ಗಾಲೆ: ಸೋನಲ್ ದಿನುಷಾ (Sonal Dinusha) ಅವರ ಶತಕದ ಹೊರತಾಗಿಯೂ ಮಾನವ್ ಸುತಾರ್ ಹಾಗೂ ರವೀಂದ್ರ ಜಡೇಜಾ ಅವರ ಶಿಸ್ತುಬದ್ಧ ಬೌಲಿಂಗ್ ನೆರವಿನಿಂದ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದ (IND vs SL) ಮೂರನೇ ದಿನವೂ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಪ್ರಥಮ ಇನಿಂಗ್ಸ್ನಲ್ಲಿ ದೊಡ್ಡ ಮುನ್ನಡೆ ಪಡೆದಿರುವ ಟೀಮ್ ಇಂಡಿಯಾ ಪಂದ್ಯದ ಮೇಲೆ ತನ್ನ ಹಿಡಿತವನ್ನು ಸಾಧಿಸಿದೆ. ಮಳೆಯ ಹೊರತಾಗಿಯೂ ಸಾಗುತ್ತಿರುವ ಗಾಲೆ ಟೆಸ್ಟ್ ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿಯಿದ್ದು, ಪ್ರವಾಸಿ ತಂಡಕ್ಕೆ ಈ ಪಂದ್ಯವನ್ನು ಗೆಲ್ಲಲು ಹೆಚ್ಚಿನ ಅವಕಾಶವಿದೆ.
ಸೋಮವಾರ ಬೆಳಿಗ್ಗೆ 9 ವಿಕೆಟ್ಗಳ ನಷ್ಟಕ್ಕೆ 460 ರನ್ಗಳಿಂದ ಬ್ಯಾಟಿಂಗ್ ಮುಂದುವರಿಸಿದ ಭಾರತ ತಂಡ, ಮೂರನೇ ದಿನ ಕೇವಲ ಎರಡು ರನ್ ಗಳಿಸಿದ ಬಳಿಕ ಇನ್ನೊಂದು ವಿಕೆಟ್ಗಳನ್ನು ಕಳೆದುಕೊಂಡಿತು. ಅಂತಿಮವಾಗಿ ಟೀಮ್ ಇಂಡಿಯಾ 462 ರನ್ಗಳಿಗೆ ಆಲ್ಔಟ್ ಆಯಿತು. ಶ್ರೀಲಂಕಾ ತಂಡದ ಪರ ಪ್ರಭತ್ ಜಯಸೂರ್ಯ ಅವರು 4 ವಿಕೆಟ್ಗಳನ್ನು ಪಡೆದರೆ, ಕೇಶಾರ ನುವಂತ ಅವರು ಮೂರು ವಿಕೆಟ್ಗಳನ್ನು ಕಬಳಿಸಿದರು.
IND vs SL: ಮೂರನೇ ದಿನ ಟೇಲ್ಎಂಡರ್ಸ್ ಆಡಿದ್ದೇಕೆ? ಗಭೀರ್, ಗಿಲ್ ವಿರುದ್ಧ ದೊಡ್ಡ ಗಣೇಶ್ ಕಿಡಿ!
ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ
ಬಳಿಕ ಪ್ರಥಮ ಇನಿಂಗ್ಸ್ ಆರಂಭಿಸಿದ ಶ್ರೀಲಂಕಾ ತಂಡಕ್ಕೆ ಭಾರತೀಯ ಬೌಲರ್ಗಳು ಆರಂಭಿಕ ಆಘಾತ ನೀಡಿದರು. ನಿಶಾನ್ ಫೆರ್ನಾಂಡೊ ಅವರು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬಳಿಕ 27 ರನ್ಗಳಿಗೆ 2 ವಿಕೆಟ್ಗಳನ್ನು ಹಾಗೂ 59 ರನ್ಗಳಿಗೆ 3 ವಿಕೆಟ್ಗಳನ್ನು ಕಬಳಿಸಿದರು. ನಂತರ 90 ರನ್ಗಳಿಗೆ 5 ವಿಕೆಟ್ಗಳನ್ನು ಕಳೆದುಕೊಂಡಿತು. ಆ ಮೂಲಕ ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ ಅನುಭವಿಸಿದೆ.
ಸೋನಲ್-ನಿರೋಶನ್ ಜುಗಲ್ಬಂದಿ
ಐದು ವಿಕೆಟ್ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ವೇಳೆ ಜೊತೆಯಾದ ಸೋನಲ್ ದಿನುಶಾ ಹಾಗೂ ನಿರೋಶನ್ ಡಿಕ್ವೆಲ್ಲಾ ಅವರು 146 ರನ್ಗಳ ಜೊತೆಯಾಟವನ್ನು ಆಡಿ ಅಪಾಯದಿಂದ ತಮ್ಮ ತಂಡವನ್ನು ಪಾರು ಮಾಡಿದರು. ಅದ್ಭುತವಾಗಿ ಬ್ಯಾಟ್ ಮಾಡಿದ ನಿರೋಶನ್ ಡಿಕ್ವೆಲ್ಲಾ ಅವರು ಅದ್ಭುತವಾಗಿ ಬ್ಯಾಟ್ ಮಾಡಿದರು. ಅವರು 115 ಎಸೆತಗಳಲ್ಲಿ 80 ರನ್ ಗಳಿಸಿ ಶತದಂಚಿನಲ್ಲಿ ಆಡುತ್ತಿದ್ದರು. ಆದರೆ, ಅವರು ಪ್ರಸಿಧ್ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿದರು.
IND vs SL: ಕಮಿಂದು ಮೆಂಡಿಸ್ರ ಸ್ಟನಿಂಗ್ ಕ್ಯಾಚ್ ಪಡೆದ ಶುಭಮನ್ ಗಿಲ್! ವಿಡಿಯೊ
ಸೋನಲ್ ದಿನುಷಾ ಭರ್ಜರಿ ಶತಕ
ಸೊಗಸಾಗಿ ಬ್ಯಾಟ್ ಮಾಡಿದ ಸೋನಲ್ ದಿನುಷಾ ಅವರು ಭಾರತೀಯ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದರು. ಅವರು ಆಡಿದ 168 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 100 ರನ್ಗಳನ್ನು ಕಲೆ ಹಾಕಿದರು. ಆ ಮೂಲಕ ಕಡಿಮೆ ಮೊತ್ತಕ್ಕೆ ಆಲ್ಔಟ್ ಆಗುತ್ತಿದ್ದ ತಮ್ಮ ತಂಡದ ಮೊತ್ತವನ್ನು ಮೇಲಕ್ಕೆ ಎತ್ತಿದರು. ಸೋನಲ್ ವಿಕೆಟ್ ಒಪ್ಪಿಸಿದ ಬಳಿಕ ಇನ್ನುಳಿದ ಬ್ಯಾಟರ್ಗಳು ಬಹುಬೇಗ ಔಟ್ ಆದರು. ಅಂತಿಮವಾಗಿ ಶ್ರೀಲಂಕಾ 284 ರನ್ಗಳಿಗೆ ಆಲ್ಔಟ್ ಆಯಿತು.
ಭಾರತ ತಂಡದ ಮುಂದಿನ ಯೋಜನೆ ಏನು?
ಈ ಪಂದ್ಯಕ್ಕೆ ಇನ್ನು ಬಾಕಿ ಉಳಿದಿರುವುದು ಎರಡು ದಿನ ಮಾತ್ರ. ಇದೀಗ 178 ರನ್ಗಳ ಮುನ್ನಡೆ ಪಡೆದಿರುವ ಭಾರತ ತಂಡ, ನಾಲ್ಕನೇ ದಿನವಾದ ಮಂಗಳವಾರ ಭಾರತ ತಂಡ 300 250ಕ್ಕೂ ಅಧಿಕ ರನ್ ಗಳಿಸಿ, ಶ್ರೀಲಂಕಾ ತಂಡಕ್ಕೆ 400ಕ್ಕೂ ಅಧಿಕ ರನ್ಗಳ ಗುರಿಯನ್ನು ನೀಡಿದ ಬಳಿಕ ಕೊನೆಯ ಸೆಷನ್ನಲ್ಲಿ ಆತಿಥೇಯ ತಂಡಕ್ಕೆ ಬ್ಯಾಟಿಂಗ್ಗೆ ಅವಕಾಶ ಮಾಡಿಕೊಡಬಹುದು. ಆ ಮೂಲಕ ನಾಲ್ಕನೇ ದಿನವೇ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡುವ ಯೋಜನೆಯನ್ನು ಹಾಕಿಕೊಳ್ಳಬಹುದು.