ಕೊಲೊಂಬೊ: ಟಿ20 ವಿಶ್ವಕಪ್ನ (T20 World Cup) 28ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ್ ಮುಖಾಮುಖಿಯಾಗಲಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ಇಂದು (ಫೆ.15) ನಡೆಯಲಿರುವ ಈ ಪಂದ್ಯ ಭಾರೀ ಮಹತ್ವದ್ದಾಗಿದೆ. ವಾರಗಳ ವಿವಾದದ ನಂತರ ಎರಡೂ ತಂಡಗಳು (Abhishek Sharma) ಮುಖಾಮುಖಿಯಾಗುತ್ತಿವೆ. ಕೊಲಂಬೊದ R. ಪ್ರೇಮದಾಸ ಸ್ಟೇಡಿಯಂನಲ್ಲಿ ಸಂಜೆ 7 ಗಂಟೆಗೆ (IST) ಆರಂಭವಾಗುವ ಈ ಹೈವೋಲ್ಟೇಜ್ ಪಂದ್ಯಕ್ಕೋಸ್ಕರ ಅಭಿಮಾನಿಗಳು ಕಾತುರರಾಗಿದ್ದಾರೆ.
ಇಂದಿನ ಪಂದ್ಯದಲ್ಲಿ ಭಾರತದ ತಂಡ ಹೇಗಿರಲಿದೆ ಎಂಬ ಕುತೂಹಲ ಇದೀಗ ಮೂಡಿದ್ದು, ಸ್ಟಾರ್ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಅವರನ್ನು ಇಂದು ಕಣಕ್ಕಿಳಿಸಲಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಅವಕಾಶ ನೀಡದ ಕಾರಣ ಅವರು ತಂಡದಲ್ಲಿ ಸ್ಥಾನ ಪಡೆಯಬಹುದು. ಇದಲ್ಲದೆ, ಸಂಜು ಸ್ಯಾಮ್ಸನ್ ಅವರನ್ನು ಆಡುವ XI ನಿಂದ ಹೊರಗಿಡಬಹುದು. ಹೆಚ್ಚುವರಿಯಾಗಿ, ಕುಲದೀಪ್ ಯಾದವ್ ಕೂಡ ಪಂದ್ಯದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ.
ಸೂರ್ಯಕುಮಾರ್ ಯಾದವ್ ಹೇಳಿದ್ದೇನು?
ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ಧ ಆಡುತ್ತಾರಾ ಎಂದು ಕೇಳಿದಾಗ, ಭಾರತದ ನಾಯಕ ಸೂರ್ಯಕುಮಾರ್ ಯಾದವ್ "ಪಾಕಿಸ್ತಾನ ಅವರು ಆಡಲು ಬಯಸಿದರೆ ಅವರು ಆಡುತ್ತಾರೆ" ಎಂದು ಹೇಳಿದ್ದಾರೆ. ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಆಘಾ ಪಂದ್ಯಕ್ಕೂ ಮುನ್ನವೇ ಅಭಿಷೇಕ್ ಶರ್ಮಾ ಅವರನ್ನು ಹೊಗಳಿ ಮಾತನಾಡಿದ್ದಾರೆ. ನಮಗೆಲ್ಲರಿಗೂ ತಿಳಿದಿದೆ ಅವರು ಒಳ್ಳೆಯ ಆಟಗಾರ ಮತ್ತು ಅತ್ಯುತ್ತಮ ತಂಡದ ವಿರುದ್ಧ ನಾವು ಆಡಲು ಬಯಸುವುದರಿಂದ ಶರ್ಮಾ ನಾಳೆ ಆಡುತ್ತಾರೆ ಎಂದು ನಾನು ನಿಜವಾಗಿಯೂ ಆಶಿಸುತ್ತೇನೆ. ಅವರು ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ನಾಳೆ ಆಡಬಹುದು ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಬಲಿಷ್ಠ ಸ್ಪಿನ್ ದಾಳಿ
ಪಾಕಿಸ್ತಾನದ ಬಲಿಷ್ಠ ಸ್ಪಿನ್ ದಾಳಿ ಭಾರತದ ಬ್ಯಾಟಿಂಗ್ಗೆ ದೊಡ್ಡ ಸವಾಲಾಗಿದೆ. ಉಸ್ಮಾನ್ ತಾರಿಖ್, ಸೈಮ್ ಅಯೂಬ್, ಅಬ್ರಾರ್ ಅಹ್ಮದ್, ಶದಾಬ್ ಖಾನ್ ಮತ್ತು ಮೊಹಮ್ಮದ್ ನವಾಜ್ ಸೇರಿದಂತೆ ಐವರು ಸ್ಪಿನ್ನರ್ಗಳು ಪಾಕ್ ತಂಡದ ಟ್ರಂಪ್ ಕಾರ್ಡ್. ಕೊಲಂಬೊದ ಪಿಚ್ ಸ್ಪಿನ್ನರ್ಗಳಿಗೆ ಸಹಾಯಕವಾಗುವ ನಿರೀಕ್ಷೆ ಇದ್ದು, ಭಾರತೀಯ ಬ್ಯಾಟರ್ಗಳು ಯುಎಸ್ಎ ಮತ್ತು ನಮೀಬಿಯಾ ವಿರುದ್ಧ ಸ್ಪಿನ್ ವಿರುದ್ಧ ಮುಗ್ಗರಿಸಿದ್ದರು.
IND vs PAK: ಭಾರತ-ಪಾಕ್ ಪಂದ್ಯಕ್ಕೆ ಏಷ್ಯಾಕಪ್ ಟ್ರೋಫಿ ಕಳ್ಳ ನಖ್ವಿ ಹಾಜರ್!
ಭಾರತದ ಸಂಭಾವ್ಯ XI: ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (WK), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (C), ಹಾರ್ದಿಕ್ ಪಾಂಡ್ಯ , ಶಿವಂ ದುಬೆ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ಅರ್ಷ್ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ