Astro Tips: ಆರ್ಥಿಕ ಸಮಸ್ಯೆ ಕಾಡುತ್ತಿದ್ದರೆ ಮಂಗಳವಾರ ತಪ್ಪದೇ ಆಂಜನೇಯನಿಗೆ ಈ ವಸ್ತುಗಳನ್ನು ಅರ್ಪಿಸಿ
Astro Tips: ಪ್ರತಿ ಮಂಗಳವಾರ ಹನುಮಂತನನ್ನು ಪೂಜಿಸಿ ಕೆಲವು ವಿಶೇಷ ಕ್ರಮಗಳನ್ನು ಕೈಗೊಂಡರೆ ನಿಮ್ಮ ಜೀವನದಲ್ಲಿನ ಕಷ್ಟಗಳು ದೂರವಾಗುತ್ತವೆ. ಮಂಗಳವಾರ ಕೆಲ ವಸ್ತುಗಳನ್ನು ಹನುಮಂತನಿಗೆ ಅರ್ಪಿಸಿದ್ರೆ ನಿಮ್ಮ ಜೀವನದಲ್ಲಿನ ತೊಂದರೆಗಳು ಕ್ಷಣಾರ್ಧದಲ್ಲಿ ಮಾಯವಾಗುತ್ತವೆ. ಈ ಕುರಿತು ಇಲ್ಲಿದೆ ಮಾಹಿತಿ


ಬೆಂಗಳೂರು: ಹಿಂದೂ ಧರ್ಮ(Hindu Religion) ಧರ್ಮದಲ್ಲಿ ಹನುಮಂತನ ಪೂಜೆ(Hanuman Pooje) ವಿಶೇಷ ಮಹತ್ವವಿದೆ. ಹನುಮಂತನ ಪೂಜೆಯಿಂದ ಮಾತ್ರ ಭಕ್ತರ ಎಲ್ಲಾ ತೊಂದರೆಗಳು ಮತ್ತು ಅಡೆತಡೆಗಳು ನಿಮಿಷಗಳಲ್ಲಿ ದೂರವಾಗುತ್ತವೆ. ಹನುಮಂತನನ್ನು ಪೂಜಿಸುವುದರಿಂದ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎನ್ನುವ ನಂಬಿಕೆಯಿದೆ. ಮಂಗಳವಾರ(Tuesday)ದ ಶುಭ ದಿನವನ್ನು ಹನುಮಂತನಿಗೆ ಸಮರ್ಪಿಸಲಾಗಿದೆ(Astro Tips). ಅಂದಹಾಗೆ, ಹನುಮಂತನನ್ನು ಯಾವುದೇ ಸಮಯದಲ್ಲಿ ಗೌರವದಿಂದ ಪೂಜಿಸಬಹುದು ಮತ್ತು ಯಾವುದೇ ಓರ್ವ ಭಕ್ತನು ಹನುಮಂತನನ್ನು ನಿಜವಾದ ಹೃದಯದಿಂದ ನೆನಪಿಸಿಕೊಂಡಾಗ ಅವನು ತನ್ನ ಭಕ್ತನ ಬಳಿ ಓಡಿ ಬರುತ್ತಾನೆ ಎನ್ನುವ ನಂಬಿಕೆಯಿದೆ. ಅದರಲ್ಲೂ ಮಂಗಳವಾರ ಮತ್ತು ಶನಿವಾರದಂದು ವಿಶೇಷ ಸಾಧನವನ್ನು ಮಾಡಿದರೆ ಹನುಮನ ವಿಶೇಷ ಅನುಗ್ರಹ ಪ್ರಾಪ್ತವಾಗುತ್ತದೆ. ಹನುಮಂತನ ಆರಾಧನೆಗಾಗಿ, ಇಷ್ಟಾರ್ಥಗಳ ಈಡೇರಿಕೆಗಾಗಿ ಮಂಗಳವಾರದ ದಿನವು ಹೆಚ್ಚು ಪರಿಣಾಮಕಾರಿಯೆಂದು ಹೇಳಲಾಗುತ್ತದೆ. ಅದರಲ್ಲೂ ಮಂಗಳವಾರ ಕೆಲ ವಸ್ತುಗಳನ್ನು ಆಂಜನೇಯನಿಗೆ ಆರ್ಪಿಸುವುದರಿಂದ ಶುಭ ಫಲಗಳು ಸಿಗಲಿದ್ದು, ಆ ವಸ್ತುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಅರಳಿ ಎಲೆ:
ಮಂಗಳವಾರ ಮುಂಜಾನೆ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿದ ಬಳಿಕ ಶುದ್ಧವಾಗಿ, ಮಡಿ ಬಟ್ಟೆ ಧರಿಸಿ. ನಂತರ 11 ಅರಳಿ ಎಲೆಗಳನ್ನು ಕಿತ್ತಿ, ಆ ಎಲೆಗಳನ್ನು ಗಂಗಾಜಲದಿಂದ ಸ್ವಚ್ಛಗೊಳಿಸಿ. ಬಳಿಕ ಅದರ ಮೇಲ್ಬಾಗದಲ್ಲಿ ಕುಂಕುಮ ಅಥವಾ ಶ್ರೀಗಂಧದಿಂದ ಶ್ರೀರಾಮ ಎಂದು ಬರೆಯಿರಿ. ನಂತರ ಈ ಎಲೆಗಳಿಂದ ಮಾಲೆಯನ್ನು ಮಾಡಿ ಹನುಮಂತನಿಗೆ ಅರ್ಪಿಸಿ. ಹೀಗೆ ಮಾಡುವುದರಿಂದ ಶೀಘ್ರದಲ್ಲಿ ಆರ್ಥಿಕ ಸಮಸ್ಯೆ ಪರಿಹರಗೊಳ್ಳುತ್ತದೆ.
ಎಲೆ ಮತ್ತು ಅಡಿಕೆ:
ಬಹಳ ಕಾಲದಿಂದ ನೀವು ಅಂದುಕೊಂಡಿದ ಕೆಲಸ ಕಾರ್ಯಗಳು ಪೂರ್ಣಗೊಳ್ಳದೇ ನೀವು ಸಮಸ್ಯೆ ಎದುರಿಸುತ್ತಿದ್ದರೆ ನೀವು ಮಂಗಳವಾರ ಆಂಜನೇಯ ಸ್ವಾಮಿಗೆ ಎಲೆ ಮತ್ತು ಅಡಿಕೆ ಅರ್ಪಿಸಬಹುದು. ಹೌದು ನೀವು ಅಂದುಕೊಂಡ ಕೆಲಸ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳದಿದ್ದರೆ, ನೀವು ಆ ಕೆಲಸಕ್ಕೆ ಹೋಗುವ ಮೊದಲು, ಮಂಗಳವಾರ ಹನುಮಂತನಿಗೆ ವೀಳ್ಯದೆಲೆ ಅನ್ನು ಅರ್ಪಿಸಿ. ಇದರಿಂದ ಪ್ರತಿ ಕೆಲಸದಲ್ಲೂ ಯಶಸ್ಸು ಸಿಗುತ್ತದೆ ಎನ್ನುವ ನಂಬಿಕೆಯಿದೆ. ಇದು ನಿಮ್ಮ ಪ್ರಗತಿಗೆ ಪೂರಕವಾಗಿರುತ್ತದೆ.
ಮಲ್ಲಿಗೆ ಎಣ್ಣೆ:
ಪ್ರತಿ ಮಂಗಳವಾರ ಹನುಮಾನ್ ದೇವರಿಗೆ ಮಲ್ಲಿಗೆ ಎಣ್ಣೆಯ ದೀಪವನ್ನು ಹಚ್ಚಿ, ಮಲ್ಲಿಗೆ ಹೂವುಗಳನ್ನು ಅರ್ಪಿಸಿದ್ದರೆ ನೀವು ಬಜರಂಗ ಬಲಿಯ ಕೃಪೆಗೆ ಪಾತ್ರರಾಗುತ್ತೀರಾ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿಯೂ ನೆಲೆಸುತ್ತದೆ. ಇದು ನಿಮಗೆ ಹನುಮಂತನ ಅನುಗ್ರಹವನ್ನು ಪಡೆಯುವಲ್ಲಿ ಸಹಕರಿಸುತ್ತದೆ.
ಈ ಸುದ್ದಿಯನ್ನು ಓದಿ: Astro Tips: ಶುಕ್ರವಾರ ಈ ಕೆಲಗಳನ್ನು ಮಾಡಿದರೆ ಲಕ್ಷ್ಮಿ ದೇವಿ ಕೋಪಗೊಳ್ಳುವಳು..!
ಈ ಹೂಗಳನ್ನು ಅರ್ಪಿಸಿ
ಆಂಜನೇಯ ಸ್ವಾಮಿಯನ್ನು ಮೆಚ್ಚಿಸುವುದಕ್ಕಾಗಿ, ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕಾಗಿ ಮಂಗಳವಾರ ದಿನದಂದು ಸಂಜೆ ಆಂಜನೇಯ ಸ್ವಾಮಿಗೆ ಕೇದಿಗೆ ಹೂವಿನ ಸುಗಂಧವನ್ನು ಮತ್ತು ಗುಲಾಬಿ ಮಾಲೆಯನ್ನು ಅರ್ಪಿಸಬೇಕು. ಹನುಮಂತನಿಗೆ ಪ್ರಿಯವಾದ ಈ ವಸ್ತುಗಳು ಆತನನ್ನು ಸಂತುಷ್ಟಗೊಳಿಸುವಂತೆ ಮಾಡುತ್ತದೆ.
ಮಂಗಳವಾರದ ದಿನದಂದು ಈ ಮೇಲಿನ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಹನುಮಂತನ ಕೃಪೆಯು ದೊರೆಯುತ್ತದೆ ಮತ್ತು ಈ ಪರಿಹಾರಗಳು ನಮ್ಮ ಜೀವನದಲ್ಲಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ನೀವೂ ಕೂಡ ಹನುಮಂತನಿಗೆ ಈ ಮೇಲಿನ ವಸ್ತುಗಳನ್ನು ಅರ್ಪಿಸುವುದರಿಂದ ನಿಮ್ಮ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು.