ʼಹರಾರೆಯಲ್ಲಿ 175 ರನ್ ಸಿಡಿಸಿದ್ದೇನೆ: ಜಿಂಬಾಬ್ವೆ ತಂಡಕ್ಕೆ ವಾರ್ನಿಂಗ್ ಕೊಟ್ಟ ವೈಭವ್ ಸೂರ್ಯವಂಶಿ!
ವೈಭವ್ ಸೂರ್ಯವಂಶಿ ಫೆಬ್ರವರಿಯಲ್ಲಿ ನಡೆದಿದ್ದ ಭಾರತದ ಐತಿಹಾಸಿಕ ಅಂಡರ್-19 ವಿಶ್ವಕಪ್ ಗೆಲುವಿನ ಅಭಿಯಾನದ ಪ್ರಮುಖ ಆಟಗಾರರಾಗಿದ್ದರು. ಇದೇ ಹರಾರೆ ಮೈದಾನದಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಕೇವಲ 80 ಎಸೆತಗಳಲ್ಲಿ 175 ರನ್ಗಳ ಸ್ಫೋಟಕ ಇನಿಂಗ್ಸ್ ಆಡಿದ್ದು, ಭಾರತ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಇಂಗ್ಲೆಂಡ್ನಲ್ಲಿನ ವೈಫಲ್ಯದ ಬಗ್ಗೆ ವೈಭವ್ ಸೂರ್ಯವಂಶಿ ಪ್ರತಿಕ್ರಿಯೆ. -
ನವದೆಹಲಿ: ಭಾರತ ಹಾಗೂ ಜಿಂಬಾಬ್ವೆ ತಂಡಗಳ (IND vs ZIM) ನಡುವಣ ಮೂರು ಪಂದ್ಯಗಳ ಟಿ20ಐ ಸರಣಿಗೆ ಇನ್ನು ಕೇವಲ ಒಂದೇ ಒಂದು ದಿನ ಬಾಕಿ ಇದೆ. ಇಂಗ್ಲೆಂಡ್ ವಿರುದ್ಧದ ಟಿ20ಐ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ 15ರ ವಯಸ್ಸಿನ ವೈಭವ್ ಸೂರ್ಯವಂಶಿ (Vaibhav Sooryavanshi), 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ತೋರಿದ್ದ ಅಪಾಯಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸುವಲ್ಲಿ ವಿಫಲರಾಗಿದ್ದರು. ಸಂಜು ಸ್ಯಾಮ್ಸನ್ ಸ್ಥಾನದಲ್ಲಿ ಆಡಲು ಸಿಕ್ಕಿದ್ದ ಅವಕಾಶವನ್ನು 15ರ ವಯಸ್ಸಿನ ಬ್ಯಾಟ್ಸ್ಮನ್ ಕೈ ಚೆಲ್ಲಿದ್ದರು. ಇದೀಗ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಮತ್ತೊಂದು ಅವಕಾಶ ಒದಗಿ ಬಂದಿದೆ. ಸಂಜು ಸ್ಯಾಮ್ಸನ್ ಅವರ ಅನುಪಸ್ಥಿತಿಯಲ್ಲಿ ಜಿಂಬಾಬ್ವೆ ಎದುರು ಮೂರೂ ಪಂದ್ಯಗಳಲ್ಲಿ ಆಡಲು ಅವಕಾಶವನ್ನು ಯುವ ಬ್ಯಾಟ್ಸ್ಮನ್ ಪಡೆದುಕೊಳ್ಳಲಿದ್ದಾರೆ.
ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಗೂ ಮುನ್ನ ಬಿಸಿಸಿಐ ಟಿವಿ ಜೊತೆ ಮಾತನಾಡಿದ ವೈಭವ್ ಸೂರ್ಯವಂಶಿ, "ಹೌದು ಕಳೆದ ನಾಲ್ಕು ತಿಂಗಳುಗಳಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ಇದು ಕ್ರಿಕೆಟ್ ಆಗಿರುವ ಕಾರಣ, ಇದೆಲ್ಲ ನಡೆಯುವುದು ಸಹಜ, ಆದರೆ ನಾನು ನನ್ನ ಪ್ರಕ್ರಿಯೆಗಳಲ್ಲಿ ಉಳಿದು, ತಂಡದ ಗೆಲುವಿಗೆ ಶೇಕಡ 100ರಷ್ಟು ಪ್ರಯತ್ನವನ್ನು ಹಾಕುತ್ತೇನೆ," ಎಂದು ಹೇಳಿದ್ದಾರೆ.
ʻಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲʼ: ರೋಹಿತ್ ಶರ್ಮಾರ ನಿವೃತ್ತಿ ವದಂತಿಗಳ ಬಗ್ಗೆ ಆರ್ ಅಶ್ವಿನ್ ಪ್ರತಿಕ್ರಿಯೆ!
ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ತಂಡದ ಆಡುವ ಬಳಗದಲ್ಲಿ ಸ್ಥಾನ ಸಿಗದ ಬಳಿಕ ಯುವ ಆಟಗಾರ ಭಾವುಕರಾಗಿದ್ದರು. ಚಿಕ್ಕ ವಯಸ್ಸಿನಲ್ಲಿ ಇಂತಹ ಹಿನ್ನಡೆಗಳನ್ನು ಎದುರಿಸುವುದು ಕಷ್ಟಕರವಾಗಿರುತ್ತದೆ ಎಂದು ಒಪ್ಪಿಕೊಂಡ ಅವರು, ತಮ್ಮ ಸುತ್ತಮುತ್ತಲಿನವರಿಂದ ದೊರೆತ ಬೆಂಬಲವು ಆ ಪರಿಸ್ಥಿತಿಯಿಂದ ಹೊರಬಂದು ಮತ್ತೆ ಗಮನ ಕೇಂದ್ರೀಕರಿಸಲು ಸಹಾಯ ಮಾಡಿತು ಎಂದು ಹೇಳಿದ್ದಾರೆ. ಕಠಿಣ ಸಂದರ್ಭಗಳಿಂದ ಪಾಠ ಕಲಿತು, ಮುಂದಿನ ಅವಕಾಶಗಳಿಗಾಗಿ ಸಿದ್ಧರಾಗಿರುವುದೇ ಮುಖ್ಯ ಎಂಬ ಮನೋಭಾವವನ್ನು ಅವರು ವ್ಯಕ್ತಪಡಿಸಿದ್ದಾರೆ.
"ನನಗೆ ಯಾವ ರೀತಿಯ ಮಾರ್ಗದರ್ಶನ ಬೇಕಾದರೂ ಕೋಚ್ಗಳು ಅದನ್ನು ಒದಗಿಸುತ್ತಿದ್ದಾರೆ. ಅಗತ್ಯವಿರುವ ಅಭ್ಯಾಸವನ್ನೂ ನಾನು ಪಡೆಯುತ್ತಿದ್ದೇನೆ. ಈಗ ತುಂಬಾ ಚೆನ್ನಾಗಿ ಅನಿಸುತ್ತಿದೆ ಮತ್ತು ಆತ್ಮವಿಶ್ವಾಸವೂ ಹೆಚ್ಚಾಗಿದೆ," ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲಿ ಅವಕಾಶ ಸಿಗದ ಬಳಿಕ ಭಾವುಕರಾಗಿದ್ದ ವೈಭವ್, ಆ ಹಿನ್ನಡೆಯಿಂದ ಹೊರಬರಲು ತಮ್ಮ ಸುತ್ತಮುತ್ತಲಿನವರ ಬೆಂಬಲ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
ಮೊದಲನೇ ಎಸೆತದಿಂದಲೂ ಹೊಡೆಯುವ ತಾಕತ್ತು ನನಗೂ ಇದೆ: ಯುಕೆ ವೈಫಲ್ಯದ ಬಗ್ಗೆ ತಿಲಕ್ ವರ್ಮಾ ಪ್ರತಿಕ್ರಿಯೆ!
ಫೆಬ್ರವರಿಯಲ್ಲಿ ನಡೆದಿದ್ದ ಭಾರತದ ಅಂಡರ್-19 ವಿಶ್ವಕಪ್ ಗೆಲುವಿನ ಅಭಿಯಾನದಲ್ಲಿ ವೈಭವ್ ಸೂರ್ಯವಂಶಿ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 80 ಎಸೆತಗಳಲ್ಲಿ 175 ರನ್ಗಳ ಸ್ಫೋಟಕ ಇನಿಂಗ್ಸ್ ಆಡಿ ಭಾರತವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದರು.
ಹರಾರೆ ಅಂಗಣ ನನ್ನ ಪಾಲಿಗೆ ಅತ್ಯಂತ ವಿಶೇಷ
"ಈ ಮೈದಾನ ನನಗೆ ಅತ್ಯಂತ ಸ್ಮರಣೀಯವಾಗಿದೆ. ಕೇವಲ ನಾಲ್ಕು ತಿಂಗಳ ಹಿಂದೆ ನಾವು ಇದೇ ಮೈದಾನದಲ್ಲಿ ಅಂಡರ್-19 ವಿಶ್ವಕಪ್ ಫೈನಲ್ ಪಂದ್ಯ ಆಡಿದ್ದು, ಗೆಲುವು ಸಾಧಿಸಿದ್ದೇವೆ. ಹೀಗಾಗಿ ಇದು ನನಗೆ ವಿಶೇಷವಾದ ಸ್ಥಳವಾಗಿದೆ. ಭಾರತ ತಂಡವನ್ನು ಪ್ರತಿನಿಧಿಸುವುದು ಪ್ರತಿಯೊಬ್ಬ ಆಟಗಾರನ ಕನಸಾಗಿರುತ್ತದೆ. ಅಂತಹ ಅವಕಾಶ ಸಿಗುವುದು ಅತ್ಯಂತ ವಿಶೇಷ ಕ್ಷಣವಾಗಿದೆ," ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
"ನಾಲ್ಕು ತಿಂಗಳ ಹಿಂದೆ ಇದೇ ಮೈದಾನದಲ್ಲಿ ಅಂಡರ್-19 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ್ದೆವು. ಇದೀಗ ಮತ್ತೆ ಇದೇ ಮೈದಾನಕ್ಕೆ ಬಂದು ಭಾರತ ಪರ ಆಡುವುದು ಸಂಪೂರ್ಣ ವಿಭಿನ್ನವಾದ ಅನುಭವವಾಗಿದೆ. ನಾನು ಈ ಕ್ಷಣವನ್ನು ತುಂಬಾ ಆನಂದಿಸುತ್ತಿದ್ದೇನೆ," ಎಂದು ರಾಜಸ್ಥಾನ್ ರಾಯಲ್ಸ್ ಆರಂಭಿಕ ತಿಳಿಸಿದ್ದಾರೆ.