Actress Archana: ಆಗಿನ ಕಾಲದಲ್ಲೇ ಬ್ಲೌಸ್ ಧರಿಸದೇ ಬೋಲ್ಡ್ ಆಗಿ ನಟಿಸಿದ್ರು ಈ ನಟಿ! ಹಾಟ್ ಫೋಟೋಸ್ ಇಲ್ಲಿವೆ
ತೆಲುಗು, ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದ ನಟಿ ಅರ್ಚನಾ ಬಳಿಕ ಸಿನಿಮಾ ರಂಗದಿಂದ ಬಹುಕಾಲ ದೂರ ಉಳಿದಿದ್ದರು. 2021ರಲ್ಲಿ ವರುಣ್ ಡಾಕ್ಟರ್ ಸಿನಿಮಾದಲ್ಲಿ ಸಹನಟಿಯಾಗಿ ಅಭಿನಯಿಸಿದ್ದು ಸುಮಾರು 3 ವರ್ಷದ ಬಳಿಕ ಇದೀಗ ಮತ್ತೆ ಷಷ್ಠಿ ಪೂರ್ತಿ ಸಿನಿಮಾ ಮೂಲಕ ಚಲನ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದು ಇದೇ ಸಂದರ್ಭ ಇವರ ಅಭಿನಯದ ನಿರೀಕ್ಷಣಾ ಸಿನಿಮಾದ ಕೆಲವು ಅನುಭವಗಳನ್ನು ಮೆಲುಕು ಹಾಕಿದ್ದಾರೆ.



ಒಂದು ಕಾಲದ ಟಾಪ್ ಹೀರೋಯಿನ್ ಆಗಿ 90ರ ದಶಕದಲ್ಲಿ ಭಾರತೀಯ ಚಲನಚಿತ್ರೋದ್ಯಮದಲ್ಲಿ ಮಿಂಚಿ ಮರೆಯಾದ ನಟಿಯರಲ್ಲಿ ನಟಿ ಅರ್ಚನಾ ಕೂಡ ಒಬ್ಬರು. ತೆಲುಗು, ಕನ್ನಡ ಸೇರಿದಂತೆ ವಿವಿಧ ಭಾಷೆಯಲ್ಲಿ ನಟಿಸಿ ಅಭಿಮಾನಿಗಳ ಮನಗೆದ್ದ ನಟಿ ಅರ್ಚನಾ ಬಳಿಕ ಸಿನಿಮಾ ರಂಗದಿಂದ ಬಹುಕಾಲ ದೂರ ಉಳಿದಿದ್ದರು. 2021ರಲ್ಲಿ ವರುಣ್ ಡಾಕ್ಟರ್ ಸಿನಿಮಾದಲ್ಲಿ ಸಹನಟಿಯಾಗಿ ಅಭಿನಯಿಸಿದ್ದು ಸುಮಾರು 3 ವರ್ಷದ ಬಳಿಕ ಇದೀಗ ಮತ್ತೆ ಷಷ್ಠಿ ಪೂರ್ತಿ ಸಿನಿಮಾ ಮೂಲಕ ಚಲನ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ.

ನಟಿ ಅರ್ಚನಾ ಅವರು 1982ರಲ್ಲಿ ತೆರೆ ಕಂಡ ನಿರೀಕ್ಷಣಾ ಚಲನಚಿತ್ರದಲ್ಲಿ ಅತ್ಯದ್ಭುತವಾಗಿ ಅಭಿನಯಿಸಿ ಇಂದಿಗೂ ಅಭಿಮಾನಿಗಳ ಮನದಲ್ಲಿ ಉಳಿದಿದ್ದಾರೆ. ನಿರೀಕ್ಷಣ ಚಿತ್ರದಲ್ಲಿ ನಟಿ ಅರ್ಚನಾ ಅವರು ಬುಡಕಟ್ಟು ಜನಾಂಗದ ಮಹಿಳೆಯಾಗಿ ನಟಿಸಿದ್ದಾರೆ. ದಿಟ್ಟ ಮಹಿಳೆಯ ಪಾತ್ರಕ್ಕೆ ನಟಿ ಅರ್ಚನಾ ಆಯ್ಕೆಯಾಗಿದ್ದು ಇದು ಅವರ ಪ್ರತಿಭೆ ಅನಾವರಣಕ್ಕೆ ಸಿಕ್ಕ ಅತ್ಯುತ್ತಮ ಚಿತ್ರವಾಗಿದೆ. ಬುಡಕಟ್ಟು ಮಹಿಳೆಯ ಪಾತ್ರವಾದ ಕಾರಣ ಬ್ಲೌಸ್ ಇಲ್ಲದೆ ಸೀರೆಯನ್ನು ಉಡುವ ದೃಶ್ಯವಿತ್ತು. ನಟಿ ಅರ್ಚನಾ ಬ್ಲೌಸ್ ಲೆಸ್ ಆಗಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಅನೇಕ ಚರ್ಚೆಗೆ ಗ್ರಾಸವಾಗಿತ್ತು, ಆದರೆ ಈ ಬಗ್ಗೆ ನಟಿ ಅರ್ಚನಾ ಹೆಚ್ಚು ತಲೆಕೆಡಿಸಿಕೊಳ್ಳದೆ ಪಾತ್ರಕ್ಕೆ ಜೀವತುಂಬಿದ್ದರು.

ಇತ್ತೀಚೆಗಷ್ಟೇ ಷಷ್ಠಿ ಪೂರ್ತಿ ಸಿನಿಮಾದ ಪ್ರಚಾರ ಕಾರ್ಯಕ್ರಮ ಸಂದರ್ಭದಲ್ಲಿ ನಟಿ ಅರ್ಚನಾ ಅವರು ಪಾಲ್ಗೊಂಡಿದ್ದಾರೆ. ಆಗ ನಟಿ ತಮ್ಮ ನಿರೀಕ್ಷಣ ಸಿನಿಮಾ ಅನುಭವವನ್ನು ಮೆಲುಕು ಹಾಕಿದ್ದಾರೆ. ನಿರೀಕ್ಷಣ ಚಿತ್ರದಲ್ಲಿ ಬುಡಕಟ್ಟು ಮಹಿಳೆ ಪಾತ್ರವನ್ನು ನಾನು ನಿರ್ವಹಿಸಿದೆ. ನಿರ್ದೇಶಕ ಬಾಲುಮಹೇಂದ್ರನ್ ಅವರು ಕಥೆಗೆ ಹೊಂದುವಂತೆ ಕಲಾವಿದರನ್ನು ಆಯ್ಕೆ ಮಾಡಿದ್ದು ಪಾತ್ರಕ್ಕೆ ತಕ್ಕಂತೆ ಹೊಂದುವ ಬಟ್ಟೆ ಧರಿಸಬೇಕಿತ್ತು. ಆ ಸಿನಿಮಾದ ಪಾತ್ರವು ತುಂಬಾ ಚೆನ್ನಾಗಿದ್ದ ಕಾರಣ ಒಪ್ಪಿಕೊಂಡೆ. ಹೀಗಾಗಿ ಇಂದಿಗೂ ಜನ ನನ್ನ ಅಭಿನಯ ಗುರುತಿಸುತ್ತಿದ್ದಾರೆ ಎಂದಿದ್ದಾರೆ.

1986 ರಲ್ಲಿ ಬಿಡುಗಡೆಯಾದ ನಿರೀಕ್ಷಣಾ ಸಿನಿಮಾವು ಅಭಿಮಾನಿಗಳ ಮನಗೆದ್ದು ನಟಿ ಅರ್ಚನಾ ಅವರಿಗೆ ಸಾಲು ಸಾಲು ಸಿನಿಮಾ ಆಫರ್ ತಂದುಕೊಟ್ಟಿತು. ಆಕಾಶಮ್ ಯೇ ನಾತಿ ದೋಹೋ, ಅನುರಾಗಮ್ ಆ ನಾತಿ ದೇ ಇತ್ಯಾದಿ ಹಾಡುಗಳು ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದುಬಿಟ್ಟಿತು. ಆ ಕಾಲದಲ್ಲಿಯೇ ಬ್ಲೌಸ್ ಇಲ್ಲದೆ ನಟಿಸಲು ನಟಿ ಅರ್ಚನಾ ಅವರು ಧೈರ್ಯ ತೋರಿದ್ದು ಅನೇಕ ಜನರ ಗಮನ ಸೆಳೆಯುವಂತೆ ಮಾಡಿದೆ. ಇವರ ಅಭಿನಯವು ವ್ಯಾಪಕವಾಗಿ ಮೆಚ್ಚುಗೆ ಪಡೆ ಯುವಂತೆ ಮಾಡಿತು. ಕನ್ನಡದಲ್ಲಿ ಕೂಡ ಡಾ. ರಾಜ್ ಕುಮಾರ್ ಜೊತೆಗೆ ಒಂದು ಮುತ್ತಿನ ಕಥೆ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಬೆಂಗಾಳಿ ಹಾಗೂ ಹಿಂದಿಯಲ್ಲೂ ನಟಿಸಿ ಯಶಸ್ಸು ಕಂಡಿದ್ದ ಕೃಷ್ಣ ಸುಂದರಿ ಅರ್ಚನಾ ಅವರು ರಿಷಬ್ ಶೆಟ್ಟಿಯ ಹೊಸ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹರಿದಾಡಿದೆ. ಅದರ ಬೆನ್ನಲ್ಲೆ ಸದ್ಯ ನಟಿ ಅರ್ಚನಾ ಅವರು ಷಷ್ಠಿ ಪೂರ್ತಿ ಸಿನಿಮಾ ಮೂಲಕ ಬಹುಕಾಲದ ಬಳಿಕ ಸಿನಿಮಾರಂಗಕ್ಕೆ ಮರಳಿದ್ದಾರೆ. ಹಿರಿಯ ನಟ ರಾಜೇಂದ್ರ ಪ್ರಸಾದ್ ಜೊತೆಗೆ ನಟಿ ಅರ್ಚನಾ ಅವರು ಈ ಸಿನಿಮಾದಲ್ಲಿ ವಿಭಿನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾ ಮೇ 30, 2025ರಂದು ರಿಲೀಸ್ ಆಗಲಿದ್ದು ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಿಸಿದೆ.