ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vastu Tips: ಜೀವನದಲ್ಲಿ ಪ್ರಗತಿಗೆ ಅಡ್ಡಿಯಾಗಬಹುದು ಈ ತಪ್ಪುಗಳು...

ಮನೆಯ ದೇವರ ಕೋಣೆ ಎಂದರೆ ಅದು ಅತ್ಯಂತ ಪವಿತ್ರ ಸ್ಥಳ. ಇಲ್ಲಿ ಮಾಡುವ ಕೆಲವೊಂದು ತಪ್ಪುಗಳು ಮನೆ ಮಂದಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ನಾವು ಮಾಡುವ ಸಣ್ಣಪುಟ್ಟ ತಪ್ಪುಗಳು ನಮ್ಮ ಪ್ರಗತಿಯ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ ಮನೆ ದೇವಾಲಯದಲ್ಲಿ ಮುಖ್ಯವಾಗಿ ಈ ನಾಲ್ಕು ತಪ್ಪುಗಳಾಗದಂತೆ ನೋಡಿಕೊಳ್ಳಿ. ಅದೇನು ಎನ್ನುವ ವಿವರ ಇಲ್ಲಿದೆ.

ದೇವರ ಮನೆಯಲ್ಲಿ ಈ ತಪ್ಪು ಮಾಡಬೇಡಿ

ಬೆಂಗಳೂರು: ಪ್ರತಿ ಮನೆಯಲ್ಲೂ ದೇವರ ಕೋಣೆ (vastu for home temple) ಎಂಬುದು ಇದ್ದೇ ಇರುತ್ತದೆ. ಬೆಳಗ್ಗೆ ಮನೆಯಿಂದ ಕೆಲಸ ಕಾರ್ಯಗಳಿಗಾಗಿ ಮನೆಯಿಂದ ಹೊರಡುವ ಮುನ್ನ ದೇವರ ಮುಂದೆ ಪ್ರಾರ್ಥಿಸುವುದು ಮನಸ್ಸಿಗೆ ಸಾಕಷ್ಟು ನೆಮ್ಮದಿಯನ್ನು ಕೊಡುತ್ತದೆ ಎನ್ನುವುದು ಹೆಚ್ಚಿನವರ ನಂಬಿಕೆ. ಮನೆಯಲ್ಲಿ ದೇವಾಲಯವನ್ನು (vastu tips) ನಿರ್ಮಿಸುವುದು ಶುಭವಾದರೂ ವಾಸ್ತು ನಿಯಮಗಳನ್ನು (Vastu rule) ನಿರ್ಲಕ್ಷಿಸುವುದು ನಕಾರಾತ್ಮಕತೆಯನ್ನು ಹರಡಲು ಕಾರಣವಾಗಬಹುದು. ಮನೆ ಮತ್ತು ಮನಸ್ಸನ್ನು ಶಾಂತಿಯುತ ಮತ್ತು ಸಕಾರಾತ್ಮಕವಾಗಿಡಲು ಮನೆಯ ದೇವಾಲಯದಲ್ಲಿ ಈ ನಾಲ್ಕು ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ವಾಸ್ತು ತಜ್ಞರು.

ಮನೆಯಲ್ಲಿ ದೇವಸ್ಥಾನ ನಿರ್ಮಿಸುವುದು ಸಕಾರಾತ್ಮಕತೆ ಮತ್ತು ಸಮೃದ್ಧಿಯನ್ನು ಆಹ್ವಾನಿಸುತ್ತದೆ. ಆದರೆ ಇದನ್ನು ತಪ್ಪು ದಿಕ್ಕಿನಲ್ಲಿ ನಿರ್ಮಿಸಿದರೆ ಹಲವಾರು ಸಮಸ್ಯೆಗಳಿಗೆ ಮೂಲವಾಗಬಹುದು ಎನ್ನುತ್ತಾರೆ ವಾಸ್ತು ತಜ್ಞ ಹಿಮಾಚಲ ಸಿಂಗ್.

ಎಷ್ಟೇ ಕಷ್ಟ ಪಟ್ಟು ದುಡಿದರೂ ನಿರೀಕ್ಷಿತ ಫಲ ಸಿಗದೇ ಇರುವುದು, ಕೌಟುಂಬಿಕ ತೊಂದರೆಗಳು, ಆರೋಗ್ಯ ಸಮಸ್ಯೆಗಳಿಗೆ ದೇವರ ಕೋಣೆಯಲ್ಲಿ ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳೇ ಕಾರಣವಾಗಿರುತ್ತದೆ ಎನ್ನುತ್ತಾರೆ ಹಿಮಾಚಲ್ ಸಿಂಗ್.

v1

ಈಶಾನ್ಯ ಮೂಲೆ

ಅನೇಕ ಮನೆಗಳಲ್ಲಿ ದೇವಾಲಯಗಳನ್ನು ಈಶಾನ್ಯ ಮೂಲೆಯಲ್ಲಿ ನಿರ್ಮಿಸಲಾಗುತ್ತದೆ. ಸಾಮಾನ್ಯವಾಗಿ ವಾಸ್ತು ಪ್ರಕಾರ ಇದು ಸೂಕ್ತವೂ ಹೌದು. ಆದರೆ ಇಲ್ಲಿ ದೊಡ್ಡ ಗಂಗಾಜಲ ಪಾತ್ರೆಗಳು, ಉಕ್ಕಿನ ಪೆಟ್ಟಿಗೆಗಳಂತಹ ಭಾರವಾದ ವಸ್ತುಗಳನ್ನು ಇರಿಸುವುದು ಸರಿಯಲ್ಲ. ಈಶಾನ್ಯವು ನೀರಿನ ಅಂಶಕ್ಕೆ ಸಂಬಂಧಿಸಿದೆ. ಹೀಗಾಗಿ ಈ ಸ್ಥಳ ಹೆಚ್ಚು ಹಗುರವಾಗಿರುವಂತೆ ನೋಡಿಕೊಳ್ಳಬೇಕು. ಈ ಸ್ಥಳದಲ್ಲಿ ಭಾರವಾದ ವಸ್ತುಗಳನ್ನು ಇಟ್ಟರೆ ಮಾನಸಿಕ ಒತ್ತಡ, ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಮತ್ತು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಗಂಗಾಜಲ

ಗಂಗಾಜಲವನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಶುಭವಾದರೂ ಅದನ್ನು ದೇವರ ಕೋಣೆಯಲ್ಲಿ ಇಡಬೇಡಿ. ಅದನ್ನು ನೈಋತ್ಯ ಅಥವಾ ವಾಯುವ್ಯ ದಿಕ್ಕಿನಲ್ಲಿ ಇರಿಸಿ. ಇದು ಭೂಮಿಯ ಅಂಶದಿಂದ ಪ್ರಭಾವಿತವಾಗಿವೆ. ಹೀಗಾಗಿ ಇಲ್ಲಿ ಗಂಗಾಜಲವನ್ನು ಸಂಗ್ರಹಿಸುವುದರಿಂದ ಶಕ್ತಿಯ ಸಮತೋಲನವನ್ನು ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Vastu Tips: ಸುದೀರ್ಘ ಕಾಲದಿಂದ ಮುಚ್ಚಿರುವ ಮನೆಯೊಳಗೆ ಪ್ರವೇಶಿಸುವ ಮುನ್ನ ಪಾಲಿಸಿ ವಾಸ್ತು ನಿಯಮ

ಕೆಂಪು ಬಣ್ಣ

ದೇವರ ಕೋಣೆ ಅಲಂಕಾರಕ್ಕೆ ಕೆಂಪು ಬಟ್ಟೆ, ಹೂವು ಅಥವಾ ಪರದೆಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ದೇವಾಲಯವು ಈಶಾನ್ಯದಲ್ಲಿರುವಾಗ ಅತಿಯಾದ ಕೆಂಪು ಬಣ್ಣವು ಬೆಂಕಿಯ ಅಂಶವನ್ನು ಉತ್ತೇಜಿಸುತ್ತದೆ. ಹೀಗಾಗಿ ಕೆಂಪು ಈ ದಿಕ್ಕಿಗೆ ಸೂಕ್ತವಲ್ಲ. ಯಾಕೆಂದರೆ ಇದು ಮನೆಯಲ್ಲಿ ಆಗಾಗ್ಗೆ ಜಗಳ, ಕಿರಿಕಿರಿ ಮತ್ತು ಮಾನಸಿಕ ಅಶಾಂತಿಯನ್ನು ಉಂಟು ಮಾಡಬಹುದು. ಮನೆಯಲ್ಲಿ ಸಾಮರಸ್ಯ ಕಾಪಾಡಲು ದೇವರ ಕೋಣೆಗೆ ಬಿಳಿ ಅಥವಾ ತಿಳಿ ಬಣ್ಣಗಳನ್ನು ಬಳಸುವುದು ಉತ್ತಮ.

ಹೊಂಡ, ಲಿಫ್ಟ್‌ಗಳು

ಬ್ರಹ್ಮಸ್ಥಾನ ಎಂದು ಕರೆಯಲ್ಪಡುವ ಮನೆಯ ಮಧ್ಯ ಭಾಗ ವಾಸ್ತುವಿನಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಈ ಜಾಗದಲ್ಲಿ ಹೊಂಡ ಅಥವಾ ಲಿಫ್ಟ್ ಅನ್ನು ನಿರ್ಮಿಸ ಕೂಡದು. ಒಂದು ವೇಳೆ ನಿರ್ಮಿಸಿದರೆ ಜೀವನದಲ್ಲಿ ಅಸ್ಥಿರತೆ, ಗೊಂದಲ ಮತ್ತು ಅಡಚಣೆಗಳು ಕಾಣಿಸಿಕೊಳ್ಳಬಹುದು. ಈ ಪ್ರದೇಶ ಖಾಲಿಯಾಗಿರುವುದು ಒಳ್ಳೆಯದು.