೋಲ್ (25 ವರ್ಷ, ಭರ್ನುಲಿಯ ನಿವಾಸಿ) ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.