Wriddhiman Saha Retirement: ಎಲ್ಲಾ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಿದ ಸಹಾ!
Wriddhiman Saha Retiremen: ಭಾರತ ಹಾಗೂ ಬಂಗಾಳ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೃದ್ದಿಮಾನ್ ಸಹಾ ಅವರು ಶನಿವಾರ (ಫೆಬ್ರವರಿ 1) ಎಲ್ಲಾ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಸಂದೇಶ ಬರೆಯುವ ಮೂಲಕ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.
ನವದೆಹಲಿ: ಭಾರತ ಹಾಗೂ ಬಂಗಾಳದ ಹಿರಿಯ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೃದ್ದಿಮಾನ್ ಸಹಾ ಅವರು ಎಲ್ಲಾ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಶನಿವಾರ 2024-25ರ ಸಾಲಿನ ತಮ್ಮ ಕೊನೆಯ ಲೀಗ್ ಪಂದ್ಯ ಮುಗಿದ ಬಳಿಕ ಸಹಾ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಭಾವನಾತ್ಮಕ ಪತ್ರದ ಮೂಲಕ ವೃದ್ದಿಮಾನ್ ಸಹಾ ತಮ್ಮ ಸುದೀರ್ಘ ಅವಧಿಯ ವೃತ್ತಿ ಜೀವನವನ್ನು ಮುಗಿಸಿದ್ದಾರೆ.
ವೃದ್ದಿಮಾನ್ ಸಹಾ ತಮ್ಮ 28 ವರ್ಷಗಳ ವೃತ್ತಿಜೀವನಕ್ಕೆ ಕೃತಜ್ಞತೆ ಸಲ್ಲಿಸಿದರು. ತಮ್ಮ ದೇಶ, ರಾಜ್ಯ, ಜಿಲ್ಲೆ, ಕ್ಲಬ್ಗಳು, ವಿಶ್ವವಿದ್ಯಾಲಯ, ಕಾಲೇಜು ಮತ್ತು ಶಾಲೆಯನ್ನು ಪ್ರತಿನಿಧಿಸುವುದು ತಮ್ಮ ಜೀವನದ ಅತ್ಯಂತ ದೊಡ್ಡ ಗೌರವ ಎಂದು ಹೇಳಿದ್ದಾರೆ. ತಮ್ಮ ವೃತ್ತಿಜೀವನಕ್ಕೆ ವಿದಾಯ ಹೇಳುವ ನಿರ್ಧಾರವನ್ನು ಅವರು ಪ್ರಸ್ತುತ ಋತುವಿನ ಆರಂಭದಲ್ಲಿಯೇ ಘೋಷಿಸಿದ್ದರು.
Ranji Trophy: ರೈಲ್ವೇಸ್ ವಿರುದ್ಧ ದಿಲ್ಲಿ ಗೆದ್ದರೂ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ನಿರಾಶೆ!
ಭಾರತ ತಂಡದ ಪರ ವೃದ್ದಿಮಾನ್ ಸಹಾ ಅವರು 40 ಟೆಸ್ಟ್ ಪಂದ್ಯಗಳನ್ನು ಆಡಿ 1353 ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ ರೆಡ್ ಬಾಲ್ ಕ್ರಿಕೆಟ್ನಲ್ಲಿ ಶ್ರೇಷ್ಢ ವಿಕೆಟ್ ಕೀಪರ್ಗಳಲ್ಲಿ ಒಬ್ಬರಾಗಿದ್ದಾರೆ. ಅಸಾಧಾರಣ ವಿಕೆಟ್ ಕೀಪರ್ ಕೌಶಲದ ಹೊರತಾಗಿಯೂ ಎಂಎಸ್ ಧೋನಿ ರೀತಿಯ ಕೌಶಲ ಇಲ್ಲದ ಕಾರಣ ಸಹಾ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸ್ಥಿರವಾಗಿ ಆಡಲು ಸಾಧ್ಯವಾಗಿರಲಿಲ್ಲ. ಎಂಎಸ್ ಧೋನಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ವೃದ್ದಿಮಾನ್ ಸಹಾ ರೆಡ್ ಬಾಲ್ ತಂಡಕ್ಕೆ ಬಂದರೂ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಅದರಲ್ಲಿಯೂ ರಿಷಭ್ ಪಂತ್ ಭಾರತ ತಂಡಕ್ಕೆ ಮರಳಿದ ಬಳಿಕ ಸಹಾ ತಂಡದಿಂದ ಸಂಪೂರ್ಣವಾಗಿ ಹೊರಬಿದ್ದರು.
2014ರ ಐಪಿಎಲ್ನಲ್ಲಿ ಶತಕ ಸಿಡಿಸಿದ್ದ ಸಹಾ
ವೃದ್ದಿಮಾನ್ ಸಹಾ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳನ್ನು ಪ್ರತಿನಿಧಿಸಿದ್ದರು. 2014ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ದ ಶತಕ ಸಿಡಿಸಿದ್ದು ಸಹಾ ಪಾಲಿಗೆ ಅತ್ಯಂತ ಸ್ಮರಣೀಯ ಕ್ಷಣವಾಗಿದೆ. ಕಳೆದ ಐಪಿಎಲ್ ಟೂರ್ನಿಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ಪರ ಆಡಿದ್ದರು. ಅವರು 2023ರ ಟೂರ್ನಿಯಲ್ಲಿ 371 ರನ್ಗಳನ್ನು ಕಲೆ ಹಾಕಿದ್ದರು.
Thank You, Cricket. Thank You everyone. 🙏 pic.twitter.com/eSKyGQht4R
— Wriddhiman Saha (@Wriddhipops) February 1, 2025
ಭಾವನಾತ್ಮಕ ಪತ್ರ ಬರೆದ ವೃದ್ದಿಮಾನ್ ಸಹಾ
1997ರಲ್ಲಿ ನಾನು ಮೊದಲ ಬಾರಿ ಕ್ರಿಕೆಟ್ ಮೈದಾನಕ್ಕೆ ಕಾಲಿಟ್ಟು ಇಂದಿಎ 28 ವರ್ಷಗಳಾಗಿವೆ ಮತ್ತು ಇದು ಅದ್ಭುತ ಪ್ರಯಾಣವಾಗಿತ್ತು! ನನ್ನ ದೇಶ, ರಾಜ್ಯ, ಜಿಲ್ಲೆ, ಕ್ಲಬ್ಗಳು, ವಿಶ್ವವಿದ್ಯಾಲಯ, ಕಾಲೇಜು ಮತ್ತು ಶಾಲೆಯನ್ನು ಪ್ರತಿನಿಧಿಸುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ.
ಇಂದು ನಾನು ಹೊಂದಿರುವ ಪ್ರತಿಯೊಂದು ಸಾಧನೆ, ಕಲಿತ ಪ್ರತಿಯೊಂದು ಪಾಠ-ಇವೆಲ್ಲವುಗಳಿಗೂ ನಾನು ಈ ಅದ್ಭುತ ಆಟಕ್ಕೆ ಋಣಿಯಾಗಿದ್ದೇನೆ.
ಕ್ರಿಕೆಟ್ ನನಗೆ ಅಪಾರ ಸಂತೋಷದ ಕ್ಷಣಗಳು, ಮರೆಯಲಾಗದ ವಿಜಯಗಳು ಮತ್ತು ಅಮೂಲ್ಯ ಅನುಭವಗಳನ್ನು ನೀಡಿದೆ. ಇದು ನನ್ನನ್ನು ಪರೀಕ್ಷಿಸಿದೆ, ನನ್ನನ್ನು ರೂಪಿಸಿದೆ ಮತ್ತು ನನಗೆ ಸ್ಥಿತಿಸ್ಥಾಪಕತ್ವವನ್ನು ಕಲಿಸಿದೆ. ಏರಿಳಿತಗಳು, ವಿಜಯಗಳು ಮತ್ತು ಹಿನ್ನಡೆಗಳ ಮೂಲಕ ಈ ಪ್ರಯಾಣವು ನನ್ನನು ನಾನಾಗಿ ರೂಪಿಸಿದೆ. ಆದರೆ ಇವೆಲ್ಲವೂ ಒಂದಲ್ಲ ಒಂದು ಕೊನೆಯಾಗಬೇಕಾಗಿದೆ. ಆದ್ದರಿಂದ ಇದೀಗ ನಾನು ಎಲ್ಲಾ ರೀತಿಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ ಎಂದು ಸುದೀರ್ಘ ಪತ್ರದಲ್ಲಿ ಬರೆದಿದ್ದಾರೆ.