ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ʻನಿಮ್ಮ ಭವಿಷ್ಯವಾಣಿ ಸುಳ್ಳುʼ-ಮೈಕಲ್‌ ವಾನ್‌ಗೆ ತಿರುಗೇಟು ಕೊಟ್ಟ ನವಜೋತ್‌ ಸಿಧು!

ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯ ಮೊದಲನೇ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಭಾರತ ತಂಡ ಉತ್ತಮ ಪ್ರದರ್ಶನವನ್ನು ತೋರಿದ ಬೆನ್ನಲ್ಲೆ ಮಾಜಿ ಕ್ರಿಕಟಿಗ ನವಜೋತ್‌ ಸಿಂಗ್‌ ಸಿಧು, ಆಂಗ್ಲರ ಮಾಜಿ ನಾಯಕ ಮೈಕಲ್‌ ವಾನ್‌ ಅವರಿಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಭವಿಷ್ಯ ವಾಣಿ ಯಾವಾಗಲೂ ಸುಳ್ಳಾಗುತ್ತದೆ ಎಂದು ದೂರಿದ್ದಾರೆ. ಈ ಬಾರಿ ಭಾರತ ತಂಡ ಸೋಲಲಿದೆ ಎಂದು ಹೇಳಬೇಡಿ ಎಂದು ಸಲಹೆ ನೀಡಿದ್ದಾರೆ.

IND vs ENG: ಮೈಕಲ್‌ ವಾನ್‌ಗೆ ತಿರುಗೇಟು ಕೊಟ್ಟ ನವಜೋತ್‌ ಸಿಧು!

ಮೈಕಲ್‌ ವಾನ್‌ ಭಿವಿಷ್ಯವಾಣಿಯನ್ನು ಲೇವಡಿ ಮಾಡಿದ ನವಜೋತ್‌ ಸಿಧು.

Profile Ramesh Kote Jun 21, 2025 6:59 PM

ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಟೆಸ್ಟ್ ಪಂದ್ಯಗಳ ಸರಣಿಯು (IND vs ENG) ಹೆಡಿಂಗ್ಲಿಯಲ್ಲಿ ಭರ್ಜರಿ ಆರಂಭವನ್ನು ಕಂಡಿದೆ. ಹೊಸ ನಾಯಕ ಶುಭಮನ್‌ ಗಿಲ್( Shubman Gill) ಮತ್ತು ಯಶಸ್ವಿ ಜೈಸ್ವಾಲ್ (Yashasvi jaiswal) ಅದ್ಭುತ ಶತಕಗಳನ್ನು ಗಳಿಸಿದ್ದಾರೆ. ಮೊದಲ ದಿನದ ಆಟದ ಅಂತ್ಯದ ವೇಳೆಗೆ ಭಾರತ 3 ವಿಕೆಟ್‌ ಕಳೆದುಕೊಂಡು 359 ರನ್‌ಗಳನ್ನು ಗಳಿಸಿತ್ತು. ಇದಾದ ಬಳಿಕ ರಿಷಭ್‌ ಪಂತ್ ಕೂಡ ಎರಡನೇ ದಿನದ ಮೊದಲನೇ ಸೆಷನ್‌ನಲ್ಲಿ ಶತಕವನ್ನು ಬಾರಿಸಿದ್ದರು. ಭಾರತ ತಂಡ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಆರಂಭ ಪಡೆಯುತ್ತಿದ್ದಂತೆ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Sidhu) ಸಾಮಾಜಿಕ ಮಾಧ್ಯಮದಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾನ್‌ (Michael Vaughan) ಅವರಿಗೆ ತಿರುಗೇಟು ನೀಡಿದ್ದಾರೆ. ನಿಮ್ಮ ಭವಿಷ್ಯ ವಾಣಿ ಸುಳ್ಳಾಗಲಿದೆ ಎಂದು ಹೇಳಿದ್ದಾರೆ.

ಟೆಸ್ಟ್‌ ಸರಣಿ ಆರಂಭಕ್ಕೂ ಮುನ್ನ ಭಾರತ ತಂಡ 3-1 ಅಂತರದಲ್ಲಿ ಸೋಲುತ್ತದೆ ಎಂದು ಮೈಕಲ್‌ ವಾನ್‌ ಭವಿಷ್ಯ ನುಡಿದಿದ್ದರು. ಭಾರತ ತಂಡದ ಅನಾನುಭವ ಮತ್ತು ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅನುಪಸ್ಥಿತಿಯೇ ಇದಕ್ಕೆ ಕಾರಣ ಎಂದು ಅವರು ಉಲ್ಲೇಖಿಸಿದ್ದರು. ಆದರೆ ಶುಭಮನ್‌ ಗಿಲ್‌ ನಾಯಕತ್ವದ ಟೀಮ್‌ ಇಂಡಿಯಾ ಅದ್ಭುತ ಆರಂಭದ ನಂತರ ನವಜೋತ್‌ ಸಿಂಗ್‌ ಸಿಧು, ಇಂಗ್ಲೆಂಡ್‌ ಮಾಜಿ ನಾಯಕ ಮೈಕಲ್‌ ವಾನ್‌ಗೆ ತಿರುಗೇಟು ನೀಡಿದ್ದಾರೆ.

IND vs ENG: ಎಂಎಸ್‌ ಧೋನಿಯ ಟೆಸ್ಟ್‌ ಸಿಕ್ಸರ್‌ಗಳ ದಾಖಲೆ ಮುರಿದ ರಿಷಭ್‌ ಪಂತ್‌!

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಂದು ಭಾರತವು ಅತಿದೊಡ್ಡ ಆರಂಭಿಕ ಪಾಲುದಾರಿಕೆಯನ್ನು ಹೊಂದಿತ್ತು. ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡ ವಿಡಿಯೊದಲ್ಲಿ ಮಾತನಾಡಿದ ನವಜೋತ್‌ ಸಿಧು, ಮೂರ್ಖರನ್ನು ನೀರಸಗೊಳಿಸುವ ಅಗತ್ಯವಿಲ್ಲ. ಮೈಕಲ್ ವಾನ್, ನಿಮ್ಮ ಭವಿಷ್ಯವಾಣಿಗಳು ಯಾವಾಗಲೂ ತಪ್ಪಾಗಿರುತ್ತವೆ. 2020/21ರ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯ ವೇಳೆ ವಾನ್ ಅವರ ಭವಿಷ್ಯವಾಣಿಯನ್ನು ಅವರು(ಸಿಧು) ಉಲ್ಲೇಖಿಸಿದ್ದಾರೆ. ಆ ಸಮಯದಲ್ಲಿ ಭಾರತ ತಂಡ ಗಾಯಗಳ ಹೊರತಾಗಿಯೂ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸಿತ್ತು. ಇತ್ತೀಚಿನ ಡಬ್ಲ್ಯುಟಿಸಿ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾವನ್ನು ಸೋಲಿಸಿತ್ತು. ಇದರ ಸಂಬಂಧ ವಾನ್ ಅವರ ಭವಿಷ್ಯವಾಣಿಯನ್ನು ಸಹ ಸಿಧು ಉಲ್ಲೇಖಿಸಿ ಇಂಗ್ಲೆಂಡ್‌ ಮಾಜಿ ಆಟಗಾರನ ಕಾಲೆಳೆದಿದ್ದಾರೆ.



ಮೈಕಲ್‌ ವಾನ್‌ಗೆ ತಿರುಗೇಟು ಕೊಟ್ಟ ನವಜೋತ್‌ ಸಿಧು

"ಮೈಕಲ್‌ ವಾನ್‌, ನಿಮ್ಮ ಭವಿಷ್ಯ ಯಾವಾಗಲೂ ಸುಳ್ಳಾಗಲಿದೆ. ಬಾರ್ಡರ್‌-ಗವಾಸ್ಕರ್‌ ಟ್ರೋಫಿ ಮತ್ತು ದಕ್ಷಿಣ ಆಫ್ರಿಕಾ ತಂಡ, ಆಸ್ಟ್ರೇಲಿಯಾ ತಂಡವನ್ನು ಮಣಿಸಲು ಸಾಧ್ಯವಾಗುವುದಿಲ್ಲ ಎಂದು ನೀವು ಭವಿಷ್ಯ ನುಡಿದಿದ್ರಿ. ನೀವು ಈಗಲೂ ಭಾರತ ತಂಡ ಗೆಲ್ಲುತ್ತದೆ ಎಂದು ನೀವು ಭವಿಷ್ಯ ನುಡಿಯುವುದಿಲ್ಲ. ನಿಮ್ಮ ಬೌಲಿಂಗ್‌ ದಾಳಿಯನ್ನು ಒಮ್ಮೆ ನೋಡಿ, ಅವರು ನೆಲ ಕಚ್ಚಿದ್ದಾರೆ. ಭಾರತ ತಂಡದ ಮೂವರು ಬ್ಯಾಟ್ಸ್‌ಮನ್‌ಗಳು ಸ್ಪಿನ್ನರ್‌ಗಳಿಗೆ ಬರುವಂತೆ ವೇಗದ ಬೌಲರ್‌ಗಳಿಗೆ ಮುಂದೆ ಬಂದು ಹೊಡೆಯುತ್ತಿದ್ದಾರೆ. ಬಾಸ್‌ ಮಾತುಗಳು ಏನನ್ನೂ ಸಾಬೀತುಪಡಿಸುವುದಿಲ್ಲ. ಮೊಟ್ಟೆ ಇಡುವಾಗ ಕೋಳಿ ಕೂಡ ಕ್ಷುದ್ರಗ್ರಹ ಇಡುತ್ತಿರುವಂತೆ ನಗುತ್ತದೆ. ನೀವು ನಿಮ್ಮ ಮಾತುಗಳನ್ನು ನಿಲ್ಲಿಸಿ ಬೇರೆ ಏನಾದರೂ ಮಾಡಿ. ಕರುಣೆ ಅವಮಾನಿಸದ ಯಾವುದೇ ನೋವು ಇಲ್ಲ. ಮನುಷ್ಯ, ನೀವು ಶೋಚನೀಯ ಪರಿಸ್ಥಿತಿಯಲ್ಲಿದ್ದೀರಿ," ಎಂದು ನವಜೋತ್‌ ಸಿಂಗ್‌, ಇಂಗ್ಲೆಂಡ್‌ ಮಾಜಿ ನಾಯಕನಿಗೆ ತಿರಗೇಟು ನೀಡಿದ್ದಾರೆ.

IND vs ENG: ಟೆಸ್ಟ್‌ ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಶತಕ ಸಿಡಿಸಿದ ಟಾಪ್‌ 5 ಬ್ಯಾಟರ್ಸ್‌!

471 ರನ್‌ಗಳಿಗೆ ಭಾರತ ತಂಡ ಆಲ್‌ಔಟ್‌

ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡ, ಯಶಸ್ವಿ ಜೈಸ್ವಾಲ್‌, ಶುಭಮನ್‌ ಗಿಲ್‌ ಹಾಗೂ ರಿಷಭ್‌ ಪಂತ್‌ ಅವರ ಶತಕಗಳ ಬಲದಿಂದ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದೆ. ಟೀಮ್‌ ಇಂಡಿಯಾ 113 ಓವರ್‌ಗಳಿಗೆ 471 ರನ್‌ಗಳಿಗೆ ಆಲ್‌ಔಟ್‌ ಆಯಿತು. ಜೈಸ್ವಾಲ್‌ 101 ರನ್‌, ಶುಭಮನ್‌ ಗಿಲ್‌ 147 ರನ್‌ ಹಾಗೂ ಪಂತ್‌ 134 ರನ್‌ಗಳನ್ನು ಕಲೆ ಹಾಕಿದ್ದಾರೆ.