“ಯುವ ಪೀಳಿಗೆ ದಾರಿ ತಪ್ಪಿಲ್ಲ”: ವಿದ್ಯಾರ್ಥಿಗಳ ಪ್ರತಿಭಟನೆಯ ನಡುವೆ ಗಮನ ಸೆಳೆದ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ
RSS chief Mohan Bhagwat: ಇಂದಿನ ಯುವ ಪೀಳಿಗೆ ದಾರಿ ತಪ್ಪಿಲ್ಲ ಅಥವಾ ದಿಕ್ಕು ತೋಚದವರಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಒತ್ತಿ ಹೇಳಿದರು. ಯುವ ಪೀಳಿಗೆ ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿಯನ್ನು ಹೊಂದಿದ್ದು, ಪೋಷಕರು ಮತ್ತು ಹಿರಿಯರು ಅವರೊಂದಿಗೆ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಭಾಗವತ್ ಹೇಳಿದರು.
ದೆಹಲಿಯಲ್ಲಿ ನಡೆ ವಿದ್ಯಾರ್ಥಿಗಳ ಪ್ರತಿಭಟನೆ -
ನವದೆಹಲಿ, ಜು. 25: ಇಂದಿನ ಯುವ ಪೀಳಿಗೆ ದಾರಿ ತಪ್ಪಿಲ್ಲ ಅಥವಾ ದಿಕ್ಕು ತೋಚದವರಲ್ಲ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಒತ್ತಿ ಹೇಳಿದರು. ಅವರನ್ನು ಅರ್ಥ ಮಾಡಿಕೊಳ್ಳಲು ಆಜ್ಞೆ ಮಾಡುವುದಲ್ಲ, ಅರ್ಥಪೂರ್ಣ ಚರ್ಚೆ ಮಾಡಬೇಕು ಎಂದು ಅವರು ಕರೆ ನೀಡಿದರು. ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ (NEET question paper leak) ದೆಹಲಿಯಲ್ಲಿ ನಡೆದ ಪ್ರತಿಭಟನೆಯ ಮಧ್ಯೆ ಮೋಹನ್ ಭಾಗವತ್ ಅವರ ಈ ಹೇಳಿಕೆ ಗಮನ ಸೆಳೆಯಿತು.
ವಿಶ್ವ ಮಾಂಗಲ್ಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಭಾಗವತ್, ತಲೆಮಾರುಗಳ ನಡುವಿನ ಅಂತರ ಹೆಚ್ಚುತ್ತಿರುವ ಬಗ್ಗೆ ಚಿಂತನೆ ನಡೆಸಿ, ಇಂದಿನ ಯುವಕರಿಗೆ ಸರಿಯಾದ ಮಾರ್ಗದರ್ಶನದ ಅಗತ್ಯವಿದೆ ಎಂದು ಹೇಳಿದರು. ನಾವು ಚಿಕ್ಕವರಿದ್ದಾಗ, ಅದು ವಿಧೇಯತೆಯ ಯುಗವಾಗಿತ್ತು. ಈಗ ಹಾಗಲ್ಲ ಎಂದು ಅವರು ಹೇಳಿದರು.
ಇಂದಿನ ಯುವ ಪೀಳಿಗೆ ಪ್ರಶ್ನೆಗಳನ್ನು ಕೇಳುವ ಪ್ರವೃತ್ತಿಯನ್ನು ಹೊಂದಿದ್ದು, ಪೋಷಕರು ಮತ್ತು ಹಿರಿಯರು ಅವರೊಂದಿಗೆ ತೊಡಗಿಸಿಕೊಳ್ಳುವುದು ಅತ್ಯಗತ್ಯ ಎಂದು ಭಾಗವತ್ ಹೇಳಿದರು. ಅದೇ ಸಮಯದಲ್ಲಿ, ಕುಟುಂಬಗಳಲ್ಲಿ ಮಾತುಕತೆಗಳು ಕಡಿಮೆಯಾಗುತ್ತಿರುವ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದರು. “ಹೊಸ ಪೀಳಿಗೆ ಪ್ರಶ್ನೆಗಳನ್ನು ಕೇಳುತ್ತದೆ. ನಾವು ಅವರಿಗೆ ಕಾರಣವನ್ನು ವಿವರಿಸಬೇಕು. ನಾವು ಅವರಿಗೆ ಸಾಕಷ್ಟು ಪ್ರೀತಿಯನ್ನು ನೀಡಬೇಕು. ನಾವು ಅವರೊಂದಿಗೆ ಸಮಯ ಕಳೆಯಬೇಕು. ನಾವು ಅವರೊಂದಿಗೆ ಕುಳಿತು ಮಾತನಾಡಬೇಕು” ಎಂದು ಭಾಗವತ್ ಹೇಳಿದರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ದೆಹಲಿ ಪ್ರತಿಭಟನೆ ಅಂತ್ಯಗೊಳಿಸಿದ ಸಿಜೆಪಿ
ಯುವಕರ ವಿಶ್ವಾಸ ಗಳಿಸಲು ಮಾತುಕತೆಯ ಅಗತ್ಯವಿದೆ, ಆಜ್ಞೆಗಳಲ್ಲ ಎಂದು ಅವರು ಒತ್ತಿ ಹೇಳಿದರು. “ನಾವು ಈ ಪೀಳಿಗೆಯವರೊಂದಿಗೆ ಹೊಸ ಭಾವನೆಯನ್ನು ಮೂಡಿಸಬೇಕಾಗಿದೆ. ನಾವು ಅವರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಬೇಕಾಗಿದೆ. ಇದು ಸರ್ವಾಧಿಕಾರಿ ಆದೇಶವಲ್ಲ, ಚರ್ಚೆಯಾಗಬೇಕು. ಆಜ್ಞೆಗಳಲ್ಲ, ಸರ್ವಸಮ್ಮತಿಯಾಗಬೇಕು” ಎಂದು ಭಾಗವತ್ ಹೇಳಿದರು.
ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಭಾಗವತ್ ನೇರವಾಗಿ ಉಲ್ಲೇಖಿಸದಿದ್ದರೂ, ಅವರ ಹೇಳಿಕೆಯು ಇದೇ ಮಾತನ್ನು ಹೇಳುತ್ತಿದ್ದಾರೆ ಎಂಬುದನ್ನು ಪುಷ್ಟೀಕರಿಸುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಿಜೆಪಿ ಪ್ರತಿಭಟನೆಗಳ ಬಗ್ಗೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಜುಲೈ 20ರಂದು ನಡೆದ ಹಿಂಸಾಚಾರ ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿತ್ತು. ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರೌರ್ಯ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಮೋಹನ್ ಭಾಗವತ್ ಅವರ ಮೌನವನ್ನು ಹಿರಿಯ ವಕೀಲ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. “ಮೋಹನ್ ಭಾಗವತ್ ಕಳೆದ ಒಂದು ತಿಂಗಳಿನಿಂದ ನಿಮ್ಮ ಮೌನವು ನಿಮ್ಮ ಧರ್ಮೋಪದೇಶಗಳಿಗಿಂತ ಹೆಚ್ಚು ನಿರರ್ಗಳವಾಗಿದೆ” ಎಂದು ಸಿಬಲ್ ಎಕ್ಸ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ.