ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA:ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಶುಭಮನ್‌ ಗಿಲ್‌ ಎರಡನೇ ಟೆಸ್ಟ್‌ಗೆ ಅನುಮಾನ!

ಕುತ್ತಿಗೆ ಗಾಯದಿಂದ ಬಳಲುತ್ತಿದ್ದ ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಅವರಿಗೆ ನಾಲ್ಕರಿಂದ ಐದು ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಇದರಿಂದಾಗಿ ನವೆಂಬರ್ 22 ರಂದು ಪ್ರಾರಂಭವಾಗುವ ಎರಡನೇ ಟೆಸ್ಟ್‌ನಲ್ಲಿ ಅವರು ಭಾಗವಹಿಸುವುದು ಅನುಮಾನವಾಗಿದೆ.

ಎರಡನೇ ಟೆಸ್ಟ್‌ ಪಂದ್ಯಕ್ಕೆ ಶುಭಮನ್‌ ಗಿಲ್‌ ಅನುಮಾನ!

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶುಭಮನ್‌ ಗಿಲ್‌ ಆಡುವುದು ಅನುಮಾನ. -

Profile
Ramesh Kote Nov 16, 2025 11:13 PM

ಕೋಲ್ಕತಾ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ (IND vs SA) ವೇಳೆ ಕುತ್ತಿಗೆ ನೋವು ಕಾಣಿಸಿಕೊಂಡ ನಂತರ ಭಾರತ (India) ತಂಡದ ನಾಯಕ ಶುಭಮನ್ ಗಿಲ್ (Shubman Gill) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಂದ್ಯದ ಎರಡನೇ ದಿನ ಬ್ಯಾಟ್‌ ಮಾಡುವಾಗ ಗಿಲ್ ಕುತ್ತಿಗೆ ನೋವು ಅನುಭವಿಸಿದ್ದರು ಮತ್ತು ನಂತರ ರಿಟೈರ್‌ ಔಟ್‌ ಆಗಿದ್ದರು. ಗಿಲ್ ಮತ್ತೆ ಮೈದಾನಕ್ಕೆ ಬರಲಿಲ್ಲ ಮತ್ತು ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಿದ್ದಾರೆ. ಆದರೂ ಅವರು ಗುವಾಹಟಿಯಲ್ಲಿ ನಡೆಯುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ.

ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸೌರವ್ ಗಂಗೂಲಿ ವುಡ್‌ಲ್ಯಾಂಡ್ಸ್‌ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಶುಭಮನ್ ಗಿಲ್ ಅವರನ್ನು ಭೇಟಿ ಮಾಡಿದ್ದರು. ರೆವ್ ಸ್ಪೋರ್ಟ್ಸ್ ವರದಿಯ ಪ್ರಕಾರ, ಗಿಲ್ ಅವರ ನೋವು ಕಡಿಮೆಯಾಗಿದೆ. ಇದರ ಹೊರತಾಗಿಯೂ, ಅವರಿಗೆ 4-5 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಲಾಗಿದೆ. ಎರಡನೇ ದಿನದ ಆಟ ಪ್ರಾರಂಭವಾಗುವ ಮೊದಲು ಗಿಲ್ ಕುತ್ತಿಗೆ ನೋವು ಅನುಭವಿಸಿದ್ದರು. ಅವರು ಬ್ಯಾಟ್‌ ಮಾಡಲು ಹೊರಬಂದ ತಕ್ಷಣ ಅವರು ಬೌಂಡರಿ ಬಾರಿಸಿದರು ಮತ್ತು ಅದರ ನಂತರ ನೋವು ಹೆಚ್ಚಾಗಿತ್ತು. ಮೂರನೇ ದಿನದ ಆಟ ಪ್ರಾರಂಭವಾಗುವ ಮುನ್ನ, ಗಿಲ್ ಪಂದ್ಯದಲ್ಲಿ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ ಘೋಷಿಸಿತ್ತು.

IND vs SA: ʻಗೌತಮ್‌ ಗಂಭೀರ್‌ ಭಾರತ ತಂಡದ ಅತ್ಯಂತ ಕೆಟ್ಟ ಕೋಚ್‌ʼ-ರೊಚ್ಚಿಗೆದ್ದ ಅಭಿಮಾನಿಗಳು!

ಎರಡನೇ ಟೆಸ್ಟ್‌ಗೆ ಶುಭಮನ್‌ ಗಿಲ್‌ ಅನುಮಾನ

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶುಭಮನ್ ಗಿಲ್ ಭಾಗವಹಿಸುವ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಎರಡೂ ತಂಡಗಳ ನಡುವಿನ ಎರಡನೇ ಟೆಸ್ಟ್ ನವೆಂಬರ್ 22 ರಂದು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಗಿಲ್ ಅವರನ್ನು 4-5 ದಿನಗಳ ಕಾಲ ವಿಶ್ರಾಂತಿ ಪಡೆಯಲು ಕೇಳಲಾಗಿದ್ದು, ಎರಡನೇ ಪಂದ್ಯದಲ್ಲಿ ಅವರ ಭಾಗವಹಿಸುವಿಕೆ ಅಸ್ಪಷ್ಟವಾಗಿದೆ. ಗಿಲ್ ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್. ಮೊದಲ ಟೆಸ್ಟ್‌ನಲ್ಲಿ ತಂಡ ಅವರನ್ನು ಕಳೆದುಕೊಂಡಿತ್ತು. ಎರಡೂ ಇನಿಂಗ್ಸ್‌ಗಳಲ್ಲಿ ಕೇವಲ 9 ವಿಕೆಟ್‌ಗಳನ್ನು ಕಳೆದುಕೊಂಡು ಭಾರತ ತಂಡ ಆಲೌಟ್ ಆಗಿತ್ತು.



ಕೋಲ್ಕತಾದಲ್ಲಿ ಭಾರತ ತಂಡಕ್ಕೆ ಹೀನಾಯ ಸೋಲು

ದಕ್ಷಿಣ ಆಫ್ರಿಕಾ ನಾಲ್ಕನೇ ಇನಿಂಗ್ಸ್‌ ಭಾರತ ತಂಡಕ್ಕೆ 124 ರನ್‌ಗಳ ಗುರಿಯನ್ನು ನೀಡಿತ್ತು. ತವರು ನೆಲದಲ್ಲಿ ಇಷ್ಟು ಸಣ್ಣ ಗುರಿಯನ್ನು ಚೇಸ್‌ ಮಾಡಲಾಗದೆ ಭಾರತ ಎಂದಿಗೂ ಸೋಲು ಅನುಭವಿಸಿರಲಿಲ್ಲ. ಆದರೆ, ದಕ್ಷಿಣ ಆಫ್ರಿಕಾದ ಬೌಲರ್‌ಗಳು ಭಾರತದ ಇನಿಂಗ್ಸ್‌ ಅನ್ನು 93 ರನ್‌ಗಳಿಗೆ ಸೀಮಿತಗೊಳಿಸಿದರು. ಹಾಗಾಗಿ ಭಾರತ ಪಂದ್ಯವನ್ನು 30 ರನ್‌ಗಳಿಂದ ಸೋಲು ಅನುಭವಿಸಿತು. ಭಾರತದ ಪರ ವಾಷಿಂಗ್ಟನ್‌ ಸುಂದರ್‌ 31 ರನ್‌ ಹಾಗೂ ಅಕ್ಷರ್‌ ಪಟೇಲ್‌ 26 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದಾರೆ.