ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಹಿಳಾ ಮೀಸಲಾತಿ 21ನೇ ಶತಮಾನದ ಭಾರತದ ಅತೀ ದೊಡ್ಡ ನಿರ್ಧಾರವಾಗಲಿದೆ: ಪ್ರಧಾನಿ ಮೋದಿ

ಅತಿದೊಡ್ಡ ನಿರ್ಧಾರಗಳಲ್ಲಿ ಒಂದನ್ನು ಭಾರತವು 21ನೇ ಶತಮಾನದಲ್ಲಿ ತೆಗೆದುಕೊಳ್ಳಲಿದೆ. ಪ್ರಸ್ತಾವಿತ ಮಹಿಳಾ ಸಬಲೀಕರಣ ಕಾಯ್ದೆಯನ್ನು ಜಾರಿಗೊಳಿಸಲು ಸಂಸತ್ತು ಶ್ರಮಿಸಲಿದೆ. ಇದು ನಾರಿ ಶಕ್ತಿಗೆ ಮೀಸಲಾದ ಐತಿಹಾಸಿಕ ಹೆಜ್ಜೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 'ನಾರಿ ಶಕ್ತಿ ವಂದನ ಸಮ್ಮೇಳನ'ವನ್ನು ಉದ್ದೇಶಿಸಿ ಅವರು ಸೋಮವಾರ ಮಾತನಾಡಿದರು.

ಮಹಿಳಾ ಮೀಸಲಾತಿ ನಾರಿ ಶಕ್ತಿಗಾಗಿ ಒಂದು ಐತಿಹಾಸಿಕ ಹೆಜ್ಜೆ: ಪ್ರಧಾನಿ ಮೋದಿ

ಸಂಗ್ರಹ ಚಿತ್ರ -

ನವದೆಹಲಿ: ದೇಶದ ಅಭಿವೃದ್ಧಿಯ ಪ್ರಯಾಣದಲ್ಲಿ ಭಾರತವು 21ನೇ ಶತಮಾನದ ಅತಿದೊಡ್ಡ ನಿರ್ಧಾರಗಳಲ್ಲಿ ಒಂದನ್ನು ತೆಗೆದುಕೊಳ್ಳಲಿದೆ. ಇದು ಈ ಶತಮಾನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಲಿದೆ. ಇದು ನಾರಿ ಶಕ್ತಿಗೆ (Nari Shakti) ಸಮರ್ಪಿಸಲಾಗಿದೆ ಎಂದು ನಾನು ಬಹಳ ಜವಾಬ್ದಾರಿಯಿಂದ ಹೇಳುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಹೇಳಿದರು. ನವದೆಹಲಿಯ ವಿಜ್ಞಾನ ಭವನದಲ್ಲಿ ಸೋಮವಾರ ನಡೆದ 'ನಾರಿ ಶಕ್ತಿ ವಂದನ ಸಮ್ಮೇಳನ'ವನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತಾವಿತ ಮಹಿಳಾ ಮೀಸಲಾತಿ ಶಾಸನವು (Women's reservation act) ಶೀಘ್ರದಲ್ಲೇ ಜಾರಿಯಾಗುವ ವಿಶ್ವಾಸವಿದ್ದು, ಇದೊಂದು ದೇಶದ ಆಡಳಿತದಲ್ಲಿ ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಬಣ್ಣಿಸಿದರು.

ನಾರಿ ಶಕ್ತಿ ಮೀಸಲಾತಿ ಶಾಸನವು ಭೂತಕಾಲದ ದೃಷ್ಟಿಕೋನವನ್ನು ವಾಸ್ತವಕ್ಕೆ ಬದಲಾಯಿಸಲಿದೆ. ಇದು ಸಾಮಾಜಿಕ ನ್ಯಾಯವನ್ನು ಆಡಳಿತ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯ ಪ್ರಮುಖ ಭಾಗವಾಗಿಸುತ್ತದೆ. ಇದು ಮಹಿಳಾ ಶಕ್ತಿಗೆ, ಮಹಿಳಾ ಶಕ್ತಿಯ ಆರಾಧನೆಗೆ ಸಮರ್ಪಿತವಾಗಿದೆ ಎಂದರು.

ಇರಾನ್-ಅಮೆರಿಕ ಯುದ್ಧ; ಭಾರತದ ಕಾಫಿ ರಫ್ತಿಗೆ ಭಾರೀ ಹೊಡೆತ

ನಮ್ಮ ದೇಶದ ಸಂಸತ್ತು ಹೊಸ ಇತಿಹಾಸವನ್ನು ಸೃಷ್ಟಿಸುವ ಹಂತದಲ್ಲಿದೆ. ಇದು ಸಮಾನತೆಯ ಭಾರತಕ್ಕಾಗಿ ಒಂದು ಪ್ರಮುಖ ನಿರ್ಣಯವಾಗಲಿದೆ. ಸಾಮಾಜಿಕ ನ್ಯಾಯವು ಕೇವಲ ಘೋಷಣೆಯಲ್ಲ ಅದು ಕೆಲಸದ ಸಂಸ್ಕೃತಿಯ ಭಾಗವಾಗಿದೆ. ಏಪ್ರಿಲ್ 16, 17 ಮತ್ತು 18 ರಾಜ್ಯ ಸಭೆಗಳಿಂದ ದೇಶದ ಸಂಸತ್ತಿನವರೆಗೆ ದಶಕಗಳ ಕಾಯುವಿಕೆಯನ್ನು ಕೊನೆಗೊಳಿಸುವ ಸಮಯವಾಗಿದೆ ಎಂದು ತಿಳಿಸಿದರು.

ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಇದೊಂದು ಐತಿಹಾಸಿಕ ಹೆಜ್ಜೆ. ದಶಕಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಬೆಂಬಲಿಸಲು ಕಾಯುತ್ತಿವೆ. ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಅಗತ್ಯವನ್ನು ದಶಕಗಳಿಂದ ಪ್ರಸ್ತಾವಿಸಲಾಗುತ್ತಿದ್ದರೂ ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಸಾಕಷ್ಟು ವಿಳಂಬ ಮಾಡಲಾಗಿದೆ ಎಂದು ಅವರು ಹೇಳಿದರು.

ಸುಮಾರು ನಾಲ್ಕು ದಶಕಗಳಿಂದ ಈ ಕುರಿತು ಚರ್ಚೆ ನಡೆಯುತ್ತಿದೆ. ಇದು ಎಲ್ಲಾ ಪಕ್ಷಗಳು ಮತ್ತು ಅನೇಕ ತಲೆಮಾರುಗಳ ಪ್ರಯತ್ನಗಳನ್ನು ಒಳಗೊಂಡಿದೆ. ಪ್ರತಿಯೊಂದು ಪಕ್ಷವು ತನ್ನದೇ ಆದ ರೀತಿಯಲ್ಲಿ ಈ ಕಲ್ಪನೆಯನ್ನು ಮುಂದಿಟ್ಟಿದೆ ಎಂದ ಅವರು 2029ರ ವೇಳೆಗೆ ಮಹಿಳಾ ಸಬಲೀಕರಣ ಕಾಯ್ದೆಯನ್ನು ಜಾರಿಗೆ ತರಲು ಸರ್ವಾನುಮತದ ಬೇಡಿಕೆ ಇದೆ ಎಂದು ಅವರು ತಿಳಿಸಿದರು.

ಏಪ್ರಿಲ್ 16ರಿಂದ ಸಂಸತ್ತು ಈ ವಿಷಯದ ಬಗ್ಗೆ ಸಮಗ್ರ ಚರ್ಚೆಯನ್ನು ನಡೆಸಲಿದೆ ಎಂದ ಅವರು, ಮಹಿಳಾ ಸಬಲೀಕರಣದ ಹಿತದೃಷ್ಟಿಯಿಂದ ಎಲ್ಲಾ ಪಕ್ಷಗಳು ಒಟ್ಟಾಗಿ ಈ ಉಪಕ್ರಮವನ್ನು ಮುಂದಕ್ಕೆ ಕೊಂಡೊಯ್ಯುತ್ತವೆ ಎಂಬ ಭರವಸೆ ಇದೆ ಎಂದರು.

SIR Phase 2: 7.2 ಕೋಟಿಗೂ ಹೆಚ್ಚು ಮತದಾರರ ಹೆಸರು ಕೈಬಿಟ್ಟ ಚುನಾವಣಾ ಆಯೋಗ

ಯಾವುದೇ ಬೆಲೆ ಕೊಟ್ಟಾದರೂ ಸರಿ ನಾವು 2029 ರೊಳಗೆ ಮಹಿಳಾ ಸಬಲೀಕರಣ ಕಾಯ್ದೆಯನ್ನು ಜಾರಿಗೆ ತರಬೇಕು. ಎಲ್ಲರ ಸಾಮೂಹಿಕ ಪ್ರಯತ್ನಗಳಿಂದ ಇದು ಇಡೀ ಸದನದ ಘನತೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಪ್ರತಿಯೊಂದು ಪಕ್ಷವು ರಾಜಕೀಯವನ್ನು ಮೀರಿ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.

ಈ ಸಂದರ್ಭದಲ್ಲಿ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.