ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನೀವು ಐಪಿಎಲ್‌ ಆಡಬೇಡಿʼ: ಮಾನವ್‌ ಸುತಾರ್‌ಗೆ ಚೇತೇಶ್ವರ್‌ ಪೂಜಾರ ಈ ಸಲಹೆ ನೀಡಿದ್ದೇಕೆ?

ಭಾರತ ಟೆಸ್ಟ್‌ ತಂಡದಲ್ಲಿ ಮಿಂಚುತ್ತಿರುವ ಸ್ಪಿನ್ನರ್‌ ಮಾನವ್‌ ಸುತಾರ್‌ಗೆ ಚೇತೇಶ್ವರ್‌ ಪೂಜಾರ ದೊಡ್ಡ ಸಲಹೆಯನ್ನು ನೀಡಿದ್ದಾರೆ. ನೀವು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡದೆ, ಕೇವಲ ಟೆಸ್ಟ್‌ ಕ್ರಿಕೆಟ್‌ ಆಡಬೇಕೆಂದು ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ 5 ವಿಕೆಟ್‌ ಸಾಧನೆ ಮಾಡಿದ ಬಳಿಕ ಸುತಾರ್‌ ಅವರು, ಇದೀಗ ಶ್ರೀಲಂಕಾ ವಿರುದ್ಧ ತನ್ನ ಎರಡನೇ ಪಂದ್ಯದಲ್ಲಿಯೇ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮಾನವ್‌ ಸುತಾರ್‌ಗೆ ಮಹತ್ವದ ಸಲಹೆ ನೀಡಿದ ಚೇತೇಶ್ವರ್‌ ಪೂಜಾರ.

ನವದೆಹಲಿ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs SL) ಭಾರತ ತಂಡ 165 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಯುವ ಸ್ಪಿನ್ನರ್ ಮಾನವ್ ಸುತಾರ್ (Manav Suthar) ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ತಮ್ಮ ವೃತ್ತಿಜೀವನದ ಎರಡನೇ ಟೆಸ್ಟ್ ಪಂದ್ಯದಲ್ಲಿಯೇ ಸುತಾರ್ ಎರಡನೇ ಇನಿಂಗ್ಸ್‌ನಲ್ಲಿ ಆರು ವಿಕೆಟ್‌ಗಳನ್ನು ಕಬಳಿಸಿದರು ಹಾಗೂ ಪಂದ್ಯವನ್ನು ಹತ್ತು ವಿಕೆಟ್‌ಗಳ ಸಾಧನೆಯ ಮೂಲಕ ಮುಗಿಸಿದರು. ಅಫ್ಘಾನಿಸ್ತಾನ ವಿರುದ್ಧದ ತಮ್ಮ ಚೊಚ್ಚಲ ಪಂದ್ಯದಲ್ಲಿ ಐದು ವಿಕೆಟ್‌ಗಳನ್ನು ಪಡೆದಿದ್ದ ರಾಜಸ್ಥಾನ ಮೂಲದ ಬೌಲರ್, ತಮ್ಮ ಎರಡನೇ ಟೆಸ್ಟ್‌ನಲ್ಲಿ ಪಂದ್ಯ ಗೆಲ್ಲುವ ಪ್ರದರ್ಶನದೊಂದಿಗೆ ಮತ್ತೊಮ್ಮೆ ತಮ್ಮ ಅಗಾಧ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಈ ಅದ್ಭುತ ಪ್ರದರ್ಶನದ ನಂತರ, ಭಾರತದ ಅನುಭವಿ ಬ್ಯಾಟ್ಸ್‌ಮನ್ ಚೇತೇಶ್ವರ್‌ ಪೂಜಾರ ಯುವ ಸ್ಪಿನ್ನರ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಐಪಿಎಲ್ ಒಪ್ಪಂದಗಳು ಅಥವಾ ಟಿ20 ಕ್ರಿಕೆಟ್ ಅವಕಾಶಗಳನ್ನು ಅನುಸರಿಸುವಲ್ಲಿ ತಮ್ಮ ನೈಸರ್ಗಿಕ ಬೌಲಿಂಗ್ ಶೈಲಿಯನ್ನು ರಾಜಿ ಮಾಡಿಕೊಳ್ಳದಂತೆ ಪೂಜಾರ ಸುತಾರ್ ಅವರನ್ನು ಒತ್ತಾಯಿಸಿದರು. ಸುತಾರ್ ಅವರ ನಿಜವಾದ ಶಕ್ತಿ ಚೆಂಡನ್ನು ಹಾರಿಸುವುದು ಮತ್ತು ನಿಧಾನಗತಿಯ ಎಸೆತಗಳೊಂದಿಗೆ ಬ್ಯಾಟರ್‌ಗಳನ್ನು ವಂಚಿಸುವುದರಲ್ಲಿದೆ ಎಂದು ಅವರು ಒತ್ತಿ ಹೇಳಿದರು.

IND vs SL: ಕೊಲಂಬೊದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲಿರುವ ಸಾರಾಂಶ್‌ ಜೈನ್?

ಐಪಿಎಲ್ ಕಡೆಗೆ ಹೆಚ್ಚು ಗಮನಕೊಡಬೇಡಿ: ಪೂಜಾರ

ಈ ವಿಷಯದ ಬಗ್ಗೆ ಮಾತನಾಡಿದ ಚೇತೇಶ್ವರ ಪೂಜಾರ, ಮಾನವ್‌ ಸುತಾರ್ ಅವರನ್ನು ಟೆಸ್ಟ್‌ ಕ್ರಿಕೆಟ್‌ಗೆ ಉಳಿಸಿಕೊಳ್ಳುವಂತೆ ತಂಡದ ಟೀಮ್‌ ಮ್ಯಾನೇಜ್‌ಮೆಂಟ್‌ ಒತ್ತಾಯಿಸಿದ್ದಾರೆ. "ಅವರನ್ನು (ಮಾನವ್‌ ಸುತಾರ್‌) ಉಳಿಸಿಕೊಳ್ಳಲು ಪ್ರಯತ್ನಿಸಿ. ನಾವು ಇದನ್ನು ಮೊದಲೇ ಚರ್ಚಿಸಿದ್ದೇವೆ: ಎಲ್ಲಾ ಯುವ ಆಟಗಾರರು ಚುಟುಕು ಸ್ವರೂಪಗಳಲ್ಲಿ ಆಡಲು ಬಯಸಬಹುದು, ಆದರೆ ಭಾರತ ಟೆಸ್ಟ್ ಸ್ವರೂಪಕ್ಕಾಗಿ ಅವರನ್ನು (ಯುವ ಆಟಗಾರರು) ಸುರಕ್ಷಿತವಾಗಿಡುವತ್ತ ಗಮನಹರಿಸಬೇಕು. ಹೌದು, ಅವರು ಐಪಿಎಲ್‌ನಲ್ಲಿ ಆಡಲು ಅವಕಾಶ ಪಡೆದರೆ, ಅದು ಸರಿ, ಆದರೆ ಅವರು ತಮ್ಮ ಸಾಮರ್ಥ್ಯಗಳನ್ನು ಬದಲಾಯಿಸಬಾರದು," ಎಂದು ಹೇಳಿದ್ದಾರೆ.

ಸುತಾರ್ ಅವರ ಬೌಲಿಂಗ್ ಮತ್ತು ಪ್ರತಿಭೆಯನ್ನು ಶ್ಲಾಘಿಸಿದ ಪೂಜಾರ, ಸೀಮಿತ ಓವರ್‌ಗಳ ಕ್ರಿಕೆಟ್‌ಗಾಗಿ ಅವರ ಆಕ್ಷನ್ ಅಥವಾ ಶೈಲಿಯನ್ನು ಬದಲಾಯಿಸುವುದು ಅವರಿಗೆ ಸರಿಯಾದ ಕ್ರಮವಲ್ಲ ಎಂದು ಒತ್ತಿ ಹೇಳಿದರು. "ಮಾನವ್ ಸುತಾರ್ ಅವರಂತಹ ಆಟಗಾರನಿಗೆ - ಅವರು ಚೆಂಡನ್ನು ಹಾರಿಸುತ್ತಾರೆ ಮತ್ತು ಸ್ವಲ್ಪ ನಿಧಾನಗತಿಯಲ್ಲಿ ಬೌಲ್‌ ಮಾಡಲು ಸಿದ್ಧರಿದ್ದಾರೆ - ಕೆಂಪು-ಚೆಂಡಿನ ಕ್ರಿಕೆಟ್‌ಗಾಗಿ ಅದನ್ನು ಬದಲಾಯಿಸುವ ಅಗತ್ಯವಿಲ್ಲ. ಐಪಿಎಲ್‌ಗಾಗಿ ನಿಮ್ಮನ್ನು ಬದಲಾಯಿಸಬೇಡಿ. ನನಗೆ ಸಂದರ್ಭ ಅರ್ಥವಾಗಿದೆ, ಆದರೆ ನಿಮ್ಮ ನೈಸರ್ಗಿಕ ಸಾಮರ್ಥ್ಯವನ್ನು ಬದಲಾಯಿಸಬೇಡಿ, ಅಂದರೆ ಚೆಂಡನ್ನು ಹಾರಿಸುವುದು," ಎಂದು ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ- ಸಚಿನ್‌ ತೆಂಡೂಲ್ಕರ್‌ ನಡುವೆ ಉತ್ತಮ ವಿದೇಶಿ ಟೆಸ್ಟ್‌ ಆಟಗಾರನನ್ನು ಆರಿಸಿದ ಎಬಿಡಿ!

ಐಪಿಎಲ್‌ನ ಟಿ20 ಕ್ರಿಕೆಟ್ ಅಂಕಿ-ಅಂಶಗಳನ್ನು ಗಮನಿಸಿದರೆ, ಮಾನವ್ ಸುತಾರ್ ಇದುವರೆಗೆ 5 ಪಂದ್ಯಗಳನ್ನು ಆಡಿದ್ದು, 2 ವಿಕೆಟ್‌ಗಳನ್ನು ಪಡೆದಿದ್ದಾರೆ. ಸದ್ಯ ಅವರು ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ತಂಡದ ಭಾಗವಾಗಿದ್ದಾರೆ.

ಆದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ ದೊರೆತ ಯಶಸ್ಸೇ ಸುತಾರ್ ಅವರ ನಿಜವಾದ ಸಾಮರ್ಥ್ಯವನ್ನು ತೋರಿಸುತ್ತದೆ ಎಂದು ಚೇತೇಶ್ವರ ಪೂಜಾರ ಅಭಿಪ್ರಾಯಪಟ್ಟಿದ್ದಾರೆ. ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ವೇಗವಾಗಿ ಬೌಲ್‌ ಮಾಡುವ ಅಥವಾ ಫ್ಲ್ಯಾಟ್ ಬೌಲ್‌ ಮಾಡುವ ಪ್ರಯತ್ನದಲ್ಲಿ ತಮ್ಮ ಸಹಜವಾದ ಸ್ಪಿನ್ ಬೌಲಿಂಗ್ ಸಾಮರ್ಥ್ಯವನ್ನು ಕಳೆದುಕೊಳ್ಳಬಾರದು ಎಂದು ಪೂಜಾರ ಸಲಹೆ ನೀಡಿದ್ದಾರೆ.